ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ನಿಯಂತ್ರಿಸಲು ಕೇರಳದ ಸಸ್ಯಶಾಸ್ತ್ರಜ್ಞರ ನಾವೀನ್ಯತೆ | ಶಾಹ್ತೂಷ್ ಉಣ್ಣೆ (Shahtoosh Wool) | ಆಪರೇಷನ್ ನಮ್ಖೋರ್ (Operation Numkhor) | ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ, 2025 (ISSAR-2025)

ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ನಿಯಂತ್ರಿಸಲು ಕೇರಳದ ಸಸ್ಯಶಾಸ್ತ್ರಜ್ಞರ ನಾವೀನ್ಯತೆ

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಮಲಬಾರ್ ಸಸ್ಯೋದ್ಯಾನ ಮತ್ತು ಸಸ್ಯ ವಿಜ್ಞಾನ ಸಂಸ್ಥೆಯ (MBGIPS) ಸಸ್ಯಶಾಸ್ತ್ರಜ್ಞ ಎನ್. ಅಲಿಮ್ ಯೂಸುಫ್ ಅವರು, ಕೇರಳದಲ್ಲಿನ ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಪತ್ತೆಹಚ್ಚುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಕ್ಕಾಗಿ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ರಾಷ್ಟ್ರೀಯ ಪ್ರಶಸ್ತಿ’ಯನ್ನು ಪಡೆದಿದ್ದಾರೆ.

ಈ ನಾವೀನ್ಯತೆಯ ಬಗ್ಗೆ:

  • ‘ನಿಯೋಫೈಟ್ ಐಡಿ’ (Neophyte ID) ಎಂಬ ಈ ಅಪ್ಲಿಕೇಶನ್, ಕೃತಕ-ಬುದ್ಧಿಮತ್ತೆ (AI) ಚಾಲಿತ ಮೊಬೈಲ್ ಸಾಧನವಾಗಿದ್ದು, ಇದು ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಗುರುತಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
  • ಈ ಆ್ಯಪ್ ಕೇರಳದಲ್ಲಿ ಕಂಡುಬರುವ ಸುಮಾರು 100 ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. 
  • ಆಕ್ರಮಣಕಾರಿ ಪ್ರಭೇದಗಳ ಹರಡುವಿಕೆಯನ್ನು ಗುರುತಿಸಲು ಇದು ಭೌಗೋಳಿಕ ಅಂತರಿಕ್ಷ ನಿಗಾ ವ್ಯವಸ್ಥೆಯನ್ನು ಬಳಸುತ್ತದೆ, ಇದು ವೈಜ್ಞಾನಿಕ ಸಂಶೋಧನೆಗಳಿಗೆ ಹಾಗೂ ಭವಿಷ್ಯದ ನೀತಿ-ರೂಪಿಸುವ ಕ್ರಮಗಳಿಗೆ ಸಹಕಾರಿಯಾಗಿದೆ.

ಆಕ್ರಮಣಕಾರಿ ಸಸ್ಯ ಪ್ರಭೇದಗಳು (Invasive plant species):

  • ವ್ಯಾಖ್ಯಾನ:- ಆಕ್ರಮಣಶೀಲ ಪ್ರಭೇದಗಳು ಸ್ಥಳೀಯವಲ್ಲದ ಜೀವಿಗಳಾಗಿದ್ದು (ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಸೂಕ್ಷ್ಮಜೀವಿಗಳು), ಅವು ಸ್ವಯಂ-ಪೋಷಕ ಸಂತತಿಯನ್ನು ಸ್ಥಾಪಿಸುತ್ತವೆ ಮತ್ತು ಪರಿಸರ, ಆರ್ಥಿಕತೆ ಅಥವಾ ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ.
  • ಪರಿಣಾಮಗಳು:- ಅವು ಜೀವವೈವಿಧ್ಯತೆಯ ನಷ್ಟ ಮತ್ತು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತವೆ ಹಾಗೂ ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ಗಮನಾರ್ಹವಾದ ಆರ್ಥಿಕ ನಷ್ಟಕ್ಕೆ ದಾರಿ ಮಾಡಿಕೊಡುತ್ತವೆ.
  • ಕಾರಣಗಳು:- ಜಾಗತೀಕರಣ (ಹೆಚ್ಚಿದ ವ್ಯಾಪಾರ ಮತ್ತು ಪ್ರಯಾಣ), ಮಾನವ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯು ಅವುಗಳ ಹರಡುವಿಕೆ ಮತ್ತು ಸ್ಥಾಪನೆಗೆ ಅನುಕೂಲ ಮಾಡಿಕೊಡುತ್ತವೆ.
  • ಭಾರತೀಯ ಸನ್ನಿವೇಶ:- ಭಾರತವು ‘ಲಂಟಾನಾ ಕ್ಯಾಮಾರಾ’ ಮತ್ತು ಜಲಕುಂಭಿ (ವಾಟರ್ ಹಯಸಿಂತ್)  ನಂತಹ ಸಸ್ಯಗಳು, ಹಾಗೂ ‘ಆಫ್ರಿಕಾದ ಮಾಗೂರು ಮೀನು (ಕ್ಯಾಟ್‌ಫಿಶ್)’ ಮತ್ತು ‘ನೈಲ್  ತಿಲಾಪಿಯಾ ಮೀನು’ದಂತಹ ಪ್ರಾಣಿಗಳನ್ನು ಒಳಗೊಂಡಂತೆ ಹಲವಾರು ವ್ಯಾಪಕ ಆಕ್ರಮಣಶೀಲ ಪ್ರಭೇದಗಳನ್ನು ಹೊಂದಿದೆ.

ಶಾಹ್ತೂಷ್ ಉಣ್ಣೆ (Shahtoosh Wool)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಶಾಹತೂಷ್ ಶಾಲುಗಳನ್ನು ಅಕ್ರಮವಾಗಿ ರಫ್ತು ಮಾಡಲು ಯತ್ನಿಸಿದ ಜೈಪುರ ಮೂಲದ ಕಲಾ ಪ್ರದರ್ಶನಾಲಯದ ಮಾಲೀಕನಿಗೆ ದೆಹಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

‘ಶಾಹ್ತೂಷ್ ಉಣ್ಣೆ’ಯ ಬಗ್ಗೆ:

  • ಇದನ್ನು ‘ಚಿರು’ (Chiru) ಎಂದೂ ಕರೆಯಲ್ಪಡುವ ಟಿಬೆಟಿನ ಹುಲ್ಲೆಯ ಕೂದಲಿನಿಂದ ಪಡೆಯಲಾಗುತ್ತದೆ.
  • ಈ ಉಣ್ಣೆಯನ್ನು ಪಡೆಯಲು ಆ ಪ್ರಾಣಿಯನ್ನು ಕೊಲ್ಲಲಾಗುತ್ತದೆ.
  • ಈ ಶಾಹ್ತೂಷ್ ವ್ಯಾಪಾರವನ್ನು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 

‘ಚಿರು’/ ಟಿಬೆಟಿನ ಹುಲ್ಲೆ (Tibetan Antelope) ಕುರಿತು:

    • ವೈಜ್ಞಾನಿಕ ಹೆಸರು:- ಪಾಂಥೋಲೋಪ್ಸ್ ಹಾಡ್ಗ್ಸೋನಿ (Pantholops hodgsonii)
    • ಚಿರು ಎನ್ನುವುದು ಟಿಬೆಟಿನ ಪ್ರಸ್ಥಭೂಮಿಯ (3,250-5,500 ಮೀಟರ್) ಎತ್ತರದ ಹುಲ್ಲುಗಾವಲು ಪ್ರದೇಶಗಳಿಗೆ ಸ್ಥಳೀಯವಾದ ಮಧ್ಯಮ-ಗಾತ್ರದ ಸೀಳುಗೊರಸಿನ ಸಸ್ತನಿಯಾಗಿದೆ (Bovid).
    • ಆವಾಸಸ್ಥಾನ:- ಅವು ಟಿಬೆಟ್, ಕಿಂಗ್ಹೈ ಮತ್ತು ಚೀನಾದ ಕ್ಸಿನ್‌ಜಿಯಾಂಗ್‌ನ ಶುಷ್ಕ, ಶೀತ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ, ಜೊತೆಗೆ ಭಾರತದ ಲಡಾಖ್‌ನಲ್ಲಿ (ಚಾಂಗ್‌ಥಾಂಗ್ ಪ್ರದೇಶ) ಇವುಗಳ ಸಣ್ಣ ಪ್ರಮಾಣದ ಸಂತತಿಯಿದೆ.
    • ದೈಹಿಕ ಲಕ್ಷಣ:- ಅವು ಬಿಳಿ ಹೊಟ್ಟೆಯೊಂದಿಗೆ ತೆಳು-ಕಂದು ಬಣ್ಣದಿಂದ ಕೆಂಪು-ಕಂದು ಬಣ್ಣದ ತುಪ್ಪಟವನ್ನು ಹೊಂದಿರುತ್ತವೆ. ಗಂಡು ಹುಲ್ಲೆಗಳ ಮುಖ ಮತ್ತು ಕಾಲುಗಳ ಮೇಲೆ ಕಪ್ಪು ಗುರುತುಗಳಿರುತ್ತವೆ, ಇವು ಹೆಣ್ಣು ಚಿಗರೆಗಳಲ್ಲಿ ಕಂಡುಬರುವುದಿಲ್ಲ.
  • ಸಂರಕ್ಷಣಾ ಸ್ಥಿತಿ:-
    • IUCN ಕೆಂಪು ಪಟ್ಟಿ – ಅಪಾಯದ ಅಂಚಿನಲ್ಲಿರುವ (NT)
    • ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 – ಅನುಸೂಚಿ I

CITES – ಅನುಬಂಧ I

ಆಪರೇಷನ್ ನಮ್ಖೋರ್ (Operation Numkhor)

ರಕ್ಷಣೆ/ಭದ್ರತೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ವಾಹನ ಕಳ್ಳಸಾಗಣೆ ಮತ್ತು ನಕಲಿ ನೋಂದಣಿ ಜಾಲಗಳ ವಿರುದ್ಧದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯಾದ ‘ಆಪರೇಷನ್ ನಮ್ಖೋರ್’ ಕುರಿತು ಮುಂಬರುವ ಇಂಡೋ-ಭೂತಾನ್ ಜಂಟಿ ‘ಕಸ್ಟಮ್ಸ್ ಗ್ರೂಪ್ ಸಭೆ’ಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಆಪರೇಷನ್ ನುಮ್ಖೋರ್ ಬಗ್ಗೆ:

  • ಪ್ರಾರಂಭಿಸಿದವರು:- ಸೆಪ್ಟೆಂಬರ್ 2025 ರಲ್ಲಿ ಕೊಚ್ಚಿಯ ಸುಂಕ (ತಡೆಗಟ್ಟುವ) ಆಯುಕ್ತಾಲಯ ಇದನ್ನು ಆರಂಭಿಸಿತು.
  • ಉದ್ದೇಶ:- ಭೂತಾನ್‌ನಿಂದ ಉನ್ನತ-ಮಟ್ಟದ ಐಷಾರಾಮಿ ವಾಹನಗಳ ಕಳ್ಳಸಾಗಣೆಯನ್ನು ಒಳಗೊಂಡ ವ್ಯಾಪಕ ಜಾಲವನ್ನು ಪತ್ತೆಹಚ್ಚುವುದು.
  • ಈ ಕಾರ್ಯಾಚರಣೆಯು ಭಾರಿ ಕಸ್ಟಮ್ಸ್ ಸುಂಕಗಳನ್ನು ತಪ್ಪಿಸುವ ಮೂಲಕ ಮತ್ತು ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತದಾದ್ಯಂತ ಅಕ್ರಮವಾಗಿ ನೋಂದಾಯಿಸಲಾದ 15,000 ಕ್ಕೂ ಹೆಚ್ಚು ವಾಹನಗಳನ್ನು ಪತ್ತೆಹಚ್ಚಿದೆ.

ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ, 2025 (ISSAR-2025)

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ಬಾಹ್ಯಾಕಾಶಯಾನ ಮಿಷನ್ ಕಾರ್ಯನಿರ್ವಹಣೆ (SMOPS-2026) ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ, ಇಸ್ರೋ ‘ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ 2025′ (Indian Space Situational Awareness Report – ISSAR-2025) ಅನ್ನು ಬಿಡುಗಡೆ ಮಾಡಿದೆ.

2025ರ ಪ್ರಮುಖ ಜಾಗತಿಕ ಮತ್ತು ಭಾರತೀಯ ಅಂಕಿಅಂಶಗಳು:

  • ಜಾಗತಿಕ ಚಟುವಟಿಕೆ:- 2025 ರಲ್ಲಿ ದಾಖಲೆಯ 315 ಯಶಸ್ವಿ ಉಡಾವಣೆಗಳ ಮೂಲಕ 4,198 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.
  • ಭಾರತೀಯ ಸನ್ನಿವೇಶ: ಭಾರತವು ತನ್ನ 100ನೇ ಕಾರ್ಯಾಚರಣೆ (GSLV-F15/NVS-02) ಸೇರಿದಂತೆ 5 ಉಡಾವಣೆಗಳನ್ನು ದಾಖಲಿಸಿದೆ. ನಿಸಾರ್ (NISAR) ಜಂಟಿ ಕಾರ್ಯಾಚರಣೆ, ಸ್ಪೇಡೆಕ್ಸ್ (SpaDeX) ಸ್ವಾಯತ್ತ ಜೋಡಣಾ ಪರೀಕ್ಷೆ (Autonomous docking test) ಮತ್ತು ‘ಆದಿತ್ಯ-ಎಲ್1’ ನ ನಿರಂತರ ಕಾರ್ಯಾಚರಣೆಗಳು ಪ್ರಮುಖ ಸಾಧನೆಗಳಲ್ಲಿ ಸೇರಿವೆ.
  • ಸುರಕ್ಷತೆ ಮತ್ತು ಅನ್ವೇಷಣೆ: ಇಸ್ರೋ, ನಿಸಾರ್ ಉಪಗ್ರಹವನ್ನು ಉಡಾವಣೆ ಮಾಡಿದೆ ಹಾಗೂ ತನ್ನ ‘ತ್ಯಾಜ್ಯ ಮುಕ್ತ ಬಾಹ್ಯಾಕಾಶ ಕಾರ್ಯಾಚರಣೆ 2030’ (DFSM 2030) ಅನ್ನು ಮುನ್ನಡೆಸುತ್ತಿದೆ.
  • ಮಾನವ ಬಾಹ್ಯಾಕಾಶಯಾನ: ಆಕ್ಸಿಯಮ್-4 (Axiom-4) ಮಿಷನ್ ನ ನೇತೃತ್ವವನ್ನು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ವಹಿಸಿಕೊಳ್ಳುವ ಮೂಲಕ ಮಾನವ ಬಾಹ್ಯಾಕಾಶಯಾನದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts