ವಿಶ್ವ ಬೌದ್ಧ ಶಾಂತಿ ಸಮ್ಮೇಳನ, 2026
ಇತಿಹಾಸ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಉದ್ಘಾಟನಾ ಸಮಾರಂಭಕ್ಕೆ ಹೈದರಾಬಾದ್ ಆತಿಥ್ಯ ವಹಿಸಿತ್ತು.
ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಬಗ್ಗೆ:
- ಆಯೋಜಕರು:- ‘ವಿಯೆಟ್ನಾಂ ಬೌದ್ಧ ಸಂಘ’ದ ಸಹಯೋಗದೊಂದಿಗೆ, ‘ಬುದ್ಧವನಂ’ ಮತ್ತು ‘ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು ಜಂಟಿಯಾಗಿ ಇದನ್ನು ಆಯೋಜಿಸಿದ್ದವು.
- ಉದ್ದೇಶ:- ವಿಶ್ವದ ಬೌದ್ಧ ರಾಷ್ಟ್ರಗಳಿಗೆ ‘ಬುದ್ಧವನಂ’ ಅನ್ನು ಒಂದು ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ (ಥೀಮ್ ಪಾರ್ಕ್)ವನ್ನಾಗಿ ಪ್ರದರ್ಶಿಸುವುದು.
‘ಬುದ್ಧವನಂ’ ಬಗ್ಗೆ:
- ಇದು ತೆಲಂಗಾಣದಲ್ಲಿದ್ದು, ಭಾರತದ ಮೊದಲ ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ವಾಗಿದೆ.
- ಇದು ಕೃಷ್ಣಾ ನದಿಯ ದಡದಲ್ಲಿ ನೆಲೆಗೊಂಡಿದೆ.
- ಇದು ಕಲೆ, ಶಿಲ್ಪಗಳು, ಧ್ಯಾನ ವಲಯಗಳು ಮತ್ತು ವಿಷಯಾಧಾರಿತ ರಚನೆಗಳ ಮೂಲಕ ಭಗವಾನ್ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಅನಾವರಣಗೊಳಿಸುತ್ತದೆ.
- ಇದನ್ನು ‘ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು (TSTDC) ಅಭಿವೃದ್ಧಿಪಡಿಸಿದೆ.
ಆಂಧ್ರಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ವನ್ಯಜೀವಿ ನಿರ್ವಹಣಾ ಪ್ರಾಧಿಕಾರ ಮತ್ತು ‘ಕೋರಿಂಗಾ ವನ್ಯಜೀವಿ ಅಭಯಾರಣ್ಯ’ದ ಅಧಿಕಾರಿಗಳು ಕಾಕಿನಾಡ ಕೊಲ್ಲಿಯ ‘ಹೋಪ್ ದ್ವೀಪ’ದಲ್ಲಿ ಸುಮಾರು 20,000 ಆಲಿವ್ ರಿಡ್ಲೆ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ.
ಆಲಿವ್ ರಿಡ್ಲೆ ಕಡಲಾಮೆಗಳ ಬಗ್ಗೆ:
- ಆಲಿವ್ ರಿಡ್ಲೆ ಕಡಲಾಮೆಗಳು ಪ್ರಪಂಚದಲ್ಲಿಯೇ ಕಂಡುಬರುವ ಎಲ್ಲಾ ಕಡಲಾಮೆಗಳಲ್ಲಿ ಅತಿ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪ್ರಭೇದವಾಗಿವೆ.
- ಭಾರತದಲ್ಲಿನ ಪ್ರಮುಖ ಗೂಡುಕಟ್ಟುವ ತಾಣಗಳು:-
- ರುಷಿಕುಲ್ಯ ರುಕರಿ ಕರಾವಳಿ (ಒಡಿಶಾ),
- ಗಹಿರ್ಮಾತಾ ಕಡಲತೀರ (ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ),
- ದೇಬಿ ನದಿಯ ಮುಖಜ ಭೂಮಿ.
- ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರು ಇರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.
- ‘ಅರಿಬಾಡಾ’:- ಸಾವಿರಾರು ಹೆಣ್ಣು ಆಮೆಗಳು ಒಂದೇ ಕಡಲತೀರದಲ್ಲಿ ಒಗ್ಗೂಡಿ ಮೊಟ್ಟೆಯಿಡುವ ‘ಅರಿಬಾಡಾ’ ಎಂಬ ವಿಶಿಷ್ಟ ಸಾಮೂಹಿಕ ಗೂಡುಕಟ್ಟುವ ಪ್ರಕ್ರಿಯೆಗೆ ಇವು ಹೆಸರುವಾಸಿಯಾಗಿವೆ.
- ಮಾಂಸಾಹಾರಿಗಳಾಗಿವೆ:- ಮುಖ್ಯವಾಗಿ ಜೆಲ್ಲಿ ಮೀನು, ಸೀಗಡಿ ಮುಂತಾದವುಗಳನ್ನು ತಿನ್ನುತ್ತವೆ.
- ಭ್ರೂಣ ವಿಕಸನದ ಅವಧಿಯಲ್ಲಿ ಮರಳು ಮತ್ತು ವಾತಾವರಣದ ತಾಪಮಾನವನ್ನು ಅವಲಂಬಿಸಿ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಒಡೆಯುತ್ತವೆ.
- ಪ್ರಮುಖ ಅಪಾಯಗಳು:- ಮಾಂಸ ಮತ್ತು ಚಿಪ್ಪಿಗಾಗಿ ಬೇಟೆಯಾಡುವುದು ಹಾಗೂ ಬೃಹತ್ ಯಾಂತ್ರೀಕೃತ ಮೀನುಗಾರಿಕಾ ಹಡಗುಗಳ (Trawlers) ಬಳಕೆಯಂತಹ ಮಾನವ-ಪ್ರೇರಿತ ಚಟುವಟಿಕೆಗಳು ಇವುಗಳ ಅಸ್ತಿತ್ವಕ್ಕೆ ತೀವ್ರ ಕುತ್ತು ತಂದಿವೆ.
- ಸಂರಕ್ಷಣಾ ಸ್ಥಿತಿಗತಿ:-
- IUCN ಕೆಂಪು ಪಟ್ಟಿ: ದುರ್ಬಲ (VU).
- ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972: ಅನುಸೂಚಿ I.
- CITES: ಅನುಬಂಧ I.
ಕೋರಿಂಗಾ ವನ್ಯಜೀವಿ ಅಭಯಾರಣ್ಯದ ಬಗ್ಗೆ:
- ಇದು ಆಂಧ್ರಪ್ರದೇಶದ ಕಾಕಿನಾಡದ ಸಮೀಪವಿರುವ, ಭಾರತದ ಎರಡನೇ ಅತ್ಯಂತ ದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ.
- ಗೋದಾವರಿ ನದಿಯು ಬಂಗಾಳಕೊಲ್ಲಿಯನ್ನು ಸೇರುವ ‘ಗೋದಾವರಿ ಅಳಿವೆ’ ಪ್ರದೇಶದಲ್ಲಿ ಈ ಅಭಯಾರಣ್ಯವಿದೆ.
- ಸೂಚಕ ಪ್ರಭೇದಗಳು:- ಮೀನುಗಾರ ಬೆಕ್ಕು (Fishing cat), ನಯವಾದ-ತುಪ್ಪಳದ ನೀರುನಾಯಿ (Smooth-coated otter), ಮತ್ತು ಚಿನ್ನದ-ಬಣ್ಣದ ನರಿ (Golden jackal).
“ತುಂಗುಸ್ಕಾ” ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ರಕ್ಷಣಾ ಸಚಿವಾಲಯವು ‘ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ’ಯ ಖರೀದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ.
ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಬಗ್ಗೆ:
- ತುಂಗುಸ್ಕಾ ಒಂದು ಸೋವಿಯತ್-ಮೂಲದ (1980 ರ ದಶಕದ ಆರಂಭದಲ್ಲಿ ಸೇರ್ಪಡೆಗೊಂಡ), ‘ಟ್ರ್ಯಾಕ್-ಆಧಾರಿತ’ (ಯುದ್ಧ ಟ್ಯಾಂಕ್ಗಳಂತೆ ಚಲಿಸುವ) ಮತ್ತು ಸ್ವಯಂಚಾಲಿತ ವಾಯು ರಕ್ಷಣಾ ವ್ಯವಸ್ಥೆಯಾಗಿದೆ.
- ಉದ್ದೇಶ:- ಕಡಿಮೆ ಎತ್ತರದಲ್ಲಿ ಹಾರುವ ವೈಮಾನಿಕ ಅಪಾಯಗಳಿಂದ ಭೂಸೇನೆಯನ್ನು ರಕ್ಷಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
- ನವೀಕರಿಸಿದ ಆವೃತ್ತಿಗಳು:- 2K22M, ಮತ್ತು 2K22M1. ಇವುಗಳು ಸುಧಾರಿತ ದಾಳಿ-ನಿಯಂತ್ರಣ ವ್ಯವಸ್ಥೆ ಮತ್ತು ಹೆಚ್ಚಿನ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿವೆ.
- ವಿಶೇಷತೆ:- ಇದು ಕೇವಲ ಒಂದೇ ವೇದಿಕೆಯಲ್ಲಿ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ವಿಶಿಷ್ಟವಾಗಿ ಸಂಯೋಜಿಸಿರುವ ಜಗತ್ತಿನ ಪ್ರಬಲ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಕೆಂಪು-ಕಿರೀಟದ ಛಾವಣಿ ರೀತಿಯ ಚಿಪ್ಪಿನ ಆಮೆ (Red-Crowned Roofed Turtle)
ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಒಂದು ಕಾಲದಲ್ಲಿ ಗಂಗಾ ನದಿಯ ‘ಅಮೂಲ್ಯ ರತ್ನ’ದಂತಿದ್ದ ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯು, ಇದೀಗ ವೇಗವಾಗಿ ಕ್ಷೀಣಿಸುತ್ತಿರುವ ಆವಾಸಸ್ಥಾನದಲ್ಲಿ ಬದುಕುಳಿಯಲು ತೀವ್ರ ಹೋರಾಟ ನಡೆಸುತ್ತಿದೆ.
ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯ ಬಗ್ಗೆ:
- ವೈಜ್ಞಾನಿಕ ಹೆಸರು:- ಬತಗೂರ್ ಕಚುಗಾ (Batagur kachuga)
- ಕುಲ (Genus):- ಬಟಗೂರ್ (ಭಾರತದಲ್ಲಿ ಕಂಡುಬರುವ ಮೂರು ದೊಡ್ಡ ಸಿಹಿನೀರಿನ ಆಮೆ ಪ್ರಭೇದಗಳಲ್ಲಿ ಇದೂ ಒಂದಾಗಿದೆ).
- ಆವಾಸಸ್ಥಾನ:- ಭಾರತವನ್ನು ಹೊರತುಪಡಿಸಿ, ಬಾಂಗ್ಲಾದೇಶ ಮತ್ತು ನೇಪಾಳಗಳು ಕೇವಲ ಅಲ್ಪಪ್ರಮಾಣದ ಆವಾಸಸ್ಥಾನವನ್ನು ಹೊಂದಿವೆ, ಹಾಗೂ ಅಲ್ಲಿ ಯಾವುದೇ ಖಚಿತವಾದ ವನ್ಯ-ಸಂತತಿ ಕಂಡುಬಂದಿಲ್ಲ.
- ಪ್ರಾಥಮಿಕವಾಗಿ ಸಸ್ಯಾಹಾರಿಯಾಗಿದೆ:- ಜಲಸಸ್ಯಗಳನ್ನು ನಿಯಂತ್ರಿಸಲು ಮತ್ತು ಪೋಷಕಾಂಶಗಳ ಮರುಬಳಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಸಮತೋಲಿತ ಸಿಹಿನೀರಿನ ಪರಿಸರ ವ್ಯವಸ್ಥೆಗೆ ಬೆಂಬಲ ನೀಡುತ್ತದೆ.
- ಪ್ರಮುಖ ಅಪಾಯಗಳು:- ವಯಸ್ಕ ಆಮೆಗಳು ಮತ್ತು ಮೊಟ್ಟೆಗಳ ಅತಿಯಾದ ಬೇಟೆ, ಅಕ್ರಮ ವ್ಯಾಪಾರ ಮತ್ತು ಆವಾಸಸ್ಥಾನದ ನಾಶ.
- ಸಂರಕ್ಷಣಾ ಸ್ಥಿತಿಗತಿ:
- IUCN ಕೆಂಪು ಪಟ್ಟಿ:- ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR).
- ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972:- ಅನುಸೂಚಿ I.
- CITES:- ಅನುಬಂಧ I.
ಪಿಎಂ ಇ-ಡ್ರೈವ್ (PM e-DRIVE) ಯೋಜನೆ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಸರ್ಕಾರವು ಇ-ಸ್ಕೂಟರ್ಗಳು ಮತ್ತು ಇ-ರಿಕ್ಷಾಗಳಿಗೆ ಹೊಸ ಗಡುವು ಮತ್ತು ಘಟಕದ ಮಿತಿಗಳನ್ನು ನಿಗದಿಪಡಿಸಲು PM E-DRIVE ಯೋಜನೆಯನ್ನು ಪರಿಷ್ಕರಿಸಿದೆ.
ಪಿಎಂ ಇ-ಡ್ರೈವ್ (PM e-DRIVE) ಯೋಜನೆಯ ಬಗ್ಗೆ:
- PM e-DRIVE ಸಂಕ್ಷಿಪ್ತ ರೂಪ:- ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್ಹ್ಯಾನ್ಸ್ಮೆಂಟ್ (PM Electric Drive Revolution in Innovative Vehicle Enhancement)
- ಉದ್ದೇಶ: ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
- ಅವಧಿ:- ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
- ಇ-ವೋಚರ್ಗಳು:- ಯೋಜನೆಯ ಅಡಿಯಲ್ಲಿ ಬೇಡಿಕೆ ಆಧಾರಿತ ಪ್ರೋತ್ಸಾಹಕಗಳನ್ನು ಪಡೆಯಲು ಇ-ವಾಹನಗಳ ಖರೀದಿದಾರರಿಗೆ ‘ಭಾರೀ ಕೈಗಾರಿಕಾ ಸಚಿವಾಲಯ‘ವು ಇ-ವೋಚರ್ಗಳನ್ನು ಪರಿಚಯಿಸುತ್ತಿದೆ.
- ಚಾರ್ಜಿಂಗ್ ಕೇಂದ್ರಗಳು:- ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ (EVPCS) ಸ್ಥಾಪನೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವ ಮೂಲಕ, ಈ ಯೋಜನೆಯು ಇ-ವಾಹನಗಳ (EV) ಖರೀದಿದಾರರ ‘ಮೈಲೇಜ್ ಆತಂಕ’ವನ್ನು ಪರಿಹರಿಸುತ್ತದೆ.
EV ಉತ್ತೇಜಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು:
- ಭಾರತದ ಎಲೆಕ್ಟ್ರಿಕ್ ವಾಹನ ನೀತಿ:- 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ 30%, ವಾಣಿಜ್ಯ ಕಾರುಗಳಲ್ಲಿ 70%, ಬಸ್ಗಳಲ್ಲಿ 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ 80% ರಷ್ಟು EV ಮಾರಾಟದ ವಿಸ್ತರಣೆಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವುದು.
- ರಾಷ್ಟ್ರೀಯ ಎಲೆಕ್ಟ್ರಿಕ್ ಚಲನಶೀಲತಾ ಗುರಿ ಯೋಜನೆ (NEMMP):- ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಇಂಧನ ಭದ್ರತೆಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
- ಫೇಮ್ ಇಂಡಿಯಾ ಯೋಜನೆ (FAME):- ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ವೇಗವರ್ಧಿತ ಅಳವಡಿಕೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದಿಂದ 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
ಜೊಜಿಲಾ ಕಣಿವೆ ಮಾರ್ಗ (Zojila Pass)
ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಜೊಜಿಲಾ ಕಣಿವೆ ಮಾರ್ಗದಲ್ಲಿ ಸಂಭವಿಸಿದ ಹಿಮಪಾತವು ಅನೇಕ ಜೀವಗಳನ್ನು ಬಲಿಪಡೆದುಕೊಂಡಿದ್ದು, ಈ ಅತಿ-ಅಪಾಯಕಾರಿ ಪರ್ವತ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆ ಮತ್ತು ಸುರಕ್ಷತಾ ನಿಯಮಾವಳಿಗಳ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
ಜೊಜಿಲಾ ಕಣಿವೆ ಮಾರ್ಗದ ಬಗ್ಗೆ:
- ಇದು ವಿಶ್ವದ ಅತ್ಯಂತ ನಿರ್ಣಾಯಕ ಮತ್ತು ಸವಾಲಿನ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ.
- ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 3,528 ಮೀಟರ್ ಎತ್ತರದಲ್ಲಿದೆ.
- ಇದು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
- ಇದು ತನ್ನ ಆಯಕಟ್ಟಿನ ಪ್ರಾಮುಖ್ಯತೆ ಮತ್ತು ಬೆರಗುಗೊಳಿಸುವ ಹಿಮಾಲಯದ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
ಜೊಜಿಲಾ ಸುರಂಗ ಮಾರ್ಗ ಯೋಜನೆಯ ಬಗ್ಗೆ:
- ಇದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ 11,578 ಅಡಿ (ಸುಮಾರು 3,500 ಮೀಟರ್) ಎತ್ತರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗವಾಗಿದೆ.
- ಇದು ಭಾರತದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರದ ಸುರಂಗ ಮಾರ್ಗವಾಗಲಿದೆ.
ಹಿಮಪಾತ (Avalanche)ದ ಬಗ್ಗೆ:
- ವ್ಯಾಖ್ಯಾನ:- ಪರ್ವತದ ಇಳಿಜಾರಿನ ಉದ್ದಕ್ಕೂ ಹಿಮ, ಬಂಡೆಗಳು, ಮಂಜುಗಡ್ಡೆ ಮತ್ತು ಇತರ ಅವಶೇಷಗಳು ವೇಗವಾಗಿ ಕುಸಿಯುವುದನ್ನು ಹಿಮಪಾತ ಎನ್ನಲಾಗುತ್ತದೆ.
ಹಿಮಪಾತ (Avalanche) v/s ಭೂಕುಸಿತ (Landslide):
|
ಪ್ರಮುಖ ಅಂಶ |
ಹಿಮಪಾತ (Avalanche) |
ಭೂಕುಸಿತ (Landslide) |
|
ವ್ಯಾಖ್ಯಾನ |
ಇಳಿಜಾರಿನ ಉದ್ದಕ್ಕೂ ಹಿಮ, ಮಂಜುಗಡ್ಡೆ ಮತ್ತು ಅವಶೇಷಗಳ ವೇಗದ ಹರಿವು. |
ಬೆಟ್ಟದ ಇಳಿಜಾರಿನಲ್ಲಿ ಬಂಡೆ, ಮಣ್ಣು ಅಥವಾ ಅವಶೇಷಗಳ ಸಮೂಹವು ಕುಸಿಯುವುದು. |
|
ವೇಗ |
ಗಂಟೆಗೆ 320 ಕಿ.ಮೀ (200 mph) ವರೆಗಿನ ವೇಗವನ್ನು ತಲುಪಬಹುದು. |
ಇದರ ವೇಗ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ ಹಿಮಪಾತಗಳಿಗಿಂತ ನಿಧಾನವಾಗಿರುತ್ತದೆ. |
|
ಕಾರಣಗಳು |
ದುರ್ಬಲ ಹಿಮದ ಪದರಗಳು, ಹವಾಮಾನ ಅಥವಾ ಮಾನವ ಚಟುವಟಿಕೆ. |
ಭಾರಿ ಮಳೆ, ಭೂಕಂಪಗಳು ಅಥವಾ ಮಾನವ ಚಟುವಟಿಕೆ. |
|
ಸ್ಥಳ |
ಹಿಮದಿಂದ ಆವೃತವಾದ ಪರ್ವತಗಳು ಅಥವಾ ಇಳಿಜಾರುಗಳು. |
ವಿವಿಧ ಭೂಪ್ರದೇಶಗಳಲ್ಲಿನ (ಅರಣ್ಯಗಳು, ನಗರ ಪ್ರದೇಶಗಳು, ಬೆಟ್ಟಗಳು) ಕಡಿದಾದ ಇಳಿಜಾರುಗಳು. |







ನಿಮ್ಮದೊಂದು ಉತ್ತರ