ತುರ್ತು ಸಾಲ ಖಾತರಿ ಯೋಜನೆ 5.0 (ECLGS 5.0)
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ತುರ್ತು ಸಾಲ ಖಾತರಿ ಯೋಜನೆ 5.0’ಕ್ಕೆ (Emergency Credit Line Guarantee Scheme – ECLGS 5.0) ಅನುಮೋದನೆ ನೀಡಿದೆ.
ಯೋಜನೆಯ ಪ್ರಮುಖ ಅಂಶಗಳು:
- ಉದ್ದೇಶ: ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಹಣಕಾಸಿನ ಕೊರತೆ ಅಥವಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಉದ್ದಿಮೆಗಳಿಗೆ ಹೆಚ್ಚುವರಿ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಸಾಲದ ನೆರವು: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಹಾಗೂ ವಿಮಾನಯಾನ ವಲಯಕ್ಕೆ ಆರ್ಥಿಕ ಅಸ್ಥಿರತೆಯಿಂದ ಪಾರಾಗಲು ಸಹಾಯ ಒದಗಿಸಲು, ಒಟ್ಟು ₹2,55,000 ಕೋಟಿಗಳಷ್ಟು ಹೆಚ್ಚುವರಿ ಸಾಲದ ಹರಿವನ್ನು ಸುಗಮಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಉದ್ಗಮ್ ಪೋರ್ಟಲ್ (UDGAM Portal)
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಉದ್ಗಮ್ (UDGAM) ಪೋರ್ಟಲ್ಗೆ ಇದುವರೆಗೆ 30 ಬ್ಯಾಂಕ್ಗಳನ್ನು ಸಂಯೋಜಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸುಪ್ರೀಂ ಕೋರ್ಟ್ಗೆ ಅಧಿಕೃತ ಮಾಹಿತಿ ನೀಡಿದೆ.
ಉದ್ಗಮ್ ಪೋರ್ಟಲ್ ಬಗ್ಗೆ ( UDGAM Portal):
- UDGAM ವಿಸ್ತೃತ ರೂಪ: ಅನ್ಕ್ಲೈಮ್ಡ್ ಡೆಪಾಸಿಟ್ಸ್ – ಗೇಟ್ವೇ ಟು ಆಕ್ಸೆಸ್ ಇನ್ಫಾರ್ಮೇಷನ್ (Unclaimed Deposits – Gateway to Access Information – ಅಂದರೆ: ವಾರಸುದಾರರಿಲ್ಲದ ಠೇವಣಿಗಳ ಮಾಹಿತಿಯನ್ನು ಪಡೆಯುವ ಪ್ರವೇಶ ದ್ವಾರ).
- ಅಭಿವೃದ್ಧಿಪಡಿಸಿದ ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI).
- ಉದ್ದೇಶ: ವಿವಿಧ ಬ್ಯಾಂಕ್ಗಳಲ್ಲಿ ವಾರಸುದಾರರಿಲ್ಲದೆ ಹಾಗೆಯೇ ಉಳಿದಿರುವ ಬ್ಯಾಂಕ್ ಠೇವಣಿಗಳನ್ನು ಹುಡುಕಲು ಸಾರ್ವಜನಿಕರಿಗೆ ಒಂದು ‘ಕೇಂದ್ರೀಕೃತ ಶೋಧನಾ ಸೌಲಭ್ಯವನ್ನು ಒದಗಿಸುವುದು.
- ಕಾರ್ಯನಿರ್ವಹಣೆ: ಸಾರ್ವಜನಿಕರು ಒಂದೇ ಜಾಲತಾಣದ ಮೂಲಕ, ಬೇರೆ ಬೇರೆ ಬ್ಯಾಂಕ್ಗಳಲ್ಲಿ ತಮ್ಮ ಅಥವಾ ತಮ್ಮ ಕುಟುಂಬದವರ ವಾರಸುದಾರರಿಲ್ಲದ ಹಣವಿದೆಯೇ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಲು ಇದು ಅನುಕೂಲ ಮಾಡಿಕೊಡುತ್ತದೆ.
- ಈ ಪೋರ್ಟಲ್ ಮೂಲಕ ನೇರವಾಗಿ ಹಣವನ್ನು ಪಡೆಯಲು ಸಾಧ್ಯವಿಲ್ಲ; ಬದಲಾಗಿ, ಹಣವಿರುವ ಸಂಬಂಧಪಟ್ಟ ಬ್ಯಾಂಕ್ಗಳನ್ನು ಸಂಪರ್ಕಿಸುವಂತೆ ಬಳಕೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮುಂದಿನ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ವಾರಸುದಾರರಿಲ್ಲದ ಹಣಕಾಸು ಸ್ವತ್ತುಗಳು (Unclaimed Financial Assets):
- ಹಿನ್ನೆಲೆ: ಬ್ಯಾಂಕ್ಗಳಲ್ಲಿ ಜಮಾ ಮಾಡಿರುವ ಹಣವನ್ನು, ಮೂಲ ಖಾತೆದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ದೀರ್ಘಕಾಲದವರೆಗೆ ಮರಳಿ ಯಾರೂ ಪಡೆದುಕೊಳ್ಳದಿದ್ದರೆ (ಕ್ಲೈಮ್ ಮಾಡದಿದ್ದರೆ), ಅಂತಹ ಹಣವನ್ನು ‘ವಾರಸುದಾರರಿಲ್ಲದ ಹಣಕಾಸು ಸ್ವತ್ತುಗಳು’ ಎಂದು ಕರೆಯಲಾಗುತ್ತದೆ.
- ನಿಯಮ: ಯಾವುದೇ ಬ್ಯಾಂಕ್ ಖಾತೆಯಲ್ಲಿರುವ ಠೇವಣಿಯನ್ನು ಸತತ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮರಳಿ ಯಾರೂ ಪಡೆದುಕೊಳ್ಳದಿದ್ದರೆ ಆ ಹಣವನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ’ಗೆ (Depositor Education and Awareness Fund – DEA Fund) ವರ್ಗಾಯಿಸಲಾಗುತ್ತದೆ.
- ಮಾಲೀಕತ್ವದ ಹಕ್ಕು: ಹಣವನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ವರ್ಗಾಯಿಸಿದ ಮೇಲೂ, ಆ ಹಣದ ಮೇಲಿನ ಮಾಲೀಕತ್ವದ ಹಕ್ಕು ಮೂಲ ಠೇವಣಿದಾರರ ಬಳಿಯೇ ಭದ್ರವಾಗಿರುತ್ತದೆ. ಠೇವಣಿದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ಆ ಹಣವನ್ನು ಮರಳಿ ಪಡೆಯಲು (ಕ್ಲೈಮ್ ಮಾಡಲು) ಯಾವುದೇ ಕಾಲಮಿತಿ ಇರುವುದಿಲ್ಲ.








ನಿಮ್ಮದೊಂದು ಉತ್ತರ