ರಾಖಿಗರೀ  (Rakhigarhi) | ಭಾರತೀಯ ಸಂವಿಧಾನದ ಮೊದಲನೇ ತಿದ್ದುಪಡಿ | ಅಮೋನಿಯಾ ಅನಿಲ | ಬಯೋಚಾರ್ (Biochar)

ರಾಖಿಗರೀ  (Rakhigarhi)

ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿ:

  • ಹರಿಯಾಣದ ‘ರಾಖಿಗರೀ’ಯಲ್ಲಿ ಪತ್ತೆಯಾಗಿರುವ ಸುಮಾರು 5,000 ವರ್ಷಗಳ ಹಳೆಯ ಸಿಂಧು ಕಣಿವೆ ನಾಗರಿಕತೆಯ ಅಸ್ಥಿಪಂಜರಗಳನ್ನು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಆ ವ್ಯಕ್ತಿಗಳ ಅವಶೇಷಗಳ ಮುಖದ ಪುನರ್‌ರಚನೆಗಾಗಿ ಕಳುಹಿಸಿಕೊಟ್ಟಿದೆ.

‘ರಾಖಿಗರೀ’ಯ (Rakhigarhi) ಬಗ್ಗೆ

  • ಪ್ರಸ್ತುತ ರಾಖಿಗರೀಯು ಹರಿಯಾಣದ ಘಗ್ಗರ್-ಹಕ್ರಾ ನದಿ ಬಯಲಿನಲ್ಲಿ ಘಗ್ಗರ್ ನದಿಯಿಂದ 27 ಕಿ.ಮೀ ದೂರದಲ್ಲಿದೆ.

  • ಈ ಪುರಾತತ್ತ್ವ ಶಾಸ್ತ್ರದ ನೆಲೆಯು ಸಾ.ಶ.ಪೂ 2600-1900 ರ ಕಾಲಮಾನಕ್ಕೆ ಸೇರಿದೆ.

  • ಇದು ಭಾರತೀಯ ಉಪಖಂಡದಲ್ಲಿನ ಅತಿ ದೊಡ್ಡ ಹರಪ್ಪಾ ನೆಲೆಯಾಗಿದೆ.

  • ಈ ಸ್ಥಳವನ್ನು ಮೊದಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಮರೇಂದ್ರ ನಾಥ್ ಅವರು ಉತ್ಖನನ ಮಾಡಿದರು.

ಪ್ರಮುಖ ಶೋಧನೆಗಳು:

  • ಉಗ್ರಾಣ (Granary): ಹರಪ್ಪಾ ನಾಗರಿಕತೆಯ  ಪ್ರಬುದ್ಧ ಹಂತಕ್ಕೆ (ಸಾ.ಶ.ಪೂ 2600 ರಿಂದ  ಸಾ.ಶ.ಪೂ 2000) ಸೇರಿದ ಉಗ್ರಾಣವೊಂದು ಇಲ್ಲಿ ಪತ್ತೆಯಾಗಿದೆ. ಇದು 7 ಆಯತಾಕಾರದ ಅಥವಾ ಚೌಕಾಕಾರದ ಕೋಣೆಗಳನ್ನು ಹೊಂದಿದೆ.

  • ಸಂಸ್ಕೃತಿ, ಉಡುಪು ಮತ್ತು ಆರಾಧನೆ : ರಾಖಿಗರೀಯಲ್ಲಿ ಅಗ್ನಿ ಕುಂಡಗಳು ಮತ್ತು ಅರೆ-ವೃತ್ತಾಕಾರದ ರಚನೆಗಳು ಪತ್ತೆಯಾಗಿವೆ.

  • ಸ್ಮಶಾನ ಮತ್ತು ಸಮಾಧಿ ಸ್ಥಳಗಳು: ಪ್ರಬುದ್ಧ ಹರಪ್ಪಾ ಕಾಲದ ಸ್ಮಶಾನವು ರಾಖಿಗರೀಯಲ್ಲಿ ಪತ್ತೆಯಾಗಿದ್ದು, ಇಲ್ಲಿ ಎಂಟು ಸಮಾಧಿಗಳು ಕಂಡುಬಂದಿವೆ.

ಭಾರತೀಯ ಸಂವಿಧಾನದ ಮೊದಲನೇ ತಿದ್ದುಪಡಿ

ಸಂವಿಧಾನ ಮತ್ತು ರಾಜಕೀಯ

ಇದೀಗ ಸುದ್ದಿಯಲ್ಲಿ:

  • ಜೂನ್ 18, 1951 ರಂದು ಭಾರತೀಯ ಸಂವಿಧಾನದ ಮೊದಲನೇ ತಿದ್ದುಪಡಿಯು ಜಾರಿಗೆ ಬಂದಿತು.

  • ರಾಜ್ಯದ ನೀತಿಗಳನ್ನು ನಿರ್ಬಂಧಿಸುವ ನ್ಯಾಯಾಲಯದ ತೀರ್ಪುಗಳನ್ನು ರದ್ದುಗೊಳಿಸುವ ಉದ್ದೇಶದಿಂದ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂವಿಧಾನದ ಮೊದಲ ತಿದ್ದುಪಡಿಯನ್ನು ಮಂಡಿಸಿದರು.

ಪ್ರಮುಖ ಬದಲಾವಣೆಗಳು: 

  • ವಾಕ್ ಸ್ವಾತಂತ್ರ್ಯದ ನಿರ್ಬಂಧ : ಸಂವಿಧಾನದ ವಿಧಿ 19 ಕ್ಕೆ ಮಿತಿಗಳನ್ನು ವಿಧಿಸಲು “ಸಾರ್ವಜನಿಕ ಸುವ್ಯವಸ್ಥೆ“, “ವಿದೇಶಿ ರಾಷ್ಟ್ರಗಳೊಂದಿಗೆ ಸ್ನೇಹಪರ ಸಂಬಂಧಗಳು” ಮತ್ತು “ಅಪರಾಧಕ್ಕೆ ಪ್ರಚೋದನೆ” ಎಂಬ ಅಂಶಗಳನ್ನು ಸೇರ್ಪಡೆ ಮಾಡಲಾಯಿತು.

  • ಭೂ ಸುಧಾರಣೆಗಳ ರಕ್ಷಣೆ: ಭೂ ಸುಧಾರಣಾ ಕಾಯ್ದೆಗಳನ್ನು ನ್ಯಾಯಾಂಗ ವಿಮರ್ಶೆಯಿಂದ ರಕ್ಷಿಸಲು ಒಂಬತ್ತನೇ ಅನುಸೂಚಿಯನ್ನು ಅನ್ನು ರಚಿಸಲಾಯಿತು.

  • ಮೀಸಲಾತಿಗೆ ಅವಕಾಶ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಒದಗಿಸಲು ವಿಧಿ 15(4) ಅನ್ನು ಸೇರಿಸಲಾಯಿತು.

  • ರಾಜ್ಯದ ಏಕಸ್ವಾಮ್ಯಕ್ಕೆ ಅವಕಾಶ: ವ್ಯಾಪಾರ ಅಥವಾ ವ್ಯವಹಾರಗಳನ್ನು ರಾಷ್ಟ್ರೀಕರಣಗೊಳಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಅಮೋನಿಯಾ ಅನಿಲ

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಖಾಸಗಿ ಸಮುದ್ರಾಹಾರ ಸಂಸ್ಕರಣೆ ಮತ್ತು ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮೋನಿಯಾ (NH₃) ಅನಿಲದ ಬಗ್ಗೆ

  • ಅಮೋನಿಯಾ (NH₃) ತೀಕ್ಷ್ಣವಾದ ಮತ್ತು ಉಸಿರುಗಟ್ಟಿಸುವ ವಾಸನೆಯನ್ನು ಹೊಂದಿರುವ ಬಣ್ಣರಹಿತ ಅನಿಲವಾಗಿದೆ.

  • ಇದು ಸಾರಜನಕ ಮತ್ತು ಜಲಜನಕದಿಂದ (Nitrogen and hydrogen) ಮಾಡಲ್ಪಟ್ಟ ಸರಳ ಅಜೈವಿಕ ಸಂಯುಕ್ತವಾಗಿದೆ.

  • ಸಾವಯವ ವಸ್ತುಗಳ ವಿಘಟನೆಯ ಸಮಯದಲ್ಲಿ ಇದು ನೈಸರ್ಗಿಕವಾಗಿ ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾದರೂ ಸಹ, ಇದರ ವ್ಯಾಪಕವಾದ ಕೈಗಾರಿಕಾ ಮತ್ತು ಕೃಷಿ ಅನ್ವಯಿಕೆಗಳ ಕಾರಣದಿಂದಾಗಿ ಇದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.

  • ಕೈಗಾರಿಕಾ ಅಮೋನಿಯಾವನ್ನು ವಾಣಿಜ್ಯಿಕವಾಗಿ ಹೇಬರ್-ಬಾಷ್ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ; ಇದರಲ್ಲಿ ಕಬ್ಬಿಣದ ವೇಗವರ್ಧಕದ ಉಪಸ್ಥಿತಿಯಲ್ಲಿ, ಹೆಚ್ಚಿನ ತಾಪಮಾನ ಮತ್ತು ಒತ್ತಡದಲ್ಲಿ ವಾತಾವರಣದ ಸಾರಜನಕವು ಜಲಜನಕದೊಂದಿಗೆ ಪ್ರತಿಕ್ರಿಯಿಸುತ್ತದೆ.

  • ಇದರ ಅತ್ಯುತ್ತಮ ಶೈತ್ಯೀಕರಣ ಸಾಮರ್ಥ್ಯದಿಂದಾಗಿ ಇದನ್ನು ಪ್ರಮುಖವಾಗಿ ರಸಗೊಬ್ಬರ ಕೈಗಾರಿಕೆಗಳು, ರಾಸಾಯನಿಕ ಕೈಗಾರಿಕೆಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳಲ್ಲಿ ಬಳಸಲಾಗುತ್ತದೆ.

ಬಯೋಚಾರ್ (Biochar)

ಪರಿಸರ

ಇದೀಗ ಸುದ್ದಿಯಲ್ಲಿ:

  • ಕೃಷಿ ತ್ಯಾಜ್ಯವನ್ನು ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮೌಲ್ಯಯುತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಸುಸ್ಥಿರ ಪರಿಹಾರವಾಗಿ ಬಯೋಚಾರ್ ಹೊರಹೊಮ್ಮುತ್ತಿದೆ.

ಬಯೋಚಾರ್ ಬಗ್ಗೆ: 

  • ಬಯೋಚಾರ್ ಎಂಬುದು ಇದ್ದಿಲಿನಂತಹ ವಸ್ತುವಾಗಿದ್ದು, ಪೈರೋಲಿಸಿಸ್ (Pyrolysis) ಎಂಬ ನಿಯಂತ್ರಿತ ಪ್ರಕ್ರಿಯೆಯಲ್ಲಿ ಕೃಷಿ ಮತ್ತು ಅರಣ್ಯ ತ್ಯಾಜ್ಯಗಳ (ಬಯೋಮಾಸ್) ಸಾವಯವ ವಸ್ತುಗಳನ್ನು ಸುಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ.

  • ಸಾಮಾನ್ಯ ಸಾವಯವ ವಸ್ತುಗಳಿಗಿಂತ ಭಿನ್ನವಾಗಿ, ಬಯೋಚಾರ್ ಬಹಳ ನಿಧಾನವಾಗಿ ವಿಘಟನೆಯಾಗುತ್ತದೆ ಮತ್ತು ನೂರಾರು ವರ್ಷಗಳವರೆಗೆ ಮಣ್ಣಿನಲ್ಲಿ ಹಾಗೆಯೇ ಉಳಿಯುತ್ತದೆ.

  • ಇದು ಹೆಚ್ಚು ರಂಧ್ರಯುಕ್ತವಾಗಿದ್ದು, ನೀರು, ಪೋಷಕಾಂಶಗಳು ಮತ್ತು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಯೋಚಾರ್‌ನ ಪ್ರಯೋಜನಗಳು: 

  • ಕೃಷಿ ಉತ್ಪಾದಕತೆ: ಬಯೋಚಾರ್ ಬೆಳೆ ಇಳುವರಿಯನ್ನು ಶೇಕಡಾ 10-30% ರಷ್ಟು ಸುಧಾರಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ, ವಿಶೇಷವಾಗಿ ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.

  • ಕಾರ್ಬನ್ (ಇಂಗಾಲದ) ಕ್ರೆಡಿಟ್‌ಗಳು: ಬಯೋಚಾರ್ ವಾತಾವರಣದಿಂದ ಇಂಗಾಲವನ್ನು ತೆಗೆದುಹಾಕುವ ಮತ್ತು ಅದನ್ನು ಮಣ್ಣಿನಲ್ಲಿ ಸಂಗ್ರಹಿಸುವ ಕಾರಣ, ಇದು ಕಾರ್ಬನ್ ಕ್ರೆಡಿಟ್‌ಗಳನ್ನು ಉತ್ಪಾದಿಸುತ್ತದೆ.

  • ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ: ಬಯೋಚಾರ್ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ರಂಧ್ರಯುಕ್ತ ರಚನೆಯಲ್ಲಿ ನೀರನ್ನು ಸಂಗ್ರಹಿಸುತ್ತದೆ. ಇದು ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಶೇಕಡಾ 10-25% ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts