ದಿಶಾ 2.0 (DISHA 2.0) | ‘ಉಂಝಾ ಜೀರಿಗೆ’ ಮತ್ತು ‘ಉಂಝಾ ಸೋಂಪು’ ಉತ್ಪನ್ನಗಳಿಗೆ GI ಮಾನ್ಯತೆ | ಭವ್ಯ (BHAVYA) – ರಸಾಯನ ಯೋಜನೆ | ಪ್ರಾಕ್ಸಿಸ್ ಮಿಷನ್ (PRAXIS Mission) | ನಾವಿನ್ಯತಾ ಗ್ರಾಮ ಉದ್ಯಮಶೀಲತಾ ಕಾರ್ಯಕ್ರಮ  (SVEP)

ದಿಶಾ 2.0 (DISHA 2.0)

ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿ: 

  • ಕೇಂದ್ರ ಸರ್ಕಾರವು 2026–31 ರ ಅವಧಿಗೆ ದೇಶಾದ್ಯಂತ ಜಾರಿಗೆ ತರಲು ₹255 ಕೋಟಿ ಆರ್ಥಿಕ ವೆಚ್ಚದೊಂದಿಗೆ ‘ದಿಶಾ 2.0’ (ನ್ಯಾಯದ ಸಮಗ್ರ ಲಭ್ಯತೆಗಾಗಿ ನವೀನ ಪರಿಹಾರಗಳ ವಿನ್ಯಾಸ – DISHA 2.0) ಯೋಜನೆಯನ್ನು ಪ್ರಾರಂಭಿಸಿದೆ.

ದಿಶಾ 2.0 (DISHA 2.0) ಬಗ್ಗೆ: 

  • ಆರ್ಥಿಕ ನೆರವು: ಇದು ಕೇಂದ್ರ ಸರ್ಕಾರದ ಕೇಂದ್ರ ವಲಯದ ಯೋಜನೆಯಾಗಿದೆ.
  • ಅನುಷ್ಠಾನ: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯ ಇಲಾಖೆಯು ಇದನ್ನು ಅನುಷ್ಠಾನಗೊಳಿಸುತ್ತದೆ.
  • ದಿಶಾ 2.0: ಇದು ತಂತ್ರಜ್ಞಾನ ಆಧಾರಿತ ಉಚಿತ ನ್ಯಾಯಾಂಗ ನೆರವನ್ನು ವಿಸ್ತರಿಸುತ್ತದೆ.

ಪ್ರಮುಖ ಘಟಕಗಳು

  • ಟೆಲಿ-ಲಾ (Tele-Law): ಸಾಮಾನ್ಯ ಸೇವಾ ಕೇಂದ್ರಗಳ (CSCs) ಮೂಲಕ ವ್ಯಾಜ್ಯ ಪೂರ್ವ ಉಚಿತ ಕಾನೂನು ಸಲಹೆಯನ್ನು ನೀಡಲಾಗುತ್ತದೆ.
  • ನ್ಯಾಯ ಬಂಧು: ಉಚಿತ ಕಾನೂನು ಸೇವೆಗಳು ಮತ್ತು ವಕೀಲರ ಲಭ್ಯತೆಯನ್ನು ಖಚಿತಪಡಿಸುತ್ತದೆ.
  • LLLAP: ಕಾನೂನು ಸಾಕ್ಷರತೆ ಮತ್ತು ಜಾಗೃತಿ ಕಾರ್ಯಕ್ರಮವಾಗಿದೆ.
  • ವಿಧಿ-ಸಂಜೀವನಿ (VIDHI-Sanjeevani): ಇದು ಕೃತಕ ಬುದ್ಧಿಮತ್ತೆ (AI) ಆಧಾರಿತ ಬಹುಭಾಷಾ ‘ನ್ಯಾಯ ಸೇತು’ ಚಾಟ್‌ಬಾಟ್ ಹೊಂದಿರುವ ಕೇಂದ್ರೀಕೃತ ವೇದಿಕೆಯಾಗಿದೆ.

ಮಹತ್ವ

  • ಸಂವಿಧಾನಾತ್ಮಕ ಆಧಾರ: ಇದು ಸಂವಿಧಾನದ ವಿಧಿ 14, 21 ಮತ್ತು 39A (ಉಚಿತ ಕಾನೂನು ನೆರವು) ಅಡಿಯಲ್ಲಿ ನೀಡಲಾದ ನಿರ್ದೇಶನಗಳನ್ನು ಪೂರೈಸುತ್ತದೆ.
  • ಜಾಗತಿಕ ಗುರಿಗಳು: ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 16 (ಶಾಂತಿ, ನ್ಯಾಯ ಮತ್ತು ಬಲವಾದ ಸಂಸ್ಥೆಗಳು) ಅನ್ನು ಬೆಂಬಲಿಸುತ್ತದೆ.

‘ಉಂಝಾ ಜೀರಿಗೆ’ ಮತ್ತು ‘ಉಂಝಾ ಸೋಂಪು’ ಉತ್ಪನ್ನಗಳಿಗೆ GI ಮಾನ್ಯತೆ

ಆರ್ಥಿಕತೆ

ಇದೀಗ ಸುದ್ದಿಯಲ್ಲಿ:

  • ರಾಜಸ್ಥಾನದ ಜೀರಿಗೆ ಮತ್ತು ಸೋಂಪು ಬೆಳೆಗಾರರು ‘ಉಂಝಾ ಜೀರಿಗೆ’ ಮತ್ತು ‘ಉಂಝಾ ಸೋಂಪು’ (Unjha Jeera and Unjha Fennel) ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ (GI) ನೋಂದಣಿ ನೀಡುವುದನ್ನು ವಿರೋಧಿಸಿದ್ದಾರೆ.

ವಿವರಗಳು

  • ಉಂಝಾ (Unjha) ನಗರವು ಏಷ್ಯಾದಲ್ಲೇ ಅತಿ ದೊಡ್ಡ ಸಾಂಬಾರು ಬೀಜಗಳ, ವಿಶೇಷವಾಗಿ ಜೀರಿಗೆ, ಸೋಂಪು ಮತ್ತು ಈಸಬ್‌ಗೋಲ್ ಕೃಷಿ ಮಾರುಕಟ್ಟೆಗಳಲ್ಲಿ ಒಂದಾಗಿದೆ.
  • ಉಂಝಾ APMC ಯಲ್ಲಿ ವರ್ತಕರಿಂದ ಮಾರಾಟವಾಗುವ ಹೆಚ್ಚಿನ ಪ್ರಮಾಣದ ಜೀರಿಗೆ ಮತ್ತು ಸೋಂಪು ರಾಜಸ್ಥಾನದಿಂದ ಪೂರೈಕೆಯಾಗುತ್ತದೆ.
  • ಗುಜರಾತ್‌ನ ಉಂಝಾ ಪ್ರದೇಶವು ಈ ಸಾಂಬಾರು ಪದಾರ್ಥಗಳ ಮುಖ್ಯ ಉತ್ಪಾದನಾ ಕೇಂದ್ರವಾಗಿರದೆ, ಕೇವಲ ವ್ಯಾಪಾರ ಮತ್ತು ಮಾರುಕಟ್ಟೆ ಕೇಂದ್ರವಾಗಿದೆ ಎಂಬುದು ರಾಜಸ್ಥಾನದ ರೈತರ ವಾದವಾಗಿದೆ.

ಭವ್ಯ (BHAVYA) – ರಸಾಯನ ಯೋಜನೆ

ಆರ್ಥಿಕತೆ

ಇದೀಗ ಸುದ್ದಿಯಲ್ಲಿ: 

  • ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ದೇಶದಲ್ಲಿ ಮೂರು ವಿಶೇಷ ರಸಾಯನಿಕ ಪಾರ್ಕ್‌ಗಳನ್ನು ಸ್ಥಾಪಿಸಲು ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ ರಸಾಯನ’ ಅಥವಾ ‘ಭವ್ಯ – ರಸಾಯನ’ (BHAVYA – Rasayan) ಯೋಜನೆಗೆ ಅನುಮೋದನೆ ನೀಡಿದೆ.

ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ ರಸಾಯನ (BHAVYA-Rasayan)

  • ಉದ್ದೇಶ: ಇದು ಭಾರತದ ರಾಸಾಯನಿಕ ಮತ್ತು ಪೆಟ್ರೋ-ರಾಸಾಯನಿಕ ಉತ್ಪಾದನಾ ವಲಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ, ಹೊಸದಾಗಿ ಅನುಮೋದಿಸಲಾದ ಕೇಂದ್ರ ವಲಯದ ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಯೋಜನೆಯಾಗಿದೆ.
  • ಘೋಷಣೆ: ಈ ಯೋಜನೆಯನ್ನು 2026-27 ರ ಕೇಂದ್ರ ಬಜೆಟ್ ನಲ್ಲಿ ಒಟ್ಟು ₹3,030 ಕೋಟಿ ಆರ್ಥಿಕ ವೆಚ್ಚದೊಂದಿಗೆ ಘೋಷಿಸಲಾಗಿದೆ.
  • ಗುರಿ: 5 ವರ್ಷಗಳ ಅವಧಿಯಲ್ಲಿ ಭಾರತದಾದ್ಯಂತ ಮೂರು ವಿಶ್ವದರ್ಜೆಯ ವಿಶೇಷ ರಾಸಾಯನಿಕ ಪಾರ್ಕ್‌ಗಳನ್ನು ಸ್ಥಾಪಿಸುವುದು.
  • ನೋಡಲ್ ಸಚಿವಾಲಯ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ.
  • ಯೋಜನೆಯ ಮಾದರಿ: ಇದು ಕೇಂದ್ರ ವಲಯದ ಯೋಜನೆಯಾಗಿದೆ.
  • ಅನುಷ್ಠಾನದ ಅವಧಿ: ಈ ಯೋಜನೆಯು 2026-27 ರಿಂದ 2030-31 ರ ಹಣಕಾಸು ವರ್ಷದವರೆಗೆ 5 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಮಹತ್ವ

  • ಆರ್ಥಿಕತೆ: ಇದು ಉತ್ಪಾದನೆ ಮತ್ತು ಸಾರಿಗೆ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
  • ವ್ಯಾಪಾರ: ಕಚ್ಚಾ ವಸ್ತುಗಳ ಆಮದು ಪರ್ಯಾಯವನ್ನು ಉತ್ತೇಜಿಸುತ್ತದೆ.
  • ಪರಿಸರ: ಕೇಂದ್ರೀಕೃತ ಹಸಿರು ತ್ಯಾಜ್ಯ ಸಂಸ್ಕರಣೆಯನ್ನು ಕಡ್ಡಾಯಗೊಳಿಸುತ್ತದೆ.
  • ದೂರದೃಷ್ಟಿ: ಇದು ವಿಕಸಿತ ಭಾರತ್ @ 2047 ರ ಗುರಿಗೆ ಅನುಗುಣವಾಗಿದೆ.

ಪ್ರಾಕ್ಸಿಸ್ ಮಿಷನ್ (PRAXIS Mission)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ: 

  • ಶನಿ ಗ್ರಹದ ಸುತ್ತಲಿನ ಉಂಗುರಗಳಲ್ಲಿನ ಕಣಗಳನ್ನು ನೇರವಾಗಿ ಸಂಗ್ರಹಿಸಿ ಅಧ್ಯಯನ ಮಾಡುವ ಮೊದಲ ಗಗನನೌಕೆಯನ್ನು ಅಭಿವೃದ್ಧಿಪಡಿಸಲು ನಾಸಾ (NASA) ‘ಪ್ರಾಕ್ಸಿಸ್’ (PRAXIS) ಎಂಬ ನವೀನ ಬಾಹ್ಯಾಕಾಶ ಮಿಷನ್ ಕಲ್ಪನೆಯನ್ನು ಆಯ್ಕೆ ಮಾಡಿದೆ.

ಪ್ರಾಕ್ಸಿಸ್ (PRAXIS) ಮಿಷನ್ ಬಗ್ಗೆ: 

  • ಪೂರ್ಣ ರೂಪ: ಗ್ರಹಗಳ ಉಂಗುರಗಳ ಸ್ವತಂತ್ರ ಅನ್ವೇಷಣೆ ಮತ್ತು ಸ್ಥಳದಲ್ಲೇ ಮಾದರಿ ಸಂಗ್ರಹಣೆ  (Planetary Rings Autonomous Exploration with In-situ Sampling).
  • ಇದು ಕೃತಕ ಬುದ್ಧಿಮತ್ತೆ (AI) ಚಾಲಿತ, ಜೈವಿಕ-ಪ್ರೇರಿತ ರೋಬೋಟಿಕ್ ಗಗನನೌಕೆಯನ್ನು ಬಳಸಲು ಪ್ರಸ್ತಾಪಿಸುತ್ತದೆ.
  • ವಿಶೇಷತೆ: ಗ್ರಹಗಳ ಉಂಗುರಗಳ ಕಣಗಳಿಂದ ನೇರವಾಗಿ ಮಾದರಿಗಳನ್ನು ಸಂಗ್ರಹಿಸುವ ಮೊದಲ ಮಿಷನ್ ಇದಾಗಲಿದೆ.

ಪ್ರಮುಖ ಲಕ್ಷಣಗಳು: 

  • ಜೈವಿಕ-ಪ್ರೇರಿತ ರೋಬೋಟಿಕ್ ಅನ್ವೇಷಕ: ಪ್ರಕೃತಿಯಲ್ಲಿ ಕಂಡುಬರುವ ಸಮರ್ಥ ಚಲನೆ ಮತ್ತು ಹೊಂದಾಣಿಕೆಯ ಸಾಮರ್ಥ್ಯವನ್ನು ಅನುಕರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • AI-ಚಾಲಿತ ಸ್ವಾಯತ್ತತೆ: ಸೂಕ್ತವಾದ ಉಂಗುರದ ಕಣಗಳನ್ನು ಗುರುತಿಸಲು, ಮಾದರಿ ಸಂಗ್ರಹಣಾ ಕಾರ್ಯಾಚರಣೆಗಳನ್ನು ಯೋಜಿಸಲು ಮತ್ತು ಮಾನವನ ಕನಿಷ್ಠ ಹಸ್ತಕ್ಷೇಪದೊಂದಿಗೆ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಲು ಇದು ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತದೆ.

ನಾವಿನ್ಯತಾ ಗ್ರಾಮ ಉದ್ಯಮಶೀಲತಾ ಕಾರ್ಯಕ್ರಮ  (SVEP)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ: 

  • ಇತ್ತೀಚೆಗೆ ಸರ್ಕಾರವು ನಾವಿನ್ಯತಾ ಗ್ರಾಮ ಉದ್ಯಮಶೀಲತಾ ಕಾರ್ಯಕ್ರಮ (SVEP-Start up Village Entrepreneurship Programme) ನ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿಹಿಡಿದಿದ್ದು, ಇದು ‘DAY-NRLM’ ಅಡಿಯಲ್ಲಿ 4.32 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಉದ್ದಿಮೆಗಳಿಗೆ ನೆರವಾಗಿದ್ದು, ಸಮುದಾಯ ನೇತೃತ್ವದ ಉದ್ಯಮಶೀಲತೆಯ ಮೂಲಕ ಗ್ರಾಮೀಣ ಜೀವನವನ್ನು ಸುಧಾರಿಸಿದೆ.

ನಾವಿನ್ಯತಾ ಗ್ರಾಮ ಉದ್ಯಮಶೀಲತಾ ಕಾರ್ಯಕ್ರಮ (SVEP)

  • ಇದನ್ನು 2016 ರಲ್ಲಿ ದೀನ್‌ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM)ಉಪ-ಯೋಜನೆಯಾಗಿ ಪ್ರಾರಂಭಿಸಲಾಯಿತು.
  • ಅನುಷ್ಠಾನ ಸಚಿವಾಲಯ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ.

ಉದ್ದೇಶಗಳು:

  • ಕೃಷಿಯೇತರ ಗ್ರಾಮೀಣ ಉದ್ಯಮಗಳನ್ನು ಉತ್ತೇಜಿಸುವುದು.
  • ಸ್ವಯಂ ಉದ್ಯೋಗ ಮತ್ತು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು.
  • ಮೊದಲ ಪೀಳಿಗೆಯ ಉದ್ಯಮಿಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ವಂಚಿತ ಸಮುದಾಯಗಳನ್ನು ಸಬಲೀಕರಣಗೊಳಿಸುವುದು.
  • ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸುವುದು.
  • ಬಲವಾದ ಸ್ಥಳೀಯ ಆರ್ಥಿಕತೆಯನ್ನು ಸೃಷ್ಟಿಸುವ ಸಮುದಾಯ ಆಧಾರಿತ ಉದ್ಯಮಗಳನ್ನು ರೂಪಿಸುವುದು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts