ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)
1. ‘ಖಜುರಾಹೊ’ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಖಜುರಾಹೊ ಸ್ಮಾರಕಗಳ ಸಮೂಹವು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿದೆ.
- ಇದಕ್ಕೆ 1986 ರಲ್ಲಿ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ.
- ಈ ಸ್ಮಾರಕಗಳು ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಒಳಗೊಂಡಿವೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: A
2. ಬಹುತೇಕ ಖಜುರಾಹೊ ದೇವಾಲಯಗಳ ನಿರ್ಮಾಣಕ್ಕೆ ಕಾರಣವಾದ ರಾಜವಂಶ ಯಾವುದು?
A) ಪರಮಾರರು
B) ಚಂದೇಲರು
C) ಗುಪ್ತರು
D) ರಾಷ್ಟ್ರಕೂಟರು
ಉತ್ತರ: B
3. ‘ಅಬ್ರಹಾಂ ಒಪ್ಪಂದ’ಗಳಲ್ಲಿ ಈ ಕೆಳಗಿನ ಯಾವ ದೇಶವು ಮಧ್ಯಸ್ಥಿಕೆ ವಹಿಸಿತ್ತು?
A) ಯುನೈಟೆಡ್ ಕಿಂಗ್ಡಮ್ (UK)
B) ಅಮೆರಿಕ (USA)
C) ಫ್ರಾನ್ಸ್
D) ಸೌದಿ ಅರೇಬಿಯಾ
ಉತ್ತರ: B
4. ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಒಂದು_____________
A) ಕೇವಲ ರಾಜ್ಯಗಳಿಂದ ಮಾತ್ರ ಅನುಷ್ಠಾನಗೊಳಿಸುವ ಕೇಂದ್ರ ಪ್ರಾಯೋಜಿತ ಯೋಜನೆ.
B) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿ.
C) ಪ್ರತ್ಯೇಕವಾಗಿ FCI ನಿಂದ ಅನುಷ್ಠಾನಗೊಳಿಸುವ ಕಾರ್ಯಕ್ರಮ.
D) ಕೇವಲ ಪಂಚಾಯತ್ ರಾಜ್ ಸಂಸ್ಥೆಗಳಿಂದ ಮಾತ್ರ ಅನುಷ್ಠಾನಗೊಳಿಸುವ ಯೋಜನೆ.
ಉತ್ತರ: B
5. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (PDS) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ನ್ಯಾಯಬೆಲೆ ಅಂಗಡಿಗಳ (FPSs) ಮೂಲಕ ಅಗತ್ಯ ವಸ್ತುಗಳನ್ನು ವಿತರಿಸುತ್ತದೆ.
- ಇದು ಕೇವಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
- ಭಾರತೀಯ ಆಹಾರ ನಿಗಮವು (FCI) ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ ಮತ್ತು ಶೇಖರಿಸಿಡುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 3 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: A












ನಿಮ್ಮದೊಂದು ಉತ್ತರ