‘ಯುವ ಸಂಗಮ’
ಸರ್ಕಾರಿ ಉಪಕ್ರಮಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಯುವ ಸಂಗಮ ಹಂತ-VI (Phase-VI) ರ ಅಡಿಯಲ್ಲಿ ಸಂಸ್ಥೆಗಳ-ನೇತೃತ್ವದ ಅಧ್ಯಯನ ಪ್ರವಾಸಗಳಿಗಾಗಿ ನೋಂದಣಿ ಪ್ರಕ್ರಿಯೆಯು ನಡೆದಿದ್ದು, ಇದು ಒಟ್ಟು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
‘ಯುವ ಸಂಗಮ’ ಉಪಕ್ರಮದ ಬಗ್ಗೆ:
- ಇದು ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಯುವಜನರ ನಡುವಿನ ಸಂಪರ್ಕವನ್ನು ಬಲಪಡಿಸಲು ಭಾರತ ಸರ್ಕಾರವು ಆರಂಭಿಸಿರುವ ಒಂದು ಪ್ರಮುಖ ಉಪಕ್ರಮವಾಗಿದೆ.
- ಇದನ್ನು ಶಿಕ್ಷಣ ಸಚಿವಾಲಯವು ರೂಪಿಸಿದೆ ಮತ್ತು ‘ಏಕ ಭಾರತ ಶ್ರೇಷ್ಠ ಭಾರತ’ (EBSB) ಎಂಬ ಅಭಿಯಾನದ ಅಡಿಯಲ್ಲಿ ಇದನ್ನು ಪ್ರಾರಂಭಿಸಲಾಗಿದೆ.
ಏಕ ಭಾರತ ಶ್ರೇಷ್ಠ ಭಾರತ (EBSB) ಅಭಿಯಾನದ ಬಗ್ಗೆ:
-
- ಇದು ದೇಶದ ‘ವೈವಿಧ್ಯತೆಯಲ್ಲಿ ಏಕತೆಯನ್ನು’ ಆಚರಿಸುವ ಒಂದು ಐತಿಹಾಸಿಕ ಉಪಕ್ರಮವಾಗಿದೆ.
- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140ನೇ ಜನ್ಮದಿನದ ನೆನಪಿಗಾಗಿ ಅಕ್ಟೋಬರ್ 31, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಘೋಷಿಸಿದರು.
- ಅನುಷ್ಠಾನ ಸಚಿವಾಲಯ:- ಶಿಕ್ಷಣ ಸಚಿವಾಲಯ
ಏಕ ಭಾರತ ಶ್ರೇಷ್ಠ ಭಾರತದ ಅಡಿಯಲ್ಲಿನ ಪ್ರಮುಖ ಉಪಕ್ರಮಗಳು:
- ಯುವ ಸಂಗಮ:- ಇದು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಆವರಣದಿಂದ ಹೊರಗಿರುವ ಯುವಜನರಿಗೆ, ತಮ್ಮ ಸಂಯೋಜಿತ ಅಥವಾ ಪಾಲುದಾರ ರಾಜ್ಯಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಯುವ ವಿನಿಮಯ ಕಾರ್ಯಕ್ರಮವಾಗಿದೆ. ಇದು ಪ್ರವಾಸೋದ್ಯಮ, ಸಂಪ್ರದಾಯ, ಪ್ರಗತಿ, ಪರಸ್ಪರ ಸಂಪರ್ಕ, ಮತ್ತು ದೈವಶಕ್ತಿ ಎಂಬ ಐದು ಸ್ತಂಭಗಳ ಮೇಲೆ ಕೇಂದ್ರೀಕರಿಸಿದೆ.
- ಭಾಷಾ ಸಂಗಮ:- ಭಾಷಾ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ, ವಿವಿಧ ಭಾರತೀಯ ಭಾಷೆಗಳಲ್ಲಿ ಮೂಲಭೂತ ವಾಕ್ಯಗಳನ್ನು ಕಲಿಯಲು ಜನರನ್ನು ಪ್ರೋತ್ಸಾಹಿಸುವ ಉಪಕ್ರಮವಾಗಿದೆ.
- ಶೈಕ್ಷಣಿಕ ಏಕೀಕರಣ:- ದೇಶಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಇಬಿಎಸ್ಬಿ (EBSB) ಕ್ಲಬ್ಗಳು, ವಿದ್ಯಾರ್ಥಿ ವಿನಿಮಯ ಪ್ರವಾಸಗಳು ಮತ್ತು ಕಲಾ ಉತ್ಸವದಂತಹ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತವೆ.
- ವಿಶೇಷ ಕಾರ್ಯಕ್ರಮಗಳು: ರಾಜ್ಯೋತ್ಸವ ದಿನಗಳ ಆಚರಣೆ ಮತ್ತು ಭಾರತ್ ಪರ್ವ್ನಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವಿಷಯಗಳ ಏಕೀಕರಣವನ್ನು ಇದು ಒಳಗೊಂಡಿದೆ.
ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) – S&P ಸಂಸ್ಥೆ
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದ ಉತ್ಪಾದನಾ PMI (Manufacturing PMI) ಫೆಬ್ರವರಿ 2026 ರಲ್ಲಿ 56.9 ಇದ್ದದ್ದು, ಮಾರ್ಚ್ 2026 ರಲ್ಲಿ 53.9 ಕ್ಕೆ ಕುಸಿದಿದೆ.
ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) v/s ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP):
|
ವೈಶಿಷ್ಟ್ಯ |
ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI-Purchasing Manager’s Index) |
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) |
|
ಮೂಲ |
S&P ಖಾಸಗಿ ಸಂಸ್ಥೆ |
ರಾಷ್ಟೀಯ ಸ್ಯಾಂಖಿಕ ಕಛೇರಿ (NSO, MoSPI), ಭಾರತ ಸರ್ಕಾರ |
|
ಆಧಾರ |
ಗ್ರಹಿಕೆ-ಆಧಾರಿತ ಸಮೀಕ್ಷೆ |
ನೈಜ ಭೌತಿಕ ಉತ್ಪಾದನಾ ದತ್ತಾಂಶ |
|
ವ್ಯಾಪ್ತಿ |
ಉತ್ಪಾದನೆ ಮತ್ತು ಸೇವಾ ವಲಯಗಳು |
ವಿಶಾಲ ಕೈಗಾರಿಕಾ ವಲಯ (ಗಣಿಗಾರಿಕೆ, ಉತ್ಪಾದನೆ, ವಿದ್ಯುತ್) |
|
ಸಮಯ |
ಮಾಸಿಕ, (ಪ್ರತಿ ತಿಂಗಳ ಆರಂಭದಲ್ಲಿ) |
ಮಾಸಿಕ, (6-ವಾರಗಳ ವಿಳಂಬದೊಂದಿಗೆ) |
ಕಲ್ಲಿದ್ದಲು ಅನಿಲೀಕರಣ ಪ್ರೋತ್ಸಾಹಕ ಯೋಜನೆ
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ದೇಶೀಯ ಕಲ್ಲಿದ್ದಲು ಬಳಕೆಯ ಮೂಲಕ ಅನಿಲ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸಚಿವರು ಭಾರತದ ಮಾರ್ಗಸೂಚಿಯನ್ನು ಅನಾವರಣಗೊಳಿಸಿದ್ದಾರೆ. ಇದರಲ್ಲಿ ಕಲ್ಲಿದ್ದಲು ಅನಿಲೀಕರಣ ಪ್ರೋತ್ಸಾಹಕ ಯೋಜನೆಯನ್ನು ಕೇಂದ್ರ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ.
ಕಲ್ಲಿದ್ದಲು ಅನಿಲೀಕರಣ (Coal Gasification)ದ ಬಗ್ಗೆ:
- ಕಲ್ಲಿದ್ದಲು ಅನಿಲೀಕರಣವು ಕಲ್ಲಿದ್ದಲನ್ನು ಸಂಶ್ಲೇಷಿತ ಅನಿಲ (ಸಿನ್ಗ್ಯಾಸ್)ವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ.
- ಸಿನ್ಗ್ಯಾಸ್ ಎಂದರೆ ಪ್ರಾಥಮಿಕವಾಗಿ ಜಲಜನಕ (H₂) ಮತ್ತು ಇಂಗಾಲದ ಮೊನಾಕ್ಸೈಡ್ (CO) ಅನಿಲಗಳ ಮಿಶ್ರಣವಾಗಿದೆ.
- ಅತಿ ಹೆಚ್ಚಿನ ತಾಪಮಾನದಲ್ಲಿ ಕಲ್ಲಿದ್ದಲನ್ನು ಹಬೆ ಮತ್ತು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುವಂತೆ ಮಾಡುವ ಮೂಲಕ ಸಂಶ್ಲೇಷಿತ ಅನಿಲವನ್ನು ಉತ್ಪಾದಿಸಲಾಗುತ್ತದೆ.
- ಸಿನ್ಗ್ಯಾಸ್ ಅನ್ನು ಈ ಕೆಳಗಿನವುಗಳ ಉತ್ಪಾದನೆಗೆ ಕಚ್ಚಾವಸ್ತುವಾಗಿ ಬಳಸಲಾಗುತ್ತದೆ:
- ಅಮೋನಿಯಾ → ರಸಗೊಬ್ಬರ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
- ಮೆಥನಾಲ್ → ಇಂಧನ ಮತ್ತು ರಾಸಾಯನಿಕ ಕಚ್ಚಾವಸ್ತುವಾಗಿ ಬಳಸಲಾಗುತ್ತದೆ.
- ಹೈಡ್ರೋಜನ್ → ಶುದ್ಧ ಇಂಧನ ವಾಹಕವಾಗಿ ಬಳಸಲಾಗುತ್ತದೆ.
- ಸಂಶ್ಲೇಷಿತ ನೈಸರ್ಗಿಕ ಅನಿಲ → ಆಮದು ಮಾಡಿಕೊಳ್ಳುವ ಎಲ್ಎನ್ಜಿ (LNG) ಗೆ ಪರ್ಯಾಯವಾಗಿ ಬಳಸಲಾಗುತ್ತದೆ.
ಆದಿತ್ಯ-ಎಲ್1 ಮಿಷನ್
ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಆದಿತ್ಯ-ಎಲ್1 (Aditya-L1) ಮಿಷನ್ ಸಂಗ್ರಹಿಸಿರುವ ದತ್ತಾಂಶವನ್ನು ವಿಶ್ಲೇಷಿಸಲು, ಭಾರತೀಯ ಸೌರ ಭೌತಶಾಸ್ತ್ರ ಸಮುದಾಯದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
‘ಆದಿತ್ಯ-ಎಲ್1 ಮಿಷನ್’ನ ಬಗ್ಗೆ:
- ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯವಾಗಿದೆ:- ಇದನ್ನು PSLV-C57 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಲಾಗುವುದು.
- ಗಮನಿಸಿ:- ಈ ಸೌರ ಮಿಷನ್ನಲ್ಲಿ ನೌಕೆಯು ವಾಸ್ತವವಾಗಿ ಸೂರ್ಯನ ಬಳಿಗೆ ಹೋಗುವುದಿಲ್ಲ; ಬದಲಾಗಿ ಸೂರ್ಯಗ್ರಹಣದ ಸಮಯದಲ್ಲೂ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಿಂದುವಿನಲ್ಲಿ ಇದು ಬಾಹ್ಯಾಕಾಶ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸುತ್ತದೆ.
- ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತಲಿನ ಹ್ಯಾಲೊ ಕಕ್ಷೆಯಲ್ಲಿ:- ಭೂಮಿ ಮತ್ತು ಸೂರ್ಯನ ವ್ಯವಸ್ಥೆಯಲ್ಲಿ, ಭೂಮಿಯಿಂದ ಸುಮಾರು 1.5 ದಶಲಕ್ಷ ಕಿ.ಮೀ ದೂರದಲ್ಲಿರುವ L1 ಬಿಂದುವಿನ ಸುತ್ತಲಿನ ಹ್ಯಾಲೊ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.
ಈ ಮಿಷನ್ನ ಪ್ರಮುಖ ಉದ್ದೇಶಗಳು:
- ಈ ಮಿಷನ್ ಸೂರ್ಯನ ಮೇಲ್ಭಾಗದ ವಾತಾವರಣವಾದ ವರ್ಣಗೋಳ ಮತ್ತು ಕೊರೊನದ ಚಲನಶೀಲತೆಯನ್ನು ಅಧ್ಯಯನ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.
- ಬಾಹ್ಯಾಕಾಶ ಹವಾಮಾನವನ್ನು ನಿಯಂತ್ರಿಸುವ ಅಂಶಗಳು, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಸಹ ಇದು ಗುರುತಿಸುತ್ತದೆ.
ಸೂರ್ಯನನ್ನು ಅಧ್ಯಯನ ಮಾಡುವ ಇತರ ಮಿಷನ್ಗಳು:
- ನಾಸಾದ (NASA) “ಪಾರ್ಕರ್ ಸೋಲಾರ್ ಪ್ರೋಬ್”:- 2018 ರಲ್ಲಿ ಉಡಾವಣೆಗೊಂಡು ಈಗಾಗಲೇ ಸೂರ್ಯನಿಗೆ ಬಹಳ ಹತ್ತಿರ ಹೋಗಿದೆ ಮತ್ತು ಸೂರ್ಯನ ಕೊರೋನಾ ಭಾಗವನ್ನು “ಸ್ಪರ್ಶಿಸಿದ” ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಆದರೆ ಇದು ಸೂರ್ಯನಿಂದ ಬೇರೆಡೆಗೆ ಮುಖಮಾಡಿ ತನ್ನ ಅಧ್ಯಯನವನ್ನು ನಡೆಸುತ್ತದೆ.
- ಐರೋಪ್ಯಾ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ನಾಸಾದ (NASA) “ ಸೋಲಾರ್ ಓರ್ಬಿಟರ್” (2020):- ಸೂರ್ಯನ ಧ್ರುವಗಳ (Poles) ಉನ್ನತ ಸ್ಪಷ್ಟತೆಯ ಚಿತ್ರಗಳನ್ನು ಪಡೆಯುವ ಗುರಿಯಾಗಿದೆ.
- ನಾಸಾದ (NASA) “ಪಂಚ್” (PUNCH):- ಕೊರೋನಾ ಹೇಗೆ ಸೌರ ಗಾಳಿಯಾಗಿ ರೂಪಾಂತರವಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವ ನಾಲ್ಕು ಸಣ್ಣ ಉಪಗ್ರಹಗಳ ಸಮೂಹವಾಗಿದೆ.
- ಚೀನಾದ (CNSA) ASO-S (ಕೌಫು-1):- 2022 ರಲ್ಲಿ ಉಡಾವಣೆಗೊಂಡು, ಸೂರ್ಯನ ಗುರುತ್ವಾಕರ್ಶಣ ಕ್ಷೇತ್ರ, ಸೌರ ಜ್ವಾಲೆಗಳು ಮತ್ತು ಕೊರೋನಲ್ ಮಾಸ್ ಇಜೆಕ್ಷನ್ಗಳು (CMEs) ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ಗುರಿ.
- ನಾಸಾ (NASA) ಮತ್ತು ಅಂದಿನ ಪಶ್ಚಿಮ ಜರ್ಮನಿಯ “ಹೀಲಿಯೋಸ್ 2” (Helios 2):- ಈ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಉದ್ಯಮವಾದ ಇದು ಸೌರ ಶೋಧಕವನ್ನು, ಸೂರ್ಯನ ಮೇಲ್ಮೈಯ ಸೌರ ಪ್ರಕ್ರಿಯೆಗಳನ್ನು ತನಿಖೆ ಮಾಡಲು 1976 ರಲ್ಲಿ ಉಡಾವಣೆ ಮಾಡಲಾಗಿತ್ತು.
- ಐರೋಪ್ಯಾ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ನಾಸಾದ (NASA) “ಸೋಹೋ” (SOHO):- 1995 ರಲ್ಲಿ ಉಡಾವಣೆಗೊಂಡು L1 ಬಿಂದುವಿನಲ್ಲಿ ಇರುವ, ಎರಡು ದಶಕಗಳಿಗೂ ಹೆಚ್ಚು ಕಾಲ ಸೂರ್ಯನ ಮಾಹಿತಿ ನೀಡುತ್ತಿರುವ ಹಳೆಯ ವೀಕ್ಷಣಾಲಯ.
“INS ತಾರಗಿರಿ” : ನೀಲಗಿರಿ-ವರ್ಗದ ರಹಸ್ಯಗಾಮಿ ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆ
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ನೀಲಗಿರಿ-ವರ್ಗದ, ರಹಸ್ಯಗಾಮಿ (ಸ್ಟೆಲ್ತ್) ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆಯಾದ INS ತಾರಗಿರಿ ಯನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ.
ಐಎನ್ಎಸ್ ತಾರಗಿರಿ (INS Taragiri)ಯ ಬಗ್ಗೆ:
- “ಪ್ರಾಜೆಕ್ಟ್ 17A” ಯೋಜನೆಯಡಿ ನಿರ್ಮಾಣವಾಗುತ್ತಿರುವ ರಹಸ್ಯಗಾಮಿ ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆ:- ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ 7 ಬಹು-ಕಾರ್ಯಾಚರಣಾ ಸಾಮರ್ಥ್ಯದ ಯುದ್ಧನೌಕೆಗಳ ಶ್ರೇಣಿಯಲ್ಲಿ 4ನೇ ನೌಕೆಯಾಗಿದೆ.
- ಇದನ್ನು ಮುಂಬೈನ ಮಡಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (MDL) ಸಂಸ್ಥೆಯು ನಿರ್ಮಿಸಿದೆ.
- ಇದಕ್ಕೆ ಉತ್ತರಾಖಂಡದ ಪ್ರಸಿದ್ಧ ‘ತಾರಗಿರಿ’ ಬೆಟ್ಟಗಳ ಹೆಸರನ್ನು ಇಡಲಾಗಿದೆ.
- ಈ ಯುದ್ಧನೌಕೆಯ ಸುಮಾರು 75% ರಷ್ಟು ಭಾಗವನ್ನು ಸ್ವದೇಶೀಯವಾಗಿ ನಿರ್ಮಿಸಲಾಗಿದೆ.
ಪ್ರಮುಖ ಲಕ್ಷಣಗಳು:
- ಬಹು-ಪಾತ್ರ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ:- ವಾಯು, ಭೂ ಮೇಲ್ಮೈ ಮತ್ತು ಜಲಗರ್ಭದ ಯುದ್ಧ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
- ಇದು ಅತ್ಯಾಧುನಿಕ MF-ಸ್ಟಾರ್ ರಾಡಾರ್, MRSAM, ಬರಾಕ್ ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳಂತಹ ಪ್ರಬಲ ಅಸ್ತ್ರಗಳಿಂದ ಸುಸಜ್ಜಿತವಾಗಿದೆ.
INS ಅರಿಧಮನ್ : ಅರಿಹಂತ್-ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತದ ಅರಿಹಂತ್-ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN) ಪಡೆಯ ಭಾಗವಾದ INS ಅರಿಧಮನ್ (INS Aridhaman) ಅನ್ನು ನೌಕಾಪಡೆಗೆ ನಿಯೋಜಿಸಲಾಗಿದೆ.
- ಇದು ತನ್ನ ಹಿಂದಿನ ಆವೃತ್ತಿಗಳಾದ ಐಎನ್ಎಸ್ ಅರಿಹಂತ್ (2016 ರಲ್ಲಿ ಸೇರ್ಪಡೆ) ಮತ್ತು ಐಎನ್ಎಸ್ ಅರಿಘಾಟ್ (2024 ರಲ್ಲಿ ಸೇರ್ಪಡೆ) ಜಲಾಂತರ್ಗಾಮಿಗಳಿಗಿಂತ ಹೆಚ್ಚು ಸುಧಾರಿತ ವೇದಿಕೆಯಾಗಿದೆ.
ಪ್ರಮುಖ ಲಕ್ಷಣಗಳು:
- ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ ಗಿಂತ ದೊಡ್ಡದಾಗಿದ್ದು, ಸುಮಾರು 7,000 ಟನ್ಗಳಷ್ಟು ಜಲಸ್ಥಳಾಂತರ ಸಾಮರ್ಥ್ಯವನ್ನು ಹೊಂದಿದೆ.
- ಇದು 24 ಕೆ-15 ಸಾಗರಿಕಾ (K-15 Sagarika) ಕ್ಷಿಪಣಿ ಅಥವಾ 8 ಕೆ-4 / ಕೆ-5 (K-4 / K-5) ಕ್ಷಿಪಣಿಗಳನ್ನು ಹೊತ್ತೊಯ್ಯುಬಲ್ಲ ಸಾಮರ್ಥ್ಯವನ್ನು ಹೊಂದಿದೆ.
- ಕೆ-4 (K-4) ಕ್ಷಿಪಣಿಯು ಸುಮಾರು 3,500 ಕಿ.ಮೀ. ಕಾರ್ಯಾಚರಣಾ ವ್ಯಾಪ್ತಿಯನ್ನು ಹೊಂದಿದೆ.
- ಇವು ಪರಮಾಣು ಸಾಮರ್ಥ್ಯ ಹೊಂದಿರುವ, ಜಲಾಂತರ್ಗಾಮಿಯಿಂದ ಉಡಾವಣೆಗೊಳ್ಳುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ (SLBMs).
‘ಭಾರತದ ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮ’ದ ಬಗ್ಗೆ:
- ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಪರಮಾಣು ಶಕ್ತಿ ಇಲಾಖೆ (DAE), ಭಾರತೀಯ ನೌಕಾಪಡೆ ಮತ್ತು ಖಾಸಗಿ ರಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಹಾಗೂ ಆರಂಭಿಕ ಹಂತಗಳಲ್ಲಿ ರಷ್ಯಾ ದೇಶದ ತಾಂತ್ರಿಕ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
- ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN)ಯು ಈ ಕಾರ್ಯಕ್ರಮದ ಪ್ರಾಥಮಿಕ ಉತ್ಪನ್ನವಾಗಿದೆ. ಇದು ಜಲಾಂತರ್ಗಾಮಿಯಿಂದ ಉಡಾವಣೆಗೊಳ್ಳುವ (SLBMs), ಏಕ ಅಥವಾ ಬಹು ಪರಮಾಣು ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.







ನಿಮ್ಮದೊಂದು ಉತ್ತರ