RISE ಉಪಕ್ರಮ
ಸಾಮಾನ್ಯ ಅಧ್ಯಯನ-3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಐಐಟಿ ಖರಗ್ಪುರ “ಇಂಪ್ಯಾಕ್ಟ್ RISE” (R-ಸಂಶೋಧನೆ, I-ನಾವೀನ್ಯತೆ, S-ಕೌಶಲ್ಯ ಮತ್ತು E-ಉದ್ಯಮಶೀಲತೆ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.
RISE ಉಪಕ್ರಮದ ಬಗ್ಗೆ:
- ಧ್ಯೇಯೋದ್ದೇಶ:- ಈ ಉಪಕ್ರಮವು ಸಾಮಾಜಿಕ ಪರಿವರ್ತನೆಗಾಗಿ ಸುಸ್ಥಿರ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳ ಮೇಲೆ ಕೇಂದ್ರೀಕರಿಸುತ್ತದೆ.
- ನಾಲ್ಕು ಪ್ರಮುಖ ಆಧಾರಸ್ಥಂಭಗಳು:– ಈ ಯೋಜನೆಯು ಸಂಶೋಧನೆ, ನಾವೀನ್ಯತೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.
- ಮಹತ್ವ:- ಇದು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತದ ಹವಾಮಾನ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯನ್ನು ಒಳಗೊಂಡಿರುತ್ತದೆ.
ಆಪರೇಷನ್ ಪವನ್
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಶ್ರೀಲಂಕಾದಲ್ಲಿ ನಡೆದ ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಭಾರತೀಯ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಗೌರವ ನಮನ ಸಲ್ಲಿಸಿದರು.
‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಬಗ್ಗೆ:
- ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1987 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
- ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯ ಮತ್ತು ಸಿಂಹಳೀಯ ಬಹುಸಂಖ್ಯಾತ ಸರ್ಕಾರದ ನಡುವೆ ನಡೆಯುತ್ತಿದ್ದ ಅಂತರ್ಯುದ್ಧದ ವೇಳೆ, ಶಾಂತಿ ಸ್ಥಾಪನೆಗಾಗಿ ಭಾರತವು ತನ್ನ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF)ಯನ್ನು ನಿಯೋಜಿಸಿತ್ತು.
ಭಾರತದ ತೀವ್ರ ಕಳವಳಕ್ಕೆ ಕಾರಣಗಳು:
- ತಮಿಳುನಾಡಿನೊಂದಿಗೆ ತಮಿಳು ಸಮುದಾಯಕ್ಕಿದ್ದ ಜನಾಂಗೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ.
- ದ್ವೀಪರಾಷ್ಟ್ರದಲ್ಲಿ ಮಿತಿಮೀರುತ್ತಿದ್ದ ಹಿಂಸಾಚಾರ.
- ಭಾರತಕ್ಕೆ ನಿರಾಶ್ರಿತರ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವುದು.
|
ನಿಮಗಿದು ತಿಳಿದಿದೆಯೇ?
|







ನಿಮ್ಮದೊಂದು ಉತ್ತರ