ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ | ಸೈಕ್ಲೋಸ್ಪೊರಿಯಾಸಿಸ್ (Cyclosporiasis) | ICAR ನ 98ನೇ ಸಂಸ್ಥಾಪನಾ ದಿನ

ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ

ಪರಿಸರ

ಇದೀಗ ಸುದ್ದಿಯಲ್ಲಿ:

  • ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)ದ 7ನೇ ಆಡಳಿತ ಮಂಡಳಿ ಸಭೆಯು ಸಾಂಪ್ರದಾಯಿಕ ಪರಿಹಾರ ಅರಣ್ಯೀಕರಣದಿಂದ ಭೂದೃಶ್ಯ-ಆಧಾರಿತ ಪರಿಸರ ಮರುಸ್ಥಾಪನೆಯತ್ತ ಬದಲಾವಣೆಯನ್ನು ಗುರುತಿಸಿದೆ.

ಸಭೆಯ ಫಲಿತಾಂಶಗಳು:

  • ಸುಮಾರು 15,000 ಪವಿತ್ರ ತೋಪುಗಳನ್ನು (ಆಸ್ತಾ ವನಗಳು – Aastha Vans) ಸಂರಕ್ಷಿಸಲು ₹3,000 ಕೋಟಿ ಆರಂಭಿಕ ನಿಧಿಯೊಂದಿಗೆ (2026-31) ಆಸ್ತಾ ವನ್ ಸಂರಕ್ಷಣ್ ಯೋಜನೆಯನ್ನು (AVSY) ವನ್ನು ಅನುಮೋದಿಸಲಾಗಿದೆ.
  • ಮಿಸ್ಟಿ (MISHTI – Mangrove Initiative for Shoreline Habitats and Tangible Incomes) ಯೋಜನೆಯನ್ನು 2029 ರವರೆಗೆ ಮೂರು ವರ್ಷಗಳ ಕಾಲ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ ₹500 ಕೋಟಿ ಸೇರಿಸುವುದರೊಂದಿಗೆ ಒಟ್ಟು ಅನುದಾನವನ್ನು ₹600 ಕೋಟಿಗೆ ಹೆಚ್ಚಿಸಲಾಗಿದೆ.
  • ನಾಲ್ಕು ವನ್ಯಜೀವಿ ಚೇತರಿಕೆ ಕಾರ್ಯಕ್ರಮಗಳನ್ನು ಅನುಮೋದಿಸಲಾಗಿದೆ.
  • ಉದ್ದೇಶ – ವೈಜ್ಞಾನಿಕ ಮೇಲ್ವಿಚಾರಣೆ, ಬೇಟೆ ತಡೆಗಟ್ಟುವ ಕ್ರಮಗಳು ಮತ್ತು ಆವಾಸಸ್ಥಾನ ಮರುಸ್ಥಾಪನೆಯನ್ನು ಬಲಪಡಿಸುವುದು:
  • ಗಂಗಾ ನದಿ ಡಾಲ್ಫಿನ್‌ಗಳು: ಪ್ರಮುಖ ಸಿಹಿನೀರಿನ ನದಿ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಚೇತರಿಕೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
  • ಪ್ರಾಜೆಕ್ಟ್ ಸ್ನೋ ಲೆಪರ್ಡ್ (ಹಿಮಚಿರತೆ) ಹಂತ-II:  ಹಿಮಾಲಯದಲ್ಲಿ 2ನೇ ರಾಷ್ಟ್ರವ್ಯಾಪಿ ಜನಸಂಖ್ಯಾ ಅಂದಾಜು ಕಾರ್ಯಾಚರಣೆಯನ್ನು ಇದು ಒಳಗೊಂಡಿದೆ.
  • ಭಾರತೀಯ ಘೇಂಡಾಮೃಗ: ಆವಾಸಸ್ಥಾನ ರಕ್ಷಣೆ ಮತ್ತು ಬೇಟೆ ತಡೆಗಟ್ಟುವಿಕೆ ಜಾರಿಗಾಗಿ ಸಂರಕ್ಷಣಾ ಯೋಜನೆಯನ್ನು ರೂಪಿಸಲಾಗಿದೆ.
  • ಕಾಡು ಕೋಣ: ಉಳಿದಿರುವ ಸಂಖ್ಯೆಯನ್ನು (ಸಂತತಿಯನ್ನು) ಭದ್ರಪಡಿಸಲು ವೈಜ್ಞಾನಿಕ ಆವಾಸಸ್ಥಾನ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.
  • ಸಂಗೈ (Sangai – ಹುಬ್ಬು-ಕೊಂಬಿನ ಜಿಂಕೆ): ಸಂರಕ್ಷಣೆಗಾಗಿ ನಿರಂತರ ಆರ್ಥಿಕ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲಾಗುವುದು.

ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)

  • ಇದನ್ನು 2016 ರ ಪರಿಹಾರ ಅರಣ್ಯೀಕರಣ ನಿಧಿ ಕಾಯ್ದೆಯಡಿ (2018 ರಲ್ಲಿ ಜಾರಿಗೆ ಬಂದಿತು) ಸ್ಥಾಪಿಸಲಾಗಿದೆ.
  • ಉದ್ದೇಶ – ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾದ ಅರಣ್ಯ ಭೂಮಿಯ ಪರಿಸರ ಪರಿಹಾರಕ್ಕಾಗಿ ನಿಧಿಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು.
  • ಮೂಲ: ಖರ್ಚಾಗದ ಅರಣ್ಯೀಕರಣ ನಿಧಿಗಳನ್ನು ನಿರ್ವಹಿಸಲು 2006 ರ ಆದೇಶದ ಮೂಲಕ ಟಿ.ಎನ್. ಗೋದಾವರ್ಮನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾತ್ಕಾಲಿಕ ‘ಕ್ಯಾಂಪಾ(CAMPA)’ವನ್ನು ರಚಿಸಿತು.
  • ಎರಡು ಹಂತಗಳು: 

(1) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ‘ರಾಷ್ಟ್ರೀಯ ಕ್ಯಾಂಪಾ ಪ್ರಾಧಿಕಾರ’ವು ನೀತಿಯನ್ನು ರೂಪಿಸುತ್ತದೆ, ಹಾಗೂ 

(2) ‘ರಾಜ್ಯ ಕ್ಯಾಂಪಾ ಪ್ರಾಧಿಕಾರಗಳು’ ಕ್ಷೇತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತವೆ.

  • ಹೊಣೆಗಾರಿಕೆ: ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವ ಸಂಸ್ಥೆಗಳು ಪರ್ಯಾಯ ಭೂಮಿಯನ್ನು ಒದಗಿಸಬೇಕು, ಪರಿಹಾರ ಅರಣ್ಯೀಕರಣಕ್ಕೆ ಧನಸಹಾಯ ಮಾಡಬೇಕು ಮತ್ತು ಕಳೆದುಕೊಂಡ ಅರಣ್ಯ ಪರಿಸರ ವ್ಯವಸ್ಥೆಯ ನಿವ್ವಳ ಪ್ರಸ್ತುತ ಮೌಲ್ಯವನ್ನು (NPV) ಪಾವತಿಸಬೇಕು.
  • ನಿಧಿಯ ಬಳಕೆ: ಕೃತಕ ಮತ್ತು ನೈಸರ್ಗಿಕ ಪುನರುತ್ಪಾದನೆ, ವನ್ಯಜೀವಿ ನಿರ್ವಹಣೆ, ಜಲಾನಯನ ಪ್ರದೇಶದ ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಈ ನಿಧಿಯನ್ನು ಬಳಸಲಾಗುತ್ತದೆ.

ಸೈಕ್ಲೋಸ್ಪೊರಿಯಾಸಿಸ್ (Cyclosporiasis)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ಇತ್ತೀಚಿಗೆ ಅಮೆರಿಕ (USA)ದಲ್ಲಿ ಸೈಕ್ಲೋಸ್ಪೊರಿಯಾಸಿಸ್ ಕಾಯಿಲೆಯ ವ್ಯಾಪಕ ಹರಡುವಿಕೆಯ ಬಗ್ಗೆ ವರದಿಯಾಗುತ್ತಿದೆ.

ಸೈಕ್ಲೋಸ್ಪೊರಿಯಾಸಿಸ್ ಬಗ್ಗೆ: 

  • ಕಾರಣವಾಗುವ ರೋಗಕಾರಕ: ಸೈಕ್ಲೋಸ್ಪೊರಿಯಾಸಿಸ್ ಎಂಬುದು ಸೂಕ್ಷ್ಮದರ್ಶಕೀಯ, ಏಕಕೋಶೀಯ ಪ್ರೋಟೋಜೋವಾ ಪರಾವಲಂಬಿಯಾದ ಸೈಕ್ಲೋಸ್ಪೊರಾ ಕಯೆಟಾನೆನ್ಸಿಸ್ (Cyclospora cayetanensis) ನಿಂದ ಉಂಟಾಗುವ ಆಹಾರಜನ್ಯ ಕರುಳಿನ ಕಾಯಿಲೆಯಾಗಿದೆ.
  • ಹರಡುವಿಕೆ: ಇದು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಕಟ್ಟುನಿಟ್ಟಾಗಿ ಮಲ-ಬಾಯಿ ಸಂಪರ್ಕ ಮಾರ್ಗದಲ್ಲಿ ಹರಡುತ್ತದೆ.
  • ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ: ವಿಸರ್ಜಿಸಲ್ಪಟ್ಟ ಪರಾವಲಂಬಿ ಮೊಟ್ಟೆಗಳು ಪ್ರಬುದ್ಧವಾಗಲು ಮತ್ತು ಸಾಂಕ್ರಾಮಿಕವಾಗಲು ಪರಿಸರದಲ್ಲಿ ದಿನಗಳಿಂದ ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ.
  • ಆತಿಥೇಯ ವ್ಯಾಪ್ತಿ : ಮಾನವರು ಮಾತ್ರ ಈ ರೋಗಾಣುವಿನ ತಿಳಿದಿರುವ ಆತಿಥೇಯರಾಗಿದ್ದಾರೆ.
  • ರೋಗಲಕ್ಷಣಗಳು: ತೀವ್ರವಾದ ಮತ್ತು ವಿಪರೀತವಾದ ನೀರಿನಂಶದ ಅತಿಸಾರ, ಆಯಾಸ, ಸ್ನಾಯು ಸೆಳೆತ ಮತ್ತು ತೂಕ ನಷ್ಟಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
  • ಹೆಚ್ಚಿನ ಅಪಾಯವಿರುವ ಗುಂಪುಗಳು: ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು, ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
  • ರೋಗನಿರ್ಣಯ: ದಿನನಿತ್ಯದ ಮಲ ಪರೀಕ್ಷೆಗಳಲ್ಲಿ ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ; ಇದಕ್ಕೆ ವಿಶೇಷ ಸ್ಟೈನಿಂಗ್ (special staining), UV ಫ್ಲೋರೊಸೆನ್ಸ್ ಮೈಕ್ರೋಸ್ಕೋಪಿ ಅಥವಾ PCR ಪರೀಕ್ಷೆಯ ಅಗತ್ಯವಿರುತ್ತದೆ.
  • ಚಿಕಿತ್ಸೆ: ಇದನ್ನು ಆಂಟಿಬಯೋಟಿಕ್ (ಸೂಕ್ಷ್ಮಜೀವಿ ನಿರೋಧಕ) ಟ್ರೈಮೆಥೋಪ್ರಿಮ್-ಸಲ್ಫಮೆಥೋಕ್ಸಜೋಲ್ (trimethoprim-sulfamethoxazole – TMP-SMX) ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ.

ICAR ನ 98ನೇ ಸಂಸ್ಥಾಪನಾ ದಿನ

ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿ:

  • ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) 98ನೇ ಸಂಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಕೃಷಿ ಸಚಿವಾಲಯವು ವಿಕಸಿತ್ ಭಾರತ್ 2047ರ ಪ್ರಮುಖ ಆಧಾರಸ್ತಂಭವಾಗಿರುವ “ಅಭಿವೃದ್ಧಿ ಹೊಂದಿದ ಕೃಷಿ ಮತ್ತು ಸಮೃದ್ಧ ರೈತರು” ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ.

ನಿರೀಕ್ಷಿತ ಫಲಶ್ರುತಿಗಳು: 

  • 100 ಹವಾಮಾನ-ಸ್ಮಾರ್ಟ್ ಗ್ರಾಮಗಳು: ಹವಾಮಾನ- ಚೇತರಿಕೆ ಕೃಷಿ, ಜಲ ಸಂರಕ್ಷಣೆ ಮತ್ತು ವಿಪತ್ತು-ಕಡಿತದ ಮಾದರಿಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಲು, ICAR ನ ಶತಮಾನೋತ್ಸವದ ಮೊದಲು ಕನಿಷ್ಠ 100 ಗ್ರಾಮಗಳನ್ನು ಮಾದರಿ ಹಳ್ಳಿಗಳಾಗಿ ಅಭಿವೃದ್ಧಿಪಡಿಸಲಾಗುವುದು.
  • ಒಂದು ಸಂಸ್ಥೆ-ಒಂದು ಮಹಾನ್ ಆವಿಷ್ಕಾರ (One Institute-One Grand Innovation): ಪ್ರತಿಯೊಂದು ICAR ಸಂಸ್ಥೆಯು ಮುಂದಿನ ಎರಡು ವರ್ಷಗಳೊಳಗೆ ಕನಿಷ್ಠ ಒಂದು ಪ್ರಮುಖ ತಾಂತ್ರಿಕ ಆವಿಷ್ಕಾರ, ಹೊಸ ಲಸಿಕೆ ಅಥವಾ ಹೊಸ ಬೆಳೆ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
  • ಮಿಷನ್ ICAR-100: ಬೃಹತ್ ಪ್ರಮಾಣದ ಕೃಷಿ ಪ್ರಾತ್ಯಕ್ಷಿಕೆಗಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು (KVKs) ನಾವೀನ್ಯತಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಹಾಗೂ ಪ್ರತಿಯೊಂದು KVK ಯು ಕನಿಷ್ಠ 100 ಗ್ರಾಮಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.
  • ICAR ಮುಕ್ತ ಡಿಜಿಟಲ್ ಜ್ಞಾನ ವೇದಿಕೆ: ಸ್ಮಾರ್ಟ್‌ಫೋನ್‌ಗಳ ಮೂಲಕ ರೈತರಿಗೆ ಉಚಿತ ಬೆಳೆ ಸಲಹೆಗಳು, ಮಣ್ಣು-ಪರೀಕ್ಷಾ ವರದಿಗಳು ಮತ್ತು ಕೃಷಿ ಮಾರ್ಗದರ್ಶಿ ವೀಡಿಯೊಗಳನ್ನು ಒದಗಿಸುವ ಮೊಬೈಲ್-ಆಧಾರಿತ ಮುಕ್ತ ಜ್ಞಾನ ವೇದಿಕೆಯನ್ನು ರೂಪಿಸಲಾಗುವುದು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)

  • 1929 ರಲ್ಲಿ ಸ್ಥಾಪನೆಯಾದ (ಮೂಲತಃ ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್) ಇದು ಭಾರತದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
  • ಇದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
  • ಕೇಂದ್ರ ಕೃಷಿ ಸಚಿವರು ICAR ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಕೃಷಿ ಖಾತೆ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts