ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ
1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಬರುವ ಈ ಕೆಳಗಿನ ಯಾವ ಘಟಕವು ನಿರ್ದಿಷ್ಟವಾಗಿ ಹನಿ ನೀರಾವರಿ ಮತ್ತು ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ?
A) ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ (AIBP).
B) ಪ್ರತಿ ಜಮೀನಿಗೂ (ಹೊಲಕ್ಕೂ) ನೀರು (Har Khet Ko Pani – HKKP)
C) ಪ್ರತಿ ಹನಿಗೆ ಹೆಚ್ಚು ಬೆಳೆ (Per Drop More Crop – PDMC)
D) ಜಲಾನಯನ ಅಭಿವೃದ್ಧಿ ಘಟಕ.
ಉತ್ತರ: C
2. GST ಮಂಡಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?
A) ಇದು ಸಂವಿಧಾನದ ವಿಧಿ 279A ನ ಅಡಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಯಾಗಿದೆ.
B) ಇದನ್ನು 2016ರ ಸಂವಿಧಾನದ (101ನೇ ತಿದ್ದುಪಡಿ) ಕಾಯ್ದೆಯ ಮೂಲಕ ಪರಿಚಯಿಸಲಾಯಿತು.
C) ಇದು GST -ಸಂಬಂಧಿತ ಸಮಸ್ಯೆಗಳ ಕುರಿತು ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಹೊಂದಿದೆ.
D) ಭಾರತದ ಪ್ರಧಾನ ಮಂತ್ರಿಯು GST ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
ಉತ್ತರ: D
3. ಸಂತಾಲರು ಪ್ರಾಥಮಿಕವಾಗಿ ಈ ಕೆಳಗಿನ ಯಾರ ವಿರುದ್ಧ ಹೋರಾಡಿದರು?
- ಈಸ್ಟ್ ಇಂಡಿಯಾ ಕಂಪನಿ.
- ಜಮೀನ್ದಾರರು.
- ಲೇವಾದೇವಿದಾರರು.
- ದರೋಗಗಳು.
ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
A) 1 ಮತ್ತು 2 ಮಾತ್ರ.
B) 1, 2 ಮತ್ತು 3 ಮಾತ್ರ.
C) 2, 3 ಮತ್ತು 4 ಮಾತ್ರ.
D) 1, 2, 3 ಮತ್ತು 4.
ಉತ್ತರ: D
4. FCRA 2.0 ಪೋರ್ಟಲ್ ಈ ಕೆಳಗಿನ ಯಾವುದರ ನಿಯಂತ್ರಣಕ್ಕೆ ಸಂಬಂಧಿಸಿದೆ?
A) ವಿದೇಶಿ ವ್ಯಾಪಾರ
B) ವಿದೇಶಿ ದೇಣಿಗೆ
C) ವಿದೇಶಿ ಹೂಡಿಕೆ
D) ವಿದೇಶಿ ವಿನಿಮಯ
ಉತ್ತರ: B
5. ‘ಸಂವಿಧಾನ ಹತ್ಯಾ ದಿವಸ್’ ಅನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಗುತ್ತದೆ?
A) ಜೂನ್ 21
B) ಜೂನ್ 25
C) ಜೂನ್ 26
D) ಜೂನ್ 29
ಉತ್ತರ : B
6. ಭಾರತದಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಯಾರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ?
A) ಸಿ. ರಂಗರಾಜನ್
B) ಪಿ. ಸಿ. ಮಹಲನೋಬಿಸ್
C) ವಿ. ಕೆ. ಆರ್. ವಿ. ರಾವ್
D) ಎಂ. ಎಸ್. ಸ್ವಾಮಿನಾಥನ್
ಉತ್ತರ : B
7. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಯಾರ ಗೌರವಾರ್ಥವಾಗಿ ಆಚರಿಸಲಾಗುತ್ತದೆ?
A) ಡಾ. ಎಂ. ವಿಶ್ವೇಶ್ವರಯ್ಯ
B) ಡಾ. ಹೋಮಿ ಜೆ. ಭಾಭಾ
C) ಡಾ. ಬಿಧನ್ ಚಂದ್ರ ರಾಯ್
D) ಡಾ. ಎ. ಪಿ. ಜೆ. ಅಬ್ದುಲ್ ಕಲಾಂ
ಉತ್ತರ : C















ನಿಮ್ಮದೊಂದು ಉತ್ತರ