ಪ್ರಾಜೆಕ್ಟ್ ಚೇತಕ್‌ – BRO | ಬಯೋನೆಸ್ಟ್ (BioNEST) | ಭಾರತ ಜನಜಾತಿ ಉತ್ಸವ-2026

ಪ್ರಾಜೆಕ್ಟ್ ಚೇತಕ್‌ – BRO

ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಪ್ರಮುಖ ಯೋಜನೆಯಾದ ‘ಪ್ರಾಜೆಕ್ಟ್ ಚೇತಕ್’ ತನ್ನ 47ನೇ ಸಂಸ್ಥಾಪನಾ ದಿನವನ್ನು ಇತ್ತೀಚಿಗೆ ಆಚರಿಸಿಕೊಂಡಿತು.

‘ಪ್ರಾಜೆಕ್ಟ್ ಚೇತಕ್’ನ ಬಗ್ಗೆ:

  • ಇದು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ, ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.
  • 1980 ರಲ್ಲಿ ಸ್ಥಾಪನೆಯಾದ ಯೋಜನೆ:- ರಾಜಸ್ಥಾನ, ಪಂಜಾಬ್ ಮತ್ತು ಗುಜರಾತಿನ ಉತ್ತರ ಭಾಗಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
  • ಇದು ಅಂತರರಾಷ್ಟ್ರೀಯ ಗಡಿಯ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ನಿರ್ವಹಿಸುವ ಮೂಲಕ ಭಾರತೀಯ ರಕ್ಷಣಾ ಪಡೆಗಳಿಗೆ ಬೆಂಬಲ ನೀಡುತ್ತದೆ.

‘ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ’ (BRO)ಯ ಬಗ್ಗೆ:

  • ಸ್ಥಾಪನೆ:- ಪಂಡಿತ್ ಜವಾಹರಲಾಲ್ ನೆಹರೂ ಅವರು 1960 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.
  • ಉದ್ದೇಶ:- ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ ಸಂಪರ್ಕ ಜಾಲದ ತ್ವರಿತ ಅಭಿವೃದ್ಧಿಯನ್ನು ಸಂಯೋಜಿಸುವುದು.
  • ಆಡಳಿತಾತ್ಮಕ ನಿಯಂತ್ರಣ:-  ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ
  • ಪ್ರಾಮುಖ್ಯತೆ:- ಬದ್ಧತೆ, ಸಮರ್ಪಣಾ ಭಾವ ಮತ್ತು ವೆಚ್ಚ-ಪರಿಣಾಮಕಾರಿಯಾದ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಮೂಲಕ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ.
  • ಇತ್ತೀಚಿನ ಮತ್ತು ಮುಂದಿನ ಯೋಜನೆಗಳು:- ಅರುಣಾಚಲ ಪ್ರದೇಶದ ಬಾಲಿಪಾರಾ-ಚಾರಿದುವಾರ್-ತವಾಂಗ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ‘ಸೆಲಾ ಸುರಂಗ’ ಯೋಜನೆ.

ಬಯೋನೆಸ್ಟ್ (BioNEST)

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಮೈಸೂರಿನ CSIR-CFTRI ನಲ್ಲಿ ‘ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ (BIRAC-BioNEST Incubation Centre) ವನ್ನು ಉದ್ಘಾಟಿಸಲಾಗಿದೆ. 
  • ಪ್ರೋಬಯಾಟಿಕ್ಸ್ (Probiotics) ಹಾಗೂ ಪೋಸ್ಟ್‌ಬಯಾಟಿಕ್ಸ್ (Postbiotics) ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ದ ಬಗ್ಗೆ:

  • ಉದ್ದೇಶ:- ಆಹಾರ ಜೈವಿಕ ಸಂಸ್ಕರಣೆ, ಜೈವಿಕ ತಂತ್ರಜ್ಞಾನ ಸಂಶೋಧನೆ, ಯೋಜನೆಗಳ ವಿಸ್ತರಣೆ ಮತ್ತು ನಿಯಂತ್ರಕ ಬೆಂಬಲವನ್ನು ಒದಗಿಸುವುದು.
  • ವೈಜ್ಞಾನಿಕ ಸಂಶೋಧನೆಗಳನ್ನು ಮಾರುಕಟ್ಟೆಗೆ ಸಿದ್ಧವಾಗಿರುವ ಉತ್ಪನ್ನಗಳಾಗಿ ಪರಿವರ್ತಿಸುವುದು ಇದರ ಪ್ರಮುಖ ಗುರಿಯಾಗಿದೆ.
  • ಗುರಿಪಡಿಸಿದ ಕ್ಷೇತ್ರಗಳು:- ನ್ಯೂಟ್ರಾಸ್ಯುಟಿಕಲ್ಸ್, ನಿಖರ ಕಿಣ್ವನ/ಹುದುಗುವಿಕೆ, ಕ್ರಿಸ್ಪರ್ (CRISPR) ಆಧಾರಿತ ತಂತ್ರಜ್ಞಾನಗಳು ಮತ್ತು ಸಸ್ಯಶಾಸ್ತ್ರದ ಉತ್ಪನ್ನಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನವೋದ್ಯಮಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI), ಮೈಸೂರು

ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (BIRAC)

CFTRI ಸಂಪೂರ್ಣ ರೂಪ:- ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್.

BIRAC ಸಂಪೂರ್ಣ ರೂಪ:- ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್.

ಇದು ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯ ಅಡಿಯಲ್ಲಿ ಬರುವ ಪ್ರಮುಖ ಅಂಗ ಸಂಸ್ಥೆ ಮತ್ತು ಪ್ರಯೋಗಾಲಯವಾಗಿದೆ.

ಇದು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ (DBT) ಅಡಿಯಲ್ಲಿ ಸ್ಥಾಪಿಸಲಾದ ಲಾಭರಹಿತ ಸಾರ್ವಜನಿಕ ವಲಯದ ಉದ್ಯಮವಾಗಿದೆ.

ಈ ಸಂಸ್ಥೆಯು 1950 ರಲ್ಲಿ ಅಸ್ತಿತ್ವಕ್ಕೆ ಬಂದಿತು.

 

ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುವುದು ಇದರ ಪ್ರಮುಖ ಧ್ಯೇಯವಾಗಿದೆ.

ರಾಷ್ಟ್ರೀಯವಾಗಿ ಅಗತ್ಯವಿರುವ ಉತ್ಪನ್ನಗಳ ಅಭಿವೃದ್ಧಿಯನ್ನು ಪೂರೈಸಲು ಮತ್ತು ಕಾರ್ಯತಂತ್ರದ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಕೈಗೊಳ್ಳಲು ಇದು ಉದಯೋನ್ಮುಖ ಜೈವಿಕ ತಂತ್ರಜ್ಞಾನ ಉದ್ಯಮಗಳನ್ನು ಬಲಪಡಿಸುತ್ತದೆ ಮತ್ತು ಸಬಲೀಕರಣಗೊಳಿಸುತ್ತದೆ.

ಸಂಶೋಧನೆಯ ಪ್ರಮುಖ ಕ್ಷೇತ್ರಗಳು:

1.  ಎಂಜಿನಿಯರಿಂಗ್ ವಿಜ್ಞಾನಗಳು

2. ತಂತ್ರಜ್ಞಾನ ಅಭಿವೃದ್ಧಿ

3. ಭಾಷಾಂತರ ಸಂಶೋಧನೆ

4. ಆಹಾರ ಸಂರಕ್ಷಣೆ ಮತ್ತು ಸುರಕ್ಷತೆ

 

ಸಂಪನ್ಮೂಲ ಕೇಂದ್ರಗಳು:- ಹೈದರಾಬಾದ್, ಲಕ್ನೋ ಮತ್ತು ಮುಂಬೈ.

 

ಭಾರತ ಜನಜಾತಿ ಉತ್ಸವ-2026

ರಾಜ್ಯಶಾಸ್ತ್ರ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚಿಗೆ ‘ಭಾರತ ಜನಜಾತಿ ಉತ್ಸವ-2026’  ಯಶಸ್ವಿಯಾಗಿ ಮುಕ್ತಾಯಗೊಂಡಿದೆ. .

ಭಾರತ ಜನಜಾತಿ ಉತ್ಸವದ ಬಗ್ಗೆ:

  • ಇದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಮುಖ ಉಪಕ್ರಮವಾಗಿದ್ದು, ಇದನ್ನು ಭಾರತೀಯ ಜನಜಾತಿ ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (TRIFED) ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ.
  • ಉದ್ದೇಶ:- 19 ದಿನಗಳ ಕಾಲ ನಡೆದ ಈ ಉತ್ಸವವು ದೇಶಾದ್ಯಂತ ಇರುವ ಬುಡಕಟ್ಟು ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳನ್ನು (SHGs) ಒಟ್ಟುಗೂಡಿಸಿ, ಭಾರತದ ವೈವಿಧ್ಯಮಯ ಬುಡಕಟ್ಟು ಪರಂಪರೆ ಮತ್ತು ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

ಕರ್ನಾಟಕದ ಬುಡಕಟ್ಟು ಸಮುದಾಯಗಳ ಬಗ್ಗೆ:

  • ಕರ್ನಾಟಕವು ಸುಮಾರು 50 ಅಧಿಸೂಚಿತ ಪರಿಶಿಷ್ಟ ಪಂಗಡಗಳಿಗೆ (ST) ನೆಲೆಯಾಗಿದ್ದು, ಇವರು 2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6.95% ರಷ್ಟಿದ್ದಾರೆ.
  • ಈ ಸಮುದಾಯಗಳು ಪ್ರಾಥಮಿಕವಾಗಿ ಬಳ್ಳಾರಿ, ರಾಯಚೂರು, ಮೈಸೂರು, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ.

ಕರ್ನಾಟಕದ ಪ್ರಮುಖ ಬುಡಕಟ್ಟು ಸಮುದಾಯಗಳು:

  • ನಾಯ್ಕಡ/ ನಾಯಕ /ಬೇಡರ /ಬೇಡ /ವಾಲ್ಮೀಕಿ:- ಇವರು ಕರ್ನಾಟಕದ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಐತಿಹಾಸಿಕವಾಗಿ ಇವರು ಯೋಧ ಮತ್ತು ಬೇಟೆಗಾರರಾಗಿದ್ದಾರೆ.
  • ಗೋಂಡ:- ಇವರು ರಾಜ್ಯದ ಎರಡನೇ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಇವರು ಪ್ರಮುಖವಾಗಿ ಬೀದರ ಮತ್ತು ಉತ್ತರ ಕನ್ನಡದಂತಹ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
  • ಜೇನು ಕುರುಬ:- ಇವರ ಹೆಸರೇ ಸೂಚಿಸುವಂತೆ ಇವರು “ಜೇನು ಸಂಗ್ರಹಿಸುವ ಜನ”ರಾಗಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಜೇನುತುಪ್ಪವನ್ನು ಸಂಗ್ರಹಿಸುವಲ್ಲಿ ಇವರಿಗಿರುವ ಸಾಂಪ್ರದಾಯಿಕ ಪರಿಣತಿಯನ್ನು ಇದು ಪ್ರತಿಬಿಂಬಿಸುತ್ತದೆ.
  • ಸೋಲಿಗ /ಶೋಲಗ:- ಪ್ರಾಥಮಿಕವಾಗಿ ಬಿಳಿಗಿರಿರಂಗನ ಬೆಟ್ಟಗಳಲ್ಲಿ ನೆಲೆಸಿರುವ ಇವರು ಅರಣ್ಯದೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದಾರೆ. ಇವರು ‘ಸ್ಥಳಾಂತರ ಬೇಸಾಯ’ ಪದ್ಧತಿಯನ್ನು ಆಚರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.
  • ಹಕ್ಕಿಪಿಕ್ಕಿ:- ಐತಿಹಾಸಿಕವಾಗಿ ಇವರು ಅರೆ-ಅಲೆಮಾರಿ “ಪಕ್ಷಿ ಬೇಟೆಗಾರರು” ಆಗಿದ್ದಾರೆ (ಹಕ್ಕಿ ಎಂದರೆ ಪಕ್ಷಿ, ಪಿಕ್ಕಿ ಎಂದರೆ ಹಿಡಿಯುವುದು). ಇವರು ರಾಜಸ್ಥಾನದ ಯೋಧ ಕುಲಗಳೊಂದಿಗೆ ತಮ್ಮ ಪೂರ್ವಜರ ಸಂಪರ್ಕವನ್ನು ಹೊಂದಿದ್ದಾರೆ ಎಂದು ಪರಿಗಣಿಸಲಾಗಿದೆ.
  • ಸಿದ್ಧಿ:- ಶತಮಾನಗಳ ಹಿಂದೆ ಭಾರತಕ್ಕೆ ಕರೆತರಲಾದ ಆಫ್ರಿಕಾ ಮೂಲದ ವಿಶಿಷ್ಟ ಜನಾಂಗೀಯ ಸಮುದಾಯದವರಾಗಿದ್ದಾರೆ. ಇವರು ಹೆಚ್ಚಾಗಿ ಉತ್ತರ ಕನ್ನಡದ ಕಾಡುಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ವಿಶಿಷ್ಟ ಸಂಸ್ಕೃತಿ ಹಾಗೂ “ಕವಂದಿ” ಎಂಬ ಕೌದಿ ಕಲೆಗೆ ಹೆಸರುವಾಸಿಯಾಗಿದ್ದಾರೆ.
  • ಕೊರಗ: ಇವರನ್ನು ‘ವಿಶೇಷವಾಗಿ ದುರ್ಬಲವಾಗಿರುವ ಬುಡಕಟ್ಟು ಗುಂಪು’ (PVTG) ಎಂದು ಗುರುತಿಸಲಾಗಿದೆ. ಇವರು ಉಡುಪಿ ಮತ್ತು ದಕ್ಷಿಣ ಕನ್ನಡದಂತಹ ಕರಾವಳಿ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಸಾಂಪ್ರದಾಯಿಕವಾಗಿ ಬುಟ್ಟಿ ಹೆಣೆಯುವವರು ಮತ್ತು ಡೋಲು ಬಾರಿಸುವವರಾಗಿದ್ದಾರೆ.
  • ಯೆರವಾ: ಇವರು ಹೆಚ್ಚಾಗಿ ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಕಂಡುಬರುತ್ತಾರೆ. ಸಾಂಪ್ರದಾಯಿಕವಾಗಿ ಅರಣ್ಯವಾಸಿಗಳಾಗಿರುವ ಇವರು ಈಗ ಹೆಚ್ಚಾಗಿ ಕಾಫಿ ಮತ್ತು ಚಹಾ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts