ನದಿ ಜಲಾನಯನ ಪ್ರದೇಶ ನಿರ್ವಹಣಾ ಯೋಜನೆ | “ಬಸವೇಶ್ವರ” – ಕರ್ನಾಟಕದ ಸಾಂಸ್ಕೃತಿಕ ನಾಯಕ | ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-III (PMGSY-III) | “ಜೊನ್ನಗಿರಿ”- ಭಾರತದ ಮೊದಲ ದೊಡ್ಡ-ಪ್ರಮಾಣದ ಖಾಸಗಿ ಚಿನ್ನದ ಗಣಿಗಾರಿಕೆ ಯೋಜನೆ

ನದಿ ಜಲಾನಯನ ಪ್ರದೇಶ ನಿರ್ವಹಣಾ ಯೋಜನೆ

ಆಡಳಿತ ಮತ್ತು ರಾಜಕೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತ ಸರ್ಕಾರವು 16ನೇ ಹಣಕಾಸು ಆಯೋಗದ ಅವಧಿಗೆ, ಅಂದರೆ 2026-27 ರಿಂದ 2030-31 ರವರೆಗೆ ‘ನದಿ ಜಲಾನಯನ ಪ್ರದೇಶ ನಿರ್ವಹಣಾ ಯೋಜನೆ’ಯನ್ನು ಮುಂದುವರಿಸಲು ಅಧಿಕೃತವಾಗಿ ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು ₹2,183 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

ನದಿ ಜಲಾನಯನ ಪ್ರದೇಶ ನಿರ್ವಹಣಾ ಯೋಜನೆಯ (RBM – Basin Management Scheme) ಬಗ್ಗೆ:

  • ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ‘ಕೇಂದ್ರ ವಲಯದ ಯೋಜನೆ’ಯಾಗಿದೆ.
  • ಅನುಷ್ಠಾನ:- ಕೇಂದ್ರ ಜಲ ಶಕ್ತಿ ಸಚಿವಾಲಯದ ನೇತೃತ್ವದಲ್ಲಿ ಈ ಯೋಜನೆ ಜಾರಿಯಾಗುತ್ತದೆ.
  • ಉದ್ದೇಶ:- ಕೇವಲ ನದಿಯನ್ನಷ್ಟೇ ಅಲ್ಲದೆ ಅದರ ಉಪನದಿಗಳು ಮತ್ತು ಅಂತರ್ಜಲ ಸೇರಿದಂತೆ ಇಡೀ ನದಿಯ ವ್ಯವಸ್ಥೆಯನ್ನು ‘ಸಮಗ್ರ ಜಲವೈಜ್ಞಾನಿಕ ಘಟಕ’ಗಳಾಗಿ ನಿರ್ವಹಿಸುವ ಸಮಗ್ರ ದೃಷ್ಟಿಕೋನವನ್ನು ಇದು ಅಳವಡಿಸಿಕೊಂಡಿದೆ.

ಪ್ರಮುಖ ಬೆಳವಣಿಗೆಗಳು (2026–2031):

  • ಹೆಚ್ಚುವರಿ ಅನುದಾನ:- 16ನೇ ಹಣಕಾಸು ಆಯೋಗದ ಅವಧಿಗೆ (2026-2031) ಈ ಯೋಜನೆಯ ಬಜೆಟ್ ಅನ್ನು ₹2,183 ಕೋಟಿಗೆ ಹೆಚ್ಚಿಸಲಾಗಿದೆ.
  • ಕಾರ್ಯತಂತ್ರದ ಆದ್ಯತೆ:- ರಾಷ್ಟ್ರೀಯ ಭದ್ರತೆ ಮತ್ತು ಗಡಿಯಾಚೆಗಿನ ಜಲ-ನಿರ್ವಹಣೆಗಾಗಿ, ಈ ಯೋಜನೆಯಲ್ಲಿ ಈಶಾನ್ಯ ಪ್ರದೇಶ ಮತ್ತು ಸಿಂಧೂ ನದಿ ಜಲಾನಯನ ಪ್ರದೇಶಗಳಿಗೆ (ಜಮ್ಮು-ಕಾಶ್ಮೀರ/ಲಡಾಖ್) ವಿಶೇಷ ಆದ್ಯತೆ ನೀಡಲಾಗಿದೆ.
  • ತಂತ್ರಜ್ಞಾನದ ಆಧುನೀಕರಣ:- ಅತ್ಯುತ್ತಮ ನದಿ ನಿರ್ವಹಣಾ ಯೋಜನೆಗಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS), ಲೈಡಾರ್ (LiDAR) ಮತ್ತು ಡ್ರೋನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

“ಬಸವೇಶ್ವರ” – ಕರ್ನಾಟಕದ ಸಾಂಸ್ಕೃತಿಕ ನಾಯಕ

ಕಲೆ ಮತ್ತು ಸಂಸ್ಕೃತಿ

ಇತ್ತೀಚೆಗೆ ಸುದ್ದಿಯಲ್ಲಿ:

  • ‘ಬಸವ ಜಯಂತಿ’ಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳನ್ನು ಸಲ್ಲಿಸಿದರು.

ಮಹಾತ್ಮ ಬಸವೇಶ್ವರರ ಕುರಿತು:

  • ಬಸವೇಶ್ವರರನ್ನು ಜನಪ್ರಿಯವಾಗಿ ‘ಬಸವಣ್ಣ’ ಎಂತಲೂ ಕರೆಯಲಾಗುತ್ತದೆ.
  • ಇವರು 12ನೇ ಶತಮಾನದ ಪ್ರಮುಖ ತತ್ವಜ್ಞಾನಿ, ಸಾಮಾಜಿಕ ಸುಧಾರಕ ಮತ್ತು ‘ಭಕ್ತಿ ಚಳುವಳಿಯ’ ಪ್ರಮುಖ ರೂವಾರಿಯಾಗಿದ್ದರು. ಇವರು ಪ್ರಮುಖವಾಗಿ ಇಂದಿನ ಕಲ್ಯಾಣ ಕರ್ನಾಟಕ ಭಾಗದ ‘ಕಲ್ಯಾಣ’ (ಈಗಿನ ಬಸವ ಕಲ್ಯಾಣ)ದಲ್ಲಿ ಸಕ್ರಿಯರಾಗಿದ್ದರು.
  • ಲಿಂಗಾಯತ ಚಳುವಳಿ:- ಇವರನ್ನು ‘ಲಿಂಗಾಯತ ಧರ್ಮದ ಸಂಸ್ಥಾಪಕ’ ಎಂದು ಪರಿಗಣಿಸಲಾಗಿದೆ. ಇವರು ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ತಾರತಮ್ಯವನ್ನು ಬಲವಾಗಿ ವಿರೋಧಿಸಿದರು.
  • ಇವರು ಕಲಚೂರಿ ರಾಜವಂಶದ 2ನೇ ಬಿಜ್ಜಳ ರಾಜನ ಆಸ್ಥಾನದಲ್ಲಿ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದರು. 
  • ಇವರ ಬೋಧನೆಗಳು ಮತ್ತು ತತ್ವಗಳು ‘ವಚನ’ಗಳ ರೂಪದಲ್ಲಿರುವ ಕಾವ್ಯಾತ್ಮಕ ರಚನೆಗಳಲ್ಲಿ ಸಂರಕ್ಷಿಸಲ್ಪಟ್ಟಿವೆ.
  • ಬಸವೇಶ್ವರರು ‘ಇಷ್ಟಲಿಂಗ’ ಪರಿಕಲ್ಪನೆಯನ್ನು ಪರಿಚಯಿಸಿದರು. ಇದು ಜಾತಿ ಅಥವಾ ಯಾವುದೇ ಸಾಮಾಜಿಕ ವಿಭಜನೆಗಳನ್ನು ಮೀರಿ, ಭಗವಂತನೊಂದಿಗೆ ನೇರ ಹಾಗೂ ವೈಯಕ್ತಿಕ ಸಂಪರ್ಕವನ್ನು ಹೊಂದುವ ಮಾರ್ಗವನ್ನು ಪ್ರತಿಪಾದಿಸಿತು.
  • ಅನುಭವ ಮಂಟಪ: ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆಸಲು ಇವರು ‘ಅನುಭವ ಮಂಟಪ’ವನ್ನು ಸ್ಥಾಪಿಸಿದರು. ಇದನ್ನು ವಿಶ್ವದ ‘ಮೊದಲ ಸಂಸತ್ತು’ ಎಂದು ಕರೆಯಲಾಗುತ್ತದೆ. ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ಹಿನ್ನೆಲೆಯ ಜನರು ಯಾವುದೇ ತಾರತಮ್ಯವಿಲ್ಲದೆ ಭಾಗವಹಿಸಬಹುದಾಗಿದ್ದ ಇದೊಂದು ಪ್ರವರ್ತಕ ವೇದಿಕೆಯಾಗಿತ್ತು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-III (PMGSY-III)

ಸರ್ಕಾರಿ ಉಪಕ್ರಮಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಕೇಂದ್ರ ಸಚಿವ ಸಂಪುಟವು ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-III’ (PMGSY-III) ಅನ್ನು ಮಾರ್ಚ್ 2025 ರ ನಂತರ 2028-29 ರವರೆಗೆ ವಿಸ್ತರಿಸಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಬಗ್ಗೆ:

  • ಪ್ರಾರಂಭ:- 2000.
  • ಇದೊಂದು ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿದೆ.
  • ಅನುಷ್ಠಾನ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ.
  • ಉದ್ದೇಶ:- ಗ್ರಾಮೀಣ ಭಾಗಗಳಲ್ಲಿ ಸಂಪರ್ಕವಿಲ್ಲದ ವಸತಿ ಪ್ರದೇಶಗಳಿಗೆ ‘ಎಲ್ಲಾ ಹವಾಮಾನಗಳಿಗೂ ಯೋಗ್ಯವಾದ ರಸ್ತೆ ಸಂಪರ್ಕ’ವನ್ನು ಒದಗಿಸುವುದು.

PMGSY ಯೋಜನೆಯು ಬಹು ಹಂತಗಳಲ್ಲಿ ವಿಕಸನಗೊಂಡಿದೆ:

  • PMGSY-I (2000):- ಸಂಪರ್ಕವಿಲ್ಲದ ವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವತ್ತ ಗಮನಹರಿಸಿತ್ತು.
  • PMGSY-II (2013):- ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆಗಳ ಉನ್ನತೀಕರಣದ ಗುರಿಯನ್ನು ಹೊಂದಿತ್ತು.
  • PMGSY-III (2019): ಗ್ರಾಮೀಣ ರಸ್ತೆ ಜಾಲಗಳ ಬಲವರ್ಧನೆ ಅಥವಾ ಸಂಯೋಜನೆಯ ಮೇಲೆ ಕೇಂದ್ರೀಕರಿಸುತ್ತದೆ.

ಪ್ರಾಮುಖ್ಯತೆ:

  • ಈ ವಿಸ್ತರಣೆಯು, ಉದ್ದೇಶಿತ ಗ್ರಾಮೀಣ ರಸ್ತೆಗಳ ಉನ್ನತೀಕರಣವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
  • ಇದು ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುತ್ತದೆ ಹಾಗೂ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
  • ಇದು ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಪ್ರವೇಶವನ್ನು ಹೆಚ್ಚಿಸುತ್ತದೆ. ಜೊತೆಗೆ ‘ವಿಕಸಿತ ಭಾರತ 2047’ರ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣ-ನಗರ ವಿಭಜನೆಯನ್ನು ಕಡಿಮೆ ಮಾಡುವ ಮೂಲಕ ಅಂತರ್ಗತ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

“ಹಳದಿ ರೇಖೆ” (‘Yellow Line’) – ಇಸ್ರೇಲ್‌ ಮತ್ತು ಲೆಬನಾನ್‌ ನಡುವೆ

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದವಾದ ಸ್ವಲ್ಪ ದಿನಗಳ ನಂತರ, ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ‘ಹಳದಿ ರೇಖೆ’ಯ (Yellow Line) ಸ್ಥಾಪನೆಯನ್ನು ಘೋಷಿಸಿದೆ.

‘ಹಳದಿ ರೇಖೆ’ (Yellow Line) ಎಂದರೇನು?

  • ಇದು ಸಂಘರ್ಷದ ವಲಯದಲ್ಲಿ ನಿಯಂತ್ರಣ ಪ್ರದೇಶಗಳನ್ನು ಪ್ರತ್ಯೇಕಿಸಲು ಇಸ್ರೇಲ್ ರಚಿಸಿರುವ ಸೇನಾ ಗಡಿರೇಖೆಯಾಗಿದೆ.
  • ಇದು ಇಸ್ರೇಲಿ ಸೇನಾ ಪಡೆಗಳ ನಿಯೋಜನೆಯ ಮಿತಿಯನ್ನು ಗುರುತಿಸುವ ತಾತ್ಕಾಲಿಕ ಕಾರ್ಯಾಚರಣೆಯ ಗಡಿಯಾಗಿದೆ.
  • ಈ ರೇಖೆಯನ್ನು ದಾಟುವ ಯಾವುದೇ ಚಲನವಲನವನ್ನು ಸಂಭಾವ್ಯ ಭದ್ರತಾ ಅಪಾಯ ಎಂದು ಪರಿಗಣಿಸಲಾಗುತ್ತದೆ.

‘ಗಾಜಾ’ದೊಂದಿಗೆ ಇದೇ ರೀತಿಯ ಹಳದಿ ರೇಖೆಯನ್ನು ಇಸ್ರೇಲ್ ಬಳಸಲಾಗುತ್ತಿದೆ:

  • ಅಕ್ಟೋಬರ್ 2023 ರಿಂದ ಗಾಜಾದಲ್ಲಿಯೂ ಇದೇ ರೀತಿಯ ರೇಖೆಯನ್ನು ಬಳಸಲಾಗುತ್ತಿದೆ.
  • ಅಲ್ಲಿ, ಇದು ಇಸ್ರೇಲ್-ನಿಯಂತ್ರಿತ ಪ್ರದೇಶಗಳು ಮತ್ತು ಹಮಾಸ್-ನಿಯಂತ್ರಿತ ವಲಯಗಳ ನಡುವಿನ ಪ್ರದೇಶವನ್ನು ಪರಿಣಾಮಕಾರಿಯಾಗಿ ವಿಭಜಿಸಿದೆ.

“ಜೊನ್ನಗಿರಿ”- ಭಾರತದ ಮೊದಲ ದೊಡ್ಡ-ಪ್ರಮಾಣದ ಖಾಸಗಿ ಚಿನ್ನದ ಗಣಿಗಾರಿಕೆ ಯೋಜನೆ

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ‘ಜೊನ್ನಗಿರಿ’ಯಲ್ಲಿ ಭಾರತದ ಮೊದಲ ದೊಡ್ಡ-ಪ್ರಮಾಣದ ಖಾಸಗಿ ಚಿನ್ನದ ಗಣಿಯನ್ನು ಇತ್ತೀಚಿಗೆ ಪ್ರಾರಂಭಿಸಲಾಗಿದೆ. 
  • ಇದು ಭಾರತದ ಚಿನ್ನದ ನಿಕ್ಷೇಪಗಳು, ಉತ್ಪಾದನಾ ಕೊರತೆ ಮತ್ತು ದೇಶೀಯ ಗಣಿಗಾರಿಕೆಯ ಕಾರ್ಯತಂತ್ರದ ಪ್ರಾಮುಖ್ಯತೆಯತ್ತ ಮರಳಿ ಗಮನಹರಿಸುವಂತೆ ಮಾಡಿದೆ.

‘ಚಿನ್ನ’ದ ಬಗ್ಗೆ ಪ್ರಮುಖ ಮಾಹಿತಿ:

  • ಪ್ರಕೃತಿಯಲ್ಲಿ ತನ್ನ ಮೂಲ ರೂಪದಲ್ಲಿಯೇ ದೊರೆಯುವ ಲೋಹವಾಗಿದೆ:- ಇದು ಮೃದುವಾದ, ಸಾಂದ್ರವಾದ, ಹೆಚ್ಚು ನಮ್ಯವಾದ (ತಂತಿಯಂತೆ ಎಳೆಯಬಹುದಾದ) ಮತ್ತು ಸವೆತ-ನಿರೋಧಕ ಬೆಲೆಬಾಳುವ ಲೋಹವಾಗಿದೆ.
  • ಚಿನ್ನವು ತೈಲದ ನಂತರ ಭಾರತದ ಎರಡನೇ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತುವಾಗಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ವಾರ್ಷಿಕವಾಗಿ ಸುಮಾರು 1,000 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ.
  • ದೇಶದ ಒಟ್ಟು ಚಿನ್ನದ ನಿಕ್ಷೇಪಗಳಲ್ಲಿ ಬಿಹಾರವು ಸುಮಾರು 43% ರಷ್ಟು ಪಾಲು ಹೊಂದುವ ಮೂಲಕ ಅಗ್ರ ಸ್ಥಾನದಲ್ಲಿದೆ, ತದನಂತರ ರಾಜಸ್ಥಾನ (ಸುಮಾರು 25%) ಮತ್ತು ಕರ್ನಾಟಕ (ಸುಮಾರು 20%) ಸ್ಥಾನ ಪಡೆದಿವೆ.
  • ಭಾರತದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಕರ್ನಾಟಕವು ಸುಮಾರು 99% ರಷ್ಟು ಪಾಲನ್ನು ಹೊಂದಿದೆ. ಪ್ರಧಾನವಾಗಿ ರಾಯಚೂರಿನ ‘ಹಟ್ಟಿ ಚಿನ್ನದ ಗಣಿ’ ಯ ಮೂಲಕ ಈ ಉತ್ಪಾದನೆ ನಡೆಯುತ್ತದೆ.
  • ಜಾಗತಿಕ ಚಿನ್ನದ ಉತ್ಪಾದನೆಯಲ್ಲಿ ಸುಮಾರು 10% ರಷ್ಟು ಪಾಲಿನೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ ಮತ್ತು ಆಸ್ಟ್ರೇಲಿಯಾ ಇವೆ.
  • ಸ್ವಿಟ್ಜರ್ಲೆಂಡ್ ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ದೇಶವಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts