ದಾನವೀರ್ (DAANVEER) ಉಪಕ್ರಮ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿ:
- ಗ್ರಾಮ ಪಂಚಾಯಿತಿಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಪಂಚಾಯತ್ ರಾಜ್ ಸಚಿವಾಲಯವು ‘ದಾನವೀರ್’ ಉಪಕ್ರಮವನ್ನು ಪ್ರಾರಂಭಿಸಿದೆ.
ದಾನವೀರ್ (DAANVEER) ಉಪಕ್ರಮದ ಬಗ್ಗೆ:
- ಇದು ಡಿಜಿಟಲ್ ನಾಗರಿಕ-ಭಾಗವಹಿಸುವಿಕೆಯ ವೇದಿಕೆಯಾಗಿದ್ದು, ಇದನ್ನು ಪಂಚಾಯತ್ ರಾಜ್ ಸಚಿವಾಲಯವು ಜುಲೈ 2026 ರಲ್ಲಿ ಪ್ರಾರಂಭಿಸಿದೆ.
- ಘೋಷವಾಕ್ಯ: ‘ನಿಮ್ಮ ಹಳ್ಳಿಗೆ ಮರಳಿ ನೀಡಿ’ (Give Back to Your Village).
- ಉದ್ದೇಶ: ನಾಗರಿಕರು ಮತ್ತು ಅನಿವಾಸಿ ಭಾರತೀಯರು ಸ್ವಯಂಪ್ರೇರಿತವಾಗಿ ನಿಧಿ ಒದಗಿಸಲು ಹಾಗೂ ಪೂರ್ವ-ಅನುಮೋದಿತ ಡಿಜಿಟಲ್ ಮೂಲಸೌಕರ್ಯ ಪ್ಯಾಕೇಜ್ಗಳನ್ನು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ನೀಡಲು ಇದು ಅನುವು ಮಾಡಿಕೊಡುತ್ತದೆ.
ಪ್ರಮುಖ ಅಂಶಗಳು:
- ಕಾರ್ಯವಿಧಾನ: ದಾನಿಗಳು ‘ಮೇರಿ ಪಂಚಾಯತ್’ (Meri Panchayat) ಆ್ಯಪ್ ಬಳಸಿ ಪ್ರಮಾಣಿತ ಐಟಿ ಹಾರ್ಡ್ವೇರ್ ಬಂಡಲ್ಗಳನ್ನು ಖರೀದಿಸುತ್ತಾರೆ. ಇದು ನೇರ ನಗದು ವಹಿವಾಟನ್ನು ತಪ್ಪಿಸುತ್ತದೆ ಮತ್ತು ವಸ್ತುಗಳ ಅಳವಡಿಕೆಯವರೆಗಿನ 100% ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
- ಮೂಲ ಉದ್ದೇಶ: ಸ್ಥಳೀಯ ಪಂಚಾಯಿತಿಗಳಿಗೆ ಅಗತ್ಯವಿರುವ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಒದಗಿಸುವ ಮೂಲಕ ಗ್ರಾಮೀಣ ಡಿಜಿಟಲ್ ಅಂತರವನ್ನು ನಿವಾರಿಸುವುದು ಇದರ ಪ್ರಮುಖ ಗುರಿಯಾಗಿದೆ.
- ಆಡಳಿತಾತ್ಮಕ ಹೊಂದಾಣಿಕೆ: ಸಂವಿಧಾನದ 73 ನೇ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ವಿಕೇಂದ್ರೀಕೃತ ಆಡಳಿತವನ್ನು ಬೆಂಬಲಿಸಲು, ಇ-ಗ್ರಾಮ್ ಸ್ವರಾಜ್ನಂತಹ (e-GramSwaraj) ಡಿಜಿಟಲ್ ಸ್ಥಳೀಯ-ಸಂಸ್ಥೆಗಳ ಚೌಕಟ್ಟುಗಳೊಂದಿಗೆ ಇದು ಸಂಯೋಜನೆಗೊಳ್ಳುತ್ತದೆ.
ILO ಸಮಾವೇಶ ಸಂಖ್ಯೆ 193
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿ:
- ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ILO) ಜೂನ್ 12, 2026 ರಂದು “ಪ್ಲಾಟ್ಫಾರ್ಮ್ ಆರ್ಥಿಕತೆಯಲ್ಲಿ ಯೋಗ್ಯ ಕೆಲಸ” (Decent Work in the Platform Economy) ಎಂಬ ಶೀರ್ಷಿಕೆಯ ಸಮಾವೇಶ ಸಂಖ್ಯೆ 193 ಅನ್ನು ಅಧಿಕೃತವಾಗಿ ಅಂಗೀಕರಿಸಿದೆ.
- ಈ ಐತಿಹಾಸಿಕ ಒಪ್ಪಂದವು, ವಿಶ್ವಾದ್ಯಂತ ಇರುವ ಆ್ಯಪ್-ಆಧಾರಿತ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ಕಾನೂನುಬದ್ಧ ಅಂತರರಾಷ್ಟ್ರೀಯ ಒಪ್ಪಂದವನ್ನು ಪ್ರತಿನಿಧಿಸುತ್ತದೆ.
ಒಪ್ಪಂದದ ಕುರಿತು:
- ಹಕ್ಕುಗಳು: ಇದು ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಆರೋಗ್ಯ ರಕ್ಷಣೆಗಳು ಮತ್ತು ಅಲ್ಗಾರಿದಮಿಕ್ ಪಾರದರ್ಶಕತೆಯನ್ನು ಖಾತರಿಪಡಿಸುತ್ತದೆ.
- ವರ್ಗೀಕರಣ: ಪ್ಲಾಟ್ಫಾರ್ಮ್ ವ್ಯಾಖ್ಯಾನಗಳ ಆಧಾರದ ಮೇಲೆ ಅಲ್ಲದೆ, ನೈಜ ಕೆಲಸದ ಪರಿಸ್ಥಿತಿಗಳ ಆಧಾರದ ಮೇಲೆ ಉದ್ಯೋಗ ಸ್ಥಾನಮಾನವನ್ನು ಒದಗಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
- ಭಾರತದ ನಿಲುವು: ತನ್ನದೇ ಆದ ‘ಸಾಮಾಜಿಕ ಭದ್ರತಾ ಸಂಹಿತೆ’ (2020) ಚೌಕಟ್ಟಿಗೆ ಆದ್ಯತೆ ನೀಡುವ ಸಲುವಾಗಿ, ಭಾರತ ಸರ್ಕಾರವು ಈ ಒಪ್ಪಂದದ ಮತದಾನದಿಂದ ಹೊರಗುಳಿದಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)
- ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ (Specialised agency).
- ಲೀಗ್ ಆಫ್ ನೇಷನ್ಸ್ನ ಸಂಯೋಜಿತ ಸಂಸ್ಥೆಯಾಗಿ ಇದನ್ನು ವರ್ಸೈಲ್ಸ್ ಒಪ್ಪಂದದ ಮೂಲಕ 1919 ರಲ್ಲಿ ಸ್ಥಾಪಿಸಲಾಯಿತು. ತದನಂತರ ಇದು 1946 ರಲ್ಲಿ ವಿಶ್ವಸಂಸ್ಥೆಯ ಮೊದಲ ಸಂಯೋಜಿತ ವಿಶೇಷ ಸಂಸ್ಥೆಯಾಗಿ ಹೊರಹೊಮ್ಮಿತು.
- ಪ್ರಧಾನ ಕಚೇರಿ: ಜಿನೇವಾ, ಸ್ವಿಟ್ಜರ್ಲೆಂಡ್.
- ಭಾರತವು ILO ದ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
- ಉದ್ದೇಶ: ಕೆಲಸದ ಸ್ಥಳದಲ್ಲಿ ಹಕ್ಕುಗಳನ್ನು ಉತ್ತೇಜಿಸುವುದು, ಯೋಗ್ಯ ಉದ್ಯೋಗಾವಕಾಶಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು ಮತ್ತು ಕೆಲಸ-ಸಂಬಂಧಿತ ಸಮಸ್ಯೆಗಳ ಕುರಿತು ಸಂವಾದವನ್ನು ಬಲಪಡಿಸುವುದು ಇದರ ಮುಖ್ಯ ಗುರಿಯಾಗಿದೆ.
ILO ಬಿಡುಗಡೆ ಮಾಡುವ ಪ್ರಮುಖ ವರದಿಗಳು:
- ಜಾಗತಿಕ ವೇತನ ವರದಿ (Global Wage Report).
- ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ (World Employment and Social Outlook – WESO).
- ವಿಶ್ವ ಸಾಮಾಜಿಕ ರಕ್ಷಣಾ ವರದಿ (World Social Protection Report).
- ವಿಶ್ವ ಕೆಲಸದ ವರದಿ (World of Work Report).
ಪರಿಸರ ನಿರ್ವಹಣಾ ಸೂಚ್ಯಂಕ (EPI) 2026
ಪರಿಸರ
ಇದೀಗ ಸುದ್ದಿಯಲ್ಲಿ:
- ಯೇಲ್ (Yale) ವಿಶ್ವವಿದ್ಯಾಲಯವು 2026 ರ ಪರಿಸರ ನಿರ್ವಹಣಾ ಸೂಚ್ಯಂಕವನ್ನು (EPI) ಬಿಡುಗಡೆ ಮಾಡಿದ್ದು, 177 ದೇಶಗಳ ಪೈಕಿ ಭಾರತವು 176 ನೇ ಸ್ಥಾನವನ್ನು ಪಡೆದುಕೊಂಡಿದೆ.
ಪರಿಸರ ನಿರ್ವಹಣಾ ಸೂಚ್ಯಂಕ (EPI)ದ ಕುರಿತು:
- ಪ್ರಕಟಿಸುವವರು: ಇದು ದ್ವೈವಾರ್ಷಿಕ ಜಾಗತಿಕ ಸೂಚ್ಯಂಕವಾಗಿದೆ. ಇದನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ‘ಸೆಂಟರ್ ಫಾರ್ ಇಂಟರ್ನ್ಯಾಷನಲ್ ಅರ್ಥ್ ಸೈನ್ಸ್ ಇನ್ಫಾರ್ಮೇಶನ್ ನೆಟ್ವರ್ಕ್’ನ ಸಹಯೋಗದೊಂದಿಗೆ ‘ಯೇಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಲಾ ಅಂಡ್ ಪಾಲಿಸಿ’ ಅಭಿವೃದ್ಧಿಪಡಿಸಿದೆ.
- ಉದ್ದೇಶ: ರಾಷ್ಟ್ರಗಳು ಪರಿಸರದ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಚೈತನ್ಯವನ್ನು ಎಷ್ಟು ಪರಿಣಾಮಕಾರಿಯಾಗಿ ರಕ್ಷಿಸುತ್ತವೆ ಎಂಬುದನ್ನು ಇದು ಅಳೆಯುತ್ತದೆ.
ಪ್ರಮುಖ ಅಂಶಗಳು (EPI 2026)
- ಎಸ್ಟೋನಿಯಾ 74.79 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ದೇಶವಾಗಿದೆ.
ಭಾರತಕ್ಕೆ ಸಂಬಂಧಿಸಿದ ಅಂಶಗಳು (2026)
- ಭಾರತವು 22.46 ಅಂಕಗಳೊಂದಿಗೆ 177 ದೇಶಗಳ ಪೈಕಿ 176 ನೇ ಸ್ಥಾನದಲ್ಲಿದೆ.
- ಈ ಹಿಂದೆ, ಭಾರತವು 2016 ರಲ್ಲಿ 141 ನೇ, 2018 ರಲ್ಲಿ 177 ನೇ, 2020 ರಲ್ಲಿ 168 ನೇ, 2022 ರಲ್ಲಿ 180 ನೇ ಮತ್ತು 2024 ರಲ್ಲಿ 176 ನೇ ಶ್ರೇಯಾಂಕವನ್ನು ಪಡೆದಿತ್ತು.
ಕಾವೇರಿ ನದಿ
ಭೂಗೋಳ
ಇದೀಗ ಸುದ್ದಿಯಲ್ಲಿ:
- ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕೃತ ಪತ್ರ ಬರೆಯುವ ಮೂಲಕ ತಮ್ಮ ಮನವಿಯನ್ನು ಔಪಚಾರಿಕಗೊಳಿಸಿದ್ದಾರೆ.
- ಕಾವೇರಿ ಜಲ ವಿವಾದ ನ್ಯಾಯಮಂಡಳಿಯ (CWDT) ಅಂತಿಮ ತೀರ್ಪು ಮತ್ತು ಸರ್ವೋಚ್ಚ ನಾಯಾಲಯದ 2018 ರ ತೀರ್ಪಿಗೆ ಕಟ್ಟುನಿಟ್ಟಾಗಿ ಹೊಂದಿಕೆಯಾಗದ ಹೊರತು, ಕರ್ನಾಟಕದ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಯಾವುದೇ ಶಾಸನಬದ್ಧ ಅಥವಾ ಆಡಳಿತಾತ್ಮಕ ಅನುಮೋದನೆಗಳನ್ನು ನಿರಾಕರಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾವೇರಿ ನದಿಯ ಬಗ್ಗೆ:
- ಕಾವೇರಿಯು ದಕ್ಷಿಣ ಭಾರತದ ಅಂತರರಾಜ್ಯ ನದಿಯಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುವ ಪ್ರಮುಖ ಪೂರ್ವಾಭಿಮುಖವಾಗಿ ಹರಿಯುವ ಪರ್ಯಾಯ ದ್ವೀಪದ ನದಿಗಳಲ್ಲಿ ಒಂದಾಗಿದೆ.
- ಇದು ಕರ್ನಾಟಕದ ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಬೆಟ್ಟಗಳ ತಲಕಾವೇರಿಯಲ್ಲಿ ಉಗಮಿಸುತ್ತದೆ.
- ಕಾವೇರಿ ನದಿ ಜಲಾನಯನ ಪ್ರದೇಶವು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಹರಡಿದ್ದು, ಸುಮಾರು 81,155 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ.
- ಈ ನದಿಯು ಒಟ್ಟು ಸುಮಾರು 800 ಕಿ.ಮೀ. ಉದ್ದವನ್ನು ಹೊಂದಿದೆ.
ಪ್ರಮುಖ ಉಪನದಿಗಳು:
- ಎಡದಂಡೆ ಉಪನದಿಗಳು: ಹಾರಂಗಿ, ಹೇಮಾವತಿ, ಶಿಂಷಾ ಮತ್ತು ಅರ್ಕಾವತಿ.
- ಬಲದಂಡೆ ಉಪನದಿಗಳು: ಲಕ್ಷ್ಮಣತೀರ್ಥ, ಕಬಿನಿ, ಸುವರ್ಣಾವತಿ, ಭವಾನಿ, ನೊಯಲ್ ಮತ್ತು ಅಮರಾವತಿ.
ಪಿಎಂ ಕೇರ್ ನಿಧಿ (PM CARE Fund)
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿ:
- 2022-23ರ ಆರ್ಥಿಕ ವರ್ಷದ ಕೊನೆಯ ಪ್ರಕಟಣೆಯ ನಂತರ ಪಿಎಂ ಕೇರ್ ನಿಧಿ (PM CARE Fund) ಯಾವುದೇ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳನ್ನು ಸಾರ್ವಜನಿಕಗೊಳಿಸಿಲ್ಲ.
ಪಿಎಂ ಕೇರ್ ನಿಧಿ ಮತ್ತು PMNRF ನಡುವಿನ ವ್ಯತ್ಯಾಸಗಳು:
|
ಲಕ್ಷಣ |
ಪಿಎಂ ಕೇರ್ ನಿಧಿ (PM CARE Fund) |
PMNRF ನಿಧಿ |
|
ಪೂರ್ಣ ರೂಪ |
ತುರ್ತು ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿಯವರ ನಾಗರಿಕ ನೆರವು ಮತ್ತು ಪರಿಹಾರ ನಿಧಿ (PM CARES Fund) |
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) |
|
ಉದ್ದೇಶ |
ತುರ್ತು ಮತ್ತು ಸಂಕಷ್ಟದ ಪರಿಸ್ಥಿತಿಗಳು (ಉದಾ: COVID-19 ಮತ್ತು ಭವಿಷ್ಯದ ಬಿಕ್ಕಟ್ಟುಗಳು). |
ವಿಪತ್ತು ಪರಿಹಾರ, ವೈದ್ಯಕೀಯ ನೆರವು ಮತ್ತು ಐತಿಹಾಸಿಕ ನಿರಾಶ್ರಿತರ ಬೆಂಬಲ. |
|
ಸ್ಥಾಪನೆ |
27 ಮಾರ್ಚ್ 2020. |
ಜನವರಿ 1948. |
|
ಆಡಳಿತ |
ಟ್ರಸ್ಟಿಗಳು: ಪ್ರಧಾನಿ, ಗೃಹ, ಹಣಕಾಸು ಮತ್ತು ರಕ್ಷಣಾ ಸಚಿವರು. |
ಸಂಪೂರ್ಣವಾಗಿ ಪ್ರಧಾನ ಮಂತ್ರಿಯವರಿಂದ ನಿರ್ವಹಿಸಲ್ಪಡುತ್ತದೆ. |
|
ಬಳಕೆ |
ಆರೋಗ್ಯ ಮೂಲಸೌಕರ್ಯ, ಸಾಂಕ್ರಾಮಿಕ ರೋಗದ ಪ್ರತಿಕ್ರಿಯೆ ಮತ್ತು ಪರಿಹಾರ. |
ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಗಲಭೆಗಳ ಸಂತ್ರಸ್ತರಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗಳಿಗಾಗಿ. |
|
ತೆರಿಗೆ ವಿನಾಯಿತಿಗಳು |
80G ತೆರಿಗೆ ವಿನಾಯಿತಿಗಳು ಮತ್ತು CSR ಕಡಿತಗಳಿಗೆ ಅರ್ಹವಾಗಿದೆ. |
80G ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿದೆ; ಆದರೆ CSR ಕಡಿತಗಳಿಗೆ ಅರ್ಹವಾಗಿಲ್ಲ. |
|
ವಿದೇಶಿ ದೇಣಿಗೆಗಳು |
FCRA, 2010 ರ ಅಡಿಯಲ್ಲಿ ಅನುಮತಿಸಲಾಗಿದೆ. |
FCRA, 2010 ರ ಅಡಿಯಲ್ಲಿ ಅನುಮತಿಸಲಾಗಿದೆ. |
|
ಲೆಕ್ಕಪರಿಶೋಧನೆ |
M/S SARC ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ನಿಂದ ಲೆಕ್ಕಪರಿಶೋಧನೆ ಮಾಡಲ್ಪಡುತ್ತದೆ. |
ಸ್ವತಂತ್ರ ಲೆಕ್ಕಪರಿಶೋಧಕರಿಂದ (ಪ್ರಸ್ತುತ M/S SARC ಅಸೋಸಿಯೇಟ್ಸ್) ಲೆಕ್ಕಪರಿಶೋಧನೆ ಮಾಡಲ್ಪಡುತ್ತದೆ. |
|
RTI ವ್ಯಾಪ್ತಿ |
ಮಾಹಿತಿ ಹಕ್ಕು ಕಾಯ್ದೆಯ (RTI Act) ವ್ಯಾಪ್ತಿಯಿಂದ ಹೊರಗಿದೆ. |
ಮಾಹಿತಿ ಹಕ್ಕು ಕಾಯ್ದೆಯ (RTI Act) ವ್ಯಾಪ್ತಿಯಿಂದ ಹೊರಗಿದೆ. |
|
ಸರ್ಕಾರಿ ಮೇಲ್ವಿಚಾರಣೆ |
ಸಂಸತ್ತು ಮತ್ತು CAG ನಿಯಂತ್ರಣದಿಂದ ವಿನಾಯಿತಿ ಪಡೆದಿದೆ. |
ಸಂಸತ್ತು ಮತ್ತು CAG ನಿಯಂತ್ರಣದಿಂದ ವಿನಾಯಿತಿ ಪಡೆದಿದೆ. |















ನಿಮ್ಮದೊಂದು ಉತ್ತರ