ಸಂಪೂರ್ಣತಾ ಅಭಿಯಾನ 2.0
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ನೀತಿ ಆಯೋಗವು ‘ಸಂಪೂರ್ಣತಾ ಅಭಿಯಾನ 2.0’ ಎಂಬ ವಿನೂತನ ಅಭಿಯಾನವನ್ನು ಜಾರಿಗೊಳಿಸಿದೆ.
ಸಂಪೂರ್ಣತಾ ಅಭಿಯಾನ 2.0 ರ ಬಗ್ಗೆ:
- ದೇಶದಾದ್ಯಂತ ಗುರುತಿಸಲಾಗಿರುವ ‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಮತ್ತು ‘ಮಹತ್ವಾಕಾಂಕ್ಷೆಯ ಬ್ಲಾಕ್ಗಳಲ್ಲಿ’ ನಿರ್ಣಾಯಕ ಅಭಿವೃದ್ಧಿ ಸೂಚಕಗಳ 100% ರಷ್ಟು ಸಾಧನೆಯನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಈ ಅಭಿಯಾನವನ್ನು ರೂಪಿಸಲಾಗಿದೆ.
- ನಿರ್ದಿಷ್ಟ ‘ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು’ (KPIs) ಸಾಧಿಸುವ ಉದ್ದೇಶದಿಂದ, ಈ ಅಭಿಯಾನವು ದೇಶದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 513 ಮಹತ್ವಾಕಾಂಕ್ಷೆಯ ಬ್ಲಾಕ್ಗಳನ್ನು ಗುರಿಯಾಗಿಸಿಕೊಂಡಿದೆ.
ಮಹತ್ವಾಕಾಂಕ್ಷೆಯ ಬ್ಲಾಕ್ಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:
- ಪೌಷ್ಟಿಕಾಂಶ:- ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ (ICDS) 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳಿಗೆ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಒದಗಿಸುವುದು.
- ಮೇಲ್ವಿಚಾರಣೆ:- ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಬೆಳವಣಿಗೆಯ ಮಾಸಿಕ ಅಳತೆ ಮತ್ತು ದಾಖಲಾತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
- ಮೂಲಸೌಕರ್ಯ:- ಕುಡಿಯುವ ನೀರು ಮತ್ತು ಕಾರ್ಯನಿರ್ವಹಿಸುವ ಶೌಚಾಲಯದ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ಅಂಗನವಾಡಿ ಕೇಂದ್ರಗಳನ್ನು ಹೊಂದುವುದು.
- ಶಿಕ್ಷಣ:- ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸುವುದು.
- ಕೃಷಿ ಮತ್ತು ಪಶುಸಂಗೋಪನೆ:- ಕಾಲು ಮತ್ತು ಬಾಯಿ ರೋಗವನ್ನು (FMD) ತಡೆಗಟ್ಟಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು.
ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:
- ಇದು ಪ್ರಾಥಮಿಕವಾಗಿ ಆರೋಗ್ಯ, ಪೌಷ್ಟಿಕಾಂಶ ಮತ್ತು ಶಿಕ್ಷಣ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸುತ್ತದೆ. ಜನನದ ಸಮಯದಲ್ಲಿ ತೂಕ ಮಾಡಲಾದ ಶಿಶುಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಕ್ಷಯರೋಗ (TB) ಪ್ರಕರಣಗಳ ವರದಿ ಮಾಡುವಿಕೆಯನ್ನು ಸುಧಾರಿಸುವುದು ಈ ಸೂಚಕಗಳಲ್ಲಿ ಸೇರಿದೆ.
‘ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ’ದ ಬಗ್ಗೆ:
- ಪ್ರಾರಂಭ:- 2018
- ಉದ್ದೇಶ:- ದೇಶಾದ್ಯಂತ ಹಿಂದುಳಿದಿರುವ 112 ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.
- 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯ.
ಮಹತ್ವಾಕಾಂಕ್ಷೆಯ ಬ್ಲಾಕ್ಗಳ ಕಾರ್ಯಕ್ರಮ’ದ ಬಗ್ಗೆ:
- ಪ್ರಾರಂಭ:- 2023
- ಉದ್ದೇಶ:- ದೇಶಾದ್ಯಂತ 513 ಬ್ಲಾಕ್ಗಳಲ್ಲಿ (329 ಜಿಲ್ಲೆಗಳ ವ್ಯಾಪ್ತಿಯಲ್ಲಿ) ಅಗತ್ಯ ಸರ್ಕಾರಿ ಸೇವೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ (ಸಂಪೂರ್ಣ ಅನುಷ್ಠಾನ) ಉದ್ದೇಶವನ್ನು ಹೊಂದಿದೆ.
- 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು, ಮೂಲಸೌಕರ್ಯ ಹಾಗೂ ಸಾಮಾಜಿಕ ಅಭಿವೃದ್ಧಿ.
ಮಾಸಿಕ ಋತುಚಕ್ರದ ಆರೋಗ್ಯವು ಮೂಲಭೂತ ಹಕ್ಕಾಗಿದೆ: ಸರ್ವೋಚ್ಚ ನ್ಯಾಯಾಲಯ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ‘ಡಾ. ಜಯಾ ಠಾಕೂರ್ v/s ಭಾರತ ಸರ್ಕಾರ’ ಪ್ರಕರಣದಲ್ಲಿ, ಮಾಸಿಕ ಋತುಚಕ್ರದ ನೈರ್ಮಲ್ಯದ ಹಕ್ಕು ಸಂವಿಧಾನದ 21ನೇ ವಿಧಿಯಡಿ ‘ಜೀವಿಸುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ನ್ಯಾಯಾಂಗದ ಮಧ್ಯಪ್ರವೇಶದ ಪ್ರಮುಖ ಮುಖ್ಯಾಂಶಗಳು:
- ಮೂಲಭೂತ ಹಕ್ಕು:- ಮಾಸಿಕ ಋತುಚಕ್ರದ ಆರೋಗ್ಯವನ್ನು ಇದೀಗ ಸಂವಿಧಾನದ ವಿಧಿ 21ರ ‘ಜೀವಿಸುವ ಹಕ್ಕು’ ಮತ್ತು ವಿಧಿ 21 A ಯ ‘ಶಿಕ್ಷಣದ ಹಕ್ಕಿನ’ ಅತ್ಯಾವಶ್ಯಕ ಭಾಗವೆಂದು ಕಾನೂನುಬದ್ಧವಾಗಿ ಗುರುತಿಸಲಾಗಿದೆ.
- ಉಚಿತ ಜೈವಿಕ-ವಿಘಟಣೆಯ ಪ್ಯಾಡ್ಗಳು:- ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು 6 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜೈವಿಕ-ವಿಘಟಣೆಯ ಮಾಸಿಕ ಸ್ವಚ್ಛತಾ (ಸ್ಯಾನಿಟರಿ) ಪ್ಯಾಡ್ಗಳನ್ನು ಕಡ್ಡಾಯವಾಗಿ ವಿತರಿಸಬೇಕು.
- ಕಡ್ಡಾಯ ಮೂಲಸೌಕರ್ಯ:- ಶಾಲೆಗಳಲ್ಲಿ ನೀರಿನ ಸೌಲಭ್ಯವಿರುವ ಹಾಗೂ ಲಿಂಗಾಧಾರಿತ ಪ್ರತ್ಯೇಕ ಶೌಚಾಲಯಗಳನ್ನು ಹೊಂದುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸುವ ಅಧಿಕಾರವಿದೆ.
- ಕಳಂಕ ನಿವಾರಣೆ:- ಮಾಸಿಕ ಋತುಚಕ್ರದ ಕುರಿತಾದ ಮುಜುಗರ ಮತ್ತು ಕಳಂಕವನ್ನು ಹೋಗಲಾಡಿಸಲು, ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಮರ್ಪಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಲಿಂಗ-ಸೂಕ್ಷ್ಮ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವಂತೆ ನ್ಯಾಯಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (NCERT) ನಿರ್ದೇಶನ ನೀಡಿದೆ.
ಸಂವಿಧಾನದ 21ನೇ ವಿಧಿಯ ವಿವರಣೆ:
-
- 21ನೇ ವಿಧಿಯು ಭಾರತದ ಸಂವಿಧಾನದ ಭಾಗ-III ರಲ್ಲಿನ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ.
- ಇದು ನಾಗರಿಕರು ಮತ್ತು ನಾಗರಿಕರಲ್ಲದವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.
- ಕಾನೂನಿನಿಂದ ಸ್ಥಾಪಿಸಲ್ಪಟ್ಟ ಪ್ರಕ್ರಿಯೆಯ ಮೂಲಕ ಹೊರತುಪಡಿಸಿ, ಯಾವುದೇ ವ್ಯಕ್ತಿಯನ್ನು ಅವನ ಜೀವಿಸುವ ಹಕ್ಕು ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿಸುವಂತಿಲ್ಲ ಎಂದು ಈ ವಿಧಿಯು ಸ್ಪಷ್ಟಪಡಿಸುತ್ತದೆ.
- ಯಾವುದಾದರೂ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಸರ್ಕಾರವು ಅನಿಯಂತ್ರಿತವಾಗಿ ಹಸ್ತಕ್ಷೇಪ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ.
-
- ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಮೂಲಕ 21ನೇ ವಿಧಿಯ ವಿಸ್ತೃತ ವ್ಯಾಪ್ತಿ:- ಘನತೆಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಮೇಲೆ ಸಕಾರಾತ್ಮಕ ಜವಾಬ್ದಾರಿಗಳನ್ನು ವಿಧಿಸುವಂತೆ ನ್ಯಾಯಾಲಯಗಳು ಈ ವಿಧಿಯನ್ನು ವಿಸ್ತೃತವಾಗಿ ಕಾಲಕಾಲಕ್ಕೆ ಅರ್ಥೈಸಿವೆ. ಈ ಕೆಳಗಿನ ಹಕ್ಕುಗಳು 21ನೇ ವಿಧಿಯ ವ್ಯಾಪ್ತಿಗೆ ಬರುತ್ತವೆ:
- ಮಾನವ ಘನತೆಯೊಂದಿಗೆ ಜೀವಿಸುವ ಹಕ್ಕು.
- ಖಾಸಗಿತನದ ಹಕ್ಕು (ಪುಟ್ಟಸ್ವಾಮಿ ಪ್ರಕರಣ, 2017).
- ಜೀವನೋಪಾಯದ ಹಕ್ಕು (ಓಲ್ಗಾ ಟೆಲ್ಲಿಸ್ ಪ್ರಕರಣ).
- ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಹಕ್ಕು.
- ಕಾನೂನು ನೆರವು ಮತ್ತು ತ್ವರಿತ ವಿಚಾರಣೆಯ ಹಕ್ಕು.
- ಶಿಕ್ಷಣದ ಹಕ್ಕು (ನಂತರ 21 A ವಿಧಿಯ ಮೂಲಕ ಇದನ್ನು ಸ್ಪಷ್ಟಪಡಿಸಲಾಗಿದೆ).
- ಪೊಲೀಸ್ ಬಂಧನದಲ್ಲಿನ ಚಿತ್ರಹಿಂಸೆಯ ವಿರುದ್ಧದ ರಕ್ಷಣೆಯ ಹಕ್ಕು.
- ನಿದ್ರೆ, ಆಶ್ರಯ ಮತ್ತು ಆಹಾರದ ಹಕ್ಕು.
ಮಾಸಿಕ ಋತುಚಕ್ರದ ಆರೋಗ್ಯಕ್ಕೆ ಸಂಬಂಧಿಸಿದ ಭಾರತ ಸರ್ಕಾರದ ನೀತಿಗಳು ಮತ್ತು ಯೋಜನೆಗಳು:
- ಮಾಸಿಕ ಋತುಚಕ್ರ ನೈರ್ಮಲ್ಯ ಯೋಜನೆ (MHS):- ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಬೆಂಬಲದೊಂದಿಗೆ, ಆಶಾ (ASHA) ಕಾರ್ಯಕರ್ತೆಯರು 6 ಪ್ಯಾಡ್ಗಳಿರುವ ‘ಫ್ರೀಡೇಸ್’ ಪೊಟ್ಟಣವನ್ನು 6 ರೂಪಾಯಿಗಳ ರಿಯಾಯಿತಿ ದರದಲ್ಲಿ ವಿತರಿಸುತ್ತಾರೆ.
- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ:- ದೇಶದಾದ್ಯಂತ 16,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ‘ಸುವಿಧಾ’ (ಆಮ್ಲಜನಕ ಪ್ರೇರಿತ -ಜೈವಿಕ ವಿಘಟಣೆಯ) ಪ್ಯಾಡ್ಗಳನ್ನು ಕೇವಲ 1 ರೂಪಾಯಿಗೆ ಒದಗಿಸುತ್ತಿವೆ.
- ಸಮಗ್ರ ಶಿಕ್ಷಣ:- ಶಾಲೆಗಳಲ್ಲಿ ವಿತರಣಾ (ವೆಂಡಿಂಗ್) ಯಂತ್ರಗಳು ಮತ್ತು ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್)ಗಳನ್ನು ಅಳವಡಿಸಲು ಈ ಯೋಜನೆಯು ಹಣಕಾಸು ಒದಗಿಸುತ್ತದೆ. 2026ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಗಳು ಇದೀಗ ಜೈವಿಕ-ವಿಘಟಣೆಯ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
- ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ 2:- ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ಸಣ್ಣ-ಪ್ರಮಾಣದ ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್)ಗಳು ಮತ್ತು ಆಳವಾದ ಹೂಳುವ ಗುಂಡಿಗಳನ್ನು ಬಳಸಿಕೊಂಡು ‘ಮಾಸಿಕ ಋತುಚಕ್ರದ ತ್ಯಾಜ್ಯ ನಿರ್ವಹಣೆ’ಯ (MWM) ಕಡೆಗೆ ಇದು ಗಮನ ಹರಿಸುತ್ತದೆ.
- ಮಾಸಿಕ ಋತುಚಕ್ರ ನೈರ್ಮಲ್ಯ ನೀತಿ (2024-25):- ಆರೋಗ್ಯ ಸಚಿವಾಲಯವು ರೂಪಿಸಿರುವ ಈ ನೀತಿಯು ಕಡಿಮೆ-ವೆಚ್ಚದ ಉತ್ಪನ್ನಗಳ ಲಭ್ಯತೆಯನ್ನು ಸುಗಮಗೊಳಿಸುತ್ತದೆ, “ಹಸಿರು” (ಜೈವಿಕ-ವಿಘಟಣೆಯ) ಉಪಕ್ರಮಗಳಿಗೆ ಆದ್ಯತೆ ನೀಡುತ್ತದೆ ಮತ್ತು ಶಾಲಾ ಪಠ್ಯಕ್ರಮದಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯ ನಿರ್ವಹಣೆಯನ್ನು (MHM) ವ್ಯವಸ್ಥಿತವಾಗಿ ಸಂಯೋಜಿಸುತ್ತದೆ.
- ಉತ್ಪನ್ನಗಳ ಪ್ರಮಾಣೀಕರಣ:- ಗ್ರಾಮೀಣ ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ಕಪ್ಗಳು ಮತ್ತು ಮರುಬಳಕೆ ಮಾಡಬಹುದಾದ ಪ್ಯಾಡ್ಗಳಂತಹ ಸುಸ್ಥಿರ ಪರ್ಯಾಯಗಳ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ‘ಆರೋಗ್ಯ ಸಂಶೋಧನಾ ಇಲಾಖೆ’ಯು ಅಧ್ಯಯನ ನಡೆಸುತ್ತಿದೆ.