ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026 | ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026 | ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ | “GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ | ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) | ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026 | E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026

ರಾಜಕೀಯ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ (FCRA) ತಿದ್ದುಪಡಿ ಮಸೂದೆ, 2026 ಕುರಿತು ಚರ್ಚೆಯನ್ನು ಮುಂದೂಡಿದ್ದು, ವಿಶೇಷವಾಗಿ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಯ ಬಗ್ಗೆ:

  • ಧ್ಯೇಯೋದ್ದೇಶ :- ಇದು ಭಾರತದಲ್ಲಿನ ವ್ಯಕ್ತಿಗಳು, ಸರ್ಕಾರೇತರ ಸಂಸ್ಥೆಗಳು (NGOs) ಮತ್ತು ಸಂಘ-ಸಂಸ್ಥೆಗಳು ವಿದೇಶಿ ನಿಧಿಗಳನ್ನು ಸ್ವೀಕರಿಸುವುದನ್ನು ಮತ್ತು ಬಳಸಿಕೊಳ್ಳುವುದನ್ನು ನಿಯಂತ್ರಿಸುವ ಪ್ರಮುಖ ಕಾನೂನಾಗಿದೆ.
  • ಇದನ್ನು ಕೇಂದ್ರ ಗೃಹ ಸಚಿವಾಲಯವು (MoHA) ನಿರ್ವಹಿಸುತ್ತದೆ.
  • ಪ್ರಾಮುಖ್ಯತೆ:- ವಿದೇಶಿ ದೇಣಿಗೆಗಳು ರಾಷ್ಟ್ರೀಯ ಹಿತಾಸಕ್ತಿ, ಸಾರ್ವಭೌಮತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು.

FCRA (ತಿದ್ದುಪಡಿ) ಮಸೂದೆ, 2026 ರ ಪ್ರಮುಖ ನಿಬಂಧನೆಗಳು:

  • ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹೊಸ “ನಿಯೋಜಿತ ಪ್ರಾಧಿಕಾರ”:- NGO ಒಂದರ ನೋಂದಣಿಯನ್ನು ರದ್ದುಗೊಳಿಸಿದರೆ, ಒಪ್ಪಿಸಿದರೆ ಅಥವಾ ನೋಂದಣಿ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ, ಈ ಪ್ರಾಧಿಕಾರವು ಮಧ್ಯಪ್ರವೇಶಿಸಿ ಅದರ ಎಲ್ಲಾ ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು (ವಿದೇಶಿ ಹಣದಿಂದ ಖರೀದಿಸಿದ ಕಟ್ಟಡಗಳು ಅಥವಾ ಉಪಕರಣಗಳು) ತನ್ನ ವಶಕ್ಕೆ ತೆಗೆದುಕೊಳ್ಳಬಹುದು.
    • ಶಾಶ್ವತ ಸ್ವಾಧೀನ:- ನಿರ್ದಿಷ್ಟ ಕಾಲಮಿತಿಯೊಳಗೆ ನೋಂದಣಿಯನ್ನು ಮರುಸ್ಥಾಪಿಸದಿದ್ದರೆ, ಸರ್ಕಾರವು ಈ ಆಸ್ತಿಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳಬಹುದು, ಮಾರಾಟ ಮಾಡಬಹುದು ಅಥವಾ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಬಹುದು.
  • “ಪ್ರಮುಖ ಪದಾಧಿಕಾರಿಗಳ” ವೈಯಕ್ತಿಕ ಹೊಣೆಗಾರಿಕೆ:-
    • ಈ ಮಸೂದೆಯು “ಪ್ರಮುಖ ಪದಾಧಿಕಾರಿ” ಎಂಬ ವ್ಯಾಖ್ಯಾನವನ್ನು ವಿಸ್ತರಿಸಿದ್ದು, ಇದು ನಿರ್ದೇಶಕರು, ಪಾಲುದಾರರು, ಟ್ರಸ್ಟಿಗಳು ಮತ್ತು ನಿರ್ವಹಣಾ ಹಂತದಲ್ಲಿರುವ ಪ್ರತಿಯೊಬ್ಬರನ್ನು ಒಳಗೊಳ್ಳುತ್ತದೆ.
  • ನೋಂದಣಿಯ ಸ್ವಯಂಚಾಲಿತ ಮುಕ್ತಾಯ:-
    • ಕಾರ್ಯವಿಧಾನ:- ಹೊಸ ನಿಯಮಗಳ ಅಡಿಯಲ್ಲಿ, FCRA ನೋಂದಣಿಯ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ ಅಥವಾ ನವೀಕರಣ ಕೋರಿಕೆಯನ್ನು ತಿರಸ್ಕರಿಸಿದರೆ, ನೋಂದಣಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
    • ಕಟ್ಟುನಿಟ್ಟಾದ ಕಾಲಮಿತಿ:- ಸಂಸ್ಥೆಗಳು ತಾವು ಸ್ವೀಕರಿಸುವ ವಿದೇಶಿ ಹಣವನ್ನು ಎಷ್ಟು ಬೇಗನೆ ಬಳಸಿಕೊಳ್ಳಬೇಕು ಎಂಬುದಕ್ಕೆ ಈ ಮಸೂದೆಯು ನಿಗದಿತ ಕಾಲಮಿತಿಗಳನ್ನು ನಿಗದಿಪಡಿಸುತ್ತದೆ.
  • ತನಿಖೆ ಮತ್ತು ದಂಡನೆಗಳ ಕುರಿತಾದ ಬದಲಾವಣೆಗಳು:-
    • ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ:- FCRA-ಸಂಬಂಧಿತ ದೂರಿನ ಮೇಲೆ ತನಿಖೆಯನ್ನು ಪ್ರಾರಂಭಿಸುವ ಮೊದಲು ಸ್ಥಳೀಯ ಪೊಲೀಸ್ ಅಥವಾ ರಾಜ್ಯ ತನಿಖಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು.
    • ಜೈಲು ಶಿಕ್ಷೆಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಲಾಗಿದೆ:- FCRA ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ದಂಡದ ನಿಯಮಗಳು ಹಾಗೆಯೇ ಮುಂದುವರಿಯಲಿದ್ದು, ನೀಡಲಾಗುವ ಗರಿಷ್ಠ ಜೈಲು ಶಿಕ್ಷೆಯನ್ನು ಇಳಿಸಲಾಗಿದೆ.

ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಭಾರತದ ಸಂಸತ್ತು ‘ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (ತಿದ್ದುಪಡಿ) ಮಸೂದೆ, 2026’ (IBC Bill, 2026) ಅನ್ನು ಅಂಗೀಕರಿಸಿದೆ.

ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (IBC), 2016 ರ ಬಗ್ಗೆ:

  • ಕಂಪನಿಗಳು ಮತ್ತು ವ್ಯಕ್ತಿಗಳು ಎದುರಿಸುವ ದಿವಾಳಿ ಸಮಸ್ಯೆಗಳನ್ನು ಬಗೆಹರಿಸಲು ಈ ಸಂಹಿತೆಯು ಕಟ್ಟುನಿಟ್ಟಾದ ಹಾಗೂ ನಿಗದಿತ ಕಾಲಮಿತಿಯ ಕಾನೂನು ಪ್ರಕ್ರಿಯೆಯನ್ನು ಒದಗಿಸುತ್ತದೆ.
  • ದಿವಾಳಿತನ (Insolvency) ಎಂದರೇನು?
  • ವ್ಯಕ್ತಿಗಳು ಅಥವಾ ಕಂಪನಿಗಳು ತಾವು ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ‘ಆರ್ಥಿಕ ಪರಿಸ್ಥಿತಿ’ಯನ್ನು ದಿವಾಳಿತನ ಎಂದು ಕರೆಯಲಾಗುತ್ತದೆ.
  • ದಿವಾಳಿಕೊರತನ (Bankruptcy) ಎಂದರೇನು?
  • ಸಕ್ಷಮ ನ್ಯಾಯಾಲಯವು ವ್ಯಕ್ತಿ ಅಥವಾ ಸಂಸ್ಥೆಯನ್ನು ‘ದಿವಾಳಿ’ ಎಂದು ಅಧಿಕೃತವಾಗಿ ಘೋಷಿಸುವ ಹಾಗೂ ಸಾಲದಾತರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಆದೇಶಗಳನ್ನು ನೀಡುವ ‘ಕಾನೂನಾತ್ಮಕ ಪ್ರಕ್ರಿಯೆ‘ಯೇ ದಿವಾಳಿಕೊರತನವಾಗಿದೆ. ಅಂದರೆ, ಸಾಲ ತೀರಿಸಲಾಗದ ಅಸಹಾಯಕ ಸ್ಥಿತಿಯ ಕಾನೂನುಬದ್ಧ ಘೋಷಣೆ ಇದಾಗಿದೆ.
  • ಪ್ರಮುಖ ಗುರಿಗಳು:- 
    1. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು.
  • ಕಾರ್ಪೊರೇಟ್ ದಿವಾಳಿತನ ಇತ್ಯರ್ಥ ಪ್ರಕ್ರಿಯೆಯನ್ನು ಸುಗಮಗೊಳಿಸುವುದು.
  • ಅಂತಿಮ ಹಂತದ ಹಣಕಾಸು ನೆರವನ್ನು ರಕ್ಷಿಸುವುದು.
  • ನ್ಯಾಯನಿರ್ಣಯ ಪ್ರಾಧಿಕಾರಗಳು:-
  • ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಕಂಪನಿಗಳು ಮತ್ತು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳಿಗೆ (LLPs) ನ್ಯಾಯನಿರ್ಣಯ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
  • ಸಾಲ ವಸೂಲಾತಿ ನ್ಯಾಯಮಂಡಳಿಯು (DRT), ವ್ಯಕ್ತಿಗಳು ಮತ್ತು ಪಾಲುದಾರಿಕಾ ಸಂಸ್ಥೆಗಳ ಪ್ರಕರಣಗಳನ್ನು ನಿರ್ವಹಿಸುತ್ತದೆ.

IBC(ತಿದ್ದುಪಡಿ) ಮಸೂದೆ, 2026 ರ ಪ್ರಮುಖ ಲಕ್ಷಣಗಳು:

  • 30 ದಿನಗಳೊಳಗೆ NCLT ಕಂಪನಿಯ ಆಸ್ತಿಗಳ ನಗದೀಕರಣ ಆದೇಶವನ್ನು ಹೊರಡಿಸಬೇಕು:- ಅರ್ಜಿಯನ್ನು ಸಲ್ಲಿಸಿದ ಅಥವಾ ಮಾಹಿತಿ ನೀಡಿದ ದಿನಾಂಕದಿಂದ ಕಡ್ಡಾಯವಾಗಿ ಆದೇಶವನ್ನು ಹೊರಡಿಸಬೇಕು.
  • ಈ ಸಮಾಪನಾ/ಆಸ್ತಿಗಳ ನಗದೀಕರಣ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ 180 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಅತ್ಯಗತ್ಯವಿದ್ದಲ್ಲಿ ಇದನ್ನು ಗರಿಷ್ಠ 90 ದಿನಗಳವರೆಗೆ ಮಾತ್ರ ವಿಸ್ತರಿಸಬಹುದು ಎಂದು ಮಸೂದೆ ಸ್ಪಷ್ಟಪಡಿಸುತ್ತದೆ.
  • ಕಡ್ಡಾಯ ಅಂಗೀಕಾರ:- ಸಾಲ ಮರುಪಾವತಿಯಲ್ಲಿನ ‘ಸುಸ್ತಿದಾರಿಕೆ’ ಸಾಬೀತಾದರೆ ಮತ್ತು ಅರ್ಜಿಯು ಸಂಪೂರ್ಣವಾಗಿದ್ದರೆ, NCLT 14 ದಿನಗಳೊಳಗೆ ದಿವಾಳಿತನದ ಅರ್ಜಿಯನ್ನು ಕಡ್ಡಾಯವಾಗಿ ಅಂಗೀಕರಿಸಬೇಕು. ಇದು ಈ ಕಾಲಮಿತಿಯ ವಿಚಾರದಲ್ಲಿ ನ್ಯಾಯಾಂಗದ ವಿವೇಚನಾಧಿಕಾರವನ್ನು ತೆಗೆದುಹಾಕುತ್ತದೆ.
  • ಗಡಿಯಾಚೆಗಿನ ದಿವಾಳಿತನ:- ವಿದೇಶಿ ಆಸ್ತಿಗಳು ಅಥವಾ ವಿದೇಶಿ ಸಾಲದಾತರನ್ನು ಒಳಗೊಂಡಿರುವ ದಿವಾಳಿತನ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಈ ಮಸೂದೆಯು ಹೊಸ ಕಾನೂನು ಚೌಕಟ್ಟೊಂದನ್ನು ಪರಿಚಯಿಸುತ್ತದೆ.

ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ

ಆರೋಗ್ಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಜಪಾನಿನ ‘ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ’ ಅಭಿವೃದ್ಧಿಪಡಿಸಿದ ‘ಕ್ಯೂಡೆಂಗಾ’ (Qdenga) ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಅನುಮೋದನೆ ನೀಡಿದೆ.
  • ಇದು 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳ ಬಳಕೆಗೆ ಮಂಜೂರಾತಿಯನ್ನು ಪಡೆದುಕೊಂಡಿದೆ.

ಕ್ಯೂಡೆಂಗಾ (TAK-003) ಡೆಂಗ್ಯೂ ಲಸಿಕೆಯ ಬಗ್ಗೆ:

  • ಜೀವಂತ-ದೌರ್ಬಲ್ಯಗೊಳಿಸಿದ (ಲೈವ್-ಅಟೆನ್ಯುವೇಟೆಡ್) ಮತ್ತು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಲಸಿಕೆಯಾಗಿದೆ:- ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಡೆಂಗ್ಯೂ ವೈರಾಣುವಿನ ಎಲ್ಲಾ 4 ರೂಪಾoತರಗಳ (Serotypes – DENV-1, DENV-2, DENV-3, ಮತ್ತು DENV-4) ದುರ್ಬಲಗೊಂಡ ರೂಪಗಳನ್ನು ಒಳಗೊಂಡಿದೆ.

‘ಡೆಂಗಿಆಲ್’ (DengiAll):- ಭಾರತದ ಮೊಟ್ಟಮೊದಲ ದೇಶೀಯ ಡೆಂಗ್ಯೂ ಲಸಿಕೆ

  • ಸಂಪೂರ್ಣ ದೇಶೀಯವಾಗಿ ತಯಾರಾಗುತ್ತಿರುವ, ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಮತ್ತು ಒಂದೇ ಬಾರಿ ನೀಡುವ ಡೆಂಗ್ಯೂ ಲಸಿಕೆಯಾಗಿದೆ.
  • ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ‘ಪನಾಸಿಯಾ ಬಯೋಟೆಕ್’ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ.
  • ಇದು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಇದು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳಲ್ಲಿದೆ.

‘ಡೆಂಗ್ಯೂ’ ಸೋಂಕಿನ ಬಗ್ಗೆ:

  • ರೋಗಕಾರಕ:- ಡೆಂಗ್ಯೂ ಎಂಬುದು ಡೆಂಗ್ಯೂ ವೈರಾಣುವಿನಿಂದ (DENV) ಉಂಟಾಗುವ ವೈರಾಣು ಸೋಂಕಾಗಿದೆ. 
  • ಈ ಡೆಂಗ್ಯೂ ವೈರಾಣು ‘ಫ್ಲಾವಿವಿರಿಡೆ’ ಕುಟುಂಬಕ್ಕೆ ಸೇರಿದ RNA ವೈರಾಣು ಆಗಿದ್ದು, ಎಲ್ಲಾ 4 ರೂಪಾoತರಗಳನ್ನು (DENV-1 ರಿಂದ 4 ರವರೆಗೆ) ಹೊಂದಿದೆ.
  • ರೋಗಲಕ್ಷಣಗಳು:- ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ, ಊದಿಕೊಂಡ ಗ್ರಂಥಿಗಳು ಮತ್ತು ಚರ್ಮದ ಮೇಲಿನ ದದ್ದುಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
  • ಮನುಷ್ಯರಿಗೆ ಹರಡುವಿಕೆ:- ಸೋಂಕಿತ ಹೆಣ್ಣು ಸೊಳ್ಳೆಗಳ, ಅದರಲ್ಲೂ ಪ್ರಾಥಮಿಕವಾಗಿ ‘ಈಡಿಸ್ ಈಜಿಪ್ಟೈ’ ಸೊಳ್ಳೆಯ ಕಚ್ಚುವಿಕೆಯ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ.
  • ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಡೆಂಗ್ಯೂ ಹರಡುವ (ಮ್ಯಾಟರ್ನಲ್ ಟ್ರಾನ್ಸ್‌ಮಿಷನ್) ಸಾಧ್ಯತೆಯಿದೆ. ಜೊತೆಗೆ, ರಕ್ತದ ಉತ್ಪನ್ನಗಳು, ಅಂಗಾಂಗ ದಾನ ಮತ್ತು ರಕ್ತ ವರ್ಗಾವಣೆಯ ಮೂಲಕವೂ ಈ ಸೋಂಕು ಹರಡಬಹುದಾಗಿದೆ.
  • ಯಾವುದೇ ನಿರ್ದಿಷ್ಟವಾದ ವೈರಣು ವಿರೋಧಿ ಚಿಕಿತ್ಸೆ ಇಲ್ಲ:- ಆದ್ದರಿಂದ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಪ್ರಮುಖ ತಡೆಗಟ್ಟುವಿಕೆಯ ವಿಧಾನವಾಗಿದೆ.
  • ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಸೊಳ್ಳೆ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಈ ರೋಗದಿಂದ ಪಾರಾಗಲು ಇರುವ ಅತ್ಯುತ್ತಮ ಮಾರ್ಗವಾಗಿದೆ.

“GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ

ಆರೋಗ್ಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಭಾರತೀಯ ಮಾರುಕಟ್ಟೆಯಲ್ಲಿ GLP-1 ಔಷಧಿಗಳ ಬಹು ರೂಪಾoತರಗಳನ್ನು ಪರಿಚಯಿಸಲಾಗಿದ್ದು, ಅವುಗಳ ಮಿತಿಮೀರಿದ ಬೇಡಿಕೆ ಹಾಗೂ ಲಭ್ಯತೆಯ ಕುರಿತು ತೀವ್ರ ಕಳವಳಗಳು ವ್ಯಕ್ತವಾಗಿವೆ.
  • GLP-1 ಔಷಧಿಯನ್ನು 2005 ರಲ್ಲಿ ಅಮೆರಿಕದ ‘ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ’ (US FDA) ಅನುಮೋದಿಸಿದೆ.

GLP-1 ಔಷಧಿಗಳು:

  • ಗ್ಲುಕಗನ್-ಸಮಾನ ಪೆಪ್ಟೈಡ್-1 ಗ್ರಾಹಕ ಉತ್ತೇಜಕಗಳು (Glucagon-like peptide-1 receptor agonists) ಎಂಬುದು ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸುವ ಮೂಲಕ ಟೈಪ್-2 ಮಧುಮೇಹ ಮತ್ತು ಬೊಜ್ಜು ಎರಡಕ್ಕೂ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಔಷಧಿಗಳಾಗಿವೆ.
  • ರೋಗಿಗಳ ಹಸಿವನ್ನು ತಗ್ಗಿಸುತ್ತದೆ:- ಈ ಔಷಧಿಗಳು ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಈ ಮೂಲಕ ರೋಗಿಗಳಲ್ಲಿ ಹೊಟ್ಟೆ ತುಂಬಿರುವ ಭಾವನೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ತ್ವರಿತ ತೂಕ ಇಳಿಕೆಗೆ ಕಾರಣವಾಗುತ್ತದೆ.
  • GLP-1 ಪೂರೈಕೆ ಸರಪಳಿಯಲ್ಲಿ ನೈತಿಕ ಔಷಧೀಯ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಈ ಔಷಧಿಯ ಅನಧಿಕೃತ ಮಾರಾಟ ಮತ್ತು ಪ್ರಚಾರದ ವಿರುದ್ಧ ತನ್ನ ನಿಯಂತ್ರಣಾತ್ಮಕ ಕಣ್ಗಾವಲನ್ನು ತೀವ್ರಗೊಳಿಸಿದೆ.
  • ಭಾರತದಲ್ಲಿ, ಈ ಔಷಧಿಯನ್ನು ಕೇವಲ ಅಂತಃಸ್ರಾವಕಶಾಸ್ತ್ರಜ್ಞರು, ಆಂತರಿಕ ಔಷಧ ತಜ್ಞರು ಮತ್ತು ಹೃದ್ರೋಗ ತಜ್ಞರು ಮಾತ್ರ ಅಧಿಕೃತವಾಗಿ ಶಿಫಾರಸು ಮಾಡಬಹುದಾಗಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯ ಬಗ್ಗೆ:

    • ಇದು ಭಾರತದ ಪ್ರಮುಖ ಕೇಂದ್ರೀಯ ಔಷಧ ಪ್ರಾಧಿಕಾರವಾಗಿದ್ದು, ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ರ ಅಡಿಯಲ್ಲಿ ವಹಿಸಲಾದ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
    • ಪ್ರಮುಖ ಜವಾಬ್ದಾರಿಗಳು:
  • ಹೊಸ ಔಷಧಿಗಳ ಅಳವಡಿಕೆ ಮತ್ತು ಮಂಜೂರಾತಿ.
  • ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳ ಕಟ್ಟುನಿಟ್ಟಿನ ನಿಯಂತ್ರಣ.
  • ಔಷಧಿಗಳ ಗುಣಮಟ್ಟದ ಮಾನದಂಡಗಳನ್ನು ರೂಪಿಸುವುದು.
  • ದೇಶಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳ ಗುಣಮಟ್ಟದ ಮೇಲೆ ನಿಗಾ ಹಾಗೂ ನಿಯಂತ್ರಣ ಸಾಧಿಸುವುದು.
  • ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳ ಕಾರ್ಯಗಳ ನಡುವೆ ಸೂಕ್ತ ಸಮನ್ವಯ ಸಾಧಿಸುವುದು.

ಭಾರತದ ಇತರ ಔಷಧ ನಿಯಂತ್ರಣ ಸಂಸ್ಥೆಗಳು:

  • ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI):- ನಿರ್ದಿಷ್ಟ ರೀತಿಯ ಔಷಧಿಗಳಿಗೆ ಪರವಾನಗಿಗಳನ್ನು ಅನುಮೋದಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಇದರ ಮಹಾನಿರ್ದೇಶಕರು ಭಾರತ ಸರ್ಕಾರದ CDSCO ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಾರೆ.
  • ಔಷಧ ಬೆಲೆ ನಿಯಂತ್ರಣ ಆದೇಶ (DPCO):- ಭಾರತದಲ್ಲಿ ಜನಸಾಮಾನ್ಯರಿಗೆ ಅಗತ್ಯವಾದ ಕೆಲವು ಜೀವನ್ಯಾವಶ್ಯಕ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು, DPCO ಆ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತದೆ.
  • ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940:- ಈ ಕಾನೂನು ದೇಶೀಯ ಔಷಧಗಳ ಉತ್ಪಾದನೆ, ಬಳಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.

ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G)

ಯೋಜನೆಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತದ ಪ್ರಮುಖ ಗ್ರಾಮೀಣ ವಸತಿ ಯೋಜನೆಯಾದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ’ (PMAY-G) 2026 ರಲ್ಲಿ ತನ್ನ ಅನುಷ್ಠಾನದ 10 ವರ್ಷಗಳನ್ನು ಪೂರೈಸಿದೆ.

ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) ಯೋಜನೆಯ ಬಗ್ಗೆ:

  • ಗುರಿ:- ಗ್ರಾಮೀಣ ಪ್ರದೇಶಗಳಲ್ಲಿ “ಎಲ್ಲರಿಗೂ ವಸತಿ” ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
  • ಉದ್ದೇಶ:- ವಸತಿ ರಹಿತ ಕುಟುಂಬಗಳು ಹಾಗೂ ಶೂನ್ಯ, ಒಂದು ಅಥವಾ ಎರಡು ಕೋಣೆಗಳ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಅರ್ಹ ಗ್ರಾಮೀಣ ಕುಟುಂಬಗಳಿಗೆ ಮೂಲಸೌಕರ್ಯಗಳೊಂದಿಗೆ ‘ಪಕ್ಕಾ ಮನೆ’ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದನ್ನು ಇದು ಒಳಗೊಂಡಿದೆ.
  • ಫಲಾನುಭವಿಗಳ ಆಯ್ಕೆ:- 2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ (SECC) ವಸತಿ ಅಭಾವದ ಮಾನದಂಡಗಳನ್ನು ಬಳಸಿ, ಗ್ರಾಮಸಭೆಗಳ ಪರಿಶೀಲನೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
  • ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ:-
  1. ಬಯಲು ಸೀಮೆಯ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು 60:40
  2. ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಲ್ಲಿ ಇದು 90:10 ಅನುಪಾತದಲ್ಲಿರುತ್ತದೆ.
  • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD).
  • ಆರ್ಥಿಕ ನೆರವು ಪಡೆದುಕೊಳ್ಳುವ ಫಲಾನುಭವಿಗಳ,  
  1. ಮನೆಯ ಕನಿಷ್ಠ ವಿಸ್ತೀರ್ಣವು 25 ಚದರ ಮೀಟರ್ ಇರಬೇಕು.
  2. ಬಯಲು ಪ್ರದೇಶಗಳಲ್ಲಿ ₹1.20 ಲಕ್ಷ ಹಾಗೂ ಗುಡ್ಡಗಾಡು/ಈಶಾನ್ಯ ರಾಜ್ಯಗಳಲ್ಲಿ ₹1.30 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ.
  • ಸ್ವಚ್ಛ ಭಾರತ ಅಭಿಯಾನದೊಂದಿಗೆ ಸಂಯೋಜನೆಗೊಳ್ಳುವ ಮೂಲಕ ಶೌಚಾಲಯ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ₹12,000 ಗಳನ್ನು ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿನ ಸುಧಾರಣೆಗಳು:

  • ನೇರ ನಗದು ವರ್ಗಾವಣೆ (DBT):- ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
  • ಜಿಯೋ-ಟ್ಯಾಗಿಂಗ್:- ನೈಜ-ಸಮಯದ ಮೇಲ್ವಿಚಾರಣೆಗಾಗಿ, ಮನೆ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ದಿನಾಂಕ ಮತ್ತು ಸಮಯದ ಮುದ್ರೆಯಿರುವ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.
  • ಕೃತಕ ಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ:- ಅಕ್ರಮಗಳನ್ನು ಪತ್ತೆಹಚ್ಚಲು ‘ಕೃತಕ ಬುದ್ಧಿಮತ್ತೆ’ (AI) ಮತ್ತು ‘ಯಂತ್ರ ಕಲಿಕೆ’ (ML) ಸಾಧನಗಳನ್ನು ಬಳಸಲಾಗುತ್ತದೆ. ವಂಚನೆಯನ್ನು ತಡೆಗಟ್ಟಲು ಮತ್ತು ಫಲಾನುಭವಿಗಳನ್ನು ದೃಢೀಕರಿಸಲು, ಕಣ್ಣು ಮಿಟುಕಿಸುವಿಕೆಯನ್ನು ಒಳಗೊಂಡ ‘ಆಧಾರ್ ಮುಖ ದೃಢೀಕರಣ’ವನ್ನು ಅಳವಡಿಸಿಕೊಳ್ಳಲಾಗಿದೆ.
  • ಗ್ರಾಮ ಮಟ್ಟದ ಕಾರ್ಯಕರ್ತರು:- ಮಂಜೂರಾದ ಪ್ರತಿಯೊಂದು ಮನೆಯನ್ನು ಸ್ಥಳೀಯ ಕಾರ್ಯಕರ್ತರಿಗೆ ಟ್ಯಾಗ್ ಮಾಡಲಾಗಿರುತ್ತದೆ. ಇವರು ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುತ್ತಾರೆ.
  • ಸಾಮಾಜಿಕ ಲೆಕ್ಕಪರಿಶೋಧನೆ:- ಪ್ರತಿಯೊಂದು ಗ್ರಾಮ ಪಂಚಾಯಿತಿಯು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಡ್ಡಾಯವಾಗಿ ಅಧಿಕೃತ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸುತ್ತದೆ.

ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಭಾರತದ ಸಂಸತ್ತು ಏಪ್ರಿಲ್ 2, 2026 ರಂದು ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026’ ಅನ್ನು ಅಂಗೀಕರಿಸಿದೆ.
  • ಈ ಶಾಸನವು ಮೂಲ ಜನ್ ವಿಶ್ವಾಸ್ ಕಾಯ್ದೆ, 2023 ರ ಮುಂದುವರಿದ ಭಾಗವಾಗಿದ್ದು, ಸರ್ಕಾರದ ಅಪರಾಧೀಕರಣ ರದ್ದತಿ ಉಪಕ್ರಮದ ಮಹತ್ವದ ವಿಸ್ತರಣೆಯಾಗಿದೆ.

ಜನ್ ವಿಶ್ವಾಸ್ ಕಾಯ್ದೆ, 2023:

  • ಉದ್ದೇಶ:- ದಂಡನಾತ್ಮಕ ಆಡಳಿತ ಮಾದರಿಯಿಂದ ವಿಶ್ವಾಸ-ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ‘ಸುಗಮ ವ್ಯವಹಾರ’ (Ease of Doing Business) ಮತ್ತು ‘ಸುಗಮ ಜೀವನ’ವನ್ನು (Ease of Living) ಹೆಚ್ಚಿಸುವ ಉದ್ದೇಶ.
  • ಅಪರಾಧೀಕರಣ ರದ್ದತಿ:- ಇದು 79 ಕೇಂದ್ರ ಕಾಯ್ದೆಗಳ ಅಡಿಯಲ್ಲಿನ 717 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸುತ್ತದೆ.
  • ವ್ಯಾಪ್ತಿ:- ಒಟ್ಟಾರೆಯಾಗಿ, ಈ ಮಸೂದೆಯು 23 ವಿವಿಧ ಸಚಿವಾಲಯಗಳು ನಿರ್ವಹಿಸುವ 784 ನಿಬಂಧನೆಗಳನ್ನು ತಿದ್ದುಪಡಿ ಮಾಡುತ್ತದೆ.
  • 1,000 ಕ್ಕೂ ಹೆಚ್ಚು ಸಣ್ಣಪುಟ್ಟ ಅಪರಾಧಗಳ ತರ್ಕಬದ್ಧಗೊಳಿಸಲಾಗಿದೆ:- ಇವುಗಳನ್ನು ಅಪರಾಧಿ ಜೈಲು ಶಿಕ್ಷೆಯಿಂದ ನಾಗರೀಕ ದಂಡಗಳು, ಆಡಳಿತಾತ್ಮಕ ದಂಡಗಳು ಅಥವಾ ಎಚ್ಚರಿಕೆಗಳಿಗೆ ಬದಲಾಯಿಸಲಾಗಿದೆ.

ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026:

  • ನ್ಯಾಯನಿರ್ಣಯ ಅಧಿಕಾರಿಗಳ ನೇಮಕ:- ವಿಚಾರಣೆಗಳನ್ನು ನಡೆಸಲು ಮತ್ತು ದಂಡವನ್ನು ನಿರ್ಧರಿಸಲು ನೇಮಿಸಲಾಗುತ್ತದೆ.
  • ಮೇಲ್ಮನವಿ ಪ್ರಾಧಿಕಾರಗಳ ನೇಮಕ:- ಮೇಲ್ಮನವಿಗಳನ್ನು ಆಲಿಸಲು ನೇಮಿಸಲಾಗುತ್ತದೆ. ಈ ಮೂಲಕ ನ್ಯಾಯಾಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
  • ಹಂತ-ಹಂತದ ಪ್ರತಿಕ್ರಿಯೆ:- ಮೊದಲ ಬಾರಿಯ ಅಥವಾ ಸಣ್ಣಪುಟ್ಟ ತಪ್ಪುಗಳಿಗಾಗಿ, ಈ ಮಸೂದೆಯು “ಮೊದಲು-ಎಚ್ಚರಿಕೆ” ತತ್ವಗಳನ್ನು ಪರಿಚಯಿಸುತ್ತದೆ.
  • ಕ್ರಿಯಾತ್ಮಕ ದಂಡಗಳು:- ದಂಡದ ಭಯವನ್ನು ಕಾಯ್ದುಕೊಳ್ಳಲು, ಹೆಚ್ಚಿನ ದಂಡಗಳು ಮತ್ತು ಶಿಕ್ಷೆಗಳಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ 10% ರಷ್ಟು ಹೆಚ್ಚಳ ಮಾಡಲಾಗುತ್ತದೆ.
  • ಈ ಮಸೂದೆಯ ಮೂಲಕ ತಿದ್ದುಪಡಿಗೊಂಡ ಪ್ರಮುಖ ಕಾಯ್ದೆಗಳು:- 
  1. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934
  2. ಮೋಟಾರು ವಾಹನಗಳ ಕಾಯ್ದೆ-1988
  3. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ-2006

ಅಮೋನಿಯಂ ನೈಟ್ರೇಟ್

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ‘ಭಾರತ ಕೋಲ್ ಗ್ಯಾಸಿಫಿಕೇಶನ್ ಅಂಡ್ ಕೆಮಿಕಲ್ಸ್ ಲಿಮಿಟೆಡ್’ ಮತ್ತು ‘ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್’ ಕಲ್ಲಿದ್ದಲಿನಿಂದ ಅಮೋನಿಯಂ ನೈಟ್ರೇಟ್ ಉತ್ಪಾದಿಸುವ ಯೋಜನೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಅಮೋನಿಯಂ ನೈಟ್ರೇಟ್ ಕುರಿತು:

  • ಬಿಳಿ ಬಣ್ಣದ, ಹರಳುರೂಪದ ಮತ್ತು ನೀರಿನಲ್ಲಿ ಕರಗುವ ಘನ ವಸ್ತುವಾಗಿದೆ:- ಇದು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. 
  • ಕೃತಕವಾಗಿ ಉತ್ಪಾದಿಸಲಾಗುತ್ತದೆ:- ಅಮೋನಿಯಾವನ್ನು ನೈಟ್ರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸುವ ಮೂಲಕ ಇದನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ.
  • ತೇವಾಂಶವನ್ನು ಹೀರಿಕೊಳ್ಳುವ ಗುಣಲಕ್ಷಣವನ್ನು ಹೊಂದಿದೆ:- ಹೆಚ್ಚಿನ ಶಾಖಕ್ಕೆ ಒಳಪಟ್ಟಾಗ, ಇದು ಸ್ಫೋಟಕವಾಗಿ ವಿಭಜನೆಗೊಂಡು ‘ಸಾರಜನಕ ಡೈಆಕ್ಸೈಡ್’ (NO₂) ಅನ್ನು ಬಿಡುಗಡೆ ಮಾಡುತ್ತದೆ.
  • ಉದಾಹರಣೆ:- 2015 ರ ಟಿಯಾಂಜಿನ್ (ಚೀನಾ) ಸ್ಫೋಟ ಮತ್ತು 2020 ರ ಬೈರುತ್ ಬಂದರು ಸ್ಫೋಟ.
  • ರಸಗೊಬ್ಬರವಾಗಿ ಮತ್ತು ಕೈಗಾರಿಕಾ ಸ್ಫೋಟಕವಾಗಿ ಬಳಕೆ:- ಇದು ಪ್ರಪಂಚದಾದ್ಯಂತ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳಲ್ಲಿ ಒಂದಾಗಿದೆ.
  • ಇದನ್ನು ‘ಅಪಾಯಕಾರಿ ರಾಸಾಯನಿಕಗಳ ನಿಯಮಗಳು, 1989’ರ ಅಡಿಯಲ್ಲಿ ಅಪಾಯಕಾರಿ ರಾಸಾಯನಿಕವೆಂದು ಪಟ್ಟಿ ಮಾಡಲಾಗಿದೆ.

E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ‘E-3 ಸೆಂಟ್ರಿ ಅವಾಕ್ಸ್’ ವಿಮಾನವು ನಾಶವಾಗಿದೆ ಎಂದು ವರದಿಯಾಗಿದೆ.

‘E-3 ಸೆಂಟ್ರಿ ಅವಾಕ್ಸ್’ನ ಬಗ್ಗೆ:

  • ಸುಧಾರಿತ ಕಣ್ಗಾವಲು ಮತ್ತು ಯುದ್ಧ ನಿರ್ವಹಣೆ ವಿಮಾನವಾಗಿದೆ:- ಬೋಯಿಂಗ್ ಸಂಸ್ಥೆಯು ಅಭಿವೃದ್ಧಿಪಡಿಸಿದ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆಯ (AWACS) ವಿಮಾನವಾಗಿದೆ.
  • ಈ ವಿಮಾನವನ್ನು ಸಾಮಾನ್ಯವಾಗಿ ‘ಅವಾಕ್ಸ್’ (AWACS) ಎಂದು ಕರೆಯಲಾಗುತ್ತದೆ. ಇದರ ವಿಸ್ತೃತ ರೂಪ ‘ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್’ (Airborne Warning and Control System).
  • ಇದು ತನ್ನ ಮೇಲ್ಭಾಗದಲ್ಲಿ ಅಳವಡಿಸಲಾದ ವಿಶಿಷ್ಟವಾದ ತಿರುಗುವ ರೇಡಾರ್ ಗುಮ್ಮಟವನ್ನು ಹೊಂದಿದ್ದು, ಇದು ವೈರಿಗಳ ವಾಯು ಗುರಿಗಳನ್ನು ಬಹುದೂರದಿಂದಲೇ ಪತ್ತೆಹಚ್ಚುವ ಮತ್ತು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿನ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS in India):

  • ಭಾರತೀಯ ವಾಯುಪಡೆಯು (IAF) ರಷ್ಯಾದ ಇಲ್ಯುಶಿನ್ Il-76 ಸಾರಿಗೆ ವಿಮಾನದ ಮೇಲೆ ಅಳವಡಿಸಲಾಗಿರುವ ಇಸ್ರೇಲ್ ಮೂಲದ 3 ಫಾಲ್ಕನ್ (Phalcon) ಅವಾಕ್ಸ್ (AWACS) ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ.
  • “ಆಕಾಶದ ಕಣ್ಣುಗಳು” (Eyes in the sky) ಎಂದು ಕರೆಯಲ್ಪಡುವ ಈ ವ್ಯವಸ್ಥೆಗಳು 360-ಡಿಗ್ರಿ ರೇಡಾರ್ ವ್ಯಾಪ್ತಿಯನ್ನು ಒದಗಿಸುತ್ತವೆ ಮತ್ತು 370-500 ಕಿ.ಮೀ. ವ್ಯಾಪ್ತಿಯಲ್ಲಿರುವ ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.
  • ನೇತ್ರಾ (NETRA) ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ (AEW&C) ವ್ಯವಸ್ಥೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಸಂಪೂರ್ಣ ದೇಶೀಯ, ಬಹು-ಸಂವೇದಕ ವೇದಿಕೆಯಾಗಿದೆ. ಇದನ್ನು ಪ್ರಾಥಮಿಕವಾಗಿ ವಾಯು ಕಣ್ಗಾವಲು, ಗುರಿ ಗುರುತಿಸುವಿಕೆ ಮತ್ತು ಕಮಾಂಡ್-ಮತ್ತು-ನಿಯಂತ್ರಣ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
  • ಈ ‘ನೇತ್ರಾ’ ವ್ಯವಸ್ಥೆಯು ಬ್ರೆಜಿಲ್‌ನ ಎಂಬ್ರೇಯರ್ ERJ 145 ವಿಮಾನವನ್ನು ಆಧರಿಸಿದೆ.

ರೈಸ್‌ನ ತಿಮಿಂಗಿಲ (Rice’s Whale)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಅಮೆರಿಕವು ತೈಲ ಮತ್ತು ಅನಿಲ ಕೊರೆಯುವ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವುದು ‘ರೈಸ್ಸ್ ವೇಲ್’ (Rice Whale) ಎಂಬ ತಿಮಿಂಗಿಲ ಪ್ರಭೇದವನ್ನು ಸಂಪೂರ್ಣ ಅಳಿವಿನಂಚಿಗೆ ತಳ್ಳುವ ಆತಂಕವನ್ನು ಸೃಷ್ಟಿಸಿದೆ.

ರೈಸ್ಸ್ ವೇಲ್ ತಿಮಿಂಗಿಲದ ಕುರಿತು:

  • ಈ ತಿಮಿಂಗಿಲವು ‘ಬಲನೋಪ್ಟೆರಿಡೆ’ (Balaenopteridae) ಎಂಬ ‘ಬಲೀನ್ ತಿಮಿಂಗಿಲ’ ಕುಟುಂಬಕ್ಕೆ ಸೇರಿದೆ.
  • ಜಗತ್ತಿನ ಅತ್ಯಂತ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದಾಗಿದೆ:- ಪ್ರಪಂಚದಲ್ಲಿ ಕೇವಲ 100 ಕ್ಕಿಂತ ಕಡಿಮೆ ಸಂಖ್ಯೆಯ ಈ ತಿಮಿಂಗಿಲಗಳು ಉಳಿದುಕೊಂಡಿವೆ.
  • ಮೆಕ್ಸಿಕೋ ಕೊಲ್ಲಿಯ ಉತ್ತರದ ಭಾಗಕ್ಕೆ ಮಾತ್ರ ಸೀಮಿತವಾದ ಸ್ಥಳೀಯ ಪ್ರಭೇದವಾಗಿದೆ:- ಇದು ಯಾವುದೇ ದೀರ್ಘಕಾಲಿಕ ವಲಸೆ ಕೈಗೊಳ್ಳದೆ ವರ್ಷಪೂರ್ತಿ ಇದೇ ಪ್ರದೇಶದಲ್ಲಿ ವಾಸಿಸುತ್ತದೆ.
  • ಇದು ಪ್ರಾಥಮಿಕವಾಗಿ ಸಣ್ಣ ಮೀನುಗಳು ಮತ್ತು ಸ್ಕ್ವಿಡ್‌ಗಳನ್ನು ತಿಂದು ಜೀವಿಸುತ್ತದೆ.
  • ಅಪಾಯಗಳು:- ಸಮುದ್ರದಲ್ಲಿನ ತೈಲ ಕೊರೆಯುವಿಕೆ, ಹಡಗುಗಳ ಡಿಕ್ಕಿ ಮತ್ತು ಹವಾಮಾನ ಬದಲಾವಣೆಯು ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಯಾಗಿವೆ.
  • IUCN ಕೆಂಪು ಪಟ್ಟಿಯಲ್ಲಿ:- ‘ತೀವ್ರ ಅಳಿವಿನಂಚಿನಲ್ಲಿರುವ’ ಪ್ರಭೇದವೆಂದು ವರ್ಗೀಕರಿಸಲಾಗಿದೆ.

ನಿಮಗಿದು ತಿಳಿದಿರಲಿ:

  • ಅಂತರರಾಷ್ಟ್ರೀಯ ತಿಮಿಂಗಿಲ ಆಯೋಗ (IWC):- ತಿಮಿಂಗಿಲ ಬೇಟೆಯನ್ನು ನಿರ್ವಹಿಸಲು ಮತ್ತು  ಅವುಗಳ ಸಂರಕ್ಷಣೆಗಾಗಿ 1946 ರಲ್ಲಿ ಜಾಗತಿಕ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
  • ಪ್ರಸ್ತುತ, ಈ ಆಯೋಗವು ಭಾರತ ಸೇರಿದಂತೆ 80 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts