ಲೇಖಕ: instakas

  • ಜಾಗತಿಕ ಅಪಾಯಗಳ ವರದಿ (GRR), 2026 – WEF | ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO | ‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ | ಕಾಶಿ-ತಮಿಳು ಸಂಗಮ | ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ | ಜಥಿಯಾ ದೇವಿ | ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ | ಕುರಿಂಜಿ ರಾಜ್‌ಕುಮಾರ್

    ಜಾಗತಿಕ ಅಪಾಯಗಳ ವರದಿ (GRR), 2026 – WEF

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ವಿಶ್ವ ಆರ್ಥಿಕ ವೇದಿಕೆಯು (WEF) ತನ್ನ 21ನೇ ಆವೃತ್ತಿಯ “ಜಾಗತಿಕ ಅಪಾಯಗಳ ವರದಿ, 2026” ಅನ್ನು ಬಿಡುಗಡೆ ಮಾಡಿದ್ದು, ಭೌಗೋಳಿಕ-ಆರ್ಥಿಕ ಮುಖಾಮುಖಿಗಳು ಪ್ರಮುಖ ರಾಷ್ಟ್ರಗಳಿಗೆ ಅತಿದೊಡ್ಡ ಅಪಾಯವನ್ನು ತಂದೊಡ್ಡಲಿವೆ ಎಂದು ಎಚ್ಚರಿಸಿದೆ.

    ಜಾಗತಿಕ ಅಪಾಯಗಳ ವರದಿ, 2026 ರ ಮುಖ್ಯಾಂಶಗಳು: 

    • ಭೌಗೋಳಿಕ-ಆರ್ಥಿಕ ಮುಖಾಮುಖಿ:- ಇದನ್ನು 2026 ರ ಪ್ರಮುಖ ಅಪಾಯವೆಂದು ಗುರುತಿಸಲಾಗಿದೆ. ಇದು ನಿರ್ಬಂಧ ಮತ್ತು ಸುಂಕಗಳ ಮೂಲಕ ವ್ಯಾಪಾರ, ಹಣಕಾಸು ಮತ್ತು ತಂತ್ರಜ್ಞಾನವನ್ನು “ಅಸ್ತ್ರವನ್ನಾಗಿ” ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಉದಾಹರಣೆಗೆ ಅಮೆರಿಕ ವಿಧಿಸಿದ ಸುಂಕಗಳು, ಚೀನಾದಿಂದ ನಿರ್ಣಾಯಕ ಖನಿಜಗಳ ನಿಷೇಧ ಇತ್ಯಾದಿ).
    • ರಾಷ್ಟ್ರ-ಆಧಾರಿತ ಸಶಸ್ತ್ರ ಸಂಘರ್ಷ:- ಇದು ಎರಡನೇ ಅತ್ಯುನ್ನತ ಅಪಾಯವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಂತಹ ಯುದ್ಧಗಳು ಮತ್ತು ವೆನೆಜುವೆಲಾ ಹಾಗೂ ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿನ ಇತ್ತೀಚಿನ ಅಸ್ಥಿರತೆಯು ಇದಕ್ಕೆ ಕಾರಣವಾಗಿದೆ.
    • ವೈಪರೀತ್ಯದ ಹವಾಮಾನ:- ಮುಂದಿನ ದಶಕದಲ್ಲಿ ಪರಿಸರ ಸಂಬಂಧಿ ಅಪಾಯಗಳು ಅಗ್ರ ಆದ್ಯತೆಯಾಗಿ ಉಳಿದಿದ್ದರೂ, ಆರ್ಥಿಕ ಮತ್ತು ಸೇನಾ ಸಂಘರ್ಷಗಳ ತುರ್ತು ಪರಿಸ್ಥಿತಿಯಿಂದಾಗಿ, ತಕ್ಷಣದ 2 ವರ್ಷಗಳ ಮುನ್ನೋಟದಲ್ಲಿ ಇವು ಮೂರನೇ ಸ್ಥಾನಕ್ಕೆ (8%) ಕುಸಿದಿವೆ.
    • ಸಾಮಾಜಿಕ ಅಪಾಯಗಳು:- ಧ್ರುವೀಕರಣ, ತಪ್ಪು ಮಾಹಿತಿ ಮತ್ತು ಎಐ ರಚಿತ ‘ಡೀಪ್‌ಫೇಕ್’ಗಳನ್ನು ಸಾಮಾಜಿಕ ಅಸ್ಥಿರತೆಗೆ, ವಿಶೇಷವಾಗಿ ಚುನಾವಣಾ ಸಮಯಗಳಲ್ಲಿ ಎದುರಾಗುವ ಪ್ರಮುಖ ಅಪಾಯಗಳೆಂದು ಉಲ್ಲೇಖಿಸಲಾಗಿದೆ.

    ಭಾರತಕ್ಕೆ ಎದುರಾಗಿರುವ ದೊಡ್ಡ ಅಪಾಯಗಳು:

    • ಸೈಬರ್ ಭದ್ರತೆ:- ಇದನ್ನು ಭಾರತಕ್ಕೆ ಎದುರಾಗಿರುವ ಅಗ್ರ ಅಪಾಯವೆಂದು ಪರಿಗಣಿಸಲಾಗಿದೆ ಮತ್ತು ಭಾರತವು ಡಿಜಿಟಲ್ ಪಾವತಿಗಳ ಕಡೆಗೆ ಹೆಚ್ಚು ವಾಲುತ್ತಿದೆ.
    • ಸಂಪತ್ತಿನ ಅಸಮಾನತೆ ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳು:- ಹೆಚ್ಚುತ್ತಿರುವ ಆದಾಯದ ಅಸಮಾನತೆಯೊಂದಿಗೆ ದೃಢವಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಕೊರತೆಯು ಆಂತರಿಕ ಸ್ಥಿರತೆಗೆ ಗಮನಾರ್ಹ ಅಪಾಯವನ್ನು ಒಡ್ಡುತ್ತದೆ.
    • ಆರ್ಥಿಕ ಬಾಹ್ಯ ಆಘಾತಗಳು:- ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ಸುಂಕಗಳಿಂದ ಉಂಟಾಗುವ ದೇಶೀಯ ಆರ್ಥಿಕ ಕುಸಿತಗಳಿಗೆ ಭಾರತವು ತುತ್ತಾಗುವ ಸಾಧ್ಯತೆಯಿದೆ.
    • ನಿರ್ಣಾಯಕ ಮೂಲಸೌಕರ್ಯ ಮತ್ತು ಸಂಪನ್ಮೂಲ ಭದ್ರತೆ:- ಈ ವರದಿಯು “ಜಲ ಭದ್ರತೆ” ಯನ್ನು ಸಂಭಾವ್ಯ ಸಂಘರ್ಷದ ಬಿಂದು ಎಂದು ಎತ್ತಿ ತೋರಿಸಿದೆ. ನಿರ್ದಿಷ್ಟವಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ನಂತರ, ಸಿಂಧೂ ನದಿ ಜಲಾನಯನ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದದ ಕೇಂದ್ರಬಿಂದುವಾಗಿ ಉಳಿದಿದೆ ಎಂದು ಅದು ಗಮನಸೆಳೆದಿದೆ.

    ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ; ಉದ್ಯೋಗ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯು ತನ್ನ “ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ” (WESO) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿನ ನಿರಂತರ ಅಸಮಾನತೆಗಳನ್ನು ಎತ್ತಿ ತೋರಿಸಿದೆ.

    ಈ ವರದಿಯ ಪ್ರಮುಖ ಅಂಶಗಳು:

    • ಜಾಗತಿಕ ನಿರುದ್ಯೋಗ:- 2026 ರಲ್ಲಿ ಜಾಗತಿಕ ನಿರುದ್ಯೋಗ ದರವು 4.9% ರಷ್ಟು ಉಳಿಯುವ ನಿರೀಕ್ಷೆಯಿದೆ ಮತ್ತು ಇದು ಸುಮಾರು 186 ದಶ ಲಕ್ಷ (18.6 ಕೋಟಿ) ಜನರಿಗೆ ಸಮಾನವಾಗಿದೆ.
    • ಗುಣಮಟ್ಟದ ಹಾಗೂ ಸುರಕ್ಷಿತ ಉದ್ಯೋಗದ ಕೊರತೆ:- ಹಾಗೆಯೇ, ಯೋಗ್ಯವಾದ ಕೆಲಸದ ಕಡೆಗಿನ ಪ್ರಗತಿಯು ಸ್ಥಗಿತಗೊಂಡಿದೆ ಮತ್ತು ಲಕ್ಷಾಂತರ ಜನರು ಇನ್ನೂ ಈ ಕೊರತೆಯನ್ನು ಎದುರಿಸುತ್ತಿದ್ದಾರೆ.
    • ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ನಿರಂತರ ಬಡತನ:- ಸುಮಾರು 300 ದಶ ಲಕ್ಷ (30 ಕೋಟಿ) ಕಾರ್ಮಿಕರು ದಿನಕ್ಕೆ US $3 ಗಿಂತ ಕಡಿಮೆ ಗಳಿಸುವ ಮೂಲಕ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ.
    • ತೀವ್ರವಾಗುತ್ತಿರುವ ಯುವ ನಿರುದ್ಯೋಗದ ಬಿಕ್ಕಟ್ಟು: ಯುವ ಜನರ ನಿರುದ್ಯೋಗವು 2025 ರಲ್ಲಿ 12.4% ಕ್ಕೆ ಏರಿಕೆಯಾಗಿದೆ.
    • ನಿರಂತರ ಲಿಂಗ ಅಂತರಗಳು:- ಮಹಿಳೆಯರು ಜಾಗತಿಕ ಉದ್ಯೋಗದಲ್ಲಿ ಕೇವಲ ಐದನೇ ಎರಡರಷ್ಟು (40%) ಪಾಲನ್ನು ಹೊಂದಿದ್ದಾರೆ.

    ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಬಗ್ಗೆ:

      • ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
      • ಇದನ್ನು 1919 ರಲ್ಲಿ ವರ್ಸೈಲ್ಸ್ ಒಪ್ಪಂದದ ಮೂಲಕ 
      • “ರಾಷ್ಟ್ರಗಳ ಸಂಘ” (ಲೀಗ್ ಆಫ್ ನೇಷನ್ಸ್) ದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು.
      • ವಿಶೇಷತೆ:- 1946 ರಲ್ಲಿ ಇದು ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
      • ಪ್ರಧಾನ ಕಚೇರಿ:- ‘ಜಿನೀವಾ’ (ಸ್ವಿಟ್ಜರ್ಲೆಂಡ್‌)
    • ಭಾರತವು ILO ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
    • ಗುರಿ:- ಕೆಲಸದ ಸ್ಥಳದಲ್ಲಿ ಹಕ್ಕುಗಳು ಮತ್ತು ಯೋಗ್ಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು ಹಾಗೂ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂವಾದವನ್ನು ಬಲಪಡಿಸುವುದು.

    ILO ನ ಪ್ರಮುಖ ವರದಿಗಳು:

    • ಜಾಗತಿಕ ವೇತನ ವರದಿ (GWR)
    • ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ (WESO).
    • ವಿಶ್ವ ಸಾಮಾಜಿಕ ರಕ್ಷಣೆ ವರದಿ (WSPR)
    • ಕೆಲಸದ ಜಾಗತಿಕ ವರದಿ (ವರ್ಲ್ಡ್ ಆಫ್ ವರ್ಕ್ ರಿಪೋರ್ಟ್)

    ‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿ ಸರ್ಕಾರವು ‘ಕಾರ್ಬನ್ ಕ್ರೆಡಿಟ್ ನಗದೀಕರಣ’ಕ್ಕಾಗಿ ಒಂದು ನೂತನ ನೀತಿ ಚೌಕಟ್ಟನ್ನು ಅನುಮೋದಿಸಿರುವುದಾಗಿ ಘೋಷಿಸಿದೆ.

    ನೂತನ ನೀತಿಯ ಮುಖ್ಯಾಂಶಗಳು:

    • ಪರಿಸರ ಸ್ನೇಹಿ ಯೋಜನೆಗಳು:- ದೆಹಲಿ ಸರ್ಕಾರವು ಜಾರಿಗೊಳಿಸುವ ವಿವಿಧ ಪರಿಸರ ಸ್ನೇಹಿ ಯೋಜನೆಗಳ ಮೂಲಕ ‘ಕಾರ್ಬನ್ ಕ್ರೆಡಿಟ್‌’ಗಳನ್ನು ಉತ್ಪಾದಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
    • ಪ್ರಮುಖ ಚಟುವಟಿಕೆಗಳು:- ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆ, ಸಸಿ ನೆಡುವ ಅಭಿಯಾನಗಳು, ಸೌರಶಕ್ತಿಯ ಉತ್ತೇಜನ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಂತಹ ಚಟುವಟಿಕೆಗಳನ್ನು ಕಾರ್ಬನ್ ಕ್ರೆಡಿಟ್ ಉತ್ಪಾದನೆಗೆ ಬಳಸಲಾಗುತ್ತದೆ.

    ನೂತನ ನೀತಿಯ ಕಾರ್ಯವಿಧಾನ:

    • ವೈಜ್ಞಾನಿಕ ಮಾಪನ:- ಈ ಮೇಲಿನ ಉಪಕ್ರಮಗಳ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಆಗುವ ಇಳಿಕೆಯನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತದೆ.
    • ಅಧಿಕೃತ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಣಿ: ನಂತರ, ಇದನ್ನು ಅಧಿಕೃತವಾಗಿ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಾಯಿಸಲಾಗುತ್ತದೆ.
    • ಮಾರಾಟ ಮತ್ತು ಆದಾಯ:- ಅಂತಿಮವಾಗಿ, ಈ ಕ್ರೆಡಿಟ್‌ಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಬನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರವು ಆದಾಯವನ್ನು ಗಳಿಸಲಿದೆ.

    ಕಾರ್ಬನ್ ಮಾರುಕಟ್ಟೆಗಳ ಬಗ್ಗೆ:

    • ವ್ಯಾಖ್ಯಾನ:- ಕಾರ್ಬನ್ ಮಾರುಕಟ್ಟೆಗಳು ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯಾಪಾರ ವ್ಯವಸ್ಥೆಗಳಾಗಿವೆ.
    • ಕಾರ್ಯವಿಧಾನ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ಸಂಸ್ಥೆಗಳಿಂದ ‘ಕಾರ್ಬನ್ ಕ್ರೆಡಿಟ್’ಗಳನ್ನು ಖರೀದಿಸುವ ಮೂಲಕ, ಇತರ ಕಂಪನಿಗಳು ಅಥವಾ ವ್ಯಕ್ತಿಗಳು ತಮ್ಮ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಿಕೊಳ್ಳಬಹುದು.

    ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (CCTS)ನ ಬಗ್ಗೆ:

    • ಗುರಿ:- ಭಾರತೀಯ ಆರ್ಥಿಕತೆಯನ್ನು ಇಂಗಾಲ ಮುಕ್ತವಾಗಿಸುವ (ಡಿಕಾರ್ಬನೈಸ್) ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಘಟಕಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು.
    • ಇದು ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಮೂಲಕ, CCTS ‘ಭಾರತದ ಕಾರ್ಬನ್ ಮಾರುಕಟ್ಟೆ’ಗೆ ಭದ್ರ ಬುನಾದಿಯನ್ನು ಹಾಕಿದೆ.

    ಕಾರ್ಬನ್ ಮಾರುಕಟ್ಟೆಯ ಸನ್ನದ್ಧತೆಯನ್ನು ಬಲಪಡಿಸಲು ಸರ್ಕಾರದ ಕ್ರಮಗಳು:

    • ಅಭಿವೃದ್ಧಿ ಮತ್ತು ಪರಿಸರ ಸಮತೋಲನ:- COP 27 ರಲ್ಲಿ ಪ್ರಸ್ತಾಪಿಸಿದಂತೆ, “ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ” (CBDR-RC) ತತ್ವಗಳ ಮೂಲಕ, ಭಾರತವು ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ತನ್ನ ಅಭಿವೃದ್ಧಿಯ ಅಗತ್ಯಗಳನ್ನು ಸಮತೋಲನಗೊಳಿಸುತ್ತಿದೆ.
    • ಸುಸ್ಥಿರ ಜೀವನಶೈಲಿಗೆ ಹಸಿರು ಉಪಕ್ರಮಗಳು:- ಸರ್ಕಾರವು “ಮಿಷನ್ ಲೈಫ್” ಮತ್ತು “ಹಸಿರು ಕ್ರೆಡಿಟ್ ಉಪಕ್ರಮ”ಗಳನ್ನು ಜಾರಿಗೆ ತಂದಿದೆ.
    • ಸಾಂಸ್ಥಿಕ ನಿರ್ವಹಣೆ:- ಇಂಧನ ಸಚಿವಾಲಯದ ಅಡಿಯಲ್ಲಿ,
    1. “ಭಾರತೀಯ ಕಾರ್ಬನ್ ಮಾರುಕಟ್ಟೆಗಾಗಿ ರಾಷ್ಟ್ರೀಯ ಮಾರ್ಗದರ್ಶನ ಸಮಿತಿ” (NSCICM).
    2. “ಇಂಧನ ದಕ್ಷತಾ ಕಛೇರಿ” (BEE) ಅನ್ನು ಸ್ಥಾಪಿಸಲಾಗಿದೆ.

    ಕಾಶಿ-ತಮಿಳು ಸಂಗಮ

    ಸಾಮಾನ್ಯ ಅಧ್ಯಯನ-1/ ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಸಾಂಸ್ಕೃತಿಕ ತಿಳುವಳಿಕೆಯನ್ನು ಬಲಪಡಿಸುವಲ್ಲಿ, ಶೈಕ್ಷಣಿಕ ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವಲ್ಲಿ ಹಾಗೂ ಶಾಶ್ವತ ಬಾಂಧವ್ಯವನ್ನು ಸೃಷ್ಟಿಸುವಲ್ಲಿ ‘ಕಾಶಿ-ತಮಿಳು ಸಂಗಮ’ ವಹಿಸಿರುವ ಪಾತ್ರವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.

    ಕಾಶಿ-ತಮಿಳು ಸಂಗಮ 4.0 ರ ಬಗ್ಗೆ:

    • ಆಯೋಜಕರು:- ಕೇಂದ್ರ ಶಿಕ್ಷಣ ಸಚಿವಾಲಯವು
    • ಪ್ರಾರಂಭ:- 2022
    • ಪಾಲುದಾರ ವಿಶ್ವವಿದ್ಯಾಲಯಗಳು:- ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ. 
    • ಉದ್ದೇಶ:- ತಮಿಳುನಾಡು ಮತ್ತು ಕಾಶಿಯ ನಡುವಿನ ಪುರಾತನ ಸಂಬಂಧಗಳನ್ನು ಮರುಶೋಧಿಸುವುದು, ದೃಢೀಕರಿಸುವುದು ಮತ್ತು ಆಚರಿಸುವುದು.
    • ರಾಷ್ಟ್ರೀಯ ಶಿಕ್ಷಣ ನೀತಿ (NEP), 2020:- ಇದು ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ನೀಡಿದ ಬೆಂಬಲಕ್ಕೆ ಅನುಗುಣವಾಗಿದೆ.

    ಮಹತ್ವ:

    • ಜ್ಞಾನವನ್ನು ಹಂಚಿಕೊಳ್ಳವ ವೇದಿಕೆ:- ಇದು ಎರಡು ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು ಮತ್ತು ಕಲಾವಿದರಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ.
    • ಅರಿವು ಮತ್ತು ಸಾಂಸ್ಕೃತಿಕ ಏಕತೆ:- ಇದು ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಸಾಂಸ್ಕೃತಿಕ ಏಕತೆಯನ್ನು ಅನುಭವಿಸಲು ಸಹಕಾರಿಯಾಗಿದೆ.

    ಗಮನಿಸಿ: 

    ಕಾಶಿ/ವಾರಾಣಸಿ/ಬನಾರಸ್ ಮತ್ತು ಚೆನ್ನೈ ಎರಡನ್ನೂ ಯುನೆಸ್ಕೋ ‘ಸಂಗೀತದ ಸೃಜನಾತ್ಮಕ ನಗರಗಳು’ ಎಂದು ಗುರುತಿಸಿದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನೀತಿ ಆಯೋಗವು ರಫ್ತು ಸಿದ್ಧತೆ ಸೂಚ್ಯಂಕ (EPI) 2024 ಅನ್ನು ಬಿಡುಗಡೆ ಮಾಡಿದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಬಗ್ಗೆ:

    • ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ:- ಇದು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿದೆ.
    • ಮಹತ್ವ:- ಇದು ರಾಜ್ಯ ಮಟ್ಟದ ರಫ್ತು ಪರಿಸರ ವ್ಯವಸ್ಥೆಗಳ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಒಳಗೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡಲು ಸಾಕ್ಷ್ಯಾಧಾರಿತ ಚೌಕಟ್ಟನ್ನು ಒದಗಿಸುತ್ತದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಮುಖ್ಯಾಂಶಗಳು:

    ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು: 

    • ಅತ್ಯುತ್ತಮ ಪ್ರದರ್ಶನ ನೀಡಿದ ದೊಡ್ಡ ರಾಜ್ಯಗಳು:- ಮಹಾರಾಷ್ಟ್ರ ಮತ್ತು ಅದರ ಜೊತೆಗೆ ತಮಿಳುನಾಡು, ಗುಜರಾತ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳು 
    • ಅತ್ಯುತ್ತಮ ಪ್ರದರ್ಶನ ನೀಡಿದ ಸಣ್ಣ ರಾಜ್ಯಗಳು:- ಉತ್ತರಾಖಂಡ, ಗೋವಾ
    • ಈಶಾನ್ಯ ರಾಜ್ಯಗಳು:- ನಾಗಾಲ್ಯಾಂಡ್
    • ಕೇಂದ್ರಾಡಳಿತ ಪ್ರದೇಶಗಳು:- ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು.

    ಜಥಿಯಾ ದೇವಿ

    ಸಾಮಾನ್ಯ ಅಧ್ಯಯನ-1/ ಸ್ಥಳಗಳು /ಸಾಮಾನ್ಯ ಅಧ್ಯಯನ-3/ ಮೂಲಸೌಕರ್ಯ

    ಇದೀಗ ಸುದ್ದಿಯಲ್ಲಿದೆ:

    • ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಗೊಳಿಸಲಿರುವ ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿ ಯೋಜನೆಗಾಗಿ ಇತ್ತೀಚೆಗೆ ‘ಜಥಿಯಾ ದೇವಿ’ ಸ್ಥಳವನ್ನು ಗುರುತಿಸಲಾಗಿದೆ.

    ‘ಜಥಿಯಾ ದೇವಿ’ ಸ್ಥಳದ ಬಗ್ಗೆ:

    • ಸ್ಥಳ:- ಈ ಸ್ಥಳವು ಶಿಮ್ಲಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.
    • ಹೆಸರಿನ ಹಿನ್ನೆಲೆ:- ಈ ಪ್ರದೇಶದಲ್ಲಿರುವ ಪುರಾತನ ಜಥಿಯಾ ದೇವಿ ದೇವಾಲಯದಿಂದಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿದೆ.
    • ಯೋಜನೆಯ ಸ್ವರೂಪ:- ಶಿಮ್ಲಾ ನಗರದ ಮೇಲಿನ ಒತ್ತಡವನ್ನು ತಗ್ಗಿಸಲು, ಈ ಯೋಜನೆಯನ್ನು ಒಂದು ಯೋಜಿತ ‘ಉಪಗ್ರಹ ಪರ್ವತ ಪಟ್ಟಣ’ವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ.
    • ಪ್ರಯೋಜನಗಳು:- ಇದು ಹೊಸ ಆರ್ಥಿಕ ಕೇಂದ್ರಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಹಾಗೂ ವಿಪತ್ತು-ನಿರೋಧಕ ನಗರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
    • ಕಾಳಜಿಗಳು:- ಸಾಮಾಜಿಕ ಪ್ರಭಾವದ ಮೌಲ್ಯಮಾಪನವು, ಯೋಜನೆಯಿಂದ ಸಂಭವಿಸಬಹುದಾದ ಜನರ ಸ್ಥಳಾಂತರ ಮತ್ತು ದೇವಾಲಯಗಳು, ಶಾಲೆಗಳು, ಅಂಗಡಿಗಳು, ಕಾಲುವೆಗಳು ಹಾಗೂ ಮನೆಗಳಂತಹ ಆಸ್ತಿಗಳ ನಷ್ಟವನ್ನು ಗುರುತಿಸಿದೆ.

    ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ

    ಸಾಮಾನ್ಯ ಅಧ್ಯಯನ-2/ ಆಡಳಿತ; ಸಾಮಾನ್ಯ ಅಧ್ಯಯನ-3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ಕುಕಿ-ಜೋ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸರ್ವೋಚ್ಚ ನಾಗರಿಕ ಸಂಸ್ಥೆಯಾದ “ಕುಕಿ-ಜೋ ಮಂಡಳಿ” (KZC), ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗದವರಿಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

    ಹಿನ್ನೆಲೆ:

    • ಮೇ 2023 ರಲ್ಲಿ, ಜನಾಂಗೀಯ ಸಂಘರ್ಷ: ಇಂಫಾಲ್ ಕಣಿವೆಯಲ್ಲಿ ಪ್ರಧಾನವಾಗಿ ವಾಸಿಸುವ “ಮೈತೈ” ಸಮುದಾಯ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ “ಕುಕಿ-ಜೋ” ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತು.
    • ಸಂಘರ್ಷಕ್ಕೆ ಕಾರಣ:- ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೈ ಸಮುದಾಯ ಮಂಡಿಸಿದ ಬೇಡಿಕೆಯು ಈ ಸಂಘರ್ಷಕ್ಕೆ ಪ್ರಚೋದನೆ ನೀಡಿತು. ಭೂಮಿಯ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ಬಗೆಗಿನ ಕಳವಳಗಳಿಂದಾಗಿ ಕುಕಿ-ಜೋ ಗುಂಪುಗಳು ಈ ಬೇಡಿಕೆಯನ್ನು ವಿರೋಧಿಸಿದ್ದವು.
    • ಅಕ್ಟೋಬರ್ 2024 ರಲ್ಲಿ “ಕುಕಿ-ಜೋ ಮಂಡಳಿ” (KZC) ರಚನೆ:- ಸುಮಾರು 18 ತಿಂಗಳುಗಳ ಹಿಂಸಾಚಾರದ (2023–2025) ನಂತರ ಇದನ್ನು ರಚಿಸಲಾಯಿತು. ಈ ಹಿಂಸಾಚಾರದ ಅವಧಿಯಲ್ಲಿ ಕುಕಿ-ಜೋ ಸಮುದಾಯವು ತಮ್ಮ ವಿರುದ್ಧ ಪಕ್ಷಪಾತ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿತ್ತು.

    ಕುಕಿ-ಜೋ ಗುಂಪುಗಳ ಬಗ್ಗೆ:

      • ಇದೊಂದು ಜನಾಂಗೀಯ ಸಮುದಾಯ:- ಇವರು ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮ್ಯಾನ್ಮಾರ್‌ ಪ್ರದೇಶಗಳಾದ್ಯಂತ ಹರಡಿಕೊಂಡಿದ್ದಾರೆ.
      • ಅವರು ಮ್ಯಾನ್ಮಾರ್ ಮತ್ತು ಮಿಜೋರಾಂನ ಇತರ “ಚಿನ್-ಮಿಜೋ” ಗುಂಪುಗಳೊಂದಿಗೆ ನಿಕಟ ಜನಾಂಗೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.
      • 1980-90 ರ ದಶಕದಿಂದೀಚೆಗೆ, ಹಲವಾರು ಕುಕಿ-ಜೋ ಬಂಡಾಯ ಗುಂಪುಗಳು ಹೊರಹೊಮ್ಮಿವೆ. ಇವುಗಳು ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸುತ್ತಿವೆ:
    • ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವ-ನಿರ್ಣಯದ ಹಕ್ಕು.
    • ಬುಡಕಟ್ಟು ಭೂಮಿ ಮತ್ತು ಹಕ್ಕುಗಳ ರಕ್ಷಣೆ.
    • ಕೆಲವು ಸಂದರ್ಭಗಳಲ್ಲಿ, ಪ್ರತ್ಯೇಕ ರಾಜ್ಯದ ಸ್ಥಾನಮಾನ.

    ಕುರಿಂಜಿ ರಾಜ್‌ಕುಮಾರ್

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಮಾಜಿ ಬ್ಯಾಂಕ್ ಉದ್ಯೋಗಿ ಮತ್ತು “ಕುರಿಂಜಿ ರಾಜ್‌ಕುಮಾರ್” ಎಂದೇ ಖ್ಯಾತರಾಗಿದ್ದ ಪರಿಸರವಾದಿ ಜಿ. ರಾಜ್‌ಕುಮಾರ್ ಅವರು ಇತ್ತೀಚಿಗೆ ತಿರುವನಂತಪುರದಲ್ಲಿ ನಿಧನರಾದರು.

    ನೀಲಕುರಿಂಜಿ ಬಗ್ಗೆ:

    • ಸ್ಥಳೀಯ ಪ್ರಭೇದ:- ಇದು ನೇರಳೆ ಬಣ್ಣದ ಹೂಬಿಡುವ ಕುರುಚಲು ಗಿಡದ ಪ್ರಭೇದವಾಗಿದೆ.
    • 12 ವರ್ಷಗಳಿಗೊಮ್ಮೆ ಹೂಗಳು ಅರಳುತ್ತವೆ:- ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದ ಬೆಟ್ಟಗಳಲ್ಲಿ ಈ ಹೂಗಳು ಅರಳುತ್ತವೆ.
    • “ನೀಲಗಿರಿ”ಗೆ ಈ ಹೆಸರು ಬರಲು ಕಾರಣ:- ಈ ಬೆರಗುಗೊಳಿಸುವ ಹೂವುಗಳು ನೀಡುವ ಮಾಂತ್ರಿಕ ನೀಲಿ ಬಣ್ಣದಿಂದಾಗಿ ‘ನೀಲಗಿರಿ’ಗೆ ಆ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
    • ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ:- ಇದು ನೈಋತ್ಯ ಭಾರತದ 1,340 ರಿಂದ 2,600 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ.
    • ಇದು ಪ್ರಧಾನವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕಣಿವೆ ಮತ್ತು ನೀಲಗಿರಿ ಬೆಟ್ಟಗಳಲ್ಲಿ (ಕರ್ನಾಟಕ, ಕೇರಳ ಮತ್ತು ತಮಿಳುನಾಡು) ಕಂಡುಬರುತ್ತದೆ.
    • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU).

    “ಕುರಿಂಜಿ ರಾಜ್‌ಕುಮಾರ್” ಅವರ ಪ್ರಮುಖ ಕೊಡುಗೆಗಳು:

    • ‘ಕುರಿಂಜಿ ಉಳಿಸಿ ಅಭಿಯಾನ’:- ಕುರಿಂಜಿ ರಾಜ್‌ಕುಮಾರ್ ಈ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಈ ಅಭಿಯಾನವು ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂತಿಯಾನ) ಮತ್ತು ಅದರ ಸೂಕ್ಷ್ಮ ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
    • 1982 ರಲ್ಲಿ ಹೂವುಗಳ ಸಾಮೂಹಿಕ ಅರಳುವಿಕೆಯನ್ನು ವೀಕ್ಷಿಸಿದ ನಂತರ ಅವರ ಈ ಬದ್ಧತೆ ಪ್ರಾರಂಭವಾಯಿತು. ಇದು ಪರ್ವತಯಾತ್ರೆ ಮತ್ತು ಜಾಗೃತಿ ಪ್ರಯತ್ನಗಳಿಗೆ ಕಾರಣವಾಯಿತು ಮತ್ತು ಅಂತಿಮವಾಗಿ ಪ್ರಮುಖ ಪರಿಸರ ಚಳುವಳಿಯಾಗಿ ಬೆಳೆಯಿತು.
    • 2006 ರಲ್ಲಿ ನೀಲಕುರಿಂಜಿ ಅಭಯಾರಣ್ಯ:- ಅವರು ನಂತರ ಮುನ್ನಾರ್ ಪ್ರದೇಶದಲ್ಲಿನ ಅಭಿಯಾನಗಳತ್ತ ಗಮನಹರಿಸಿದರು. ಈ ಹೋರಾಟವು ಅಂತಿಮವಾಗಿ 2006 ರಲ್ಲಿ 32 ಚದರ ಕಿ.ಮೀ ವಿಸ್ತೀರ್ಣದ ‘ನೀಲಕುರಿಂಜಿ ಅಭಯಾರಣ್ಯ’ದ ಸ್ಥಾಪನೆಗೆ ಕಾರಣವಾಯಿತು ಮತ್ತು ಅವರ ಜೀವಮಾನದ ಕನಸನ್ನು ಈಡೇರಿಸಿತು.
  • ಉಚಿತ ಅಂಗಾಂಗ ಕಸಿಗಾಗಿ ಬೆಂಗಳೂರಿನಲ್ಲಿ 1,000 ಹಾಸಿಗೆಯ ಆಸ್ಪತ್ರೆ

    ಉಚಿತ ಅಂಗಾಂಗ ಕಸಿಗಾಗಿ ಬೆಂಗಳೂರಿನಲ್ಲಿ 1,000 ಹಾಸಿಗೆಯ ಆಸ್ಪತ್ರೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಅಂಗಾಂಗ ಕಸಿಗಾಗಿ 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ  (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಅನುವು ಮಾಡಿಕೊಡಲಿದೆ.

    ಪ್ರಮುಖ ಅಂಶಗಳು:

    • ಉದ್ದೇಶ:- ಬಡವರಿಗಾಗಿ ಉಚಿತ ಅಂಗಾಂಗ ಕಸಿ (ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಮತ್ತು ಇತರ) ಸೌಲಭ್ಯವನ್ನು ಒದಗಿಸಲು ಮೀಸಲಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ. ನಿಮ್ಹಾನ್ಸ್‌ಗೆ (NIMHANS) ಹತ್ತಿರದಲ್ಲಿರುವುದರಿಂದ ಅಂಗಾಂಗ ಜೋಡಣೆ ಮತ್ತು ಸಾಗಣೆಗೆ ಇದು ಸುಗಮವಾಗಲಿದೆ.
    • ಸ್ಥಳ:- ಬೆಂಗಳೂರಿನ ನಿಮ್ಹಾನ್ಸ್ ಪಕ್ಕದಲ್ಲಿ ಸರ್ಕಾರ ಒದಗಿಸಿದ 10 ಎಕರೆ ಭೂಮಿಯಲ್ಲಿ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಸೌಲಭ್ಯವನ್ನು ನಿರ್ಮಿಸಲಾಗುವುದು.
    • ಹೂಡಿಕೆ ಮತ್ತು ನಿರ್ವಹಣೆ:- ಈ ಸೌಲಭ್ಯವನ್ನು ಸ್ಥಾಪಿಸಲು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ₹1,000 ಕೋಟಿ ಹೂಡಿಕೆ ಮಾಡಲಿದ್ದು, ನಿರ್ವಹಣೆಗಾಗಿ ವಾರ್ಷಿಕವಾಗಿ ₹350 ಕೋಟಿ ವೆಚ್ಚ ಮಾಡುವ ಅಂದಾಜಿದೆ. ಮೂವರು ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ಆಸ್ಪತ್ರೆಯನ್ನು ನಿರ್ವಹಿಸಲಿದೆ.
    • ಸಾಮರ್ಥ್ಯ ಮತ್ತು ಕಾಲಮಿತಿ:- ಮುಂದಿನ 3 ವರ್ಷಗಳಲ್ಲಿ 350 ಹಾಸಿಗೆಗಳ ಸೌಲಭ್ಯ ಪೂರ್ಣಗೊಳ್ಳಲಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ ಸೌಲಭ್ಯಕ್ಕೆ ವಿಸ್ತರಿಸಲಾಗುವುದು.
    • ಆರೋಗ್ಯ ವೆಚ್ಚದ ಮಾದರಿ:- 
    • 70% ರಷ್ಟು ಹಾಸಿಗೆಗಳು ಉಚಿತವಾಗಿವೆ,  
    • 30% ರಷ್ಟು ಹಾಸಿಗೆಗಳು ಕಡಿಮೆ ದರದಲ್ಲಿ ಅಂದರೆ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಲಭ್ಯವಿರುತ್ತವೆ.
    • ಪ್ರಸ್ತುತ ಸಂದರ್ಭ ಮತ್ತು ಬೇಡಿಕೆ:– ರಾಜ್ಯದಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿರುವ 5,000 ಕ್ಕೂ ಹೆಚ್ಚು ರೋಗಿಗಳು ಮತ್ತು ಯಕೃತ್ತು ಕಸಿಗಾಗಿ ಕಾಯುತ್ತಿರುವ 1,000 ಕ್ಕೂ ಹೆಚ್ಚು ರೋಗಿಗಳಿರುವ ಹಿನ್ನೆಲೆಯಲ್ಲಿ ಈ ಉಪಕ್ರಮವು ಮಹತ್ವದ್ದಾಗಿದೆ. ಇದು 2016 ರಿಂದ ಗ್ಯಾಸ್ಟ್ರೋ ಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ ಯಕೃತ್ತು ಕಸಿ ಸೌಲಭ್ಯಗಳಿಗೆ ಪೂರಕವಾಗಿರಲಿದೆ.

    ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ:

    • ಇದನ್ನು ಮೂಲತಃ ಕರ್ನಾಟಕ ಸರ್ಕಾರವು ಮಾರ್ಚ್ 2, 2018 ರಂದು “ಆರೋಗ್ಯ ಕರ್ನಾಟಕ” ಎಂದು ಪರಿಚಯಿಸಿತು ಮತ್ತು ನಂತರ ಅಕ್ಟೋಬರ್ 30, 2018 ರಂದು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್‌ ಯೋಜನೆಯೊಂದಿಗೆ ಸಂಯೋಜಿಸಲಾಯಿತು.
    • ಈ ಯೋಜನೆಯನ್ನು ರಾಜ್ಯ ಸರ್ಕಾರವು “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಎಂಬ ಹೆಸರಿನಲ್ಲಿ “ಅಶ್ಯೂರೆನ್ಸ್ ಮೋಡ್” (ಭರವಸೆ ಮಾದರಿ) ನಲ್ಲಿ ಅನುಷ್ಠಾನಗೊಳಿಸುತ್ತಿದೆ.
    • ಪ್ರಾಥಮಿಕ ಗುರಿ:- ರಾಜ್ಯದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು (UHC) ಒದಗಿಸುವುದು.
    • ಉದ್ದೇಶ:- ಸರಳ ದ್ವಿತೀಯ, ಕಷ್ಟ ಕರವಾಗಿರುವ ದ್ವಿತೀಯ, ತೃತೀಯ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಳ ವೆಚ್ಚದ ವಿರುದ್ಧ ಆರ್ಥಿಕ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.

    ಪ್ರಯೋಜನಗಳು:

    • ಅರ್ಹ ಕುಟುಂಬಗಳು (ಬಿಪಿಎಲ್ ಮತ್ತು ಆರ್‌ಎಸ್‌ಬಿವೈ ಫಲಾನುಭವಿಗಳು):- ಪ್ರತಿ ಕುಟುಂಬಕ್ಕೆ ವಾರ್ಷಿಕ ₹5,00,000 ಮೂಲ ವಿಮಾ ಮೊತ್ತದೊಂದಿಗೆ 100% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ. ಪಡೆಯುತ್ತವೆ.
    • ಸಾಮಾನ್ಯ ಕುಟುಂಬಗಳು (ಎಪಿಎಲ್):- ಸಹ-ಪಾವತಿ ಆಧಾರದ ಮೇಲೆ ಪ್ರತಿ ಕುಟುಂಬಕ್ಕೆ ವಾರ್ಷಿಕ ₹1.5 ಲಕ್ಷದ ಮಿತಿಯವರೆಗೆ ಪ್ಯಾಕೇಜ್ ದರದ 30% ರಷ್ಟು ಸರ್ಕಾರಿ ಸಹಾಯಧನವನ್ನು ಪಡೆಯುತ್ತವೆ.
    • ಫಲಾನುಭವಿಗಳು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ (ಸಾರ್ವಜನಿಕ ಅಥವಾ ಖಾಸಗಿ) ಹಣ ಪಾವತಿಸದೆ ಮತ್ತು ಯಾವುದೇ ಶಿಫಾರಸಿನ ಅಗತ್ಯವಿಲ್ಲದೆ ನೇರವಾಗಿ ತುರ್ತು ಚಿಕಿತ್ಸೆಗಳನ್ನು ಪಡೆಯಬಹುದು.

    ಮಾನದಂಡಗಳು:

    • “ಅರ್ಹ ಕುಟುಂಬಗಳು” ಎಂದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013 ಅಡಿಯಲ್ಲಿ ಬರುವವರು, BPL ಪಡಿತರ ಚೀಟಿ ಹೊಂದಿರುವವರು ಅಥವಾ ನೋಂದಾಯಿತ RSBY ಫಲಾನುಭವಿಗಳು.
    • “ಸಾಮಾನ್ಯ ಕುಟುಂಬಗಳು” ಎಂದರೆ ಅರ್ಹ ಕುಟುಂಬಗಳ ವ್ಯಾಪ್ತಿಗೆ ಬಾರದ ನಿವಾಸಿಗಳು, ಸಾಮಾನ್ಯವಾಗಿ ಎಪಿಎಲ್ ಪಡಿತರ ಚೀಟಿ ಹೊಂದಿರುವವರು.
    • ಪ್ರಾಥಮಿಕ ಚಿಕಿತ್ಸೆಗಳು ಮತ್ತು ಸರಳ ದ್ವಿತೀಯ ಹಂತದ ಚಿಕಿತ್ಸೆಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ (PHIs) ಮಾತ್ರ ಸೀಮಿತವಾಗಿವೆ.
    • ಖಾಸಗಿ ಆಸ್ಪತ್ರೆಗಳಲ್ಲಿ ಕಷ್ಟ ಕರವಾಗಿರುವ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಶಿಫಾರಸು ಪಡೆಯುವುದು ಕಡ್ಡಾಯವಾಗಿದೆ.
    • ತುರ್ತು ಚಿಕಿತ್ಸೆಗೆ ಶಿಫಾರಸು ಅಗತ್ಯವಿಲ್ಲ ಮತ್ತು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಇದನ್ನು ಪಡೆಯಬಹುದು.

    ವೈಶಿಷ್ಟ್ಯಗಳು:

    • ಭರವಸೆ ಮಾದರಿ (ಅಶ್ಯೂರೆನ್ಸ್ ಮೋಡ್):- ಈ ಯೋಜನೆಯು ಸಾಂಪ್ರದಾಯಿಕ ವಿಮಾ ಮಾದರಿಗಿಂತ ಭಿನ್ನವಾಗಿ ಭರವಸೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಫಲಾನುಭವಿಗಳಿಗೆ AB-ArK ಚೀಟಿ:- ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ₹10 ಶುಲ್ಕದಲ್ಲಿ ಕಾಗದದ ಅಥವಾ ₹35 ಶುಲ್ಕದಲ್ಲಿ ಪ್ಲಾಸ್ಟಿಕ್ ನ AB-ArK ಚೀಟಿ ನೀಡಲಾಗುತ್ತದೆ.
    • SECC 2011 ಮತ್ತು RSBY ಕುಟುಂಬಗಳಿಗೆ 60% ರಷ್ಟು ವೆಚ್ಚವನ್ನು ಭಾರತ ಸರ್ಕಾರ ಭರಿಸಿದರೆ, ಉಳಿದ 40% ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ.
    • ಉಳಿದ ಎಲ್ಲಾ ಅರ್ಹ ಕುಟುಂಬಗಳ 100% ರಷ್ಟು ವೆಚ್ಚವನ್ನು ಮತ್ತು ಕೇಂದ್ರ ಯೋಜನೆಯ ವ್ಯಾಪ್ತಿಗೆ ಬಾರದ 19 ಲಕ್ಷ ಎಪಿಎಲ್ ಕುಟುಂಬಗಳಿಗೆ ಸಹಾಯಧನವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತದೆ.
  • ರಾಷ್ಟ್ರೀಯ ಕ್ರೀಡಾ ಆಡಳಿತ ನಿಯಮಗಳು, 2026 | ಮರ್ಕೋಸೂರ್ ಒಪ್ಪಂದಕ್ಕೆ ಐರೋಪ್ಯಾ ಒಕ್ಕೂಟ (EU) ರಾಷ್ಟ್ರಗಳ ಅನುಮೋದನೆ | DRDO ದಿಂದ 3ನೇ ತಲೆಮಾರಿನ MPATGM ನ ಯಶಸ್ವಿ ಹಾರಾಟ ಪರೀಕ್ಷೆ | 38ನೇ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ | ಪುಷ್ಪಗಳ ಕಣಿವೆ (Valley of Flowers) | NPS ವಾತ್ಸಲ್ಯ ಯೋಜನೆ, 2025 | ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ | NIRANTAR (ನಿರಂತರ್) ವೇದಿಕೆ | ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ವೇದಿಕೆಗಳು 10 ನಿಮಿಷಗಳ ವಿತರಣೆ ಸೇವೆಯನ್ನು ನಿಲ್ಲಿಸಲಿವೆ | ಉಬ್ಬು (ಪಫರ್) ಮೀನು ವಿಷಬಾಧೆ | ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ

    ರಾಷ್ಟ್ರೀಯ ಕ್ರೀಡಾ ಆಡಳಿತ ನಿಯಮಗಳು, 2026

    ಸಾಮಾನ್ಯ ಅಧ್ಯಯನ- 2/ ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025’ರ ಅಡಿಯಲ್ಲಿ, ‘ರಾಷ್ಟ್ರೀಯ ಕ್ರೀಡಾ ಆಡಳಿತ (ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು) ನಿಯಮಗಳು, 2026’ ಅನ್ನು ಅಧಿಸೂಚಿಸಿದೆ.

    ನಿಯಮಗಳ ಉದ್ದೇಶಗಳು:

    • ವೃತ್ತಿಪರತೆ ಮತ್ತು ಪ್ರಮಾಣೀಕರಣ:- ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ವೃತ್ತಿಪರಗೊಳಿಸುವುದು ಮತ್ತು ಅವುಗಳಿಗೆ ಒಂದು ನಿಗದಿತ ಮಾನದಂಡವನ್ನು ರೂಪಿಸುವುದು.
    • ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ: ಕ್ರೀಡಾ ಆಡಳಿತ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸುವುದ.

    ನಿಯಮಗಳ ಪ್ರಮುಖ ಅಂಶಗಳು:

    • ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳ ಕಡ್ಡಾಯ ಸೇರ್ಪಡೆ:- ಪ್ರತಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ‘ಸಾಮಾನ್ಯ ಸಭೆ’ಯಲ್ಲಿ ಕನಿಷ್ಠ 4 ಜನ ‘ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳನ್ನು’ (SOMs) ಕಡ್ಡಾಯವಾಗಿ ಸೇರಿಸಬೇಕು.
    • 50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು:- ನೇಮಕಗೊಂಡ ಒಟ್ಟು ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳಲ್ಲಿ ಕಡ್ಡಾಯವಾಗಿ 50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು.
    • SOM ಅರ್ಹತೆಯ 10 ಹಂತಗಳು:- ಈ ಶ್ರೇಣೀಕೃತ ಮಾನದಂಡದಲ್ಲಿ ನಿಗದಿಪಡಿಸಲಾಗಿದೆ. ಅವು ಈ ಕೆಳಗಿನoತಿವೆ,
      • ಇದು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ , ಪ್ಯಾರಾಲಿಂಪಿಕ್ ಕ್ರೀಡಾಕೂಟ ಅಥವಾ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ  ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಿಂದ ಹಿಡಿದು, 
      • ರಾಷ್ಟ್ರೀಯ ಕ್ರೀಡಾಕೂಟ ಅಥವಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳವರೆಗೆ ವ್ಯಾಪಿಸಿದೆ.
    • ಅನರ್ಹತಾ ಮಾನದಂಡಗಳು:- ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ದೋಷಿಗಳಿಗೆ ಸಾಮಾನ್ಯ ಸಭೆಯ ಸದಸ್ಯತ್ವ, ಕಾರ್ಯಕಾರಿ ಸಮಿತಿ ಚುನಾವಣೆಗಳು ಅಥವಾ ಅಥ್ಲೀಟ್ ಸಮಿತಿಗಳಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಗಿದೆ.
    • ರಾಷ್ಟ್ರೀಯ ಕ್ರೀಡಾ ಮಂಡಳಿಯು:- ಮಾನ್ಯತೆ, ಅಂಗಸಂಸ್ಥೆಗಳ ನೋಂದಣಿ ಮತ್ತು ಆಡಳಿತ ಅಥವಾ ನಿಧಿ ದುರುಪಯೋಗಕ್ಕೆ ಸಂಬಂಧಿಸಿದ ತನಿಖೆಗಳ ಮೇಲ್ವಿಚಾರಣೆಯನ್ನು ನಡೆಸುತ್ತದೆ.
    • ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿ:- ಇದು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊತ್ತಿದ್ದು, ಎಲ್ಲಾ ಸಮಯದಲ್ಲೂ ಕನಿಷ್ಠ 20 ಸದಸ್ಯರ ಬಲವನ್ನು ಹೊಂದಿರಬೇಕು.

    ಮರ್ಕೋಸೂರ್ ಒಪ್ಪಂದಕ್ಕೆ ಐರೋಪ್ಯಾ ಒಕ್ಕೂಟ (EU) ರಾಷ್ಟ್ರಗಳ ಅನುಮೋದನೆ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಫ್ರಾನ್ಸ್ ನೇತೃತ್ವದ ತೀವ್ರ ವಿರೋಧ ಮತ್ತು ಯುರೋಪಿನಾದ್ಯಂತ ರೈತರ ಕಳವಳಗಳ ಹೊರತಾಗಿಯೂ, ಐರೋಪ್ಯಾ ಒಕ್ಕೂಟ (EU) ದಕ್ಷಿಣ ಅಮೆರಿಕದ ಮರ್ಕೋಸೂರ್ ಬಣದೊಂದಿಗೆ ದೀರ್ಘಕಾಲದ ವಿಳಂಬವಾಗಿದ್ದ ವ್ಯಾಪಾರ ಒಪ್ಪಂದವನ್ನು ಅನುಮೋದಿಸಿದೆ.

    ‘ಮರ್ಕೋಸೂರ್’ ಬಗ್ಗೆ:

    • ಮರ್ಕೋಸೂರ್ 1991 ರಲ್ಲಿ ರಚನೆಯಾದ ದಕ್ಷಿಣ ಅಮೆರಿಕದ ಒಂದು ವ್ಯಾಪಾರ ಬಣವಾಗಿದೆ .
    • 5 ಸದಸ್ಯ ರಾಷ್ಟ್ರಗಳು:- ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ, ಉರುಗ್ವೆ ಮತ್ತು ಬೊಲಿವಿಯಾ (ಇದರ ಹೊಸ ಪೂರ್ಣಾವಧಿಯ ಸದಸ್ಯ ರಾಷ್ಟ್ರವಾಗಿದೆ).
    • ಉದ್ದೇಶ:- ಮುಕ್ತ ವ್ಯಾಪಾರ ಮತ್ತು ಆರ್ಥಿಕ ಏಕೀಕರಣವನ್ನು ಸಾಧಿಸುವುದು ಇದರ ಉದ್ದೇಶವಾಗಿದೆ.
    • ಗಮನಿಸಿ:- ಈ ಮೊದಲು ಸದಸ್ಯ ರಾಷ್ಟ್ರವಾಗಿದ್ದ ವೆನೆಜುವೆಲಾವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.

    ಐರೋಪ್ಯಾ ಒಕ್ಕೂಟ -ಮರ್ಕೋಸೂರ್ ಮುಕ್ತ ವ್ಯಾಪಾರ ಒಪ್ಪಂದ:

    • ಸುಂಕ ಕಡಿತ:- ಸುಂಕ ಕಡಿತದ ವಿಷಯದಲ್ಲಿ ಇದು ಐರೋಪ್ಯಾ ಒಕ್ಕೂಟ (EU)ದ ಸಾರ್ವಕಾಲಿಕ ಅತಿದೊಡ್ಡ ಒಪ್ಪಂದವಾಗಿದ್ದು, EU ರಫ್ತುಗಳ ಮೇಲಿನ €4 ಬಿಲಿಯನ್‌ಗೂ ಹೆಚ್ಚು ಸುಂಕಗಳನ್ನು ರದ್ದುಗೊಳಿಸುತ್ತದೆ.
    • €111 ಬಿಲಿಯನ್ ವ್ಯಾಪಾರ ಮೌಲ್ಯ:- ಈ ಎರಡು ಬಣಗಳ ನಡುವಿನ ವ್ಯಾಪಾರ ಮೌಲ್ಯವು €111 ಬಿಲಿಯನ್ ಆಗಿದೆ. EU ಪ್ರಮುಖವಾಗಿ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಸಾರಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದ್ದರೆ, ಕೃಷಿ ಉತ್ಪನ್ನಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತದೆ.
    • ಒಪ್ಪಂದದ ವಿವರಗಳು:- ಈ ಒಪ್ಪಂದದ ಅಡಿಯಲ್ಲಿ, 
    1. ಮರ್ಕೋಸೂರ್ 15 ವರ್ಷಗಳಲ್ಲಿ EU ರಫ್ತುಗಳ ಮೇಲಿನ 91% ರಷ್ಟು ಸುಂಕವನ್ನು ತೆಗೆದುಹಾಕುತ್ತದೆ. 
    2. ಅದೇ ರೀತಿ, EU 10 ವರ್ಷಗಳಲ್ಲಿ ಮರ್ಕೋಸೂರ್ ರಫ್ತುಗಳ ಮೇಲಿನ 92% ರಷ್ಟು ಸುಂಕವನ್ನು ರದ್ದುಗೊಳಿಸುತ್ತದೆ.
    3. ಕೋಟಾಗಳ ಕಾಯ್ದಿರಿಸುವಿಕೆ:- ‘ಸೂಕ್ಷ್ಮ ಕೃಷಿ ಸರಕುಗಳ’ ಮೇಲೆ ಎರಡೂ ಕಡೆಯವರು ಕೋಟಾಗಳನ್ನು ಕಾಯ್ದುಕೊಂಡಿದ್ದಾರೆ. ಆದಾಗ್ಯೂ, EU ಗೋಮಾಂಸ ಆಮದು ಕೋಟಾಗಳನ್ನು ಹೆಚ್ಚಿಸಲಿದೆ ಮತ್ತು ಮರ್ಕೋಸೂರ್, ಸುಂಕ ರಹಿತ ಚೀಸ್ ಆಮದಿಗೆ ಅನುಮತಿ ನೀಡಲಿದೆ.

    DRDO ದಿಂದ 3ನೇ ತಲೆಮಾರಿನ MPATGM ನ ಯಶಸ್ವಿ ಹಾರಾಟ ಪರೀಕ್ಷೆ

    ಸಾಮಾನ್ಯ ಅಧ್ಯಯನ- 3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಚಲಿಸುವ ಗುರಿಯ ಮೇಲೂ ‘ಟಾಪ್ ಅಟ್ಯಾಕ್’ (ಮೇಲ್ಭಾಗದಿಂದ ಆಕ್ರಮಣ ಮಾಡುವ) ಸಾಮರ್ಥ್ಯವನ್ನು ಹೊಂದಿರುವ, 3ನೇ ತಲೆಮಾರಿನ ‘ಫೈರ್ ಅಂಡ್ ಫರ್ಗೆಟ್’ ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.

    ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಬಗ್ಗೆ:

    • ಈ ‘ಫೈರ್ ಅಂಡ್ ಫರ್ಗೆಟ್’ ಕ್ಷಿಪಣಿಯನ್ನು DRDO ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದೆ.
    • ‘ಫೈರ್ ಅಂಡ್ ಫರ್ಗೆಟ್’ (ಹಾರಿಸಿ ಮರೆತುಬಿಡು) ಮಾದರಿಯ ಕ್ಷಿಪಣಿ:- ಇದು ಉಡಾವಣೆಗೆ ಮುನ್ನವೇ ಗುರಿಯನ್ನು ಬಂಧಿಸುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಉಡಾವಣೆಯ ನಂತರ ಇದಕ್ಕೆ ಬಳಕೆದಾರನಿಂದ ಹೆಚ್ಚಿನ ಮಾರ್ಗದರ್ಶನ ಅಥವಾ ನಿಯಂತ್ರಣದ ಅಗತ್ಯವಿರುವುದಿಲ್ಲ.
    • ಇದು ಇಮೇಜಿಂಗ್ ಇನ್ಫ್ರಾರೆಡ್ ಹೋಮಿಂಗ್ ಸೀಕರ್, ಟ್ಯಾಂಡೆಮ್ ಸಿಡಿತಲೆ, ಆಲ್-ಎಲೆಕ್ಟ್ರಿಕ್ ಕಂಟ್ರೋಲ್ ಆಕ್ಚುಯೇಶನ್ ಸಿಸ್ಟಮ್, ಫೈರ್ ಕಂಟ್ರೋಲ್ ಸಿಸ್ಟಮ್, ಪ್ರೊಪಲ್ಷನ್ ಸಿಸ್ಟಮ್ ಮತ್ತು ಉನ್ನತ-ಕಾರ್ಯಕ್ಷಮತೆಯ ಸೈಟಿಂಗ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನಗಳನ್ನು ಹೊಂದಿದೆ.
    • ಈ ಕ್ಷಿಪಣಿಯು ಹಗಲು ಮತ್ತು ರಾತ್ರಿ ಯುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥವಾಗಿದೆ ಮತ್ತು ಆಧುನಿಕ ಪ್ರಮುಖ ಯುದ್ಧ ಟ್ಯಾಂಕ್‌ಗಳನ್ನು ಪರಿಣಾಮಕಾರಿಯಾಗಿ ಸೋಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
    • ಇದನ್ನು ಟ್ರೈಪಾಡ್ ಮತ್ತು ಸೇನಾ ವಾಹನ ಉಡಾವಣೆ ಎರಡರಿಂದಲೂ ಉಡಾವಣೆ ಮಾಡಬಹುದು.

    38ನೇ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ

    ಸಾಮಾನ್ಯ ಅಧ್ಯಯನ- 2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಫ್ರೆಂಚ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರರ ಸಹ-ಅಧ್ಯಕ್ಷತೆಯಲ್ಲಿ ನಡೆದ 38ನೇ ‘ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ’ದ ಸಂದರ್ಭದಲ್ಲಿ, ಭಾರತ ಮತ್ತು ಫ್ರಾನ್ಸ್ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದವು.

    ಭಾರತ-ಫ್ರಾನ್ಸ್ ಸಂಬಂಧಗಳು:

    • ಜನವರಿ 26, 1998 ರಂದು ಕಾರ್ಯತಂತ್ರದ ಪಾಲುದಾರಿಕೆ ಪ್ರಾರಂಭ:- ಇದು ಭಾರತದ ಮೊಟ್ಟಮೊದಲ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.
    • ಡಸಾಲ್ಟ್ ಏವಿಯೇಷನ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿ:- ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ.
    • ಪ್ರಾಜೆಕ್ಟ್ P-75ನ ಅಡಿಯಲ್ಲಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು ನಿರ್ಮಾಣ:- ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ, ಭಾರತದಲ್ಲಿ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ; ಇದರಲ್ಲಿ ‘ಐಎನ್‌ಎಸ್ ವಾಗ್ಶೀರ್’ ಇತ್ತೀಚಿನದ್ದಾಗಿದೆ. 
    • ‘ರಫೇಲ್-ಎಂ’ ಯುದ್ಧ ವಿಮಾನಗಳ ಖರೀದಿ:- ಉಭಯ ರಾಷ್ಟ್ರಗಳು ಭಾರತೀಯ ನೌಕಾಪಡೆಗಾಗಿ 26 ‘ರಫೇಲ್-ಎಂ’ ಯುದ್ಧ ವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದವನ್ನು (IGA) ಅಧಿಕೃತವಾಗಿ ಅಂತಿಮಗೊಳಿಸಿವೆ.
    • ಜಂಟಿ ಸಮರಾಭ್ಯಾಸಗಳು:- ಶಕ್ತಿ, ವರುಣ, ಫ್ರಿನ್ಜೆಕ್ಸ್-23 (Shakti, Varuna, FRINJEX-23).
    • ಐರೋಪ್ಯ ಒಕ್ಕೂಟದೊಳಗೆ ಭಾರತದ 5ನೇ ಅತಿದೊಡ್ಡ ವ್ಯಾಪಾರ ಪಾಲುದಾರ:- ಮೊದಲ 4 ಸ್ಥಾನಗಳು- ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಇಟಲಿ ಮತ್ತು ಜರ್ಮನಿ.
    • ಭಾರತದ ಏಕೀಕೃತ ಪಾವತಿ ವ್ಯವಸ್ಥೆ (UPI):- ಫ್ರಾನನಲ್ಲಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ಯಶಸ್ವಿಯಾಗಿದೆ.
    • ಜಂಟಿ ಮಿಷನ್‌ಗಳು:- 
    • TRISHNA (ತ್ರಿಷ್ಠಾ)- ಉಪಗ್ರಹ ಮಿಷನ್,
    • ಸಮುದ್ರ ವಲಯದ ಜಾಗೃತಿ (MDA) ವ್ಯವಸ್ಥೆಗಳು, 
    • ನೆಲದ ಮೇಲೆ ನಿಲ್ದಾಣ ಬೆಂಬಲ (ಗ್ರೌಂಡ್ ಸ್ಟೇಷನ್ ಸಪೋರ್ಟ್).
    • ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA): ವಿಶ್ವದಾದ್ಯಂತ ಸೌರಶಕ್ತಿಯನ್ನು ಉತ್ತೇಜಿಸಲು 2015 ರಲ್ಲಿ ಭಾರತ ಮತ್ತು ಫ್ರಾನ್ಸ್ ಇದನ್ನು ಜಂಟಿಯಾಗಿ ಸ್ಥಾಪಿಸಿದವು.

    ಪುಷ್ಪಗಳ ಕಣಿವೆ (Valley of Flowers)

    ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ: 

    • ಪುಷ್ಪಗಳ ಕಣಿವೆಯ ಸಮೀಪದಲ್ಲಿ ಕಾಡ್ಗಿಚ್ಚು ಹಬ್ಬುತ್ತಿದ್ದು, ಅರಣ್ಯ ಇಲಾಖೆಯು ವಾಯುಪಡೆಯ ಸಹಾಯವನ್ನು ಕೋರುವ ಅನಿವಾರ್ಯತೆ ಉಂಟಾಗಿದೆ.

    ಪುಷ್ಪಗಳ ಕಣಿವೆಯ ಬಗ್ಗೆ:

    • ಸ್ಥಳ:- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ‘ಪುಷ್ಪಗಳ ಕಣಿವೆ ರಾಷ್ಟ್ರೀಯ ಉದ್ಯಾನವನ’ದ ಒಳಭಾಗದಲ್ಲಿದೆ. ಇದು “ನಂದಾ ದೇವಿ ಜೀವಗೋಳ ಮೀಸಲು ಪ್ರದೇಶ”ದ ಭಾಗವಾಗಿದೆ.
    • ಪುಷ್ಪಗಳ ಕಣಿವೆ ಎಂದು ಕರೆಯಲು ಕಾರಣ:- ಮುಂಗಾರು ಮಳೆಯ ಸಮಯದಲ್ಲಿ ಇಡೀ ಕಣಿವೆಯು ಸಾವಿರಾರು ಅರಳುವ ಹೂವುಗಳಿಂದ ಜೀವಂತಿಕೆ ಪಡೆಯುವುದರಿಂದ ಈ ಹೆಸರು ಕರೆಯುತ್ತಾರೆ. 
    • 1982 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. 
    • 2005 ರಲ್ಲಿ ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ವನ್ನಾಗಿ ಘೋಷಿಸಲಾಯಿತು. ಏಕೆಂದರೆ ಇದರ ಸಾಟಿಯಿಲ್ಲದ ಸೌಂದರ್ಯ ಮತ್ತು ವಿಶಿಷ್ಟ ಉನ್ನತದ (ಆಲ್ಪೈನ್) ಪರಿಸರ ವ್ಯವಸ್ಥೆಯಿಂದಾಗಿ.
    • ಬ್ರಿಟಿಷ್ ಪರ್ವತಾರೋಹಿ ಫ್ರಾಂಕ್ ಸ್ಮಿತ್ ಅವರು 1931 ರಲ್ಲಿ ಆಕಸ್ಮಿಕವಾಗಿ ಈ ಸ್ಥಳವನ್ನು ತಲುಪಿದಾಗ, ಈ ಕಣಿವೆಯನ್ನು ಅಧಿಕೃತವಾಗಿ ಕಂಡುಹಿಡಿಯಲಾಯಿತು.

    NPS ವಾತ್ಸಲ್ಯ ಯೋಜನೆ, 2025

    ಸಾಮಾನ್ಯ ಅಧ್ಯಯನ- 2/ ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು, ಅಪ್ರಾಪ್ತ ವಯಸ್ಕರಿಗೆ ಜೀವನದ ಆರಂಭಿಕ ಹಂತದಲ್ಲೇ ಪಿಂಚಣಿ ಸೌಲಭ್ಯವನ್ನು ಒದಗಿಸಲು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಚೌಕಟ್ಟನ್ನು ವಿಸ್ತರಿಸುವ ಮೂಲಕ ‘ಎನ್‌ಪಿಎಸ್ ವಾತ್ಸಲ್ಯ ಯೋಜನೆ, 2025’ ಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

    NPS ವಾತ್ಸಲ್ಯ ಯೋಜನೆ, 2025 ರ ಬಗ್ಗೆ:

    • ಅಪ್ರಾಪ್ತ ವಯಸ್ಕರಿಗಾಗಿ ಪಿಂಚಣಿ ಉಳಿತಾಯ ಯೋಜನೆ:- ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯ ಅಡಿಯಲ್ಲಿ ಬರುತ್ತದೆ.
    • ಪೋಷಕರಿಗೆ ಅಥವಾ ಕಾನೂನುಬದ್ಧ ಪಾಲಕರಿಗೆ ಅವಕಾಶ:- ಇದು ಮಗುವಿನ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರಿಗೆ ಎನ್‌ಪಿಎಸ್ ಖಾತೆಯನ್ನು ತೆರೆಯಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

    ಪ್ರಮುಖ ವೈಶಿಷ್ಟ್ಯಗಳು:

    • ಅರ್ಹತೆ:- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಾಗರಿಕರು.
    • ಖಾತೆಯ ಪ್ರಕಾರ:- ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ವೈಯಕ್ತಿಕ ಪಿಂಚಣಿ ಖಾತೆ ತೆರೆಯಲಾಗುವುದು.
    • ನಿರ್ವಹಣೆ:- ಮಗುವು ಪ್ರಾಪ್ತ ವಯಸ್ಕನಾಗುವವರೆಗೆ ಪೋಷಕರು ಅಥವಾ ಪಾಲಕರು ಈ ಖಾತೆಯನ್ನು ನಿರ್ವಹಿಸುತ್ತಾರೆ.
    • ಪರಿವರ್ತನೆ:- 18 ವರ್ಷ ತುಂಬಿದ ನಂತರ, ಖಾತೆಯು ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ.
    • ಅತ್ಯಲ್ಪ ಅಗತ್ಯ ಪ್ರಮಾಣದ ಕೊಡುಗೆ:- ಕನಿಷ್ಠ ಆರಂಭಿಕ ಮತ್ತು ವಾರ್ಷಿಕ ಪಾಲು ₹250 ಆಗಿದ್ದು, ಪಾಲುದಾರಿಕೆಯ ಮೇಲೆ ಯಾವುದೇ ಗರಿಷ್ಠ ಮಿತಿಯಿಲ್ಲ.
    • ಪಿಂಚಣಿ ನಿಧಿ ವ್ಯವಸ್ಥಾಪಕರ (PFMs) ಮೂಲಕ ಹೂಡಿಕೆ:- ಎನ್‌ಪಿಎಸ್ ಮಾರ್ಗಸೂಚಿಗಳ ಪ್ರಕಾರ ಹಣವನ್ನು ಹೂಡಿಕೆ ಮಾಡಲಾಗುತ್ತದೆ.

    ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ  ಡಿ.ಬಿ. ವೆಂಕಟೇಶ್ ವರ್ಮಾ ಅವರನ್ನು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು 2026–27ರ ಅವಧಿಗೆ ‘ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ’ಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. 
    • ಭಾರತೀಯರೊಬ್ಬರು ಈ ಹುದ್ದೆಯನ್ನು ಹೊಂದಿರುವುದು ಇದೇ ಮೊದಲ ಬಾರಿಯಾಗಿದೆ.

    ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿಯ ಬಗ್ಗೆ:

    • ಸ್ಥಾಪನೆ:- 1978
    • ರಚನೆ:- ಈ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ ಮತ್ತು ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಇದರಲ್ಲಿ ಪದನಿಮಿತ್ತ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.
    • ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ:- ಇದು ಶಸ್ತ್ರಾಸ್ತ್ರ ಮಿತಿ ಮತ್ತು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಲಹೆ ನೀಡುತ್ತದೆ.

    NIRANTAR (ನಿರಂತರ್) ವೇದಿಕೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು, NIRANTAR/ನಿರಂತರ್ (ಪರಿವರ್ತನೆ, ಹೊಂದಿಕೆ ಮತ್ತು ಸ್ಥಿತಿಸ್ಥಾಪಕತ್ವದ ನಿರ್ಮಾಣಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸಂಶೋಧನೆ ಮತ್ತು ಅನ್ವಯಕ್ಕಾಗಿ ರಾಷ್ಟ್ರೀಯ ಸಂಸ್ಥೆ) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

    NIRANTAR (ನಿರಂತರ್) ಸಂಸ್ಥೆಯ ಬಗ್ಗೆ:

    • ಸ್ಥಾಪನೆ:- ಇದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC)ದ ಅಡಿಯಲ್ಲಿರುವ ಸಂಸ್ಥೆಗಳ ಒಂದು ವೇದಿಕೆಯಾಗಿದ್ದು, ಸಮನ್ವಯ ಮತ್ತು ಸಹಯೋಗವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
    • ಉದ್ದೇಶ:- ಇದರ ನಾಲ್ಕು ವಿಭಾಗಗಳು, ಅಭಿವೃದ್ಧಿಗಾಗಿ ಸಂಪನ್ಮೂಲಗಳ, ವಿಶೇಷವಾಗಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಅವುಗಳ ಸಂಶೋಧನೆ, ಮೌಲ್ಯಮಾಪನ ಮತ್ತು ಬಳಕೆಯ ಮೇಲೆ ಗಮನಹರಿಸುತ್ತವೆ.
    • ಮಹತ್ವ:- ಅಭಿವೃದ್ಧಿಗಾಗಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ‘ನಿರಂತರ್’ ವೇದಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

    ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ವೇದಿಕೆಗಳು 10 ನಿಮಿಷಗಳ ವಿತರಣೆ ಸೇವೆಯನ್ನು ನಿಲ್ಲಿಸಲಿವೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಸರ್ಕಾರದ ಆದೇಶದ ಬಳಿಕ, ಭಾರತದ ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ಕಂಪನಿಗಳಾದ ಸ್ವಿಗ್ಗಿ ಮತ್ತು ಜೆಪ್ಟೋ, ತಮ್ಮ ತ್ವರಿತ ವಾಣಿಜ್ಯ ಸೇವೆಯನ್ನು ಇನ್ನು ಮುಂದೆ ‘10 ನಿಮಿಷಗಳ ಸೇವೆ’ ಎಂದು ಪ್ರಚಾರ ಮಾಡುವುದನ್ನು ನಿಲ್ಲಿಸಲು ತಮ್ಮ ಬ್ರಾಂಡಿಂಗ್ ಅನ್ನು ಬದಲಿಸಿಕೊಂಡಿವೆ.
    • ಈ ಕ್ರಮವು ಗಿಗ್ ಕಾರ್ಮಿಕರ ಹೆಚ್ಚಿನ ಸುರಕ್ಷತೆ, ರಕ್ಷಣೆ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

    ಗಿಗ್ ಕಾರ್ಮಿಕರ ಬಗ್ಗೆ:

    • ಸಾಮಾಜಿಕ ಭದ್ರತಾ ಸಂಹಿತೆ, 2020:- ಇದರ ಪ್ರಕಾರ, ಗಿಗ್ ಕಾರ್ಮಿಕರು ಎಂದರೆ ಸಾಂಪ್ರದಾಯಿಕ ಉದ್ಯೋಗದಾತ–ಉದ್ಯೋಗಿ ಸಂಬಂಧದ ಹೊರತಾಗಿ, ಕೆಲಸಗಳನ್ನು ನಿರ್ವಹಿಸಿ ಅಥವಾ ಕೆಲಸದ ವ್ಯವಸ್ಥೆಗಳಲ್ಲಿ ಭಾಗವಹಿಸಿ, ಅಂತಹ ಚಟುವಟಿಕೆಗಳಿಂದ ಆದಾಯವನ್ನು ಗಳಿಸುವ ವ್ಯಕ್ತಿಗಳು.
    • ನೀತಿ ಆಯೋಗದ 2020–21 ದತ್ತಾoಶದ ಪ್ರಕಾರ:- 77 ಲಕ್ಷ ಕಾರ್ಮಿಕರು ಗಿಗ್ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇದು 2029–30 ರ ವೇಳೆಗೆ 2.35 ಕೋಟಿಗೆ ವಿಸ್ತರಿಸುವ ನಿರೀಕ್ಷೆಯಿದೆ.

    ಭಾರತದಲ್ಲಿ ಗಿಗ್ ಕಾರ್ಮಿಕರಿಗಾಗಿ ಇರುವ ಉಪಕ್ರಮಗಳು:

    • ಸಾಮಾಜಿಕ ಭದ್ರತಾ ಸಂಹಿತೆ 2020:- ಇದು ಗಿಗ್ ಕಾರ್ಮಿಕರಿಗೆ ಜೀವ ಮತ್ತು ಅಂಗವೈಕಲ್ಯ ರಕ್ಷಣೆ, ಅಪಘಾತ ವಿಮೆ ಮುಂತಾದ ವಿವಿಧ ಪ್ರಯೋಜನಗಳನ್ನು ಕಲ್ಪಿಸುತ್ತದೆ.
    • ಇ-ಶ್ರಮ್ ಪೋರ್ಟಲ್:- ಇದು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು ಸ್ಥಾಪಿಸುತ್ತದೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಹಾಗೂ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
    • ಕರ್ನಾಟಕ ವೇದಿಕೆ (ಪ್ಲಾಟ್‌ಫಾರ್ಮ್) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2024: ಇದು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ಮತ್ತು ಕಲ್ಯಾಣ ಶುಲ್ಕವನ್ನು ವಿಧಿಸಲು ಅವಕಾಶ ನೀಡುತ್ತದೆ.

    ಉಬ್ಬು (ಪಫರ್) ಮೀನು ವಿಷಬಾಧೆ

    ಸಾಮಾನ್ಯ ಅಧ್ಯಯನ-3/ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ವಿಜ್ಞಾನಿಗಳು ಭಾರತದಲ್ಲಿ ಪಫರ್‌ಫಿಶ್ ಸೇವನೆಯಿಂದ ವಿಷಪೂರಿತವಾದ ಮೊದಲ ಪ್ರಕರಣವನ್ನು ದೃಢಪಡಿಸಿದ್ದಾರೆ. ಈ ಘಟನೆಯು, ನದಿ ಮೂಲಗಳಲ್ಲಿರುವ ಆದರೆ ಈವರೆಗೂ ಹೆಚ್ಚಾಗಿ ಗುರುತಿಸಲ್ಪಡದ ಆರೋಗ್ಯದ ಅಪಾಯಗಳತ್ತ ಗಮನ ಸೆಳೆದಿದೆ.

    ಉಬ್ಬು ಮೀನಿನ (Pufferfish) ಬಗ್ಗೆ:

    • ಇದು ಟೆಟ್ರಾಓಡಾಂಟಿಫಾರ್ಮೀಸ್ (Tetraodontiformes) ಎಂಬ ವರ್ಗೀಕರಣ ಕ್ರಮಕ್ಕೆ ಸೇರಿದೆ.
    • ಇದನ್ನು ಸ್ಥಳೀಯವಾಗಿ ಟೋಡ್‌ ಮೀನು, ಪಟ್ಕಾ ಮೀನು, ಬಲೂನ್‌ ಮೀನು ಮತ್ತು ಫುಗು ಎಂತಲೂ ಕರೆಯಲಾಗುತ್ತದೆ.
    • ಜಾಗತಿಕ ಪಟ್ಟಿಗಳಲ್ಲಿ ಸರಿಸುಮಾರು 190–193 ಮಾನ್ಯವಾದ ಪ್ರಭೇದಗಳಿವೆ.
    • ಸರ್ವಭಕ್ಷಕ ಜೀವಿಗಳಾಗಿವೆ:- ಇವು “ಬೆಂಥಿಕ್” (ಜಲಮೂಲಗಳ ತಳಭಾಗದಲ್ಲಿ ವಾಸಿಸುವ) ಆವಾಸಸ್ಥಾನವನ್ನು ಹೊಂದಿವೆ. 
    • ಭಾರತದಲ್ಲಿ ವರದಿಯಾದ ಸಿಹಿನೀರಿನ ಉಬ್ಬು ಮೀನು ಪ್ರಭೇದಗಳು ಸಾಮಾನ್ಯವಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗೆ ಸ್ಥಳೀಯವಾಗಿವೆ ಮತ್ತು ಆರೋಗ್ಯಕರ ನದಿ ಪರಿಸರ ವ್ಯವಸ್ಥೆಗಳ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ.

    ಭಾರತದಲ್ಲಿನ ಸ್ಥಿತಿಗತಿ:

    • ಭಾರತೀಯ ಜಲಾನಯನ ಪ್ರದೇಶಗಳಲ್ಲಿ ಪ್ರಸ್ತುತವಾಗಿ 8 ಕುಲಗಳು (genera) ಮತ್ತು 32 ಪ್ರಭೇದದ ಉಬ್ಬು ಮೀನುಗಳು ಕಂಡು ಬರುತ್ತವೆ.
    • ಅವುಗಳ ಹಂಚಿಕೆಯು ನಿರ್ದಿಷ್ಟ ಪ್ರದೇಶಗಳು ಮತ್ತು ನದಿ ವ್ಯವಸ್ಥೆಗಳಿಗೆ, ಪ್ರಮುಖವಾಗಿ ಪಶ್ಚಿಮ ಘಟ್ಟಗಳು ಮತ್ತು ಗಂಗಾ, ಬ್ರಹ್ಮಪುತ್ರ ಹಾಗೂ ಮಹಾನದಿಯಂತಹ ಪ್ರಮುಖ ಜಲಾನಯನ ಪ್ರದೇಶಗಳಿಗೆ ಸೀಮಿತವಾಗಿದೆ.

    IUCN ಕೆಂಪು ಪಟ್ಟಿಯಲ್ಲಿ ಸ್ಥಿತಿಗತಿ:

    • ‘ಕುಬ್ಜ ಉಬ್ಬು ಮೀನನ್ನು ‘ದುರ್ಬಲ’ (VU) ಎಂದು ವರ್ಗೀಕರಿಸಲಾಗಿದೆ.

    ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ

    ಸಾಮಾನ್ಯ ಅಧ್ಯಯನ-2 / ಆಡಳಿತ, ಗ್ರಾಮೀಣಾಭಿವೃದ್ಧಿ

    ಇದೀಗ ಸುದ್ದಿಯಲ್ಲಿದೆ:

    • ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ, ಗ್ರಾಮೀಣ ಮಹಿಳೆಯರಿಗೆ ಕೃಷಿಯೇತರ ಜೀವನೋಪಾಯವನ್ನು ಬಲಪಡಿಸಲು “ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ”ಕ್ಕೆ ಚಾಲನೆ ನೀಡಲಾಗಿದೆ.
    • ಈ ಅಭಿಯಾನವು ಉದ್ಯಮ ಉತ್ತೇಜನಕ್ಕಾಗಿ 50,000 ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರದ ಕ್ರಮಗಳು:

    • ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP):- 
    1. ಅನುಷ್ಠಾನ:- ಕೆವಿಐಸಿ (KVIC)
    2. ಉದ್ದೇಶ:- ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಹೊಸ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲು. 
    3. ಸಹಾಯಧನ:- ಯೋಜನಾ ವೆಚ್ಚದ ಮೇಲೆ 35% ರಷ್ಟು ಸಹಾಯಧನವನ್ನು (ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು) ನೀಡುತ್ತದೆ. 
    4. ಸಾಲ:- ಇದು ನಿರುದ್ಯೋಗಿ ಯುವಕರು ಮತ್ತು ಕುಶಲಕರ್ಮಿಗಳನ್ನು ಗುರಿಯಾಗಿಸಿಕೊಂಡು ₹25 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.
    • ಆಸ್ಪೈರ್ (ASPIRE) ಯೋಜನೆ:- 
    1. ಸಚಿವಾಲಯ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
    2. ಉದ್ದೇಶ:- ಕೃಷಿ-ಗ್ರಾಮೀಣ ನವೋದ್ಯಮಗಳನ್ನು ಉತ್ತೇಜಿಸಲು ಗ್ರಾಮೀಣ ಪ್ರದೇಶಗಳಲ್ಲಿ ‘ಜೀವನೋಪಾಯ ವ್ಯಾಪಾರ ಇನ್ಕ್ಯುಬೇಟರ್‌’ಗಳಿಗೆ (LBIs) ಮೂಲಸೌಕರ್ಯ, ಕೌಶಲ್ಯ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗೆ ಬೆಂಬಲ. 
    3. ಧನಸಹಾಯ:- ₹1 ಕೋಟಿವರೆಗೆ.
    • ಲಖ್ ಪತಿ ದೀದಿ ಉಪಕ್ರಮ:- 
    1. ವ್ಯಾಖ್ಯಾನ:- ಕೃಷಿ ಅಥವಾ ಕೃಷಿಯೇತರ ಚಟುವಟಿಕೆಗಳ ಮೂಲಕ 4 ಋತುಗಳು/ ಚಕ್ರಗಳಲ್ಲಿ ವಾರ್ಷಿಕ ₹1 ಲಕ್ಷಕ್ಕೂ ಹೆಚ್ಚು (ತಿಂಗಳಿಗೆ ₹10,000+) ಕುಟುಂಬದ ಆದಾಯವನ್ನು ಗಳಿಸುವ ಸ್ವಸಹಾಯ ಸಂಘದ ಮಹಿಳೆಯರನ್ನು “ಲಖ್ ಪತಿ ದೀದಿ” ಎಂದು ಗುರುತಿಸಲಾಗುತ್ತದೆ.

    DAY – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಬಗ್ಗೆ:

      • 2011 ರಲ್ಲಿ ಪ್ರಾರಂಭ:- ಇದನ್ನು ಸ್ವರ್ಣಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆಯಿಂದ (SGSY) ಮರು ರೂಪಿಸಿ ಪ್ರಾರಂಭಿಸಲಾಯಿತು.
      • 2016 ರಲ್ಲಿ ಮರುನಾಮಕರಣ:- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM) ಅನ್ನು ‘DAY-NRLM’ ಎಂದು ಮರುನಾಮಕರಣ ಮಾಡಲಾಯಿತು.
      • ನೋಡಲ್ ಸಚಿವಾಲಯ:- ಗ್ರಾಮೀಣಾಭಿವೃದ್ಧಿ ಸಚಿವಾಲಯವು.
      • ಅನುದಾನದ ಮಾದರಿ:- ಇದು ಕೇಂದ್ರ ಪ್ರಯೋಜಿತ ಯೋಜನೆಯಾಗಿದ್ದು (ಸಾಮಾನ್ಯವಾಗಿ 60:40 ಅನುಪಾತ; ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ).
      • ಉದ್ದೇಶ:- ಬಡ ಗ್ರಾಮೀಣ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯ ಮತ್ತು ವರ್ಧಿತ ಆದಾಯವನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವುದು.
    • ಪ್ರಮುಖ ಕಾರ್ಯತಂತ್ರ:-
      • ಗ್ರಾಮೀಣ ಬಡ ಮಹಿಳೆಯರನ್ನು ಸ್ವಸಹಾಯ ಗುಂಪುಗಳಾಗಿ ಸಾರ್ವತ್ರಿಕವಾಗಿ ಒಗ್ಗೂಡಿಸುವುದು.
      • ಸಾಮರ್ಥ್ಯ ವರ್ಧನೆ, ಸಾಲ ಸೌಲಭ್ಯ ಮತ್ತು ಜೀವನೋಪಾಯದ ವೈವಿಧ್ಯೀಕರಣವನ್ನು ಒದಗಿಸುವುದು.
    • ಪ್ರಮುಖ ಗಮನಾರ್ಹ ಕ್ಷೇತ್ರಗಳು:-
      • ಕೃಷಿ ಜೀವನೋಪಾಯಗಳು.
      • ಕೃಷಿಯೇತರ ಜೀವನೋಪಾಯಗಳು ಮತ್ತು ಉದ್ಯಮಗಳು.
      • ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಸಬಲೀಕರಣ.
  • KSRTC ಯಿಂದ ‘ಸಾರಿಗೆ ಮಿತ್ರ’ ಆ್ಯಪ್ ಬಿಡುಗಡೆ

    KSRTC ಯಿಂದ ‘ಸಾರಿಗೆ ಮಿತ್ರ’ ಆ್ಯಪ್ ಬಿಡುಗಡೆ

    ಇದೀಗ ಸುದ್ದಿಯಲ್ಲಿದೆ: 

    • ಸಾರಿಗೆ ನೌಕರರ ಸೇವೆಗಳನ್ನು ಹೆಚ್ಚಿಸಲು ಕೆಎಸ್‌ಆರ್‌ಟಿಸಿ (KSRTC) ‘ಸಾರಿಗೆ ಮಿತ್ರ’ ಎಚ್‌ಆರ್‌ಎಂಎಸ್ (HRMS) ಮೊಬೈಲ್ ಆ್ಯಪ್ 2.0 ಅನ್ನು ಬಿಡುಗಡೆ ಮಾಡಿದೆ.

    ‘ಸಾರಿಗೆ ಮಿತ್ರ’- ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)- ಆವೃತ್ತಿ 2.0 ಆ್ಯಪ್ ನ ಬಗ್ಗೆ:

    • ಅಭಿವೃದ್ಧಿಪಡಿಸಿದವರು:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC).
    • ಪ್ರಾರಂಭಿಸಿದವರು:- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
    • ಉದ್ದೇಶ:- ಸ್ಮಾರ್ಟ್‌ಫೋನ್‌ಗಳ ಮೂಲಕ ನೈಜ-ಸಮಯದ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾರಿಗೆ ನೌಕರರಿಗೆ ಬೆರಳ ತುದಿಯಲ್ಲೇ ವ್ಯಾಪಕ ಶ್ರೇಣಿಯ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
    • ಗುರಿ:- ಕೆಎಸ್‌ಆರ್‌ಟಿಸಿ ನೌಕರರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ದತ್ತಾಂಶದೊಂದಿಗೆ ಡಿಜಿಟಲ್ ಮೂಲಕ ಸುಲಭವಾಗಿ ವ್ಯವಹರಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
    • ಪ್ರಮುಖ ಲಕ್ಷಣಗಳು:- ಇದು ಭೌಗೋಳಿಕ ಗಡಿ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ಮೇಲ್ವಿಚಾರಣೆ ಮತ್ತು ಒಂದು ಕ್ಲಿಕ್ ಮೂಲಕ ಮಾಸಿಕ ವೇತನ ಪಾವತಿ ವಿವರ ಪತ್ರಗಳನ್ನು ಡೌನ್‌ಲೋಡ್ ಮಾಡುವ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿದೆ.
    • ಕಾರ್ಯವಿಧಾನ:- ಈ ಆ್ಯಪ್ ನಿರ್ಣಾಯಕ ವೈಯಕ್ತಿಕ ಮತ್ತು ವೃತ್ತಿಪರ ದಾಖಲೆಗಳಿಗೆ ತಕ್ಷಣದ ಪ್ರವೇಶವನ್ನು ನೀಡುವ ಸಮಗ್ರ ಮೊಬೈಲ್ ಬಳಕೆದಾರ ಮುಖಪುಟವಾಗಿ ಕಾರ್ಯನಿರ್ವಹಿಸುತ್ತದೆ.
  • ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ | ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ | ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ | ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ | ಭದ್ರಕಾಳಿ ಶಾಸನ | ಪ್ಯಾಕ್ಸ್ ಸಿಲಿಕಾ

    ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತ ಮತ್ತು ಜರ್ಮನಿ ದೇಶಗಳು ರಕ್ಷಣೆ, ತಂತ್ರಜ್ಞಾನ, ಆರೋಗ್ಯ, ಇಂಧನ ಮತ್ತು ಮಾನವ ಸಂಪನ್ಮೂಲಗಳಂತಹ ವಲಯಗಳಲ್ಲಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ.

    ಭಾರತ ಮತ್ತು ಜರ್ಮನಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:

      • 1951ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆ:- 2026ಕ್ಕೆ ಈ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಳ್ಳಲಿವೆ.
      • 2000ನೇ ಇಸವಿಯಿಂದ ಕಾರ್ಯತಂತ್ರದ ಪಾಲುದಾರಿಕೆ:- 2025ಕ್ಕೆ ಈ ಪಾಲುದಾರಿಕೆಯು 25 ವರ್ಷಗಳನ್ನು ಪೂರೈಸಲಿದೆ.
      • ರಕ್ಷಣಾ ಸಹಕಾರ:- ಜರ್ಮನಿಯು ಭಾರತದೊಂದಿಗೆ MILAN, PASSEX ಮತ್ತು EX TARANG SHAKTI-1 ನಂತಹ ಅನೇಕ ಬಹುಪಕ್ಷೀಯ ಸಮರಾಭ್ಯಾಸಗಳಲ್ಲಿ ಭಾಗವಹಿಸಿದೆ.
      • ವ್ಯಾಪಾರ ಸಹಕಾರ:- 2024ರಲ್ಲಿ ಜರ್ಮನಿಯು ಭಾರತದ 8ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಐರೋಪ್ಯ ಒಕ್ಕೂಟ (EU)ದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇದೇ ವೇಳೆ, ಭಾರತವು ಜರ್ಮನಿಯ 23ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
      • ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ, 2022:- ಜರ್ಮನಿಯು 2030ರ ವೇಳೆಗೆ €10 ಬಿಲಿಯನ್ ನೆರವು ನೀಡುವುದಾಗಿ ಹೇಳಿದೆ.
        • ನವೀಕರಿಸಬಹುದಾದ ಇಂಧನ, ಮೆಟ್ರೋ ಯೋಜನೆಗಳು, ಹಸಿರು ಕಾರಿಡಾರ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿನ ಸಹಯೋಗವು ಭಾರತದ ಹವಾಮಾನ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಬದ್ಧತೆಗಳನ್ನು ಈಡೇರಿಸಲು ನೇರವಾಗಿ ಸಹಕರಿಸುತ್ತದೆ.
      • ಬಹುಪಕ್ಷೀಯ ಸಹಕಾರ:-
    • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ನೀಡುವುದು.
      • ಜಿ-20, ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು COP ಹವಾಮಾನ ಮಾತುಕತೆಗಳ ವೇದಿಕೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸುವುದು.
      • ಭಾರತೀಯ ವಲಸಿಗರು:- ಜರ್ಮನಿಯಲ್ಲಿ ಸುಮಾರು 2.46 ಲಕ್ಷ (2023ರ ಅಂಕಿಅಂಶಗಳ ಪ್ರಕಾರ) ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಭಾರತೀಯ ಮೂಲದ ಜನರಿದ್ದಾರೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ

    ಸಾಮಾನ್ಯ ಅಧ್ಯಯನ- 3/ ಪರಿಸರ ಮತ್ತು ಪರಿಸರ ವಿಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, COP29 ಶೃಂಗಸಭೆಯಲ್ಲಿ, ಹವಾಮಾನ ಹಣಕಾಸಿನ ವಿತರಣೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಅಡಿಯಲ್ಲಿ ಇಂಗಾಲದ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ನಿರ್ಧರಿಸಲಾಯಿತು.
    • ಇದಕ್ಕೂ ಮುನ್ನ, ಜಂಟಿ ಸಾಲದ ಕಾರ್ಯವಿಧಾನ (JCM)ಕ್ಕೇ ಸಹಿ ಹಾಕುವ ಮೂಲಕ ಭಾರತವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ಪರಿಣಾಮಕಾರಿಯಾಗಿ 6.2ನೇ ವಿಧಿಯ ಅನುಷ್ಠಾನವಾಗಿದ್ದು, ಅಂತರರಾಷ್ಟ್ರೀಯ ಇಂಗಾಲದ ಮಾರುಕಟ್ಟೆ ಸಹಕಾರಕ್ಕೆ ಭಾರತದ ಅಧಿಕೃತ ಪ್ರವೇಶವನ್ನು ಸೂಚಿಸುತ್ತದೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಕುರಿತು:

    • ರಾಷ್ಟ್ರಗಳು ತಮ್ಮ ‘ರಾಷ್ಟ್ರೀಯ ನಿರ್ಧರಿತ ಕೊಡುಗೆ’ (NDCs)ಗಳನ್ನು ಸಾಧಿಸಲು ಸ್ವಯಂಪ್ರೇರಿತವಾಗಿ ಪರಸ್ಪರ ಸಹಕರಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ಈ ವಿಧಿಯು ಸೃಷ್ಟಿಸುತ್ತದೆ. ಇದು ಪ್ರಮುಖವಾಗಿ 2 ಮಾರ್ಗಗಳನ್ನು ಒಳಗೊಂಡಿದೆ:
    1. ವಿಧಿ 6.2- ಅಂತರರಾಷ್ಟ್ರೀಯವಾಗಿ ವರ್ಗಾಯಿಸಲಾದ ಹೊರಸೂಸುವಿಕೆಯ ಕಡಿತದ ಫಲಿತಾಂಶಗಳು (ITMOs):- ಇದು ಹೊರಸೂಸುವಿಕೆ ಕಡಿತಗಳ ವ್ಯಾಪಾರದ ಮೂಲಕ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರಕ್ಕೆ ಅವಕಾಶ ನೀಡುತ್ತದೆ. 
    2. ವಿಧಿ 6.4- ಪ್ಯಾರಿಸ್ ಒಪ್ಪಂದದ ಸಾಲದ ಕಾರ್ಯವಿಧಾನ (PACM):- ಇದು ಕೇಂದ್ರೀಕೃತ ಸಾಲದ ಕಾರ್ಯವಿಧಾನ(PACM) ವನ್ನು ಸ್ಥಾಪಿಸುತ್ತದೆ. ಇದು ಹಿಂದಿನ “ಶುದ್ಧ ಅಭಿವೃದ್ಧಿ ಕಾರ್ಯವಿಧಾನ” (CDM) ದಿಂದ ವಿಕಸನಗೊಂಡಿದ್ದು, ಇಂಗಾಲದ ಶ್ರೇಯಗಳನ್ನು ಉತ್ಪಾದಿಸುವ ಯೋಜನೆಗಳನ್ನು ಮೌಲ್ಯೀಕರಿಸಲು ಮತ್ತು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ.
    • ಈ 2 ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಪರಿಸರ ಸಮಗ್ರತೆಯನ್ನು ಖಚಿತಪಡಿಸಲು ಹಾಗೂ ದ್ವಿಗುಣ ಎಣಿಕೆಯನ್ನು ತಪ್ಪಿಸಲು ಕಠಿಣವಾದ ಲೆಕ್ಕಪತ್ರ ನಿಯಮಗಳಿಂದ ಬೆಂಬಲಿತವಾಗಿವೆ.

    ಭಾರತ ಮತ್ತು ಜಂಟಿ ಸಾಲದ ಕಾರ್ಯವಿಧಾನ (JCM)ದ ಬಗ್ಗೆ:

    ಭಾರತವು ಜಪಾನ್‌ನೊಂದಿಗಿನ JCM ಪಾಲುದಾರಿಕೆಯ ಮೂಲಕ 6ನೇ ವಿಧಿಗೆ ಪ್ರವೇಶಿಸಿರುವುದು, ವಿಧಿ 6.2ರ ಪ್ರಾಯೋಗಿಕ ಅನುಷ್ಠಾನವನ್ನು ಪ್ರತಿನಿಧಿಸುತ್ತದೆ.

    • JCM ನ ಕಾರ್ಯವಿಧಾನ:- ಈ ಚೌಕಟ್ಟು ಕಡಿಮೆ ಇಂಗಾಲದ ಮತ್ತು ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡುತ್ತದೆ.
    • ಪರಸ್ಪರ ಲಾಭ:- ಇದು ಜಪಾನ್‌ಗೆ ಹೊರಸೂಸುವಿಕೆ ಕಡಿತದ ಲಾಭವನ್ನು ನೀಡಿದರೆ, ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಮತ್ತು ಆರ್ಥಿಕ ನೆರವಿನ ರೂಪದಲ್ಲಿ ಲಾಭದಾಯಕವಾಗಿದೆ.

    ಭಾರತ ಸರ್ಕಾರವು 6ನೇ ವಿಧಿಯ ಅಡಿಯಲ್ಲಿ ಗುರುತಿಸಲಾದ 13 ಅರ್ಹ ಚಟುವಟಿಕೆಗಳು:

    • ಇವು ಹೆಚ್ಚಿನ ಪ್ರಭಾವ ಬೀರುವ ಈ ಕೆಳಗಿನ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿವೆ. ಅವುಗಳೆಂದರೆ,
    1. ನವೀಕರಿಸಬಹುದಾದ ಇಂಧನ:- ಶೇಖರಣಾ ವ್ಯವಸ್ಥೆಯುಳ್ಳ ನವೀಕರಿಸಬಹುದಾದ ಇಂಧನ ಮತ್ತು ಕಡಲಾಚೆಯ ಪವನ ಶಕ್ತಿ.
    2. ಹಸಿರು ಇಂಧನಗಳು:- ಹಸಿರು ಜಲಜನಕ ಮತ್ತು ಸಂಕುಚಿತ ಜೈವಿಕ ಅನಿಲ.
    3. ಸಾರಿಗೆ ವಲಯ: ಸುಸ್ಥಿರ ವಿಮಾನಯಾನ ಇಂಧನ ಮತ್ತು ಇಂಧನ ಕೋಶ ಆಧಾರಿತ ಚಲನಶೀಲತೆ.
    4. ಇಂಧನ ದಕ್ಷತೆ:- ಅತ್ಯುನ್ನತ ಇಂಧನ ದಕ್ಷತೆಯ ತಂತ್ರಜ್ಞಾನಗಳ ಅಳವಡಿಕೆ.
    5. ಇಂಗಾಲದ ನಿರ್ವಹಣೆ:- ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ (CCUS).

    ಮಹತ್ವ:

    • ಈ ಕ್ರಮಗಳು ಭಾರತದ ಅಭಿವೃದ್ಧಿ ಆದ್ಯತೆಗಳು ಮತ್ತು ದೀರ್ಘಕಾಲೀನ ಇಂಗಾಲದ ಅಂಶವನ್ನು ಕಡಿತಗೊಳಿಸುವ (ಡಿ-ಕಾರ್ಬೊನೈಸೇಶನ್) ಗುರಿಗಳ ನಡುವಿನ ಕಾರ್ಯತಂತ್ರದ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಂತಹ ‘ಕಠಿಣ-ನಿಯಂತ್ರಣದ’ ಕೈಗಾರಿಕೆಗಳಿಗೆ ಇವು ನಿರ್ಣಾಯಕವಾಗಿವೆ.

    ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ

    ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಸ್ಥಾನದ ಬಮನ್ವಾಸ್ ಕಂಕರ್ ಪಂಚಾಯತಿ, ರಾಜ್ಯದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಈ ಪಂಚಾಯತಿ 7 ಚಿಕ್ಕ ಗ್ರಾಮಗಳನ್ನು ಒಳಗೊಂಡಿದೆ.

    ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ:

    • ರಾಸಾಯನಿಕ ಮುಕ್ತ ಕೃಷಿ ಪದ್ದತಿ:- ಇದು ಜಾನುವಾರುಗಳನ್ನು (ಆದ್ಯತೆ ಮೇರೆಗೆ ಸ್ಥಳೀಯ ತಳಿಯ ಹಸು) ಒಳಗೊಂಡ ಸಮಗ್ರ ನೈಸರ್ಗಿಕ ಕೃಷಿ ವಿಧಾನಗಳು ಮತ್ತು ಭಾರತೀಯ ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ವೈವಿಧ್ಯಮಯ ಬೆಳೆ ಪದ್ಧತಿ ವ್ಯವಸ್ಥೆಯನ್ನು ಒಳಗೊಂಡಿದೆ.
    • ಕೃಷಿ ತ್ಯಾಜ್ಯ ಮರುಬಳಕೆಯನ್ನು ಆಧರಿಸಿದೆ:- ಇದರಲ್ಲಿ ಜೈವಿಕ ಹೊದಿಕೆ ಹಾಕುವುದು (ಬಯೋಮಾಸ್ ಮಲ್ಚಿಂಗ್), ಹಸುಮೂತ್ರ ಮತ್ತು ಸಗಣಿಯ ಮಿಶ್ರಣಗಳ ಬಳಕೆ, ಮಣ್ಣಿನ ಗಾಳಿಯಾಡುವಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಕೃತಕ ರಾಸಾಯನಿಕ ಒಳಹರಿವುಗಳನ್ನು ನಿಷೇಧಿಸುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

    ರಾಷ್ಟ್ರೀಯ ನೈಸರ್ಗಿಕ ಕೃಷಿ ಗುರಿ (NMNF)ಯ ಬಗ್ಗೆ:

    • ಪ್ರಾರಂಭ:- ನವೆಂಬರ್ 2024.
    • ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಉದ್ದೇಶ:- ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಮತ್ತು ಪರಿಸರ ವ್ಯವಸ್ಥೆ ಆಧಾರಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು.

    ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ

    ಸಾಮಾನ್ಯ ಅಧ್ಯಯನ-3/ ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • 2026ನೇ ವರ್ಷದ ಮೊದಲ ಉಡಾವಣೆಯಾಗಿದ್ದ ಇಸ್ರೋದ PSLV-C62 ಮಿಷನ್, ತನ್ನ 16 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ವಿಫಲವಾಯಿತು. ಇದರಿಂದ, ದೀರ್ಘಕಾಲದಿಂದ ವಿಶ್ವಾಸಾರ್ಹವಾಗಿದ್ದ PSLV ರಾಕೆಟ್‌ಗೆ ಇದು ಸತತವಾಗಿ ಎರಡನೇ ವೈಫಲ್ಯತೆ ಎಂಬುದಾಗಿ ದಾಖಲಾಗಿದೆ.

    PSLV-C62 / EOS-N1 ಮಿಷನ್ ನ ಬಗ್ಗೆ:

    • ಇದು ಭಾರತದ PSLVಯ 64ನೇ ಹಾರಾಟ ಮತ್ತು ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌’ (NSIL)ನ 9ನೇ ವಾಣಿಜ್ಯ ಗುರಿ ಆಗಿತ್ತು.
    • ಇದು EOS-N1 ಭೂ ವೀಕ್ಷಣಾ ಉಪಗ್ರಹದೊಂದಿಗೆ 15 ಸಹ-ಪ್ರಯಾಣಿಕ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿತ್ತು.
    • EOS-N1 ಉಪಗ್ರಹವು ಪರಿಸರ ಮೇಲ್ವಿಚಾರಣೆ, ಸಂಪನ್ಮೂಲಗಳ ನಕ್ಷೆ ತಯಾರಿಕೆ ಮತ್ತು ವಿಪತ್ತು ನಿರ್ವಹಣೆಗಾಗಿ ರೂಪಿಸಲಾದ ಭೂ ವೀಕ್ಷಣಾ ಉಪಗ್ರಹವಾಗಿದೆ.

    ಧ್ರುವೀಯ ಉಪಗ್ರಹ ಉಡಾವಣಾ ವಾಹನ (PSLV)ಗಳ ಬಗ್ಗೆ:

    • ಇದು ಭಾರತದ 3ನೇ ತಲೆಮಾರಿನ ಉಡಾವಣಾ ವಾಹನವಾಗಿದೆ.
    • “ಇಸ್ರೋದ ವರ್ಕ್‌ಹಾರ್ಸ್”:- ಕಾರಣ, ವಿವಿಧ ಉಪಗ್ರಹಗಳನ್ನು ‘ಕೆಳ ಭೂ ಕಕ್ಷೆಗಳಿಗೆ’ (LEO) ಹೆಚ್ಚಿನ ಯಶಸ್ಸಿನ ದರದೊಂದಿಗೆ ಸೇರಿಸುತ್ತದೆ.
    • ದ್ರವ ಹಂತಗಳನ್ನು ಅಳವಡಿಸಿಕೊಂಡಿರುವ ಭಾರತದ ಮೊದಲ ಉಡಾವಣಾ ವಾಹನ ಇದಾಗಿದೆ.
    • ಇದು 4 ಹಂತದ ಉಡಾವಣಾ ವಾಹನವಾಗಿದ್ದು, ಪ್ರತಿ ಹಂತವು ತನ್ನದೇ ಆದ ಎಂಜಿನ್ ಮತ್ತು ಇಂಧನವನ್ನು ಹೊಂದಿರುತ್ತದೆ.

    ಪ್ರಮುಖ ಉಡಾವಣೆಗಳು:

    • ಅಕ್ಟೋಬರ್‌, 1994ರಲ್ಲಿ ಇದರ ಮೊದಲ ಯಶಸ್ವಿ ಉಡಾವಣೆ ನಡೆಯಿತು.
    • PSLV ಪ್ರಮುಖ 2 ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಅವುಗಳೆಂದರೆ,
    1. 2008ರಲ್ಲಿ ಚಂದ್ರಯಾನ-1 
    2. 2013ರಲ್ಲಿ ಮಂಗಳಯಾನ (ಮಾರ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆ) 
    • ಇವು ನಂತರ ಕ್ರಮವಾಗಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಪ್ರಯಾಣ ಬೆಳೆಸಿದವು.
    • ಇದು ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾದ ‘ಆಸ್ಟ್ರೋಸ್ಯಾಟ್’ ಅನ್ನು ಸಹ ಉಡಾವಣೆ ಮಾಡಿದೆ.

    ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV):

    • ಇದು ಭಾರತದ ಅತಿದೊಡ್ಡ 4ನೇ ತಲೆಮಾರಿನ ಉಡಾವಣಾ ವಾಹನವಾಗಿದೆ. PSLV ಉಡಾವಣಾ ವಾಹನದ ಮಿತಿಗಳನ್ನು ಮೀರುವ ಉದ್ದೇಶದಿಂದ, ಹೆಚ್ಚಿನ ಭಾರವಾದ ಉಪಗ್ರಹಗಳನ್ನು ಹೆಚ್ಚಿನ ಎತ್ತರದ ಕಕ್ಷೆಗಳಿಗೆ ಕೊಂಡೊಯ್ಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • 3 ಹಂತದ ಉಡಾವಣ ವಾಹನವಾಗಿದೆ:- ಇದು 1,750 ಕೆಜಿಯಷ್ಟು ತೂಕವನ್ನು ಕೆಳ ಭೂ ಕಕ್ಷೆಗೆ (600 ಕಿ.ಮೀ ವರೆಗೆ) ಮತ್ತು ಕಡಿಮೆ ಭಾರದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.
    • ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ:- ಅಂದರೆ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕವನ್ನು ಒಟ್ಟಿಗೆ ಉಪಯೋಗಿಸುತ್ತವೆ. ಇವು ಹಿಂದಿನ ಉಡಾವಣಾ ವಾಹನಗಳಿಗಿಂತ ಅತೀ ಹೆಚ್ಚಿನ ನೂಕುಬಲವನ್ನು ನೀಡುತ್ತವೆ.
    • LVM-3 (ಹಿಂದೆ GSLV Mk III):- ಇದು GSLVಯ ಸುಧಾರಿತ ಆವೃತ್ತಿಯಾಗಿದೆ. ಇದು ಘನ, ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ. 
    1. ಇದು ಕೆಳ ಭೂಮಿಯ ಕಕ್ಷೆಗೆ (2,000 ಕಿಮೀ ವರೆಗೆ) ಗರಿಷ್ಠ 8,000 ಕೆ.ಜಿ ಭಾರವನ್ನು,
    2. ಭೂಸ್ಥಾಯೀ ಕಕ್ಷೆಗೆ (36,000 ಕಿಮೀ) ಗರಿಷ್ಠ 4,000 ಕೆ.ಜಿ ಭಾರವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯದಿಂದಾಗಿ ಇದಕ್ಕೆ ‘ಬಾಹುಬಲಿ’ ಎಂಬ ಹೆಸರು ಬಂದಿದೆ.

    LVM-3 ಯ ಪ್ರಮುಖ ಉಡಾವಣೆಗಳು:

    • LVM-3 ನ ಮೊದಲ ಯಶಸ್ವಿ ಮಿಷನ್ 2017ರಲ್ಲಿ GSAT-19 ನೊಂದಿಗೆ ಉಡಾವಣೆಯಾಯಿತು.
    • ನಂತರ 2019ರಲ್ಲಿ ಚಂದ್ರಯಾನ-2 ಮತ್ತು 2023ರಲ್ಲಿ ಚಂದ್ರಯಾನ-3 ಉಡಾವಣೆಯಾದವು.

    ಗಮನಿಸಿ: 

    ಇಸ್ರೋ ತನ್ನ ಅತ್ಯಂತ ಭಾರವಿರುವ ಉಡಾವಣಾ ವಾಹನವಾದ ‘ಲೂನಾರ್ ಮಾಡ್ಯೂಲ್ ಉಡಾವಣಾ ವಾಹನ’ (LMLV) ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು 2035ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, 2040ಕ್ಕೆ ಯೋಜಿಸಲಾದ ಭಾರತದ ಮೊದಲ ಮಾನವ ಸಹಿತ ಚಂದ್ರಯಾನ ಸೇರಿದಂತೆ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳನ್ನು ಬೆಂಬಲಿಸಲಿದೆ. 

    ಭದ್ರಕಾಳಿ ಶಾಸನ

    ಸಾಮಾನ್ಯ ಅಧ್ಯಯನ- 1/ ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ‘ಪ್ರಭಾಸ್ ಪಟಾನ್’ ಶ್ರೀಮಂತ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ ಎಂಬ ವಿಷಯವು ಮುನ್ನೆಲೆಗೆ ಬಂದಿದೆ. ಇಲ್ಲಿನ ಭದ್ರಕಾಳಿ ಶಾಸನ, ತಾಮ್ರದ ಫಲಕಗಳು ಮತ್ತು ಸ್ಮಾರಕ ಕಲ್ಲುಗಳು ಈ ಸ್ಥಳದ ಸಮೃದ್ಧಿ, ಶೌರ್ಯ ಮತ್ತು ಭಕ್ತಿಯನ್ನು ಎತ್ತಿ ತೋರಿಸುತ್ತವೆ.
    • ಗಮನಿಸಿ:- ಪ್ರಭಾಸ್ ಪಟಾನ್ (ಇದನ್ನು ‘ದೇವ್ ಪಟಾನ್’ ಎಂತಲೂ ಕರೆಯುತ್ತಾರೆ) ಗುಜರಾತ್‌ನ ವೆರಾವಲ್‌ನಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ತಾಣವಾಗಿದೆ. ಇದು ಪ್ರಸಿದ್ಧ ಸೋಮನಾಥ ದೇವಾಲಯದ ನೆಲೆಬೀಡಾಗಿದೆ. ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದನ್ನು ಹೊಂದಿರುವ ಈ ತಾಣವು, ಭಾರತದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

    ‘ಭದ್ರಕಾಳಿ ಶಾಸನ’ದ ಬಗ್ಗೆ:

    • ಇದನ್ನು ಕ್ರಿ.ಶ. 1169 ರಲ್ಲಿ (ವಲಭಿ ಸಂವತ್ 850 ಮತ್ತು ವಿಕ್ರಮ ಸಂವತ್ 1255) ಕೆತ್ತಲಾಗಿದೆ. ಪ್ರಸ್ತುತ ಇದು ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ.
    • ಇದು ಪ್ರಭಾಸ್ ಪಟಾನ್‌ನಲ್ಲಿರುವ ವಸ್ತುಸಂಗ್ರಹಾಲಯದ ಬಳಿ, ಭದ್ರಕಾಳಿ ರಸ್ತೆಯಲ್ಲಿರುವ ಹಳೆಯ ರಾಮ ಮಂದಿರದ ಪಕ್ಕದಲ್ಲಿದೆ.
    • ಇದು ಅನ್ಹಿಲ್ವಾಡ್ ಪಟಾನ್‌ನ ಮಹಾರಾಜಾಧಿರಾಜ ಕುಮಾರಪಾಲನ ಆಧ್ಯಾತ್ಮಿಕ ಗುರುಗಳಾದ ‘ಪರಮ ಪಾಶುಪತ ಆಚಾರ್ಯ ಶ್ರೀಮಾನ್ ಭಾವಬೃಹಸ್ಪತಿ’ ಅವರ ಕುರಿತಾದ ಪ್ರಶಂಸಾತ್ಮಕ ಶಾಸನವಾಗಿದೆ.

    ಈ ಶಾಸನದ ವೈಶಿಷ್ಟ್ಯಗಳು:

    • ಈ ಶಾಸನವು ಸೋಮನಾಥ ದೇವಾಲಯದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸವನ್ನು ದಾಖಲಿಸುತ್ತದೆ.
    • ನಾಲ್ಕು ಯುಗಗಳಲ್ಲಿ ಸೋಮನಾಥ ಮಹಾದೇವ ದೇವಾಲಯದ ನಿರ್ಮಾಣವನ್ನು ಇದು ಉಲ್ಲೇಖಿಸುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ:
      • ಸತ್ಯ ಯುಗದಲ್ಲಿ:- ಚಂದ್ರನು (ಸೋಮ) ಇದನ್ನು ಚಿನ್ನದಿಂದ ನಿರ್ಮಿಸಿದನು.
      • ತ್ರೇತಾ ಯುಗದಲ್ಲಿ:- ರಾವಣನು ಇದನ್ನು ಬೆಳ್ಳಿಯಿಂದ ನಿರ್ಮಿಸಿದನು.
      • ದ್ವಾಪರ ಯುಗದಲ್ಲಿ: ಶ್ರೀ ಕೃಷ್ಣನು ಇದನ್ನು ಮರದಿಂದ ನಿರ್ಮಿಸಿದನು.
      • ಕಲಿ ಯುಗದಲ್ಲಿ: ರಾಜ ಭೀಮದೇವ ಸೋಲಂಕಿ ಸುಂದರವಾದ ಕಲಾತ್ಮಕ ಕಲ್ಲಿನ ದೇವಾಲಯವನ್ನು ನಿರ್ಮಿಸಿದನು.
    • ರಾಜ ಭೀಮದೇವ ಸೋಲಂಕಿಯು ಹಿಂದಿನ ಅವಶೇಷಗಳ ಮೇಲೆ ನಾಲ್ಕನೇ ದೇವಾಲಯವನ್ನು ನಿರ್ಮಿಸಿದನು ಎಂಬುದನ್ನು ಇತಿಹಾಸವು ದೃಢೀಕರಿಸುತ್ತದೆ. ತದನಂತರ ಮಹಾರಾಜಾಧಿರಾಜ ಕುಮಾರಪಾಲನು ಕ್ರಿ.ಶ. 1169 ರಲ್ಲಿ ಅದೇ ಸ್ಥಳದಲ್ಲಿ ಐದನೇ ದೇವಾಲಯವನ್ನು ನಿರ್ಮಿಸಿದನು.

    ಈ ಶಾಸನದ ಮಹತ್ವ:

    • ಪ್ರಭಾಸ್ ಪಟಾನ್ ಸನಾತನ ಧರ್ಮದ ಆಧ್ಯಾತ್ಮಿಕ ಹೆಮ್ಮೆಯನ್ನು ಸಂಕೇತಿಸುತ್ತದೆ.
    • ಭದ್ರಕಾಳಿ ಶಾಸನವು ಸೋಲಂಕಿ ಆಡಳಿತಗಾರರು ಮತ್ತು ಭಾವಬೃಹಸ್ಪತಿಯಂತಹ ವಿದ್ವಾಂಸರ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಇಲ್ಲಿನ ಶ್ರೀಮಂತ ಕಲಾತ್ಮಕ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ ಪರಂಪರೆಯು ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ. ಭಕ್ತಿ ಮತ್ತು ಸ್ವಾಭಿಮಾನ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಇದು ದೃಢೀಕರಿಸುತ್ತದೆ.

    ಪ್ಯಾಕ್ಸ್ ಸಿಲಿಕಾ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಸೇರ್ಪಡೆಗೊಳ್ಳಲು ಮುಂದಿನ ತಿಂಗಳು ಭಾರತವನ್ನು ಆಹ್ವಾನಿಸಲಾಗುವುದು ಎಂದು ಅಮೆರಿಕದ ರಾಯಭಾರಿ ಘೋಷಿಸಿದ್ದಾರೆ.

    ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದ ಬಗ್ಗೆ:

    • ಉದ್ದೇಶ:- ಇದು ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ. ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ‘ಸಿಲಿಕಾನ್ ಪೂರೈಕೆ ಸರಪಳಿ’ಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
    • ಶೃಂಗಸಭೆ:- ಮೊದಲ ಪ್ಯಾಕ್ಸ್ ಸಿಲಿಕಾ ಶೃಂಗಸಭೆಯು ಡಿಸೆಂಬರ್ 2025 ರಲ್ಲಿ ನಡೆಯಿತು. 
    • ಸದಸ್ಯ ರಾಷ್ಟ್ರಗಳು:- ಆಸ್ಟ್ರೇಲಿಯಾ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ನೆದರ್ಲ್ಯಾಂಡ್ಸ್ ಮತ್ತು ಯುಎಇ ದೇಶಗಳು ಈ ಉಪಕ್ರಮಕ್ಕೆ ಸಹಿ ಹಾಕಿವೆ.
    • ಸದಸ್ಯ ರಾಷ್ಟ್ರಗಳ ವ್ಯಾಪ್ತಿ:- ಜಾಗತಿಕ ಕೃತಕ ಬುದ್ಧಿಮತ್ತೆ (AI) ಪೂರೈಕೆ ಸರಪಳಿಯನ್ನು ಸಶಕ್ತಗೊಳಿಸುವ ಅತ್ಯಂತ ಪ್ರಮುಖ ಕಂಪನಿಗಳು ಮತ್ತು ಹೂಡಿಕೆದಾರರನ್ನು ಒಟ್ಟಾರೆಯಾಗಿ ಈ ದೇಶಗಳು ಹೊಂದಿವೆ.
    • ಕತಾರ್:- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ  ಸಹಿ ಹಾಕಿದ ಇತ್ತೀಚಿನ ರಾಷ್ಟ್ರವಾಗಿದೆ.

    ಮಹತ್ವ:

    • ಬಲವಂತದ ಅವಲಂಬನೆಯನ್ನು ಕಡಿಮೆ ಮಾಡುವುದು.
    • ಕೃತಕ ಬುದ್ಧಿಮತ್ತೆಗೆ ಅಡಿಪಾಯವಾಗಿರುವ ಸಾಮಗ್ರಿಗಳನ್ನು ಮತ್ತು ಸಾಮರ್ಥ್ಯಗಳನ್ನು ರಕ್ಷಿಸುವುದು.
    • ಸಮಾನ ಮನಸ್ಕ ರಾಷ್ಟ್ರಗಳು ಪರಿವರ್ತಕ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಮತ್ತು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು.

    ಭಾರತಕ್ಕೆ ಇದರ ಮಹತ್ವ:

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಭಾರತವು ಸೇರ್ಪಡೆಯಾಗುವುದರಿಂದ, ನಿರ್ಣಾಯಕ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಂತಹ ಹೆಚ್ಚು ಸುರಕ್ಷಿತ ಪೂರೈಕೆದಾರರತ್ತ ತನ್ನ ಆಮದು ಮೂಲಗಳನ್ನು ವೈವಿಧ್ಯಮಯಗೊಳಿಸಲು ಇದು ನೆರವಾಗಲಿದೆ.
  • ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆಗೆ DTLMS- ಮೊಬೈಲ್ ಆಪ್ ಬಿಡುಗಡೆ

    ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆಗೆ DTLMS- ಮೊಬೈಲ್ ಆಪ್ ಬಿಡುಗಡೆ

    ಇದೀಗ ಸುದ್ದಿಯಲ್ಲಿದೆ:

    • ಬೆಸ್ಕಾಂ (BESCOM), ‘DTLMS- ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

    DTLMS ಬಗ್ಗೆ:

    • DTLMS ಪೂರ್ಣ ರೂಪ:- ‘ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅಪ್ಲಿಕೇಶನ್.
    • ಅಭಿವೃದ್ಧಿಪಡಿಸಿದವರು:- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ).
    • ಪ್ರಾಥಮಿಕ ಉದ್ದೇಶ:- ಗ್ರಾಹಕರಿಗೆ ಗುಣಮಟ್ಟದ ಮತ್ತು ತಡೆರಹಿತ ವಿದ್ಯುತ್ ಸರಬರಾಜನ್ನು ಖಚಿತಪಡಿಸುವುದು.
    • ಗುರಿ ವ್ಯಾಪ್ತಿ:- ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿರುವ 5 ಲಕ್ಷಕ್ಕೂ ಹೆಚ್ಚು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆ ಮತ್ತು ವ್ಯವಸ್ಥಿತವಾಗಿ ತಡೆಗಟ್ಟುವ ನಿರ್ವಹಣೆಯನ್ನು ಕೈಗೊಳ್ಳಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ.
    • ಕಾರ್ಯವಿಧಾನ:- ಈ ಆ್ಯಪ್ ಅಧಿಕಾರಿಗಳಿಗೆ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಕಾರ್ಯಾಚರಣೆ, ದುರಸ್ತಿ ಮತ್ತು ದಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
    • ಸ್ವತ್ತುಗಳ ನೈಜ-ಸಮಯದ ಮೇಲ್ವಿಚಾರಣೆ:- ಕ್ಷೇತ್ರಾಧಿಕಾರಿಗಳು ಎಲ್ಲಾ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ವಿವರಗಳನ್ನು ನೇರವಾಗಿ ಅಪ್ಲಿಕೇಶನ್‌ಗೆ ನಮೂದಿಸಬಹುದು.
  • ಎಚ್‌ಪಿವಿ ಲಸಿಕೆ

    ಎಚ್‌ಪಿವಿ ಲಸಿಕೆ

    ಸಾಮಾನ್ಯ ಅಧ್ಯಯನ-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಬೃಹತ್ ಜನಸಂಖ್ಯೆ ಆಧಾರಿತ ಅಧ್ಯಯನವೊಂದರ ಪ್ರಕಾರ, ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯ ಹೆಚ್ಚಿನ ವ್ಯಾಪ್ತಿಯು, ಲಸಿಕೆ ಪಡೆಯದ ಮಹಿಳೆಯರಲ್ಲೂ ಸಹ ‘ಕ್ಯಾನ್ಸರ್-ಪೂರ್ವ ಗರ್ಭಕಂಠದ ಗಾಯಗಳನ್ನು’ ಕಡಿಮೆ ಮಾಡಬಲ್ಲದು ಎಂದು ತೋರಿಸಿದೆ. ಇದು ಬಲವಾದ ‘ಸಾಮೂಹಿಕ ರೋಗನಿರೋಧಕ ಶಕ್ತಿಯ’ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

    ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:

    • ಗರ್ಭಕಂಠದ ಕ್ಯಾನ್ಸರ್ ಮಹಿಳೆಯ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಇರುವ ಪ್ರವೇಶ ದ್ವಾರ) ಬೆಳೆಯುತ್ತದೆ.
    • ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆ:- ಬಹುತೇಕ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (99%) ‘ಅಪಾಯಕಾರಿ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನೊಂದಿಗೆ ಸಂಪರ್ಕ ಹೊಂದಿವೆ. ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯವಾದ ವೈರಸ್ ಆಗಿದೆ.
    • 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್:- ಇದು ವಿಶ್ವದಾದ್ಯಂತ ಮಹಿಳೆಯರಲ್ಲಿ ಕಂಡುಬರುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
    • ಭಾರತದಲ್ಲಿ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್:- ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಇದಾಗಿದೆ.
    • ಚಿಕಿತ್ಸೆ ನೀಡಬಹುದು:- ರೋಗವನ್ನು ಮೊದಲೇ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಿದರೆ, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ.
    • ‘ಗಾರ್ಡಾಸಿಲ್’ ಮತ್ತು ‘ಸರ್ವವ್ಯಾಕ್’ ಲಸಿಕೆಗಳು:- ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಪ್ರಸ್ತುತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
    1. ಮೆರ್ಕ್‌  ಅಭಿವೃದ್ಧಿ ಪಡಿಸಿದ ‘ಗಾರ್ಡಾಸಿಲ್’ 
    2. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ‘ಸರ್ವವ್ಯಾಕ್’.
  • ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

    ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

    ಇದೀಗ ಸುದ್ದಿಯಲ್ಲಿದೆ: 

    • ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನಿಭಾಯಿಸಲು ರಾಜಸ್ವ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ.

    ಈ ಆಯೋಗದ ಶಿಫಾರಸು ಮತ್ತು ಉದ್ದೇಶ:

    • ಪ್ರಸ್ತಾಪಿಸಿದವರು:- ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ.
    • ಮೂಲ ಉದ್ದೇಶ:- ಕಳೆದ 2 ಆರ್ಥಿಕ ವರ್ಷಗಳಲ್ಲಿ ಹೆಚ್ಚಿರುವ ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜಸ್ವ ವೆಚ್ಚವನ್ನು ಆದ್ಯತೆ ಮತ್ತು ತರ್ಕಬದ್ಧಗೊಳಿಸುವುದು.
    • ಆದ್ಯತೆಯ ಕ್ರಮ:- 
    • ಕಾರ್ಯಚಟುವಟಿಕೆಗೆ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಗೊಳಿಸಲು ಮತ್ತು 
    • ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು. 

    ಪ್ರಮುಖ ಶಿಫಾರಸುಗಳು:

      • ಯೋಜನೆಗಳ ಪರಿಷ್ಕರಣೆ:- ಹಳೆಯದಾದ, ಅನುದಾನವಿಲ್ಲದ ಅಥವಾ ಸಾಲ ನಿರ್ವಹಣೆಯ ಭಾಗವಾಗಿರುವ ಸುಮಾರು 1,000 ಲೆಕ್ಕ ಶೀರ್ಷಿಕೆಗಳು ಅಥವಾ ಯೋಜನೆಗಳನ್ನು (ಒಟ್ಟು 2,874) ಕೊನೆಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಶಿಫಾರಸು ಮಾಡಿದೆ.
      • ನೇಮಕಾತಿ ಸುಧಾರಣೆಗಳು:-
    • ಹೊಸ ಹುದ್ದೆಗಳ ಸೃಜನೆಯನ್ನು ನಿರ್ಬಂಧಿಸುವುದು.
        • ವಾರ್ಷಿಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವುದು.
    • ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಹೊರಗುತ್ತಿಗೆಯನ್ನು ಸ್ಥಗಿತಗೊಳಿಸುವುದು.

    ಸಿಬ್ಬಂದಿ ಅಂಕಿಅಂಶಗಳು:

    • ಖಾಲಿ ಹುದ್ದೆಗಳು:- 42 ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳ ಪೈಕಿ 2.94 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಆಯೋಗವು ಗುರುತಿಸಿದೆ.

    ಪ್ರಸ್ತುತ ಸ್ಥಿತಿ:- ಪ್ರಸ್ತುತ ಕೇವಲ 5.18 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಸುಮಾರು 70,000 ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ.

  • ರಾಷ್ಟ್ರೀಯ ಯುವ ದಿನಾಚರಣೆ 2026

    ರಾಷ್ಟ್ರೀಯ ಯುವ ದಿನಾಚರಣೆ 2026

    ಇತರೆ ವಿಷಯಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಸ್ವಾಮಿ ವಿವೇಕಾನಂದ ಅವರ  ಜನ್ಮದಿನದ ಅಂಗವಾಗಿ, ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.

    ರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ:

    • ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನ:- ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ಇದನ್ನು ಆಚರಿಸಲಾಗುತ್ತದೆ.
    • ಯುವಜನರ ಸಾಮರ್ಥ್ಯದ ಮೇಲಿನ ಅವರ ಅಚಲವಾದ ನಂಬಿಕೆಯು, ದೇಶದ ಯುವ ನಾಗರಿಕರ ಮನದಲ್ಲಿ ಇಂದಿಗೂ ಆಳವಾಗಿ ಪ್ರತಿಧ್ವನಿಸುತ್ತಿದೆ.
    • ಶಿಕ್ಷಣ, ನವೋದ್ಯಮಗಳು, ಸೇವೆ ಮತ್ತು ನಾಯಕತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರ ಪ್ರಮುಖ ಪಾತ್ರವನ್ನು ‘ರಾಷ್ಟ್ರೀಯ ಯುವ ದಿನ 2026’ ಎತ್ತಿ ತೋರಿಸುತ್ತದೆ.
    • ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಈ ದಿನವು, ಯುವಕರು ಕೇವಲ ಉತ್ತರಾಧಿಕಾರಿಗಳಲ್ಲ, ಬದಲಿಗೆ “2047 ರ ವಿಕಸಿತ ಭಾರತ ಕನಸಿನತ್ತ ಸಾಗುವ ಭಾರತದ ಪಯಣದ ಶಿಲ್ಪಿಗಳು” ಎಂಬುದನ್ನು ಒತ್ತಿಹೇಳುತ್ತದೆ.

    ಯುವಕರಿಗಾಗಿ ಸರ್ಕಾರದ ಉಪಕ್ರಮಗಳು:

    • ಮೇರಾ ಯುವ ಭಾರತ್ (MY Bharat): ಇದು ಸ್ವಾಯತ್ತ, ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.  
    • ಉದ್ದೇಶ:- ಇದು ಸ್ವಯಂಸೇವಕತನ, ಕೌಶಲ್ಯ ಅಭಿವೃದ್ಧಿ, ನಾಯಕತ್ವ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುತ್ತದೆ.
    • ರಾಷ್ಟ್ರೀಯ ಸೇವಾ ಯೋಜನೆ (NSS):- ಇದು 
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
    • ಉದ್ದೇಶ:- ಸಮುದಾಯ ಸೇವೆಯ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ ಮಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ.
    • ಅಗ್ನಿಪಥ ಯೋಜನೆ:- 
    • ಪ್ರಾರಂಭ:- ಕೇಂದ್ರ ಸರ್ಕಾರವು 2022 ರಲ್ಲಿ
    • ಉದ್ದೇಶ:- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರನ್ನೂ ಭಾರತದ ಮೂರೂ ಸೇನೆಗಳ ‘ಅಧಿಕಾರಿ ಹುದ್ದೆಗಿಂತ ಕೆಳಗಿನ ಶ್ರೇಣಿಗೆ’ 4 ವರ್ಷಗಳ ಅವಧಿಗೆ ‘ಅಗ್ನಿವೀರರನ್ನಾಗಿ’ ನೇಮಿಸಿಕೊಳ್ಳಲಾಗುತ್ತದೆ.
    • PM-SETU ಯೋಜನೆ:- 
    • PM-SETU ವಿಸ್ತರಿತ ರೂಪ:- ಉನ್ನತೀಕರಿಸಿದ ಐಟಿಐಗಳ ಮೂಲಕ – ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ ಯೋಜನೆ.
    • ಪ್ರಾರಂಭ:- 2025 ರ ಅಕ್ಟೋಬರ್‌ 
    • ಉದ್ದೇಶ:- ಇದು ಭಾರತದ ‘ಕೈಗಾರಿಕಾ ತರಬೇತಿ ಸಂಸ್ಥೆಗಳ’ (ITIs) ಜಾಲವನ್ನು ಆಧುನೀಕರಿಸಲು ಮತ್ತು ಜಾಗತಿಕ ಕೈಗರಿಕೋದ್ಯಮದ ಮಾನದಂಡಗಳೊಂದಿಗೆ ವೃತ್ತಿಪರ ತರಬೇತಿಯನ್ನು ಸಂಯೋಜಿಸಲು ರೂಪಿಸಲಾಗಿದೆ 
    • ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಕೌಶಲ್ಯ ಭಾರತ ಮಿಷನ್ (SIM):- 
    • ಪ್ರಾರಂಭ:- 2015 ರಲ್ಲಿ, ವಿಶ್ವ ಯುವ ಕೌಶಲ್ಯ ದಿನದಂದು.
    • ಉದ್ದೇಶ:- ಇದು ವ್ಯಾಪಕವಾದ ಕೇಂದ್ರ ಮತ್ತು ಸಂಸ್ಥೆಗಳ ಜಾಲದ ಮೂಲಕ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ.
    • ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY):- 
    • ಪ್ರಾರಂಭ:- 2015 
    • ಉದ್ದೇಶ:- ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ಅಥವಾ ಮರು-ಕೌಶಲ್ಯ ತರಬೇತಿಯನ್ನು ಒದಗಿಸಲು. 
    • ಇದು ‘ಪೂರ್ವ ಕಲಿಕೆಯ ಗುರುತಿಸುವಿಕೆ’ಯ  ಮೂಲಕ ಭಾರತದಾದ್ಯಂತ ಯುವಜನರಿಗೆ ತರಬೇತಿ ನೀಡುವುದನ್ನು ಒಳಗೊಂಡಿದೆ.
    • ಜನ ಶಿಕ್ಷಣ ಸಂಸ್ಥಾನ (JSS) ಯೋಜನೆ:- 
    • ಪ್ರಾರಂಭ:- ಆರಂಭದಲ್ಲಿ 1967 ರಲ್ಲಿ ‘ಶ್ರಮಿಕ್ ವಿದ್ಯಾಪೀಠ’ ಎಂದು ಪ್ರಾರಂಭಿಸಲಾಯಿತು. 
    • ಉದ್ದೇಶ:- ಇದು ಅನೌಪಚಾರಿಕ ವಿಧಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
    • ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (NAPS):-
    • ಪ್ರಾರಂಭ:- ಆಗಸ್ಟ್ 2016
    • ಉದ್ದೇಶ:- ಶಿಷ್ಯವೃತ್ತಿ ವಿದ್ಯಾರ್ಥಿಗಳ ವೇತನಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಶಿಷ್ಯವೃತ್ತಿಯನ್ನು ಉತ್ತೇಜಿಸುತ್ತದೆ. 
    • ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY):- 
    • ಪ್ರಾರಂಭ:- 2014
    • ಇದು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಯೋಜನೆ ‘(NRLM)ಯ ಭಾಗವಾಗಿದೆ. 
    • 2 ಪ್ರಮುಖ ಉದ್ದೇಶಗಳು:- 
    • ಗ್ರಾಮೀಣ ಬಡ ಕುಟುಂಬಗಳ ಆದಾಯ ಮೂಲಗಳಲ್ಲಿ ವೈವಿಧ್ಯತೆಯನ್ನು ತರುವುದು.
    • ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು.
    • ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ:- 
    • ಘೋಷಣೆ:- 2025 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಣೆ.
    • ವೆಚ್ಚ:- ₹1 ಲಕ್ಷ ಕೋಟಿ 
    • ಆರ್ಥಿಕ ಪ್ರೋತ್ಸಾಹ:- ಇದು ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರಿಗೆ 2 ಕಂತುಗಳಲ್ಲಿ ₹15,000 ವರೆಗಿನ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
    • ಉದ್ಯೋಗದಾತರಿಗೆ ಸಹಾಯಧನ:- ಹೆಚ್ಚುವರಿಯಾಗಿ, ಉದ್ಯೋಗದಾತರು ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಸಹಾಯಧನವನ್ನು ನೀಡುತ್ತಾರೆ. ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
    • ಸ್ಟಾರ್ಟ್ಅಪ್ ಇಂಡಿಯಾ:- 
    • ಪ್ರಾರಂಭ:- 2016
    • ಉದ್ದೇಶ:- ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
    • ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY):- 
    • ಉದ್ದೇಶ:- ಹಣಕಾಸು ಸೌಲಭ್ಯ ಪಡೆಯದ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ವ್ಯಾಪಾರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು
    • ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ (RKSK):- 
    • ಪ್ರಾರಂಭ:- 2014
    • ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಉದ್ದೇಶ:- ಭಾರತದಾದ್ಯಂತ 10–19 ವರ್ಷದ ಕಿಶೋರರ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.

    ಸ್ವಾಮಿ ವಿವೇಕಾನಂದರ ಬಗ್ಗೆ:

    • ಜನನ:- ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಲ್ಲಿ ಜನಿಸಿದರು.
    • ಪಾಶ್ಚಿಮಾತ್ಯರಿಗೆ ಯೋಗ ಮತ್ತು ವೇದಾಂತದ ಹಿಂದೂ ತತ್ವಚಿಂತನೆಗಳನ್ನು ಪರಿಚಯಿಸುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು.
    • ಇವರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಭಾರತದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು ಹಾಗೂ ಆರ್ಥಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಸಂಚರಿಸಿದರು.
    • 1893 ರಲ್ಲಿ ಚಿಕಾಗೋದಲ್ಲಿ ನಡೆದ ‘ವಿಶ್ವ ಧರ್ಮಗಳ ಸಂಸತ್ತಿನಲ್ಲಿ’ ಮಾಡಿದ ಭಾಷಣದ ಮೂಲಕ ಇವರು ಜಾಗತಿಕ ಮನ್ನಣೆಯನ್ನು ಗಳಿಸಿದರು. ಅದರಲ್ಲಿ ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ಪ್ರತಿಪಾದಿಸಿದರು.
    • 1897 ರಲ್ಲಿ ರಾಮಕೃಷ್ಣ ಮಿಷನ್ ಮತ್ತು 1899 ರಲ್ಲಿ ಬೇಲೂರು ಮಠ ಸ್ಥಾಪನೆ:- ಇದು ಲೌಕಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕತೆಯ ಏಕೀಕರಣವನ್ನು ಉತ್ತೇಜಿಸಿತು.
    • ತಮ್ಮ ಬೋಧನೆ, ಉಪನ್ಯಾಸ ಮತ್ತು ಬರಹಗಳ ಮೂಲಕ ರಾಜ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗ ಸೇರಿದಂತೆ ಅವರು ಯೋಗದ ಅಭ್ಯಾಸ ಮತ್ತು ‘ನವ-ವೇದಾಂತ’ದ ತತ್ವಗಳನ್ನು ಹರಡಿದರು. ಭಾರತೀಯ ಜ್ಞಾನಸಮಾಜದ ಹರಿಕಾರರಾಗಿ ಮತ್ತು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯ ದಾರ್ಶನಿಕರಾಗಿ ಶಾಶ್ವತವಾದ ಪರಂಪರೆಯನ್ನು ಉಳಿಸಿದರು.
    • ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿವೇಕಾನಂದರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದಿದ್ದಾರೆ.
  • ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುತ್ತಿರುವ ಬೇಡಿಕೆ

    ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುತ್ತಿರುವ ಬೇಡಿಕೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಬೆಳಗಾವಿಯಲ್ಲಿ ಮುಕ್ತಾಯವಾದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ಕೋರಿ ಆ ಭಾಗದ ಶಾಸಕರು ಸಹಿ ಮಾಡಿದ ಮನವಿಯನ್ನು ಸಲ್ಲಿಸಿದ್ದಾರೆ.

    ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯ ಬೇಡಿಕೆಯ ಬಗ್ಗೆ:

    • ಪ್ರಮುಖ ಬೇಡಿಕೆ:- ಕಿತ್ತೂರು ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ಈ ಮಂಡಳಿಯನ್ನು ರಚಿಸಬೇಕು ಮತ್ತು ಅದಕ್ಕೆ ವಾರ್ಷಿಕವಾಗಿ ₹5,000 ಕೋಟಿ ಅನುದಾನವನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
    • ಪ್ರಾದೇಶಿಕ ವ್ಯಾಪ್ತಿ:- ಪ್ರಸ್ತಾಪಿತ ಮಂಡಳಿಯು ಕಿತ್ತೂರು ಕರ್ನಾಟಕ (ಹಿಂದಿನ ಮುಂಬೈ ಕರ್ನಾಟಕ) ಪ್ರದೇಶವನ್ನು ಒಳಗೊಂಡಿದೆ. ಇದು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಎಂಬ 7 ಜಿಲ್ಲೆಗಳನ್ನು ಒಳಗೊಂಡಿದೆ.
    • ಶಾಸಕಾಂಗದ ಬೆಂಬಲ:- ಈ ಪ್ರದೇಶದ 56 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು (8 ಜನ ಸಚಿವರನ್ನು ಹೊರತುಪಡಿಸಿ) ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
    • ಸಮರ್ಥನೆ:- ಈ ಪ್ರದೇಶವು ಆರ್ಥಿಕ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿದೆ ಎಂದು ಈ ಬೇಡಿಕೆಯು ಎತ್ತಿ ತೋರಿಸುತ್ತದೆ. ಇತರ ಪ್ರದೇಶಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು ಕೈಗಾರಿಕಾ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಲ್ಲಿ ಗಮನಾರ್ಹ ಉತ್ತೇಜನದ ಅಗತ್ಯವಿದೆ ಎಂದು ಇದು ಪ್ರತಿಪಾದಿಸುತ್ತದೆ.
    • ಆರ್ಥಿಕ ಅಸಮಾನತೆ:- ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25 ರ ಪ್ರಕಾರ, 
    • ಬೆಳಗಾವಿ ವಿಭಾಗದ ತಲಾ ಆದಾಯವು ₹2,00,457 ಆಗಿದೆ. ಇದು ಬೆಂಗಳೂರು ವಿಭಾಗ (₹5,01,383) ಮತ್ತು ಮೈಸೂರು ವಿಭಾಗದ (₹3,59,177) ತಲಾ ಆದಾಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
    • ರಾಜಕೀಯ ಸಂದರ್ಭ:- ವಿದರ್ಭ ಮಾದರಿಯನ್ನು ಆಧರಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (KKRDB) ಕೇಂದ್ರದಿಂದ ಹೊಂದಾಣಿಕೆಯ ಅನುದಾನವನ್ನು ಕೋರುವ ನಿರ್ಣಯವನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಈ ಬೇಡಿಕೆಯು ತೀವ್ರಗೊಂಡಿದೆ.