ಲ್ಯಾವೆಂಡರ್ ಕೃಷಿ | ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2026 | ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PM-VBRY) | ಪ್ರಧಾನ ಮಂತ್ರಿ ಸೂರ್ಯ ಸರೋವರ್ ಯೋಜನೆ (PM-SSY) | ಸಮುದ್ರ ಮಂಥನ (ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ) | ಧಿಂಸಾ ನೃತ್ಯ (Dhimsa Dance)

ಲ್ಯಾವೆಂಡರ್ ಕೃಷಿ

ಆರ್ಥಿಕತೆ

ಇದೀಗ ಸುದ್ದಿಯಲ್ಲಿ: 

ಬೆಚ್ಚಗಿನ ಚಳಿಗಾಲ, ಅನಿಯಮಿತ ಮಳೆ ಮತ್ತು ಕಡಿಮೆಯಾಗುತ್ತಿರುವ ನೀರಾವರಿ ಮೂಲಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ ಬೆಳೆಗಳನ್ನು ರೈತರು ಹುಡುಕುತ್ತಿರುವುದರಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿ ಲ್ಯಾವೆಂಡರ್ ಕೃಷಿ ವಿಸ್ತರಿಸುತ್ತಿದೆ.

ನೇರಳೆ ಕ್ರಾಂತಿ

  • CSIRಅರೋಮಾ ಮಿಷನ್ ಅಡಿಯಲ್ಲಿ 2016 ರಲ್ಲಿ ಪ್ರಾರಂಭಿಸಲಾಯಿತು
  • ಉದ್ದೇಶ – ಭಾರತದಲ್ಲಿ ಲ್ಯಾವೆಂಡರ್ ಕೃಷಿಯನ್ನು ಉತ್ತೇಜಿಸುವುದು.
  • ಅನುಷ್ಠಾನ ಸಚಿವಾಲಯ: CSIR (Council of scientific and industrial Research) ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ.
  • ಪ್ರಾಥಮಿಕ ಕೇಂದ್ರ: ಭದೇರ್ವಾಹ್ (ದೋಡಾ ಜಿಲ್ಲೆ), ಜಮ್ಮು ಮತ್ತು ಕಾಶ್ಮೀರ.
  • ಪ್ರಮುಖ ಹವಾಮಾನ ಸ್ಥಿತಿಗಳು: ತಂಪಾದ, ಬಿಸಿಲಿನಿಂದ ಕೂಡಿದ ಹವಾಮಾನ; ನೀರು ಸರಾಗವಾಗಿ ಬಸಿದುಹೋಗುವ, ಮರಳು ಮಿಶ್ರಿತ ಮಣ್ಣು; ಇದು ನಿಂತ ನೀರಿಗೆ ಅತ್ಯಂತ ಸೂಕ್ಷ್ಮವಾಗಿದೆ.
  • ಆರ್ಥಿಕ ಮೌಲ್ಯ: ಸೌಂದರ್ಯವರ್ಧಕಗಳು ಮತ್ತು ಚಿಕಿತ್ಸಕಗಳಲ್ಲಿ ಉಪಯೋಗಿಸುವ ಹೆಚ್ಚಿನ ಮೌಲ್ಯದ ಸುಗಂಧ ತೈಲದಲ್ಲಿ ಬಳಸಲಾಗುತ್ತದೆ, ಇದು ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ.

ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2026

ರಾಜಕೀಯ

ಇದೀಗ ಸುದ್ದಿಯಲ್ಲಿ: 

ಲೋಕಸಭೆಯು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2026 ಅನ್ನು ಅಂಗೀಕರಿಸಿದೆ.

ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು

  • ಉದ್ದೇಶ: ವಿಳಂಬವಾದ ನಕಲಿ ನಮೂದುಗಳನ್ನು ತಡೆಯುವುದು, ಪ್ರಮಾಣಪತ್ರದ ವಿಶ್ವಾಸಾರ್ಹತೆಯನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸೇವಾ ಯೋಜನೆಗಳಿಗಾಗಿ ಜನಸಂಖ್ಯಾ ದತ್ತಾಂಶವನ್ನು ಬಲಪಡಿಸುವುದು.
  • ​ಇದು 2023 ರಲ್ಲಿ ಕೊನೆಯದಾಗಿ ತಿದ್ದುಪಡಿಯಾದ ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969 ನ್ನು ತಿದ್ದುಪಡಿ ಮಾಡುತ್ತದೆ. 2023 ರ ತಿದ್ದುಪಡಿಯು ಭಾರತದ ಮಹಾ ನೋಂದಣಾಧಿಕಾರಿ(RGI – Registrar General of India) ಅಡಿಯಲ್ಲಿ ನಾಗರಿಕ ನೋಂದಣಿ ವ್ಯವಸ್ಥೆ (CRS – Civil Registration System) ಪೋರ್ಟಲ್ ಮೂಲಕ ಕೇಂದ್ರೀಕೃತ ಡಿಜಿಟಲ್ ನೋಂದಣಿಯನ್ನು ಕಡ್ಡಾಯಗೊಳಿಸಿತ್ತು.

ಪ್ರಮುಖ ನಿಬಂಧನೆಗಳು

  • ಸಾಮಾನ್ಯ ನೋಂದಣಿ ಕಾಲಮಿತಿ: ಜನನ ಮತ್ತು ಮರಣಗಳನ್ನು 21 ದಿನಗಳ ಒಳಗೆ ಸ್ಥಳೀಯ ನೋಂದಣಾಧಿಕಾರಿಗಳಿಗೆ ವರದಿ ಮಾಡಬೇಕು.
  • ವಿಳಂಬ ನೋಂದಣಿ ನಿಯಮಗಳು:
    • ​1 ರಿಂದ 2 ವರ್ಷಗಳ ವಿಳಂಬಕ್ಕೆ ಜಿಲ್ಲಾ ನ್ಯಾಯಾಧೀಶ (DM – District Magistrate), ಉಪ-ವಿಭಾಗೀಯ ನ್ಯಾಯಾಧೀಶ (SDM – Sub-Divisional Magistrate) ಅಥವಾ ಅಧಿಕೃತ ಕಾರ್ಯನಿರ್ವಾಹಕ ನ್ಯಾಯಾಧೀಶ (BNSS – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 14(1) ರ ಪ್ರಕಾರ) ಅವರಿಂದ ಅನುಮೋದನೆ ಅಗತ್ಯವಿದೆ.
    • ​2 ವರ್ಷಗಳನ್ನು ಮೀರಿದ ವಿಳಂಬಕ್ಕೆ ಪ್ರಥಮ ದರ್ಜೆಯ ನ್ಯಾಯಾಲಯದ ನ್ಯಾಯಾಧೀಶರ(JMFC – Judicial Magistrate of the First Class) ಆದೇಶದ ಅಗತ್ಯವಿದೆ.
  • ಪರಿಶೀಲನೆ: ನೋಂದಣಿಗೆ ಅನುಮತಿ ನೀಡುವ ಮುನ್ನ, ನಿಯೋಜಿತ ಪ್ರಾಧಿಕಾರವು ಘಟನೆಯ ನಿಖರತೆಯನ್ನು ಪರಿಶೀಲಿಸಬೇಕು ಮತ್ತು ನಿಗದಿತ ಶುಲ್ಕವನ್ನು ಸ್ವೀಕರಿಸಬೇಕು.

ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PM-VBRY)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:

ಭಾರತದ ಔಪಚಾರಿಕ ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿ, ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯು (PM-VBRY) ಅನುಷ್ಠಾನಗೊಂಡು ಒಂದು ವರ್ಷ ಪೂರೈಸಿದೆ.

ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PM-VBRY) ಬಗ್ಗೆ

  • ಪ್ರಾರಂಭ : ​ಇದು 2025 ರಲ್ಲಿ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿ ಪ್ರಾರಂಭಿಸಲಾಗಿದೆ.
  • ಅನುಷ್ಠಾನ : ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ.
  • ಗುರಿ: ಉತ್ಪಾದನಾ ವಲಯದ  ಮೇಲೆ ವಿಶೇಷ ಗಮನಹರಿಸಿ, ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು, ಉದ್ಯೋಗವಕಾಶವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದು.

ವೈಶಿಷ್ಟ್ಯಗಳು:

  • ​ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ₹15,000 ವರೆಗಿನ ಪ್ರೋತ್ಸಾಹಧನಕ್ಕೆ (Incentives) ಅರ್ಹರಾಗಿರುತ್ತಾರೆ.
  • ​ಉದ್ಯೋಗದಾತರ ಕಡೆಯಿಂದ, ಆರು ತಿಂಗಳ ಸ್ಥಿರ ಉದ್ಯೋಗದ ನಂತರ ಪ್ರತಿ ಹೊಸ ಉದ್ಯೋಗಿಗೆ ಸರ್ಕಾರವು ₹3,000 ವರೆಗೆ ಬಹುಮಾನವನ್ನು ನೀಡುತ್ತದೆ.
  • ​ಈ ಉಪಕ್ರಮವು ಔಪಚಾರಿಕ ಕಾರ್ಯಪಡೆಯಲ್ಲಿ (Formal workforce) ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮತ್ತು ಸುಸ್ಥಿರ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ  ಕೊಡುಗೆ ನೀಡುವ ನಿರೀಕ್ಷೆಯಿದೆ.

ಪ್ರಧಾನ ಮಂತ್ರಿ ಸೂರ್ಯ ಸರೋವರ್ ಯೋಜನೆ (PM-SSY)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:

ತೇಲುವ ಸೌರ ಸಾಮರ್ಥ್ಯ ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸಚಿವ ಸಂಪುಟವು ₹5,070 ಕೋಟಿ ವೆಚ್ಚದ ಪ್ರಧಾನ ಮಂತ್ರಿ ಸೂರ್ಯ ಸರೋವರ್ ಯೋಜನೆಗೆ (PM-SSY) ಅನುಮೋದನೆ ನೀಡಿದೆ.

PM-SSY ಯೋಜನೆಯ ಪ್ರಮುಖ ಅಂಶಗಳು

  • ಹಣಕಾಸು ವ್ಯವಸ್ಥೆ: ಇದು ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
  • ಉದ್ದೇಶ: ಇಂಧನ ಶೇಖರಣಾ ವ್ಯವಸ್ಥೆಗಳೊಂದಿಗೆ (ESS – Energy Storage Systems) ಸಂಯೋಜಿತವಾಗಿರುವ ತೇಲುವ ಸೌರ ದ್ಯುತಿವಿದ್ಯುಜ್ಜನಕ (FSPV – Floating Solar Photovoltaic) ಯೋಜನೆಗಳನ್ನು ಉತ್ತೇಜಿಸುವುದು.
  • ಗುರಿ: 2030-31ನೇ ಆರ್ಥಿಕ ವರ್ಷದ ವೇಳೆಗೆ 5 ಗಿಗಾವ್ಯಾಟ್ (GW) ತೇಲುವ ಸೌರ ದ್ಯುತಿವಿದ್ಯುಜ್ಜನಕ (FSPV) ಸಾಮರ್ಥ್ಯವನ್ನು ಸಾಧಿಸುವುದು.
  • ಅನುಷ್ಠಾನ ಸಂಸ್ಥೆ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಸೌರಶಕ್ತಿ ನಿಗಮ (SECI).
  • ಪ್ರಾಮುಖ್ಯತೆ: ಇದು 2030 ರ ವೇಳೆಗೆ ಭಾರತದ 500 ಗಿಗಾವ್ಯಾಟ್ (GW) ಪಳೆಯುಳಿಕೆಯೇತರ ವಿದ್ಯುತ್ ಗುರಿಯನ್ನು ಬೆಂಬಲಿಸುತ್ತದೆ, ಆತ್ಮನಿರ್ಭರ್ ಭಾರತ್‌  ದೃಷ್ಟಿಕೋನಕ್ಕೆ ಪೂರಕವಾಗಿದೆ ಮತ್ತು ವಾರ್ಷಿಕವಾಗಿ 10 ಮಿಲಿಯನ್ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ.
  • ಸೂಚನೆ: ಮಧ್ಯಪ್ರದೇಶದ ನರ್ಮದಾ ನದಿಯಲ್ಲಿರುವ ಓಂಕಾರೇಶ್ವರ ತೇಲುವ ಸೌರ ಉದ್ಯಾನವು 278 ಮೆಗಾವ್ಯಾಟ್ (MW) ಸಾಮರ್ಥ್ಯದೊಂದಿಗೆ ಭಾರತದಲ್ಲಿ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಅತಿದೊಡ್ಡ ಯೋಜನೆಯಾಗಿದೆ (ಇದರ ಉದ್ದೇಶಿತ ಸಾಮರ್ಥ್ಯ 600 MW).

ಸಮುದ್ರ ಮಂಥನ (ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:

2030-31ರ ಹಣಕಾಸು ವರ್ಷದ (FY) ವರೆಗೆ ಅನುಷ್ಠಾನಗೊಳಿಸಲು ಕೇಂದ್ರ ಸಚಿವ ಸಂಪುಟವು ₹84,084 ಕೋಟಿ ವೆಚ್ಚದ ‘ಸಮುದ್ರ ಮಂಥನ’ (ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ) ಯೋಜನೆಗೆ ಅನುಮೋದನೆ ನೀಡಿದೆ.

ಯೋಜನೆಯ ಪ್ರಮುಖ ಅಂಶಗಳು

  • ಹಣಕಾಸು ವ್ಯವಸ್ಥೆ – ಇದು ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
  • ಅನುಷ್ಠಾನ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ.
  • ಉದ್ದೇಶ: ಇದುವರೆಗೆ ಬಳಸಿಕೊಳ್ಳದ ಕಡಲಾಚೆಯ ಸಂಚಿತ ಜಲಾನಯನ ಪ್ರದೇಶಗಳ  ನಕ್ಷೆ ತಯಾರಿಸುವುದು ಮತ್ತು ಆಳ ಸಮುದ್ರದ ಪರಿಶೋಧನೆಯ ಅಪಾಯಗಳನ್ನು ಕಡಿಮೆ ಮಾಡುವುದು.
  • ಪ್ರಾಮುಖ್ಯತೆ – ಕಚ್ಚಾ ತೈಲ (~88%) ಮತ್ತು ನೈಸರ್ಗಿಕ ಅನಿಲ (~50%) ಆಮದುಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವುದು.

ಯೋಜನೆಯವೈಶಿಷ್ಟ್ಯಗಳು 

  • ಉತ್ಪಾದನಾ ಹೆಚ್ಚಳ: ವಾರ್ಷಿಕ ಉತ್ಪಾದನೆಯನ್ನು 62 ರಿಂದ 80 ಮಿಲಿಯನ್ ಮೆಟ್ರಿಕ್ ಟನ್ ತೈಲ ಸಮಾನಕ್ಕೆ (MMTOE – Million Metric Tonnes of Oil Equivalent)  ಹೆಚ್ಚಿಸುವ ಗುರಿ ಹೊಂದಿದೆ.
  • ಹೊಸ ಮೀಸಲುಗಳ ಶೋಧನೆ: 600 MMTOE ಗಿಂತಲೂ ಹೆಚ್ಚಿನ ಹೊಸ ಹೈಡ್ರೋಕಾರ್ಬನ್ ಮೀಸಲುಗಳನ್ನು ಪತ್ತೆಹಚ್ಚುವ ಗುರಿ ಹೊಂದಿದೆ.
  • ಆರ್ಥಿಕ ಪ್ರಭಾವ: ಇದು ವಾರ್ಷಿಕ ಆಮದು ವೆಚ್ಚವನ್ನು ₹1 ಲಕ್ಷ ಕೋಟಿಯಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.

ಧಿಂಸಾ ನೃತ್ಯ (Dhimsa Dance)

ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿ:

ಇತ್ತೀಚೆಗೆ ಅಲ್ಲೂರಿ ಸೀತಾರಾಮ ರಾಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13,000 ಬುಡಕಟ್ಟು ಮಹಿಳೆಯರು  ಮತ್ತು ವಿದ್ಯಾರ್ಥಿನಿಯರು ಪ್ರದರ್ಶಿಸಿದ ಧಿಂಸಾ ನೃತ್ಯವನ್ನು (Dhimsa dance) ಅತಿದೊಡ್ಡ ಧಿಂಸಾ ನೃತ್ಯವೆಂದು ಗಿನ್ನೆಸ್ ವಿಶ್ವ ದಾಖಲೆ ಗುರುತಿಸಿದೆ.

ಧಿಂಸಾ ನೃತ್ಯದ ಬಗ್ಗೆ 

  • ​ಇದು ಆಂಧ್ರಪ್ರದೇಶದ ಅರಕು ಕಣಿವೆ (Araku Valley) ಮತ್ತು ಅಲ್ಲೂರಿ ಸೀತಾರಾಮ ರಾಜು (ASR – Alluri Sitharama Raju) ಜಿಲ್ಲೆಯ ಸ್ಥಳೀಯ ಸಮುದಾಯಗಳು (ಬಗತ, ಗಡಬ, ಕೊಂಡದೊರ, ಪೊರಜ ಮತ್ತು ವಾಲ್ಮೀಕಿ ಜನಾಂಗ ಸೇರಿದಂತೆ) ಪ್ರದರ್ಶಿಸುವ ಸಾಂಪ್ರದಾಯಿಕ ಬುಡಕಟ್ಟು ಜಾನಪದ ನೃತ್ಯವಾಗಿದೆ.
  • ಪ್ರದರ್ಶನ: ಡಪ್ಪು, ತುಡುಮು, ಮೋರಿ, ಕಿಡ್ಗಿ, ಗಿಲ್ಕಾ ಮತ್ತು ಜೋಡುಕೊಮ್ಮುಲು ನಂತಹ ಸ್ಥಳೀಯ ವಾದ್ಯಗಳ ಲಯಕ್ಕೆ ತಕ್ಕಂತೆ, ವರ್ಣರಂಜಿತ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ 15-20 ಮಹಿಳೆಯರು ಸಮನ್ವಯತೆಯಿಂದ ವೃತ್ತಾಕಾರವಾಗಿ ಚಲಿಸುವ ಮೂಲಕ ಇದನ್ನು ಪ್ರಧಾನವಾಗಿ ಪ್ರದರ್ಶಿಸುತ್ತಾರೆ.
  • ವಸ್ತು ಮತ್ತು ಸಂದರ್ಭಗಳು: ಇದು ಬುಡಕಟ್ಟು ಜನಾಂಗದ ಪುರಾಣ, ಜಾನಪದ, ಜೀವನಾಧಾರ, ಬಂಧುತ್ವ ಮತ್ತು ಸಾಮಾಜಿಕ ಜೀವನವನ್ನು ಚಿತ್ರಿಸುತ್ತದೆ. ಇದನ್ನು ಚೈತ್ರಪುರಬ್ (ಈಟೆಲ ಪಂಡುಗ), ವಿವಾಹಗಳು, ಹಬ್ಬಗಳು ಮತ್ತು ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts