Blog

  • ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) | ‘ಪ್ರಾಜೆಕ್ಟ್ ಹನುಮಾನ್’ (HANUMAN) | ಸುಂಗುಡಿ ಸೀರೆಗಳು

    ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಇರಾನ್ ಪರಮಾಣು ಬಾಂಬ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ಯ (IAEA) ಮಹಾನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

    ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯ ಬಗ್ಗೆ:

    • ಇದನ್ನು 1957ರಲ್ಲಿ ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ ವಿಶ್ವದ “ಶಾಂತಿಗಾಗಿ ಪರಮಾಣು” ಸಂಘಟನೆಯಾಗಿ ಸ್ಥಾಪಿಸಲಾಯಿತು.
    • ಪ್ರಮುಖ ಉದ್ದೇಶ:- ಇದು ವಿಶ್ವಸಂಸ್ಥೆಯ ‘ಪರಮಾಣು ಉಸ್ತುವಾರಿ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಉತ್ತೇಜಿಸುವುದು ಮತ್ತು ಅಣ್ವಸ್ತ್ರ ಪ್ರಸರಣದ ವಿರುದ್ಧ ರಕ್ಷಣಾತ್ಮಕ ಮಾನದಂಡಗಳನ್ನು ದೃಢಪಡಿಸುವುದು.
    • ಕೇಂದ್ರ ಕಚೇರಿ:- ಆಸ್ಟ್ರಿಯಾದ ವಿಯೆನ್ನಾದಲ್ಲಿದೆ.
    • 2005ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ:- ಅಣ್ವಸ್ತ್ರ ಪ್ರಸರಣ ತಡೆಗೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    • ಸದಸ್ಯತ್ವ:- ಪ್ರಸ್ತುತ ಈ ಸಂಸ್ಥೆಯು 178 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಭಾರತವು ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.

    ‘ಪ್ರಾಜೆಕ್ಟ್ ಹನುಮಾನ್’ (HANUMAN)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶ ಸರ್ಕಾರವು ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಸುಧಾರಿತ ರಕ್ಷಣೆ, ಪರಿಶೀಲನೆ ಮತ್ತು ಸಮುದಾಯ ಸಂರಕ್ಷಣಾ ಕ್ರಮಗಳನ್ನು ಒಳಗೊಂಡ ‘ಪ್ರಾಜೆಕ್ಟ್ ಹನುಮಾನ್’ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.

    ಪ್ರಾಜೆಕ್ಟ್ ಹನುಮಾನ್ (HANUMAN) ಬಗ್ಗೆ:

    • HANUMAN ವಿಸ್ತೃತ ರೂಪ:- ಹೀಲಿಂಗ ಅಂಡ್ ನರ್ಚರಿಂಗ್ ಯೂನಿಟ್ಸ್ ಫಾರ್ ಮೋನಿಟರಿಂಗ್, ಏಡ್ ಅಂಡ್ ನರ್ಸಿಂಗ್ ಆಫ್ ವೈಲ್ಡ್ ಲೈಫ್ (ವನ್ಯಜೀವಿಗಳ ಪರಿಶೀಲನೆ, ನೆರವು ಮತ್ತು ಆರೈಕೆಗಾಗಿ ಚಿಕಿತ್ಸೆ ಹಾಗೂ ಪೋಷಣಾ ಘಟಕಗಳು).
    • ಪ್ರಮುಖ ಉದ್ದೇಶ:- ಆನೆಗಳ ದಾಳಿ ಮತ್ತು ಹಾವು ಕಡಿತದಂತಹ ಘಟನೆಗಳಿಗೆ ಹೆಚ್ಚಾಗಿ ತುತ್ತಾಗುವ ಅರಣ್ಯದಂಚಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ವೈಜ್ಞಾನಿಕ ಉಪಕರಣಗಳು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಮಾನವ ಮತ್ತು ವನ್ಯಜೀವಿಗಳ ನಡುವಿನ ‘ಸಹಬಾಳ್ವೆ’ಯನ್ನು ಉತ್ತೇಜಿಸುವುದು.

    ಈ ಯೋಜನೆಯ ಪ್ರಮುಖ ಅಂಶಗಳು:

    • ಕ್ಷಿಪ್ರ ಸ್ಪಂದನಾ ವ್ಯವಸ್ಥೆ:- ತ್ವರಿತ ರಕ್ಷಣೆಗಾಗಿ 100 ಜಿಪಿಎಸ್-ಸುಸಜ್ಜಿತ ವಾಹನಗಳು, 93 ಕ್ಷಿಪ್ರ ಸ್ಪಂದನಾ ಘಟಕಗಳು ಮತ್ತು 7 ವನ್ಯಜೀವಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.
    • ರಕ್ಷಣಾ ಕೇಂದ್ರಗಳು:- ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗಾಗಿ ವಿಶಾಖಪಟ್ಟಣಂ, ರಾಜಮಹೇಂದ್ರವರಂ, ತಿರುಪತಿ ಮತ್ತು ಬಿರ್ಲುಟ್‌ನಲ್ಲಿ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
    • ‘ವಜ್ರ’ ಸ್ವಯಂಸೇವಕ ಪಡೆ:- ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸಲು ಗ್ರಾಮ ಮಟ್ಟದಲ್ಲಿ ‘ವಜ್ರ’ ಎಂಬ ಸ್ವಯಂಸೇವಕ ತಂಡಗಳನ್ನು ರಚಿಸಲಾಗಿದೆ.
    • ತಂತ್ರಜ್ಞಾನದ ಅಳವಡಿಕೆ:- ವನ್ಯಜೀವಿಗಳ ಚಲನವಲನಗಳನ್ನು ಪತ್ತೆಹಚ್ಚಿ ಜನರಿಗೆ ತ್ವರಿತ ‘ಪೂರ್ವ ಮುನ್ನೆಚ್ಚರಿಕೆ’ ರವಾನಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
    • ‘ಹನುಮಾನ್ ಆ್ಯಪ್’:- ಸಂಘರ್ಷದ ಪ್ರಕರಣಗಳನ್ನು ವರದಿ ಮಾಡಲು ಮತ್ತು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
    • ಪರಿಷ್ಕೃತ ಪರಿಹಾರ ಧನ:- ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ₹10 ಲಕ್ಷ, ಗಾಯಗೊಂಡರೆ ₹2 ಲಕ್ಷ ಹಾಗೂ ಜಾನುವಾರು ನಷ್ಟಕ್ಕೆ ಮಾರುಕಟ್ಟೆ ಮೌಲ್ಯದಷ್ಟು ಪರಿಹಾರವನ್ನು ನಿಗದಿಪಡಿಸಲಾಗಿದೆ.

    ಸುಂಗುಡಿ ಸೀರೆಗಳು

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ವಿಶಿಷ್ಟ ಮತ್ತು ಪರಿಸರಸ್ನೇಹಿ ಉಡುಗೆಗಳನ್ನು ಬಯಸುವ ಗ್ರಾಹಕರಲ್ಲಿ ಸಾಂಪ್ರದಾಯಿಕ ‘ಸುಂಗುಡಿ ಸೀರೆಗಳು’ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿವೆ.

    ಸುಂಗುಡಿ ಸೀರೆಗಳ ಬಗ್ಗೆ ಪ್ರಮುಖ ಅಂಶಗಳು:

    • ಐತಿಹಾಸಿಕ ಹಿನ್ನೆಲೆ:- 17ನೇ ಶತಮಾನದಲ್ಲಿ ಗುಜರಾತಿನಿಂದ ತಮಿಳುನಾಡಿನ ಮಧುರೈಗೆ ವಲಸೆ ಬಂದ ‘ಸೌರಾಷ್ಟ್ರ ಸಮುದಾಯ’ವು ಈ ಸಾಂಪ್ರದಾಯಿಕ ಹತ್ತಿ ಸೀರೆಗಳ ನೇಯ್ಗೆಯನ್ನು ಕರಗತ ಮಾಡಿಕೊಂಡಿದೆ.
    • ವಿಶೇಷ ವಿನ್ಯಾಸ:- ನಕ್ಷತ್ರ ಖಚಿತ ರಾತ್ರಿ ಆಕಾಶದಿಂದ ಪ್ರೇರಿತವಾದ, ‘ಬಂಧ ಮತ್ತು ವರ್ಣ’ (Tie-and-dye) ತಂತ್ರದ ಸಂಕೀರ್ಣ ವಿನ್ಯಾಸಗಳನ್ನು ಈ ಸೀರೆಗಳು ಹೊಂದಿವೆ.
    • ತಯಾರಿಕಾ ಪ್ರಕ್ರಿಯೆ:- ಕೈಯಿಂದಲೇ ಗಂಟುಹಾಕಿ, ವರ್ಣಲೇಪನ ಮಾಡಿ, ತೊಳೆದು, ಪಿಷ್ಟಲೇಪನ ಮಾಡಿ ಹಾಗೂ ಬಿಸಿಲಿನಲ್ಲಿ ಒಣಗಿಸುವ ಮೂಲಕ ಇವುಗಳನ್ನು ವಿಶಿಷ್ಟವಾಗಿ ತಯಾರಿಸಲಾಗುತ್ತದೆ.
    • ವಿಶಿಷ್ಟತೆ:- ಈ ವಿಶಿಷ್ಟ ಕರಕುಶಲ ಪ್ರಕ್ರಿಯೆಯಿಂದಾಗಿ ಸೀರೆಯ ಮೇಲೆ 15,000ಕ್ಕೂ ಹೆಚ್ಚು ಸೂಕ್ಷ್ಮವಾದ ಶ್ವೇತ ಬಿಂದುಗಳು ಅತ್ಯಂತ ಸುಂದರವಾಗಿ ಮೂಡುತ್ತವೆ.
    • ಗುಣಮಟ್ಟ:- 15 ದಿನಗಳಿಗಿಂತ ಹೆಚ್ಚು ಕಾಲಾವಧಿ ತಗಲುವ ಈ ಪ್ರಕ್ರಿಯೆಯು, ಹಗುರವಾದ ಹಾಗೂ ಗಾಳಿಯಾಡುವ ಸಾಂಸ್ಕೃತಿಕ ಶ್ರೀಮಂತಿಕೆಯ ಉಡುಗೆಗಳನ್ನು ಸೃಷ್ಟಿಸುತ್ತದೆ.
    • ಭೌಗೋಳಿಕ ಸೂಚ್ಯಂಕ ಮಾನ್ಯತೆ:- ಈ ಕಲೆಯ ವಿಶಿಷ್ಟತೆಯನ್ನು ಗುರುತಿಸಿ, ಮಧುರೈ ಸುಂಗುಡಿ ಸೀರೆಗಳಿಗೆ 2005ರ ಡಿಸೆಂಬರ್‌ನಲ್ಲಿ ಅಧಿಕೃತವಾಗಿ GI Tag ಮಾನ್ಯತೆಯನ್ನು ನೀಡಲಾಗಿದೆ.
  • ಹಾವಿನ ಕಡಿತ ಮತ್ತು ರೇಬೀಸ್ ನಿಯಂತ್ರಣಕ್ಕಾಗಿ ಕರ್ನಾಟಕದ ‘ರಾಜ್ಯ ಕ್ರಿಯಾ ಯೋಜನೆ’

    ಹಾವಿನ ಕಡಿತ ಮತ್ತು ರೇಬೀಸ್ ನಿಯಂತ್ರಣಕ್ಕಾಗಿ ಕರ್ನಾಟಕದ ‘ರಾಜ್ಯ ಕ್ರಿಯಾ ಯೋಜನೆ’

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರವು ಹಾವಿನ ಕಡಿತದ ವಿಷಬಾಧೆ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಜ್ಯ ಕ್ರಿಯಾ ಯೋಜನೆ (SAPSE) ಹಾಗೂ ರೇಬೀಸ್ ನಿರ್ಮೂಲನೆಗಾಗಿ ರಾಜ್ಯ ಕ್ರಿಯಾ ಯೋಜನೆ (SAPRE) ಯನ್ನು ಜಾರಿಗೊಳಿಸಿದೆ.
    • ಹಾವಿನ ಕಡಿತದ ಸಾವುಗಳನ್ನು ತೀವ್ರವಾಗಿ ತಗ್ಗಿಸುವ ಉದ್ದೇಶದಿಂದ ಪ್ರತ್ಯೇಕವಾದ ಸಮಗ್ರ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿದ ಭಾರತದ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದೆ.
    • 2030 ರ ವೇಳೆಗೆ ರೇಬೀಸ್ ಸಾವುಗಳನ್ನು ಶೂನ್ಯಕ್ಕೆ ಇಳಿಸುವುದು  ಮತ್ತು ಹಾವಿನ ಕಡಿತದ ಘಟನೆಗಳನ್ನು ಗಣನೀಯವಾಗಿ ತಗ್ಗಿಸುವುದು ಈ ಎರಡೂ ಯೋಜನೆಗಳ ಪ್ರಮುಖ ಗುರಿಯಾಗಿದೆ.

    ಈ ಕ್ರಿಯಾ ಯೋಜನೆಗಳ ಪ್ರಮುಖ ಅಂಶಗಳು:

    SAPSE (ಹಾವಿನ ಕಡಿತಕ್ಕೇ ಕ್ರಿಯಾ ಯೋಜನೆ):

    • ಘೋಷಿತ ಕಾಯಿಲೆ (Notifiable Disease):- ಕರ್ನಾಟಕದಲ್ಲಿ ಹಾವಿನ ಕಡಿತದ ಪ್ರಕರಣಗಳನ್ನು ಈಗ ‘ಘೋಷಿತ ಕಾಯಿಲೆ’ ಎಂದು ಘೋಷಿಸಲಾಗಿದ್ದು, ಇವುಗಳನ್ನು ಕಡ್ಡಾಯವಾಗಿ ವರದಿ ಮಾಡುವುದನ್ನು ಖಚಿತಪಡಿಸಲಾಗಿದೆ.
    • ಚಿಕಿತ್ಸೆ ಲಭ್ಯವಿದೆ:- ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ವಿಷನಿರೋಧಕ (ASV – ಆಂಟಿ-ಸ್ನೇಕ್ ವೆನಮ್) ಲಭ್ಯತೆಯನ್ನು ಖಚಿತಪಡಿಸುವುದು ಹಾಗೂ ಯಾವುದೇ ಮುಂಗಡ ಪಾವತಿಯಿಲ್ಲದೆ ತ್ವರಿತ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸುವುದು.
    • ಕ್ರಮಗಳು:- ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೇಲೆ ಗಮನಹರಿಸುತ್ತದೆ.

    SAPRE (ರೇಬೀಸ್ ಕ್ರಿಯಾ ಯೋಜನೆ):

    • ಘೋಷಿತ ಕಾಯಿಲೆ:- ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, 2022 ರಲ್ಲಿಯೇ ರೇಬೀಸ್ ಅನ್ನು ‘ಘೋಷಿತ ಕಾಯಿಲೆ’ ಎಂದು ಘೋಷಿಸಲಾಗಿದೆ.
    • ಗುರಿ:- 2030 ರ ವೇಳೆಗೆ ನಾಯಿಗಳಿಂದ ಮನುಷ್ಯರಿಗೆ ಹರಡುವ ರೇಬೀಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
    • ರೇಬೀಸ್-ಮುಕ್ತ ನಗರಗಳು:- ಬೀದಿ ನಾಯಿಗಳ ಗಣತಿ ಸಂಖ್ಯೆ ನಿರ್ವಹಣೆ ಮತ್ತು ಬೃಹತ್ ಲಸಿಕಾ ಅಭಿಯಾನದ ಮೇಲೆ ಗಮನಹರಿಸುವ ಮೂಲಕ 11 ಪ್ರಮುಖ ನಗರ ಕೇಂದ್ರಗಳಲ್ಲಿ “ರೇಬೀಸ್-ಮುಕ್ತ ನಗರಗಳು” ಯೋಜನೆಯನ್ನು ಪ್ರಾರಂಭಿಸುವುದು.
    • ಆರೋಗ್ಯ ಉಪಕ್ರಮಗಳು:- ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೇಬೀಸ್ ನಿರೋಧಕ ಲಸಿಕೆಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್ ಅನ್ನು ಒದಗಿಸಲಾಗುತ್ತಿದೆ.

    ಮಹತ್ವ:

    • ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರವಾಗಿ ಕಾರ್ಯನಿರ್ವಹಿಸುವ “ಒಂದು ಆರೋಗ್ಯ” (ಒನ್ ಹೆಲ್ತ್) ವಿಧಾನದ ಅಡಿಯಲ್ಲಿ ಈ ಉಪಕ್ರಮಗಳನ್ನು ಮುನ್ನಡೆಸಲಾಗುತ್ತಿದೆ.
  • ಗೊಲೆಸ್ತಾನ್ ಅರಮನೆ | ‘ಎಲ್-ನಿನೊ’ (El Niño) | ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS) | ಭಾರತ-ಜಪಾನ್ : ಹಣಕಾಸು ವಿನಿಮಯ ಒಪ್ಪಂದ ನವೀಕರಣ

    ಗೊಲೆಸ್ತಾನ್ ಅರಮನೆ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ವೈಮಾನಿಕ ದಾಳಿಯಿಂದ ಉಂಟಾದ ಪ್ರಬಲ ಆಘಾತ ತರಂಗಗಳು ಮತ್ತು ಸಿಡಿದುಬಿದ್ದ ಅವಶೇಷಗಳಿಂದಾಗಿ, ‘ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ’ವಾಗಿರುವ ತೆಹ್ರಾನ್‌ನ ಐತಿಹಾಸಿಕ ‘ಗೊಲೆಸ್ತಾನ್ ಅರಮನೆ’ಗೆ ಹಾನಿಯಾಗಿದೆ.

    ಗೊಲೆಸ್ತಾನ್ ಅರಮನೆಯ ಬಗ್ಗೆ:

    • ಇದು ಐತಿಹಾಸಿಕ ರಾಜಮನೆತನದ ಸಂಕೀರ್ಣವಾಗಿದ್ದು, ಖಜಾರ್ ರಾಜವಂಶದ ಅಧಿಕೃತ ನಿವಾಸವಾಗಿ ಕಾರ್ಯನಿರ್ವಹಿಸುತ್ತಿತ್ತು. 
    • ಇದು ಇರಾನ್ ರಾಜಧಾನಿ ತೆಹ್ರಾನ್‌ನ ಅತ್ಯಂತ ಹಳೆಯ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.
    • ತೆಹ್ರಾನ್ ನಗರವು ಪ್ರಮುಖ ರಾಜಕೀಯ ಕೇಂದ್ರವಾಗಿ ಪ್ರಾಮುಖ್ಯತೆ ಪಡೆದುಕೊಂಡ ಸಫಾವಿಡ್ ರಾಜವಂಶದ ಕಾಲದಲ್ಲಿಯೇ ಈ ಸಂಕೀರ್ಣದ ಮೂಲವನ್ನು ಗುರುತಿಸಬಹುದು. ತದನಂತರ ಬಂದ ಆಡಳಿತಗಾರರು ಈ ಅರಮನೆ ಸಂಕೀರ್ಣವನ್ನು ಮತ್ತಷ್ಟು ವಿಸ್ತರಿಸಿ, ಜೀರ್ಣೋದ್ಧಾರಗೊಳಿಸಿದರು.
    • ಗೊಲೆಸ್ತಾನ್ ಅರಮನೆಯು ಸಾಂಪ್ರದಾಯಿಕ ಪರ್ಷಿಯನ್ ವಾಸ್ತುಶಿಲ್ಪ ಮತ್ತು 19ನೇ ಶತಮಾನದಲ್ಲಿ ಅಳವಡಿಸಿಕೊಳ್ಳಲಾದ ಪಾಶ್ಚಿಮಾತ್ಯ ಪ್ರಭಾವಗಳ ಅನನ್ಯ ಸಮ್ಮಿಲನವನ್ನು ಪ್ರತಿಬಿಂಬಿಸುತ್ತದೆ.
    • 2013ರಲ್ಲಿ ‘ಯುನೆಸ್ಕೋ’ ಪಟ್ಟಿಗೆ ಸೇರ್ಪಡೆಗೊಂಡ ಈ ಐತಿಹಾಸಿಕ ತಾಣವು ಸಾಂಸ್ಕೃತಿಕ ದಾಖಲೆಗಳು, ಆರಂಭಿಕ ಇರಾನಿಯ ಛಾಯಾಗ್ರಹಣ ಮತ್ತು ಐತಿಹಾಸಿಕ ಪಟ್ಟಾಭಿಷೇಕಗಳು ನಡೆದ ಸ್ಥಳಗಳನ್ನು ಇಂದಿಗೂ ಸಂರಕ್ಷಿಸಿಕೊಂಡು ಬಂದಿದೆ.

    ಅರಮನೆ ಸಂಕೀರ್ಣದೊಳಗಿರುವ ಪ್ರಮುಖ ರಚನೆಗಳು:

    • ಶಮ್ಸ್-ಒಲ್-ಎಮಾರೆಹ್ (‘ಸೂರ್ಯನ ಕಟ್ಟಡ’):- ಇದು ಅರಮನೆ ಸಂಕೀರ್ಣದ ಅತ್ಯಂತ ಪ್ರಸಿದ್ಧ ಹಾಗೂ ಭವ್ಯ ಕಟ್ಟಡಗಳಲ್ಲಿ ಒಂದಾಗಿದೆ. ಇದನ್ನು 1860ರ ದಶಕದಲ್ಲಿ ನಾಸರ್ ಅಲ್-ದಿನ್ ಶಾ ಖಜಾರ್ ನಿರ್ಮಿಸಿದನು.
    • ಅಮೃತಶಿಲೆಯ ಸಿಂಹಾಸನ ಭವನ (Takht-e-Marmar):- ಈ ಭವನವನ್ನು ರಾಜಮನೆತನದ ಪಟ್ಟಾಭಿಷೇಕಗಳು ಮತ್ತು ಪ್ರಮುಖ ಅಧಿಕೃತ ಸಮಾರಂಭಗಳಿಗಾಗಿ ಬಳಸಲಾಗುತ್ತಿತ್ತು.
    • ದರ್ಪಣ ಸಭಾಂಗಣ:- ಇದು ಅತ್ಯಂತ ನೈಪುಣ್ಯತೆಯಿಂದ ಕೂಡಿದ ವಿಸ್ತಾರವಾದ ದರ್ಪಣ ಚಿತ್ತಾರ ಮತ್ತು ವೈಭವೋಪೇತ ಅಲಂಕಾರಗಳಿಗೆ ವಿಶ್ವವಿಖ್ಯಾತವಾಗಿದೆ.
    • ವಸ್ತುಸಂಗ್ರಹಾಲಯ ಕಟ್ಟಡಗಳು:- ಖಜಾರ್-ಕಾಲದ ವರ್ಣಚಿತ್ರಗಳು, ರಾಜಮನೆತನಕ್ಕೆ ನೀಡಲಾದ ಉಡುಗೊರೆಗಳು ಮತ್ತು ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶಿಸುವ ಹಲವಾರು ವಸ್ತುಸಂಗ್ರಹಾಲಯಗಳನ್ನು ಈ ಸಂಕೀರ್ಣವು ಒಳಗೊಂಡಿದೆ.

    ‘ಎಲ್-ನಿನೊ’ (El Niño)

    ಭೂಗೋಳ

    ಇದೀಗ ಸುದ್ದಿಯಲ್ಲಿದೆ:

    • ಪ್ರಸ್ತುತ ಚಾಲ್ತಿಯಲ್ಲಿರುವ ‘ಲಾ-ನಿನಾ’ (La Niña) ಪರಿಸ್ಥಿತಿಯು ಕ್ಷೀಣಿಸಿ ‘“ಎಲ್ ನಿನೊ ದಕ್ಷಿಣ ಅಲೋಲನೆ-ತಟಸ್ಥ’ (ENSO-neutral) ಸ್ಥಿತಿಗೆ ಮರಳಿದ ಬಳಿಕ, 2026ರ ದ್ವಿತೀಯಾರ್ಧದಲ್ಲಿ ‘ಎಲ್-ನಿನೊ’ ಉದ್ಭವಿಸುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ‘ವಿಶ್ವ ಹವಾಮಾನ ಸಂಸ್ಥೆ’ (WMO) ಮುನ್ಸೂಚನೆ ನೀಡಿದೆ.
    • ಎಲ್-ನಿನೊ ಮತ್ತು ಲಾ-ನಿನಾ ಎಂಬ ಸಮಭಾಜಕ ವೃತ್ತದ ಪೆಸಿಫಿಕ್ ಸಾಗರ ವಲಯದಲ್ಲಿನ ತಾಪಮಾನದ ವೈಪರೀತ್ಯಗಳಿಂದ ಉಂಟಾಗುವ ಸಂಕೀರ್ಣ ಹವಾಮಾನ ವಿದ್ಯಮಾನಗಳಾಗಿವೆ.

    ಎಲ್-ನಿನೊ ಮತ್ತು ಲಾ-ನಿನಾ ನಡುವಿನ ವ್ಯತ್ಯಾಸಗಳು:

    ಗುಣಲಕ್ಷಣಗಳು

    ಎಲ್-ನಿನೊ (ಉಷ್ಣ ಹಂತ)

    ಲಾ-ನಿನಾ (ಶೀತ ಹಂತ)

    ಅರ್ಥ

    ಸ್ಪ್ಯಾನಿಷ್ ಭಾಷೆಯಲ್ಲಿ “ಪುಟ್ಟ ಬಾಲಕ” (Little Boy) ಎಂದರ್ಥ.

    ಸ್ಪ್ಯಾನಿಷ್ ಭಾಷೆಯಲ್ಲಿ “ಪುಟ್ಟ ಬಾಲಕಿ” (Little Girl) ಎಂದರ್ಥ.

    ಪೂರ್ವ ಪೆಸಿಫಿಕ್ ಮಹಾ ಸಾಗರದಲ್ಲಿ ತಾಪಮಾನ

    ಅಸಹಜ ತಾಪಮಾನ ಏರಿಕೆ.

    ಅಸಹಜ ತಾಪಮಾನ ಕುಸಿತ/ತಂಪಾಗುವಿಕೆ. 

    ವಾಣಿಜ್ಯ ಮಾರುತಗಳು

    ದುರ್ಬಲಗೊಳ್ಳುತ್ತವೆ/ ದಿಕ್ಕು ಬದಲಿಸುತ್ತವೆ.

    ಅಸಾಮಾನ್ಯವಾಗಿ ಪ್ರಬಲಗೊಳ್ಳುತ್ತವೆ.

    ಭಾರತದಲ್ಲಿ ಮಾನ್ಸೂನ್ (ಮುಂಗಾರು)

    ದುರ್ಬಲಗೊಳಿಸುತ್ತದೆ; ಇದು ಬಹುತೇಕ ಬರಗಾಲಕ್ಕೆ ಕಾರಣವಾಗುತ್ತದೆ.

    ಬಲಪಡಿಸುತ್ತದೆ; ವಿಪರೀತ ಮಳೆಗೆ ಕಾರಣವಾಗುತ್ತದೆ.

    ಭಾರತದಲ್ಲಿ ಚಳಿಗಾಲ

    ಸಾಮಾನ್ಯವಾಗಿ ಬೆಚ್ಚಗಿನ/ ಸೌಮ್ಯವಾದ ಚಳಿಗಾಲ.

    ಉತ್ತರ ಭಾರತದಲ್ಲಿ ತೀವ್ರ ಸ್ವರೂಪದ ಚಳಿಗಾಲ.

    ಆವರ್ತನ

    ಪ್ರತಿ 2–7 ವರ್ಷಗಳಿಗೊಮ್ಮೆ ಸಂಭವಿಸುತ್ತದೆ; 9–12 ತಿಂಗಳುಗಳ ಕಾಲ ಇರುತ್ತದೆ. 

    ಪ್ರತಿ 2–7 ವರ್ಷಗಳಿಗೊಮ್ಮೆ ಸಂಭವಿಸುತ್ತದೆ; 1–3 ವರ್ಷಗಳವರೆಗೆ ಇರಬಹುದು. 

    ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಶ್ರೀಲಂಕಾದ ನೈಋತ್ಯ ಕರಾವಳಿಯ ಬಳಿ ಅಮೆರಿಕ ನೌಕಾಪಡೆಯ ಜಲಾಂತರ್ಗಾಮಿಯು ನಡೆಸಿದ ಟಾರ್ಪಿಡೊ ದಾಳಿಗೆ ಸಿಲುಕಿ, ಇರಾನ್‌ನ ಯುದ್ಧನೌಕೆಯಾದ ‘IRIS ಡೆನಾ’ ಮುಳುಗಡೆಯಾಗಿದೆ ಎಂದು ವರದಿಯಾಗಿದೆ.

    ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS)ದ ಬಗ್ಗೆ:

    • ಇದು ಸಾಗರಗಳು ಮತ್ತು ಸಮುದ್ರಗಳ ನಿರ್ವಹಣೆಗಾಗಿ ಅಧಿಕೃತ ಕಾನೂನು ಚೌಕಟ್ಟನ್ನು ರೂಪಿಸುವ ಸಮಗ್ರ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
    • 1982ರಲ್ಲಿ ಜಮೈಕಾದ ‘ಮಾಂಟೆಗೊ ಬೇ’ಯಲ್ಲಿ ಇದನ್ನು ಅಂಗೀಕರಿಸಲಾಯಿತು ಮತ್ತು 1994ರಲ್ಲಿ ಇದು ಅಧಿಕೃತವಾಗಿ ಜಾರಿಗೆ ಬಂದಿತು.

    UNCLOS ಈ ಕೆಳಗಿನವುಗಳನ್ನು ವ್ಯಾಖ್ಯಾನಿಸುತ್ತದೆ:

      • ತನ್ನ ವ್ಯಾಪಕವಾದ ವ್ಯಾಪ್ತಿಯ ಕಾರಣದಿಂದಾಗಿ, ಈ ಒಪ್ಪಂದವನ್ನು ಸಾಮಾನ್ಯವಾಗಿ “ಸಾಗರಗಳ ಸಂವಿಧಾನ” ಎಂದೇ ಕರೆಯಲಾಗುತ್ತದೆ.
    • ಕರಾವಳಿ ರಾಷ್ಟ್ರಗಳ ಕಡಲ ಗಡಿ ರೇಖೆಗಳು.
    • ವಿವಿಧ ಕಡಲ ವಲಯಗಳಲ್ಲಿ ರಾಷ್ಟ್ರಗಳ ಹಕ್ಕುಗಳು ಮತ್ತು ಕರ್ತವ್ಯಗಳು.
    • ನೌಕಾಯಾನ, ಸಂಪನ್ಮೂಲಗಳ ಪರಿಶೋಧನೆ ಮತ್ತು ಸಮುದ್ರ ಪರಿಸರ ಸಂರಕ್ಷಣೆಯ ನಿಯಮಗಳು.

    UNCLOS ನ ಸದಸ್ಯತ್ವ:- 

    • ಐರೋಪ್ಯ ಒಕ್ಕೂಟ (EU), ಭಾರತ, ಜಪಾನ್ ಮತ್ತು ಚೀನಾದಂತಹ ರಾಷ್ಟ್ರಗಳು ಸೇರಿದಂತೆ 168 ಸದಸ್ಯ ರಾಷ್ಟ್ರಗಳನ್ನು ಇದು ಒಳಗೊಂಡಿದೆ.
    • ಅಮೆರಿಕ (USA) ರಾಷ್ಟ್ರವು ಈ ಒಪ್ಪಂದಕ್ಕೆ ಸಹಿ ಹಾಕಿದೆಯಾದರೂ, ಅದನ್ನು ತನ್ನ ದೇಶದ ಶಾಸನಬದ್ಧ ಪ್ರಕ್ರಿಯೆಯ ಮೂಲಕ ಇನ್ನೂ ಅಧಿಕೃತವಾಗಿ ಅನುಮೋದಿಸಿಲ್ಲ.

    UNCLOS ಅಡಿಯಲ್ಲಿನ ಕಡಲ ವಲಯಗಳು:

      • ಪ್ರಾದೇಶಿಕ ಸಮುದ್ರ:- ಇದು ಕರಾವಳಿ ರಾಷ್ಟ್ರದ ಆಧಾರ ರೇಖೆಯಿಂದ 12 ನಾಟಿಕಲ್ ಮೈಲುಗಳವರೆಗೆ ವಿಸ್ತರಿಸುತ್ತದೆ. ಈ ಜಲಪ್ರದೇಶದ ಮೇಲೆ ಕರಾವಳಿ ರಾಷ್ಟ್ರವು ಸಂಪೂರ್ಣ ಸಾರ್ವಭೌಮತ್ವ ಅಧಿಕಾರವನ್ನು ಹೊಂದಿರುತ್ತದೆ. ವಿದೇಶಿ ಹಡಗುಗಳು ಕೇವಲ ‘ಅಪಾಯರಹಿತ ಸಂಚಾರದ ಹಕ್ಕನ್ನು’ ಮಾತ್ರ ಇಲ್ಲಿ ಹೊಂದಿರುತ್ತವೆ.
      • ಸಂಲಗ್ನ (ಸಮೀಪವರ್ತಿ) ಸಮುದ್ರ ವಲಯ:- ಇದು ಆಧಾರ ರೇಖೆಯಿಂದ 12–24 ನಾಟಿಕಲ್ ಮೈಲುಗಳವರೆಗೆ ವಿಸ್ತರಿಸುತ್ತದೆ. ಕರಾವಳಿ ರಾಷ್ಟ್ರಗಳು ಈ ವಲಯದಲ್ಲಿ ಸೀಮಾಸುಂಕ (ಕಸ್ಟಮ್ಸ್), ವಲಸೆ, ನೈರ್ಮಲ್ಯ ಮತ್ತು ಭದ್ರತೆಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿರುತ್ತವೆ.
      • ವಿಶೇಷ ಆರ್ಥಿಕ ವಲಯ (EEZ):- ಇದು 200 ನಾಟಿಕಲ್ ಮೈಲುಗಳವರೆಗೆ ವಿಸ್ತರಿಸುತ್ತದೆ. ಇಲ್ಲಿನ ಮೀನುಗಾರಿಕೆ ಮತ್ತು ನೈಸರ್ಗಿಕ ಖನಿಜ ಸಂಪನ್ಮೂಲಗಳ ಮೇಲೆ ಕರಾವಳಿ ರಾಷ್ಟ್ರವು ವಿಶೇಷ ಹಕ್ಕುಗಳನ್ನು ಹೊಂದಿರುತ್ತದೆ. ಆದಾಗ್ಯೂ, ಇತರ ರಾಷ್ಟ್ರಗಳು ಇಲ್ಲಿ ನೌಕಾಯಾನ ಮತ್ತು ವಿಮಾನಯಾನದ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುತ್ತವೆ.

        UNCLOS ಒಪ್ಪಂದವು ಸಾಗರಗಳನ್ನು ವಿಭಿನ್ನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಹಲವಾರು ಶಾಸನಬದ್ಧ ವಲಯಗಳಾಗಿ ವಿಭಜಿಸುತ್ತದೆ:

      • ಮುಕ್ತ ಸಾಗರಗಳು (ಅಂತರರಾಷ್ಟ್ರೀಯ ಜಲಪ್ರದೇಶ):- ಇದು ಯಾವುದೇ ರಾಷ್ಟ್ರದ EEZ ವ್ಯಾಪ್ತಿಯ ಆಚೆಗಿನ ಅಂತರರಾಷ್ಟ್ರೀಯ ಜಲಪ್ರದೇಶವಾಗಿದೆ. ಇವುಗಳ ಮೇಲೆ ಯಾವುದೇ ದೇಶಕ್ಕೆ ಸಾರ್ವಭೌಮತ್ವ ಇರುವುದಿಲ್ಲ. ಇವು ಅಂತರರಾಷ್ಟ್ರೀಯ ಕಾನೂನು ಮತ್ತು UNCLOS ತತ್ವಗಳಿಂದ ನಿಯಂತ್ರಿಸಲ್ಪಡುತ್ತವೆ.

    ಭಾರತ-ಜಪಾನ್ : ಹಣಕಾಸು ವಿನಿಮಯ ಒಪ್ಪಂದ ನವೀಕರಣ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಫೆಬ್ರವರಿ 28, 2026ರ ರಿಂದ ಅನ್ವಯವಾಗುವಂತೆ, ಜಪಾನ್‌ನೊಂದಿಗಿನ ತನ್ನ ‘ದ್ವಿಪಕ್ಷೀಯ ಹಣಕಾಸು (ಕರೆನ್ಸಿ) ವಿನಿಮಯ ಒಪ್ಪಂದ’ವನ್ನು (BSA) ಭಾರತವು ನವೀಕರಿಸಿದೆ.

    ಹಣಕಾಸು (ಕರೆನ್ಸಿ) ವಿನಿಮಯ (Currency Swap) ಪರಿಕಲ್ಪನೆಯ ಬಗ್ಗೆ:

    • ಇದು ಒಂದು ಆರ್ಥಿಕ ಒಪ್ಪಂದವಾಗಿದ್ದು, ಇದರಲ್ಲಿ ಎರಡು ಪಕ್ಷಗಳು ಒಂದು ಕರೆನ್ಸಿಯಲ್ಲಿನ ಸಾಲದ ಅಸಲು ಮತ್ತು ಬಡ್ಡಿ ದರವನ್ನು ಮತ್ತೊಂದು ಕರೆನ್ಸಿಯ ಸಮಾನ ಮೌಲ್ಯದೊಂದಿಗೆ ವಿನಿಮಯ ಮಾಡಿಕೊಳ್ಳುತ್ತವೆ.
    • ಇವು ಸಾಮಾನ್ಯವಾಗಿ ಮಧ್ಯಮದಿಂದ- ದೀರ್ಘಾವಧಿಯ ಒಪ್ಪಂದಗಳಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕೇಂದ್ರ ಬ್ಯಾಂಕ್‌ಗಳು ಆರ್ಥಿಕ ಅಪಾಯಗಳನ್ನು ನಿರ್ವಹಿಸಲು ಅಥವಾ ಸಾಲದ ವೆಚ್ಚವನ್ನು ತಗ್ಗಿಸಲು ಇವುಗಳನ್ನು ಬಳಸುತ್ತವೆ.

    ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಸಂಬಂಧಗಳು:

    • ರಕ್ಷಣೆ ಮತ್ತು ಭದ್ರತೆ:- ‘ಮಲಬಾರ್’, ‘ಧರ್ಮ ಗಾರ್ಡಿಯನ್’, ಮತ್ತು ‘ಜಿಮೆಕ್ಸ್’ ಸೇನಾಭ್ಯಾಸಗಳು ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಯನ್ನು ಹೆಚ್ಚಿಸುತ್ತವೆ.
    • ವ್ಯಾಪಾರ:- 2023-24ನೇ ಸಾಲಿನಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸರಿಸುಮಾರು $23 ಶತಕೋಟಿ (ಬಿಲಿಯನ್) ತಲುಪಿದೆ.
    • ವಿದೇಶಿ ನೇರ ಹೂಡಿಕೆ (FDI):- ಭಾರತಕ್ಕೆ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ಒಳಹರಿವಿನ 5ನೇ ಅತಿದೊಡ್ಡ ಮೂಲವಾಗಿ ಜಪಾನ್ ಹೊರಹೊಮ್ಮಿದೆ.
    • ಬುಲೆಟ್ ರೈಲು:- ಮುಂಬೈ-ಅಹಮದಾಬಾದ್ ಅತಿ ವೇಗದ ರೈಲು ಯೋಜನೆಯು ಭಾರತ-ಜಪಾನ್ ಸಾರಿಗೆ ಸಹಕಾರದ ಪ್ರಮುಖ ನಿದರ್ಶನವಾಗಿದೆ.
    • ‘ಶುದ್ಧ ಇಂಧನ ಪಾಲುದಾರಿಕೆ’ (2022):- ಹಸಿರು ಜಲಜನಕ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಬದಲಾವಣೆ ತಡೆಗಟ್ಟುವಿಕೆ ಸಹಕಾರವನ್ನು ವಿಸ್ತರಿಸುತ್ತದೆ.
    • ಕ್ವಾಡ್ (Quad):- ಕ್ವಾಡ್ ಒಕ್ಕೂಟದ ಸಮನ್ವಯತೆಯು ಸಾಮೂಹಿಕ ಕಡಲ ಭದ್ರತೆಯ ಬದ್ಧತೆಗಳ ಮೂಲಕ ಇಂಡೋ-ಪೆಸಿಫಿಕ್ ವಲಯದ ಸ್ಥಿರತೆಯನ್ನು ಖಚಿತಪಡಿಸುತ್ತದೆ.
    • ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ (SCRI):- ನಿರ್ಣಾಯಕ ಸರಕುಗಳ ಪೂರೈಕೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಈ ಉಪಕ್ರಮವು ಸಹಕಾರಿಯಾಗಿದೆ.
    • ಅಂತರರಾಷ್ಟ್ರೀಯ ವೇದಿಕೆಗಳು:- ಭಾರತ ಮತ್ತು ಜಪಾನ್ ದೇಶಗಳು ಜಿ-20, ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA), ವಿಪತ್ತು-ನಿರೋಧಕ ಮೂಲಸೌಕರ್ಯಗಳ ಒಕ್ಕೂಟ (CDRI), ಮತ್ತು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು (IPEF) ವೇದಿಕೆಗಳಲ್ಲಿ ಸಹಕರಿಸುತ್ತಿದ್ದು, ಬಹುಪಕ್ಷೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿವೆ.
    • ಬಾಹ್ಯಾಕಾಶ:- ಭಾರತದ ಇಸ್ರೋ (ISRO) ಮತ್ತು ಜಪಾನ್‌ನ ಜಾಕ್ಸಾ (JAXA) ಜಂಟಿಯಾಗಿ ಕೈಗೊಂಡಿರುವ ‘ಲುಪೆಕ್ಸ್’ (LUPEX – ಚಂದ್ರಯಾನ ಪರಿಶೋಧನೆ) ಮಿಷನ್, ಬಾಹ್ಯಾಕಾಶ ಪರಿಶೋಧನಾ ವಲಯದ ಮುಂಚೂಣಿ ಸಹಭಾಗಿತ್ವಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.
  • ಕುಸುಮ ಸಂಜೀವಿನಿ ಕಾರ್ಯಕ್ರಮ

    ಕುಸುಮ ಸಂಜೀವಿನಿ ಕಾರ್ಯಕ್ರಮ

    ಇದೀಗ ಸುದ್ದಿಯಲ್ಲಿದೆ:

    • ಅಪರೂಪದ ಅನುವಂಶಿಕ ರಕ್ತದ ಅಸ್ವಸ್ಥತೆಗಳಿಂದ ಬಳಲುತ್ತಿರುವವರ ಜೀವನಮಟ್ಟವನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸರ್ಕಾರವು ‘ಕುಸುಮ ಸಂಜೀವಿನಿ’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

    ಕುಸುಮ ಸಂಜೀವಿನಿ ಕಾರ್ಯಕ್ರಮದ ಬಗ್ಗೆ:

    ವಿಶಿಷ್ಟತೆ:

    • ಇದು ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಮತ್ತು ಸುಧಾರಿತ ಚಿಕಿತ್ಸೆಯನ್ನು ಒದಗಿಸಲು ಮೀಸಲಾದ ಭಾರತದ ಮೊಟ್ಟಮೊದಲ ರಾಜ್ಯವ್ಯಾಪಿ ರೋಗನಿರೋಧಕ ಕಾರ್ಯಕ್ರಮವಾಗಿದೆ.

    ಪ್ರಮುಖ ಉದ್ದೇಶಗಳು ಮತ್ತು ಪ್ರಯೋಜನಗಳು: 

    • ಹಿಮೋಫಿಲಿಯಾ ಆರೈಕೆಯನ್ನು ಕೇವಲ ಪ್ರತಿಕ್ರಿಯಾತ್ಮಕ (ರಕ್ತಸ್ರಾವವಾದ ನಂತರ ಚಿಕಿತ್ಸೆ ನೀಡುವುದು) ವಿಧಾನದಿಂದ ತಡೆಗಟ್ಟುವ ವಿಧಾನಕ್ಕೆ ಬದಲಾಯಿಸುವುದು ಹಾಗೂ ರೋಗಿಗಳಿಗೆ “ಶೂನ್ಯ ರಕ್ತಸ್ರಾವ” ಸ್ಥಿತಿಯನ್ನು ಖಚಿತಪಡಿಸುವುದು ಈ ಯೋಜನೆಯ ಗುರಿಯಾಗಿದೆ.
    • ಉಚಿತ ಸುಧಾರಿತ ಔಷಧ:- ಅರ್ಹ ರೋಗಿಗಳಿಗೆ ‘ಎಮಿಸಿಜುಮಾಬ್’ ಎಂಬ ದುಬಾರಿಯಾದ ಏಕತಳಿ (ಮೊನೊಕ್ಲೋನಲ್) ಪ್ರತಿಕಾಯ ಚುಚ್ಚುಮದ್ದನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. 
    • ಚಿಕಿತ್ಸೆಯ ಸುಲಭತೆ:- ಪದೇ ಪದೇ ನೋವುಂಟುಮಾಡುವ ಹಾಗೂ ರಕ್ತನಾಳದ ಮೂಲಕ ದ್ರವ ಔಷಧ ನೀಡುವ ಸಾಂಪ್ರದಾಯಿಕ ಚಿಕಿತ್ಸೆಗಿಂತ ಭಿನ್ನವಾಗಿ, ಈ ಪ್ರಗತಿದಾಯಕ ಔಷಧವನ್ನು ತಿಂಗಳಿಗೊಮ್ಮೆ ಕೇವಲ ಚರ್ಮದಡಿಯ ಚುಚ್ಚುಮದ್ದಾಗಿ ನೀಡಲಾಗುತ್ತದೆ.
    • ಆರ್ಥಿಕ ನೆರವು:- ಈ ಚಿಕಿತ್ಸೆಗೆ ವಾರ್ಷಿಕವಾಗಿ ಪ್ರತಿ ರೋಗಿಗೆ ಸುಮಾರು ₹5 ಲಕ್ಷ ವೆಚ್ಚವಾಗುತ್ತಿದ್ದು, ಈ ಆರ್ಥಿಕ ಹೊರೆಯನ್ನು ಇದೀಗ ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ.
    • ತುರ್ತು ಬೆಂಬಲ:- ರಾಜ್ಯದಾದ್ಯಂತ ಹಿಮೋಫಿಲಿಯಾ ರೋಗಿಗಳ ತ್ವರಿತ ತುರ್ತು ಸಾರಿಗೆಗಾಗಿ ಮೀಸಲಾದ ಉಚಿತ 108 ಆಂಬ್ಯುಲೆನ್ಸ್ ಸೇವೆಯನ್ನು ಈ ಕಾರ್ಯಕ್ರಮವು ಒಳಗೊಂಡಿದೆ.
    • ಮೂಲಸೌಕರ್ಯ:- ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ 36 ‘ಹಿಮೋಗ್ಲೋಬಿನೋಪತಿಗಳು ಮತ್ತು ಹಿಮೋಫಿಲಿಯಾ ಸಮಗ್ರ ಚಿಕಿತ್ಸಾ ಕೇಂದ್ರ’ಗಳಲ್ಲಿ (ICHH) ಈ ಚಿಕಿತ್ಸೆಯು ಲಭ್ಯವಿದೆ.

    ಹಿಮೋಫಿಲಿಯಾ ರೋಗದ ಬಗ್ಗೆ:

    • ಅಪರೂಪದ ಅನುವಂಶಿಕ ರಕ್ತಸ್ರಾವದ ಅಸ್ವಸ್ಥತೆಯಾಗಿದೆ:- ಇದರಲ್ಲಿ ರಕ್ತ ಹೆಪ್ಪುಗಟ್ಟುವ ಅಂಶಗಳ ಕೊರತೆಯಿಂದಾಗಿ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದಿಲ್ಲ.
    • ಮೂಲ ಗುಣಲಕ್ಷಣಗಳು:-
    • ಅನುವಂಶಿಕ ಮಾದರಿ:- ಇದು ಎಕ್ಸ್-ವರ್ಣತಂತು ಸಂಬಂಧಿತ ಹಿಂಜರಿತದ (ರಿಸೆಸಿವ್) ಅಸ್ವಸ್ಥತೆ ಅಥವಾ ಕಾಯಿಲೆಯಾಗಿದೆ. ದೋಷಪೂರಿತ ಜೀನ್ X ವರ್ಣತಂತುವಿನಲ್ಲಿ (ಕ್ರೋಮೋಸೋಮ್) ಇರುವುದರಿಂದ, ಪುರುಷರು ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ.
    • ಹರಡುವಿಕೆ:- ಇದು ಜಾಗತಿಕವಾಗಿ ಅಂದಾಜು 10,000 ಜನರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ.
    • ಭಾರತದ ಸ್ಥಿತಿಗತಿ:- ಜಗತ್ತಿನಲ್ಲೇ ಅತ್ಯಂತ ಹೆಚ್ಚು ಹಿಮೋಫಿಲಿಯಾ ರೋಗಿಗಳು ಭಾರತದಲ್ಲಿದ್ದಾರೆ (ಸುಮಾರು 19,000 ರಿಂದ 20,000 ನೋಂದಾಯಿತ ಪ್ರಕರಣಗಳು).

    ಹಿಮೋಫಿಲಿಯಾ ಪ್ರಕಾರಗಳು:

    • ಹಿಮೋಫಿಲಿಯಾ ಎ:- ಇದು ಅತ್ಯಂತ ಸಾಮಾನ್ಯ ರೂಪವಾಗಿದ್ದು (“ಕ್ಲಾಸಿಕ್ ಹಿಮೋಫಿಲಿಯಾ”), ಒಟ್ಟು ಪ್ರಕರಣಗಳಲ್ಲಿ ಸುಮಾರು 80% ರಷ್ಟಿದೆ.
    • ಹಿಮೋಫಿಲಿಯಾ ಬಿ:- ಇದನ್ನು ‘ಕ್ರಿಸ್ಮಸ್ ಕಾಯಿಲೆ’ ಎಂತಲೂ ಕರೆಯಲಾಗುತ್ತದೆ.
    • ಹಿಮೋಫಿಲಿಯಾ ಸಿ:- ಇದು ಅಪರೂಪದ ಆಟೋಸೋಮಲ್ (ದೈಹಿಕ ವರ್ಣತಂತು ಸಂಬಂಧಿತ) ರೂಪವಾಗಿದ್ದು, ಪುರುಷರು ಮತ್ತು ಮಹಿಳೆಯರ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ.

    ಹಿಮೋಫಿಲಿಯಾ ರೋಗಕ್ಕೇ ಚಿಕಿತ್ಸೆ ಮತ್ತು ನಾವೀನ್ಯತೆಗಳು:

    • ಬದಲಿ ಚಿಕಿತ್ಸೆ:- ರಕ್ತದಲ್ಲಿ ಕೊರತೆಯಿರುವ ಹೆಪ್ಪುಗಟ್ಟುವ ಅಂಶವನ್ನು ನಿಯಮಿತವಾಗಿ ಅಭಿದಮನಿ ಮೂಲಕ ಸೇರಿಸುವುದು ಪ್ರಮಾಣಿತ ಚಿಕಿತ್ಸೆಯಾಗಿದೆ.
    • ವಂಶವಾಹಿ ಚಿಕಿತ್ಸೆ ಪ್ರಗತಿ:- ರೋಗಿಯ ಕಾಂಡಕೋಶಗಳಿಗೆ ಕ್ರಿಯಾತ್ಮಕ ವಂಶವಾಹಿಯನ್ನು ಸೇರಿಸಲು ಲೆಂಟಿವೈರಲ್ ವೆಕ್ಟರ್ (Lentiviral vector) ಬಳಸುವ ಮೂಲಕ, ‘ಹಿಮೋಫಿಲಿಯಾ ಎ’ ಗಾಗಿ ಭಾರತವು ಇತ್ತೀಚೆಗೆ ತನ್ನ ಮೊದಲ ಮಾನವ ವೈದ್ಯಕೀಯ ಪ್ರಯೋಗವನ್ನು ನಡೆಸಿತು.
    • ರೋಗನಿರೋಧಕ (ತಡೆಗಟ್ಟುವಿಕೆ):- ದೀರ್ಘಕಾಲೀನ ಕೀಲು ಹಾನಿಯನ್ನು ತಪ್ಪಿಸಲು, ರಕ್ತಸ್ರಾವ ಪ್ರಾರಂಭವಾದ ನಂತರ ನೀಡುವ ಚಿಕಿತ್ಸೆಯಿಂದ ‘ತಡೆಗಟ್ಟುವ ಆರೈಕೆ’ಯತ್ತ ಗಮನಹರಿಸಲಾಗಿದೆ.

    ಪ್ರಮುಖ ದಿನಾಚರಣೆಗಳು:

    • ವಿಶ್ವ ಹಿಮೋಫಿಲಿಯಾ ದಿನ – ಏಪ್ರಿಲ್ 17:- ಇದನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
    • 2025ರ ಧ್ಯೇಯವಾಕ್ಯ:- “ಎಲ್ಲರಿಗೂ ಲಭ್ಯತೆ – ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೂ ಋತುಸ್ರಾವವಾಗುತ್ತದೆ” (Access for All – Women and Girls Bleed Too).
  • ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ 25ನೇ ಸಂಸ್ಥಾಪನಾ ದಿನ | ಅಕ್ಕಿ ಪೋಷಕಾಂಶ ಬಲವರ್ಧನೆ ಯೋಜನೆ ಸ್ಥಗಿತ | ವಿಶ್ವ ಸ್ಥೂಲತೆ ಅಟ್ಲಾಸ್, 2026

    ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ 25ನೇ ಸಂಸ್ಥಾಪನಾ ದಿನ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನವದೆಹಲಿಯ ‘ಭಾರತೀಯ ಆವಾಸ ಕೇಂದ್ರ’ದಲ್ಲಿ ‘ಇಂಧನ ದಕ್ಷತೆ ಬ್ಯೂರೋ’ದ (BEE) 25ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

    ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ ಬಗ್ಗೆ:

      • ಇಂಧನ ಸಂರಕ್ಷಣಾ ಕಾಯ್ದೆ, 2001:- ಈ ಕಾಯ್ದೆಯ ಅನ್ವಯ 2002ರಲ್ಲಿ ಸ್ಥಾಪಿಸಲಾದ ಭಾರತದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ಆಡಳಿತಾತ್ಮಕ ಸಚಿವಾಲಯ:- ಕೇಂದ್ರ ವಿದ್ಯುತ್ ಸಚಿವಾಲಯ.
    • ಪ್ರಮುಖ ಉದ್ದೇಶ:- ಮಾರುಕಟ್ಟೆ ಆಧಾರಿತ ಉಪಕ್ರಮಗಳು ಮತ್ತು ಸ್ವಯಂ-ನಿಯಂತ್ರಣದ ಮೂಲಕ ಭಾರತೀಯ ಆರ್ಥಿಕತೆಯ ‘ಇಂಧನ ತೀವ್ರತೆ’ಯನ್ನು ತಗ್ಗಿಸುವುದು.

    BEE ಯ ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು:

    • ಮಾನದಂಡಗಳು ಮತ್ತು ಗುರುತು ಅಂಟಿಸುವ ಪ್ರಕ್ರಿಯೆ (ಲೇಬಲಿಂಗ್) ಯೋಜನೆ:- ಗ್ರಾಹಕರಿಗೆ ಗೃಹೋಪಯೋಗಿ ಉಪಕರಣಗಳ (ಉದಾಹರಣೆಗೆ: ರೆಫ್ರಿಜರೇಟರ್, ಎಸಿ) ಇಂಧನ ದಕ್ಷತೆ ಮತ್ತು ವಿದ್ಯುತ್ ಉಳಿತಾಯದ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಲು, ಈ ಯೋಜನೆಯು ಉತ್ಪನ್ನಗಳ ಮೇಲೆ ‘ಸ್ಟಾರ್-ರೇಟಿಂಗ್’ ಲೇಬಲ್‌ಗಳನ್ನು ಒದಗಿಸುತ್ತದೆ.
    • ಕಾರ್ಯನಿರ್ವಹಣೆ, ಸಾಧನೆ ಮತ್ತು ವಹಿವಾಟು (PAT):- ಇದು ‘ವರ್ಧಿತ ಇಂಧನ ದಕ್ಷತೆಗಾಗಿನ ರಾಷ್ಟ್ರೀಯ ಅಭಿಯಾನ’ (NMEEE) ಅಡಿಯಲ್ಲಿ ಜಾರಿಗೆ ತರಲಾದ ಮಾರುಕಟ್ಟೆ-ಆಧಾರಿತ ಕಾರ್ಯವಿಧಾನವಾಗಿದೆ. ಇಂಧನವನ್ನು ಅತಿ ಹೆಚ್ಚು ಬಳಸುವ ಬೃಹತ್ ಕೈಗಾರಿಕೆಗಳು ತಮ್ಮ ಇಂಧನ ದಕ್ಷತೆಯ ಗುರಿಗಳನ್ನು ತಲುಪಲು ಇದು ಪ್ರೋತ್ಸಾಹ ನೀಡುತ್ತದೆ.
    • ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆಗಳು (ECBC):- ಇಂಧನ ದಕ್ಷತೆಯನ್ನು ಹೊಂದಿರುವ ಪರಿಸರಸ್ನೇಹಿ ಕಟ್ಟಡಗಳ ವಿನ್ಯಾಸಕ್ಕಾಗಿ ಇದು ಮಾರ್ಗಸೂಚಿಗಳನ್ನು ಒದಗಿಸುತ್ತದೆ.
    • ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಇಂಧನ ದಕ್ಷ ತಂತ್ರಜ್ಞಾನಗಳ ಅಳವಡಿಕೆಗೆ ನೆರವು (ADEETIE) ಯೋಜನೆ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ಇಂಧನ-ದಕ್ಷ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ತಾಂತ್ರಿಕ ಹಾಗೂ ಹಣಕಾಸಿನ ನೆರವನ್ನು ಈ ಯೋಜನೆಯು ನೀಡುತ್ತದೆ.
    • ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು (NECA):- ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಂಸ್ಥೆಗಳನ್ನು ಗುರುತಿಸಿ ನೀಡುವ ವಾರ್ಷಿಕ ಪುರಸ್ಕಾರವಾಗಿದೆ.

    ಅಕ್ಕಿ ಪೋಷಕಾಂಶ ಬಲವರ್ಧನೆ ಯೋಜನೆ ಸ್ಥಗಿತ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಅನುಷ್ಠಾನದ ಪರಾಮರ್ಶೆಯ ನಂತರ, ಭಾರತ ಸರ್ಕಾರವು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅಕ್ಕಿ ಪೋಷಕಾಂಶ ಬಲವರ್ಧನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯ ಬಗ್ಗೆ:

    • ಪ್ರಾರಂಭ:- ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಘೋಷಿಸಲಾಯಿತು.
    • ಮುಖ್ಯ ಗುರಿ:- ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬಡವರು ಮತ್ತು ಅಗತ್ಯವಿರುವವರಿಗೆ ಪೂರಕ ಆಹಾರ ಧಾನ್ಯಗಳನ್ನು ಒದಗಿಸುವುದು.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ.
    • ಫಲಾನುಭವಿಗಳು:- ಈ ಯೋಜನೆಯಡಿ ಸುಮಾರು 80 ಕೋಟಿ ಫಲಾನುಭವಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ.

    ‘ಆಹಾರ ಪೋಷಕಾಂಶ ಬಲವರ್ಧನೆ’ಯ ಬಗ್ಗೆ:

    • ವ್ಯಾಖ್ಯಾನ:- ಆಹಾರ ಪೋಷಕಾಂಶ ಬಲವರ್ಧನೆಯು ಆಹಾರದಲ್ಲಿ ಒಂದು ಅಥವಾ ಹೆಚ್ಚಿನ ಸೂಕ್ಷ್ಮ ಪೋಷಕಾಂಶಗಳ (ಜೀವಸತ್ವಗಳು ಮತ್ತು ಖನಿಜಗಳು) ಪ್ರಮಾಣವನ್ನು ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.
    • ಮಹತ್ವ:- ಇದು ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಕನಿಷ್ಠ ಆರೋಗ್ಯದ ಅಪಾಯದೊಂದಿಗೆ ಸಾರ್ವಜನಿಕ ಆರೋಗ್ಯದ ಪ್ರಯೋಜನಗಳನ್ನು ಒದಗಿಸಲು ಸಹಕಾರಿಯಾಗಿದೆ.
    • ಅಕ್ಕಿ ಪೋಷಕಾಂಶ ಬಲವರ್ಧನೆ:- ಇದು ಅಕ್ಕಿಗೆ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನಂತಹ ಸೂಕ್ಷ್ಮ ಪೋಷಕಾಂಶಗಳ ಸೇರ್ಪಡೆಯನ್ನು ಒಳಗೊಂಡಿದೆ.
    • ಹಾಲಿನ ಪೋಷಕಾಂಶ ಬಲವರ್ಧನೆ:- ಇದು ಹಾಲಿಗೆ ವಿಟಮಿನ್ ಎ ಮತ್ತು ಡಿ ಸೇರಿಸುವ ಪ್ರಕ್ರಿಯೆಯಾಗಿದ್ದು, ಈ ಜೀವಸತ್ವಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
    • ಉಪ್ಪಿನ ಪೋಷಕಾಂಶ ಬಲವರ್ಧನೆ:- ಅಯೋಡಿನ್ ಕೊರತೆಯಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಲು ಉಪ್ಪಿಗೆ ಅಯೋಡಿನ್ ಸೇರಿಸುವ (ಅಯೋಡೀಕರಿಸಿದ ಉಪ್ಪು) ಪ್ರಕ್ರಿಯೆಯನ್ನು ಇದು ಒಳಗೊಂಡಿದೆ.

    ವಿಶ್ವ ಸ್ಥೂಲತೆ ಅಟ್ಲಾಸ್, 2026

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಮಾರ್ಚ್ 4 ವಿಶ್ವ ಸ್ಥೂಲತೆಯ ದಿನದಂದು ‘ವಿಶ್ವ ಸ್ಥೂಲತೆಯ ಒಕ್ಕೂಟ’ ಪ್ರಕಟಿಸಿ ಬಿಡುಗಡೆಗೊಳಿಸಿದ ‘ವಿಶ್ವ ಸ್ಥೂಲತೆ ಅಟ್ಲಾಸ್, 2026’ ವರದಿಯ ಪ್ರಕಾರ, ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

    ‘ವಿಶ್ವ ಸ್ಥೂಲತೆ ಅಟ್ಲಾಸ್’ನ ಬಗ್ಗೆ:

    • ಪ್ರಕಟಿಸಿ ಬಿಡುಗಡೆಗೊಳಿಸುವವರು:- ವಿಶ್ವ ಸ್ಥೂಲತೆಯ ಒಕ್ಕೂಟ
    • ಇದು ಸ್ಥೂಲತೆಯ ಪ್ರವೃತ್ತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಕುರಿತು ಜಾಗತಿಕ ದತ್ತಾಂಶ, ಮುನ್ಸೂಚನೆಗಳು ಹಾಗೂ ನೀತಿ ಸಂಬಂಧಿತ ಒಳನೋಟಗಳನ್ನು ಒದಗಿಸುತ್ತದೆ.
    • 2025ರ ವೇಳೆಗೆ ಬಾಲ್ಯದ ಸ್ಥೂಲತೆಯ ಏರಿಕೆಯನ್ನು ತಡೆಯುವ ಜಾಗತಿಕ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಈ ಗುರಿ ಸಾಧನೆಯ ಕಾಲಮಿತಿಯನ್ನು ಈಗ 2030ರವರೆಗೆ ವಿಸ್ತರಿಸಲಾಗಿದೆ.

    ಸರ್ಕಾರದ ಉಪಕ್ರಮಗಳು:

    • ಪೋಷಣ್ ಅಭಿಯಾನ (ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ):- ವಿವಿಧ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳ ಸಮನ್ವಯದ ಮೂಲಕ ಮಕ್ಕಳು, ಕಿಶೋರಿಯರು ಮತ್ತು ಮಹಿಳೆಯರ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವತ್ತ ಇದು ಗಮನ ಹರಿಸುತ್ತದೆ.
    • ಫಿಟ್ ಇಂಡಿಯಾ ಅಭಿಯಾನ:- ನಾಗರಿಕರಲ್ಲಿ ದೈಹಿಕ ಚಟುವಟಿಕೆ, ಸದೃಢತೆಯ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ನಡವಳಿಕೆಯ ಬದಲಾವಣೆಯನ್ನು ಉತ್ತೇಜಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
    • ಈಟ್ ರೈಟ್ ಇಂಡಿಯಾ ಅಭಿಯಾನ:- ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಉಪಕ್ರಮವಾಗಿದ್ದು, ಆರೋಗ್ಯಕರ ಆಹಾರ ಕ್ರಮ, ಆಹಾರ ಸುರಕ್ಷತೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯನ್ನು ತಗ್ಗಿಸಲು ಜನರನ್ನು ಪ್ರೇರೇಪಿಸುತ್ತದೆ.
    • ಶಾಲಾ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮ:- ಶಾಲಾ ವಿದ್ಯಾರ್ಥಿಗಳಲ್ಲಿ ಆರೋಗ್ಯ ಶಿಕ್ಷಣ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
  • ಆಶಾ ಕಿರಣ ಕಾರ್ಯಕ್ರಮ

    ಆಶಾ ಕಿರಣ ಕಾರ್ಯಕ್ರಮ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕದಾದ್ಯಂತ 1.4 ಕೋಟಿ ಜನರನ್ನು ‘ಆಶಾ ಕಿರಣ’ ಯೋಜನೆಯು ಯಶಸ್ವಿಯಾಗಿ ತಲುಪಿದೆ.
    • ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಆಶಾ ಕಿರಣ- ಕರ್ನಾಟಕ ರಾಜ್ಯ ನೇತ್ರ ಆರೈಕೆ ಕಾರ್ಯಕ್ರಮದ ಬಗ್ಗೆ:

    • ಇದು ಕರ್ನಾಟಕ ಸರ್ಕಾರವು ಕೈಗೊಂಡಿರುವ ಪ್ರಮುಖ ನೇತ್ರ-ಆರೈಕೆ ಉಪಕ್ರಮವಾಗಿದೆ.
    • ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ.
    • ಉದ್ದೇಶ:- ರಾಜ್ಯದಾದ್ಯಂತ ತಡೆಗಟ್ಟಬಹುದಾದ ಅಂಧತ್ವವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಸಮಗ್ರ ದೃಷ್ಟಿ ಆರೈಕೆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
    • ಪ್ರಮುಖ ಸೇವೆಗಳು:- ಈ ಯೋಜನೆಯು ಉಚಿತ ನೇತ್ರ ತಪಾಸಣೆ, ದೃಷ್ಟಿ ದೋಷ ಸರಿಪಡಿಸಲು ಕನ್ನಡಕಗಳು ಮತ್ತು ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಒದಗಿಸುತ್ತದೆ.
  • ಕರ್ನಾಟಕ ದರ್ಶನ MCQ’s

    ಕರ್ನಾಟಕ ದರ್ಶನ MCQ’s

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ನೀತಿಯು ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ ಗರಿಷ್ಠ 12 ದಿನಗಳ ಋತುಸ್ರಾವದ ರಜೆಯನ್ನು ಪಡೆಯಲು ಅರ್ಹತೆ ಕಲ್ಪಿಸುತ್ತದೆ.
    2. ಇದನ್ನು ಕೇವಲ ಸಂಘಟಿತ ಖಾಸಗಿ ವಲಯದ ಉದ್ಯೋಗಿಗಳಿಗೆ ಮಾತ್ರ ಜಾರಿಗೆ ತರಲಾಗಿದೆ.
    3. ಇದು ಋತುಸ್ರಾವದ ಆರೋಗ್ಯವನ್ನು ಕೆಲಸದ ಸ್ಥಳದ ಮತ್ತು ಹಕ್ಕು-ಆಧಾರಿತ ವಿಷಯವೆಂದು ಗುರುತಿಸುತ್ತದೆ.
    4. ಇದು ಡಾ. ಸಪ್ನಾ ಎಸ್. ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ (GCC) ನೀತಿ 2024–2029ರ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCCs) ಆಕರ್ಷಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿರುವ ಭಾರತದ ಮೊದಲ ಮೀಸಲಾದ ನೀತಿ ಚೌಕಟ್ಟಾಗಿದೆ.
    2. ಇದು “ಬಿಯಾಂಡ್ ಬೆಂಗಳೂರು” ವಲಯಗಳಲ್ಲಿ GCC ಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಹೊಸದಾಗಿ ಸ್ಥಾಪಿಸಲಾದ ಬಹುಪಾಲು GCC ಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ.
    3. 2029ರ ವೇಳೆಗೆ ರಾಜ್ಯದಲ್ಲಿ GCC ಗಳ ಸಂಖ್ಯೆಯನ್ನು 500 ರಿಂದ 1,000 ಕ್ಕೆ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
    4. ಈ ನೀತಿಯು $50 ಬಿಲಿಯನ್ ಆರ್ಥಿಕ ಉತ್ಪಾದನೆಯನ್ನು ಮತ್ತು 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

    1. ಕರ್ನಾಟಕದ ಜೈವಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತದ ಜೈವಿಕ ಆರ್ಥಿಕತೆಗೆ ರಾಜ್ಯವು ಸುಮಾರು ಐದನೇ ಒಂದು ಭಾಗದಷ್ಟು ಕೊಡುಗೆಯನ್ನು ನೀಡುತ್ತದೆ.
    2. ಜೈವಿಕ ಆರ್ಥಿಕತೆಯು 2023 ರಲ್ಲಿದ್ದ $31 ಬಿಲಿಯನ್ ನಿಂದ 2025 ರಲ್ಲಿ $39.2 ಬಿಲಿಯನ್‌ಗೆ ವಿಸ್ತರಣೆಯಾಗಿದೆ.
    3. ಈ ಅವಧಿಯಲ್ಲಿ ಬೆಳವಣಿಗೆಯ ದರವು 20% ಕ್ಕಿಂತ ಕಡಿಮೆ ಇತ್ತು.
    4. ಕರ್ನಾಟಕವು 2025 ರಲ್ಲಿ 200 ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನ ನವೋದ್ಯಮಗಳನ್ನು ಸೇರಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಆಶಾ ಕಿರಣ ಉಪಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಅಂಧತ್ವ ಮತ್ತು ದೃಷ್ಟಿ ದೋಷ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದ (NPCBVI) ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ.
    2. ಈ ಉಪಕ್ರಮವು ಪ್ರಾಥಮಿಕವಾಗಿ ನಗರ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಸೂಪರ್-ಸ್ಪೆಷಾಲಿಟಿ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
    3. ಇದು ಆಶಾ (ASHA) ಕಾರ್ಯಕರ್ತೆಯರಂತಹ ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ವ್ಯಕ್ತಿಗಳ ಮನೆಬಾಗಿಲಿನ ತಪಾಸಣೆಯನ್ನು ಒಳಗೊಂಡಿರುತ್ತದೆ.
    4. ಇದು ಸರ್ಕಾರಿ ಮತ್ತು ನೊಂದಾಯಿತ ಆಸ್ಪತ್ರೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಒದಗಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಎಲ್ಲಾ ನಾಲ್ಕು

    ಉತ್ತರ: C

    1. ಕುಸುಮ ಸಂಜೀವಿನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಹಿಮೋಫಿಲಿಯಾ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆ ಮತ್ತು ತುರ್ತು ಸಾರಿಗೆ ಸೇವೆಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಿದೆ.
    2. ಈ ಕಾರ್ಯಕ್ರಮವು ಎಮಿಸಿಜುಮಾಬ್ ಔಷಧಿಯನ್ನು ಪರಿಚಯಿಸುತ್ತದೆ, ಇದನ್ನು ಪ್ರತಿದಿನವೂ ಅಭಿದಮನಿ ಮೂಲಕ ನೀಡಲಾಗುತ್ತದೆ.
    3. ಹಿಮೋಫಿಲಿಯಾ ಎಂಬುದು ಫ್ಯಾಕ್ಟರ್ VIII ಅಥವಾ ಫ್ಯಾಕ್ಟರ್ IX ನಂತಹ ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳ ಕೊರತೆಯಿಂದ ಉಂಟಾಗುವ ಆನುವಂಶಿಕ ಅಸ್ವಸ್ಥತೆಯಾಗಿದೆ.
    4. ಕಾರ್ಯಕ್ರಮದ ಅಡಿಯಲ್ಲಿ ಎಮಿಸಿಜುಮಾಬ್ ಬಳಕೆಯು ಪದೇ ಪದೇ ರಕ್ತಸ್ರಾವವಾಗುವ ಘಟನೆಗಳನ್ನು ಮತ್ತು ಸಂಬಂಧಿತ ಕೀಲು ವಿರೂಪಗಳನ್ನು ತಡೆಯಲು ಸಹಾಯ ಮಾಡುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1, 3 ಮತ್ತು 4 ಮಾತ್ರ
    3. 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. AVGC-XR ನೀತಿ (2024–29) ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ನೀತಿಯು ಕರ್ನಾಟಕವನ್ನು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (AVGC-XR) ವಲಯದ ಜಾಗತಿಕ ಕೇಂದ್ರವಾಗಿ ರೂಪಿಸುವ ಗುರಿಯನ್ನು ಹೊಂದಿದೆ.
    2. AVGC-XR ವಲಯದ ರಫ್ತುಗಳು ಒಟ್ಟು ವಲಯದ ಆದಾಯದ ಕನಿಷ್ಠ 80% ರಷ್ಟಿರಬೇಕು ಎಂದು ಇದು ಗುರಿ ನಿಗದಿಪಡಿಸಿದೆ.
    3. ಈ ನೀತಿಯು ಬೃಹತ್ ಉದ್ಯಮಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ನವೋದ್ಯಮಗಳು ಅಥವಾ MSME ಗಳಿಗೆ ಬೆಂಬಲ ನೀಡುತ್ತದೆ.
    4. ಇದು AVGC-XR ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ ಸೃಷ್ಟಿ ಮತ್ತು ಆರ್ಥಿಕ ಪ್ರೋತ್ಸಾಹದ ನಿಬಂಧನೆಗಳನ್ನು ಒಳಗೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

    1. ಪ್ರತಿಪಾದನೆ (A): 2030 ರ ವೇಳೆಗೆ ನಾಯಿ-ಪ್ರೇರಿತ ರೇಬಿಸ್‌ನಿಂದ ಶೂನ್ಯ ಮಾನವ ಸಾವುಗಳನ್ನು ಸಾಧಿಸುವ ಗುರಿಯೊಂದಿಗೆ ಕರ್ನಾಟಕವು ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಕ್ರಿಯಾ ಯೋಜನೆಯನ್ನು (SAPRE) ಪ್ರಾರಂಭಿಸಿದೆ.

    ಕಾರಣ (R): ರೇಬಿಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಇದು ಬಹುತೇಕ ಮಾರಣಾಂತಿಕವಾಗಿರುತ್ತದೆ, ಆದರೆ ಲಸಿಕೆ ಮತ್ತು ಸಕಾಲಿಕ ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ.

    ಸರಿಯಾದ ಉತ್ತರವನ್ನು ಆರಿಸಿ:

    1. A ಮತ್ತು R ಎರಡೂ ಸರಿ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ
    2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
    3. A ಸರಿ, ಆದರೆ R ತಪ್ಪು
    4. A ತಪ್ಪು, ಆದರೆ R ಸರಿ

    ಉತ್ತರ: A

    1. ಪ್ರತಿಪಾದನೆ  (A): ಹಾವಿನ ಕಡಿತದ ವಿಷಬಾಧೆ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ (SAPSE) ಸಮಗ್ರ ರಾಜ್ಯ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದ ಭಾರತದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.

    ಕಾರಣ (R): ಹಾವಿನ ಕಡಿತದ ವಿಷಬಾಧೆ ಮತ್ತು ರೇಬಿಸ್ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಾಗಿವೆ, ಮತ್ತು ಉದ್ದೇಶಿತ ರಾಜ್ಯ-ಮಟ್ಟದ ಕ್ರಿಯಾ ಯೋಜನೆಗಳು ತಡೆಗಟ್ಟುವಿಕೆ, ಸಕಾಲಿಕ ಚಿಕಿತ್ಸೆ ಮತ್ತು ಜಾಗೃತಿ ಮೂಲಕ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

    ಸರಿಯಾದ ಉತ್ತರವನ್ನು ಆರಿಸಿ:

    1. A ಮತ್ತು R ಎರಡೂ ಸರಿ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ
    2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
    3. A ಸರಿ, ಆದರೆ R ತಪ್ಪು
    4. A ತಪ್ಪು, ಆದರೆ R ಸರಿ

    ಉತ್ತರ: B

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಬಹುಪಾಲು ಅಗತ್ಯ ಕಾರಣವಾಗಿದೆ.
    2. HPV ಲಸಿಕೆಗಳು ರೋಗನಿರೋಧಕ ಸ್ವಭಾವವನ್ನು ಹೊಂದಿವೆ ಮತ್ತು ಪ್ರಸ್ತುತ ಇರುವ ಸೋಂಕುಗಳಿಗೆ ಚಿಕಿತ್ಸೆ ನೀಡುವುದಿಲ್ಲ.
    3. ತಪಾಸಣಾ ಕಾರ್ಯಕ್ರಮಗಳ ಅಗತ್ಯವಿಲ್ಲದೆ ಕೇವಲ ಲಸಿಕೆ ಹಾಕುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ತೊಡೆದುಹಾಕಬಹುದು.
    4. ಹದಿಹರೆಯದ ಬಾಲಕಿಯರಲ್ಲಿ ಹೆಚ್ಚಿನ HPV ಲಸಿಕಾ ವ್ಯಾಪ್ತಿಯು ಸಮೂಹ ರೋಗನಿರೋಧಕ ಶಕ್ತಿಗೆ ಕೊಡುಗೆ ನೀಡುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಉಪಕ್ರಮಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಗೊಲ್ಲಹಳ್ಳಿ ಮತ್ತು ದೊಡ್ಡಬೆಳವಂಗಲದಲ್ಲಿ ಎರಡು ಹೊಸ ಸಮಗ್ರ ಘನತ್ಯಾಜ್ಯ ನಿರ್ವಹಣಾ ಉದ್ಯಾನವನಗಳನ್ನು ಪ್ರಸ್ತಾಪಿಸಲಾಗಿದೆ.
    2. ಸಾರ್ವಜನಿಕ-ಖಾಸಗಿ ಪಾಲುದಾರಿಕೆ (PPP) ಮಾದರಿಯ ಮೂಲಕ ಪ್ರತ್ಯೇಕವಾಗಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
    3. ಈ ಉಪಕ್ರಮವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಕೈಗೊಳ್ಳುತ್ತಿದೆ.
    4. ನಿವಾಸಿಗಳು ಸಹಾಯ್ 2.0 ಪ್ಲಾಟ್‌ಫಾರ್ಮ್ ಮೂಲಕ ಕಸದ ಸಮಸ್ಯೆಗಳನ್ನು ವರದಿ ಮಾಡಬಹುದು. ಕುಂದುಕೊರತೆ ನಿವಾರಣೆಗಾಗಿ ಮೀಸಲಾದ ಸಹಾಯವಾಣಿ ಸಂಖ್ಯೆ ಮತ್ತು ವಾಟ್ಸಾಪ್ ಚಾಟ್‌ಬಾಟ್ ಲಭ್ಯವಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. “ತುಳು” ಭಾಷೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ತುಳು ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ.
    2. ಇದು ಪ್ರಧಾನವಾಗಿ ಕರಾವಳಿ ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಮಾತನಾಡಲ್ಪಡುತ್ತದೆ.
    3. ತುಳು ಭಾಷೆಯನ್ನು ಈಗಾಗಲೇ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ.
    4. ಎಂಟನೇ ಪರಿಚ್ಛೇದದಲ್ಲಿನ ಮಾನ್ಯತೆಯು ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. mVahan ಅಪ್ಲಿಕೇಶನ್ ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳ (FCs) ಜಿಯೋ-ಫೆನ್ಸಿಂಗ್ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಜಿಯೋ-ಫೆನ್ಸಿಂಗ್ ತಂತ್ರಜ್ಞಾನವು ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಗೊತ್ತುಪಡಿಸಿದ ಪ್ರಾದೇಶಿಕ ಸಾರಿಗೆ ಕಚೇರಿ (RTO) ಸ್ಥಳಗಳಿಂದ ಮಾತ್ರ ನೀಡಲಾಗಿದೆಯೆ ಎಂದು ಖಚಿತಪಡಿಸುತ್ತದೆ.
    2. ಪರೀಕ್ಷಾ ಸ್ಥಳದಲ್ಲಿ ವಾಹನದ ಭೌತಿಕ ಉಪಸ್ಥಿತಿಯನ್ನು ಪರಿಶೀಲಿಸಲು mVahan  ಅಪ್ಲಿಕೇಶನ್ ಸ್ಥಳ-ಆಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ.
    3. ಫಿಟ್‌ನೆಸ್ ಪ್ರಮಾಣಪತ್ರಗಳನ್ನು ವಿತರಿಸಲು ವಾಹನಗಳ ಯಾವುದೇ ಭೌತಿಕ ತಪಾಸಣೆಯ ಅಗತ್ಯವನ್ನು ಈ ವ್ಯವಸ್ಥೆಯು ನಿವಾರಿಸುತ್ತದೆ.
    4. ಫಿಟ್‌ನೆಸ್ ಪ್ರಮಾಣಪತ್ರಗಳ ನಕಲಿ ವಿತರಣೆಯನ್ನು ತಡೆಯುವುದು ಈ ಉಪಕ್ರಮದ ಗುರಿಯಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಸ್ವಚ್ಛ ಭಾರತ್ ಮಿಷನ್-ನಗರ 2.0 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ಮಿಷನ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆಯುತ್ತದೆ.
    2. ಈ ಮಿಷನ್ ಅಡಿಯಲ್ಲಿ ಕರ್ನಾಟಕವು ₹2,245.30 ಕೋಟಿ ಪಡೆದಿದೆ.
    3. ಈ ಮಿಷನ್ ವೃತ್ತಾಕಾರದ ಆರ್ಥಿಕತೆಯ ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸುವುದನ್ನು ಉತ್ತೇಜಿಸುತ್ತದೆ.
    4. ವಾಟರ್+ (Water+) ಪ್ರಮಾಣೀಕರಣವು ಘನತ್ಯಾಜ್ಯ ನಿರ್ವಹಣೆಯ ದಕ್ಷತೆಗೆ ಸಂಬಂಧಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಎಲ್ಲಾ ನಾಲ್ಕು

    ಉತ್ತರ: B

    1. ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. BSNL ಮತ್ತು ಏಸರ್ ಇಂಡಿಯಾ ಸಹಯೋಗದೊಂದಿಗೆ GNA ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಯೋಜನೆಯನ್ನು ಪ್ರಾರಂಭಿಸಿದೆ.
    2. ಇದು ಕುಗ್ರಾಮ ಮತ್ತು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ವೇಗದ Wi-Fi 7 ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.
    3. ಈ ಯೋಜನೆಯು ಉತ್ತರ ಕನ್ನಡದ ಪ್ರವಾಸಿ ತಾಣಗಳಾದ ಯಾಣ ಮತ್ತು ಮಾಗೋಡು ಜಲಪಾತಗಳನ್ನು ಒಳಗೊಂಡಿದೆ.
    4. ಪ್ರವಾಸಿಗರಿಗೆ ಡಿಜಿಟಲ್ ಪಾವತಿ ಮತ್ತು ನೈಜ-ಸಮಯದ ಮಾಹಿತಿಯ ಪ್ರವೇಶವನ್ನು ಬೆಂಬಲಿಸುವುದು ಇದರ ಉದ್ದೇಶಗಳಲ್ಲಿ ಒಂದಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

    1. ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕರ್ನಾಟಕದ ಶರಾವತಿ ನದಿಯಲ್ಲಿದೆ ಮತ್ತು ಒಟ್ಟು 2000 MW ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    2. ಇದು ಭಾರತದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕವಾಗಿದೆ.
    3. ತಲಕಳಲೆ ಅಣೆಕಟ್ಟು ಕೆಳ ಜಲಾಶಯವಾಗಿ ಕಾರ್ಯನಿರ್ವಹಿಸಿದರೆ, ಗೇರುಸೊಪ್ಪ ಅಣೆಕಟ್ಟು ಮೇಲಿನ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.
    4. ಇದನ್ನು ತೆಲಂಗಾಣದ ಕಾಳೇಶ್ವರಂ ಯೋಜನೆಯ ಮಾದರಿಯಲ್ಲಿ ರೂಪಿಸಲಾಗಿದೆ ಮತ್ತು ಇದು ಬೆಂಗಳೂರಿಗೆ ಕುಡಿಯುವ ನೀರು ಸರಬರಾಜನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಗದಗ ಜಿಲ್ಲೆಯಲ್ಲಿದೆ ಮತ್ತು ಇದನ್ನು ಹೆಚ್ಚಾಗಿ “ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳು” ಎಂದು ಕರೆಯಲಾಗುತ್ತದೆ.
    2. ಅರಣ್ಯ ಸಸ್ಯವರ್ಗಗಳ ಸಂರಕ್ಷಣೆಗಾಗಿ ನಿರ್ದಿಷ್ಟವಾಗಿ ಘೋಷಿಸಲಾದ ರಾಜ್ಯದ ಏಕೈಕ ಅಭಯಾರಣ್ಯ ಇದಾಗಿದೆ.
    3. ಇದು ಪೊದೆ ಕಾಡುಗಳು, ಹುಲ್ಲುಗಾವಲುಗಳು ಮತ್ತು ಒಣ ಪತನಶೀಲ ಕಾಡುಗಳನ್ನು ಒಳಗೊಂಡಿರುವ ಒಣಭೂಮಿ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ.
    4. ಇದು ತುಂಗಭದ್ರಾ ನದಿಯ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿಲ್ಲ

    ಉತ್ತರ: C

    1. “ಕರ್ನಾಟಕ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮ” ದ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಕರ್ನಾಟಕ ಬಜೆಟ್ 2026-27 ರಲ್ಲಿ ₹2,000 ಕೋಟಿ ಹಂಚಿಕೆಯೊಂದಿಗೆ ಘೋಷಿಸಲಾಗಿದೆ ಮತ್ತು ಇದು ವಿಶ್ವಬ್ಯಾಂಕ್‌ನಿಂದ ಆರ್ಥಿಕ ಬೆಂಬಲವನ್ನು ಒಳಗೊಂಡಿದೆ.
    2. ಇದು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳಿಗೆ 4,000 ಇ-ಬಸ್‌ಗಳನ್ನು ಸೇರ್ಪಡೆಗೊಳಿಸುವ ಮತ್ತು ರಾಜ್ಯಾದ್ಯಂತ 94 ಚಾರ್ಜಿಂಗ್ ಡಿಪೋಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
    3. BMTC ಗಾಗಿ ಒಟ್ಟು 32 ಇ-ಬಸ್ ಡಿಪೋಗಳನ್ನು ಯೋಜಿಸಲಾಗಿದೆ ಮತ್ತು 62 ಡಿಪೋಗಳನ್ನು ಇತರ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಗೊತ್ತುಪಡಿಸಲಾಗಿದೆ.
    4. ಸುಮಾರು 1,950 ಎಲೆಕ್ಟ್ರಿಕ್ ಬಸ್‌ಗಳು ನಿರ್ದಿಷ್ಟವಾಗಿ ಗ್ರಾಮೀಣ ಸಂಪರ್ಕವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

    1. ಕರ್ನಾಟಕ ಬಜೆಟ್ 2026 ರಲ್ಲಿ ಘೋಷಿಸಲಾದ ಏರೋಸ್ಪೇಸ್ ಉಪಕ್ರಮಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಬೆಂಗಳೂರಿನ KIADB ಏರೋಸ್ಪೇಸ್ ಪಾರ್ಕ್‌ನಲ್ಲಿ ₹30 ಕೋಟಿ ವೆಚ್ಚದಲ್ಲಿ ಹೊಸ ಏರೋಸ್ಪೇಸ್ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (CFC) ಪ್ರಸ್ತಾಪಿಸಲಾಗಿದೆ.
    2. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಶಾಲೆಯನ್ನು ಸ್ಥಾಪಿಸಲಾಗುವುದು.
    3. ಇದು ಸ್ಥಳೀಯ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 25% ಸೀಟುಗಳನ್ನು ಮೀಸಲಿಡುವುದರೊಂದಿಗೆ ಏರೋನಾಟಿಕಲ್ ಉತ್ಪಾದನೆ ಮತ್ತು ತರಬೇತಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?

    1. 1 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. ಯಾವುದೂ ಅಲ್ಲ

    ಉತ್ತರ: D

    1. ಕರ್ನಾಟಕದ ಎಲಿವೇಟ್ (ELEVATE) ಕಾರ್ಯಕ್ರಮದ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, IT, Bt ಮತ್ತು S&T ಇಲಾಖೆಯ ಪ್ರಮುಖ ಉಪಕ್ರಮವಾಗಿದೆ.
    2. ಇದು ಕೇವಲ ಮಧ್ಯಮ-ಹಂತದ ಮತ್ತು ಬೃಹತ್-ಪ್ರಮಾಣದ ಉದ್ಯಮಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
    3. ಇದು ಆರಂಭಿಕ-ಹಂತದ ನವೀನ ನವೋದ್ಯಮಗಳನ್ನು ಪೋಷಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಧನಸಹಾಯ, ಮಾರ್ಗದರ್ಶನ ಮತ್ತು ವೆಂಚರ್ ಕ್ಯಾಪಿಟಲ್ (ಸಾಹಸೋದ್ಯಮ ಬಂಡವಾಳ) ಪ್ರವೇಶವನ್ನು ಒದಗಿಸುತ್ತದೆ.
    4. ಮಹಿಳಾ ನೇತೃತ್ವದ ನವೋದ್ಯಮಗಳ ಪಾಲು 2017 ರಲ್ಲಿ ಸುಮಾರು 17% ರಿಂದ 2025 ರಲ್ಲಿ ಸುಮಾರು 43% ಕ್ಕೆ ಏರಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇತ್ತೀಚೆಗೆ, ಮಂಡ್ಯದ ವಿ.ಸಿ. ಫಾರ್ಮ್‌ನಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.
    2. ಇದನ್ನು ಭಾರತ ಸರ್ಕಾರದ ‘ಖೇಲೊ ಇಂಡಿಯಾ’ ಯೋಜನೆಯಡಿ ಮಂಜೂರು ಮಾಡಲಾಗಿದೆ.
    3. ಈ ಯೋಜನೆಯು ತಳಮಟ್ಟದ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳ ಕ್ರೀಡಾ ಅಭಿವೃದ್ಧಿಯ ಮೇಲಿನ ಗಮನವನ್ನು ಪ್ರತಿಬಿಂಬಿಸುತ್ತದೆ.
    4. ಇದು ಪ್ರತ್ಯೇಕವಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಪಿಕ್ಸೆಲ್ (Pixxel) ಸಂಸ್ಥೆ ಪ್ರಾರಂಭಿಸಿದ ‘ಶಕುಂತಲಾ ಉಪಕ್ರಮ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಪರಿಸರ ಅಧ್ಯಯನದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಂಶೋಧಕರಿಗೆ ಸಣ್ಣ ಪ್ರಮಾಣದ ಅನುದಾನವನ್ನು ಒದಗಿಸುತ್ತದೆ.
    2. ಇದು ಸಂಪೂರ್ಣವಾಗಿ ಭಾರತ ಸರ್ಕಾರದಿಂದ ಧನಸಹಾಯ ಪಡೆಯುತ್ತದೆ ಮತ್ತು ಅನುಷ್ಠಾನಗೊಳ್ಳುತ್ತದೆ.
    3. ಇದು ಅನುದಾನದ ಅಂತರವನ್ನು ಪರಿಹರಿಸುವ ಮತ್ತು ದೀರ್ಘಕಾಲೀನ STEM ಸಮುದಾಯ ನಿರ್ಮಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
    4. ಎಸ್ಕೇಪ್ ವೆಲಾಸಿಟಿ ಗ್ರಾಂಟ್ಸ್ ಸಹಯೋಗದೊಂದಿಗೆ ಇದನ್ನು ಜಾರಿಗೆ ತರಲಾಗುತ್ತಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. “QpiAI Indus” ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು 25-ಕ್ಯೂಬಿಟ್ ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಕಂಪ್ಯೂಟರ್ ಆಗಿದೆ.
    2. ಧಾರವಾಡದ IIIT ಧಾರವಾಡದಲ್ಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ (QCCE)ದಲ್ಲಿ ಇದನ್ನು ಸ್ಥಾಪಿಸಲಾಗಿದೆ.
    3. ಇದು ಬಿಟ್‌ಗಳನ್ನು ಬಳಸುವ ಸಾಂಪ್ರದಾಯಿಕ ಬೈನರಿ ಕಂಪ್ಯೂಟಿಂಗ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ.
    4. ಇದು ಭಾರತದ ಕ್ವಾಂಟಮ್ ಕಂಪ್ಯೂಟಿಂಗ್ ಸಾಮರ್ಥ್ಯಗಳ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಕ್ರಿಸ್ ಗೋಪಾಲಕೃಷ್ಣನ್ ಸಮಿತಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
    2. ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ
    3. ಕೃತಕ ಬುದ್ಧಿಮತ್ತೆಯ (AI) ನೈತಿಕ ಬಳಕೆ
    4. ಕೃಷಿ ಸುಧಾರಣೆಗಳು
    5. ಬ್ಯಾಂಕಿಂಗ್ ನಿಯಂತ್ರಣ

    ಉತ್ತರ: B

    1. ‘ಇವ ನಮ್ಮವ ಇವ ನಮ್ಮವ ಮಸೂದೆ 2026’ ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಅಧಿಕೃತವಾಗಿ ‘ಕರ್ನಾಟಕ ವಿವಾಹ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಕಾಯ್ದೆ 2026’ ಎಂದು ಹೆಸರಿಸಲಾಗಿದೆ.
    2. ಸಮುದಾಯ ಸಂಸ್ಥೆಗಳಿಂದ ಅನುಮೋದನೆ ಕಡ್ಡಾಯಗೊಳಿಸುವ ಮೂಲಕ ವಿವಾಹಗಳನ್ನು ನಿಯಂತ್ರಿಸಲು ಇದು ಪ್ರಯತ್ನಿಸುತ್ತದೆ.
    3. ಇದು ಮರ್ಯಾದಾ ಹತ್ಯೆಗಳನ್ನು ತಡೆಗಟ್ಟುವ ಮತ್ತು ವಯಸ್ಕರು ತಮ್ಮ ಸಂಗಾತಿಗಳನ್ನು ಆಯ್ಕೆಮಾಡುವ ಸ್ವಾಯತ್ತತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
    4. ವಿವಾಹ ನಿರ್ಧಾರಗಳಲ್ಲಿ ಕುಟುಂಬ, ಜಾತಿ ಅಥವಾ ಸಮುದಾಯ ಸಂಸ್ಥೆಗಳ ಹಸ್ತಕ್ಷೇಪವನ್ನು ಇದು ಅಪರಾಧೀಕರಿಸುತ್ತದೆ.
    5. ‘ಇವ ನಮ್ಮವ ವೇದಿಕೆ’ ಎಂಬುದು ಮದುವೆಗಳನ್ನು ಸುಲಭಗೊಳಿಸಲು ಮತ್ತು ಆಪ್ತಸಮಾಲೋಚನೆ ನೀಡಲು ಸ್ಥಾಪಿಸಲಾದ ಜಿಲ್ಲಾ-ಮಟ್ಟದ ಸಮಿತಿಯಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3, 4 ಮತ್ತು 5 ಮಾತ್ರ
    2. 1, 2, 3 ಮತ್ತು 4 ಮಾತ್ರ
    3. 2, 3, 4 ಮತ್ತು 5 ಮಾತ್ರ
    4. 1, 2, 3, 4 ಮತ್ತು 5

    ಉತ್ತರ: A

    1. ಕಲ್ಯಾಣ ಪಥ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಉದ್ದೇಶಿಸಿರುವ ₹1,000 ಕೋಟಿ ವೆಚ್ಚದ ಯೋಜನೆಯಾಗಿದೆ.
    2. ಇದು 1,150 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಕಲ್ಪಿಸುತ್ತದೆ.
    3. ಈ ಯೋಜನೆಯು ಆಯ್ಕೆಯಾದ 38 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಪರ್ಕವನ್ನು ಸುಧಾರಿಸುವತ್ತ ಗಮನಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಎಲ್ಲವೂ
    4. ಯಾವುದೂ ಅಲ್ಲ

    ಉತ್ತರ: C

    1. “ಸಕಾಲ ಯೋಜನೆ” ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ 2011 ರ ಅಡಿಯಲ್ಲಿ ಜಾರಿಗೆ ತರಲಾಗಿದೆ.
    2. ಸರ್ಕಾರಿ ಸೇವೆಗಳನ್ನು ಕಾಲಮಿತಿಯಲ್ಲಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
    3. ಇದು ಪ್ರತಿ ಅರ್ಜಿಗೆ 15-ಅಂಕಿಯ ವಿಶಿಷ್ಟ ಖಾತರಿ ಸೇವಾ ಸಂಖ್ಯೆಯನ್ನು (GSC) ಒದಗಿಸುತ್ತದೆ.
    4. ಇದು ಕಂದಾಯ ಮತ್ತು ಸಾರಿಗೆ-ಸಂಬಂಧಿತ ಸೇವೆಗಳನ್ನು ಮಾತ್ರ ಒಳಗೊಳ್ಳುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ‘ದಡ ಸೇರಿಸು ತಂದೆ’ ಕೃತಿಗಾಗಿ ಕನ್ನಡ ಭಾಷಾ ವಿಭಾಗದಲ್ಲಿ ಅಮರೇಶ ನುಗಡೋಣಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
    2. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು 24 ಭಾರತೀಯ ಭಾಷೆಗಳಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ವಾರ್ಷಿಕವಾಗಿ ನೀಡಲಾಗುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಒಂದು
    2. ಕೇವಲ ಎರಡು
    3. ಎರಡೂ
    4. ಯಾವುದೂ ಅಲ್ಲ

    ಉತ್ತರ: D

    ಉತ್ತರಗಳು

    01). C                         

    02). D                 

    03). B                  

    04). C                

    05). B               

    06). D              

    07). A                

    08). B               

    09). A              

    10). C                

    11). A              

    12). C           

    13). B              

    14). D            

    15). A            

    16). C          

    17). D                

    18). D           

    19). A             

    20). B             

    21). C          

    22). A            

    23). B                 

    24). A          

    25). C      

    26). A              

    27). D

  • ಶ್ರೀ ಗುರು ತೇಘ (ತೇಜ್) ಬಹದ್ದೂರ್ | ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS) | ತೆಂಗು ಉತ್ತೇಜನಾ ಯೋಜನೆ

    ಶ್ರೀ ಗುರು ತೇಘ (ತೇಜ್) ಬಹದ್ದೂರ್

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿಯವರು ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ವರ್ಷದ (ಶಹೀದಿ ಸಮಾಗಮ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
    • ಈ ವೇಳೆ ಅವರು ಗುರುವಿನ ಬಲಿದಾನಕ್ಕೆ ನಮನ ಸಲ್ಲಿಸಿದರು ಹಾಗೂ ಶೌರ್ಯ, ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯ ಕುರಿತಾದ ಭಾರತದ ಪರಂಪರೆಯನ್ನು ಸ್ಮರಿಸಿದರು.

    ಗುರು ತೇಘ (ತೇಜ್) ಬಹದ್ದೂರ್ ಅವರ ಬಗ್ಗೆ:

    • ಇವರು 1621ರಲ್ಲಿ ಅಮೃತಸರದಲ್ಲಿ ಸಿಖ್ಖರ 6ನೇ ಗುರುವಾದ ಗುರು ಹರಗೋಬಿಂದ್ ಅವರ ಪುತ್ರನಾಗಿ ಜನಿಸಿದರು.
    • ಇವರು ತಮ್ಮ 13ನೇ ವಯಸ್ಸಿನಲ್ಲಿಯೇ ಯುದ್ಧಭೂಮಿಯಲ್ಲಿ ತೋರಿದ ಅಪ್ರತಿಮ ಶೌರ್ಯದಿಂದಾಗಿ ‘ತೇಜ್ ಬಹದ್ದೂರ್’ (ಕತ್ತಿಯ ವೀರ) ಎಂಬ ಬಿರುದಿಗೆ ಪಾತ್ರರಾದರು.
    • ಮಖನ್ ಶಾ ಎಂಬ ವ್ಯಾಪಾರಿಯಿಂದ ಗುರುತಿಸಲ್ಪಡುವ ಮುನ್ನ ಇವರು ಬಕಾಲ ಎಂಬಲ್ಲಿ ಹಲವು ವರ್ಷಗಳ ಕಾಲ ಧ್ಯಾನದಲ್ಲಿ ತೊಡಗಿದ್ದರು. ತದನಂತರ 1664ರಲ್ಲಿ ಇವರನ್ನು ಸಿಖ್ಖರ 9ನೇ ಗುರು ಎಂದು ಅಂಗೀಕರಿಸಲಾಯಿತು.
    • ಇವರ ಪುತ್ರ ಗುರು ಗೋಬಿಂದ್ ಸಿಂಗ್ ಅವರು, “ತಮ್ಮ ಶಿರವನ್ನೇ ಅರ್ಪಿಸಿದರೂ ನಂಬಿಕೆಯನ್ನು ಬಿಟ್ಟುಕೊಡದ ಮಹಾನ್ ಚೇತನ” ಎಂದು ಇವರನ್ನು ಗೌರವಿಸಿದರು. ಈ ಮೂಲಕ ಇವರು ಭಾರತದ ಆತ್ಮಸಾಕ್ಷಿ ಮತ್ತು ಧರ್ಮದ ರಕ್ಷಕನಾದ ‘ಹಿಂದ್ ದಿ ಚಾದರ್’ ಎಂಬ ಶಾಶ್ವತ ಕೀರ್ತಿಗೆ ಭಾಜನರಾದರು.

    ಗುರು ತೇಜ್ ಬಹದ್ದೂರ್ ಅವರ ಕೊಡುಗೆಗಳು:

    • ಚಕ್ ನಾನಕಿ (ಇಂದಿನ ಆನಂದಪುರ ಸಾಹಿಬ್) ನಗರವನ್ನು ಸ್ಥಾಪಿಸಿದರು:- ಉತ್ತರ ಮತ್ತು ಪೂರ್ವ ಭಾರತದಾದ್ಯಂತ ವ್ಯಾಪಕವಾಗಿ ಸಂಚರಿಸಿದ ಇವರು, ನಿರ್ಭಯತೆ, ಸಮಾನತೆ ಮತ್ತು ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಆಧ್ಯಾತ್ಮಿಕ ಬೋಧನೆಗಳನ್ನು ಪಸರಿಸಿದರು.
    • ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಧಾರ್ಮಿಕ ಉದ್ವಿಗ್ನತೆ ಮತ್ತು ಬಲವಂತದ ಮತಾಂತರಗಳು ಮಿತಿಮೀರಿದ್ದವು. ಆ ಸಂದರ್ಭದಲ್ಲಿ ಇವರ ಸಂದೇಶಗಳು ಜನಮಾನಸದಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸಿದವು.
    • ಕಾಶ್ಮೀರಿ ಬ್ರಾಹ್ಮಣರು ದೌರ್ಜನ್ಯದಿಂದ ಪಾರಾಗಲು ಇವರ ರಕ್ಷಣೆ ಕೋರಿದಾಗ, ಗುರು ತೇಜ್ ಬಹದ್ದೂರ್ ಅವರು ಮೊಘಲರ ಅಧಿಕಾರವನ್ನು ದಿಟ್ಟವಾಗಿ ಪ್ರಶ್ನಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ನಿಂತರು.
    • ಮರಣ:- ಇವರನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ, 1675ರಲ್ಲಿ ಇವರನ್ನು ಮತ್ತು ಇವರ ಒಡನಾಡಿಗಳನ್ನು ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಇವರುಗೈದ ಈ ಬಲಿದಾನವನ್ನು ಅತ್ಯುನ್ನತ ತ್ಯಾಗವೆಂದು ಇಂದಿಗೂ ಸ್ಮರಿಸಲಾಗುತ್ತದೆ.

    ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಲು, ಪ್ರಧಾನಿ ನರೇಂದ್ರ ಮೋದಿಯವರು ಭದ್ರತೆಯ ಮೇಲಿನ ಸಚಿವ ಸಂಪುಟ (ಕ್ಯಾಬಿನೆಟ್) ಸಮಿತಿ (CCS)ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

    ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)ಯ ಬಗ್ಗೆ:

    • ಅತ್ಯುನ್ನತ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಸಮಿತಿ:- ಇದು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
    • ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿಯು ಕಾರ್ಯನಿರ್ವಹಿಸುತ್ತದೆ. ಇದು ಪ್ರಮುಖವಾಗಿ ಗೃಹ ಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರನ್ನು ಒಳಗೊಂಡಿರುತ್ತದೆ.
    • ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA) ಈ ಸಮಿತಿಯ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಕಾರ್ಯದರ್ಶಿ-ಮಟ್ಟದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಾರೆ.

    ತೆಂಗು ಉತ್ತೇಜನಾ ಯೋಜನೆ

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಮುಂಗಡ ಪತ್ರ, 2026-27ನೇ ಸಾಲಿನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ‘ತೆಂಗು ಉತ್ತೇಜನಾ ಯೋಜನೆ’ಯನ್ನು ಘೋಷಿಸಲಾಗಿದೆ.

    ‘ತೆಂಗು ಉತ್ತೇಜನಾ ಯೋಜನೆ’ಯ ಬಗ್ಗೆ:

    • ಪ್ರಮುಖ ಉದ್ದೇಶ:- ಕರಾವಳಿ ತೀರದುದ್ದಕ್ಕೂ ಹೊಸ ತೋಟಗಳನ್ನು ನಿರ್ಮಿಸುವುದು ಹಾಗೂ ಇಳುವರಿ ಕುಂಠಿತಗೊಂಡಿರುವ ಹಳೆಯ ಮತ್ತು ರೋಗಗ್ರಸ್ತ ತೋಟಗಳನ್ನು ಅಧಿಕ ಇಳುವರಿ ನೀಡುವ ಉತ್ಕೃಷ್ಟ ತೆಂಗಿನ ತಳಿಗಳೊಂದಿಗೆ ಪುನರುಜ್ಜೀವನಗೊಳಿಸುವ ಮೂಲಕ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವುದು.
    • ಅನುಷ್ಠಾನಗೊಳಿಸುವ ಪ್ರಾಧಿಕಾರ:- ‘ತೆಂಗು ಅಭಿವೃದ್ಧಿ ಮಂಡಳಿ’ (CDB).

    ತೆಂಗಿನಕಾಯಿಯ ಬಗ್ಗೆ:

    • ವೈಜ್ಞಾನಿಕ ಹೆಸರು:- ಕೊಕೊಸ್ ನುಸಿಫರ (Cocos nucifera)
    • ಇದು ಭಾರತದ ಪ್ರಮುಖ ಬಹುವಾರ್ಷಿಕ ತೋಟಗಾರಿಕಾ ಬೆಳೆಯಾಗಿದೆ.
    • ಇದನ್ನು ಅತಿಹೆಚ್ಚಾಗಿ ತೇವಾಂಶಭರಿತ ಉಷ್ಣವಲಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
    • ಈ ಬೆಳೆಯು ಉತ್ತಮವಾಗಿ ನೀರು ಬಸಿದುಹೋಗುವ ಮರಳು ಮಿಶ್ರಿತ ಗೋಡು ಮಣ್ಣು (loam soils), ಅಧಿಕ ತೇವಾಂಶ ಮತ್ತು 27-32 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಹಾಗೂ ಈ ಬೆಳೆಗೆ ಯಥೇಚ್ಛವಾದ ಸೂರ್ಯನ ಬೆಳಕಿನ ಅವಶ್ಯಕತೆಯಿರುತ್ತದೆ.
    • ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದಿಸುವ ರಾಷ್ಟ್ರಗಳ ಪೈಕಿಯಲ್ಲಿ ಭಾರತವೂ ಮುಂಚೂಣಿಯಲ್ಲಿದೆ.
    • ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಜಂಟಿಯಾಗಿ ಭಾರತದ ಒಟ್ಟು ತೆಂಗು ಉತ್ಪಾದನೆಯಲ್ಲಿ ಶೇ. 82-83ರಷ್ಟು ಅಗ್ರಗಣ್ಯ ಪಾಲನ್ನು ಹೊಂದಿವೆ.
  • ಸ್ವಚ್ಛ ಭಾರತ ಅಭಿಯಾನ (SBM) – ನಗರ 2.0

    ಸ್ವಚ್ಛ ಭಾರತ ಅಭಿಯಾನ (SBM) – ನಗರ 2.0

    ಇದೀಗ ಸುದ್ದಿಯಲ್ಲಿದೆ: 

    • ಸ್ವಚ್ಛ ಭಾರತ ಅಭಿಯಾನ-ನಗರ 2.0 ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ₹2,245.30 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.
    • ಈ ನಡೆಯ ಮಹತ್ವ:- ನಗರ ಮೂಲಸೌಕರ್ಯಗಳನ್ನು ಬಲಪಡಿಸುವುದು, ನಗರಗಳನ್ನು ಸಂಪೂರ್ಣವಾಗಿ ಕಸಮುಕ್ತಗೊಳಿಸುವುದು ಮತ್ತು ಕರ್ನಾಟಕದಾದ್ಯಂತ ತ್ಯಾಜ್ಯ ಸಂಸ್ಕರಣಾ ಪ್ರಕ್ರಿಯೆಗಳನ್ನು ಸುಧಾರಿಸುವುದು ಈ ಅನುದಾನದ ಪ್ರಮುಖ ಉದ್ದೇಶವಾಗಿದೆ.

    ಸ್ವಚ್ಛ ಭಾರತ ಅಭಿಯಾನ-ನಗರ 2.0 ಉಪಕ್ರಮದ ಬಗ್ಗೆ:

    • ಪ್ರಾರಂಭಿಸಿದ ದಿನಾಂಕ:- ಅಕ್ಟೋಬರ್ 1, 2021 
    • 2026 ರ ವೇಳೆಗೆ ಎಲ್ಲಾ ಭಾರತದ ನಗರಗಳನ್ನು “ಕಸಮುಕ್ತ” ನಗರಗಳನ್ನಾಗಿ ಮಾಡುವ ಗುರಿಯನ್ನು ಇದು ಹೊಂದಿದೆ.
    • ಅನುಷ್ಠಾನ ಸಚಿವಾಲಯ:- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA)

    ಈ ಅಭಿಯಾನದ ಪ್ರಮುಖ ಉದ್ದೇಶಗಳು ಮತ್ತು ದೃಷ್ಟಿಕೋನ:

    • ಕಸಮುಕ್ತ ನಗರಗಳು:- ಎಲ್ಲಾ ಶಾಸನಬದ್ಧ ನಗರಗಳಲ್ಲಿ ಉತ್ಪತ್ತಿಯಾಗುವ ಪುರಸಭೆ/ನಗರಸಭೆಯ ಘನ ತ್ಯಾಜ್ಯವನ್ನು 100% ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವ ಗುರಿಯನ್ನು ಇದು ಹೊಂದಿದೆ.
    • ಬಯಲು ಶೌಚ ಮುಕ್ತ ಸ್ಥಾನಮಾನವನ್ನು ಕಾಯ್ದುಕೊಳ್ಳುವುದು (ODF):- ಕೇವಲ ಬಯಲು ಶೌಚ ಮುಕ್ತ (ODF) ಸಾಧನೆಯಿಂದಾಚೆಗೆ ಸಾಗಿ, ODF+ (ಕ್ರಿಯಾತ್ಮಕ ಮತ್ತು ನೈರ್ಮಲ್ಯಯುತ ಸಾರ್ವಜನಿಕ ಶೌಚಾಲಯಗಳು) ಮತ್ತು ODF++ (ಸಮಗ್ರ ಮಲತ್ಯಾಜ್ಯ ನಿರ್ವಹಣೆ) ಸ್ಥಾನಮಾನವನ್ನು ಸಾಧಿಸುವುದಾಗಿದೆ.
    • ವಾಟರ್+ ಪ್ರಮಾಣೀಕರಣ:- ಯಾವುದೇ ಸಂಸ್ಕರಿಸದ ತ್ಯಾಜ್ಯನೀರನ್ನು ತೆರೆದ ಪರಿಸರಕ್ಕೆ ಅಥವಾ ಜಲಮೂಲಗಳಿಗೆ ಬಿಡದಿರುವುದನ್ನು ಇದು ಕಟ್ಟುನಿಟ್ಟಾಗಿ ಖಚಿತಪಡಿಸುತ್ತದೆ.
    • ಪರಂಪರಾಗತ ತ್ಯಾಜ್ಯದ ವಿಲೇವಾರಿ:- ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ವರ್ಷಗಟ್ಟಲೆ ಸಂಗ್ರಹವಾಗಿರುವ ಹಳೆಯ ತ್ಯಾಜ್ಯವನ್ನು ಸಂಸ್ಕರಿಸಿ, ಭೂಮಿಯನ್ನು ಮರುಪಡೆಯುವುದು ಮತ್ತು ಪರಿಸರಕ್ಕೆ ಉಂಟಾಗುವ ಅಪಾಯಗಳನ್ನು ತಡೆಯುವುದು ಇದರ ಪ್ರಮುಖ ಆದ್ಯತೆಯಾಗಿದೆ.
    • ವೃತ್ತಾಕಾರದ ಆರ್ಥಿಕತೆ:- ತ್ಯಾಜ್ಯವನ್ನು ಒಂದು ಸಂಪನ್ಮೂಲವೆಂದು ಪರಿಗಣಿಸಲು 3R ತತ್ವಗಳನ್ನು (ಕಡಿತಗೊಳಿಸುವುದು – Reduce, ಮರುಬಳಕೆ – Reuse, ಮರುಚಕ್ರೀಕರಣ – Recycle) ಇದು ಉತ್ತೇಜಿಸುತ್ತದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ MCQs

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ MCQs

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    ಹೇಳಿಕೆ-1: ಗ್ರೇ ಜೋನ್ ಸಂಘರ್ಷಗಳು ಶಾಂತಿ ಮತ್ತು ಪೂರ್ಣ ಪ್ರಮಾಣದ ಯುದ್ಧದ ನಡುವಿನ ಅಸ್ಥಿರ ಪರಿಸ್ಥಿತಿಗಳಲ್ಲಿ ಸಂಭವಿಸುತ್ತವೆ. ಸೈಬರ್ ದಾಳಿಗಳು, ತಪ್ಪು ಮಾಹಿತಿ ಅಭಿಯಾನಗಳು ಮತ್ತು ಆರ್ಥಿಕ ಒತ್ತಡ ಹೇರುವಿಕೆಯು ಇದರ ಪ್ರಮುಖ ತಂತ್ರಗಳಾಗಿವೆ.

    ಹೇಳಿಕೆ-2: ಪರೋಕ್ಷ ಯುದ್ಧವು ರಾಷ್ಟ್ರಗಳ ನಡುವಿನ ಪರೋಕ್ಷ ಸಂಘರ್ಷವನ್ನು ಒಳಗೊಂಡಿರುತ್ತದೆ. ಇದರಲ್ಲಿ ದೇಶಗಳು ತಮ್ಮ ವಿರೋಧಿಗಳ ವಿರುದ್ಧ ಹೋರಾಡಲು ಸರ್ಕಾರೇತರ ಗುಂಪುಗಳು ಅಥವಾ ಸಶಸ್ತ್ರ ಗುಂಪುಗಳನ್ನು ಬೆಂಬಲಿಸುತ್ತವೆ.

    ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. ಹೇಳಿಕೆ-1 ಮತ್ತು ಹೇಳಿಕೆ-2 ಎರಡೂ ಸರಿಯಾಗಿವೆ ಮತ್ತು ಹೇಳಿಕೆ-2, ಹೇಳಿಕೆ-1 ರ ಸರಿಯಾದ ವಿವರಣೆಯಾಗಿದೆ.
    2. ಹೇಳಿಕೆ-1 ಮತ್ತು ಹೇಳಿಕೆ-2 ಎರಡೂ ಸರಿಯಾಗಿವೆ ಆದರೆ ಹೇಳಿಕೆ-2, ಹೇಳಿಕೆ-1 ರ ಸರಿಯಾದ ವಿವರಣೆಯಲ್ಲ.
    3. ಹೇಳಿಕೆ-1 ಸರಿಯಾಗಿದೆ ಆದರೆ ಹೇಳಿಕೆ-2 ತಪ್ಪಾಗಿದೆ.
    4. ಹೇಳಿಕೆ-1 ತಪ್ಪಾಗಿದೆ ಆದರೆ ಹೇಳಿಕೆ-2 ಸರಿಯಾಗಿದೆ.

    ಉತ್ತರ: B

    1. “ಹಾರ್ಮುಜ್ ಜಲಸಂಧಿ”ಯು ಈ ಕೆಳಗಿನ ಯಾವ ಜಲಮೂಲಗಳನ್ನು ಸಂಪರ್ಕಿಸುತ್ತದೆ?
    2. ಕೆಂಪು ಸಮುದ್ರ ಮತ್ತು ಅರಬ್ಬಿ ಸಮುದ್ರ
    3. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರ
    4. ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿ
    5. ಏಡೆನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರ

    ಉತ್ತರ: C

    1. ಸೆಬಿಯ (SEBI – ಭಾರತೀಯ ಭದ್ರತಾ ವಿನಿಮಯ ಮಂಡಳಿ) ಪ್ರಮುಖ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭದ್ರತಾ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು.
    2. ಭದ್ರತಾ ಮಾರುಕಟ್ಟೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು.
    3. ಭಾರತದಲ್ಲಿ ಭದ್ರತಾ ಮಾರುಕಟ್ಟೆಯನ್ನು ನಿಯಂತ್ರಿಸುವುದು.
    4. ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ನಿರ್ವಹಿಸುವುದು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಕೇವಲ ಒಂದು

    ಉತ್ತರ: B

    1. ಈ ಕೆಳಗಿನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅವುಗಳ ದೇಶ/ಪ್ರದೇಶದೊಂದಿಗೆ ಹೊಂದಿಸಿ:

    ಪಟ್ಟಿ-I (ವಾಯು ರಕ್ಷಣಾ ವ್ಯವಸ್ಥೆ)

    ಪಟ್ಟಿ-II (ದೇಶ/ಪ್ರದೇಶ)

    a. S-400 ಟ್ರಯಂಫ್

    1. ಇಸ್ರೇಲ್

    b. ಥಾಡ್ (THAAD)

    2. ರಷ್ಯಾ

    c. ಐರನ್ ಡೋಮ್

    3. ಅಮೆರಿಕ

    d. HQ-9

    4. ಚೀನಾ

    ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ: 

    1. a-2, b-3, c-1, d-4 
    2. a-3, b-2, c-4, d-1 
    3. a-2, b-1, c-3, d-4 
    4. a-4, b-3, c-2, d-1

    ಉತ್ತರ: A

    1. ಭಾರತದ ಅರೆವಾಹಕ (ಸೆಮಿಕಂಡಕ್ಟರ್) ಕ್ಷೇತ್ರದ ಉಪಕ್ರಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತೀಯ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಾರಂಭಿಸಿದೆ.
    2. ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹಾಗೂ ವಿನ್ಯಾಸದಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ.
    3. ಗುಜರಾತ್‌ನ ಸಾನಂದ್‌ನಲ್ಲಿ ಮೈಕ್ರಾನ್ ಟೆಕ್ನಾಲಜಿ ಕಂಪನಿಯು ಭಾರತದ ಮೊದಲ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ? 

    1. ಕೇವಲ ಒಂದು 
    2. ಕೇವಲ ಎರಡು 
    3. ಕೇವಲ ಮೂರು 
    4. ಎಲ್ಲವೂ ಸರಿಯಾಗಿವೆ

    ಉತ್ತರ: D

    1. ಗುರು ತೇಜ್ ಬಹದ್ದೂರ್ ಅವರ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇವರು 1621 ರಲ್ಲಿ ಅಮೃತಸರದಲ್ಲಿ ಗುರು ಹರಗೋಬಿಂದ್ ಅವರ ಪುತ್ರನಾಗಿ ಜನಿಸಿದರು.
    2. ವ್ಯಾಪಾರಿ ಮಖನ್ ಶಾ ಲುಬಾನಾ ಅವರಿಂದ ಗುರುತಿಸಲ್ಪಟ್ಟ ನಂತರ, 1664 ರಲ್ಲಿ ಇವರನ್ನು ಒಂಬತ್ತನೇ ಸಿಖ್ ಗುರು ಎಂದು ಅಂಗೀಕರಿಸಲಾಯಿತು.
    3. ಇವರು ಆನಂದಪುರ್ ಸಾಹಿಬ್ (ಮೊದಲು ಚಕ್ ನಾನಕಿ) ಅನ್ನು ಸ್ಥಾಪಿಸಿದರು ಮತ್ತು ಸಮಾನತೆ ಹಾಗೂ ಏಕದೇವೋಪಾಸನೆಯ ಆಧ್ಯಾತ್ಮಿಕ ಬೋಧನೆಗಳನ್ನು ಹರಡಲು ವ್ಯಾಪಕವಾಗಿ ಪ್ರವಾಸ ಮಾಡಿದರು.
    4. ಕಾಶ್ಮೀರಿ ಬ್ರಾಹ್ಮಣರ ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ಮೂಲಕ, ಇವರು ಮೊಘಲ್ ಚಕ್ರವರ್ತಿ ಔರಂಗಜೇಬನ ನೀತಿಗಳನ್ನು ಬಹಿರಂಗವಾಗಿ ವಿರೋಧಿಸಿದರು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 2 ಮಾತ್ರ 
    2. 1, 2 ಮತ್ತು 3 ಮಾತ್ರ 
    3. 1, 2, 3 ಮತ್ತು 4 
    4. 2, 3 ಮತ್ತು 4 ಮಾತ್ರ

    ಉತ್ತರ: C

    1. ಇಂಧನ ದಕ್ಷತೆ ಬ್ಯೂರೋ (BEE)ನ ಉಪಕ್ರಮಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಮಾನದಂಡಗಳು ಮತ್ತು ಲೇಬಲಿಂಗ್ (S&L) ಯೋಜನೆಯು ರೆಫ್ರಿಜರೇಟರ್‌ಗಳು ಮತ್ತು ಹವಾನಿಯಂತ್ರಕಗಳಂತಹ (ACs) ಉಪಕರಣಗಳ ಮೇಲೆ ಸ್ಟಾರ್-ರೇಟಿಂಗ್ ಲೇಬಲ್‌ಗಳನ್ನು ಒದಗಿಸುತ್ತದೆ.
    2. ಸಾಧನೆ, ಗುರಿ ಸಾಧನೆ ಮತ್ತು ವ್ಯಾಪಾರ (PAT) ಯೋಜನೆಯು ಮಾರುಕಟ್ಟೆ ಆಧಾರಿತ ಕಾರ್ಯವಿಧಾನವಾಗಿದ್ದು, ಇದು ಅತಿ ಹೆಚ್ಚು ಇಂಧನ ಬಳಸುವ ಬೃಹತ್ ಕೈಗಾರಿಕೆಗಳನ್ನು ಗುರಿಯಾಗಿಸಿಕೊಂಡಿದೆ.
    3. ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ (ECBC)ಯು ಇಂಧನ-ಸಮರ್ಥ ಕಟ್ಟಡ ವಿನ್ಯಾಸಕ್ಕೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
    4. PAT ಯೋಜನೆಯು ಪ್ರಾಥಮಿಕವಾಗಿ ಗೃಹಬಳಕೆಯ ಉಪಕರಣಗಳಲ್ಲಿ ಇಂಧನ ದಕ್ಷತೆಯನ್ನು ಸುಧಾರಿಸುವತ್ತ ಗಮನಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 3 ಮಾತ್ರ 
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ವಿಶ್ವ ಸ್ಥೂಲಕಾಯ (ಬೊಜ್ಜು) ಅಟ್ಲಾಸ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ವಿಶ್ವ ಸ್ಥೂಲಕಾಯ (ಬೊಜ್ಜು) ಒಕ್ಕೂಟ ಪ್ರಕಟಿಸುತ್ತದೆ.
    2. ಇದು ಸ್ಥೂಲಕಾಯದ ಪ್ರವೃತ್ತಿಗಳಿಗೆ ಸಂಬಂಧಿಸಿದ ಜಾಗತಿಕ ದತ್ತಾಂಶ, ಭವಿಷ್ಯದ ಅಂದಾಜುಗಳು ಮತ್ತು ನೀತಿ ಒಳನೋಟಗಳನ್ನು ಒದಗಿಸುತ್ತದೆ.
    3. ಇದು ಕೇವಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸ್ಥೂಲಕಾಯದ ಪ್ರವೃತ್ತಿಗಳ ಮೇಲೆ ಮಾತ್ರ ಗಮನಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 1 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. ಎಲ್ ನಿನೊ (El Niño) ಮತ್ತು ಲಾ ನಿನಾ (La Niña) ಹವಾಮಾನ ವಿದ್ಯಮಾನಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಎಲ್ ನಿನೊ ಪ್ರಕ್ರಿಯೆಯು ಪೆಸಿಫಿಕ್ ಮಹಾಸಾಗರದ ಸಮುದ್ರ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಬೆಚ್ಚಗಿರುವುದಕ್ಕೆ ಸಂಬಂಧಿಸಿದೆ.
    2. ಲಾ ನಿನಾ ಪ್ರಕ್ರಿಯೆಯು ಸಾಮಾನ್ಯಕ್ಕಿಂತ ಬಲವಾದ ವಾಣಿಜ್ಯ ಮಾರುತಗಳಿಗೆ ಸಂಬಂಧಿಸಿದೆ.
    3. ಈ ಎರಡೂ ವಿದ್ಯಮಾನಗಳು ಪ್ರಪಂಚದ ವಿವಿಧ ಭಾಗಗಳಲ್ಲಿನ ಮಳೆಯ ಮಾದರಿಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ? 

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. ಎಲ್ಲಾ ಹೇಳಿಕೆಗಳು ತಪ್ಪಾಗಿವೆ 
    4. ಎಲ್ಲಾ ಹೇಳಿಕೆಗಳು ಸರಿಯಾಗಿವೆ

    ಉತ್ತರ: D

    1. ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದದ (BSA) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಎರಡು ದೇಶಗಳ ಕೇಂದ್ರ ಬ್ಯಾಂಕ್‌ಗಳ ನಡುವಿನ ಕರೆನ್ಸಿ ವಿನಿಮಯ ಒಪ್ಪಂದವಾಗಿದೆ.
    2. ಇದು ಎರಡೂ ದೇಶಗಳಿಗೆ ಅಲ್ಪಾವಧಿಯ ನಗದು ಕೊರತೆಗಳನ್ನು ಪರಿಹರಿಸಲು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
    3. ಇದು ಎರಡು ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
    4. ವ್ಯಾಪಾರ ವಸಾಹತುಗಳಿಗಾಗಿ ಎರಡು ದೇಶಗಳು ತಮ್ಮ ಕರೆನ್ಸಿಗಳನ್ನು ಶಾಶ್ವತವಾಗಿ ವಿನಿಮಯ ಮಾಡಿಕೊಳ್ಳಲು ಇದು ಅನುಮತಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಮಧುರೈ ಸುಂಗುಡಿ ಸೀರೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸುಂಗುಡಿ ಸೀರೆಗಳು ಸಾಂಪ್ರದಾಯಿಕ ಹತ್ತಿ ಸೀರೆಗಳಾಗಿದ್ದು, ಇವುಗಳನ್ನು 17ನೇ ಶತಮಾನದಲ್ಲಿ ಗುಜರಾತ್‌ನಿಂದ ಮಧುರೈಗೆ ವಲಸೆ ಬಂದ ಸೌರಾಷ್ಟ್ರ ಸಮುದಾಯವು ಪರಿಪೂರ್ಣಗೊಳಿಸಿತು.
    2. ಸಾವಿರಾರು ಸಣ್ಣ ಬಿಳಿ ಚುಕ್ಕೆಗಳನ್ನು ಮೂಡಿಸುವ ಕೈ-ಗಂಟು ಹಾಕುವ ತಂತ್ರದ ಮೂಲಕ ರಚಿಸಲಾದ ಸಂಕೀರ್ಣವಾದ ಟೈ-ಅಂಡ್-ಡೈ ವಿನ್ಯಾಸಗಳನ್ನು ಈ ಸೀರೆಗಳು ಒಳಗೊಂಡಿವೆ.
    3. ಮಧುರೈ ಸುಂಗುಡಿ ಸೀರೆಯು ಭೌಗೋಳಿಕ ಸೂಚಕ (GI) ಮಾನ್ಯತೆಯನ್ನುಅನ್ನು ಪಡೆದುಕೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 1, 2 ಮತ್ತು 3 
    4. 2 ಮತ್ತು 3 ಮಾತ್ರ

    ಉತ್ತರ: C

    1. ಕುರ್ಡಿಶ್ ಜನರ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
    1. ಅವರನ್ನು ಪ್ರಪಂಚದ ಅತಿದೊಡ್ಡ ‘ರಾಷ್ಟ್ರವನ್ನು ಹೊಂದಿರದ ಜನಾಂಗೀಯ ಗುಂಪುಗಳಲ್ಲಿ’ ಒಂದೆಂದು ಪರಿಗಣಿಸಲಾಗಿದೆ.
    2. ಅವರು ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಸ್ವತಂತ್ರ ಸಾರ್ವಭೌಮ ರಾಷ್ಟ್ರವನ್ನು ಹೊಂದಿದ್ದಾರೆ.
    3. ಅವರು ‘ಕುರ್ಡಿಶ್’ ಎಂಬ ತಮ್ಮದೇ ಆದ ಭಾಷೆಯನ್ನು ಹೊಂದಿದ್ದಾರೆ.

    ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 2 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. “ರೈಸಿನಾ ಸಂವಾದ (ಡೈಲಾಗ್)”ಕ್ಕೆ  ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ಸಮ್ಮೇಳನವು ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ-ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
    2. ಈ ಸಮ್ಮೇಳನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಆಯೋಜಿಸುತ್ತದೆ.
    3. ಯಾವುದೇ ಥಿಂಕ್ ಟ್ಯಾಂಕ್‌ನ ಒಳಗೊಳ್ಳುವಿಕೆ ಇಲ್ಲದೆ ಕೇವಲ ಸರ್ಕಾರಿ ಸಚಿವಾಲಯವು ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ.
    4. 2026 ರ ಆವೃತ್ತಿಯು “ಸಂಸ್ಕಾರ: ದೃಢೀಕರಣ, ಹೊಂದಾಣಿಕೆ, ಪ್ರಗತಿ” ಎಂಬ ಘೋಷವಾಕ್ಯವನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಗುರುತ್ವಾಕರ್ಷಣೆ (ಗ್ರಾವಿಟಿ) ಬಾಂಬ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಟೊಮಾಹಾಕ್ ಕ್ರೂಸ್ ಕ್ಷಿಪಣಿಯಂತಹ ಕ್ರೂಸ್ ಕ್ಷಿಪಣಿಗಳಿಂದ ಭಿನ್ನವಾಗಿದೆ, ಏಕೆಂದರೆ ಇದು ಎಂಜಿನ್ ಅನ್ನು ಹೊಂದಿರುವುದಿಲ್ಲ.
    2. ಇದರ ಹಾರಾಟದ ಉದ್ದಕ್ಕೂ ಆನ್‌ಬೋರ್ಡ್ ರೇಡಾರ್ ವ್ಯವಸ್ಥೆಗಳ ಮೂಲಕ ಇದಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ.
    3. ನಿಖರತೆಯನ್ನು ಸುಧಾರಿಸಲು ಇದನ್ನು ಜಾಯಿಂಟ್ ಡೈರೆಕ್ಟ್ ಅಟ್ಯಾಕ್ ಮ್ಯುನಿಷನ್ (JDAM) ಕಿಟ್‌ಗಳೊಂದಿಗೆ ನವೀಕರಿಸಬಹುದು.
    4. ಮಾರ್ಗದರ್ಶನವಿಲ್ಲದ ಬಾಂಬ್‌ಗಳನ್ನು ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳಾಗಿ ಪರಿವರ್ತಿಸಲು JDAM ಕಿಟ್‌ಗಳು GPS ಮಾರ್ಗದರ್ಶನ ಮತ್ತು ಸ್ಟಿಯರಬಲ್ ಫಿನ್‌ಗಳನ್ನು ಬಳಸುತ್ತವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2, 3 ಮತ್ತು 4 ಮಾತ್ರ 
    2. 1 ಮತ್ತು 2 ಮಾತ್ರ 
    3. 1, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: C

    1. ಜೈವಿಕ ವೈವಿಧ್ಯತಾ ಒಪ್ಪಂದದ 7ನೇ ರಾಷ್ಟ್ರೀಯ ವರದಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ವರದಿಯು 2030 ಕ್ಕೆ ನಿಗದಿಪಡಿಸಲಾದ ಜೈವಿಕ ವೈವಿಧ್ಯತೆಯ ಗುರಿಗಳತ್ತ ಭಾರತದ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ.
    2. ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತಾ ಚೌಕಟ್ಟಿಗೆ ಅನುಗುಣವಾಗಿ 23 ರಾಷ್ಟ್ರೀಯ ಜೈವಿಕ ವೈವಿಧ್ಯತೆಯ ಗುರಿಗಳ ವಿರುದ್ಧ ಇದು ಭಾರತದ ಸಾಧನೆಯನ್ನು ನಿರ್ಣಯಿಸುತ್ತದೆ.
    3. ಈ ಚೌಕಟ್ಟಿನ ಅಡಿಯಲ್ಲಿರುವ ಎಲ್ಲಾ ಜೈವಿಕ ವೈವಿಧ್ಯತೆಯ ಗುರಿಗಳನ್ನು ಸಾಧಿಸಲು ಇದು ಭಾರತವನ್ನು ಕಾನೂನಾತ್ಮಕವಾಗಿ ಬದ್ಧವಾಗಿಸುತ್ತದೆ.
    4. ಈ ವರದಿಯು ಒಪ್ಪಂದದ ಅಡಿಯಲ್ಲಿ ರಾಷ್ಟ್ರೀಯ ವರದಿ ಮಾಡುವ ಜವಾಬ್ದಾರಿಗಳ ಒಂದು ಭಾಗವಾಗಿದೆ.
    5. ಈ ವರದಿಯಲ್ಲಿ ಮೌಲ್ಯಮಾಪನ ಮಾಡಲಾದ ಗುರಿಗಳು 2050 ರ ಜಾಗತಿಕ ಜೈವಿಕ ವೈವಿಧ್ಯತೆಯ ಗುರಿಗಳೊಂದಿಗೆ ಸಂಪರ್ಕ ಹೊಂದಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2, 4 ಮತ್ತು 5 ಮಾತ್ರ
    2. 1, 2 ಮತ್ತು 3 ಮಾತ್ರ 
    3. 2, 3, 4 ಮತ್ತು 5 ಮಾತ್ರ 
    4. 1, 2, 3, 4 ಮತ್ತು 5

    ಉತ್ತರ: A

    1. ಬ್ರೈನ್ ಕೋ-ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುವ ಮೂನ್‌ಶಾಟ್ ಯೋಜನೆಯನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
    2. ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ದೆಹಲಿ 
    3. ಭಾರತೀಯ ವಿಜ್ಞಾನ ಸಂಸ್ಥೆ (IISc) 
    4. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) 
    5. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)

    ಉತ್ತರ: B

    1. ಭಾರತದ ತೈಲ ಆಮದು ಪ್ರವೃತ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಹೆಚ್ಚಿನ ಇಂಧನ ಬೇಡಿಕೆಯಿಂದಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವಿಶ್ವದ ಅತಿದೊಡ್ಡ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.
    2. ರಷ್ಯಾದಿಂದ ಆಮದು ಮಾಡಿಕೊಳ್ಳುವ ಪಾಲು ಭಾರತದ ಒಟ್ಟು ತೈಲ ಆಮದಿನ ಕಾಲು ಭಾಗಕ್ಕಿಂತ ಕಡಿಮೆಯಾಗಿದೆ.
    3. ಅಮೆರಿಕದಿಂದ ಆಮದು ಹೆಚ್ಚಾಗುತ್ತಿರುವುದು ಭಾರತದ ಕಚ್ಚಾ ತೈಲ ಮೂಲಗಳ ವೈವಿಧ್ಯೀಕರಣವನ್ನು ಸೂಚಿಸುತ್ತದೆ.
    4. ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆಯು 50% ಕ್ಕಿಂತ ಕಡಿಮೆಯಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2 ಮತ್ತು 3 ಮಾತ್ರ 
    2. 1 ಮತ್ತು 4 ಮಾತ್ರ 
    3. 1, 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: C

    1. ಭಾರತ ಮತ್ತು ಅಮೆರಿಕದ ನಡುವೆ ಈ ಕೆಳಗಿನ ಯಾವ ಸೇನಾ ಸಮರಾಭ್ಯಾಸಗಳನ್ನು ನಡೆಸಲಾಗುತ್ತದೆ?
    1. ಯುದ್ಧ್ ಅಭ್ಯಾಸ್ 
    2. ಮಲಬಾರ್ 
    3. ಕೋಪ್ ಇಂಡಿಯಾ
    4. ಟೈಗರ್ ಟ್ರಯಂಫ್
    5. ವಜ್ರ ಪ್ರಹಾರ್

    ಮೇಲೆ ನೀಡಲಾದವುಗಳಲ್ಲಿ ಎಷ್ಟು ಸರಿಯಾಗಿಲ್ಲ? 

    1. ಕೇವಲ ಎರಡು 
    2. ಕೇವಲ ಮೂರು 
    3. ಕೇವಲ ನಾಲ್ಕು 
    4. ಎಲ್ಲವೂ ಸರಿಯಾಗಿವೆ. 

    ಉತ್ತರ: D

    1. ಅಮೆರಿಕ ನೀಡುವ ವಿದ್ಯಾರ್ಥಿ ವೀಸಾಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. F-1 ವೀಸಾ ಪ್ರಾಥಮಿಕವಾಗಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಉದ್ದೇಶಿಸಲಾಗಿದೆ ಮತ್ತು ವಿಶ್ವವಿದ್ಯಾಲಯಗಳು, ಕಾಲೇಜುಗಳು, ಪ್ರೌಢಶಾಲೆಗಳು ಹಾಗೂ ಭಾಷಾ ತರಬೇತಿ ಕಾರ್ಯಕ್ರಮಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.
    2. M ವೀಸಾ ಅನ್ನು ವೃತ್ತಿಪರ ಅಥವಾ ಇತರ ಮಾನ್ಯತೆ ಪಡೆದ ಶೈಕ್ಷಣಿಕೇತರ ಸಂಸ್ಥೆಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
    3. M ವೀಸಾ ವಿಭಾಗವು ಭಾಷಾ ತರಬೇತಿ ಕಾರ್ಯಕ್ರಮಗಳಿಗೆ ದಾಖಲಾದ ವಿದ್ಯಾರ್ಥಿಗಳನ್ನು ಸಹ ಒಳಗೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. ಹೈಡ್ರಾಕ್ಸಿಲ್ ಮೆಗಾಮೇಸರ್ (Hydroxyl megamaser) ಪ್ರಾಥಮಿಕವಾಗಿ ಏನೆಂದು ಕರೆಯಲ್ಪಡುತ್ತದೆ?
    2. ಬಾಹ್ಯಾಕಾಶದಲ್ಲಿ ಮೈಕ್ರೋವೇವ್ ಅಥವಾ ರೇಡಿಯೋ ತರಂಗಗಳ ಪ್ರಬಲ ಹೊರಸೂಸುವಿಕೆ. 
    3. ಸೌರವ್ಯೂಹದಲ್ಲಿ ಕಂಡುಬರುವ ಒಂದು ರೀತಿಯ ಕ್ಷುದ್ರಗ್ರಹ. 
    4. ನಕ್ಷತ್ರಪುಂಜ(ಗೆಲಕ್ಸಿ)ಗಳ ಕೇಂದ್ರದಲ್ಲಿರುವ ಕಪ್ಪು ಕುಳಿ. 
    5. ಒಂದು ರೀತಿಯ ಕೃತಕ ಉಪಗ್ರಹ.

    ಉತ್ತರ: A

    1. LGM-30G ಮಿನಿಟ್‌ಮ್ಯಾನ್ III ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಅಮೆರಿಕ ದೇಶವು ನಿರ್ವಹಿಸುತ್ತದೆ.
    2. ಖಂಡಾಂತರ ಅಂತರಗಳಲ್ಲಿ ಪರಮಾಣು ಸಿಡಿತಲೆಗಳನ್ನು ತಲುಪಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    3. ಇದನ್ನು ಪ್ರಾಥಮಿಕವಾಗಿ ವಿಮಾನವಾಹಕ ನೌಕೆಗಳಿಂದ ಉಡಾವಣೆ ಮಾಡಲಾಗುತ್ತದೆ.
    4. ಇದು ಅಮೆರಿಕದ ಆಯಕಟ್ಟಿನ ಪರಮಾಣು ನಿರೋಧಕ ವ್ಯವಸ್ಥೆಯ ಒಂದು ಭಾಗವಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 3 ಮಾತ್ರ 
    2. 1 ಮತ್ತು 3 ಮಾತ್ರ 
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಕ್ವಾಂಟಮ್ ಕಂಪ್ಯೂಟಿಂಗ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಮಾಹಿತಿ ಸಂಸ್ಕರಣೆಗಾಗಿ ಕ್ವಾಂಟಮ್ ಮೆಕ್ಯಾನಿಕ್ಸ್‌ನ ತತ್ವಗಳನ್ನು ಬಳಸುತ್ತದೆ.
    2. ಸಾಂಪ್ರದಾಯಿಕ ಕಂಪ್ಯೂಟರ್‌ಗಳು 0 ಅಥವಾ 1 ಅನ್ನು ಪ್ರತಿನಿಧಿಸುವ ಬಿಟ್‌ಗಳನ್ನು (Bits) ಬಳಸಿಕೊಂಡು ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತವೆ.
    3. ಕ್ವಾಂಟಮ್ ಕಂಪ್ಯೂಟರ್‌ಗಳು ಒಂದೇ ಬಾರಿಗೆ ಬಹು ಸ್ಥಿತಿಗಳಲ್ಲಿ ಅಸ್ತಿತ್ವದಲ್ಲಿರಬಹುದಾದ ಕ್ಯೂಬಿಟ್‌ಗಳನ್ನು (Qubits) ಬಳಸುತ್ತವೆ.
    4. ಕ್ವಾಂಟಮ್ ಕಂಪ್ಯೂಟರ್‌ಗಳು ಸಾಂಪ್ರದಾಯಿಕ ಬೈನರಿ ತರ್ಕವನ್ನು ಕಟ್ಟುನಿಟ್ಟಾಗಿ ಬಳಸಿಕೊಂಡು ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ? 

    1. ಕೇವಲ ಎರಡು 
    2. ಕೇವಲ ಒಂದು 
    3. ಕೇವಲ ಮೂರು 
    4. ಎಲ್ಲಾ ನಾಲ್ಕು

    ಉತ್ತರ: C

    1. ಪ್ರತಿಪಾದನೆ (A): ಅಗತ್ಯ ಸರಕುಗಳ ಕಾಯ್ದೆಯು ಅಗತ್ಯ ವಸ್ತುಗಳ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

    ಕಾರಣ (R): ಈ ಕಾಯ್ದೆಯಡಿ ಸರ್ಕಾರವು ಬೆಲೆ ನಿಯಂತ್ರಣ ಮತ್ತು ದಾಸ್ತಾನು ಮಿತಿಗಳನ್ನು ವಿಧಿಸಬಹುದು.

    ಆಯ್ಕೆಗಳು: 

    1. A ಮತ್ತು R ಎರಡೂ ಸರಿ, ಮತ್ತು R, A ಯ ಸರಿಯಾದ ವಿವರಣೆಯಾಗಿದೆ. 
    2. A ಮತ್ತು R ಎರಡೂ ಸರಿ, ಆದರೆ R, A ಯ ಸರಿಯಾದ ವಿವರಣೆಯಲ್ಲ. 
    3. A ಸರಿ, ಆದರೆ R ತಪ್ಪು. 
    4. A ತಪ್ಪು, ಆದರೆ R ಸರಿ.

    ಉತ್ತರ: A

    1. ಭಾರತದಲ್ಲಿ ದಯಾಮರಣದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕೆಲವು ಷರತ್ತುಗಳ ಅಡಿಯಲ್ಲಿ ನಿಷ್ಕ್ರಿಯ ದಯಾಮರಣವನ್ನು ಕಾನೂನಾತ್ಮಕವಾಗಿ ಅನುಮತಿಸಲಾಗಿದೆ.
    2. ನ್ಯಾಯಾಂಗದ ವ್ಯಾಖ್ಯಾನದ ನಂತರ ಭಾರತದಲ್ಲಿ ಸಕ್ರಿಯ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ.
    3. ಘನತೆಯಿಂದ ಸಾಯುವ ಹಕ್ಕನ್ನು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಭಾಗವೆಂದು ಪರಿಗಣಿಸಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2 ಮತ್ತು 3 ಮಾತ್ರ 
    2. 1 ಮತ್ತು 3 ಮಾತ್ರ 
    3. 1 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. ಡಿಫೆನ್ಸ್ ವಿಷನ್ 2047 ಅಡಿಯಲ್ಲಿ ಆಧುನೀಕರಣ ಕಾರ್ಯತಂತ್ರದ ಭಾಗವಾಗಿರುವ ಅಂಶಗಳು ಯಾವುವು?
    1. ಕೃತಕ ಬುದ್ಧಿಮತ್ತೆ (AI) ಮತ್ತು ಸ್ವಾಯತ್ತ ವ್ಯವಸ್ಥೆಗಳು.
    2. ಸೈಬರ್ ಮತ್ತು ಬಾಹ್ಯಾಕಾಶ ಯುದ್ಧದ ಸಾಮರ್ಥ್ಯಗಳು.
    3. ಕೇವಲ ಮಾನವಶಕ್ತಿ-ಆಧಾರಿತ ಯುದ್ಧದ ಮೇಲಿನ ಪ್ರತ್ಯೇಕ ಅವಲಂಬನೆ.

    ಸರಿಯಾದ ಉತ್ತರವನ್ನು ಆಯ್ಕೆಮಾಡಿ: 

    1. 1 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 2 ಮಾತ್ರ 
    4. 1, 2 ಮತ್ತು 3

    ಉತ್ತರ: C

    1. ಮುಖ್ಯ ಚುನಾವಣಾ ಆಯುಕ್ತರ (CEC) ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಾಬೀತಾದ ದುರ್ನಡತೆ ಅಥವಾ ಅಸಮರ್ಥತೆಯ ಆಧಾರದ ಮೇಲೆ ಮಾತ್ರ CEC ಯನ್ನು ವಜಾಗೊಳಿಸಬಹುದು.
    2. ವಜಾಗೊಳಿಸುವ ಪ್ರಕ್ರಿಯೆಯು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಜಾ ಪ್ರಕ್ರಿಯೆಯನ್ನು ಹೋಲುತ್ತದೆ.
    3. ಸಂವಿಧಾನವು ವಜಾಗೊಳಿಸುವ ಪ್ರಕ್ರಿಯೆಯ ಹಂತ-ಹಂತದ ವಿವರಗಳನ್ನು ಸ್ಪಷ್ಟವಾಗಿ ವಿವರಿಸಿದೆ.
    4. ವಜಾಗೊಳಿಸಲು ಸಂಸತ್ತಿನ ಎರಡೂ ಸದನಗಳಲ್ಲಿ ವಿಶೇಷ ಬಹುಮತದ ಅಗತ್ಯವಿದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ? 

    1. ಕೇವಲ ಎರಡು 
    2. ಕೇವಲ ಮೂರು 
    3. ಎಲ್ಲಾ ನಾಲ್ಕು 
    4. ಯಾವುದೂ ಇಲ್ಲ

    ಉತ್ತರ: B

    1. ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಸೆಬಿ (SEBI) ಯಲ್ಲಿ ಪರ್ಯಾಯ ಹೂಡಿಕೆ ನಿಧಿ (AIF) ಆಗಿ ನೋಂದಾಯಿಸಲಾಗಿದೆ.
    2. ಇದು ಸಂಪೂರ್ಣವಾಗಿ ಭಾರತ ಸರ್ಕಾರದ ಒಡೆತನದಲ್ಲಿದೆ.
    3. ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
    4. ಇದು ಪ್ರಾಥಮಿಕವಾಗಿ ಕೈಗಾರಿಕೆಗಳ ಅಲ್ಪಾವಧಿಯ ದುಡಿಯುವ ಬಂಡವಾಳದ ಅಗತ್ಯಗಳಿಗೆ ಹಣಕಾಸು ಒದಗಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 3 ಮಾತ್ರ 
    2. 1, 2 ಮತ್ತು 3 ಮಾತ್ರ 
    3. 2 ಮತ್ತು 4 ಮಾತ್ರ 
    4. 1, 3 ಮತ್ತು 4 ಮಾತ್ರ

    ಉತ್ತರ: A

    1. ಸಿಪ್ರಿ (SIPRI) ವರದಿಗಳಲ್ಲಿ ಭಾರತದ ಸ್ಥಾನಮಾನದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ.
    2. ಸೇನಾ ಬಲದ ಆಧಾರದ ಮೇಲೆ ದೇಶಗಳಿಗೆ ಶ್ರೇಣಿಯನ್ನು ನೀಡಲು SIPRI ದತ್ತಾಂಶವನ್ನು ಬಳಸಲಾಗುತ್ತದೆ.
    3. ಭಾರತಕ್ಕೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರರನ್ನು SIPRI ಗುರುತಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 2 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. ರಾಷ್ಟ್ರೀಯ ಹೆದ್ದಾರಿಗಳ ಹಸಿರು ಹೊದಿಕೆ (ವ್ಯಾಪ್ತಿ) ಸೂಚ್ಯಂಕದ (NH-GCI) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಇರುವ ಸಸ್ಯವರ್ಗವನ್ನು ಪ್ರಮಾಣೀಕರಿಸುವ ಉಪಗ್ರಹ ಆಧಾರಿತ ಸೂಚ್ಯಂಕವಾಗಿದೆ.
    2. ಹಸಿರು ಹೊದಿಕೆಯನ್ನು ಅಂದಾಜು ಮಾಡಲು ಇದು ಪತ್ರಹರಿತ್ತು ಸೂಕ್ಷ್ಮ ಸಂವೇದಕಗಳನ್ನು ಬಳಸುತ್ತದೆ.
    3. ಇದು ಹೆದ್ದಾರಿಗಳ ರೈಟ್ ಆಫ್ ವೇ (RoW) ವ್ಯಾಪ್ತಿಯೊಳಗಿನ ಸಸ್ಯವರ್ಗವನ್ನು ಅಳೆಯುತ್ತದೆ.
    4. ಇದು ಹಸಿರು ಹೊದಿಕೆಯನ್ನು ಚದರ ಕಿಲೋಮೀಟರ್‌ಗಳಲ್ಲಿ ಸಂಪೂರ್ಣ ವಿಸ್ತೀರ್ಣವಾಗಿ ವ್ಯಕ್ತಪಡಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2, 3 ಮತ್ತು 4 ಮಾತ್ರ 
    2. 1 ಮತ್ತು 4 ಮಾತ್ರ 
    3. 1, 2, 3 ಮತ್ತು 4 ಮಾತ್ರ
    4. 1, 2, ಮತ್ತು 3 ಮಾತ್ರ

    ಉತ್ತರ: D

    1. ಈ ಕೆಳಗಿನವುಗಳನ್ನು ಹೊಂದಿಸಿ:

    ಪಟ್ಟಿ I (ವರ್ಷ)

    ಪಟ್ಟಿ II (ಅಂತರರಾಷ್ಟ್ರೀಯ ವರ್ಷ)

    ಪಟ್ಟಿ III (ಗಮನ/ಉದ್ದೇಶ)

    a. 2021

    1. ಹಣ್ಣುಗಳು ಮತ್ತು ತರಕಾರಿಗಳು

    i. ಆರೋಗ್ಯಕರ ಆಹಾರಗಳು

    b. 2023

    2. ಸಿರಿಧಾನ್ಯಗಳು

    ii. ಹವಾಮಾನ-ಸ್ಥಿತಿಸ್ಥಾಪಕ ಬೆಳೆಗಳು

    c. 2024

    3. ಒಂಟೆ ಜಾತಿಗೆ ಸೇರಿದ ಪ್ರಾಣಿಗಳು

    iii. ಗ್ರಾಮೀಣ ಪಶುಪಾಲನಾ ಜೀವನೋಪಾಯ

    d. 2022

    4. ಗಾಜು

    iv. ಕೈಗಾರಿಕಾ ನಾವೀನ್ಯತೆ

    ಸಂಕೇತಗಳು: 

    1. a-1-i, b-2-ii, c-3-iii, d-4-iv 
    2. a-2-i, b-1-ii, c-3-iv, d-4-iii 
    3. a-1-iii, b-2-ii, c-3-i, d-4-iv 
    4. a-3-i, b-2-ii, c-1-iii, d-4-iv

    ಉತ್ತರ: A

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಾವಿತ್ರಿಬಾಯಿ ಫುಲೆ ಅವರನ್ನು ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪರಿಗಣಿಸಲಾಗಿದೆ.
    2. ಅವರು 1848 ರಲ್ಲಿ ಪುಣೆಯ ಭಿಡೆವಾಡದಲ್ಲಿ ಹೆಣ್ಣುಮಕ್ಕಳಿಗಾಗಿ ದೇಶದ ಮೊದಲ ಶಾಲೆಯನ್ನು ಸ್ಥಾಪಿಸಿದರು.
    3. ಅವರು ಪ್ರತ್ಯೇಕವಾಗಿ ಮೇಲ್ಜಾತಿ ಮಹಿಳೆಯರ ಶಿಕ್ಷಣಕ್ಕಾಗಿ ಮಾತ್ರ ಶ್ರಮಿಸಿದರು.
    4. ಅವರು ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಸತ್ಯಶೋಧಕ ಸಮಾಜದೊಂದಿಗೆ ಕೈಜೋಡಿಸಿದರು.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ? 

    1. ಕೇವಲ ಒಂದು 
    2. ಕೇವಲ ಎರಡು 
    3. ಕೇವಲ ಮೂರು 
    4. ಎಲ್ಲಾ ನಾಲ್ಕು

    ಉತ್ತರ: C

    1. ಈ ಕೆಳಗಿನ ಕಲಾ ಪ್ರಕಾರ ಮತ್ತು ಪ್ರದೇಶಗಳ ಜೋಡಿಗಳನ್ನು ಪರಿಗಣಿಸಿ:

    ಕಲಾ ಪ್ರಕಾರ

    ಪ್ರದೇಶ

    1. ಕುರುಂಬ ಚಿತ್ರಕಲೆ

    ನೀಲಗಿರಿ

    2. ವಾರ್ಲಿ ಚಿತ್ರಕಲೆ

    ಮಹಾರಾಷ್ಟ್ರ

    3. ಗೋಂಡ್ ಚಿತ್ರಕಲೆ

    ರಾಜಸ್ಥಾನ

    4. ಮಧುಬನಿ ಚಿತ್ರಕಲೆ

    ಬಿಹಾರ

    ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಸರಿಯಾಗಿ ಹೊಂದಿಕೆಯಾಗಿವೆ? 

    1. ಕೇವಲ ಒಂದು 
    2. ಕೇವಲ ಎರಡು 
    3. ಕೇವಲ ಮೂರು 
    4. ಎಲ್ಲಾ ನಾಲ್ಕು

    ಉತ್ತರ: C

    1. ನೀತಿ ಆಯೋಗ ಬಿಡುಗಡೆ ಮಾಡಿದ “ಹಣಕಾಸು ಆರೋಗ್ಯ ಸೂಚ್ಯಂಕ” (FHI) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ರಾಜ್ಯಗಳ ನಡುವೆ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
    2. ಇದು ಹಣಕಾಸಿನ ಶಿಸ್ತಿಗೆ ತುಲನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ.
    3. ಇದು ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ಬರುವ ಸಾಂವಿಧಾನಿಕ ಆದೇಶವಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 2 ಮಾತ್ರ 
    2. 2 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

    1. ಕಪ್ಪು ಮಳೆಯು (Black rain) ಆಮ್ಲ ಮಳೆಗಿಂತ (Acid rain) ಭಿನ್ನವಾಗಿದೆ ಏಕೆಂದರೆ:
    2. ಆಮ್ಲ ಮಳೆಯು ಮಸಿ ಕಣಗಳನ್ನು ಹೊಂದಿರುತ್ತದೆ, ಆದರೆ ಕಪ್ಪು ಮಳೆಯು ರಾಸಾಯನಿಕವಾಗಿ ಶುದ್ಧವಾಗಿರುತ್ತದೆ. 
    3. ಕಪ್ಪು ಮಳೆಯು ಕೇವಲ ಸಾಗರಗಳಲ್ಲಿ ಸಂಭವಿಸುತ್ತದೆ, ಆದರೆ ಆಮ್ಲ ಮಳೆಯು ಭೂಮಿಯ ಮೇಲೆ ಸಂಭವಿಸುತ್ತದೆ. 
    4. ಕಪ್ಪು ಮಳೆಯು ಕಣ್ಣಿಗೆ ಕಾಣುವ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ, ಆದರೆ ಆಮ್ಲ ಮಳೆಯು ಮುಖ್ಯವಾಗಿ ರಾಸಾಯನಿಕವಾಗಿ ಆಮ್ಲೀಯವಾಗಿರುತ್ತದೆ. 
    5. ಇವೆರಡೂ ಒಂದೇ ರೀತಿಯ ವಿದ್ಯಮಾನಗಳಾಗಿವೆ.

    ಉತ್ತರ: C

    1. ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಫಲಾನುಭವಿಗಳ ಅಡಿಯಲ್ಲಿ ಈ ಕೆಳಗಿನ ಯಾವ ಗುಂಪುಗಳನ್ನು ಸೇರಿಸಲಾಗಿದೆ?
    1. ಸ್ವ-ಸಹಾಯ ಸಂಘಗಳು (SHGs)
    2. ಜಂಟಿ ಹೊಣೆಗಾರಿಕೆ ಗುಂಪುಗಳು (JLGs)
    3. ರೈತ ಉತ್ಪಾದಕ ಸಂಸ್ಥೆಗಳು (FPOs)

    ಸರಿಯಾದ ಉತ್ತರವನ್ನು ಆಯ್ಕೆಮಾಡಿ: 

    1. 2 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

    1. ಈ ಕೆಳಗಿನ ಪಠ್ಯವನ್ನು ಪರಿಗಣಿಸಿ: “ಒಂದು ಪ್ರಮುಖ ರಾಷ್ಟ್ರೀಯವಾದಿ ಚಳವಳಿಯು ಸಾಬರಮತಿ ಆಶ್ರಮದಿಂದ ಪಾದಯಾತ್ರೆಯ ಮೂಲಕ ಪ್ರಾರಂಭವಾಯಿತು ಮತ್ತು ಅತ್ಯಗತ್ಯ ಗೃಹೋಪಯೋಗಿ ವಸ್ತುವಿಗೆ ಸಂಬಂಧಿಸಿದ ವಸಾಹತುಶಾಹಿ ಕಾನೂನನ್ನು ಮುರಿಯುವ ಕೃತ್ಯದೊಂದಿಗೆ ಕೊನೆಗೊಂಡಿತು. ಅಹಿಂಸೆ ಮತ್ತು ಶಾಸನಭಂಗಕ್ಕೆ ಒತ್ತು ನೀಡಿದ ಈ ಚಳವಳಿಯು, ನಾಯಕನ ಬಂಧನದ ನಂತರ ಉಪ್ಪು ಉತ್ಪಾದನಾ ಕೇಂದ್ರಗಳಲ್ಲಿನ ಪ್ರದರ್ಶನಗಳನ್ನು ಒಳಗೊಂಡಂತೆ ದೇಶಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸಿತು.”

    ಇದು ಈ ಕೆಳಗಿನ ಯಾವ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸುತ್ತದೆ? 

    1. ಸ್ವದೇಶಿ ಚಳವಳಿ 
    2. ದಂಡಿ ಯಾತ್ರೆ 
    3. ಹೋಮ್ ರೂಲ್ ಚಳವಳಿ 
    4. ಶಾಸನಭಂಗ/ಕಾನೂನುಭಂಗ ಚಳವಳಿ

    ಉತ್ತರ: B

    1. ಈ ಕೆಳಗಿನ ವಿವರಣೆಯನ್ನು ಪರಿಗಣಿಸಿ: “ಒಂದು ಜಲಚರ ಪರಭಕ್ಷಕವು ತನ್ನ ಗುಂಪಿನಲ್ಲಿ ವ್ಯಾಪಕ ಶ್ರೇಣಿಯ ಲವಣಾಂಶದ ಮಟ್ಟವನ್ನು ಸಹಿಸಿಕೊಳ್ಳುವ ಅಪರೂಪದ ಸಾಮರ್ಥ್ಯವನ್ನು ಹೊಂದಿದೆ. ಆಸ್ಮೋಟಿಕ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಶಾರೀರಿಕ ರೂಪಾಂತರಗಳಿಂದ ಇದು ಸಾಧ್ಯವಾಗಿದೆ. ಇದು ಕರಾವಳಿಯ ಸಮುದ್ರದ ನೀರು ಮಾತ್ರವಲ್ಲದೆ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ಅನೇಕ ಖಂಡಗಳಾದ್ಯಂತ ನದಿಯ ವ್ಯವಸ್ಥೆಗಳಲ್ಲಿ ಆಳವಾಗಿ ಕಂಡುಬರುತ್ತದೆ. ಇದರ ಸಂರಕ್ಷಣಾ ಸ್ಥಿತಿಯನ್ನು ‘ದುರ್ಬಲ (Vu)’ ಎಂದು ವರ್ಗೀಕರಿಸಲಾಗಿದೆ.”

    ಈ ಕೆಳಗಿನ ಯಾವ ಪ್ರಭೇದವು ಮೇಲಿನ ವಿವರಣೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ?

    1. ಟೈಗರ್ ಶಾರ್ಕ್ 
    2. ಬ್ಲೂ ಶಾರ್ಕ್ 
    3. ಬುಲ್ ಶಾರ್ಕ್  
    4. ಬಾಸ್ಕಿಂಗ್ ಶಾರ್ಕ್

    ಉತ್ತರ: C

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಜೋಹಾ ಅಕ್ಕಿ ಅಸ್ಸಾಂನ ಸ್ಥಳೀಯ ಸುವಾಸನೆಯ ಅಕ್ಕಿ ತಳಿಯಾಗಿದೆ.
    2. ಇದು 2017 ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆಯನ್ನು ಪಡೆದುಕೊಂಡಿತು.
    3. ಇದು ತನ್ನ ಗುಣಮಟ್ಟಕ್ಕಿಂತ ಹೆಚ್ಚಾಗಿ, ಅಧಿಕ ಇಳುವರಿಗೆ ಪ್ರಾಥಮಿಕವಾಗಿ ಹೆಸರುವಾಸಿಯಾಗಿದೆ.
    4. ಇದು ಪ್ರೀಮಿಯಂ ಜಾಗತಿಕ ಮಾರುಕಟ್ಟೆಗಳಲ್ಲಿ ಮನ್ನಣೆ ಗಳಿಸುತ್ತಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಶ್ರೀಲಂಕಾದಲ್ಲಿ ಭಾರತೀಯ ಸೇನೆಯು ಈ ಕೆಳಗಿನ ಯಾವ ಕಾರ್ಯಾಚರಣೆಯ ಅಡಿಯಲ್ಲಿ ಪ್ರಮುಖ ಸೇತುವೆ ಯೋಜನೆಯನ್ನು ಪ್ರಾರಂಭಿಸಿದೆ?
    2. ಆಪರೇಷನ್ ಮೈತ್ರಿ 
    3. ಆಪರೇಷನ್ ಸಾಗರ್ ಬಂಧು 
    4. ಆಪರೇಷನ್ ಸಮುದ್ರ ಸೇತು 
    5. ಆಪರೇಷನ್ ರೇನ್ಬೋ

    ಉತ್ತರ: B

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ನಾವಿಕ್ (NavIC) ಅನ್ನು ಮೊದಲು IRNSS (ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ) ಎಂದು ಕರೆಯಲಾಗುತ್ತಿತ್ತು.
    2. ಈ ವ್ಯವಸ್ಥೆಯು ವಿದೇಶಿ ನ್ಯಾವಿಗೇಷನ್ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಭಾರತಕ್ಕೆ ಈ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಖಚಿತಪಡಿಸುತ್ತದೆ.
    3. ಎಲ್ಲಾ NavIC ಉಪಗ್ರಹಗಳನ್ನು ಕೇವಲ ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದೆ.
    4. ಇದು ನಾಗರಿಕ ಮತ್ತು ಎನ್‌ಕ್ರಿಪ್ಟ್ ಮಾಡಿದ ಎರಡೂ ಸೇವೆಗಳನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಜಯಂತಿ ಕುಮಾರೇಶ್ ಅವರನ್ನು 100 ನೇ ಸಮ್ಮೇಳನದಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಘೋಷಿಸಲಾಗಿದೆ.
    2. ನರೇಂದ್ರ ಜಿ ಅವರಿಗೆ ನೃತ್ಯ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    3. ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಸಂಗೀತ ಮತ್ತು ನೃತ್ಯ ಎರಡರಲ್ಲೂ ತೋರಿದ ಶ್ರೇಷ್ಠತೆಗಾಗಿ ನೀಡಲಾಗುತ್ತದೆ.
    4. ಸಂಗೀತ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಈ ಎರಡೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2, 3 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 1, 2 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: C

    1. ಈ ಕೆಳಗಿನ ವಿವರಣೆಯನ್ನು ಪರಿಗಣಿಸಿ: “ಅಪರೂಪದ ಮತ್ತು ದೃಷ್ಟಿಗೆ ಆಕರ್ಷಕವಾಗಿರುವ, ಸಾಮಾನ್ಯವಾಗಿ “ಪಕ್ಷಿಗಳ ರಾಜ” ಎಂದು ಕರೆಯಲ್ಪಡುವ ಈ ಫೆಸೆಂಟ್ ಪ್ರಭೇದವು 2,400 ರಿಂದ 3,600 ಮೀಟರ್ ಎತ್ತರದ ಸಮಶೀತೋಷ್ಣ ಮತ್ತು ಉಪ-ಆಲ್ಪೈನ್ ಕಾಡುಗಳಲ್ಲಿ ವಾಸಿಸುತ್ತದೆ. ಚಳಿಗಾಲದಲ್ಲಿ ಇದು ಸುಮಾರು 2,000 ಮೀಟರ್‌ಗೆ ಇಳಿಯುತ್ತದೆ. ಇದು ಪಾಕಿಸ್ತಾನದ ಸ್ವಾತ್ ಕಣಿವೆಯಿಂದ ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಾದ್ಯಂತ ಉತ್ತರಾಖಂಡದವರೆಗೆ ಹರಡಿದೆ. ಈ ಪ್ರಭೇದವು ಸರ್ವಭಕ್ಷಕ ಆಗಿದ್ದು, ಹಣ್ಣುಗಳು, ಬೀಜಗಳು, ಮೊಗ್ಗುಗಳು ಮತ್ತು ಕೀಟಗಳನ್ನು ತಿನ್ನುತ್ತದೆ. ಅರಣ್ಯನಾಶ, ಹವಾಮಾನ ಬದಲಾವಣೆ ಮತ್ತು ಮಾನವನ ಹಸ್ತಕ್ಷೇಪದಿಂದಾಗಿ ಇದು ಅಪಾಯವನ್ನು ಎದುರಿಸುತ್ತಿದೆ. ಇದು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದ್ದು, IUCN ಕೆಂಪು ಪಟ್ಟಿಯಲ್ಲಿ ‘ದುರ್ಬಲ’ (Vu) ಎಂದು ಪಟ್ಟಿಮಾಡಲಾಗಿದೆ.”

    ಈ ಕೆಳಗಿನ ಯಾವ ಪ್ರಭೇದವನ್ನು ವಿವರಿಸಲಾಗುತ್ತಿದೆ? 

    1. ಹಿಮಾಲಯನ್ ಮೊನಲ್ 
    2. ಪಶ್ಚಿಮದ (ವೆಸ್ಟರ್ನ್) ಟ್ರಾಗೋಪಾನ್ 
    3. ಚೀರ್ ಫೆಸೆಂಟ್ 
    4. ಸಟೈರ್ ಟ್ರಾಗೋಪಾನ್

    ಉತ್ತರ: B

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಆಯುಷ್ಮಾನ್ ಭಾರತ್ ಟಿಜಿ ಪ್ಲಸ್ ಅಡಿಯಲ್ಲಿ ಈ ಯೋಜನೆಯು ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.
    2. ಇದು ತೃತೀಯಲಿಂಗಿಗಳು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಕೇಂದ್ರೀಕರಿಸುತ್ತದೆ.
    3. ಇದು ವಸತಿ ಬೆಂಬಲಕ್ಕಾಗಿ ಯಾವುದೇ ನಿಬಂಧನೆಯನ್ನು ಹೊಂದಿಲ್ಲ.
    4. ಇದು ಜೀವನೋಪಾಯ ಮತ್ತು ಉದ್ಯಮ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಖಾರ್ಗ್ ದ್ವೀಪವು ಯಾವ ಪ್ರದೇಶದಲ್ಲಿದೆ?
    2. ಅರಬ್ಬಿ ಸಮುದ್ರ 
    3. ಬಂಗಾಳ ಕೊಲ್ಲಿ 
    4. ಪರ್ಷಿಯನ್ ಕೊಲ್ಲಿ 
    5. ಮೆಡಿಟರೇನಿಯನ್ ಸಮುದ್ರ

    ಉತ್ತರ: C

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸ್ವಾಮಿಹ್ ನಿಧಿ (SWAMIH Fund) ಕೈಗೆಟುಕುವ ಮತ್ತು ಮಧ್ಯಮ-ಆದಾಯದ ವಸತಿ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ.
    2. ಹಣದ ಕೊರತೆಯಿಂದ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.
    3. ಇದು ನೇರವಾಗಿ ಹೊಸ ಗ್ರೀನ್‌ಫೀಲ್ಡ್ ಐಷಾರಾಮಿ ವಸತಿ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ.
    4. ಇದನ್ನು ಹಣಕಾಸು ಸಚಿವಾಲಯ ಪ್ರಾಯೋಜಿಸಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2 ಮತ್ತು 3 ಮಾತ್ರ 
    2. 1, 2 ಮತ್ತು 4 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: B

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಮೇ 2025 ರಲ್ಲಿ ವಿಶ್ವ ಆರೋಗ್ಯ ಸಭೆಯು ಜಾಗತಿಕ ಸಾಂಕ್ರಾಮಿಕ ಒಪ್ಪಂದವನ್ನು ಅಂಗೀಕರಿಸಿತು.
    2. ಸಾಂಕ್ರಾಮಿಕ ರೋಗಗಳಿಗೆ ಸನ್ನದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಕಾನೂನಾತ್ಮಕವಾಗಿ ಬದ್ಧವಾಗಿರುವ ಅಂತರರಾಷ್ಟ್ರೀಯ ಚೌಕಟ್ಟನ್ನು ರಚಿಸುವುದು ಇದರ ಗುರಿಯಾಗಿದೆ.
    3. ಇದು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳನ್ನು (IHR) ಸಂಪೂರ್ಣವಾಗಿ ಬದಲಾಯಿಸುತ್ತದೆ.
    4. ಇದು ಸಾಂಕ್ರಾಮಿಕ ನಿರ್ವಹಣೆಯಲ್ಲಿನ ಜಾಗತಿಕ ಅಸಮಾನತೆಗಳನ್ನು ಪರಿಹರಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 2, 3 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 1, 2, 3 ಮತ್ತು 4 ಮಾತ್ರ 
    4. 1, 2 ಮತ್ತು 4 ಮಾತ್ರ

    ಉತ್ತರ: D

    1. ಜ್ಞಾನ್ ಭಾರತಂ ಅಭಿಯಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತದಾದ್ಯಂತ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಸಂರಕ್ಷಿಸುವ ಗುರಿಯನ್ನು ಇದು ಹೊಂದಿದೆ.
    2. ಇದು ಕೇವಲ ಸರ್ಕಾರಿ ಸಂಸ್ಥೆಗಳಲ್ಲಿರುವ ಹಸ್ತಪ್ರತಿಗಳ ಮೇಲೆ ಮಾತ್ರ ಗಮನಹರಿಸುತ್ತದೆ.
    3. ಇದು ಹಸ್ತಪ್ರತಿಗಳ ದಾಖಲಾತಿ ಮತ್ತು ಭೌತಿಕ ಸಂರಕ್ಷಣೆಯನ್ನು ಒಳಗೊಂಡಿದೆ.
    4. ಇದು ಹಿಂದಿನ ಹಸ್ತಪ್ರತಿ ಸಂರಕ್ಷಣಾ ಪ್ರಯತ್ನಗಳಿಗೆ ಸಂಬಂಧಿಸದ ಸಂಪೂರ್ಣ ಹೊಸ ಉಪಕ್ರಮವಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ? 

    1. ಕೇವಲ ಒಂದು 
    2. ಕೇವಲ ಮೂರು 
    3. ಕೇವಲ ಎರಡು 
    4. ಎಲ್ಲವೂ ಸರಿಯಾಗಿವೆ

    ಉತ್ತರ: C

    1. ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2003 ರಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಯಿತು.
    2. ಭಾರತದ ಎಲ್ಲಾ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
    3. ದೇಶದಾದ್ಯಂತ ಇರುವ ಹಸ್ತಪ್ರತಿ ಪರಂಪರೆಯನ್ನು ಪತ್ತೆಹಚ್ಚುವುದು ಮತ್ತು ದಾಖಲಿಸುವುದು ಇದರ ಉದ್ದೇಶವಾಗಿದೆ.
    4. ಇದು ಕೇವಲ ಸಂಸ್ಕೃತದಲ್ಲಿ ಬರೆಯಲಾದ ಹಸ್ತಪ್ರತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1 ಮತ್ತು 3 ಮಾತ್ರ 
    2. 1, 2 ಮತ್ತು 4 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 3 ಮತ್ತು 4 ಮಾತ್ರ

    ಉತ್ತರ: A

    1. ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕೇವಲ ಅರಣ್ಯನಾಶದ ದರವನ್ನು ಕಡಿಮೆ ಮಾಡುವುದರ ಬದಲು, ಅಸ್ತಿತ್ವದಲ್ಲಿರುವ ಅರಣ್ಯ ಪ್ರದೇಶವನ್ನು ಸಂರಕ್ಷಿಸುವುದಕ್ಕಾಗಿ ಇದು ದೇಶಗಳನ್ನು ಪ್ರೋತ್ಸಾಹಿಸುತ್ತದೆ.
    2. ಇದನ್ನು ಹಣಕಾಸಿನ ಲಾಭದ ನಿರೀಕ್ಷೆಗಳಿಲ್ಲದೆ, ಅನುದಾನ ಆಧಾರಿತ ಕಾರ್ಯವಿಧಾನವಾಗಿ ರಚಿಸಲಾಗಿದೆ.
    3. ಇದನ್ನು ಬ್ರೆಜಿಲ್ ಪರಿಚಯಿಸಿದ್ದು, ಸಂರಕ್ಷಣಾ ಫಲಿತಾಂಶಗಳನ್ನು ದೀರ್ಘಕಾಲೀನ ಆರ್ಥಿಕ ಸುಸ್ಥಿರತೆಯೊಂದಿಗೆ ಜೋಡಿಸುವ ಗುರಿಯನ್ನು ಹೊಂದಿದೆ.
    4. ಇದು ಈಗಾಗಲೇ $5.5 ಬಿಲಿಯನ್‌ಗಿಂತಲೂ ಹೆಚ್ಚು ಆರಂಭಿಕ ಬದ್ಧತೆಗಳನ್ನು ಕ್ರೋಢೀಕರಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

    1. 1, 3 ಮತ್ತು 4 ಮಾತ್ರ 
    2. 1 ಮತ್ತು 2 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

    1. ಈ ಕೆಳಗಿನ ಕಲಾ ಪ್ರಕಾರಗಳನ್ನು ಅವುಗಳ ರಾಜ್ಯಗಳೊಂದಿಗೆ ಹೊಂದಿಸಿ:

    ಪಟ್ಟಿ I (ಕಲಾ ಪ್ರಕಾರ)

    ಪಟ್ಟಿ II (ರಾಜ್ಯ)

    a. ವಾರ್ಲಿ ಚಿತ್ರಕಲೆ

    1. ಮಧ್ಯಪ್ರದೇಶ

    b. ಗೋಂಡ್ ಕಲೆ

    2. ಮಹಾರಾಷ್ಟ್ರ

    c. ಭಿಲ್ ಚಿತ್ರಕಲೆ

    3. ಅಸ್ಸಾಂ / ಈಶಾನ್ಯ ಭಾರತ

    d. ರಾಭಾ ಮತ್ತು ತಮಾಂಗ್ ಮುಖವಾಡಗಳು

    4. ರಾಜಸ್ಥಾನ

    ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ: 

    1. a-3, b-1, c-2, d-4 
    2. a-1, b-2, c-4, d-3 
    3. a-2, b-3, c-1, d-4 
    4. a-2, b-1, c-4, d-3

    ಉತ್ತರ: D

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಎನ್‌ಎಮ್‌ಡಿಸಿ (NMDC) ಲಿಮಿಟೆಡ್ ಒಂದೇ ಹಣಕಾಸು ವರ್ಷದಲ್ಲಿ 50 ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದನೆಯನ್ನು ಸಾಧಿಸಿದ ಭಾರತದ ಮೊದಲ ಗಣಿಗಾರಿಕಾ ಕಂಪನಿಯಾಗಿದೆ.
    2. ಮ್ಯಾಗ್ನೆಟೈಟ್ 70% ಕ್ಕಿಂತ ಹೆಚ್ಚು ಕಬ್ಬಿಣವನ್ನು ಹೊಂದಿದ್ದು, ಇದನ್ನು ಅತ್ಯುತ್ತಮ ಗುಣಮಟ್ಟದ ಅದಿರು ಎಂದು ಪರಿಗಣಿಸಲಾಗಿದೆ.
    3. ಹೆಮಟೈಟ್ ಪ್ರಮುಖ ಕೈಗಾರಿಕಾ ಕಬ್ಬಿಣದ ಅದಿರು ಆಗಿದ್ದು, ಇದು ಸಾಮಾನ್ಯವಾಗಿ 40-60% ಕಬ್ಬಿಣವನ್ನು ಹೊಂದಿರುತ್ತದೆ.
    4. ಸಿಡೆರೈಟ್ ಒಂದು ಕಾರ್ಬೊನೇಟ್ ಅದಿರು ಆಗಿದ್ದು, 40% ಕ್ಕಿಂತ ಕಡಿಮೆ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. “ಗೈನಾಂಡ್ರೊಮಾರ್ಫಿ” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
    2. ಒಂದೇ ಜೀವಿಯಲ್ಲಿ ಗಂಡು ಮತ್ತು ಹೆಣ್ಣು ಎರಡೂ ಲಕ್ಷಣಗಳಿರುವುದನ್ನು ಇದು ಸೂಚಿಸುತ್ತದೆ ಮತ್ತು ಇದು ಹೆಚ್ಚಾಗಿ ಕೀಟಗಳು ಹಾಗೂ ಪಕ್ಷಿಗಳಲ್ಲಿ ಕಂಡುಬರುತ್ತದೆ. 
    3. ಜೀವಿತಾವಧಿಯಲ್ಲಿ ಲಿಂಗವನ್ನು ಬದಲಾಯಿಸುವ ಜೀವಿಯ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ ಮತ್ತು ಇದು ಹೆಚ್ಚಾಗಿ ಸರೀಸೃಪಗಳಲ್ಲಿ ಮಾತ್ರ ಕಂಡುಬರುತ್ತದೆ. 
    4. ಕೇವಲ ಪುರುಷ ಸಂತಾನೋತ್ಪತ್ತಿ ಅಂಗಗಳ ಉಪಸ್ಥಿತಿಯನ್ನು ಇದು ಸೂಚಿಸುತ್ತದೆ ಮತ್ತು ಇದು ಹೆಚ್ಚಾಗಿ ಸಸ್ತನಿಗಳಲ್ಲಿ ಕಂಡುಬರುತ್ತದೆ. 
    5. ಲೈಂಗಿಕ ಲಕ್ಷಣಗಳ ಅನುಪಸ್ಥಿತಿಯನ್ನು ಇದು ಸೂಚಿಸುತ್ತದೆ ಮತ್ತು ಇದು ಹೆಚ್ಚಾಗಿ ಉಭಯಚರಗಳಲ್ಲಿ ಮಾತ್ರ ಕಂಡುಬರುತ್ತದೆ.

    ಉತ್ತರ: A

    1. ನಗೋಯಾ ಶಿಷ್ಟಾಚಾರದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2010 ರಲ್ಲಿ ಜಪಾನ್‌ನ ನಗೋಯಾದಲ್ಲಿ ಅಂಗೀಕರಿಸಲಾಯಿತು ಮತ್ತು 2012 ರಲ್ಲಿ ಜಾರಿಗೆ ಬಂದಿತು.
    2. ಆನುವಂಶಿಕ ಸಂಪನ್ಮೂಲಗಳಿಂದ ಉಂಟಾಗುವ ಪ್ರಯೋಜನಗಳ ನ್ಯಾಯಯುತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
    3. ಇದು ಜೈವಿಕ ವೈವಿಧ್ಯತಾ ಒಪ್ಪಂದಕ್ಕೆ (CBD) ಪೂರಕವಾದ ಒಪ್ಪಂದವಾಗಿದೆ.
    4. ಭಾರತವು 2012 ರಲ್ಲಿ ಈ ಶಿಷ್ಟಾಚಾರವನ್ನು ಅಂಗೀಕರಿಸಿತು ಮತ್ತು ಇದರ ನಿಬಂಧನೆಗಳು ಜೈವಿಕ ವೈವಿಧ್ಯತಾ ಕಾಯ್ದೆ, 2002 ರೊಂದಿಗೆ ಹೊಂದಿಕೊಂಡಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸ್ವಯಂ-ನಾಮನಿರ್ದೇಶನ ಸೇರಿದಂತೆ, ಭಾರತದ ಯಾವುದೇ ನಾಗರಿಕನು ನಾಮನಿರ್ದೇಶನ ಮಾಡಬಹುದು.
    2. ಗೃಹ ಸಚಿವಾಲಯವು ನಿರ್ವಹಿಸುವ ಆನ್‌ಲೈನ್ ಪೋರ್ಟಲ್ ಮೂಲಕ ನಾಮನಿರ್ದೇಶನಗಳನ್ನು ಸಲ್ಲಿಸಲಾಗುತ್ತದೆ.
    3. ಕೇವಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಅಭ್ಯರ್ಥಿಗಳನ್ನು ಶಿಫಾರಸು ಮಾಡಬಹುದು.
    4. ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದಂದು ಘೋಷಿಸಲಾಗುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಗಜಪತಿ ರಾಜವಂಶಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕಪಿಲೇಂದ್ರ ದೇವನು ಗಜಪತಿ ರಾಜವಂಶದ ಸ್ಥಾಪಕನಾಗಿದ್ದನು.
    2. ಪುರುಷೋತ್ತಮ ದೇವನ ಆಳ್ವಿಕೆಯಲ್ಲಿ ಸಾಮ್ರಾಜ್ಯವು ಗರಿಷ್ಠ ಪ್ರಾದೇಶಿಕ ವಿಸ್ತರಣೆಯನ್ನು ತಲುಪಿತು.
    3. ಪ್ರತಾಪರುದ್ರ ದೇವನು ವಿಜಯನಗರದ ಕೃಷ್ಣದೇವರಾಯನ ಸಮಕಾಲೀನನಾಗಿದ್ದನು.
    4. ಈ ರಾಜವಂಶವು ಬಹಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದೊಂದಿಗೆ ಆಗಾಗ್ಗೆ ಘರ್ಷಣೆಗಳನ್ನು ಹೊಂದಿತ್ತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 3 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಪ್ರಾಥಮಿಕವಾಗಿ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿರುವ ಅಗ್ನಿಶಿಲೆಗಳಿಂದ ಕೂಡಿದೆ.
    2. ಇದು ಪ್ರಸ್ತುತ ಕಾಲದ ಸಕ್ರಿಯ ಅಗ್ನಿಪರ್ವತ ಆರ್ಕ್ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ.
    3. ಇದು ಯುರೇಷಿಯನ್ ಫಲಕದ  ಕೆಳಗೆ ಭಾರತೀಯ ಫಲಕದ ಕುಸಿಯುವಿಕೆಗೆ ಸಂಬಂಧಿಸಿದೆ.
    4. ನಿಯೋ-ಟೆಥಿಸ್ ಸಾಗರವು ಮುಚ್ಚಲ್ಪಟ್ಟ ಕಾರಣ ಇದು ರೂಪುಗೊಂಡಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 3 ಮತ್ತು 4
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 3 ಮತ್ತು 4 ಮಾತ್ರ

    ಉತ್ತರ: D

    1. ಭಾರತದ ಲಸಿಕೆ ಅಭಿಯಾನದಲ್ಲಿನ ಡಿಜಿಟಲ್ ಉಪಕ್ರಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇ-ವಿನ್ (eVIN) ಲಸಿಕೆ ದಾಸ್ತಾನು ಮತ್ತು ಶೇಖರಣಾ ತಾಪಮಾನದ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ.
    2. ಯು-ವಿನ್ (U-WIN) ಅನ್ನು ದಿನನಿತ್ಯದ ರೋಗನಿರೋಧಕ ಮೇಲ್ವಿಚಾರಣೆಗಾಗಿ ಡಿಜಿಟಲ್ ದಾಖಲಾತಿ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾಗಿದೆ.
    3. ಕೋ-ವಿನ್ (CoWIN) ಅನ್ನು ಲಸಿಕೆ ಖರೀದಿ ಮತ್ತು ಪೂರೈಕೆ ಸರಪಳಿ ನಿರ್ವಹಣೆಗಾಗಿ ಮಾತ್ರ ಪ್ರತ್ಯೇಕವಾಗಿ ಬಳಸಲಾಗುತ್ತಿತ್ತು.
    4. ಕೋವಿನ್ 220 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್‌ಗಳ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಎಲ್ಲಾ ನಾಲ್ಕು

    ಉತ್ತರ: C

    1. ನ್ಯಾಟೋ (NATO) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 1949 ರಲ್ಲಿ ವಾಷಿಂಗ್ಟನ್ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು.
    2. ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದಿಂದ ಎದುರಾಗಿದ್ದ ಬೆದರಿಕೆಯನ್ನು ಎದುರಿಸಲು ಇದನ್ನು ಪ್ರಾಥಮಿಕವಾಗಿ ರಚಿಸಲಾಯಿತು.
    3. ಇದು ಉತ್ತರ ಅಟ್ಲಾಂಟಿಕ್ ದೇಶಗಳ ಆರ್ಥಿಕ ಮತ್ತು ವಿತ್ತೀಯ ಒಕ್ಕೂಟವಾಗಿದೆ.
    4. ಇದರ ಪ್ರಧಾನ ಕಛೇರಿಯು ವಾಷಿಂಗ್ಟನ್, ಡಿ.ಸಿ. ಯಲ್ಲಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 2 ಮಾತ್ರ
    2. 1, 2 ಮತ್ತು 4 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಪಿಎಂ-ಪೋಷಣ್ (PM-POSHAN) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಮೊದಲು ಮಧ್ಯಾಹ್ನದ ಊಟ ಯೋಜನೆ ಎಂದು ಕರೆಯಲಾಗುತ್ತಿತ್ತು.
    2. ಇದು ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುವ ಕೇಂದ್ರ ವಲಯದ ಯೋಜನೆಯಾಗಿದೆ.
    3. ಇದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬಿಸಿ ಬೇಯಿಸಿದ ಊಟವನ್ನು ಒದಗಿಸುತ್ತದೆ.
    4. ಇದನ್ನು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಜಾರಿಗೊಳಿಸಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2 ಮತ್ತು 3 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಭವ್ಯ (BHAVYA) ಯೋಜನೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತದಾದ್ಯಂತ 100 ಭವಿಷ್ಯಕ್ಕೆ ಸಿದ್ದವಾದ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
    2. ಇದನ್ನು ಪಿಎಂ ಗತಿಶಕ್ತಿ ಕಾರ್ಯಕ್ರಮದೊಂದಿಗೆ ಸಂಯೋಜಿಸಲಾಗಿದೆ.
    3. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮವು ಇದರ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
    4. ಯೋಜನೆಯ ಅವಧಿಯನ್ನು 2026-27 ರಿಂದ ಪ್ರಾರಂಭಿಸಿ ಆರು ವರ್ಷಗಳವರೆಗೆ ಪ್ರಸ್ತಾಪಿಸಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಎರಡು
    2. ಕೇವಲ ಮೂರು
    3. ಎಲ್ಲಾ ನಾಲ್ಕು
    4. ಎಲ್ಲಾ ನಾಲ್ಕು ಸರಿಯಾಗಿವೆ. 

    ಉತ್ತರ: D

    1. ಅರಾವಳಿ ಬೆಟ್ಟಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಮೌಂಟ್ ಅಬುವಿನಲ್ಲಿರುವ ಗುರು ಶಿಖರ್ ಅತಿ ಎತ್ತರದ ಶಿಖರವಾಗಿದೆ.
    2. ಈ ಪರ್ವತ ಶ್ರೇಣಿಯು ಪಶ್ಚಿಮ ಭಾರತದಲ್ಲಿನ ನದಿ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಜಲ ವಿಭಾಜಕವಾಗಿ ಕಾರ್ಯನಿರ್ವಹಿಸುತ್ತದೆ.
    3. ಲೂನಿ ಮತ್ತು ಸಾಬರಮತಿಯಂತಹ ನದಿಗಳು ಈ ಪರ್ವತ ಶ್ರೇಣಿಯಿಂದ ಹುಟ್ಟುತ್ತವೆ.
    4. ಅರಾವಳಿ ಪರ್ವತ ಶ್ರೇಣಿಯು ಹಿಮಾಲಯದಂತೆ ನಿರಂತರ ಎತ್ತರದ ತಡೆಗೋಡೆಯನ್ನು ರೂಪಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಭಾರತದ ಜೈವಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತದ ಜೈವಿಕ ಆರ್ಥಿಕತೆಯು 2014 ರಲ್ಲಿ ಸುಮಾರು $10 ಬಿಲಿಯನ್‌ನಿಂದ 2024 ರ ವೇಳೆಗೆ $165 ಬಿಲಿಯನ್‌ಗಿಂತಲೂ ಹೆಚ್ಚು ಬೆಳೆದಿದೆ ಮತ್ತು ಇದು ಭಾರತದ ಜಿಡಿಪಿಗೆ (GDP) ಸುಮಾರು 4.25% ಕೊಡುಗೆ ನೀಡುತ್ತದೆ.
    2. ಸರ್ಕಾರವು 2030 ರ ವೇಳೆಗೆ ಜೈವಿಕ ಆರ್ಥಿಕತೆಯನ್ನು ಸುಮಾರು $300 ಬಿಲಿಯನ್‌ಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.
    3. ಇತ್ತೀಚಿನ ವರ್ಷಗಳಲ್ಲಿ ಈ ವಲಯವು ಸುಮಾರು 17-18% ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರವನ್ನು (CAGR) ದಾಖಲಿಸಿದೆ.
    4. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು ಇದರಲ್ಲಿ ಪ್ರಮುಖ ಪಾಲನ್ನು ಹೊಂದಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಎರಡು
    2. ಕೇವಲ ಮೂರು
    3. ಕೇವಲ ಒಂದು
    4. ಎಲ್ಲಾ ನಾಲ್ಕು

    ಉತ್ತರ: D

    1. ರಿಲೀಫ್ (RELIEF) ಯೋಜನೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಪಶ್ಚಿಮ ಏಷ್ಯಾದಲ್ಲಿ ಲಾಜಿಸ್ಟಿಕ್ಸ್ ಮತ್ತು ಸರಕು ಸಾಗಣೆಗೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸುತ್ತಿರುವ ಭಾರತೀಯ ರಫ್ತುದಾರರನ್ನು ಬೆಂಬಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    2. ಭಾರತೀಯ ರಫ್ತು ಸಾಲ ಖಾತರಿ ನಿಗಮವು (ECGC) ಇದರ ನೋಡಲ್ ಏಜೆನ್ಸಿಯಾಗಿದ್ದು, ಇದು ಪ್ರಾಥಮಿಕವಾಗಿ ಜಾಗತಿಕ ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ.
    3. ಇದನ್ನು ರಫ್ತು ಉತ್ತೇಜನ ಮಿಷನ್‌ನ ಅಡಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಸರಕು ಸಾಗಣೆ ಏರಿಕೆ ಹಾಗೂ ವಿಮಾ ಪ್ರೀಮಿಯಂ ಹೆಚ್ಚಳದಂತಹ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 2 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕಿರು ಜಲವಿದ್ಯುತ್ ಅಭಿವೃದ್ಧಿ ಯೋಜನೆಯನ್ನು 2026 ರಲ್ಲಿ ಅನುಮೋದಿಸಲಾಯಿತು.
    2. ಇದನ್ನು ಕೇಂದ್ರ ವಿದ್ಯುತ್ ಸಚಿವಾಲಯವು ಜಾರಿಗೊಳಿಸುತ್ತದೆ.
    3. ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
    4. ಇದು 2030-31ರ ಆರ್ಥಿಕ ವರ್ಷದ ವೇಳೆಗೆ ಸುಮಾರು 1,500 MW ಸಾಮರ್ಥ್ಯದ ಸೇರ್ಪಡೆಯ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ವಿಶ್ವ ಸಂತೋಷದ ವರದಿ 2026 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಗ್ಯಾಲಪ್ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲದ (UN SDSN) ಸಹಭಾಗಿತ್ವದಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ ಪ್ರಕಟಿಸಿದೆ.
    2. ತಲಾವಾರು ಜಿಡಿಪಿ (GDP), ಜೀವಿತಾವಧಿ, ಸಾಮಾಜಿಕ ಬೆಂಬಲ, ಸ್ವಾತಂತ್ರ್ಯ, ಉದಾರತೆ ಮತ್ತು ಭ್ರಷ್ಟಾಚಾರದ ಗ್ರಹಿಕೆಗಳಂತಹ ಅಂಶಗಳ ಆಧಾರದ ಮೇಲೆ ಶ್ರೇಯಾಂಕವನ್ನು ನೀಡಲಾಗುತ್ತದೆ.
    3. 2018 ರಿಂದ ಫಿನ್‌ಲ್ಯಾಂಡ್ ಅತ್ಯಂತ ಸಂತೋಷದ ದೇಶವಾಗಿ ಶ್ರೇಯಾಂಕ ಪಡೆದಿದ್ದರೆ, 2026 ರಲ್ಲಿ ಅಫ್ಘಾನಿಸ್ತಾನವು ಕೊನೆಯ ಸ್ಥಾನದಲ್ಲಿದೆ.
    4. ಭಾರತವು ಅಗ್ರ 100 ದೇಶಗಳ ಒಳಗೆ ಸ್ಥಾನ ಪಡೆದಿದೆ ಮತ್ತು ಹಿಂದಿನ ವರ್ಷದ ಶ್ರೇಯಾಂಕಕ್ಕಿಂತ ಸುಧಾರಣೆಯನ್ನು ತೋರಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಶೈನ್ (SHINE) ಆ್ಯಪ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತೀಯ ರೈಲ್ವೆಯ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿನ ಕಿರುಕುಳವನ್ನು ವರದಿ ಮಾಡಲು ಇದು ಪ್ರತ್ಯೇಕವಾಗಿ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ.
    2. ದೂರು ಮೇಲ್ವಿಚಾರಣೆಗೆ ಅವಕಾಶ ನೀಡುವಾಗ ಇದು ದೂರುದಾರರ ವಿವರಗಳ ಸಂಪೂರ್ಣ ಗೌಪ್ಯತೆಯನ್ನು ಖಚಿತಪಡಿಸುತ್ತದೆ.
    3. ಇದು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ಮತ್ತು ವಿಶಾಖಾ ಮಾರ್ಗಸೂಚಿಗಳೊಂದಿಗೆ ಹೊಂದಿಕೊಂಡಿದೆ.
    4. ಇದು ಸಂಸ್ಥೆಗಳಲ್ಲಿನ ಆಂತರಿಕ ದೂರು ಸಮಿತಿಗಳ (ICCs) ಪಾತ್ರವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಎಲ್ಲಾ ನಾಲ್ಕು

    ಉತ್ತರ: B

    1. ಭಾರತದ ಕಚ್ಚಾ ತೈಲ ಆಮದಿನ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ತೈಲ-ಆಮದು ಮಾಡುವ ಮತ್ತು ಸೇವಿಸುವ ರಾಷ್ಟ್ರವಾಗಿದೆ.
    2. ಭಾರತವು ತನ್ನ ಕಚ್ಚಾ ತೈಲದ 80% ಕ್ಕಿಂತ ಹೆಚ್ಚಿನ ಅಗತ್ಯವನ್ನು 40 ಕ್ಕೂ ಹೆಚ್ಚು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
    3. ಭಾರತದ ತೈಲ ಆಮದಿನ ಸುಮಾರು ಅರ್ಧದಷ್ಟು ಭಾಗವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
    4. ಭಾರತವು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (IEA) ಪೂರ್ಣ ಸದಸ್ಯ ರಾಷ್ಟ್ರವಾಗಿದೆ ಮತ್ತು ಈ ಅಂತರರಾಷ್ಟ್ರೀಯ ಸಂಸ್ಥೆಯ ಆದೇಶವನ್ನು ಪಾಲಿಸುವ ಬಾಧ್ಯತೆಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 3 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2 ಮತ್ತು 3 ಮಾತ್ರ

    ಉತ್ತರ: D

    1. “ಲಿಗೋ (LIGO)” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
    2. ಲೇಸರ್ ಇಂಟರ್‌ಫೆರೋಮೀಟರ್ ಜಿಯೋಫಿಸಿಕಲ್ ಅಬ್ಸರ್ವೇಟರಿ
    3. ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಷನಲ್-ವೇವ್ ಅಬ್ಸರ್ವೇಟರಿ
    4. ಲೈಟ್ ಇಂಟರ್‌ಫರೆನ್ಸ್ ಗ್ಲೋಬಲ್ ಅಬ್ಸರ್ವೇಟರಿ
    5. ಲೇಸರ್ ಇಂಟಿಗ್ರೇಟೆಡ್ ಗ್ರಾವಿಟಿ ಅಬ್ಸರ್ವೇಟರಿ

    ಉತ್ತರ: B

    1. “ಕಿಂಬರ್ಲಿ ಪ್ರಕ್ರಿಯೆ ಪ್ರಮಾಣೀಕರಣ ಯೋಜನೆ” ಏನನ್ನು ನಿಯಂತ್ರಿಸುತ್ತದೆ?
    2. ಕೇವಲ ಹೊಳಪು ನೀಡಲಾದ ವಜ್ರಗಳ ವ್ಯಾಪಾರವನ್ನು ನಿಯಂತ್ರಿಸುತ್ತದೆ
    3. ಕೇವಲ ಕಚ್ಚಾ ವಜ್ರಗಳ ವ್ಯಾಪಾರವನ್ನು ನಿಯಂತ್ರಿಸುತ್ತದೆ. 
    4. ಕಚ್ಚಾ ಮತ್ತು ಹೊಳಪು ನೀಡಲಾದ ಎರಡೂ ವಜ್ರಗಳ ವ್ಯಾಪಾರವನ್ನು ನಿಯಂತ್ರಿಸುತ್ತದೆ. 
    5. ಕೇವಲ ಕೃತಕ ವಜ್ರಗಳ ವ್ಯಾಪಾರವನ್ನು ನಿಯಂತ್ರಿಸುತ್ತದೆ. 

    ಉತ್ತರ: B

    1. ‘ಡಾರ್ಕ್‌ನೆಟ್’ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಡೀಪ್ ವೆಬ್‌ನ ಉಪ-ವಿಭಾಗವಾಗಿದೆ.
    2. ಇದನ್ನು ಸಾಂಪ್ರದಾಯಿಕ ಸರ್ಚ್ ಎಂಜಿನ್‌ಗಳಿಂದ ಸೂಚಿಕೆ ಇಂಡೆಕ್ಷೆಡ್ ಮಾಡಲಾಗುತ್ತದೆ ಆದರೆ ಲಾಗಿನ್ ಪ್ರವೇಶದ ಅಗತ್ಯವಿರುತ್ತದೆ.
    3. ಇದು ಗೂಢಲಿಪೀಕರಣ (Encryption) ಮತ್ತು ರೂಟಿಂಗ್ ಕಾರ್ಯವಿಧಾನಗಳ ಮೂಲಕ ಬಳಕೆದಾರರ ಅನಾಮಧೇಯತೆಯನ್ನು ಖಚಿತಪಡಿಸುತ್ತದೆ.
    4. ಟಾರ್ ಬ್ರೌಸರ್‌ನಂತಹ ವಿಶೇಷ ಸಾಫ್ಟ್‌ವೇರ್ ಬಳಸಿ ಇದನ್ನು ಪ್ರವೇಶಿಸಬಹುದು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಯುದ್ಧದಲ್ಲಿ ಬಿಳಿ ರಂಜಕವನ್ನು ಪ್ರಾಥಮಿಕವಾಗಿ ಯಾವುದಕ್ಕಾಗಿ ಬಳಸಲಾಗುತ್ತದೆ?
    1. ಹೊಗೆಯ ಪರದೆಗಳನ್ನು ರಚಿಸಲು.
    2. ಬೆಳಕಿಗಾಗಿ.
    3. ರಾಸಾಯನಿಕ ನರ-ವಿಷವನ್ನು ಬಳಸಿ ವಿಷಪ್ರಾಶನ ಮಾಡಲು
    4. ದಹನಕಾರಿ ಉದ್ದೇಶಗಳಿಗಾಗಿ.

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ‘ಅನಾವರಣ’ (Anavaran) ಅರಣ್ಯನಾಶ ಎಚ್ಚರಿಕೆ ವ್ಯವಸ್ಥೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತೀಯ ಅರಣ್ಯ ಸಮೀಕ್ಷೆ ಅಭಿವೃದ್ಧಿಪಡಿಸಿದ ಅರಣ್ಯ ವ್ಯಾಪ್ತಿಯ ನಷ್ಟವನ್ನು ನೈಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಕೃತಕ ಬುದ್ಧಿಮತ್ತೆ (AI) ಆಧಾರಿತ ವೇದಿಕೆಯಾಗಿದೆ.
    2. ಇದು ಗೂಗಲ್ ಅರ್ಥ್ ಎಂಜಿನ್ (GEE) ವೇದಿಕೆಯನ್ನು ಆಧರಿಸಿದೆ ಮತ್ತು ಮೋಡ ಕವಿದಾಗ ಅಥವಾ ಮಾನ್ಸೂನ್ ಸಮಯದಲ್ಲಿ ಮೇಲ್ವಿಚಾರಣೆಗಾಗಿ ಸೆಂಟಿನೆಲ್-2 ಆಪ್ಟಿಕಲ್ ಚಿತ್ರಣ ಮತ್ತು ಸೆಂಟಿನೆಲ್-1 ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ಅನ್ನು ಬಳಸುತ್ತದೆ.
    3. ಸೆಂಟಿನೆಲ್-1 ಮತ್ತು ಸೆಂಟಿನೆಲ್-2 ಎರಡೂ ಇಮೇಜಿಂಗ್‌ಗಾಗಿ ಗೋಚರ ಬೆಳಕನ್ನು ಅವಲಂಬಿಸಿವೆ.
    4. ಇದು ಪತ್ತೆಹಚ್ಚುವಿಕೆಗಾಗಿ ಕೇವಲ ಆಪ್ಟಿಕಲ್ ಉಪಗ್ರಹ ಚಿತ್ರಣವನ್ನು ಮಾತ್ರ ಅವಲಂಬಿಸಿದೆ ಮತ್ತು ಕಾಲಕಾಲಕ್ಕೆ ರಾಜ್ಯ ಅರಣ್ಯ ಇಲಾಖೆಗಳಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

    1. ಕುರುಂಬ ಚಿತ್ರಕಲೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಾಂಪ್ರದಾಯಿಕವಾಗಿ ಇವುಗಳನ್ನು ಮನೆಗಳು ಮತ್ತು ದೇವಾಲಯಗಳ ಗೋಡೆಗಳ ಮೇಲೆ ಚಿತ್ರಿಸಲಾಗುತ್ತಿತ್ತು.
    2. ಈ ವರ್ಣಚಿತ್ರಗಳು ಹಬ್ಬ ಮತ್ತು ಆಚರಣೆಗಳ ಸಂದರ್ಭಗಳೊಂದಿಗೆ ನಿಕಟ ಸಂಬಂಧ ಹೊಂದಿವೆ.
    3. ಕಲಾ ಪ್ರಕಾರವು ಪ್ರಧಾನವಾಗಿ ದೃಷ್ಟಿಕೋನ ಮತ್ತು ನೈಜತೆಯ ತಂತ್ರಗಳನ್ನು ಬಳಸುತ್ತದೆ.
    4. ವರ್ಣದ್ರವ್ಯ ತಯಾರಿಸಲು ಮರದ ರಾಳಗಳಂತಹ ನೈಸರ್ಗಿಕ ವಸ್ತುಗಳನ್ನು ಬಳಸಲಾಗುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ನೀತಿ ಆಯೋಗದ ಹಣಕಾಸು ಆರೋಗ್ಯ ಸೂಚ್ಯಂಕ (FHI 2026) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತೀಯ ರಾಜ್ಯಗಳ ಹಣಕಾಸಿನ ಆರೋಗ್ಯವನ್ನು ನಿರ್ಣಯಿಸುವ ಎರಡನೇ ವಾರ್ಷಿಕ ಆವೃತ್ತಿ ಇದಾಗಿದೆ.
    2. ಸೂಚ್ಯಂಕವು ವೆಚ್ಚದ ಗುಣಮಟ್ಟ, ಆದಾಯ ಕ್ರೋಢೀಕರಣ, ಆರ್ಥಿಕ ವಿವೇಕ, ಸಾಲದ ಸೂಚ್ಯಂಕ ಮತ್ತು ಸಾಲದ ಸುಸ್ಥಿರತೆಯಂತಹ ಮೌಲ್ಯಮಾಪನ ಮಾಡುತ್ತದೆ.
    3. ಸೂಚ್ಯಂಕಕ್ಕಾಗಿ ಬಳಸಲಾದ ದತ್ತಾಂಶವನ್ನು ಭಾರತೀಯ ಹಣಕಾಸು ಆಯೋಗವು ಸಂಗ್ರಹಿಸಿದೆ.
    4. ಒಡಿಶಾ ಉನ್ನತ-ಕಾರ್ಯಕ್ಷಮತೆಯ ರಾಜ್ಯವಾಗಿದ್ದರೆ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳ ಕಡಿಮೆ-ಕಾರ್ಯಕ್ಷಮತೆಯ ರಾಜ್ಯಗಳಾಗಿವೆ.
    5. ಬಿಹಾರ, ಕರ್ನಾಟಕ ಮತ್ತು ತೆಲಂಗಾಣದಂತಹ ರಾಜ್ಯಗಳು ಹಣಕಾಸಿನ ಕಾರ್ಯಕ್ಷಮತೆಯಲ್ಲಿ ಸಾಧಾರಣ ಸುಧಾರಣೆಯನ್ನು ತೋರಿಸಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 4 ಮತ್ತು 5 ಮಾತ್ರ
    2. 1, 2, 3 ಮತ್ತು 4 ಮಾತ್ರ
    3. 2, 3, 4 ಮತ್ತು 5 ಮಾತ್ರ
    4. 1, 3 ಮತ್ತು 5 ಮಾತ್ರ

    ಉತ್ತರ: A

    1. ಈ ಕೆಳಗಿನ ಯಾವ ಪರಿಣಾಮಗಳನ್ನು ಕಪ್ಪು ಮಳೆಯೊಂದಿಗೆ ಸಂಯೋಜಿಸಬಹುದು?
    1. ವಿಕಿರಣ ಕಾಯಿಲೆ
    2. ಆನುವಂಶಿಕ ರೂಪಾಂತರಗಳು
    3. ಮಣ್ಣಿನ ಫಲವತ್ತತೆಯ ನಷ್ಟ

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. ಕೇವಲ ಒಂದು
    2. ಕೇವಲ ಎರಡು
    3. ಯಾವುದೂ ಇಲ್ಲ
    4. ಎಲ್ಲವೂ

    ಉತ್ತರ: D

    1. ವಿಶಾಖಪಟ್ಟಣಂನಲ್ಲಿ ಪ್ರಸ್ತಾವಿತ ಪ್ರೋಟಾನ್ ವೇಗವರ್ಧಕ ಸೌಲಭ್ಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಆವೇಶಿತ ಕಣಗಳನ್ನು (Charged particles) ವೇಗಗೊಳಿಸಲು ಬಳಸುವ ಉನ್ನತ-ಶಕ್ತಿಯ ಪ್ರೋಟಾನ್ ವೇಗವರ್ಧಕ ವ್ಯವಸ್ಥೆಯಾಗಿದೆ.
    2. ಇದು ಭಾರತದ ಮೂರು-ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು, ವಿಶೇಷವಾಗಿ ಥೋರಿಯಂ ಬಳಕೆಯನ್ನು ಬೆಂಬಲಿಸುತ್ತದೆ.
    3. ಇದು ಪರಮಾಣು ರಿಯಾಕ್ಟರ್ ಸುರಕ್ಷತೆಯನ್ನು ಹೆಚ್ಚಿಸುವ ವೇಗವರ್ಧಕ-ಚಾಲಿತ ವ್ಯವಸ್ಥೆಗಳನ್ನು (ADS) ಆಧರಿಸಿದೆ.
    4. ಈ ಸೌಲಭ್ಯವು ಪ್ರಾಥಮಿಕವಾಗಿ ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಮಾಡೆಲಿಂಗ್‌ಗಾಗಿ ಉದ್ದೇಶಿಸಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: C

    1. ಭಾರತದ ಸಂವಿಧಾನದ 6ನೇ ಅನುಸೂಚಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನ ಬುಡಕಟ್ಟು ಪ್ರದೇಶಗಳಿಗೆ ಸ್ವಾಯತ್ತ ಆಡಳಿತಾತ್ಮಕ ವ್ಯವಸ್ಥೆಗಳನ್ನು ಒದಗಿಸುತ್ತದೆ.
    2. ಸ್ವಾಯತ್ತ ಜಿಲ್ಲಾ ಮಂಡಳಿಗಳಿಗೆ (ADCs) ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆರ್ಥಿಕ ಅಧಿಕಾರಗಳನ್ನು ನೀಡಲಾಗಿದೆ.
    3. 6ನೇ ಅನುಸೂಚಿಗೆ ಸಂಬಂಧಿಸಿದ ನಿಬಂಧನೆಗಳು 244(2) ಮತ್ತು 275(1) ವಿಧಿಗಳ ಅಡಿಯಲ್ಲಿವೆ.
    4. ಮೇಘಾಲಯದ ಸ್ವಾಯತ್ತ ಜಿಲ್ಲಾ ಮಂಡಳಿಗಳು ಕೇವಲ ಸಲಹಾ ಸಂಸ್ಥೆಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ ಮತ್ತು ಶಾಸಕಾಂಗ ಅಧಿಕಾರವನ್ನು ಹೊಂದಿಲ್ಲ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಈ ಕೆಳಗಿನ ವಿವರಣೆಯನ್ನು ಪರಿಗಣಿಸಿ:

    “ಸಣ್ಣ ಹಳದಿ ಮಿಶ್ರಿತ-ಕಂದು ಬಣ್ಣದ ತುಪ್ಪಳವನ್ನು ಹೊಂದಿರುವ ದಪ್ಪನೆಯ ಪರ್ವತ-ವಾಸಿಯಾದ ಕಾಡುಕುರಿಯು, ಪಶ್ಚಿಮ ಘಟ್ಟಗಳಲ್ಲಿ ಮುಖ್ಯವಾಗಿ ಕೇರಳ ಮತ್ತು ತಮಿಳುನಾಡಿನಾದ್ಯಂತ ಸುಮಾರು 400 ಕಿ.ಮೀ ಸೀಮಿತ ವಿಸ್ತಾರದಲ್ಲಿ ಸ್ಥಳೀಯವಾಗಿದೆ. ಇದು ಸಸ್ಯಾಹಾರಿಯಾಗಿದ್ದು ವೈವಿಧ್ಯಮಯ ಹುಲ್ಲು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ತಿನ್ನುತ್ತದೆ. ಅರಣ್ಯನಾಶ, ತೋಟಗಾರಿಕೆ ವಿಸ್ತರಣೆ, ಜಲವಿದ್ಯುತ್ ಯೋಜನೆಗಳು, ಸಾಕುಪ್ರಾಣಿಗಳ ಪೈಪೋಟಿ ಮತ್ತು ಬೇಟೆಯಾಡುವಿಕೆಯಿಂದಾಗಿ ಈ ಪ್ರಭೇದವು ಆವಾಸಸ್ಥಾನ ಕಳೆದುಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿದೆ. ಇದು IUCN ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ (EN) ಎಂದು ಪಟ್ಟಿಮಾಡಲಾಗಿದೆ ಮತ್ತು 1972 ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಶೆಡ್ಯೂಲ್ I ರ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ. ಅತಿ ದೊಡ್ಡ ಜನಸಂಖ್ಯೆಯು ಎರ್ವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುತ್ತದೆ, ಮತ್ತು ಇದು ತಮಿಳುನಾಡಿನ ರಾಜ್ಯ ಪ್ರಾಣಿಯೂ ಹೌದು.”

    ಈ ಮೇಲಿನ ವಿವರಣೆಯಲ್ಲಿ  ಯಾವ ಪ್ರಭೇದವನ್ನು ವಿವರಿಸಲಾಗುತ್ತಿದೆ?

    1. ಮಲಬಾರ್ ಪೈಡ್ ಹಾರ್ನ್‌ಬಿಲ್
    2. ಸಿಂಹ ಬಾಲದ ಸಿಂಗಳೀಕ
    3. ಇಂಡಿಯನ್ ಗೌರ್ (ಭಾರತೀಯ ಕಾಡೆಮ್ಮೆ)
    4. ನೀಲಗಿರಿ ತಹಾರ್ 

    ಉತ್ತರ: D

    1. ಕೇಂದ್ರ ಗೃಹ ಸಚಿವಾಲಯ ಅನಾವರಣಗೊಳಿಸಿದ ‘ಪ್ರಹಾರ್’ (PRAHAAR) ನೀತಿಯನ್ನು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ವಿವರಿಸುತ್ತದೆ?
    2. ಭಯೋತ್ಪಾದನೆ ಪೀಡಿತ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವುದು.
    3. ಭಯೋತ್ಪಾದನೆ ಪ್ರಕರಣಗಳಿಗಾಗಿ ಕಾನೂನು ನ್ಯಾಯಮಂಡಳಿ ವ್ಯವಸ್ಥೆಯನ್ನು ಸ್ಥಾಪಿಸುವುದು.
    4. ಭಯೋತ್ಪಾದನೆಯ ಬಗ್ಗೆ ‘ಶೂನ್ಯ ಸಹಿಷ್ಣುತೆ’ಯನ್ನು ಆಧರಿಸಿದ ಚೊಚ್ಚಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿಯ ಚೌಕಟ್ಟನ್ನು ರೂಪಿಸುವುದು.
    5. ಭಾರತದಲ್ಲಿನ ಅಸ್ತಿತ್ವದಲ್ಲಿರುವ ಎಲ್ಲಾ ಭಯೋತ್ಪಾದನಾ ನಿಗ್ರಹ ಕಾನೂನುಗಳನ್ನು ಬದಲಾಯಿಸುವುದು.

    ಉತ್ತರ: C

    1. ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ಅಳವಡಿಸಿಕೊಳ್ಳುವಿಕೆಯ ಪ್ರಮುಖ ಪ್ರಯೋಜನಗಳು ಯಾವುವು?
    1. ಪಳೆಯುಳಿಕೆ ಇಂಧನ ಆಮದಿನ ಮೇಲಿನ ಅವಲಂಬನೆಯ ಕಡಿತ.
    2. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟಕರವಾದ ಕ್ಷೇತ್ರಗಳಲ್ಲಿ ಡಿಕಾರ್ಬೊನೈಸೇಶನ್.
    3. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಮತೋಲನಗೊಳಿಸುವುದು.
    4. ಇಂಧನ ಸಂಗ್ರಹಣೆ ಮತ್ತು ಜಾಲ (ಗ್ರಿಡ್) ಸಮತೋಲನ.

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

    1. ರಾಹ್-ವೀರ್ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019 ರ ಅಡಿಯಲ್ಲಿರುವ ಗುಡ್ ಸಮರಿಟನ್ ನಿಬಂಧನೆಗಳೊಂದಿಗೆ ಹೊಂದಿಕೊಂಡಿದೆ.
    2. ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡುವ ವ್ಯಕ್ತಿಗಳಿಗೆ ಕಾನೂನು ರಕ್ಷಣೆ ಮತ್ತು ಆರ್ಥಿಕ ಪ್ರೋತ್ಸಾಹ ಎರಡನ್ನೂ ಒದಗಿಸುತ್ತದೆ.
    3. “ಗೋಲ್ಡನ್ ಅವರ್” (ಸುವರ್ಣ ಅವಧಿ) ಒಳಗೆ ಸಂತ್ರಸ್ತರಿಗೆ ಸಹಾಯ ಮಾಡುವ ನಾಗರಿಕರಿಗೆ ಯೋಜನೆಯು ₹25,000 ನಗದು ಪ್ರೋತ್ಸಾಹಧನವನ್ನು ನೀಡುತ್ತದೆ.
    4. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುಮೋದನೆಯ ನಂತರ ಕೇಂದ್ರ ಮಟ್ಟದ ಸಮಿತಿಯಿಂದ ಬಹುಮಾನವನ್ನು ವಿತರಿಸಲಾಗುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಎಚ್‌ಎಎಲ್ ತೇಜಸ್ (HAL Tejas) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಎರಡಕ್ಕೂ ಅಭಿವೃದ್ಧಿಪಡಿಸಲಾದ ಐದನೇ-ತಲೆಮಾರಿನ ಸ್ಟೆಲ್ತ್ ಫೈಟರ್ ವಿಮಾನವಾಗಿದೆ.
    2. ಡಿಆರ್‌ಡಿಒ (DRDO) ಅಡಿಯಲ್ಲಿರುವ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಇದನ್ನು ವಿನ್ಯಾಸಗೊಳಿಸಿದೆ.
    3. ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಉತ್ಪಾದಿಸುತ್ತದೆ.
    4. ಇದು ಆಕಾಶದಿಂದ -ಆಕಾಶಕ್ಕೆ  ಮತ್ತು ಆಕಾಶದಿಂದ -ಭೂಮಿಗೆ ದಾಳಿ ಮಾಡುವ ಎರಡೂ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 3 ಮತ್ತು 4 ಮಾತ್ರ

    ಉತ್ತರ: C

    1. ಈ ಕೆಳಗಿನ ಪಠ್ಯವನ್ನು  ಅನ್ನು ಪರಿಗಣಿಸಿ:

    “ರಕ್ಷಣಾತ್ಮಕ ಕೆರಾಟಿನ್ ಮಾಪಕಗಳಿಂದ ಆವೃತವಾಗಿರುವ ಮೂಲಕ ಒಂದು ನಿರ್ದಿಷ್ಟ ಸಸ್ತನಿ ವಿಶಿಷ್ಟವಾಗಿದೆ ಮತ್ತು ಈ ವೈಶಿಷ್ಟ್ಯವು ಬೇರೆ ಯಾವುದೇ ಸಸ್ತನಿ ಗುಂಪಿನಲ್ಲಿ ಕಂಡುಬರುವುದಿಲ್ಲ. ಇದು ಹಲ್ಲುಗಳನ್ನು ಹೊಂದಿಲ್ಲ ಮತ್ತು ಉದ್ದವಾದ ಜಿಗುಟಾದ ನಾಲಿಗೆಯನ್ನು ಬಳಸಿ ಪ್ರಾಥಮಿಕವಾಗಿ ಇರುವೆಗಳು, ಗೆದ್ದಲುಗಳು ಮತ್ತು ಲಾರ್ವಾಗಳನ್ನು ತಿನ್ನುತ್ತದೆ. ಬೆದರಿಕೆಯೊಡ್ಡಿದಾಗ, ತನ್ನ ದುರ್ಬಲ ಭಾಗಗಳನ್ನು ರಕ್ಷಿಸಿಕೊಳ್ಳಲು ಬಿಗಿಯಾದ ಚೆಂಡಿನಂತೆ ಉರುಳುತ್ತದೆ. ಇದು ಮಣ್ಣನ್ನು ಗಾಳಿಯಾಡಿಸುವಂತೆ ಮಾಡುವ ಮತ್ತು ಕೀಟಗಳ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಪ್ರಮುಖ ಪರಿಸರ ಪಾತ್ರವನ್ನು ವಹಿಸುತ್ತದೆ.”

    ಈ ಕೆಳಗಿನ ಯಾವ ಪ್ರಭೇದವನ್ನು ಮೇಲೆ ವಿವರಿಸಲಾಗಿದೆ?

    1. ಆರ್ಮಡಿಲೊ
    2. ಪ್ಯಾಂಗೊಲಿನ್ (ಚಿಪ್ಪುಹಂದಿ)
    3. ಆರ್ಡ್ವಾರ್ಕ್
    4. ಇರುವೆಭಕ್ಷಕ

    ಉತ್ತರ: B

    1. ರಾಂಪ್ (RAMP) ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ವಿಶ್ವಬ್ಯಾಂಕ್ ನೆರವಿನ ಕೇಂದ್ರ ವಲಯದ ಯೋಜನೆಯಾಗಿದೆ.
    2. ಇದು MSME ಗಳ ಸ್ಪರ್ಧಾತ್ಮಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ.
    3. ಇದು ಯಂತ್ರೋಪಕರಣಗಳ ಖರೀದಿಗಾಗಿ MSME ಗಳಿಗೆ ನೇರ ಬಂಡವಾಳ ಸಬ್ಸಿಡಿಗಳನ್ನು ಒದಗಿಸುತ್ತದೆ.
    4. ಇದು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳೆರಡರ ಪ್ರವೇಶವನ್ನು ಸುಧಾರಿಸುವ ಕ್ರಮಗಳನ್ನು ಒಳಗೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 2 ಮತ್ತು 3 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಮಿಷನ್ ಸುದರ್ಶನ್ ಚಕ್ರವು ಈ ಕೆಳಗಿನ ಯಾವುದರೊಂದಿಗೆ ಸಂಬಂಧ ಹೊಂದಿದೆ?
    2. ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಯುದ್ಧ ಸಮರಾಭ್ಯಾಸ
    3. ಸಮಗ್ರ ವಾಯು ರಕ್ಷಣಾ ಸಮರಾಭ್ಯಾಸ 
    4. ಸೈಬರ್ ಭದ್ರತಾ ಕಸರತ್ತು
    5. ಬಾಹ್ಯಾಕಾಶ ಕಣ್ಗಾವಲು ಕಾರ್ಯಾಚರಣೆ

    ಉತ್ತರ: B

    1. ಸುಜ್ವಿಕಾ (SUJVIKA) ಪೋರ್ಟಲ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಜೈವಿಕ ತಂತ್ರಜ್ಞಾನ ಇಲಾಖೆಯು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ-ಚಾಲಿತ ಡಿಜಿಟಲ್ ವೇದಿಕೆಯಾಗಿದೆ.
    2. ಇದು ಜೈವಿಕ ತಂತ್ರಜ್ಞಾನ ಉತ್ಪನ್ನ ಆಮದುಗಳ ಕುರಿತು ಅಧಿಕೃತ ದತ್ತಾಂಶವನ್ನು ಒದಗಿಸುತ್ತದೆ.
    3. ಕೃಷಿ ಸರಕುಗಳ ರಫ್ತುಗಳನ್ನು ಮೇಲ್ವಿಚಾರಣೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    4. ಇದು ಜೀವರಾಸಾಯನಿಕ ಉತ್ಪನ್ನಗಳು ಮತ್ತು ಕೈಗಾರಿಕಾ ಕಿಣ್ವಗಳ ಕುರಿತು ವಲಯವಾರು ಒಳನೋಟಗಳನ್ನು ಒದಗಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

    1. ಅಂತರರಾಷ್ಟ್ರೀಯ ಹವಾಮಾನ ಉಪಕ್ರಮಕ್ಕೆ (IKI) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಅಂತರರಾಷ್ಟ್ರೀಯ ಹವಾಮಾನ ಯೋಜನೆಗಳಿಗೆ ಧನಸಹಾಯ ನೀಡುವ ಜರ್ಮನಿಯ ಪ್ರಾಥಮಿಕ ಕಾರ್ಯವಿಧಾನವಾಗಿ ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು.
    2. ಇದು ಹವಾಮಾನ ತಗ್ಗಿಸುವಿಕೆಯ ಚಟುವಟಿಕೆಗಳ ಮೇಲೆ ಮಾತ್ರ ಪ್ರತ್ಯೇಕವಾಗಿ ಕೇಂದ್ರೀಕರಿಸುತ್ತದೆ.
    3. ಇದು ಪಾಲುದಾರ ದೇಶಗಳಲ್ಲಿ ರೂಪಾಂತರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಯೋಜನೆಗಳನ್ನು ಬೆಂಬಲಿಸುತ್ತದೆ.
    4. ಈ ಉಪಕ್ರಮದ ಅಡಿಯಲ್ಲಿ ಆದ್ಯತೆಯ ಪಾಲುದಾರ ದೇಶಗಳಲ್ಲಿ ಭಾರತವೂ ಸೇರಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 3 ಮತ್ತು 4
    2. 2 ಮತ್ತು 3 ಮಾತ್ರ
    3. 1 ಮತ್ತು 2 ಮಾತ್ರ
    4. 1, 3 ಮತ್ತು 4 ಮಾತ್ರ

    ಉತ್ತರ: A

    1. ಭಾರತದಲ್ಲಿ ಕೆಫೆ (CAFE) ಮಾನದಂಡಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇವುಗಳನ್ನು 2017 ರಲ್ಲಿ ‘ಇಂಧನ ದಕ್ಷತೆ ಬ್ಯೂರೋ’ ಪರಿಚಯಿಸಿತು.
    2. ಇವು ಪ್ರಯಾಣಿಕ ವಾಹನಗಳಿಂದ ಉಂಟಾಗುವ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುತ್ತವೆ.
    3. ಇವು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತವೆ.
    4. ಇವು 3,500 ಕೆಜಿಗಿಂತ ಕಡಿಮೆ ತೂಕವಿರುವ ವಾಹನಗಳನ್ನು ಒಳಗೊಳ್ಳುತ್ತವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಎಲ್ಲಾ ನಾಲ್ಕು

    ಉತ್ತರ: C

    1. ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ:
    1. ಅಸಹಕಾರ ಚಳವಳಿ.
    2. ಕಾಕೋರಿ ರೈಲು ದರೋಡೆ.
    3. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್.
    4. ಲಾಹೋರ್ ಸಂಚು ಪ್ರಕರಣ.

    ಮೇಲಿನ ಯಾವ ಐತಿಹಾಸಿಕ ಘಟನೆಗಳು ಚಂದ್ರಶೇಖರ್ ಆಜಾದ್ ಅವರೊಂದಿಗೆ ಸಂಬಂಧ ಹೊಂದಿವೆ?

    1. 1, 2 ಮತ್ತು 3 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

    1. ಹೆಕ್ಸಾಗನ್ ಅಲಯನ್ಸ್ ಪ್ರಾಥಮಿಕವಾಗಿ ಯಾವುದರೊಂದಿಗೆ ಸಂಬಂಧಿಸಿದೆ?
    2. ಸೇನಾ ಸಹಕಾರ
    3. ಶುದ್ಧ ಇಂಧನ ಪರಿವರ್ತನೆ
    4. ಬಾಹ್ಯಾಕಾಶ ಪರಿಶೋಧನೆ
    5. ಕೃಷಿ ಸುಧಾರಣೆಗಳು

    ಉತ್ತರ: B

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ : ಉತ್ತರಗಳು:

    Key Answers

    01). B                26). B                 51). C            76). C

    02). C                27). A                 52). A            77). A

    03). B                28). B                 53). C            78). D 

    04). A                29). D                 54). A            79). C

    05). D                30). A                 55). B            80). D

    06). C                31). C                 56). D            81). A

    07). A                32). C                 57). C            82). C

    08). B                33). A                 58). A            83). B

    09). D                34). C                 59). C            84). A

    10). A                35). B                 60). D            85). B

    11). C                36). B                 61). B            86). A

    12). B                37). C                 62). D            87). D

    13). A                38). A                 63). B            88). C

    14). C                39). B                 64). A            89). D

    15). A                40). A                 65). C            90). B

    16). B                41). C                 66). B

    17). C                42). B                 67). D

    18). D                43). A                 68). B

    19). B                44). C                 69). B

    20). A                45). B                 70). A

    21). C                46). D                 71). A

    22). C                47). C                 72). B

    23). A                48). A                 73). A

    24). B                49). A                 74). A

    25). C                50). D                 75). D