Blog

  • ಪ್ರಧಾನ ಮಂತ್ರಿ ಜನಜಾತಿಯ  ವಿಕಾಸ್ ಮಿಷನ್ (PMJVM) | ಪೌರತ್ವ ತಿದ್ದುಪಡಿ ಕಾಯ್ದೆ (CAA) | ಜಿಸ್ಯಾಟ್-1A (GISAT-1A) | ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶ

    ಪ್ರಧಾನ ಮಂತ್ರಿ ಜನಜಾತಿಯ  ವಿಕಾಸ್ ಮಿಷನ್ (PMJVM)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಪ್ರಧಾನ ಮಂತ್ರಿ ಜನಜಾತಿಯ ವಿಕಾಸ್ ಮಿಷನ್ (PMJVM) ಭಾರತದ ಬುಡಕಟ್ಟು ಅರಣ್ಯ ಆರ್ಥಿಕತೆಯನ್ನು ಬಲಪಡಿಸುತ್ತಿದೆ.

    ಪ್ರಧಾನ ಮಂತ್ರಿ ಜನಜಾತಿಯ ವಿಕಾಸ್ ಮಿಷನ್ (PMJVM) ಕುರಿತು: 

    • ಇದನ್ನು 2021-22 ರಲ್ಲಿ ಪ್ರಾರಂಭಿಸಲಾಯಿತು.
    • ಹಣಕಾಸು: ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ನೋಡಲ್ ಸಂಸ್ಥೆ: ಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (TRIFED) 

    ಉದ್ದೇಶಗಳು: 

    • ಬುಡಕಟ್ಟು ಉದ್ಯಮಶೀಲತೆ, ಜೀವನೋಪಾಯ ಮತ್ತು ಆದಾಯ ಉತ್ಪಾದನೆಯನ್ನು ಉತ್ತೇಜಿಸುವುದು.
    • ಕಿರು ಅರಣ್ಯ ಉತ್ಪನ್ನಗಳು (MFP), ಬುಡಕಟ್ಟು ಉತ್ಪನ್ನಗಳು ಮತ್ತು ಮೌಲ್ಯವರ್ಧನೆಯ ಮೇಲೆ ಕೇಂದ್ರೀಕರಿಸುವುದು.
    • ಬುಡಕಟ್ಟು ಉತ್ಪಾದಕ ಉದ್ಯಮಗಳು, ಸ್ವ-ಸಹಾಯ ಸಂಘಗಳು (SHGs) ಮತ್ತು ವನ ಧನ್ ವಿಕಾಸ್ ಕೇಂದ್ರಗಳನ್ನು ಬೆಂಬಲಿಸುವುದು.
    • ಬುಡಕಟ್ಟು ಮೌಲ್ಯ ಸರಪಳಿಗಳು, ಮಾರುಕಟ್ಟೆ ಸಂಪರ್ಕಗಳು ಮತ್ತು ಹಣಕಾಸು ಲಭ್ಯತೆಯನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.
    • ಇದು ಬುಡಕಟ್ಟು ಸಂಗ್ರಾಹಕರಿಂದ ನೇರ ಖರೀದಿಯ ಮೂಲಕ ಗುರುತಿಸಲಾದ ಕಿರು ಅರಣ್ಯ ಉತ್ಪನ್ನಗಳಿಗೆ (MFP) ಕನಿಷ್ಠ ಬೆಂಬಲ ಬೆಲೆಯನ್ನು (MSP) ಸಹ ಒದಗಿಸುತ್ತದೆ.
    • ಪ್ರಮುಖ ಗಮನ: ಬುಡಕಟ್ಟು ಉತ್ಪನ್ನಗಳ ಸಂಗ್ರಹಣೆ → ಮೌಲ್ಯವರ್ಧನೆ → ಬ್ರ್ಯಾಂಡಿಂಗ್ → ಮಾರುಕಟ್ಟೆ ಪ್ರಕ್ರಿಯೆಗಳ ಮೇಲೆ ಕೇಂದ್ರೀಕರಿಸಲಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ (CAA)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಬಾಕಿ ಇರುವ ಪೌರತ್ವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ (UTs) ಜಿಲ್ಲಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ (MHA) ವರ್ಗಾಯಿಸಿದೆ.
    • ಗುಜರಾತ್, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಖ್‌ನ ಜಿಲ್ಲಾಧಿಕಾರಿಗಳಿಗೆ ಈ ಅಧಿಕಾರ ನೀಡಲಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ (CAA), 2019 ರ ಬಗ್ಗೆ: 

    • ತಿದ್ದುಪಡಿ: ಇದು ಪೌರತ್ವ ಕಾಯ್ದೆ, 1955 ಅನ್ನು ತಿದ್ದುಪಡಿ ಮಾಡುತ್ತದೆ; ಇದು 12 ಡಿಸೆಂಬರ್ 2019 ರಂದು ರಾಷ್ಟ್ರಪತಿಗಳ ಅಂಕಿತ ಪಡೆದು, 10 ಜನವರಿ 2020 ರಂದು ಜಾರಿಗೆ ಬಂದಿತು.
    • ಅರ್ಹತೆ: 31 ಡಿಸೆಂಬರ್ 2014 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಇದು ಮಾರ್ಗವನ್ನು ಕಲ್ಪಿಸುತ್ತದೆ.
    • ವಿನಾಯಿತಿ : ಈ ನಿರ್ದಿಷ್ಟ ವರ್ಗದಲ್ಲಿ ಮುಸ್ಲಿಮರನ್ನು ಸೇರಿಸಲಾಗಿಲ್ಲ.
    • ದೇಶೀಯಕರಣದ ಅವಧಿ: ಅರ್ಹ ವ್ಯಕ್ತಿಗಳಿಗೆ ಈ ಅವಧಿಯನ್ನು 11 ವರ್ಷಗಳಿಂದ 5 ವರ್ಷಗಳಿಗೆ ಇಳಿಸಲಾಗಿದೆ.
    • CAA ನಿಯಮಗಳು, 2024: ಕಾಯ್ದೆಯ ಅನುಷ್ಠಾನವನ್ನು ಸಕ್ರಿಯಗೊಳಿಸಲು 11 ಮಾರ್ಚ್ 2024 ರಂದು ನಿಯಮಗಳನ್ನು ಅಧಿಸೂಚಿಸಲಾಗಿದೆ.
    • ವಿನಾಯಿತಿಗಳು: ಇದು ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಆರನೇ ಅನುಸೂಚಿಯ ಬುಡಕಟ್ಟು ಪ್ರದೇಶಗಳಿಗೆ ಮತ್ತು ಇನ್ನರ್ ಲೈನ್ ಪರ್ಮಿಟ್ (ILP) ವ್ಯವಸ್ಥೆಯ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.
    • ಪ್ರಮುಖ ಚರ್ಚೆ: ಇದು ವಿಧಿ 14 (ಸಮಾನತೆ), ಜಾತ್ಯತೀತತೆ ಮತ್ತು ಮುಸ್ಲಿಮರನ್ನು ಹೊರಗಿಡುವುದಕ್ಕೆ ಸಂಬಂಧಿಸಿದ ಕಳವಳಗಳನ್ನು ಹುಟ್ಟುಹಾಕಿದೆ, ಆದರೆ ಸರ್ಕಾರವು ಇದನ್ನು ನಿರ್ದಿಷ್ಟಪಡಿಸಿದ ಮೂರು ದೇಶಗಳ ಧಾರ್ಮಿಕವಾಗಿ ತೊಂದರೆಗೊಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಕ್ರಮ ಎಂದು ಬಣ್ಣಿಸಿದೆ.

    ಜಿಸ್ಯಾಟ್-1A (GISAT-1A)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಜಿಸ್ಯಾಟ್-1A (GISAT-1A) ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗುತ್ತಿದೆ.

    ಜಿಸ್ಯಾಟ್-1A (ಜಿಯೋ ಇಮೇಜಿಂಗ್ ಸ್ಯಾಟಲೈಟ್)

    • ಹೊಸ ನಾಮಕರಣದ ಅಡಿಯಲ್ಲಿ ಇದನ್ನು EOS-05 ಎಂದೂ ಕರೆಯಲಾಗುತ್ತದೆ.
    • ಇದು ರಾಕೆಟ್‌ನ ಅಂತಿಮ ಹಂತದ ದಹನ ವೈಫಲ್ಯದಿಂದಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದ್ದ 2021 ರಲ್ಲಿ ಉಡಾವಣೆಗೊಂಡ GISAT-1 (ಅಥವಾ EOS-03) ನ ಬದಲಿ ಉಪಗ್ರಹವಾಗಿದೆ.
    • ಇದನ್ನು ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹಕ (GSLV)ದ ಮೂಲಕ ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
    • ಈ ಕಾರ್ಯಾಚರಣೆಯು ಜನವರಿ 2026 ರಲ್ಲಿ PSLV-C62/EOS-N1 ಮಿಷನ್ ವಿಫಲವಾದ ನಂತರ ಇಸ್ರೋದ ಮೊದಲ ಉಡಾವಣೆಯಾಗಲಿದೆ.
    • ಉದ್ದೇಶ: ಜಿಸ್ಯಾಟ್-1A ಉಪಗ್ರಹವನ್ನು ಭಾರತೀಯ ಭೂಪ್ರದೇಶದ ದೊಡ್ಡ ಪ್ರದೇಶಗಳ ಹೆಚ್ಚಿನ ಆವರ್ತನದ ಚಿತ್ರಣಕ್ಕಾಗಿ (high-frequency imaging) ವಿನ್ಯಾಸಗೊಳಿಸಲಾಗಿದೆ.
    • ಇದರ ಅನ್ವಯಿಕೆಗಳು ನೈಸರ್ಗಿಕ ವಿಪತ್ತುಗಳು, ಕೃಷಿ, ಅರಣ್ಯ ಮತ್ತು ಭೂಮಿಯ ಮೇಲಿನ ಇತರ ಬದಲಾವಣೆಗಳ ಮೇಲ್ವಿಚಾರಣೆಯನ್ನು ಒಳಗೊಂಡಿವೆ.
    • ಈ ಉಪಗ್ರಹವು 10 ವರ್ಷಗಳ ಯೋಜಿತ ಕಾರ್ಯಾಚರಣೆಯ ಅವಧಿಯನ್ನು ಹೊಂದಿದೆ.

    ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶದಿಂದ (STR) ಗ್ರಾಮಗಳ ಸ್ಥಳಾಂತರದ ಕುರಿತು ತನಿಖೆ ನಡೆಸಲು ಒಡಿಶಾ ಸರ್ಕಾರವು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ.

    ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ: 

    • ಸ್ಥಳ: ಇದು ಒಡಿಶಾದಲ್ಲಿದ್ದು, ದಖನ್ ಪ್ರಸ್ಥಭೂಮಿ ಮತ್ತು ಪೂರ್ವ ಘಟ್ಟಗಳು ಸಂಧಿಸುವ ಸ್ಥಳದಲ್ಲಿದೆ.
    • ಸ್ಥಾಪನೆ: ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) ಅಡಿಯಲ್ಲಿ 2007 ರಲ್ಲಿ ಸ್ಥಾಪನೆಯಾಯಿತು.
    • ವಿಸ್ತೀರ್ಣ: ಈ ಮೀಸಲು ಪ್ರದೇಶವು ಸತ್ಕೋಸಿಯಾ ಗಾರ್ಜ್ ವನ್ಯಜೀವಿ ಅಭಯಾರಣ್ಯ ಮತ್ತು ಬೈಸಿಪಲ್ಲಿ ವನ್ಯಜೀವಿ ಅಭಯಾರಣ್ಯವನ್ನು ಒಳಗೊಂಡಿದ್ದು, ಒಟ್ಟಾರೆಯಾಗಿ ಸುಮಾರು 1,000 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
    • ಮಹಾನದಿ ಈ ಸಂರಕ್ಷಿತ ಪ್ರದೇಶದ ಮೂಲಕ ಹರಿಯುತ್ತದೆ ಮತ್ತು ಅದ್ಭುತವಾದ ಸತ್ಕೋಸಿಯಾ ಕಂದಕವನ್ನು(Gorge) ನಿರ್ಮಿಸುತ್ತದೆ.
    • ಸಸ್ಯಸಂಕುಲ: ಸಾಲ್ (Shorea robusta) ಮತ್ತು ನದಿಪಾತ್ರದ ಕಾಡುಗಳನ್ನು ಒಳಗೊಂಡಂತೆ ಎಲೆ ಉದುರುವ ಕಾಡುಗಳ ಮಿಶ್ರಣವನ್ನು ಹೊಂದಿದೆ.

    ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ: 

    • ಕಾನೂನು ಆಧಾರ: ಪ್ರಾಜೆಕ್ಟ್ ಟೈಗರ್ ಚೌಕಟ್ಟಿನ ಮೂಲಕ, ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಘೋಷಿಸಲಾಗಿದೆ.
    • ಪ್ರಾಜೆಕ್ಟ್ ಟೈಗರ್: 9 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ 1973 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ನೋಡಲ್ ಪ್ರಾಧಿಕಾರ: ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA).
    • ಕೇಂದ್ರ ಅಥವಾ ಕೋರ್ ಮತ್ತು ಬಫರ್ ವಲಯಗಳು: ಹುಲಿ ಸಂರಕ್ಷಿತ ಪ್ರದೇಶಗಳು ಕೇಂದ್ರ ಅಥವಾ ಕೋರ್ /ನಿರ್ಣಾಯಕ ಹುಲಿ ಆವಾಸಸ್ಥಾನ (Core/Critical Tiger Habitat) ಮತ್ತು ಬಫರ್ ಪ್ರದೇಶವನ್ನು ಒಳಗೊಂಡಿರುತ್ತವೆ.
    • ಹುಲಿ ಗಣತಿ: ಇದನ್ನು ಅಖಿಲ ಭಾರತ ಹುಲಿ ಅಂದಾಜು (AITE) ಅಡಿಯಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
    • ಇತ್ತೀಚಿನ ಅಂದಾಜು: ಐದನೇ AITE ಪ್ರಕಾರ, 2022 ರಲ್ಲಿ ಭಾರತವು 3,682 ಹುಲಿಗಳನ್ನು ಹೊಂದಿತ್ತು.
    • ಭಾರತದ ಪಾಲು: ಭಾರತವು ವಿಶ್ವದ ಕಾಡು ಹುಲಿಗಳ ಜನಸಂಖ್ಯೆಯ ಸುಮಾರು 75% ರಷ್ಟನ್ನು ಹೊಂದಿದೆ.
    • ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶ: ನಾಗಾರ್ಜುನಸಾಗರ-ಶ್ರೀಶೈಲಂ (ಆಂಧ್ರಪ್ರದೇಶ/ತೆಲಂಗಾಣ).
    • ಅತಿ ಸಣ್ಣ ಹುಲಿ ಸಂರಕ್ಷಿತ ಪ್ರದೇಶ: ಬೋರ್ (ಮಹಾರಾಷ್ಟ್ರ).
    • ಮೊದಲ ಹುಲಿ ಸಂರಕ್ಷಿತ ಪ್ರದೇಶ: ಜಿಮ್ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶ, ಉತ್ತರಾಖಂಡ (ಆರಂಭಿಕ  9 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದೂ ಕೂಡ ಒಂದಾಗಿದೆ).
    • ಹೆಚ್ಚು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ರಾಜ್ಯ: ಮಧ್ಯಪ್ರದೇಶ.
    • ಪ್ರಮುಖ ಅಂಶ: ಹುಲಿ ಸಂರಕ್ಷಿತ ಪ್ರದೇಶವು ರಾಷ್ಟ್ರೀಯ ಉದ್ಯಾನವನ ಅಥವಾ ವನ್ಯಜೀವಿ ಅಭಯಾರಣ್ಯದಂತೆ ಪ್ರತ್ಯೇಕ ವರ್ಗದ ಸಂರಕ್ಷಿತ ಪ್ರದೇಶವಲ್ಲ; ಇದು ಅಂತಹ ಒಂದು ಅಥವಾ ಹೆಚ್ಚಿನ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿರಬಹುದು.
    • ಅಂತಾರಾಷ್ಟ್ರೀಯ ಉಪಕ್ರಮ: ಜಾಗತಿಕ ಹುಲಿ ಉಪಕ್ರಮ / TX2  (ಗ್ಲೋಬಲ್ ಟೈಗರ್ ಇನಿಶಿಯೇಟಿವ್ / TX2) ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
  • ಹೊಸ ಅಭಿವೃದ್ಧಿ ಬ್ಯಾಂಕ್ (New Development Bank) | ರಾಯಚೂರು ಮಿಯಾವಾಕಿ ಅರಣ್ಯ | ಅಮೆಜಾನ್ ಮಳೆಕಾಡು | ದಕ್ಷಿಣ ವಲಯ ಮಂಡಳಿ

    ಹೊಸ ಅಭಿವೃದ್ಧಿ ಬ್ಯಾಂಕ್ (New Development Bank)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಬ್ರಿಕ್ಸ್ (BRICS) ದೇಶಗಳೊಂದಿಗೆ ವಿತ್ತೀಯ, ಹಣಕಾಸು ಮತ್ತು ಬ್ಯಾಂಕಿಂಗ್ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಹೊಸ ಅಭಿವೃದ್ಧಿ ಬ್ಯಾಂಕ್ (New Development Bank – NDB) ಸೇರಲು ಇರಾನ್ ನಿರ್ಧರಿಸಿದೆ.

    ಹೊಸ ಅಭಿವೃದ್ಧಿ ಬ್ಯಾಂಕ್ (NDB)ನ ಬಗ್ಗೆ: 

    • ಸ್ಥಾಪನೆ: ಬ್ರಿಕ್ಸ್ (BRICS – ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳಿಂದ 2015 ರಲ್ಲಿ ಸ್ಥಾಪನೆಯಾಗಿದೆ.
    • ಪ್ರಧಾನ ಕಚೇರಿ: ಚೀನಾದ ಶಾಂಘೈ ನಗರದಲ್ಲಿದೆ.
    • ಉದ್ದೇಶ: ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ.
    • ಸದಸ್ಯತ್ವ: ಇದು ಎಲ್ಲಾ ವಿಶ್ವಸಂಸ್ಥೆಯ (UN) ಸದಸ್ಯ ರಾಷ್ಟ್ರಗಳಿಗೆ ಮುಕ್ತವಾಗಿದೆ; ಸಾಲ ಪಡೆಯುವ ಮತ್ತು ಸಾಲ ಪಡೆಯದ ಎರಡೂ ಬಗೆಯ ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ.
    • ಸದಸ್ಯರು: ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, UAE, ಈಜಿಪ್ಟ್, ಅಲ್ಜೀರಿಯಾ ಮತ್ತು ಉಜ್ಬೇಕಿಸ್ತಾನ್ ಇದರ ಸದಸ್ಯ ರಾಷ್ಟ್ರಗಳಾಗಿವೆ.
    • ಉಜ್ಬೇಕಿಸ್ತಾನ್: ಇದು NDB ಯನ್ನು ಸೇರಿದ 10ನೇ ಸದಸ್ಯ ರಾಷ್ಟ್ರ ಮತ್ತು ಮೊದಲ ಮಧ್ಯ ಏಷ್ಯಾದ ರಾಷ್ಟ್ರವಾಗಿದೆ.

    ರಾಯಚೂರು ಮಿಯಾವಾಕಿ ಅರಣ್ಯ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಕರ್ನಾಟಕದ ರಾಯಚೂರಿನ ಯಾಕಲಸ್ಪುರ ಕಸದ ಗುಂಡಿ ಅರಣ್ಯವಾಗಿ ಮಾರ್ಪಟ್ಟಿರುವುದು, ಗುಜರಾತ್‌ನ ರಾಜ್‌ಕೋಟ್‌ನ ನಕ್ರಾವಾಡಿ ತ್ಯಾಜ್ಯ ವಿಲೇವಾರಿ ಘಟಕದ ರೂಪಾಂತರ ಮತ್ತು ಮುಂಬೈನ ನಗರ ಅರಣ್ಯೀಕರಣ ಅಭಿಯಾನಗಳ ಮೂಲಕ ಮಿಯಾವಾಕಿ ವಿಧಾನವು ಕಳೆದ ಒಂದು ವರ್ಷದಿಂದ ನಿರಂತರವಾಗಿ ಸುದ್ದಿಯಲ್ಲಿದೆ.

    ಮಿಯಾವಾಕಿ ಅರಣ್ಯೀಕರಣ ವಿಧಾನದ ಬಗ್ಗೆ: 

    • ಸಣ್ಣ ನಗರ ಪ್ರದೇಶಗಳೂ ಸೇರಿದಂತೆ ಅಲ್ಪಾವಧಿಯಲ್ಲಿಯೇ ದಟ್ಟವಾದ, ಸ್ಥಳೀಯ ಮತ್ತು ಬಹು-ಸ್ತರದ ಅರಣ್ಯಗಳನ್ನು ಸೃಷ್ಟಿಸುವ ಒಂದು ಅರಣ್ಯೀಕರಣ ತಂತ್ರವಾಗಿದೆ.
    • ಇದನ್ನು 1970 ರ ದಶಕದಲ್ಲಿ ಜಪಾನಿನ ಸಸ್ಯಶಾಸ್ತ್ರಜ್ಞ  ಡಾ. ಅಕಿರಾ ಮಿಯಾವಾಕಿ ಅವರು ಅಭಿವೃದ್ಧಿಪಡಿಸಿದರು.
    • ಇದು ‘ಸಂಭಾವ್ಯ ನೈಸರ್ಗಿಕ ಸಸ್ಯವರ್ಗ’ ಎಂಬ ಪರಿಕಲ್ಪನೆಯನ್ನು ಆಧರಿಸಿದೆ – ಅಂದರೆ, ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ನೈಸರ್ಗಿಕವಾಗಿ ಬೆಳೆಯುವ ಸಸ್ಯವರ್ಗವಾಗಿದೆ.
    • ಪ್ರಮುಖ ತತ್ವ: ವೈವಿಧ್ಯಮಯ ಸ್ಥಳೀಯ ಪ್ರಭೇದಗಳನ್ನು ಒಟ್ಟಿಗೆ ಹತ್ತಿರದಲ್ಲಿ ನೆಡುವುದು ಇದರ ತತ್ವವಾಗಿದೆ. ಇದು ಸೂರ್ಯನ ಬೆಳಕು ಮತ್ತು ಪೋಷಕಾಂಶಗಳಿಗಾಗಿ ಸಸ್ಯಗಳ ನಡುವೆ ಸ್ಪರ್ಧೆಯನ್ನು ಸೃಷ್ಟಿಸಿ, ಅರಣ್ಯದ ತ್ವರಿತ ಬೆಳವಣಿಗೆಗೆ ಸಹಾಯ ಮಾಡುತ್ತದೆ.
    • ಪ್ರಯೋಜನಗಳು: ಇದು ಹೆಚ್ಚಿನ ಜೀವವೈವಿಧ್ಯತೆಯನ್ನು ಕಾಪಾಡುತ್ತದೆ, ಇಂಗಾಲದ ಶೇಖರಣೆಗೆ / ಸ್ಥಿರೀಕರಣಕ್ಕೆ (Carbon sequestration) ಸಹಾಯ ಮಾಡುತ್ತದೆ, ಮಣ್ಣಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಗರ ಪ್ರದೇಶಗಳಲ್ಲಿ ತಾಪಮಾನವನ್ನು ಕಡಿಮೆ ಮಾಡುತ್ತದೆ.

    ಅಮೆಜಾನ್ ಮಳೆಕಾಡು

    ಪರಿಸರ

    ಇದೀಗ ಸುದ್ದಿಯಲ್ಲಿ:

    • ‘ಗ್ಲೋಬಲ್ ಚೇಂಜ್ ಬಯಾಲಜಿ’ ಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಕೇವಲ 15-25 ಮರಗಳ ಪ್ರಭೇದಗಳು ಅಮೆಜಾನ್ ಮಳೆಕಾಡಿನ ಅರಣ್ಯನಾಶವಾದ ಪ್ರದೇಶಗಳನ್ನು ಪುನರುತ್ಪಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ತಿಳಿದುಬಂದಿದೆ.

    ಅಮೆಜಾನ್ ಮಳೆಕಾಡುಗಳ ಬಗ್ಗೆ: 

    • ಸ್ಥಳ: ಈ ಅರಣ್ಯ ಪ್ರದೇಶವು ದಕ್ಷಿಣ ಅಮೆರಿಕಾ ಖಂಡದ ಒಂಬತ್ತು ರಾಷ್ಟ್ರಗಳಿಗೆ ಸೇರಿದೆ.
    • ಸುತ್ತುವರಿದಿರುವ ಪ್ರದೇಶ : ಇದು ಉತ್ತರದಲ್ಲಿ ಗಯಾನಾ ಹೈಲ್ಯಾಂಡ್ಸ್, ಪಶ್ಚಿಮದಲ್ಲಿ ಆಂಡಿಸ್ ಪರ್ವತಗಳು, ದಕ್ಷಿಣದಲ್ಲಿ ಬ್ರೆಜಿಲ್‌ನ ಕೇಂದ್ರ ಪ್ರಸ್ಥಭೂಮಿ ಮತ್ತು ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಆವೃತವಾಗಿದೆ.
    • ವಿಸ್ತೀರ್ಣ: ಈ ಕಾಡಿನ ಬಹುಪಾಲು, ಅಂದರೆ 60% ಬ್ರೆಜಿಲ್‌ನಲ್ಲಿದೆ. ಪೆರುವಿನಲ್ಲಿ 13%, ಕೊಲಂಬಿಯಾದಲ್ಲಿ 10% ಇದ್ದು, ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಮತ್ತು ವೆನೆಜುವೆಲಾದಲ್ಲಿ ಸಣ್ಣ ಪ್ರಮಾಣದಲ್ಲಿದೆ.
    • ಹವಾಮಾನ: ಇಲ್ಲಿ ವರ್ಷಪೂರ್ತಿ 26-30°C ತಾಪಮಾನದೊಂದಿಗೆ ಬಿಸಿ ಮತ್ತು ತೇವಾಂಶ ಭರಿತ ಹವಾಮಾನವಿರುತ್ತದೆ. ಇಲ್ಲಿ ಯಾವುದೇ ನಿರ್ದಿಷ್ಟ ಋತುಗಳಿರುವುದಿಲ್ಲ. ವಾರ್ಷಿಕ ಮಳೆಯ ಪ್ರಮಾಣವು 2,000 ಮಿ.ಮೀ ನಿಂದ 10,920 ಮಿ.ಮೀ ವರೆಗೆ ಇರುತ್ತದೆ.
    • ಬುಡಕಟ್ಟು ಜನಾಂಗಗಳು: ಯಾನೊಮಾಮೊ, ಕಯಾಪೊ, ಅಕುಂಟ್ಸು, ಮ್ಯಾಟ್ಸೆಸ್, ತುಪಿ ಇತ್ಯಾದಿ ಬುಡಕಟ್ಟುಗಳು ಇಲ್ಲಿ ನೆಲೆಸಿವೆ.
    • ಪ್ರಾಣಿಸಂಕುಲ : ಅನಾಕೊಂಡ, ಜೀಸಸ್ ಹಲ್ಲಿ, ಹೌಲರ್ ಮಂಗ, ಗೋಲ್ಡನ್ ಲಯನ್ ಟ್ಯಾಮರಿನ್, ಜಾಗ್ವಾರ್, ಸ್ಲಾತ್, ಸ್ಪೈಡರ್ ಮಂಗ, ಅಮೆಜಾನ್ ನದಿ ಡಾಲ್ಫಿನ್, ಟೂಕನ್, ಸ್ಕಾರ್ಲೆಟ್ ಮಕಾವ್, ವಿಷಕಾರಿ ಕಪ್ಪೆ ಮತ್ತು ಗ್ಲಾಸ್ ಫ್ರಾಗ್ ಇಲ್ಲಿ ಕಂಡುಬರುತ್ತವೆ.
    • ಸಸ್ಯಸಂಕುಲ : ಮರ್ಟಲ್, ಲಾರೆಲ್, ಪಾಮ್, ಅಕೇಶಿಯ, ರೋಸ್‌ವುಡ್, ಬ್ರೆಜಿಲ್ ನಟ್, ರಬ್ಬರ್ ಮರ, ಮಹೋಗಾನಿ ಮತ್ತು ಅಮೆಜೋನಿಯನ್ ಸಿಡಾರ್‌ನಂತಹ ತೇವಾಂಶ ಭರಿತ ವಿಶಾಲ ಎಲೆಗಳ ಉಷ್ಣವಲಯದ ಮಳೆಕಾಡುಗಳು ಇಲ್ಲಿವೆ.

    ಮಳೆಕಾಡುಗಳ ಪ್ರಾಮುಖ್ಯತೆ: 

    • ಭೂಮಿಯ ಶ್ವಾಸಕೋಶಗಳು: ಮಳೆಕಾಡುಗಳು ಪ್ರಪಂಚದ ಸುಮಾರು 20% ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಇವುಗಳ ಮರಗಳು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
    • ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ: ಇವು ಇಂಗಾಲವನ್ನು ಸಂಗ್ರಹಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿರುವುದರಿಂದ, ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ.
    • ಔಷಧೀಯ ಗುಣಗಳು: ಇಲ್ಲಿರುವ ಅನೇಕ ಸಸ್ಯಗಳು ಗುಣಪಡಿಸಲಾಗದ ರೋಗಗಳಿಗೆ, ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿವೆ.

    ಅರಣ್ಯಗಳಿಗೆ ಇರುವ ಬೆದರಿಕೆಗಳು

    • ಹವಾಮಾನ ಬದಲಾವಣೆ: ಮಳೆಯ ಮಾದರಿಯಲ್ಲಿನ ಬದಲಾವಣೆಗಳು ಮತ್ತು ಮಾಲಿನ್ಯದಂತಹ ವಿವಿಧ ಸವಾಲುಗಳನ್ನು ಕಾಡುಗಳು ಎದುರಿಸುತ್ತಿವೆ.
    • ಅರಣ್ಯ ನಾಶ: ಮರಮುಟ್ಟುಗಳನ್ನು ಪಡೆಯಲು ಮತ್ತು ಹುಲ್ಲುಗಾವಲು ಹಾಗೂ ಕೃಷಿ ಭೂಮಿಯನ್ನು ನಿರ್ಮಿಸಲು ಭೂಮಿಯನ್ನು ತೆರವುಗೊಳಿಸುತ್ತಿರುವುದರಿಂದ ಅಮೆಜಾನ್ ಕಾಡಿನ ಗಾತ್ರವು ತೀವ್ರವಾಗಿ ಕುಗ್ಗಿದೆ.
    • ಕಾಡ್ಗಿಚ್ಚುಗಳು: ಇದು ಪರಿಸರ ವ್ಯವಸ್ಥೆಗಳು ಮತ್ತು ಜೀವವೈವಿಧ್ಯತೆಯ ಉಳಿವಿಗೆ ಬೆದರಿಕೆ ಒಡ್ಡುತ್ತದೆ. 2019 ರ ಕಾಡ್ಗಿಚ್ಚು ಈ ಪ್ರದೇಶದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು.

    ‘ಅಮೆಜಾನ್ ನದಿ’ಯ ಬಗ್ಗೆ: 

    • ಇದು ನೀರಿನ ಪ್ರಮಾಣದ ಆಧಾರದ ಮೇಲೆ ವಿಶ್ವದ ಅತಿ ದೊಡ್ಡ ನದಿಯಾಗಿದೆ ಮತ್ತು ಆಫ್ರಿಕಾದ ನೈಲ್ ನದಿಯ ನಂತರ ವಿಶ್ವದ ಎರಡನೇ ಅತಿ ಉದ್ದದ ನದಿಯಾಗಿದೆ.
    • ಮೂಲ: ಈ ನದಿಯು 5,598 ಮೀಟರ್ ಎತ್ತರದಲ್ಲಿರುವ ಪೆರುವಿಯನ್ ಆಂಡಿಸ್‌ನಲ್ಲಿ ಉಗಮಿಸುತ್ತದೆ.
    • ಉದ್ದ: ಇದರ ಉದ್ದ 6400 ಕಿ.ಮೀ. ಆಗಿದೆ.
    • ನದಿ ಪಾತ್ರ: ಇದರ ಜಲಾನಯನ ಪ್ರದೇಶವು ಬ್ರೆಜಿಲ್ ಮತ್ತು ಪೆರುವಿನ ಬಹುಭಾಗ, ಕೊಲಂಬಿಯಾ, ಈಕ್ವೆಡಾರ್ ಮತ್ತು ಬೊಲಿವಿಯಾದ ಕೆಲವು ಭಾಗಗಳು ಹಾಗೂ ವೆನೆಜುವೆಲಾದ ಸಣ್ಣ ಪ್ರದೇಶವನ್ನು ಒಳಗೊಂಡಿದೆ.
    • ಉಪನದಿಗಳು: ಜಪುರಾ, ಜುರುವಾ, ಮಡೈರಾ, ನೀಗ್ರೋ, ಪುರುಸ್ ಮತ್ತು ಕ್ಸಿಂಗು ನದಿಗಳು ಇದರ ಪ್ರಮುಖ ಉಪನದಿಗಳಾಗಿವೆ.
    • ನದೀಮುಖ: ಇದು ಬ್ರೆಜಿಲ್‌ನ ಈಶಾನ್ಯ ಕರಾವಳಿಯಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ಸೇರುತ್ತದೆ.

    ದಕ್ಷಿಣ ವಲಯ ಮಂಡಳಿ 

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ 31ನೇ ದಕ್ಷಿಣ ವಲಯ ಮಂಡಳಿ ಸಭೆ ನಡೆಯಿತು.

    ವಲಯ ಮಂಡಳಿಗಳ ಬಗ್ಗೆ

    • ಕೇಂದ್ರ-ರಾಜ್ಯ ಮತ್ತು ಅಂತರ-ರಾಜ್ಯ ಸಹಕಾರವನ್ನು ಉತ್ತೇಜಿಸಲು ರಾಜ್ಯಗಳ ಪುನರ್‌ವಿಂಗಡಣಾ ಕಾಯ್ದೆ, 1956 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಗಳು ಇವಾಗಿವೆ.
    • ಅಧ್ಯಕ್ಷರು: ಕೇಂದ್ರ ಗೃಹ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ.
    • ಉಪಾಧ್ಯಕ್ಷರು: ಸದಸ್ಯ ರಾಜ್ಯಗಳ ಮುಖ್ಯಮಂತ್ರಿಗಳು ಸರದಿ ಆಧಾರದ ಮೇಲೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
    • ಸ್ವರೂಪ: ಇವು ಕೇವಲ ಸಲಹಾ ಸಂಸ್ಥೆಗಳಾಗಿವೆ; ಮುಖ್ಯ ಕಾರ್ಯದರ್ಶಿಗಳ ಸ್ಥಾಯಿ ಸಮಿತಿಯು ಮಂಡಳಿಯ ಮುಂದಿರುವ ವಿಷಯಗಳನ್ನು ಪರಿಶೀಲಿಸುತ್ತದೆ.
    • ಐದು ವಲಯ ಮಂಡಳಿಗಳು: ಉತ್ತರ, ಮಧ್ಯ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯ ಮಂಡಳಿಗಳು.
    • ಈಶಾನ್ಯ ರಾಜ್ಯಗಳ ಮಂಡಳಿ (NEC): ಈಶಾನ್ಯ ರಾಜ್ಯಗಳ ವಿಶೇಷ ಸಮಸ್ಯೆಗಳನ್ನು ಬಗೆಹರಿಸಲು ಈಶಾನ್ಯ ಮಂಡಳಿ ಕಾಯ್ದೆ, 1972 ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
    • NEC ರಾಜ್ಯಗಳು: ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರಾ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ (2002 ರಲ್ಲಿ ಸೇರ್ಪಡೆಗೊಂಡಿತು).
    • ಪ್ರಮುಖ ಅಂಶ: ವಲಯ ಮಂಡಳಿಗಳು ಸಾಂವಿಧಾನಿಕ ಸಂಸ್ಥೆಗಳಲ್ಲ; ಅವು ಕೇವಲ ಶಾಸನಬದ್ಧ ಮತ್ತು ಸಲಹಾ ಸಂಸ್ಥೆಗಳಾಗಿವೆ.

  • ತಾಮಿರಭರಣಿ ನದಿ | EU ಕಾರ್ಬನ್ ತೆರಿಗೆ ದಂಡನಾತ್ಮಕ ಎಂದು ಕರೆದ ಬ್ರಿಕ್ಸ್ (BRICS) | ಬನ್ನಿ ಹುಲ್ಲುಗಾವಲಿಗೆ ಕೃಷ್ಣಮೃಗಗಳ (Blackbucks) ಪರಿಚಯ | ಭಾರತದ ಮಖಾನಾ ವಲಯ

    ತಾಮಿರಭರಣಿ ನದಿ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠವು ತಮಿಳುನಾಡಿನ ತಾಮಿರಭರಣಿ ನದಿಯನ್ನು ‘ದೇವತೆ’ (Deity) ಎಂದು ಘೋಷಿಸಿದೆ. ಶವಸಂಸ್ಕಾರದ ವಿಧಿವಿಧಾನಗಳು ಮತ್ತು ತ್ಯಾಜ್ಯ ಸುರಿಯುವಿಕೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ನದಿಗೆ ಕಾನೂನಾತ್ಮಕ ವ್ಯಕ್ತಿಯ ಸ್ಥಾನಮಾನವನ್ನು (ಅಥವಾ ನ್ಯಾಯಿಕ ವ್ಯಕ್ತಿಯ ಸ್ಥಾನಮಾನವನ್ನು) ನೀಡಲಾಗಿದೆ.

    ಹಿನ್ನೆಲೆ:

    • 2017 ರಲ್ಲಿ, ಉತ್ತರಾಖಂಡ ಹೈಕೋರ್ಟ್ ಗಂಗಾ ಮತ್ತು ಯಮುನಾ ನದಿಗಳನ್ನು ‘ಕಾನೂನಾತ್ಮಕ ವ್ಯಕ್ತಿಗಳು’ (Legal persons) ಎಂದು ಗುರುತಿಸಿತ್ತು. ಆದರೆ, ಈ ನದಿಗಳು ಅನೇಕ ರಾಜ್ಯಗಳ ಮೂಲಕ ಹರಿಯುವುದರಿಂದ ಪ್ರಾಯೋಗಿಕ ಮತ್ತು ಆಡಳಿತಾತ್ಮಕ ತೊಂದರೆಗಳನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯವು ನಂತರ ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು.
    • ಜಾಗತಿಕವಾಗಿ, ನ್ಯೂಜಿಲೆಂಡ್‌ನ ‘ವಂಗನುಯಿ ನದಿ’ 2017 ರಲ್ಲಿ ಕಾನೂನುಬದ್ಧ ವ್ಯಕ್ತಿ ಎಂದು ಗುರುತಿಸಲ್ಪಟ್ಟ ಪ್ರಪಂಚದ ಮೊದಲ ನದಿಯಾಗಿದೆ.

    ‘ತಾಮಿರಭರಣಿ ನದಿ’ಯ ಬಗ್ಗೆ: 

    • ಉಗಮ: ತಮಿಳುನಾಡಿನ ಪೊತಿಗೈ ಬೆಟ್ಟಗಳು (ಪಶ್ಚಿಮ ಘಟ್ಟಗಳು).
    • ಹರಿಯುವ ಮಾರ್ಗ: ಇದು ತಿರುನೆಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳ ಮೂಲಕ ಹರಿಯುತ್ತದೆ.
    • ನದೀಮುಖ: ಇದು ಮನ್ನಾರ್ ಕೊಲ್ಲಿಯನ್ನು ಸೇರುತ್ತದೆ.
    • ಪ್ರಕಾರ: ಇದು ತಮಿಳುನಾಡಿನ ಕೆಲವೇ ಕೆಲವು ಸಾರ್ವಕಾಲಿಕ (ಜೀವನದಿ) ನದಿಗಳಲ್ಲಿ ಒಂದಾಗಿದೆ.
    • ಪ್ರಮುಖ ಉಪನದಿಗಳು: ಮಣಿಮುತ್ತಾರ್, ಗಡನಾನತಿ, ಪಚ್ಚೈಯಾರ್ ಮತ್ತು ಚಿತ್ತಾರ್.
    • ಮಹತ್ವ: ನೀರಾವರಿ, ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆ.
    • ಪ್ರಮುಖ ಲಕ್ಷಣ: ಇದು ತಿರುನೆಲ್ವೇಲಿ-ತೂತುಕುಡಿ ಪ್ರದೇಶದಲ್ಲಿ ಕೃಷಿಯನ್ನು ಬೆಂಬಲಿಸುತ್ತದೆ.

    EU ಕಾರ್ಬನ್ ತೆರಿಗೆ ದಂಡನಾತ್ಮಕ ಎಂದು ಕರೆದ ಬ್ರಿಕ್ಸ್ (BRICS)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಬ್ರಿಕ್ಸ್ (BRICS) ಪರಿಸರ ಮತ್ತು ಹವಾಮಾನ ಮಂತ್ರಿಗಳು ಐರೋಪ್ಯ ಒಕ್ಕೂಟದ (EU) ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂ (CBAM) ಅನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಲ್ಲದ ತಾರತಮ್ಯದ ಮತ್ತು ಸಂರಕ್ಷಣಾತ್ಮಕ ಕ್ರಮವಾಗಿದೆ ಎಂದು ಅವರು ಕರೆದಿದ್ದಾರೆ.

    ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂ (CBAM) ಕುರಿತು:

    • ಇದು ಐರೋಪ್ಯ ಒಕ್ಕೂಟ ಆಮದು ಮಾಡಿಕೊಳ್ಳುವ ಸಿಮೆಂಟ್ ಮತ್ತು ವಿದ್ಯುತ್ ಶಕ್ತಿಯಂತಹ ಇಂಗಾಲ-ತೀವ್ರ ಉತ್ಪನ್ನಗಳ ಮೇಲಿನ ಕಾರ್ಬನ್ ಸುಂಕವಾಗಿದೆ.
    • ಮಹತ್ವ: ಇಂಗಾಲದ ಹೊರಸೂಸುವಿಕೆಗೆ ವಿಧಿಸುವ ಶುಲ್ಕವಾಗಿ, ಇದು ಇಂಗಾಲದ ಹೊರಸೂಸುವಿಕೆಯನ್ನು ನಿರುತ್ಸಾಹಗೊಳಿಸುತ್ತದೆ. ಆದರೆ, ವ್ಯಾಪಾರ ಸಂಬಂಧಿತ ಕ್ರಮವಾಗಿ, ಇದು ಇತರ ರಾಷ್ಟ್ರಗಳ ಉತ್ಪಾದನೆ ಮತ್ತು ರಫ್ತುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

    ಬನ್ನಿ ಹುಲ್ಲುಗಾವಲಿಗೆ ಕೃಷ್ಣಮೃಗಗಳ (Blackbucks) ಪರಿಚಯ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಮತ್ತು ರಿಹ್ಯಾಬಿಲಿಟೇಶನ್ ಸೆಂಟರ್ – ‘ವಂತಾರಾ’ದ ತಾಂತ್ರಿಕ ಬೆಂಬಲದೊಂದಿಗೆ ಗುಜರಾತ್ ಅರಣ್ಯ ಇಲಾಖೆಯು ಕಚ್‌ನ ಬನ್ನಿ ಹುಲ್ಲುಗಾವಲಿಗೆ 20 ಕೃಷ್ಣಮೃಗಗಳನ್ನು (Antilope cervicapra) ಬಿಡುಗಡೆ ಮಾಡಿದೆ.

    ಕೃಷ್ಣಮೃಗ(Antilope cervicapra)ದ ಕುರಿತು:

      • ಗೋಚರತೆ: ಗಂಡು ಮೃಗಗಳು ಸುರುಳಿಯಾಕಾರದ ಆಕರ್ಷಕ ಕೊಂಬುಗಳನ್ನು ಹೊಂದಿದ್ದು, ಅವು 75 ಸೆಂ.ಮೀ (30 ಇಂಚು) ವರೆಗೆ ಬೆಳೆಯುತ್ತವೆ ಮತ್ತು ಅವುಗಳ ಚರ್ಮವು ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣವನ್ನು ಹೊಂದಿರುತ್ತದೆ.
      • ಹೆಣ್ಣು ಮೃಗಗಳು ಚಿಕ್ಕದಾಗಿರುತ್ತವೆ ಮತ್ತು ಕೊಂಬುಗಳಿಲ್ಲದೆ ಕೆಂಪು-ಕಂದು ಬಣ್ಣದ ಚರ್ಮವನ್ನು ಹೊಂದಿರುತ್ತವೆ.
      • ಆವಾಸಸ್ಥಾನ: ಇವುಗಳು ಸಾಮಾನ್ಯವಾಗಿ ಹುಲ್ಲುಗಾವಲುಗಳು, ಸವನ್ನಾಗಳು ಮತ್ತು ಮುಕ್ತ ಕಾಡುಗಳಲ್ಲಿ ಕಂಡುಬರುತ್ತವೆ. ಮೇಯಲು ಇವು ಸಣ್ಣ ಹುಲ್ಲು ಇರುವ ಪ್ರದೇಶಗಳನ್ನು ಆದ್ಯತೆ ನೀಡುತ್ತವೆ.
      • ಅಪಾಯಗಳು: ಭಾರತದ ಹಿಂದಿನ ರಾಜಮನೆತನದ ರಾಜ್ಯಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬೇಟೆಯಾಡಲಾಗುತ್ತಿತ್ತು. ಪ್ರಸ್ತುತ ಆವಾಸಸ್ಥಾನ ನಾಶ, ಆರ್ಥಿಕ ಬಳಕೆಗಾಗಿ ಕಾನೂನುಬಾಹಿರ ಬೇಟೆ ಇವುಗಳಿಗೆ ಪ್ರಮುಖ ಬೆದರಿಕೆಗಳಾಗಿವೆ.
      • ಸಂರಕ್ಷಣಾ ಸ್ಥಿತಿ: IUCN ಸ್ಥಿತಿ: ಕನಿಷ್ಠ ಕಾಳಜಿ (LC).
      • ಸೈಟ್ಸ್ (CITES): ಅನುಬಂಧ III.
    • 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ I ರ ಅಡಿಯಲ್ಲಿ ರಕ್ಷಿಸಲಾಗಿದೆ.
    • ರಾಜ್ಯ ಪ್ರಾಣಿ: ಇದನ್ನು ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶದ ರಾಜ್ಯ ಪ್ರಾಣಿಯಾಗಿ ಘೋಷಿಸಲಾಗಿದೆ.
    • ಸಾಂಸ್ಕೃತಿಕ ಮಹತ್ವ: ಹಿಂದೂ ಧರ್ಮದಲ್ಲಿ, ಕೃಷ್ಣಮೃಗವನ್ನು ಪರಿಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗಿದೆ, ಅದರ ಚರ್ಮ ಮತ್ತು ಕೊಂಬುಗಳನ್ನು ಪವಿತ್ರ ವಸ್ತುಗಳಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ, ಇದು ಅದೃಷ್ಟವನ್ನು ಪ್ರತಿನಿಧಿಸುತ್ತದೆ.

    ಬನ್ನಿ ಹುಲ್ಲುಗಾವಲಿನ ಬಗ್ಗೆ:

      • ಸ್ಥಳ: ಬನ್ನಿ ಹುಲ್ಲುಗಾವಲುಗಳು ಗುಜರಾತ್‌ನ ಕಚ್‌ ಪ್ರದೇಶದಲ್ಲಿವೆ.
      • ವಿಶಿಷ್ಟತೆ: ಇದು ಏಷ್ಯಾದ ಅತಿದೊಡ್ಡ ನೈಸರ್ಗಿಕ ಹುಲ್ಲುಗಾವಲಾಗಿದೆ.
      • ಪಶುಪಾಲನಾ ಸಮುದಾಯಗಳು: ಇಲ್ಲಿ ಫಕೀರಾನಿ ಜಾಟ್ ಸಮುದಾಯವು ವಾಸಿಸುತ್ತದೆ.
      • ಈ ಪ್ರದೇಶವು 70 ಕ್ಕೂ ಹೆಚ್ಚು ಜಾತಿಯ ಪೌಷ್ಟಿಕ ಹುಲ್ಲುಗಳನ್ನು ಹೊಂದಿದೆ ಮತ್ತು ಒಂಟೆಗಳು, ಎಮ್ಮೆಗಳು, ಕುರಿಗಳು ಮತ್ತು ಮೇಕೆಗಳ ಮೇಯುವಿಕೆಯನ್ನು ಬೆಂಬಲಿಸುತ್ತದೆ.
    • ಹತ್ತಿರದ ಪ್ರದೇಶ: ಇಲ್ಲಿರುವ ಛಾರಿ ಧಂಡ್ ಜೌಗು ಪ್ರದೇಶ ಸಂರಕ್ಷಣಾ ಮೀಸಲು ಪ್ರದೇಶವು ವಲಸೆ ಹಕ್ಕಿಗಳು ಮತ್ತು ಸ್ಥಳೀಯ ಜೀವವೈವಿಧ್ಯತೆಗೆ ಪ್ರಮುಖವಾದ ರಾಮ್‌ಸರ್ ತಾಣವಾಗಿದೆ.

    ಕಳವಳಗಳು:

    • ಸ್ಥಳೀಯ ಸಮುದಾಯಗಳು ತಮ್ಮ ಮೇಯುವಿಕೆ ಭೂಮಿ, ಸಾಂಸ್ಕೃತಿಕ ಸ್ಥಳಗಳು, ಸ್ಮಶಾನಗಳು ಮತ್ತು ಸಾಂಪ್ರದಾಯಿಕ ಜೀವನೋಪಾಯಗಳ ನಷ್ಟದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
    • ಸೌರ ಮೂಲಸೌಕರ್ಯ, ಬೆಳಕಿನ ಮಾಲಿನ್ಯ ಮತ್ತು ಮಾನವ ಚಟುವಟಿಕೆಗಳು ಪಕ್ಷಿಗಳ ಆವಾಸಸ್ಥಾನಗಳು ಮತ್ತು ವಲಸೆ ಮಾರ್ಗಗಳನ್ನು ಅಡ್ಡಿಪಡಿಸಬಹುದು ಎಂದು ಸಂರಕ್ಷಣಾವಾದಿಗಳು ಎಚ್ಚರಿಸಿದ್ದಾರೆ.

    ಭಾರತದ ಮಖಾನಾ ವಲಯ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಹೆಚ್ಚುತ್ತಿರುವ ಆರೋಗ್ಯ ಜಾಗೃತಿ, ವಿಸ್ತರಿಸುತ್ತಿರುವ ದೇಶೀಯ ಬೇಡಿಕೆ ಮತ್ತು ಬಲವಾದ ರಫ್ತು ಸಾಮರ್ಥ್ಯದಿಂದಾಗಿ, ‘ಮಖಾನಾ’ ಭಾರತದ ವೇಗವಾಗಿ ಬೆಳೆಯುತ್ತಿರುವ ಕೃಷಿ-ಆಹಾರ ವಲಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

    ರಾಷ್ಟ್ರೀಯ ಮಖಾನಾ ಮಂಡಳಿ:

    • ಉದ್ದೇಶ: ಭಾರತದ ಮಖಾನಾ ವಲಯವನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಇದರ ಪ್ರಧಾನ ಕಚೇರಿಯು ಬಿಹಾರದ ಪೂರ್ಣಿಯಾದಲ್ಲಿದೆ.

    ಮಖಾನಾ (Euryale ferox) ಕುರಿತು:

    • ಇದು ನೀರಿನ ಲಿಲ್ಲಿ ಕುಟುಂಬದಲ್ಲಿ (ನಿಂಫೇಯಾಸಿ – Nymphaeaceae) ವರ್ಗೀಕರಿಸಲಾದ ಒಂದು ಹೂಬಿಡುವ ಸಸ್ಯವಾಗಿದೆ.
    • ಹವಾಮಾನ ಸ್ಥಿತಿ: ಇದು ಬೆಳೆಯಲು 20-35°C ತಾಪಮಾನದ ವ್ಯಾಪ್ತಿ ಮತ್ತು 100-250 ಸೆಂ.ಮೀ ವಾರ್ಷಿಕ ಮಳೆಯ ಅಗತ್ಯವಿದೆ.
    • ಇದು ಸಂಪೂರ್ಣವಾಗಿ ಸಾವಯವ, ಸಿರಿಧಾನ್ಯವಲ್ಲದ ಆಹಾರವಾಗಿದ್ದು, ಪ್ರಧಾನವಾಗಿ ಭಾರತದಲ್ಲಿ ಮತ್ತು ಕೊರಿಯಾ, ಜಪಾನ್ ಹಾಗೂ ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
    • ಭಾರತದ ಒಟ್ಟು ಮಖಾನಾ ಉತ್ಪಾದನೆಯಲ್ಲಿ ಶೇ. 90 ರಷ್ಟನ್ನು ಬಿಹಾರ ರಾಜ್ಯವು ಉತ್ಪಾದಿಸುತ್ತದೆ.
    • ಭೌಗೋಳಿಕ ಸೂಚಕ ಮಾನ್ಯತೆ (GI Tag): 2022 ರಲ್ಲಿ, ‘ಮಿಥಿಲಾ ಮಖಾನಾ’ಕ್ಕೆ ಭೌಗೋಳಿಕ ಸೂಚಕ (GI) ಮಾನ್ಯತೆ ನೀಡಲಾಗಿದೆ.
  • ದಹಿ ಹಂಡಿ ಉತ್ಸವ | ಕೋಮುವಾರು ತೀರ್ಪು (Communal Award) | ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆ (ECMS) | MQ-9B  ಸೀ ಗಾರ್ಡಿಯನ್ ಮಾನವರಹಿತ ವಿಮಾನ | ಕರಡು ಶಾಂತಿ (SHANTI) ನಿಯಮಗಳು 2026

    ದಹಿ ಹಂಡಿ ಉತ್ಸವ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಮಹಾರಾಷ್ಟ್ರ ಸರ್ಕಾರವು ದಹಿ ಹಂಡಿ ಉತ್ಸವಕ್ಕೆ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದೆ.
    • ಈ ಉತ್ಸವದ ಸಮಯದಲ್ಲಿ ಮಾನವ ಪಿರಮಿಡ್‌ಗಳನ್ನು ರಚಿಸುವ ‘ಗೋವಿಂದ’ಗಳನ್ನು, ಈ ಸಾಂಪ್ರದಾಯಿಕ ಆಚರಣೆಯನ್ನು ಪ್ರದರ್ಶಿಸಲು ಸ್ಪೇನ್‌ಗೆ ಕಳುಹಿಸಲು ಸರ್ಕಾರ ಯೋಜಿಸಿದೆ.

    ದಹಿ ಹಂಡಿ ಉತ್ಸವದ ಕುರಿತು:

    • ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲು ಜನ್ಮಾಷ್ಟಮಿಯ ಮರುದಿನ ದಹಿ ಹಂಡಿ ಉತ್ಸವವನ್ನು ನಡೆಸಲಾಗುತ್ತದೆ.
    • ಈ ಉತ್ಸವವು ಧಾರ್ಮಿಕ ಭಕ್ತಿ, ಸಮುದಾಯದ ಭಾಗವಹಿಸುವಿಕೆ ಮತ್ತು ಕ್ರೀಡೆಯನ್ನು ಸಂಯೋಜಿಸುತ್ತದೆ.
    • ಗೋವಿಂದಗಳು ಎಂದು ಕರೆಯಲ್ಪಡುವ ಸ್ಪರ್ಧಿಗಳು, ಮೊಸರು, ಬೆಣ್ಣೆ ಮತ್ತು ಹಾಲಿನಿಂದ ತುಂಬಿದ ಮಣ್ಣಿನ ಮಡಕೆಯನ್ನು ತಲುಪಲು ಮತ್ತು ಒಡೆಯಲು ಎತ್ತರದ ಮಾನವ ಪಿರಮಿಡ್‌ಗಳನ್ನು ರಚಿಸುತ್ತಾರೆ.

    ಭಾರತ ಮತ್ತು ಸ್ಪೇನ್ ನಡುವಿನ ಸಂಪರ್ಕ:

    • ಮಾನವ ಪಿರಮಿಡ್‌ಗಳು ಮತ್ತು ಗೋಪುರಗಳನ್ನು ನಿರ್ಮಿಸುವ ಸಾಂಪ್ರದಾಯಿಕ ಆಚರಣೆಯು ದಹಿ ಹಂಡಿ ಉತ್ಸವ ಮತ್ತು ಸ್ಪೇನ್ ನಡುವಿನ ಸಾಮಾನ್ಯ ಕೊಂಡಿಯಾಗಿದೆ. ಸ್ಪೇನ್‌ನಲ್ಲಿ ಸಮುದಾಯಗಳು ‘ಕ್ಯಾಸ್ಟೆಲ್ಸ್’ ಎಂದು ಕರೆಯಲ್ಪಡುವ ಮಾನವ ಗೋಪುರಗಳನ್ನು ನಿರ್ಮಿಸುತ್ತವೆ.
    • ಸ್ಪೇನ್‌ನ ಕೆಟಲಾನ್ ಕ್ಯಾಸ್ಟೆಲ್ಸ್‌ಗಳು (ಮಾನವ ಗೋಪುರಗಳು) ಈಗಾಗಲೇ ಯುನೆಸ್ಕೋ ಮಾನ್ಯತೆ ಪಡೆದಿವೆ.
    • ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸಲು ಸ್ಪ್ಯಾನಿಷ್ ತಂಡಗಳು ನಿಯಮಿತವಾಗಿ ಮುಂಬೈ ಮತ್ತು ಥಾಣೆಗೆ ಭೇಟಿ ನೀಡುತ್ತವೆ.

    ಅಮೂರ್ತ ಸಾಂಸ್ಕೃತಿಕ ಪರಂಪರೆ (Intangible Cultural Heritage):

    ಯುನೆಸ್ಕೋ “ಅಮೂರ್ತ” (Intangible) ಎಂಬುದನ್ನು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುವ ಅಭಿವ್ಯಕ್ತಿಗಳು ಎಂದು ವ್ಯಾಖ್ಯಾನಿಸುತ್ತದೆ:

    1. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನೆಯಾಗಿರುವುದು.
    2. ತಮ್ಮ ಪರಿಸರಕ್ಕೆ ಅನುಗುಣವಾಗಿ ವಿಕಸನಗೊಂಡಿರುವುದು.
    3. ನಮಗೆ ಗುರುತು ಮತ್ತು ನಿರಂತರತೆಯ ಭಾವನೆಯನ್ನು ನೀಡಲು ಕೊಡುಗೆ ನೀಡಿರುವುದು.
    • ಯುನೆಸ್ಕೋದ ಅಧಿಕೃತ ದಾಖಲೆಯ ಪ್ರಕಾರ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯು ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಆಚರಣೆಗಳು, ಧಾರ್ಮಿಕ ಆಚರಣೆಗಳು, ಹಬ್ಬದ ಘಟನೆಗಳು, ಪ್ರಕೃತಿ ಮತ್ತು ಬ್ರಹ್ಮಾಂಡಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಆಚರಣೆಗಳು ಅಥವಾ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಜ್ಞಾನ ಮತ್ತು ಕೌಶಲ್ಯಗಳನ್ನು ಒಳಗೊಂಡಿದೆ.

    ಇಲ್ಲಿಯವರೆಗೆ, ಭಾರತದ 16 ಅಂಶಗಳನ್ನು (ದೀಪಾವಳಿ ಸೇರಿದಂತೆ) ಯುನೆಸ್ಕೋ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಲಾಗಿದೆ:

    • ಗುಜರಾತ್‌ನ ಗರ್ಬಾ (2023)
    • ಕೋಲ್ಕತ್ತಾದ ದುರ್ಗಾ ಪೂಜೆ (2021)
    • ಕುಂಭಮೇಳ (2017)
    • ನವ್ರೋಜ್ (2016)
    • ಯೋಗ (2016)
    • ಪಂಜಾಬ್‌ನ ಜಂಡಿಯಾಲಾ ಗುರುವಿನ ತಥೇರರ (Thatheras) ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕಾ ಕಲೆ (2014)
    • ಮಣಿಪುರದ ಸಂಕೀರ್ತನೆ: ಆಚರಣಾತ್ಮಕ ಗಾಯನ, ತಾಳವಾದನ ಮತ್ತು ನೃತ್ಯ (2013)
    • ಲಡಾಖ್‌ನ ಬೌದ್ಧ ಪಠಣ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದಾಚೆಗಿನ (ಟ್ರಾನ್ಸ್-ಹಿಮಾಲಯನ್) ಲಡಾಖ್ ಪ್ರದೇಶದಲ್ಲಿ ಪವಿತ್ರ ಬೌದ್ಧ ಗ್ರಂಥಗಳ ಪಠಣ (2012)
    • ಛೌ ನೃತ್ಯ (2010)
    • ರಾಜಸ್ಥಾನದ ಕಾಲ್ಬೆಲಿಯಾ ಜಾನಪದ ಗೀತೆಗಳು ಮತ್ತು ನೃತ್ಯಗಳು (2010)
    • ಕೇರಳದ ಮುಡಿಯೆಟ್ಟು: ಆಚರಣಾತ್ಮಕ ರಂಗಭೂಮಿ ಮತ್ತು ನೃತ್ಯ ನಾಟಕ (2010)
    • ಗರ್ವಾಲ್ ಹಿಮಾಲಯದ ರಮ್ಮನ್: ಧಾರ್ಮಿಕ ಉತ್ಸವ ಮತ್ತು ಆಚರಣಾತ್ಮಕ ರಂಗಭೂಮಿ (2009)
    • ಕುಡಿಯಟ್ಟಂ, ಸಂಸ್ಕೃತ ರಂಗಭೂಮಿ (2008)
    • ವೇದ ಪಠಣದ ಸಂಪ್ರದಾಯ (2008)
    • ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ (2008)
    • ದೀಪಾವಳಿ (2025) – ಇತ್ತೀಚೆಗೆ ಸೇರ್ಪಡೆಗೊಂಡಿದೆ.

    ಕೋಮುವಾರು ತೀರ್ಪು (Communal Award)

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ, ಕೋಮುವಾರು ತೀರ್ಪು (Communal Award) ಘೋಷಣೆಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

    ಕೋಮುವಾರು ತೀರ್ಪಿನ ಕುರಿತು:

    • ಆಗಸ್ಟ್ 1932 ರಲ್ಲಿ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಇದನ್ನು ಘೋಷಿಸಿದರು.
    • ಉದ್ದೇಶ: ಇದು ದಮನಿತ ವರ್ಗಗಳಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಮತ್ತು 71 ಮೀಸಲು ಸ್ಥಾನಗಳನ್ನು ಒದಗಿಸಿತು.
    • ಇದು ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಆಂಗ್ಲೋ-ಇಂಡಿಯನ್ನರು ಮತ್ತು ಯುರೋಪಿಯನ್ನರಿಗೂ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಒದಗಿಸಿತು.
    • ಗುರಿ: ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ರಕ್ಷಣೆ ಒದಗಿಸುವುದು ಇದರ ಪ್ರಮುಖ ಗುರಿಯಾಗಿತ್ತು.

    ಗಾಂಧೀಜಿಯವರ ಪ್ರತಿಕ್ರಿಯೆ:

    • ದಮನಿತ ವರ್ಗಗಳಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಒದಗಿಸುವುದನ್ನು ಗಾಂಧೀಜಿ ವಿರೋಧಿಸಿದರು, ಏಕೆಂದರೆ ಇದು ಹಿಂದೂ ಸಮಾಜವನ್ನು ವಿಭಜಿಸುತ್ತದೆ ಎಂದು ಅವರು ವಾದಿಸಿದರು.
    • ಅವರು ಸೆಪ್ಟೆಂಬರ್ 20, 1932 ರಂದು ಪೂನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
    • ಎಂ.ಸಿ. ರಾಜಾ ಮತ್ತು ಬಿ.ಜಿ. ಹಾರ್ನಿಮನ್ ಕೂಡ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ವಿರೋಧಿಸಿದರು.

    ಅಂಬೇಡ್ಕರ್ ಅವರ ನಿಲುವು:

    • ಡಾ. ಬಿ.ಆರ್. ಅಂಬೇಡ್ಕರ್ ಅವರು ದಮನಿತ ವರ್ಗಗಳಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಪ್ರಬಲವಾಗಿ ಬೆಂಬಲಿಸಿದರು.
    • ದಮನಿತ ವರ್ಗಗಳಿಗೆ ಸ್ವತಂತ್ರ ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಅವರು ಬಲವಾಗಿ ನಂಬಿದ್ದರು.
    • ಆರಂಭದಲ್ಲಿ, ದಮನಿತ ವರ್ಗಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಅವರು ಯಾವುದೇ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು.

    ಪೂನಾ ಒಪ್ಪಂದ:

    • ಗಾಂಧೀಜಿ ಮತ್ತು ಅಂಬೇಡ್ಕರ್ ನಡುವಿನ ಮಾತುಕತೆಗಳ ನಂತರ ಸೆಪ್ಟೆಂಬರ್ 24, 1932 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
    • ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಬದಲಿಗೆ ಜಂಟಿ ಚುನಾವಣಾ ಕ್ಷೇತ್ರಗಳನ್ನು  ಪರಿಚಯಿಸಲಾಯಿತು.
    • ಪ್ರಾಂತೀಯ ಶಾಸನಸಭೆಗಳಲ್ಲಿ ದಮನಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು 71 ರಿಂದ 148 ಕ್ಕೆ ಹೆಚ್ಚಿಸಲಾಯಿತು.
    • ಈ ಒಪ್ಪಂದವು ಕೋಮುವಾರು ತೀರ್ಪಿನ ಮಾರ್ಪಾಡಾಗಿ ಜಾರಿಗೆ ಬಂದಿತು.
    • ಸ್ವಾತಂತ್ರ್ಯದ ನಂತರವೂ ಪರಿಶಿಷ್ಟ ಜಾತಿಗಳಿಗೆ (SCs) ರಾಜಕೀಯ ಮೀಸಲಾತಿ ಮುಂದುವರೆಯಿತು.

    ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆ (ECMS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಯ (ECMS) ಅಡಿಯಲ್ಲಿ ಪ್ರೋತ್ಸಾಹಧನ ನೀಡಲು ಒಟ್ಟು ₹7,877 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ.

    ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಯ (ECMS) ಕುರಿತು:

    • ಪ್ರಾರಂಭ: ಭಾರತ ಸರ್ಕಾರವು ಇದನ್ನು 2025 ರಲ್ಲಿ ಪ್ರಾರಂಭಿಸಿತು.
    • ಉದ್ದೇಶ: ಎಲೆಕ್ಟ್ರಾನಿಕ್ ಘಟಕಗಳಿಗಾಗಿ ಬಲವಾದ ದೇಶೀಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು.
    • ನೋಡಲ್ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
    • ಹಣಕಾಸು ಹಂಚಿಕೆ: 6 ವರ್ಷಗಳ ಅವಧಿಗೆ ಒಟ್ಟು ₹22,919 ಕೋಟಿ ಮೀಸಲಿಡಲಾಗಿದೆ.
    • ಪ್ರಮುಖ ಗಮನ: ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳು (PCBs), ಕ್ಯಾಮೆರಾ ಮಾಡ್ಯೂಲ್‌ಗಳು, ಡಿಸ್‌ಪ್ಲೇ ಮಾಡ್ಯೂಲ್‌ಗಳು, ಕನೆಕ್ಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪ-ಜೋಡಣೆಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ.
    • ಪ್ರಯೋಜನಗಳು: ಇದು ಹೂಡಿಕೆಯನ್ನು ಆಕರ್ಷಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಉತ್ತೇಜಿಸುತ್ತದೆ.
    • ಮಹತ್ವ: ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಈ ಯೋಜನೆಯು ಬೆಂಬಲಿಸುತ್ತದೆ.

    MQ-9B  ಸೀ ಗಾರ್ಡಿಯನ್ ಮಾನವರಹಿತ ವಿಮಾನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ನೌಕಾಪಡೆಗಾಗಿ ಎರಡು MQ-9B ಸಮುದ್ರ ಗಾರ್ಡಿಯನ್ ಹೈ-ಆಲ್ಟಿಟ್ಯೂಡ್ ಲಾಂಗ್-ಎಂಡ್ಯೂರೆನ್ಸ್ (HALE) ರಿಮೋಟ್ ಪೈಲಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್‌ಗಳನ್ನು (RPAS) ಗುತ್ತಿಗೆಗೆ ಪಡೆಯಲು ರಕ್ಷಣಾ ಸಚಿವಾಲಯವು ಅಮೆರಿಕದ ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

    MQ-9B ಸಮುದ್ರ ಗಾರ್ಡಿಯನ್ ಮಾನವರಹಿತ ವಿಮಾನದ ಕುರಿತು:

    • ಪ್ರಕಾರ: ಹೆಚ್ಚು ಎತ್ತರದಲ್ಲಿ, ದೀರ್ಘಕಾಲದವರೆಗೆ ಹಾರಾಟ ನಡೆಸಬಲ್ಲ (HALE) ರಿಮೋಟ್ ನಿಯಂತ್ರಿತ ವಿಮಾನವಾಗಿದೆ.
    • ತಯಾರಕರು: ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್, ಅಮೆರಿಕ (USA).
    • ಪಾತ್ರ: ಕಡಲ ಕಣ್ಗಾವಲು, ಬೇಹುಗಾರಿಕೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆ.
    • ಪ್ರಮುಖ ಲಕ್ಷಣ: ಇದು ಸತತವಾಗಿ 40 ಕ್ಕೂ ಹೆಚ್ಚು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಮತ್ತು ವಿಶಾಲವಾದ ಕಡಲ ಪ್ರದೇಶಗಳನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
    • ಭಾರತದ ಬಳಕೆ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಭದ್ರತೆಯ ಅರಿವು ಮತ್ತು ಕಣ್ಗಾವಲನ್ನು ಬಲಪಡಿಸಲು ಭಾರತೀಯ ನೌಕಾಪಡೆಯು MQ-9B ಸಮುದ್ರ ಗಾರ್ಡಿಯನ್‌ಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
    • ಮಹತ್ವ: ಇದು ಅತಿ ದೂರದಲ್ಲಿರುವ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಅನುಮಾನಾಸ್ಪದ ಕಡಲ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
    • ಸೂಚನೆ: ಇದು ಮಾನವರಹಿತ ವಿಮಾನವಾಗಿದ್ದರೂ, ಸಂಪೂರ್ಣ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಬದಲು ಆಪರೇಟರ್‌ಗಳಿಂದ ದೂರದಿಂದಲೇ ನಿಯಂತ್ರಿಸಲ್ಪಡುತ್ತದೆ.

    ಕರಡು ಶಾಂತಿ (SHANTI) ನಿಯಮಗಳು 2026

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ, ಕೇಂದ್ರ ಸರ್ಕಾರವು ಕರಡು ಶಾಂತಿ (SHANTI) ನಿಯಮಗಳು, 2026 ನ್ನು ಬಿಡುಗಡೆ ಮಾಡಿದೆ.

    ಕರಡು ಶಾಂತಿ (SHANTI) ನಿಯಮಗಳು, 2026 ರ ಕುರಿತು:

    • ಪೂರ್ಣ ರೂಪ : ಭಾರತದ ಪರಿವರ್ತನೆಗಾಗಿ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (Sustainable Harnessing and Advancement of Nuclear Energy for Transforming India – SHANTI).
    • ಉದ್ದೇಶ: ಶಾಂತಿ (SHANTI) ಕಾಯ್ದೆ, 2025 ನ್ನು ಕಾರ್ಯಗತಗೊಳಿಸುವುದು ಮತ್ತು ಭಾರತದ ಪರಮಾಣು ಶಕ್ತಿ ವಲಯವನ್ನು ವಿಸ್ತರಿಸುವುದು.
    • ಖಾಸಗಿ ಭಾಗವಹಿಸುವಿಕೆ: ಪರಮಾಣು ಚಟುವಟಿಕೆಗಳಲ್ಲಿ ಖಾಸಗಿ ವಲಯದ ಹೆಚ್ಚಿನ ಪಾಲ್ಗೊಳ್ಳುವಿಕೆಗಾಗಿ ಇದು ಚೌಕಟ್ಟನ್ನು ಒದಗಿಸುತ್ತದೆ.
    • ಪರವಾನಗಿ: ಪರಮಾಣು ಸ್ಥಾವರದ ಸಂಪೂರ್ಣ ಜೀವಿತಾವಧಿಯನ್ನು ಒಳಗೊಳ್ಳುವಂತಹ ಸಂಯೋಜಿತ ಪರವಾನಗಿಯನ್ನು ಇದು ಒದಗಿಸುತ್ತದೆ.
    • ಸುರಕ್ಷತೆ: ಇದು ಪರಮಾಣು ಸುರಕ್ಷತೆ, ವಿಕಿರಣ ರಕ್ಷಣೆ ಮತ್ತು ತುರ್ತು ಸಿದ್ಧತೆಗಳ ಅವಶ್ಯಕತೆಗಳನ್ನು ಬಲಪಡಿಸುತ್ತದೆ.
    • ಹೊಣೆಗಾರಿಕೆ: ಪರಮಾಣು ಹಾನಿಯ ವಿರುದ್ಧ ಆಪರೇಟರ್‌ಗಳು ವಿಮೆ ಅಥವಾ ಆರ್ಥಿಕ ಭದ್ರತೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
    • ಪರಮಾಣು ಹೊಣೆಗಾರಿಕೆ ನಿಧಿ: ಪರಿಹಾರವನ್ನು ಒದಗಿಸಲು ಆಪರೇಟರ್ ಸುಂಕಗಳ ಮೂಲಕ ಬೆಂಬಲಿತವಾದ ನಿಧಿಯನ್ನು ಪ್ರಸ್ತಾಪಿಸಲಾಗಿದೆ.
    • ತಂತ್ರಜ್ಞಾನ: ಇದು ಭಾರತೀಯ ನಿಯಂತ್ರಣ ಅಗತ್ಯತೆಗಳಿಗೆ ಒಳಪಟ್ಟು, ವಿದೇಶಿ ಪರಮಾಣು ತಂತ್ರಜ್ಞಾನಗಳ ಬಳಕೆಯನ್ನು ಸುಗಮಗೊಳಿಸುತ್ತದೆ.
    • ಗುರಿ: 2047 ರ ವೇಳೆಗೆ 100 GW ಪರಮಾಣು ಸಾಮರ್ಥ್ಯ ಮತ್ತು 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆ ಸಾಧಿಸುವ ಭಾರತದ ಗುರಿಗಳನ್ನು ಇದು ಬೆಂಬಲಿಸುತ್ತದೆ.

  • ಬದಲಿ ಜಾಹೀರಾತುಗಳು | ಸಪ್ತಧಾರಾ (Saptadhara) | ಫ್ರೀಡ್ರೀಚ್ಸ್ ಅಟಾಕ್ಸಿಯಾ (Friedreich’s ataxia – FRDA) | ಹಾರಾ ಮ್ಯಾಂಗ್ರೋವ್ ಕಾಡುಗಳು 

    ಬದಲಿ ಜಾಹೀರಾತುಗಳು

    ರಾಜ್ಯಶಾಸ್ತ್ರ

    ಇದೀಗ ಸುದ್ದಿಯಲ್ಲಿ:

    • ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು (FDA), ‘ವಿಮಲ್ ಏಲಕ್ಕಿ’ಯ ಜಾಹೀರಾತು ‘ವಿಮಲ್ ಪಾನ್ ಮಸಾಲಾ’ದ ಬದಲಿ ಜಾಹೀರಾತಾಗಿದೆ ಎಂದು ಆರೋಪಿಸಿ ಸಂಬಂಧಿಸಿದ ಸಿನಿಮಾ ನಟರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಬದಲಿ ಜಾಹೀರಾತು (Surrogate advertising)

    • ಸರ್ಕಾರಿ ನಿಯಮಾವಳಿಗಳ ಅಡಿಯಲ್ಲಿ ಜಾಹೀರಾತು ನೀಡಲು ನಿಷೇಧಿತ ಅಥವಾ ಸೀಮಿತವಾದ ಉತ್ಪನ್ನಗಳಾದ ಮದ್ಯ, ತಂಬಾಕು ಮತ್ತು ಪಾನ್ ಮಸಾಲಾಗಳನ್ನು ಪ್ರಚಾರ ಮಾಡಲು ಬಳಸುವ ಮಾರುಕಟ್ಟೆಯ ಒಂದು ರೂಪವಾಗಿದೆ.
    • ಮಹಾರಾಷ್ಟ್ರವು 2012ರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSS) ಕಾಯ್ದೆ, 2006ರ ಸೆಕ್ಷನ್ 30(2)(a) ಅಡಿಯಲ್ಲಿ ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ನಿಷೇಧಿಸಿದೆ.

    ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತು: 

    • ಕಾನೂನು ವ್ಯಾಖ್ಯಾನ (ಸೆಕ್ಷನ್ 2(28)): ಉತ್ಪನ್ನಗಳನ್ನು ತಪ್ಪಾಗಿ ವಿವರಿಸುವ, ಮೋಸಗೊಳಿಸುವ ಭರವಸೆಗಳನ್ನು ನೀಡುವ ಅಥವಾ ವಸ್ತುನಿಷ್ಠ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಯಾವುದೇ ಜಾಹೀರಾತು.
    • ಜಾರಿಗೊಳಿಸುವ ಸಂಸ್ಥೆ: ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) ಉಲ್ಲಂಘನೆಗಳನ್ನು ನಿಯಂತ್ರಿಸುತ್ತದೆ ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು 2022ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತದೆ.
    • ಬದಲಿ ಜಾಹೀರಾತು (Surrogate Advertising): ನಿಷೇಧಿತ ವಸ್ತುಗಳು (ಮದ್ಯ/ತಂಬಾಕು) ತಮ್ಮ ಬ್ರ್ಯಾಂಡಿಂಗ್‌ಗಾಗಿ ಅನುಮತಿಸಲಾದ ನೆರಳು ಉತ್ಪನ್ನಗಳನ್ನು (ಸೋಡಾ/ಏಲಕ್ಕಿ) ಬಳಸುವುದನ್ನು ತಡೆಯಲು ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
    • ಕೋಚಿಂಗ್ ಸಂಸ್ಥೆಗಳ ಮೇಲಿನ ಶಿಸ್ತುಕ್ರಮ: ಟಾಪರ್‌ಗಳ ಫೋಟೋಗಳನ್ನು ಬಳಸುವಾಗ ಕೋರ್ಸ್ ವಿವರಗಳನ್ನು ಮರೆಮಾಚುವ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತದೆ (ಉದಾಹರಣೆಗೆ, ಅಣಕು-ಸಂದರ್ಶನಕ್ಕೆ ಹಾಜರಾದ ವಿದ್ಯಾರ್ಥಿಯನ್ನು ಪೂರ್ಣಾವಧಿ ವಿದ್ಯಾರ್ಥಿ ಎಂದು ಬಿಂಬಿಸುವುದು).
    • ಗ್ರೀನ್‌ವಾಷಿಂಗ್ ಮತ್ತು ಲೇಬಲ್‌ಗಳು : ವೈಜ್ಞಾನಿಕ ನಿಖರತೆಯನ್ನು ಖಚಿತಪಡಿಸಿಕೊಳ್ಳಲು “100% ನೈಸರ್ಗಿಕ” ದಂತಹ ಪರಿಶೀಲಿಸದ, ದಾರಿತಪ್ಪಿಸುವ ಪರಿಸರ ಸ್ನೇಹಿ ಅಥವಾ ಆರೋಗ್ಯದ ಹಕ್ಕುಸಾಧನೆಗಳನ್ನು ಇದು ತಡೆಯುತ್ತದೆ.
    • ಆರ್ಥಿಕ ದಂಡಗಳು: ಮೊದಲ ಅಪರಾಧಕ್ಕೆ ₹10 ಲಕ್ಷದವರೆಗೆ ಮತ್ತು ನಂತರದ ಉಲ್ಲಂಘನೆಗಳಿಗೆ ₹50 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
    • ಗುರಿಪಡಿಸಿದ ಹೊಣೆಗಾರಿಕೆ: ತಯಾರಕರು, ಪ್ರಕಾಶಕರು ಮತ್ತು ಸೆಲೆಬ್ರಿಟಿ ಪ್ರಚಾರಕರನ್ನು ದಂಡಿಸಲಾಗುತ್ತದೆ, ಪ್ರಚಾರಕರು 3 ವರ್ಷಗಳವರೆಗೆ ಉತ್ಪನ್ನ ಪ್ರಚಾರದಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ.

    ಸಪ್ತಧಾರಾ (Saptadhara)

    ಅರ್ಥಶಾಸ್ತ್ರ

    ಇದೀಗ ಸುದ್ದಿಯಲ್ಲಿ:

    • 2047ರ ವೇಳೆಗೆ ವಿಕಸಿತ ಭಾರತ ಗುರಿಯನ್ನು ವೇಗವಾಗಿ ತಲುಪಲು ಪ್ರಧಾನ ಮಂತ್ರಿಯವರು ಏಳು ಅಂಶಗಳ ‘ಸಪ್ತಧಾರಾ’ (Saptadhara) ಸುಧಾರಣಾ ಚೌಕಟ್ಟನ್ನು ಪ್ರಾರಂಭಿಸಿದ್ದಾರೆ.

    ಸಪ್ತಧಾರಾ (Saptadhara):

    1. ಉತ್ಪಾದನಾ ಶಕ್ತಿ (Manufacturing Power): ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಜಾಗತಿಕ ಏಕೀಕರಣವನ್ನು ವಿಸ್ತರಿಸುವುದು.
    2. ಕೃಷಿ ಶಕ್ತಿ (Agricultural Power): ಕೃಷಿ ಸಂಸ್ಕರಣೆ, ಸಂಗ್ರಹಣೆ ಮತ್ತು ಆಹಾರ ರಫ್ತುಗಳನ್ನು ಉತ್ತೇಜಿಸುವುದು.
    3. ತಂತ್ರಜ್ಞಾನ ಮತ್ತು ನಾವೀನ್ಯತೆ (Technology & Innovation): ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್‌ಗಳು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯನ್ನು (R&D) ಮುನ್ನಡೆಸುವುದು.
    4. ಸಂಪರ್ಕ (Connectivity): ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುವುದು.
    5. ರಕ್ಷಣಾ ಶಕ್ತಿ (Defence Power): ಹೈಟೆಕ್ ಶಸ್ತ್ರಾಸ್ತ್ರಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು.
    6. ಹಸಿರು ಮತ್ತು ನೀಲಿ ಆರ್ಥಿಕತೆ (Green & Blue Economy): ನವೀಕರಿಸಬಹುದಾದ ಇಂಧನ (renewables) ಮತ್ತು ಸಾಗರ ಸಂಪನ್ಮೂಲಗಳನ್ನು ವಿಸ್ತರಿಸುವುದು.
    7. ಸೌಮ್ಯ/ ಮೃದು ಶಕ್ತಿ (Soft Power): ಜಾಗತಿಕವಾಗಿ ಭಾರತದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಪರಂಪರೆಯನ್ನು ಉತ್ತೇಜಿಸುವುದು.

    ಫ್ರೀಡ್ರೀಚ್ಸ್ ಅಟಾಕ್ಸಿಯಾ (Friedreich’s ataxia – FRDA)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಹಲವು ಭಾರತೀಯ ಸಮುದಾಯಗಳು ರಕ್ತಸಂಬಂಧಿ ವಿವಾಹ ಪದ್ಧತಿಯನ್ನು ಆಚರಿಸುತ್ತವೆ.
    • ಇದು ಬೇರೆ ರೀತಿಯಲ್ಲಿ ಅಪರೂಪವಾಗಿರುವ ಆನುವಂಶಿಕ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ, ಅಂತಹ ಕಾಯಿಲೆಗಳಲ್ಲಿ ‘ಫ್ರೀಡ್ರೀಚ್ಸ್ ಅಟಾಕ್ಸಿಯಾ’ ಕೂಡ ಒಂದಾಗಿದೆ.

    ಫ್ರೀಡ್ರೀಚ್ಸ್ ಅಟಾಕ್ಸಿಯಾ ಅಥವಾ FRDA ಬಗ್ಗೆ:

    • ಇದೊಂದು ಆನುವಂಶಿಕ ಕಾಯಿಲೆಯಾಗಿದ್ದು, ಇದು ನರಗಳು ಮತ್ತು ಹೃದಯವನ್ನು ಹಂತಹಂತವಾಗಿ ಹಾನಿಗೊಳಿಸುತ್ತದೆ.
    • ರೋಗಪೀಡಿತ ವ್ಯಕ್ತಿಗಳು ಸಾಮಾನ್ಯವಾಗಿ 5 ರಿಂದ 15 ವರ್ಷ ವಯಸ್ಸಿನ ನಡುವೆ ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ.

    ರೋಗಲಕ್ಷಣಗಳು:

    • ಅಸ್ಥಿರತೆ ಮತ್ತು ದುರ್ಬಲಗೊಂಡ ಸಮನ್ವಯತೆ.
    • ಮಾತು ನಿಧಾನವಾಗುತ್ತದೆ ಮತ್ತು ತೊದಲುತ್ತದೆ, ನುಂಗಲು ಕಷ್ಟವಾಗುತ್ತದೆ, ಜೊತೆಗೆ ಶ್ರವಣ ಮತ್ತು ದೃಷ್ಟಿ ಕ್ಷೀಣಿಸುತ್ತದೆ.
    • ಆಯಾಸ, ಸ್ಪರ್ಶಜ್ಞಾನ ಕಳೆದುಕೊಳ್ಳುವಿಕೆ ಉಂಟಾಗುತ್ತದೆ; ಅಂತಿಮವಾಗಿ, ಹೆಚ್ಚಿನ ರೋಗಿಗಳು ಹೃದ್ರೋಗದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾಯುತ್ತಾರೆ.
    • ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ.
    • ತಂದೆ ಮತ್ತು ತಾಯಿ ಇಬ್ಬರೂ ದೋಷಯುಕ್ತ ವಂಶವಾಹಿಯನ್ನು ಹೊಂದಿದ್ದಾಗ FRDA ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
    • FXN ವಂಶವಾಹಿಯಲ್ಲಿನ ರೂಪಾಂತರಗಳಿಂದ FRDA ಉಂಟಾಗುತ್ತದೆ.
    • ರಕ್ತಸಂಬಂಧಿ ವಿವಾಹಗಳು (ಸಂಬಂಧಿಕರ ನಡುವಿನ ವಿವಾಹಗಳು) ತಂದೆ ಮತ್ತು ತಾಯಿ ಇಬ್ಬರೂ ಒಂದೇ ರೀತಿಯ ಅಪರೂಪದ ಆನುವಂಶಿಕ ರೂಪಾಂತರವನ್ನು ಹೊಂದುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

    ಹಾರಾ ಮ್ಯಾಂಗ್ರೋವ್ ಕಾಡುಗಳು

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಇರಾನ್‌ನ ದಕ್ಷಿಣ ಕರಾವಳಿಯಲ್ಲಿ ಸಂಭವಿಸಿದ ಬೃಹತ್ ತೈಲ ಸೋರಿಕೆಯು ಹಾರಾ ಮ್ಯಾಂಗ್ರೋವ್ ಕಾಡುಗಳಿಗೆ ಗಂಭೀರ ಪರಿಸರ ಅಪಾಯವಾಗಿ ಪರಿಣಮಿಸಿದೆ.

    ಹಾರಾ ಮ್ಯಾಂಗ್ರೋವ್ ಕಾಡುಗಳ ಬಗ್ಗೆ:

    • ಇದನ್ನು ಖೇಶ್ಮ್-ಹಾರಾ ಮ್ಯಾಂಗ್ರೋವ್ ಕಾಡುಗಳು ಎಂದೂ ಕರೆಯಲಾಗುತ್ತದೆ.
    • ಸ್ಥಳ: ಇದು ದಕ್ಷಿಣ ಇರಾನ್‌ನ ಖೇಶ್ಮ್ ದ್ವೀಪ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಲೂ ನೆಲೆಗೊಂಡಿದೆ.
    • ಇಲ್ಲಿ ಗ್ರೇ ಮ್ಯಾಂಗ್ರೋವ್ (ಅವಿಸೆನ್ನಿಯಾ ಮರಿನಾ) ಮರಗಳು ಪ್ರಬಲವಾಗಿವೆ, ಇದು ಲವಣಯುಕ್ತ ಕರಾವಳಿ ಪರಿಸರಕ್ಕೆ ಹೆಚ್ಚು ಹೊಂದಿಕೊಳ್ಳುವ ಪ್ರಭೇದವಾಗಿದೆ.
    • ಈ ಪ್ರದೇಶವನ್ನು ಯುನೆಸ್ಕೋ ಜೀವಗೋಳ ಮೀಸಲು ಪ್ರದೇಶವೆಂದು ಗುರುತಿಸಲಾಗಿದೆ.

    ಮ್ಯಾಂಗ್ರೋವ್‌ಗಳು:

    • ವ್ಯಾಖ್ಯಾನ: ಮ್ಯಾಂಗ್ರೋವ್ ಎನ್ನುವುದು ಸಮುದ್ರ ಮತ್ತು ಭೂಮಿಯ ನಡುವೆ, ಉಬ್ಬರವಿಳಿತಗಳಿಂದ ಜಲಾವೃತವಾಗುವ ಪ್ರದೇಶಗಳಲ್ಲಿ ಬೆಳೆಯುವ ಮರದ ಸಸ್ಯವಾಗಿದೆ.
    • ಹಾಲೋಫೈಟ್‌ಗಳು: ಮ್ಯಾಂಗ್ರೋವ್‌ಗಳು ಉಪ್ಪು-ಸಹಿಷ್ಣು ಸಸ್ಯಗಳಾಗಿವೆ, ಇವುಗಳನ್ನು ಹಾಲೋಫೈಟ್‌ಗಳು ಎಂದೂ ಕರೆಯುತ್ತಾರೆ.
    • ಹವಾಮಾನ ಪರಿಸ್ಥಿತಿಗಳು: ಇವು 1,000 ದಿಂದ 3,000 mm ಮಳೆ ಬೀಳುವ ಮತ್ತು 26-35°C ತಾಪಮಾನವಿರುವ ಪ್ರದೇಶಗಳಲ್ಲಿ ಬೆಳೆಯುತ್ತವೆ.
    • ಪರಿಸರ ಪರಿವರ್ತನಾ ವಲಯ (Ecotone): ಮ್ಯಾಂಗ್ರೋವ್‌ಗಳು ಭೂಮಿ ಮತ್ತು ಸಮುದ್ರದ ನಡುವೆ ಇರುವುದರಿಂದ, ಅವು ಪರಿಸರ ಪರಿವರ್ತನಾ ವಲಯಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ.

    ಸುಂದರಬನ್ಸ್:

    • ಸ್ಥಳ: ಸುಂದರಬನ್ಸ್ ಕಾಡು ದಕ್ಷಿಣ ಏಷ್ಯಾದಲ್ಲಿ (ಭಾರತ ಮತ್ತು ಬಾಂಗ್ಲಾದೇಶ) ಗಂಗಾ-ಬ್ರಹ್ಮಪುತ್ರ-ಮೇಘನಾ ನದಿಗಳ ಮುಖಜ ಭೂಮಿಯಲ್ಲಿದೆ.
    • ಜಾಗತಿಕ ಪ್ರಾಮುಖ್ಯತೆ: ಇದು ವಿಶ್ವದ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಆಗಿದೆ.
    • ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ರಾಮ್ಸರ್ ತಾಣ ಎಂದು ಗುರುತಿಸಲಾಗಿದೆ.
  • ಉಜ್ಜಯಿನಿಯ ವೈಶ್ಯ ಟೇಕ್ರಿ ಸ್ತೂಪ | 2028-29ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಸ್ಥಾನಕ್ಕಾಗಿ ಭಾರತದ ಪ್ರಚಾರ | ಶ್ರೀ ಅರವಿಂದರು | ರಾಜಸ್ಥಾನ ಮರಗಳ (ರಕ್ಷಣೆ) ಮಸೂದೆ-2026

    ಉಜ್ಜಯಿನಿಯ ವೈಶ್ಯ ಟೇಕ್ರಿ ಸ್ತೂಪ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಮಧ್ಯಪ್ರದೇಶ ಸರ್ಕಾರವು ಉಜ್ಜಯಿನಿಯ ವೈಶ್ಯ ಟೇಕ್ರಿಯಲ್ಲಿ ಹೊಸದಾಗಿ ಉತ್ಖನನ ನಡೆಸಲು ಪರಿಗಣಿಸುತ್ತಿದೆ. ಇಲ್ಲಿ 1938-39ರಲ್ಲಿ ಭಾಗಶಃ ಉತ್ಖನನ ನಡೆಸಲಾಗಿತ್ತು, ಮತ್ತು ಇದು ಸಾಂಚಿ ಸ್ತೂಪಕ್ಕಿಂತ ದೊಡ್ಡದಾದ ಬೃಹತ್ ಬೌದ್ಧ ಸ್ತೂಪವಾಗಿರುವ ಸಾಧ್ಯತೆಯಿದೆ.

    ವೈಶ್ಯ ಟೇಕ್ರಿ ಬಗ್ಗೆ: 

    • ವೈಶ್ಯ ಟೇಕ್ರಿಯು ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇರುವ ಅತಿದೊಡ್ಡ ಪುರಾತತ್ವ ದಿಬ್ಬವಾಗಿದೆ.
    • ಇದು ಪುರಾತನ ಕಾಣಿಪುರ/ಕನಕಗಿರಿ ಬೌದ್ಧ ಕೇಂದ್ರಕ್ಕೆ ಸೇರಿದ ಬೃಹತ್ ಬೌದ್ಧ ಸ್ತೂಪದ ಅವಶೇಷಗಳನ್ನು ಹೊಂದಿದೆ ಎಂದು ನಂಬಲಾಗಿದೆ.
    • ಈ ತಾಣವು ಸಾ.ಶ.ಪೂ. 3ನೇ ಶತಮಾನದ ಮೌರ್ಯರ ಕಾಲಕ್ಕೆ ಸೇರಿದೆ ಎಂದು ತಾತ್ಕಾಲಿಕವಾಗಿ ಅಂದಾಜಿಸಲಾಗಿದೆ. ಸಾಂಪ್ರದಾಯಿಕವಾಗಿ ಈ ಸ್ಮಾರಕವನ್ನು ಸಾಮ್ರಾಟ್ ಅಶೋಕನಿಗೆ ಮತ್ತು ಆತ ಉಜ್ಜಯಿನಿಯಲ್ಲಿ ಆಡಳಿತ ನಡೆಸಿದ ಅವಧಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ.
    • ಈ ಸ್ತೂಪವು ಅಂದಾಜು 350 ಅಡಿ ವ್ಯಾಸ ಮತ್ತು 100 ಅಡಿ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

    ಸಾಂಚಿಯ ಮಹಾ ಸ್ತೂಪದ ಬಗ್ಗೆ: 

    • ಸ್ತೂಪವು ಬೌದ್ಧ ಸ್ಮರಣಾರ್ಥ ಸ್ಮಾರಕವಾಗಿದ್ದು, ಸಾಮಾನ್ಯವಾಗಿ ಬುದ್ಧ ಅಥವಾ ಇತರ ಸಂತರ ಪವಿತ್ರ ಅವಶೇಷಗಳನ್ನು ಹೊಂದಿರುತ್ತದೆ.
    • ಸ್ಥಾಪನೆ: ಈ ಸ್ತೂಪವನ್ನು ಸಾ.ಶ.ಪೂ. 3ನೇ ಶತಮಾನದಲ್ಲಿ ಮೌರ್ಯ ರಾಜವಂಶದ ಸಾಮ್ರಾಟ್ ಅಶೋಕನು ನಿರ್ಮಿಸಿದನು.
    • ನಂತರದ ಶುಂಗ ಮತ್ತು ಶಾತವಾಹನರ ಕಾಲದಲ್ಲಿ ಈ ಸ್ತೂಪವನ್ನು ವಿಸ್ತರಿಸಿ ಮತ್ತು ಸುಂದರಗೊಳಿಸಲಾಯಿತು.
    • ರಚನೆ: ಸಾಂಚಿ ಮಹಾ ಸ್ತೂಪವು ಕಲ್ಲು ಮತ್ತು ಇಟ್ಟಿಗೆಯಿಂದ ನಿರ್ಮಿಸಲಾದ ಅರ್ಧಗೋಳಾಕಾರದ ಗುಮ್ಮಟವಾಗಿದೆ. ಇದರ ಮಧ್ಯಭಾಗದಲ್ಲಿ ಬುದ್ಧನ ಅವಶೇಷಗಳನ್ನು ಒಳಗೊಂಡಿರುವ ದೊಡ್ಡ ಮತ್ತು ಎತ್ತರದ ವೇದಿಕೆ ಇದೆ.
    • ಇದರ ಮೇಲ್ಭಾಗದಲ್ಲಿ ತ್ರಿವಳಿ ಛತ್ರಿ (triple umbrella) ಅಥವಾ ‘ಛತ್ರಾವಳಿ’ಯನ್ನು ಹಿಡಿದಿಟ್ಟುಕೊಳ್ಳುವ ‘ಹರ್ಮಿಕಾ’ ಇದೆ. ಇದು ಬೌದ್ಧಧರ್ಮದ ಮೂರು ರತ್ನಗಳಾದ ಬುದ್ಧ, ಧರ್ಮ ಮತ್ತು ಸಂಘವನ್ನು ಪ್ರತಿನಿಧಿಸುತ್ತದೆ.
    • ಗುಮ್ಮಟದ ಮೇಲ್ಭಾಗದಲ್ಲಿ ‘ಛತ್ರ’ ಎಂಬ ಕಂಬದಂತಹ ರಚನೆಯಿದೆ, ಇದು ಬುದ್ಧನ ಉಪಸ್ಥಿತಿ ಮತ್ತು ಜ್ಞಾನೋದಯದ ಸಂಕೇತವಾಗಿದೆ.
    • ಈ ಸ್ತೂಪವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಪ್ರಪಂಚದಾದ್ಯಂತದ ಬೌದ್ಧರಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ.

    2028-29ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಸ್ಥಾನಕ್ಕಾಗಿ ಭಾರತದ ಪ್ರಚಾರ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • 2028-29ರ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಖಾಯಂ-ಅಲ್ಲದ (non-permanent) ಸ್ಥಾನಕ್ಕಾಗಿ ಭಾರತವು ತನ್ನ ಪ್ರಚಾರವನ್ನು ಪ್ರಾರಂಭಿಸಿದೆ, ಇದರ ಚುನಾವಣೆ ಜೂನ್ 2027ರಲ್ಲಿ ನಡೆಯಲಿದೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಬಗ್ಗೆ: 

    • ಇದು ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ.
    • ಉದ್ದೇಶ: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವುದು.
    • ಎಲ್ಲಾ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾನೂನಿನಡಿ ಪಾಲಿಸಲೇಬೇಕಾದ ಕಾನೂನುಬದ್ಧ ನಿರ್ಣಯಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿರುವ ಏಕೈಕ ವಿಶ್ವಸಂಸ್ಥೆಯ ಸಂಸ್ಥೆ ಇದಾಗಿದೆ.
    • ರಚನೆ ಮತ್ತು ಸಂಯೋಜನೆ: ಮಂಡಳಿಯು 15 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ:
    • ವೀಟೋ ಅಧಿಕಾರವಿರುವ ಖಾಯಂ ಸದಸ್ಯರು (P5): ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್ (UK), ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ (USA).
    • P5 ಸದಸ್ಯರಲ್ಲಿ ಯಾವುದೇ ಒಂದು ರಾಷ್ಟ್ರವು ‘ವೀಟೋ’ ಚಲಾಯಿಸಿದರೂ, ಇತರ ಎಷ್ಟು ಸದಸ್ಯರು ಬೆಂಬಲಿಸಿದರೂ ಆ ನಿರ್ಣಯವನ್ನು ತಡೆಯಲು ಸಾಧ್ಯವಾಗುತ್ತದೆ.
    • ಖಾಯಂ-ಅಲ್ಲದ ಸದಸ್ಯ ರಾಷ್ಟ್ರಗಳು (10 ಸ್ಥಾನಗಳು): ಇವರನ್ನು ಭೌಗೋಳಿಕ ಪ್ರಾತಿನಿಧ್ಯದ ಆಧಾರದ ಮೇಲೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ.
    • ಪ್ರಧಾನ ಕಚೇರಿ: ನ್ಯೂಯಾರ್ಕ್, ಅಮೆರಿಕ (USA).

    ಶ್ರೀ ಅರವಿಂದರು

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಪ್ರಧಾನಿ ಮೋದಿಯವರು ಶ್ರೀ ಅರವಿಂದರವರ (15 ಆಗಸ್ಟ್ 1872 – 5 ಡಿಸೆಂಬರ್ 1950) ಜನ್ಮದಿನದಂದು ಅವರಿಗೆ ನಮನ ಸಲ್ಲಿಸಿದರು.

    ಶ್ರೀ ಅರವಿಂದರ ಬಗ್ಗೆ:

    • ಶ್ರೀ ಅರವಿಂದರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡ್‌ನ ಲಂಡನ್‌ನ ಸೇಂಟ್ ಪಾಲ್ಸ್ ಶಾಲೆ ಮತ್ತು ಕೇಂಬ್ರಿಡ್ಜ್‌ನ ಕಿಂಗ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
    • 1893ರಲ್ಲಿ ಭಾರತಕ್ಕೆ ಮರಳಿದ ಅವರು ಮುಂದಿನ 13 ವರ್ಷಗಳ ಕಾಲ ಬರೋಡಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದರು ಮತ್ತು ಬರೋಡಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು.

    ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಶ್ರೀ ಅರವಿಂದರ ಪಾತ್ರ: 

    • ಶ್ರೀ ಅರವಿಂದರು ಯುವ ಕ್ಲಬ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದರು, ಇದರಲ್ಲಿ 1902ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಯಾದ ಅನುಶೀಲನ್ ಸಮಿತಿ ಸೇರಿದೆ.
    • 1906ರಲ್ಲಿ, ಅರವಿಂದರನ್ನು ಕಲ್ಕತ್ತಾದ ನ್ಯಾಷನಲ್ ಕಾಲೇಜಿನ (ಬೆಂಗಾಲ್ ನ್ಯಾಷನಲ್ ಕಾಲೇಜು) ಮೊದಲ ಪ್ರಾಂಶುಪಾಲರನ್ನಾಗಿ ನೇಮಿಸಲಾಯಿತು ಮತ್ತು ಅವರು ಭಾರತೀಯ ಯುವಕರಿಗೆ ರಾಷ್ಟ್ರೀಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದರು.
    • ತಮ್ಮ ‘ಬಂದೇ ಮಾತರಂ’ ಪತ್ರಿಕೆಯಲ್ಲಿ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯದ ಕಲ್ಪನೆಯನ್ನು ಮುಕ್ತವಾಗಿ ಮಂಡಿಸಿದ ಭಾರತದ ಮೊದಲ ರಾಜಕೀಯ ನಾಯಕರಾಗಿದ್ದಾರೆ.
    • 1907ರ ಕಾಂಗ್ರೆಸ್‌ನ ಸೂರತ್ ಅಧಿವೇಶನದಲ್ಲಿ, ಅವರು ತೀವ್ರಗಾಮಿಗಳೊಂದಿಗೆ ನಾಯಕತ್ವ ವಹಿಸಿದ್ದರು.
    • ಅಲಿಪೋರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು 1908ರಲ್ಲಿ ಬಂಧಿಸಲಾಯಿತು.

     ಯೋಗ ಜೀವನ: 

    • ಶ್ರೀ ಅರವಿಂದರು 1905ರಲ್ಲಿ ಬರೋಡಾದಲ್ಲಿಯೇ ಯೋಗಾಭ್ಯಾಸವನ್ನು ಪ್ರಾರಂಭಿಸಿದ್ದರು.
    • 1910ರಲ್ಲಿ ಅವರು ರಾಜಕೀಯದಿಂದ ನಿವೃತ್ತರಾಗಿ, ತಮ್ಮನ್ನು ಸಂಪೂರ್ಣವಾಗಿ ಆಂತರಿಕ ಆಧ್ಯಾತ್ಮಿಕ ಜೀವನ ಮತ್ತು ಕಾರ್ಯಗಳಿಗೆ ಮುಡಿಪಾಗಿಡಲು ಪಾಂಡಿಚೇರಿಗೆ ತೆರಳಿದರು.
    • ಪಾಂಡಿಚೇರಿಯಲ್ಲಿ ಕಳೆದ ತಮ್ಮ 40 ವರ್ಷಗಳ ಅವಧಿಯಲ್ಲಿ ಅವರು ಆಧ್ಯಾತ್ಮಿಕ ಅಭ್ಯಾಸದ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದರು, ಇದನ್ನು ಅವರು ಪೂರ್ಣ ಯೋಗ ಎಂದು ಕರೆದರು.
    • 1926ರಲ್ಲಿ, ಅವರು ಶ್ರೀ ಅರವಿಂದ ಆಶ್ರಮವನ್ನು ಸ್ಥಾಪಿಸಿದರು.

    ಸಾಹಿತ್ಯಿಕ ಕೃತಿಗಳು: 

    • ದಿ ಲೈಫ್ ಡಿವೈನ್: ಇದು ಪೂರ್ಣ ಯೋಗದ ತಾತ್ವಿಕ ಅಂಶಗಳನ್ನು ವಿವರಿಸುತ್ತದೆ.
    • ಸಿಂಥೆಸಿಸ್ ಆಫ್ ಯೋಗ: ಇದು ಪೂರ್ಣ ಯೋಗದ ತತ್ವಗಳು ಮತ್ತು ವಿಧಾನಗಳ ಬಗ್ಗೆ ವಿವರಿಸುತ್ತದೆ.
    • ಸಾವಿತ್ರಿ (Savitri: A Legend and a Symbol): ಇದೊಂದು ಪ್ರಸಿದ್ಧ ಮಹಾಕಾವ್ಯವಾಗಿದೆ.
    • ಅವರು ಎರಡು ವಾರಪತ್ರಿಕೆಗಳನ್ನು ಪ್ರಾರಂಭಿಸಿದರು: ಇಂಗ್ಲಿಷ್‌ನಲ್ಲಿ ‘ಕರ್ಮಯೋಗಿನ್’ ಮತ್ತು ಬಂಗಾಳಿಯಲ್ಲಿ ‘ಧರ್ಮ’.

    ರಾಜಸ್ಥಾನ ಮರಗಳ (ರಕ್ಷಣೆ) ಮಸೂದೆ-2026

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ರಾಜಸ್ಥಾನ ಸಚಿವ ಸಂಪುಟವು ರಾಜಸ್ಥಾನ ಮರಗಳ (ರಕ್ಷಣೆ) ಮಸೂದೆ-2026 ನ್ನು ಅನುಮೋದಿಸಿದೆ.

    ರಾಜಸ್ಥಾನ ಮರಗಳ (ರಕ್ಷಣೆ) ಮಸೂದೆ, 2026

    • ಉದ್ದೇಶ: ಅರಣ್ಯೇತರ ಅಥವಾ ಖಾಸಗಿ ಭೂಮಿಯಲ್ಲಿ ಮರಗಳನ್ನು ಕಡಿಯುವುದನ್ನು ನಿಯಂತ್ರಿಸುವುದು ಮತ್ತು ಮರಗಳ ಸಂರಕ್ಷಣೆಯನ್ನು ಬಲಪಡಿಸುವುದು.
    • ರಕ್ಷಿತ ಪ್ರಭೇದಗಳು: ಖೇಜ್ರಿ, ಅರಳಿಮರ, ಆಲದ ಮರ , ರೋಹಿದಾ, ಮಹುವಾ ಮತ್ತು ಬೀಡಿ ಎಲೆ/ಟೆಂಡು ಸೇರಿದಂತೆ 29 ಮರಗಳ ಪ್ರಭೇದಗಳನ್ನು ರಕ್ಷಿಸಲಾಗಿದೆ.
    • ಅನುಮತಿ: ಖಾಸಗಿ ಭೂಮಿ ಸೇರಿದಂತೆ ಯಾವುದೇ ಜಾಗದಲ್ಲಿ ರಕ್ಷಿತ ಮರಗಳನ್ನು ಕಡಿಯಲು ಪೂರ್ವ ಅನುಮತಿಯ ಅಗತ್ಯವಿದೆ.
    • ಪರಿಹಾರದ ನೆಡುತೋಪು: ಮರ ಕಡಿಯಲು ಅನುಮತಿ ನೀಡುವಾಗ, ಅದೇ ಪ್ರದೇಶದಲ್ಲಿ ನಿಗದಿತ ಮರಗಳನ್ನು ನೆಡುವ ಷರತ್ತನ್ನು ವಿಧಿಸಬಹುದು.
    • ದಂಡ: ಉಲ್ಲಂಘನೆಗಾಗಿ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ₹1 ಲಕ್ಷ ದಂಡವನ್ನು ವಿಧಿಸಲಾಗುತ್ತದೆ.
    • ಮಹತ್ವ: ಇದು ಜೀವವೈವಿಧ್ಯತೆಯನ್ನು ರಕ್ಷಿಸುತ್ತದೆ, ಮರುಭೂಮೀಕರಣವನ್ನು ತಡೆಯುತ್ತದೆ ಮತ್ತು ರಾಜಸ್ಥಾನದ ಪರಿಸರ ವಿಜ್ಞಾನದ ದೃಷ್ಟಿಯಿಂದ ಪ್ರಮುಖವಾದ ಮರಗಳನ್ನು ಸಂರಕ್ಷಿಸುತ್ತದೆ.
  • ಚಂದ್ರನ ನೆಲೆಯ ಕಾರ್ಯಕ್ರಮ (Moon Base Programme) | ಸಂಪೂರ್ಣ ಸೂರ್ಯಗ್ರಹಣ (Total Solar Eclipse) | ಕಪ್ಪು-ಕತ್ತಿನ ಕೊಕ್ಕರೆಗಳು (Black-necked Cranes – BNC)

    ಚಂದ್ರನ ನೆಲೆಯ ಕಾರ್ಯಕ್ರಮ (Moon Base Programme)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಆರ್ಟೆಮಿಸ್ ಒಪ್ಪಂದದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತನ್ನ ‘ಚಂದ್ರನ ನೆಲೆಯ ಕಾರ್ಯಕ್ರಮ’ಕ್ಕೆ ಸೇರಲು ಇಸ್ರೋಗೆ (ISRO) ಅಧಿಕೃತ ಆಹ್ವಾನ ನೀಡಿದೆ.

    ಚಂದ್ರನ ನೆಲೆ (Moon Base):

    • ಇದು ಮಾನವಕುಲದ ಮೊಟ್ಟಮೊದಲ ಚಂದ್ರನ ನೆಲೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಬಳಿ ಗಗನಯಾತ್ರಿಗಳು ವಾಸಿಸಲು, ಕಾರ್ಯನಿರ್ವಹಿಸಲು ಮತ್ತು ಸಂಶೋಧನೆ ನಡೆಸಲು ನಿರ್ಮಿಸಲಾಗುತ್ತಿರುವ ಸ್ಥಳವಾಗಿದೆ.
    • ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡುತ್ತಾ, ಚಂದ್ರನ ಮೇಲ್ಮೈಯಲ್ಲಿ ಮಾನವನ ನಿರಂತರ ಅಸ್ತಿತ್ವವನ್ನು ಬೆಂಬಲಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ನಾಸಾ ಮತ್ತು ಅದರ ಪಾಲುದಾರ ಸಂಸ್ಥೆಗಳು ನಿರ್ಮಿಸಲಿವೆ.

    ಆರ್ಟೆಮಿಸ್ ಒಪ್ಪಂದದ ಬಗ್ಗೆ:

    • ಉದ್ದೇಶ: ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ರೂಪಿಸಲಾದ ತತ್ವಗಳು ಮತ್ತು ಮಾರ್ಗಸೂಚಿಗಳ ಗುಂಪನ್ನು ಇದು ಪ್ರತಿನಿಧಿಸುತ್ತದೆ.
    • ಸ್ಥಾನಮಾನ: ಈ ಒಪ್ಪಂದವು ಕಾನೂನುಬದ್ಧವಾಗಿ ಬದ್ದವಾಗಿಲ್ಲ (not legally binding).
    • ಪ್ರಾರಂಭ: 2020ರ ದಶಕದ ಮಧ್ಯಭಾಗದಲ್ಲಿ ಮಾನವರನ್ನು ಮರಳಿ ಚಂದ್ರನತ್ತ ಕಳುಹಿಸುವ ಉದ್ದೇಶ ಹೊಂದಿರುವ ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಹೆಸರಿನಲ್ಲಿ, 2020ರಲ್ಲಿ ನಾಸಾ ಈ ಒಪ್ಪಂದವನ್ನು ಘೋಷಿಸಿತು.
    • ಸದಸ್ಯ ರಾಷ್ಟ್ರಗಳು : ಆರ್ಟೆಮಿಸ್ ಒಪ್ಪಂದವು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ಸೇರಿದಂತೆ 39 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಭಾರತದ ಸದಸ್ಯತ್ವ: ಭಾರತವು 2023ರಲ್ಲಿ ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿತು.
    • ಗಮನಿಸಿ: ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಈ ಆರ್ಟೆಮಿಸ್ ಒಪ್ಪಂದದ ಭಾಗವಾಗಿಲ್ಲ.

    ಸಂಪೂರ್ಣ ಸೂರ್ಯಗ್ರಹಣ (Total Solar Eclipse)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ಇತ್ತೀಚೆಗೆ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣವು ಖಗೋಳ ಗತಿಶಾಸ್ತ್ರ, ಭೂಮಿ-ಚಂದ್ರನ ವ್ಯವಸ್ಥೆ ಮತ್ತು ಸೌರ ವಿದ್ಯಮಾನಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಒಂದು ಪ್ರಮುಖ ಅವಕಾಶವನ್ನು ಒದಗಿಸಿತು.

    ಸೂರ್ಯಗ್ರಹಣ ಎಂದರೇನು?

    • ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದರಿಂದ ಭೂಮಿಯ ಕೆಲವು ಭಾಗಗಳಿಗೆ ಸೂರ್ಯನ ಬೆಳಕು ತಲುಪದಂತೆ ತಡೆಯಲ್ಪಡುವ ಪ್ರಕ್ರಿಯೆಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

    ಸೂರ್ಯಗ್ರಹಣದ ಪ್ರಕಾರಗಳು: 

    • ಸೂರ್ಯಗ್ರಹಣಗಳನ್ನು ಮುಖ್ಯವಾಗಿ ಮೂರು ಪ್ರಕಾರಗಳಾಗಿ ವಿಂಗಡಿಸಲಾಗಿದೆ:
    • ಸಂಪೂರ್ಣ ಸೂರ್ಯಗ್ರಹಣ (Umbra – ಛಾಯೆ): ಚಂದ್ರನು ಸೂರ್ಯನ ಗೋಚರ ಭಾಗವನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತಾನೆ, ಇದರಿಂದಾಗಿ ಗ್ರಹಣದ ಪಥದಲ್ಲಿರುವ ಪ್ರದೇಶಗಳಲ್ಲಿ ಹಗಲಿನಲ್ಲಿಯೇ ಸ್ವಲ್ಪ ಸಮಯದವರೆಗೆ ಸಂಪೂರ್ಣ ಕತ್ತಲು ಆವರಿಸಿದ ಅನುಭವವಾಗುತ್ತದೆ.
    • ಪಾರ್ಶ್ವ ಸೂರ್ಯಗ್ರಹಣ (Penumbra – ಉಪಛಾಯೆ): ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ, ಇದು ಸೂರ್ಯನ ತಟ್ಟೆಯ ಒಂದು ಭಾಗವನ್ನು ಕಚ್ಚಿದಂತೆ ಕಾಣುವಂತೆ ಮಾಡುತ್ತದೆ.
    • ಕಂಕಣ ಸೂರ್ಯಗ್ರಹಣ (Antumbra – ಪ್ರಛಾಯೆ): ಚಂದ್ರನು ಭೂಮಿಯಿಂದ ಅತ್ಯಂತ ದೂರದ ಕಕ್ಷೆಯನ್ನು ಸಮೀಪಿಸುತ್ತಿರುವಾಗ, ಅದರ ಗೋಚರ ಗಾತ್ರವು ಸೂರ್ಯನಿಗಿಂತ ಚಿಕ್ಕದಾಗಿರುತ್ತದೆ. ಇದರಿಂದಾಗಿ ಸೂರ್ಯನ ಹೊರಭಾಗವು ಪ್ರಕಾಶಮಾನವಾದ ಉಂಗುರದಂತೆ ಗೋಚರಿಸುತ್ತದೆ, ಇದನ್ನು ಸಾಮಾನ್ಯವಾಗಿ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ.

    ಕಪ್ಪು-ಕತ್ತಿನ ಕೊಕ್ಕರೆಗಳು (Black-necked Cranes – BNC)

    ಪರಿಸರ

    ಇದೀಗ ಸುದ್ದಿಯಲ್ಲಿ

    • ಲಡಾಖ್‌ನಲ್ಲಿ ಕಪ್ಪು-ಕತ್ತಿನ ಕೊಕ್ಕರೆಗಳು (BNC) ಮತ್ತು ಇತರ ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯು (BNHS) 2,950ಕ್ಕೂ ಹೆಚ್ಚು ಮುಕ್ತವಾಗಿ ತಿರುಗಾಡುವ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದೆ.

    ಕಪ್ಪು-ಕತ್ತಿನ ಕೊಕ್ಕರೆ (Grus nigricollis):

    • ಪ್ರಪಂಚದಾದ್ಯಂತ ಕಂಡುಬರುವ 15 ಕೊಕ್ಕರೆ ಪ್ರಭೇದಗಳಲ್ಲಿ ಇದು ಕೂಡ ಒಂದಾಗಿದೆ.
    • ಇದು ಎತ್ತರದ ಪ್ರದೇಶ ಅಥವಾ ಆಲ್ಪೈನ್ ಪ್ರದೇಶದಲ್ಲಿ ಮಾತ್ರ ಕಂಡುಬರುವ ಏಕೈಕ ಕೊಕ್ಕರೆ ಪ್ರಭೇದವೆಂದು ಪರಿಗಣಿಸಲಾಗಿದೆ.
    • ಆವಾಸಸ್ಥಾನ ಮತ್ತು ಹಂಚಿಕೆ: ಭಾರತದಲ್ಲಿ, ಈ ಕೊಕ್ಕರೆಗಳು ಪ್ರಮುಖವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಎತ್ತರದ ಜೌಗು ಪ್ರದೇಶಗಳು ಮತ್ತು ಕೆಸರು ಭೂಮಿಯಲ್ಲಿ ಕಂಡುಬರುತ್ತವೆ.
    • ಇವುಗಳ ಭೌಗೋಳಿಕ ವ್ಯಾಪ್ತಿಯು ಟಿಬೆಟ್ ಪ್ರಸ್ಥಭೂಮಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಹಿಮಾಲಯ ಪ್ರದೇಶಗಳಾದ ಚೀನಾ, ಭಾರತ, ಭೂತಾನ್ ಮತ್ತು ನೇಪಾಳದಾದ್ಯಂತ ವಿಸ್ತರಿಸಿದೆ.
    • ಜನಸಂಖ್ಯೆ: ವಿಶ್ವಾದ್ಯಂತ ಸುಮಾರು 15,000 ಕಪ್ಪು-ಕತ್ತಿನ ಕೊಕ್ಕರೆಗಳಿದ್ದು, ಈ ಪೈಕಿ ಭಾರತದಲ್ಲಿ ಕೇವಲ 100ಕ್ಕೂ ಕಡಿಮೆ ಕೊಕ್ಕರೆಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ.
    • ಪ್ರಮುಖ ಬೆದರಿಕೆಗಳು: ಮುಕ್ತವಾಗಿ ತಿರುಗಾಡುವ ನಾಯಿಗಳ ದಾಳಿ, ಬದಲಾಗುತ್ತಿರುವ ಕೃಷಿ ಪದ್ಧತಿಗಳು ಮತ್ತು ಎತ್ತರದ ಜೌಗು ಪ್ರದೇಶಗಳ ಸುತ್ತಮುತ್ತ ನಡೆಯುತ್ತಿರುವ ಅನಿಯಂತ್ರಿತ ನಗರೀಕರಣವು ಇವುಗಳ ಅಸ್ತಿತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ.

    ಸಂರಕ್ಷಣಾ ಸ್ಥಾನಮಾನ:

    • ಈ ಪ್ರಭೇದವು ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಶೆಡ್ಯೂಲ್-1 ರ ಅಡಿಯಲ್ಲಿ ಅತ್ಯುನ್ನತ ಕಾನೂನು ರಕ್ಷಣೆಯನ್ನು ಪಡೆದಿದೆ.
    • IUCN ಕೆಂಪು ಪಟ್ಟಿ: ಅಪಾಯದ ಅಂಚಿನಲ್ಲಿರುವ (NT) ಪ್ರಭೇದ.
    • ಇದು ಸೈಟ್ಸ್ (CITES) ಮತ್ತು ವಲಸೆ ಪ್ರಭೇದಗಳ ಸಂರಕ್ಷಣಾ ಸಮಾವೇಶದ (CMS) ಅಡಿಯಲ್ಲಿಯೂ ರಕ್ಷಣೆಯನ್ನು ಹೊಂದಿದೆ.
    • ರಾಜ್ಯ ಪಕ್ಷಿ: ಇದು ಲಡಾಖ್‌ನ ರಾಜ್ಯ ಪಕ್ಷಿಯಾಗಿದ್ದು, ಲಡಾಖ್‌ನ ಬೌದ್ಧ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ.

    ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಬಗ್ಗೆ: 

    • BNHS ಪ್ರಕೃತಿ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂಶೋಧನೆಗೆ ಮೀಸಲಾಗಿರುವ ಭಾರತದ ಅತಿದೊಡ್ಡ ಹಾಗೂ ಹಳೆಯ ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಒಂದಾಗಿದೆ.
    • ಸೆಪ್ಟೆಂಬರ್ 15, 1883ರಂದು ಮುಂಬೈನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ.

  • ಕಂಟೇನರ್ ಉತ್ಪಾದನಾ ನೆರವು ಯೋಜನೆ (CMAS) | ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) | ಪಿಎಂ-ಪೋಷಣ್ (PM-POSHAN)

    ಕಂಟೇನರ್ ಉತ್ಪಾದನಾ ನೆರವು ಯೋಜನೆ (CMAS)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಕೇಂದ್ರ ಸರ್ಕಾರವು ₹10,000 ಕೋಟಿ ಮೊತ್ತದ ಕಂಟೇನರ್ ಉತ್ಪಾದನಾ ನೆರವು ಯೋಜನೆಯನ್ನು (CMAS) ಪ್ರಸ್ತಾಪಿಸಿದೆ.

    ಯೋಜನೆಯ ಬಗ್ಗೆ

    • ಪ್ರಾರಂಭ: ಈ ಯೋಜನೆಯನ್ನು 2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.
    • ನೋಡಲ್ ಸಚಿವಾಲಯ: ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯ.
    • ಆರ್ಥಿಕ ಅನುದಾನ: ಈ ಯೋಜನೆಯು ಮುಂದಿನ 5 ವರ್ಷಗಳ ಅವಧಿಗೆ ಒಟ್ಟು ₹10,000 ಕೋಟಿ ಆರ್ಥಿಕ ನೆರವನ್ನು ಹೊಂದಿದೆ.
    • ಪ್ರಾಥಮಿಕ ಉದ್ದೇಶ: ಸ್ವಾವಲಂಬಿ ದೇಶೀಯ ಹಡಗು ಕಂಟೇನರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಪ್ರಮುಖ ಗುರಿಗಳು: 

    • ಉತ್ಪಾದನೆ: ವಾರ್ಷಿಕವಾಗಿ 7.5 ಲಕ್ಷ TEU (ಟ್ವೆಂಟಿ-ಫೂಟ್ ಈಕ್ವಿವೆಲೆಂಟ್ ಯುನಿಟ್) ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
    • ಆರ್ಥಿಕ ಮೌಲ್ಯ: ಈ ಯೋಜನೆಯು ಒಟ್ಟು ₹80,000 ಕೋಟಿ ಮೌಲ್ಯದ ಮಾರುಕಟ್ಟೆ ಅವಕಾಶವನ್ನು ತೆರೆಯುತ್ತದೆ.
    • ಉದ್ಯೋಗಾವಕಾಶ: ಇದು 3,000 ನೇರ ಹಾಗೂ 50,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ.
    • ವ್ಯಾಪ್ತಿ: ಈ ಯೋಜನೆಯು ಗ್ರೀನ್‌ಫೀಲ್ಡ್ (ಹೊಸ) ಮತ್ತು ಬ್ರೌನ್‌ಫೀಲ್ಡ್ (ಹಾಲಿ ಇರುವ) ಎರಡೂ ಉತ್ಪಾದನಾ ಘಟಕಗಳನ್ನು ಬೆಂಬಲಿಸುತ್ತದೆ.

    ಯೋಜನೆಯ ಮಹತ್ವ: 

    • ಆಮದು ಬದಲಿ: ವಾರ್ಷಿಕವಾಗಿ ಆಮದು ಮಾಡಿಕೊಳ್ಳಲಾಗುವ 2 ಮಿಲಿಯನ್ ಕಂಟೇನರ್‌ಗಳ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ.
    • ಪೂರೈಕೆ ಸರಪಳಿಯ ಸ್ಥಿರತೆ: ಜಾಗತಿಕ ಲಾಜಿಸ್ಟಿಕ್ಸ್ ಅಡೆತಡೆಗಳಿಂದ ಭಾರತೀಯ ರಫ್ತುಗಳನ್ನು ರಕ್ಷಿಸುವ ಮೂಲಕ ಪೂರೈಕೆ ಸರಪಳಿಯ ದೃಢತೆಯನ್ನು ಕಾಪಾಡುತ್ತದೆ.
    • ನೀತಿಗಳ ಹೊಂದಾಣಿಕೆ: ಈ ಯೋಜನೆಯು ಮ್ಯಾರಿಟೈಮ್ ಅಮೃತ ಕಾಲ ಮುನ್ನೋಟ 2047, ಪಿಎಂ ಗತಿ ಶಕ್ತಿ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳೊಂದಿಗೆ ಸಮನ್ವಯ ಸಾಧಿಸುತ್ತದೆ.

    ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಗ್ರಾಮೀಣಾಭಿವೃದ್ಧಿಯ ಸ್ಥಾಯಿ ಸಮಿತಿಯು ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ (DDU-GKY) ಅಡಿಯಲ್ಲಿ ನೀಡಲಾಗುತ್ತಿರುವ ಕೌಶಲ್ಯ ತರಬೇತಿ ಮತ್ತು ನೈಜ ಉದ್ಯೋಗ ಸೃಷ್ಟಿಯ ನಡುವಿನ ಅಂತರವನ್ನು ಎತ್ತಿತೋರಿಸಿದೆ.

    ಯೋಜನೆಯ ಬಗ್ಗೆ: 

    • ಅನುಷ್ಠಾನ: ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD).
    • ಪ್ರಾರಂಭ: 2014.
    • ಇದು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (DAY-NRLM) ಅಡಿಯಲ್ಲಿ ಜಾರಿಗೊಳಿಸಲಾದ ಉದ್ಯೋಗ-ಆಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವಾಗಿದೆ.
    • ವಯೋಮಿತಿ: ಈ ಯೋಜನೆಯು 15 ರಿಂದ 35 ವರ್ಷ ವಯಸ್ಸಿನ ಗ್ರಾಮೀಣ ಯುವಕರನ್ನು ಗುರಿಯಾಗಿಸಿಕೊಂಡಿದೆ (ಮಹಿಳೆಯರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ವಿಕಲಚೇತನರು ಮತ್ತು ಅಲ್ಪಸಂಖ್ಯಾತರಿಗೆ ವಯೋಮಿತಿಯನ್ನು 45 ವರ್ಷಗಳವರೆಗೆ ವಿಸ್ತರಿಸಲಾಗಿದೆ).
    • ಉದ್ದೇಶ: ಉದ್ಯೋಗ-ಆಧಾರಿತ ಕೌಶಲ್ಯ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಯುವಕರಿಗೆ ತರಬೇತಿ ನೀಡಿ, ಅವರಿಗಾಗಿ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ.

    ಪಿಎಂ-ಪೋಷಣ್ (PM-POSHAN)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಪಿಎಂ-ಪೋಷಣ್ ಯೋಜನೆಯಡಿ ದೆಹಲಿ ಸರ್ಕಾರಿ ಶಾಲೆಗಳ ಹೊಸ ಮಧ್ಯಾಹ್ನದ ಊಟದ ಪಟ್ಟಿಯಲ್ಲಿ ಇಡ್ಲಿ-ಸಾಂಬಾರ್‌ನಂತಹ ಹೊಸ ಖಾದ್ಯಗಳನ್ನು ಸೇರ್ಪಡೆಗೊಳಿಸಲಾಗಿದೆ.

    ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (PM POSHAN) ಬಗ್ಗೆ: 

    • ಈ ಮೊದಲು ಮಧ್ಯಾಹ್ನದ ಬಿಸಿಯೂಟ ಯೋಜನೆ (MDMS) ಎಂದು ಕರೆಯಲ್ಪಡುತ್ತಿದ್ದ ಈ ಕಾರ್ಯಕ್ರಮವನ್ನು 2021ರಲ್ಲಿ ಪಿಎಂ-ಪೋಷಣ್ ಎಂದು ಮರುನಾಮಕರಣ ಮಾಡಲಾಯಿತು.
    • ಇದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021-22 ರಿಂದ 2025-26ರ ಅವಧಿಗೆ ಅನುಮೋದನೆ ಪಡೆದಿದೆ.
    • ಇದು ಒಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು (ಕೇಂದ್ರ ಮತ್ತು ರಾಜ್ಯಗಳೆರಡೂ ಜಂಟಿಯಾಗಿ ಅನುದಾನ ಒದಗಿಸುತ್ತವೆ), ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬಿಸಿ ಊಟವನ್ನು ಒದಗಿಸುತ್ತದೆ.
    • ವಿದ್ಯಾರ್ಥಿಗಳ ಹಸಿವಿನ ಸಮಸ್ಯೆಯನ್ನು ನೀಗಿಸುವುದರ ಜೊತೆಗೆ ಶೈಕ್ಷಣಿಕ ಫಲಿತಾಂಶಗಳನ್ನು (ಹಾಜರಾತಿ, ಶಾಲೆಯಲ್ಲಿ ಉಳಿಯುವಿಕೆ ಮತ್ತು ಕಲಿಕೆ) ಏಕಕಾಲದಲ್ಲಿ ಸುಧಾರಿಸುವ ಮಹತ್ವಾಕಾಂಕ್ಷೆಯನ್ನು ಇದು ಹೊಂದಿದೆ.
  • ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM) ಗೆ  10 ವರ್ಷಗಳು | ರಾಷ್ಟ್ರೀಯ ಯುವ ಸಂಸತ್ ಯೋಜನೆ ವೆಬ್ ಪೋರ್ಟಲ್ | ಮಹಾನದಿ ನದಿ ನೀರು ವಿವಾದ | ಚಂದ್ರಯಾನ-5 | ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ | ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ‘ನಶಾ ಮುಕ್ತ ಯುವ’ | ಪರಿಷ್ಕೃತ ಖೇಲೋ ಇಂಡಿಯಾ ಯೋಜನೆ

    ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM) ಗೆ  10 ವರ್ಷಗಳು

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ: 

    • ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM) 9 ಆಗಸ್ಟ್ 2026 ಕ್ಕೆ ತನ್ನ ಮಿಷನ್ ನ ಹತ್ತು ವರ್ಷಗಳನ್ನು ಪೂರೈಸಿದೆ.

    ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM)

    • ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ 2016 ರಲ್ಲಿ ಪ್ರಾರಂಭಿಸಲಾದ ಭಾರತದ ಆನ್‌ಲೈನ್ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್ ಆಗಿದೆ.
    • ಇದು 100% ಲಾಭರಹಿತ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ.

    ಮೂಲ ಸ್ತಂಭಗಳು: 

    • ಒಳಗೊಳ್ಳುವಿಕೆ (Inclusivity): ಇದು MSME ಗಳು, ನವೋದ್ಯಮಗಳು ಮತ್ತು ಮಹಿಳಾ ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ.
    • ದಕ್ಷತೆ : ಕಾಗದರಹಿತ ಮತ್ತು ನಗದುರಹಿತ ಪ್ರಕ್ರಿಯೆಗಳ ಮೂಲಕ ಇದು ಸಮಯವನ್ನು ಉಳಿತಾಯ ಮಾಡುತ್ತದೆ.
    • ಪಾರದರ್ಶಕತೆ : ಭ್ರಷ್ಟಾಚಾರವನ್ನು ತೊಡೆದುಹಾಕಲು ಮುಕ್ತ ಎಲೆಕ್ಟ್ರಾನಿಕ್ ಬಿಡ್ಡಿಂಗ್ ವ್ಯವಸ್ಥೆಯನ್ನು ಬಳಸುತ್ತದೆ.

    ಪ್ರಮುಖ ಲಕ್ಷಣಗಳು

    • ಹೊಂದಿಕೊಳ್ಳುವ ಖರೀದಿ: ಇದು ನೇರ ಖರೀದಿ, ಇ-ಬಿಡ್ಡಿಂಗ್ ಮತ್ತು ರಿವರ್ಸ್ ಹರಾಜು ಪ್ರಕ್ರಿಯೆಗಳನ್ನು ಬೆಂಬಲಿಸುತ್ತದೆ.
    • ತಡೆರಹಿತ ಏಕೀಕರಣ: ಇದು ಆಧಾರ್, PAN, GSTIN ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ಮೂಲಕ ಪರಿಶೀಲನೆಯನ್ನು ಒಳಗೊಂಡಿದೆ.

    ಪ್ರಮುಖ ಉಪ-ಉಪಕ್ರಮಗಳು

    • SWAYATT: ಇದು ನವೋದ್ಯಮಗಳು , ಮಹಿಳೆಯರು ಮತ್ತು ಯುವಜನರ ನೇತೃತ್ವದ ವ್ಯವಹಾರಗಳನ್ನು ಉತ್ತೇಜಿಸುತ್ತದೆ.
    • ವುಮೇನಿಯಾ (Womaniya): ಇದು ಮಹಿಳಾ ಸ್ವ-ಸಹಾಯ ಸಂಘಗಳು (SHGs) ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತದೆ.
    • ಸ್ಟಾರ್ಟ್‌ಅಪ್ ರನ್‌ವೇ (Startup Runway): ಇದು ರಾಜ್ಯ ಸರ್ಕಾರಿ ಖರೀದಿದಾರರಿಗೆ ಉತ್ಪನ್ನಗಳನ್ನು ಪರಿಚಯಿಸಲು ತಂತ್ರಜ್ಞಾನ ನವೋದ್ಯಮಗಳಿಗೆ ಸಹಾಯ ಮಾಡುತ್ತದೆ.
    • SARAS ಸಂಗ್ರಹಣೆ : ಇದು ಗ್ರಾಮೀಣ ಕುಶಲಕರ್ಮಿಗಳು ಉತ್ಪಾದಿಸುವ ದಿನಬಳಕೆಯ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತದೆ.

    ರಾಷ್ಟ್ರೀಯ ಯುವ ಸಂಸತ್ ಯೋಜನೆ ವೆಬ್ ಪೋರ್ಟಲ್

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ: 

    • ಸಂಸದೀಯ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಯುವ ಸಂಸತ್ ಯೋಜನೆಯ ವೆಬ್ ಪೋರ್ಟಲ್‌ನ ನವೀಕರಿಸಿದ ಆವೃತ್ತಿಯನ್ನು ಪ್ರಾರಂಭಿಸಿದೆ, ಇದನ್ನು NYPS 2.0 ಎಂದು ಕರೆಯಲಾಗುತ್ತದೆ.

    ರಾಷ್ಟ್ರೀಯ ಯುವ ಸಂಸತ್ ಯೋಜನೆ (NYPS)ಯ ಬಗ್ಗೆ:

    • ಇದು ಸಂಸದೀಯ ವ್ಯವಹಾರಗಳ ಸಚಿವಾಲಯದ ಒಂದು ಉಪಕ್ರಮವಾಗಿದೆ.
    • ಉದ್ದೇಶ: ಯುವಜನರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು, ಸಂಸದೀಯ ಆಚರಣೆಗಳು ಮತ್ತು ಸಾಂವಿಧಾನಿಕ ಅರಿವನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ.
    • ವಿಶಿಷ್ಟತೆ: ಕೇವಲ ಮಾನ್ಯತೆ ಪಡೆದ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಹಿಂದಿನ ಆವೃತ್ತಿಗಿಂತ ಭಿನ್ನವಾಗಿ, NYPS 2.0 ದೇಶಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳು, ಗುಂಪುಗಳು ಮತ್ತು ನಾಗರಿಕರಿಗೆ ಮುಕ್ತವಾಗಿದೆ.

    ವೆಬ್ ಪೋರ್ಟಲ್ ನ ಬಗ್ಗೆ: 

    • ಸಂಸದೀಯ ವ್ಯವಹಾರಗಳ ಸಚಿವಾಲಯವು 2019 ರಲ್ಲಿ NYPS ನ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿತು.
    • ಗುರಿ: ಸಚಿವಾಲಯದ ಯುವ ಸಂಸತ್ ಕಾರ್ಯಕ್ರಮದ ವ್ಯಾಪ್ತಿಯನ್ನು ದೇಶದ ಎಲ್ಲಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವುದಾಗಿದೆ.

    ಮಹಾನದಿ ನದಿ ನೀರು ವಿವಾದ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ: 

    • ಒಡಿಶಾ ಮತ್ತು ಛತ್ತೀಸ್‌ಗಢದ ನಡುವಿನ ದೀರ್ಘಕಾಲದ ಮಹಾನದಿ ನದಿ ನೀರು ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

    ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟು

    ಅಂತರ್-ರಾಜ್ಯ ನದಿ ನೀರು

    • ವಿಧಿ 262: ಅಂತರ್-ರಾಜ್ಯ ನದಿ ನೀರಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಸಂಸತ್ತಿಗೆ ಇದು ಅಧಿಕಾರ ನೀಡುತ್ತದೆ.
    • ಅಂತರ್-ರಾಜ್ಯ ನದಿ ನೀರು ವಿವಾದ ಕಾಯ್ದೆ, 1956: ಇದು ನೀರಿನ ವಿವಾದಗಳ ನ್ಯಾಯಮಂಡಳಿಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ.
    • ನದಿ ಮಂಡಳಿಗಳ ಕಾಯ್ದೆ, 1956: ಇದು ನದಿ ಜಲಾನಯನ ಯೋಜನೆಯನ್ನು ರೂಪಿಸಲು ಅವಕಾಶ ನೀಡುತ್ತದೆ (ಆದರೂ ಈ ಕಾಯಿದೆಯಡಿ ಯಾವುದೇ ನದಿ ಮಂಡಳಿಯನ್ನು ಸ್ಥಾಪಿಸಲಾಗಿಲ್ಲ).
    • ನಮೂದು 17 (ರಾಜ್ಯ ಪಟ್ಟಿ): ನೀರು ಪ್ರಾಥಮಿಕವಾಗಿ ರಾಜ್ಯ ವಿಷಯವಾಗಿದೆ.
    • ನಮೂದು 56 (ಕೇಂದ್ರ ಪಟ್ಟಿ): ಸಾರ್ವಜನಿಕ ಹಿತದೃಷ್ಟಿಯಿಂದ ಸಂಸತ್ತು ಅಂತರ್-ರಾಜ್ಯ ನದಿಗಳನ್ನು ನಿಯಂತ್ರಿಸಬಹುದು ಮತ್ತು ಅಭಿವೃದ್ಧಿಪಡಿಸಬಹುದು.

    ಇತರ ಅಂತರ್-ರಾಜ್ಯ ನದಿ ನೀರು ವಿವಾದಗಳು

    • ಕಾವೇರಿ: ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ.
    • ಕೃಷ್ಣಾ: ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ.
    • ಗೋದಾವರಿ: ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ, ಒಡಿಶಾ.
    • ರಾವಿ-ಬಿಯಾಸ್: ಪಂಜಾಬ್, ಹರಿಯಾಣ, ರಾಜಸ್ಥಾನ.
    • ಮಹದಾಯಿ (ಮಾಂಡೋವಿ): ಕರ್ನಾಟಕ, ಗೋವಾ, ಮಹಾರಾಷ್ಟ್ರ.
    • ವಂಶಧಾರಾ: ಆಂಧ್ರಪ್ರದೇಶ ಮತ್ತು ಒಡಿಶಾ.

    ಮಹಾನದಿ ನದಿಯ ಬಗ್ಗೆ: 

    • ಉಗಮ: ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಸಿಹಾವಾ ಬೆಟ್ಟಗಳು.
    • ಉದ್ದ: ಅಂದಾಜು 851 km.
    • ಹರಿಯುವ ರಾಜ್ಯಗಳು: ಛತ್ತೀಸ್‌ಗಢ, ಒಡಿಶಾ ಮತ್ತು ಜಾರ್ಖಂಡ್‌ನ ಸಣ್ಣ ಭಾಗ.
    • ಮುಖಜಭೂಮಿ: ಇದು ಪಾರದೀಪ್ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ ಮತ್ತು ಫಲವತ್ತಾದ ಮುಖಜಭೂಮಿಯನ್ನು ನಿರ್ಮಿಸುತ್ತದೆ.
    • ಪ್ರಮುಖ ಉಪನದಿಗಳು:
    1. ಎಡದಂಡೆ ನದಿಗಳು: ಸಿಯೋನಾಥ್, ಹಸ್ದೇವ್, ಮಾಂಡ್.
    2. ಬಲದಂಡೆ ನದಿಗಳು: ಓಂಗ್, ಟೆಲ್, ಜೇಂಕ್, ಇಬ್.

    ಚಂದ್ರಯಾನ-5

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ಇತ್ತೀಚೆಗೆ ಇಸ್ರೋ (ISRO) ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ವಿಜ್ಞಾನಿಗಳು ಚಂದ್ರಯಾನ-5 ರ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
    • ಇದನ್ನು LUPEX (ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಷನ್) ಎಂದೂ ಕರೆಯಲಾಗುತ್ತದೆ.

    ಮಿಷನ್ ಬಗ್ಗೆ: 

    • ಇದು ಇಸ್ರೋ ಮತ್ತು JAXA ನಡುವಿನ ಜಂಟಿ ಯೋಜನೆಯಾಗಿದೆ.
    • ಇದನ್ನು 2028 ರ ಸುಮಾರಿಗೆ ಉಡಾವಣೆ ಮಾಡಲು ಗುರಿ ಹೊಂದಲಾಗಿದೆ.
    • ಉದ್ದೇಶ: ಈ ಮಿಷನ್ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ಮೂಲಕ ಮೇಲ್ಮೈ ಮತ್ತು ಉಪ-ಮೇಲ್ಮೈ ಜಲ-ಮಂಜುಗಡ್ಡೆ ನಿಕ್ಷೇಪಗಳನ್ನು ಅಧ್ಯಯನ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.
    • ಈ ಮಿಷನ್ ಜಪಾನಿನ ರಾಕೆಟ್ ಆದ H3 ನಲ್ಲಿ ಉಡಾವಣೆಯಾಗಲಿದ್ದು, ವಿವಿಧ ಪ್ರಯೋಗಗಳನ್ನು ನಡೆಸಲು ಏಳು ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯುವ ಯೋಜನೆಯನ್ನು ಹೊಂದಿದೆ.

    ಚಂದ್ರಯಾನ-3 ರ ಬಗ್ಗೆ: 

    • ಇದು ಭಾರತದ ಮೂರನೇ ಚಂದ್ರಯಾನ ಮಿಷನ್ ಆಗಿದೆ.
    • ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ರೂಪಿಸಿದೆ.
    • ಇದು ಆಗಸ್ಟ್ 23, 2023 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಿತು. ಇದು ಭಾರತವನ್ನು, ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದ ಮೊದಲ ದೇಶವನ್ನಾಗಿ ಮತ್ತು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವನ್ನಾಗಿ ಮಾಡಿದೆ. ಆಗಸ್ಟ್ 23 ಅನ್ನು ಈಗ ಭಾರತದಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಿಸಲಾಗುತ್ತದೆ.

    ಪ್ರಮುಖ ಸಂಗತಿಗಳು: 

    • ಉಡಾವಣಾ ರಾಕೆಟ್: LVM3-M4 ರಾಕೆಟ್.
    • ಲ್ಯಾಂಡಿಂಗ್ ಸೈಟ್: ಶಿವಶಕ್ತಿ ಪಾಯಿಂಟ್.
    • ಮಿಷನ್ ನ ಅವಧಿ: 1 ಲೂನಾರ್ ಡೇ (ಭೂಮಿಯ ಸುಮಾರು 14 ದಿನಗಳು).

    ಬಾಹ್ಯಾಕಾಶ ನೌಕೆಯ ಮೂರು ಭಾಗಗಳು

    ಪ್ರೊಪಲ್ಷನ್ ಮಾಡ್ಯೂಲ್: ಇದು ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ಕೊಂಡೊಯ್ಯುವ ಕೆಲಸ ಮಾಡಿದೆ. ಇದು 1 ಪೇಲೋಡ್ ಅನ್ನು ಹೊಂದಿದೆ:

    • SHAPE (Spectro-polarimetry of Habitable Planet Earth): ಇದು ಕಕ್ಷೆಯಿಂದ ಭೂಮಿಯನ್ನು ಅಧ್ಯಯನ ಮಾಡುತ್ತದೆ.

    ವಿಕ್ರಮ್ ಲ್ಯಾಂಡರ್: ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮುಖ್ಯ ಬಾಕ್ಸ್ ಇದಾಗಿದೆ. ಇದು 4 ಪೇಲೋಡ್‌ಗಳನ್ನು ಹೊಂದಿದೆ:

    1. ChaSTE (Chandra’s Surface Thermophysical Experiment): ಇದು ಮೇಲ್ಮೈ ಉಷ್ಣತೆಯನ್ನು ಅಳೆಯುತ್ತದೆ.
    2. ILSA (Instrument for Lunar Seismic Activity): ಇದು ಚಂದ್ರನ ಕಂಪನಗಳನ್ನು (moonquakes) ದಾಖಲಿಸುತ್ತದೆ.
    3. RAMBHA-LP (Radio Anatomy of Moon Bound Hypersensitive Ionosphere and Atmosphere – Langmuir Probe): ಇದು ಪ್ಲಾಸ್ಮಾ ಸಾಂದ್ರತೆಯನ್ನು ಅಳೆಯುತ್ತದೆ.
    4. LRA (Laser Retroreflector Array): ಇದು ಚಂದ್ರನ ದೂರವನ್ನು ಅಳೆಯುತ್ತದೆ (NASA ದಿಂದ).

    ಪ್ರಗ್ಯಾನ್ ರೋವರ್: ಇದು 6 ಚಕ್ರಗಳ ಸಣ್ಣ ರೋಬೋಟ್ ಆಗಿದೆ. ಇದು 2 ಪೇಲೋಡ್‌ಗಳನ್ನು ಹೊಂದಿದೆ:

    1. LIBS (Laser-Induced Breakdown Spectroscope): ಇದು ಮೂಲವಸ್ತುಗಳನ್ನು ಹುಡುಕುತ್ತದೆ (ಸಲ್ಫರ್ ಅನ್ನು ಕಂಡುಹಿಡಿದಿದೆ).
    2. APXS (Alpha Particle X-ray Spectrometer): ಇದು ಮಣ್ಣಿನ ಖನಿಜಗಳನ್ನು ಅಧ್ಯಯನ ಮಾಡುತ್ತದೆ.

    ದಕ್ಷಿಣ ಧ್ರುವ ಏಕೆ ಮುಖ್ಯವಾಗಿದೆ?

    • ಜಲ-ಮಂಜುಗಡ್ಡೆ (Water Ice): ಆಳವಾದ ಕುಳಿಗಳು ಎಂದಿಗೂ ಕರಗದ ಮಂಜುಗಡ್ಡೆಯನ್ನು ಹೊಂದಿವೆ.
    • ಸಂಪನ್ಮೂಲಗಳು: ಈ ಮಂಜುಗಡ್ಡೆಯು ಭವಿಷ್ಯದ ಗಗನಯಾತ್ರಿಗಳಿಗೆ ಕುಡಿಯುವ ನೀರು, ಆಮ್ಲಜನಕ ಮತ್ತು ಇಂಧನವನ್ನು ಒದಗಿಸುತ್ತದೆ.
    • ಇತಿಹಾಸ: ಇಲ್ಲಿನ ಶೀತ ವಾತಾವರಣವು ಸೌರವ್ಯೂಹದ ಹಳೆಯ ಕುರುಹುಗಳನ್ನು ಸಂರಕ್ಷಿಸುತ್ತದೆ.

    ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಕರ್ನಾಟಕದ ಸಮುದ್ರ ಮೀನುಗಾರಿಕೆಯಲ್ಲಿ ಕೊಯ್ಲೋತ್ತರ ನಷ್ಟವು 6.21% ರಿಂದ 10.13% ರಷ್ಟಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

    ಭಾರತದ ಮೀನುಗಾರಿಕಾ ವಲಯ: 

    • ಉತ್ಪಾದನೆ: ಭಾರತವು ವಿಶ್ವದಲ್ಲಿಯೇ 3 ನೇ ಅತಿದೊಡ್ಡ ಮೀನು ಉತ್ಪಾದಕ ಮತ್ತು 2 ನೇ ಅತಿದೊಡ್ಡ ಜಲಕೃಷಿ ಉತ್ಪಾದಕ ದೇಶವಾಗಿದೆ.
    • ಮೀನು ಮತ್ತು ಮೀನುಗಾರಿಕಾ ಉತ್ಪನ್ನಗಳ ರಫ್ತಿನಲ್ಲಿ ಭಾರತವು 4 ನೇ ಅತಿದೊಡ್ಡ ರಫ್ತುದಾರನಾಗಿದೆ.
    • ಉದ್ಯೋಗದ ದೃಷ್ಟಿಯಿಂದ ನೋಡುವುದಾದರೆ, ಭಾರತದಲ್ಲಿ ಈ ಉದಯೋನ್ಮುಖ ವಲಯವು 30 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ.
    • ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY): ಭಾರತದಲ್ಲಿ ಮೀನುಗಾರಿಕಾ ವಲಯದ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯನ್ನು ತರುವ ಉದ್ದೇಶವನ್ನು ಹೊಂದಿದೆ.

    ವಲಯದ ಬೆಳವಣಿಗೆಗೆ ಸರ್ಕಾರದ ಉಪಕ್ರಮಗಳು

    • ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (NFDB): 2006 ರಲ್ಲಿ ಸ್ಥಾಪಿಸಲಾದ NFDB ಯು ಭಾರತದಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಯೋಜನೆ ಮತ್ತು ಪ್ರಚಾರಕ್ಕಾಗಿ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY): 2020 ರಲ್ಲಿ ಪ್ರಾರಂಭಿಸಲಾದ PMMSY ಯು ಮೀನು ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಯೋಜನೆಯಾಗಿದೆ.
    • ನೀಲಿ ಕ್ರಾಂತಿ: 2015 ರಲ್ಲಿ ಪ್ರಾರಂಭಿಸಲಾದ ನೀಲಿ ಕ್ರಾಂತಿಯು ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ‘ನಶಾ ಮುಕ್ತ ಯುವ’

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ: 

    • ಪ್ರಧಾನಿ ನರೇಂದ್ರ ಮೋದಿಯವರು ಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಮಾದಕವ್ಯಸನ ಮುಕ್ತ ಭಾರತವನ್ನು ನಿರ್ಮಿಸಲು ‘ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್ ಸಂಕಲ್ಪ ಅಭಿಯಾನ’ವನ್ನು ಪ್ರಾರಂಭಿಸಿದ್ದಾರೆ.

    ‘ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್ ಸಂಕಲ್ಪ ಅಭಿಯಾನ’

    • ಇದು ಆಗಸ್ಟ್ 2, 2026 ರಂದು ಪ್ರಾರಂಭಿಸಲಾದ 100 ವಾರಗಳ ಯುವ ಅಭಿಯಾನವಾಗಿದೆ.
    • ಮುಖ್ಯ ಧ್ಯೇಯ: ಇದು ವಿಕಸಿತ ಭಾರತ @2047 ಗುರಿಯನ್ನು ಸಾಧಿಸಲು ಮಾದಕವ್ಯಸನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ.
    • ಸಚಿವಾಲಯ: ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ.
    • ವೇದಿಕೆ: ಇದನ್ನು ಮೇರಾ ಯುವ ಭಾರತ್ (MY Bharat) ಮೂಲಕ ನಡೆಸಲಾಗುತ್ತದೆ.
    • ಸಮಯಮಿತಿ: 100 ವಾರಗಳು (ಪ್ರತಿ ಭಾನುವಾರ ಸಕ್ರಿಯವಾಗಿರುತ್ತದೆ).
    • ಮೂಲ: ವಾರಣಾಸಿಯ ಪ್ರಾಯೋಗಿಕ ಯೋಜನೆಯಿಂದ (ಕಾಶಿ ಘೋಷಣೆ) ಇದು ಪ್ರೇರಿತವಾಗಿದೆ.
    • ಸಮನ್ವಯತೆ: ಇದು ಸಾಮಾಜಿಕ ನ್ಯಾಯ ಸಚಿವಾಲಯದ ನಶಾ ಮುಕ್ತ ಭಾರತ ಅಭಿಯಾನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

    ಪ್ರಮುಖ ಸ್ತಂಭಗಳು

    • ಬೃಹತ್ ಜನಸಜ್ಜುಗೊಳಿಸುವಿಕೆ : ಇದು 1 ಕೋಟಿಗೂ ಹೆಚ್ಚು ಯುವಕರು, NSS ಘಟಕಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತದೆ.
    • ಭಾನುವಾರದ ಚಟುವಟಿಕೆಗಳು: ಸಕಾರಾತ್ಮಕ ಪರ್ಯಾಯಗಳಾಗಿ ಕ್ರೀಡೆ, ಯೋಗ ಮತ್ತು ಕಲೆಗಳನ್ನು ಉತ್ತೇಜಿಸುತ್ತದೆ.
    • ಕಳಂಕ ನಿವಾರಣೆ : ಮಾದಕ ವ್ಯಸನದಿಂದ ಚೇತರಿಸಿಕೊಳ್ಳುತ್ತಿರುವವರನ್ನು ಸಾಮಾಜಿಕ ಪುನರ್ಮಿಲನಕ್ಕಾಗಿ “ಯೋಧರು” (warriors) ಎಂದು ಪರಿಗಣಿಸುತ್ತದೆ.

    ಪರಿಷ್ಕೃತ ಖೇಲೋ ಇಂಡಿಯಾ ಯೋಜನೆ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸಚಿವ ಸಂಪುಟವು ಪರಿಷ್ಕೃತ ಖೇಲೋ ಇಂಡಿಯಾ ಯೋಜನೆಗೆ ಅನುಮೋದನೆ ನೀಡಿದ್ದು, 2026-27 ರಿಂದ 2030-31 ರವರೆಗಿನ ಬಜೆಟ್ ಅನ್ನು ₹36,441 ಕೋಟಿಗೆ ಹೆಚ್ಚಿಸುವ ಮೂಲಕ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೆರವನ್ನು ವಿಸ್ತರಿಸಿದೆ.

    ಮೂಲ ಬದಲಾವಣೆಗಳು:

    • 10 ಪಟ್ಟು ದೊಡ್ಡ ಕ್ರೀಡಾಪಟುಗಳ ಸಮೂಹ (Talent Pool): ಕ್ರೀಡಾ ಪ್ರತಿಭೆಗಳ ನೋಂದಣಿಯನ್ನು ಹೆಚ್ಚಿಸುವ ಉದ್ದೇಶದಿಂದ “ಉದಯೋನ್ಮುಖ ಖೇಲೋ ಇಂಡಿಯಾ ಅಥ್ಲೀಟ್‌ಗಳನ್ನು (E-KIAs)” ಹೊಸದಾಗಿ ಸೇರ್ಪಡೆಗೊಳಿಸಲಾಗುತ್ತದೆ.
    • ಶಾಲಾ ಮಟ್ಟದ ಏಕೀಕರಣ: ಶಿಕ್ಷಣ ಮತ್ತು ಕ್ರೀಡೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಖೇಲೋ ಇಂಡಿಯಾ ಪೋಷಕ ಶಾಲೆಗಳನ್ನು (Feeder Schools) ಮತ್ತು ಉತ್ಕೃಷ್ಟ ವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತದೆ.
    • ತರಬೇತಿ ಮಾನದಂಡಗಳು: ತರಬೇತುದಾರರ ಪ್ರಮಾಣೀಕರಣವನ್ನು ಏಕೀಕರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕೋಚ್ ಮಾನ್ಯತೆ ಮಂಡಳಿಯನ್ನು (NCAB) ಸ್ಥಾಪಿಸಲಾಗುತ್ತದೆ.
    • ತಂತ್ರಜ್ಞಾನ ಆಧಾರಿತ ನಿಗಾ ವಹಿಸುವಿಕೆ: ಕ್ರೀಡಾಪಟುಗಳ ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮತ್ತು ಪ್ರತಿಭೆಗಳ ಶೋಧನೆಗಾಗಿ AI-ಚಾಲಿತ ಡಿಜಿಟಲ್ ವೇದಿಕೆಯನ್ನು ಅಳವಡಿಸಿಕೊಳ್ಳಲಾಗುತ್ತದೆ.

    ಮೂಲ ಯೋಜನೆ ಮತ್ತು ಪರಿಷ್ಕೃತ ಯೋಜನೆಯ ನಡುವಿನ ಹೋಲಿಕೆ:

    ಲಕ್ಷಣಗಳು

    ಮೂಲ ಯೋಜನೆ

    ಪರಿಷ್ಕೃತ ಯೋಜನೆ (2026–31)

    ವೆಚ್ಚ

    ~₹4,500 ಕೋಟಿ

    ₹36,441 ಕೋಟಿ

    ಪ್ರತಿಭೆಗಳ ಸಮೂಹ (Talent Pool)

    ಸ್ಥಳೀಯ ಗುಂಪುಗಳಿಗೆ (Cohorts) ಸೀಮಿತವಾಗಿತ್ತು

    10 ಪಟ್ಟು ದೊಡ್ಡ ಸಮೂಹ (E-KIAs)

    ತರಬೇತಿ

    ವಿಭಜಿತ ಪ್ರಾದೇಶಿಕ ನಿಯಮಗಳಿದ್ದವು

    ಏಕೀಕೃತ NCAB ಮಾನದಂಡಗಳು

    ಪ್ರಗತಿಯ ಮಾರ್ಗ (Pathway)

    ಕೇವಲ ದೇಶೀಯ ಮಟ್ಟಕ್ಕೆ ಆದ್ಯತೆ ನೀಡಲಾಗಿತ್ತು

    ಒಲಿಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗೆ (CWG) ಸಮಗ್ರ ಮಾರ್ಗ

  • ಬಂಗಾಳಕೊಲ್ಲಿಯು ಭಾರತದ SHANTI (ಶಾಂತಿ) ಆಧಾರಸ್ತಂಭ | ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) 2026 | INS ನಿಪುಣ್ | ಏಡ್ಸ್ ಕೊನೆಗಾಣಿಸಲು ಒಗ್ಗೂಡಿ (United to end AIDS) ವರದಿ | ಡೆಂಗ್ಯೂ ವೈರಸ್ | ಶಹೀದ್ ಉಧಮ್ ಸಿಂಗ್

    ಬಂಗಾಳಕೊಲ್ಲಿಯು ಭಾರತದ SHANTI (ಶಾಂತಿ) ಆಧಾರಸ್ತಂಭ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ವಿದೇಶಾಂಗ ವ್ಯವಹಾರಗಳ ಸಚಿವರು ಬಂಗಾಳಕೊಲ್ಲಿ (BOB) ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ನಿಯಮ-ಆಧಾರಿತ ಕಡಲ ವ್ಯವಸ್ಥೆಯನ್ನು ಸ್ಥಾಪಿಸಲು SHANTI (ಶಾಂತಿ) ಚೌಕಟ್ಟನ್ನು ಪರಿಚಯಿಸಿದರು.

    SHANTI (ಶಾಂತಿ) ಚೌಕಟ್ಟಿನ ಬಗ್ಗೆ: 

    • ಪೂರ್ಣ ರೂಪ: ನಿಯಮಗಳು, ನಂಬಿಕೆ ಮತ್ತು ಸಮಗ್ರತೆಯ ಮೂಲಕ ಸಮಗ್ರ ಪ್ರಗತಿಯನ್ನು ಭದ್ರಪಡಿಸುವುದು (Securing Holistic Advancement through Norms, Trust, and Integrity).
    • ಉದ್ದೇಶ: ಇದು ಕಠಿಣ ಸೇನಾ ಮೈತ್ರಿಯ ಬದಲಾಗಿ ಹಂಚಿಕೊಂಡ ಜವಾಬ್ದಾರಿಯನ್ನು ಆಧರಿಸಿದ ಭಾರತದ ಪ್ರಮಾಣಿತ ಪ್ರಾದೇಶಿಕ ಕಡಲ ಭದ್ರತಾ ವಿಧಾನವಾಗಿದೆ.
    • ಮಹತ್ವ: ಈ ಕಾರ್ಯತಂತ್ರವು ಅಕ್ರಮ ಮೀನುಗಾರಿಕೆ, ಸೈಬರ್ ಬೆದರಿಕೆಗಳು ಮತ್ತು ಸಾಗರ ಮಾಲಿನ್ಯ ಸೇರಿದಂತೆ ದೇಶಾತೀತ ಸವಾಲುಗಳ ವಿರುದ್ಧ ದೀರ್ಘಾವಧಿಯ ಸ್ಥೈರ್ಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
    • ಈ ಚೌಕಟ್ಟು ವಿಶಾಲವಾದ ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ವಿಶ್ವಾಸಾರ್ಹ ಭದ್ರತಾ ಪಾಲುದಾರ ಮತ್ತು ಮೊದಲ ಪ್ರತಿಸ್ಪಂದಕನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

    ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ (BIMSTEC)

    • ಇದು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವ ಅಂತರ್‌ಪ್ರಾದೇಶಿಕ ಸಂಸ್ಥೆಯಾಗಿದೆ.
    • ಸ್ಥಾಪನೆ: ಇದನ್ನು 1997ಬ್ಯಾಂಕಾಕ್ ಘೋಷಣೆಯ ಮೂಲಕ ಸ್ಥಾಪಿಸಲಾಯಿತು.
    • ಉದ್ದೇಶ: ತ್ವರಿತ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವುದು, ಸಾಮಾಜಿಕ ಪ್ರಗತಿಯನ್ನು ವೇಗಗೊಳಿಸುವುದು ಮತ್ತು ಪ್ರದೇಶದಲ್ಲಿ ಸಾಮಾನ್ಯ ಆಸಕ್ತಿಯ ವಿಷಯಗಳ ಮೇಲೆ ಸಹಯೋಗವನ್ನು ಉತ್ತೇಜಿಸುವುದು.
    • ಪ್ರಧಾನ ಕಚೇರಿ: ಢಾಕಾ, ಬಾಂಗ್ಲಾದೇಶ.
    • ಸದಸ್ಯ ರಾಷ್ಟ್ರಗಳು: ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಶ್ರೀಲಂಕಾ (ದಕ್ಷಿಣ ಏಷ್ಯಾದಿಂದ ಐದು ರಾಷ್ಟ್ರಗಳು) ಹಾಗೂ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ (ಆಗ್ನೇಯ ಏಷ್ಯಾದಿಂದ ಎರಡು ರಾಷ್ಟ್ರಗಳು).

    ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) 2026

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) 2026 ಅನ್ನು ಯೇಲ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳು ಬಿಡುಗಡೆ ಮಾಡಿದ್ದು, ಇದು ಪರಿಸರ ಆಡಳಿತ ಮತ್ತು ಮೌಲ್ಯಮಾಪನ ವಿಧಾನಗಳ ಮೇಲಿನ ಚರ್ಚೆಯನ್ನು ಮರುಹುಟ್ಟುಹಾಕಿದೆ.

    ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI)ದ ಬಗ್ಗೆ: 

    • ಉದ್ದೇಶ: ಈ ಸೂಚ್ಯಂಕವು ಪರಿಸರ ವ್ಯವಸ್ಥೆಯ ಚೈತನ್ಯ (45%), ಹವಾಮಾನ ಬದಲಾವಣೆ ತಗ್ಗಿಸುವಿಕೆ (30%) ಮತ್ತು ಪರಿಸರ ಆರೋಗ್ಯ (25%) ವಿಭಾಗಗಳಲ್ಲಿ ವಿಂಗಡಿಸಲಾದ 47 ಸೂಚಕಗಳ ಮೂಲಕ 177 ರಾಷ್ಟ್ರಗಳನ್ನು ಮೌಲ್ಯಮಾಪನ ಮಾಡುತ್ತದೆ.

    EPI 2026 ರ ಪ್ರಮುಖ ಅಂಶಗಳು

    • ಜಾಗತಿಕ ನಾಯಕರು: ಎಸ್ಟೋನಿಯಾ 74.79 ಅಂಕಗಳೊಂದಿಗೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ಲಕ್ಸೆಂಬರ್ಗ್ ಮತ್ತು ಯುಕೆ (UK) ಇದ್ದು, ಪ್ರಮುಖ ಸ್ಥಾನಗಳಲ್ಲಿ ಯುರೋಪಿಯನ್ ರಾಷ್ಟ್ರಗಳೇ ಪ್ರಾಬಲ್ಯ ಸಾಧಿಸಿವೆ.
    • ಜಾಗತಿಕವಾಗಿ ಲಾವೋಸ್ ದೇಶಕ್ಕಿಂತ ಮುಂದಿರುವ ಭಾರತವು 22.46 ಅಂಕಗಳನ್ನು ಗಳಿಸಿ 177 ದೇಶಗಳ ಪೈಕಿ 176 ನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ದಕ್ಷಿಣ ಏಷ್ಯಾದಲ್ಲಿ ಕೊನೆಯ ಸ್ಥಾನದಲ್ಲಿದೆ.

    INS ನಿಪುಣ್

    ರಕ್ಷಣೆ

    ಇದೀಗ ಸುದ್ದಿಯಲ್ಲಿ:

    • ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್ (DSV) ಆದ ‘ನಿಪುಣ್’ ಅನ್ನು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು.
    • ಡೈವಿಂಗ್ ಸಪೋರ್ಟ್ ವೆಸೆಲ್ (DSV) ಎನ್ನುವುದು ವೃತ್ತಿಪರ ನೀರೊಳಗಿನ ಕೆಲಸ, ಆಳ ಸಮುದ್ರದ ಸ್ಯಾಚುರೇಶನ್ ಡೈವಿಂಗ್ ಮತ್ತು ಜಲಾಂತರ್ಗಾಮಿ ರಕ್ಷಣಾ ಕಾರ್ಯಾಚರಣೆಗಳಿಗೆ ತೇಲುವ ನೆಲೆಯಾಗಿ ಬಳಸಲಾಗುವ ವಿಶೇಷ ಹಡಗಾಗಿದೆ.

    INS ನಿಪುಣ್ ಬಗ್ಗೆ: 

    • ಇದು INS ನಿಸ್ತಾರ್ ನ ಸಹ ನೌಕೆಯಾಗಿದ್ದು, ಇದು ಸುಮಾರು 75% ರಷ್ಟು ಸ್ಥಳೀಯ (ಸ್ವದೇಶಿ) ತಂತ್ರಜ್ಞಾನವನ್ನು ಹೊಂದಿದ್ದು, ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಬೆಂಬಲ ನೀಡುತ್ತದೆ.

    ವೈಶಿಷ್ಟ್ಯಗಳು: 

    • ಪಾತ್ರ: ಆಳ ಸಮುದ್ರದ ರಕ್ಷಣೆ, ಜಲಾಂತರ್ಗಾಮಿ ರಕ್ಷಣೆ ಮತ್ತು ನೀರೊಳಗಿನ ಭದ್ರತಾ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.
    • ಪ್ರಮುಖ ಸ್ವತ್ತು: ಇದು ಡೀಪ್ ಸಬ್‌ಮರ್ಜೆನ್ಸ್ ರೆಸ್ಕ್ಯೂ ವೆಹಿಕಲ್ಸ್ (Deep Submergence Rescue Vehicles – DSRVs) ಗಳಿಗೆ ಮಾತೃ ನೌಕೆಯಾಗಿ ಕಾರ್ಯನಿರ್ವಹಿಸುತ್ತದೆ.
    • ವಿಶೇಷತೆಗಳು: ಇದು 118.4 ಮೀಟರ್ ಉದ್ದವಿದ್ದು, 9,350 ಟನ್ ಸ್ಥಳಾಂತರ ಸಾಮರ್ಥ್ಯವನ್ನು ಹೊಂದಿದೆ.
    • ಸಾಮರ್ಥ್ಯ: ಇದು 300 ಮೀಟರ್ ಆಳದವರೆಗೆ ಸ್ಯಾಚುರೇಶನ್ ಡೈವಿಂಗ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.

    ಏಡ್ಸ್ ಕೊನೆಗಾಣಿಸಲು ಒಗ್ಗೂಡಿ (United to end AIDS) ವರದಿ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 26ನೇ ಅಂತರರಾಷ್ಟ್ರೀಯ ಏಡ್ಸ್ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಎಚ್‌ಐವಿ/ಏಡ್ಸ್ ಕಾರ್ಯಕ್ರಮ (UNAIDS) ವಿಭಾಗವು “ಏಡ್ಸ್ ಕೊನೆಗಾಣಿಸಲು ಒಗ್ಗೂಡಿ” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

    ಎಚ್‌ಐವಿ ಮತ್ತು ಏಡ್ಸ್ ಮೇಲಿನ ರಾಜಕೀಯ ಘೋಷಣೆ (2026)

    • ಇದು ನ್ಯೂಯಾರ್ಕ್‌ನಲ್ಲಿ ನಡೆದ ಎಚ್‌ಐವಿ/ಏಡ್ಸ್ ಮೇಲಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯಲ್ಲಿ 2026ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡ ಜಾಗತಿಕ ಮಾರ್ಗಸೂಚಿಯಾಗಿದೆ.
    • ಇದು 95-95-95 ಗುರಿಗಳ ಮೂಲಕ 2030ರ ವೇಳೆಗೆ ಸಾರ್ವಜನಿಕ ಆರೋಗ್ಯದ ಬೆದರಿಕೆಯಾಗಿರುವ ಏಡ್ಸ್ ಅನ್ನು ಕೊನೆಗಾಣಿಸುವ, 2030ರ ವೇಳೆಗೆ ವಾರ್ಷಿಕವಾಗಿ 21.9 ಬಿಲಿಯನ್ ಯುಎಸ್ ಡಾಲರ್ (US$) ಹಣವನ್ನು ಭದ್ರಪಡಿಸುವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

    ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ಬಗ್ಗೆ: 

    • ರೋಗಕಾರಕ: ಇದು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುವ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ನಿಂದ ಉಂಟಾಗುವ ದೀರ್ಘಕಾಲೀನ, ಮಾರಣಾಂತಿಕ ಆರೋಗ್ಯ ಸ್ಥಿತಿಯಾಗಿದೆ.
    • ಹರಡುವಿಕೆ: ಎಚ್‌ಐವಿ ಸೋಂಕಿತ ವ್ಯಕ್ತಿಯ ಕೆಲವು ದೇಹದ ದ್ರವಗಳೊಂದಿಗೆ (ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆ ಹಾಲು) ನೇರ ಸಂಪರ್ಕ ಹೊಂದುವ ಮೂಲಕ ಇದು ಹರಡುತ್ತದೆ.
    • ರೋಗಲಕ್ಷಣಗಳು:
    • ಹಂತ 1: ಜ್ವರದಂತಹ ಲಕ್ಷಣಗಳು (ಜ್ವರ, ಚಳಿ, ಕಲೆಗಳು, ರಾತ್ರಿ ಬೆವರುವುದು) ಕಾಣಿಸಿಕೊಳ್ಳುತ್ತವೆ.
    • ಹಂತ 2: ಕ್ಲಿನಿಕಲ್ ಲೇಟೆನ್ಸಿ (ಯಾವುದೇ ನಿರ್ದಿಷ್ಟ ಲಕ್ಷಣಗಳಿರುವುದಿಲ್ಲ).
    • ಹಂತ 3: ಏಡ್ಸ್ (ರೋಗನಿರೋಧಕ ಶಕ್ತಿಯು ದುರ್ಬಲಗೊಳ್ಳುವುದು).
    • ತಡೆಗಟ್ಟುವಿಕೆ: ರೋಗ ಬರುವ ಮುನ್ನ ತಡೆಗಟ್ಟುವುದೇ ಲೇಸು. ಆದ್ದರಿಂದ ಸುರಕ್ಷಿತ ವಿಧಾನಗಳನ್ನು ಬಳಸುವುದು, ಕಲುಷಿತವಲ್ಲದ ಸಿರಿಂಜ್ ಸೂಜಿಗಳ ಬಳಕೆ ಮತ್ತು ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಅತ್ಯಗತ್ಯ.
    • ಚಿಕಿತ್ಸೆ: ಎಚ್‌ಐವಿ ಸೋಂಕಿಗೆ ಯಾವುದೇ ನಿರ್ದಿಷ್ಟ ಗುಣಪಡಿಸುವ ಚಿಕಿತ್ಸೆ ಇಲ್ಲ. ಆಂಟಿರೆಟ್ರೋವೈರಲ್ ಔಷಧಿಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ, ಇದು ವೈರಸ್ ದೇಹದಲ್ಲಿ ಗುಣಿಸುವುದನ್ನು ನಿಲ್ಲಿಸುತ್ತದೆ. ಚಿಕಿತ್ಸೆ ನೀಡದಿದ್ದರೆ, ಎಚ್‌ಐವಿಯು ಹಲವು ವರ್ಷಗಳ ನಂತರ ಏಡ್ಸ್ ಆಗಿ ಉಲ್ಬಣಗೊಳ್ಳುತ್ತದೆ.

    ಭಾರತ ಸರ್ಕಾರ ಕೈಗೊಂಡ ಕ್ರಮಗಳು

    • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP) (ಕೇಂದ್ರ ವಲಯದ ಯೋಜನೆ).
    • ಪೋಷಕರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ (PPTCT) ಕಾರ್ಯಕ್ರಮ.
    • ಎಚ್‌ಐವಿ/ಏಡ್ಸ್ ಕಾಯ್ದೆ 2017 (ಯಾವುದೇ ಕಾರಣಕ್ಕೂ ಎಚ್‌ಐವಿ ಸೋಂಕಿತರ ವಿರುದ್ಧ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ).
    • UNAIDS ಅಳವಡಿಸಿಕೊಂಡ 90:90:90 ಕಾರ್ಯತಂತ್ರ (2020 ರ ವೇಳೆಗೆ 90% ರೋಗನಿರ್ಣಯ, ಆಂಟಿ-ರೆಟ್ರೋವೈರಲ್ ಟ್ರೀಟ್‌ಮೆಂಟ್ (ART) ಮೂಲಕ ಚಿಕಿತ್ಸೆ ಮತ್ತು ವೈರಸ್ ನಿಗ್ರಹ). ಇದರ ಗುರಿಯನ್ನು 95-95-95 ಗುರಿಯೊಂದಿಗೆ ಮತ್ತಷ್ಟು 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • ಪ್ರಾಜೆಕ್ಟ್ ಆಕ್ಸಿಲರೇಟ್ (Project ACCELERATE): ಜಾನ್ ಹಾಪ್ಕಿನ್ಸ್ ಮತ್ತು NACO ಉಪಕ್ರಮವಾಗಿದ್ದು, ಸೇಫ್ ಜಿಂದಗಿ (Safe Zindagi) ಆನ್‌ಲೈನ್ ಪೋರ್ಟಲ್ ಮೂಲಕ ಎಚ್‌ಐವಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
    • ಮಿಷನ್ ಸಂಪರ್ಕ: ಆಂಟಿರೆಟ್ರೋವೈರಲ್ ಥೆರಪಿ (ART) ಯನ್ನು ನಿಲ್ಲಿಸಿದ ಎಚ್‌ಐವಿ ಸೋಂಕಿತರನ್ನು (PLHIV) ಮರಳಿ ಚಿಕಿತ್ಸೆಗೆ ಕರೆತರುವುದು ಇದರ ಮುಖ್ಯ ಉದ್ದೇಶವಾಗಿದೆ.

    ಡೆಂಗ್ಯೂ ವೈರಸ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯವು (VRDL) ಭಾರತದಲ್ಲಿ ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸಿರೊಟೈಪ್‌ಗಳು (DENV- 1 ರಿಂದ DENV-4) ಪ್ರಸರಣದಲ್ಲಿವೆ ಎಂದು ಕಂಡುಹಿಡಿದಿದೆ.

    ಡೆಂಗ್ಯೂ ಬಗ್ಗೆ:

    • ರೋಗಕಾರಕ: ಡೆಂಗ್ಯೂ ಎನ್ನುವುದು ಡೆಂಗ್ಯೂ ವೈರಸ್ (DENV) ನಿಂದ ಉಂಟಾಗುವ ವೈರಲ್ ಸೋಂಕಾಗಿದೆ.
    • ಈ DENV ಎನ್ನುವುದು ಫ್ಲಾವಿವಿರಿಡೆ ಕುಟುಂಬದ RNA ವೈರಸ್ ಆಗಿದ್ದು, ನಾಲ್ಕು ಸಿರೊಟೈಪ್‌ಗಳನ್ನು (DENV-1 ರಿಂದ 4) ಹೊಂದಿದೆ.
    • ರೋಗಲಕ್ಷಣಗಳು: ತೀವ್ರ ಜ್ವರ, ತೀವ್ರವಾದ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲು ನೋವುಗಳು, ವಾಕರಿಕೆ, ವಾಂತಿ, ಊದಿಕೊಂಡ ಗ್ರಂಥಿಗಳು ಹಾಗೂ ದದ್ದುಗಳು.
    • ಹರಡುವಿಕೆ: ಈ ವೈರಸ್ ಮುಖ್ಯವಾಗಿ ಸೋಂಕಿತ ಹೆಣ್ಣು ಏಡಿಸ್ ಈಜಿಪ್ಟಿ (Aedes Aegypti) ಸೊಳ್ಳೆಯ ಕಚ್ಚುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ.
    • ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಡೆಂಗ್ಯೂ ಹರಡುವ ಸಾಧ್ಯತೆಯೂ ಇರುತ್ತದೆ ಹಾಗೂ ರಕ್ತದ ಉತ್ಪನ್ನಗಳು, ಅಂಗದಾನ ಮತ್ತು ರಕ್ತ ವರ್ಗಾವಣೆಯ ಮೂಲಕವೂ ಹರಡುವ ಸಾಧ್ಯತೆಗಳಿವೆ.
    • ತಡೆಗಟ್ಟುವಿಕೆ: ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ.
    • ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಸೊಳ್ಳೆ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಡೆಂಗ್ಯೂ ತಡೆಗಟ್ಟಲು ಇರುವ ಅತ್ಯುತ್ತಮ ಮಾರ್ಗವಾಗಿದೆ.

    ಭಾರತದ ಮೊದಲ ಸ್ವದೇಶಿ ಡೆಂಗ್ಯೂ ಲಸಿಕೆ

    • ಡೆಂಗಿಆಲ್ (DengiAll) ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಸ್ವದೇಶಿ, ಟೆಟ್ರಾವ್ಯಾಲೆಂಟ್, ಏಕ-ಡೋಸ್ ಡೆಂಗ್ಯೂ ಲಸಿಕೆಯಾಗಿದೆ.

    ಶಹೀದ್ ಉಧಮ್ ಸಿಂಗ್

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಹೀದ್ ಉಧಮ್ ಸಿಂಗ್ ಅವರ ಹುತಾತ್ಮ ದಿನದಂದು ಅವರಿಗೆ ನಮನ ಸಲ್ಲಿಸಿದ್ದು, ಅವರ ಜೀವನವು ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.

    ಶಹೀದ್ ಉಧಮ್ ಸಿಂಗ್ (1899-1940) ಅವರ ಬಗ್ಗೆ: 

    • ಇವರು ಪಂಜಾಬ್‌ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೆಲ್ ಒಡ್ವೈಯರ್‌ನನ್ನು ಹತ್ಯೆ ಮಾಡುವ ಮೂಲಕ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಕ್ರಾಂತಿಕಾರಿಯಾಗಿದ್ದಾರೆ.
    • ಆರಂಭಿಕ ಜೀವನ: ಪಂಜಾಬ್‌ನ ಸುನಾಮ್‌ನಲ್ಲಿ ಶೇರ್ ಸಿಂಗ್ ಆಗಿ ಜನಿಸಿದ ಇವರು, ಅಮೃತಸರದ ಸೆಂಟ್ರಲ್ ಖಾಲ್ಸಾ ಅನಾಥಾಶ್ರಮದಲ್ಲಿ ಬೆಳೆದರು. ಅಲ್ಲಿ ಅವರಿಗೆ ಉಧಮ್ ಸಿಂಗ್ ಎಂದು ಮರುನಾಮಕರಣ ಮಾಡಲಾಯಿತು.
    • 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ತೀವ್ರ ಆಘಾತಕ್ಕೊಳಗಾದ ಇವರು, ವಸಾಹತುಶಾಹಿ ಆಡಳಿತದ ವಿರುದ್ಧದ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
    • ಕ್ರಾಂತಿಕಾರಿ ನಂಟು: ಸಾಗರೋತ್ತರ ಭಾರತೀಯರನ್ನು ಸಜ್ಜುಗೊಳಿಸಲು ಇವರು ಗದರ್ ಪಕ್ಷವನ್ನು ಸೇರಿದರು. ಭಗತ್ ಸಿಂಗ್ ಅವರಿಂದ ಪ್ರಭಾವಿತರಾದ ಇವರು, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಜೊತೆ ಕೆಲಸ ಮಾಡಲು 1927ರಲ್ಲಿ ಭಾರತಕ್ಕೆ ಮರಳಿದರು.
    • ಹತ್ಯೆ: 1919ರ ಅಮೃತಸರ ಹತ್ಯಾಕಾಂಡಕ್ಕೆ ಬೆಂಬಲ ನೀಡಿದ್ದಕ್ಕಾಗಿ ಶಿಕ್ಷೆಯಾಗಿ, ಮಾರ್ಚ್ 1940ರಲ್ಲಿ ಲಂಡನ್‌ನ ಕ್ಯಾಕ್ಸ್ಟನ್ ಹಾಲ್‌ನಲ್ಲಿ ಮೈಕೆಲ್ ಒಡ್ವೈಯರ್‌ನನ್ನು ಉಧಮ್ ಸಿಂಗ್ ಗುಂಡಿಕ್ಕಿ ಕೊಂದರು.
    • ಜಾತ್ಯತೀತ ಗುರುತು: ಪೊಲೀಸ್ ಕಸ್ಟಡಿಯಲ್ಲಿದ್ದಾಗ, ವಸಾಹತುಶಾಹಿ ವಿರೋಧಿ ಐಕ್ಯತೆಯನ್ನು ಸಂಕೇತಿಸಲು ಭಾರತದ ಪ್ರಮುಖ ಧರ್ಮಗಳೊಂದಿಗೆ ಆಜಾದ್ (ಸ್ವಾತಂತ್ರ್ಯ) ಪದವನ್ನು ಬೆರೆಸಿ “ರಾಮ್ ಮೊಹಮ್ಮದ್ ಸಿಂಗ್ ಆಜಾದ್” ಎಂಬ ಹೆಸರನ್ನು ಅವರು ಅಳವಡಿಸಿಕೊಂಡರು.
    • ಹುತಾತ್ಮತೆ: ಬ್ರಿಕ್ಸ್ಟನ್ ಜೈಲಿನಲ್ಲಿ 42 ದಿನಗಳ ಉಪವಾಸ ಸತ್ಯಾಗ್ರಹದ ನಂತರ, ಅವರನ್ನು ಜುಲೈ 31, 1940 ರಂದು ಪೆಂಟನ್‌ವಿಲ್ಲೆ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅವರ ಚಿತಾಭಸ್ಮವನ್ನು 1974ರಲ್ಲಿ ಭಾರತಕ್ಕೆ ತರಲಾಯಿತು.