ಜಲ ಸಂಚಯ ಜನ ಭಾಗೀದಾರಿ (JSJB) ಉಪಕ್ರಮ
ಆಡಳಿತ

ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸರ್ಕಾರದ ಜಲ ಸಂಚಯ ಜನ ಭಾಗೀದಾರಿ (JSJB) ಉಪಕ್ರಮದ ಅಡಿಯಲ್ಲಿ ದೇಶಾದ್ಯಂತ 5 ಕೋಟಿಗೂ ಹೆಚ್ಚು ಕೃತಕ ಅಂತರ್ಜಲ ಮರುಪೂರಣ ಮತ್ತು ಸಂಗ್ರಹಣಾ ಕಾಮಗಾರಿಗಳ ನಿರ್ಮಾಣವನ್ನು ವರದಿ ಮಾಡಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವರು ತಿಳಿಸಿದ್ದಾರೆ.
ಜಲ ಸಂಚಯ ಜನ ಭಾಗೀದಾರಿ (JSJB) ಉಪಕ್ರಮದ ಬಗ್ಗೆ
- ಇದು 2024 ರಲ್ಲಿ ಜಲ ಶಕ್ತಿ ಸಚಿವಾಲಯವು ‘ಜಲ ಶಕ್ತಿ ಅಭಿಯಾನ: ಮಳೆನೀರು ಹಿಡಿಯಿರಿ’ (ಕ್ಯಾಚ್ ದಿ ರೈನ್)(JSA: CTR) ಅಭಿಯಾನದ ಭಾಗವಾಗಿ ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಸಮುದಾಯ-ಚಾಲಿತ ಜಲ ಸಂರಕ್ಷಣಾ ಉಪಕ್ರಮವಾಗಿದೆ.
- ಗುರಿ: ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರಿ ಏಜೆನ್ಸಿಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಜಲ ಸಂರಕ್ಷಣೆಯನ್ನು ಒಂದು ಜನಾಂದೋಲನವಾಗಿ ಪರಿವರ್ತಿಸುವುದು ಇದರ ಪ್ರಮುಖ ಗುರಿಯಾಗಿದೆ.
- ಈ ಉಪಕ್ರಮವು ಸಮುದಾಯ (Community), ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಮತ್ತು ವೆಚ್ಚ (Cost) ಎಂಬ 3C ಗಳ ಮಂತ್ರದಿಂದ ಪ್ರೇರಿತವಾಗಿದೆ.
- ಪ್ರಾಮುಖ್ಯತೆ: ಇದು ದೀರ್ಘಕಾಲೀನ ನೀರಿನ ಭದ್ರತೆಯನ್ನು ಉತ್ತೇಜಿಸುವ ಮತ್ತು ನೀರಿನ ಕೊರತೆಯ ವಿರುದ್ಧ ಹೋರಾಡುವ ಅಂತರ್ಗತ ಮಾದರಿಯನ್ನು ಅಳವಡಿಸಿಕೊಂಡಿದೆ.
- ಈ ಉಪಕ್ರಮದ ಅಡಿಯಲ್ಲಿ ಕನಿಷ್ಠ 10,000 ಕೃತಕ ಮರುಪೂರಣ ಮತ್ತು ಸಂಗ್ರಹಣಾ ರಚನೆಗಳನ್ನು ನಿರ್ಮಿಸಲು ಎಲ್ಲಾ ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತದೆ.
ಮಿಷನ್ ಸಿನೆಹಜೋರಿ (Mission Senehjori)
ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:
- ಇತ್ತೀಚಿಗೆ ಕೇಂದ್ರ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರು (MDoNER) ಮಿಷನ್ ಸಿನೆಹಜೋರಿ ಯೋಜನೆಯನ್ನು ಉದ್ಘಾಟಿಸಿದ್ದಾರೆ.
- ಇದು ಅಸ್ಸಾಂನ ಮುಗಾ ರೇಷ್ಮೆ ವಲಯವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಐಷಾರಾಮಿ ಜವಳಿ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಒಂದು ಪ್ರಮುಖ ಉಪಕ್ರಮವಾಗಿದೆ.
ಯೋಜನೆಯ ಬಗ್ಗೆ;
- ಈ ಯೋಜನೆಯು ಆಶ್ರಯ-ಸಸ್ಯ ಕೃಷಿಯನ್ನು ಬಲಪಡಿಸುವುದು, ನೂಲು ತೆಗೆಯುವ ಮೂಲಸೌಕರ್ಯವನ್ನು ಆಧುನೀಕರಿಸುವುದು, ರೈತ ಉತ್ಪಾದಕ ಸಂಸ್ಥೆಗಳನ್ನು (FPOs) ಉತ್ತೇಜಿಸುವುದು ಮತ್ತು ಏಕೀಕೃತ “ಸಿನೆಹಜೋರಿ” ಬ್ರ್ಯಾಂಡ್ ಅಡಿಯಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
- ಅನುಷ್ಠಾನ: ಈ ಯೋಜನೆಯನ್ನು ಅಸ್ಸಾಂ ಸರ್ಕಾರ, ಕೇಂದ್ರೀಯ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮತ್ತು ಇತರ ಕೇಂದ್ರ ಏಜೆನ್ಸಿಗಳು ಜಾರಿಗೊಳಿಸುತ್ತವೆ.
ಕೇಂದ್ರೀಯ ರೇಷ್ಮೆ ಮಂಡಳಿ (Central Silk Board)ಯ ಬಗ್ಗೆ
- ಇದು ಕೇಂದ್ರ ಜವಳಿ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದನ್ನು 1948 ರ ಕೇಂದ್ರೀಯ ರೇಷ್ಮೆ ಮಂಡಳಿ ಕಾಯ್ದೆಯ (ನಂತರ ಕೇಂದ್ರೀಯ ರೇಷ್ಮೆ ಮಂಡಳಿ (ತಿದ್ದುಪಡಿ) ಕಾಯ್ದೆ, 2006 ಎಂದು ತಿದ್ದುಪಡಿ ಮಾಡಲಾಗಿದೆ) ಮೂಲಕ ಸ್ಥಾಪಿಸಲಾಗಿದೆ.
- ಕಾರ್ಯಾದೇಶ: ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ನೀತಿಗಳನ್ನು ರೂಪಿಸುವ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಈ ಮಂಡಳಿಯು ಹೊಂದಿದೆ.
- ಪ್ರಧಾನ ಕಚೇರಿ: ಬೆಂಗಳೂರು
ರೇಷ್ಮೆ ಕೃಷಿಯ (Sericulture) ಬಗ್ಗೆ
- ಜಾಗತಿಕ ರೇಷ್ಮೆ ಉತ್ಪಾದನೆಯಲ್ಲಿ ಸುಮಾರು ಶೇಕಡಾ 25 ರಷ್ಟು ಪಾಲು ಹೊಂದುವ ಮೂಲಕ ಭಾರತವು ಪ್ರಸ್ತುತ ಚೀನಾದ ನಂತರ ವಿಶ್ವದ 2 ನೇ ಅತಿದೊಡ್ಡ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿದೆ.
- ರೇಷ್ಮೆ ಕೃಷಿಯು ರೇಷ್ಮೆ ಹುಳುಗಳನ್ನು (ಮುಖ್ಯವಾಗಿ ಹಿಪ್ಪುನೇರಳೆ ರೇಷ್ಮೆಗಾಗಿ ಬಾಂಬಿಕ್ಸ್ ಮೋರಿ) ಬೆಳೆಸುವುದನ್ನು ಒಳಗೊಂಡಿರುತ್ತದೆ, ಇವು ಮಲ್ಬರಿ(ಹಿಪ್ಪುನೇರಳೆ), ಓಕ್, ಕ್ಯಾಸ್ಟರ್ ಮತ್ತು ಅರ್ಜುನ್ನಂತಹ ಎಲೆಗಳನ್ನು ತಿಂದು ಗೂಡುಗಳನ್ನು ಕಟ್ಟುತ್ತವೆ.
- ಈ ಗೂಡುಗಳನ್ನು ಸಂಸ್ಕರಿಸಿ ನೂಲು ಮತ್ತು ಬಟ್ಟೆಯನ್ನಾಗಿ ಮಾಡಲಾಗುತ್ತದೆ, ಇದು ಕೃಷಿ ಮತ್ತು ಕೈಗಾರಿಕೆಯ ಸಮ್ಮಿಶ್ರಣವಾಗಿದೆ.
- ಗಮನಿಸಿ: ಪ್ರಪಂಚದ ಎಲ್ಲಾ 4 ಪ್ರಮುಖ ನೈಸರ್ಗಿಕ ರೇಷ್ಮೆ ಪ್ರಭೇದಗಳನ್ನು ಉತ್ಪಾದಿಸುವ ಏಕೈಕ ದೇಶ ಭಾರತವಾಗಿದೆ.
- ಹಿಪ್ಪುನೇರಳೆ (ಮಲ್ಬೆರಿ) ರೇಷ್ಮೆ (ಭಾರತದ ಒಟ್ಟು ಉತ್ಪಾದನೆಯ 70%)
- ಟಸರ್ (Tasar) ರೇಷ್ಮೆ (ಕಾಡು ರೇಷ್ಮೆ ಹುಳುಗಳಿಂದ ಪಡೆಯಲಾಗುತ್ತದೆ);
- ಎರಿ (Eri) ರೇಷ್ಮೆ (ಇದನ್ನು ‘ಅಹಿಂಸಾ ರೇಷ್ಮೆ’ ಎಂದೂ ಕರೆಯಲಾಗುತ್ತದೆ);
- ಮುಗಾ (Muga) ರೇಷ್ಮೆ (ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಉತ್ಪನ್ನ).
- ಪ್ರಪಂಚದ ಸುಮಾರು ಶೇಕಡಾ 90 ರಷ್ಟು ಮುಗಾ ರೇಷ್ಮೆಯನ್ನು ಅಸ್ಸಾಂ ಉತ್ಪಾದಿಸುತ್ತದೆ.
ಮರೆಯುವ ಹಕ್ಕು (Right to be Forgotten)
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಮರೆಯುವ ಹಕ್ಕು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬರುವ ಮೂಲಭೂತ ಖಾಸಗಿತನದ ಹಕ್ಕಿನ (Right to privacy) ಒಂದು ಪ್ರಮುಖ ಭಾಗವಾಗಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ಮರೆಯುವ ಹಕ್ಕಿನ ಬಗ್ಗೆ
- ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಇಂಟರ್ನೆಟ್, ಸರ್ಚ್ ಇಂಜಿನ್ಗಳು ಮತ್ತು ಸಾರ್ವಜನಿಕ ಡೇಟಾಬೇಸ್ಗಳಿಂದ ತಮ್ಮ ವೈಯಕ್ತಿಕ ದತ್ತಾಂಶ (ಡೇಟಾ)ವನ್ನು ತೆಗೆದುಹಾಕುವಂತೆ ಸಂಸ್ಥೆಗಳನ್ನು ಕೇಳುವ ಹಕ್ಕು ಇದಾಗಿದೆ.
- ಹಿಂದಿನ ತಪ್ಪುಗಳು ಅಥವಾ ಹಳೆಯ ಮಾಹಿತಿಯಿಂದಾಗಿ ಶಾಶ್ವತವಾಗಿ ನಿರ್ಣಯಿಸಲ್ಪಡದಿರಲು ಮತ್ತು ತಮ್ಮ ಆನ್ಲೈನ್ ಪ್ರತಿಷ್ಠೆ ಹಾಗೂ ಖಾಸಗಿತನವನ್ನು ರಕ್ಷಿಸಿಕೊಳ್ಳಲು ಈ ಹಕ್ಕು ಜನರಿಗೆ ಸಹಾಯ ಮಾಡುತ್ತದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
- ಮರೆಯುವ ಹಕ್ಕನ್ನು ಅಳಿಸಿಹಾಕುವ ಹಕ್ಕು (Right to erasure) ಎಂದೂ ಕರೆಯಲಾಗುತ್ತದೆ.
- ಇದು ನಿಮ್ಮ ಬಗ್ಗೆ ಇರುವ ಲಿಂಕ್ಗಳನ್ನು ಅಳಿಸಲು ಅಥವಾ ಮರೆಮಾಡಲು ಗೂಗಲ್ನಂತಹ ಕಂಪನಿ ಅಥವಾ ಸರ್ಚ್ ಇಂಜಿನ್ ಅನ್ನು ಕೇಳಲು ನಿಮಗೆ ಅನುಮತಿಸುತ್ತದೆ.
- ಮಾಹಿತಿಯು ಹಳೆಯದಾಗಿದ್ದರೆ, ತಪ್ಪಾಗಿದ್ದರೆ ಅಥವಾ ಅಪ್ರಸ್ತುತವಾಗಿದ್ದರೆ ನಿಮ್ಮ ಡೇಟಾವನ್ನು ತೆಗೆದುಹಾಕಲು ನೀವು ಸಾಮಾನ್ಯವಾಗಿ ವಿನಂತಿಸಬಹುದು.
ಭಾರತದಲ್ಲಿ ಮರೆಯುವ ಹಕ್ಕಿನ ಪ್ರಸ್ತುತ ಸ್ಥಿತಿ
- ಮರೆಯುವ ಹಕ್ಕಿನ ಕುರಿತು ಭಾರತವು ಇನ್ನೂ ಯಾವುದೇ ನಿರ್ದಿಷ್ಟ ಕಾನೂನನ್ನು ರೂಪಿಸಿಲ್ಲ.
- ಆದಾಗ್ಯೂ, ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, 2019 ಮತ್ತು ಹಲವಾರು ನ್ಯಾಯಾಲಯದ ತೀರ್ಪುಗಳು ಈ ಹಕ್ಕನ್ನು ಗುರುತಿಸಿವೆ.
- ಸರ್ವೋಚ್ಚ ನ್ಯಾಯಾಲಯದ ಕೆ.ಎಸ್. ಪುಟ್ಟಸ್ವಾಮಿ ತೀರ್ಪು (2017) ಮಾಹಿತಿಯ ಗೌಪ್ಯತೆಯನ್ನು, ಖಾಸಗಿತನದ ಹಕ್ಕಿನ ಒಂದು ಭಾಗವೆಂದು ಗುರುತಿಸಿದೆ.
ಉಲ್ಕಾಶಿಲೆ ಸ್ಫೋಟ (Meteor Explosion)
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಆಕಾಶದಲ್ಲಿ ಪ್ರಕಾಶಮಾನವಾದ ಬೆಂಕಿಯ ಚೆಂಡಿನಂತಹ ಉಲ್ಕೆಯೊಂದು (Meteor) ಸ್ಫೋಟಗೊಂಡಿದೆ ಎಂದು NASA ಖಚಿತಪಡಿಸಿದೆ.
ಕ್ಷುದ್ರಗ್ರಹ (Asteroid), ಉಲ್ಕಾಭ (Meteoroid), ಉಲ್ಕೆ (Meteor) ಮತ್ತು ಉಲ್ಕಾಶಿಲೆ (Meteorite) ನಡುವಿನ ವ್ಯತ್ಯಾಸಗಳು:
- ಕ್ಷುದ್ರಗ್ರಹ (Asteroid): ಸೂರ್ಯನ ಸುತ್ತ ಸುತ್ತುವ ಸಣ್ಣ ಕಲ್ಲಿನ ಆಕಾಶಕಾಯಗಳನ್ನು ಕ್ಷುದ್ರಗ್ರಹ ಎಂದು ಕರೆಯಲಾಗುತ್ತದೆ.
- ಉಲ್ಕಾಭ (Meteoroid): ಸೂರ್ಯನ ಸುತ್ತ ಸುತ್ತುವ ಕ್ಷುದ್ರಗ್ರಹ ಅಥವಾ ಧೂಮಕೇತುವಿನಿಂದ ಬೇರ್ಪಟ್ಟ ಸಣ್ಣ ಕಣಗಳನ್ನು ಉಲ್ಕಾಭ ಎಂದು ಕರೆಯಲಾಗುತ್ತದೆ.
- ಉಲ್ಕೆ (Meteor): ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಬೆಳಕಿನ ರೇಖೆಯನ್ನು (ಬೀಳುವ ನಕ್ಷತ್ರ) ಸೃಷ್ಟಿಸುವ ಉಲ್ಕಾಭವನ್ನು ಉಲ್ಕೆ ಎಂದು ಕರೆಯಲಾಗುತ್ತದೆ.
- ಉಲ್ಕಾಶಿಲೆ (Meteorite): ಭೂಮಿಯ ವಾತಾವರಣವನ್ನು ದಾಟಿ ಬಂದು, ಭೂಮಿಯ ಮೇಲ್ಮೈಗೆ ಅಪ್ಪಳಿಸುವ ಉಲ್ಕೆಯನ್ನು ಉಲ್ಕಾಶಿಲೆ ಎಂದು ಕರೆಯಲಾಗುತ್ತದೆ.
ಜಾಗತಿಕ ಕ್ಷುದ್ರಗ್ರಹ ಮಿಷನ್ ಗಳು (Global Asteroid Missions)
- ಡಾರ್ಟ್ ಮಿಷನ್ (DART Mission – NASA, 2022): ಇದು ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸುವ ಮೂಲಕ ಅದರ ಪಥವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆಯಾಗಿದೆ, ಇದು ನಿರ್ದಿಷ್ಟವಾಗಿ ಡಿಡಿಮೋಸ್ ಎಂಬ ದ್ವಿಮಾನ ಕ್ಷುದ್ರಗ್ರಹವನ್ನು ಗುರಿಯಾಗಿಸಿಕೊಂಡಿದೆ.
- ಒಸಿರಿಸ್-ರೆಕ್ಸ್ (OSIRIS-REx – NASA, 2016-2023): ಇದು ಬೆನ್ನು (Bennu) ಕ್ಷುದ್ರಗ್ರಹದಿಂದ ಮಾದರಿಗಳನ್ನು ಹಿಂದಕ್ಕೆ ತರುವ ಕಾರ್ಯಾಚರಣೆಯಾಗಿದ್ದು, ಇದು ಸೌರವ್ಯೂಹದ ರಚನೆಯ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸಿದೆ.
- ಹಯಾಬುಸಾ 2 (Hayabusa2 – JAXA, 2014-2020): ಈ ಕಾರ್ಯಾಚರಣೆಯು ರ್ಯುಗು (Ryugu) ಕ್ಷುದ್ರಗ್ರಹದಿಂದ ಯಶಸ್ವಿಯಾಗಿ ಮಾದರಿಗಳನ್ನು ಸಂಗ್ರಹಿಸಿದೆ, ಇದರಲ್ಲಿ ಜೀವಸೃಷ್ಟಿಗೆ ಅಗತ್ಯವಾದ ಮೂಲಭೂತ ಅಂಶಗಳು ಕೂಡ ಸೇರಿವೆ.
- ಲೂಸಿ ಮಿಷನ್ (Lucy Mission – NASA, 2021-ಪ್ರಸ್ತುತ): ಇದು ಗುರುಗ್ರಹದ ಹಲವಾರು ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಕೈಗೊಂಡಿರುವ 12 ವರ್ಷಗಳ ಸುದೀರ್ಘ ಕಾರ್ಯಾಚರಣೆಯಾಗಿದೆ.
- ಹೆರಾ ಮಿಷನ್ (Hera Mission – ESA, 2024 ಉಡಾವಣೆ): DART ಮಿಷನ್ ನಿಂದ ಉಂಟಾದ ಪ್ರಭಾವದ ಕುಳಿಯನ್ನು ಅಧ್ಯಯನ ಮಾಡಲು ಮತ್ತು ಅದರ ಪಥ ಬದಲಾವಣೆಯ ಯಶಸ್ಸನ್ನು ವಿಶ್ಲೇಷಿಸಲು ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.
- ಟಿಯಾನ್ವೆನ್-2 (Tianwen-2 – ಚೀನಾ, 2025 ರ ಯೋಜನೆ): ಇದು ಭೂಮಿಯ ಸಮೀಪವಿರುವ ಕಾಮೋ’ಓಲೆವಾ (Kamo’oalewa) ಕ್ಷುದ್ರಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಲು ಯೋಜಿಸಲಾದ ಮಹತ್ವದ ಮಿಷನ್ ಆಗಿದೆ.
ರುದ್ರಮ್-II (RudraM-II)
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ರುದ್ರಮ್-II (RudraM-II) ಆಕಾಶದಿಂದ ಭೂಮೇಲ್ಮೈಗೆ ಹಾರುವ ಕ್ಷಿಪಣಿಯನ್ನು (Air-to-Surface Missile) ಯಶಸ್ವಿಯಾಗಿ ಪರೀಕ್ಷಿಸಿದೆ, ಇದು ದೇಶದ ರಕ್ಷಣಾ ಮತ್ತು ನಿಖರ-ದಾಳಿಯ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಿದೆ.
ರುದ್ರಮ್-II (RudraM-II) ಕ್ಷಿಪಣಿಯ ಬಗ್ಗೆ
- ಕ್ಷಿಪಣಿಯ ಪ್ರಕಾರ: ಇದು ಆಕಾಶದಿಂದ ಭೂಮಿಯ ಮೇಲ್ಮೈಗೆ ಹಾರುವ (Air-to-surface) ಕ್ಷಿಪಣಿಯಾಗಿದೆ.
- ಅಭಿವೃದ್ಧಿಪಡಿಸಿದವರು: ಹೈದರಾಬಾದ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ನೋಡಲ್ ಪ್ರಯೋಗಾಲಯವಾದ ಇಮಾರತ್ ಸಂಶೋಧನಾ ಕೇಂದ್ರ (RCI)ವು ಇದನ್ನು ಅಭಿವೃದ್ಧಿಪಡಿಸಿದೆ.
- ವೇಗ: ಈ ಕ್ಷಿಪಣಿಯು ಮ್ಯಾಕ್ 5 (Mach 5.5) ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
- ಕಾರ್ಯಾಚರಣೆಯ ವ್ಯಾಪ್ತಿ: ಇದು 300 ಕಿಲೋಮೀಟರ್ಗಳವರೆಗೆ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
- ಪೇಲೋಡ್ ಸಾಮರ್ಥ್ಯ: ಇದು 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
- ಮಹತ್ವ: ಇದನ್ನು 3 ರಿಂದ 15 ಕಿಲೋಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ಸುಖೋಯ್ನಂತಹ ಯುದ್ಧ ವಿಮಾನಗಳಿಂದ ಸುಲಭವಾಗಿ ಉಡಾವಣೆ ಮಾಡಬಹುದು.
- ಪ್ರಸ್ತುತ ಬಳಕೆಯಲ್ಲಿರುವ ಹಳೆಯ ರಷ್ಯಾ ಮೂಲದ Kh-31 ಆಂಟಿ-ರೇಡಿಯೇಶನ್ (ವಿಕಿರಣ-ವಿರೋಧಿ) ಕ್ಷಿಪಣಿಗಳ ಬದಲಿಗೆ ಈ ಹೊಸ ಕ್ಷಿಪಣಿಯನ್ನು ಭವಿಷ್ಯದಲ್ಲಿ ಸೇವೆಗೆ ನಿಯೋಜಿಸಲಾಗುತ್ತದೆ.
ನಿಮಗೆ ತಿಳಿದಿರಲಿ:
- ರುದ್ರಮ್ ಸರಣಿಯ ಹಿಂದಿನ ಆವೃತ್ತಿಯಾದ ರುದ್ರಮ್-I (RudraM-I) ಕ್ಷಿಪಣಿಯು 100 ರಿಂದ 250 ಕಿಲೋಮೀಟರ್ಗಳ ವ್ಯಾಪ್ತಿಯನ್ನು ಹೊಂದಿದ್ದು, ಮ್ಯಾಕ್ 2 ರವರೆಗಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.








ನಿಮ್ಮದೊಂದು ಉತ್ತರ