Related Articles
-
1
-
2
-
3
-
4
-
5
1. ಪರಿಸರ ಸೂಕ್ಷ್ಮ ವಲಯಗಳನ್ನು (ESZs) ಕೆಳಗಿನ ಯಾವ ಕಾಯ್ದೆಯ ಅಡಿಯಲ್ಲಿ ಅಧಿಸೂಚಿಸಲಾಗುತ್ತದೆ?
A) ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972
B) ಅರಣ್ಯ ಸಂರಕ್ಷಣಾ ಕಾಯ್ದೆ, 1980
C) ಪರಿಸರ (ಸಂರಕ್ಷಣೆ) ಕಾಯ್ದೆ, 1986
D) ಜೈವಿಕ ವೈವಿಧ್ಯತಾ ಕಾಯ್ದೆ, 2002
ಉತ್ತರ: C
2. ವಾರ್ಷಿಕ ಖೀರ್ ಭವಾನಿ ಮೇಳ ಪ್ರಾಥಮಿಕವಾಗಿ ಯಾವ ಸಮುದಾಯಕ್ಕೆ ಸಂಬಂಧಿಸಿದೆ?
A) ಡೋಗ್ರಾ ಸಮುದಾಯ
B) ಕಾಶ್ಮೀರಿ ಪಂಡಿತ್ ಸಮುದಾಯ
C) ಗುಜ್ಜರ್ ಸಮುದಾಯ
D) ಲಡಾಖಿ ಬೌದ್ಧ ಸಮುದಾಯ
ಉತ್ತರ: B
3. ಅಂತರರಾಷ್ಟ್ರೀಯ ಯೋಗ ದಿನ 2026 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: A
4. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: D
ಇತಿಹಾಸ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿ:
ಹರಿಯಾಣದ ‘ರಾಖಿಗರೀ’ಯಲ್ಲಿ ಪತ್ತೆಯಾಗಿರುವ ಸುಮಾರು 5,000 ವರ್ಷಗಳ ಹಳೆಯ ಸಿಂಧು ಕಣಿವೆ ನಾಗರಿಕತೆಯ ಅಸ್ಥಿಪಂಜರಗಳನ್ನು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಆ ವ್ಯಕ್ತಿಗಳ ಅವಶೇಷಗಳ ಮುಖದ ಪುನರ್ರಚನೆಗಾಗಿ ಕಳುಹಿಸಿಕೊಟ್ಟಿದೆ.
‘ರಾಖಿಗರೀ’ಯ (Rakhigarhi) ಬಗ್ಗೆ
ಪ್ರಸ್ತುತ ರಾಖಿಗರೀಯು ಹರಿಯಾಣದ ಘಗ್ಗರ್-ಹಕ್ರಾ ನದಿ ಬಯಲಿನಲ್ಲಿ ಘಗ್ಗರ್ ನದಿಯಿಂದ 27 ಕಿ.ಮೀ ದೂರದಲ್ಲಿದೆ.
ಈ ಪುರಾತತ್ತ್ವ ಶಾಸ್ತ್ರದ ನೆಲೆಯು ಸಾ.ಶ.ಪೂ 2600-1900 ರ ಕಾಲಮಾನಕ್ಕೆ ಸೇರಿದೆ.
ಇದು ಭಾರತೀಯ ಉಪಖಂಡದಲ್ಲಿನ ಅತಿ ದೊಡ್ಡ ಹರಪ್ಪಾ ನೆಲೆಯಾಗಿದೆ.
ಈ ಸ್ಥಳವನ್ನು ಮೊದಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಮರೇಂದ್ರ ನಾಥ್ ಅವರು ಉತ್ಖನನ ಮಾಡಿದರು.
ಪ್ರಮುಖ ಶೋಧನೆಗಳು:
ಉಗ್ರಾಣ (Granary): ಹರಪ್ಪಾ ನಾಗರಿಕತೆಯ ಪ್ರಬುದ್ಧ ಹಂತಕ್ಕೆ (ಸಾ.ಶ.ಪೂ 2600 ರಿಂದ ಸಾ.ಶ.ಪೂ 2000) ಸೇರಿದ ಉಗ್ರಾಣವೊಂದು ಇಲ್ಲಿ ಪತ್ತೆಯಾಗಿದೆ. ಇದು 7 ಆಯತಾಕಾರದ ಅಥವಾ ಚೌಕಾಕಾರದ ಕೋಣೆಗಳನ್ನು ಹೊಂದಿದೆ.
ಸಂಸ್ಕೃತಿ, ಉಡುಪು ಮತ್ತು ಆರಾಧನೆ : ರಾಖಿಗರೀಯಲ್ಲಿ ಅಗ್ನಿ ಕುಂಡಗಳು ಮತ್ತು ಅರೆ-ವೃತ್ತಾಕಾರದ ರಚನೆಗಳು ಪತ್ತೆಯಾಗಿವೆ.
ಸ್ಮಶಾನ ಮತ್ತು ಸಮಾಧಿ ಸ್ಥಳಗಳು: ಪ್ರಬುದ್ಧ ಹರಪ್ಪಾ ಕಾಲದ ಸ್ಮಶಾನವು ರಾಖಿಗರೀಯಲ್ಲಿ ಪತ್ತೆಯಾಗಿದ್ದು, ಇಲ್ಲಿ ಎಂಟು ಸಮಾಧಿಗಳು ಕಂಡುಬಂದಿವೆ.
ಸಂವಿಧಾನ ಮತ್ತು ರಾಜಕೀಯ
ಇದೀಗ ಸುದ್ದಿಯಲ್ಲಿ:
ಜೂನ್ 18, 1951 ರಂದು ಭಾರತೀಯ ಸಂವಿಧಾನದ ಮೊದಲನೇ ತಿದ್ದುಪಡಿಯು ಜಾರಿಗೆ ಬಂದಿತು.
ರಾಜ್ಯದ ನೀತಿಗಳನ್ನು ನಿರ್ಬಂಧಿಸುವ ನ್ಯಾಯಾಲಯದ ತೀರ್ಪುಗಳನ್ನು ರದ್ದುಗೊಳಿಸುವ ಉದ್ದೇಶದಿಂದ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂವಿಧಾನದ ಮೊದಲ ತಿದ್ದುಪಡಿಯನ್ನು ಮಂಡಿಸಿದರು.
ಪ್ರಮುಖ ಬದಲಾವಣೆಗಳು:
ವಾಕ್ ಸ್ವಾತಂತ್ರ್ಯದ ನಿರ್ಬಂಧ : ಸಂವಿಧಾನದ ವಿಧಿ 19 ಕ್ಕೆ ಮಿತಿಗಳನ್ನು ವಿಧಿಸಲು “ಸಾರ್ವಜನಿಕ ಸುವ್ಯವಸ್ಥೆ“, “ವಿದೇಶಿ ರಾಷ್ಟ್ರಗಳೊಂದಿಗೆ ಸ್ನೇಹಪರ ಸಂಬಂಧಗಳು” ಮತ್ತು “ಅಪರಾಧಕ್ಕೆ ಪ್ರಚೋದನೆ” ಎಂಬ ಅಂಶಗಳನ್ನು ಸೇರ್ಪಡೆ ಮಾಡಲಾಯಿತು.
ಭೂ ಸುಧಾರಣೆಗಳ ರಕ್ಷಣೆ: ಭೂ ಸುಧಾರಣಾ ಕಾಯ್ದೆಗಳನ್ನು ನ್ಯಾಯಾಂಗ ವಿಮರ್ಶೆಯಿಂದ ರಕ್ಷಿಸಲು ಒಂಬತ್ತನೇ ಅನುಸೂಚಿಯನ್ನು ಅನ್ನು ರಚಿಸಲಾಯಿತು.
ಮೀಸಲಾತಿಗೆ ಅವಕಾಶ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಒದಗಿಸಲು ವಿಧಿ 15(4) ಅನ್ನು ಸೇರಿಸಲಾಯಿತು.
ರಾಜ್ಯದ ಏಕಸ್ವಾಮ್ಯಕ್ಕೆ ಅವಕಾಶ: ವ್ಯಾಪಾರ ಅಥವಾ ವ್ಯವಹಾರಗಳನ್ನು ರಾಷ್ಟ್ರೀಕರಣಗೊಳಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿ:
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಖಾಸಗಿ ಸಮುದ್ರಾಹಾರ ಸಂಸ್ಕರಣೆ ಮತ್ತು ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಮೋನಿಯಾ (NH₃) ಅನಿಲದ ಬಗ್ಗೆ
ಅಮೋನಿಯಾ (NH₃) ತೀಕ್ಷ್ಣವಾದ ಮತ್ತು ಉಸಿರುಗಟ್ಟಿಸುವ ವಾಸನೆಯನ್ನು ಹೊಂದಿರುವ ಬಣ್ಣರಹಿತ ಅನಿಲವಾಗಿದೆ.
ಇದು ಸಾರಜನಕ ಮತ್ತು ಜಲಜನಕದಿಂದ (Nitrogen and hydrogen) ಮಾಡಲ್ಪಟ್ಟ ಸರಳ ಅಜೈವಿಕ ಸಂಯುಕ್ತವಾಗಿದೆ.
ಸಾವಯವ ವಸ್ತುಗಳ ವಿಘಟನೆಯ ಸಮಯದಲ್ಲಿ ಇದು ನೈಸರ್ಗಿಕವಾಗಿ ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾದರೂ ಸಹ, ಇದರ ವ್ಯಾಪಕವಾದ ಕೈಗಾರಿಕಾ ಮತ್ತು ಕೃಷಿ ಅನ್ವಯಿಕೆಗಳ ಕಾರಣದಿಂದಾಗಿ ಇದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.
ಕೈಗಾರಿಕಾ ಅಮೋನಿಯಾವನ್ನು ವಾಣಿಜ್ಯಿಕವಾಗಿ ಹೇಬರ್-ಬಾಷ್ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ; ಇದರಲ್ಲಿ ಕಬ್ಬಿಣದ ವೇಗವರ್ಧಕದ ಉಪಸ್ಥಿತಿಯಲ್ಲಿ, ಹೆಚ್ಚಿನ ತಾಪಮಾನ ಮತ್ತು ಒತ್ತಡದಲ್ಲಿ ವಾತಾವರಣದ ಸಾರಜನಕವು ಜಲಜನಕದೊಂದಿಗೆ ಪ್ರತಿಕ್ರಿಯಿಸುತ್ತದೆ.
ಇದರ ಅತ್ಯುತ್ತಮ ಶೈತ್ಯೀಕರಣ ಸಾಮರ್ಥ್ಯದಿಂದಾಗಿ ಇದನ್ನು ಪ್ರಮುಖವಾಗಿ ರಸಗೊಬ್ಬರ ಕೈಗಾರಿಕೆಗಳು, ರಾಸಾಯನಿಕ ಕೈಗಾರಿಕೆಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳಲ್ಲಿ ಬಳಸಲಾಗುತ್ತದೆ.
ಪರಿಸರ
ಇದೀಗ ಸುದ್ದಿಯಲ್ಲಿ:
ಕೃಷಿ ತ್ಯಾಜ್ಯವನ್ನು ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮೌಲ್ಯಯುತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಸುಸ್ಥಿರ ಪರಿಹಾರವಾಗಿ ಬಯೋಚಾರ್ ಹೊರಹೊಮ್ಮುತ್ತಿದೆ.
ಬಯೋಚಾರ್ ಬಗ್ಗೆ:
ಬಯೋಚಾರ್ ಎಂಬುದು ಇದ್ದಿಲಿನಂತಹ ವಸ್ತುವಾಗಿದ್ದು, ಪೈರೋಲಿಸಿಸ್ (Pyrolysis) ಎಂಬ ನಿಯಂತ್ರಿತ ಪ್ರಕ್ರಿಯೆಯಲ್ಲಿ ಕೃಷಿ ಮತ್ತು ಅರಣ್ಯ ತ್ಯಾಜ್ಯಗಳ (ಬಯೋಮಾಸ್) ಸಾವಯವ ವಸ್ತುಗಳನ್ನು ಸುಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ.
ಸಾಮಾನ್ಯ ಸಾವಯವ ವಸ್ತುಗಳಿಗಿಂತ ಭಿನ್ನವಾಗಿ, ಬಯೋಚಾರ್ ಬಹಳ ನಿಧಾನವಾಗಿ ವಿಘಟನೆಯಾಗುತ್ತದೆ ಮತ್ತು ನೂರಾರು ವರ್ಷಗಳವರೆಗೆ ಮಣ್ಣಿನಲ್ಲಿ ಹಾಗೆಯೇ ಉಳಿಯುತ್ತದೆ.
ಇದು ಹೆಚ್ಚು ರಂಧ್ರಯುಕ್ತವಾಗಿದ್ದು, ನೀರು, ಪೋಷಕಾಂಶಗಳು ಮತ್ತು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಬಯೋಚಾರ್ನ ಪ್ರಯೋಜನಗಳು:
ಕೃಷಿ ಉತ್ಪಾದಕತೆ: ಬಯೋಚಾರ್ ಬೆಳೆ ಇಳುವರಿಯನ್ನು ಶೇಕಡಾ 10-30% ರಷ್ಟು ಸುಧಾರಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ, ವಿಶೇಷವಾಗಿ ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.
ಕಾರ್ಬನ್ (ಇಂಗಾಲದ) ಕ್ರೆಡಿಟ್ಗಳು: ಬಯೋಚಾರ್ ವಾತಾವರಣದಿಂದ ಇಂಗಾಲವನ್ನು ತೆಗೆದುಹಾಕುವ ಮತ್ತು ಅದನ್ನು ಮಣ್ಣಿನಲ್ಲಿ ಸಂಗ್ರಹಿಸುವ ಕಾರಣ, ಇದು ಕಾರ್ಬನ್ ಕ್ರೆಡಿಟ್ಗಳನ್ನು ಉತ್ಪಾದಿಸುತ್ತದೆ.
ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ: ಬಯೋಚಾರ್ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ರಂಧ್ರಯುಕ್ತ ರಚನೆಯಲ್ಲಿ ನೀರನ್ನು ಸಂಗ್ರಹಿಸುತ್ತದೆ. ಇದು ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಶೇಕಡಾ 10-25% ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.
1. ‘ರಾಖಿಗರಿ’ಗೆ (Rakhigarhi) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: D
2. ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ಅನುಸೂಚಿಯನ್ನು ಮೊದಲನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1951 ರ ಮೂಲಕ ರಚಿಸಲಾಗಿದೆ?
A) ಹತ್ತನೇ ಅನುಸೂಚಿ
B) ಏಳನೇ ಅನುಸೂಚಿ
C) ಒಂಬತ್ತನೇ ಅನುಸೂಚಿ
D) ಹನ್ನೊಂದನೇ ಅನುಸೂಚಿ
ಉತ್ತರ: C
3. ಕೆಳಗಿನವುಗಳಲ್ಲಿ ಯಾವುದು ಅಮೋನಿಯಾವನ್ನು (NH₃) ಅತ್ಯುತ್ತಮವಾಗಿ ವಿವರಿಸುತ್ತದೆ?
A) ಮುಖ್ಯವಾಗಿ ಬೆಳಕಿನ ವ್ಯವಸ್ಥೆಗಳಲ್ಲಿ ಬಳಸುವ ನೈಸರ್ಗಿಕವಾಗಿ ಕಂಡುಬರುವ ಉದಾತ್ತ ಅನಿಲ (Noble gas).
B) ಸಾರಜನಕ ಮತ್ತು ಜಲಜನಕದಿಂದ ಸಂಯೋಜಿಸಲ್ಪಟ್ಟ ಸರಳ ಅಜೈವಿಕ ಸಂಯುಕ್ತ.
C) ಪೆಟ್ರೋಲಿಯಂ ಸಂಸ್ಕರಣೆಯಿಂದ ಪ್ರತ್ಯೇಕವಾಗಿ ಪಡೆಯಲಾದ ಹೈಡ್ರೋಕಾರ್ಬನ್.
D) ಕೈಗಾರಿಕಾ ಚಟುವಟಿಕೆಗಳ ಮೂಲಕ ಮಾತ್ರ ರೂಪುಗೊಳ್ಳುವ ಹಸಿರುಮನೆ ಅನಿಲ.
ಉತ್ತರ: B
4. ‘ಬಯೋಚಾರ್’ ಅನ್ನು ಪ್ರಾಥಮಿಕವಾಗಿ ಯಾವುದರಿಂದ ಉತ್ಪಾದಿಸಲಾಗುತ್ತದೆ?
A) ಪೆಟ್ರೋಲಿಯಂ ಉಳಿಕೆ (ತ್ಯಾಜ್ಯ)
B) ಕೃಷಿ ಮತ್ತು ಅರಣ್ಯ ತ್ಯಾಜ್ಯಗಳು
C) ಪುರಸಭೆಯ ಕೊಳಚೆನೀರು ಮಾತ್ರ
D) ಸುಣ್ಣದಕಲ್ಲು ನಿಕ್ಷೇಪಗಳು
ಉತ್ತರ: B
ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿ:
ಕೇಂದ್ರ ಗೃಹ ಸಚಿವರು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿರುವ ‘ಅಭಿಜ್ಞಾನ್’ ಆ್ಯಪ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಅಭಿಜ್ಞಾನ್ ಆ್ಯಪ್ ಬಗ್ಗೆ:
ಈ ಆ್ಯಪ್ ಆರೋಪಿಗಳು, ಅಪರಾಧಿಗಳು ಮತ್ತು ಜೈಲಿನಲ್ಲಿರುವ ಕೈದಿಗಳ ಬೆರಳಚ್ಚು ಸ್ಕ್ಯಾನ್ಗಳನ್ನು ಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ ಸಂಗ್ರಹಿಸಲು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆ (National Automated Fingerprint Identification System – NAFIS) ಯೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಸಂಗ್ರಹಿಸಲಾದ ಈ ಬೆರಳಚ್ಚು ಮಾಹಿತಿಯನ್ನು ಕೇವಲ 35 ಸೆಕೆಂಡುಗಳಲ್ಲಿ NAFIS ದತ್ತಾಂಶದೊಂದಿಗೆ ಹೋಲಿಕೆ ಮಾಡಿ ಅತ್ಯಂತ ವೇಗವಾಗಿ ಪರಿಶೀಲಿಸಬಹುದಾಗಿದೆ.
ಪ್ರಾಮುಖ್ಯತೆ
ರಸ್ತೆಗಳಲ್ಲಿ ನಡೆಸಲಾಗುವ ನಿಯಮಿತ ವಾಹನ ತಪಾಸಣೆಯ ಸಂದರ್ಭದಲ್ಲಿ, ಯಾವುದೇ ಶಂಕಿತ ವ್ಯಕ್ತಿಯ ಬಯೋಮೆಟ್ರಿಕ್ ಸ್ಕ್ಯಾನ್ ನಡೆಸುವ ಮೂಲಕ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಲು ಈ ತಂತ್ರಜ್ಞಾನವು ನೆರವಾಗುತ್ತದೆ.
ರಾಜಕೀಯ
ಇದೀಗ ಸುದ್ದಿಯಲ್ಲಿ:
ಇತ್ತೀಚಿನ ಒಂದು ಐತಿಹಾಸಿಕ ತೀರ್ಪಿನಲ್ಲಿ, ಸುರಕ್ಷಿತ ಮತ್ತು ನಿರ್ದಿಷ್ಟಪಡಿಸಿದ ಪಾದಚಾರಿ ಮಾರ್ಗಗಳ (Footpaths) ಮೇಲೆ ನಡೆಯುವ ಹಕ್ಕು ಒಂದು ಮೂಲಭೂತ ಹಕ್ಕು (Fundamental right) ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ತೀರ್ಪಿನ ಕುರಿತು:
ನಡೆಯುವ ಹಕ್ಕು ಸಂವಿಧಾನದ ವಿಧಿ 19(1)(d) (ಸಂಚಾರದ ಸ್ವಾತಂತ್ರ್ಯ – Freedom of movement) ಮತ್ತು ವಿಧಿ 21 (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು – Right to life and personal liberty) ಅಡಿಯಲ್ಲಿ ಬರುತ್ತದೆ.
ನ್ಯಾಯಾಲಯದ ಪ್ರಕಾರ, ನಡೆಯುವ ಹಕ್ಕು ವಿಧಿ 19(1)(a), 19(1)(b) ಮತ್ತು 19(1)(c) ಅಡಿಯಲ್ಲಿ ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಮತ್ತು ಸಂಘಗಳನ್ನು ರಚಿಸುವ ಸ್ವಾತಂತ್ರ್ಯವನ್ನು ಸಹ ಬೆಂಬಲಿಸುತ್ತದೆ.
ಈ ತೀರ್ಪು ಪಾದಚಾರಿ ಮೂಲಸೌಕರ್ಯಗಳನ್ನು ನಿರ್ಮಿಸುವ, ನಿರ್ವಹಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ಮುನ್ಸಿಪಲ್ ಕಾರ್ಪೊರೇಶನ್ಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ಪುರಸಭೆಗಳು ಮತ್ತು ಪಂಚಾಯತ್ಗಳ ಮೇಲೆಯೂ ವಿಧಿಸುತ್ತದೆ.
ನಗರ ಯೋಜನೆಯಲ್ಲಿ ಮೋಟಾರು ವಾಹನಗಳಿಗಿಂತ ಪಾದಚಾರಿಗಳ ಹಕ್ಕುಗಳಿಗೆ ಆದ್ಯತೆ ನೀಡಬೇಕು ಮತ್ತು ಸುರಕ್ಷಿತ ಹಾಗೂ ಸುಲಭವಾಗಿ ನಿಲುಕುವ ಪಾದಚಾರಿ ಮಾರ್ಗಗಳನ್ನು ಒದಗಿಸದಿದ್ದರೆ ನಾಗರಿಕರು ಕಾನೂನು ಪರಿಹಾರಗಳನ್ನು ಕೋರಬಹುದು ಎಂದು ನ್ಯಾಯಾಲಯವು ಒತ್ತಿಹೇಳಿದೆ.
ಸೂಚ್ಯಂಕಗಳು
ಇದೀಗ ಸುದ್ದಿಯಲ್ಲಿ:
2025 ರಲ್ಲಿ ಜಾಗತಿಕ ಒಟ್ಟು ಇಂಧನ ಹೂಡಿಕೆಯು $3.3 ಟ್ರಿಲಿಯನ್ ತಲುಪಿದ್ದರೂ ಸಹ, ಜಾಗತಿಕ ಶಕ್ತಿ ಪರಿವರ್ತನೆಯು ಪರಿಣಾಮಕಾರಿಯಾಗಿ ಸ್ಥಗಿತಗೊಂಡಿದೆ ಎಂದು ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ (ETI – Energy Transition Index) 2026 ವರದಿ ತಿಳಿಸಿದೆ.
ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ (ETI)ದ ಬಗ್ಗೆ
ಪ್ರಕಟಣೆ: ಈ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆಯು (WEF) ವಾರ್ಷಿಕವಾಗಿ ಪ್ರಕಟಿಸುತ್ತದೆ.
ಉದ್ದೇಶ: ವಿವಿಧ ದೇಶಗಳು ಸುರಕ್ಷಿತ, ಸುಸ್ಥಿರ, ಸಮಾನ ಮತ್ತು ಕೈಗೆಟುಕುವ ಬೆಲೆಯ ಇಂಧನ ವ್ಯವಸ್ಥೆಗಳತ್ತ ಎಷ್ಟು ಪರಿಣಾಮಕಾರಿಯಾಗಿ ಪರಿವರ್ತನೆಯಾಗುತ್ತಿವೆ ಎಂಬುದನ್ನು ಈ ಸೂಚ್ಯಂಕವು ಮೌಲ್ಯಮಾಪನ ಮಾಡುತ್ತದೆ.
ಮೌಲ್ಯಮಾಪನ ಮಾನದಂಡಗಳು: ಈ ಸೂಚ್ಯಂಕವು ಎರಡು ಪ್ರಮುಖ ಆಯಾಮಗಳನ್ನು ಆಧರಿಸಿದೆ:
ವ್ಯವಸ್ಥೆಯ ಕಾರ್ಯಕ್ಷಮತೆ: ಇದು ಇಂಧನ ಭದ್ರತೆ, ಸುಸ್ಥಿರತೆ ಮತ್ತು ಸಮಾನತೆಯನ್ನು ಒಳಗೊಂಡಿರುತ್ತದೆ.
ಪರಿವರ್ತನೆಯ ಸಿದ್ಧತೆ: ಇದು ನೀತಿಗಳು, ನಿಯಮಗಳು, ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ, ಶಿಕ್ಷಣ ಮತ್ತು ಸಾಂಸ್ಥಿಕ ಬೆಂಬಲವನ್ನು ಒಳಗೊಂಡಿರುತ್ತದೆ.
ಮಹತ್ವ: ಈ ಸೂಚ್ಯಂಕವು ಸರ್ಕಾರಗಳು ತಮ್ಮ ಶಕ್ತಿ ಪರಿವರ್ತನೆಯ ಪ್ರಯತ್ನಗಳಲ್ಲಿರುವ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಹಾಗೂ ನೀತಿ ಸುಧಾರಣೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ.
ETI 2026 ರ ಪ್ರಮುಖ ಅವಲೋಕನಗಳು:
ಜಾಗತಿಕ ಮಟ್ಟದಲ್ಲಿ ಸ್ವೀಡನ್, ಫಿನ್ಲೆಂಡ್ ಮತ್ತು ಡೆನ್ಮಾರ್ಕ್ ದೇಶಗಳು ಮೊದಲ ಮೂರು ಸ್ಥಾನಗಳನ್ನು ಕಾಯ್ದುಕೊಂಡಿವೆ.
ಭಾರತವು ಈ ಸೂಚ್ಯಂಕದಲ್ಲಿ ಎರಡು ಸ್ಥಾನಗಳ ಪ್ರಗತಿ ಸಾಧಿಸುವ ಮೂಲಕ 70 ನೇ ಸ್ಥಾನವನ್ನು ಪಡೆದುಕೊಂಡಿದೆ.
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿ:
ಹಣಕಾಸು ಕ್ರಿಯಾ ಕಾರ್ಯಪಡೆಯ (Financial Action Task Force – FATF) ಸಮಗ್ರ ಅಧಿವೇಶನವು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರನ್ನು ತನ್ನ ಮುಂದಿನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಇದೆ ಮೊದಲ ಬಾರಿಗೆ ಭಾರತವು FATF ನ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿದೆ.
ಇವರು ಜುಲೈ 2026 ರಿಂದ ಜೂನ್ 2027 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯ ಬಗ್ಗೆ:
ಸ್ಥಾಪನೆ: ಹಣಕಾಸು ಕ್ರಿಯಾ ಕಾರ್ಯಪಡೆಯು (FATF) 1989 ರಲ್ಲಿ ಪ್ಯಾರಿಸ್ನಲ್ಲಿ ನಡೆದ G7 ಶೃಂಗಸಭೆಯಲ್ಲಿ ಸ್ಥಾಪಿಸಲಾದ ಅಂತರ್-ಸರ್ಕಾರಿ ಸಂಸ್ಥೆಯಾಗಿದೆ.
ಉದ್ದೇಶ: ಅಕ್ರಮ ಹಣ ವರ್ಗಾವಣೆ (Money laundering), ಭಯೋತ್ಪಾದನೆಗೆ ಹಣಕಾಸು ಒದಗಿಸುವಿಕೆ (Terrorist financing) ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಇರುವ ಇತರ ಸಂಬಂಧಿತ ಬೆದರಿಕೆಗಳನ್ನು ಎದುರಿಸಲು ಕಾನೂನು, ನಿಯಂತ್ರಣ ಮತ್ತು ಕಾರ್ಯಾಚರಣೆಯ ಕ್ರಮಗಳನ್ನು ರೂಪಿಸುವುದು ಹಾಗೂ ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸಚಿವಾಲಯ: ಇದರ ಸಚಿವಾಲಯವು ಪ್ಯಾರಿಸ್ನಲ್ಲಿರುವ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (OECD) ಪ್ರಧಾನ ಕಚೇರಿಯಲ್ಲಿದೆ.
ಸದಸ್ಯ ರಾಷ್ಟ್ರಗಳು: ಪ್ರಸ್ತುತ FATF 40 ಸದಸ್ಯರನ್ನು ಹೊಂದಿದ್ದು, ಭಾರತವು ಸಹ ಇದರ ಸಕ್ರಿಯ ಸದಸ್ಯ ರಾಷ್ಟ್ರವಾಗಿದೆ.
FATF ನ ಪ್ರಮುಖ ಪಟ್ಟಿಗಳು:
ಬೂದು ಪಟ್ಟಿ (Grey List): ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸುರಕ್ಷಿತ ತಾಣವೆಂದು ಪರಿಗಣಿಸಲಾದ ದೇಶಗಳನ್ನು FATF ನ ಬೂದು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಆ ದೇಶ ಕಪ್ಪು ಪಟ್ಟಿಗೆ ಸೇರುವ ಎಚ್ಚರಿಕೆಯ ಸಂಕೇತವಾಗಿದೆ.
ಕಪ್ಪು ಪಟ್ಟಿ (Black List): ಸಹಕಾರೇತರ ದೇಶಗಳು ಅಥವಾ ಪ್ರಾಂತ್ಯಗಳನ್ನು (NCCTs) ಕಪ್ಪು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ದೇಶಗಳು ಭಯೋತ್ಪಾದಕ ನಿಧಿ ಮತ್ತು ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತವೆ. FATF ಈ ಪಟ್ಟಿಯನ್ನು ನಿಯಮಿತವಾಗಿ ಪರಿಷ್ಕರಿಸುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿ:
ಹೈದರಾಬಾದ್ನಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಮಂಡಳಿಯ – ಭಾರತೀಯ ಎಣ್ಣೆಬೀಜಗಳ ಸಂಶೋಧನಾ ಸಂಸ್ಥೆಯು (ICAR-IIOR), ಬೀಜಗಳ ಗುಣಮಟ್ಟವನ್ನು ಸುಧಾರಿಸುವ ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಅಭಿವೃದ್ಧಿಪಡಿಸಿದೆ.
ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನದ ಬಗ್ಗೆ
ಅಭಿವೃದ್ಧಿಪಡಿಸಿದವರು: ICAR-IIOR ಸಂಸ್ಥೆ
ಈ ತಂತ್ರಜ್ಞಾನವು ಜೈವಿಕ ವಿಘಟನೀಯ ಬಯೋಪಾಲಿಮರಿಕ್ ವಸ್ತುಗಳನ್ನು ಬಳಸಿಕೊಂಡು ಬೀಜಗಳ ಸುತ್ತ ಬಹುಕ್ರಿಯಾತ್ಮಕ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ.
ಈ ಲೇಪನವು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು, ಪೋಷಕಾಂಶಗಳು, ಸೂಕ್ಷ್ಮ ಪೋಷಕಾಂಶಗಳು, ಬೆಳೆ ಸಂರಕ್ಷಣಾ ಕಾರಕಗಳು ಮತ್ತು ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನು ನೇರವಾಗಿ ಬೀಜ-ಮಣ್ಣಿನ ಸಂಪರ್ಕ ಪ್ರದೇಶಕ್ಕೆ ತಲುಪಿಸುವ ವಾಹಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ರಕ್ಷಣಾತ್ಮಕ ಸೂಕ್ಷ್ಮ-ಪರಿಸರವು ತ್ವರಿತ ಮೊಳಕೆಯೊಡೆಯುವಿಕೆಗೆ, ಸಸಿಗಳ ದೃಢವಾದ ಬೆಳವಣಿಗೆ, ವರ್ಧಿತ ಬೇರುಗಳ ಅಭಿವೃದ್ಧಿ ಮತ್ತು ಬೆಳೆ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಪರಿಸರದ ಒತ್ತಡಗಳನ್ನು ತಡೆದುಕೊಳ್ಳುವ ಸುಧಾರಿತ ಸಹಿಷ್ಣುತೆಗೆ ಉತ್ತೇಜನ ನೀಡುತ್ತದೆ.
ಮಳೆಯಾಶ್ರಿತ ಕೃಷಿಗೆ ಈ ಆವಿಷ್ಕಾರವು ಅತ್ಯಂತ ಮೌಲ್ಯಯುತವಾಗಿದೆ; ಏಕೆಂದರೆ ಮಳೆಯಾಶ್ರಿತ ಪ್ರದೇಶವು ಭಾರತದ ಕೃಷಿ ಭೂಮಿಯ ಗಮನಾರ್ಹ ಪಾಲನ್ನು ಹೊಂದಿದ್ದು, ವಿಳಂಬವಾದ ಮುಂಗಾರಿನಿಂದ (ಮಾನ್ಸೂನ್) ತೀವ್ರವಾಗಿ ಬಾಧಿತವಾಗುತ್ತದೆ.
1. ಅಭಿಜ್ಞಾನ್ ಅಪ್ಲಿಕೇಶನ್ಗೆ (Abhigyan App) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
2. ಸುರಕ್ಷಿತ ಮತ್ತು ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು (Right to walk) ಪ್ರಾಥಮಿಕವಾಗಿ ಕೆಳಗಿನ ಯಾವ ಮೂಲಭೂತ ಹಕ್ಕುಗಳಿಂದ ಹೊರಹೊಮ್ಮುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ?
A) ವಿಧಿಗಳು 14 ಮತ್ತು 15
B) ವಿಧಿಗಳು 19(1)(d) ಮತ್ತು 21
C) ವಿಧಿಗಳು 25 ಮತ್ತು 26
D) ವಿಧಿಗಳು 32 ಮತ್ತು 226
ಉತ್ತರ: B
3. ಕೆಳಗಿನ ಯಾವ ಸಂಸ್ಥೆಯು ಇಂಧನ ಪರಿವರ್ತನಾ ಸೂಚ್ಯಂಕವನ್ನು (Energy Transition Index – ETI) ಪ್ರಕಟಿಸುತ್ತದೆ?
A) ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)
B) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
C) ವಿಶ್ವ ಆರ್ಥಿಕ ವೇದಿಕೆ (WEF)
D) ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA)
ಉತ್ತರ: C
4. FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಅವರ ಇತ್ತೀಚಿನ ನೇಮಕವು ಗಮನಾರ್ಹವಾಗಿದೆ ಏಕೆಂದರೆ___________
A) ಭಾರತವು ಮೊದಲ ಬಾರಿಗೆ FATF ಸಚಿವಾಲಯವನ್ನು ಆಯೋಜಿಸುತ್ತಿದೆ.
B) ಭಾರತವು ಮೊದಲ ಬಾರಿಗೆ FATF ಉಪಾಧ್ಯಕ್ಷ ಸ್ಥಾನವನ್ನು ಹೊಂದಲಿದೆ.
C) ಭಾರತವು FATF ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
D) ಭಾರತವು FATF ನಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ.
ಉತ್ತರ: B
5. ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?
A) ICAR -ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ (ICAR-IARI)
B) ICAR -ಭಾರತೀಯ ಎಣ್ಣೆಕಾಳು ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-IIOR)
C) ICAR -ಕೇಂದ್ರೀಯ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-CRIDA)
D) ರಾಷ್ಟ್ರೀಯ ಬೀಜ ನಿಗಮ, ನವದೆಹಲಿ
ಉತ್ತರ: B
ಆರ್ಥಿಕತೆ

ಇದೀಗ ಸುದ್ದಿಯಲ್ಲಿ:
ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) ಇತ್ತೀಚೆಗೆ ‘ಡ್ರೂನಿಕ್ಸ್’ (Drunix) ಎಂಬ ನೂತನ ಪ್ಲಾಟ್ಫಾರ್ಮ್ ಅನ್ನು ಬಿಡುಗಡೆಗೊಳಿಸಿದೆ.
ಡ್ರೂನಿಕ್ಸ್ ಪ್ಲಾಟ್ಫಾರ್ಮ್ ಬಗ್ಗೆ:
ಇದು ಒಂದು ಮುಕ್ತ-ಮೂಲ ಬ್ಲಾಕ್ಚೈನ್ ಪ್ಲಾಟ್ಫಾರ್ಮ್ (Open-Source Blockchain Platform) ಆಗಿದ್ದು, ಕಾರ್ಪೊರೇಟ್ ಸಂಸ್ಥೆಗಳಿಗೆ ತಮ್ಮದೇ ಆದ ಟೋಕನೈಸೇಶನ್ ಪ್ಲಾಟ್ಫಾರ್ಮ್ಗಳನ್ನು, ಡಿಜಿಟಲ್ ಆಸ್ತಿ ಪರಿಸರ ವ್ಯವಸ್ಥೆಗಳನ್ನು (Digital Asset Ecosystems) ಮತ್ತು ಬಹು-ಸಂಸ್ಥೆಗಳ ನೆಟ್ ವರ್ಕ್ ಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸಲು ನೆರವಾಗುತ್ತದೆ.
ಮಹತ್ವ:
ದತ್ತಾಂಶವನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಹಾಗೂ ಡಿಜಿಟಲ್ ಆಸ್ತಿಗಳನ್ನು ಸಮರ್ಪಕವಾಗಿ ಪತ್ತೆಹಚ್ಚಲು ಬ್ಯಾಂಕುಗಳು ಮತ್ತು ವ್ಯವಹಾರ ಸಂಸ್ಥೆಗಳಿಗೆ ಇದು ಸುಭದ್ರವಾದ ವ್ಯವಸ್ಥೆಯನ್ನು ಒದಗಿಸುತ್ತದೆ.
ಬ್ಲಾಕ್ಚೈನ್ ತಂತ್ರಜ್ಞಾನದ ಬಳಕೆ: ಈ ತಂತ್ರಜ್ಞಾನದ ಬಳಕೆಯಿಂದ ದತ್ತಾಂಶವು ಅತ್ಯಂತ ಸುರಕ್ಷಿತವಾಗಿರುತ್ತದೆ, ಪಾರದರ್ಶಕವಾಗಿ ಹಂಚಿಕೆಯಾಗುತ್ತದೆ ಮತ್ತು ಯಾವುದೇ ವಂಚನೆಗಳ ಮೂಲಕ ದತ್ತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ.
‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ: ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ‘ಹೈಪರ್ಲೆಡ್ಜರ್ ಫ್ಯಾಬ್ರಿಕ್’ (Hyperledger Fabric) ಎಂಬ ತಂತ್ರಾಂಶವನ್ನು ಭಾರತೀಯ ಆಡಳಿತಾತ್ಮಕ ಅಗತ್ಯಗಳಿಗೆ ತಕ್ಕಂತೆ, ಇನ್ನಷ್ಟು ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಭಾರತವು ಮಾರ್ಪಡಿಸಿದೆ.
ಇದು ಮುಕ್ತ-ಮೂಲ (Open-Source) ಆಗಿದೆ: ಇದರ ಸೋರ್ಸ್ ಕೋಡ್ (Source Code) ಯಾರಿಗಾದರೂ ವೀಕ್ಷಿಸಲು ಮತ್ತು ಬಳಸಲು ಉಚಿತವಾಗಿ ಲಭ್ಯವಿದ್ದು, ಇದರಿಂದ ಕಂಪನಿಗಳು ಒಟ್ಟಾಗಿ ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಪ್ರಮುಖ ಪರಿಕಲ್ಪನೆಗಳು
ಟೋಕನೈಸೇಶನ್ (Tokenization): ಇದು ಆಸ್ತಿಗಳು ಅಥವಾ ಮಾಲೀಕತ್ವದ ಹಕ್ಕುಗಳನ್ನು ಬ್ಲಾಕ್ಚೈನ್ ವ್ಯವಸ್ಥೆಯಲ್ಲಿ ಡಿಜಿಟಲ್ ಟೋಕನ್ಗಳಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆಯಾಗಿದೆ.
ಈ ಡಿಜಿಟಲ್ ಆಸ್ತಿಗಳು ಆರ್ಥಿಕ ಭದ್ರತೆಗಳು, ರಿಯಲ್ ಎಸ್ಟೇಟ್, ಸರಕುಗಳು, ಡಿಜಿಟಲ್ ಕರೆನ್ಸಿಗಳು ಮತ್ತು ಗುರುತಿನ ರುಜುವಾತುಗಳನ್ನು (Identity Credentials) ಒಳಗೊಂಡಿರುತ್ತವೆ.
ಕ್ರಿಪ್ಟೋಕರೆನ್ಸಿ (Cryptocurrency): ಇದು ಆರ್ಥಿಕ ವಹಿವಾಟುಗಳಿಗಾಗಿ ಬಳಸಲಾಗುವ ಒಂದು ರೀತಿಯ ವರ್ಚುವಲ್ ಕರೆನ್ಸಿ ಆಗಿದ್ದು, ವಿವಿಧ ವಹಿವಾಟುಗಳನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
ಬ್ಲಾಕ್ಚೈನ್ (Blockchain): ಬ್ಲಾಕ್ಚೈನ್ ಎಂಬುದು ಮೌಲ್ಯಯುತವಾದ ಪ್ರತಿಯೊಂದು ಅಂಶವನ್ನೂ ದಾಖಲಿಸಲು ಪ್ರೋಗ್ರಾಂ ಮಾಡಬಹುದಾದ, ಎಂದಿಗೂ ತಿರುಚಲಾಗದ ಡಿಜಿಟಲ್ ವಹಿವಾಟುಗಳ ಲೆಕ್ಕದ ಪುಸ್ತಕವಾಗಿದೆ. (Immutable Digital Ledger). ಇದರಲ್ಲಿರುವ ಪ್ರತಿಯೊಂದು ದಾಖಲೆಗಳ ಪಟ್ಟಿಯನ್ನು ‘ಬ್ಲಾಕ್’ (Block) ಎಂದು ಕರೆಯಲಾಗುತ್ತದೆ.
ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:
ಶಿ-ಬಾಕ್ಸ್ (SHe-Box) ಪೋರ್ಟಲ್’ನ ಬಗ್ಗೆ
ಶಿ-ಬಾಕ್ಸ್ 2.0 (SHe-Box 2.0) ಬಗ್ಗೆ
ಮಿಷನ್ ಶಕ್ತಿ (Mission Shakti) ಬಗ್ಗೆ:
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿ:
ಡಾರ್ಕ್ ವೆಬ್ (Dark Web) ಬಗ್ಗೆ
ಡಾರ್ಕ್ ವೆಬ್ ಅನ್ನು ಅರ್ಥಮಾಡಿಕೊಳ್ಳಲು, ಇಂಟರ್ನೆಟ್ ಅನ್ನು ಮುಖ್ಯವಾಗಿ ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಬಹುದು:
ಡಾರ್ಕ್ ವೆಬ್ನ ಪ್ರಮುಖ ಲಕ್ಷಣಗಳು:
ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿ:
PM-VBRY ಯೋಜನೆಯ ಬಗ್ಗೆ ಕುರಿತು:
ಪ್ರಮುಖ ಲಕ್ಷಣಗಳು:
ಸೂಚ್ಯಂಕಗಳು ಮತ್ತು ವರದಿಗಳು
ಇದೀಗ ಸುದ್ದಿಯಲ್ಲಿ:
ಪ್ರಮುಖ ಅವಲೋಕನಗಳು:
ಜಾಗತಿಕ ಮಟ್ಟದ ಅಗ್ರ 5 ವಿಶ್ವವಿದ್ಯಾಲಯಗಳು:
ಅಗ್ರ 5 ಭಾರತೀಯ ಸಂಸ್ಥೆಗಳು: QS ಜಾಗತಿಕ ಶ್ರೇಯಾಂಕ 2027
| ಭಾರತೀಯ ಶ್ರೇಯಾಂಕ | ಶಿಕ್ಷಣ ಸಂಸ್ಥೆ | ಜಾಗತಿಕ ಶ್ರೇಯಾಂಕ |
| 1 | IIT ದೆಹಲಿ | 118 |
| 2 | IIT ಬಾಂಬೆ | 134 |
| 3 | IIT ಮದ್ರಾಸ್ | 170 |
| 4 | IIT ಖರಗ್ಪುರ | 205 |
| 5 | IIT ಕಾನ್ಪುರ | 221 (ಜಂಟಿ ಸ್ಥಾನ – Tied) |
| 6 | IISc ಬೆಂಗಳೂರು | 221 (ಜಂಟಿ ಸ್ಥಾನ – Tied) |
QS ಶ್ರೇಯಾಂಕದ ಕುರಿತು:
ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿ:
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಬಗ್ಗೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಬಗ್ಗೆ:
ರಕ್ಷಣೆ
ಇದೀಗ ಸುದ್ದಿಯಲ್ಲಿ:
‘ಖಾನ್ ಕ್ವೆಸ್ಟ್’ ಸಮರಾಭ್ಯಾಸದ ಬಗ್ಗೆ:
ಅಂತರರಾಷ್ಟ್ರೀಯ

ಇದೀಗ ಸುದ್ದಿಯಲ್ಲಿ:
ಸುದೀರ್ಘ ಅವಧಿಯ ಉದ್ವಿಗ್ನತೆಯ ನಂತರ, ಇರಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ (United States) ಮರು ರಾಜತಾಂತ್ರಿಕ ಒಪ್ಪಂದಕ್ಕೆ ಪ್ರಾಥಮಿಕ ಚೌಕಟ್ಟನ್ನು ಸಿದ್ಧಪಡಿಸಿವೆ ಎಂದು ಇತ್ತೀಚಿನ ವರದಿಗಳು ಸ್ಪಷ್ಟಪಡಿಸಿವೆ.
ಒಪ್ಪಂದದ ಬಗ್ಗೆ
ಈ ಒಪ್ಪಂದವು ಅಮೆರಿಕ ಮತ್ತು ಇರಾನ್ ನಡುವಿನ 14-ಅಂಶಗಳ ತಿಳಿವಳಿಕಾ ಒಪ್ಪಂದವನ್ನು (MoU) ಒಳಗೊಂಡಿದೆ.
ಇದು ಉದ್ವಿಗ್ನತೆಯನ್ನು ಶಮನಗೊಳಿಸಲು (De-escalation), ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ನೌಕಾಯಾನವನ್ನು ಮರುಸ್ಥಾಪಿಸಲು ಮತ್ತು ಆರ್ಥಿಕ ನಿರ್ಬಂಧಗಳ ಸಡಿಲಿಕೆಯ ಮಾತುಕತೆಗಳಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಲೆಬನಾನ್ ಸೇರಿದಂತೆ ಇತರ ಪ್ರದೇಶಗಳಲ್ಲಿನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವುದು ಮತ್ತು 60-ದಿನಗಳ ಮಾತುಕತೆಯ ಅವಧಿಯನ್ನು ಸಹ ಈ ಒಪ್ಪಂದವು ಒಳಗೊಂಡಿದೆ.
ಇರಾನ್-ಅಮೆರಿಕ ಪರಮಾಣು ರಾಜತಾಂತ್ರಿಕತೆಯ ವಿಕಾಸ
2015ರ ಪರಮಾಣು ಒಪ್ಪಂದ: ಇರಾನ್ ಮತ್ತು P5+1 ರಾಷ್ಟ್ರಗಳ ನಡುವೆ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ (JCPOA) ಸಹಿ ಹಾಕಲಾಯಿತು.
ಆರ್ಥಿಕ ನಿರ್ಬಂಧಗಳ ಸಡಿಲಿಕೆಗೆ ಪ್ರತಿಯಾಗಿ, ಯುರೇನಿಯಂ ಪುಷ್ಟೀಕರಣವನ್ನು ಸೀಮಿತಗೊಳಿಸಲು ಮತ್ತು ಕಟ್ಟುನಿಟ್ಟಾದ ತಪಾಸಣೆಗಳಿಗೆ ಒಳಪಡಲು ಇರಾನ್ ಸಮ್ಮತಿಸಿತ್ತು.
ಅಮೆರಿಕದ ನಿರ್ಗಮನ ಮತ್ತು ಮರುಕಳಿಸಿದ ಉದ್ವಿಗ್ನತೆ: ಅಮೆರಿಕವು 2018ರಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆಯಿಂದ (JCPOA) ಹೊರಬಂದಿತು ಮತ್ತು ಇರಾನ್ ಮೇಲೆ ಮರು ನಿರ್ಬಂಧಗಳನ್ನು ಹೇರಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಈ ಒಪ್ಪಂದದ ಹಲವಾರು ನಿಬಂಧನೆಗಳ ಪಾಲನೆಯನ್ನು ಹಂತಹಂತವಾಗಿ ಕಡಿತಗೊಳಿಸಿತು.
ಇರಾನ್-ಅಮೆರಿಕ ಒಪ್ಪಂದದ ಸಂಭಾವ್ಯ ಫಲಿತಾಂಶಗಳು:
ಈ ಉದ್ವಿಗ್ನತೆಯ ಕಡಿತವು ಪ್ರದೇಶದಾದ್ಯಂತ ಮಿಲಿಟರಿ ಸಂಘರ್ಷ ಮತ್ತು ಪರೋಕ್ಷ ಯುದ್ಧಗಳ ಅಪಾಯವನ್ನು ತಗ್ಗಿಸುತ್ತದೆ.
ಈ ಸ್ಥಿರ ವಾತಾವರಣವು ಸುಗಮ ಇಂಧನ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತವನ್ನು ಕಡಿಮೆ ಮಾಡುತ್ತದೆ.
ಸುಧಾರಿತ ಭದ್ರತಾ ಪರಿಸ್ಥಿತಿಗಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಉತ್ತೇಜಿಸುತ್ತವೆ.
ಭಾರತದ ಪಾಲಿಗೆ, ಚಾಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಅಭಿವೃದ್ಧಿಯನ್ನು ಉತ್ತೇಜಿಸಲು ಈ ಸುಧಾರಿತ ಪ್ರಾದೇಶಿಕ ಪರಿಸ್ಥಿತಿಗಳು ಅತ್ಯಗತ್ಯವಾಗಿವೆ.
ಪರಿಸರ
ಇದೀಗ ಸುದ್ದಿಯಲ್ಲಿ:
ಭಾರತ ಮತ್ತು ಜಪಾನ್ ದೇಶಗಳು ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿಯಲ್ಲಿ ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನದ (Joint Crediting Mechanism – JCM) ಜಾರಿ ನಿಯಮಗಳನ್ನು ಅಂಗೀಕರಿಸಿವೆ.
ಜಂಟಿ ಕ್ರೆಡಿಟಿಂಗ್ ಕಾರ್ಯವಿಧಾನ (JCM)ದ ಬಗ್ಗೆ:
ಸುಧಾರಿತ ಕಡಿಮೆ-ಇಂಗಾಲದ ತಂತ್ರಜ್ಞಾನಗಳ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಜಪಾನ್ ಪ್ರಸ್ತಾಪಿಸಿದ ದ್ವಿಪಕ್ಷೀಯ ಇಂಗಾಲದ ಮಾರುಕಟ್ಟೆ ವ್ಯವಸ್ಥೆ ಇದಾಗಿದೆ.
ಇದು ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಷ್ಟ್ರಗಳು ತಮ್ಮ ಹವಾಮಾನ ಗುರಿಗಳನ್ನು ತಲುಪಲು ಇಂಗಾಲದ ಕ್ರೆಡಿಟ್ಗಳನ್ನು ವ್ಯಾಪಾರ ಮಾಡಲು ಇದು ಅನುಮತಿಸುತ್ತದೆ.
ಪ್ಯಾರಿಸ್ ಒಪ್ಪಂದದ ವಿಧಿ 6.2 ರ ಬಗ್ಗೆ:
ಇದು ಇಂಗಾಲದ ಕ್ರೆಡಿಟ್ಗಳನ್ನು ವ್ಯಾಪಾರ ಮಾಡುವ ಮೂಲಕ ತಮ್ಮ ಹವಾಮಾನ ಗುರಿಗಳನ್ನು ತಲುಪಲು ಒಟ್ಟಾಗಿ ಕೆಲಸ ಮಾಡಲು ದೇಶಗಳಿಗೆ ಅವಕಾಶ ನೀಡುತ್ತದೆ.
ಈ ನಿಯಮದ ಅಡಿಯಲ್ಲಿ, ನಿಗದಿಗಿಂತ ಹೆಚ್ಚಿನ ಹಸಿರುಮನೆ ಅನಿಲಗಳನ್ನು ಕಡಿತಗೊಳಿಸುವ ದೇಶವು, ತಾನು ಉಳಿತಾಯ ಮಾಡಿದ ಆ ಹೆಚ್ಚುವರಿ ಕ್ರೆಡಿಟ್ಗಳನ್ನು ಮತ್ತೊಂದು ದೇಶಕ್ಕೆ ಮಾರಾಟ ಮಾಡಬಹುದು.
ಹವಾಮಾನ ಬದಲಾವಣೆ ಕುರಿತಾದ ಪ್ಯಾರಿಸ್ ಒಪ್ಪಂದ, 2015 (COP 21)
ಇದನ್ನು 2015ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಚೌಕಟ್ಟಿನ ಸಮಾವೇಶದಲ್ಲಿ (UNFCCC – COP21) ಅಂಗೀಕರಿಸಲಾಯಿತು.
ಉದ್ದೇಶ: ಹವಾಮಾನ ಬದಲಾವಣೆಯ ಅಪಾಯಗಳಿಗೆ ಜಾಗತಿಕ ಪ್ರತಿಕ್ರಿಯೆಯನ್ನು ಬಲಪಡಿಸುವುದು ಮತ್ತು ಜಾಗತಿಕ ಸರಾಸರಿ ತಾಪಮಾನ, ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ಹಣಕಾಸು ಹರಿವುಗಳಿಗೆ ಸಂಬಂಧಿಸಿದಂತೆ ದೀರ್ಘಕಾಲೀನ ಗುರಿಗಳನ್ನು ನಿರ್ದಿಷ್ಟಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ಯಾರಿಸ್ ಒಪ್ಪಂದದ ಗುರಿಗಳು:
ತಾಪಮಾನ: ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ (Pre-industrial Levels) 2 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗೆ ತರಿಸುವುದು ಮತ್ತು ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಲು ಪ್ರಯತ್ನಗಳನ್ನು ಮುಂದುವರಿಸುವುದು.
ಹೊರಸೂಸುವಿಕೆ ಕಡಿತ: 2030ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಹವಾಮಾನ ಚೇತರಿಕೆಯನ್ನು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
ಉದ್ದೇಶಿತ ರಾಷ್ಟ್ರೀಯ ನಿರ್ಧರಿತ ಕೊಡುಗೆಗಳು (INDCs)
ಉದ್ದೇಶಿತ ರಾಷ್ಟ್ರೀಯ ನಿರ್ಧರಿತ ಕೊಡುಗೆಯು ಹವಾಮಾನ ಬದಲಾವಣೆಯ ಮೇಲಿನ ಸಾಮೂಹಿಕ ಕ್ರಿಯೆಯ ಕುರಿತು ಒಂದು ದೇಶವು ಮಾಡುವ ಸಾರ್ವಜನಿಕ ಪ್ರತಿಜ್ಞೆಯಾಗಿದೆ.
ಈ ಹವಾಮಾನ ಸಂಬಂಧಿ ಕೊಡುಗೆಗಳನ್ನು 2030ರ ಮೊದಲು ಸಾಧಿಸಬೇಕಾಗಿದೆ.
ಭಾರತದ ಹವಾಮಾನ ಕ್ರಿಯಾ ಗುರಿಗಳು (India’s Climate Action Targets)
|
ಬದ್ಧತೆಯ ಕ್ಷೇತ್ರ |
ಆರಂಭಿಕ/ನವೀಕರಿಸಿದ 2030ರ ಗುರಿಗಳು |
ವರ್ಧಿತ 2031-2035ರ ಗುರಿಗಳು |
|
ಹೊರಸೂಸುವಿಕೆಯ ತೀವ್ರತೆ |
2005ರ ಮಟ್ಟಕ್ಕೆ ಹೋಲಿಸಿದರೆ, GDP ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. |
2005ರ ಮಟ್ಟಕ್ಕೆ ಹೋಲಿಸಿದರೆ, GDP ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 47 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. |
|
ಪಳೆಯುಳಿಕೆಯೇತರ ಶಕ್ತಿಯ ಸಾಮರ್ಥ್ಯ |
ಒಟ್ಟು ಸಂಚಿತ ವಿದ್ಯುತ್ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸುವ ಗುರಿಯನ್ನು ಹೊಂದಲಾಗಿದೆ. |
ಒಟ್ಟು ಸಂಚಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯದ ಶೇಕಡಾ 60 ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸುವ ಗುರಿಯನ್ನು ಹೊಂದಲಾಗಿದೆ. |
|
ಇಂಗಾಲದ ಸಂಗ್ರಾಹಕಗಳು (ಕಾರ್ಬನ್ ಸಿಂಕ್) |
2.5 ರಿಂದ 3 ಶತಕೋಟಿ ಟನ್ಗಳಷ್ಟು CO₂ ಸಮಾನವಾದ ಕಾರ್ಬನ್ ಸಿಂಕ್ ಅನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ. |
ಹೆಚ್ಚುವರಿಯಾಗಿ 3.5 ರಿಂದ 4.0 ಶತಕೋಟಿ ಟನ್ಗಳಷ್ಟು CO₂ ಸಮಾನವಾದ ಕಾರ್ಬನ್ ಸಿಂಕ್ ಅನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ. |
ಆರ್ಥಿಕತೆ
ಇದೀಗ ಸುದ್ದಿಯಲ್ಲಿ:
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಸಂಘರ್ಷವು ರಸ್ತೆ ಮೂಲಸೌಕರ್ಯವನ್ನು ವಿಸ್ತರಿಸುವ ಭಾರತದ ಪ್ರಯತ್ನಕ್ಕೆ ತೀವ್ರ ಹೊಡೆತ ನೀಡಿದೆ, ಏಕೆಂದರೆ ಭಾರತವು ತನ್ನ ಅಗತ್ಯದ ಶೇಕಡಾ 30 ರಿಂದ 40 ರಷ್ಟು ಬಿಟುಮೆನ್ ಅನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತದ ಬಿಟುಮೆನ್ ಆಮದಿನ ಶೇಕಡಾ 99 ಕ್ಕಿಂತ ಹೆಚ್ಚಿನ ಪಾಲು ಇರಾಕ್, UAE, ಇರಾನ್, ಓಮನ್ ಮತ್ತು ಬಹ್ರೇನ್ ದೇಶಗಳಿಂದ ಬರುತ್ತದೆ.
ಬಿಟುಮೆನ್ (Bitumen) ಬಗ್ಗೆ
ಬಿಟುಮೆನ್ ಎಂಬುದು ಕಚ್ಚಾ ತೈಲದ ಉಪಉತ್ಪನ್ನವಾಗಿದೆ.
ಇದು ಜಲನಿರೋಧಕ ಮತ್ತು ಅಂಟಿಕೊಳ್ಳುವ ಗುಣಲಕ್ಷಣಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.
ಇದನ್ನು ಪ್ರಧಾನವಾಗಿ ರಸ್ತೆ ನಿರ್ಮಾಣ ಮತ್ತು ಛಾವಣಿಯ ನಿರ್ಮಾಣಗಳಲ್ಲಿ ಬಳಸಲಾಗುತ್ತದೆ.
ಕೆನಡಾ ದೇಶವು ತನ್ನ ತೈಲಯುಕ್ತ ಮರಳು (Oil Sands) ಪ್ರದೇಶಗಳಲ್ಲಿ ಬಿಟುಮೆನ್ನ ಅತಿದೊಡ್ಡ ನೈಸರ್ಗಿಕ ನಿಕ್ಷೇಪಗಳಲ್ಲಿ ಒಂದನ್ನು ಹೊಂದಿದ್ದು, ಇದು ಜಾಗತಿಕ ಪೂರೈಕೆಗೆ ಗಮನಾರ್ಹ ಕೊಡುಗೆಯನ್ನು ಒದಗಿಸುತ್ತದೆ.
ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಸ್ಥಿರವಾದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಬೃಹತ್ ಜಾಗತಿಕ ನಿರ್ಮಾಣ ಬೇಡಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸಲು ಇದನ್ನು ತೈಲ ಸಂಸ್ಕರಣಾಗಾರಗಳಲ್ಲಿ ಉತ್ಪಾದಿಸಲಾಗುತ್ತದೆ.