ಪರಮಾಣು ಇಂಧನ ಕಾರ್ಯಕ್ರಮದಲ್ಲಿ ಭಾರತದ ಸಾಧನೆ
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ತಮಿಳುನಾಡಿನ ಕಲ್ಪಾಕ್ಕಂನಲ್ಲಿ ಸ್ವದೇಶಿಯವಾಗಿ ನಿರ್ಮಿಸಲಾದ “ಮಾದರಿ ತ್ವರಿತ ಉತ್ಪಾದನಾ ರಿಯಾಕ್ಟರ್” (PFBR) ಈಗ ನಿರ್ಣಾಯಕ (ಕ್ರಿಟಿಕಾಲಿಟಿ) ಹಂತವನ್ನು ತಲುಪುವ ಮೂಲಕ ಭಾರತವು ಪರಮಾಣು ಇಂಧನ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.
ಮಾದರಿ ತ್ವರಿತ ಉತ್ಪಾದನಾ ರಿಯಾಕ್ಟರ್ (PFBR) ನ ಬಗ್ಗೆ:
- ಸುಧಾರಿತ ರಿಯಾಕ್ಟರ್ ಆಗಿದೆ:- ಇದು ತಾನು ಬಳಸುವ ಇಂಧನಕ್ಕಿಂತ ಹೆಚ್ಚಿನ ಪ್ರಮಾಣದ ವಿದಳನಕಾರಿ ಇಂಧನವನ್ನು ಉತ್ಪಾದಿಸುತ್ತದೆ.
- ಸ್ಥಳ:- ಇದು ತಮಿಳುನಾಡಿನ ಕಲ್ಪಾಕ್ಕಂನಲ್ಲಿದೆ.
- ನಿರ್ವಹಣೆ:- ‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ’ (BHAVINI).
- ಇದು ಯುರೇನಿಯಂ-ಪ್ಲುಟೋನಿಯಂ ಮಿಶ್ರಿತ ಆಕ್ಸೈಡ್ (MOX – Mixed Oxide) ಇಂಧನವನ್ನು ಬಳಸುತ್ತದೆ.
- ಇದನ್ನು ತ್ವರಿತ ಉತ್ಪಾದನಾ (ಫಾಸ್ಟ್ ಬ್ರೀಡರ್) ಎಂದು ಕರೆಯಲಾಗುತ್ತದೆ ಏಕೆಂದರೆ:
- ಸಾಮಾನ್ಯ ರಿಯಾಕ್ಟರ್ಗಳಲ್ಲಿ ಬಳಸುವ ನಿಧಾನಗತಿಯ ಉಷ್ಣ ನ್ಯೂಟ್ರಾನ್ಗಳ ಬದಲಾಗಿ, ವಿದಳನ ಕ್ರಿಯೆಯನ್ನು ಕಾಯ್ದುಕೊಳ್ಳಲು ಇದು ಹೆಚ್ಚಿನ ಶಕ್ತಿಯ, ಅತಿವೇಗದ ನ್ಯೂಟ್ರಾನ್ಗಳನ್ನು ಬಳಸುತ್ತದೆ.
- ಇದು ಸ್ವಾಭಾವಿಕವಾಗಿ ವಿದಳನಗೊಳ್ಳದ ಪರಿವರ್ತನೀಯ (Fertile) ವಸ್ತುವನ್ನು (ಉದಾಹರಣೆಗೆ: ಯುರೇನಿಯಂ-238) ವಿದಳನಕಾರಿ ಇಂಧನವನ್ನಾಗಿ (ಪ್ಲುಟೋನಿಯಂ-239) ಪರಿವರ್ತಿಸುತ್ತದೆ.
- ನಿರ್ಣಾಯಕ (Criticality) ಹಂತ ಎಂದರೇನು?:
- ರಿಯಾಕ್ಟರ್ ಒಂದು ಸ್ವಯಂ-ಕಾಯ್ದುಕೊಳ್ಳುವ ಪರಮಾಣು ವಿದಳನ ಪ್ರಕ್ರಿಯೆಯನ್ನು ಸಾಧಿಸುವ ಹಂತವನ್ನು ‘ನಿರ್ಣಾಯಕ’ ಹಂತ ಎಂದು ಕರೆಯಲಾಗುತ್ತದೆ.
- ಇಲ್ಲಿ ಉತ್ಪತ್ತಿಯಾಗುವ ನ್ಯೂಟ್ರಾನ್ಗಳ ಸಂಖ್ಯೆಯು ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ನಿರಂತರವಾಗಿ ಪ್ರತಿಕ್ರಿಯೆಯನ್ನು ಮುಂದುವರಿಸಲು ಸಾಕಷ್ಟು ಸಮರ್ಥವಾಗಿರುತ್ತದೆ.
ಈ ಸಾಧನೆಯ ಪ್ರಾಮುಖ್ಯತೆ:
- ಭಾರತದ ಮೂರು-ಹಂತದ ಪರಮಾಣು ಕಾರ್ಯಕ್ರಮದ ಪ್ರಗತಿ:- PFBR ಯೋಜನೆಯು ಭಾರತದ ‘ಮೂರು-ಹಂತದ ಪರಮಾಣು ಕಾರ್ಯಕ್ರಮದ’ ಎರಡನೇ ಹಂತದ ಪ್ರಗತಿಯನ್ನು ಸೂಚಿಸುತ್ತದೆ.
- ಇದು ಫಲವತ್ತಾದ ವಸ್ತುವನ್ನು ವಿದಳನಕಾರಿ ಇಂಧನವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.
- ಇದು ಥೋರಿಯಂ ಬಳಕೆಯ ಮೇಲೆ ಕೇಂದ್ರೀಕೃತವಾಗಿರುವ ಮೂರನೇ ಹಂತದ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕುತ್ತದೆ.
- ಥೋರಿಯಂ ಸಾಮರ್ಥ್ಯದ ಬಳಕೆ:- ಭಾರತವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ. PFBR ವ್ಯವಸ್ಥೆಯು ಥೋರಿಯಂ ಆಧಾರಿತ ರಿಯಾಕ್ಟರ್ಗಳಿಗೆ ಅಗತ್ಯವಿರುವ ವಿದಳನಕಾರಿ ವಸ್ತುವನ್ನು (U-233) ಉತ್ಪಾದಿಸಲು ಸಹಾಯ ಮಾಡುತ್ತದೆ.
- ಥೋರಿಯಂ-232 ನೈಸರ್ಗಿಕವಾಗಿ ವಿದಳನಕಾರಿಯಲ್ಲ, ಆದರೆ ಅದನ್ನು ವಿದಳನಕಾರಿ ವಸ್ತುವಾಗಿ ಪರಿವರ್ತಿಸಲು ಸಾಧ್ಯವಿದೆ.
- ತಾಂತ್ರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:- ವಾಣಿಜ್ಯ ತ್ವರಿತ ಉತ್ಪಾದನಾ ರಿಯಾಕ್ಟರ್ ಅನ್ನು ಅಭಿವೃದ್ಧಿಪಡಿಸಿದ ರಷ್ಯಾದ ನಂತರ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ.
- ಇದು ಪರಮಾಣು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಸುಧಾರಿತ ದೇಶೀಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ನಮೋ ಡ್ರೋನ್ ದೀದಿ ಯೋಜನೆ
ಯೋಜನೆಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 1,094 ಸ್ವಸಹಾಯ ಸಂಘಗಳ (SHG) ಮಹಿಳಾ ಸದಸ್ಯರಿಗೆ ಡ್ರೋನ್ ಪೈಲಟ್ಗಳಾಗಿ ತರಬೇತಿ ನೀಡಲಾಗಿದೆ.
ನಮೋ ಡ್ರೋನ್ ದೀದಿ ಯೋಜನೆಯ ಬಗ್ಗೆ:
- ಪ್ರಾರಂಭ:- 2023
- ಗುರಿ:- ಗ್ರಾಮೀಣ ಮಹಿಳೆಯರನ್ನು “ಕೃಷಿ-ತಂತ್ರಜ್ಞಾನ” ಉದ್ಯಮಿಗಳನ್ನಾಗಿ ಮಾಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು.
- ಉದ್ದೇಶ:- 2024 ಮತ್ತು 2026 ರ ನಡುವೆ ದೇಶಾದ್ಯಂತ ಆಯ್ಕೆಯಾದ ಮಹಿಳಾ ಸ್ವಸಹಾಯ ಸಂಘಗಳಿಗೆ (SHGs) 15,000 ಡ್ರೋನ್ಗಳನ್ನು ಒದಗಿಸುವುದು.
- ಹಣಕಾಸು ನೆರವು: ಇದೊಂದು ಕೇಂದ್ರ ವಲಯದ ಯೋಜನೆಯಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.
- ಅನುಷ್ಠಾನ ಸಚಿವಾಲಯ:- ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
- ಮಹಿಳಾ ಸಬಲೀಕರಣ:- ಸ್ವಸಹಾಯ ಸಂಘಗಳ ಮಹಿಳೆಯರನ್ನು ನುರಿತ ಡ್ರೋನ್ ಪೈಲಟ್ಗಳು ಮತ್ತು ಸೇವಾ ಪೂರೈಕೆದಾರರನ್ನಾಗಿ ಪರಿವರ್ತಿಸಲಾಗುವುದು.
- ಕೃಷಿ ಆಧುನೀಕರಣ:- ನಿಖರ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನ್ಯಾನೋ ಯೂರಿಯಾದಂತಹ ದ್ರವರೂಪದ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ನಿಖರವಾಗಿ ಸಿಂಪಡಿಸಲು ಡ್ರೋನ್ಗಳನ್ನು ಬಳಸಲಾಗುತ್ತದೆ. ಇದು ಕೃಷಿ ತ್ಯಾಜ್ಯವನ್ನು ಹಾಗೂ ರೈತರಿಗಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
- ಜೀವನೋಪಾಯ ಸೃಷ್ಟಿ:- ಡ್ರೋನ್ ಬಾಡಿಗೆ ಸೇವೆಗಳ ಮೂಲಕ ಪ್ರತಿಯೊಂದು ಸ್ವಸಹಾಯ ಸಂಘಕ್ಕೂ ಕನಿಷ್ಠ ₹1 ಲಕ್ಷಗಳವರೆಗೆ ಹೆಚ್ಚುವರಿ ವಾರ್ಷಿಕ ಆದಾಯವನ್ನು ಸೃಷ್ಟಿಸುವುದು.
ಬಾಬು ಜಗಜೀವನ್ ರಾಮ್
ಇತಿಹಾಸ ಮತ್ತು ಸಂಸ್ಕೃತಿ

ಇತ್ತೀಚೆಗೆ ಸುದ್ದಿಯಲ್ಲಿ:
- ಪ್ರಧಾನಿ ನರೇಂದ್ರ ಮೋದಿಯವರು ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಬಾಬು ಜಗಜೀವನ್ ರಾಮ್ ಅವರ ಬಗ್ಗೆ:
- ಇವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾಗಿದ್ದು, 5 ಏಪ್ರಿಲ್ 1908 ರಂದು ಪ್ರಸ್ತುತ ಬಿಹಾರ ರಾಜ್ಯದ ಚಂದ್ವಾ ಗ್ರಾಮದಲ್ಲಿ ಜನಿಸಿದರು.
- ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
- ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು:- ಇವರು ಮಹಾತ್ಮ ಗಾಂಧಿಯವರಿಂದ ಸ್ಫೂರ್ತಿ ಪಡೆದಿದ್ದರು. ಇವರು,
- “ಕಾನೂನುಭಂಗ ಚಳವಳಿ ಮತ್ತು ಭಾರತ ಬಿಟ್ಟು ತೊಲಗಿ” ಚಳವಳಿಯಲ್ಲಿ ಭಾಗವಹಿಸಿದ್ದರು.
- ಸಾಮಾಜಿಕ ನ್ಯಾಯದ ಕೊಡುಗೆಗಳು:- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅವಕಾಶ ವಂಚಿತ ಸಮುದಾಯಗಳನ್ನು ಸಂಘಟಿಸಲು ಇವರು,
- ‘ಅಖಿಲ ಭಾರತೀಯ ರವಿದಾಸ ಮಹಾಸಭಾ’ ಮತ್ತು
- ‘ಅಖಿಲ ಭಾರತ ಅವಕಾಶ ವಂಚಿತ ವರ್ಗಗಳ ಲೀಗ್’ (All India Depressed Classes League) ಅನ್ನು ಸ್ಥಾಪಿಸಿದರು.
- ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ,1955 ರ ಜಾರಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
- ರಾಜಕೀಯ ಜೀವನ:- ಇವರು ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು.
- ಇವರು ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ ಹಸಿರು ಕ್ರಾಂತಿಯ ಯಶಸ್ಸಿಗೆ ಕಾರಣಿಕರ್ತರಾದರೂ.
- ರಕ್ಷಣಾ ಸಚಿವರಾಗಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ 1971 ರ ಐತಿಹಾಸಿಕ ಯುದ್ಧದಲ್ಲಿ ಭಾರತವನ್ನು ಇವರು ಯಶಸ್ವಿಯಾಗಿ ಮುನ್ನಡೆಸಿದರು.
- 1979 ರಲ್ಲಿ ಉಪಪ್ರಧಾನಿಯಾಗಿ ಸೇವೆ:- ಮೊರಾರ್ಜಿ ದೇಸಾಯಿ ಅವರ ಸರ್ಕಾರದ ಅವಧಿಯಲ್ಲಿ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.







ನಿಮ್ಮದೊಂದು ಉತ್ತರ