ಲೇಖಕ: instakas

  • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದಲ್ಲಿ ಸಾವು-ನೋವು, ಆರ್ಥಿಕ ನಷ್ಟ ಮತ್ತು ಸಾವುಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು “ವಿಪತ್ತು-ಪ್ರತಿರೋಧಕ (ಸ್ಥಿತಿಸ್ಥಾಪಕ) ಕರ್ನಾಟಕ” ನಿರ್ಮಾಣಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

    ಕರ್ನಾಟಕ ರಾಜ್ಯ ವಿಪತ್ತು ಅಪಾಯ ಕುಗ್ಗಿಸುವ (KSDRR) ಯೋಜನಾ ರೂಪರೇಖೆ, 2025-30:

    • ಈ ವರದಿಯ ಪ್ರಕಾರ, ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 80% ರಷ್ಟು ಭೂ ಪ್ರದೇಶವು ಬರಪೀಡಿತದ ಅಪಾಯಕ್ಕೆ ಒಳಪಡುವ ಸಾಧ್ಯತೆಗಳಿವೆ. 
    • ರಾಜ್ಯದ 22% ರಷ್ಟು ಭೂ ಪ್ರದೇಶವು ಮಧ್ಯಮ ತೀವ್ರತೆಯ ಭೂಕಂಪಗಳಿಗೆ ಮತ್ತು 24% ರಷ್ಟು ಭೂ ಪ್ರದೇಶವು ಚಂಡಮಾರುತ ಹಾಗೂ ತೀವ್ರ ಗಾಳಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
    • ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ಪರಿಹಾರ ಕ್ರಮಗಳ ಭಾಗವಾಗಿ ರಸ್ತೆ ಹಾಗೂ ಕೈಗಾರಿಕಾ ಅಪಘಾತಗಳಂತಹ ಮಾನವ ಪ್ರೇರಿತ ವಿಪತ್ತುಗಳನ್ನು ಸಹ ಪರಿಗಣಿಸಲಾಗಿದೆ.

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)ದ ಬಗ್ಗೆ:

    • ರಾಜ್ಯದ ಅತ್ಯುನ್ನತ ಸಂಸ್ಥೆ:- ಇದು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯುನ್ನತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಯಕತ್ವ: ಈ ಪ್ರಾಧಿಕಾರವು ಕರ್ನಾಟಕದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ:- ಇದು ರಾಜ್ಯದ ಸಾಮರ್ಥ್ಯ ವರ್ಧನೆ ಸೇರಿದಂತೆ ವಿಪತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ, ಸಮನ್ವಯಗೊಳಿಸುತ್ತದೆ, ಪರಿಶೀಲಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳ ನಿರೂಪಣೆ:- ವಿವಿಧ ಸರ್ಕಾರಿ ಇಲಾಖೆಗಳು ಅನುಸರಿಸಬೇಕಾದ ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳನ್ನು ಇದು ರೂಪಿಸುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗಳ ಅನುಮೋದನೆ: ಇದು ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ಮತ್ತು ಇಲಾಖಾವಾರು ಯೋಜನೆಗಳನ್ನು ಅನುಮೋದಿಸುವುದಲ್ಲದೆ, ಅವುಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.
  • ಸರ್ದಾರ್ ವಲ್ಲಭಭಾಯಿ ಪಟೇಲ್ | ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ | “ಗೊನೋರ್ರಿಹಾ” (Gonorrhea) ಚಿಕಿತ್ಸೆ | ಪೊಂಡೂರು ಖಾದಿ | ಮಹಾಕ್ರೈಮ್‌ಒಎಸ್ ಎಐ (MahaCrimeOS AI) | ಲೂನಾರ್‌ ಕ್ರೀಟ್ (Lunarcrete)

    ಸರ್ದಾರ್ ವಲ್ಲಭಭಾಯಿ ಪಟೇಲ್

    ಸಾಮಾನ್ಯ ಅಧ್ಯಯನ -1/ಸುದ್ದಿಯಲ್ಲಿರುವ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಪುಣ್ಯತಿಥಿಯಂದು (15 ಡಿಸೆಂಬರ್ 1950), ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

    • ಜನನ:- ಅಕ್ಟೋಬರ್ 31, 1875 
    • ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು. 
    • ಅವರನ್ನು ಭಾರತದ “ರಾಷ್ಟ್ರೀಯ ಏಕೀಕರಣದ ಶಿಲ್ಪಿ” ಮತ್ತು “ಆಧುನಿಕ ಭಾರತದ ನಾಗರಿಕ ಸೇವೆಗಳ ಪಿತಾಮಹ” ಅಥವಾ “ಅಖಿಲ ಭಾರತ ಸೇವೆಗಳ ಪಿತಾಮಹ” ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ.
    • ಅವರಿಗೆ 1991 ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತ ರತ್ನ”ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

    ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

    • ಖೇಡಾ ಸತ್ಯಾಗ್ರಹ, 1917:– ಗುಜರಾತ್‌ನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿ, ಬ್ರಿಟಿಷರು ವಿಧಿಸಿದ ಅನ್ಯಾಯದ ಭೂ ಕಂದಾಯ ತೆರಿಗೆಗಳ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸುವಲ್ಲಿ ಪಟೇಲ್ ಅವರು ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದರು.
    • ಅಸಹಕಾರ ಚಳವಳಿ, 1920-22:– ಪಟೇಲ್ ಅವರು ಅಸಹಕಾರ ಚಳವಳಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದರು; ಸುಮಾರು 300,000 ಸದಸ್ಯರನ್ನು ಸೇರ್ಪಡೆಗೊಳಿಸಿದರು ಮತ್ತು ಸುಮಾರು 15 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.
    • ಬಾರ್ಡೋಲಿ ಸತ್ಯಾಗ್ರಹ, 1928: ಪಟೇಲರು ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ಕ್ಷಾಮ ಮತ್ತು ಹೆಚ್ಚಿದ ಭೂ ಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನಸಮುದಾಯವನ್ನು ಬೆಂಬಲಿಸಿದರು.
    • ಕಾನೂನು ಭಂಗ ಚಳವಳಿ 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ “ಉಪ್ಪಿನ ಸತ್ಯಾಗ್ರಹದಲ್ಲಿ” ಅವರು ಸಕ್ರಿಯವಾಗಿ ಭಾಗವಹಿಸಿದರು.
    • ಭಾರತ ಬಿಟ್ಟು ತೊಲಗಿ ಚಳವಳಿ, 1942: ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಮತ್ತು ರೋಮಾಂಚಕ ಭಾಷಣಗಳನ್ನು ಮಾಡುವ ಮೂಲಕ, ಸಾಮೂಹಿಕ ಪ್ರತಿಭಟನೆಗಳಿಗೆ ಸೇರಲು, ಕಾನೂನು ಭಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ತೆರಿಗೆ ಪಾವತಿಗಳನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಜನರನ್ನು ಪ್ರೇರೇಪಿಸಿದರು ಹಾಗೂ ಸಂಘಟಿಸಿದರು.

    ನಿಮಗಿದು ತಿಳಿದಿದೆಯೇ?

    • 2014 ರಿಂದ, ಸರ್ದಾರ್ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಐಕ್ಯತೆ ದಿನ’ (ನ್ಯಾಷನಲ್ ಯುನಿಟಿ ಡೇ) ವನ್ನು ಆಚರಿಸಲಾಗುತ್ತದೆ.
    • ವಿಶ್ವದ ಅತಿ ಎತ್ತರದ ಪ್ರತಿಮೆಯಾದ “ಐಕ್ಯತೆ ಪ್ರತಿಮೆ” (ಸ್ಟ್ಯಾಚ್ಯೂ ಆಫ್ ಯೂನಿಟಿ) ಯನ್ನು ಗುಜರಾತ್‌ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನ ಅಕ್ಟೋಬರ್ 31, 2018 ರಂದು ಅನಾವರಣಗೊಳಿಸಲಾಯಿತು.
    • ಸ್ವತಂತ್ರ ಭಾರತದ ನಾಗರಿಕ ಸೇವಾ ಅಧಿಕಾರಿಗಳ ಮೊದಲ ತಂಡವನ್ನು ಉದ್ದೇಶಿಸಿ 1947 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಾಡಿದ ಭಾಷಣದ ನೆನಪಿಗಾಗಿ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

    ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ

    ಸಾಮಾನ್ಯ ಅಧ್ಯಯನ-1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಛತ್ತೀಸ್‌ಗಢದ ಬಸ್ತಾರ್‌ ಪ್ರದೇಶದ ಜುಡಿಯಾ ಪಾರಾ ಗ್ರಾಮದಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಸಾಂಪ್ರದಾಯಿಕ “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ’ ನೃತ್ಯವನ್ನು ಮರಿಯಾ (ಗೋಂಡ್) ಜನಾಂಗದವರು ಪ್ರದರ್ಶಿಸಿದರು.

    “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ” ನೃತ್ಯದ ಬಗ್ಗೆ:

    • ನೃತ್ಯ ಪ್ರದರ್ಶಿಸುವವರು:- ಛತ್ತೀಸ್‌ಗಢದ ಬಸ್ತಾರ್‌ನ ದಂಡಮಿ ಮಾಡಿಯಾ (ಮರಿಯಾ/ಗೌರ್ ಮರಿಯಾ) ಬುಡಕಟ್ಟು ಜನಾಂಗ.
    • ಮುಖ್ಯ ಲಕ್ಷಣಗಳು:-
    • ಗ್ರಾಮೀಣ ಜಾತ್ರೆ ಮತ್ತು ಪ್ರಮುಖ ಸಾಮುದಾಯಿಕ ಸಂದರ್ಭಗಳಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರೂ ಈ ನೃತ್ಯವನ್ನು ಪ್ರದರ್ಶಿಸುತ್ತಾರೆ.
    • ವಸ್ತ್ರವಿನ್ಯಾಸ:- ಪುರುಷ ನೃತ್ಯಗಾರರು ಬಿದಿರಿನಿಂದ ನಿರ್ಮಿಸಿದ ಕಾಡೆಮ್ಮೆಯ ಕೊಂಬುಗಳು, ಗರಿಗಳು, ಕವಡೆಗಳು ಮತ್ತು ವರ್ಣರಂಜಿತ ವಸ್ತ್ರದ ಪಟ್ಟಿಗಳಿಂದ ಅಲಂಕೃತಗೊಂಡ ಕಾಡೆಮ್ಮೆಯ ಕೊಂಬಿನ ಆಕಾರದ ಶಿರಸ್ತ್ರಾಣವನ್ನು ಧರಿಸುತ್ತಾರೆ.
    • ಮಹಿಳೆಯರು ಹಿತ್ತಾಳೆಯ ಶಿರೋಭೂಷಣಗಳನ್ನು ಮತ್ತು ಭಾರವಾದ ಕಂಠಿಹಾರಗಳನ್ನು ಧರಿಸುತ್ತಾರೆ.
    • ವಾದ್ಯಗಳು:- ಕತ್ತಿಗೆಗೆ ತೂಗುಹಾಕಿಕೊಂಡ ಮರದ ಡೋಲುಗಳು ಲಯಬದ್ಧವಾದ ತಾಳವನ್ನು ಒದಗಿಸುತ್ತವೆ.
    • ಪ್ರದರ್ಶನ:- ಪುರುಷರು ಕಾಡೆಮ್ಮೆಯ ಆಕ್ರಮಣ ಮತ್ತು ಬೇಟೆಯಾಡುವಿಕೆಯನ್ನು ಅನುಕರಿಸಿದರೆ, ಮಹಿಳೆಯರು ಕೋಲುಗಳನ್ನು ಹಿಡಿದು, ಅವರೊಂದಿಗೆ ಸಮನ್ವಯ ಮತ್ತು ಆಚರಣಾತ್ಮಕ ರೀತಿಯಲ್ಲಿ ನೃತ್ಯ ಮಾಡುತ್ತಾರೆ.
    • ಈ ನೃತ್ಯವು ಪ್ರಕೃತಿ, ಬೇಟೆ ಮತ್ತು ಸಮುದಾಯ ಜೀವನವನ್ನು ಪ್ರತಿಬಿಂಬಿಸುತ್ತದೆ.
    • ವಿಧಿವಿಧಾನದ ಮಂತ್ರಗಳು ‘ಬುಧದೇವ್’ ಮತ್ತು ‘ದಂತೇಶ್ವರಿ ಮಾಯಿ’ಯಂತಹ ದೇವತೆಗಳನ್ನು ಸ್ತುತಿಸುತ್ತವೆ; ಇದು ಅವರ ಆಧ್ಯಾತ್ಮಿಕ ಪರಂಪರೆಯ ನಿರಂತರತೆಯನ್ನು ಬಲಪಡಿಸುತ್ತದೆ.

    “ಗೊನೋರ್ರಿಹಾ” (Gonorrhea) ಚಿಕಿತ್ಸೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (FDA) ಗೊನೋರ್ರಿಹಾ ಚಿಕಿತ್ಸೆಗಾಗಿ, ಬಾಯಿಯ ಮೂಲಕ ಸೇವಿಸುವ ಎರಡು ಹೊಸ ಔಷಧಗಳಿಗೆ ಅನುಮೋದನೆ ನೀಡಿದೆ.

    “ಗೊನೋರ್ರಿಹಾ” ಸೋಂಕಿನ ಬಗ್ಗೆ:

    • ರೋಗಕಾರಕ:– ಇದು “ನೆಯಿಸ್ಸೇರಿಯಾ ಗೊನೋರ್ರಿಹಾ” ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ, ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಲೈಂಗಿಕವಾಗಿ ಹರಡುವ ಸೋಂಕಾಗಿದೆ.
    • ಕಳವಳ:- ಗೊನೋರ್ರಿಹಾ ವಿರುದ್ಧ ಆಂಟಿಮೈಕ್ರೊಬಿಯಲ್ ಪ್ರತಿರೋಧವು (ಔಷಧ ನಿರೋಧಕ ಶಕ್ತಿ) ಗಂಭೀರ ಮತ್ತು ಹೆಚ್ಚುತ್ತಿರುವ ಸಮಸ್ಯೆಯಾಗಿದೆ.
    • ಹರಡುವಿಕೆ:- ಗರ್ಭಿಣಿ ತಾಯಿಯಿಂದ ತನ್ನ ಮಗುವಿಗೆ ಗೊನೋರ್ರಿಹಾ ಹರಡುವ ಸಾಧ್ಯತೆ ಇರುತ್ತದೆ.
    • ರೋಗ ನಿರ್ಣಯ:- ಆಣ್ವಿಕ ಪರೀಕ್ಷೆಗಳು, ಗ್ರಾಮ್ ಸ್ಟೇನ್ ಮೈಕ್ರೋಸ್ಕೋಪಿ.

    ಪೊಂಡೂರು ಖಾದಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ‘ಪೊಂಡೂರು ಖಾದಿ’ಗೆ ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆ ಲಭಿಸಿದೆ.

    “ಪೊಂಡೂರು ಖಾದಿ”ಯ ಬಗ್ಗೆ:

    • ‘ಪೊಂಡೂರು ಖಾದಿ’ಯು ಸ್ಥಳೀಯವಾಗಿ ಬೆಳೆಯುವ ಗಿಡ್ಡ ಎಳೆಯ, ಬೆಟ್ಟದ ತಳಿಯ, ಕೀಟ ನಿರೋಧಕ ಹತ್ತಿಯಿಂದ ಪ್ರಾಥಮಿಕವಾಗಿ ಉತ್ಪಾದಿಸಲಾದ ಕೈಮಗ್ಗದ ಬಟ್ಟೆಯಾಗಿದೆ.
    • ಈ ಹತ್ತಿಯು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳಿಗೆ ಅನುವು ಮಾಡಿಕೊಡುತ್ತದೆ; ಆ ಮೂಲಕ ಈ ಪ್ರದೇಶಕ್ಕೆ ಸಾಂಪ್ರದಾಯಿಕವಾದ ಸುಸ್ಥಿರ ಕೃಷಿ ಮತ್ತು ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಉತ್ತೇಜಿಸುತ್ತದೆ.

    ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆಯ ಬಗ್ಗೆ:

    • ಜಿಐ ಟ್ಯಾಗ್ ಮಾನ್ಯತೆಯು ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಮೂಲಗಳಿಗೆ (ಒಂದು ಪ್ರದೇಶ, ಪಟ್ಟಣ ಅಥವಾ ದೇಶ) ಸಂಬಂಧಿಸಿದ ಕೆಲವು ಉತ್ಪನ್ನಗಳಿಗೆ ನೀಡಲಾಗುವ ಹೆಸರು ಅಥವಾ ಚಿಹ್ನೆಯಾಗಿದೆ.
    • ವಿಶಿಷ್ಟ ಉತ್ಪನ್ನಗಳಿಗೆ ಒಂದು ಪ್ರಮಾಣೀಕರಣ:- ಜಿಐ ಟ್ಯಾಗ್ ಅನ್ನು, ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಅಥವಾ ತನ್ನ ಭೌಗೋಳಿಕ ಮೂಲದ ಕಾರಣದಿಂದಾಗಿಯೇ ನಿರ್ದಿಷ್ಟ ಖ್ಯಾತಿಯನ್ನು ಹೊಂದಿರುವ ಉತ್ಪನ್ನಕ್ಕೆ ನೀಡುವ ಪ್ರಮಾಣೀಕರಣವೆಂದು ಪರಿಗಣಿಸಬಹುದು.
    • ಮದ್ಯ (ವೈನ್) ಮತ್ತು ಮದ್ಯಪಾನೀಯಗಳು, ಆಹಾರ ಪದಾರ್ಥ, ಕೃಷಿ ಉತ್ಪನ್ನ, ಕರಕುಶಲ ವಸ್ತು ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಬಹುದು.
    • ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ (TRIPS):– ಅಂತರರಾಷ್ಟ್ರೀಯ ಮಟ್ಟದಲ್ಲಿ, ಜಿಐ ಟ್ಯಾಗ್ ಅನ್ನು ವಿಶ್ವ ವಾಣಿಜ್ಯ ಸಂಸ್ಥೆಯ (WTO) “ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ” (TRIPS) ಒಪ್ಪಂದದ ಮೂಲಕ ನಿಯಂತ್ರಿಸಲಾಗುತ್ತದೆ.
    • ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999:- ಭಾರತದಲ್ಲಿ, ಸೆಪ್ಟೆಂಬರ್ 2003 ರಲ್ಲಿ ಜಾರಿಗೆ ಬಂದ ‘ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999’ ರ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕಗಳ ನೋಂದಣಿಯನ್ನು ನಿರ್ವಹಿಸಲಾಗುತ್ತದೆ.
    • ಡಾರ್ಜಿಲಿಂಗ್ ಚಹಾ:- ಇದು 2004-05 ರಲ್ಲಿ ಜಿಐ ಟ್ಯಾಗ್ ಪಡೆದ ಭಾರತದ ಮೊದಲ ಉತ್ಪನ್ನವಾಗಿದೆ.

    ಮಹಾಕ್ರೈಮ್‌ಒಎಸ್ ಎಐ (MahaCrimeOS AI)

    ಸಾಮಾನ್ಯ ಅಧ್ಯಯನ -2/ಆಡಳಿತ; ಸಾಮಾನ್ಯ ಅಧ್ಯಯನ-3/ಕೃತಕ ಬುದ್ಧಿಮತ್ತೆ

    ಇದೀಗ ಸುದ್ದಿಯಲ್ಲಿದೆ:

    • ಮೈಕ್ರೋಸಾಫ್ಟ್ ಅಧ್ಯಕ್ಷ ಸತ್ಯ ನಾದೆಲ್ಲಾ ಅವರು, ಮಹಾರಾಷ್ಟ್ರದ ಪೊಲೀಸರಿಗಾಗಿ ಅಭಿವೃದ್ಧಿಪಡಿಸಲಾದ ಎಐ-ಚಾಲಿತ ತನಿಖಾ ವೇದಿಕೆಯಾದ ‘ಮಹಾಕ್ರೈಮ್‌ಒಎಸ್ ಎಐ’ ಅನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.

    “ಮಹಾಕ್ರೈಮ್‌ ಒಎಸ್ ಎಐ” ನ ಬಗ್ಗೆ:

    • ಜಂಟಿ ಅಭಿವೃದ್ಧಿ:- ಮೈಕ್ರೋಸಾಫ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಅದರ ವಿಶೇಷ ‘ಎಐ ಪೊಲೀಸಿಂಗ್’  ಉಪಕ್ರಮವಾದ ‘ಮಾರ್ವೆಲ್’ (MARVEL – ವರ್ಧಿತ ಕಾನೂನು ಜಾರಿಗಾಗಿ ಮಹಾರಾಷ್ಟ್ರ ಸಂಶೋಧನೆ ಮತ್ತು ಕಣ್ಗಾವಲು ವ್ಯವಸ್ಥೆ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.

    ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯನಿರ್ವಹಣೆ:

    • ತ್ವರಿತವಾಗಿ ಡಿಜಿಟಲ್ ಪ್ರಕರಣ ದಾಖಲಾತಿ/ರಚಿಸಲು:- ಈ ವ್ಯವಸ್ಥೆಯು ತ್ವರಿತವಾಗಿ ‘ಡಿಜಿಟಲ್ ಪ್ರಕರಣದ ಕಡತಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ; ತನ್ಮೂಲಕ ಮಾನವ ಶ್ರಮವನ್ನು ಕಡಿಮೆ ಮಾಡುತ್ತದೆ.
    • ಬಹು-ಮಾದರಿ ದತ್ತಾಂಶ ಸಂಗ್ರಹಣೆ/ಹೊರತೆಗೆದುಕೊಳ್ಳುವಿಕೆ:– ಇದು ಪಿಡಿಎಫ್‌ಗಳು, ಧ್ವನಿಯ ಕಡತಗಳು, ಕೈಬರಹದ ಟಿಪ್ಪಣಿಗಳು ಅಥವಾ ಚಿತ್ರಗಳಂತಹ ವಿವಿಧ ಸ್ವರೂಪಗಳಲ್ಲಿನ ದೂರುಗಳನ್ನು ಸ್ವೀಕರಿಸಬಲ್ಲದು ಮತ್ತು ವಿಶ್ಲೇಷಣೆಗಾಗಿ ಸಂಬಂಧಿತ ದತ್ತಾಂಶವನ್ನು ಹೊರತೆಗೆಯಬಲ್ಲದು.
    • ಕೃತಕ ಬುದ್ಧಿಮತ್ತೆ (AI)-ಚಾಲಿತ ತನಿಖೆ:- ಎಐ-ಆಧಾರಿತ ‘ರಿಟ್ರೀವಲ್-ಆಗ್ಮೆಂಟೆಡ್ ಜನರೇಷನ್’ (RAG) ತಂತ್ರಜ್ಞಾನವನ್ನು ಬಳಸುವ ಮೂಲಕ, ಸಂಬಂಧಿತ ಪ್ರಕರಣಗಳನ್ನು ಪರಸ್ಪರ ಸಂಪರ್ಕಿಸಲು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ತ್ವರಿತವಾಗಿ ವಿಶ್ಲೇಷಿಸಲು ಇದು ತನಿಖಾಧಿಕಾರಿಗಳಿಗೆ ನೆರವಾಗುತ್ತದೆ.
    • ಕಾನೂನು ನೆರವು:- ಇದು ಭಾರತದ ಅಪರಾಧ ಕಾನೂನುಗಳನ್ನು ಆಧರಿಸಿ, ಸಂದರ್ಭೋಚಿತ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ; ಈ ಮೂಲಕ ಕಾನೂನು ಅನುಸರಣೆ ಮತ್ತು ಪ್ರಕ್ರಿಯೆಗಳಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

    ಲೂನಾರ್‌ ಕ್ರೀಟ್ (Lunarcrete)

    ಸಾಮಾನ್ಯ ಅಧ್ಯಯನ -3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಚಂದ್ರನ ಮೇಲೆ ಸುಸ್ಥಿರ ಮತ್ತು ದೀರ್ಘಕಾಲೀಕ ವಸತಿ ತಾಣಗಳನ್ನು ನಿರ್ಮಿಸುವ ನಿಟ್ಟಿನಲ್ಲಿ, ಚಂದ್ರನ ಮೇಲ್ಮೈ ವಸ್ತುಗಳನ್ನು ಬಳಸಿಕೊಂಡು ಉತ್ಪಾದಿಸಲಾಗುವ ‘ಲೂನಾರ್‌ ಕ್ರೀಟ್’ ಎಂಬ ಕಾಂಕ್ರೀಟ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ.

    ‘ಲೂನಾರ್‌ಕ್ರೀಟ್’ ನ ಬಗ್ಗೆ:

    • ‘ಲೂನಾರ್‌ಕ್ರೀಟ್’ ಎಂಬುದು ‘ಚಂದ್ರನ ಮೇಲೆ ತಯಾರಿಸಲಾದ ಕಾಂಕ್ರೀಟ್’ ಎನ್ನುವುದನ್ನು ಸೂಚಿಸುವ ಒಂದು ಸಾಮಾನ್ಯ ಪದವಾಗಿದೆ.
    • ಇದು ಭೂಮಿಯ ಮರಳು ಮತ್ತು ಜಲ್ಲಿಕಲ್ಲುಗಳ ಬದಲಿಗೆ, ಚಂದ್ರನ ಮಣ್ಣು (ರೆಗೊಲಿತ್) ನ್ನು ಬಳಸಿಕೊಂಡು ತಯಾರಿಸಲು ಉದ್ದೇಶಿಸಲಾದ ನಿರ್ಮಾಣದ ವಸ್ತುವಾಗಿದೆ.
    • ಉದ್ದೇಶ: ಭೂಮಿಯಿಂದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಅಗತ್ಯವಿಲ್ಲದೆಯೇ, ಚಂದ್ರನ ಮೇಲೆ ವಸತಿ ತಾಣಗಳು, ಲ್ಯಾಂಡಿಂಗ್ ಪ್ಯಾಡ್‌ಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ, ಇದು ‘ಸ್ಥಳೀಯ ಸಂಪನ್ಮೂಲ ಬಳಕೆ’ಗೆ (ISRU) ಬೆಂಬಲ ನೀಡುತ್ತದೆ.
  • ‘ಶುಚಿ’ ಯೋಜನೆ

    ‘ಶುಚಿ’ ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ‘ಶುಚಿ’ ಯೋಜನೆಯ ಅಡಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಸಂಗ್ರಹಣಾ ಪ್ರಕ್ರಿಯೆಯು ಸರ್ಕಾರದಿಂದ ಇನ್ನೂ ಬಾಕಿ ಉಳಿದಿದೆ.

    ‘ಶುಚಿ’ ಯೋಜನೆಯ ಬಗ್ಗೆ:

    • ಉದ್ದೇಶ:- 10 ರಿಂದ 18 ವರ್ಷ ವಯೋಮಿತಿಯ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವುದು.
    • ಆರಂಭ:- 2013-14
    • ಗುರಿ:- ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯದ ಕುರಿತು ಅರಿವು ಮೂಡಿಸುವುದು.

    ‘ಶುಚಿ – ನನ್ನ ಮೈತ್ರಿ’ ಯೋಜನೆಯ ಬಗ್ಗೆ:

    • ಇದು 2023 ರಲ್ಲಿ ಚಾಲನೆ ನೀಡಲಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ.
    • ಪರಿಸರ ಸ್ನೇಹಿ ನೈರ್ಮಲ್ಯವನ್ನು ಉತ್ತೇಜಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರದಂತಹ ಆಯ್ದ ಜಿಲ್ಲೆಗಳಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳ ಬದಲಾಗಿ ‘ಮಾಸಿಕ ಋತುಚಕ್ರದ ಕಪ್‌’ಗಳನ್ನು ವಿತರಿಸಲಾಗುತ್ತದೆ.
  • “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ | ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line) | ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ | ಬ್ಲೂ ಕಾರ್ನರ್ ನೋಟಿಸ್ | ಭಾರತ್ 6ಜಿ ಮೈತ್ರಿಕೂಟ (B6GA) | ಆಫ್ರಿಕಾದ ಪೆಂಗ್ವಿನ್‌ಗಳು

    “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಕಂದಾಯ ಗುಪ್ತಚರ ನಿರ್ದೇಶನಾಲಯವು, “ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ ಎಂಬ ಸಂಕೇತನಾಮದ ತಂತ್ರಾತ್ಮಕ ಕಾರ್ಯಾಚರಣೆಯ ಮೂಲಕ, ಮಹಾರಾಷ್ಟ್ರದ ವಾರ್ಧಾದಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಮೆಫೆಡ್ರೋನ್ ಉತ್ಪಾದನಾ ಘಟಕವನ್ನು ಯಶಸ್ವಿಯಾಗಿ ಭೇದಿಸಿದೆ.

    ಮೆಫೆಡ್ರೋನ್ ನ ಬಗ್ಗೆ:

      • ಇದನ್ನು ‘4-ಮೀಥೈಲ್‌ಮೆಥ್ ಕ್ಯಾಥಿನೋನ್’ (4-MMC) ಅಥವಾ ‘4-ಮೀಥೈಲ್ ಎಫೆಡ್ರೋನ್’ ಎಂದು ಕರೆಯಲಾಗುತ್ತದೆ.
      • ಇದನ್ನು ‘ಹೊಸ ಮನೋಕ್ರಿಯಾತ್ಮಕ ವಸ್ತು’ (‘ನ್ಯೂ ಸೈಕೋಆಕ್ಟಿವ್ ಸಬ್‌ಸ್ಟೆನ್ಸ್’ -NPS) ಎಂದು ವರ್ಗೀಕರಿಸಲಾಗಿದೆ.
    • ಎನ್‌ಡಿಪಿಎಸ್ (NDPS) ಕಾಯ್ದೆ, 1985ರ ಅಡಿಯಲ್ಲಿ ಮೆಫೆಡ್ರೋನ್ ಅನ್ನು ನಿಷೇಧಿಸಲಾಗಿದೆ.

    ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಚೌಕಟ್ಟು:

    • ನಶಾ ಮುಕ್ತ ಭಾರತ ಅಭಿಯಾನ (ಆಗಸ್ಟ್ 15, 2020).
    • ಮಾದಕ ದ್ರವ್ಯಗಳ ಬೇಡಿಕೆ ಕಡಿತದ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR).

    ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line)

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ 2025ರ ಕದನ ವಿರಾಮ ಒಪ್ಪಂದದ ಹಂತ-1ರ ವೇಳೆ ಅಂಗೀಕರಿಸಲಾದ, ಸೇನಾ ಪಡೆಗಳ ತಾತ್ಕಾಲಿಕ ಹಿಂತೆಗೆತದ ರೇಖೆಯಾಗಿರುವ “ಹಳದಿ ರೇಖೆ”ಯನ್ನು, ಇಸ್ರೇಲ್ ಸೇನೆಯು “ಹೊಸ ಗಡಿ” ಎಂದು ವಿವರಿಸಿದೆ.

    “ಹಳದಿ ರೇಖೆ” (Yellow Line) ಯ ಬಗ್ಗೆ:

    • ‘ಹಳದಿ ರೇಖೆ’ಯು ಗಾಜಾ ಪಟ್ಟಿಯ ಒಳಭಾಗದಲ್ಲಿ ಗುರುತಿಸಲಾದ ಒಂದು ತಾತ್ಕಾಲಿಕ “ಸೇನೆಯ ಸೀಮಾ ನಿರ್ಣಯ ರೇಖೆ”ಯಾಗಿದೆ.
    • ಈ ರೇಖೆಯ ಪೂರ್ವಕ್ಕಿರುವ ಪ್ರದೇಶವು ಇಸ್ರೇಲ್‌ನ ನೇರ ಕಾರ್ಯಾಚರಣೆಯ ನಿಯಂತ್ರಣದಲ್ಲಿ ಮುಂದುವರಿಯುತ್ತದೆ.

    ಇಸ್ರೇಲ್ ನಿಯಂತ್ರಣದಲ್ಲಿರುವ ಪ್ರದೇಶ:

    • ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗ (ಶೇ. 53–58 ರಷ್ಟು) ಇಸ್ರೇಲ್‌ನ ನಿಯಂತ್ರಣದಲ್ಲಿ ಉಳಿದಿದೆ. ಇದು ಬಹುಪಾಲು ಕೃಷಿ ಭೂಮಿ ಮತ್ತು ಈಜಿಪ್ಟ್‌ನೊಂದಿಗಿನ “ರಫಾ ಗಡಿ ದಾಟುವ” ಪ್ರದೇಶವನ್ನು ಒಳಗೊಂಡಿದೆ.

    ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ

    ಸಾಮಾನ್ಯ ಅಧ್ಯಯನ -3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ವ್ಯಾಪಾರದ ಮಾತುಕತೆಗಳ ಯಾವುದೇ ಪ್ರಮುಖ ಪ್ರಗತಿಯಿಲ್ಲದೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅಮೇರಿಕಾದ ಅಧ್ಯಕ್ಷರು ಕೃಷಿ ಆಮದುಗಳ ಮೇಲೆ, ವಿಶೇಷವಾಗಿ ಭಾರತದಿಂದ ಆಮದಾಗುವ ಅಕ್ಕಿಯ ಮೇಲೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಭಾರತದ ಅಕ್ಕಿ ರಫ್ತಿನ ಬಗ್ಗೆ:

    • ಅಕ್ಕಿ ಉತ್ಪಾದನೆಯಲ್ಲಿ ಚೀನಾ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದ್ದು, ನಂತರದ ಸ್ಥಾನಗಳಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ದೇಶಗಳಿವೆ.
    • ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿದ್ದು, 2023ರ ಅವಧಿಯಲ್ಲಿ ಜಾಗತಿಕ ಅಕ್ಕಿ ರಫ್ತಿನಲ್ಲಿ 33% ರಷ್ಟು ಪಾಲನ್ನು ಹೊಂದಿತ್ತು.
    • ಭಾರತವು 179 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ.

    ಅಕ್ಕಿಯ ಬಗ್ಗೆ ಪ್ರಮುಖ ಸಂಗತಿಗಳು ಮತ್ತು ಪರಿಸ್ಥಿತಿಗಳು:

    • ಪ್ರಾಥಮಿಕ ಪ್ರಧಾನ ಆಹಾರ:- ಭಾರತದ ಬಹುಪಾಲು ಜನಸಂಖ್ಯೆಗೆ ಅಕ್ಕಿಯು ಪ್ರಾಥಮಿಕ ಪ್ರಧಾನ ಆಹಾರವಾಗಿದೆ.
    • ಉತ್ಪಾದನೆಯಲ್ಲಿ ಮುಂಚೂಣಿ:- ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿದೆ ಮತ್ತು ಜಾಗತಿಕವಾಗಿ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ.
    • ವಾಯುಗುಣದ ಪರಿಸ್ಥಿತಿಗಳು:- ಇದೊಂದು ಖಾರಿಫ್ (ಮುಂಗಾರು) ಬೆಳೆಯಾಗಿದ್ದು, ಇದಕ್ಕೆ ಉಷ್ಣ ಮತ್ತು ತೇವಾಂಶಯುಕ್ತ ವಾಯುಗುಣದ ಅಗತ್ಯವಿದೆ.
    • ತಾಪಮಾನ:- ಈ ಬೆಳೆಗೆ ಹೆಚ್ಚಿನ ತಾಪಮಾನದ ಅಗತ್ಯವಿದ್ದು, ಸಾಮಾನ್ಯವಾಗಿ 25°C ಗಿಂತ ಅಧಿಕ ಉಷ್ಣಾಂಶವಿರಬೇಕು.
    • ಮಳೆ:- ಇದಕ್ಕೆ ಅಧಿಕ ವಾರ್ಷಿಕ ಮಳೆಯ, ಸಾಮಾನ್ಯವಾಗಿ 100 ಸೆಂ .ಮೀ ಗಿಂತ ಹೆಚ್ಚು ಅಗತ್ಯವಿರುತ್ತದೆ. (ಸಾಮಾನ್ಯವಾಗಿ 150-300 ಸೆಂ .ಮೀ). ಪಂಜಾಬ್ ಮತ್ತು ಹರಿಯಾಣದಂತಹ ಕಡಿಮೆ ಮಳೆಬೀಳುವ ಪ್ರದೇಶಗಳಲ್ಲಿ ಇದನ್ನು ನೀರಾವರಿ ಸೌಲಭ್ಯದೊಂದಿಗೆ ಬೆಳೆಯಲಾಗುತ್ತದೆ.
    • ಮಣ್ಣು:- ನೀರನ್ನು ಹಿಡಿದಿಟ್ಟುಕೊಳ್ಳಲು ಸಾಮರ್ಥ್ಯವಿರುವ ಫಲವತ್ತಾದ ಜೇಡಿ ಮಣ್ಣು ಅಥವಾ ಮಿಶ್ರ (ಲೋಮಿ) ಮಣ್ಣಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ನದಿ ಕಣಿವೆಗಳು, ಪ್ರವಾಹ ಬಯಲುಗಳು, ಮುಖಜ ಭೂಮಿಗಳು ಮತ್ತು ಕರಾವಳಿ ಮೈದಾನಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಪಂಜಾಬ್.
    • ಅಧಿಕ ಇಳುವರಿ ನೀಡುವ ರಾಜ್ಯಗಳು:- ಪಂಜಾಬ್, ತಮಿಳುನಾಡು ಮತ್ತು ಹರಿಯಾಣ.

    ಬ್ಲೂ ಕಾರ್ನರ್ ನೋಟಿಸ್

    ಸಾಮಾನ್ಯ ಅಧ್ಯಯನ- 2/ಅಂತರರಾಷ್ಟ್ರೀಯ ಸಂಬಂಧಗಳು/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಗೋವಾದ ನೈಟ್‌ಕ್ಲಬ್ ಒಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ನೈಟ್‌ಕ್ಲಬ್ ಗಳ ಮಾಲೀಕರನ್ನು ಪತ್ತೆಹಚ್ಚಲುಇಂಟರ್‌ಪೋಲ್” ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
    • ಇಂಟರ್‌ಪೋಲ್‌ನಿಂದ ಈ ನೋಟಿಸ್ ಜಾರಿಗೊಳಿಸುವಂತೆ ಕೋರಿ ಗೋವಾ ಪೊಲೀಸರು “ಕೇಂದ್ರೀಯ ತನಿಖಾ ದಳಕ್ಕೆ” (CBI) ಮನವಿ ಸಲ್ಲಿಸಿದ್ದರು.

    ಇಂಟರ್‌ಪೋಲ್ ನೋಟಿಸ್‌ಗಳ ವಿಧಗಳು:

    • ರೆಡ್ ನೋಟಿಸ್:- ವಿಚಾರಣೆಗೆ ಒಳಪಡಬೇಕಾದ ಅಥವಾ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಇರುವಿಕೆಯ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಇದನ್ನು ಹೊರಡಿಸಲಾಗುತ್ತದೆ.
    • ಯೆಲ್ಲೋ ನೋಟಿಸ್:- ಕಾಣೆಯಾದ ವ್ಯಕ್ತಿಗಳನ್ನು (ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು) ಪತ್ತೆಹಚ್ಚಲು ಅಥವಾ ತಮ್ಮನ್ನು ತಾವು ಗುರುತಿಸಿಕೊಳ್ಳಲು ಅಸಮರ್ಥರಾದ ವ್ಯಕ್ತಿಗಳನ್ನು ಗುರುತಿಸಲು ನೆರವಾಗುವಂತೆ ಇದನ್ನು ಬಳಸಲಾಗುತ್ತದೆ.
    • ಬ್ಲೂ ನೋಟಿಸ್:- ಅಪರಾಧ ತನಿಖೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಗುರುತು, ಇರುವ ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇದನ್ನು ನೀಡಲಾಗುತ್ತದೆ.
    • ಬ್ಲ್ಯಾಕ್ ನೋಟಿಸ್:ಗುರುತಿಸಲಾಗದ ಮೃತದೇಹಗಳ ಕುರಿತು ಮಾಹಿತಿಯನ್ನು ಕೋರಲು ಇದನ್ನು ಹೊರಡಿಸಲಾಗುತ್ತದೆ.
    • ಗ್ರೀನ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ಎಂದು ಪರಿಗಣಿಸಲಾದ ವ್ಯಕ್ತಿಯೊಬ್ಬರ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಬಳಸಲಾಗುತ್ತದೆ.
    • ಆರೆಂಜ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಒಡ್ಡುವ ಘಟನೆ, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಹೊರಡಿಸಲಾಗುತ್ತದೆ.
    • ಪರ್ಪಲ್ ನೋಟಿಸ್:ಅಪರಾಧಿಗಳು ಬಳಸುವ ಕಾರ್ಯವಿಧಾನ, ವಸ್ತುಗಳು, ಸಾಧನಗಳು ಮತ್ತು ಮರೆಮಾಚುವ ವಿಧಾನಗಳ ಕುರಿತು ಮಾಹಿತಿಯನ್ನು ಕೋರಲು ಅಥವಾ ಒದಗಿಸಲು ಇದನ್ನು ಬಳಸಲಾಗುತ್ತದೆ.
    • ಇಂಟರ್‌ಪೋಲ್–ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ನೋಟಿಸ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಗಳಿಗೆ  ಒಳಪಟ್ಟಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗಾಗಿ ಇದನ್ನು ನೀಡಲಾಗುತ್ತದೆ.

    ಭಾರತ್ 6ಜಿ ಮೈತ್ರಿಕೂಟ (B6GA)

    ಸಾಮಾನ್ಯ ಅಧ್ಯಯನ- 3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಂವಹನ ಸಚಿವರು, ‘ಭಾರತ್ 6ಜಿ ಮಿಷನ್’ ಅಡಿಯಲ್ಲಿನ ಸರ್ವೋಚ್ಚ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು ಹಾಗೂ ಭಾರತ್ 6ಜಿ ಮೈತ್ರಿಕೂಟ (B6GA) ದ ಪ್ರಗತಿಯನ್ನು ಪರಿಶೀಲಿಸಿದರು.

    ಭಾರತ್ 6ಜಿ ಮೈತ್ರಿಕೂಟದ ಬಗ್ಗೆ:

    • ಇದು ‘ಭಾರತ್ 6ಜಿ ವಿಷನ್’ನ ಅನುಷ್ಠಾನದ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. 2030ರ ವೇಳೆಗೆ 6ಜಿ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸಲು ಮಾರ್ಚ್ 2023ರಲ್ಲಿ ಇದನ್ನು ಅನಾವರಣಗೊಳಿಸಲಾಯಿತು.

    6ಜಿ ತಂತ್ರಜ್ಞಾನದ ಕುರಿತು:

    • 6ಜಿ ತಂತ್ರಜ್ಞಾನವು ನಿಸ್ತಂತು (ವೈರ್‌ಲೆಸ್) ಸಂವಹನ ತಂತ್ರಜ್ಞಾನದ ಮುಂದಿನ ಬೆಳವಣಿಗೆಯನ್ನು  ಪ್ರತಿನಿಧಿಸುತ್ತದೆ. ಇದು ಮೊಬೈಲ್ ನೆಟ್‌ವರ್ಕ್‌ಗಳ ಆರನೇ ತಲೆಮಾರಾಗಿದ್ದು, 5ಜಿಯ ನಂತರದ ತಂತ್ರಜ್ಞಾನವಾಗಿದೆ.
    • 6ಜಿ ತಂತ್ರಜ್ಞಾನವು ಪ್ರತಿ ಸೆಕೆಂಡಿಗೆ 1 ಟೆರಾಬಿಟ್  ಗರಿಷ್ಠ ಡೇಟಾ ದರಗಳನ್ನು ಒದಗಿಸಲಿದೆ. 10 Gbps ವೇಗವನ್ನು ನೀಡುವ 5ಜಿಗಿಂತ ಇದು ಸುಮಾರು 100 ಪಟ್ಟು ಹೆಚ್ಚು ವೇಗವಾಗಿರುತ್ತದೆ.
    • 6ಜಿ ತಂತ್ರಜ್ಞಾನವು 5ಜಿಯ 1 ಮಿಲಿಸೆಕೆಂಡ್‌ಗೆ ಹೋಲಿಸಿದರೆ  0.1 ಮಿಲಿಸೆಕೆಂಡ್‌ಗಳ ‘ಅಲ್ಟ್ರಾ-ಲೋ ಲೇಟೆನ್ಸಿ’ಯನ್ನು (ಅತ್ಯಲ್ಪ ವಿಳಂಬ) ಸಾಧಿಸಲಿದೆ.

    ಆಫ್ರಿಕಾದ ಪೆಂಗ್ವಿನ್‌ಗಳು

    ಸಾಮಾನ್ಯ ಅಧ್ಯಯನ- 3/ಪರಿಸರ; ಸುದ್ದಿಯಲ್ಲಿರುವ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ: 

    • ದಕ್ಷಿಣ ಆಫ್ರಿಕಾದಲ್ಲಿ ಸಾರ್ಡೀನ್ ಮೀನುಗಳ ಅತಿಯಾದ ಮೀನುಗಾರಿಕೆಯಿಂದಾಗಿ, 2004 ರಿಂದ 2011ರ ನಡುವೆ, ವಿಶೇಷವಾಗಿ ಡಾಸೆನ್ ಮತ್ತು ರಾಬೆನ್ ದ್ವೀಪಗಳ ಸುತ್ತಮುತ್ತ, 60,000ಕ್ಕೂ ಹೆಚ್ಚು ಆಫ್ರಿಕಾದ ಪೆಂಗ್ವಿನ್‌ಗಳು ಸಾವನ್ನಪ್ಪಿವೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ.

    ಆಫ್ರಿಕಾದ ಪೆಂಗ್ವಿನ್‌ಗಳ ಬಗ್ಗೆ:

    • ವೈಜ್ಞಾನಿಕ ಹೆಸರು: ಸ್ಫೆನಿಸ್ಕಸ್ ಡೆಮರ್ಸಸ್.
    • ಇವು ಅತ್ಯಂತ ಚಿಕ್ಕ ಪೆಂಗ್ವಿನ್ ಪ್ರಭೇದಗಳಲ್ಲಿ ಒಂದಾಗಿದ್ದು, ವೇಗವಾಗಿ ಈಜುವ ಸಾಮರ್ಥ್ಯ ಹೊಂದಿವೆ. ಇವು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಕರಾವಳಿ ತೀರಗಳಲ್ಲಿ ವಾಸಿಸುತ್ತವೆ.
    • ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳಿಗಿಂತ ಭಿನ್ನವಾಗಿ, ಇವು ಮಂಜುಗಡ್ಡೆಯ ಮೇಲೆ ವಾಸಿಸದೆ, ಮರಳು ತುಂಬಿದ ಕಡಲತೀರಗಳು ಮತ್ತು ಕಲ್ಲಿನ ದಡಗಳಲ್ಲಿ ವಾಸಿಸುತ್ತವೆ.
    • ಸ್ವರೂಪ: ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕಣ್ಣುಗಳ ಮೇಲೆ ಗುಲಾಬಿ ಬಣ್ಣದ ಬೋಳು ಕಲೆ ಅಥವಾ ಚರ್ಮದ ಭಾಗವನ್ನು ಹೊಂದಿರುತ್ತವೆ. ಮಾನವರ ಬೆರಳಚ್ಚುಗಳಂತೆ, ಪ್ರತಿ ಪೆಂಗ್ವಿನ್ ತನ್ನ ಎದೆಯ ಮೇಲೆ ವಿಶಿಷ್ಟವಾದ ಚುಕ್ಕೆಗಳ ವಿನ್ಯಾಸವನ್ನು ಹೊಂದಿರುತ್ತದೆ.
    • IUCN ಕೆಂಪುಪಟ್ಟಿ 2024:- ‘ತೀವ್ರವಾಗಿ ಅಳಿವಿನಂಚಿನಲ್ಲಿರುವ’ (CR).

    ನಿಮಗಿದು ತಿಳಿದಿದೆಯೇ? 

    • ಜಾಗತಿಕವಾಗಿ 18 ಪೆಂಗ್ವಿನ್ ಪ್ರಭೇದಗಳಿವೆ — ಇವುಗಳಲ್ಲಿ ರಾಜ, ಚಕ್ರವರ್ತಿ ಮತ್ತು ರಾಕ್‌ಹಾಪ್ಪರ್ ಪೆಂಗ್ವಿನ್‌ಗಳು ಅತ್ಯಂತ ಚಿರ ಪರಿಚಿತವಾಗಿವೆ.
  • ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಇದೀಗ ಸುದ್ದಿಯಲ್ಲಿದೆ:

    • ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪವಿರುವ 8.61 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶಕ್ಕೆ ನೀಡಲಾಗಿದ್ದ ‘ಜೈವಿಕ ವೈವಿಧ್ಯತೆ ಪರಂಪರೆ ತಾಣ’ (BHS) ಎಂಬ ಮಾನ್ಯತೆಯನ್ನು ರಾಜ್ಯ ಸರ್ಕಾರವು ಹಿಂತೆಗೆದುಕೊಂಡಿದೆ.

    ಜೈವಿಕ ವೈವಿಧ್ಯತೆ ಪರಂಪರೆ ತಾಣಗಳ (BHS) ಬಗ್ಗೆ:

    • ವ್ಯಾಖ್ಯಾನ:- ಇವು ಭೂಮಂಡಲ, ಕರಾವಳಿ, ಒಳನಾಡು ಅಥವಾ ಸಮುದ್ರ ಪ್ರದೇಶಗಳನ್ನು ಒಳಗೊಂಡಿರುವ ಸಮೃದ್ಧ, ವಿಶಿಷ್ಟ ಮತ್ತು ಪರಿಸರ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಹೊಂದಿರುವ ನಿರ್ದಿಷ್ಟ ಸ್ಥಳಗಳಾಗಿವೆ.
    • ಅಧಿಸೂಚನೆ:- ಈ ಪ್ರದೇಶಗಳನ್ನು “ಜೈವಿಕ ವೈವಿಧ್ಯತೆ ಕಾಯ್ದೆ, 2002” ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಅಧಿಸೂಚಿಸುತ್ತವೆ.
    • ಕರ್ನಾಟಕದ ‘ನಲ್ಲೂರು ಹುಣಸೆ ತೋಪು:- 2007ರಲ್ಲಿ ಭಾರತದ ಮೊಟ್ಟಮೊದಲ ಜೈವಿಕ ವೈವಿಧ್ಯತೆ ಪರಂಪರೆ ತಾಣವಾಗಿ ಘೋಷಿಸಲ್ಪಟ್ಟಿತು.
    • ಉದ್ದೇಶ:- “ಜೈವಿಕ ವೈವಿಧ್ಯತೆ ನಿರ್ವಹಣಾ ಸಮಿತಿ”ಗಳ (BMCs) ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಸ್ಥಳೀಯ ಜೀವನೋಪಾಯವನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಕರ್ನಾಟಕದ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳು (BHS):

    ಜೈವಿಕ ವೈವಿಧ್ಯತೆ ಪರಂಪರೆ ತಾಣ

    ಸ್ಥಳ

    ಮಾನ್ಯತೆ ನೀಡಿದ ವರ್ಷ

    ವಿಸ್ತೀರ್ಣ/ವಿವರಗಳು

    ಮಹತ್ವ

    ನಲ್ಲೂರು ಹುಣಸೆ ತೋಪು

    ಬೆಂಗಳೂರು

    2007

    54 ಎಕರೆ

    ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣ; ಇದು ಪ್ರಾಚೀನ ಹುಣಸೆ ಮರಗಳು ಹಾಗೂ ಸಮೃದ್ಧ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿದೆ.

    ಹೊಗ್ರೆಕಾನ್ ಶೋಲಾ ಅರಣ್ಯ

    ಚಿಕ್ಕಮಗಳೂರು

    2020ಕ್ಕಿಂತ ಮೊದಲು

    ಶೋಲಾ ಅರಣ್ಯಗಳ ಭಾಗ, ವನ್ಯಜೀವಿ ಕಾರಿಡಾರ್

    ಇದು ಕುದುರೆಮುಖ ಮತ್ತು ಭದ್ರಾ ಅಭಯಾರಣ್ಯಗಳನ್ನು ಸಂಪರ್ಕಿಸುತ್ತದೆ ಹಾಗೂ ವೈವಿಧ್ಯಮಯ ಸಸ್ಯವರ್ಗವನ್ನು ಹೊಂದಿದೆ.

    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (GKVK)

    ಬೆಂಗಳೂರು

    2020ಕ್ಕಿಂತ ಮೊದಲು

    ವಿಶಾಲ ಹಸಿರು ಆವರಣ

    ಪರಿಸರ ದೃಷ್ಟಿಯಿಂದ ಮಹತ್ವದ ನಗರ ಜೈವಿಕ ವೈವಿಧ್ಯತೆಯ ತಾಣವಾಗಿದೆ.

    ಅಂಬರಗುಡ್ಡ

    ಶಿವಮೊಗ್ಗ

    2020ಕ್ಕಿಂತ ಮೊದಲು

    ಶೋಲಾ ಅರಣ್ಯ ಮತ್ತು ಹುಲ್ಲುಗಾವಲು

    ಇದು ಸ್ಥಳೀಯ ಪ್ರಭೇದಗಳ ಸಂರಕ್ಷಣೆಗೆ ಅತ್ಯಂತ ಪ್ರಮುಖವಾಗಿದೆ.

    ಮಮದಾಪುರ ಮೀಸಲು ಅರಣ್ಯ

    ವಿಜಯಪುರ

    2024

    ಸುಮಾರು 1494 ಎಕರೆ

    ಇದನ್ನು ‘ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೈವಿಕ ವೈವಿಧ್ಯತೆ ಪರಂಪರೆ ತಾಣ’ ಎಂದೂ ಕರೆಯಲಾಗುತ್ತದೆ; ಇದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಪತನಶೀಲ ಅರಣ್ಯ ಪ್ರದೇಶವಾಗಿದೆ.

  • ವಂದೇ ಮಾತರಂಗೆ 150 ವರ್ಷಗಳು | ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ | IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) | ಸಿ. ರಾಜಗೋಪಾಲಾಚಾರಿ | ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ವಂದೇ ಮಾತರಂಗೆ 150 ವರ್ಷಗಳು

    ಸಾಮಾನ್ಯ ಅಧ್ಯಯನ -1 / ಆಧುನಿಕ ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ತನ್ನ ರಾಷ್ಟ್ರೀಯ ಹಾಡು (National Song) ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

    ‘ವಂದೇ ಮಾತರಂ’ ಹಾಡಿನ ಐತಿಹಾಸಿಕ ಹಿನ್ನೆಲೆ:

    • ‘ವಂದೇ ಮಾತರಂ’ ಹಾಡನ್ನು “ಬಂಕಿಮಚಂದ್ರ ಚಟ್ಟೋಪಾಧ್ಯಾಯರು” ಸಂಸ್ಕೃತದಲ್ಲಿ ತಮ್ಮ 1882ರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟಿಸಲಾಯಿತು.
    • ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು, ಇದು ಈ ಹಾಡಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
    • ಈ ಹಾಡು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಬಣ್ಣಿಸುತ್ತದೆ ಹಾಗೂ ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.

    ರಾಷ್ಟ್ರೀಯ ಪ್ರಜ್ಞೆಯ ಉದಯ:

    • 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆ ಅಥವಾ ಮಂತ್ರವಾಗಿ ಹೊರಹೊಮ್ಮಿತು.
    • ‘ವಂದೇ ಮಾತರಂ’ ಅನ್ನು ರಾಜಕೀಯ ಘೋಷಣೆಯಾಗಿ 1905ರ ಆಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಬಳಸಲಾಯಿತು.
    • ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ಹುತಾತ್ಮರಾಗುವ ಮುನ್ನ ‘ವಂದೇ ಮಾತರಂ’ ಎಂಬುದು ಕೊನೆಯ ಉದ್ಘೋಷವಾಗಿತ್ತು; ಇದು ಈ ಹಾಡನ್ನು ತ್ಯಾಗದ ಸಂಕೇತವನ್ನಾಗಿ ಪರಿವರ್ತಿಸಿತು.
    • 1907ರಲ್ಲಿ, ಮೇಡಂ ಭಿಕಾಜಿ ಕಾಮಾ ಅವರು ಬರ್ಲಿನ್‌ನ ಸ್ಟಟ್‌ಗಾರ್ಟ್‌ನಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
    • ಮಾತೃಭೂಮಿಯ ಪರಿಕಲ್ಪನೆಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು, 1905ರ ಅಕ್ಟೋಬರ್‌ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ವನ್ನು ಸ್ಥಾಪಿಸಲಾಯಿತು.
    • 1906ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಶೀರ್ಷಿಕೆಯ ಇಂಗ್ಲಿಷ್ ದಿನಪತ್ರಿಕೆಯನ್ನು ಪ್ರಾರಂಭಿಸಲಾಯಿತು; ನಂತರ ಅರವಿಂದೋ ಅವರು ಜಂಟಿ ಸಂಪಾದಕರಾಗಿ ಇದಕ್ಕೆ ಜೊತೆಯಾದರು.

    ರಾಷ್ಟ್ರೀಯ ಹಾಡು (National Song):

    • ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ನ ಸ್ಥಾನಮಾನದ ಕುರಿತು ಚರ್ಚಿಸಿತು.
    • 1950ರ ಜನವರಿ 24ರಂದು, ಇದರ ಮೊದಲ ಎರಡು ಚರಣಗಳನ್ನು ಭಾರತದ ‘ರಾಷ್ಟ್ರೀಯ ಹಾಡು’ ಎಂದು ಅಂಗೀಕರಿಸಲಾಯಿತು.

    ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಗ್ಗೆ:

    • ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದಾರೆ.
    • ಪ್ರಖ್ಯಾತ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರ ಕೊಡುಗೆಗಳು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದವು.
    • ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866), ಆನಂದಮಠ (1882) ಮತ್ತು ದೇವಿ ಚೌಧುರಾಣಿ (1884). ಇತ್ಯಾದಿ

    ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಥೈಲ್ಯಾಂಡ್ ದೇಶವು ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು.

    ಹಿನ್ನೆಲೆ:

    • ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವು 1907ರಲ್ಲಿ ಫ್ರೆಂಚರು ಕೈಗೊಂಡ ವಸಾಹತುಶಾಹಿ ಕಾಲದ ‘ಗಡಿ ನಿರ್ಣಯಗಳಿಗೆ’ ಸಂಬಂಧಿಸಿದ ದೀರ್ಘಕಾಲದ ಪ್ರಾದೇಶಿಕ ವಿವಾದವನ್ನು ಆಧರಿಸಿದೆ.
    • ಈ ವಿವಾದದ ಕೇಂದ್ರಬಿಂದು ‘ಪ್ರಿಹ ವಿಹಾರ್ ದೇವಾಲಯ’ವಾಗಿದೆ. ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ 11-12ನೇ ಶತಮಾನದ ಈ ಖಮೇರ್ ದೇಗುಲದ ಮೇಲೆ ಎರಡೂ ರಾಷ್ಟ್ರಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.
    • ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1962ರಲ್ಲಿ (ಮತ್ತು 2013ರಲ್ಲಿ ಮರುದೃಢೀಕರಿಸಿ), ಕಾಂಬೋಡಿಯಾದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಥೈಲ್ಯಾಂಡ್ ಈ ತೀರ್ಪುಗಳನ್ನು ತಿರಸ್ಕರಿಸಿದ್ದು, ಈ ಪ್ರದೇಶವು ತೀವ್ರವಾಗಿ ಸೈನ್ಯದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.

    IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ

    ಸಾಮಾನ್ಯ ಅಧ್ಯಯನ- 3/ಅರ್ಥವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ: 

    • ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೂನ್ 2025 ರ ತನ್ನ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ (ಪರಸ್ಪರ ಕಾರ್ಯಸಾಧ್ಯತೆಯ ಮೌಲ್ಯ)” ವರದಿಯಲ್ಲಿ, ವಹಿವಾಟಿನ ಪ್ರಮಾಣದ ಆಧಾರದ ಮೇಲೆ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ವಿಶ್ವದ ಅತಿದೊಡ್ಡ ‘ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ’ ಎಂದು ಗುರುತಿಸಿದೆ.

    ಏಕೀಕೃತ ಪಾವತಿ ವ್ಯವಸ್ಥೆ (UPI) ಯ ಬಗ್ಗೆ: 

    • ಆರಂಭ: UPI ಅನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) 2016 ರಲ್ಲಿ ವಿನ್ಯಾಸಗೊಳಿಸಿ, ಜಾರಿಗೆ ತಂದಿತು.
    • ಉದ್ದೇಶ: ಇದೊಂದು ಏಕೀಕೃತ ವ್ಯವಸ್ಥೆಯಾಗಿದ್ದು, ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ (ಯಾವುದೇ ಪಾಲ್ಗೊಳ್ಳುವ ಬ್ಯಾಂಕ್‌ನ) ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಬ್ಯಾಂಕಿಂಗ್ ವೈಶಿಷ್ಟ್ಯಗಳು, ಸುಗಮ ಹಣ ವರ್ಗಾವಣೆ ಮತ್ತು ವ್ಯಾಪಾರ ಪಾವತಿ  ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
    • ಕಾರ್ಯನಿರ್ವಹಿಸುತ್ತಿರುವ ಅಥವಾ ಯೋಜಿತ ‘ಪರಸ್ಪರ ಕಾರ್ಯಸಾಧ್ಯತೆ’ಯನ್ನು ಹೊಂದಿರುವ ದೇಶಗಳು: ಸಿಂಗಾಪುರ (PayNow), ಯುಎಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರೆ.

    ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:

    • ಸ್ಥಾಪನೆ: ಇದು ಭಾರತದಲ್ಲಿನ ಚಿಲ್ಲರೆ ಪಾವತಿಗಳ ಕಾರ್ಯಾವನ್ನು ನಿರ್ವಹಿಸುವ ಒಂದು ‘ಸರ್ವೋಚ್ಚ (ಪ್ರಧಾನ) ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
    • ಇದನ್ನು ‘ಪಾವತಿ ಮತ್ತು ನಿವಾರಣ ವ್ಯವಸ್ಥೆಗಳ ಕಾಯ್ದೆ, 2007’ ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ.

    NPCI ನ ಉತ್ಪನ್ನಗಳು: 

    • ರುಪೇ (RuPay)
    • ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
    • ಭಾರತ್ ಇಂಟರ್‌ಫೇಸ್ ಫಾರ್ ಮನಿ (BHIM)
    • ಏಕೀಕೃತ ಪಾವತಿ ವ್ಯವಸ್ಥೆ (UPI)
    • ಭಾರತ್ ಬಿಲ್ ಪಾವತಿ ವ್ಯವಸ್ಥೆ

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA)

    ಸಾಮಾನ್ಯ ಅಧ್ಯಯನ – 3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ  ಅಡಿಯಲ್ಲಿನ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಸಹಯೋಗದ ಉಪಕ್ರಮ’ದ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮಾತನಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ : ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ : 2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:- ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.

    ಸದಸ್ಯ ರಾಷ್ಟ್ರಗಳು:- ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ.

    ದೊಡ್ಡ ಬೆಕ್ಕುಗಳು 

    ದೈಹಿಕ ನೋಟ

    IUCN ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಪೂಮಾ (ಪೂಮಾ ಕಾನ್ಕಲರ್)

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಸಿ. ರಾಜಗೋಪಾಲಾಚಾರಿ

    ಸಾಮಾನ್ಯ ಅಧ್ಯಯನ-1/ಇತಿಹಾಸ

    ಇದೀಗ ಸುದ್ದಿಯಲ್ಲಿ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ರಾಜಾಜಿ’ ಎಂದೇ ಜನಪ್ರಿಯರಾಗಿದ್ದ ಸಿ. ರಾಜಗೋಪಾಲಾಚಾರಿ ಅವರ ಜನ್ಮ ದಿನವಾದ ಡಿಸೆಂಬರ್ 10 ರಂದು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸಿ. ರಾಜಗೋಪಾಲಾಚಾರಿ ಅವರ ಬಗ್ಗೆ:

    ಆರಂಭಿಕ ಜೀವನ ಮತ್ತು ಶಿಕ್ಷಣ:

    • ಇವರು ಮಹಾತ್ಮ ಗಾಂಧೀಜಿಯವರ ಆಪ್ತ ಸಹವರ್ತಿಯಾಗಿದ್ದರು.
    • ಕಾನೂನು ಪದವಿಯನ್ನು (1899) ಪೂರೈಸಿ, ಸೇಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
    • ಲಾರ್ಡ್ ಕರ್ಜನ್‌ನ 1905ರ ಬಂಗಾಳ ವಿಭಜನೆ ನೀತಿ ಮತ್ತು ತಿಲಕರ “ಸ್ವರಾಜ್ಯ”ದ ಕರೆಯು ಇವರ ಆರಂಭಿಕ ರಾಜಕೀಯ ಪ್ರಜ್ಞೆಯನ್ನು ರೂಪಿಸಿತು.

    ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

      • 1919ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದ ರಾಜಗೋಪಾಲಾಚಾರಿ ಅವರು, ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು, ಅಸಹಕಾರ ಚಳವಳಿ, ವೈಕೋಮ್ ಸತ್ಯಾಗ್ರಹ ಮತ್ತು ನಾಗರಿಕ ಅಸಹಕಾರ ಚಳುವಳಿ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
    • ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾಂತರವಾಗಿ ಮದ್ರಾಸ್ ಪ್ರಾಂತ್ಯದಲ್ಲಿ 1930ರ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು.
    • “ಭಾರತ ಬಿಟ್ಟು ತೊಲಗಿ” ಚಳುವಳಿಯ ನಂತರ, ಪಾಕಿಸ್ತಾನದ ವಿಷಯವಾಗಿ ಮುಸ್ಲಿಂ ಲೀಗ್‌ನೊಂದಿಗೆ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಸಿ.ಆರ್. ಸೂತ್ರವನ್ನು ಪ್ರಸ್ತಾಪಿಸುವ “ದಿ ವೇ ಔಟ್” ಕೃತಿಯನ್ನು ಪ್ರಕಟಿಸಿದರು.

    ಸ್ವಾತಂತ್ರ್ಯಾ ನಂತರದ ಕೊಡುಗೆಗಳು:

    • ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ತದನಂತರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ (1947–1950) ಆಗಿ ಸೇವೆ ಸಲ್ಲಿಸಿದರು.
    • ಭಾರತದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಮತ್ತು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದರು.
    • ಸರ್ದಾರ್ ಪಟೇಲ್ ಅವರ ನಿಧನದ ನಂತರ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು; ರಾಷ್ಟ್ರೀಯ ಏಕೀಕರಣ ಮತ್ತು ಮೊದಲ ಪಂಚವಾರ್ಷಿಕ ಯೋಜನೆ ಸೇರಿದಂತೆ ದೇಶದ ಆರಂಭಿಕ ಯೋಜನಾ ಪ್ರಕ್ರಿಯೆಗಳಿಗೆ ಮಹತ್ವದ ಕೊಡುಗೆ ನೀಡಿದರು.
    • ‘ಭಾರತ ರತ್ನ’:- ರಾಜಕೀಯ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಇವರಿಗೆ 1954ರಲ್ಲಿ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ಸಾಮಾನ್ಯ ಅಧ್ಯಯನ-2/ಆಡಳಿತ + ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದರು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಬಗ್ಗೆ:

    • ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನವು ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದ್ದು, ಅಕ್ಟೋಬರ್ 2025ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ನಾಗರಿಕರು ತಮ್ಮ ಹಕ್ಕಿನ ಸ್ವತ್ತುಗಳನ್ನು ಮರುಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಗುರಿ:- ಹಕ್ಕು ಕೋರದ ಠೇವಣಿಗಳು, ವಿಮಾ ಮೊತ್ತಗಳು, ಲಾಭಾಂಶಗಳು ಮತ್ತು ಇತರ ಹಣಕಾಸಿನ ಸ್ವತ್ತುಗಳನ್ನು ಮರುಪಡೆಯಲು ಜನರಿಗೆ ನೆರವಾಗುವ ಗುರಿಯನ್ನು ಇದು ಹೊಂದಿದೆ.
    • ಮಹತ್ವ:- ಇದು ವ್ಯಕ್ತಿಗಳಿಗೆ ತಮ್ಮ ಮರೆತುಹೋದ ಹಣಕಾಸಿನ ಸ್ವತ್ತುಗಳನ್ನು, ಬಳಸಬಹುದಾದ ನಿಧಿಗಳನ್ನಾಗಿ ಪರಿವರ್ತಿಸಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.

    ಇದು ನಿಮಗೆ ತಿಳಿದಿದೆಯೇ?

    • ಪ್ರಸ್ತುತವಾಗಿ, ಭಾರತೀಯ ಬ್ಯಾಂಕುಗಳು ಸುಮಾರು ₹78,000 ಕೋಟಿ ಮೊತ್ತದ ಹಕ್ಕು ಕೋರದ ಠೇವಣಿಗಳನ್ನು ಹೊಂದಿವೆ.
    • ವಿಮಾ ಕಂಪನಿಗಳಲ್ಲಿ ಸುಮಾರು ₹14,000 ಕೋಟಿ, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಸುಮಾರು ₹3,000 ಕೋಟಿ ಹಾಗೂ ಹಕ್ಕು ಕೋರದ ಲಾಭಾಂಶಗಳ ಮೊತ್ತವು ಸ್ಥೂಲವಾಗಿ ₹9,000 ಕೋಟಿಯಷ್ಟಿದೆ.

    ವಿವಿಧ ಉಪಕ್ರಮಗಳು

    ನಿಧಿಗಳ ಸುಲಭ ಪತ್ತೆ ಮತ್ತು ಹಕ್ಕು ಕೋರುವಿಕೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮೀಸಲಾದ ಆನ್‌ಲೈನ್ ಪೋರ್ಟಲ್‌ಗಳನ್ನು ರಚಿಸಲಾಗಿದೆ:

    • ಹಕ್ಕು ಕೋರದ ಬ್ಯಾಂಕ್ ಠೇವಣಿಗಳಿಗಾಗಿ ಆರ್‌ಬಿಐ ನ ಉದ್ಗಮ್ ಪೋರ್ಟಲ್.
    • ಹಕ್ಕು ಕೋರದ ವಿಮಾ ಮೊತ್ತಗಳಿಗಾಗಿ ಐಆರ್‌ಡಿಎಐ ನ ಬಿಮಾ ಭರೋಸಾ ಪೋರ್ಟಲ್.
    • ಹಕ್ಕು ಕೋರದ ಮ್ಯೂಚುವಲ್ ಫಂಡ್ ಮೊತ್ತಗಳಿಗಾಗಿ ಸೆಬಿಯ ಮಿತ್ರ ಪೋರ್ಟಲ್.
    • ಪಾವತಿಯಾಗದ ಲಾಭಾಂಶಗಳು ಮತ್ತು ಹಕ್ಕು ಕೋರದ ಷೇರುಗಳಿಗಾಗಿ ಐಇಪಿಎಫ್‌ಎ ಪೋರ್ಟಲ್ (IEPFA Portal).

    ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ, ದೇಶದಾದ್ಯಂತ 477 ಜಿಲ್ಲೆಗಳಲ್ಲಿ ಸೌಲಭ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.

  • ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಇದೀಗ ಸುದ್ದಿಯಲ್ಲಿದೆ: 

    • 2024-25ನೇ ಸಾಲಿನ ಭಾರತದ ಸೇವಾ ರಫ್ತು ವಲಯದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು, $78.64 ಶತಕೋಟಿ ಕೊಡುಗೆ ನೀಡುವ ಮೂಲಕ ದೇಶದ ಒಟ್ಟು ಸೇವಾ ರಫ್ತಿನಲ್ಲಿ ಸುಮಾರು 35% ರಷ್ಟು ಪಾಲನ್ನು ಹೊಂದಿದೆ.
    • ಕರ್ನಾಟಕದ ರಫ್ತು ಸುಗಮಗೊಳಿಸುವ ಘಟಕವಾದ “ವಿಶ್ವೇಶ್ವರಯ್ಯ ವ್ಯಾಪಾರ ಪ್ರೋತ್ಸಾಹಕ ಕೇಂದ್ರ” (VTPC)ದ ಪ್ರಕಾರ, 2021–22 ರ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಭಾರತದ ಸೇವಾ ರಫ್ತುಗಳಲ್ಲಿ 41% ರಷ್ಟು ಕೊಡುಗೆ ನೀಡಿದ್ದು, ಇದರ ಮೌಲ್ಯ $254.4 ಶತಕೋಟಿಗಳಷ್ಟಿತ್ತು.
    • ಕರ್ನಾಟಕ ರಾಜ್ಯದ ಆರ್ಥಿಕತೆಯು ಪ್ರಧಾನವಾಗಿ ಸೇವಾ ವಲಯದ ಮೇಲೆ ಅವಲಂಬಿತವಾಗಿದೆ. ‘ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25’ರ ವರದಿಯ ಅನ್ವಯ, ರಾಜ್ಯದ ಒಟ್ಟು ಮೌಲ್ಯವರ್ಧನೆಯಲ್ಲಿ (GSVA) ಸೇವಾ ವಲಯದ ಪಾಲು 68.1% ರಷ್ಟಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಏಕೈಕ ಅತಿದೊಡ್ಡ ಕೊಡುಗೆ ನೀಡುವ ಜಿಲ್ಲೆಯಾಗಿ ಹೊರಹೊಮ್ಮಿದೆ.
  • ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF) | ರಫ್ತು ಉತ್ತೇಜನಾ ಗುರಿ (EPM)

    ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF)

    ಸಾಮಾನ್ಯ ಅಧ್ಯಯನ – 2/ಆಡಳಿತ; ಸಾಮಾನ್ಯ ಅಧ್ಯಯನ- 3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು, ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಏಳು ತಂತ್ರಜ್ಞಾನಗಳನ್ನು ಮೂರು ರಕ್ಷಣಾ ಪಡೆಗಳಿಗೆ ಹಸ್ತಾಂತರಿಸಿದೆ.

    ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯ ಬಗ್ಗೆ:

    • ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಡಿಆರ್‌ಡಿಒ ಮೂಲಕ ಅನುಷ್ಠಾನಗೊಳ್ಳುತ್ತಿರುವ ರಕ್ಷಣಾ ಸಚಿವಾಲಯದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.
    • ಉದ್ದೇಶ:- ಇದು ಭಾರತೀಯ ಕೈಗಾರಿಕೆಗಳಿಗೆ, ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಹಾಗೂ ನವೋದ್ಯಮಗಳಿಗೆ, ಸ್ವದೇಶಿ ರಕ್ಷಣಾ ಮತ್ತು ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ಆವಿಷ್ಕರಿಸಲು, ಸಂಶೋಧಿಸಲು, ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಅನುದಾನವನ್ನು ಒದಗಿಸುತ್ತದೆ.

    ರಫ್ತು ಉತ್ತೇಜನಾ ಗುರಿ (EPM)

    ಸಾಮಾನ್ಯ ಅಧ್ಯಯನ –  3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಫ್ತುನ್ನು ಉತ್ತೇಜಿಸಲು, ವಿಶೇಷವಾಗಿ ಎಂಎಸ್ಎಂಇ ಗಳು ಮತ್ತು ಹೆಚ್ಚು ಕಾರ್ಮಿಕಾಧಾರಿತ ವಲಯಗಳಿಗೆ ಉತ್ತೇಜನ ನೀಡಲು, ಸರ್ಕಾರವು ₹25,060 ಕೋಟಿ ಮೊತ್ತದ “ರಫ್ತು ಉತ್ತೇಜನಾ ಗುರಿ” ಗೆ ಅನುಮೋದನೆ ನೀಡಿದೆ.

    ರಫ್ತು ಉತ್ತೇಜನಾ ಮಿಷನ್ ಬಗ್ಗೆ:

    • ಪ್ರಾರಂಭ:- 2025-26ರ ಕೇಂದ್ರ ಮುಂಗಡಪತ್ರದಲ್ಲಿ, ಹಣಕಾಸು ಸಚಿವರು ರಫ್ತು ಉತ್ತೇಜನಾ ಗುರಿ ಅನ್ನು ಘೋಷಿಸಿದರು.
    • ಉದ್ದೇಶ:- ಇದು ರಫ್ತು ಸಾಲಕ್ಕೆ ಸುಲಭ ಲಭ್ಯತೆಯನ್ನು, ಗಡಿಯಾಚೆಗಿನ ಅಪವರ್ತನೀಕರಣ (ಫ್ಯಾಕ್ಟರಿಂಗ್) ಬೆಂಬಲವನ್ನು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿನ ಸುಂಕ ರಹಿತ ಕ್ರಮಗಳನ್ನು ನಿಭಾಯಿಸಲು ಎಂಎಸ್ಎಂಇ ಗಳಿಗೆ ಬೆಂಬಲವನ್ನು ಒದಗಿಸಲು ಸಹಕಾರಿಯಾಗುತ್ತದೆ.
    • ಅವಧಿ:- 2025-26 ರಿಂದ 2030-31ರ ಆರ್ಥಿಕ ವರ್ಷದವರೆಗೆ.
    • ಎರಡು ಸಮಗ್ರ ಉಪ-ಯೋಜನೆಗಳು:– 
    • ನಿರ್ಯಾತ್ ಪ್ರೋತ್ಸಾಹನ್  
    • ನಿರ್ಯಾತ್ ದಿಶಾ
    1. “ನಿರ್ಯಾತ್ ಪ್ರೋತ್ಸಾಹನ್”- ಹಣಕಾಸಿನ ಬೆಂಬಲ:
    • ರಫ್ತುದಾರರಿಗಾಗಿ ಸಾಲ ಖಾತರಿ ಯೋಜನೆ (CGSE): ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ ನಿಯಮಿತ (NCGTC) ದಿಂದ 100% ರಕ್ಷಣೆಯನ್ನು (ವ್ಯಾಪ್ತಿ) ಒದಗಿಸುತ್ತದೆ.
    • ಅರ್ಹ ರಫ್ತುದಾರರಿಗೆ (‘ಎಂಎಸ್ಎಂಇ’ಗಳು ಸೇರಿದಂತೆ) ₹20,000 ಕೋಟಿಯವರೆಗೆ ಹೆಚ್ಚುವರಿ ಸಾಲ ಸೌಲಭ್ಯಗಳು.
    • ಇದು ಮೇಲಾಧಾರ-ರಹಿತ ಸಾಲವನ್ನು ಸಕ್ರಿಯಗೊಳಿಸುತ್ತದೆ ಹಾಗೂ ದ್ರವ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ.
    1. “ನಿರ್ಯಾತ್ ದಿಶಾ”- ಹಣಕಾಸೇತರ ಬೆಂಬಲ:
    • ಸುಂಕ ರಹಿತ ಅಡೆತಡೆಗಳ (NTBs) ನಿವಾರಣೆ: ನಿಯಮಗಳ ಅನುಸರಣೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಮಾನದಂಡಗಳಿಗೆ ಧನಸಹಾಯ ಒದಗಿಸುವುದು.
    • ಮಾರುಕಟ್ಟೆ ಸ್ವಾಧೀನ ಮತ್ತು ಬ್ರ್ಯಾಂಡಿಂಗ್: ಅಂತರರಾಷ್ಟ್ರೀಯ ಪ್ರದರ್ಶನ, ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ಗಾಗಿ ನೆರವು ನೀಡುವುದು.
    • ಸರಕು ಸಾಗಣೆ ಮತ್ತು ಪೂರೈಕೆ ನಿರ್ವಹಣೆ ವೆಚ್ಚ ಕಡಿತ: ಪೂರೈಕೆ ಸರಪಳಿ ದಕ್ಷತೆ ಮತ್ತು ವ್ಯಾಪಾರ ಸೌಲಭ್ಯಕ್ಕಾಗಿ ಬೆಂಬಲ ನೀಡುವುದು.
  • ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸಚಿವ ಸಂಪುಟವು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಈ ಮಸೂದೆಯ ಪ್ರಮುಖ ಲಕ್ಷಣಗಳು:

    • ಉದ್ದೇಶ:- ಸಮಾಜದಲ್ಲಿ ಅಸಾಮರಸ್ಯ ಮತ್ತು ದ್ವೇಷಕ್ಕೆ ಕಾರಣವಾಗುವ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧಗಳ ಪ್ರಸಾರ, ಪ್ರಕಟಣೆ ಅಥವಾ ಪ್ರೋತ್ಸಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
    • ಗುರಿ:- ವ್ಯಕ್ತಿಗಳು, ಗುಂಪುಗಳು ಅಥವಾ ಸಂಸ್ಥೆಗಳ ವಿರುದ್ಧ ಹಾನಿ, ಅಸಾಮರಸ್ಯ, ಹಗೆತನ ಅಥವಾ ದ್ವೇಷವನ್ನು ಉಂಟುಮಾಡುವ ಕೃತ್ಯಗಳನ್ನು ನಿಯಂತ್ರಿಸುವ ಗುರಿಯನ್ನು ಇದು ಹೊಂದಿದೆ.
    • ಅನ್ವಯ:- ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ.
    • ದ್ವೇಷ ಭಾಷಣದ ವ್ಯಾಖ್ಯಾನ: ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತವಾಗಿರುವ ಅಥವಾ ಮೃತರಾದ ವ್ಯಕ್ತಿ, ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ಹಗೆತನದ ಭಾವನೆಗಳು ಅಥವಾ ದ್ವೇಷ ಅಥವಾ ಅಸೂಯೆಯನ್ನು ಉಂಟುಮಾಡುವ ಉದ್ದೇಶದಿಂದ, ಸಾರ್ವಜನಿಕವಾಗಿ ಆಡಿದ ಅಥವಾ ಬರೆದ ಪದಗಳು, ಚಿಹ್ನೆಗಳು ಅಥವಾ ದೃಶ್ಯ ಪ್ರಾತಿನಿಧ್ಯಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ವ್ಯಕ್ತಪಡಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಯಾವುದೇ ಅಭಿವ್ಯಕ್ತಿಯನ್ನು ಇದು ಒಳಗೊಂಡಿದೆ.
    • ಪೂರ್ವಾಗ್ರಹ ಪೀಡಿತ ಹಿತಾಸಕ್ತಿ:- ಇದು ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ನಿವಾಸ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟನ್ನು ಒಳಗೊಂಡಿರುತ್ತದೆ.
    • ಶಿಕ್ಷೆ ಮತ್ತು ದಂಡ:- 1 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ಒಳಗೊಂಡಿರುತ್ತದೆ.
    • ಸಂಜ್ಞೇಯ ಮತ್ತು ಜಾಮೀನುರಹಿತ:- ಈ ಅಪರಾಧಗಳು ಸಂಜ್ಞೇಯ (Cognisable) ಮತ್ತು ಜಾಮೀನುರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡುತ್ತವೆ.
    • ಕೇಂದ್ರ ಕಾನೂನುಗಳೊಂದಿಗೆ ಸಮನ್ವಯ:- ಕಾರ್ಯವಿಧಾನದ ಏಕರೂಪತೆಗಾಗಿ ಈ ಮಸೂದೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ನಿಬಂಧನೆಗಳನ್ನು ಒಳಗೊಂಡಿದೆ.

    ಸಾಂವಿಧಾನಿಕ ನಿಬಂಧನೆಗಳು:

    • ವಿಧಿ 19(2):- ಇದು ವಿಧಿ 19(1)(a) ಅಡಿಯಲ್ಲಿ ಲಭ್ಯವಿರುವ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ವಿಧಿಸಬಹುದಾದ ಸಮಂಜಸವಾದ ನಿರ್ಬಂಧಗಳ ಬಗ್ಗೆ ವ್ಯವಹರಿಸುತ್ತದೆ.
    • ರಾಜ್ಯವು ಭಾಷಣವನ್ನು ನಿರ್ಬಂಧಿಸಬಹುದಾದ ಸಂದರ್ಭಗಳು:- ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ, ನ್ಯಾಯಾಲಯದ ನಿಂದನೆ, ಮಾನಹಾನಿ ಮತ್ತು ಅಪರಾಧಕ್ಕೆ ಪ್ರಚೋದನೆ.

    ದ್ವೇಷ ಭಾಷಣವನ್ನು ಎದುರಿಸಲು ಕೈಗೊಂಡ ಕ್ರಮಗಳು:

    • ಭಾರತೀಯ ದಂಡ ಸಂಹಿತೆ (IPC) / ಭಾರತೀಯ ನ್ಯಾಯ ಸಂಹಿತೆ (BNS), 2023:- ದಂಡ ಸಂಹಿತೆಗಳ ಸೆಕ್ಷನ್ 153A, ಸೆಕ್ಷನ್ 295A ನಂತಹ ನಿರ್ದಿಷ್ಟ ಸೆಕ್ಷನ್‌ಗಳು ಗುಂಪುಗಳ ನಡುವೆ (ಧರ್ಮ, ಜನಾಂಗ, ಭಾಷೆ) ಹಗೆತನವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಅಥವಾ ಸಾರ್ವಜನಿಕರಲ್ಲಿ ಭೀತಿ/ಅಶಾಂತಿಯನ್ನು ಪ್ರಚೋದಿಸುವುದನ್ನು ಅಪರಾಧೀಕರಿಸುತ್ತವೆ.
    • ಜನಪ್ರತಿನಿಧಿ ಕಾಯ್ದೆ, 1951:- ಸೆಕ್ಷನ್ 123(3), 123(3A): ಚುನಾವಣೆಯ ಸಮಯದಲ್ಲಿ ದ್ವೇಷವನ್ನು ಪ್ರಚೋದಿಸುವ ಅಥವಾ ಧರ್ಮ, ಜಾತಿ, ಸಮುದಾಯದ ಹೆಸರಿನಲ್ಲಿ ಮನವಿ ಮಾಡುವ ರಾಜಕೀಯ ಭಾಷಣಗಳನ್ನು ನಿಷೇಧಿಸುತ್ತವೆ.
    • ಪ್ರವಾಸಿ ಭಲೈ ಸಂಘಟನ್ ವಿರುದ್ಧ ಭಾರತ ಒಕ್ಕೂಟ, 2014:- ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಒಪ್ಪಿಕೊಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಕಾನೂನನ್ನು ರೂಪಿಸುವಂತೆ ಸಂಸತ್ತಿಗೆ ಶಿಫಾರಸು ಮಾಡಿತು.
    • ಅಮಿಶ್ ದೇವಗನ್ ವಿರುದ್ಧ ಭಾರತ ಒಕ್ಕೂಟ, 2020:- ಸರ್ವೋಚ್ಚ ನ್ಯಾಯಾಲಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ವಿಧಿ 19) ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ದ್ವೇಷ ಭಾಷಣವನ್ನು ನಿರ್ಬಂಧಿಸುವ ಅಗತ್ಯತೆಯ ನಡುವಿನ ಸಮತೋಲನದ ಬಗ್ಗೆ ವಿವರಿಸಿದೆ.
  • ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) | ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)

    ಸಾಮಾನ್ಯ ಅಧ್ಯಯನ – 2/ ಶಾಸನಬದ್ಧ ಸಂಸ್ಥೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಯೊಂದು ಬೃಹತ್ ಪ್ರಮಾಣದಲ್ಲಿ ವಿಮಾನಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ’ವು (DGCA), ಹೊಸದಾಗಿ ಜಾರಿಗೆ ತಂದಿರುವ “ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿ ಮಿತಿಗಳ” (FDTL) ನಿಯಮಗಳಿಂದ ಒಂದು ಬಾರಿಯ ವಿನಾಯಿತಿಯನ್ನು ನೀಡಿದೆ.

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದ ಬಗ್ಗೆ:

    • ಸ್ಥಾಪನೆ: ಇದನ್ನು 1927 ರಲ್ಲಿ ಒಂದು ಸರ್ಕಾರಿ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ಕಾನೂನು ಸ್ಥಾನಮಾನ: ಇದು “ವಿಮಾನ ಕಾಯ್ದೆ”ಯ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಒಂದು ‘ಶಾಸನಬದ್ಧ ಸಂಸ್ಥೆ’ಯಾಗಿದೆ.
    • ಆಡಳಿತಾತ್ಮಕ ನಿಯಂತ್ರಣ: ಇದು ನಾಗರಿಕ ವಿಮಾನಯಾನ ಸಚಿವಾಲಯದ (MoCA) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಗುರಿ: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಯ ಮಾನದಂಡಗಳ ಮೂಲಕ ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿಮಾನ ಸಾರಿಗೆಯನ್ನು ಉತ್ತೇಜಿಸುವುದು.

    ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ಸಾಮಾನ್ಯ ಅಧ್ಯಯನ -3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಮಲೇಷ್ಯಾ ದೇಶಗಳು, ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ‘ಹರಿಮೌ ಶಕ್ತಿ, 2025’ ಸಮರಾಭ್ಯಾಸದ 5ನೇ ಆವೃತ್ತಿಯನ್ನು ಪ್ರಾರಂಭಿಸಿವೆ.

    ಹರಿಮಾವು ಶಕ್ತಿ ಸಮರಾಭ್ಯಾಸದ ಬಗ್ಗೆ:

    • ಇದು ಭಾರತೀಯ ಸೇನೆ ಮತ್ತು ಮಲೇಷ್ಯಾ ಸೇನೆಗಳ ನಡುವಿನ ‘ದ್ವಿಪಕ್ಷೀಯ ಸೇನಾ ಸಮರಾಭ್ಯಾಸ’ವಾಗಿದೆ.

    ಈ ಸಮರಾಭ್ಯಾಸವು ಅರಣ್ಯ ಯುದ್ಧ, ಬಂಡಾಯ ನಿಗ್ರಹ ಕಾರ್ಯಾಚರಣೆಗಳು ಮತ್ತು ಅರೆ-ನಗರ ಪ್ರದೇಶದ ಯುದ್ಧ ಸನ್ನಿವೇಶಗಳಲ್ಲಿ ಎರಡೂ ಪಡೆಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಜೊತೆಗೆ, ಭವಿಷ್ಯದ ಕಾರ್ಯಾಚರಣೆಗಳಲ್ಲಿ ‘ಸುಗಮ ಸಹಕಾರ’ವನ್ನು ಸಾಧ್ಯವಾಗಿಸುವುದು ಇದರ ಉದ್ದೇಶವಾಗಿದೆ.