Blog

  • ಮನಾಸ್‌ಬಲ್ ಸರೋವರ | ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆ (WAICO) | ಹೂಡಿಕೆ ಸ್ನೇಹಿ ಸೂಚ್ಯಂಕ (IFI) | ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM) | ICMR i-DRONE ಉಪಕ್ರಮ  | ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್’ (ASW Shallow Water Craft Malvan)

    ಮನಾಸ್‌ಬಲ್ ಸರೋವರ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ವಲಸೆ ಹಕ್ಕಿಗಳ ಆಗಮನದಿಂದ ಮನಾಸ್‌ಬಲ್ ಸರೋವರವು ಪರಿಸರ ಚೇತರಿಕೆಯ ಹಾದಿಯಲ್ಲಿದೆ ಎಂದು ಗುರುತಿಸಲಾಗಿದೆ.

    ಮನಾಸ್‌ಬಲ್ ಸರೋವರದ ಬಗ್ಗೆ:

    • ಸ್ಥಳ: ಇದು ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿದೆ.
    • ಇದು ಭಾರತದ ಅತ್ಯಂತ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರವಾಗಿದ್ದು, 13 ಮೀಟರ್ (43 ಅಡಿ) ಆಳವನ್ನು ಹೊಂದಿದೆ.
    • ವಿಶೇಷತೆ: ಇದನ್ನು “ಎಲ್ಲಾ ಕಾಶ್ಮೀರ ಸರೋವರಗಳ ಅತ್ಯುನ್ನತ ರತ್ನ (Supreme Gem of all Kashmir Lakes)” ಎಂದು ಕರೆಯಲಾಗುತ್ತದೆ.
    • ಅನನ್ಯತೆ: ಇದು ತನ್ನ ಶುದ್ಧ ನೀರು, ಬೇಸಿಗೆಯ ವ್ಯಾಪಕವಾಗಿ ಅರಳುವ ಕಮಲದ ಹೂವುಗಳು ಮತ್ತು ಪಕ್ಷಿ ವೀಕ್ಷಣೆಯ ಅವಕಾಶಗಳಿಗೆ ಪ್ರಸಿದ್ಧವಾಗಿದೆ.

    ಲಕ್ಷಣಗಳು:

    • ಸ್ಥಳ ಮತ್ತು ಎತ್ತರ: ಇದು 1,585 ರಿಂದ 1,600 ಮೀಟರ್ ಎತ್ತರದಲ್ಲಿರುವ ಝೇಲಂ ಕಣಿವೆಯಲ್ಲಿ ನೆಲೆಗೊಂಡಿದೆ.
    • ಇದೊಂದು ಬೆಚ್ಚಗಿನ ಮೋನೊಮಿಕ್ಟಿಕ್ ಸರೋವರ (ವರ್ಷಕ್ಕೊಮ್ಮೆ ಮಾತ್ರ ಸಂಪೂರ್ಣವಾಗಿ ಪರಿಚಲನೆಯಾಗುತ್ತದೆ) ಆಗಿದೆ.
    • ಸ್ಥಳ ಸ್ವರೂಪ: ಈ ಸರೋವರವು ಪೂರ್ವದಲ್ಲಿ ಬಾಲದರ್ ಪರ್ವತಗಳು, ಉತ್ತರದಲ್ಲಿ ಕರೇವಾ ಪ್ರಸ್ಥಭೂಮಿ ಮತ್ತು ದಕ್ಷಿಣದಲ್ಲಿ ಅಹತುಂಗ್ ಬೆಟ್ಟಗಳಿಂದ ಆವೃತವಾಗಿದೆ.
    • ಜೀವವೈವಿಧ್ಯತೆ: ಇದು ಕಾಶ್ಮೀರದಲ್ಲಿ ವಲಸೆ ಬರುವ ಜಲಚರ ಪಕ್ಷಿಗಳಿಗೆ ಒಂದು ಪ್ರಮುಖ ನೈಸರ್ಗಿಕ ಆಶ್ರಯತಾಣವಾಗಿದ್ದು, ಮಲ್ಲಾರ್ಡ್‌ಗಳು, ಬಿಳಿ ತಲೆಯ ಬಾತುಕೋಳಿಗಳು ಮತ್ತು ಗೋಲ್ಡನ್ ಈಗಲ್‌ಗಳನ್ನು (Golden Eagles) ಒಳಗೊಂಡಂತೆ ಹಲವಾರುವ ಪ್ರಭೇದಗಳನ್ನು ಬೆಂಬಲಿಸುತ್ತದೆ.
    • ಆರ್ಥಿಕ ಮೌಲ್ಯ: ಇದು ಮೀನುಗಾರಿಕೆ ಮತ್ತು ಸ್ಥಳೀಯವಾಗಿ ‘ನಾದ್ರು’ ಎಂದು ಕರೆಯಲ್ಪಡುವ ಕಮಲದ ಬೇರುಗಳ ಕೊಯ್ಲಿನ ಮೂಲಕ ಸ್ಥಳೀಯರ ಜೀವನೋಪಾಯವನ್ನು ಬೆಂಬಲಿಸುತ್ತದೆ.

    ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆ (WAICO)

    ಅಂತರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಚೀನಾ 2026 ರ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ, ಶಾಂಘೈನಲ್ಲಿ ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯನ್ನು (WAICO) ಅಧಿಕೃತವಾಗಿ ಪ್ರಾರಂಭಿಸಿದೆ.

    ವೈಕೊ (WAICO) ಸಂಸ್ಥೆಯ ಬಗ್ಗೆ:

    • ಇದು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಕೃತಕ ಬುದ್ಧಿಮತ್ತೆ (AI) ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಹಂಚಿಕೆಯ ಆಡಳಿತ ಮಾನದಂಡಗಳಿಗಾಗಿ ಸ್ಥಾಪಿಸಲಾದ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
    • ಪ್ರಧಾನ ಕಚೇರಿ: ಇದರ ಪ್ರಧಾನ ಕಚೇರಿ ಶಾಂಘೈನಲ್ಲಿದೆ.
    • ಅನನ್ಯತೆ: ಜಾಗತಿಕ ದಕ್ಷಿಣದ (Global South) ರಾಷ್ಟ್ರಗಳಿಗಾಗಿಯೇ ನೇರವಾಗಿ ಗುರಿಯಿಟ್ಟುಕೊಂಡು ಸ್ಥಾಪಿಸಲಾದ ಈ ರೀತಿಯ ಮೊದಲ ಸ್ಥಾಯಿ ಸಂಸ್ಥೆ ಇದಾಗಿದೆ.
    • ಸದಸ್ಯರು: ಇದು 29 ರಾಷ್ಟ್ರಗಳನ್ನು ಸದಸ್ಯರನ್ನಾಗಿ ಹೊಂದಿದೆ.

    ಪ್ರಾಮುಖ್ಯತೆ:

    • ಚೀನಾ 5,000 ಕೃತಕ ಬುದ್ಧಿಮತ್ತೆ (AI) ತರಬೇತಿ ಅವಕಾಶಗಳನ್ನು ಒದಗಿಸಲಿದೆ ಮತ್ತು ASEAN, ಆಫ್ರಿಕನ್ ಒಕ್ಕೂಟ, BRICS, ಶಾಂಘೈ ಸಹಕಾರ ಸಂಸ್ಥೆ (SCO) ಹಾಗೂ ಅರಬ್ ರಾಷ್ಟ್ರಗಳ ಒಕ್ಕೂಟದೊಂದಿಗೆ ಜಂಟಿ AI ಸಹಕಾರ ಕೇಂದ್ರಗಳನ್ನು ಸ್ಥಾಪಿಸಲಿದೆ.
    • ಇದು ಮುಕ್ತ ಮೂಲದ(Open-source) ಕೃತಕ ಬುದ್ಧಿಮತ್ತೆ ಮಾದರಿಗಳು, ತಂತ್ರಜ್ಞಾನ ಹಂಚಿಕೆ ಮತ್ತು ಸಹಯೋಗದ AI ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
    • ಈ ವೇದಿಕೆಯು ಜಾಗತಿಕ ದಕ್ಷಿಣದೊಂದಿಗೆ ಜಾಗತಿಕ AI ಆಡಳಿತದಲ್ಲಿ ಚೀನಾದ ಪ್ರಭಾವವನ್ನು ಬಲಪಡಿಸುತ್ತದೆ.

    ಹೂಡಿಕೆ ಸ್ನೇಹಿ ಸೂಚ್ಯಂಕ (IFI)

    ವರದಿ ಮತ್ತು ಸೂಚ್ಯಂಕ

    ಇದೀಗ ಸುದ್ದಿಯಲ್ಲಿ:

    • ನೀತಿ (NITI) ಆಯೋಗವು “ಹೂಡಿಕೆ ಸ್ನೇಹಿ ಸೂಚ್ಯಂಕ (IFI- Investment Friendliness Index)” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

    ಹೂಡಿಕೆ ಸ್ನೇಹಿ ಸೂಚ್ಯಂಕ (IFI)ದ ಬಗ್ಗೆ:

    • ಉದ್ದೇಶ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೂಡಿಕೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಎಷ್ಟು ಪರಿಣಾಮಕಾರಿಯಾಗಿ ಸೃಷ್ಟಿಸುತ್ತವೆ, ಸಕ್ರಿಯಗೊಳಿಸುತ್ತವೆ ಮತ್ತು ಉಳಿಸಿಕೊಳ್ಳುತ್ತವೆ ಎಂಬುದನ್ನು ಇದು ಮೌಲ್ಯಮಾಪನ ಮಾಡುತ್ತದೆ.
    • ಮಾನದಂಡಗಳು: ಇದು ಪ್ರಮುಖವಾಗಿ ಮೂಲಸೌಕರ್ಯ, ಉದ್ಯಮಸ್ನೇಹಿ ವಾತಾವರಣ, ಸಂಪನ್ಮೂಲಗಳು, ಸರ್ಕಾರಿ ನೀತಿ, ಸರಳ ನಿಯಂತ್ರಣ ವ್ಯವಸ್ಥೆ, ಸಾಂಸ್ಥಿಕ ಪರಿಸರ, ಆರ್ಥಿಕ ಆರೋಗ್ಯ ಮತ್ತು ಪರಿಸರದ ಚೇತರಿಕೆಯನ್ನು ಒಳಗೊಂಡಿದೆ.
    • ರಾಜ್ಯಗಳ ವರ್ಗೀಕರಣ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನಾಲ್ಕು ಕಾರ್ಯಕ್ಷಮತೆಯ ವರ್ಗಗಳಾಗಿ ವಿಂಗಡಿಸಲಾಗಿದೆ:
      1. ಉನ್ನತ ಸಾಧಕ ರಾಜ್ಯಗಳು (Top Performers – 50 ಕ್ಕಿಂತ ಹೆಚ್ಚಿನ ಅಂಕಗಳು).
      2. ಮುಂಚೂಣಿಯಲ್ಲಿರುವ ರಾಜ್ಯಗಳು  (Frontrunners – 45 ರಿಂದ 50 ಅಂಕಗಳು).
      3. ಉದಯೋನ್ಮುಖ ಸಾಧಕ ರಾಜ್ಯಗಳು (Emerging Performers – 40 ರಿಂದ 45 ಕ್ಕಿಂತ ಕಡಿಮೆ ಅಂಕಗಳು).
      4. ಆಕಾಂಕ್ಷಿ ರಾಜ್ಯಗಳು (Aspiring States – 40 ಕ್ಕಿಂತ ಕಡಿಮೆ ಅಂಕಗಳು).
    • ದೊಡ್ಡ ರಾಜ್ಯಗಳ ಪೈಕಿ, ಗುಜರಾತ್ ಮೊದಲ ಸ್ಥಾನವನ್ನು ಪಡೆದಿದ್ದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಇವು ಸಮಗ್ರ ಸೂಚ್ಯಂಕದಲ್ಲೂ ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳಾಗಿವೆ.
    • ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳ ವಿಭಾಗದಲ್ಲಿ, ಉತ್ತರಾಖಂಡ ಅತ್ಯುನ್ನತ ಶ್ರೇಣಿಯ ರಾಜ್ಯವಾಗಿ ಹೊರಹೊಮ್ಮಿದೆ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ನಂತರದ ಸ್ಥಾನಗಳನ್ನು ಪಡೆದಿವೆ.
    • ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಗೋವಾ ಅಗ್ರಸ್ಥಾನದಲ್ಲಿದೆ, ದೆಹಲಿ ಮತ್ತು ಚಂಡೀಗಢ ನಂತರದ ಸ್ಥಾನಗಳಲ್ಲಿವೆ.

    ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸರ್ಕಾರವು ಹರ್ಜಿತ್ ಸಿಂಗ್ ಗ್ರೆವಾಲ್ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (NCM) ಅಧ್ಯಕ್ಷರನ್ನಾಗಿ ನೇಮಿಸಿದೆ.

    ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)ದ ಬಗ್ಗೆ:

    • ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992 ರ ಅಡಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು (NCM) ಸ್ಥಾಪಿಸಿದೆ.
    • ಮೊದಲ ಶಾಸನಬದ್ಧ ರಾಷ್ಟ್ರೀಯ ಆಯೋಗವನ್ನು 1993 ರಲ್ಲಿ ರಚಿಸಲಾಯಿತು.
    • ಆರಂಭದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಝೋರಾಸ್ಟ್ರಿಯನ್ನರು (ಪಾರ್ಸಿಗಳು) ಸೇರಿದಂತೆ ಐದು ಧಾರ್ಮಿಕ ಸಮುದಾಯಗಳನ್ನು ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳೆಂದು ಅಧಿಸೂಚಿಸಿತ್ತು.
    • 2014 ರಲ್ಲಿ, ಜೈನರನ್ನು ಕೂಡ ಮತ್ತೊಂದು ಅಲ್ಪಸಂಖ್ಯಾತ ಸಮುದಾಯವೆಂದು ಅಧಿಸೂಚಿಸಲಾಯಿತು.
    • ಸಂಯೋಜನೆ: ಈ ಆಯೋಗವು ಒಬ್ಬ ಅಧ್ಯಕ್ಷರು, ಒಬ್ಬ ಉಪಾಧ್ಯಕ್ಷರು ಮತ್ತು ಐದು ಜನ ಸದಸ್ಯರನ್ನು ಒಳಗೊಂಡಿದೆ.
    • ಉದ್ದೇಶ: ಭಾರತದ ಸಂವಿಧಾನ ಹಾಗೂ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು ರೂಪಿಸಿದ ಕಾನೂನುಗಳಲ್ಲಿ ಒದಗಿಸಲಾದ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ರಕ್ಷಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

    ICMR i-DRONE ಉಪಕ್ರಮ 

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ತನ್ನ ಐ-ಡ್ರೋನ್ ಉಪಕ್ರಮದ ಅಡಿಯಲ್ಲಿ, ದೂರದ ಪ್ರದೇಶಗಳಲ್ಲಿ ಕ್ಷಯರೋಗ (TB) ರೋಗನಿರ್ಣಯದ ಪ್ರವೇಶವನ್ನು ಸುಧಾರಿಸಲು ಡ್ರೋನ್ ಆಧಾರಿತ ಸಾರಿಗೆಯ ಮೂಲಕ ಕಫದ ಮಾದರಿಗಳನ್ನು ಯಶಸ್ವಿಯಾಗಿ ಸಾಗಿಸಿ ಪ್ರದರ್ಶಿಸಿದೆ.

    ಐ-ಡ್ರೋನ್ (i-DRONE) ಉಪಕ್ರಮದ ಬಗ್ಗೆ:

    • ಪೂರ್ಣ ರೂಪ: ICMR’s Drone Response and Outreach for North East (i-DRONE).
    • ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ: ಇದು ಮಣಿಪುರ ಮತ್ತು ನಾಗಾಲ್ಯಾಂಡ್‌ನ ದೂರದ ಪ್ರದೇಶಗಳಿಗೆ ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ತಲುಪಿಸಲು ಡ್ರೋನ್‌ಗಳ ಬಳಕೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶವನ್ನು ಹೊಂದಿದೆ.
    • ಐ-ಡ್ರೋನ್ ಯೋಜನೆಯು ಕ್ಷಯರೋಗದ ರೋಗನಿರ್ಣಯಕ್ಕಾಗಿ ಕಫದ ಮಾದರಿಗಳನ್ನು ಸಾಗಿಸಲು, ತೆಲಂಗಾಣದಲ್ಲಿ 60 ಉಪ-ಕೇಂದ್ರಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಾಲ್ಕು TB ಘಟಕಗಳನ್ನು ಸಂಪರ್ಕಿಸುವ ಹಬ್ ಮತ್ತು ಸ್ಪೋಕ್ (hub and spoke) ಡ್ರೋನ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಿದೆ.
    • ಫಲಿತಾಂಶಗಳು: ರೋಗನಿರ್ಣಯಕ್ಕೆ ಬೇಕಾಗುವ ಸರಾಸರಿ ಸಮಯವನ್ನು 15 ದಿನಗಳಿಂದ 5 ದಿನಗಳಿಗೆ ಇಳಿಸಲಾಗಿದೆ.
    • ರೋಗಿಗಳ ಜೇಬಿನಿಂದ ಭರಿಸಬೇಕಾದ ಸರಾಸರಿ ವೆಚ್ಚವು (OOPE) ₹9,451 ರಿಂದ ಸುಮಾರು ₹91 ಕ್ಕೆ ಇಳಿದಿದೆ ಹಾಗೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಪ್ರಯಾಣದ ವೆಚ್ಚ ಶೂನ್ಯವಾಗಿದೆ.

    ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್’ (ASW Shallow Water Craft Malvan)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ನೌಕಾದಳವು ತನ್ನ ಎರಡನೇ ‘ಮಾಹೆ-ವರ್ಗದ’ ಜಲಾಂತರ್ಗಾಮಿ ವಿರೋಧಿ ಕದನ ನೌಕೆಯಾದ (ASW-SWC) ‘ಮಾಲ್ವಾನ್’ (Malvan) ಅನ್ನು ಸೇವೆಗೆ ನಿಯೋಜಿಸಲು ಸಜ್ಜಾಗಿದೆ.

    ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್ ಬಗ್ಗೆ:

    • ಈ ಸಮರನೌಕೆಯನ್ನು ಕೊಚ್ಚಿಯ ‘ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್’ (CSL) ನಿರ್ಮಿಸಿದೆ.
    • ಮಾಲ್ವಾನ್ ಯುದ್ಧನೌಕೆಯು ಶೇಕಡಾ 80 ಕ್ಕಿಂತ ಹೆಚ್ಚು ದೇಶಿಯ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ.
    • ಇದು ‘ಆತ್ಮನಿರ್ಭರ್ ಭಾರತ್’ ಉಪಕ್ರಮದ ಅಡಿಯಲ್ಲಿ ಯುದ್ಧನೌಕೆಯ ವಿನ್ಯಾಸ, ನಿರ್ಮಾಣ ಮತ್ತು ತಂತ್ರಜ್ಞಾನ ಏಕೀಕರಣದಲ್ಲಿ ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
    • ಕಾರ್ಯ: ಕರಾವಳಿ ಮತ್ತು ಆಳವಿಲ್ಲದ ನೀರಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುವುದು ಹಾಗೂ ನೌಕಾದಳದ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಕಾರ್ಯವಾಗಿದೆ.
    • ಪ್ರಸ್ತುತ ಹಳೆಯದಾಗುತ್ತಿರುವ ‘ಅಭಯ್-ವರ್ಗದ’ ಯುದ್ಧನೌಕೆ ಬದಲಿಗೆ ಈ ಹೊಸ ‘ಮಾಹೆ- ವರ್ಗದ’ ASW-SWC ನೌಕೆಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

  • ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ | ಸೈಕ್ಲೋಸ್ಪೊರಿಯಾಸಿಸ್ (Cyclosporiasis) | ICAR ನ 98ನೇ ಸಂಸ್ಥಾಪನಾ ದಿನ

    ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)ದ 7ನೇ ಆಡಳಿತ ಮಂಡಳಿ ಸಭೆಯು ಸಾಂಪ್ರದಾಯಿಕ ಪರಿಹಾರ ಅರಣ್ಯೀಕರಣದಿಂದ ಭೂದೃಶ್ಯ-ಆಧಾರಿತ ಪರಿಸರ ಮರುಸ್ಥಾಪನೆಯತ್ತ ಬದಲಾವಣೆಯನ್ನು ಗುರುತಿಸಿದೆ.

    ಸಭೆಯ ಫಲಿತಾಂಶಗಳು:

    • ಸುಮಾರು 15,000 ಪವಿತ್ರ ತೋಪುಗಳನ್ನು (ಆಸ್ತಾ ವನಗಳು – Aastha Vans) ಸಂರಕ್ಷಿಸಲು ₹3,000 ಕೋಟಿ ಆರಂಭಿಕ ನಿಧಿಯೊಂದಿಗೆ (2026-31) ಆಸ್ತಾ ವನ್ ಸಂರಕ್ಷಣ್ ಯೋಜನೆಯನ್ನು (AVSY) ವನ್ನು ಅನುಮೋದಿಸಲಾಗಿದೆ.
    • ಮಿಸ್ಟಿ (MISHTI – Mangrove Initiative for Shoreline Habitats and Tangible Incomes) ಯೋಜನೆಯನ್ನು 2029 ರವರೆಗೆ ಮೂರು ವರ್ಷಗಳ ಕಾಲ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ ₹500 ಕೋಟಿ ಸೇರಿಸುವುದರೊಂದಿಗೆ ಒಟ್ಟು ಅನುದಾನವನ್ನು ₹600 ಕೋಟಿಗೆ ಹೆಚ್ಚಿಸಲಾಗಿದೆ.
    • ನಾಲ್ಕು ವನ್ಯಜೀವಿ ಚೇತರಿಕೆ ಕಾರ್ಯಕ್ರಮಗಳನ್ನು ಅನುಮೋದಿಸಲಾಗಿದೆ.
    • ಉದ್ದೇಶ – ವೈಜ್ಞಾನಿಕ ಮೇಲ್ವಿಚಾರಣೆ, ಬೇಟೆ ತಡೆಗಟ್ಟುವ ಕ್ರಮಗಳು ಮತ್ತು ಆವಾಸಸ್ಥಾನ ಮರುಸ್ಥಾಪನೆಯನ್ನು ಬಲಪಡಿಸುವುದು:
    • ಗಂಗಾ ನದಿ ಡಾಲ್ಫಿನ್‌ಗಳು: ಪ್ರಮುಖ ಸಿಹಿನೀರಿನ ನದಿ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಚೇತರಿಕೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
    • ಪ್ರಾಜೆಕ್ಟ್ ಸ್ನೋ ಲೆಪರ್ಡ್ (ಹಿಮಚಿರತೆ) ಹಂತ-II:  ಹಿಮಾಲಯದಲ್ಲಿ 2ನೇ ರಾಷ್ಟ್ರವ್ಯಾಪಿ ಜನಸಂಖ್ಯಾ ಅಂದಾಜು ಕಾರ್ಯಾಚರಣೆಯನ್ನು ಇದು ಒಳಗೊಂಡಿದೆ.
    • ಭಾರತೀಯ ಘೇಂಡಾಮೃಗ: ಆವಾಸಸ್ಥಾನ ರಕ್ಷಣೆ ಮತ್ತು ಬೇಟೆ ತಡೆಗಟ್ಟುವಿಕೆ ಜಾರಿಗಾಗಿ ಸಂರಕ್ಷಣಾ ಯೋಜನೆಯನ್ನು ರೂಪಿಸಲಾಗಿದೆ.
    • ಕಾಡು ಕೋಣ: ಉಳಿದಿರುವ ಸಂಖ್ಯೆಯನ್ನು (ಸಂತತಿಯನ್ನು) ಭದ್ರಪಡಿಸಲು ವೈಜ್ಞಾನಿಕ ಆವಾಸಸ್ಥಾನ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.
    • ಸಂಗೈ (Sangai – ಹುಬ್ಬು-ಕೊಂಬಿನ ಜಿಂಕೆ): ಸಂರಕ್ಷಣೆಗಾಗಿ ನಿರಂತರ ಆರ್ಥಿಕ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲಾಗುವುದು.

    ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)

    • ಇದನ್ನು 2016 ರ ಪರಿಹಾರ ಅರಣ್ಯೀಕರಣ ನಿಧಿ ಕಾಯ್ದೆಯಡಿ (2018 ರಲ್ಲಿ ಜಾರಿಗೆ ಬಂದಿತು) ಸ್ಥಾಪಿಸಲಾಗಿದೆ.
    • ಉದ್ದೇಶ – ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾದ ಅರಣ್ಯ ಭೂಮಿಯ ಪರಿಸರ ಪರಿಹಾರಕ್ಕಾಗಿ ನಿಧಿಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು.
    • ಮೂಲ: ಖರ್ಚಾಗದ ಅರಣ್ಯೀಕರಣ ನಿಧಿಗಳನ್ನು ನಿರ್ವಹಿಸಲು 2006 ರ ಆದೇಶದ ಮೂಲಕ ಟಿ.ಎನ್. ಗೋದಾವರ್ಮನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾತ್ಕಾಲಿಕ ‘ಕ್ಯಾಂಪಾ(CAMPA)’ವನ್ನು ರಚಿಸಿತು.
    • ಎರಡು ಹಂತಗಳು: 

    (1) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ‘ರಾಷ್ಟ್ರೀಯ ಕ್ಯಾಂಪಾ ಪ್ರಾಧಿಕಾರ’ವು ನೀತಿಯನ್ನು ರೂಪಿಸುತ್ತದೆ, ಹಾಗೂ 

    (2) ‘ರಾಜ್ಯ ಕ್ಯಾಂಪಾ ಪ್ರಾಧಿಕಾರಗಳು’ ಕ್ಷೇತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತವೆ.

    • ಹೊಣೆಗಾರಿಕೆ: ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವ ಸಂಸ್ಥೆಗಳು ಪರ್ಯಾಯ ಭೂಮಿಯನ್ನು ಒದಗಿಸಬೇಕು, ಪರಿಹಾರ ಅರಣ್ಯೀಕರಣಕ್ಕೆ ಧನಸಹಾಯ ಮಾಡಬೇಕು ಮತ್ತು ಕಳೆದುಕೊಂಡ ಅರಣ್ಯ ಪರಿಸರ ವ್ಯವಸ್ಥೆಯ ನಿವ್ವಳ ಪ್ರಸ್ತುತ ಮೌಲ್ಯವನ್ನು (NPV) ಪಾವತಿಸಬೇಕು.
    • ನಿಧಿಯ ಬಳಕೆ: ಕೃತಕ ಮತ್ತು ನೈಸರ್ಗಿಕ ಪುನರುತ್ಪಾದನೆ, ವನ್ಯಜೀವಿ ನಿರ್ವಹಣೆ, ಜಲಾನಯನ ಪ್ರದೇಶದ ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಈ ನಿಧಿಯನ್ನು ಬಳಸಲಾಗುತ್ತದೆ.

    ಸೈಕ್ಲೋಸ್ಪೊರಿಯಾಸಿಸ್ (Cyclosporiasis)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ಅಮೆರಿಕ (USA)ದಲ್ಲಿ ಸೈಕ್ಲೋಸ್ಪೊರಿಯಾಸಿಸ್ ಕಾಯಿಲೆಯ ವ್ಯಾಪಕ ಹರಡುವಿಕೆಯ ಬಗ್ಗೆ ವರದಿಯಾಗುತ್ತಿದೆ.

    ಸೈಕ್ಲೋಸ್ಪೊರಿಯಾಸಿಸ್ ಬಗ್ಗೆ: 

    • ಕಾರಣವಾಗುವ ರೋಗಕಾರಕ: ಸೈಕ್ಲೋಸ್ಪೊರಿಯಾಸಿಸ್ ಎಂಬುದು ಸೂಕ್ಷ್ಮದರ್ಶಕೀಯ, ಏಕಕೋಶೀಯ ಪ್ರೋಟೋಜೋವಾ ಪರಾವಲಂಬಿಯಾದ ಸೈಕ್ಲೋಸ್ಪೊರಾ ಕಯೆಟಾನೆನ್ಸಿಸ್ (Cyclospora cayetanensis) ನಿಂದ ಉಂಟಾಗುವ ಆಹಾರಜನ್ಯ ಕರುಳಿನ ಕಾಯಿಲೆಯಾಗಿದೆ.
    • ಹರಡುವಿಕೆ: ಇದು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಕಟ್ಟುನಿಟ್ಟಾಗಿ ಮಲ-ಬಾಯಿ ಸಂಪರ್ಕ ಮಾರ್ಗದಲ್ಲಿ ಹರಡುತ್ತದೆ.
    • ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ: ವಿಸರ್ಜಿಸಲ್ಪಟ್ಟ ಪರಾವಲಂಬಿ ಮೊಟ್ಟೆಗಳು ಪ್ರಬುದ್ಧವಾಗಲು ಮತ್ತು ಸಾಂಕ್ರಾಮಿಕವಾಗಲು ಪರಿಸರದಲ್ಲಿ ದಿನಗಳಿಂದ ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ.
    • ಆತಿಥೇಯ ವ್ಯಾಪ್ತಿ : ಮಾನವರು ಮಾತ್ರ ಈ ರೋಗಾಣುವಿನ ತಿಳಿದಿರುವ ಆತಿಥೇಯರಾಗಿದ್ದಾರೆ.
    • ರೋಗಲಕ್ಷಣಗಳು: ತೀವ್ರವಾದ ಮತ್ತು ವಿಪರೀತವಾದ ನೀರಿನಂಶದ ಅತಿಸಾರ, ಆಯಾಸ, ಸ್ನಾಯು ಸೆಳೆತ ಮತ್ತು ತೂಕ ನಷ್ಟಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಹೆಚ್ಚಿನ ಅಪಾಯವಿರುವ ಗುಂಪುಗಳು: ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು, ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
    • ರೋಗನಿರ್ಣಯ: ದಿನನಿತ್ಯದ ಮಲ ಪರೀಕ್ಷೆಗಳಲ್ಲಿ ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ; ಇದಕ್ಕೆ ವಿಶೇಷ ಸ್ಟೈನಿಂಗ್ (special staining), UV ಫ್ಲೋರೊಸೆನ್ಸ್ ಮೈಕ್ರೋಸ್ಕೋಪಿ ಅಥವಾ PCR ಪರೀಕ್ಷೆಯ ಅಗತ್ಯವಿರುತ್ತದೆ.
    • ಚಿಕಿತ್ಸೆ: ಇದನ್ನು ಆಂಟಿಬಯೋಟಿಕ್ (ಸೂಕ್ಷ್ಮಜೀವಿ ನಿರೋಧಕ) ಟ್ರೈಮೆಥೋಪ್ರಿಮ್-ಸಲ್ಫಮೆಥೋಕ್ಸಜೋಲ್ (trimethoprim-sulfamethoxazole – TMP-SMX) ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ.

    ICAR ನ 98ನೇ ಸಂಸ್ಥಾಪನಾ ದಿನ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) 98ನೇ ಸಂಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಕೃಷಿ ಸಚಿವಾಲಯವು ವಿಕಸಿತ್ ಭಾರತ್ 2047ರ ಪ್ರಮುಖ ಆಧಾರಸ್ತಂಭವಾಗಿರುವ “ಅಭಿವೃದ್ಧಿ ಹೊಂದಿದ ಕೃಷಿ ಮತ್ತು ಸಮೃದ್ಧ ರೈತರು” ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ.

    ನಿರೀಕ್ಷಿತ ಫಲಶ್ರುತಿಗಳು: 

    • 100 ಹವಾಮಾನ-ಸ್ಮಾರ್ಟ್ ಗ್ರಾಮಗಳು: ಹವಾಮಾನ- ಚೇತರಿಕೆ ಕೃಷಿ, ಜಲ ಸಂರಕ್ಷಣೆ ಮತ್ತು ವಿಪತ್ತು-ಕಡಿತದ ಮಾದರಿಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಲು, ICAR ನ ಶತಮಾನೋತ್ಸವದ ಮೊದಲು ಕನಿಷ್ಠ 100 ಗ್ರಾಮಗಳನ್ನು ಮಾದರಿ ಹಳ್ಳಿಗಳಾಗಿ ಅಭಿವೃದ್ಧಿಪಡಿಸಲಾಗುವುದು.
    • ಒಂದು ಸಂಸ್ಥೆ-ಒಂದು ಮಹಾನ್ ಆವಿಷ್ಕಾರ (One Institute-One Grand Innovation): ಪ್ರತಿಯೊಂದು ICAR ಸಂಸ್ಥೆಯು ಮುಂದಿನ ಎರಡು ವರ್ಷಗಳೊಳಗೆ ಕನಿಷ್ಠ ಒಂದು ಪ್ರಮುಖ ತಾಂತ್ರಿಕ ಆವಿಷ್ಕಾರ, ಹೊಸ ಲಸಿಕೆ ಅಥವಾ ಹೊಸ ಬೆಳೆ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
    • ಮಿಷನ್ ICAR-100: ಬೃಹತ್ ಪ್ರಮಾಣದ ಕೃಷಿ ಪ್ರಾತ್ಯಕ್ಷಿಕೆಗಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು (KVKs) ನಾವೀನ್ಯತಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಹಾಗೂ ಪ್ರತಿಯೊಂದು KVK ಯು ಕನಿಷ್ಠ 100 ಗ್ರಾಮಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.
    • ICAR ಮುಕ್ತ ಡಿಜಿಟಲ್ ಜ್ಞಾನ ವೇದಿಕೆ: ಸ್ಮಾರ್ಟ್‌ಫೋನ್‌ಗಳ ಮೂಲಕ ರೈತರಿಗೆ ಉಚಿತ ಬೆಳೆ ಸಲಹೆಗಳು, ಮಣ್ಣು-ಪರೀಕ್ಷಾ ವರದಿಗಳು ಮತ್ತು ಕೃಷಿ ಮಾರ್ಗದರ್ಶಿ ವೀಡಿಯೊಗಳನ್ನು ಒದಗಿಸುವ ಮೊಬೈಲ್-ಆಧಾರಿತ ಮುಕ್ತ ಜ್ಞಾನ ವೇದಿಕೆಯನ್ನು ರೂಪಿಸಲಾಗುವುದು.

    ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)

    • 1929 ರಲ್ಲಿ ಸ್ಥಾಪನೆಯಾದ (ಮೂಲತಃ ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್) ಇದು ಭಾರತದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಇದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    • ಕೇಂದ್ರ ಕೃಷಿ ಸಚಿವರು ICAR ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಕೃಷಿ ಖಾತೆ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 17, ಜುಲೈ 2026

    ಮಿಲಿಟರಿ ಸಮರಾಭ್ಯಾಸಗಳು

    ಭಾರತೀಯ ನೌಕಾಸೇನೆಯಿಂದ ‘ಆಪರೇಷನ್ ಸದರ್ನ್ ರೆಡಿನೆಸ್ 26-2’ ಆತಿಥ್ಯ

    ಇದೀಗ ಸುದ್ದಿಯಲ್ಲಿ: 

    • ಬಹುರಾಷ್ಟ್ರೀಯ ಕರಾವಳಿ ಭದ್ರತಾ ತರಬೇತಿಯಾದ ಆಪರೇಷನ್ ಸದರ್ನ್ ರೆಡಿನೆಸ್ 26-2 ಅನ್ನು ಭಾರತೀಯ ನೌಕಾಸೇನೆಯು ಕೇರಳದ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್‌ನಲ್ಲಿ 2026 ಜುಲೈ 20-23 ರವರೆಗೆ ಆಯೋಜಿಸಲಿದೆ.

    ಪ್ರಮುಖ ಅಂಶಗಳು:

    • ಸಂಘಟನಾ ಚೌಕಟ್ಟು: ಈ ತರಬೇತಿಯನ್ನು ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ (CMF) ಸಹಭಾಗಿತ್ವದಲ್ಲಿ, ಭಾರತೀಯ ನೌಕಾಸೇನೆಯ ನೇತೃತ್ವದ CMF ನ ವಿಶೇಷ ತರಬೇತಿ ಪಡೆಯಾದ ಕಂಬೈನ್ಡ್ ಟಾಸ್ಕ್ ಫೋರ್ಸ್ 154 (CTF 154) ಅಡಿಯಲ್ಲಿ ನಡೆಸಲಾಗುತ್ತದೆ.
    • ಜಾಗತಿಕ ಭಾಗವಹಿಸುವಿಕೆ: ಅಮೆರಿಕ (USA), ಬ್ರಿಟನ್ (UK), ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ 25 ಕ್ಕೂ ಹೆಚ್ಚು CMF ರಾಷ್ಟ್ರಗಳು ಭಾಗವಹಿಸಲಿದ್ದು, ಕರಾವಳಿ ಜಾಗೃತಿ (MDA), ಮಾದಕವಸ್ತು ನಿರೋಧ ಮತ್ತು ಕರಾವಳಿ ಕಾನೂನು ವಿಷಯಗಳಲ್ಲಿ ಸುಧಾರಿತ ತರಬೇತಿ ನೀಡಲಾಗುತ್ತದೆ.
    • ಭಾರತದ ನೇತೃತ್ವ: ಭಾರತವು 2026 ಫೆಬ್ರವರಿಯಲ್ಲಿ ಮೊದಲ ಬಾರಿಗೆ CTF 154 ರ ಕಮಾಂಡ್ ವಹಿಸಿಕೊಂಡಿದ್ದು, ಪ್ರಸ್ತುತ ಕಮೋಡೋರ್ ಮಿಲಿಂದ್ ಎಮ್. ಮೊಕಾಶಿ ಇದರ ನೇತೃತ್ವ ವಹಿಸಿದ್ದಾರೆ.
    • CMF ಹಿನ್ನೆಲೆ: ಬಹ್ರೇನ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಇದು 47 ರಾಷ್ಟ್ರಗಳ ನೌಕಾ ಒಕ್ಕೂಟವಾಗಿದ್ದು, 3.2 ಮಿಲಿಯನ್ ಚದರ ಮೈಲಿ ಅಂತರರಾಷ್ಟ್ರೀಯ ಜಲಪ್ರದೇಶದ ಭದ್ರತೆಯನ್ನು ನಿರ್ವಹಿಸುತ್ತದೆ (ಭಾರತವು 2023 ರಲ್ಲಿ ಇದರ ಪೂರ್ಣ ಸದಸ್ಯತ್ವ ಪಡೆದಿದೆ).

    ವಿಜ್ಞಾನ ಮತ್ತು ತಂತ್ರಜ್ಞಾನ

    1. ಸ್ಕೈರೂಟ್ ಸಂಸ್ಥೆಯಿಂದ ‘ವಿಕ್ರಮ್-1’ ರಾಕೆಟ್ ಉಡಾವಣೆಗೆ ಸಿದ್ಧತೆ

    • ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace), ಭಾರತದ ಮೊಟ್ಟಮೊದಲ ಖಾಸಗಿ ನಿರ್ಮಿತ ಕಕ್ಷೀಯ ಶ್ರೇಣಿಯ (Orbital-class) ರಾಕೆಟ್ ಆದ ವಿಕ್ರಮ್-1  ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2026 ಜುಲೈ 18 ರಂದು ಉಡಾವಣೆ ಮಾಡಲಿದೆ.
    • ಈ ಐತಿಹಾಸಿಕ ಯೋಜನೆಗೆ ಮಿಷನ್ ಆಗಮನ್ ಎಂದು ಹೆಸರಿಸಲಾಗಿದ್ದು, ಇಸ್ರೋ (ISRO) ಸಂಸ್ಥೆಯ ರಾಕೆಟ್ ಕಾರ್ಯಕ್ರಮದ ಸಹಾಯವಿಲ್ಲದೆ, ಭಾರತದ ಖಾಸಗಿ ಕಂಪನಿಯೊಂದು ತನ್ನದೇ ಆದ ಸ್ವದೇಶಿ ಉಡಾವಣಾ ವಾಹನದ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಪ್ರಯತ್ನಿಸುತ್ತಿರುವ ಮೊದಲ ಸಾಹಸ ಇದಾಗಿದೆ.
    • ಈ ಉಡಾವಣಾ ದಿನಾಂಕವು 1980 ಜುಲೈ 18 ರಂದು ಭಾರತವು ಕೈಗೊಂಡ ಅತ್ಯಂತ ಮೊದಲ ಯಶಸ್ವಿ ಪ್ರಾಯೋಗಿಕ SLV-3 ರಾಕೆಟ್ ಉಡಾವಣೆಯ 46ನೇ ವಾರ್ಷಿಕೋತ್ಸವದ ದಿನದಂದೇ ನಿಗದಿಯಾಗಿದೆ.

     

    2. ‘ಪ್ರಾಜೆಕ್ಟ್ ಜೈಂಟ್’ : ಅಟ್ಲಾಂಟಿಕ್ ಸಾಗರ ಪ್ರವಾಹಗಳ ಅಧ್ಯಯನ

    • ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯು ಜಾಗತಿಕ ಹವಾಮಾನ ಸಂಶೋಧನೆಯ ಮಹತ್ವದ ಜಂಟಿ ಉಪಕ್ರಮವಾದ ಪ್ರಾಜೆಕ್ಟ್ ಜೈಂಟ್ (Project GIANT – Greenland Ice Sheet to Atlantic Tipping Points) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
    • ಇದು ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯ ನೇತೃತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ (2025-2030) ನಡೆಯಲಿರುವ ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಹಭಾಗಿತ್ವದ ಯೋಜನೆಯಾಗಿದೆ.
    • ಮುಖ್ಯ ಉದ್ದೇಶ: ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ವೇಗವಾಗಿ ಕರಗುತ್ತಿರುವುದು ಮತ್ತು ಅದರ ಪರಿಣಾಮವಾಗಿ ಸಾಗರಕ್ಕೆ ಸೇರುತ್ತಿರುವ ಸಿಹಿನೀರಿನ ಒಳಹರಿವು ಅತ್ಯಂತ ಪ್ರಮುಖವಾದ ಅಟ್ಲಾಂಟಿಕ್ ಸಾಗರದ ಪ್ರವಾಹಗಳ (ಉದಾಹರಣೆಗೆ AMOC ಪ್ರವಾಹ) ಸಂಪೂರ್ಣ ಪತನಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಈ ಯೋಜನೆ ತನಿಖೆ ಮಾಡಲಿದೆ.
  • ಅಬತ್ಸಹಾಯೇಶ್ವರರ್ ದೇವಾಲಯ | ಜಗನ್ನಾಥ ರಥಯಾತ್ರೆ | ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS) | ಸೆಮಿಕಾನ್ 2.0 | 12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಬತ್ಸಹಾಯೇಶ್ವರರ್ ದೇವಾಲಯ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ತಮಿಳುನಾಡಿನ ತುಕ್ಕಾಚಿಯಲ್ಲಿರುವ 12ನೇ ಶತಮಾನದ ಅಬತ್ಸಹಾಯೇಶ್ವರರ್ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯವು ದಶಕಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿತ್ತು. 

    ಅಬತ್ಸಹಾಯೇಶ್ವರರ್ ದೇವಾಲಯದ ಬಗ್ಗೆ:

    • ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಸಮೀಪದ ತುಕ್ಕಾಚಿ ಎಂಬಲ್ಲಿದೆ.
    • ಇದು ನಂತರದ ಚೋಳರ ಕಾಲದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದ್ದು, ಇದು ಒಂದನೇ ಕುಲೋತ್ತುಂಗ ಚೋಳ ಮತ್ತು ವಿಕ್ರಮ ಚೋಳನ ಆಳ್ವಿಕೆಗೆ ನಿಕಟವಾಗಿ ಸಂಬಂಧಿಸಿದೆ.
    • ಈ ದೇವಾಲಯವನ್ನು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಶೈಲಿಯನ್ನು ಕಾರ ಕೋವಿಲ್ ಎಂದು ಕರೆಯಲಾಗುತ್ತದೆ.
    • ಇಲ್ಲಿ ಭಗವಾನ್ ಶರಭೇಶ್ವರರ ವಿಗ್ರಹವಿದ್ದು, ಇದು ಆ ದೇವರ ಅತ್ಯಂತ ಹಳೆಯ ಚಿತ್ರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

    ದೇವಾಲಯದ ಜೀರ್ಣೋದ್ಧಾರ:

    • ದೇವಾಲಯದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು, ಅದರ ರಚನಾತ್ಮಕ ಭದ್ರತೆಯನ್ನು ಬಲಪಡಿಸಿದ ಪ್ರಯತ್ನಕ್ಕಾಗಿ, ಈ ಜೀರ್ಣೋದ್ಧಾರ ಯೋಜನೆಯು 2024ರ ‘ಯುನೆಸ್ಕೋ ಏಷ್ಯಾ ಪೆಸಿಫಿಕ್ ಅವಾರ್ಡ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಈ ಯೋಜನೆಯು ಸಾಂಪ್ರದಾಯಿಕ ದೇವಾಲಯ ನಿರ್ಮಾಣ ಪದ್ಧತಿಗಳಾದ ಸ್ಥಾಪತ್ಯ ವೇದ, ಆಗಮ ಶಾಸ್ತ್ರ ಮತ್ತು ಸುಣ್ಣದ ಗಾರೆಯ ಬಳಕೆಯನ್ನು, ಡ್ರೋನ್ ಸಮೀಕ್ಷೆ, ಡಿಜಿಟಲ್ ಮ್ಯಾಪಿಂಗ್, ಫೋಟೋಗ್ರಾಮೆಟ್ರಿ ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗಿದೆ.
    • ದೇವಾಲಯದ ಐತಿಹಾಸಿಕ ನೈಜತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಪ್ರತಿ ಗ್ರಾನೈಟ್ ಕಲ್ಲಿನ ಬ್ಲಾಕ್‌ಗೆ ಸಂಖ್ಯೆಯನ್ನು ನೀಡಿ, ಬಿಚ್ಚಿ, ನಂತರ ಅದರ ಮೂಲ ಸ್ಥಾನದಲ್ಲೇ ಮರುಜೋಡಿಸಲಾಗಿದೆ.

    ಜಗನ್ನಾಥ ರಥಯಾತ್ರೆ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧವಾದ ಭಗವಾನ್ ಜಗನ್ನಾಥನ ರಥಯಾತ್ರೆಯು ಪ್ರಾರಂಭವಾಗಿದೆ.

    ರಥಯಾತ್ರೆಯ ಬಗ್ಗೆ:

    • ಈ ರಥಯಾತ್ರೆಯನ್ನು ಗುಂಡಿಚಾ ಜಾತ್ರೆ, ಘೋಸ ಜಾತ್ರೆ ಮತ್ತು ನವದಿನ ಜಾತ್ರೆ ಎಂದೂ ಕರೆಯಲಾಗುತ್ತದೆ.
    • ಇದು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಜಗನ್ನಾಥನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಹಿಂದೂ ಹಬ್ಬವಾಗಿದೆ.

    ಜಗನ್ನಾಥ ಪುರಿ ದೇವಾಲಯಯದ ಬಗ್ಗೆ: 

    • ಶ್ರೀ ಜಗನ್ನಾಥ ಪುರಿ ದೇವಾಲಯವು ಒಡಿಶಾ ರಾಜ್ಯದ ಅತ್ಯಂತ ಆಕರ್ಷಕ ಸ್ಮಾರಕಗಳಲ್ಲಿ ಒಂದಾಗಿದೆ.
    • ಈ ದೇವಾಲಯವನ್ನು ಸಾ.ಶ 12ನೇ ಶತಮಾನದಲ್ಲಿ ಪೂರ್ವ ಗಂಗಾ ರಾಜವಂಶದ ರಾಜನಾದ ಅನಂತವರ್ಮನ್ ಚೋಡಗಂಗ ದೇವ ನಿರ್ಮಿಸಿದನು.
    • ಜಗನ್ನಾಥ ಪುರಿ ದೇವಾಲಯವನ್ನು ‘ಯಮನಿಕಾ ತೀರ್ಥ’ ಎಂದು ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಭಗವಾನ್ ಕೃಷ್ಣನೆಂದು ಕರೆಯಲ್ಪಡುವ ಭಗವಾನ್ ಜಗನ್ನಾಥನ ಉಪಸ್ಥಿತಿಯಿಂದಾಗಿ ಪುರಿಯಲ್ಲಿ ಮರಣದೇವನಾದ ‘ಯಮ’ನ ಶಕ್ತಿಯು ಶೂನ್ಯಗೊಂಡಿದೆ ಎಂಬ ಪ್ರತೀತಿಯಿದೆ.
    • ಇದು ಭಾರತದ ನಾಲ್ಕು ಪ್ರಮುಖ ಧಾಮ (ಚಾರ್ ಧಾಮ್)ಗಳಲ್ಲಿ ಒಂದಾಗಿದ್ದು, ಭಾರತದ ನಾಲ್ಕು ದಿಕ್ಕುಗಳಲ್ಲಿರುವ ಪುರಿ, ದ್ವಾರಕಾ, ಬದರಿನಾಥ್ ಮತ್ತು ರಾಮೇಶ್ವರಂ ಈ ಪಟ್ಟಿಯಲ್ಲಿ ಸೇರಿವೆ.
    • ಈ ದೇವಾಲಯವನ್ನು ಈ ಹಿಂದೆ “ಶ್ವೇತ ಪಗೋಡ” ಎಂದು ಕರೆಯಲಾಗುತ್ತಿತ್ತು ಮತ್ತು ಇದು ಚಾರ್ ಧಾಮ್ ಯಾತ್ರೆಗಳ (ಬದರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ) ಒಂದು ಪ್ರಮುಖ ಭಾಗವಾಗಿದೆ.

    ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸಚಿವ ಸಂಪುಟವು 62,500 ಕೋಟಿ ರೂ. ಗಳ ಬಜೆಟ್ ವೆಚ್ಚದೊಂದಿಗೆ ಹೊಸ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೆ (MPMS) ಅನುಮೋದನೆ ನೀಡಿದೆ.

    ಉದ್ದೇಶ:

    • ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಬಿಡಿಭಾಗಗಳ ಸ್ಥಳೀಕರಣವನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಸಂಶೋಧನೆ-ಅಭಿವೃದ್ಧಿಯನ್ನು (R&D) ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಯೋಜನೆಯ ಪ್ರಮುಖ ವಿವರಗಳು:

    • ಜಾರಿಗೊಳಿಸಿದ ಸಚಿವಾಲಯ: ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜಾರಿಗೊಳಿಸಿದೆ.
    • ಯೋಜನೆಯ ಅವಧಿ: ಇದೊಂದು ಐದು ವರ್ಷಗಳ ಯೋಜನೆಯಾಗಿದ್ದು, 2026-27ನೇ ಆರ್ಥಿಕ ವರ್ಷದಿಂದ 2030-31ನೇ ಆರ್ಥಿಕ ವರ್ಷದವರೆಗೆ ಜಾರಿಯಲ್ಲಿರುತ್ತದೆ.
    • ಬಜೆಟ್ ವೆಚ್ಚ: ಈ ಯೋಜನೆಗೆ ಒಟ್ಟು 62,500 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.

    ಯೋಜನೆಯ ಪ್ರಮುಖ ಲಕ್ಷಣಗಳು:

    • ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕಗಳು : ಈ ಯೋಜನೆಯು ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳ ಅರ್ಹ ಮಾರಾಟದ ಮೇಲೆ ಪ್ರೋತ್ಸಾಹಕ ಬೆಂಬಲವನ್ನು ನೀಡುತ್ತದೆ; ಅನ್ವಯವಾಗುವ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪ್ರೋತ್ಸಾಹಕ ದರಗಳು 2.25% ರಿಂದ 5% ರವರೆಗೆ ಇರುತ್ತವೆ.
    • ದೇಶೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ: ಪ್ರಮುಖ ಬಿಡಿಭಾಗಗಳು ಮತ್ತು ಉಪ-ಜೋಡಣೆಗಳನ್ನು ದೇಶೀಯವಾಗಿಯೇ ಸೋರ್ಸಿಂಗ್ (ಖರೀದಿಸುವ) ಮಾಡುವುದನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ತಯಾರಕರು ಗರಿಷ್ಠ 1.5% ರಷ್ಟು ಹೆಚ್ಚುವರಿ ಪ್ರೋತ್ಸಾಹಕವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ವಿನ್ಯಾಸ ಮತ್ತು ನಾವೀನ್ಯತೆಗೆ ಬೆಂಬಲ : ದೇಶೀಯ ನಾವೀನ್ಯತೆ ಮತ್ತು ಬ್ರ್ಯಾಂಡ್ ರಚನೆಯನ್ನು ಉತ್ತೇಜಿಸುವ ಸಲುವಾಗಿ, ಭಾರತದಲ್ಲಿ ಉತ್ಪನ್ನ ವಿನ್ಯಾಸ ಮತ್ತು R&D ಚಟುವಟಿಕೆಗಳನ್ನು ಕೈಗೊಳ್ಳುವ ಕಂಪನಿಗಳಿಗೆ ಅರ್ಹ ಮಾರಾಟದ ಮೇಲೆ ಹೆಚ್ಚುವರಿ 3% ಪ್ರೋತ್ಸಾಹಕವನ್ನು ಈ ಯೋಜನೆಯು ಒದಗಿಸುತ್ತದೆ.

    ಸೆಮಿಕಾನ್ 2.0

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು 1,27,500 ಕೋಟಿ ರೂ. ವೆಚ್ಚದ ಸೆಮಿಕಾನ್ 2.0 (ಇಂಡಿಯಾ  ಸೆಮಿಕಂಡಕ್ಟರ್ ಮಿಷನ್ 2.0) ಯೋಜನೆಗೆ ಅನುಮೋದನೆ ನೀಡಿದೆ.

    ಆರು ಕಾರ್ಯತಂತ್ರದ ಆಧಾರಸ್ತಂಭಗಳು:

    1. ವಿನ್ಯಾಸ.
    2. ಯಂತ್ರಗಳು ಮತ್ತು ವಸ್ತುಗಳು.
    3. ತಯಾರಿಕೆ.
    4. ಜೋಡಣೆ, ಪರೀಕ್ಷೆ, ಮಾರುಕಟ್ಟೆ ಮತ್ತು ಪ್ಯಾಕೇಜಿಂಗ್ (ATMP) ಹಾಗೂ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (OSAT) ಘಟಕಗಳನ್ನು ವಿಸ್ತರಿಸುವ ಮೂಲಕ ಭಾರತವನ್ನು ಜಾಗತಿಕ ಪರ್ಯಾಯ ಕೇಂದ್ರವನ್ನಾಗಿ ಸ್ಥಾಪಿಸುವುದು.
    5. ಸಂಶೋಧನೆ ಮತ್ತು ಅಭಿವೃದ್ಧಿ (R&D).
    6. ಪ್ರತಿಭೆಗಳ ಅಭಿವೃದ್ಧಿ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಬಗ್ಗೆ:

    • ಜಾರಿಗೊಳಿಸಿದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
    • ಗುರಿ: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸಕ್ಕಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಹೊರಹೊಮ್ಮಲು ಅನುವು ಮಾಡಿಕೊಡುವಂತಹ ಕ್ರಿಯಾಶೀಲ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.

    ಸೆಮಿಕಂಡಕ್ಟರ್ ಚಿಪ್‌ಗಳ ಬಗ್ಗೆ:

    • ಇವು ವಾಹಕಗಳು (Conductors) ಮತ್ತು ಅವಾಹಕಗಳ (Insulators) ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
    • ಉದಾಹರಣೆ: ಇವು ಶುದ್ಧ ಮೂಲವಸ್ತುಗಳಾದ ಸಿಲಿಕಾನ್ ಅಥವಾ ಜರ್ಮೇನಿಯಂ ಆಗಿರಬಹುದು; ಅಥವಾ ಗ್ಯಾಲಿಯಂ ಆರ್ಸೆನೈಡ್ ಅಥವಾ ಕ್ಯಾಡ್ಮಿಯಂ ಸೆಲೆನೈಡ್ ನಂತಹ ಸಂಯುಕ್ತ ವಸ್ತುಗಳಾಗಿರಬಹುದು.
    • ಸೆಮಿಕಂಡಕ್ಟರ್ ಚಿಪ್‌ಗಳ ಮಹತ್ವ: ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ಹೃದಯ ಮತ್ತು ಮೆದುಳಿನಂತೆ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
    • ಅನ್ವಯಗಳು: ಈ ಚಿಪ್‌ಗಳು ಆಧುನಿಕ ವಾಹನಗಳು, ಗೃಹಬಳಕೆಯ ಉಪಕರಣಗಳು ಮತ್ತು ECG ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.

    12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತವು ಹೈದರಾಬಾದ್‌ನಲ್ಲಿ 12ನೇ ಬ್ರಿಕ್ಸ್ (BRICS) ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯನ್ನು ಆಯೋಜಿಸಿತು.
    • 2026ರ ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).

    ಸಭೆಯ ಪ್ರಮುಖ ಫಲಿತಾಂಶಗಳು:

    • ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಘೋಷಣೆ: ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು, ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ಅಂತರ್ಗತ ಹಾಗೂ ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.
    • ಸದಸ್ಯ ರಾಷ್ಟ್ರಗಳಾದ್ಯಂತ ಕಾರ್ಮಿಕ ಚೌಕಟ್ಟುಗಳನ್ನು (ದಕ್ಷಿಣ-ದಕ್ಷಿಣ ಸಹಕಾರ) ಆಧುನೀಕರಿಸಲು, ಸಮನ್ವಯಗೊಳಿಸಲು ಮತ್ತು ಬಲಪಡಿಸಲು ಭಾರತವು ಬ್ರಿಕ್ಸ್ ಜೊಡಣೆ (BRICS CONNECT) ಎಂಬ ತಂತ್ರಜ್ಞಾನ-ಚಾಲಿತ ಸಹಯೋಗದ ವೇದಿಕೆಯನ್ನು ಪ್ರಾರಂಭಿಸಿತು.

    ಬ್ರಿಕ್ಸ್ (BRICS) ಬಗ್ಗೆ:

    • ಸ್ಥಾಪನೆ: 2009.
    • ಪ್ರಧಾನ ಕಚೇರಿ: ಶಾಂಘೈ.
    • BRICS, ಇದು ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಗೊಂಡಿತು) ರಾಷ್ಟ್ರಗಳ ಗುಂಪಿನ ಸಂಕ್ಷಿಪ್ತ ರೂಪವಾಗಿದೆ.
    • ಮೂಲ: ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಲ್ಕು ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳನ್ನು ವಿವರಿಸಲು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ ನೀಲ್ ಅವರು “ಬ್ರಿಕ್” (BRIC) ಎಂಬ ಪದವನ್ನು ಹುಟ್ಟುಹಾಕಿದರು.
    • ಇತ್ತೀಚಿನ ವಿಸ್ತರಣೆ (BRICS+): 2024-2025ರಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಳ್ಳುವಂತೆ ವಿಸ್ತರಣೆಯಾಯಿತು. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಔಪಚಾರಿಕಗೊಳಿಸಿಲ್ಲ.
    • ಬ್ರಿಕ್ಸ್ ಪಾಲು: ಬ್ರಿಕ್ಸ್ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಜನಸಂಖ್ಯೆಯ 41%, ಜಾಗತಿಕ GDPಯ 24% ಮತ್ತು ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ರಷ್ಟನ್ನು ಹೊಂದುವ ನಿರೀಕ್ಷೆಯಿದೆ).
    • ಅಧ್ಯಕ್ಷತೆ: ವೇದಿಕೆಯ ಅಧ್ಯಕ್ಷತೆಯನ್ನು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಮೇಲೆ ಹಂಚಲಾಗುತ್ತದೆ.

    ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:

    • ಹೊಸ ಅಭಿವೃದ್ಧಿ ಬ್ಯಾಂಕ್ (New Development Bank – NDB)
    • ಅನಿಶ್ಚಿತ ಮೀಸಲು ವ್ಯವಸ್ಥೆ (Contingent Reserve Arrangement – CRA)
    • ಬ್ರಿಕ್ಸ್ ಪಾವತಿ ವ್ಯವಸ್ಥೆ (BRICS Payment System)
    • ಕಸ್ಟಮ್ಸ್ ಒಪ್ಪಂದಗಳು (Customs Agreements)
    • ದೂರಸಂವೇದಿ ಉಪಗ್ರಹಗಳ ಸಮೂಹ (Constellation of Remote Sensing Satellites)

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 16, ಜುಲೈ 2026

    ಸುದ್ದಿಯಲ್ಲಿರುವ ವ್ಯಕ್ತಿ

    ಭೂ ವಿಜ್ಞಾನ ಸಚಿವಾಲಯದ (MoES) ನೂತನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು ನೇಮಕವಾಗಿದ್ದಾರೆ.

    ಪ್ರಮುಖ ದಿನಗಳು

    ಜಾಗತಿಕ ಅಂತರರಾಷ್ಟ್ರೀಯ ನ್ಯಾಯ ದಿನ 2026

    • ಆಚರಿಸುವ ದಿನಾಂಕ: ಜುಲೈ 17
    • ಆಚರಿಸುವ ಸಂಸ್ಥೆ: ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)

    ಮುಖ್ಯ ಉದ್ದೇಶ:

    • ನೆದರ್ಲೆಂಡ್ಸ್‌ನ ಹೇಗ್ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಗೆ ಅಡಿಪಾಯ ಹಾಕಿದ ಜುಲೈ 17, 1998 ರ ಐತಿಹಾಸಿಕ ರೋಮ್ ಶಾಸನವನ್ನು (Rome Statute) ಸ್ಮರಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
    • ಜಾಗತಿಕ ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಜನಾಂಗೀಯ ಹತ್ಯೆ, ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಆಕ್ರಮಣಶೀಲತೆಯ ಅಪರಾಧಗಳು ಸೇರಿದಂತೆ ಜಗತ್ತಿನ ಘೋರ ಅಂತರರಾಷ್ಟ್ರೀಯ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ, ಅವರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯುವುದು ಈ ದಿನದ ಮುಖ್ಯ ಆಶಯವಾಗಿದೆ.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 16 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 16 ಜುಲೈ, 2026

  • ರವಿದಾಸಿಯಾ ಸಮುದಾಯದಿಂದ ಪ್ರತ್ಯೇಕ ಧರ್ಮದ ಬೇಡಿಕೆ | ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳ ಆಮದು ನಿಷೇಧಿಸಿದ ಭಾರತ | ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ | ನಮಸ್ತೆ (NAMASTE) ದಿನ | ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮ | ಮಗ್ಗರ್ ಮೊಸಳೆ (Mugger Crocodile) | ನಿದಾರ್ (NIDAR) 2.0 | ಎರೆಂಡಿಲ್-1 ಉಪಗ್ರಹ

    ರವಿದಾಸಿಯಾ ಸಮುದಾಯದಿಂದ ಪ್ರತ್ಯೇಕ ಧರ್ಮದ ಬೇಡಿಕೆ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ: 

    • ರವಿದಾಸಿಯಾ ಸಮುದಾಯವು ಮುಂದಿನ ಜನಗಣತಿಯಲ್ಲಿ ಪ್ರತ್ಯೇಕ ‘ರವಿದಾಸಿಯಾ ಧರ್ಮ’ ವರ್ಗವನ್ನು ಸೃಷ್ಟಿಸಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

    ‘ರವಿದಾಸಿಯಾ ಸಮುದಾಯ’ದ ಬಗ್ಗೆ: 

    • ಈ ಸಮುದಾಯವು 15 ರಿಂದ 16 ನೇ ಶತಮಾನದ ಪ್ರಸಿದ್ಧ ಭಕ್ತಿ ಚಳುವಳಿಯ ಸಂತ, ಸಮಾಜ ಸುಧಾರಕ ಮತ್ತು ಅತೀಂದ್ರಿಯ ಕವಿ ಗುರು ರವಿದಾಸ್ ಅವರ ಬೋಧನೆಗಳನ್ನು ಅನುಸರಿಸುತ್ತದೆ.
    • ಮೂಲ ತತ್ವಶಾಸ್ತ್ರ: ಗುರು ರವಿದಾಸ್ ಅವರು ಸಾಮಾಜಿಕ ಸಮಾನತೆ, ಘನತೆ ಮತ್ತು ಜಾತಿ ತಾರತಮ್ಯದ ನಿರ್ಮೂಲನೆಯನ್ನು ಪ್ರತಿಪಾದಿಸಿದರು. ದುಃಖ, ಭಯ ಮತ್ತು ಅಸಮಾನತೆಯಿಂದ ಮುಕ್ತವಾದ ಆದರ್ಶ ಸಮಾಜವಾದ ಬೇಗಂಪುರ ಪರಿಕಲ್ಪನೆಯನ್ನು ಅವರು ಕಲ್ಪಿಸಿದ್ದರು.
    • ಜನಸಂಖ್ಯೆ: ಭಾರತದಲ್ಲಿ ಪಂಜಾಬ್ ರಾಜ್ಯವು ಅತಿ ಹೆಚ್ಚು ರವಿದಾಸಿಯಾ ಜನಸಂಖ್ಯೆಯನ್ನು ಹೊಂದಿದೆ ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 32% ದಲಿತರನ್ನು ಒಳಗೊಂಡಿದೆ.
    • ಪ್ರಮುಖ ಸಂಸ್ಥೆ: ಬಾಬಾ ಸಂತ ಪೀಪಲ್ ದಾಸ್ ಅವರಿಂದ 20ನೇ ಶತಮಾನದ ಆರಂಭದಲ್ಲಿ ಸ್ಥಾಪನೆಯಾದ ಪಂಜಾಬ್‌ನ ಡೇರಾ ಸಚ್‌ಖಂಡ್ ಬಲ್ಲಾನ್ ರವಿದಾಸಿಯಾ ಸಮುದಾಯದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಸಂಸ್ಥೆಯಾಗಿದೆ.

    ಸಂತ ರವಿದಾಸ್ ಅವರ ಬಗ್ಗೆ: 

    • 14 ನೇ ಶತಮಾನದಲ್ಲಿ ಜನಿಸಿದ ಇವರು 14 ರಿಂದ 17 ನೇ ಶತಮಾನದ ನಡುವೆ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿಯಾದ ಭಕ್ತಿ ಚಳುವಳಿಯ ಪ್ರಮುಖ ಸಂತರಾಗಿದ್ದರು.
    • ಇವರು ಸಂತ ಕಬೀರರ ಶಿಷ್ಯರಾಗಿದ್ದರು ಮತ್ತು ರವಿದಾಸಿಯಾ ಧರ್ಮದ ಸ್ಥಾಪಕರಾಗಿದ್ದರು ಹಾಗೂ ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು.

    ಜೀವನ ಮತ್ತು ಬೋಧನೆಗಳು

    • ಅವರು ಶ್ರೇಷ್ಠ ಸಮಾಜ ಸುಧಾರಕ ಹಾಗೂ ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶವಾಹಕರಾಗಿದ್ದರು.
    • ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಮತ್ತು ತುಳಿತಕ್ಕೊಳಗಾದವರ ಉನ್ನತಿಗಾಗಿ ಅವರು ಅವಿರತವಾಗಿ ಶ್ರಮಿಸಿದರು.
    • ಅವರ ಜೀವನವು ತ್ಯಾಗ ಮತ್ತು ತಪಸ್ಸಿನ ವಿಶಿಷ್ಟ ಉದಾಹರಣೆಯಾಗಿದ್ದು, ವಿವಿಧ ಸಾಮಾಜಿಕ ವಿಷಯಗಳ ಕುರಿತು ಅನೇಕ ರಚನೆಗಳನ್ನು ಬರೆದಿದ್ದಾರೆ. 
    • ಅವರು ‘ಮನ್ ಚಂಗಾ ತೊ ಕಟೌತಿ ಮೇ ಗಂಗಾ’ ಎಂಬ ಜನಪ್ರಿಯ ಹಿಂದಿ ನಾಣ್ಣುಡಿಯನ್ನು ಸೃಷ್ಟಿಸುವ ಮೂಲಕ ಸಮಾಜಕ್ಕೆ ‘ಕರ್ಮ’ದ ಬಗ್ಗೆ ಅತ್ಯಂತ ವಿಶಾಲವಾದ ಸಂದೇಶವನ್ನು ನೀಡಿದರು.

    ಪರಂಪರೆ

    • ಸಿಖ್ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಇವರ 41 ಭಕ್ತಿಗೀತೆಗಳು ಮತ್ತು ಕವಿತೆಗಳನ್ನು ಒಳಗೊಂಡಿದೆ.
    • ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಗುರು ರವಿದಾಸ್‌ಜಿಯವರ ಮೌಲ್ಯಗಳ ಆಧಾರದ ಮೇಲೆ ಸಂವಿಧಾನದ ತತ್ವಗಳನ್ನು ಅಳವಡಿಸಿದರು.

    ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳ ಆಮದು ನಿಷೇಧಿಸಿದ ಭಾರತ

    ರಾಜಕೀಯ

    ಇದೀಗ ಸುದ್ದಿಯಲ್ಲಿ: 

    • ವಿದೇಶಿ ವ್ಯಾಪಾರ ನಿರ್ದೇಶನಾಲಯವು (DGFT) ಭಾರತದ ವಿದೇಶಿ ವ್ಯಾಪಾರ ನೀತಿ (FTP) 2023 ಅನ್ನು ಅಧಿಕೃತವಾಗಿ ತಿದ್ದುಪಡಿ ಮಾಡಿದ್ದು, ಬಲವಂತದ ದುಡಿಮೆಯ ಮೂಲಕ ತಯಾರಿಸಿದ ಸರಕುಗಳ ಆಮದನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ.

    ಸಾಂವಿಧಾನಿಕ ಚೌಕಟ್ಟು

    ಭಾರತದ ಸಂವಿಧಾನವು ಶೋಷಣೆಯ ವಿರುದ್ಧದ ಹಕ್ಕಿನ ಅಡಿಯಲ್ಲಿ ಬಲವಂತದ ದುಡಿಮೆಯನ್ನು ಕಟ್ಟುನಿಟ್ಟಾಗಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುತ್ತದೆ:

    • ವಿಧಿ 23(1): ಇದು ಕೇವಲ ಬಲವಂತದ ದೈಹಿಕ ದುಡಿಮೆಯನ್ನು ಮಾತ್ರವಲ್ಲದೆ, ಕಾರ್ಮಿಕರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವಂತಹ ಆರ್ಥಿಕ ಶೋಷಣೆಯನ್ನು ಸಹ ರದ್ದುಗೊಳಿಸುತ್ತದೆ.
    • ವಿಧಿ 23(2): ತುರ್ತು ಸಾರ್ವಜನಿಕ ಸೇವೆಯ (ಉದಾಹರಣೆಗೆ ಸೈನ್ಯಕ್ಕೆ ಸೇರ್ಪಡೆ ಅಥವಾ ವಿಪತ್ತು ನಿರ್ವಹಣೆ) ಕಡ್ಡಾಯ ಸೇವೆಗೆ ಒಳಪಡಿಸಲು ರಾಜ್ಯಕ್ಕೆ ಅವಕಾಶ ನೀಡುತ್ತದೆ, ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಧರ್ಮ, ಜನಾಂಗ, ಜಾತಿ ಅಥವಾ ವರ್ಗದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
    • ವಿಧಿ 24: 14 ವರ್ಷದೊಳಗಿನ ಮಕ್ಕಳನ್ನು ಕಾರ್ಖಾನೆಗಳು, ಗಣಿಗಳು ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ.
    • ರಾಜ್ಯ ನೀತಿ ನಿರ್ದೇಶಕ ತತ್ವಗಳು (DPSP): ವಿಧಿ 42 ನ್ಯಾಯಸಮ್ಮತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಕಡ್ಡಾಯಗೊಳಿಸಿದರೆ, ವಿಧಿ 43 ಜೀವನಾವಶ್ಯಕ ವೇತನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ.

    ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • 2025 ರ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಸ್ ಸಯೀದ್ ನ ಪಾತ್ರಕ್ಕಾಗಿ ಜಮ್ಮುವಿನ ವಿಶೇಷ NIA ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ನಂತರ, ಆತನ ಗೈರುಹಾಜರಿಯಲ್ಲಿಯೇ ವಿಚಾರಣೆ ಎದುರಿಸಲು ಸಿದ್ಧನಾಗಿದ್ದಾನೆ.

    ಹೆಚ್ಚಿನ ಮಾಹಿತಿ: 

    • ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ಸೆಕ್ಷನ್ 356 ರ ಅಡಿಯಲ್ಲಿ, ಆರೋಪಿಯ ಭೌತಿಕ ಉಪಸ್ಥಿತಿಯಿಲ್ಲದೆ ಕ್ರಿಮಿನಲ್ ವಿಚಾರಣೆಯನ್ನು ನಡೆಸಲು ಮತ್ತು ತೀರ್ಪು ನೀಡಲು ಯಾವುದೇ ಸಮರ್ಥ ವಿಚಾರಣಾ ನ್ಯಾಯಾಲಯಕ್ಕೆ ಅವಕಾಶವಿದೆ.
    • ಹಳೆಯ CrPC, 1973 ಕಾಯ್ದೆಯು ಆರೋಪಿಯು ತಲೆಮರೆಸಿಕೊಂಡಾಗ ಕೇವಲ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಮಾತ್ರ ನ್ಯಾಯಾಲಯಗಳಿಗೆ ಸೀಮಿತಗೊಳಿಸಿತ್ತು, ಆದರೆ ಪ್ರಸ್ತುತ BNSS ಅಂತಿಮ ತೀರ್ಪು ನೀಡಲು ಅನುಮತಿಸುತ್ತದೆ.
    • ಅರ್ಹತೆ: 10 ವರ್ಷಗಳ ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾದ ಅಪರಾಧಗಳಿಗಾಗಿ ಸೆಕ್ಷನ್ 84 ರ ಅಡಿಯಲ್ಲಿ ಘೋಷಿತ ಅಪರಾಧಿಗಳಿಗೆ ಮಾತ್ರ ಈ ನಿಬಂಧನೆಯು ಪ್ರತ್ಯೇಕವಾಗಿ ಅನ್ವಯಿಸುತ್ತದೆ.
    • ಜುಲೈ 1, 2024 ರಿಂದ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ಅಧಿಕೃತವಾಗಿ ವಸಾಹತುಶಾಹಿ ಕಾಲದ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC), 1973 ಅನ್ನು ಬದಲಾಯಿಸಿದೆ.

    ನಮಸ್ತೆ (NAMASTE) ದಿನ

    ರಾಜಕೀಯ

    ಇದೀಗ ಸುದ್ದಿಯಲ್ಲಿ: 

    • 2023 ರಲ್ಲಿ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯು (NAMASTE) ಪ್ರಾರಂಭವಾದ ಮೂರು ವರ್ಷಗಳ ಸ್ಮರಣಾರ್ಥವಾಗಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜುಲೈ 14 ರಂದು 3 ನೇ ನಮಸ್ತೆ ದಿನವನ್ನು ಆಚರಿಸಿತು.

    ನಮಸ್ತೆ ದಿನ’ದ ಬಗ್ಗೆ: 

    • ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಳಚರಂಡಿ, ಸಪಾಯಿ ಕರ್ಮಚಾರಿ ಕಾರ್ಮಿಕರು, ತ್ಯಾಜ್ಯ ಆಯುವವರು ಮತ್ತು ಹಿಂದಿನ ಮಲ ಹೊರುವವರು ಸೇರಿದಂತೆ ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಲು ಈ ದಿನವನ್ನು ಸಮರ್ಪಿಸಲಾಗಿದೆ.

    ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAMASTE)ಯ ಬಗ್ಗೆ: 

    • ಪ್ರಾರಂಭ: ಜುಲೈ 2023
    • ಹಣಕಾಸು ನೆರವು: ಕೇಂದ್ರ ವಲಯದ ಯೋಜನೆ.
    • ಅನುಷ್ಠಾನ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ.
    • ಉದ್ದೇಶಗಳು:
      • ನೈರ್ಮಲ್ಯ ಕಾರ್ಯಗಳಲ್ಲಿ ಶೂನ್ಯ ಸಾವುನೋವುಗಳು.
      • ಎಲ್ಲಾ ನೈರ್ಮಲ್ಯ ಕಾರ್ಯಾಚರಣೆಗಳನ್ನು ಕೇವಲ ನುರಿತ ಕಾರ್ಮಿಕರು ಮಾತ್ರ ನಿರ್ವಹಿಸುವುದು.
      • ಮಾನವ ಮಲಮೂತ್ರಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು.
      • ಮಲ ಹೊರುವವರ ಪುನರ್ವಸತಿ ಕಲ್ಪಿಸುವುದು.
    • ಪ್ರಮುಖ ಮಧ್ಯಸ್ಥಿಕೆಗಳು:
      • ಪಾರ್ಶ್ವನೋಟ: ಒಳಚರಂಡಿ/ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ (SSWs) ವಿವರಗಳ ಡಿಜಿಟಲೀಕರಣ.
      • ಸುರಕ್ಷತೆ: ಕಾರ್ಮಿಕರಿಗೆ PPE ಕಿಟ್‌ಗಳು, ಸುರಕ್ಷತಾ ಸಾಧನಗಳು ಮತ್ತು ತರಬೇತಿಯನ್ನು ಒದಗಿಸುವುದು.
      • ಸಬಲೀಕರಣ: ನೈರ್ಮಲ್ಯ ಯಂತ್ರೋಪಕರಣಗಳನ್ನು ಖರೀದಿಸಲು ಬಂಡವಾಳ ಸಬ್ಸಿಡಿ ನೀಡಿ ಅವರನ್ನು “ಸ್ಯಾನಿಪ್ರೆನಿಯರ್ಸ್” (“sanipreneurs”) ಆಗಿ ಸಬಲೀಕರಣಗೊಳಿಸುವುದು.
      • ಆರೋಗ್ಯ: ಔದ್ಯೋಗಿಕ ಸುರಕ್ಷತಾ ತರಬೇತಿ ಮತ್ತು ಆರೋಗ್ಯ ವಿಮೆ ಒದಗಿಸುವುದು.
    • ಪ್ರಾಮುಖ್ಯತೆ: ಇದು ಸುಸ್ಥಿರ ಅಭಿವೃದ್ಧಿ ಗುರಿ (SDG 6: ಶುದ್ಧ ನೀರು ಮತ್ತು ನೈರ್ಮಲ್ಯ) ಗೆ ಹೊಂದಿಕೆಯಾಗುತ್ತದೆ ಮತ್ತು ನೈರ್ಮಲ್ಯ ಕಾರ್ಮಿಕರ ಘನತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುತ್ತದೆ.

    ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಪಂಚಾಯತ್ ರಾಜ್ ಸಚಿವಾಲಯವು ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮದ ಅಡಿಯಲ್ಲಿ ಪಂಚಾಯತ್‌ಗಳ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.

    ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮದ ಬಗ್ಗೆ: 

    • ಇದು ಪಂಚಾಯತ್ ರಾಜ್ ಸಚಿವಾಲಯದ (MoPR) ರಾಷ್ಟ್ರೀಯ ಉಪಕ್ರಮವಾಗಿದೆ.
    • ಉದ್ದೇಶ: ಅರ್ಹ ಗ್ರಾಮ ಪಂಚಾಯಿತಿಗಳು (GPs) ಮತ್ತು ತಾಲೂಕ ಪಂಚಾಯಿತಿಗಳಿಗೆ (BPs) ಆರ್ಥಿಕವಾಗಿ ಲಾಭದಾಯಕ ಮತ್ತು ಆದಾಯ-ಉತ್ಪಾದಿಸುವ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಈ ಕಾರ್ಯಕ್ರಮವು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (RGSA) ವಿಶಾಲ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    ಪ್ರಮುಖ ಲಕ್ಷಣಗಳು

    • ಅರ್ಹತೆ: ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಗ್ರಾಮ ಪಂಚಾಯಿತಿಗಳು ಕನಿಷ್ಠ ₹50 ಲಕ್ಷ ಸ್ವಂತ ಮೂಲದ ಆದಾಯ (OSR) ಹೊಂದಿರಬೇಕು, ಮತ್ತು ತಾಲೂಕ ಪಂಚಾಯಿತಿಗಳು ಕನಿಷ್ಠ ₹1 ಕೋಟಿ ಸ್ವಂತ ಮೂಲದ ಆದಾಯ (OSR) ಹೊಂದಿರಬೇಕು. ಅಲ್ಲದೆ, ಅವುಗಳ ಅಧಿಕಾರಾವಧಿಯಲ್ಲಿ ಕನಿಷ್ಠ 3 ವರ್ಷಗಳು ಉಳಿದಿರಬೇಕು.
    • ಯೋಜನೆ ಸಲ್ಲಿಕೆಗೆ ಗ್ರಾಮಸಭೆಯ ಲಿಖಿತ ಒಪ್ಪಿಗೆಯ ದಾಖಲಾತಿಯು ಕಡ್ಡಾಯ ಅವಶ್ಯಕತೆಯಾಗಿದೆ.
    • ಬಹುಮಾನ: ವಿಜೇತ ಪಂಚಾಯಿತಿಗಳು ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಅನುಷ್ಠಾನಗೊಳಿಸಲು ಸಂಪೂರ್ಣ ತಾಂತ್ರಿಕ ನೆರವನ್ನು ಪಡೆಯುತ್ತವೆ.

    ಮಗ್ಗರ್ ಮೊಸಳೆ (Mugger Crocodile)

    ಪರಿಸರ

    ಇದೀಗ ಸುದ್ದಿಯಲ್ಲಿ: 

    • ರಾಜಸ್ಥಾನದ ಕೋಟಾ ಜಿಲ್ಲೆಯ ಚಂದ್ರಲೋಯಿ ನದಿಯಲ್ಲಿ ನಿಷೇಧಿತ ಕೀಟನಾಶಕವಾದ ಆಲ್ಡ್ರಿನ್ (Aldrin) ಬಳಕೆಯಿಂದಲೇ ಅನೇಕ ಮಗ್ಗರ್ ಮೊಸಳೆಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ನೇಮಿಸಿದ ಜಂಟಿ ಸಮಿತಿಯು ಖಚಿತಪಡಿಸಿದೆ.

    ಮಗ್ಗರ್ ಮೊಸಳೆಯ ಬಗ್ಗೆ (Crocodylus palustris)

    • ಮಗ್ಗರ್ (ಅಥವಾ ಜೌಗು ಪ್ರದೇಶದ) ಮೊಸಳೆಯು ಮಧ್ಯಮ ಗಾತ್ರದ, ಅಗಲವಾದ-ಮೂತಿಯ ಸಿಹಿನೀರಿನ ಮೊಸಳೆ ಪ್ರಭೇದವಾಗಿದೆ.
    • ಇದು ತನ್ನ ಜಲವಾಸಿ ಪರಿಸರ ವ್ಯವಸ್ಥೆಯಲ್ಲಿ ಅಗ್ರ ಪರಭಕ್ಷಕವಾಗಿದೆ.
    • ವಿಪರೀತ ಹವಾಮಾನದ ಸಮಯದಲ್ಲಿ ಆಶ್ರಯ ಮತ್ತು ತಾಪಮಾನ ನಿಯಂತ್ರಣಕ್ಕಾಗಿ ಇದು ಮಣ್ಣಿನ ದಡಗಳಲ್ಲಿ ವಿಸ್ತಾರವಾದ ಬಿಲಗಳನ್ನು ತೋಡುತ್ತದೆ.
    • ಹಂಚಿಕೆ: ಭಾರತೀಯ ಉಪಖಂಡದಾದ್ಯಂತ ಜೌಗು ಪ್ರದೇಶಗಳು, ಸರೋವರಗಳು, ನದಿಗಳು ಮತ್ತು ಕೃತಕ ಕೊಳಗಳಲ್ಲಿ ವಾಸಿಸುತ್ತದೆ. ಮುಖ್ಯವಾಗಿ ಭಾರತದಲ್ಲಿ ಕಂಡುಬರುವ ಇವುಗಳು, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತು ಇರಾನ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿವೆ.
    • ಆಹಾರ ಪದ್ಧತಿ: ಕಿರಿಯ ಮೊಸಳೆಗಳು ಕೀಟಗಳು ಮತ್ತು ಸಣ್ಣ ಮೀನುಗಳನ್ನು ತಿನ್ನುತ್ತವೆ, ಆದರೆ ವಯಸ್ಕ ಮೊಸಳೆಗಳು ದೊಡ್ಡ ಮೀನುಗಳು, ಪಕ್ಷಿಗಳು, ಹಾವುಗಳು ಮತ್ತು ಸಸ್ತನಿಗಳನ್ನು ಬೇಟೆಯಾಡುತ್ತವೆ.
    • ಬೇಟೆಯ ಸಂಖ್ಯೆಯನ್ನು ನಿಯಂತ್ರಿಸುವ, ಪೋಷಕಾಂಶಗಳನ್ನು ಮರುಬಳಕೆ ಮಾಡುವ ಮತ್ತು ಮೃತದೇಹಗಳನ್ನು ಸ್ವಚ್ಛಗೊಳಿಸುವ ಕೀಸ್ಟೋನ್ ಪ್ರಭೇದವಾಗಿದೆ.
    • ಸಂರಕ್ಷಣಾ ಸ್ಥಾನಮಾನ: IUCN: ದುರ್ಬಲ (VU); CITES: ಅನುಬಂಧ I; ವನ್ಯಜೀವಿ ಸಂರಕ್ಷಣಾ ಕಾಯ್ದೆ (WPA): ಅನುಸೂಚಿ I.

    ಭಾರತದ ಮೊಸಳೆ ಪ್ರಭೇದಗಳ ಹೋಲಿಕೆ

    ಭಾರತವು ಮೂರು ವಿಶಿಷ್ಟ ಮೊಸಳೆ ಪ್ರಭೇದಗಳಿಗೆ ನೆಲೆಯಾಗಿದೆ. ಎಲ್ಲಾ ಮೂರು ಪ್ರಭೇದಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅನುಸೂಚಿ I ರ ಅಡಿಯಲ್ಲಿ ರಕ್ಷಿಸಲಾಗಿದೆ.

    ವೈಶಿಷ್ಟ್ಯಗಳು

    ಘರಿಯಾಲ್ (Gavialis ga

    ಮಗ್ಗರ್ (Crocodylus palustris)

    ಉಪ್ಪುನೀರಿನ ಮೊಸಳೆ (Crocodylus porosus)

    IUCN ಸ್ಥಾನಮಾನ

    ತೀವ್ರ ಅಳಿವಿನಂಚಿನಲ್ಲಿದೆ (CR)

    ದುರ್ಬಲ (VU)

    ಕನಿಷ್ಠ ಕಾಳಜಿ (LC)

    ಪ್ರಾಥಮಿಕ ಆವಾಸಸ್ಥಾನ

    ಮರಳುದಂಡೆಗಳಿರುವ ಆಳವಾದ, ಸ್ಪಷ್ಟ ಮತ್ತು ವೇಗವಾಗಿ ಹರಿಯುವ ಸಿಹಿನೀರಿನ ನದಿಗಳು

    ನಿಧಾನವಾಗಿ ಹರಿಯುವ ಸಿಹಿನೀರು: ಸರೋವರಗಳು, ನದಿಗಳು, ಜೌಗು ಪ್ರದೇಶಗಳು ಮತ್ತು ಕೊಳಗಳು

    ಮ್ಯಾಂಗ್ರೋವ್ ಜೌಗು ಪ್ರದೇಶಗಳು, ಕರಾವಳಿ ಅಳಿವೆಗಳು ಮತ್ತು ನದಿ ಮುಖಜಭೂಮಿಗಳು

    ಪ್ರಮುಖ ಸ್ಥಳಗಳು

    ರಾಷ್ಟ್ರೀಯ ಚಂಬಲ್ ಅಭಯಾರಣ್ಯ (ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ), ಗಿರ್ವಾ, ಗಂಡಕ್

    ಭಾರತದಾದ್ಯಂತ ವ್ಯಾಪಕವಾಗಿ ಹರಡಿದೆ (ಉದಾ: ಗುಜರಾತ್, ಕರ್ನಾಟಕ, ಮಧ್ಯಪ್ರದೇಶ)

    ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ (ಒಡಿಶಾ), ಸುಂದರ್‌ಬನ್ಸ್ (ಪಶ್ಚಿಮ ಬಂಗಾಳ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

    ಭೌತಿಕ ಲಕ್ಷಣ

    ಇವು ಉದ್ದವಾದ, ತೆಳುವಾದ ಮೂತಿ; ಗಂಡು ಮೊಸಳೆಗಳು ಉಬ್ಬಿದ ಗುಬುಟನ್ನು (“ಘರಾ”) ಹೊಂದಿರುತ್ತವೆ

    ಇವು ಕ್ರೊಕೊಡೈಲಸ್ ಪ್ರಭೇದಗಳಲ್ಲಿಯೇ ಅತ್ಯಂತ ಅಗಲವಾದ ಮೂತಿಯನ್ನು ಹೊಂದಿರುತ್ತವೆ. 

    ಇದು ಪ್ರಪಂಚದ ಅತಿದೊಡ್ಡ ಜೀವಂತ ಸರೀಸೃಪವಾಗಿದೆ.

    ಆಹಾರ ಪದ್ಧತಿ

    ಇವು ಪ್ರಾಥಮಿಕವಾಗಿ ಮೀನು-ತಿನ್ನುವ (Piscivorous) ಜೀವಿಗಳಾಗಿದ್ದು, ಮನುಷ್ಯರಿಗೆ ಹಾನಿಕರವಲ್ಲ.

    ಇವು ಸಂದರ್ಭಾನುಸಾರ ಬೇಟೆಯಾಡುವ ಮಾಂಸಾಹಾರಿಗಳಾಗಿದ್ದು; ಮೀನು, ಪಕ್ಷಿಗಳು ಮತ್ತು ಸಸ್ತನಿಗಳನ್ನು ತಿನ್ನುತ್ತವೆ.

    ಇವು ಅಗ್ರ ಪರಭಕ್ಷಕಗಳಾಗಿವೆ; ದೊಡ್ಡ ಬೇಟೆಯನ್ನು ಹಿಡಿಯುವ ಇವುಗಳು ತಮ್ಮ ಸರಹದ್ದನ್ನು ಕಟ್ಟುನಿಟ್ಟಾಗಿ ರಕ್ಷಿಸಿಕೊಳ್ಳುವ ಸ್ವಭಾವವನ್ನು ಹೊಂದಿವೆ.

    ನಿದಾರ್ (NIDAR) 2.0

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಡ್ರೋನ್ ಫೆಡರೇಶನ್ ಆಫ್ ಇಂಡಿಯಾ (DFI) ಸಹಯೋಗದೊಂದಿಗೆ, ಸ್ವಯಾನ್ (SwaYaan) ಉಪಕ್ರಮದ ಅಡಿಯಲ್ಲಿ ಡ್ರೋನ್ ಅಪ್ಲಿಕೇಶನ್ ಮತ್ತು ಸಂಶೋಧನೆಗಾಗಿ ರಾಷ್ಟ್ರೀಯ ನಾವೀನ್ಯತೆ ಸವಾಲಿನ (NIDAR 2.0) 2 ನೇ ಆವೃತ್ತಿಯನ್ನು ಪ್ರಾರಂಭಿಸಿದೆ. NIDAR 2025-26 ರ 1 ನೇ ಆವೃತ್ತಿಯನ್ನು ಮಾರ್ಚ್ 2025 ರಲ್ಲಿ ಪ್ರಾರಂಭಿಸಲಾಯಿತು.

    ನಿದಾರ್ (NIDAR) ಬಗ್ಗೆ

    • ಇದು ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಸಹಯೋಗದ ಸ್ವಾಯತ್ತ ಡ್ರೋನ್‌ಗಳನ್ನು ನಿರ್ಮಿಸಲು ಭಾರತದ ಕಾಲೇಜು ಪದವೀಧರರಿಗೆ ಅಧಿಕಾರ ನೀಡುತ್ತದೆ.

    ಸ್ವಯಾನ್ (SwaYaan) ಬಗ್ಗೆ: 

    • ಸ್ವಯಾನ್ 2022 ರಲ್ಲಿ ಪ್ರಾರಂಭವಾದ MeitY ಯ ರಾಷ್ಟ್ರೀಯ ಉಪಕ್ರಮವಾಗಿದೆ.
    • ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಭಾರತದ UAS ಡ್ರೋನ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಗುರಿಯಾಗಿದೆ.
    • ಪ್ರಾಮುಖ್ಯತೆ: 2030 ರ ವೇಳೆಗೆ ಭಾರತವನ್ನು ಜಾಗತಿಕ ಡ್ರೋನ್ ಕೇಂದ್ರವನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನವನ್ನು ಇದು ಬೆಂಬಲಿಸುತ್ತದೆ.
    • ಇದು ಡ್ರೋನ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಒಳಗೊಂಡಂತೆ ಮಾನವರಹಿತ ವಿಮಾನ ವ್ಯವಸ್ಥೆಗಳಲ್ಲಿ (UAS) ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸಾಮರ್ಥ್ಯ ವೃದ್ಧಿಯತ್ತ ಗಮನಹರಿಸುತ್ತದೆ.

    ಎರೆಂಡಿಲ್-1 ಉಪಗ್ರಹ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ರಾತ್ರಿಯ ಸಮಯದಲ್ಲಿ ಭೂಮಿಯ ಆಯ್ದ ಸ್ಥಳಗಳ ಮೇಲೆ ಸೂರ್ಯನ ಬೆಳಕನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಪ್ರಾಯೋಗಿಕ ಉಪಗ್ರಹವಾದ ಎರೆಂಡಿಲ್-1 (Earendil-1) ಅನ್ನು ಉಡಾವಣೆ ಮಾಡಲು ಮತ್ತು ನಿರ್ವಹಿಸಲು ಅಮೆರಿಕಾ ದೇಶವು ಸ್ಟಾರ್ಟ್ಅಪ್‌ ಒಂದಕ್ಕೆ ಅಧಿಕಾರ ನೀಡಿದೆ.

    ಎರೆಂಡಿಲ್-1 ಉಪಗ್ರಹದ ಬಗ್ಗೆ: 

    • ಎರೆಂಡಿಲ್-1 ಎಂಬುದು ಭೂಸ್ಥಿರವಲ್ಲದ ಉಪಗ್ರಹವಾಗಿದ್ದು, ಇದು ವಿಸ್ತರಿಸಬಹುದಾದ ದೊಡ್ಡದಾದ ತೆಳು-ಪದರದ (thin-film) ಕನ್ನಡಿಯನ್ನು ಹೊಂದಿದೆ. ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶಗಳ ಕಡೆಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ಇದನ್ನು ನಿರ್ದೇಶಿಸಲು (ತಿರುಗಿಸಲು) ಸಾಧ್ಯವಿದೆ.
    • ಪ್ರಾಮುಖ್ಯತೆ: ಸೌರಶಕ್ತಿ ಉತ್ಪಾದನೆಗಾಗಿ ಹಗಲಿನ ಸಮಯವನ್ನು ವಿಸ್ತರಿಸುವುದು ಮತ್ತು ತುರ್ತು ಪರಿಸ್ಥಿತಿಗಳು, ವಿಪತ್ತು ನಿರ್ವಹಣೆ ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ತಾತ್ಕಾಲಿಕ ಬೆಳಕನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 15, ಜುಲೈ 2026

    ಪ್ರಶಸ್ತಿಗಳು

    ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿ: 

    • ಸಾಹಿತ್ಯ ಅಕಾಡೆಮಿಯು ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅಧಿಕೃತ ಸಮಾರಂಭದಲ್ಲಿ 24 ಭಾರತೀಯ ಭಾಷೆಗಳ ಅತ್ಯುತ್ತಮ ಲೇಖಕರನ್ನು ಗೌರವಿಸುವ ಮೂಲಕ ತನ್ನ ಪ್ರತಿಷ್ಠಿತ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಔಪಚಾರಿಕವಾಗಿ ಪ್ರದಾನ ಮಾಡಿದೆ.

    ಪ್ರಮುಖ ಅಂಶಗಳು:

    • ರಾಷ್ಟ್ರೀಯ ಮಾನ್ಯತೆ: 1954 ರಲ್ಲಿ ಸ್ಥಾಪನೆಗೊಂಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತದ ಅತ್ಯುನ್ನತ ರಾಷ್ಟ್ರೀಯ ಸಾಹಿತ್ಯ ಗೌರವಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಯು ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ 22 ಭಾಷೆಗಳು ಸೇರಿದಂತೆ ಇಂಗ್ಲಿಷ್ ಮತ್ತು ರಾಜಸ್ಥಾನಿ ಭಾಷೆಗಳಲ್ಲಿನ ಸೃಜನಶೀಲ ಶ್ರೇಷ್ಠತೆಯನ್ನು ಗುರುತಿಸುತ್ತದೆ.
    • ಪ್ರಶಸ್ತಿಯ ಸ್ವರೂಪ: ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರಿಗೆ ತಾಮ್ರದ ಫಲಕ, ಸಾಂಪ್ರದಾಯಿಕ ಶಾಲು ಮತ್ತು ₹1,00,000 ನಗದು ಬಹುಮಾನವನ್ನು ನೀಡಲಾಗುತ್ತದೆ.
    • ಕನ್ನಡ ಭಾಷೆ: ಪ್ರಸಿದ್ಧ ಹಿರಿಯ ಬರಹಗಾರರಾದ ಅಮರೇಶ ನುಗಡೋನಿ ಅವರು ರಚಿಸಿದ ಜನಪ್ರಿಯ ಸಣ್ಣ ಕಥೆಗಳ ಸಂಕಲನವಾದ ‘ದಡ ಸೇರಿಸು ತಂದೆ’ ಕೃತಿಗೆ ಈ ಗೌರವ ಒಲಿದಿದೆ.
    • ಇಂಗ್ಲಿಷ್ ಭಾಷೆ: ಹಿರಿಯ ರಾಜತಾಂತ್ರಿಕ ಹಾಗೂ ಲೇಖಕರಾದ ನವತೇಜ್ ಸರ್ನಾ ಅವರು 1919 ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಗಳ ಸುತ್ತ ಹೆಣೆದಿರುವ ತಮ್ಮ ಐತಿಹಾಸಿಕ ಕಾದಂಬರಿ ‘ಕ್ರಿಮ್ಸನ್ ಸ್ಪ್ರಿಂಗ್’ (Crimson Spring) ಕೃತಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
    • ಹಿಂದಿ ಭಾಷೆ: ಖ್ಯಾತ ಲೇಖಕಿ ಮಮತಾ ಕಾಲಿಯಾ ಅವರ ಜೀವನಚರಿತ್ರೆಯಾದ ‘ಜೀತೆ ಜೀ ಅಲಹಾಬಾದ್’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಪ್ರಮುಖ ದಿನಾಚರಣೆಗಳು

    ವಿಶ್ವ ಯುವ ಕೌಶಲ್ಯ ದಿನ 2026

    • ಆಚರಿಸುವ ದಿನಾಂಕ: ಜುಲೈ 15
    • ಆಚರಿಸುವ ಸಂಸ್ಥೆ: ವಿಶ್ವಸಂಸ್ಥೆ (ಇದು ಯುನೆಸ್ಕೋ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ನೇತೃತ್ವದಲ್ಲಿ ಆಚರಿಸುತ್ತದೆ).
    • ಉದ್ದೇಶ: ಜಾಗತಿಕ ಉದ್ಯೋಗಿಗಳಲ್ಲಿ ಉಂಟಾಗುತ್ತಿರುವ ಕೌಶಲ್ಯದ ಕೊರತೆಯನ್ನು ನೀಗಿಸಲು ಯುವಜನರಿಗೆ ಭವಿಷ್ಯಕ್ಕೆ ಪೂರಕವಾದ ಕೌಶಲ್ಯಗಳನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ. ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗಾಗಿ ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಸಾಕ್ಷರತೆ ಮತ್ತು ಹಸಿರು ಕೌಶಲ್ಯಗಳನ್ನು (Green Skills) ಸಂಯೋಜಿಸುವ ಕಾರ್ಯತಂತ್ರದ ಮಹತ್ವವನ್ನು ಈ ದಿನವು ಎತ್ತಿ ತೋರಿಸುತ್ತದೆ.
    • ಧ್ಯೇಯವಾಕ್ಯ: “ಹಂಚಿಕೆಯ ಭವಿಷ್ಯಕ್ಕಾಗಿ ಕೌಶಲ್ಯಗಳು” (Skills for a Shared Future)

    ಕ್ರೀಡಾ ಸುದ್ದಿಗಳು

    1. 2026 ರ ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನ ಅಧಿಕೃತ ಲಾಂಛನ ‘ಮಯೂರ್’ ಅನಾವರಣ

    ಇದೀಗ ಸುದ್ದಿಯಲ್ಲಿ:

    • ಮುಂಬರುವ 22 ನೇ ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್ 2026 ರ ಅಧಿಕೃತ ಲಾಂಛನವಾಗಿ ‘ಮಯೂರ್’ವನ್ನು ದೆಹಲಿಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

    ಪ್ರಮುಖ ಅಂಶಗಳು:

    • ಲಾಂಛನದ ಸಾಂಕೇತಿಕತೆ: ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನಿಂದ ಪ್ರೇರಿತವಾಗಿರುವ ‘ಮಯೂರ್’ ಲಾಂಛನದ ಗರಿಗಳಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಧ್ವಜಗಳನ್ನು ಸಂಯೋಜಿಸಲಾಗಿದೆ. ಇದು ‘ವಸುಧೈವ ಕುಟುಂಬಕಂ’ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಭಾರತೀಯ ಆರ್ಥಿಕ ಮತ್ತು ಸಾಮಾಜಿಕ ತತ್ವವನ್ನು ಬಿಂಬಿಸುತ್ತದೆ.
    • ಆತಿಥ್ಯ ಮತ್ತು ವೇಳಾಪಟ್ಟಿ: ಈ ಕ್ರೀಡಾಕೂಟವು 2026 ಜುಲೈ 27 ರಿಂದ ಆಗಸ್ಟ್ 2 ರವರೆಗೆ ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ 25 ಕ್ಕೂ ಹೆಚ್ಚು ಕಾಮನ್‌ವೆಲ್ತ್ ರಾಷ್ಟ್ರಗಳ ಪ್ಯಾಡ್ಲರ್‌ಗಳು ಭಾಗವಹಿಸಲಿದ್ದಾರೆ.
    • ಆಯೋಜನಾ ಸಂಸ್ಥೆಗಳು: ಈ ಕ್ರೀಡಾಕೂಟವನ್ನು ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಫೆಡರೇಶನ್ (CTTF) ಅಡಿಯಲ್ಲಿ ದೆಹಲಿ ಸರ್ಕಾರ ಮತ್ತು ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್ (TTFI) ಜಂಟಿಯಾಗಿ ಆಯೋಜಿಸುತ್ತಿವೆ.

     

    2. ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ‘ನಾಗಪುರ ಸಚಿವ ಮಟ್ಟದ ಘೋಷಣೆ’ ಅಂಗೀಕಾರ

    ಇದೀಗ ಸುದ್ದಿಯಲ್ಲಿ: 

    • ಭಾರತದ 2026 ಬ್ರಿಕ್ಸ್ (BRICS) ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ 3 ನೇ ಬ್ರಿಕ್ಸ್ ಸಾರಿಗೆ ಸಚಿವರ ಸಭೆಯಲ್ಲಿ ‘ನಾಗಪುರ ಸಚಿವ ಮಟ್ಟದ ಘೋಷಣೆ’ಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ.

    ಪ್ರಮುಖ ಅಂಶಗಳು:

    • ಸಹಕಾರ ಚೌಕಟ್ಟು: ಈ ಘೋಷಣೆಯು ಸಾರಿಗೆ ಮತ್ತು ಸಾಗಾಣಿಕೆ (ಲಾಜಿಸ್ಟಿಕ್ಸ್) ವಲಯದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಅಂತರರಾಷ್ಟ್ರೀಯ ಸಹಕಾರ, ಸಂಪರ್ಕ ಮತ್ತು ತಾಂತ್ರಿಕ ಸಂಯೋಜನೆಯನ್ನು ಆಳವಾಗಿಸಲು ನಾವೀನ್ಯತೆ ಆಧಾರಿತ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.
    • ಸಾರಿಗೆ ವಲಯದಲ್ಲಿ ಇಂಗಾಲದ ಕಡಿತ: ಮಾಲಿನ್ಯ ಮತ್ತು ಅನಿಲ ಹೊರಸೂಸುವಿಕೆಯನ್ನು ವೇಗವಾಗಿ ಕಡಿಮೆ ಮಾಡಲು, ಸುಸ್ಥಿರ ವಿಮಾನಯಾನ ಇಂಧನವನ್ನು (SAF) ಉತ್ತೇಜಿಸಲು ಹಾಗೂ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ನೇರವಾಗಿ ಸಂಯೋಜಿಸಲು ಈ ಘೋಷಣೆಯು ಒಂದು ಕಾರ್ಯತಂತ್ರದ ಮಾರ್ಗದರ್ಶಿಯನ್ನು ರೂಪಿಸಿದೆ.
    • ಪೂರೈಕೆ ಸರಪಳಿಯ ದೃಢತೆ: ಸದಸ್ಯ ರಾಷ್ಟ್ರಗಳ ನಡುವೆ ಸುಗಮ ವ್ಯಾಪಾರ ವಹಿವಾಟನ್ನು ಸುಲಭಗೊಳಿಸಲು ಬಲಿಷ್ಠ, ಆಘಾತ-ನಿರೋಧಕ ಜಾಗತಿಕ ಪೂರೈಕೆ ಸರಪಳಿಗಳನ್ನು ಮತ್ತು ಗಡಿಯಾಚೆಗಿನ ಲಾಜಿಸ್ಟಿಕ್ಸ್ ಕಾರಿಡಾರ್‌ಗಳನ್ನು ನಿರ್ಮಿಸುವತ್ತ ಇದು ಗಮನ ಹರಿಸುತ್ತದೆ.
    • ಸಾಂಸ್ಥಿಕ ಉಪಕ್ರಮಗಳು: ಬ್ರಿಕ್ಸ್ ರೈಲ್ವೆ ಸಂಶೋಧನಾ ಜಾಲದ (BRICS Railway Research Network) ಸಾಂಸ್ಥಿಕ ಚೌಕಟ್ಟನ್ನು ಮುನ್ನಡೆಸಲು ಹಾಗೂ ಸುಸ್ಥಿರ ಸಾರಿಗೆಗಾಗಿ ಪರಿಸರಸ್ನೇಹಿ, ಬಹು-ಮಾದರಿಯ ನಗರ ಚಲನಶೀಲ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಈ ಘೋಷಣೆಯಲ್ಲಿ ಬದ್ಧತೆ ವ್ಯಕ್ತಪಡಿಸಲಾಗಿದೆ.

    Miscellaneous

    1. Jagannath Rath Yatra 2026 Commences in Puri, Odisha

    Why in News: The world-renowned Jagannath Rath Yatra 2026 commenced on July 16, 2026 along the Grand Road (Bada Danda) in the historic temple town of Puri, Odisha.

    Key Highlights:

    • Core Significance:- Dedicated to Lord Jagannath (a form of Lord Vishnu/Krishna), his elder brother Lord Balabhadra, and his sister Goddess Subhadra, commemorating their annual journey from the 12th-century Shree Jagannath Temple to their maternal aunt’s home at the Shree Gundicha Temple.
    • Prominent Rituals:- A major highlight is the Chhera Pahara—a sacred rite where the Gajapati King of Puri sweeps the chariot floors with a golden broom, symbolizing radical universal equality before the divine. The nine-day festival concludes with the return procession known as the Bahuda Yatra.
    • Historical Standing:- Celebrated continuously for centuries, it is one of India’s oldest and largest religious processions. It is unique because the deities leave the sanctum sanctorum to allow universal darshan to people of all backgrounds, overriding traditional temple entry restrictions.
    • Chariot Construction:- The three massive wooden chariots are rebuilt from scratch every year by hereditary carpenters (Maharanas) using sacred timber sourced from specified Odisha forests without using any metal nails. The construction process traditionally commences on Akshaya Tritiya.

    Jagannath Rath Yatra 2026: The Three Sacred Chariots

    Deity

    Chariot Name

    Dimensions & Wheels

    Canopy Colours

    Lord Jagannath

    Nandighosha

    45 feet tall (16 wheels)

    Red and Yellow

    Lord Balabhadra

    Taladhwaja

    44 feet tall (14 wheels)

    Red and Green

    Goddess Subhadra

    Darpadalana (Devadalana)

    43 feet tall (12 wheels)

    Red and Black

     

    2. Bihar Heli-Tourism and Air Tourism Service Scheme 2026 Launched

    Why in News: Bihar’s Tourism Department, in collaboration with the Directorate of Civil Aviation, officially launched the Bihar Heli-Tourism and Air Tourism Service Scheme 2026.

    Key Highlights: 

    • Connectivity Nodes:- Connects the state capital Patna to key ecological, historical, and religious tourist destinations, including Valmikinagar, Rajgir, and the Maa Mundeshwari Temple
    • Affordable Transit:- Deploys heavily subsidized small aircraft and helicopters to make aerial travel accessible and economical for regular commuters and tourists. 
    • Strategic Objective:- Aims to enhance remote connectivity, boost local economies, and position Bihar as a prominent global tourism hub.