ವಿಶ್ವ ಬೌದ್ಧ ಶಾಂತಿ ಸಮ್ಮೇಳನ, 2026 | ಆಂಧ್ರಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆ | “ತುಂಗುಸ್ಕಾ” ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ | ಕೆಂಪು-ಕಿರೀಟದ ಛಾವಣಿ ರೀತಿಯ ಚಿಪ್ಪಿನ ಆಮೆ (Red-Crowned Roofed Turtle) | ಪಿಎಂ ಇ-ಡ್ರೈವ್  (PM e-DRIVE) ಯೋಜನೆ | ಜೊಜಿಲಾ ಕಣಿವೆ ಮಾರ್ಗ (Zojila Pass)

ವಿಶ್ವ ಬೌದ್ಧ ಶಾಂತಿ ಸಮ್ಮೇಳನ, 2026

ಇತಿಹಾಸ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಇತ್ತೀಚಿಗೆ ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಉದ್ಘಾಟನಾ ಸಮಾರಂಭಕ್ಕೆ ಹೈದರಾಬಾದ್ ಆತಿಥ್ಯ ವಹಿಸಿತ್ತು.

ವಿಶ್ವ ಬೌದ್ಧ ಶಾಂತಿ ಸಮ್ಮೇಳನ 2026 ರ ಬಗ್ಗೆ:

  • ಆಯೋಜಕರು:- ‘ವಿಯೆಟ್ನಾಂ ಬೌದ್ಧ ಸಂಘ’ದ ಸಹಯೋಗದೊಂದಿಗೆ, ‘ಬುದ್ಧವನಂ’ ಮತ್ತು ‘ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು ಜಂಟಿಯಾಗಿ ಇದನ್ನು ಆಯೋಜಿಸಿದ್ದವು.
  • ಉದ್ದೇಶ:- ವಿಶ್ವದ ಬೌದ್ಧ ರಾಷ್ಟ್ರಗಳಿಗೆ ‘ಬುದ್ಧವನಂ’ ಅನ್ನು ಒಂದು ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ (ಥೀಮ್ ಪಾರ್ಕ್)ವನ್ನಾಗಿ ಪ್ರದರ್ಶಿಸುವುದು.

‘ಬುದ್ಧವನಂ’ ಬಗ್ಗೆ:

  • ಇದು ತೆಲಂಗಾಣದಲ್ಲಿದ್ದು, ಭಾರತದ ಮೊದಲ ‘ಬೌದ್ಧ ಪರಂಪರೆಯ ವಿಷಯಾಧಾರಿತ ಉದ್ಯಾನ’ವಾಗಿದೆ.
  • ಇದು ಕೃಷ್ಣಾ ನದಿಯ ದಡದಲ್ಲಿ ನೆಲೆಗೊಂಡಿದೆ.
  • ಇದು ಕಲೆ, ಶಿಲ್ಪಗಳು, ಧ್ಯಾನ ವಲಯಗಳು ಮತ್ತು ವಿಷಯಾಧಾರಿತ ರಚನೆಗಳ ಮೂಲಕ ಭಗವಾನ್ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಅನಾವರಣಗೊಳಿಸುತ್ತದೆ.
  • ಇದನ್ನು ‘ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ವು (TSTDC) ಅಭಿವೃದ್ಧಿಪಡಿಸಿದೆ.

ಆಂಧ್ರಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆ

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ವನ್ಯಜೀವಿ ನಿರ್ವಹಣಾ ಪ್ರಾಧಿಕಾರ ಮತ್ತು ‘ಕೋರಿಂಗಾ ವನ್ಯಜೀವಿ ಅಭಯಾರಣ್ಯ’ದ ಅಧಿಕಾರಿಗಳು ಕಾಕಿನಾಡ ಕೊಲ್ಲಿಯ ‘ಹೋಪ್ ದ್ವೀಪ’ದಲ್ಲಿ ಸುಮಾರು 20,000 ಆಲಿವ್ ರಿಡ್ಲೆ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ.

ಆಲಿವ್ ರಿಡ್ಲೆ ಕಡಲಾಮೆಗಳ ಬಗ್ಗೆ:

  • ಆಲಿವ್ ರಿಡ್ಲೆ ಕಡಲಾಮೆಗಳು ಪ್ರಪಂಚದಲ್ಲಿಯೇ ಕಂಡುಬರುವ ಎಲ್ಲಾ ಕಡಲಾಮೆಗಳಲ್ಲಿ ಅತಿ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪ್ರಭೇದವಾಗಿವೆ.
  • ಭಾರತದಲ್ಲಿನ ಪ್ರಮುಖ ಗೂಡುಕಟ್ಟುವ ತಾಣಗಳು:- 
  • ರುಷಿಕುಲ್ಯ ರುಕರಿ ಕರಾವಳಿ (ಒಡಿಶಾ), 
  • ಗಹಿರ್ಮಾತಾ ಕಡಲತೀರ (ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನವನ), 
  • ದೇಬಿ ನದಿಯ ಮುಖಜ ಭೂಮಿ.
  • ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರು ಇರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.
  • ‘ಅರಿಬಾಡಾ’:- ಸಾವಿರಾರು ಹೆಣ್ಣು ಆಮೆಗಳು ಒಂದೇ ಕಡಲತೀರದಲ್ಲಿ ಒಗ್ಗೂಡಿ ಮೊಟ್ಟೆಯಿಡುವ ‘ಅರಿಬಾಡಾ’ ಎಂಬ ವಿಶಿಷ್ಟ ಸಾಮೂಹಿಕ ಗೂಡುಕಟ್ಟುವ ಪ್ರಕ್ರಿಯೆಗೆ ಇವು ಹೆಸರುವಾಸಿಯಾಗಿವೆ.
  • ಮಾಂಸಾಹಾರಿಗಳಾಗಿವೆ:- ಮುಖ್ಯವಾಗಿ ಜೆಲ್ಲಿ ಮೀನು, ಸೀಗಡಿ ಮುಂತಾದವುಗಳನ್ನು ತಿನ್ನುತ್ತವೆ.
  • ಭ್ರೂಣ ವಿಕಸನದ ಅವಧಿಯಲ್ಲಿ ಮರಳು ಮತ್ತು ವಾತಾವರಣದ ತಾಪಮಾನವನ್ನು ಅವಲಂಬಿಸಿ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಒಡೆಯುತ್ತವೆ.
  • ಪ್ರಮುಖ ಅಪಾಯಗಳು:- ಮಾಂಸ ಮತ್ತು ಚಿಪ್ಪಿಗಾಗಿ ಬೇಟೆಯಾಡುವುದು ಹಾಗೂ ಬೃಹತ್ ಯಾಂತ್ರೀಕೃತ ಮೀನುಗಾರಿಕಾ ಹಡಗುಗಳ (Trawlers) ಬಳಕೆಯಂತಹ ಮಾನವ-ಪ್ರೇರಿತ ಚಟುವಟಿಕೆಗಳು ಇವುಗಳ ಅಸ್ತಿತ್ವಕ್ಕೆ ತೀವ್ರ ಕುತ್ತು ತಂದಿವೆ.
  • ಸಂರಕ್ಷಣಾ ಸ್ಥಿತಿಗತಿ:- 
  1. IUCN ಕೆಂಪು ಪಟ್ಟಿ: ದುರ್ಬಲ (VU).
  2. ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972: ಅನುಸೂಚಿ I.
  3. CITES: ಅನುಬಂಧ I.

ಕೋರಿಂಗಾ ವನ್ಯಜೀವಿ ಅಭಯಾರಣ್ಯದ ಬಗ್ಗೆ:

  • ಇದು ಆಂಧ್ರಪ್ರದೇಶದ ಕಾಕಿನಾಡದ ಸಮೀಪವಿರುವ, ಭಾರತದ ಎರಡನೇ ಅತ್ಯಂತ ದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ.
  • ಗೋದಾವರಿ ನದಿಯು ಬಂಗಾಳಕೊಲ್ಲಿಯನ್ನು ಸೇರುವ ‘ಗೋದಾವರಿ ಅಳಿವೆ’ ಪ್ರದೇಶದಲ್ಲಿ ಈ ಅಭಯಾರಣ್ಯವಿದೆ.
  • ಸೂಚಕ ಪ್ರಭೇದಗಳು:- ಮೀನುಗಾರ ಬೆಕ್ಕು (Fishing cat), ನಯವಾದ-ತುಪ್ಪಳದ ನೀರುನಾಯಿ (Smooth-coated otter), ಮತ್ತು ಚಿನ್ನದ-ಬಣ್ಣದ ನರಿ (Golden jackal).

“ತುಂಗುಸ್ಕಾ” ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ರಕ್ಷಣಾ ಸಚಿವಾಲಯವು ‘ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ’ಯ ಖರೀದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ.

ತುಂಗುಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಬಗ್ಗೆ:

  • ತುಂಗುಸ್ಕಾ ಒಂದು ಸೋವಿಯತ್-ಮೂಲದ (1980 ರ ದಶಕದ ಆರಂಭದಲ್ಲಿ ಸೇರ್ಪಡೆಗೊಂಡ), ‘ಟ್ರ್ಯಾಕ್-ಆಧಾರಿತ’ (ಯುದ್ಧ ಟ್ಯಾಂಕ್‌ಗಳಂತೆ ಚಲಿಸುವ) ಮತ್ತು ಸ್ವಯಂಚಾಲಿತ ವಾಯು ರಕ್ಷಣಾ ವ್ಯವಸ್ಥೆಯಾಗಿದೆ.
  • ಉದ್ದೇಶ:- ಕಡಿಮೆ ಎತ್ತರದಲ್ಲಿ ಹಾರುವ ವೈಮಾನಿಕ ಅಪಾಯಗಳಿಂದ ಭೂಸೇನೆಯನ್ನು ರಕ್ಷಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
  • ನವೀಕರಿಸಿದ ಆವೃತ್ತಿಗಳು:- 2K22M, ಮತ್ತು 2K22M1. ಇವುಗಳು ಸುಧಾರಿತ ದಾಳಿ-ನಿಯಂತ್ರಣ ವ್ಯವಸ್ಥೆ ಮತ್ತು ಹೆಚ್ಚಿನ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿವೆ.
  • ವಿಶೇಷತೆ:- ಇದು ಕೇವಲ ಒಂದೇ ವೇದಿಕೆಯಲ್ಲಿ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ವಿಶಿಷ್ಟವಾಗಿ ಸಂಯೋಜಿಸಿರುವ ಜಗತ್ತಿನ ಪ್ರಬಲ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಕೆಂಪು-ಕಿರೀಟದ ಛಾವಣಿ ರೀತಿಯ ಚಿಪ್ಪಿನ ಆಮೆ (Red-Crowned Roofed Turtle)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಒಂದು ಕಾಲದಲ್ಲಿ ಗಂಗಾ ನದಿಯ ‘ಅಮೂಲ್ಯ ರತ್ನ’ದಂತಿದ್ದ ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯು, ಇದೀಗ ವೇಗವಾಗಿ ಕ್ಷೀಣಿಸುತ್ತಿರುವ ಆವಾಸಸ್ಥಾನದಲ್ಲಿ ಬದುಕುಳಿಯಲು ತೀವ್ರ ಹೋರಾಟ ನಡೆಸುತ್ತಿದೆ.

ಕೆಂಪು-ಕಿರೀಟದ ಛಾವಣಿ-ಚಿಪ್ಪಿನ ಆಮೆಯ ಬಗ್ಗೆ:

  • ವೈಜ್ಞಾನಿಕ ಹೆಸರು:- ಬತಗೂರ್ ಕಚುಗಾ (Batagur kachuga)
  • ಕುಲ (Genus):- ಬಟಗೂರ್ (ಭಾರತದಲ್ಲಿ ಕಂಡುಬರುವ ಮೂರು ದೊಡ್ಡ ಸಿಹಿನೀರಿನ ಆಮೆ ಪ್ರಭೇದಗಳಲ್ಲಿ ಇದೂ ಒಂದಾಗಿದೆ).
  • ಆವಾಸಸ್ಥಾನ:- ಭಾರತವನ್ನು ಹೊರತುಪಡಿಸಿ, ಬಾಂಗ್ಲಾದೇಶ ಮತ್ತು ನೇಪಾಳಗಳು ಕೇವಲ ಅಲ್ಪಪ್ರಮಾಣದ ಆವಾಸಸ್ಥಾನವನ್ನು ಹೊಂದಿವೆ, ಹಾಗೂ ಅಲ್ಲಿ ಯಾವುದೇ ಖಚಿತವಾದ ವನ್ಯ-ಸಂತತಿ ಕಂಡುಬಂದಿಲ್ಲ.
  • ಪ್ರಾಥಮಿಕವಾಗಿ ಸಸ್ಯಾಹಾರಿಯಾಗಿದೆ:- ಜಲಸಸ್ಯಗಳನ್ನು ನಿಯಂತ್ರಿಸಲು ಮತ್ತು ಪೋಷಕಾಂಶಗಳ ಮರುಬಳಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಸಮತೋಲಿತ ಸಿಹಿನೀರಿನ ಪರಿಸರ ವ್ಯವಸ್ಥೆಗೆ ಬೆಂಬಲ ನೀಡುತ್ತದೆ.
  • ಪ್ರಮುಖ ಅಪಾಯಗಳು:- ವಯಸ್ಕ ಆಮೆಗಳು ಮತ್ತು ಮೊಟ್ಟೆಗಳ ಅತಿಯಾದ ಬೇಟೆ, ಅಕ್ರಮ ವ್ಯಾಪಾರ ಮತ್ತು ಆವಾಸಸ್ಥಾನದ ನಾಶ.
  • ಸಂರಕ್ಷಣಾ ಸ್ಥಿತಿಗತಿ:
  1. IUCN ಕೆಂಪು ಪಟ್ಟಿ:- ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR).
  2. ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972:- ಅನುಸೂಚಿ I.
  3. CITES:- ಅನುಬಂಧ I.

ಪಿಎಂ ಇ-ಡ್ರೈವ್  (PM e-DRIVE) ಯೋಜನೆ

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಸರ್ಕಾರವು ಇ-ಸ್ಕೂಟರ್‌ಗಳು ಮತ್ತು ಇ-ರಿಕ್ಷಾಗಳಿಗೆ ಹೊಸ ಗಡುವು ಮತ್ತು ಘಟಕದ ಮಿತಿಗಳನ್ನು ನಿಗದಿಪಡಿಸಲು PM E-DRIVE ಯೋಜನೆಯನ್ನು ಪರಿಷ್ಕರಿಸಿದೆ.

ಪಿಎಂ ಇ-ಡ್ರೈವ್ (PM e-DRIVE) ಯೋಜನೆಯ ಬಗ್ಗೆ:

  • PM e-DRIVE ಸಂಕ್ಷಿಪ್ತ ರೂಪ:- ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್‌ಹ್ಯಾನ್ಸ್‌ಮೆಂಟ್ (PM Electric Drive Revolution in Innovative Vehicle Enhancement)
  • ಉದ್ದೇಶ: ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
  • ಅವಧಿ:- ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
  • ಇ-ವೋಚರ್‌ಗಳು:- ಯೋಜನೆಯ ಅಡಿಯಲ್ಲಿ ಬೇಡಿಕೆ ಆಧಾರಿತ ಪ್ರೋತ್ಸಾಹಕಗಳನ್ನು ಪಡೆಯಲು ಇ-ವಾಹನಗಳ ಖರೀದಿದಾರರಿಗೆ ‘ಭಾರೀ ಕೈಗಾರಿಕಾ ಸಚಿವಾಲಯ‘ವು ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ.
  • ಚಾರ್ಜಿಂಗ್ ಕೇಂದ್ರಗಳು:- ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ (EVPCS) ಸ್ಥಾಪನೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವ ಮೂಲಕ, ಈ ಯೋಜನೆಯು ಇ-ವಾಹನಗಳ (EV) ಖರೀದಿದಾರರ ‘ಮೈಲೇಜ್ ಆತಂಕ’ವನ್ನು ಪರಿಹರಿಸುತ್ತದೆ.

EV ಉತ್ತೇಜಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು:

  • ಭಾರತದ ಎಲೆಕ್ಟ್ರಿಕ್ ವಾಹನ ನೀತಿ:- 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ 30%, ವಾಣಿಜ್ಯ ಕಾರುಗಳಲ್ಲಿ 70%, ಬಸ್‌ಗಳಲ್ಲಿ 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ 80% ರಷ್ಟು EV ಮಾರಾಟದ ವಿಸ್ತರಣೆಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವುದು.
  • ರಾಷ್ಟ್ರೀಯ ಎಲೆಕ್ಟ್ರಿಕ್ ಚಲನಶೀಲತಾ ಗುರಿ ಯೋಜನೆ (NEMMP):- ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಇಂಧನ ಭದ್ರತೆಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
  • ಫೇಮ್ ಇಂಡಿಯಾ ಯೋಜನೆ (FAME):- ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ವೇಗವರ್ಧಿತ ಅಳವಡಿಕೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದಿಂದ 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.

ಜೊಜಿಲಾ ಕಣಿವೆ ಮಾರ್ಗ (Zojila Pass)

ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಜೊಜಿಲಾ ಕಣಿವೆ ಮಾರ್ಗದಲ್ಲಿ ಸಂಭವಿಸಿದ ಹಿಮಪಾತವು ಅನೇಕ ಜೀವಗಳನ್ನು ಬಲಿಪಡೆದುಕೊಂಡಿದ್ದು, ಈ ಅತಿ-ಅಪಾಯಕಾರಿ ಪರ್ವತ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆ ಮತ್ತು ಸುರಕ್ಷತಾ ನಿಯಮಾವಳಿಗಳ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.

ಜೊಜಿಲಾ ಕಣಿವೆ ಮಾರ್ಗದ ಬಗ್ಗೆ: 

  • ಇದು ವಿಶ್ವದ ಅತ್ಯಂತ ನಿರ್ಣಾಯಕ ಮತ್ತು ಸವಾಲಿನ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ.
  • ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 3,528 ಮೀಟರ್ ಎತ್ತರದಲ್ಲಿದೆ.
  • ಇದು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
  • ಇದು ತನ್ನ ಆಯಕಟ್ಟಿನ ಪ್ರಾಮುಖ್ಯತೆ ಮತ್ತು ಬೆರಗುಗೊಳಿಸುವ ಹಿಮಾಲಯದ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಜೊಜಿಲಾ ಸುರಂಗ ಮಾರ್ಗ ಯೋಜನೆಯ ಬಗ್ಗೆ:

  • ಇದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ 11,578 ಅಡಿ (ಸುಮಾರು 3,500 ಮೀಟರ್) ಎತ್ತರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗವಾಗಿದೆ.
  • ಇದು ಭಾರತದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರದ ಸುರಂಗ ಮಾರ್ಗವಾಗಲಿದೆ.

ಹಿಮಪಾತ (Avalanche)ದ ಬಗ್ಗೆ:

  • ವ್ಯಾಖ್ಯಾನ:- ಪರ್ವತದ ಇಳಿಜಾರಿನ ಉದ್ದಕ್ಕೂ ಹಿಮ, ಬಂಡೆಗಳು, ಮಂಜುಗಡ್ಡೆ ಮತ್ತು ಇತರ ಅವಶೇಷಗಳು ವೇಗವಾಗಿ ಕುಸಿಯುವುದನ್ನು ಹಿಮಪಾತ ಎನ್ನಲಾಗುತ್ತದೆ.

ಹಿಮಪಾತ (Avalanche) v/s ಭೂಕುಸಿತ (Landslide):

ಪ್ರಮುಖ ಅಂಶ

ಹಿಮಪಾತ (Avalanche)

ಭೂಕುಸಿತ (Landslide)

ವ್ಯಾಖ್ಯಾನ

ಇಳಿಜಾರಿನ ಉದ್ದಕ್ಕೂ ಹಿಮ, ಮಂಜುಗಡ್ಡೆ ಮತ್ತು ಅವಶೇಷಗಳ ವೇಗದ ಹರಿವು.

ಬೆಟ್ಟದ ಇಳಿಜಾರಿನಲ್ಲಿ ಬಂಡೆ, ಮಣ್ಣು ಅಥವಾ ಅವಶೇಷಗಳ ಸಮೂಹವು ಕುಸಿಯುವುದು.

ವೇಗ

ಗಂಟೆಗೆ 320 ಕಿ.ಮೀ (200 mph) ವರೆಗಿನ ವೇಗವನ್ನು ತಲುಪಬಹುದು.

ಇದರ ವೇಗ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ ಹಿಮಪಾತಗಳಿಗಿಂತ ನಿಧಾನವಾಗಿರುತ್ತದೆ.

ಕಾರಣಗಳು

ದುರ್ಬಲ ಹಿಮದ ಪದರಗಳು, ಹವಾಮಾನ ಅಥವಾ ಮಾನವ ಚಟುವಟಿಕೆ.

ಭಾರಿ ಮಳೆ, ಭೂಕಂಪಗಳು ಅಥವಾ ಮಾನವ ಚಟುವಟಿಕೆ.

ಸ್ಥಳ

ಹಿಮದಿಂದ ಆವೃತವಾದ ಪರ್ವತಗಳು ಅಥವಾ ಇಳಿಜಾರುಗಳು.

ವಿವಿಧ ಭೂಪ್ರದೇಶಗಳಲ್ಲಿನ (ಅರಣ್ಯಗಳು, ನಗರ ಪ್ರದೇಶಗಳು, ಬೆಟ್ಟಗಳು) ಕಡಿದಾದ ಇಳಿಜಾರುಗಳು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts