ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ
1. ಹತ್ತಿಯನ್ನು ಜನಪ್ರಿಯವಾಗಿ ಏನೆಂದು ಕರೆಯಲಾಗುತ್ತದೆ?
A) ಚಿನ್ನದ ನಾರು.
B) ಬಿಳಿ ಚಿನ್ನ
C) ಕಂದು ಚಿನ್ನ
D) ಬೆಳ್ಳಿ ನಾರು
ಉತ್ತರ: B
2. ಸೇನಾ ಸಿಬ್ಬಂದಿಯ 31ನೇ ಮುಖ್ಯಸ್ಥರಾಗಿ (COAS) ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A) ಜನರಲ್ ಉಪೇಂದ್ರ ದ್ವಿವೇದಿ
B) ಜನರಲ್ ಧೀರಜ್ ಸೇಠ್
C) ಜನರಲ್ ಮನೋಜ್ ಪಾಂಡೆ
D) ಜನರಲ್ ಅನಿಲ್ ಚೌಹಾಣ್
ಉತ್ತರ: B
3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಜಲಜನಕವು (ಹೈಡ್ರೋಜನ್) ಅತ್ಯಂತ ಹಗುರವಾದ ರಾಸಾಯನಿಕ ಮೂಲವಸ್ತುವಾಗಿದೆ.
- ಜಲಜನಕವನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡಬಹುದು.
- ಸಂಗ್ರಹಿಸಿದ ಜಲಜನಕವನ್ನು ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಬಳಸಬಹುದು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ.
B) 1 ಮತ್ತು 2 ಮಾತ್ರ.
C) 2 ಮತ್ತು 3 ಮಾತ್ರ.
D) 1, 2 ಮತ್ತು 3.
ಉತ್ತರ: D
4. ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಯಾವ ಜಲಸಂಧಿ ಸಂಪರ್ಕಿಸುತ್ತದೆ?
A) ಹಾರ್ಮುಜ್ ಜಲಸಂಧಿ.
B) ಮಲಕ್ಕಾ ಜಲಸಂಧಿ.
C) ಬಾಬ್ ಎಲ್-ಮಂಡೇಬ್ ಜಲಸಂಧಿ.
D) ಬಾಸ್ಪರಸ್ ಜಲಸಂಧಿ
ಉತ್ತರ: C
5. 2026 ರ ಅಂತರರಾಷ್ಟ್ರೀಯ ಸಹಕಾರಿ ದಿನದ ಧ್ಯೇಯವಾಕ್ಯ ಏನಾಗಿತ್ತು?
A) ಸಹಕಾರಿ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ.
B) ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿ ಸಂಸ್ಥೆಗಳು.
C) ಶಾಂತಿಯುತ ಜಗತ್ತಿಗಾಗಿ ಸಹಕಾರಿ ಸಂಸ್ಥೆಗಳು!
D) ಅಂತರ್ಗತ ಬೆಳವಣಿಗೆಗಾಗಿ ಸಹಕಾರಿ ಸಂಸ್ಥೆಗಳು
ಉತ್ತರ : C)
6. ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಗೆ ಪದಾರ್ಪಣೆ ಮಾಡಿದ ಆಟಗಾರ ಎನಿಸಿಕೊಳ್ಳಲು ವೈಭವ್ ಸೂರ್ಯವಂಶಿ ಅವರು ಯಾರ ದಾಖಲೆಯನ್ನು ಮುರಿದರು?
A) ವಿರಾಟ್ ಕೊಹ್ಲಿ
B) ಯುವರಾಜ್ ಸಿಂಗ್
C) ಸಚಿನ್ ತೆಂಡೂಲ್ಕರ್
D) ಕಪಿಲ್ ದೇವ್
ಉತ್ತರ : C)




























