ಬೆಸ್ಕಾಂನಿಂದ ಟ್ರಾನ್ಸ್ಫಾರ್ಮರ್ಗಳ ಮೇಲ್ವಿಚಾರಣೆಗೆ DTLMS- ಮೊಬೈಲ್ ಆಪ್ ಬಿಡುಗಡೆ
ಇದೀಗ ಸುದ್ದಿಯಲ್ಲಿದೆ:
ಬೆಸ್ಕಾಂ (BESCOM), ‘DTLMS- ಡಿಸ್ಟ್ರಿಬ್ಯೂಷನ್ ಟ್ರಾನ್ಸ್ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ಸಿಸ್ಟಮ್’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.
DTLMS ಬಗ್ಗೆ:
DTLMS ಪೂರ್ಣ ರೂಪ:- ‘ಡಿಸ್ಟ್ರಿಬ್ಯೂಷನ್ ಟ್ರಾನ್ಸ್ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ಸಿಸ್ಟಮ್’ ಅಪ್ಲಿಕೇಶನ್.
ಅಭಿವೃದ್ಧಿಪಡಿಸಿದವರು:-ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ).
ಪ್ರಾಥಮಿಕ ಉದ್ದೇಶ:-ಗ್ರಾಹಕರಿಗೆ ಗುಣಮಟ್ಟದ ಮತ್ತು ತಡೆರಹಿತ ವಿದ್ಯುತ್ ಸರಬರಾಜನ್ನು ಖಚಿತಪಡಿಸುವುದು.
ಗುರಿ ವ್ಯಾಪ್ತಿ:-ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿರುವ 5 ಲಕ್ಷಕ್ಕೂ ಹೆಚ್ಚು ವಿತರಣಾ ಟ್ರಾನ್ಸ್ಫಾರ್ಮರ್ಗಳ ಮೇಲ್ವಿಚಾರಣೆ ಮತ್ತು ವ್ಯವಸ್ಥಿತವಾಗಿತಡೆಗಟ್ಟುವ ನಿರ್ವಹಣೆಯನ್ನು ಕೈಗೊಳ್ಳಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ.
ಕಾರ್ಯವಿಧಾನ:- ಈ ಆ್ಯಪ್ ಅಧಿಕಾರಿಗಳಿಗೆ ವಿತರಣಾ ಟ್ರಾನ್ಸ್ಫಾರ್ಮರ್ಗಳ ಕಾರ್ಯಾಚರಣೆ, ದುರಸ್ತಿ ಮತ್ತು ದಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಸ್ವತ್ತುಗಳ ನೈಜ-ಸಮಯದ ಮೇಲ್ವಿಚಾರಣೆ:- ಕ್ಷೇತ್ರಾಧಿಕಾರಿಗಳು ಎಲ್ಲಾ ಟ್ರಾನ್ಸ್ಫಾರ್ಮರ್ ನಿರ್ವಹಣಾ ವಿವರಗಳನ್ನು ನೇರವಾಗಿ ಅಪ್ಲಿಕೇಶನ್ಗೆ ನಮೂದಿಸಬಹುದು.
ಬೃಹತ್ ಜನಸಂಖ್ಯೆ ಆಧಾರಿತ ಅಧ್ಯಯನವೊಂದರ ಪ್ರಕಾರ, ಎಚ್ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯ ಹೆಚ್ಚಿನ ವ್ಯಾಪ್ತಿಯು, ಲಸಿಕೆ ಪಡೆಯದ ಮಹಿಳೆಯರಲ್ಲೂ ಸಹ ‘ಕ್ಯಾನ್ಸರ್-ಪೂರ್ವ ಗರ್ಭಕಂಠದ ಗಾಯಗಳನ್ನು’ ಕಡಿಮೆ ಮಾಡಬಲ್ಲದು ಎಂದು ತೋರಿಸಿದೆ. ಇದು ಬಲವಾದ ‘ಸಾಮೂಹಿಕ ರೋಗನಿರೋಧಕ ಶಕ್ತಿಯ’ ಪರಿಣಾಮವನ್ನು ಎತ್ತಿ ತೋರಿಸುತ್ತದೆ.
ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:
ಗರ್ಭಕಂಠದ ಕ್ಯಾನ್ಸರ್ ಮಹಿಳೆಯ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಇರುವ ಪ್ರವೇಶ ದ್ವಾರ) ಬೆಳೆಯುತ್ತದೆ.
ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆ:- ಬಹುತೇಕ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (99%) ‘ಅಪಾಯಕಾರಿ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನೊಂದಿಗೆ ಸಂಪರ್ಕ ಹೊಂದಿವೆ. ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯವಾದ ವೈರಸ್ ಆಗಿದೆ.
4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್:- ಇದು ವಿಶ್ವದಾದ್ಯಂತ ಮಹಿಳೆಯರಲ್ಲಿ ಕಂಡುಬರುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
ಭಾರತದಲ್ಲಿ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್:- ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಇದಾಗಿದೆ.
ಚಿಕಿತ್ಸೆ ನೀಡಬಹುದು:-ರೋಗವನ್ನು ಮೊದಲೇ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಿದರೆ, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ.
‘ಗಾರ್ಡಾಸಿಲ್’ ಮತ್ತು ‘ಸರ್ವವ್ಯಾಕ್’ ಲಸಿಕೆಗಳು:- ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಪ್ರಸ್ತುತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
ಮೆರ್ಕ್ ಅಭಿವೃದ್ಧಿ ಪಡಿಸಿದ ‘ಗಾರ್ಡಾಸಿಲ್’
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ‘ಸರ್ವವ್ಯಾಕ್’.
ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ
ಇದೀಗ ಸುದ್ದಿಯಲ್ಲಿದೆ:
ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನಿಭಾಯಿಸಲು ರಾಜಸ್ವ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ.
ಈ ಆಯೋಗದ ಶಿಫಾರಸು ಮತ್ತು ಉದ್ದೇಶ:
ಪ್ರಸ್ತಾಪಿಸಿದವರು:- ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ.
ಮೂಲ ಉದ್ದೇಶ:- ಕಳೆದ 2 ಆರ್ಥಿಕ ವರ್ಷಗಳಲ್ಲಿ ಹೆಚ್ಚಿರುವ ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜಸ್ವ ವೆಚ್ಚವನ್ನು ಆದ್ಯತೆ ಮತ್ತು ತರ್ಕಬದ್ಧಗೊಳಿಸುವುದು.
ಆದ್ಯತೆಯ ಕ್ರಮ:-
ಕಾರ್ಯಚಟುವಟಿಕೆಗೆ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಗೊಳಿಸಲು ಮತ್ತು
ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು.
ಪ್ರಮುಖ ಶಿಫಾರಸುಗಳು:
ಯೋಜನೆಗಳ ಪರಿಷ್ಕರಣೆ:- ಹಳೆಯದಾದ, ಅನುದಾನವಿಲ್ಲದ ಅಥವಾ ಸಾಲ ನಿರ್ವಹಣೆಯ ಭಾಗವಾಗಿರುವ ಸುಮಾರು 1,000 ಲೆಕ್ಕ ಶೀರ್ಷಿಕೆಗಳು ಅಥವಾ ಯೋಜನೆಗಳನ್ನು (ಒಟ್ಟು 2,874) ಕೊನೆಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಶಿಫಾರಸು ಮಾಡಿದೆ.
ನೇಮಕಾತಿ ಸುಧಾರಣೆಗಳು:-
ಹೊಸ ಹುದ್ದೆಗಳ ಸೃಜನೆಯನ್ನು ನಿರ್ಬಂಧಿಸುವುದು.
ವಾರ್ಷಿಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವುದು.
‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಹೊರಗುತ್ತಿಗೆಯನ್ನು ಸ್ಥಗಿತಗೊಳಿಸುವುದು.
ಸಿಬ್ಬಂದಿ ಅಂಕಿಅಂಶಗಳು:
ಖಾಲಿ ಹುದ್ದೆಗಳು:- 42 ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳ ಪೈಕಿ 2.94 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಆಯೋಗವು ಗುರುತಿಸಿದೆ.
ಪ್ರಸ್ತುತ ಸ್ಥಿತಿ:- ಪ್ರಸ್ತುತ ಕೇವಲ 5.18 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಸುಮಾರು 70,000 ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ.
ಇತ್ತೀಚಿಗೆ, ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ, ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.
ರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ:
ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನ:- ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ಇದನ್ನು ಆಚರಿಸಲಾಗುತ್ತದೆ.
ಯುವಜನರ ಸಾಮರ್ಥ್ಯದ ಮೇಲಿನ ಅವರ ಅಚಲವಾದ ನಂಬಿಕೆಯು, ದೇಶದ ಯುವ ನಾಗರಿಕರ ಮನದಲ್ಲಿ ಇಂದಿಗೂ ಆಳವಾಗಿ ಪ್ರತಿಧ್ವನಿಸುತ್ತಿದೆ.
ಶಿಕ್ಷಣ, ನವೋದ್ಯಮಗಳು, ಸೇವೆ ಮತ್ತು ನಾಯಕತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರ ಪ್ರಮುಖ ಪಾತ್ರವನ್ನು ‘ರಾಷ್ಟ್ರೀಯ ಯುವ ದಿನ 2026’ ಎತ್ತಿ ತೋರಿಸುತ್ತದೆ.
ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಈ ದಿನವು, ಯುವಕರು ಕೇವಲ ಉತ್ತರಾಧಿಕಾರಿಗಳಲ್ಲ, ಬದಲಿಗೆ “2047 ರ ವಿಕಸಿತ ಭಾರತ ಕನಸಿನತ್ತ ಸಾಗುವ ಭಾರತದ ಪಯಣದ ಶಿಲ್ಪಿಗಳು” ಎಂಬುದನ್ನು ಒತ್ತಿಹೇಳುತ್ತದೆ.
ಯುವಕರಿಗಾಗಿ ಸರ್ಕಾರದ ಉಪಕ್ರಮಗಳು:
ಮೇರಾ ಯುವ ಭಾರತ್ (MY Bharat):– ಇದು ಸ್ವಾಯತ್ತ, ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
ಸಚಿವಾಲಯ:-ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
ಉದ್ದೇಶ:- ಇದು ಸ್ವಯಂಸೇವಕತನ, ಕೌಶಲ್ಯ ಅಭಿವೃದ್ಧಿ, ನಾಯಕತ್ವ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುತ್ತದೆ.
ರಾಷ್ಟ್ರೀಯ ಸೇವಾ ಯೋಜನೆ (NSS):- ಇದು
ಸಚಿವಾಲಯ:-ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
ಉದ್ದೇಶ:- ಸಮುದಾಯ ಸೇವೆಯ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ ಮಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ.
ಅಗ್ನಿಪಥ ಯೋಜನೆ:-
ಪ್ರಾರಂಭ:- ಕೇಂದ್ರ ಸರ್ಕಾರವು 2022 ರಲ್ಲಿ
ಉದ್ದೇಶ:-ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರನ್ನೂ ಭಾರತದ ಮೂರೂ ಸೇನೆಗಳ ‘ಅಧಿಕಾರಿ ಹುದ್ದೆಗಿಂತ ಕೆಳಗಿನ ಶ್ರೇಣಿಗೆ’ 4 ವರ್ಷಗಳ ಅವಧಿಗೆ ‘ಅಗ್ನಿವೀರರನ್ನಾಗಿ’ ನೇಮಿಸಿಕೊಳ್ಳಲಾಗುತ್ತದೆ.
PM-SETU ಯೋಜನೆ:-
PM-SETU ವಿಸ್ತರಿತ ರೂಪ:-ಉನ್ನತೀಕರಿಸಿದ ಐಟಿಐಗಳ ಮೂಲಕ – ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ ಯೋಜನೆ.
ಪ್ರಾರಂಭ:- 2025 ರ ಅಕ್ಟೋಬರ್
ಉದ್ದೇಶ:- ಇದು ಭಾರತದ ‘ಕೈಗಾರಿಕಾ ತರಬೇತಿ ಸಂಸ್ಥೆಗಳ’ (ITIs) ಜಾಲವನ್ನು ಆಧುನೀಕರಿಸಲು ಮತ್ತು ಜಾಗತಿಕ ಕೈಗರಿಕೋದ್ಯಮದ ಮಾನದಂಡಗಳೊಂದಿಗೆ ವೃತ್ತಿಪರ ತರಬೇತಿಯನ್ನು ಸಂಯೋಜಿಸಲು ರೂಪಿಸಲಾಗಿದೆ
ಹಣಕಾಸಿನ ಹಂಚಿಕೆ:-ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಕೌಶಲ್ಯ ಭಾರತ ಮಿಷನ್ (SIM):-
ಪ್ರಾರಂಭ:-2015 ರಲ್ಲಿ, ವಿಶ್ವ ಯುವ ಕೌಶಲ್ಯ ದಿನದಂದು.
ಉದ್ದೇಶ:- ಇದು ವ್ಯಾಪಕವಾದ ಕೇಂದ್ರ ಮತ್ತು ಸಂಸ್ಥೆಗಳ ಜಾಲದ ಮೂಲಕ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY):-
ಪ್ರಾರಂಭ:-2015
ಉದ್ದೇಶ:-ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ಅಥವಾ ಮರು-ಕೌಶಲ್ಯ ತರಬೇತಿಯನ್ನು ಒದಗಿಸಲು.
ಇದು ‘ಪೂರ್ವ ಕಲಿಕೆಯ ಗುರುತಿಸುವಿಕೆ’ಯ ಮೂಲಕ ಭಾರತದಾದ್ಯಂತ ಯುವಜನರಿಗೆ ತರಬೇತಿ ನೀಡುವುದನ್ನು ಒಳಗೊಂಡಿದೆ.
ಜನ ಶಿಕ್ಷಣ ಸಂಸ್ಥಾನ (JSS) ಯೋಜನೆ:-
ಪ್ರಾರಂಭ:- ಆರಂಭದಲ್ಲಿ 1967 ರಲ್ಲಿ ‘ಶ್ರಮಿಕ್ ವಿದ್ಯಾಪೀಠ’ ಎಂದು ಪ್ರಾರಂಭಿಸಲಾಯಿತು.
ಉದ್ದೇಶ:- ಇದು ಅನೌಪಚಾರಿಕ ವಿಧಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (NAPS):-
ಪ್ರಾರಂಭ:-ಆಗಸ್ಟ್ 2016
ಉದ್ದೇಶ:-ಶಿಷ್ಯವೃತ್ತಿ ವಿದ್ಯಾರ್ಥಿಗಳ ವೇತನಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಶಿಷ್ಯವೃತ್ತಿಯನ್ನು ಉತ್ತೇಜಿಸುತ್ತದೆ.
ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY):-
ಪ್ರಾರಂಭ:-2014
ಇದು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಯೋಜನೆ ‘(NRLM)ಯ ಭಾಗವಾಗಿದೆ.
2 ಪ್ರಮುಖ ಉದ್ದೇಶಗಳು:-
ಗ್ರಾಮೀಣ ಬಡ ಕುಟುಂಬಗಳ ಆದಾಯ ಮೂಲಗಳಲ್ಲಿ ವೈವಿಧ್ಯತೆಯನ್ನು ತರುವುದು.
ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು.
ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ:-
ಘೋಷಣೆ:-2025 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಣೆ.
ವೆಚ್ಚ:-₹1 ಲಕ್ಷ ಕೋಟಿ
ಆರ್ಥಿಕ ಪ್ರೋತ್ಸಾಹ:- ಇದು ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರಿಗೆ 2 ಕಂತುಗಳಲ್ಲಿ ₹15,000 ವರೆಗಿನ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
ಉದ್ಯೋಗದಾತರಿಗೆ ಸಹಾಯಧನ:- ಹೆಚ್ಚುವರಿಯಾಗಿ, ಉದ್ಯೋಗದಾತರು ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಸಹಾಯಧನವನ್ನು ನೀಡುತ್ತಾರೆ. ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
ಸ್ಟಾರ್ಟ್ಅಪ್ ಇಂಡಿಯಾ:-
ಪ್ರಾರಂಭ:-2016
ಉದ್ದೇಶ:- ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY):-
ಉದ್ದೇಶ:- ಹಣಕಾಸು ಸೌಲಭ್ಯ ಪಡೆಯದ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ವ್ಯಾಪಾರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು
ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ (RKSK):-
ಪ್ರಾರಂಭ:- 2014
ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
ಉದ್ದೇಶ:- ಭಾರತದಾದ್ಯಂತ 10–19 ವರ್ಷದ ಕಿಶೋರರ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.
ಸ್ವಾಮಿ ವಿವೇಕಾನಂದರ ಬಗ್ಗೆ:
ಜನನ:-ಜನವರಿ 12, 1863 ರಂದು ಕೋಲ್ಕತ್ತಾದಲ್ಲಿನರೇಂದ್ರ ನಾಥ ದತ್ತ ಎಂಬ ಹೆಸರಿನಲ್ಲಿ ಜನಿಸಿದರು.
ಪಾಶ್ಚಿಮಾತ್ಯರಿಗೆ ಯೋಗ ಮತ್ತು ವೇದಾಂತದ ಹಿಂದೂ ತತ್ವಚಿಂತನೆಗಳನ್ನು ಪರಿಚಯಿಸುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು.
ಇವರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಭಾರತದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು ಹಾಗೂ ಆರ್ಥಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಸಂಚರಿಸಿದರು.
1893 ರಲ್ಲಿ ಚಿಕಾಗೋದಲ್ಲಿ ನಡೆದ ‘ವಿಶ್ವ ಧರ್ಮಗಳ ಸಂಸತ್ತಿನಲ್ಲಿ’ ಮಾಡಿದ ಭಾಷಣದ ಮೂಲಕ ಇವರು ಜಾಗತಿಕ ಮನ್ನಣೆಯನ್ನು ಗಳಿಸಿದರು. ಅದರಲ್ಲಿ ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ಪ್ರತಿಪಾದಿಸಿದರು.
1897 ರಲ್ಲಿ ರಾಮಕೃಷ್ಣ ಮಿಷನ್ ಮತ್ತು 1899 ರಲ್ಲಿ ಬೇಲೂರು ಮಠ ಸ್ಥಾಪನೆ:- ಇದು ಲೌಕಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕತೆಯ ಏಕೀಕರಣವನ್ನು ಉತ್ತೇಜಿಸಿತು.
ತಮ್ಮ ಬೋಧನೆ, ಉಪನ್ಯಾಸ ಮತ್ತು ಬರಹಗಳ ಮೂಲಕ ರಾಜ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗ ಸೇರಿದಂತೆ ಅವರು ಯೋಗದ ಅಭ್ಯಾಸ ಮತ್ತು ‘ನವ-ವೇದಾಂತ’ದ ತತ್ವಗಳನ್ನು ಹರಡಿದರು. ಭಾರತೀಯ ಜ್ಞಾನಸಮಾಜದ ಹರಿಕಾರರಾಗಿ ಮತ್ತು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯ ದಾರ್ಶನಿಕರಾಗಿ ಶಾಶ್ವತವಾದ ಪರಂಪರೆಯನ್ನು ಉಳಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿವೇಕಾನಂದರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದಿದ್ದಾರೆ.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುತ್ತಿರುವ ಬೇಡಿಕೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಬೆಳಗಾವಿಯಲ್ಲಿ ಮುಕ್ತಾಯವಾದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ಕೋರಿ ಆ ಭಾಗದ ಶಾಸಕರು ಸಹಿ ಮಾಡಿದ ಮನವಿಯನ್ನು ಸಲ್ಲಿಸಿದ್ದಾರೆ.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯ ಬೇಡಿಕೆಯ ಬಗ್ಗೆ:
ಪ್ರಮುಖ ಬೇಡಿಕೆ:-ಕಿತ್ತೂರು ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ಈ ಮಂಡಳಿಯನ್ನು ರಚಿಸಬೇಕು ಮತ್ತು ಅದಕ್ಕೆ ವಾರ್ಷಿಕವಾಗಿ ₹5,000 ಕೋಟಿ ಅನುದಾನವನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಪ್ರಾದೇಶಿಕ ವ್ಯಾಪ್ತಿ:- ಪ್ರಸ್ತಾಪಿತ ಮಂಡಳಿಯು ಕಿತ್ತೂರು ಕರ್ನಾಟಕ (ಹಿಂದಿನ ಮುಂಬೈ ಕರ್ನಾಟಕ) ಪ್ರದೇಶವನ್ನು ಒಳಗೊಂಡಿದೆ. ಇದು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಎಂಬ 7 ಜಿಲ್ಲೆಗಳನ್ನು ಒಳಗೊಂಡಿದೆ.
ಶಾಸಕಾಂಗದ ಬೆಂಬಲ:- ಈ ಪ್ರದೇಶದ 56 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು (8 ಜನ ಸಚಿವರನ್ನು ಹೊರತುಪಡಿಸಿ) ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
ಸಮರ್ಥನೆ:- ಈ ಪ್ರದೇಶವು ಆರ್ಥಿಕ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿದೆ ಎಂದು ಈ ಬೇಡಿಕೆಯು ಎತ್ತಿ ತೋರಿಸುತ್ತದೆ. ಇತರ ಪ್ರದೇಶಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು ಕೈಗಾರಿಕಾ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಲ್ಲಿ ಗಮನಾರ್ಹ ಉತ್ತೇಜನದ ಅಗತ್ಯವಿದೆ ಎಂದು ಇದು ಪ್ರತಿಪಾದಿಸುತ್ತದೆ.
ಆರ್ಥಿಕ ಅಸಮಾನತೆ:-ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25 ರ ಪ್ರಕಾರ,
ಬೆಳಗಾವಿ ವಿಭಾಗದ ತಲಾ ಆದಾಯವು ₹2,00,457 ಆಗಿದೆ. ಇದು ಬೆಂಗಳೂರು ವಿಭಾಗ (₹5,01,383) ಮತ್ತು ಮೈಸೂರು ವಿಭಾಗದ (₹3,59,177) ತಲಾ ಆದಾಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ರಾಜಕೀಯ ಸಂದರ್ಭ:-ವಿದರ್ಭ ಮಾದರಿಯನ್ನು ಆಧರಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (KKRDB) ಕೇಂದ್ರದಿಂದ ಹೊಂದಾಣಿಕೆಯ ಅನುದಾನವನ್ನು ಕೋರುವ ನಿರ್ಣಯವನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಈ ಬೇಡಿಕೆಯು ತೀವ್ರಗೊಂಡಿದೆ.
ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)
ಸಾಮಾನ್ಯ ಅಧ್ಯಯನ- 3/ಕೃಷಿ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಕೃಷಿ ಸಚಿವಾಲಯವು ಪ್ರಸ್ತುತ ಜಾರಿಯಲ್ಲಿರುವ ಮೂರು ಪ್ರತ್ಯೇಕ ಯೋಜನೆಗಳನ್ನು, ತನ್ನ ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ (PM-RKVY)ಯೊಂದಿಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ.
PM-RKVY ಯೋಜನೆಯೊಂದಿಗೆ ವಿಲೀನಗೊಳ್ಳಲಿರುವ ಯೋಜನೆಗಳು:
ಕೃಷೋನ್ನತಿ ಯೋಜನೆ (KY) – ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NMNF). ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ರಾಷ್ಟ್ರೀಯ ಜೇನು ಮತ್ತು ಜೇನುತುಪ್ಪ ಕಾರ್ಯಯೋಜನೆ (NBHM). ಕೇಂದ್ರ ವಲಯದ ಯೋಜನೆಯಾಗಿದೆ.
ಗಮನಿಸಿ:
ಕೇಂದ್ರ ಪ್ರಾಯೋಜಿತ ಯೋಜನೆ:- ಇವುಗಳಿಗೆ ಕೇಂದ್ರ ಮತ್ತು ರಾಜ್ಯಗಳೆರಡೂ ಜಂಟಿಯಾಗಿ ನಿಧಿಯನ್ನು ಒದಗಿಸುತ್ತವೆ ಹಾಗೂ ರಾಜ್ಯ ಸರ್ಕಾರಗಳು ಇವುಗಳನ್ನು ಅನುಷ್ಠಾನಗೊಳಿಸುತ್ತವೆ.
ಕೇಂದ್ರ ವಲಯದ ಯೋಜನೆ:- ಇದಕ್ಕೆ ಸಂಪೂರ್ಣ ನಿಧಿ ಮತ್ತು ಅನುಷ್ಠಾನವನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.
ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)ಯ ಬಗ್ಗೆ:
2007 ರಲ್ಲಿ ಪ್ರಾರಂಭವಾದ ಸಮಗ್ರ ಯೋಜನೆ:- ಕೃಷಿ ಮತ್ತು ಅದರ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ.
ನೋಡಲ್ ಸಚಿವಾಲಯ:-ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
ಹಣಕಾಸಿನ ಹಂಚಿಕೆ:-ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಉದ್ದೇಶ:- ಇದು ಜಿಲ್ಲಾ ಅಥವಾ ರಾಜ್ಯ ಕೃಷಿ ಯೋಜನೆಯ ಪ್ರಕಾರ, ತಮ್ಮದೇ ಆದ ಕೃಷಿ ಮತ್ತು ಪೂರಕ ವಲಯದ ಅಭಿವೃದ್ಧಿ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ.
ವಿಬಿ ಜಿ-ರಾಮ್ ಜಿ ಕಾಯ್ದೆ: ರಾಜ್ಯದ ಹಣಕಾಸಿನ ಮೇಲೆ ಪರಿಣಾಮ
ಇದೀಗ ಸುದ್ದಿಯಲ್ಲಿದೆ:
ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯುಕೇಂದ್ರದ ನಿಧಿಯ ಮಾದರಿಯನ್ನು ವೆಚ್ಚ-ಹಂಚಿಕೆ ಮಾದರಿಯೊಂದಿಗೆ ಬದಲಾಯಿಸುತ್ತಿರುವುದರಿಂದ, ರಾಜ್ಯದ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆ ಕಳವಳಗಳು ವ್ಯಕ್ತವಾಗಿವೆ.
ಕರ್ನಾಟಕದ ಮೇಲೆ ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯ ಪರಿಣಾಮಗಳು:
VB-G RAM G ಪೂರ್ಣ ರೂಪ:- ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ.
ಹೊಸ ಕಾಯ್ದೆ:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಬದಲಿಗೆ ‘VB-G RAM G- ವಿಕಸಿತ ಭಾರತ – ಉದ್ಯೋಗಕ್ಕೆ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)‘ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
40% ರಷ್ಟು ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದು ಕಡ್ಡಾಯ:- ಹಿಂದಿನ MGNREGA ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುತ್ತಿತ್ತು. ಆದರೆ, ಹೊಸ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರವೇ ಭರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
₹20,000 ಕೋಟಿಗಳಷ್ಟು ಸಂಚಿತ ಆರ್ಥಿಕ ಹೊರೆ:- ಕರ್ನಾಟಕವು ವಾರ್ಷಿಕವಾಗಿ ₹3,000 ಕೋಟಿಯಿಂದ ₹4,000 ಕೋಟಿಗಳಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಸರಿಸುಮಾರು ₹20,000 ಕೋಟಿಗಳಷ್ಟು ಸಂಚಿತ ಹೊರೆಯನ್ನು ಉಂಟುಮಾಡಲಿದೆ.
ಹಣಕಾಸಿನ ಸವಾಲು:-ಜಿಎಸ್ಟಿ (GST) ದರಗಳ ಪರಿಷ್ಕರಣೆಯಿಂದಾಗಿ ರಾಜ್ಯವು ಈಗಾಗಲೇ ವಾರ್ಷಿಕವಾಗಿ ಸುಮಾರು ₹18,000 ಕೋಟಿಗಳಷ್ಟು ಆದಾಯ ನಷ್ಟವನ್ನು ಎದುರಿಸುತ್ತಿರುವಂತಹ ನಿರ್ಣಾಯಕ ಸಮಯದಲ್ಲಿ, ಈ ಹೆಚ್ಚುವರಿ ವೆಚ್ಚದ ಹೊರೆ ಎದುರಾಗಿದೆ.
ಅಮೆರಿಕ ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ ನಾಟೋ (NATO)ದ ಅಂತ್ಯವನ್ನು ಸೂಚಿಸುತ್ತದೆ: ಡೆನ್ಮಾರ್ಕ್
ಸಾಮಾನ್ಯ ಅಧ್ಯಯನ-2/ ಪ್ರಾದೇಶಿಕ ಗುಂಪುಗಳು
ಇದೀಗ ಸುದ್ದಿಯಲ್ಲಿದೆ:
ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡರೆ, ಅದು ನ್ಯಾಟೋ (NATO) ಸೇನಾ ಮೈತ್ರಿಕೂಟದ ಅಂತ್ಯವನ್ನು ಸೂಚಿಸುತ್ತದೆ ಎಂದು ಡೆನ್ಮಾರ್ಕ್ ಪ್ರಧಾನ ಮಂತ್ರಿ ಹೇಳಿದ್ದಾರೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO)ಯ ಬಗ್ಗೆ:
‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’:- ನ್ಯಾಟೋವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ಎಂತಲೂ ಕರೆಯಲಾಗುತ್ತದೆ. ಇದೊಂದು ಅಂತರ ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
ಕೇಂದ್ರ ಕಚೇರಿ:-ಬ್ರಸೆಲ್ಸ್ (ಬೆಲ್ಜಿಯಂ).
“ವಾಷಿಂಗ್ಟನ್ ಒಪ್ಪಂದ”:- 2ನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ಆಕ್ರಮಣದ ವಿರುದ್ಧ “ಸಾಮೂಹಿಕ ರಕ್ಷಣೆ”ಯನ್ನು ಒದಗಿಸುವ ಉದ್ದೇಶದಿಂದ, ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು 1949ರಲ್ಲಿವಾಷಿಂಗ್ಟನ್ ಡಿ.ಸಿ.ಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದ ಅಥವಾ ವಾಷಿಂಗ್ಟನ್ ಒಪ್ಪಂದಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
ವಿಧಿ 5 – ಸಾಮೂಹಿಕ ರಕ್ಷಣೆ:– ಈ ಒಪ್ಪಂದದ ವಿಧಿ 5ರ ಪ್ರಕಾರ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಅನ್ವಯ, ಯಾವುದೇ ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
ಇಲ್ಲಿಯವರೆಗೆ, ವಿಧಿ 5 ಅನ್ನು ಒಮ್ಮೆ ಮಾತ್ರ ಜಾರಿಗೊಳಿಸಲಾಗಿದೆ. 2001ರಲ್ಲಿ ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಬಳಸಲಾಗಿತ್ತು.
ಸದಸ್ಯರು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಅವುಗಳೆಂದರೆ,
2 ಉತ್ತರ ಅಮೆರಿಕದ ರಾಷ್ಟ್ರಗಳು (ಅಮೆರಿಕ ಮತ್ತು ಕೆನಡಾ),
28 ಯುರೋಪಿಯನ್ ರಾಷ್ಟ್ರಗಳು,
1 ಯುರೇಷಿಯನ್ ರಾಷ್ಟ್ರ (ಟರ್ಕಿ),
2024ರಲ್ಲಿ ಸ್ವೀಡನ್ ಇದರ 32ನೇ ಸದಸ್ಯ ರಾಷ್ಟ್ರವಾಯಿತು.
ಒಪೆಕ್+ (OPEC+)
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಪ್ರಮುಖ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಗಳು ಮತ್ತು ವಿಸ್ತಾರವಾಗುತ್ತಿರುವ ಭೂ-ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಒಪೆಕ್+ (OPEC+) ಮೈತ್ರಿಕೂಟವು ತೈಲ ಉತ್ಪಾದನೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.
ಒಪೆಕ್ (OPEC) ಒಕ್ಕೂಟದ ಬಗ್ಗೆ:
ಸ್ಥಾಪನೆ:-1960ರಲ್ಲಿ ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ರಾಷ್ಟ್ರಗಳಿಂದ ಸ್ಥಾಪಿಸಲಾಯಿತು.
ಕೇಂದ್ರ ಕಚೇರಿ:-ವಿಯೆನ್ನಾ, ಆಸ್ಟ್ರಿಯಾ.
12 ಸದಸ್ಯ ರಾಷ್ಟ್ರಗಳು:-
5 ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:-ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ.
7 ಹೆಚ್ಚುವರಿ ಸದಸ್ಯ ರಾಷ್ಟ್ರಗಳು:-ಅಲ್ಜೀರಿಯಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗಾಬನ್, ಲಿಬಿಯಾ, ನೈಜೀರಿಯಾ ಮತ್ತು ಯುಎಇ (UAE).
ಒಪೆಕ್+ (OPEC+) ಒಕ್ಕೂಟದ ಬಗ್ಗೆ:
ಸಂಕ್ಷಿಪ್ತ ವಿವರಣೆ:- ಇದು ‘ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ’ (OPEC) ಮತ್ತು 10 ‘ಒಪೆಕ್’ ಯೇತರ ರಾಷ್ಟ್ರಗಳನ್ನು ಒಳಗೊಂಡಿರುವ ತೈಲ ಉತ್ಪಾದಿಸುವ ದೇಶಗಳ ನಡುವಿನ ಪಾಲುದಾರಿಕೆಯ ಒಂದು ಒಕ್ಕೂಟವಾಗಿದೆ.
ಒಪೆಕ್+ ಒಕ್ಕೂಟದಲ್ಲಿರುವ 10 ಒಪೆಕ್-ಯೇತರ ಸದಸ್ಯ ರಾಷ್ಟ್ರಗಳು (Non-OPEC members):-ರಷ್ಯಾ, ಅಜರ್ಬೈಜಾನ್, ಬಹ್ರೇನ್, ಬ್ರೂನಿ, ಕಜಕಿಸ್ತಾನ್, ಮೆಕ್ಸಿಕೊ, ಮಲೇಷ್ಯಾ, ಓಮನ್, ದಕ್ಷಿಣ ಸುಡಾನ್ ಮತ್ತು ಸುಡಾನ್.
ಒಪೆಕ್+ ನ ಮಹತ್ವ:- ಇದು ಜಾಗತಿಕ ತೈಲ ಪೂರೈಕೆಯ ಸುಮಾರು 40% ರಷ್ಟನ್ನು ನಿಯಂತ್ರಿಸುತ್ತದೆ.
ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ/ ಪರಿಸರ
ಇದೀಗ ಸುದ್ದಿಯಲ್ಲಿದೆ:
ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್,ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿ ‘ಬಯೋಹ್ಯಾಪಿನೆಸ್’ (ಜೈವಿಕ ಸಂತೋಷ) ಕುರಿತಾದ ಯೋಜನೆಯ ಕಾರ್ಯವನ್ನು ಆರಂಭಿಸಿದೆ.
ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)ನ ಬಗ್ಗೆ:
ಈ ಪದವನ್ನು ದಿವಂಗತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ಅವರು ಪರಿಚಯಿಸಿದ್ದಾರೆ.
ಇದು ಮಾನವನ ಆರೋಗ್ಯ, ಪೋಷಕಾಂಶ ಮತ್ತು ಜೀವನೋಪಾಯಗಳನ್ನು ಸುಧಾರಿಸಲು ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಬಳಸಿಕೊಳ್ಳುವ ಮೂಲಕ ಸಾಧಿಸಲಾದ ಯೋಗಕ್ಷೇಮ ಹಾಗೂ ಪರಿಪೂರ್ಣತೆಯ ಸ್ಥಿತಿಯಾಗಿದೆ. ಇದು ಜನರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಉತ್ತೇಜಿಸುತ್ತದೆ.
ಮಹತ್ವ:- ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿನ ಈ ಹೊಸ ಬಯೋಹ್ಯಾಪಿನೆಸ್ ಯೋಜನೆಯು ಅಲ್ಲಿನ ನಿವಾಸಿಗಳ ಜೀವನೋಪಾಯಗಳು, ಜಿಲ್ಲೆಯ ಕೃಷಿ-ಜೀವವೈವಿಧ್ಯ ಮತ್ತು ಅದರ ವ್ಯಾಪ್ತಿಯಲ್ಲಿರುವ ಇತರ ಪರಿಸರದ ಅಂಶಗಳ ಮೇಲೆ ಗಮನಹರಿಸಲಿದೆ.
ನಿಮಗಿದು ತಿಳಿದಿದೆಯೇ?
ನಿಶಿ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಮೂಲಕ, ‘ಕೆಯಿ ಪನ್ಯೋರ್’ಅರುಣಾಚಲ ಪ್ರದೇಶದ 26ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಕೇಂದ್ರ ಸ್ಥಾನವು ‘ಟೆರ್ ಗ್ಯಾಪಿನ್-ಸಮ್ ಸಾರ್ಥ್’ ನಲ್ಲಿದೆ.
ಕಾವೇರಿ ವನ್ಯಜೀವಿ ಧಾಮದೊಳಗೆ ನಿರ್ಮಿಸಲಾದ ನೀರು ಕೊಯ್ಲು ಹೊಂಡಗಳಿಂದಾಗಿ ಹುಲ್ಲುಗಾವಲುಗಳು ನಾಶವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಮುಖ ಅಂಶಗಳು:
ಆರೋಪ:-ಅರಣ್ಯ ಇಲಾಖೆಯುಅಗೆದಿರುವ ನೀರು ಕೊಯ್ಲು ಹೊಂಡಗಳು ನೈಸರ್ಗಿಕ ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
ಸ್ಥಳ:- ಕಾವೇರಿ ವನ್ಯಜೀವಿ ಧಾಮದೊಳಗೆ, ನಿರ್ದಿಷ್ಟವಾಗಿ ಸಂಗಮ, ಹಲಗೂರು ಮತ್ತು ಮುಗ್ಗುರು ವಲಯಗಳ ಮೇಲೆ ಈ ಚಟುವಟಿಕೆಯು ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.
ವಿಧಾನ:- ಪರಿಸರವಾದಿಗಳು ವರದಿ ಮಾಡಿರುವಂತೆ, ಈ ಹೊಂಡಗಳನ್ನು ಅಗೆಯಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದ್ದು, ಇದು ಭೂದೃಶ್ಯದ ನಾಶಕ್ಕೆ ಕಾರಣವಾಗುತ್ತಿದೆ.
ಪರಿಸರ ಪ್ರಭಾವ:- ಈ ಹುಲ್ಲುಗಾವಲುಗಳು ಆನೆಗಳು, ಕಡವೆ, ಚುಕ್ಕೆ ಜಿಂಕೆ ಮತ್ತು ಕಾಡೆಮ್ಮೆಗಳಂತಹ ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ಒದಗಿಸುವಲ್ಲಿ ನಿರ್ಣಾಯಕವಾಗಿವೆ.
ಪರಿಣಾಮ:- ನೈಸರ್ಗಿಕ ಹುಲ್ಲುಗಾವಲುಗಳ ನಾಶವು ಕಾಡು ಪ್ರಾಣಿಗಳಿಗೆ ಮೇವಿನ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಇದು ಮಾನವ-ವನ್ಯಜೀವಿ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಾವೇರಿ ವನ್ಯಜೀವಿ ಧಾಮದ ಬಗ್ಗೆ:
ಸ್ಥಳ:- ಇದು ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿದೆ. ಇದು 2 ಉಪ-ವಿಭಾಗಗಳನ್ನು (ಹನೂರು ಮತ್ತು ಕನಕಪುರ) ಮತ್ತು 7 ವಲಯಗಳನ್ನು (ಕೊತ್ತನೂರು, ಹನೂರು, ಕೌದಳ್ಳಿ, ಗೋಪಿನಾಥಂ, ಹಲಗೂರು, ಸಂಗಮ ಮತ್ತು ಮುಗ್ಗುರು) ಒಳಗೊಂಡಿದೆ.
ವಿಸ್ತೀರ್ಣ:- ಪ್ರಸ್ತುತ 1,027 ಚದರ ಕಿ.ಮೀ ವರೆಗೆ ವಿಸ್ತರಿಸಲಾಗಿದೆ (ಮೂಲತಃ 1987 ರಲ್ಲಿ 510 ಚದರ ಕಿ.ಮೀ ಎಂದು ಅಧಿಸೂಚಿಸಲಾಗಿತ್ತು).
ಸಂಚಾರ ಪಥ:- ಇದು ಉತ್ತರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು, ದಕ್ಷಿಣದಲ್ಲಿ ಬಿಳಿಗಿರಿ ರಂಗನ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದೊಂದಿಗೆ ಸಂಪರ್ಕಿಸುವ ಪ್ರಮುಖ ವನ್ಯಜೀವಿ ಸಂಚಾರ ಪಥವಾಗಿ ಕಾರ್ಯನಿರ್ವಹಿಸುತ್ತದೆ.
ನದಿ ವ್ಯವಸ್ಥೆಗಳು:-ಕಾವೇರಿ, ಅರ್ಕಾವತಿ ಮತ್ತು ಶಿಂಶಾ ಎಂಬ ಮೂರು ಪ್ರಮುಖ ನದಿಗಳು ಹಾಗೂ ಹಲವಾರು ಸಣ್ಣ ತೊರೆಗಳು.
ಅರಣ್ಯ ವಿಧಗಳು:- ಇದು ಪ್ರಮುಖವಾಗಿ ಒಣ ಎಲೆ ಉದುರುವ ಕಾಡುಗಳು ಮತ್ತು ಕುರುಚಲು ಕಾಡುಗಳನ್ನು ಒಳಗೊಂಡಿದೆ. ಇದರೊಂದಿಗೆ, ವಿವಿಧ ಎತ್ತರಗಳಲ್ಲಿ ಕಮ್ಮರ (ಹಾರ್ಡ್ವಿಕ್ಯಾ) ಕಾಡುಗಳು, ನದಿ ತೀರದ ಕಾಡುಗಳು, ಶೋಲಾ, ತೇವಾಂಶವುಳ್ಳ ಎಲೆ ಉದುರುವ ಹಾಗೂ ನಿತ್ಯಹರಿದ್ವರ್ಣ ಕಾಡುಗಳಂತಹ ವೈವಿಧ್ಯಮಯ ಅರಣ್ಯ ಪ್ರಕಾರಗಳು ಇಲ್ಲಿ ಕಂಡುಬರುತ್ತವೆ.
ಪ್ರಮುಖ ಪ್ರಾಣಿ ಪ್ರಭೇದಗಳು:- ಹುಲಿ, ಆನೆ, ಚಿರತೆ, ತೇವಾಂಕಿ/ಜೇನು ಬ್ಯಾಜರ್ (ರಾಟೆಲ್) ಮತ್ತು ಕೊಳ್ಳೇಗಾಲದ ನೆಲದ ಹಲ್ಲಿ, ಕಾಡೆಮ್ಮೆ , ಕಾಡು ನಾಯಿ, ಕೂರೆ (ಇಲಿ ಜಿಂಕೆ) ಮತ್ತು ಮಲಬಾರ್ ದೈತ್ಯ ಅಳಿಲು ಸೇರಿವೆ.
66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಅಮೆರಿಕವು ವಿಶ್ವಸಂಸ್ಥೆಯ 31 ಘಟಕಗಳು ಮತ್ತು ವಿಶ್ವಸಂಸ್ಥೆಯೇತರ 35 ಸಂಸ್ಥೆಗಳು ಸೇರಿದಂತೆ ಒಟ್ಟು 66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸಿದೆ.
ಈ ಸಂಸ್ಥೆಗಳಲ್ಲಿ ಹವಾಮಾನ, ಇಂಧನ ಮತ್ತು ವಿಜ್ಞಾನ ವೇದಿಕೆಗಳಾದ
ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (UNFCCC),
ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರಿ ಸಮಿತಿ (IPCC),
ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಮತ್ತು
ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಸೇರಿವೆ.
ಅಮೆರಿಕದ ನಿರ್ಗಮನಕ್ಕೆ ಕಾರಣಗಳು:
ಸಾರ್ವಭೌಮತ್ವದ ಕಳವಳ:-ದೇಶೀಯ ನೀತಿಯ ಸ್ವಾಯತ್ತತೆಯನ್ನು ನಿಯಂತ್ರಿಸುತ್ತವೆ ಅಥವಾ ಮಿತಿಗೊಳಿಸುತ್ತವೆ ಎಂದು ಭಾವಿಸಲಾದ, ಕಡ್ಡಾಯವಾಗಿ ಪಾಲಿಸಬೇಕಾದ ಅಂತರರಾಷ್ಟ್ರೀಯ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುವುದು.
ಸಾಂಸ್ಥಿಕ ಪಕ್ಷಪಾತದ ಗ್ರಹಿಕೆ:- ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ರಾಜಕೀಕರಣ, ಅದಕ್ಷತೆ ಮತ್ತು ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಪಕ್ಷಪಾತದ ಧೋರಣೆಗಳು.
ದೇಶೀಯ ರಾಜಕೀಯ ಒತ್ತಡಗಳು:- ಬಹುಪಕ್ಷೀಯ ಬದ್ಧತೆಗಳನ್ನು, ಸೀಮಿತ ನೇರ ಚುನಾವಣಾ ಲಾಭಗಳನ್ನು ನೀಡುವ ‘ದುಬಾರಿ ಬಾಧ್ಯತೆ’ಗಳಾಗಿ ಪರಿಗಣಿಸುತ್ತಿರುವುದು.
ಹೊರೆ ಹಂಚಿಕೆ ವಾದ:- ಜಾಗತಿಕ ಸಂಸ್ಥೆಗಳಿಗೆ ಅಮೆರಿಕವು ಅಸಮಾನವಾಗಿ (ಅಗತ್ಯಕ್ಕಿಂತ ಹೆಚ್ಚು) ಕೊಡುಗೆ ನೀಡುತ್ತಿದೆ ಎಂಬ ಪ್ರತಿಪಾದನೆಯೂ ಕೂಡ ಕಾರಣಗಳಲ್ಲಿ ಒಂದಾಗಿದೆ.
ಕಾರ್ಯತಂತ್ರದ ಮರುಹೊಂದಾಣಿಕೆ:- ಸಾರ್ವತ್ರಿಕ ಸಂಸ್ಥೆಗಳಿಗಿಂತ ದ್ವಿಪಕ್ಷೀಯ ಅಥವಾ ಕಿರು-ಪಕ್ಷೀಯ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು.
ಕಾರ್ಯತಂತ್ರದ ಪೈಪೋಟಿ:- ಪ್ರತಿಸ್ಪರ್ಧಿಗಳು ಪ್ರಭಾವ ಬೀರುವ ವೇದಿಕೆಗಳನ್ನು ಮಿತಿಗೊಳಿಸುವ ಅಥವಾ ನಿಯಂತ್ರಿಸುವ ಬಯಕೆಯೂ ಕೂಡ ಈ ಕಾರಣಗಳಲ್ಲಿ ಸೇರಿದೆ.
ಸಂಭಾವ್ಯ ಪರಿಣಾಮಗಳು:
ಹವಾಮಾನ ಬದಲಾವಣೆ ಹೋರಾಟಕ್ಕೆ ಹಿನ್ನಡೆ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳನ್ನು ಇದು ದುರ್ಬಲಗೊಳಿಸುತ್ತದೆ. ಅಲ್ಲದೆ, ಹವಾಮಾನ ಬದ್ಧತೆಗಳು ಹಾಗೂ ಹಣಕಾಸಿನ ನೆರವಿನ ಭರವಸೆಗಳನ್ನು ವಿಳಂಬ ಮಾಡಲು ಇತರ ದೇಶಗಳಿಗೆ ನೆಪವನ್ನು ಒದಗಿಸುತ್ತದೆ.
ಬಹುಪಕ್ಷೀಯತೆಯ ವಿಘಟನೆ:- ಇದು ಅಂತರರಾಷ್ಟ್ರೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ಪ್ರಬಲ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ತೀವ್ರಗೊಳಿಸಿ, ರಕ್ಷಣಾತ್ಮಕ ನೀತಿಗಳು ಹಾಗೂ ಸಣ್ಣ ತಾತ್ಕಾಲಿಕ ಪ್ರಾದೇಶಿಕ ಬಣಗಳತ್ತ ಸಾಗುವ ಪ್ರವೃತ್ತಿಯನ್ನು ವೇಗಗೊಳಿಸುತ್ತದೆ.
ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಕುಸಿತ:– ಅಮೆರಿಕದ ಅನುದಾನ ಕಡಿತವು ಈಗಾಗಲೇ ಕ್ಷೀಣಿಸುತ್ತಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಜಾಗತಿಕ ಶಾಂತಿ ಮತ್ತು ಭದ್ರತಾ ಅಪಾಯಗಳು:- ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಂತಹ ಸಂಸ್ಥೆಗಳಿಗೆ ಅಮೆರಿಕದ ಬೆಂಬಲ ಕಡಿಮೆಯಾಗುವುದರಿಂದ, ವಿಶೇಷವಾಗಿ ಆಫ್ರಿಕಾ ಮತ್ತು ಕೆರಿಬಿಯನ್ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮತ್ತು ಸಂಘರ್ಷದ ನಂತರದ ಚೇತರಿಕೆಗೆ ಅಡ್ಡಿಯಾಗುತ್ತದೆ.
ಜಾಗತಿಕ ನಿಯಮಗಳ ದುರ್ಬಲಗೊಳ್ಳುವಿಕೆ:– ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಕಟ್ಟುಪಾಡುಗಳನ್ನು ಆಯ್ದು ಪಾಲಿಸುವಂತೆ ಇದು ಇತರ ರಾಷ್ಟ್ರಗಳನ್ನು ಉತ್ತೇಜಿಸುತ್ತದೆ.
ನಾಯಕತ್ವದ ನಿರ್ವಾತ:- ಜಾಗತಿಕ ನಿಯಮಗಳು ಮತ್ತು ಸಂಸ್ಥೆಗಳನ್ನು ರೂಪಿಸಲು ಇತರ ಪ್ರಮುಖ ಶಕ್ತಿಗಳಿಗೆ ಇದು ಅವಕಾಶವನ್ನು ಸೃಷ್ಟಿಸುತ್ತದೆ.
ಡೂಮ್ಸ್ಡೇ ಹಿಮನದಿ
ಸಾಮಾನ್ಯ ಅಧ್ಯಯನ-1/ ಭೂಗೋಳಶಾಸ್ತ್ರ; ಸಾಮಾನ್ಯ ಅಧ್ಯಯನ-3/ ಪರಿಸರ
ಇದೀಗ ಸುದ್ದಿಯಲ್ಲಿದೆ:
‘ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಅರ್ಥ್ ಸರ್ಫೇಸ್’ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು, ಥ್ವೈಟ್ಸ್ ಹಿಮನದಿ ಪ್ರದೇಶದಲ್ಲಿನ ಇತ್ತೀಚಿನ ರಚನಾತ್ಮಕ ಬದಲಾವಣೆಗಳನ್ನು ವಿವರಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಅಂಟಾರ್ಕ್ಟಿಕ್ನ ಇತರ ಹಿಮ ತೊರೆ (ಐಸ್ ಶೆಲ್ಫ್)ಗಳುಹೇಗೆ ಕುಸಿಯಬಹುದು ಎಂಬುದನ್ನು ಇದು ವಿಶ್ಲೇಷಿಸಿದೆ.
ಡೂಮ್ಸ್ಡೇ ಹಿಮನದಿ (ಥ್ವೈಟ್ಸ್ ಹಿಮನದಿ)ಯ ಬಗ್ಗೆ:
ಇದು ಪಶ್ಚಿಮ ಅಂಟಾರ್ಕ್ಟಿಕ್ ಹಿಮ ಪಟಲ/ಪದರ (WAIS)ದ ಒಂದು ಹೊರಹರಿಯುವ ಹಿಮನದಿಯಾಗಿದ್ದು, ಅಮುಂಡ್ಸನ್ ಸಮುದ್ರವನ್ನು ಸೇರುತ್ತದೆ.
ಸಮುದ್ರದ ಮಟ್ಟದಲ್ಲಿ ಭಾರಿ ಏರಿಕೆಯನ್ನು ಉಂಟುಮಾಡುವ ಇದರ ಸಾಮರ್ಥ್ಯದಿಂದಾಗಿ, ಇದಕ್ಕೆ ‘ಡೂಮ್ಸ್ಡೇ ಹಿಮನದಿ’ ಎಂತಲೂ ಕರೆಯಲಾಗುತ್ತದೆ.
ಕುಸಿತದ ಪರಿಣಾಮ:- ಡೂಮ್ಸ್ಡೇ ಹಿಮನದಿಯ ಸಂಪೂರ್ಣ ನಾಶವು (ಕುಸಿತವು) ಜಾಗತಿಕ ಸಮುದ್ರ ಮಟ್ಟದಲ್ಲಿ 3 ಮೀಟರ್ಗಳಷ್ಟು ಏರಿಕೆಗೆ ಕಾರಣವಾಗಬಹುದು.
ಅಂಟಾರ್ಕ್ಟಿಕ್ ಒಪ್ಪಂದದ ಸಂರಕ್ಷಣಾ ಪ್ರಯತ್ನಗಳು:
ಒಳಗೊಂಡಿರುವ ಪ್ರದೇಶ:- ಈ ಒಪ್ಪಂದವು 60° ದಕ್ಷಿಣ ಅಕ್ಷಾಂಶದ ದಕ್ಷಿಣಕ್ಕಿರುವ ಪ್ರದೇಶವನ್ನು ಒಳಗೊಂಡಿದೆ.
ಉದ್ದೇಶ:- ಅಂಟಾರ್ಕ್ಟಿಕಾವನ್ನು ಸೇನಾಮುಕ್ತಗೊಳಿಸುವ ಉದ್ದೇಶದೊಂದಿಗೆ 1959ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇದಕ್ಕೆ ಸಹಿ ಹಾಕಲಾಯಿತು.
ಒಪ್ಪಂದದ ನಿಯಮಗಳಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು, ಇದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗುತ್ತದೆ.
ಭಾರತವು 1983ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು.
ಅಂಟಾರ್ಕ್ಟಿಕ್ ಸಮುದ್ರ (ಕಡಲ) ಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಸಮಾವೇಶ (CCAMLR):
ಈ ಸಮಾವೇಶಕ್ಕೆ 1980ರಲ್ಲಿ ಕ್ಯಾನ್ಬೆರಾದಲ್ಲಿ (ಆಸ್ಟ್ರೇಲಿಯಾ) ಸಹಿ ಹಾಕಲಾಯಿತು.
ಉದ್ದೇಶ:-ಅಂಟಾರ್ಕ್ಟಿಕಾ ಪರಿಸರವನ್ನು ರಕ್ಷಿಸಿ ಸಂರಕ್ಷಿಸುವುದು ಹಾಗೂ ವಿಶೇಷವಾಗಿ ಅಂಟಾರ್ಕ್ಟಿಕಾದ ಸಮುದ್ರೀಯ ಜೀವ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಿಸುವುದು.
ಭಾರತವು 1985ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು.
ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಸಂಬಂಧಿಸಿದ ಪರಿಸರ ಸಂರಕ್ಷಣೆಯ ಶಿಷ್ಟಾಚಾರ (ಮ್ಯಾಡ್ರಿಡ್ ಪ್ರೋಟೋಕಾಲ್):
ಈ ಒಪ್ಪಂದಕ್ಕೆ 1991ರಲ್ಲಿ ಮ್ಯಾಡ್ರಿಡ್ನಲ್ಲಿ (ಸ್ಪೇನ್) ಸಹಿ ಹಾಕಲಾಯಿತು.
ಉದ್ದೇಶ:- ಇದು ಅಂಟಾರ್ಕ್ಟಿಕ್ ಒಪ್ಪಂದ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಅಂಟಾರ್ಕ್ಟಿಕ್ ಪರಿಸರ ಹಾಗೂ ಅದರ ಅವಲಂಬಿತ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
ಭಾರತವು 1998ರಲ್ಲಿ ಈ ಶಿಷ್ಟಾಚಾರವನ್ನು ದೃಢೀಕರಿಸಿತು.
ರಾಷ್ಟ್ರೀಯ ಅಂಟಾರ್ಕ್ಟಿಕ್ ಕಾರ್ಯಕ್ರಮದ ವ್ಯವಸ್ಥಾಪಕರ ಮಂಡಳಿ (COMNAP):
ಭಾರತವು ಇದರ ಸದಸ್ಯ ರಾಷ್ಟ್ರವೂ ಆಗಿದ್ದು, ಇದು ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರಗಳ ಪೈಕಿ ಭಾರತ ಹೊಂದಿರುವ ಮಹತ್ವದ ಸ್ಥಾನವನ್ನು ತೋರಿಸುತ್ತದೆ.
ಮಾಧವ್ ಗಾಡ್ಗೀಳ್
ಸಾಮಾನ್ಯ ಅಧ್ಯಯನ-3/ ಪರಿಸರ; ಸುದ್ದಿಯಲ್ಲಿರುವ ವ್ಯಕ್ತಿಗಳು
ಇದೀಗ ಸುದ್ದಿಯಲ್ಲಿದೆ:
ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಮಾಡಿದ ತಮ್ಮ ಮಹತ್ವದ ಕಾರ್ಯಕ್ಕಾಗಿ ಪ್ರಸಿದ್ಧರಾಗಿದ್ದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ಅವರು ನಿಧನರಾಗಿದ್ದಾರೆ.
ಪ್ರಮುಖ ಕೊಡುಗೆಗಳು:
ಗಾಡ್ಗೀಳ್ ಆಯೋಗ, 2010:- ಪರಿಸರ ಮತ್ತು ಅರಣ್ಯ ಸಚಿವಾಲಯವು ‘ಗಾಡ್ಗೀಳ್ ಆಯೋಗ’ ಎಂದೇ ಪರಿಚಿತವಾಗಿರುವ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP) ಅಧ್ಯಕ್ಷರನ್ನಾಗಿ ಮಾಧವ್ ಗಾಡ್ಗೀಳ್ ಅವರನ್ನು ನೇಮಿಸಿತು.
ಅವರು 2011ರ ತಮ್ಮ ವರದಿಯಲ್ಲಿ, 6 ರಾಜ್ಯಗಳಲ್ಲಿ ವ್ಯಾಪಿಸಿರುವ 1,40,000 ಚ.ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿನ 64% ಪ್ರದೇಶವನ್ನು“ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳು” (ESAs) ಎಂದು ವರ್ಗೀಕರಿಸುವಂತೆ ಶಿಫಾರಸು ಮಾಡಿದ್ದರು.
ಇದರಿಂದ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಬಿಸಿತಾಣಗಳು (ಹಾಟ್ಸ್ಪಾಟ್’) ಆಗಿರುವ ಮಹತ್ವ ಹಾಗೂ ಅವುಗಳನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಪ್ರಯತ್ನಗಳ ಕುರಿತು ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯಲು ಕಾರಣವಾಯಿತು.
ನೀಲಗಿರಿ- ಜೀವಗೋಳ ಮೀಸಲು ತಾಣ:- 1986ರಲ್ಲಿ ನೀಲಗಿರಿಯನ್ನು ಭಾರತದ ಮೊದಲಜೀವಗೋಳ ಮೀಸಲು ತಾಣವನ್ನಾಗಿ ಘೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ನಂತರ ಅವರು ಜೈವಿಕ ವೈವಿಧ್ಯತೆ ಕಾಯ್ದೆ-2002 ಮತ್ತು ಅರಣ್ಯ ಹಕ್ಕುಗಳ ಕಾಯ್ದೆ-2006 ಅನ್ನು ರೂಪಿಸುವಲ್ಲಿ ನೆರವಾದರು.
ಅವರು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ರಾಷ್ಟ್ರೀಯ ಹುಲಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಶೈಕ್ಷಣಿಕ ಸಂಶೋಧನೆಯನ್ನು ತಳಮಟ್ಟದ ಪರಿಸರ ಚಳವಳಿಯೊಂದಿಗೆ ಯಶಸ್ವಿಯಾಗಿ ಬೆಸೆಯುವ ಕಾರ್ಯ ಮಾಡಿದರು.
ಅವರ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ (1992), ಪದ್ಮಭೂಷಣ (2006), ಪರಿಸರ ಸಾಧನೆಗಾಗಿ ನೀಡುವ ಟೈಲರ್ ಪ್ರಶಸ್ತಿ (2015) ಮತ್ತು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (UNEP) ನೀಡುವ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ (2024) ಸೇರಿದಂತೆ ಪ್ರಮುಖ ಗೌರವಗಳನ್ನು ನೀಡಿ ಪುರಸ್ಕರಿಸಲಾಗಿದೆ.
ಪಶ್ಚಿಮ ಘಟ್ಟಗಳಲ್ಲಿನ ಅವರ ಕಾರ್ಯಕ್ಕಾಗಿ-‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ:-ವಾರ್ಷಿಕವಾಗಿ ನೀಡಲಾಗುವ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. ಪಶ್ಚಿಮ ಘಟ್ಟಗಳಲ್ಲಿನ ಅವರ ಮಹತ್ವದ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.