ವರ್ಗ: State Current Affairs Kannada

  • ಅಭಯ್ ಮನೋಹರ್ ಸಪ್ರೆ ಸಮಿತಿ | ವಿದ್ಯುತ್ ಚಾಲಿತ ಹಾರುವ ಪ್ರಯಾಣಿಕ ವಾಹನ (Electric flying taxi)

    ಅಭಯ್ ಮನೋಹರ್ ಸಪ್ರೆ ಸಮಿತಿ

    ಇದೀಗ ಸುದ್ದಿಯಲ್ಲಿದೆ:

    • ರಸ್ತೆ ಸುರಕ್ಷತಾ ಸಲಹಾ ಸಮಿತಿಯ ಅಧ್ಯಕ್ಷರು ರಾಷ್ಟ್ರೀಯ ಹೆದ್ದಾರಿ 275 (NH 275) ರ ಪರಿಶೀಲನೆಯನ್ನು ನಡೆಸಿದರು.

    ಪ್ರಮುಖ ಅವಲೋಕನಗಳು ಮತ್ತು ಶಿಫಾರಸುಗಳು:

    • ಕೃತಕ ಬುದ್ಧಿಮತ್ತೆ (AI) ಸಕ್ರಿಯಗೊಳಿಸಿದ ಕ್ಯಾಮೆರಾಗಳ ಅಳವಡಿಕೆಯಿಂದ ಸಕಾರಾತ್ಮಕ ಬೆಳವಣಿಗೆ:- ಹೇಗೆಂದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025 ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಅವರು ಶ್ಲಾಘಿಸಿದರು.
    • ‘ಡಿಜಿಟಲ್ ವೇಗ ನಿಯಂತ್ರಣ ವ್ಯವಸ್ಥೆಗಳನ್ನು’ ಅಳವಡಿಸಲು ಶಿಫಾರಸು: ವಾಹನಗಳ ಅತಿಯಾದ ವೇಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ತಡೆಯಲು ಈ ವ್ಯವಸ್ಥೆಗಳನ್ನು ಅಳವಡಿಸಲು ಅವರು ಪ್ರಸ್ತಾಪಿಸಿದರು.
    • ಸೂಚನಾ ಫಲಕಗಳ ಅಳವಡಿಕೆಗೆ ಸಲಹೆ:- ವಾಹನ ಸವಾರರನ್ನು ಎಚ್ಚರಿಸಲು, ವಿಶೇಷವಾಗಿ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಸಾಕಷ್ಟು ಮತ್ತು ಸ್ಪಷ್ಟವಾಗಿ ಗೋಚರಿಸುವಂತಹ ಸೂಚನಾ ಫಲಕಗಳನ್ನು ಅಳವಡಿಸಲು ಅವರು ಸಲಹೆ ನೀಡಿದರು.
    • ಪಥ ಶಿಸ್ತಿನ ಕಟ್ಟುನಿಟ್ಟಾದ ಕ್ರಮಗಳ ಶಿಫಾರಸು:- ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅತಿಯಾದ ವೇಗವನ್ನು ನಿರಂತರವಾಗಿ ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದನ್ನು ಅವರ ಶಿಫಾರಸುಗಳು ಒಳಗೊಂಡಿವೆ.

    ಗಮನಿಸಿ:- ರಾಷ್ಟ್ರೀಯ ಹೆದ್ದಾರಿ 275 (NH 275) ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುತ್ತದೆ.

    ವಿದ್ಯುತ್ ಚಾಲಿತ ಹಾರುವ ಪ್ರಯಾಣಿಕ ವಾಹನ (Electric flying taxi)

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರು ಮೂಲದ ಸರಳಾ ಏವಿಯೇಷನ್ ಕಂಪನಿಯು ವಿದ್ಯುತ್ ಚಾಲಿತ ಹಾರುವ ಪ್ರಯಾಣಿಕ ವಾಹನ ನೆಲಮಟ್ಟದ ಪರೀಕ್ಷೆಯನ್ನು ಪ್ರಾರಂಭಿಸಿದೆ.

    ವಿದ್ಯುತ್ ಚಾಲಿತ ಹಾರುವ ಪ್ರಯಾಣಿಕ ವಾಹನದ ಬಗ್ಗೆ:

    • ಇದು 6 ಆಸನಗಳುಳ್ಳ ವಿದ್ಯುತ್ ಚಾಲಿತ ಹಾರುವ ಪ್ರಯಾಣಿಕ ವಾಹನವಾಗಿದೆ.
    • ಅಭಿವೃದ್ಧಿಪಡಿಸಿದವರು:- ಬೆಂಗಳೂರು ಮೂಲದ ಸರಳಾ ಏವಿಯೇಷನ್ ಕಂಪನಿ.
    • ‘SYLLA SYL-X1’ ನ ನೆಲಮಟ್ಟದ ಪರೀಕ್ಷೆಯಾಗಿದೆ:- ಇದು ಅರ್ಧ-ಪ್ರಮಾಣದ “eVTOL – ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್” ಪ್ರದರ್ಶಕ ಮಾದರಿಯಾದ ‘SYLLA SYL-X1’ ನ ನೆಲಮಟ್ಟದ ಪರೀಕ್ಷೆಯಾಗಿದೆ.
    • ಜಂಟಿಯಾಗಿ ಪ್ರಾರಂಭಿಸಿದವರು:- ಬೆಂಗಳೂರು ಅಂತರರಾಷ್ಟ್ರೀಯ  ವಿಮಾನ ನಿಲ್ದಾಣ ನಿಯಮಿತ (BIAL) ಮತ್ತು ಸರಳಾ ಏವಿಯೇಷನ್ ಕಂಪನಿ.
    • ಉದ್ದೇಶ:- ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆಯಂತಹ ಭಾರತದ ಅತ್ಯಂತ ದಟ್ಟಣೆಯ ನಗರಗಳಲ್ಲಿ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • LLR ವಂಚನೆ ತಡೆಗಟ್ಟಲು ಸಾರಿಗೆ ಇಲಾಖೆಯಿಂದ ಎಐ-ಚಾಲಿತ ‘ಸ್ಮಾರ್ಟ್ ಲಾಕ್’ ವ್ಯವಸ್ಥೆ

    LLR ವಂಚನೆ ತಡೆಗಟ್ಟಲು ಸಾರಿಗೆ ಇಲಾಖೆಯಿಂದ ಎಐ-ಚಾಲಿತ ‘ಸ್ಮಾರ್ಟ್ ಲಾಕ್’ ವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ಸಾರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಚಾಲಿತ ‘ಸ್ಮಾರ್ಟ್ ಲಾಕ್’ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

    ಎಐ-ಚಾಲಿತ ‘ಸ್ಮಾರ್ಟ್ ಲಾಕ್’ ನ ಬಗ್ಗೆ:

    • ಗುರಿ:- ಪರವಾನಗಿ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಕೊನೆಗಾಣಿಸುವುದು ಮತ್ತು ಪಾರದರ್ಶಕತೆಯನ್ನು ಸುಧಾರಿಸುವುದು.
    • ಅಭಿವೃದ್ಧಿಪಡಿಸಿದವರು:- ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು.
    • ಸಂಯೋಜನೆ:- ಇದನ್ನು ಸಾರಥಿ ಪರಿವಾಹನ ಸೇವಾ ಪೋರ್ಟಲ್‌ನಲ್ಲಿ ಹೆಚ್ಚುವರಿ ಭದ್ರತಾ ಹಂತವಾಗಿ ಸಂಯೋಜಿಸಲಾಗಿದೆ.
    • ಕಾರ್ಯ:- ಇದು ಕೃತಕ ಬುದ್ಧಿಮತ್ತೆ, ಮುಖ ಗುರುತಿಸುವಿಕೆ ಮತ್ತು ವರ್ತನೆಯ ಮೇಲ್ವಿಚಾರಣೆಯನ್ನು ಬಳಸಿಕೊಂಡು ಕೇವಲ ನೈಜ ಅರ್ಜಿದಾರರು ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸುತ್ತದೆ.
  • ಕರ್ನಾಟಕದ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025

    ಕರ್ನಾಟಕದ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕದ ಕಿರು (ಪ್ರಮುಖವಲ್ಲದ) ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ರಾಜ್ಯ ಸರ್ಕಾರವು ನೂತನ ನೀತಿಯನ್ನು ಅನುಮೋದಿಸಿದೆ.

    ಹಿನ್ನೆಲೆ:

    • ರಫ್ತನ್ನು ನಿಷೇಧಿಸಿತ್ತು:- ಕಬ್ಬಿಣದ ಅದಿರು ಹೊರತೆಗೆಯುವಿಕೆಯಲ್ಲಿನ ನಿಯಮಗಳ ವ್ಯಾಪಕ ಉಲ್ಲಂಘನೆ ಮತ್ತು ಭಾರಿ ಪ್ರಮಾಣದ ಕಬ್ಬಿಣದ ಅದಿರಿನ ಅಕ್ರಮ ರಫ್ತಿನ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 2010ರಲ್ಲಿ ‘ಕರ್ನಾಟಕ ಬಂದರುಗಳ (ಬಂದಿಳಿಯುವಿಕೆ ಮತ್ತು ಸಾಗಾಣಿಕೆ /ಲ್ಯಾಂಡಿಂಗ್ ಮತ್ತು ಶಿಪ್ಪಿಂಗ್ ಶುಲ್ಕಗಳು) ಕಾಯ್ದೆ, 1961’ ರ ಅಡಿಯಲ್ಲಿ 10 ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತನ್ನು ನಿಷೇಧಿಸಿತ್ತು. 
    • ಆದಾಗ್ಯೂ, 2022ರಲ್ಲಿ ಸರ್ವೋಚ್ಚ ನ್ಯಾಯಾಲಯವು ಭಾರತ ಸರ್ಕಾರದ ನೀತಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ಈ ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಅನುಮತಿ ನೀಡಿತು. 
    • ದೇಶದ ಉಳಿದ ಭಾಗಗಳಲ್ಲಿ ಇರುವಂತೆಯೇ ಕರ್ನಾಟಕದ ಬಂದರುಗಳ ಮೂಲಕವೂ ಕಬ್ಬಿಣದ ಅದಿರು ರಫ್ತು ಮಾಡಲು ಸರ್ವೋಚ್ಚ ನ್ಯಾಯಾಲಯ ಅನುಮತಿಸಿದೆ.

    2025 ರ ನೂತನ ನೀತಿಯ ಬಗ್ಗೆ:

    ಕರ್ನಾಟಕದ ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತಿಗೆ ದಾರಿಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರವು ‘ಕರ್ನಾಟಕದ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025’ ಕ್ಕೆ ಅನುಮೋದನೆ ನೀಡಿದೆ.

    • ಉದ್ದೇಶ:- ಕರ್ನಾಟಕ ಸಮುದ್ರ ಸಾರಿಗೆ ಮಂಡಳಿಯ ಅಡಿಯಲ್ಲಿ ಬರುವ ಕಿರು (ಪ್ರಮುಖವಲ್ಲದ) ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ನಿರ್ವಹಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.
    • ಈ ನೀತಿಯು ಈ ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡಲು ಅನುಸರಿಸಬೇಕಾದ ಒಂದು ಪ್ರಮಾಣಿತ ಕಾರ್ಯಾಚರಣಾ ವಿಧಾನವಾಗಿದೆ (SOP).

    ಕರ್ನಾಟಕದ 13 ಕಿರು (ಪ್ರಮುಖವಲ್ಲದ) ಬಂದರುಗಳು: 

    1. ಕಾರವಾರ (ಎಲ್ಲಾ ಹವಾಮಾನಕ್ಕೂ ಸೂಕ್ತವಾದ, ಆಳ ಸಮುದ್ರದ ಬಂದರು)
    2. ಬೇಲಿಕೇರಿ
    3. ತದ್ರಿ (ತಡದಿ)
    4. ಪಾವಿನಕುರುವ (ಪಾವಿನಕುರ್ವೆ)
    5. ಹೊನ್ನಾವರ
    6. ಮಂಕಿ
    7. ಭಟ್ಕಳ
    8. ಕುಂದಾಪುರ
    9. ಹಂಗರಕಟ್ಟೆ
    10. ಮಲ್ಪೆ
    11. ಪಡುಬಿದ್ರಿ
    12. ಹಳೆಯ ಮಂಗಳೂರು
    13. ಬೈಂದೂರು (ಉಡುಪಿ ಜಿಲ್ಲೆ)

     

  • ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮ

    ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮ

    ಇದೀಗ ಸುದ್ದಿಯಲ್ಲಿದೆ:

    • ಉನ್ನತೀಕರಿಸಿದ ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮವನ್ನು ನವೆಂಬರ್ 27, 2025 ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

    ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮದ ಬಗ್ಗೆ:

    • ಅನುಷ್ಠಾನಗೊಳಿಸುವವರು:- ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 
    • ಜಾರಿಗೊಳಿಸುವವರು:- ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಕಾರ್ಯಗತಗೊಳಿಸುತ್ತಿದೆ.
    • ಉದ್ದೇಶ: ವಿಜ್ಞಾನ ಶಿಕ್ಷಣದಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹಾಗೂ ನಗರ ಪ್ರದೇಶದ ತಾರಾಲಯಗಳನ್ನು ವೀಕ್ಷಿಸಲು ಸಾಧ್ಯವಾಗದ ದೂರದ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಜಾಗೃತಗೊಳಿಸುವುದು.
    • ಉದ್ದೇಶಿತ ಸಮುದಾಯ:ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು.

    ಪ್ರಮುಖ ತಾಂತ್ರಿಕ ಅಂಶಗಳು:

    • ಸಂಚಾರಿ ಸೌಲಭ್ಯ:- ಈ ಉಪಕ್ರಮಕ್ಕಾಗಿ 5 ಮೀಟರ್ ವ್ಯಾಪ್ತಿಯ ಗಾಳಿ ತುಂಬಬಹುದಾದ ಗುಮ್ಮಟವನ್ನು ಹೊಂದಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ಬಳಸಲಾಗುತ್ತಿದೆ.
    • ಪ್ರಕ್ಷೇಪಣ ವ್ಯವಸ್ಥೆ:- ತಲ್ಲೀನಗೊಳಿಸುವ ಅನುಭವಕ್ಕಾಗಿ ಈ ವಾಹನಗಳಲ್ಲಿ 360-ಡಿಗ್ರಿ ಮೀನಿನ ಕಣ್ಣಿನ ರೀತಿಯ ಪ್ರಕ್ಷೇಪಣ  (ಫಿಶ್-ಐ ಪ್ರೊಜೆಕ್ಷನ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
    • ಆಧುನಿಕ ಸೌಕರ್ಯ: ಈ ವಾಹನಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಅತ್ಯಾಧುನಿಕ ಧ್ವನಿ ವ್ಯವಸ್ಥೆಯನ್ನು ಹೊಂದಿವೆ.
  • ಕುವೆಂಪು ರಾಷ್ಟ್ರೀಯ ಪುರಸ್ಕಾರ, 2025

    ಕುವೆಂಪು ರಾಷ್ಟ್ರೀಯ ಪುರಸ್ಕಾರ, 2025

    ಇದೀಗ ಸುದ್ದಿಯಲ್ಲಿದೆ:

    • ಖ್ಯಾತ ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್ ಅವರು 2025ರ ಸಾಲಿನ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

    ಕುವೆಂಪು ರಾಷ್ಟ್ರೀಯ ಪುರಸ್ಕಾರ, 2025ರ ಬಗ್ಗೆ:

    • ಪುರಸ್ಕೃತರು:- ಮಹಾಬಲೇಶ್ವರ ಸೈಲ್ (ಖ್ಯಾತ ಕೊಂಕಣಿ ಸಾಹಿತಿ)
    • ಪ್ರದಾನ ಮಾಡುವ ಸಂಸ್ಥೆ:- ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಾಷ್ಟ್ರಕವಿ ಕುವೆಂಪು ಟ್ರಸ್ಟ್).

    ಕುವೆಂಪು ರಾಷ್ಟ್ರೀಯ ಪುರಸ್ಕಾರದ ಬಗ್ಗೆ:

    • ಇದು ರಾಷ್ಟ್ರೀಯ ಮಟ್ಟದ ಸಾಹಿತ್ಯ ಪ್ರಶಸ್ತಿ ಆಗಿದ್ದು, ಭಾರತದ ಸಂವಿಧಾನದಿಂದ ಮಾನ್ಯತೆ ಪಡೆದ ಯಾವುದೇ ಭಾಷೆಗೆ ಸಾಹಿತ್ಯಿಕವಾಗಿ ಮಹತ್ವದ ಕೊಡುಗೆ ನೀಡಿರುವ ಸಾಹಿತಿಗಳಿಗೆ ಪ್ರತಿವರ್ಷ ಪ್ರದಾನ ಮಾಡಲಾಗುತ್ತದೆ.
    • ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಇದನ್ನು ಅವರ ಜನ್ಮದಿನವಾದ ಡಿಸೆಂಬರ್ 29 ರಂದು ಪ್ರದಾನ ಮಾಡಲಾಗುತ್ತದೆ. ಈ ದಿನವನ್ನು “ವಿಶ್ವ ಮಾನವ ದಿನ” (ಸಾರ್ವತ್ರಿಕ ಸಹೋದರತ್ವ ದಿನ) ಎಂದು ಆಚರಿಸಲಾಗುತ್ತದೆ.
    • ಈ ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನ, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

    ಮಹಾಬಲೇಶ್ವರ ಸೈಲ್ ಅವರ ಬಗ್ಗೆ:

    • ಮಹಾಬಲೇಶ್ವರ ಸೈಲ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 1965ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದರು.
    • ಅವರು 1964-65ರಲ್ಲಿ ಇಸ್ರೇಲ್-ಈಜಿಪ್ಟ್ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಸೇನೆಯ ಸೇವೆ ನಂತರ ಅವರು ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.
    • ಇವರ ಮೊದಲ ಕಾದಂಬರಿ ‘ಕಾಳಿ ಗಂಗಾ’ 1996ರಲ್ಲಿ ಪ್ರಕಟವಾಯಿತು. ಇದು ಕಾರವಾರದ ಕಾಳಿ ನದಿ ತೀರದ ರೈತರ ಜೀವನವನ್ನು ಆಧರಿಸಿದೆ.
    • ಇವರ ಕೆಲವು ಪ್ರಸಿದ್ಧ ಕೃತಿಗಳೆಂದರೆ: ಹಾವ್ ತಣ್, ಪಲ್ತಡ್ಚೊ ಮುನಿಸ್, ಯುಗ್ ಸಾಂವರ್ ಮತ್ತು ವಿಖಾರ್ ವಿಲ್ಖೊ.
  • ‘ಗೃಹ ಆರೋಗ್ಯ’ ಯೋಜನೆ

    ‘ಗೃಹ ಆರೋಗ್ಯ’ ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ಗೃಹ ಆರೋಗ್ಯ ಯೋಜನೆಯಡಿ 40 ಲಕ್ಷಕ್ಕೂ ಹೆಚ್ಚು ಜನರಿಗೆ ಕ್ಯಾನ್ಸರ್ ತಪಾಸಣೆ ನಡೆಸಲಾಗಿದೆ. 
    • ಕಳೆದ ಆಗಸ್ಟ್‌ನಲ್ಲಿ ರಾಜ್ಯ ಆರೋಗ್ಯ ಇಲಾಖೆಯು ‘ಗೃಹ ಆರೋಗ್ಯ’ ಯೋಜನೆಯನ್ನು ಕರ್ನಾಟಕದಾದ್ಯಂತ ವಿಸ್ತರಿಸಿದ ನಂತರ, ಗ್ರಾಮೀಣ ಭಾಗದ 40 ಲಕ್ಷಕ್ಕೂ ಹೆಚ್ಚು ಜನರನ್ನು ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದೆ.

    ‘ಗೃಹ ಆರೋಗ್ಯ’ ಯೋಜನೆಯ ಬಗ್ಗೆ:

    • ಪ್ರಾರಂಭದ ದಿನಾಂಕ: ಅಕ್ಟೋಬರ್ 24, 2024
    • ಸಚಿವಾಲಯ:- ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
    • ಧ್ಯೇಯವಾಕ್ಯ:- “ನಿಮ್ಮ ಮನೆ ಬಾಗಿಲಿಗೆ ಆರೋಗ್ಯ ಸೇವೆ” ಎಂಬ ಘೋಷವಾಕ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:-ಅಸಾಂಕ್ರಾಮಿಕ ರೋಗಗಳ” ಆರಂಭಿಕ ಪತ್ತೆ ಮತ್ತು ನಿರ್ವಹಣೆ ಮಾಡುವ ಮೂಲಕ ರೋಗದ ಸಂಕೀರ್ಣತೆ ಹಾಗೂ ಅಕಾಲಿಕ ಮರಣವನ್ನು ತಡೆಯುವುದು.
    • ಉದ್ದೇಶಿತ ಜನಸಂಖ್ಯೆ:- ಈ ಯೋಜನೆಯು ಪ್ರಮುಖವಾಗಿ 30 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 1.67 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ.
    • ಕಾರ್ಯನಿರ್ವಹಣಾ ವಿಧಾನ:- ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರು ನಿಗದಿತ ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಾರೆ.
    • ಒಳಗೊಂಡಿರುವ ರೋಗಗಳು: ಈ ತಪಾಸಣೆಯು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂರು ಸಾಮಾನ್ಯ ವಿಧದ ಕ್ಯಾನ್ಸರ್‌ಗಳಾದ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಮೇಲೆ ಗಮನ ಹರಿಸುತ್ತದೆ.
    • ಪ್ರಯೋಜನಗಳು:- ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆ ಇರುವವರಿಗೆ ಉಚಿತ ಔಷಧಿಗಳನ್ನು ಅವರ ಮನೆ ಬಾಗಿಲಿಗೆ 3 ತಿಂಗಳವರೆಗೆ ಪೂರೈಕೆ ಮಾಡಲಾಗುತ್ತದೆ.
    • ಪ್ರಾಯೋಗಿಕ ಯೋಜನೆ:- ಈ ಯೋಜನೆಯನ್ನು ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ.
  • ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು: ಅಮೆರಿಕ, ಯುಎಇ ಮತ್ತು ಆಸ್ಟ್ರೇಲಿಯಾಕ್ಕೆ ವಿಸ್ತರಣೆ

    ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು: ಅಮೆರಿಕ, ಯುಎಇ ಮತ್ತು ಆಸ್ಟ್ರೇಲಿಯಾಕ್ಕೆ ವಿಸ್ತರಣೆ

    ಇದೀಗ ಸುದ್ದಿಯಲ್ಲಿದೆ:

    • ವಿದೇಶಿ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ವು ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಎಇ ದೇಶಗಳಿಗೆ ಅಧಿಕೃತವಾಗಿ ‘ನಂದಿನಿ’ ತುಪ್ಪದ ರಫ್ತನ್ನು ಪ್ರಾರಂಭಿಸಿದೆ.

    ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು ವಿಸ್ತರಣೆಯ ಬಗ್ಗೆ:

    • ಯುಎಇಯಿಂದ 8 ಟನ್, ಅಮೆರಿಕದಿಂದ 5 ಟನ್ ಮತ್ತು ಆಸ್ಟ್ರೇಲಿಯಾದಿಂದ 1 ಟನ್ ತುಪ್ಪ ಪೂರೈಕೆಗಾಗಿ ಕೆಎಂಎಫ್ ಖರೀದಿ ಆದೇಶಗಳನ್ನು ಪಡೆದುಕೊಂಡಿದೆ.
    • ಪ್ರಸ್ತುತವಾಗಿ, ಕೆಎಂಎಫ್ ತನ್ನ ಪ್ರೀಮಿಯಂ ಉತ್ಪನ್ನಗಳಾದ ಯುಎಚ್‌ಟಿ (UHT) ಟೆಟ್ರಾ ಪ್ಯಾಕ್ ಹಾಲು, ತುಪ್ಪ, ಬೆಣ್ಣೆ, ಗಿಣ್ಣು, ಪುಡಿ ರೂಪದ ಹಾಲಿನ ಉತ್ಪನ್ನ, ಐಸ್‌ಕ್ರೀಮ್, ಸುವಾಸನೆಭರಿತ ಹಾಲು, ಸಿಹಿತಿಂಡಿಗಳು ಮತ್ತು ಸವಿಯಾದ ಪದಾರ್ಥಗಳನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ದುಬೈ, ಕತಾರ್, ಬ್ರೂನಿ, ಮಾಲ್ಡೀವ್ಸ್ ಮತ್ತು ಸಿಂಗಾಪುರ ದೇಶಗಳಿಗೆ ರಫ್ತು ಮಾಡುತ್ತಿದೆ.

    ಕರ್ನಾಟಕ ಹಾಲು ಒಕ್ಕೂಟ (KMF)ದ ಬಗ್ಗೆ:

      • ಅತ್ಯುನ್ನತ ಸಂಸ್ಥೆ:- ಕೆಎಂಎಫ್ ಕರ್ನಾಟಕದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಅತ್ಯುನ್ನತ ಸಂಸ್ಥೆಯಾಗಿದ್ದು, 
      • ಸ್ವತಃ ಮಾಲೀಕತ್ವ ಮತ್ತು ನಿರ್ವಹಣೆ:- ಇದು ಹಾಲು ಉತ್ಪಾದಕರಿಂದಲೇ ಮಾಲೀಕತ್ವಹೊಂದಿ ನಿರ್ವಹಣೆಯಾಗುತ್ತದೆ.
    • ದೇಶದ 2ನೇ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟ:- ಹಾಲು ಖರೀದಿ ಮತ್ತು ಮಾರಾಟದ ದೃಷ್ಟಿಯಿಂದ ಇದು ದಕ್ಷಿಣ ಭಾರತದ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿದ್ದು, ದೇಶದಲ್ಲೇ 2ನೇ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿದೆ.
    • ಸ್ಥಾಪನೆ:- ದೇಶದ ಮೊದಲ ವಿಶ್ವಬ್ಯಾಂಕ್ ಅನುದಾನಿತ “ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ”ದ ಭಾಗವಾಗಿ 1974 ರಲ್ಲಿ ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳ ಸಂಘಟನೆಯಾಗಿ ಪ್ರಾರಂಭವಾಯಿತು.
    • ಧ್ಯೇಯೋದ್ದೇಶ:- ಹೈನುಗಾರಿಕೆ ಅಭಿವೃದ್ಧಿಯ ಮೂಲಕ ಗ್ರಾಮೀಣ ಸಮೃದ್ಧಿಯನ್ನು ತರುವುದೇ ಇದರ ಪ್ರಮುಖ ಗುರಿ.
    • ಧ್ಯೇಯವಾಕ್ಯ:- “ಹಸುವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕೃಷ್ಟತೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೆಎಂಎಫ್, “ಆರೋಗ್ಯ ಸಂಪತ್ತನ್ನು” ಹರಡುವ ಗುರಿ ಹೊಂದಿದೆ.
    • ವ್ಯಾಪಿಸಿರುವ ಜಾಲ:- ಈ ಒಕ್ಕೂಟವು 13 ಜಿಲ್ಲಾ ಸಹಕಾರಿ ಹಾಲು ಸಂಘಗಳು, 10,500ಕ್ಕೂ ಹೆಚ್ಚು ಹಾಲು ಸಹಕಾರಿ ಸಂಘಗಳು ಮತ್ತು 20 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬೃಹತ್ ಜಾಲವನ್ನು ಒಳಗೊಂಡಿದೆ.
  • ವಿಜ್ ಎಐ ಪಥ(VijAIpatha) ಪ್ರಯೋಗಾಲಯ

    ವಿಜ್ ಎಐ ಪಥ(VijAIpatha) ಪ್ರಯೋಗಾಲಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೊಸಪೇಟೆಯಲ್ಲಿ ‘ವಿಜ್ ಎಐ ಪಥ’ (VijAIpatha) ಎಂಬ ಪ್ರಾಯೋಗಿಕ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಉಪಕ್ರಮಕ್ಕೆ ಚಾಲನೆ ನೀಡಿದರು.

    ‘ವಿಜ್ ಎಐ ಪಥ’ ಪ್ರಯೋಗಾಲಯಗಳ ಬಗ್ಗೆ:

    • ಗುರಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI), ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM), ರೋಬೋಟಿಕ್ಸ್, ಕೋಡಿಂಗ್ ಮತ್ತು ಡಿಜಿಟಲ್ ನಾವೀನ್ಯತೆಗಳಲ್ಲಿ ಭವಿಷ್ಯಕ್ಕೆ ಪೂರಕವಾಗುವ ಕೌಶಲಗಳನ್ನು ಒದಗಿಸುವುದು.
    • ಅನುಷ್ಠಾನ: ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ‘ಸೈಯಂಟ್ ಫೌಂಡೇಶನ್’ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಅಮರಾವತಿಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈ ಉಪಕ್ರಮವನ್ನು ಉದ್ಘಾಟಿಸಲಾಯಿತು.
    • ಪ್ರಯೋಜನೆಗಳು: ‘ವಿಜ್ ಎಐ ಪಥ’ ದಂತಹ ಕಾರ್ಯಕ್ರಮಗಳು ಡಿಜಿಟಲ್ ಕಂದಕವನ್ನು ಹೋಗಲಾಡಿಸಲು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಿದ್ಧಪಡಿಸಲು ಸಹಾಯ ಮಾಡುತ್ತವೆ.
  • ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 81 ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳಿಗೆ (MHUs) ಚಾಲನೆ ನೀಡಿದ್ದಾರೆ.

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ:

    • ಗುರಿ:- ಕರ್ನಾಟಕದ ದೂರದ, ತಲುಪಲು ಅಸಾಧ್ಯವಾದ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
    • ಇಲ್ಲಿಯವರೆಗೆ ಔಪಚಾರಿಕ ಆರೋಗ್ಯ ವ್ಯವಸ್ಥೆಯ ಹೊರಗೆ ಉಳಿದಿದ್ದ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳು ತಲುಪುವಂತೆ ಮಾಡಲು ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು.
    • ವ್ಯಾಪ್ತಿ:- “ಅತಿದೂರದ ಗ್ರಾಮಗಳಿಗೂ ಆರೋಗ್ಯ ಸೇವೆ” ಎಂಬ ಧ್ಯೇಯವಾಕ್ಯದಡಿ ಪ್ರಾರಂಭಿಸಲಾದ ಈ ಸಂಚಾರಿ ಘಟಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 32 ಮೀಸಲು ಕ್ಷೇತ್ರಗಳು ಸೇರಿದಂತೆ, ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲಿವೆ.
    • ಅನುಷ್ಠಾನ ಮತ್ತು ನಿಧಿ: ಒಟ್ಟು 81 ಘಟಕಗಳ ಪೈಕಿ 49 ಘಟಕಗಳನ್ನು “ರಾಷ್ಟ್ರೀಯ ಆರೋಗ್ಯ ಅಭಿಯಾನ” (NHM)ದ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಇನ್ನುಳಿದ 32 ಘಟಕಗಳಿಗೆ ರಾಜ್ಯ ಸರ್ಕಾರದ “ಪರಿಶಿಷ್ಟ ಜಾತಿಗಳ ಉಪ-ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ- ಯೋಜನೆ” (SCSP/TSP) ಹಂಚಿಕೆಯಡಿ ಹಣಕಾಸು ಒದಗಿಸಲಾಗುತ್ತಿದೆ.
    • ಸಿಬ್ಬಂದಿ:- ಪ್ರತಿಯೊಂದು ಸಂಚಾರಿ ಆರೋಗ್ಯ ಘಟಕವು ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ದಾದಿ (ನರ್ಸ್) ಮತ್ತು ಒಬ್ಬರು ಪ್ರಯೋಗಾಲಯ ತಂತ್ರಜ್ಞರನ್ನು ಒಳಗೊಂಡಿರುತ್ತದೆ.
    • ಒದಗಿಸಲಾಗುವ ಸೇವೆಗಳು: ಹೊರರೋಗಿ ಸಮಾಲೋಚನೆ (OPD), ತ್ವರಿತ ರೋಗನಿರ್ಣಯ ಕಿಟ್‌ಗಳ ಮೂಲಕ ಮೂಲಭೂತ ಪರೀಕ್ಷೆಗಳು, ಉಚಿತ ಔಷಧಿಗಳು, ಉಲ್ಲೇಖಿತ ಸೇವೆಗಳು ಮತ್ತು ಸಮುದಾಯ ಆರೋಗ್ಯ ಮೇಲ್ವಿಚಾರಣೆ ಈ ಸೇವೆಯಲ್ಲಿ ಒಳಗೊಂಡಿವೆ.
    • ವಿಕೇಂದ್ರೀಕೃತ ಮೇಲ್ವಿಚಾರಣೆ: ಈ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಮೇಲ್ವಿಚಾರಣೆಯೊಂದಿಗೆ ಜಾರಿಗೆ ತರಲಾಗುತ್ತಿದ್ದು, ಇದು ಸ್ಥಳೀಯ ಅಗತ್ಯ ಮತ್ತು ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡುತ್ತದೆ.
    • ತುರ್ತು ಬಳಕೆ: ಈ ಘಟಕಗಳನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮತ್ತು ವಿಪತ್ತು ನಿರ್ವಹಣೆ ವೇಳೆಯೂ ನಿಯೋಜಿಸಲಾಗುವುದು.
    • ಹಂಚಿಕೆ: ಒಟ್ಟು ಘಟಕಗಳ ಪೈಕಿ 41 ವಾಹನಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ.
  • ತುಂಗಭದ್ರಾ ಅಣೆಕಟ್ಟು

    ತುಂಗಭದ್ರಾ ಅಣೆಕಟ್ಟು

    ಇದೀಗ ಸುದ್ದಿಯಲ್ಲಿದೆ:

    • ತುಂಗಭದ್ರ ಅಣೆಕಟ್ಟಿಗೆ ಹೊಸ ಕ್ರೆಸ್ಟ್ ಗೇಟ್‌ಗಳನ್ನು ಜೂನ್ ವೇಳೆಗೆ ಸ್ಥಾಪಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
    • ಡಿಸೆಂಬರ್ ಅಂತ್ಯದ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟವು 1,613 ಅಡಿಗಳಿಗೆ ಇಳಿಕೆಯಾದ ನಂತರ, ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಆರಂಭಿಸಲಾಗುವುದು ಮತ್ತು ಇದನ್ನು ಜೂನ್ 2026ರ ವೇಳೆಗೆ ಪೂರ್ಣಗೊಳಿಸಲಾಗುವುದು.

    ತುಂಗಭದ್ರಾ ಅಣೆಕಟ್ಟಿನ ಕುರಿತು:

    • ಸ್ಥಳ:- ಈ ಅಣೆಕಟ್ಟನ್ನು ಕರ್ನಾಟಕದ ಹೊಸಪೇಟೆ ಮತ್ತು ಕೊಪ್ಪಳದ ಸಂಗಮದಲ್ಲಿ ತುಂಗಭದ್ರಾ ನದಿಗೆ (ಕೃಷ್ಣಾ ನದಿಯ ಉಪನದಿ) ಅಡ್ಡಲಾಗಿ ನಿರ್ಮಿಸಲಾಗಿದೆ.
    • ಪರ್ಯಾಯ ಹೆಸರು:- ಇದನ್ನು ‘ಪಂಪ ಸಾಗರ’ ಎಂದೂ ಕರೆಯುತ್ತಾರೆ.
    • ಸಂಗ್ರಹಣಾ ಸಾಮರ್ಥ್ಯ:- ತುಂಗಭದ್ರಾ ಜಲಾಶಯವು 101 ಟಿಎಂಸಿ (TMC – ಸಾವಿರ ಮಿಲಿಯನ್ ಘನ ಅಡಿಗಳು) ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
    • ಜಲಾನಯನ ಪ್ರದೇಶ:- 28,000 ಚದರ ಕಿಲೋಮೀಟರ್‌ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದೆ.
    • ಉದ್ದೇಶ:- ಇದು ನೀರಾವರಿ, ಜಲವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣದ ಉದ್ದೇಶಗಳನ್ನು ಪೂರೈಸುವ ಬಹು ಉದ್ದೇಶಗಳ ಜಲಾಶಯವಾಗಿದೆ.
    • ರಚನಾತ್ಮಕ ಸಂಯೋಜನೆ:- ಇದು ಭಾರತದ ಅತಿದೊಡ್ಡ ಕಲ್ಲಿನ ಕಟ್ಟಡದ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.