ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಭ್ಯಾಸ ಪ್ರಶ್ನೆಗಳು (MCQs)
- ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಜಲಸಂಧಿ (Channel / Passage) |
ವಿಭಾಗಿಸುವ ಪ್ರದೇಶಗಳು |
|
1. ಡಂಕನ್ ಜಲಸಂಧಿ (Duncan Passage) |
ದಕ್ಷಿಣ ಅಂಡಮಾನ್ ಮತ್ತು ಲಿಟಲ್ ಅಂಡಮಾನ್ |
|
2. 10 ಡಿಗ್ರಿ ಜಲಸಂಧಿ (Ten Degree Channel) |
ಅಂಡಮಾನ್ ದ್ವೀಪಗಳು ಮತ್ತು ನಿಕೋಬಾರ್ ದ್ವೀಪಗಳು |
|
3. 6 ಡಿಗ್ರಿ ಜಲಸಂಧಿ (Six Degree Channel) |
ಗ್ರೇಟ್ ನಿಕೋಬಾರ್ ಮತ್ತು ಸುಮಾತ್ರಾ |
|
4. 8 ಡಿಗ್ರಿ ಜಲಸಂಧಿ (Eight Degree Channel) |
ಮಿನಿಕಾಯ್ ದ್ವೀಪ ಮತ್ತು ಮಾಲ್ಡೀವ್ಸ್ |
ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ಎಲ್ಲಾ ನಾಲ್ಕು
- ಒಂದು ಮಾತ್ರ
ಉತ್ತರ: C
- ಕೆಳಗಿನವುಗಳಲ್ಲಿ ಯಾವ ಸ್ಥಳವು ಭಾರತ, ನೇಪಾಳ ಮತ್ತು ಚೀನಾವನ್ನು ಒಳಗೊಂಡಿರುವ ತ್ರಿವಳಿ-ಸಂಗಮ (Tri-junction – ಮೂರು ದೇಶಗಳ ಗಡಿಗಳು ಸಂಧಿಸುವ ಸ್ಥಳ) ಅನ್ನು ರೂಪಿಸುತ್ತದೆ?
- ಕಾಲಾಪಾನಿ
- ಲಿಪುಲೇಖ್ ಪಾಸ್
- ಲಿಂಪಿಯಾಧುರ
- ಧಾರ್ಚುಲಾ
ಉತ್ತರ: B
- 1816 ರ ಸುಗೌಲಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ(ಗಳು) ಸರಿಯಾಗಿದೆ/ಸರಿಯಾಗಿವೆ?
- ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳದ ನಡುವೆ ಸಹಿ ಮಾಡಲ್ಪಟ್ಟಿತು.
- ಕಾಳಿ ನದಿಯನ್ನು ನೇಪಾಳದ ಪಶ್ಚಿಮ ಗಡಿಯಾಗಿ ಒಪ್ಪಿಕೊಳ್ಳಲಾಯಿತು.
- ಈ ಒಪ್ಪಂದವು ಲಿಂಪಿಯಾಧುರವನ್ನು ನದಿಯ ಉಗಮಸ್ಥಾನವೆಂದು ಸ್ಪಷ್ಟವಾಗಿ ಗುರುತಿಸಿದೆ.
ಈ ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- I ಮತ್ತು II ಮಾತ್ರ
- II ಮಾತ್ರ
- I ಮತ್ತು III ಮಾತ್ರ
- I, II ಮತ್ತು III
ಉತ್ತರ: A
- ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ (Fugitive Economic Offenders Act), 2018 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದರೆ, ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಿಗದಿತ ಆರ್ಥಿಕ ಅಪರಾಧಕ್ಕಾಗಿ ಬಂಧನ ಆದೇಶಪತ್ರ (ವಾರಂಟ್) ಹೊರಡಿಸಲ್ಪಟ್ಟಿರುವ ವ್ಯಕ್ತಿ.
- ಈ ಕಾಯ್ದೆಯು ಭಾರತ ಮತ್ತು ವಿದೇಶಗಳಲ್ಲಿರುವ ಅಪರಾಧಿಯ ಬೇನಾಮಿ ಆಸ್ತಿಗಳು ಸೇರಿದಂತೆ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
- ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು, ಭಾರತೀಯ ನ್ಯಾಯಾಲಯಗಳಲ್ಲಿ ಸಿವಿಲ್ ಮೊಕದ್ದಮೆಗಳನ್ನು ಹೂಡುವುದನ್ನು ಅಥವಾ ಸಮರ್ಥಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
- ಈ ಕಾಯ್ದೆಯಡಿಯ ಪ್ರಕರಣಗಳನ್ನು ‘ಭ್ರಷ್ಟಾಚಾರ ತಡೆ ಕಾಯ್ದೆ, 1988’ ರ ಅಡಿಯಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳ ಮೂಲಕ ಇತ್ಯರ್ಥಪಡಿಸಲಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಭಾರತದ ರಾಷ್ಟ್ರೀಯ ಪಾವತಿ ನಿಗಮದ (NPCI) ಕೆಳಗಿನ ಎಷ್ಟು ಉತ್ಪನ್ನಗಳು/ಸೇವೆಗಳು ಡಿಜಿಟಲ್ ಪಾವತಿಗಳಿಗೆ ನೇರವಾಗಿ ಸಂಬಂಧಿಸಿವೆ?
- ಏಕೀಕೃತ ಪಾವತಿ ವ್ಯವಸ್ಥೆ (UPI)
- ಭಾರತ್ ಇಂಟರ್ಫೇಸ್ ಫಾರ್ ಮನಿ (BHIM)
- ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS)
- ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
- ಸರಕು ಮತ್ತು ಸೇವಾ ತೆರಿಗೆ ಜಾಲ (GSTN)
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 2
- 3
- 4
- 5
ಉತ್ತರ: C
- “ಮಿಷನ್ ದೃಷ್ಟಿ” (Mission Drishti) ಎಂಬ ಪದವು ಏನನ್ನು ಉಲ್ಲೇಖಿಸುತ್ತದೆ?
- ISRO ಪ್ರಾರಂಭಿಸಿದ ಭಾರತದ ಚಂದ್ರನ ಅನ್ವೇಷಣಾ ಕಾರ್ಯಕ್ರಮ.
- ಇಸ್ರೋ ನಡೆಸುತ್ತಿರುವ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆ.
- DRDO ಅಭಿವೃದ್ಧಿಪಡಿಸಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆ.
- ಭಾರತೀಯ ನವೋದ್ಯಮ ‘ಗ್ಯಾಲಕ್ಸ್ಐ’ (GalaxEye) ಉಡಾವಣೆ ಮಾಡಿದ ವಿಶ್ವದ ಮೊದಲ ಆಪ್ಟೋಸಾರ್ (OptoSAR) ಭೂ-ವೀಕ್ಷಣಾ ಉಪಗ್ರಹ.
ಉತ್ತರ: D
- ಭಾರತದಲ್ಲಿನ ಹತ್ತಿ ಬೆಳೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಹತ್ತಿ ಉತ್ಪಾದಕತೆಯ ಮಿಷನ್’ (2026-31) ಅನ್ನು ‘ಕಪಾಸ್ ಕ್ರಾಂತಿ’ (Kapas Kranti) ಎಂತಲೂ ಕರೆಯಲಾಗುತ್ತದೆ ಮತ್ತು ಇದು ಅಧಿಕ-ಸಾಂದ್ರತೆಯ ನಾಟಿ ವ್ಯವಸ್ಥೆಯನ್ನು (HDPS) ಉತ್ತೇಜಿಸುತ್ತದೆ.
- ಹತ್ತಿಯು ಉಪ-ಉಷ್ಣವಲಯದ (Subtropical) ಖಾರಿಫ್ ಬೆಳೆಯಾಗಿದ್ದು, ಇದಕ್ಕೆ ಬೆಚ್ಚಗಿನ ಹವಾಮಾನ ಮತ್ತು ಸುಮಾರು 210 ಮಂಜು-ಮುಕ್ತ ದಿನಗಳ ಅಗತ್ಯವಿದೆ.
- ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಕಪ್ಪು ಮಣ್ಣನ್ನು (ರೆಗೂರ್ ಮಣ್ಣು) ಹತ್ತಿ ಬೇಸಾಯಕ್ಕೆ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ.
- ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಹತ್ತಿ ಉತ್ಪಾದಕ ದೇಶವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ಒಂದು
- ಎರಡು
- ಮೂರು
- ನಾಲ್ಕು
ಉತ್ತರ: C
- ಇ-ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022’ ಭಾರತದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯದ ನಿರ್ವಹಣೆ ಮತ್ತು ವಿಲೇವಾರಿಯನ್ನು ನಿಯಂತ್ರಿಸುತ್ತವೆ.
- ಕೇವಲ ಮನೆಗಳಿಂದ ಬರುವ ಇ-ತ್ಯಾಜ್ಯವನ್ನು ಸಂಸ್ಕರಿಸುವ ಉದ್ದೇಶದಿಂದ ಮಧ್ಯಪ್ರದೇಶದ ಇಂದೋರ್ನಲ್ಲಿ ಭಾರತದ ಮೊದಲ ‘ಇ-ತ್ಯಾಜ್ಯ ಕ್ಲಿನಿಕ್’ ಅನ್ನು ಉದ್ಘಾಟಿಸಲಾಯಿತು.
- ‘ಬಾಸೆಲ್ ಸಮಾವೇಶ’ವು ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಚಲನೆ ಮತ್ತು ಪರಿಸರ ಸ್ನೇಹಿ ನಿರ್ವಹಣೆಗೆ ಸಂಬಂಧಿಸಿದೆ.
- ಭಾರತವು ಬಾಸೆಲ್ ಸಮಾವೇಶಕ್ಕೆ ಸಹಿ ಹಾಕಿದ ದೇಶವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ಒಂದು ಮಾತ್ರ
- ಎರಡು ಮಾತ್ರ
- ಮೂರು ಮಾತ್ರ
- ಎಲ್ಲಾ ನಾಲ್ಕು
ಉತ್ತರ: C
- ತುರ್ತು ಸಾಲ ಖಾತರಿ ಯೋಜನೆಗೆ (ECLGS 5.0) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ದ್ರವ್ಯತೆಯ ಒತ್ತಡವನ್ನು ಎದುರಿಸುತ್ತಿರುವ ವ್ಯವಹಾರಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಇದನ್ನು ಪರಿಚಯಿಸಲಾಗಿದೆ.
- ಈ ಯೋಜನೆಯು ಸುಮಾರು ₹2.55 ಲಕ್ಷ ಕೋಟಿಗಳ ಹೆಚ್ಚುವರಿ ಸಾಲದ ಹರಿವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.
- ಈ ಯೋಜನೆಯು ಪ್ರತ್ಯೇಕವಾಗಿ ಕೇವಲ ಬೃಹತ್ ಕೈಗಾರಿಕೆಗಳು ಮತ್ತು ಬಹುರಾಷ್ಟ್ರೀಯ ನಿಗಮಗಳನ್ನು ಗುರಿಯಾಗಿಸಿಕೊಂಡಿದೆ.
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME’s) ಮತ್ತು ವಿಮಾನಯಾನ ವಲಯವು ಈ ಯೋಜನೆಯ ಪ್ರಮುಖ ಫಲಾನುಭವಿಗಳಾಗಿವೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- I, II ಮತ್ತು IV ಮಾತ್ರ
- I ಮತ್ತು III ಮಾತ್ರ
- II ಮತ್ತು III ಮಾತ್ರ
- I, II, III ಮತ್ತು IV
ಉತ್ತರ: A
- ಉದ್ಗಮ್ (UDGAM) ಪೋರ್ಟಲ್ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- UDGAM ಎಂದರೆ ‘ಅನ್ ಕ್ಲೇಮ್ಡ್ ಡೆಪಾಸಿಟ್ಸ್ – ಗೇಟ್ ವೇ ಟು ಅಕ್ಸಸ್ ಇನ್ಫಾರ್ಮೆಷನ್’ ಎಂದರ್ಥ ಮತ್ತು ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಭಿವೃದ್ಧಿಪಡಿಸಿದೆ.
- ಬಳಕೆದಾರರು ಪೋರ್ಟಲ್ ಮೂಲಕವೇ ನೇರವಾಗಿ ತಮ್ಮ ಹಕ್ಕು ಪಡೆಯದ ಠೇವಣಿಗಳನ್ನು (Unclaimed deposits) ಹಿಂಪಡೆಯಲು ಮತ್ತು ಇತ್ಯರ್ಥಪಡಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
- ಭಾಗವಹಿಸುವ ಬ್ಯಾಂಕುಗಳಾದ್ಯಂತ ಇರುವ ಹಕ್ಕು ಪಡೆಯದ ಠೇವಣಿಗಳನ್ನು ಗುರುತಿಸಲು ಈ ಪೋರ್ಟಲ್ ಕೇಂದ್ರೀಕೃತ ಹುಡುಕಾಟ ಸೌಲಭ್ಯವನ್ನು ಒದಗಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕಬ್ಬು ಬೆಳೆಗೆ FRP (ನ್ಯಾಯಯುತ ಮತ್ತು ಲಾಭದಾಯಕ ಬೆಲೆ)ಯನ್ನು ‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ’ (CACP) ಶಿಫಾರಸು ಮಾಡುತ್ತದೆ.
- ಹಣಕಾಸು ಸಚಿವರ ಅಧ್ಯಕ್ಷತೆಯ ‘ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ’ಯು FRP ಯನ್ನು ಅನುಮೋದಿಸುತ್ತದೆ.
- 2021-22 ರಲ್ಲಿ ಭಾರತವು ಬ್ರೆಜಿಲ್ ಅನ್ನು ಹಿಂದಿಕ್ಕಿ ವಿಶ್ವದ ಅಗ್ರ ಸಕ್ಕರೆ ಉತ್ಪಾದಕ ದೇಶವಾಯಿತು ಮತ್ತು ಉತ್ತರ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾಯಿತು.
- ಭಾರತದಲ್ಲಿ ಸಕ್ಕರೆ ಉದ್ಯಮವು ಕೇವಲ ಉತ್ತರ ಪ್ರದೇಶ ಮತ್ತು ಪಂಜಾಬ್ನಂತಹ ಉತ್ತರದ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ.
ಭಾರತದಲ್ಲಿ ಕಬ್ಬು ಬೆಳೆಗೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ (FRP) ಮತ್ತು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4
ಉತ್ತರ: B
- ಪುಲಿಟ್ಜರ್ ಪ್ರಶಸ್ತಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪುಲಿಟ್ಜರ್ ಪ್ರಶಸ್ತಿಯನ್ನು 1917 ರಲ್ಲಿ ಜೋಸೆಫ್ ಪುಲಿಟ್ಜರ್ ಅವರ ಗೌರವ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು ಮತ್ತು ಇದನ್ನು ಕೊಲಂಬಿಯಾ ವಿಶ್ವವಿದ್ಯಾಲಯವು ನಿರ್ವಹಿಸುತ್ತದೆ.
- ಪುಲಿಟ್ಜರ್ ಪ್ರಶಸ್ತಿಯು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಲ್ಲಿನ ಅತ್ಯುನ್ನತ ಸಾಧನೆಯನ್ನು ಗುರುತಿಸುತ್ತದೆ.
- ಪುಲಿಟ್ಜರ್ ಪ್ರಶಸ್ತಿಯ 23 ವಿಭಾಗಗಳ ಪೈಕಿ, ಕೇವಲ ‘ಸಾರ್ವಜನಿಕ ಸೇವೆ’ ವಿಭಾಗಕ್ಕೆ ಮಾತ್ರ ಚಿನ್ನದ ಪದಕವನ್ನು ನೀಡಲಾಗುತ್ತದೆ.
- 1937 ರಲ್ಲಿ ಪತ್ರಿಕೋದ್ಯಮಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ಗೆದ್ದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಗೋಬಿಂದ್ ಬಿಹಾರಿ ಲಾಲ್.
- ಇಬ್ಬರು ಭಾರತೀಯ ಪತ್ರಕರ್ತರಾದ ಆನಂದ್ ಆರ್ಕೆ ಮತ್ತು ಸುಪರ್ಣಾ ಶರ್ಮಾ ಅವರು ನತಾಲಿಯ ಒಬಿಕೊ ಪಿಯರ್ಸನ್ ಅವರೊಂದಿಗೆ 2026 ರ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?
- ಮೂರು ಮಾತ್ರ
- ನಾಲ್ಕು ಮಾತ್ರ
- ಎಲ್ಲಾ ಐದು
- ಎಲ್ಲವೂ ಸರಿಯಾಗಿವೆ
ಉತ್ತರ: D
- ಕೋಮಗಾಟ ಮಾರು (Komagata Maru) ಘಟನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಘಟನೆಯು ಕೆನಡಾ ವಿಧಿಸಿದ್ದ ‘ನಿರಂತರ ಪ್ರಯಾಣ ನಿಯಂತ್ರಣ’ ಎಂಬ ತಾರತಮ್ಯದ ವಲಸೆ ನೀತಿಗೆ ಸಂಬಂಧಿಸಿದೆ.
- ತಾರತಮ್ಯದ ವಲಸೆ ಕಾನೂನುಗಳನ್ನು ವಿರೋಧಿಸುವ ಉದ್ದೇಶದಿಂದ ಬಾಬಾ ಗುರ್ದಿತ್ ಸಿಂಗ್ ಅವರು ‘ಕೋಮಗಾಟ ಮಾರು’ ಹಡಗನ್ನು ಬಾಡಿಗೆಗೆ ಪಡೆದಿದ್ದರು.
- ಬ್ರಿಟಿಷ್ ಸರ್ಕಾರದ ಮಧ್ಯಸ್ಥಿಕೆಯ ನಂತರ ಕೋಮಗಾಟ ಮಾರು ಪ್ರಯಾಣಿಕರಿಗೆ ವ್ಯಾಂಕೋವರ್ನಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶ ನೀಡಲಾಯಿತು.
- ಈ ಘಟನೆಯು ಗದರ್ ಪಕ್ಷದೊಂದಿಗೆ ಸಂಬಂಧಿಸಿದ ಕ್ರಾಂತಿಕಾರಿ ರಾಷ್ಟ್ರೀಯತಾವಾದಿ ಚಟುವಟಿಕೆಗಳನ್ನು ಬಲಪಡಿಸಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಷ್ಟ್ರೀಯ ಜನನದ-ಸಮಯದ ಲಿಂಗ ಅನುಪಾತವು (SRB) 2017-19 ರ ನಡುವಿನ ಅವಧಿಯಲ್ಲಿದ್ದ 904 ರಿಂದ 2021-23 ರ ನಡುವಿನ ಅವಧಿಯಲ್ಲಿ 917 ಕ್ಕೆ ಗಣನಿಯವಾಗಿ ಸುಧಾರಣೆ ಕಂಡಿದೆ.
- ಭಾರತದ ಶಿಶು ಮರಣ ದರವು (IMR) 1,000 ಜೀವಂತ ಜನನಗಳಿಗೆ ಸುಮಾರು 25 ರಷ್ಟು ಮರಣಗಳಿದ್ದು, ಇದು ಗಂಡು ಮತ್ತು ಹೆಣ್ಣು ಶಿಶುಗಳೆರಡರಲ್ಲೂ ದೀರ್ಘಕಾಲೀನ ಕುಸಿತವನ್ನು ತೋರಿಸಿದೆ.
- ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಒಟ್ಟು ದಾಖಲಾತಿ ಅನುಪಾತವು (GER) ಪುರುಷರಿಗಿಂತ ಕಡಿಮೆಯಾಗಿಯೇ ಉಳಿದಿದೆ.
- ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಉದ್ಯೋಗಸ್ಥ ಮಹಿಳೆಯರಲ್ಲಿ 70% ಕ್ಕೂ ಹೆಚ್ಚು ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ “ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2025” ವರದಿಗೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
- ಪಂಚಾಯತ್ ಪ್ರಗತಿ ಸೂಚ್ಯಂಕ (Panchayat Advancement Index – PAI) 2.0 ಅನ್ನು ಯಾರು ಬಿಡುಗಡೆ ಮಾಡುತ್ತಾರೆ?
- ಗ್ರಾಮೀಣ ಅಭಿವೃದ್ಧಿ ಸಚಿವಾಲಯ
- ನೀತಿ ಆಯೋಗ
- ಪಂಚಾಯತ್ ರಾಜ್ ಸಚಿವಾಲಯ
- ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಉತ್ತರ: C
- ‘ಗಿರ್ಮಿಟಿಯಾಸ್’ (Girmityas) ಎಂಬ ಪದವು ಈ ಕೆಳಗಿನ ಯಾರನ್ನು ಉಲ್ಲೇಖಿಸುತ್ತದೆ?
- ಬ್ರಿಟಿಷ್ ಸೇನೆಗೆ ನೇಮಕಗೊಂಡ ಭಾರತೀಯ ಸೈನಿಕರು.
- ಭಾರತದಿಂದ ಸಾಗರೋತ್ತರ ತೋಟಗಳಿಗೆ ಕರೆದೊಯ್ಯಲ್ಪಟ್ಟ ಒಪ್ಪಂದದ ಕಾರ್ಮಿಕರು.
- ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಸ್ಥಳಾಂತರಗೊಂಡ ಬುಡಕಟ್ಟು ಸಮುದಾಯಗಳು.
- ಹಿಂದೂ ಮಹಾಸಾಗರದ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳು.
ಉತ್ತರ: B
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಹಿಂದೂ ಮಹಾಸಾಗರದ ಗಡಿಯಲ್ಲಿರುವ ದೇಶಗಳ ನಡುವೆ ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಂತರ್-ಸರ್ಕಾರಿ ಸಂಸ್ಥೆಯಾಗಿದೆ.
- ಈ ಸಂಸ್ಥೆಯನ್ನು 1997 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಈ ಹಿಂದೆ IOR-ARC ಎಂದು ಕರೆಯಲಾಗುತ್ತಿತ್ತು.
- IORA ನ ಕಾರ್ಯಾಲಯವು ಶ್ರೀಲಂಕಾದ ಕೊಲಂಬೊದಲ್ಲಿದೆ.
- IORA ದ ಪ್ರಸ್ತುತ ಅಧ್ಯಕ್ಷತೆಯನ್ನು ಭಾರತವು 2025-2027ರ ಅವಧಿಗೆ ವಹಿಸಿಕೊಂಡಿದೆ.
‘ಹಿಂದೂ ಮಹಾಸಾಗರ ಕಡಲ ಸಂಘಟನೆ’ (Indian Ocean Rim Association – IORA) ಗೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಪಟ್ಟಿ-I ಅನ್ನು ಪಟ್ಟಿ-II ಮತ್ತು ಪಟ್ಟಿ-III ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ.
|
ಪಟ್ಟಿ-I (ಯೋಜನೆ) |
ಪಟ್ಟಿ-II (ಅನುಷ್ಠಾನ ಪ್ರಾಧಿಕಾರ) |
ಪಟ್ಟಿ-III (ಅರ್ಹ ವಯೋಮಿತಿ) |
|
I. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) |
1. NPS ಮೂಲಕ PFRDA |
a. 18-50 ವರ್ಷಗಳು |
|
II. ಅಟಲ್ ಪಿಂಚಣಿ ಯೋಜನೆ (APY) |
2. ಹಣಕಾಸು ಸಚಿವಾಲಯ |
b. 18-70 ವರ್ಷಗಳು |
|
III. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) |
3. ಹಣಕಾಸು ಸಚಿವಾಲಯ |
c. 18-40 ವರ್ಷಗಳು |
ಸಂಕೇತಗಳು:
- I-2-b, II-1-c, III-3-a
- I-1-b, II-2-c, III-3-a
- I-2-c, II-1-a, III-3-b
- I-3-b, II-1-c, III-2-a
ಉತ್ತರ: A
- ಕೆಳಗಿನವುಗಳಲ್ಲಿ ಯಾವುದು MIRV ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ವಿವರಿಸುತ್ತದೆ?
- ಕ್ಷಿಪಣಿಗಳ ವಿರುದ್ಧದ ರಕ್ಷಣಾ ಕವಚ ವ್ಯವಸ್ಥೆ.
- ಒಂದೇ ಕ್ಷಿಪಣಿಯಿಂದ ಸಿಡಿತಲೆಗಳು (warheads) ಬೇರೆ ಬೇರೆ ಗುರಿಗಳನ್ನು ಹೊಡೆಯಲು ಅನುವು ಮಾಡಿಕೊಡುವ ತಂತ್ರಜ್ಞಾನ.
- ಉಪಗ್ರಹ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆ.
- ಕ್ಷಿಪಣಿ ಉಡಾವಣೆ ಪತ್ತೆ ಹಚ್ಚುವ ವ್ಯವಸ್ಥೆ.
ಉತ್ತರ: B
- ‘ಒಡೊನಾಟಾ’ (Odonata) ಗುಂಪು ಕೆಳಗಿನ ಯಾವ ಕೀಟಗಳನ್ನು ಒಳಗೊಂಡಿದೆ?
- ಜೀರುಂಡೆಗಳು ಮತ್ತು ಚಿಟ್ಟೆಗಳು
- ಡ್ರ್ಯಾಗನ್ಫ್ಲೈಗಳು (ತುಂಬಿಗಳು) ಮತ್ತು ಡ್ಯಾಮ್ಸೆಲ್ಫ್ಲೈಗಳು
- ಜೇನುನೊಣಗಳು ಮತ್ತು ಇರುವೆಗಳು
- ಮಿಡತೆಗಳು ಮತ್ತು ಕ್ರಿಕೆಟ್ಗಳು
ಉತ್ತರ: B
- ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಸಮಿತಿಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಮಾಧವ್ ಗಾಡ್ಗೀಳ್ ಸಮಿತಿ’ಯು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ESA) ಎಂದು ಘೋಷಿಸಲು ಮತ್ತು ಅದರ ನಿಯಂತ್ರಣಕ್ಕಾಗಿ ಮೀಸಲಾದ ‘ಪರಿಸರ ಪ್ರಾಧಿಕಾರ’ವನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು.
- ‘ಕಸ್ತೂರಿರಂಗನ್ ಸಮಿತಿ’ಯು ಆಯ್ದ ಪ್ರದೇಶಗಳಲ್ಲಿ ಸೀಮಿತ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ನೀಡುತ್ತಲೇ, ಪಶ್ಚಿಮ ಘಟ್ಟಗಳ ಶೇಕಡಾ 37% ರಷ್ಟು ಭಾಗವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ವೆಂದು (ESA) ಗುರುತಿಸಲು ಶಿಫಾರಸು ಮಾಡಿತ್ತು.
- ‘ಪರಿಸರ ಸೂಕ್ಷ್ಮ ಪ್ರದೇಶ’ (ESA)ಗಳ ಗಡಿ ಗುರುತಿಸುವಿಕೆ ಕುರಿತ ರಾಜ್ಯಗಳ ಆಕ್ಷೇಪಣೆಗಳನ್ನು ಪರಿಶೀಲಿಸಲು ಮತ್ತು ಪರಿಸರ ಸೂಕ್ಷ್ಮ ವಲಯಗಳಿಂದ (ESZ) ನೀಡಲಾದ ಪ್ರಸ್ತಾವಿತ ವಿನಾಯಿತಿಗಳನ್ನು ಪರೀಕ್ಷಿಸಲು ‘ಸಂಜಯ್ ಕುಮಾರ್ ಸಮಿತಿ’ಯನ್ನು ರಚಿಸಲಾಗಿತ್ತು.
- ಕಸ್ತೂರಿರಂಗನ್ ಸಮಿತಿಯು ಗಾಡ್ಗೀಳ್ ಸಮಿತಿಯಂತೆಯೇ ಕಟ್ಟುನಿಟ್ಟಾದ ಸಂರಕ್ಷಣಾ ವಿಧಾನವನ್ನು ಶಿಫಾರಸು ಮಾಡಿತು ಮತ್ತು ಪಶ್ಚಿಮ ಘಟ್ಟಗಳಾದ್ಯಂತ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ಇದು ನಿಷೇಧಿಸಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅಂತರ್-ಕಾರ್ಯಾಚರಣಾ ಅಪರಾಧ ನ್ಯಾಯ ವ್ಯವಸ್ಥೆ (Inter-Operable Criminal Justice System – ICJS) ಯೋಜನೆ.
- ಅಪರಾಧ ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವ ಜಾಲ ಮತ್ತು ವ್ಯವಸ್ಥೆಗಳು (Crime and Criminal Tracking Network & Systems – CCTNS).
- ಭಾರತದಲ್ಲಿನ ಅಪರಾಧಗಳು ವರದಿ (Crime in India).
- ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು ವರದಿ (Accidental Deaths & Suicides in India).
- ಭಾರತದ ಕಾರಾಗೃಹಗಳ ಅಂಕಿಅಂಶಗಳು ವರದಿ (Prison Statistics India ).
ಮೇಲಿನವುಗಳಲ್ಲಿ ಎಷ್ಟು ಯೋಜನೆಗಳು ಮತ್ತು ವರದಿಗಳನ್ನು NCRB (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಅನುಷ್ಠಾನಗೊಳಿಸುತ್ತಿದೆ ಮತ್ತು ಬಿಡುಗಡೆ ಮಾಡುತ್ತಿದೆ?
- ಕೇವಲ ಮೂರು
- ಕೇವಲ ನಾಲ್ಕು
- ಎಲ್ಲಾ ಐದು
- ಕೇವಲ ಎರಡು
ಉತ್ತರ: C
- ಬಂಕರ್ ಆಯಿಲ್ ಕನ್ವೆನ್ಷನ್ (Bunker Oil Convention – 2001) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಅಂತರರಾಷ್ಟ್ರೀಯ ಕಡಲ ಸಂಸ್ಥೆಯ (International Maritime Organization – IMO) ಅಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.
- ಇದು ಹಡಗುಗಳಲ್ಲಿ ಬಳಸುವ ಇಂಧನ ತೈಲದಿಂದ ಉಂಟಾಗುವ ಮಾಲಿನ್ಯಕ್ಕೆ ಸಂಬಂಧಿಸಿದೆ.
- ಇದು ಕಚ್ಚಾ ತೈಲವನ್ನು ಸಾಗಿಸುವ ತೈಲ ಟ್ಯಾಂಕರ್ಗಳಿಗೆ ಮಾತ್ರ ಅನ್ವಯಿಸುತ್ತದೆ.
- ಇದು ಹಡಗು ಮಾಲೀಕರಿಗೆ ಕಡ್ಡಾಯ ವಿಮೆಯನ್ನು ಕಡ್ಡಾಯಗೊಳಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- I, II ಮತ್ತು IV ಮಾತ್ರ
- I ಮತ್ತು III ಮಾತ್ರ
- II ಮತ್ತು III ಮಾತ್ರ
- I, II, III ಮತ್ತು IV
ಉತ್ತರ: A
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಸಂತಾನೋತ್ಪತ್ತಿ ವಯಸ್ಸಿನಲ್ಲಿರುವ ಮಹಿಳೆಯರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ವಿನ್ಯಾಸಗೊಳಿಸಲಾದ ಸೇವಾ-ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.
- ಇದನ್ನು ‘ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ’ (RCH) ಪೋರ್ಟಲ್ನ ಉನ್ನತೀಕರಿಸಿದ ಆವೃತ್ತಿಯಾಗಿ ಅಭಿವೃದ್ಧಿಪಡಿಸಲಾಗಿದೆ.
- ಆರೋಗ್ಯ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು, ಇದು QR ಆಧಾರಿತ ಡಿಜಿಟಲ್ ತಾಯಿ ಮತ್ತು ಮಕ್ಕಳ ಆರೋಗ್ಯ (MCH) ಕಾರ್ಡ್ಗಳನ್ನು ಪರಿಚಯಿಸುತ್ತದೆ.
- ಇದೊಂದು ಸ್ವತಂತ್ರ ವ್ಯವಸ್ಥೆಯಾಗಿದ್ದು, ಬೇರೆ ಯಾವುದೇ ರಾಷ್ಟ್ರೀಯ ಆರೋಗ್ಯ ಪ್ಲಾಟ್ಫಾರ್ಮ್ಗಳೊಂದಿಗೆ ಸಂಯೋಜನೆಗೊಂಡಿಲ್ಲ.
JANANI ಪ್ಲಾಟ್ಫಾರ್ಮ್ಗೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ದೀನದಯಾಳ್ ಬಂದರು ಪ್ರಾಧಿಕಾರ ಮತ್ತು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಜಂಟಿ ಉಪಕ್ರಮದ ಅಡಿಯಲ್ಲಿ ಗುಜರಾತ್ನಲ್ಲಿ ‘ವಾಡಿನಾರ್ ಹಡಗು ದುರಸ್ತಿ ಸೌಲಭ್ಯ’ವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
- ಈ ಸೌಲಭ್ಯವು ಸರಿಸುಮಾರು 300 ಮೀಟರ್ ಉದ್ದದ ಹಡಗುಗಳ ದುರಸ್ತಿ ಮತ್ತು ನಿರ್ವಹಣೆಯನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ.
- ಇದು ಪ್ರಾಥಮಿಕವಾಗಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಂಟೈನರ್ ಕಾರ್ಗೋ (Container cargo) ನಿರ್ವಹಣೆಗೆ ಮೀಸಲಾದ ನೂತನ ಆಳ-ಸಮುದ್ರದ ಬಂದರು’ (‘ಗ್ರೀನ್ಫೀಲ್ಡ್ ಡೀಪ್-ಸೀ ಪೋರ್ಟ್’) ಆಗಿ ಕಾರ್ಯನಿರ್ವಹಿಸುತ್ತದೆ.
- ಹಡಗು ದುರಸ್ತಿ ಮತ್ತು ನಿರ್ವಹಣಾ ಸೇವೆಗಳಿಗಾಗಿ ವಿದೇಶಿ ಹಡಗುಕಟ್ಟೆಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- I ಮತ್ತು II ಮಾತ್ರ
- I, II ಮತ್ತು IV ಮಾತ್ರ
- II ಮತ್ತು III ಮಾತ್ರ
- I, III ಮತ್ತು IV ಮಾತ್ರ
ಉತ್ತರ: B
- ವಿದೇಶಿ ವಿನಿಮಯ ಮೀಸಲು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಲ್ಲಿ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ವಹಿಸುತ್ತದೆ.
- ಭಾರತದ ವಿದೇಶಿ ವಿನಿಮಯ ಮೀಸಲು ಕೇವಲ ವಿದೇಶಿ ಕರೆನ್ಸಿ ಸ್ವತ್ತುಗಳು ಮತ್ತು ಚಿನ್ನದ ನಿಕ್ಷೇಪಗಳನ್ನು (Gold reserves) ಮಾತ್ರ ಒಳಗೊಂಡಿದೆ.
- ವಿಶೇಷ ಸ್ವೀಕೃತ ಹಕ್ಕುಗಳು (Special Drawing Rights – SDRs) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (IMF) ಮೀಸಲು ಸ್ಥಾನವು ಭಾರತದ ವಿದೇಶಿ ವಿನಿಮಯ ಮೀಸಲಿನ ಭಾಗವಾಗಿದೆ.
- ಆರ್ಥಿಕ ಸಂಕಷ್ಟದ ಸಮಯದಲ್ಲಿ ಭಾರತೀಯ ರೂಪಾಯಿಯನ್ನು ಸ್ಥಿರಗೊಳಿಸಲು, ಆಮದುಗಳಿಗೆ ಹಣಕಾಸು ಒದಗಿಸಲು, ಹೂಡಿಕೆದಾರರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಬಾಹ್ಯ ಪಾವತಿ ಜವಾಬ್ದಾರಿಗಳನ್ನು ಪೂರೈಸಲು ವಿದೇಶಿ ವಿನಿಮಯ ಮೀಸಲು ಸಹಾಯ ಮಾಡುತ್ತದೆ.
- ಜಾಗತಿಕ ಆರ್ಥಿಕ ಅಸ್ಥಿರತೆ, ಹೆಚ್ಚುತ್ತಿರುವ ತೈಲ ಬೆಲೆಗಳು, ಕರೆನ್ಸಿ ಏರಿಳಿತಗಳು (Currency volatility) ಮತ್ತು ಹಠಾತ್ ಬಂಡವಾಳದ ಹೊರಹರಿವಿನ (Capital outflows) ಅವಧಿಗಳಲ್ಲಿ ಆರ್ಥಿಕತೆಯನ್ನು ರಕ್ಷಿಸಲು ಬಲವಾದ ವಿದೇಶಿ ವಿನಿಮಯ ಮೀಸಲು ಸಹಾಯ ಮಾಡುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ನಾಲ್ಕು ಮಾತ್ರ
- ಎಲ್ಲಾ ಐದು
ಉತ್ತರ: C
- ಕೆಳಗಿನವುಗಳಲ್ಲಿ ಯಾವುದು ಭಾರತದ ಚಾಲ್ತಿ ಖಾತೆ ಕೊರತೆಗೆ (Current Account Deficit) ಹಣಕಾಸು ಒದಗಿಸಲು ಸಹಾಯ ಮಾಡುತ್ತದೆ?
- ವಿದೇಶಿ ನೇರ ಹೂಡಿಕೆ (FDI)
- ವಿದೇಶಿ ವಿನಿಮಯ ಮೀಸಲು
- ಬಾಹ್ಯ ವಾಣಿಜ್ಯ ಸಾಲಗಳು
- ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆ (FPI)
ಈ ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: D
- ಭಾರತದಲ್ಲಿ ಸೆಣಬು (Jute) ಬೆಳೆ ಮತ್ತು ಅದಕ್ಕೆ ಸಂಬಂಧಿಸಿದ ಉಪಕ್ರಮಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು ವಿಶ್ವದ ಅತಿದೊಡ್ಡ ಸೆಣಬು ಉತ್ಪಾದಕ ದೇಶವಾಗಿದೆ.
- ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳು ಒಟ್ಟಾಗಿ ಭಾರತದ ಬಹುತೇಕ ಸಂಪೂರ್ಣ ಸೆಣಬು ಉತ್ಪಾದನೆಯನ್ನು ಹೊಂದಿವೆ.
- ‘ಸೆಣಬಿನ ಬೆಳೆ ಮಾಹಿತಿ ವ್ಯವಸ್ಥೆ’ ಯೋಜನೆಯು ಸೆಣಬು ಕೃಷಿಯನ್ನು ಮೇಲ್ವಿಚಾರಣೆ ಮಾಡಲು ದೂರಸಂವೇದಿ (ರಿಮೋಟ್ ಸೆನ್ಸಿಂಗ್) ತಂತ್ರಜ್ಞಾನವನ್ನು ಬಳಸುತ್ತದೆ.
- ‘ಸೆಣಬಿನ ಬೆಳೆ ಮಾಹಿತಿ ವ್ಯವಸ್ಥೆ’ ಯೋಜನೆಯನ್ನು ಕೇವಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾತ್ರ ಜಾರಿಗೊಳಿಸುತ್ತಿದೆ.
- ಸೆಣಬು ಜೈವಿಕ ವಿಘಟನೀಯ ಮತ್ತು ನವೀಕರಿಸಬಹುದಾದ ಗುಣವನ್ನು ಹೊಂದಿರುವುದರಿಂದ, ಇದನ್ನು ಪರಿಸರ ಸ್ನೇಹಿ ನಾರು ಎಂದು ಪರಿಗಣಿಸಲಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ಭಾರತದ ಬುಡಕಟ್ಟುಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಬೈಗಾ’ ಬುಡಕಟ್ಟು ಜನಾಂಗವು ಪ್ರಾಥಮಿಕವಾಗಿ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡುಬರುತ್ತದೆ.
- “ಬೈಗಾ” ಎಂಬ ಪದವು ಸಾಂಪ್ರದಾಯಿಕ ಯೋಧರ ಸಮುದಾಯವನ್ನು ಸೂಚಿಸುತ್ತದೆ.
- ಛತ್ತೀಸ್ಗಢದ ಬೈಗಾ ಜನಾಂಗವನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (PVTG) ಎಂದು ವರ್ಗೀಕರಿಸಲಾಗಿದೆ.
- ಈ ಬುಡಕಟ್ಟು ಜನಾಂಗವು ಸಾಂಪ್ರದಾಯಿಕವಾಗಿ ಸ್ಥಳಾಂತರ ಬೇಸಾಯವನ್ನು ಅನುಸರಿಸುತ್ತಿದ್ದರು, ಇದನ್ನು ಸ್ಥಳೀಯವಾಗಿ “ಬೇವಾರ್” ಬೇಸಾಯ ಎಂದು ಕರೆಯಲಾಗುತ್ತದೆ.
- ಕೃಷಿಪೂರ್ವ ಹಂತದ ತಂತ್ರಜ್ಞಾನ, ಕಡಿಮೆ ಸಾಕ್ಷರತೆ, ಆರ್ಥಿಕ ಹಿಂದುಳಿಯುವಿಕೆ ಮತ್ತು ಕ್ಷೀಣಿಸುತ್ತಿರುವ ಅಥವಾ ಸ್ಥಿರ ಜನಸಂಖ್ಯೆ – ಇವು PVTG ಗಳನ್ನು ಗುರುತಿಸುವ ಮಾನದಂಡಗಳಾಗಿವೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 3 ಮತ್ತು 4 ಮಾತ್ರ
- 2, 4 ಮತ್ತು 5 ಮಾತ್ರ
- 1, 2 ಮತ್ತು 3 ಮಾತ್ರ
- 1, 3, 4 ಮತ್ತು 5 ಮಾತ್ರ
ಉತ್ತರ: D
- ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಕೆಳಗಿನ ಉಪಕ್ರಮಗಳ ಕುರಿತಾದ ಹೇಳಿಕೆಗಳನ್ನು ಪರಿಗಣಿಸಿ:
- “ಒಂದು ಪ್ರಕರಣ ಒಂದು ದತ್ತಾಂಶ” ಎನ್ನುವುದು ಏಕೀಕೃತ ಡೇಟಾಬೇಸ್ (ದತ್ತಸಂಚಯ) ವ್ಯವಸ್ಥೆಯ ಮೂಲಕ ಎಲ್ಲಾ ಹಂತದ ನ್ಯಾಯಾಲಯಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಡಿಜಿಟಲ್ ಉಪಕ್ರಮವಾಗಿದೆ.
- ಈ ಉಪಕ್ರಮವು ಅಧೀನ ನ್ಯಾಯಾಲಯಗಳನ್ನು ಹೊರತುಪಡಿಸಿ ಕೇವಲ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸುತ್ತದೆ.
- “ಸು ಸಹಾಯ್” (Su Sahay) ಎನ್ನುವುದು ಸರ್ವೋಚ್ಚ ನ್ಯಾಯಾಲಯವನ್ನು ವೆಬ್ಸೈಟ್ನೊಂದಿಗೆ ಸಂಯೋಜಿಸಲ್ಪಟ್ಟ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್ಬಾಟ್ (Chatbot) ಆಗಿದೆ.
- ಸರ್ವೋಚ್ಚ ನ್ಯಾಯಾಲಯದ ನೋಂದಣಿ ಕಚೇರಿಯ (Registry) ಸಹಯೋಗದೊಂದಿಗೆ ‘ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರ’ವು (National Informatics Centre – NIC) “ಸು ಸಹಾಯ್” ಅನ್ನು ಅಭಿವೃದ್ಧಿಪಡಿಸಿದೆ.
- ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಾಗುವ ಕಕ್ಷಿದಾರರಿಗೆ ಆರ್ಥಿಕ ನೆರವು ನೀಡುವುದು “ಸು ಸಹಾಯ್” ನ ಪ್ರಾಥಮಿಕ ಉದ್ದೇಶವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 3 ಮತ್ತು 4 ಮಾತ್ರ
- 1, 2 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 3, 4 ಮತ್ತು 5 ಮಾತ್ರ
ಉತ್ತರ: A
- ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ವಾರ್ಷಿಕವಾಗಿ ಪ್ರದಾನ ಮಾಡುತ್ತದೆ.
- ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ’ವು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDGs) ಸಂಬಂಧಿಸಿದ ಕಾರ್ಯಕ್ಷಮತೆಗಾಗಿ ಪಂಚಾಯಿತಿಗಳನ್ನು ಗುರುತಿಸುತ್ತದೆ.
- ‘ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ’ವನ್ನು ಕೇವಲ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ನೀಡಲಾಗುತ್ತದೆ.
- ಮಿಜೋರಾಂನ ‘ಕಾವರ್ಥಾ ನಾರ್ತ್’ ಗ್ರಾಮವು, ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ 2025’ರ “ಸ್ವಚ್ಛ ಮತ್ತು ಹಸಿರು ಪಂಚಾಯತ್” ವಿಭಾಗದಡಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
- ಇತ್ತೀಚಿನ ಆವೃತ್ತಿಯ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಲ್ಲಿ ಕರ್ನಾಟಕವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 4 ಮತ್ತು 5 ಮಾತ್ರ
- 1, 3 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 2, 3 ಮತ್ತು 4 ಮಾತ್ರ
ಉತ್ತರ: C
- ಸೇಹತ್ (SEHAT) ಉಪಕ್ರಮಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- SEHAT ಎಂದರೆ “ಕೃಷಿ ರೂಪಾಂತರದ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನದ ಉತ್ಕೃಷ್ಟತೆ” (Science Excellence for Health through Agricultural Transformation) ಎಂದರ್ಥ.
- ಇದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಜಂಟಿ ಉಪಕ್ರಮವಾಗಿದೆ.
- ಜೈವಿಕ-ಬಲವರ್ಧಿತ ಆಹಾರಗಳು (Biofortified foods) ಮತ್ತು ಸಮಗ್ರ ಕೃಷಿಯಂತಹ (Integrated farming) ಕ್ರಮಗಳ ಮೂಲಕ ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಈ ಉಪಕ್ರಮವು ಪ್ರಯತ್ನಿಸುತ್ತದೆ.
- ಭಾರತದಿಂದ ಕೃಷಿ ರಫ್ತುಗಳನ್ನು ಹೆಚ್ಚಿಸುವ ಕಡೆಗೆ ಮಾತ್ರ SEHAT ಪ್ರತ್ಯೇಕವಾಗಿ ಗಮನಹರಿಸುತ್ತದೆ.
- ಈ ಉಪಕ್ರಮವು ‘ಒನ್ ಹೆಲ್ತ್ ಮಿಷನ್’ (ಒಂದು ಆರೋಗ್ಯ ಉಪಕ್ರಮ) ವಿಧಾನವನ್ನು ಬೆಂಬಲಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕೊಡುಗೆಗಳ ಉಲ್ಲೇಖದೊಂದಿಗೆ, ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ:
- ಬಾರ್ಡೋಲಿ ಸತ್ಯಾಗ್ರಹ
- ಅಸಹಕಾರ ಚಳುವಳಿ
- ಕ್ವಿಟ್ ಇಂಡಿಯಾ ಚಳುವಳಿ
- ಖೇಡಾ ಸತ್ಯಾಗ್ರಹ
- ಕಾನೂನುಭಂಗ ಚಳುವಳಿ
ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 4 – 2 – 1 – 5 – 3
- 1 – 3 – 4 – 2 – 5
- 3 – 4 – 1 – 5 – 2
- 1 – 4 – 3 – 2 – 5
ಉತ್ತರ: A
- ಭಾರತದಲ್ಲಿ ‘ತ್ವರಿತ ವಿಚಾರಣೆಯ ಹಕ್ಕು’ (Right to Speedy Trial) ಸಂವಿಧಾನದ ಯಾವ ವಿಧಿಯಿಂದ ಪಡೆಯಲಾಗಿದೆ?
- 14 ನೇ ವಿಧಿ
- 19 ನೇ ವಿಧಿ
- 21 ನೇ ವಿಧಿ
- 32 ನೇ ವಿಧಿ
ಉತ್ತರ: C
- ಪಾಲಿಯೆಂಡೋಕ್ರೈನ್ ಮೆಟಬಾಲಿಕ್ ಓವೇರಿಯನ್ ಸಿಂಡ್ರೋಮ್ (Polyendocrine Metabolic Ovarian Syndrome – PMOS) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಹಿಂದೆ PCOS ಎಂದು ಕರೆಯಲಾಗುತ್ತಿದ್ದ PMOS ಎನ್ನುವುದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಮತ್ತು ಚಯಾಪಚಯ ಅಸ್ವಸ್ಥತೆಯಾಗಿದೆ.
- ಈ ಅಸ್ವಸ್ಥತೆಯು ಕೇವಲ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಯಾಪಚಯ ಅಥವಾ ಮಾನಸಿಕ ಯೋಗಕ್ಷೇಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- PMOS ನೊಂದಿಗೆ ಸಂಬಂಧಿಸಿದ ಇನ್ಸುಲಿನ್ ಪ್ರತಿರೋಧವು ‘ಟೈಪ್-2 ಮಧುಮೇಹ’ದ (Type-2 Diabetes Mellitus) ಅಪಾಯವನ್ನು ಹೆಚ್ಚಿಸಬಹುದು.
- PMOS ಇರುವ ಮಹಿಳೆಯರು ಅಧಿಕ ರಕ್ತದೊತ್ತಡ (Hypertension) ಮತ್ತು ಹೃದಯ ಕಾಯಿಲೆಗಳಂತಹ ಹೃದಯರಕ್ತನಾಳದ (Cardiovascular) ಅಪಾಯಗಳನ್ನು ಎದುರಿಸಬಹುದು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
- ‘ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ (PM SHRI) ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಪಿಎಂ ಶ್ರೀ’, ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆ ಆಗಿದೆ.
- ದೇಶಾದ್ಯಂತ 14,500 ಕ್ಕೂ ಹೆಚ್ಚು ಅಸ್ತಿತ್ವದಲ್ಲಿರುವ ಶಾಲೆಗಳನ್ನು ಉನ್ನತೀಕರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
- ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ರ (NEP 2020) ನಿಬಂಧನೆಗಳನ್ನು ಪ್ರದರ್ಶಿಸುವ ಆದರ್ಶ ಶಾಲೆಗಳಾಗಿ ಕಾರ್ಯನಿರ್ವಹಿಸಲು ಪಿಎಂ ಶ್ರೀ ಶಾಲೆಗಳನ್ನು ಉದ್ದೇಶಿಸಲಾಗಿದೆ.
- ಈ ಯೋಜನೆಯು ಸ್ಮಾರ್ಟ್ ತರಗತಿಗಳು, ಕ್ರೀಡಾ ಸೌಲಭ್ಯಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆ ಸೇರಿದಂತೆ ಆಧುನಿಕ ಮೂಲಸೌಕರ್ಯಗಳ ಮೇಲೆ ಗಮನಹರಿಸುತ್ತದೆ.
- ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲೆಗಳು ಮಾತ್ರ ಪಿಎಂ ಶ್ರೀ ಯೋಜನೆಯಡಿ ಆಯ್ಕೆಯಾಗಲು ಅರ್ಹವಾಗಿವೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 4 ಮಾತ್ರ
- 1, 3 ಮತ್ತು 5 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ಮಲೇರಿಯಾ ನಿಯಂತ್ರಣ ಉಪಕ್ರಮಗಳನ್ನು ಅವುಗಳ ಉದ್ದೇಶಗಳು/ವೈಶಿಷ್ಟ್ಯಗಳೊಂದಿಗೆ ಹೊಂದಿಸಿ:
|
ಉಪಕ್ರಮ |
ಉದ್ದೇಶ / ವೈಶಿಷ್ಟ್ಯ |
|
a. E-2025 ಉಪಕ್ರಮ |
1. ಮಲೇರಿಯಾ ನಿಯಂತ್ರಣಕ್ಕಾಗಿ ICMR ಸ್ಥಾಪಿಸಿದ ಸಂಶೋಧನಾ ಒಕ್ಕೂಟ. |
|
b. ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು |
2. 2025 ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡುವ ಸಾಮರ್ಥ್ಯವಿರುವ ದೇಶಗಳನ್ನು ಗುರುತಿಸುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಉಪಕ್ರಮ. |
|
c. ಮೇರಾ-ಇಂಡಿಯಾ (MERA-India) |
3. ಮಲೇರಿಯಾ ನಿರ್ಮೂಲನೆಗಾಗಿ ಜಾಗತಿಕ ತಾಂತ್ರಿಕ ಕಾರ್ಯತಂತ್ರ’ದೊಂದಿಗೆ ಹೊಂದಾಣಿಕೆಯಾಗಿರುವ ಭಾರತದ ಚೌಕಟ್ಟು. |
|
d. ‘ಹೈ ಬರ್ಡನ್ ಟು ಹೈ ಇಂಪ್ಯಾಕ್ಟ್ ಉಪಕ್ರಮ’ (High Burden to High Impact Initiative) |
4. ಭಾರತ ಸೇರಿದಂತೆ ಹೆಚ್ಚಿನ ಮಲೇರಿಯಾ ಸಮಸ್ಯೆ ಇರುವ ದೇಶಗಳಲ್ಲಿ ಜಾರಿಗೊಳಿಸಲಾದ ವಿಶ್ವ ಆರೋಗ್ಯ ಸಂಸ್ಥೆಯ (WHO) ಉಪಕ್ರಮ. |
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- a-2, b-3, c-1, d-4
- a-1, b-2, c-4, d-3
- a-3, b-1, c-2, d-4
- a-2, b-4, c-1, d-3
ಉತ್ತರ: A
- ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು UPSC ಮತ್ತು SSC ಯಂತಹ ನೇಮಕಾತಿ ಪರೀಕ್ಷೆಗಳು, ಹಾಗೂ NEET, JEE ಮತ್ತು CUET ಯಂತಹ ಪ್ರವೇಶ ಪರೀಕ್ಷೆಗಳನ್ನು ಒಳಗೊಳ್ಳುತ್ತದೆ.
- ಕಂಪ್ಯೂಟರ್ ನೆಟ್ವರ್ಕ್ಗಳನ್ನು ತಿರುಚುವುದು ಅಥವಾ ಅಭ್ಯರ್ಥಿಗಳ ಸೋಗಿನಲ್ಲಿ ಪರೀಕ್ಷೆ ಬರೆಯುವುದನ್ನು ಕಾಯ್ದೆಯಡಿಯಲ್ಲಿ “ಅನ್ಯಾಯದ ವಿಧಾನಗಳು” ಎಂದು ವರ್ಗೀಕರಿಸಲಾಗಿದೆ.
- ಈ ಕಾಯ್ದೆಯಡಿಯ ಎಲ್ಲಾ ಅಪರಾಧಗಳು ಜಾಮೀನು ಪಡೆಯಬಹುದಾದ (Bailable) ಸ್ವರೂಪದಲ್ಲಿವೆ, ಆದರೆ ರಾಜಿ ಮಾಡಿಕೊಳ್ಳಲಾಗದಂತಹ (Non-compoundable) ಅಪರಾಧಗಳಾಗಿವೆ.
- ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಸೇವಾ ಪೂರೈಕೆದಾರರು ದಂಡವನ್ನು ಎದುರಿಸಬಹುದು ಮತ್ತು ಸಾರ್ವಜನಿಕ ಪರೀಕ್ಷೆಗಳನ್ನು ನಡೆಸದಂತೆ ಅವರನ್ನು ನಿರ್ಬಂಧಿಸಬಹುದು.
- ಕೇಂದ್ರ ಸರ್ಕಾರವು ಈ ಕಾಯ್ದೆಯಡಿಯ ಅಪರಾಧಗಳ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬಹುದು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 4 ಮತ್ತು 5 ಮಾತ್ರ
- 1, 3 ಮತ್ತು 5 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ಪಟ್ಟಿ-I ಅನ್ನು ಪಟ್ಟಿ-II ರೊಂದಿಗೆ ಹೊಂದಿಸಿ:
|
ಪಟ್ಟಿ-I |
ಪಟ್ಟಿ-II |
|
a. 90-90-90 ತಂತ್ರ |
1. ART ಚಿಕಿತ್ಸೆಯನ್ನು ನಿಲ್ಲಿಸಿದ HIV ರೋಗಿಗಳನ್ನು ಮರಳಿ ಸಂಪರ್ಕಿಸುವುದು |
|
b. ಪ್ರಾಜೆಕ್ಟ್ ಆಕ್ಸಿಲರೇಟ್ (Project ACCELERATE) |
2. HIV/AIDS ನಿಯಂತ್ರಣಕ್ಕಾಗಿ ಕೇಂದ್ರ ವಲಯದ ಯೋಜನೆ |
|
c. ಮಿಷನ್ ಸಂಪರ್ಕ್ |
3. ‘ಸೇಫ್ ಜಿಂದಗಿ’ (Safe Zindagi) ಪೋರ್ಟಲ್ ಮೂಲಕ HIV ಸೇವೆಗಳು |
|
d. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP) |
4. ರೋಗನಿರ್ಣಯ, ಚಿಕಿತ್ಸೆ ಮತ್ತು ವೈರಾಣು ನಿಗ್ರಹಕ್ಕೆ ಸಂಬಂಧಿಸಿದ UNAIDS ಗುರಿ |
ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- a-4, b-1, c-3, d-2
- a-3, b-4, c-2, d-1
- a-4, b-3, c-1, d-2
- a-2, b-3, c-1, d-4
ಉತ್ತರ: C
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಆಲ್ಝೈಮರ್ ಕಾಯಿಲೆಯು ಬುದ್ಧಿಮಾಂದ್ಯತೆಯ (Dementia) ಅತ್ಯಂತ ಸಾಮಾನ್ಯ ರೂಪವಾಗಿದೆ.
- ಇದು ಮುಖ್ಯವಾಗಿ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರಂಭಿಕ ಹಂತಗಳಲ್ಲಿ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ.
- ಯೋಚಿಸುವ ಸಾಮರ್ಥ್ಯ, ಸ್ಮರಣೆ ಮತ್ತು ತಾರ್ಕಿಕತೆಯಂತಹ ಅರಿವಿನ ಕಾರ್ಯಗಳ ಕುಸಿತವು ಆಲ್ಝೈಮರ್ ಕಾಯಿಲೆಯ ಲಕ್ಷಣವಾಗಿದೆ.
- ಲೆಕಾನೆಮಾಬ್ (Lecanemab) ಮತ್ತು ಅಡುಕಾನುಮಾಬ್ (Aducanumab) ನಂತಹ ಔಷಧಗಳು ಯಾವುದೇ ಸುರಕ್ಷತಾ ಕಾಳಜಿಗಳಿಲ್ಲದೆ ಸಂಪೂರ್ಣ ಪರಿಹಾರದ ಫಲಿತಾಂಶಗಳನ್ನು ತೋರಿಸಿವೆ.
- ‘ಎಲಿ ಲಿಲ್ಲಿ ಅಂಡ್ ಕಂಪನಿಯು’ (Eli Lilly and Company) ಭಾರತದಲ್ಲಿ “ಲಾರ್ಮಲ್ಜಿ” (Lormalzi) ಎಂಬ ಆಲ್ಝೈಮರ್ ಚಿಕಿತ್ಸಾ ಔಷಧವನ್ನು ಬಿಡುಗಡೆ ಮಾಡಿದೆ.
ಆಲ್ಝೈಮರ್ ಕಾಯಿಲೆಗೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 3, 4 ಮತ್ತು 5 ಮಾತ್ರ
ಉತ್ತರ: B
- 1857 ರ ದಂಗೆಗೆ ಸಂಬಂಧಿಸಿದ ವ್ಯಕ್ತಿಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರ ಮೂಲ ಹೆಸರು ‘ರಾಮಚಂದ್ರ ಪಾಂಡುರಂಗ ಟೋಪಿ’, ಮತ್ತು ಇವರ ತಂದೆ ಕೊನೆಯ ಮರಾಠಾ ಪೇಶ್ವೆಯಾಗಿದ್ದ ಎರಡನೇ ಬಾಜಿರಾವ್ ಅವರ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು.
- ಇವರು ನಾನಾ ಸಾಹೇಬ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು ಮತ್ತು 1857 ರ ದಂಗೆಯ ಸಮಯದಲ್ಲಿ ಅತ್ಯಂತ ಪರಿಣಾಮಕಾರಿ ಮಿಲಿಟರಿ ಕಮಾಂಡರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
- ಇವರು ಕಾನ್ಪುರ ಮತ್ತು ಗ್ವಾಲಿಯರ್ನಂತಹ ಪ್ರತಿರೋಧ ಕೇಂದ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಬ್ರಿಟಿಷ್ ಪಡೆಗಳ ವಿರುದ್ಧ ರಾಣಿ ಲಕ್ಷ್ಮೀಬಾಯಿಯವರೊಂದಿಗೆ ಕೈಜೋಡಿಸಿ ಹೋರಾಡಿದರು.
- ಗೆರಿಲ್ಲಾ ಯುದ್ಧ ತಂತ್ರಗಳು, ಕ್ಷಿಪ್ರ ಚಲನೆ ಮತ್ತು ಹಠಾತ್ ದಾಳಿಗಳಿಗೆ ಹೆಸರುವಾಸಿಯಾಗಿದ್ದ ಇವರನ್ನು, 1859 ರಲ್ಲಿ ಶಿವಪುರಿಯಲ್ಲಿ ಸೆರೆಹಿಡಿದು ಗಲ್ಲಿಗೇರಿಸಲಾಯಿತು.
ಮೇಲೆ ವಿವರಿಸಲಾದ ವ್ಯಕ್ತಿ ಯಾರು?
- ಕುನ್ವರ್ ಸಿಂಗ್
- ತಾತ್ಯಾ ಟೋಪಿ
- ನಾನಾ ಸಾಹೇಬ್
- ಮಂಗಲ್ ಪಾಂಡೆ
ಉತ್ತರ: B
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಲ್ಲಿ ಸಂಪೂರ್ಣ ಕಾಗದರಹಿತ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿ ಸಿಕ್ಕಿಂ ಹೊರಹೊಮ್ಮಿದೆ.
- ಡಿಜಿಟಲ್ ಆಡಳಿತವನ್ನು ಉತ್ತೇಜಿಸುವುದು ಮತ್ತು ನ್ಯಾಯಾಂಗದ ದಕ್ಷತೆಯನ್ನು ಸುಧಾರಿಸುವುದು ಈ ಉಪಕ್ರಮದ ಗುರಿಯಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- I ಮಾತ್ರ
- II ಮಾತ್ರ
- I ಮತ್ತು II ಎರಡೂ
- I ಅಥವಾ II ಎರಡೂ ಅಲ್ಲ
ಉತ್ತರ: C
- ‘ಪಿಎಂ ಇ-ಡ್ರೈವ್’ (PM E-DRIVE) ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
- ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗಿನ ಅವಧಿಗೆ ಜಾರಿಗೊಳಿಸಲಾಗುತ್ತಿದೆ.
- ಈ ಯೋಜನೆಯಡಿ, ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ‘ಬೇಡಿಕೆ ಪ್ರೋತ್ಸಾಹಕ’ಗಳನ್ನು ಪಡೆಯಲು ಅನುಕೂಲವಾಗುವಂತೆ ‘ಭಾರಿ ಕೈಗಾರಿಕೆಗಳ ಸಚಿವಾಲಯ’ವು ಇ-ವೋಚರ್ಗಳನ್ನು ಪರಿಚಯಿಸಿದೆ.
- ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಅಳವಡಿಕೆಯನ್ನು ಈ ಯೋಜನೆಯು ನಿರುತ್ಸಾಹಗೊಳಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಭಾರತದಲ್ಲಿನ ‘ಜೈವಿಕ ವೈವಿಧ್ಯ ಪಾರಂಪರಿಕ ತಾಣ’ಗಳ (BHS) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಜೈವಿಕ ವೈವಿಧ್ಯ ಕಾಯ್ದೆ, 2002’ ರ ನಿಬಂಧನೆಗಳ ಅಡಿಯಲ್ಲಿ ಜೈವಿಕ ವೈವಿಧ್ಯ ಪಾರಂಪರಿಕ ತಾಣಗಳನ್ನು ಘೋಷಿಸಲಾಗುತ್ತದೆ.
- ಈ ತಾಣಗಳನ್ನು ಕೇವಲ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಳಗೆ ಮಾತ್ರ ಘೋಷಿಸಲಾಗುತ್ತದೆ.
- ಸ್ಥಳೀಯ ಸಂಸ್ಥೆಗಳ ಸಮಾಲೋಚನೆಯೊಂದಿಗೆ ರಾಜ್ಯ ಸರ್ಕಾರಗಳು ಜೈವಿಕ ವೈವಿಧ್ಯ ಪಾರಂಪರಿಕ ತಾಣಗಳನ್ನು ಅಧಿಸೂಚಿಸುತ್ತವೆ.
- ವಿಶಿಷ್ಟವಾದ, ಪರಿಸರ ವಿಜ್ಞಾನದ ದೃಷ್ಟಿಯಿಂದ ಸೂಕ್ಷ್ಮವಾದ ಅಥವಾ ಜೈವಿಕ ವೈವಿಧ್ಯತೆಯಿಂದ ಸಮೃದ್ಧವಾಗಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಜೈವಿಕ ವೈವಿಧ್ಯ ಪಾರಂಪರಿಕ ತಾಣಗಳ ಉದ್ದೇಶವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- 2
- 3
- 4
- ಯಾವುದೂ ಅಲ್ಲ
ಉತ್ತರ: B
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು ‘ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019’ ಅನ್ನು (Transgender Persons – Protection of Rights – Act, 2019) ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.
- ಇದು ಮೊದಲಿದ್ದ ‘ಸ್ವಯಂ-ಗುರುತಿಸಿಕೊಳ್ಳುವ’ ಕಾರ್ಯವಿಧಾನವನ್ನು (Self-identification mechanism) ಬದಲಾಯಿಸಿ, ವೈದ್ಯಕೀಯ ಮಂಡಳಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪ್ರಮಾಣೀಕರಣವನ್ನು ಒಳಗೊಂಡಿರುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ.
- ‘ಸ್ವಯಂ-ಗ್ರಹಿಸಿದ ಲಿಂಗ ಗುರುತಿನ’ (Self-perceived gender identity) ಕುರಿತಾದ ಸರ್ವೋಚ್ಚ ನ್ಯಾಯಾಲಯದ NALSA ತೀರ್ಪಿನೊಂದಿಗಿನ ಇದರ ಹೊಂದಾಣಿಕೆಯ ಬಗ್ಗೆ ಈ ತಿದ್ದುಪಡಿಯು ಚರ್ಚೆಯನ್ನು ಹುಟ್ಟುಹಾಕಿದೆ.
- ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಲಿಂಗತ್ವ ಅಲ್ಪಸಂಖ್ಯಾತ ಗುರುತಿಗೆ (Transgender identity) ಅಥವಾ ಜೀತದಾಳು ಪದ್ಧತಿಗೆ ದೂಡುವಂತಹ ಅಪರಾಧಗಳಿಗೆ ಈ ಕಾಯ್ದೆಯು ಕಠಿಣ ದಂಡನಾ ನಿಬಂಧನೆಗಳನ್ನು ಪರಿಚಯಿಸುತ್ತದೆ.
‘ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026’ ಕ್ಕೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ (NOT correct)?
- ಎರಡು ಮಾತ್ರ
- ಮೂರು ಮಾತ್ರ
- ಎಲ್ಲಾ ನಾಲ್ಕು
- ಯಾವುದೂ ಅಲ್ಲ (ಎಲ್ಲವೂ ಸರಿಯಾಗಿವೆ)
ಉತ್ತರ: D
- ರು-ಸೋಮ್ ಸೇತುವೆಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರು-ಸೋಮ್ ಸೇತುವೆಗಳು ಲೆಪ್ಚಾ ಸಮುದಾಯಕ್ಕೆ ಸೇರಿದ ಸಾಂಪ್ರದಾಯಿಕ ಬೆತ್ತದ ಸೇತುವೆಗಳಾಗಿವೆ.
- ಸ್ಥಳೀಯವಾಗಿ ಲಭ್ಯವಿರುವ ಬಿದಿರು, ಬೆತ್ತ ಮತ್ತು ಮರದಂತಹ ವಸ್ತುಗಳನ್ನು ಬಳಸಿ ಈ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.
- ಇವುಗಳನ್ನು ಮುಖ್ಯವಾಗಿ ಮರುಭೂಮಿ ಪರಿಸರ ವ್ಯವಸ್ಥೆಗಳು ಮತ್ತು ಶುಷ್ಕ ಭೂಪ್ರದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
- 2023 ರ ಸಿಕ್ಕಿಂ ಹಿಮನದಿ ಸರೋವರದ ಪ್ರವಾಹದ ಸಂದರ್ಭದಲ್ಲಿ ಈ ಸೇತುವೆಗಳ ಸ್ಥಿತಿಸ್ಥಾಪಕತ್ವವು ಸಾಬೀತಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- 2
- 3
- 4
- ಯಾವುದೂ ಅಲ್ಲ
ಉತ್ತರ: B
- ತಾಂಜಾನಿಯಾ ದೇಶಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಆಫ್ರಿಕಾದ ಅತಿ ಎತ್ತರದ ಶಿಖರವಾದ ‘ಮೌಂಟ್ ಕಿಲಿಮಂಜಾರೊ’ ತಾಂಜಾನಿಯಾದಲ್ಲಿದೆ.
- ನೈಲ್ ನದಿಯ ಉಗಮಸ್ಥಾನವೆಂದು ಪರಿಗಣಿಸಲಾದ ವಿಕ್ಟೋರಿಯಾ ಸರೋವರದ ಒಂದು ಭಾಗವನ್ನು ತಾಂಜಾನಿಯಾ ಹಂಚಿಕೊಂಡಿದೆ.
- ಟ್ಯಾಂಗನಿಕಾ ಸರೋವರವು ತಾಂಜಾನಿಯಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ (DRC) ನಡುವಿನ ಗಡಿಯ ಭಾಗವಾಗಿದೆ.
- ತಾಂಜಾನಿಯಾದ ಪೂರ್ವ ಭಾಗವು ಮೆಡಿಟರೇನಿಯನ್ ಸಮುದ್ರದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (RBSK) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಜನನದಿಂದ 18 ವರ್ಷದವರೆಗಿನ ಮಕ್ಕಳ ಆರೋಗ್ಯ ಸಮಸ್ಯೆಗಳ ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸಾ ಮಧ್ಯಸ್ಥಿಕೆಯ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ RBSK ಅನ್ನು ಪ್ರಾರಂಭಿಸಲಾಯಿತು.
- ಈ ಕಾರ್ಯಕ್ರಮದ ಅಡಿಯಲ್ಲಿ, 6 ವಾರಗಳಿಂದ 6 ವರ್ಷದವರೆಗಿನ ಮಕ್ಕಳನ್ನು ಪ್ರಾಥಮಿಕವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
- RBSK ಯ 4D ಕಾರ್ಯತಂತ್ರವು ಜನನದ-ಸಮಯದ ದೋಷಗಳು, ನ್ಯೂನತೆಗಳು, ಬಾಲ್ಯದ ಕಾಯಿಲೆಗಳು, ಮತ್ತು ಬೆಳವಣಿಗೆಯ ವಿಳಂಬಗಳು ಹಾಗೂ ವಿಕಲಚೇತನತೆಯನ್ನು ಒಳಗೊಂಡಿದೆ.
- RBSK ಯ ತಪಾಸಣಾ ಪ್ರಕ್ರಿಯೆಯಲ್ಲಿ ಕೇವಲ ಸಾಂಕ್ರಾಮಿಕ ರೋಗಗಳನ್ನು) ಮಾತ್ರ ಒಳಪಡಿಸಲಾಗಿದೆ.
- ಹೆರಿಗೆ ಕೇಂದ್ರಗಳಲ್ಲಿ ಮತ್ತು ASHA ಕಾರ್ಯಕರ್ತೆಯರ ಮನೆ ಭೇಟಿಗಳ ಮೂಲಕ ನವಜಾತ ಶಿಶುಗಳ ತಪಾಸಣೆಯನ್ನು ನಡೆಸಲಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ಹಂಟಾವೈರಸ್ ಪಲ್ಮನರಿ (ಶ್ವಾಸಕೋಶ ಸಂಬಂಧಿ) ಸಿಂಡ್ರೋಮ್ (Hantavirus Pulmonary Syndrome) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಹಂಟಾವೈರಸ್ ಎನ್ನುವುದು ‘ಹಂಟಾವೈರಿಡೆ’ (Hantaviridae) ಕುಟುಂಬಕ್ಕೆ ಸೇರಿದ RNA ವೈರಸ್ನಿಂದ ಉಂಟಾಗುವ ಪ್ರಾಣಿಜನ್ಯ ಕಾಯಿಲೆಯಾಗಿದೆ.
- ಈ ರೋಗವು ಪ್ರಾಥಮಿಕವಾಗಿ ಇಲಿಗಳು ಮತ್ತು ಹೆಗ್ಗಣಗಳಂತಹ ದಂಶಕಗಳ ಮೂಲಕ ಹರಡುತ್ತದೆ.
- ಹಂಟಾವೈರಸ್ ಮನುಷ್ಯರಿಂದ-ಮನುಷ್ಯರಿಗೆ ಹರಡುವುದು ಸಾಮಾನ್ಯವಾಗಿ ಉಸಿರಾಟದ ಹನಿಗಳ ಮೂಲಕ ಸಂಭವಿಸುತ್ತದೆ.
- ತೀವ್ರವಾದ ಸೋಂಕು ‘ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್’ಗೆ ಕಾರಣವಾಗಬಹುದು, ಇದು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ.
- ಈ ರೋಗಕ್ಕೆ ಯಾವುದೇ ನಿರ್ದಿಷ್ಟ ವೈರಾಣು ನಿರೋಧಕ ಔಷಧಗಳು ಲಭ್ಯವಿಲ್ಲ, ಮತ್ತು ಚಿಕಿತ್ಸೆಯು ಮುಖ್ಯವಾಗಿ ಬೆಂಬಲಿತ ಆರೈಕೆಯನ್ನು ಒಳಗೊಂಡಿರುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 4 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: C
- “ಎಕೋಸೈಡ್” (Ecocide) ಎಂಬ ಪದವನ್ನು ಈ ಕೆಳಗಿನ ಯಾವುದರ ಮೂಲಕ ಅತ್ಯುತ್ತಮವಾಗಿ ವಿವರಿಸಬಹುದು?
- ಕ್ಯಾಪ್ಟಿವ್ ಬ್ರೀಡಿಂಗ್ (ಬಂಧಿತ ಸಂತಾನೋತ್ಪತ್ತಿ) ಮೂಲಕ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆ.
- ಮಾನವನ ಕ್ರಿಯೆಗಳಿಂದ ಉಂಟಾಗುವ ಪರಿಸರದ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ವಿನಾಶ.
- ಹವಾಮಾನ ಬದಲಾವಣೆಗಳಿಂದಾಗಿ ಪ್ರಭೇದಗಳು ನೈಸರ್ಗಿಕವಾಗಿ ಅಳಿದುಹೋಗುವುದು.
- ಅರಣ್ಯೀಕರಣದ ಮೂಲಕ ಅವನತಿಗೀಡಾದ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆ.
ಉತ್ತರ: B
- ಅಂತರರಾಷ್ಟ್ರೀಯ ವಲಸೆ ಸಂಸ್ಥೆ (International Organization for Migration) ಬಿಡುಗಡೆ ಮಾಡಿದ ‘ವಿಶ್ವ ವಲಸೆ ವರದಿ 2026’ ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- 2024 ರಲ್ಲಿ ಜಾಗತಿಕ ಜನಸಂಖ್ಯೆಯ 3.7% ರಷ್ಟು ಅಂತರರಾಷ್ಟ್ರೀಯ ವಲಸಿಗರು ಇದ್ದರು.
- ಮೆಕ್ಸಿಕೋ-ಯುನೈಟೆಡ್ ಸ್ಟೇಟ್ಸ್ ಕಾರಿಡಾರ್ ವಿಶ್ವದ ಅತಿದೊಡ್ಡ ವಲಸೆ ಕಾರಿಡಾರ್ ಆಗಿ ಮುಂದುವರೆದಿದೆ.
- ಅಫ್ಘಾನಿಸ್ತಾನ-ಇರಾನ್ ಕಾರಿಡಾರ್ ಮತ್ತು ಸಿರಿಯಾ-ಟರ್ಕಿ ಕಾರಿಡಾರ್ ಜಾಗತಿಕವಾಗಿ ಪ್ರಮುಖ ವಲಸೆ ಕಾರಿಡಾರ್ಗಳಲ್ಲಿ ಸೇರಿವೆ.
- 1990 ಮತ್ತು 2024 ರ ನಡುವೆ ಜಾಗತಿಕ ಜನಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ವಲಸಿಗರ ಪಾಲು ಕುಸಿದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ‘ಸಮಗ್ರ ಶಿಕ್ಷಾ’ ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಯೋಜನೆಯನ್ನು 2018-19 ರಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲಾಯಿತು.
- ಇದು ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ, ಮತ್ತು ಶಿಕ್ಷಕರ ಶಿಕ್ಷಣ ಯೋಜನೆಗಳನ್ನು ಒಳಗೊಂಡಿದೆ.
- ಶಾಲಾಪೂರ್ವ ಹಂತದಿಂದ 12 ನೇ ತರಗತಿಯವರೆಗೆ ಶಾಲಾ ಶಿಕ್ಷಣಕ್ಕೆ ಸಮಗ್ರ ವಿಧಾನವನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.
- ಭಾರತದಲ್ಲಿನ ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಈ ಯೋಜನೆಯನ್ನು ಪ್ರತ್ಯೇಕವಾಗಿ ಜಾರಿಗೊಳಿಸಲಾಗಿದೆ.
- ಈ ಯೋಜನೆಯು ಸುಸ್ಥಿರ ಅಭಿವೃದ್ಧಿ ಗುರಿ 4 (SDG 4) ಮತ್ತು ಶಿಕ್ಷಣ ಹಕ್ಕು ಚೌಕಟ್ಟಿನ ಅನುಷ್ಠಾನವನ್ನು ಬೆಂಬಲಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 4 ಮಾತ್ರ
- 1, 2, 3 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: B
- “ಬ್ರ್ಯಾಂಡ್ ನಾರ್ತ್ ಈಸ್ಟ್” (Brand North East) ಉಪಕ್ರಮಕ್ಕೆ ಸಂಬಂಧಿಸಿದಂತೆ, ಕೆಳಗಿನ ಜೋಡಿಗಳನ್ನು ಪರಿಗಣಿಸಿ:
- ಸಿಕ್ಕಿಂ : ಸಾವಯವ ರಾಜ್ಯ
- ಅರುಣಾಚಲ ಪ್ರದೇಶ : ಕಿವಿ ಹಣ್ಣಿನ ಉತ್ಪಾದನೆ
- ತ್ರಿಪುರಾ : ಕ್ವೀನ್ ಪೈನಾಪಲ್ (ಅನಾನಸ್)
- ನಾಗಾಲ್ಯಾಂಡ್ : ಕಾಫಿ ಬೆಳೆ
- ಮೇಘಾಲಯ : ಲಕಡಾಂಗ್ ಅರಿಶಿನ
ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?
- 2
- 3
- 4
- 5
ಉತ್ತರ: D
- ಕೆಳಗಿನ ಪಠ್ಯವನ್ನು ಪರಿಗಣಿಸಿ:
ಸೋಂಕು ಅಥವಾ ಗಾಯದ ವಿರುದ್ಧ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿ ಕೆಲವು ಮರಗಳು ಬೆಲೆಬಾಳುವ ಸುಗಂಧಭರಿತ ರಾಳವನ್ನು ಉತ್ಪಾದಿಸುತ್ತವೆ. ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಐಷಾರಾಮಿ ಸುಗಂಧ ದ್ರವ್ಯಗಳು, ಧೂಪದ್ರವ್ಯಗಳು ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಲ್ಲಿ ಈ ರಾಳವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ನೈಸರ್ಗಿಕ ಕಚ್ಚಾ ವಸ್ತುಗಳಲ್ಲಿ ಒಂದಾಗಿದೆ. ಮಿತಿಮೀರಿದ ಶೋಷಣೆ ಮತ್ತು ಕಾಡಿನಲ್ಲಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿರುವ ಕಳವಳದಿಂದಾಗಿ ಈ ಉತ್ಪನ್ನದ ವ್ಯಾಪಾರವನ್ನು CITES ನ ಅನುಬಂಧ II ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.
ಇಲ್ಲಿ ಕೆಳಗಿನ ಯಾವ ಪ್ರಭೇದವನ್ನು ಉಲ್ಲೇಖಿಸಲಾಗುತ್ತಿದೆ?
- ಶ್ರೀಗಂಧ
- ಅಗರ್ವುಡ್
- ರೋಸ್ವುಡ್ (ಬೀಟೆ ಮರ)
- ತೇಗ
ಉತ್ತರ: B
- ತಡೆಹಿಡಿಯುವ ತೆರಿಗೆಯನ್ನು (Withholding tax) ಕಡಿಮೆ ಮಾಡುವ ಆರ್ಥಿಕ ಪರಿಣಾಮಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವಿದೇಶಿ ನೇರ ಹೂಡಿಕೆಯ (FDI) ಒಳಹರಿವನ್ನು ಹೆಚ್ಚಿಸಬಹುದು.
- ಇದು ಗಡಿಯಾಚೆಗಿನ ವಹಿವಾಟುಗಳಲ್ಲಿ (Cross-border transactions) ಸುಗಮ ವ್ಯಾಪಾರವನ್ನು (Ease of doing business) ಸುಧಾರಿಸಬಹುದು.
- ಇದು ನೇರವಾಗಿ ದೇಶೀಯ ಉಳಿತಾಯ ಮತ್ತು ಹೂಡಿಕೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಇದು ಅಂತರರಾಷ್ಟ್ರೀಯ ಬಂಡವಾಳ ಚಲನೆ ಮತ್ತು ವ್ಯಾಪಾರ ಹರಿವನ್ನು ಸುಗಮಗೊಳಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
- ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಒಮಾನ್ ಕೊಲ್ಲಿಯಲ್ಲಿರುವ (Gulf of Oman) ಆಗ್ನೇಯ ಇರಾನ್ನ ಚಾಬಹಾರ್ ನಲ್ಲಿರುವ ಬಂದರು ಆಗಿದೆ.
- ಇದು ‘ಶಾಹಿದ್ ಕಲಾಂತರಿ’ ಮತ್ತು ‘ಶಾಹಿದ್ ಬೆಹೆಸ್ತಿ’ ಎಂಬ ಎರಡು ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ.
- ಇದು ಪಾಕಿಸ್ತಾನದ ‘ಗ್ವಾದರ್’ ಬಂದರಿನಿಂದ ಪಶ್ಚಿಮಕ್ಕೆ ಸುಮಾರು 170 ಕಿಲೋಮೀಟರ್ ದೂರದಲ್ಲಿದೆ.
- ಅಫ್ಘಾನಿಸ್ತಾನದ ಹಾಜಿಗಕ್ ಗಣಿಗಳಿಂದ ಕಬ್ಬಿಣದ ಅದಿರನ್ನು ಮತ್ತು ಮಧ್ಯ ಏಷ್ಯಾದ ದೇಶಗಳಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಭಾರತಕ್ಕೆ ಇದು ಅನುಕೂಲ ಮಾಡಿಕೊಡುತ್ತದೆ.
- ಇದು ಹಿಂದೂ ಮಹಾಸಾಗರ ಪ್ರದೇಶವನ್ನು ಉತ್ತರ ಯುರೋಪಿನೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ನ (INSTC) ಪ್ರಮುಖ ಭಾಗವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- 2
- 3
- 4
- 5
ಉತ್ತರ: D
- ಅಸೋಲಾ-ಭಟ್ಟಿ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ದಕ್ಷಿಣ ದೆಹಲಿಯಲ್ಲಿದೆ ಮತ್ತು ಹರಿಯಾಣದ ಫರಿದಾಬಾದ್ ಜಿಲ್ಲೆಯ ಕೆಲವು ಭಾಗಗಳವರೆಗೆ ವಿಸ್ತರಿಸಿದೆ.
- ಇದು ಅರಾವಳಿ ಪರ್ವತ ಶ್ರೇಣಿಯ ದಕ್ಷಿಣದ ಸಾಲಿನಲ್ಲಿ ನೆಲೆಗೊಂಡಿದೆ.
- ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಈ ಅಭಯಾರಣ್ಯವನ್ನು 1991 ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.
- ಇದನ್ನು ಜನಪ್ರಿಯವಾಗಿ ದೆಹಲಿಯ “ಹಸಿರು ಶ್ವಾಸಕೋಶಗಳು” ಎಂದು ಕರೆಯಲಾಗುತ್ತದೆ ಮತ್ತು ಇದು ಥಾರ್ ಮರುಭೂಮಿಯು ಪಶ್ಚಿಮದ ಕಡೆಗೆ ವಿಸ್ತರಿಸುವುದನ್ನು ತಡೆಯುವ ನೈಸರ್ಗಿಕ ಪರಿಸರ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
- ಈ ಅಭಯಾರಣ್ಯವು ಪ್ರಾಥಮಿಕವಾಗಿ ಹಿಮಾಲಯದ ತಪ್ಪಲಿನಲ್ಲಿ ನೆಲೆಗೊಂಡಿದೆ ಮತ್ತು ಇದು ಶಿವಾಲಿಕ್ ಜೀವವೈವಿಧ್ಯ ವಲಯದ ಭಾಗವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4 ಮಾತ್ರ
- 2, 3 ಮತ್ತು 5 ಮಾತ್ರ
- 1, 3, 4 ಮತ್ತು 5 ಮಾತ್ರ
ಉತ್ತರ: A
- ಇತ್ತೀಚೆಗೆ ಸುದ್ದಿಯಲ್ಲಿದ್ದ “ಅಭಯ್” (Abhay) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಕೇಂದ್ರೀಯ ತನಿಖಾ ದಳ (CBI) ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ (AI-powered) ಚಾಟ್ಬಾಟ್ (Chatbot) ಆಗಿದೆ.
- CBI ನೋಟಿಸ್ಗಳು ಮತ್ತು ಸಂವಹನಗಳ ನೈಜತೆಯನ್ನು ಪರಿಶೀಲಿಸಲು ಸಾರ್ವಜನಿಕರಿಗೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಡಿಜಿಟಲ್ ರೂಪದಲ್ಲಿ ಕ್ರಿಮಿನಲ್ ಶಿಕ್ಷೆಗಳನ್ನು ನೀಡಲು ಇದು ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸುತ್ತದೆ.
- ನಕಲಿ ನೋಟಿಸ್ಗಳು ಮತ್ತು ತನಿಖಾ ಸಂಸ್ಥೆಗಳ ಸೋಗಿನಲ್ಲಿ ವಂಚಿಸುವ ಸೈಬರ್ ವಂಚನೆಗಳನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B4
- ಕೆಳಗಿನ ಪಠ್ಯವನ್ನು ಪರಿಗಣಿಸಿ:
ಆಮೆಗಳ ಸಂರಕ್ಷಣೆಗೆ ಜಾಗತಿಕ ಆದ್ಯತೆಯ ಭೂಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾದ ಅಸ್ಸಾಂನ ರಾಷ್ಟ್ರೀಯ ಉದ್ಯಾನವನವೊಂದರಲ್ಲಿ, ಇತ್ತೀಚೆಗೆ ದೊಡ್ಡ ಸಿಹಿನೀರಿನ ಸರೀಸೃಪವೊಂದಕ್ಕೆ ಉಪಗ್ರಹ-ಟ್ಯಾಗ್ (Satellite-tagged) ಅಳವಡಿಸಿ ಬಿಡುಗಡೆ ಮಾಡಲಾಯಿತು. ಈ ಪ್ರಾಣಿಯು ಗಂಗಾ, ಬ್ರಹ್ಮಪುತ್ರ, ಸಿಂಧು, ನರ್ಮದಾ ಮತ್ತು ಮಹಾನದಿಯಂತಹ ಪ್ರಮುಖ ನದಿ ವ್ಯವಸ್ಥೆಗಳಲ್ಲಿ ಕಂಡುಬರುತ್ತದೆ ಮತ್ತು ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವಾರು ದಕ್ಷಿಣ ಏಷ್ಯಾದ ದೇಶಗಳಲ್ಲಿ ವ್ಯಾಪಿಸಿದೆ. ಇದು ಸಾಮಾನ್ಯವಾಗಿ ಕೆಸರುಮಯ ತಳವಿರುವ ಮತ್ತು ಕಲಕಿದ ನೀರನ್ನು ಹೊಂದಿರುವ ದೊಡ್ಡ ನದಿಗಳು ಮತ್ತು ಕಾಲುವೆಗಳಲ್ಲಿ ವಾಸಿಸುತ್ತದೆ, ಆದರೆ ಕೊಳಗಳು ಮತ್ತು ಸರೋವರಗಳಲ್ಲಿಯೂ ಕಂಡುಬರಬಹುದು.
ಈ ಪ್ರಭೇದವು ಸಂದರ್ಭಾನುಸಾರ ಲಭ್ಯವಿರುವ ಆಹಾರವನ್ನು ಸೇವಿಸುವ ಭಕ್ಷಕವಾಗಿದ್ದು (Opportunistic feeder), ಮೀನುಗಳು, ಪಕ್ಷಿಗಳು, ಸರೀಸೃಪಗಳು, ಅಕಶೇರುಕಗಳು, ಸತ್ತ ಪ್ರಾಣಿಗಳ ದೇಹ ಮತ್ತು ಜಲಸಸ್ಯಗಳನ್ನು ಸೇವಿಸುತ್ತದೆ. ಈ ಮೂಲಕ ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಸ್ವಚ್ಛಗೊಳಿಸಿ, ನದಿ ಪರಿಸರ ವ್ಯವಸ್ಥೆಗಳಲ್ಲಿ ಇದು ಪ್ರಮುಖ ಪರಿಸರ ಪಾತ್ರವನ್ನು ವಹಿಸುತ್ತದೆ. ಅಕ್ರಮ ಬೇಟೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಆವಾಸಸ್ಥಾನದ ಅವನತಿಯಿಂದಾಗಿ ಇದು ಭಾರಿ ಬೆದರಿಕೆಯನ್ನು ಎದುರಿಸುತ್ತಿದೆ. ಇದನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972’ ರ ಅನುಸೂಚಿ I ರ ಅಡಿಯಲ್ಲಿ ಪಟ್ಟಿಮಾಡಲಾಗಿದೆ, CITES ನ ಅನುಬಂಧ I ರಲ್ಲಿ ಇರಿಸಲಾಗಿದೆ ಮತ್ತು IUCN ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವ’ (En) ಪ್ರಭೇದವೆಂದು ವರ್ಗೀಕರಿಸಲಾಗಿದೆ.
ಈ ಮೇಲಿನ ಪಠ್ಯದಲ್ಲಿ ಈ ಕೆಳಗಿನ ಯಾವ ಪ್ರಭೇದವನ್ನು ವಿವರಿಸಲಾಗುತ್ತಿದೆ?
- ಭಾರತೀಯ ಕಿರಿದಾದ-ತಲೆಯ ಮೃದು-ಚಿಪ್ಪಿನ ಆಮೆ (Indian Narrow-headed Softshell Turtle)
- ಗಂಗಾ ನದಿಯ ಮೃದು-ಚಿಪ್ಪಿನ ಆಮೆ (Ganges Softshell Turtle)
- ಭಾರತೀಯ ಫ್ಲ್ಯಾಪ್-ಶೆಲ್ (ಮಡಿಕೆ-ಚಿಪ್ಪಿನ) ಆಮೆ (Indian Flapshell Turtle)
- ಭಾರತೀಯ ರೂಫ್ಡ್ (ಛಾವಣಿ-ಆಕಾರದ) ಆಮೆ (Indian Roofed Turtle)
ಉತ್ತರ: B
- ಭಾರತ-ಸ್ವೀಡನ್ ಸಂಬಂಧಗಳ ಉಲ್ಲೇಖದೊಂದಿಗೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪ್ರಧಾನಿ ಮೋದಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್’ (Royal Order of Polar Star) ಮತ್ತು ‘ಕಮಾಂಡರ್ ಗ್ರಾಂಡ್ ಕ್ರಾಸ್’ (Commander Grand Cross) ಅನ್ನು ಸ್ವೀಕರಿಸಿದರು, ಇದು ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ಸ್ವೀಡನ್ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.
- ಮೊದಲ ಭಾರತ-ನಾರ್ಡಿಕ್ ಶೃಂಗಸಭೆಯನ್ನು (India–Nordic Summit) 2018 ರಲ್ಲಿ ಸ್ವೀಡನ್ ಆಯೋಜಿಸಿತ್ತು.
- 2019 ರ ಯುಎನ್ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ (UN Climate Action Summit) ಭಾರತ ಮತ್ತು ಸ್ವೀಡನ್ ಜಂಟಿಯಾಗಿ ‘ಲೀಡರ್ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್’ (LeadIT) ಅನ್ನು ಪ್ರಾರಂಭಿಸಿದವು.
- ಕಡಿಮೆ-ಇಂಗಾಲದ ಕೈಗಾರಿಕಾ ಪರಿವರ್ತನೆ (Low-carbon industrial transition) ಮತ್ತು ಸುಸ್ಥಿರ ಉತ್ಪಾದನಾ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು LeadIT ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: D
- ಸಿಂಧೂ ನದಿ ನೀರು ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಒಪ್ಪಂದದಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿತ್ತು.
- ಪಾಕಿಸ್ತಾನಕ್ಕೆ ಪ್ರಾಥಮಿಕವಾಗಿ ಹಂಚಿಕೆಯಾದ ಪಶ್ಚಿಮದ ನದಿಗಳೆಂದರೆ ಸಿಂಧೂ, ಚೀನಾಬ್ ಮತ್ತು ಝೇಲಂ.
- ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಮೇಲೆ ಭಾರತವು ಅನಿಯಂತ್ರಿತ ಹಕ್ಕುಗಳನ್ನು ಪಡೆಯಿತು.
- ಈ ಒಪ್ಪಂದದ ಅಡಿಯಲ್ಲಿ, ಸಿಂಧೂ ನದಿ ವ್ಯವಸ್ಥೆಯ ಒಟ್ಟು ನೀರಿನ ಸರಿಸುಮಾರು 80% ರಷ್ಟನ್ನು ಭಾರತ ಪಡೆದುಕೊಂಡಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
- ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಗುಜರಾತ್ನ ಲೋಥಾಲ್ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
- ಇದರ ಅಭಿವೃದ್ಧಿಯಲ್ಲಿ ಸಹಕರಿಸಲು ಭಾರತ ಮತ್ತು ನೆದರ್ಲ್ಯಾಂಡ್ ದೇಶಗಳು 2025 ರಲ್ಲಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿವೆ.
- ಲೋಥಾಲ್ ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ಬಂದರು ನಗರವಾಗಿತ್ತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
- ಭೋಜಶಾಲಾ ಸಂಕೀರ್ಣಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪರಮಾರ ರಾಜವಂಶದ ರಾಜಾ ಭೋಜನು, ಸರಸ್ವತಿ ದೇವಿಗೆ ಮೀಸಲಾದ ಕೇಂದ್ರವಾಗಿ ‘ಭೋಜಶಾಲಾ’ವನ್ನು ಸ್ಥಾಪಿಸಿದನು.
- ಇದು ಮಧ್ಯಕಾಲೀನ ಅವಧಿಯಲ್ಲಿ ಸಂಸ್ಕೃತ ಕಲಿಕೆಯ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು.
- ಈ ಸಂಕೀರ್ಣದಲ್ಲಿ ಕಂಡುಬರುವ ಶಾಸನಗಳು ಸಂಸ್ಕೃತ ವ್ಯಾಕರಣದ ಕೋಷ್ಟಕಗಳು, ವಿಷ್ಣುವಿನ ಸ್ತುತಿಗೀತೆಗಳು ಮತ್ತು ‘ಕರ್ಪೂರಮಂಜರಿ’ ನಾಟಕದ ಭಾಗಗಳನ್ನು ಒಳಗೊಂಡಿವೆ.
- ಕರ್ಪೂರಮಂಜರಿಯನ್ನು ಸ್ವತಃ ರಾಜಾ ಭೋಜನ ಆಳ್ವಿಕೆಯಲ್ಲೇ ಬರೆಯಲಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
- ‘ಸಾರಂಡಾ ಅರಣ್ಯ’ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಾರಂಡಾ ಅರಣ್ಯವು ಜಾರ್ಖಂಡ್ನಲ್ಲಿದೆ ಮತ್ತು ಇದು ಛೋಟಾನಾಗ್ಪುರ್ ಜೈವಿಕ-ಭೌಗೋಳಿಕ ವಲಯದ ಭಾಗವಾಗಿದೆ.
- ಇದು ಏಷ್ಯಾದ ಅತಿದೊಡ್ಡ ಸಾಲ್ ಅರಣ್ಯವೆಂದು ಹೆಸರುವಾಸಿಯಾಗಿದೆ ಮತ್ತು ಇದನ್ನು ಜನಪ್ರಿಯವಾಗಿ “ಏಳು ನೂರು ಬೆಟ್ಟಗಳ ನಾಡು” ಎಂದು ಕರೆಯಲಾಗುತ್ತದೆ.
- ಈ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಸಾಲ್, ಮಹುವಾ ಮತ್ತು ಕುಸುಮ್ನಂತಹ ಮರಗಳ ಪ್ರಭೇದಗಳು ಪ್ರಾಬಲ್ಯ ಹೊಂದಿವೆ.
- ಈ ಅರಣ್ಯದೊಂದಿಗೆ ಸಂಬಂಧ ಹೊಂದಿರುವ ಬುಡಕಟ್ಟು ಸಮುದಾಯಗಳಲ್ಲಿ ಹೋ (Ho), ಮುಂಡಾ, ಉರಾವೊನ್ ಮತ್ತು ಸಂತಾಲ್ ಜನರು ಸೇರಿದ್ದಾರೆ.
- “ಸರ್ನಾ” ಎಂದು ಕರೆಯಲ್ಪಡುವ ಪವಿತ್ರ ತೋಪುಗಳು ಈ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿವೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- 2
- 3
- 4
- 5
ಉತ್ತರ: D
- ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಬಾಹ್ಯಾಕಾಶ ಮಿಷನ್ |
ಉಡಾವಣಾ / ಪಾಲುದಾರ ಸಂಸ್ಥೆ |
|
1. ಸ್ಮೈಲ್ ಮಿಷನ್ (SMILE Mission) |
ESA ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ |
|
2. ಪಾರ್ಕರ್ ಸೋಲಾರ್ ಪ್ರೋಬ್ (Parker Solar Probe) |
NASA |
|
3. ಸೋಲಾರ್ ಆರ್ಬಿಟರ್ (Solar Orbiter) |
ISRO ಮತ್ತು NASA |
|
4. ಪಂಚ್ ಮಿಷನ್ (PUNCH Mission) |
NASA |
ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಎಲ್ಲಾ ನಾಲ್ಕು
ಉತ್ತರ: C
- ‘ಹಸಿರು ಕಾರ್ಯತಂತ್ರದ ಪಾಲುದಾರಿಕೆ’ಯನ್ನು (Green Strategic Partnership) ಭಾರತ ಮತ್ತು ಯಾವ ದೇಶದ ನಡುವೆ ಔಪಚಾರಿಕವಾಗಿ ಘೋಷಿಸಲಾಯಿತು?
- ಸ್ವೀಡನ್
- ಡೆನ್ಮಾರ್ಕ್
- ನಾರ್ವೆ
- ಫಿನ್ಲ್ಯಾಂಡ್
ಉತ್ತರ: C .
- ಮಾಹಿತಿ ಹಕ್ಕು (RTI) ಕಾಯ್ದೆ, 2005 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಕೇಂದ್ರೀಯ ಮಾಹಿತಿ ಆಯೋಗ’ವು (CIC) 2005 ರ ಮಾಹಿತಿ ಹಕ್ಕು ಕಾಯ್ದೆಯಡಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ.
- ಸರ್ಕಾರದ ನಿಧಿಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದಲ್ಲಿ ಹಣಕಾಸು ನೆರವು ಪಡೆಯುವ ಯಾವುದೇ ಸಂಸ್ಥೆಯು “ಸಾರ್ವಜನಿಕ ಪ್ರಾಧಿಕಾರ”ದ ವ್ಯಾಖ್ಯಾನದ ಅಡಿಯಲ್ಲಿ ಬರಬಹುದು.
- BCCI ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ ಮತ್ತು ಆದ್ದರಿಂದ ಅದು RTI ಬಾಧ್ಯತೆಗಳಿಂದ ವಿನಾಯಿತಿ ಪಡೆದಿದೆ ಎಂದು CIC ಇತ್ತೀಚೆಗೆ ತೀರ್ಪು ನೀಡಿದೆ.
- RTI ಕಾಯ್ದೆಯು ಕೇವಲ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಮಾತ್ರ ಅನ್ವಯಿಸುತ್ತದೆ.
- ಕೇಂದ್ರೀಯ ಮಟ್ಟದಲ್ಲಿ RTI ಚೌಕಟ್ಟಿನ ಅಡಿಯಲ್ಲಿ, CIC ಯು ಅಂತಿಮ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3 ಮತ್ತು 5 ಮಾತ್ರ
ಉತ್ತರ: A
- ‘ಬೆಳ್ಳಿ’ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಎಲ್ಲಾ ಲೋಹಗಳ ಪೈಕಿ ಬೆಳ್ಳಿಯು ಅತಿ ಹೆಚ್ಚು ವಿದ್ಯುತ್ ಮತ್ತು ಉಷ್ಣ ವಾಹಕತೆಯನ್ನು ಹೊಂದಿದೆ.
- ಅರ್ಜೆಂಟೈಟ್ (Argentite) ಮತ್ತು ಕ್ಲೋರಾರ್ಗೈರೈಟ್ (Chlorargyrite) ಗಳು ಬೆಳ್ಳಿಯ ಪ್ರಮುಖ ಅದಿರುಗಳಾಗಿವೆ.
- ಮೆಕ್ಸಿಕೋ ವಿಶ್ವದ ಅತಿದೊಡ್ಡ ಬೆಳ್ಳಿ ಉತ್ಪಾದಕ ದೇಶವಾಗಿದೆ.
- ಭಾರತವು ಪ್ರಾಥಮಿಕವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬ್ರಿಟನ್ ಮತ್ತು ಚೀನಾದಿಂದ ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ.
- ಭಾರತವು ತನ್ನ ಆಮದು ನೀತಿಯಡಿಯಲ್ಲಿ ಇತ್ತೀಚೆಗೆ ಬೆಳ್ಳಿಯ ಆಮದನ್ನು “ನಿಷೇಧಿತ” (Prohibited) ವರ್ಗಕ್ಕೆ ಸೇರಿಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 3 ಮತ್ತು 4 ಮಾತ್ರ
- 1, 3, 4 ಮತ್ತು 5 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
- ನಾರ್ಡಿಕ್ ದೇಶಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ನಾರ್ಡಿಕ್ ದೇಶಗಳು ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ಅನ್ನು ಒಳಗೊಂಡಿವೆ.
- ಎಲ್ಲಾ ನಾರ್ಡಿಕ್ ದೇಶಗಳು ಐರೋಪ್ಯ ಒಕ್ಕೂಟದ (EU) ಸದಸ್ಯರಾಗಿವೆ.
- ಭೌಗೋಳಿಕವಾಗಿ ‘ಸ್ಕ್ಯಾಂಡಿನೇವಿಯಾ’ ಪ್ರದೇಶವು ನಾರ್ಡಿಕ್ ದೇಶಗಳ ಪ್ರಮುಖ ವಲಯವಾಗಿದೆ.
- ಸ್ವೀಡನ್ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಾರ್ಡಿಕ್ ದೇಶವಾಗಿದ್ದರೆ, ಐಸ್ಲ್ಯಾಂಡ್ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
- ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ (UAPA) ಯ ಅನ್ವಯಿಸುವಿಕೆಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯ ನಿಬಂಧನೆಗಳು ಭಾರತದ ಹೊರಗಿರುವ ಭಾರತೀಯ ನಾಗರಿಕರಿಗೂ ಅನ್ವಯಿಸುತ್ತವೆ.
- ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಗಳು ಯಾವ ಪ್ರದೇಶದಲ್ಲೇ ಇದ್ದರೂ ಈ ಕಾಯ್ದೆ ಅವರಿಗೆ ಅನ್ವಯಿಸುತ್ತದೆ.
- ಭಾರತದಲ್ಲಿ ನೋಂದಾಯಿಸಲಾದ ಹಡಗುಗಳು ಮತ್ತು ವಿಮಾನಗಳ ಮೇಲಿರುವ ವ್ಯಕ್ತಿಗಳು ಯಾವ ಪ್ರದೇಶದಲ್ಲೇ ಇದ್ದರೂ ಈ ಕಾಯ್ದೆ ಅನ್ವಯಿಸುತ್ತದೆ.
- ಈ ಕಾಯ್ದೆಯು ಕೇವಲ ಭಾರತದ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಳಗೆ ಮಾತ್ರ ಅನ್ವಯಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ನಾಲ್ಕು
- ಮೂರು
- ಎರಡು
- ಒಂದು
ಉತ್ತರ: B
- ‘ಆಯುಷ್ ಅನುದಾನ್ ಪೋರ್ಟಲ್’ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಭಾರತ ಸರ್ಕಾರದ ‘ಆಯುಷ್ ಗ್ರಿಡ್’ ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
- ಆಯುಷ್-ಸಂಬಂಧಿತ ಅನುದಾನಗಳನ್ನು ಪ್ರಕ್ರಿಯೆಗೊಳಿಸಲು ಈ ಪೋರ್ಟಲ್ ವಿಕೇಂದ್ರೀಕೃತ ಆಫ್ಲೈನ್ ಯಾಂತ್ರಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
- ಹಣಕಾಸು ಪ್ರಸ್ತಾವನೆಗಳ ಸಲ್ಲಿಕೆ, ಮೌಲ್ಯಮಾಪನ, ಸಂಸ್ಕರಣೆ ಮತ್ತು ಮೇಲ್ವಿಚಾರಣೆಯನ್ನು ಸುಗಮಗೊಳಿಸುವ ಗುರಿಯನ್ನು ಇದು ಹೊಂದಿದೆ.
- ಅರ್ಜಿದಾರ ಸಂಸ್ಥೆಗಳ ಪರಿಶೀಲನೆಗಾಗಿ ಈ ಪೋರ್ಟಲ್ ಅನ್ನು ‘NGO ದರ್ಪಣ್’ ಪೋರ್ಟಲ್ನೊಂದಿಗೆ ಸಂಯೋಜಿಸಲಾಗಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಪೋರ್ಟಲ್ನ ನೋಡಲ್ ಸಚಿವಾಲಯವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 5 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4 ಮಾತ್ರ
ಉತ್ತರ: B
- ಇರಾನ್ ಇತ್ತೀಚೆಗೆ ಸ್ಥಾಪಿಸಿರುವ ‘ಪರ್ಷಿಯನ್ ಕೊಲ್ಲಿ ಜಲಸಂಧಿ ಪ್ರಾಧಿಕಾರ’ (PGSA) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಹಾರ್ಮುಜ್ ಜಲಸಂಧಿಯಲ್ಲಿನ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು PGSA ಅನ್ನು ಸ್ಥಾಪಿಸಲಾಗಿದೆ.
- ಹೊಸ ನಿಯಮಾವಳಿಯ ಅಡಿಯಲ್ಲಿ, ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಹಡಗುಗಳು ಪ್ರಾಧಿಕಾರದಿಂದ ಸಾರಿಗೆ ಪರವಾನಗಿಯನ್ನು ಪಡೆಯಬೇಕು.
- PGSA ಅಡಿಯಲ್ಲಿ ಇರಾನ್ ಪರಿಚಯಿಸಿರುವ ಶುಲ್ಕ ವ್ಯವಸ್ಥೆಯನ್ನು ಯುನೈಟೆಡ್ ಸ್ಟೇಟ್ಸ್, ಕೊಲ್ಲಿ ರಾಷ್ಟ್ರಗಳು ಮತ್ತು ಯುರೋಪಿಯನ್ ರಾಷ್ಟ್ರಗಳು ಸಾರ್ವತ್ರಿಕವಾಗಿ ಒಪ್ಪಿಕೊಂಡಿವೆ.
- ಜಾಗತಿಕ ಇಂಧನ ವ್ಯಾಪಾರಕ್ಕೆ ಹಾರ್ಮುಜ್ ಜಲಸಂಧಿಯು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಮೇಲ್ವಿಚಾರಣೆಯಲ್ಲಿ ಪಿಜಿಎಸ್ಎ (PGSA) ಅನ್ನು ರಚಿಸಲಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 5 ಮಾತ್ರ
- 2, 4 ಮತ್ತು 5 ಮಾತ್ರ
- 1, 2, 3 ಮತ್ತು 4 ಮಾತ್ರ
ಉತ್ತರ: A
- ಚಂದ್ರಯಾನ-3 ಪೇಲೋಡ್ಗಳಿಗೆ ಸಂಬಂಧಿಸಿದ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಪೇಲೋಡ್ |
ಕಾರ್ಯ |
|
1. ಚಾಸ್ಟೆ (ChaSTE) |
ಉಷ್ಣ ವಾಹಕತೆ ಮತ್ತು ತಾಪಮಾನದ ಮಾಪನ. |
|
2. ಇಲ್ಸಾ (ILSA) |
ಲ್ಯಾಂಡಿಂಗ್ ತಾಣ ಸುತ್ತಲಿನ ಭೂಕಂಪನ ಚಟುವಟಿಕೆಯ ಅಧ್ಯಯನ. |
|
3. ರಂಭಾ-ಎಲ್ಪಿ (RAMBHA-LP) |
ಚಂದ್ರನ ಮೇಲ್ಮೈಯ ಪ್ಲಾಸ್ಮಾ ಪರಿಸರದ ಮಾಪನ. |
ಮೇಲೆ ನೀಡಲಾದ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
- ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ರಾಮ್ಸರ್ ತಾಣ |
ರಾಜ್ಯ |
|
1. ಸಿಲಿಸೇರ್ ಸರೋವರ |
ರಾಜಸ್ಥಾನ |
|
2. ಕೋಪ್ರಾ ಜಲಾಶಯ |
ಛತ್ತೀಸ್ಗಢ |
|
3. ಛಾರಿ-ಧಂಡ್ ಸಂರಕ್ಷಣಾ ಮೀಸಲು ಪ್ರದೇಶ |
ಗುಜರಾತ್ |
|
4. ಶೇಖಾ ಝೀಲ್ ಪಕ್ಷಿಧಾಮ |
ಉತ್ತರ ಪ್ರದೇಶ |
ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?
- ಒಂದು
- ಎರಡು
- ಮೂರು
- ನಾಲ್ಕು
ಉತ್ತರ: D
- 19 ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರ ಮೂಲ ಹೆಸರು ಶಿವದೀನ್ ಎಂಬುದಾಗಿತ್ತು.
- ಇವರು ಅವಧ್ನ ಶಂಕರ್ಪುರ ಎಸ್ಟೇಟ್ನೊಂದಿಗೆ ಸಂಬಂಧ ಹೊಂದಿದ್ದರು.
- ಇವರು ರಾಣಾ ಬೇನಿ ಮಾಧವ್ ಬಕ್ಷ್ ಸಿಂಗ್ ಅವರ ಅಡಿಯಲ್ಲಿ ನಂಬಿಕಸ್ಥ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.
- 1857 ರ ದಂಗೆಯ ಸಮಯದಲ್ಲಿ ಬ್ರಿಟಿಷರ ಸೆರೆಯಿಂದ ರಾಣಾ ಬೇನಿ ಮಾಧವ್ ಸಿಂಗ್ ಅವರನ್ನು ರಕ್ಷಿಸಿದ್ದಕ್ಕಾಗಿ ಇವರನ್ನು ಸ್ಮರಿಸಲಾಗುತ್ತದೆ.
ಮೇಲೆ ವಿವರಿಸಲಾದ ವ್ಯಕ್ತಿ ಯಾರು?
- ಮಂಗಲ್ ಪಾಂಡೆ
- ವೀರ ಪಾಸಿ
- ಕುನ್ವರ್ ಸಿಂಗ್
- ಬಖ್ತ್ ಖಾನ್
ಉತ್ತರ: B
- ಪಟ್ಟಿ-I ಅನ್ನು ಪಟ್ಟಿ-II ಮತ್ತು ಪಟ್ಟಿ-III ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ.
|
ಪಟ್ಟಿ-I (ಕರಕುಶಲ/ಉತ್ಪನ್ನ) |
ಪಟ್ಟಿ-II (ರಾಜ್ಯ/ಪ್ರದೇಶ) |
ಪಟ್ಟಿ-III (ವಿಶಿಷ್ಟ ಲಕ್ಷಣ) |
|
a. ಶಿರುಯಿ ಲಿಲಿ ರೇಷ್ಮೆ ಶಾಲು (Shirui Lily silk stole) |
1. ಗುಜರಾತ್ |
I. “ಟ್ರೀ ಆಫ್ ಲೈಫ್” (Tree of Life) ವಿನ್ಯಾಸ. |
|
b. ಮೀನಾಕಾರಿ ಮತ್ತು ಕುಂದನ್ ಕಿವಿಯೋಲೆಗಳು |
2. ರಾಜಸ್ಥಾನ |
II. ಸಾಂಪ್ರದಾಯಿಕ ರತ್ನ ಮತ್ತು ದಂತಕವಚದ ಆಭರಣಗಳು (Enamel jewellery). |
|
c. ತಾರಕಾಸಿ (Tarakasi) |
3. ಒಡಿಶಾ |
III. ಬೆಳ್ಳಿ ಫಿಲಿಗ್ರೀ (Silver filigree) ಕರಕುಶಲತೆ. |
|
d. ರೋಗನ್ ಚಿತ್ರಕಲೆ (Rogan painting) |
4. ಮಣಿಪುರ |
IV. ಅಪರೂಪದ ‘ಶಿರುಯಿ ಲಿಲಿ’ ಹೂವಿನಿಂದ ಪ್ರೇರಿತವಾದದ್ದು. |
ಸಂಕೇತಗಳು:
- a-4-IV, b-2-II, c-3-III, d-1-I
- a-2-IV, b-1-II, c-4-III, d-3-I
- a-4-III, b-2-I, c-1-II, d-3-IV
- a-3-IV, b-2-III, c-4-II, d-1-I
ಉತ್ತರ: A
- ಭಾರತದಲ್ಲಿ ಕಿವಿ ಹಣ್ಣಿನ ಕೃಷಿ ಮತ್ತು ‘ಅರುಣಾಚಲ ಕಿವಿ ಮಿಷನ್’ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕಿವಿಯು ಪೂರ್ವ ಏಷ್ಯಾ ಮೂಲದ ಮರದಿಂದ ಬೆಳೆಯುವ ಪತನಶೀಲ (ಎಲೆಯುದುರುವ) ಬಳ್ಳಿಯಾಗಿದ್ದು, ಇದು ಚಳಿಗಾಲದಲ್ಲಿ ಸಮರ್ಪಕವಾಗಿ ಬೆಳೆಯುತ್ತದೆ.
- ಹೆಚ್ಚಿನ ಉಷ್ಣತೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇರುವುದರಿಂದ, 300 ಮೀಟರ್ಗಿಂತ ಕಡಿಮೆ ಎತ್ತರವಿರುವ ಉಷ್ಣವಲಯದ ತಗ್ಗು ಪ್ರದೇಶಗಳು ಇದಕ್ಕೆ ಹೆಚ್ಚು ಸೂಕ್ತವಾಗಿವೆ.
- ಭಾರತದಲ್ಲಿ, ಅರುಣಾಚಲ ಪ್ರದೇಶವು ಅತಿ ದೊಡ್ಡ ಉತ್ಪಾದಕ ರಾಜ್ಯವಾಗಿದ್ದು, ಒಟ್ಟು ಕಿವಿ ಉತ್ಪಾದನೆಯ 50% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ.
- ಕಿವಿ ಸಸ್ಯಗಳು ಸಾಮಾನ್ಯವಾಗಿ 4-5 ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತವೆ ಮತ್ತು ಸುಮಾರು 7-8 ವರ್ಷಗಳ ನಂತರ ಸಂಪೂರ್ಣ ವಾಣಿಜ್ಯ ಉತ್ಪಾದನಾ ಹಂತವನ್ನು ತಲುಪುತ್ತವೆ.
- ‘ಅರುಣಾಚಲ ಕಿವಿ ಮಿಷನ್’ ಉಪಕ್ರಮವು, ತೋಟಗಾರಿಕೆಯನ್ನು ಪ್ರಾಯೋಗಿಕ ಪ್ರವಾಸೋದ್ಯಮದೊಂದಿಗೆ ಸಂಯೋಜಿಸಿ ‘ಝೀರೋ ಕಣಿವೆ’ (Ziro Valley) ಮತ್ತು ‘ದಿರಾಂಗ್’ನಂತಹ ಪ್ರದೇಶಗಳಲ್ಲಿ ಕಿವಿ ತೋಟದ ಪ್ರವಾಸೋದ್ಯಮ ಮತ್ತು ಫಾರ್ಮ್-ಸ್ಟೇ (ತೋಟದಮನೆ ವಾಸ್ತವ್ಯ) ಅನುಭವಗಳನ್ನು ಉತ್ತೇಜಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 3 ಮತ್ತು 5 ಮಾತ್ರ
- 1, 3, 4 ಮತ್ತು 5 ಮಾತ್ರ
- 1, 2, 3 ಮತ್ತು 4 ಮಾತ್ರ
- 2, 3, 4 ಮತ್ತು 5 ಮಾತ್ರ
ಉತ್ತರ: B
- ಭಾರತದಲ್ಲಿ ‘ಮಾದರಿ ನೋಂದಣಿ ವ್ಯವಸ್ಥೆ’ (SRS) ಯ ಉಲ್ಲೇಖದೊಂದಿಗೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ‘ಭಾರತದ ಮಹಾನೋಂದಣಾಧಿಕಾರಿ’ (Registrar General of India) ನಡೆಸುತ್ತಾರೆ.
- ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಫಲವತ್ತತೆ ಮತ್ತು ಮರಣದ ಸೂಚಕಗಳ ವಾರ್ಷಿಕ ಅಂದಾಜುಗಳನ್ನು ಒದಗಿಸುತ್ತದೆ.
- ‘ಶಿಶು ಮರಣ ಪ್ರಮಾಣ’ (IMR) ಎಂದರೆ 1,000 ಜೀವಂತ ಜನನಗಳಿಗೆ, ಐದು ವರ್ಷದೊಳಗಿನ ಮಕ್ಕಳ ಮರಣಗಳ ಸಂಖ್ಯೆಯನ್ನು ಸೂಚಿಸುತ್ತದೆ.
- SRS 2024 ರ ಪ್ರಕಾರ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಜನನ ಪ್ರಮಾಣವು ಹೆಚ್ಚಾಗಿಯೇ ಮುಂದುವರೆದಿದೆ.
- 2024 ರಲ್ಲಿ ಬಿಹಾರವು ಅತಿ ಹೆಚ್ಚು ಜನನ ಪ್ರಮಾಣವನ್ನು ದಾಖಲಿಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2, 4 ಮತ್ತು 5 ಮಾತ್ರ
- 1, 2 ಮತ್ತು 5 ಮಾತ್ರ
- 2, 3 ಮತ್ತು 4 ಮಾತ್ರ
- 1, 3, 4 ಮತ್ತು 5 ಮಾತ್ರ
ಉತ್ತರ: A
- ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ (BHAVYA – ಭವ್ಯ) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪ್ರಧಾನಮಂತ್ರಿ ಗತಿಶಕ್ತಿ ಕಾರ್ಯಕ್ರಮದೊಂದಿಗೆ ಸಂಯೋಜಿತವಾದ 100 ಭವಿಷ್ಯದ ಕೈಗಾರಿಕಾ ಪಾರ್ಕ್ಗಳನ್ನು ನಿರ್ಮಿಸುವ ಗುರಿಯನ್ನು ಇದು ಹೊಂದಿದೆ.
- ಕೈಗಾರಿಕೆಗಳಿಗೆ ಬಹುಮಾದರಿ ಸಂಪರ್ಕ ಮತ್ತು ಕೊನೆಯ-ಮೈಲಿ ಪ್ರವೇಶವನ್ನು ಸುಧಾರಿಸಲು ಈ ಯೋಜನೆ ಪ್ರಯತ್ನಿಸುತ್ತದೆ.
- ಈ ಯೋಜನೆಯಡಿಯಲ್ಲಿ ಕೇವಲ ಕೇಂದ್ರ ಸರ್ಕಾರವು ಮಾತ್ರ ಕೈಗಾರಿಕಾ ಪಾರ್ಕ್ಗಳಿಗೆ ಹಣಕಾಸು ಒದಗಿಸುತ್ತದೆ ಮತ್ತು ನಿರ್ವಹಿಸುತ್ತದೆ.
- ಇದರ ಅನುಷ್ಠಾನದಲ್ಲಿ ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ’ವು (NICDC) ಪ್ರಮುಖ ಪಾತ್ರ ವಹಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
- ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿದೆ.
- ಇದು ಕಾಜಿರಂಗ ಮತ್ತು ಒರಾಂಗ್ ರಾಷ್ಟ್ರೀಯ ಉದ್ಯಾನವನಗಳ ನಡುವೆ ವನ್ಯಜೀವಿ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತದೆ.
- ಇದು ಅರುಣಾಚಲ ಪ್ರದೇಶ ರಾಜ್ಯದಲ್ಲಿದೆ.
- ಇದು ಕಾಜಿರಂಗ ನೈಸರ್ಗಿಕ ಪರಿಸರ ವ್ಯವಸ್ಥೆಯ ಒಂದು ಭಾಗವಾಗಿದೆ.
ಲಾವೋಖೋವಾ-ಬುರ್ಹಾಚಪೋರಿ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿಸಿದಂತೆ, ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: B
- ಬಾಹ್ಯಾಕಾಶ ವಿಜ್ಞಾನ ವರದಿಗಳಲ್ಲಿ ಕೆಲವೊಮ್ಮೆ ಕಂಡುಬರುವ “ಜ್ವಾನ್-ವುಲ್ಫ್ ಎಫೆಕ್ಟ್” (Zwan–Wolf Effect) ಎಂಬ ಪದವು ಇದನ್ನು ಉಲ್ಲೇಖಿಸುತ್ತದೆ:
- ರೆಡ್ ಜೈಂಟ್ (Red giant) ಹಂತದಲ್ಲಿ ನಕ್ಷತ್ರವೊಂದರ ಹಠಾತ್ ವಿಸ್ತರಣೆ.
- ಸೌರ ಮಾರುತದ ಪರಸ್ಪರ ಕ್ರಿಯೆಯಿಂದಾಗಿ ಕಾಂತೀಯ ಕ್ಷೇತ್ರದ ರೇಖೆಗಳ ಉದ್ದಕ್ಕೂ ವಿದ್ಯುತ್ ಆವೇಶದ ಕಣಗಳ ಸಂಕೋಚನ.
- ಭೂ-ಸದೃಶ ಗ್ರಹಗಳು (Terrestrial) ಗ್ರಹಗಳ ನಡುವೆ ಕ್ಷುದ್ರಗ್ರಹ ಪಟ್ಟಿಗಳ ರಚನೆ.
- ಕುಸಿಯುತ್ತಿರುವ ನ್ಯೂಟ್ರಾನ್ ನಕ್ಷತ್ರಗಳಿಂದ ಗುರುತ್ವಾಕರ್ಷಣೆಯ ಅಲೆಗಳ ಹೊರಸೂಸುವಿಕೆ.
ಉತ್ತರ: B
- ಸಂವಿಧಾನದ (129 ನೇ ತಿದ್ದುಪಡಿ) ಮಸೂದೆ, 2024 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಈ ಮಸೂದೆಯು ಅವಕಾಶ ಕಲ್ಪಿಸುತ್ತದೆ.
- ಲೋಕಸಭೆ ಅಥವಾ ರಾಜ್ಯ ವಿಧಾನಸಭೆಯು ತನ್ನ ಅವಧಿಯನ್ನು ಪೂರ್ಣಗೊಳಿಸುವ ಮೊದಲೇ ವಿಸರ್ಜನೆಗೊಂಡರೆ, ಸಂಪೂರ್ಣವಾಗಿ ಹೊಸ ಐದು ವರ್ಷಗಳ ಅವಧಿಗಾಗಿ ಹೊಸದಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.
- ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ, 2024, ಏಕಕಾಲಿಕ ಚುನಾವಣಾ ಚೌಕಟ್ಟನ್ನು ಕೇಂದ್ರಾಡಳಿತ ಪ್ರದೇಶಗಳ ಶಾಸನಸಭೆಗಳಿಗೂ ವಿಸ್ತರಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
- ಭಾರತದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲೇಖದೊಂದಿಗೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಕಿಹೋಟೊ ಹೊಲೊಹಾನ್ ವಿರುದ್ಧ ಜಚಿಲ್ಹು’ ಪ್ರಕರಣದಲ್ಲಿ (Kihoto Hollohan v. Zachillhu), ಹತ್ತನೇ ಅನುಸೂಚಿಯ ಅಡಿಯಲ್ಲಿ ಸಭಾಧ್ಯಕ್ಷರ (ಸ್ಪೀಕರ್) ನಿರ್ಧಾರವು ನ್ಯಾಯಾಂಗ ವಿಮರ್ಶೆಯಿಂದ ಸಂಪೂರ್ಣವಾಗಿ ವಿನಾಯಿತಿ ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.
- ಹತ್ತನೇ ಅನುಸೂಚಿಯು ಪಕ್ಷಾಂತರದ ಆಧಾರದ ಮೇಲೆ ಶಾಸಕರ ಅನರ್ಹತೆಗೆ ಸಂಬಂಧಿಸಿದೆ.
- ‘ಕೇಶಮ್ ಮೇಘಚಂದ್ರ ಸಿಂಗ್ ವಿರುದ್ಧ ಸ್ಪೀಕರ್, ಮಣಿಪುರ’ ಪ್ರಕರಣದಲ್ಲಿ, ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸಲು ಸ್ಪೀಕರ್ಗೆ ಸರ್ವೋಚ್ಚ ನ್ಯಾಯಾಲಯ ಮೂರು ತಿಂಗಳ ಹೊರ ಮಿತಿಯನ್ನು ನಿಗದಿಪಡಿಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: C
- ವಂದೇ ಮಾತರಂ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವಂದೇ ಮಾತರಂ ಹಾಡನ್ನು ಬಂಕಿಮ ಚಂದ್ರ ಚಟರ್ಜಿ ಸಂಯೋಜಿಸಿದ್ದಾರೆ ಮತ್ತು ಇದು ಮೊದಲು ಆನಂದಮಠ ಕಾದಂಬರಿಯಲ್ಲಿ ಪ್ರಕಟವಾಯಿತು.
- ಆನಂದಮಠ ಕಾದಂಬರಿಯು 1857 ರ ದಂಗೆಯ ಹಿನ್ನೆಲೆಯಲ್ಲಿ ರಚಿತವಾಗಿತ್ತು.
- ರವೀಂದ್ರನಾಥ ಟ್ಯಾಗೋರ್ ಅವರು 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಅನ್ನು ಹಾಡಿದರು.
- ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯಂತೆಯೇ ಭಾರತದ ಸಂವಿಧಾನದ ಅಡಿಯಲ್ಲಿ ಸ್ಪಷ್ಟವಾಗಿ ರಕ್ಷಿಸಲಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- 1 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: A








ನಿಮ್ಮದೊಂದು ಉತ್ತರ