Blog

  • ಓಮನ್ ಕೊಲ್ಲಿ | ASPIRE (ಆಸ್ಪೈರ್) ಯೋಜನೆ | ವ್ಯಾಪಾರ ಕೊರತೆ | ಜಿಗುಟುವ ವಂಶವಾಹಿಗಳು (Jumping Genes) | ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು | ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025

    ಓಮನ್ ಕೊಲ್ಲಿ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು; ಸಾಮಾನ್ಯ ಅಧ್ಯಯನ-1/ ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ: 

    • ಓಮನ್ ಕೊಲ್ಲಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ದಶಲಕ್ಷ ಲೀಟರ್ ಡೀಸೆಲ್ ಹೊಂದಿದ್ದ ವಿದೇಶಿ ತೈಲ ಟ್ಯಾಂಕರ್ ಅನ್ನು ಇರಾನ್ ವಶಪಡಿಸಿಕೊಂಡಿದೆ.

    ಓಮನ್ ಕೊಲ್ಲಿಯ ಬಗ್ಗೆ:

    • ಓಮನ್ ಕೊಲ್ಲಿಯು ಅರಬ್ಬಿ ಸಮುದ್ರದ ವಾಯುವ್ಯಭಾಗದಲ್ಲಿದೆ.
    • ಸಂಪರ್ಕ: ಇದು ಹಾರ್ಮುಜ್ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರವನ್ನು ಪರ್ಷಿಯನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರ ಸಾರಿಗೆ ಮಾರ್ಗವಾಗಿದೆ.
    • ವಿಶೇಷತೆ:- ಹಾರ್ಮುಜ್ ಜಲಸಂಧಿಯ ಮೂಲಕ ಪರ್ಷಿಯನ್ ಕೊಲ್ಲಿಗೆ ಪ್ರವೇಶವನ್ನು ಒದಗಿಸುವ ಈ ಮಾರ್ಗವು, ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ವ್ಯಾಪಾರಕ್ಕೆ ಅತ್ಯಂತ ನಿರ್ಣಾಯಕ ಮಾರ್ಗವಾಗಿದೆ.

    ASPIRE (ಆಸ್ಪೈರ್) ಯೋಜನೆ

    ಸಾಮಾನ್ಯ ಅಧ್ಯಯನ -2/ ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ‘ASPIRE’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

    ASPIRE (ಆಸ್ಪೈರ್)ಯೋಜನೆಯ ಬಗ್ಗೆ:

    • ಆರಂಭ: 2015 ರಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ಪ್ರಾರಂಭಿಸಿತು.
    • ಉದ್ದೇಶ: ಸೂಕ್ಷ್ಮ ಉದ್ಯಮಗಳಿಗೆ ಕೌಶಲ್ಯ ಅಭಿವೃದ್ಧಿ, ಇನ್ಕ್ಯುಬೇಷನ್ (ಮಾರ್ಗದರ್ಶನ, ಮೂಲಸೌಕರ್ಯ, ಹಣಕಾಸು ಮತ್ತು ತಾಂತ್ರಿಕ ಸಹಾಯ) ಮತ್ತು ಅಗತ್ಯ ಬೆಂಬಲ ಒದಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು. 

    ಪ್ರಮುಖ ಘಟಕಗಳು:

    • ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್‌ಗಳು (LBIs): ಇವು ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಗ್ರಾಮೀಣ ವ್ಯಾಪಾರಗಳಲ್ಲಿ ತರಬೇತಿ ನೀಡುವ ಮೂಲಕ ಕೃಷಿ ಆಧಾರಿತ ಉದ್ಯಮಗಳಿಗೆ ಬೆಂಬಲ ನೀಡುತ್ತವೆ. ಈ ಉದ್ದೇಶಕ್ಕಾಗಿ ಅನುದಾನ:
    • ಖಾಸಗಿ ಸಂಸ್ಥೆಗಳಿಗೆ ₹75 ಲಕ್ಷದವರೆಗೆ,
    • ಸರ್ಕಾರಿ ಸಂಸ್ಥೆಗಳಿಗೆ ₹1 ಕೋಟಿಯವರೆಗೆ ನೀಡಲಾಗುತ್ತಿದೆ.
    • ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳು (TBIs): ಇವು ಇದೇ ರೀತಿಯ ಧನಸಹಾಯದೊಂದಿಗೆ ತಂತ್ರಜ್ಞಾನ ಆಧಾರಿತ ಗ್ರಾಮೀಣ ನಾವೀನ್ಯತೆಗಳನ್ನು ಉತ್ತೇಜಿಸುವತ್ತ ಗಮನ ಹರಿಸುತ್ತವೆ.
    • ನಿಧಿಗಳ ನಿಧಿ: ಕೃಷಿ-ಗ್ರಾಮೀಣ ವಲಯದ ನವೋದ್ಯಮಗಳಿಗೆ ಬೆಂಬಲ ನೀಡಲು SIDBI ಮೂಲಕ ನಿರ್ವಹಿಸಲ್ಪಡುವ ₹200 ಕೋಟಿ ಮೊತ್ತದ ನಿಧಿಯನ್ನು ಇದು ಒಳಗೊಂಡಿದೆ.

    ಇದು ನಿಮಗೆ ತಿಳಿದಿದೆಯೇ?

    • ಮಾರಾಟಗಾರ ಅಭಿವೃದ್ಧಿ ಕಾರ್ಯಕ್ರಮ:- MSMEಗಳಿಗಾಗಿ ಇರುವ ಸಾರ್ವಜನಿಕ ಸಂಗ್ರಹಣೆ ನೀತಿಯ ಅಡಿಯಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಲಾಗುತ್ತಿದೆ.
    • ಯಶಸ್ವಿನಿ ಅಭಿಯಾನ:- ಮಹಿಳಾ ಉದ್ಯಮಿಗಳಲ್ಲಿ ಔಪಚಾರಿಕೀಕರಣ, ಸಾಲದ ಲಭ್ಯತೆ, ಸಾಮರ್ಥ್ಯ ವೃದ್ಧಿ ಮತ್ತು ಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸಿ ಅವರನ್ನು ಸಬಲೀಕರಣಗೊಳಿಸಲು ಜೂನ್ 2024 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP):- ಸೂಕ್ಷ್ಮ ಉದ್ಯಮಗಳ ಮೂಲಕ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಚಿವಾಲಯವು ಸಾಲ-ಸಂಯೋಜಿತ ಸಹಾಯಧನ ಯೋಜನೆಯಾದ ಇದನ್ನು ಜಾರಿಗೊಳಿಸುತ್ತಿದೆ.

    ವ್ಯಾಪಾರ ಕೊರತೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ನವೆಂಬರ್ 2025ರಲ್ಲಿ ಭಾರತದ ವ್ಯಾಪಾರ ಕೊರತೆಯು 61% ಕ್ಕೂ ಅಧಿಕ ಕುಸಿತ ಕಂಡು 660 ಕೋಟಿ ಅಮೇರಿಕ ಡಾಲರ್‌ಗಳಿಗೆ ತಲುಪಿದೆ.
    • ಸರಕು ರಫ್ತಿನಲ್ಲಿನ ಸದೃಢ ಬೆಳವಣಿಗೆ ಮತ್ತು ಸರಕು ಆಮದಿನಲ್ಲಿನ ಇಳಿಕೆಯು ಈ ಗಮನಾರ್ಹ ಸುಧಾರಣೆಗೆ ಪ್ರಮುಖ ಕಾರಣವಾಗಿದೆ. 

    ವ್ಯಾಪಾರ ಕೊರತೆಯ ಬಗ್ಗೆ:

    • ವ್ಯಾಖ್ಯಾನ: ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಆಮದಿನ ಮೌಲ್ಯವು ಅದರ ರಫ್ತಿನ ಮೌಲ್ಯಕ್ಕಿಂತ ಹೆಚ್ಚಾದಾಗ ‘ವ್ಯಾಪಾರ ಕೊರತೆ’ ಸಂಭವಿಸುತ್ತದೆ. 
    • ಈ ಸ್ಥಿತಿಯು ಋಣಾತ್ಮಕ ವ್ಯಾಪಾರ ಸಮತೋಲನಕ್ಕೇ ಕಾರಣವಾಗುತ್ತದೆ.
    • ವ್ಯಾಪಾರ ಸಮತೋಲನ/ಬಾಕಿ (BoT) ಸೂತ್ರ:

    ವ್ಯಾಪಾರ ಸಮತೋಲನ (BoT) = ಒಟ್ಟು ರಫ್ತುಗಳು – ಒಟ್ಟು ಆಮದುಗಳು

    ವ್ಯಾಪಾರ ಕೊರತೆಯ ವಿಧಗಳು:

    • ಸರಕುಗಳ ವ್ಯಾಪಾರ ಕೊರತೆ:- ಇದು ಭೌತಿಕ ಸರಕುಗಳ ರಫ್ತು ಮತ್ತು ಆಮದುಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.
    • ಸೇವೆಗಳ ವ್ಯಾಪಾರ ಕೊರತೆ / ಹೆಚ್ಚುವರಿ:- ಇದು ಸೇವಾ ರಫ್ತುಗಳು (ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಹಣಕಾಸು) ಮತ್ತು ಸೇವಾ ಆಮದುಗಳ ನಡುವಿನ ವ್ಯತ್ಯಾಸವಾಗಿದೆ.
    • ಭಾರತವು ಸಾಮಾನ್ಯವಾಗಿ ಸೇವಾ ವಲಯದಲ್ಲಿ ವ್ಯಾಪಾರ ಹೆಚ್ಚುವರಿಯನ್ನು ಹೊಂದಿರುತ್ತದೆ.
    • ದ್ವಿಪಕ್ಷೀಯ ವ್ಯಾಪಾರ ಕೊರತೆ:- ಇದು ಚೀನಾದಂತಹ ಒಂದು ನಿರ್ದಿಷ್ಟ ದೇಶದೊಂದಿಗಿನ ಭಾರತದ ವ್ಯಾಪಾರ ಕೊರತೆಯನ್ನು ಸೂಚಿಸುತ್ತದೆ.
    • ನಿವ್ವಳ ಬಾಹ್ಯ ಬೇಡಿಕೆಯ ಸೂಚಕ:- ಇದು ಜಾಗತಿಕ ವ್ಯಾಪಾರದಲ್ಲಿ ಒಂದು ದೇಶವು ನಿವ್ವಳ ಆಮದುದಾರ ಅಥವಾ ನಿವ್ವಳ ರಫ್ತುದಾರ ಎಂಬುದನ್ನು ಪ್ರತಿಬಿಂಬಿಸುವ ಪ್ರಮುಖ ಸೂಚಕವಾಗಿದೆ.

    ಜಿಗುಟುವ ವಂಶವಾಹಿಗಳು (Jumping Genes)

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ದಕ್ಷಿಣ ಗ್ರೀನ್‌ಲ್ಯಾಂಡಿನ ಧ್ರುವ ಕರಡಿಗಳಲ್ಲಿ ‘ಜಿಗಿಯುವ ವಂಶವಾಹಿ’ಗಳಿಗೆ ಸಂಬಂಧಿಸಿದಂತೆ ತ್ವರಿತ ಆನುವಂಶಿಕ ಬದಲಾವಣೆಗಳು ಕಂಡುಬಂದಿವೆ.
    • ಈ ಬದಲಾವಣೆಗಳು ಬೆಚ್ಚಗಾಗುತ್ತಿರುವ ಆರ್ಕ್ಟಿಕ್ ಪರಿಸರದಲ್ಲಿ ಅವುಗಳ ಬದುಕುಳಿಯುವಿಕೆಗೆ ಸಹಕಾರಿಯಾಗುವ ಸಾಧ್ಯತೆಯಿದೆ.

    ಜಿಗುಟುವ ವಂಶವಾಹಿಗಳ ಬಗ್ಗೆ:

    • ವೈಜ್ಞಾನಿಕವಾಗಿ ‘ಟ್ರಾನ್ಸ್ಪೋಸಬಲ್ ಎಲಿಮೆಂಟ್ಸ್’ (ಸ್ಥಾನಾಂತರಗೊಳ್ಳುವ ವಂಶವಾಹಿಗಳ ಅಂಶಗಳು) ಎಂದು ಕರೆಯಲ್ಪಡುವ ಇವು ಜೀನೋಮ್‌ನ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸ್ಥಳಾಂತರಗೊಳ್ಳಬಲ್ಲ ಡಿಎನ್‌ಎ ಅನುಕ್ರಮಗಳಾಗಿವೆ.
    • ಇವುಗಳನ್ನು ಮೆಕ್ಕೆಜೋಳದಲ್ಲಿ ಪತ್ತೆಹಚ್ಚಿದ ವಿಜ್ಞಾನಿ ಬಾರ್ಬರಾ ಮೆಕ್ಲಿಂಟಾಕ್ ಅವರಿಗೆ 1983ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    • ಮಾನವನ ಜೀನೋಮ್‌ನಲ್ಲಿ ಇವುಗಳ ಪಾಲು ಸುಮಾರು 45% ರಷ್ಟಿದೆ.

    ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು

    ಸಾಮಾನ್ಯ ಅಧ್ಯಯನ -3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ಭೂಸೇನೆಯು ಮೂರು ಎಹೆಚ್‌-64ಇ ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್‌ಗಳ ಅಂತಿಮ ಹಂತದ ಬ್ಯಾಚ್ ಅನ್ನು ಅಮೇರಿಕಾದಿಂದ ಸ್ವೀಕರಿಸಿದೆ.

    ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್‌ಗಳ ಬಗ್ಗೆ:

    • ಈ ಅಪಾಚೆ ಹೆಲಿಕಾಪ್ಟರ್‌ಗಳನ್ನು 2020 ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗೆ ಏರ್ಪಟ್ಟ 600 ದಶ ಲಕ್ಷ ಡಾಲರ್ ಮೊತ್ತದ ಒಪ್ಪಂದದ ಅಡಿಯಲ್ಲಿ ಖರೀದಿಸಲಾಗಿದೆ.
    • ಇದನ್ನು ವಿಶ್ವದ ಅತ್ಯಂತ ಸುಧಾರಿತ ‘ಬಹು-ಪಾತ್ರದ ಯುದ್ಧಗಳ ಹೆಲಿಕಾಪ್ಟರ್’ ಎಂದು ಪರಿಗಣಿಸಲಾಗಿದೆ.
    • ವಿಶೇಷತೆ:- ಇದು ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನ, ಸಂವೇದಕಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಯಾವುದೇ ಹವಾಮಾನ ಮತ್ತು ಕಠಿಣ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ದಕ್ಷತೆಯನ್ನು ಹೊಂದಿದೆ.

    ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025

    ಸಾಮಾನ್ಯ ಅಧ್ಯಯನ-2/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವರು ‘ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025′ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.

    ಮಸೂದೆಯ ಪ್ರಮುಖ ಅಂಶಗಳು:

    • ಈ ಮಸೂದೆಯು 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯನ್ನು ಬದಲಿಸಲಿದೆ.
    • ಈ ಕ್ರಮವು ಉದ್ಯೋಗ ಖಾತರಿ ವ್ಯವಸ್ಥೆಯನ್ನು ಪ್ರಸ್ತುತ ಇರುವ “ಬೇಡಿಕೆ-ಆಧಾರಿತ ಚೌಕಟ್ಟಿನಿಂದ” “ಪೂರೈಕೆ-ಆಧಾರಿತ ಯೋಜನೆಗೆ” ಪರಿವರ್ತಿಸುತ್ತದೆ.

    ಪ್ರಮುಖ ಶಾಸನಬದ್ಧ ನಿಬಂಧನೆಗಳು:

    • ಸುಧಾರಿತ ಜೀವನೋಪಾಯ ಖಾತ್ರಿ: ಕೌಶಲ್ಯ ರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಕ್ಕೆ, ಪ್ರತಿ ಆರ್ಥಿಕ ವರ್ಷದಲ್ಲಿ ಶಾಸನಬದ್ಧ ವೇತನ ಸಹಿತ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಈ ಮಸೂದೆಯು ಹೆಚ್ಚಿಸುತ್ತದೆ.
    • ಕೇಂದ್ರ ಪ್ರಾಯೋಜಿತ ಯೋಜನೆ: ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾದ ಜವಾಬ್ದಾರಿಗಳೊಂದಿಗೆ ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿ ಅನುಷ್ಠಾನಗೊಳಿಸಲಾಗುತ್ತದೆ.
    • ನಿಧಿ ಹಂಚಿಕೆ ಮಾದರಿ: ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿಧಿ ಹಂಚಿಕೆಯ ಅನುಪಾತವು 90:10 ರಷ್ಟಿರುತ್ತದೆ. ಉಳಿದ ಎಲ್ಲಾ ರಾಜ್ಯಗಳಿಗೆ ಈ ಅನುಪಾತವು 60:40 ರಷ್ಟಿರುತ್ತದೆ.
    • ರಾಜ್ಯಗಳಿಗೆ ನಿಯಮಿತ ಹಂಚಿಕೆ: ಪಂಚಾಯತಿಗಳ ವರ್ಗೀಕರಣ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಪರಿಗಣಿಸಿ, ರಾಜ್ಯಗಳು ಜಿಲ್ಲೆ ಮತ್ತು ಗ್ರಾಮ ಪಂಚಾಯತ್‌ಗಳ ನಡುವೆ ಪಾರದರ್ಶಕ ಹಾಗೂ ಅಗತ್ಯ-ಆಧಾರಿತವಾಗಿ ನಿಧಿ ವಿತರಣೆಯನ್ನು ಖಚಿತಪಡಿಸಲಿವೆ.
    • ವೇತನ ದರಗಳ ನಿರ್ಧಾರ: ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸುತ್ತದೆ; ಪ್ರತ್ಯೇಕ ದರಗಳನ್ನು ಅಧಿಸೂಚಿಸುವವರೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ನರೇಗಾ (MGNREGA) ವೇತನ ದರಗಳೇ ಅನ್ವಯವಾಗುತ್ತವೆ.
    • ಕೃಷಿ ಚಟುವಟಿಕೆಗಳ ಗರಿಷ್ಠ ಸಮಯದ ಸಂರಕ್ಷಣೆ: ಬಿತ್ತನೆ ಮತ್ತು ಕೊಯ್ಲಿನಂತಹ ನಿರ್ಣಾಯಕ ಸಮಯಗಳಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸಲು, ಒಂದು ಆರ್ಥಿಕ ವರ್ಷದಲ್ಲಿ ಒಟ್ಟು 60 ದಿನಗಳವರೆಗೆ ಈ ಮಸೂದೆಯ ಅಡಿಯಲ್ಲಿ ಯಾವುದೇ ಕೆಲಸಗಳನ್ನು ಕೈಗೊಳ್ಳದಂತೆ ಮುಂಚಿತವಾಗಿ ಅಧಿಸೂಚಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
    • ನಿರುದ್ಯೋಗ ಭತ್ಯೆ: ನಿಗದಿತ ಅವಧಿಯೊಳಗೆ ಅರ್ಹ ಅರ್ಜಿದಾರರಿಗೆ ಕೆಲಸ ನೀಡಲು ವಿಫಲವಾದರೆ, ಸಂಬಂಧಿತ ರಾಜ್ಯ ಸರ್ಕಾರಗಳು ನಿರುದ್ಯೋಗ ಭತ್ಯೆಯನ್ನು ಪಾವತಿಸಲು ಬದ್ಧವಾಗಿರುತ್ತವೆ.
    • ಆರು ತಿಂಗಳೊಳಗೆ ರಾಜ್ಯ ಸರ್ಕಾರಗಳ ಯೋಜನೆಗಳು: ಈ ಮಸೂದೆಯು ಜಾರಿಗೆ ಬಂದ ಆರು ತಿಂಗಳ ಒಳಗೆ ಪ್ರತಿಯೊಂದು ರಾಜ್ಯ ಸರ್ಕಾರವು ಉದ್ಯೋಗ ಖಾತರಿಯನ್ನು ಕಾರ್ಯಗತಗೊಳಿಸಲು ತನ್ನದೇ ಆದ ಯೋಜನೆಯನ್ನು ಅಧಿಸೂಚಿಸಬೇಕು.
    • ವಿಕಸಿತ ಗ್ರಾಮ ಪಂಚಾಯತ್ ಯೋಜನೆ (VGPP) ಆಧಾರಿತ ಯೋಜನೆ: ಗ್ರಾಮ ಪಂಚಾಯತ್‌ಗಳು ಸಿದ್ಧಪಡಿಸಿದ ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ (VGPP)ಗಳ ಮೂಲಕ ಯೋಜನೆಯನ್ನು ರೂಪಿಸಲಾಗುತ್ತದೆ ಮತ್ತು ಇವುಗಳನ್ನು ರಾಷ್ಟ್ರೀಯ ಪ್ರಾದೇಶಿಕ ಯೋಜನಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ.
    • ಸಾಂಸ್ಥಿಕ ಮೇಲ್ವಿಚಾರಣೆ: ಶಾಸನದ ನಿಬಂಧನೆಗಳ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯಾ ಹಂತಗಳಲ್ಲಿ ‘ಕೇಂದ್ರ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ ಮತ್ತು ‘ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ಗಳನ್ನು ರಚಿಸಲಾಗುವುದು.
  • ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ನಿಧಿಗಳು

    ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ನಿಧಿಗಳು

    ಇದೀಗ ಸುದ್ದಿಯಲ್ಲಿದೆ:

    • 2023 ರಿಂದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ಅಡಿಯಲ್ಲಿ ಮೀಸಲಿರಿಸಿದ್ದ ಮೊತ್ತದ ಗಣನೀಯ ಪಾಲನ್ನು ಬಳಸಿಕೊಂಡಿದೆ.

    SCSP ಮತ್ತು TSP ನಿಧಿಯ ಬಗ್ಗೆ:

    • ಕರ್ನಾಟಕ ಸರ್ಕಾರವು ‘ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ಹಂಚಿಕೆ ಮತ್ತು ಪರಿಶಿಷ್ಟ ಪಂಗಡಗಳ ಉಪ-ಹಂಚಿಕೆ (ಹಣಕಾಸು ಸಂಪನ್ಮೂಲಗಳ ಯೋಜಿಸುವಿಕೆ, ಹಂಚಿಕೆ ಮತ್ತು ಬಳಕೆ) ಕಾಯ್ದೆ, 2013’ ಮತ್ತು ನಿಯಮಗಳು 2017 ಅನ್ನು ಜಾರಿಗೆ ತಂದಿದೆ.
    • ಉದ್ದೇಶ:- ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಆಯವ್ಯಯ (ಬಜೆಟ್)ದಲ್ಲಿ ಅನುದಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ.
    • ಇಂತಹ ಶಾಸನಬದ್ಧ ಕಾಯ್ದೆಯನ್ನು ಜಾರಿಗೆ ತಂದ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
  • ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025 | ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ | ವಿಶ್ವ ಅಸಮಾನತೆ ವರದಿ, 2026 | ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1 | ಜಾಗತಿಕ ಪರಿಸರ ಮುನ್ನೋಟ (Global Environment Outlook)

    ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ತಮಿಳುನಾಡಿನ ಐಎಎಸ್ ಅಧಿಕಾರಿಯಾದ ಸುಪ್ರಿಯಾ ಸಾಹು ಅವರಿಗೆ ಸ್ಫೂರ್ತಿ ಮತ್ತು ಕ್ರಿಯೆ ವಿಭಾಗದಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ‘2025 ರ ಸಾಲಿನ “ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.

    ಸುಪ್ರಿಯಾ ಸಾಹು ಅವರು ಪರಿಸರಕ್ಕೇ ನೀಡಿದ ಕೊಡುಗೆಗಳು:

    • 2000ನೇ ಇಸವಿಯಲ್ಲಿ, ನೀಲಗಿರಿಯಲ್ಲಿ ‘ಏಕ-ಬಳಕೆಯ ಪ್ಲಾಸ್ಟಿಕ್’ ನಿರ್ಮೂಲನೆಗಾಗಿ ಸುಪ್ರಿಯಾ ಸಾಹು ಅವರು ‘ಆಪರೇಷನ್ ಬ್ಲೂ ಮೌಂಟೇನ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು.
    • “ಕೂಲ್ ರೂಫ್ ಪ್ರಾಜೆಕ್ಟ್” ಅಡಿಯಲ್ಲಿ ಶಾಲಾ ಕಟ್ಟಡಗಳ ಮೇಲ್ಛಾವಣಿಗಳಿಗೆ ಬಿಳಿ ಬಣ್ಣ ಬಳಿಯುವುದರಿಂದ ಹಿಡಿದು, ಮ್ಯಾಂಗ್ರೋವ್‌ಗಳು (ಕಾಂಡ್ಲಾ ಕಾಡುಗಳು) ಮತ್ತು ಜೌಗು ಪ್ರದೇಶಗಳನ್ನು ಪುನಃಸ್ಥಾಪಿಸುವವರೆಗೆ ಹಾಗೂ 65 ಹೊಸ ಮೀಸಲು ಅರಣ್ಯಗಳನ್ನು ರಚಿಸುವವರೆಗೆ, ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಡಿಮೆ ವೆಚ್ಚದ ಪರಿಹಾರಗಳನ್ನು ಪರಿಚಯಿಸಿದರು.
    • ಅವರ ‘ಪ್ರಕೃತಿ-ಮೊದಲು’ ಎಂಬ ವಿಧಾನವು 2.5 ದಶಲಕ್ಷ ‘ಹಸಿರು ಉದ್ಯೋಗ’ಗಳನ್ನು ಸೃಷ್ಟಿಸಿದೆ ಮತ್ತು ಭಾರತದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ಕಡಿತದ ಗುರಿಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

    ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯ ಬಗ್ಗೆ:

      • ಈ ಪ್ರಶಸ್ತಿಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು.
      • ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ.
      • ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಮತ್ತು ಪರಿವರ್ತನೆಯನ್ನು ಉಂಟುಮಾಡಿದ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಗಣ್ಯ ವ್ಯಕ್ತಿಗಳನ್ನು ಇದು ಗುರುತಿಸುತ್ತದೆ.
      • ಈ ಪ್ರಶಸ್ತಿಯನ್ನು ಐದು ವಿಭಾಗಗಳಲ್ಲಿ ನೀಡಲಾಗುತ್ತದೆ:
    • ನೀತಿ ನಾಯಕತ್ವ 
    • ಉದ್ಯಮಶೀಲತಾ ದೃಷ್ಟಿಕೋನ
    • ವಿಜ್ಞಾನ ಮತ್ತು ನಾವೀನ್ಯತೆ
    • ಜೀವಮಾನದ ಸಾಧನೆ
    • ಸ್ಫೂರ್ತಿ ಮತ್ತು ಕ್ರಿಯೆ – (ಸುಪ್ರಿಯಾ ಸಾಹು ಅವರಿಗೆ ಈ ವಿಭಾಗದಲ್ಲಿ ಗೌರವಿಸಲಾಗಿದೆ).
    • ಈ ಹಿಂದೆ ಪ್ರಶಸ್ತಿ ಪಡೆದ ಭಾರತೀಯರು: ಮಾಧವ್ ಗಾಡ್ಗೀಳ್ (2024), ನರೇಂದ್ರ ಮೋದಿ (2018), ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (2018) ಮತ್ತು ಅಫ್ರೋಜ್ ಶಾ (2016).

    ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ

    ಸಾಮಾನ್ಯ ಅಧ್ಯಯನ -1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ನವದೆಹಲಿಯಲ್ಲಿ ನಡೆದ ಯುನೆಸ್ಕೋದ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ, ದೀಪಾವಳಿ ಹಬ್ಬವನ್ನು ಯುನೆಸ್ಕೋದ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ’ಗೆ ಸೇರ್ಪಡೆಗೊಳಿಸಲಾಗಿದೆ.
    • ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಯುನೆಸ್ಕೋ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನವನ್ನು (2025), ಭಾರತವು ನವದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ಇತ್ತೀಚಿಗೆ ಆಯೋಜಿಸಿತ್ತು. 

    ದೀಪಾವಳಿ ಹಬ್ಬದ ಬಗ್ಗೆ:

    • ದೀಪಾವಳಿ ಹಬ್ಬವನ್ನು “ದೀವಾಳಿ” ಎಂತಲೂ ಕರೆಯುತ್ತಾರೆ. ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ; ಇದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ.
    • ಇದರ ಆಚರಣೆಯ ನಂತರ ನರಕ ಚತುರ್ದಶಿಯೂ ಬರುತ್ತದೆ.
    • ದೀಪಾವಳಿಯ ಮೂರನೇ ದಿನ ಹಬ್ಬದ ಪ್ರಮುಖ ದಿನವಾಗಿದ್ದು, ಅಂದು ಪವಿತ್ರ ಲಕ್ಷ್ಮಿ-ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ.

    ದೀಪಾವಳಿ ಹಬ್ಬದ ಜನಪ್ರಿಯ ಪೌರಾಣಿಕ ಕಥೆಗಳು:

    • ರಾಮಾಯಣದಲ್ಲಿ:– ದೀಪಾವಳಿಯು 14 ವರ್ಷಗಳ ವನವಾಸದ ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಮತ್ತು ರಾವಣನ ಮೇಲೆ ಅವರು ಸಾಧಿಸಿದ ವಿಜಯದ ಸಂಕೇತವಾಗಿದೆ; ದೀಪಗಳನ್ನು ಹಚ್ಚುವ ಮೂಲಕ ಅವರ ಹಾದಿಯನ್ನು ಬೆಳಗಿಸಿ ಇದನ್ನು ಆಚರಿಸಲಾಗುತ್ತದೆ.
    • ಮಹಾಭಾರತದಲ್ಲಿ:- ಪಾಂಡವರು ತಮ್ಮ ವನವಾಸದ ನಂತರ ಮರಳಿದ ಪೌರಾಣಿಕ ಕಥೆ.
    • ನರಕ ಚತುರ್ದಶಿ:– ದುಷ್ಟಶಕ್ತಿಯ ಅಂತ್ಯದ ಸಂಕೇತವಾಗಿ, ನರಕಾಸುರನ ಮೇಲೆ ಶ್ರೀಕೃಷ್ಣನು ಸಾಧಿಸಿದ ವಿಜಯವನ್ನು ಇದು ಸ್ಮರಿಸುತ್ತದೆ.
    • ಭಗವಾನ್ ಮಹಾವೀರನ ನಿರ್ವಾಣ:- 24ನೇ ತೀರ್ಥಂಕರರಾದ ಭಗವಾನ್ ಮಹಾವೀರನು ದೀಪಾವಳಿ ಹಬ್ಬದಂದು ಪಾವಾಪುರಿಯಲ್ಲಿ ನಿರ್ವಾಣ ಹೊಂದಿದನು. ಜೈನ ಧರ್ಮದ ಭಕ್ತರು ಈ ಹಬ್ಬವನ್ನು ‘ನಿರ್ವಾಣ ದಿನ’ವನ್ನಾಗಿ ಆಚರಿಸುತ್ತಾರೆ.
    • ಬಲಿ ಚಕ್ರವರ್ತಿಯ ಪುನರಾಗಮನ:- ಮಹಾರಾಷ್ಟ್ರದಲ್ಲಿ, ದೀಪಾವಳಿಯು ಬಲಿ ಚಕ್ರವರ್ತಿಯ ಭೇಟಿಯನ್ನು ಸೂಚಿಸುತ್ತದೆ; ಇದು ನ್ಯಾಯ ಮತ್ತು ಔದಾರ್ಯವನ್ನು ಸಂಕೇತಿಸುತ್ತದೆ.
    • ಕಾಳಿ ಪೂಜೆ:- ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ, ದೀಪಾವಳಿಯು ರಕ್ಷಣೆ ಮತ್ತು ಆಂತರಿಕ ಶಕ್ತಿಗಾಗಿ ಕಾಳಿ ದೇವಿಯ ಆರಾಧನೆಯೊಂದಿಗೆ ಏಕಕಾಲದಲ್ಲಿ ಆಚರಿಸಲ್ಪಡುತ್ತದೆ.
    • ಲಕ್ಷ್ಮೀ ದೇವಿಯ ಅವತರಣ:- ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ.

    ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ತಾಣಗಳ ಕುರಿತು:

    ಯುನೆಸ್ಕೋ “ಅಮೂರ್ತ” ಎಂಬ ಪದವನ್ನು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುವ ಅಭಿವ್ಯಕ್ತಿಗಳೆಂದು ವ್ಯಾಖ್ಯಾನಿಸುತ್ತದೆ:

      • ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಸಂಪ್ರದಾಯಗಳು.
      • ತಮ್ಮ ಪರಿಸರಕ್ಕೆ ಪ್ರತಿಕ್ರಿಯೆಯಾಗಿ ವಿಕಸನಗೊಂಡ ಸಂಪ್ರದಾಯಗಳು. 
    • ನಮಗೆ ಅಸ್ಮಿತೆ ಮತ್ತು ನಿರಂತರತೆಯ ಪ್ರಜ್ಞೆಯನ್ನು ಒದಗಿಸುವಲ್ಲಿ ಕೊಡುಗೆ ನೀಡಿರುವ ಸಂಪ್ರದಾಯಗಳು. 

    ಯುನೆಸ್ಕೋದ ಅಧಿಕೃತ ದಾಖಲೆಯನ್ವಯ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯು ಈ ಕೆಳಗಿನವುಗಳನ್ನು ಒಳಗೊಂಡಿದೆ: “ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಆಚರಣೆಗಳು, ವಿಧಿವಿಧಾನಗಳು, ಹಬ್ಬದ ಸಂದರ್ಭಗಳು, ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಆಚರಣೆಗಳು ಅಥವಾ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಜ್ಞಾನ ಮತ್ತು ಕೌಶಲಗಳು.”

    ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿರುವ ಭಾರತದ 16 ಅಮೂರ್ತ ಸಾಂಸ್ಕೃತಿಕ ಪರಂಪರೆಗಳು:

    • ದೀಪಾವಳಿ (2025)
    1. ಗುಜರಾತಿನ ಗರ್ಬಾ (2023)
    2. ಕೋಲ್ಕತ್ತಾದ ದುರ್ಗಾ ಪೂಜೆ (2021)
    3. ಕುಂಭ ಮೇಳ (2017)
    4. ನವರೋಜ್ (2016)
    5. ಯೋಗ (2016)
    6. ಪಂಜಾಬ್‌ನ ಜಂಡಿಯಾಲ ಗುರುವಿನ ‘ತಾಥೇರ’ರ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆ ಕಲೆ (2014)
    7. ಮಣಿಪುರದ ಸಂಕೀರ್ತನೆ (2013)
    8. ಲಡಾಖ್‌ನ ಬೌದ್ಧ ಮಂತ್ರ ಪಠಣ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದಾಚೆಗಿನ ಲಡಾಖ್ ಪ್ರದೇಶದಲ್ಲಿ ಪವಿತ್ರ ಬೌದ್ಧ ಗ್ರಂಥಗಳ ಪಠಣ (2012)
    9. ಪಶ್ಚಿಮ ಬಂಗಾಳದ ಛೌ ನೃತ್ಯ (2010)
    10. ರಾಜಸ್ಥಾನದ “ಕಾಲ್ಬೆಲಿಯಾ” ಜಾನಪದ ಹಾಡುಗಳು ಮತ್ತು ನೃತ್ಯಗಳು (2010)
    11. ಕೇರಳದ ಮುಡಿಯೆಟ್ಟು, ಧಾರ್ಮಿಕ ರಂಗಭೂಮಿ ಮತ್ತು ನೃತ್ಯ ನಾಟಕ (2010)
    12. ಗರ್ವಾಲ್ ಹಿಮಾಲಯದ ರಮ್ಮಾನ್, ಧಾರ್ಮಿಕ ಹಬ್ಬ ಮತ್ತು ಧಾರ್ಮಿಕ ರಂಗಭೂಮಿ (2009)
    13. ಕೇರಳದ ಕೂಡಿಯಟ್ಟಂ, ಸಂಸ್ಕೃತ ರಂಗಭೂಮಿ (2008)
    14. ವೇದ ಮಂತ್ರ ಪಠಣ ಸಂಪ್ರದಾಯ (2008)
    15. ಉತ್ತರ ಪ್ರದೇಶದ ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ (2008)

    ವಿಶ್ವ ಅಸಮಾನತೆ ವರದಿ, 2026

    ಸಾಮಾನ್ಯ ಅಧ್ಯಯನ- 2/ಸಾಮಾಜಿಕ ವಿಷಯಗಳು; ಸಾಮಾನ್ಯ ಅಧ್ಯಯನ- 3/ಒಳಗೊಳ್ಳುವ ಬೆಳವಣಿಗೆ

    ಇದೀಗ ಸುದ್ದಿಯಲ್ಲಿದೆ:

    • ವಿಶ್ವ ಅಸಮಾನತೆ ಲ್ಯಾಬ್’, ವಿಶ್ವ ಅಸಮಾನತೆ ವರದಿಯ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

    ವಿಶ್ವ ಅಸಮಾನತೆ ವರದಿ, 2026 ರ ಪ್ರಮುಖ ಅಂಶಗಳು:

    • ಸಂಪತ್ತಿನ ಕೇಂದ್ರೀಕರಣ:- ಜಾಗತಿಕ ಜನಸಂಖ್ಯೆಯ ಅತ್ಯಂತ ಶ್ರೀಮಂತ 10% ಜನರು, ವಿಶ್ವದ ಒಟ್ಟು ಸಂಪತ್ತಿನ ಸರಿಸುಮಾರು 75% ರಷ್ಟು ಪಾಲನ್ನು ಹೊಂದಿದ್ದಾರೆ.

    ಭಾರತದ ಕುರಿತ ವರದಿಯಲ್ಲಿರುವ ಪ್ರಮುಖ ಅಂಶಗಳು:

    • ಜಾಗತಿಕವಾಗಿ ಅತಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಭಾರತವನ್ನು ಗುರುತಿಸಲಾಗಿದೆ.
    • ಆದಾಯ:– ಅತಿ ಹೆಚ್ಚು ಆದಾಯ ಗಳಿಸುವ ಅಗ್ರ 10% ರಷ್ಟು ಜನರು ರಾಷ್ಟ್ರೀಯ ಆದಾಯದ 58% ರಷ್ಟನ್ನು ತಮ್ಮದಾಗಿಸಿಕೊಂಡಿದ್ದರೆ, ಕೆಳಸ್ತರದ 50% ಜನರು ಕೇವಲ 15% ರಾಷ್ಟ್ರೀಯ ಆದಾಯವನ್ನು ಮಾತ್ರ ಪಡೆಯುತ್ತಾರೆ.
    • ಸಂಪತ್ತು:- ಭಾರತದ ಒಟ್ಟು ಸಂಪತ್ತಿನ ಪೈಕಿ ಸುಮಾರು 65% ರಷ್ಟು ಪಾಲನ್ನು ಅತ್ಯಂತ ಶ್ರೀಮಂತ 10% ಜನರು ಹೊಂದಿದ್ದಾರೆ; ಕೇವಲ ಅಗ್ರ 1% ರಷ್ಟು ಜನರು ಸುಮಾರು 40% ರಷ್ಟು ಸಂಪತ್ತನ್ನು ಹೊಂದಿದ್ದಾರೆ.
    • ಲಿಂಗ:– ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು ಅತ್ಯಂತ ಕಡಿಮೆಯಿದ್ದು, 15.7% ರ ಮಟ್ಟದಲ್ಲಿಯೇ ನಿಶ್ಚಲವಾಗಿದೆ.

    ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ : 

    • ಭಾರತದ ಸೌರ ವೀಕ್ಷಣಾಲಯವಾದ ಆದಿತ್ಯ-L1, ಮೇ 2024ರಲ್ಲಿ ಸಂಭವಿಸಿದ “ಗ್ಯಾನನ್‌ನ ಸ್ಟಾರ್ಮ್ (Gannon’s storm)” ಎಂದು ಕರೆಯಲ್ಪಡುವ ಸೌರ ಬಿರುಗಾಳಿಯ ಅಸಾಮಾನ್ಯ ವರ್ತನೆಯನ್ನು ಬಹಿರಂಗಪಡಿಸಿದೆ.
    • ಈ ಬಿರುಗಾಳಿ ಸೂರ್ಯನಲ್ಲಿ ಸಂಭವಿಸಿದ “ಕೊರೊನಲ್ ಮಾಸ್ ಇಜೆಕ್ಷನ್‌ಗಳು” (Coronal Mass Ejections – CMEs) ಎನ್ನುವ ದೈತ್ಯ ಪ್ರಮಾಣದ ಸ್ಫೋಟಗಳ ಸರಣಿಯಿಂದ ಉಂಟಾಗಿದೆ.

    ‘ಸೌರ ಬಿರುಗಾಳಿ’ಯ ಬಗ್ಗೆ:

    • ಸೌರ ಬಿರುಗಾಳಿಯು ಸೂರ್ಯನ ಮೇಲೆ ಸಂಭವಿಸುವ ‘ಕರೋನಲ್ ಮಾಸ್ ಇಜೆಕ್ಷನ್‌ಗಳು’ (CMEs) ಎಂದು ಕರೆಯಲ್ಪಡುವ ದೈತ್ಯ ಸ್ಫೋಟಗಳ ಸರಣಿಯಿಂದ ಕೂಡಿದೆ.
    • ಒಂದು ಕರೋನಲ್ ಮಾಸ್ ಇಜೆಕ್ಷನ್‌ ಎಂದರೆ ಸೂರ್ಯನಿಂದ ಬಾಹ್ಯಾಕಾಶಕ್ಕೆ ಉಗುಳಲ್ಪಡುವ ಬಿಸಿಯಾದ ಅನಿಲ ಮತ್ತು ಕಾಂತೀಯ ಶಕ್ತಿಯ ಬೃಹತ್ ಗುಳ್ಳೆಯಾಗಿದೆ.
    • ಭೂಮಿಯ ಮೇಲೆ ಬಿರುವ ಪರಿಣಾಮ:- ಈ ಗುಳ್ಳೆಗಳು ಭೂಮಿಗೆ ಅಪ್ಪಳಿಸಿದಾಗ, ಇವು ಭೂಮಿಯ ಕಾಂತೀಯ ಕವಚವನ್ನು ಅಸ್ಥಿರಗೊಳಿಸಬಹುದು. ಇದರಿಂದಾಗಿ ಉಪಗ್ರಹ, ಸಂಪರ್ಕ ವ್ಯವಸ್ಥೆ, ಜಿಪಿಎಸ್ ಹಾಗೂ ವಿದ್ಯುತ್ ಜಾಲಗಳಿಗೆ ಗಂಭೀರ ತೊಂದರೆ ಉಂಟಾಗಬಹುದು.

    ಆದಿತ್ಯ-L1 ಯೋಜನೆಯ ಬಗ್ಗೆ:

    • ವಿಶಿಷ್ಟತೆ: ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದನ್ನು PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.
    • ಈ ಸೌರ ಯೋಜನೆಯು ಬಾಹ್ಯಾಕಾಶ ನೌಕೆಯನ್ನು ನೇರವಾಗಿ ಸೂರ್ಯನ ಬಳಿಗೆ ಕಳುಹಿಸುವುದಿಲ್ಲ; ಬದಲಿಗೆ, ಗ್ರಹಣದ ಸಮಯದಲ್ಲೂ ಸೂರ್ಯನನ್ನು ತಡೆರಹಿತವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಾಹ್ಯಾಕಾಶ ವೀಕ್ಷಣಾಲಯವನ್ನು ಇದು ಸೃಷ್ಟಿಸುತ್ತದೆ.
    • ಭೂಮಿ-ಸೂರ್ಯ ವ್ಯವಸ್ಥೆಯ, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ‘ಲ್ಯಾಗ್ರೇಂಜ್ ಬಿಂದು 1’ರ (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.

    ಯೋಜನೆಯ ಪ್ರಮುಖ ಉದ್ದೇಶಗಳು:

    • ಈ ಯೋಜನೆಯು ಸೂರ್ಯನ ಮೇಲ್ಮೈ ವಾತಾವರಣದ (ವರ್ಣಗೋಳ ಮತ್ತು ಕರೋನಾ) ಚಲನಶೀಲತೆಯ ಅಧ್ಯಯನದ ಮೇಲೆ ಗಮನಹರಿಸುತ್ತದೆ.
    • ಇದು ಬಾಹ್ಯಾಕಾಶ ಹವಾಮಾನಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವುದರ ಜೊತೆಗೆ, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಗುರುತಿಸುತ್ತದೆ.

    ಸೂರ್ಯನಿಗೆ ಸಂಬಂಧಿಸಿದ ಇತರ ಪ್ರಮುಖ ಯೋಜನೆಗಳು:

    • 2018 ರಲ್ಲಿ ಉಡಾವಣೆಯಾದ ನಾಸಾದ (NASA) ‘ಪಾರ್ಕರ್ ಸೋಲಾರ್ ಪ್ರೋಬ್’ ಈಗಾಗಲೇ ಸೂರ್ಯನಿಗೆ ಸಾಕಷ್ಟು ಹತ್ತಿರ ಹೋಗಿದೆ – ಆದರೆ ಅದು ಸೂರ್ಯನಿಂದಾಚೆಗೆ ಹೋಗುವ ಗುರಿಯನ್ನು ಇಟ್ಟುಕೊಂಡಿದೆ..
    • ಸೂರ್ಯನ ಮೇಲ್ಮೈ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಅಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಾದ ‘ಹೆಲಿಯೋಸ್ 2’ ಸೌರ ಪ್ರೋಬ್ ಅನ್ನು 1976 ರಲ್ಲಿ ಉಡಾವಣೆ ಮಾಡಲಾಯಿತು.

    ಜಾಗತಿಕ ಪರಿಸರ ಮುನ್ನೋಟ (Global Environment Outlook)

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕೀನ್ಯಾದ ನೈರೋಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯ 7ನೇ ಅಧಿವೇಶನದಲ್ಲಿ, ‘ಜಾಗತಿಕ ಪರಿಸರ ಮುನ್ನೋಟ, 7ನೇ ಆವೃತ್ತಿ: ಎ ಫ್ಯೂಚರ್ ವೀ ಚೂಸ್/ನಾವು ಆರಿಸಿಕೊಳ್ಳುವ ಭವಿಷ್ಯ (GEO-7) ದ ವರದಿಯನ್ನು ಬಿಡುಗಡೆ ಮಾಡಲಾಯಿತು.

    ಜಾಗತಿಕ ಪರಿಸರ ಮುನ್ನೋಟ (GEO) ವರದಿಯ ಬಗ್ಗೆ:

    • ಪ್ರಕಟಿಸಿದವರು:- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
    • ಉದ್ದೇಶ:- ಭೂಗ್ರಹದ ಪರಿಸರ ಆರೋಗ್ಯದ ಕುರಿತು ಸಮಗ್ರ ಮೌಲ್ಯಮಾಪನವನ್ನು ಒದಗಿಸುವುದು.
    • ಮಹತ್ವ:– ಸುಸ್ಥಿರ ಅಭಿವೃದ್ಧಿಯೆಡೆಗಿನ ಜಾಗತಿಕ ಕ್ರಮಗಳಿಗೆ ಮಾರ್ಗದರ್ಶನ ನೀಡಲು, ದತ್ತಾಂಶ-ಆಧಾರಿತ ಒಳನೋಟಗಳು ಮತ್ತು ನೀತಿ ಆಯ್ಕೆಗಳನ್ನು ಒದಗಿಸುವ ಮೂಲಕ ವಿಜ್ಞಾನ ಮತ್ತು ನೀತಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು.
    • ಇತ್ತೀಚಿನ ಆವೃತ್ತಿ: ಡಿಸೆಂಬರ್ 2025 ರಲ್ಲಿ, “ಎ ಫ್ಯೂಚರ್ ವೀ ಚೂಸ್” (ನಾವು ಆರಿಸಿಕೊಳ್ಳುವ ಭವಿಷ್ಯ) ಎಂಬ ಶೀರ್ಷಿಕೆಯಡಿ GEO ನ 7ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

    2025 ರ GEO-7 ವರದಿಯ ಪ್ರಮುಖ ಅಂಶಗಳು:

    • ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಹಂತಗಳು: ಜಾಗತಿಕ ತಾಪಮಾನ ಏರಿಕೆಯು ವೇಗಗೊಳ್ಳುತ್ತಿದೆ; ವಿಶ್ವವು ಈಗಾಗಲೇ ಸರಿಸುಮಾರು 1.3°C ನಷ್ಟು ತಾಪಮಾನ ಏರಿಕೆಯನ್ನು ಕಂಡಿದೆ.
    • ಮಾಲಿನ್ಯ ಮತ್ತು ಆರೋಗ್ಯ: ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 90 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಕೇವಲ ವಾಯು ಮಾಲಿನ್ಯವೊಂದೇ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತಿದೆ.
    • ಜೀವವೈವಿಧ್ಯತೆಯ ನಷ್ಟ ಮತ್ತು ಭೂಮಿಯ ಅವನತಿ: ಸುಮಾರು 10 ಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಮತ್ತು 20-40% ರಷ್ಟು ಭೂಮಿ ಅವನತಿ ಹೊಂದಿದ್ದು, ಇದು 3 ಬಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

    ಸ್ವಾಹಿದ್ ದಿವಸ್ (ದಿನ)

    ಸಾಮಾನ್ಯ ಅಧ್ಯಯನ -1/ಇತಿಹಾಸ; ಸಾಮಾನ್ಯ ಅಧ್ಯಯನ-2/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಾಹಿದ್ ದಿವಸ್’ ಸಂದರ್ಭದಲ್ಲಿ, ಐತಿಹಾಸಿಕ ಅಸ್ಸಾಂ ಚಳವಳಿಯಲ್ಲಿ ಭಾಗವಹಿಸಿದವರ ಧೈರ್ಯವನ್ನು ಸ್ಮರಿಸಿ ಗೌರವ ಸಲ್ಲಿಸಿದರು.

    “ಸ್ವಾಹಿದ್ ದಿನದ” ಬಗ್ಗೆ:

    • ಇದನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ.
    • ಉದ್ದೇಶ:- ಅಸ್ಸಾಂ ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದವರನ್ನು ನೆನಪಿಸಿ ಗೌರವಿಸುವುದು.

    ಅಸ್ಸಾಂ ಚಳವಳಿಯ ಬಗ್ಗೆ:

    • ಇದು ಬಾಂಗ್ಲಾದೇಶದಿಂದ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅಕ್ರಮ ಒಳನುಸುಳುವಿಕೆಯ ವಿರುದ್ಧ, 1979 ರಲ್ಲಿ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ  ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್  ಆರಂಭಿಸಿದ ಸಾಮೂಹಿಕ ಆಂದೋಲನವಾಗಿದೆ.
    • ಈ ಚಳವಳಿಯು 1985 ರಲ್ಲಿ ಐತಿಹಾಸಿಕ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮುಕ್ತಾಯವಾಯಿತು.
    • ಈ ಒಪ್ಪಂದವು ಅಕ್ರಮ ವಿದೇಶಿಯರ ಪತ್ತೆ ಹಚ್ಚುವಿಕೆ ಮತ್ತು ಗಡಿಪಾರು ಮಾಡುವುದನ್ನು ಖಚಿತಪಡಿಸುತ್ತದೆ; ಜೊತೆಗೆ ಅಸ್ಸಾಮಿ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಸಾಂವಿಧಾನಿಕ, ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು ಖಾತರಿಪಡಿಸುತ್ತದೆ.

    ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)

    ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), 2026ನೇ ಆರ್ಥಿಕ ವರ್ಷದ (FY26) ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ. 6.5 ರಿಂದ ಶೇ. 7.2 ಕ್ಕೆ ಹೆಚ್ಚಿಸಿದೆ.

    ‘ಏಷ್ಯನ್ ಅಭಿವೃದ್ಧಿ ಬ್ಯಾಂಕ್’ ನ ಬಗ್ಗೆ:

    • ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, 1966 ರಲ್ಲಿ ಸ್ಥಾಪಿತವಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
    • ಕೇಂದ್ರ ಕಚೇರಿ:- ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ‘ಮಂಡಲುಯಾಂಗ್’ನಲ್ಲಿದೆ.
    • ಸದಸ್ಯತ್ವ:- ಪ್ರಾದೇಶಿಕ (ಏಷ್ಯಾ-ಪೆಸಿಫಿಕ್) ಮತ್ತು ಪ್ರಾದೇಶಿಕೇತರ ದೇಶಗಳೆರಡನ್ನೂ ಒಳಗೊಂಡಿದೆ; ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ದ ಸುಮಾರು ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳು ಹಾಗೂ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿವೆ.
    • ಭಾರತವು 1966 ರಲ್ಲಿ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗೆ ಸೇರ್ಪಡೆಗೊಂಡಿತು.
    • ಪ್ರಮುಖ ಷೇರುದಾರರು:- ಜಪಾನ್ ಮತ್ತು ಅಮೆರಿಕ (ತಲಾ 15.6%) ಸೇರಿವೆ; ನಂತರದ ಸ್ಥಾನಗಳಲ್ಲಿ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಇವೆ. ಈ ಅಂಕಿಅಂಶಗಳು ಬ್ಯಾಂಕ್‌ನಲ್ಲಿನ ಪ್ರಾದೇಶಿಕ ಮತ್ತು ಪ್ರಾದೇಶಿಕೇತರ ಪಾಲುದಾರಿಕೆಗಳೆರಡನ್ನೂ ಪ್ರತಿಬಿಂಬಿಸುತ್ತವೆ.

    ಗ್ಲೋ ಕ್ಯಾಸ್ 9 (GlowCas9)

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಡಿಎನ್‌ಎ ಪರಿಷ್ಕರಿಸುವಾಗ ಬೆಳಕನ್ನು ಹೊರಸೂಸುವ, ಹೊಸದಾಗಿ ವಿನ್ಯಾಸಗೊಳಿಸಲಾದ ‘ಕ್ರಿಸ್ಪರ್ ಕ್ಯಾಸ್ 9’ (CRISPR Cas9) ಕಿಣ್ವದ ಒಂದು ರೂಪಾಂತರವೇ ‘ಗ್ಲೋ ಕ್ಯಾಸ್ 9’ ಆಗಿದೆ. 

    ಗ್ಲೋಕ್ಯಾಸ್9 ನ ಬಗ್ಗೆ: 

    • ಇದನ್ನು ಕೋಲ್ಕತ್ತಾದ ಬೋಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೃಷ್ಟಿಸಲಾದ, ಸ್ವಯಂ-ಬೆಳಗುವ ಅಥವಾ ‘ಜೈವಿಕ ದೀಪ್ತಿ’ ಹೊಂದಿರುವ ‘ಕ್ರಿಸ್ಪರ್ ಕ್ಯಾಸ್9’ ಆಗಿದೆ.
    • ಆಳ ಸಮುದ್ರದ ಸಿಗಡಿ ಪ್ರೋಟೀನ್‌ಗಳಿಂದ ಪಡೆಯಲಾದ ‘ವಿಭಜಿತ ನ್ಯಾನೊ-ಲೂಸಿಫೆರೇಸ್’ ಕಿಣ್ವದೊಂದಿಗೆ ಕ್ಯಾಸ್9 ಅನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

    ಜೀನ್ ಪರಿಷ್ಕರಿಸುವ (ಎಡಿಟಿಂಗ್) ತಂತ್ರಜ್ಞಾನದ ಬಗ್ಗೆ:

    • ಇದು ಜೀವಿಯೊಂದರ ಜೀನೋಮ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಆನುವಂಶಿಕ ವಸ್ತುವನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ; ಈ ಮೂಲಕ ಆ ಜೀವಿಯ ಡಿಎನ್‌ಎ ಬದಲಾವಣೆಗೆ ಅವಕಾಶ ನೀಡುತ್ತದೆ.

    ಕ್ರಿಸ್ಪರ್ ಕ್ಯಾಸ್9  ತಂತ್ರಜ್ಞಾನದ ಬಗ್ಗೆ:

    • ಸಂಕ್ಷಿಪ್ತ ರೂಪ:- CRISPR- ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೋಮಿಕ್ ರಿಪೀಟ್ಸ್.
    • ಮಹತ್ವ:- CRISPR ಎಂಬ ಜೀನ್ ಪರಿಷ್ಕರಿಸುವ ತಂತ್ರದ ಬಳಕೆಯೊಂದಿಗೆ, ಸಂಶೋಧಕರು ಜೀವಿಗಳ ಡಿಎನ್‌ಎ ಅನ್ನು ಮಾರ್ಪಡಿಸಬಹುದು.
    • ಕಾರ್ಯವಿಧಾನ:– ಕ್ಯಾಸ್ 9  ಎಂಬ ಕಿಣ್ವವು ‘ಆಣ್ವಿಕ ಕತ್ತರಿ’ಯಂತೆ ಕಾರ್ಯನಿರ್ವಹಿಸುತ್ತದೆ. ನಿರ್ದಿಷ್ಟ ಡಿಎನ್‌ಎ ಅನುಕ್ರಮಕ್ಕೆ ನಿಖರವಾಗಿ ಹೊಂದಿಕೆಯಾಗುವಂತೆ ಸೃಷ್ಟಿಸಲಾದ ಆರ್‌ಎನ್‌ಎ ಅಣುಗಳು ಇದಕ್ಕೆ ಮಾರ್ಗದರ್ಶನ ನೀಡುತ್ತವೆ.
    • ಜಿಇ (ಜೀನೋಮ್ ಪರಿಷ್ಕರಿಸುವ):– ಇದು ಯಾವುದೇ ಬಾಹ್ಯ (ಅನ್ಯ) ಜೀನ್‌ಗಳನ್ನು ಪರಿಚಯಿಸದೆಯೇ, ಜೀವಿಯೊಂದರ ಜೀನೋಮ್‌ನೊಳಗಿನ ನಿರ್ದಿಷ್ಟ ಜೀನ್‌ಗಳ ನಿಖರವಾದ ಮಾರ್ಪಾಡನ್ನು ಒಳಗೊಂಡಿರುತ್ತದೆ; ಇದು ಉದ್ದೇಶಿತ ಆನುವಂಶಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
    • ಜಿಎಂ (ತಳೀಯವಾಗಿ ಮಾರ್ಪಡಿಸಿದ/ಕುಲಾಂತರಿ):- ನಿರ್ದಿಷ್ಟ ಗುಣಲಕ್ಷಣಗಳು ಅಥವಾ ವೈಶಿಷ್ಟ್ಯಗಳನ್ನು ನೀಡಲು, ಸಂಬಂಧವಿಲ್ಲದ ಜೀವಿಗಳಿಂದ ಅನ್ಯ ಜೀನ್‌ಗಳನ್ನು ಜೀವಿಯೊಂದರ ಜೀನೋಮ್‌ಗೆ ಸೇರಿಸುವುದನ್ನು ಇದು ಒಳಗೊಂಡಿರುತ್ತದೆ.

    ನಿಯಂತ್ರಕ ಸಂಸ್ಥೆಗಳು:

    • ಜಿಇಎಸಿ (GEAC- ಅನುವಂಶಿಕ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ): ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಜಿಇಎಸಿ ಹೊಂದಿದೆ.
    • ಜೈವಿಕ ಸುರಕ್ಷತೆಗೆ ಕಾರ್ಟಜೆನಾ ಶಿಷ್ಟಾಚಾರ (CPB): ಜೈವಿಕ ವೈವಿಧ್ಯತೆಯ ಸಮಾವೇಶದ (CBD) ಅಡಿಯಲ್ಲಿ, ಜೀವವೈವಿಧ್ಯದ ಮೇಲೆ ಪರಿಣಾಮ ಬೀರಬಹುದಾದ ಕುಲಾಂತರಿ ಜೀವಿಗಳ ಸುರಕ್ಷಿತ ನಿರ್ವಹಣೆಯನ್ನು ಇದು ಖಚಿತಪಡಿಸುತ್ತದೆ.

    CITES ಪಕ್ಷಗಳ ಸಮ್ಮೇಳನ (CoP20)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • “ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ” (CITES) ಪಕ್ಷಗಳ ಸಮ್ಮೇಳನದ 20ನೇ ಸಭೆಯು (CoP20) ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಮುಕ್ತಾಯಗೊಂಡಿತು. ಇದು ಈ ಸಮಾವೇಶದ 50ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

    CITES ನ ಬಗ್ಗೆ:

    • ಪೂರ್ಣ ರೂಪ:- CITES- ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ.
    • 1963 ರಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (IUCN) ದ ಸಭೆಯಲ್ಲಿ CITES ಪರಿಕಲ್ಪನೆಯನ್ನು ರೂಪಿಸಲಾಯಿತು.
    • ಸ್ಥಾಪನೆ:- ಇದು 1975 ರಲ್ಲಿ ಜಾರಿಗೆ ಬಂದಿತು ಮತ್ತು 183 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
    • ಕೇಂದ್ರ ಕಚೇರಿ:- ಜಿನೀವಾ (ಸ್ವಿಟ್ಜರ್ಲೆಂಡ್).
    • ಆಡಳಿತ ನಿರ್ವಹಣೆ:- ವಿಶ್ವಸಂಸ್ಥೆಯು ತನ್ನ ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (UNEP) ವಿಭಾಗದ ಅಡಿಯಲ್ಲಿ ಇದರ ಆಡಳಿತವನ್ನು ನಿರ್ವಹಿಸುತ್ತದೆ.
    • CITES ಒಪ್ಪಂದವು ಪಕ್ಷಗಳಿಗೆ (ಸದಸ್ಯ ರಾಷ್ಟ್ರಗಳಿಗೆ) ಕಾನೂನುಬದ್ಧವಾಗಿದೆ, ಆದರೆ ಇದು ರಾಷ್ಟ್ರೀಯ ಕಾನೂನುಗಳ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ.

    CITES ಒಳಗೊಂಡಿರುವ ಅನುಬಂಧಗಳು:

    • ಅನುಬಂಧ 1:- ಇದು ಅಳಿವಿನಂಚಿನಲ್ಲಿರುವ ಮತ್ತು ವ್ಯಾಪಾರದಿಂದ ಪ್ರಭಾವಿತವಾಗಿರುವ ಅಥವಾ ಪ್ರಭಾವಿತವಾಗಬಹುದಾದ ಪ್ರಭೇದಗಳನ್ನು ಪಟ್ಟಿ ಮಾಡುತ್ತದೆ.
    • ಅನುಬಂಧ 2:- ಅಳಿವಿನಂಚಿನಲ್ಲಿಲ್ಲದಿದ್ದರೂ, ಅವುಗಳ ಉಳಿವಿಗಾಗಿ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾದ ಅಗತ್ಯವಿರುವ ಪ್ರಭೇದಗಳನ್ನು ಈ ಪಟ್ಟಿ ಒಳಗೊಂಡಿದೆ (ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ತಡೆಯಲು).
    • ಅನುಬಂಧ 3:- ಕನಿಷ್ಠ ಒಂದು ದೇಶದಲ್ಲಿ ಸಂರಕ್ಷಿಸಲ್ಪಟ್ಟಿರುವ ಮತ್ತು ಆ ಪ್ರಭೇದಗಳ ವ್ಯಾಪಾರವನ್ನು ನಿಯಂತ್ರಿಸಲು ಇತರೆ CITES ಪಕ್ಷಗಳ (ರಾಷ್ಟ್ರಗಳ) ನೆರವು ಕೋರಲಾಗಿರುವ ಪ್ರಭೇದಗಳನ್ನು ಇದು ಒಳಗೊಂಡಿದೆ.

    ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬ)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ತೀವ್ರ ತಾಪಮಾನದ ಒತ್ತಡ ಮತ್ತು ಅಪರೂಪದ ಹವಳದ ಕಾಯಿಲೆಯ ಸಂಯೋಜನೆಯು ಗ್ರೇಟ್ ಬ್ಯಾರಿಯರ್ ರೀಫ್‌ನ ಒಂದು ತಾಣದಲ್ಲಿ 75% ರಷ್ಟು ‘ಗೊನಿಯೊಪೊರಾ’ ಹವಳದ ಸಮುದಾಯಗಳನ್ನು ನಾಶಪಡಿಸಿದೆ.

    ಹವಳದ ದಿಬ್ಬಗಳ ಬಗ್ಗೆ:

    • ಹವಳದ ದಿಬ್ಬಗಳು ಭೂಮಿಯ ಮೇಲಿನ ಅತ್ಯಂತ ಜೈವಿಕ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ. ರಚನೆ ಮತ್ತು ಸಹಜೀವನದ ಸಂಬಂಧ – (ಕೋರಲ್  ಪಾಲಿಪ್ಸ್ + ಝೂಕ್ಸಾಂಥೆಲೆ).
    • ಹವಳದ ದಿಬ್ಬಗಳನ್ನು ನಿರ್ಮಿಸಲು ಪ್ರಾಥಮಿಕವಾಗಿ ಕಾರಣವಾಗುವ ಪ್ರಾಣಿಗಳಾದ ‘ಕೋರಲ್ ಪಾಲಿಪ್ಸ್’ , ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಝೂಕ್ಸಾಂಥೆಲೆ’ ಎಂಬ ದ್ಯುತಿಸಂಶ್ಲೇಷಕ ಪಾಚಿಗಳೊಂದಿಗೆ ಸಹಜೀವನದ ಸಂಬಂಧವನ್ನು ಬೆಳೆಸಿಕೊಂಡಾಗ ಇವು ರೂಪುಗೊಳ್ಳುತ್ತವೆ.
    • ರಚನೆ:- ಮುಕ್ತವಾಗಿ ಈಜುವ ಹವಳದ ಲಾರ್ವಾಗಳು, ದ್ವೀಪಗಳು ಅಥವಾ ಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳಿಗೆ ಅಥವಾ ಇತರ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರಚನೆಯಾಗಲು ಪ್ರಾರಂಭಿಸುತ್ತವೆ.
    • ಹವಳವು ಪಾಚಿಗೆ ಸಂರಕ್ಷಿತ ವಾತಾವರಣವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಅಗತ್ಯವಿರುವ ಸಂಯುಕ್ತಗಳನ್ನು ಒದಗಿಸುತ್ತದೆ.
    • ಇದರ ಪ್ರತಿಯಾಗಿ, ಪಾಚಿಯು ಹವಳಗಳ ಆಹಾರಕ್ಕಾಗಿ ಬಳಸುವ ಕಾರ್ಬೋಹೈಡ್ರೇಟ್‌ಗಳನ್ನು ಹಾಗೂ ಆಮ್ಲಜನಕವನ್ನು ಉತ್ಪಾದಿಸುತ್ತದೆ. ತ್ಯಾಜ್ಯವನ್ನು ಹೊರಹಾಕಲು ಸಹ ಪಾಚಿಯು ಹವಳಕ್ಕೆ ಸಹಾಯ ಮಾಡುತ್ತದೆ.

    ಹವಳದ ದಿಬ್ಬಗಳ ರಚನೆಗೆ ಅನುಕೂಲಕರ ಪರಿಸ್ಥಿತಿಗಳು:

      • ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು (30 ಡಿಗ್ರಿ ಉತ್ತರ ಮತ್ತು 25 ಡಿಗ್ರಿ ದಕ್ಷಿಣ ಅಕ್ಷಾಂಶಗಳು).
    • ಹೂಳು ರಹಿತವಾದ ಸಾಗರದ ನೀರು.
    • ಸ್ವಚ್ಛ ಹಾಗೂ ಪಾರದರ್ಶಕ ಸಾಗರಗಳ ನೀರಿನ ಭಾಗಗಳು (ಸೂರ್ಯನ ಬೆಳಕು ಬೀಳುವಂತಿರಬೇಕು).
    • ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ನೀರು.

    ಹವಳದ ದಿಬ್ಬಗಳ ರಚನೆಯ ವಿಧಗಳು:

    • ಅಂಚಿನ ದಿಬ್ಬಗಳು:– ಇವು ಅತ್ಯಂತ ಸಾಮಾನ್ಯವಾಗಿವೆ; ಇವು ತೀರದಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಂಡಿದ್ದು, ತೀರದ ಉದ್ದಕ್ಕೂ ಮತ್ತು ದ್ವೀಪಗಳ ಸುತ್ತಲೂ ಗಡಿಗಳನ್ನು ರೂಪಿಸುತ್ತವೆ.
    • ತಡೆಗೋಡೆ ದಿಬ್ಬಗಳು:- ಇವು ತೀರದ ಗಡಿಗಳಲ್ಲಿ ಬೆಳೆಯುತ್ತವೆ, ಆದರೆ ಹೆಚ್ಚಿನ ದೂರದಲ್ಲಿರುತ್ತವೆ. ಇವು ತೆರೆದ, ಸಾಮಾನ್ಯವಾಗಿ ಆಳವಾದ ನೀರಿನ ಲಗೂನ್‌ನಿಂದ ತಮ್ಮ ಪಕ್ಕದ ಭೂಭಾಗದಿಂದ ಬೇರ್ಪಟ್ಟರುತ್ತವೆ.
    • ಹವಳದ ದ್ವೀಪ (ಅಟಾಲ್): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರ ಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಕುಸಿದಾಗ, ಹವಳವು ಮೇಲ್ಮುಖವಾಗಿ ಬೆಳೆಯುವುದನ್ನು ಮುಂದುವರೆಸಿದರೆ, ಒಂದು ಹವಳದ ದ್ವೀಪ (ಅಟಾಲ್) ರಚನೆಯಾಗುತ್ತದೆ. ಅಟಾಲ್‌ಗಳು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿದ್ದು, ಮಧ್ಯದಲ್ಲಿ ಲಗೂನ್ ಅನ್ನು ಹೊಂದಿರುತ್ತವೆ.

    ಭಾರತದಲ್ಲಿ ಹಂಚಿಕೆ:

    • ಗುಜರಾತಿನ ಕಚ್ ಖಾರಿ
    • ಭಾರತದ ಪಶ್ಚಿಮ ಕರಾವಳಿ
    • ಲಕ್ಷದ್ವೀಪ
    • ತಮಿಳುನಾಡಿನ ಮನ್ನಾರ್ ಖಾರಿ
    • ಪಾಕ್ ಕೊಲ್ಲಿ 
    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ

    ಅಪಾಯಗಳು:

    • ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳು, ಮಿತಿಮೀರಿದ ಮೀನುಗಾರಿಕೆ, ಅಜಾಗರೂಕ ಪ್ರವಾಸೋದ್ಯಮ, ಮಾಲಿನ್ಯ, ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ, ಹವಾಮಾನ ಬದಲಾವಣೆ.

    ಹವಳದ  ವಿವರ್ಣವಾಗುವಿಕೆ/ವರ್ಣನಾಶನ (ಕೋರಲ್ ಬ್ಲೀಚಿಂಗ್):

    • ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ಹವಳಗಳು ಒತ್ತಡವನ್ನು ಎದುರಿಸಿದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಪಾಚಿಯಾದ ‘ಝೂಕ್ಸಾಂಥೆಲೆ’ಯನ್ನು ಹೊರಹಾಕುತ್ತವೆ. ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿಯಾಗಿ ಬದಲಾಗುತ್ತವೆ. ಈ ವಿದ್ಯಮಾನವನ್ನು ‘ಹವಳದ ವಿವರ್ಣವಾಗುವಿಕೆ/ಬ್ಲೀಚಿಂಗ್’ ಎಂದು ಕರೆಯಲಾಗುತ್ತದೆ.

    ಹವಳದ ವಿವರ್ಣವಾಗುವಿಕೆಗೆ ಕಾರಣಗಳು:

    • ಸಮುದ್ರದ ತಾಪಮಾನದಲ್ಲಿ ಏರಿಕೆ
    • ಸಾಗರದ ಆಮ್ಲೀಕರಣ
    • ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣ
    • ಸಾಂಕ್ರಾಮಿಕ ರೋಗಗಳು
    • ರಾಸಾಯನಿಕ ಮಾಲಿನ್ಯ
    • ಹೆಚ್ಚಿದ ಹೂಳು ತುಂಬುವಿಕೆ
    • ಬೆಳಕಿನ ಕಡಿಮೆ ಲಭ್ಯತೆ (ಕದಡಿದ ಸ್ಥಿತಿ)
    • ಮಾನವ ಪ್ರೇರಿತ ಅಪಾಯಗಳು

    ಪಶ್ಚಿಮದ ಟ್ರಾಗೋಪನ್ (Western Tragopan)

    ಸಾಮಾನ್ಯ ಅಧ್ಯಯನ- 3/ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿನ ಅಧ್ಯಯನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಪಶ್ಚಿಮ ಟ್ರಾಗೋಪನ್’ ಪಕ್ಷಿಗೆ ಸೂಕ್ತವಾದ ಆವಾಸಸ್ಥಾನಗಳಿರುವುದನ್ನು ದೃಢಪಡಿಸಿವೆ; ಆದರೆ ಮಾನವ ಅಡಚಣೆ ಮತ್ತು ಆವಾಸಸ್ಥಾನಗಳ ವಿಘಟನೆಯು ಈ ಪಕ್ಷಿಯ ಉಳಿವಿಗೆ ಬಲವಾದ ಅಪಾಯವನ್ನು ಒಡ್ದುತ್ತಿದೆ. 

    ಪಶ್ಚಿಮ ಟ್ರಾಗೋಪನ್ ಪಕ್ಷಿಯ ಬಗ್ಗೆ:

    • ಪಶ್ಚಿಮ ಟ್ರಾಗೋಪನ್, ಭಾರತದ ಅತ್ಯಂತ ಅಪರೂಪದ ಬಣ್ಣದ ಕಾಡುಕೋಳಿ ಜಾತಿ (ಫೆಸೆಂಟ್‌) ಗಳಲ್ಲಿ  ಒಂದಾಗಿದೆ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
    • ಇದು ಪ್ರಸ್ತುತ ಪಶ್ಚಿಮ ಹಿಮಾಲಯದಾದ್ಯಂತ ಸಣ್ಣ ಪ್ರಮಾಣದಲ್ಲಿ ವಿಘಟಿತ ತಾಣಗಳಲ್ಲಿ ಮಾತ್ರ ಉಳಿದುಕೊಂಡಿದೆ.
    • ಕೇವಲ 3,000 ರಿಂದ 9,500 ರಷ್ಟು ಪ್ರೌಢ ಹಂತದ ಪಕ್ಷಿಗಳು ಮಾತ್ರ ಉಳಿದಿವೆ ಎಂದು ಐಯುಸಿಎನ್ ಸಂಸ್ಥೆ ಅಂದಾಜಿಸಿದೆ.
    • ಅಪಾಯಗಳು: ಆವಾಸಸ್ಥಾನದ ನಾಶ, ಬೇಟೆ ಮತ್ತು ಇತರ ಮಾನವಜನ್ಯ ಕಾರಣಗಳು.
    • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU)
    • ಸಂರಕ್ಷಣಾ ಪ್ರಯತ್ನಗಳು:- ಶಿಮ್ಲಾದಲ್ಲಿರುವ ‘ಸರಾಹನ್ ಫೆಸಂಟ್ರಿ’ಯಲ್ಲಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಟ್ರಾಗೋಪನ್‌ನ ‘ಬಂಧಿತ ಸಂತಾನೋತ್ಪತ್ತಿ’ ಯಶಸ್ವಿಯಾಗಿದೆ.
  • ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ಇದೀಗ ಸುದ್ದಿಯಲ್ಲಿದೆ: 

    • ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯಲ್ಲಿನ (KKHRAC) ಆಡಳಿತಾತ್ಮಕ ಹಾಗೂ ಆರ್ಥಿಕ ಲೋಪದೋಷಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರು ತಮ್ಮ ವರದಿಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

    ಮುಖ್ಯಾಂಶಗಳು:

    • ರಾಜ್ಯ ಸರ್ಕಾರವು ನೇಮಿಸಿದ ತನಿಖಾ ಸಮಿತಿಯು ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆ’ (KKHRAC)ಯಲ್ಲಿ ವ್ಯಾಪಕವಾದ ಹಣಕಾಸಿನ ಮತ್ತು ಆಡಳಿತಾತ್ಮಕ ಅಕ್ರಮಗಳನ್ನು ಪತ್ತೆಹಚ್ಚಿದೆ.
    • 2020–21 ರಿಂದ 2022–23 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ದುರಾಡಳಿತವನ್ನು, ಕರ್ನಾಟಕದಲ್ಲಿ ಸಂಭವಿಸಿದ ನಿಧಿ ದುರ್ಬಳಕೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದು ಎಂದು ತನಿಖಾಧಿಕಾರಿಯು ವಿವರಿಸಿದ್ದಾರೆ.

    ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಬಗ್ಗೆ:

    • ಸ್ವರೂಪ:- ಇದು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಒಂದು ನೋಂದಾಯಿತ ಸಂಸ್ಥೆಯಾಗಿದ್ದು, ಇದು ಸಾಂವಿಧಾನಿಕ ಅಥವಾ ಶಾಸನಬದ್ಧ ಆಯೋಗವಲ್ಲ.
    • ಕೇಂದ್ರ ಕಚೇರಿ:- ಕಲಬುರಗಿ (ಗುಲ್ಬರ್ಗ).
    • ಧ್ಯೇಯೋದ್ದೇಶ:- ಕಲ್ಯಾಣ ಕರ್ನಾಟಕ ಪ್ರದೇಶದ (ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ) ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಉತ್ತೇಜಿಸುವುದು.
  • ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ‘ಟ್ರಾನ್ಸ್‌ಲೇಶನಲ್ ಎಐ ಫಾರ್ ನೆಟ್‌ವರ್ಕ್ಡ್ ಯುನಿವರ್ಸಲ್ ಹೆಲ್ತ್‌ಕೇರ್’ (TANUH) ಫೌಂಡೇಶನ್ ಅನ್ನು ಸ್ಥಾಪಿಸಲಾಗಿದೆ.

    IISc ಯಲ್ಲಿರುವ ಆರೋಗ್ಯ ರಕ್ಷಣೆಗಾಗಿ ಎಐ ಉತ್ಕೃಷ್ಟತಾ ಕೇಂದ್ರದ ಬಗ್ಗೆ:

    • ಗುರಿ:- ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ರಕ್ಷಣಾ ನಾವೀನ್ಯತೆಗಳನ್ನು ಮುಂದುವರಿಸಲು ಸಮರ್ಪಿತ ‘ಆರೋಗ್ಯ ರಕ್ಷಣಾ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ’ವಾಗಿ ಕಾರ್ಯನಿರ್ವಹಿಸುವುದು ಇದರ ಗುರಿಯಾಗಿದೆ.
    • ಧ್ಯೇಯೋದ್ದೇಶ:- ಇದನ್ನು ಭಾರತ ಸರ್ಕಾರದ “ಮೇಕ್ ಎಐ ಇನ್ ಇಂಡಿಯಾ” (ಭಾರತದಲ್ಲಿ ಎಐ ಸೃಜಿಸಿ) ಮತ್ತು “ಮೇಕ್ ಎಐ ವರ್ಕ್ ಫಾರ್ ಇಂಡಿಯಾ” (ಭಾರತಕ್ಕಾಗಿ ಎಐ ಕಾರ್ಯನಿರ್ವಹಿಸುವಂತೆ ಮಾಡಿ) ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಾಪಿಸಲಾಗಿದೆ.
    • ಇದು ಲಾಭರಹಿತ ಕಂಪನಿಯಾಗಿದ್ದು, ಅಸಾಂಕ್ರಾಮಿಕ ರೋಗಗಳ (NCD) ಪರಿಣಾಮಕಾರಿ ನಿರ್ವಹಣೆಗಾಗಿ ಚಿಕಿತ್ಸಾ ಸ್ಥಳದಲ್ಲಿಯೇ ಅನ್ವಯಿಸಬಹುದಾದ ಮತ್ತು ವಿಸ್ತರಿಸಬಹುದಾದ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅಳವಡಿಸುವತ್ತ ಗಮನಹರಿಸುತ್ತದೆ.
    • ಈ ಕೇಂದ್ರವು ಬಹುವಿಷಯಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ವೈದ್ಯರು, ದತ್ತಾಂಶ ವಿಜ್ಞಾನಿಗಳು ಮತ್ತು ಎಐ ಸಂಶೋಧಕರನ್ನು ಒಂದೇ ವೇದಿಕೆಯಡಿ ಸಂಯೋಜಿಸಲಿದೆ.
  • “ನಾರ್ಕೋ ಪರೀಕ್ಷೆ” | ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ | ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys) | ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ | ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    “ನಾರ್ಕೋ ಪರೀಕ್ಷೆ”

    ಸಾಮಾನ್ಯ ಅಧ್ಯಯನ-2/ಆಡಳಿತ; ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಬಲವಂತದ ಅಥವಾ ಅನೈಚ್ಛಿಕ ನಾರ್ಕೋ ಪರೀಕ್ಷೆಗಳು ಅಸಾಂವಿಧಾನಿಕ ಮತ್ತು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

    ನಾರ್ಕೋ ಪರೀಕ್ಷೆಯ ಬಗ್ಗೆ:

    • ನಾರ್ಕೋ ಪರೀಕ್ಷೆಯು ತನಿಖೆಯ ಒಂದು ಪ್ರಕ್ರಿಯೆಯಾಗಿದ್ದು, ಇದರಲ್ಲಿ ಪರೀಕ್ಷೆಗೆ ಒಳಗಾಗುವ ಆರೋಪಿಯು ಮುಚ್ಚಿಟ್ಟಿರುವ ಸತ್ಯಗಳನ್ನು ವ್ಯಕ್ತಪಡಿಸುವನೆಂದು ನಿರೀಕ್ಷಿಸಲಾಗುತ್ತದೆ.
    • ಈ ಪರೀಕ್ಷೆಯಲ್ಲಿ, ನಿರ್ದಿಷ್ಟ ವರ್ಗದ ವಸ್ತುಗಳನ್ನು ನೀಡುವ ಮೂಲಕ ಆರೋಪಿಯನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳಲಾಗುತ್ತದೆ. ಉದಾಹರಣೆಗೆ – ಸೋಡಿಯಂ ಪೆಂಟೊಥಾಲ್. ಇದು ವ್ಯಕ್ತಿಯ ಪ್ರತಿಬಂಧಕಗಳು ಮತ್ತು ತಾರ್ಕಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
    • ಇದು ಪಾಲಿಗ್ರಾಫ್‌ಗಳು ಅಥವಾ ಬ್ರೈನ್ ಮ್ಯಾಪಿಂಗ್‌ನಂತೆಯೇ ಅಹಿಂಸಾತ್ಮಕ ವಿಧಾನವಾಗಿದೆ.

    ನಾರ್ಕೋ ಪರೀಕ್ಷೆಯ ಕಾನೂನುಬದ್ಧತೆಯ ಬಗ್ಗೆ:

    • ಸೆಲ್ವಿ ಮಾರ್ಗಸೂಚಿಗಳು:ಮುಕ್ತ ಒಪ್ಪಿಗೆಯಿಲ್ಲದೆ ನಡೆಸಿದ ಯಾವುದೇ ಪರೀಕ್ಷೆಯು ಅಸಾಂವಿಧಾನಿಕ ಮತ್ತು ಅದರ ಫಲಿತಾಂಶಗಳನ್ನು ಸಾಕ್ಷಿಯಾಗಿ ಬಳಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
    • ವಿಧಿ 20:- ಇದು ಪೂರ್ವಾನ್ವಯವಾಗುವ ಕಾನೂನುಗಳು, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ (ಡಬಲ್ ಜಿಯೋಪಾರ್ಡಿ) ಮತ್ತು ತನ್ನ ವಿರುದ್ಧವೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ.
    • ವಿಧಿ 21:– ನಾರ್ಕೋ ಪರೀಕ್ಷೆಯು ಸಂವಿಧಾನದ ವಿಧಿ 21 ರ ಅಡಿಯಲ್ಲಿನ “ಗೌಪ್ಯತೆಯ ಹಕ್ಕ”ನ್ನೂ ಉಲ್ಲಂಘಿಸುತ್ತದೆ.
    • ವಿಧಿ 14 ಮತ್ತು 19:- ಇವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುತ್ತವೆ.
    • ಮನೋಜ್ ಕುಮಾರ್ ಸೈನಿ v/s ಮಧ್ಯಪ್ರದೇಶ ರಾಜ್ಯ (2023) ಮತ್ತು ವಿನೋಭಾಯಿ v/s ಕೇರಳ ರಾಜ್ಯ (2025):- ನಾರ್ಕೋ ಪರೀಕ್ಷೆಯ ಫಲಿತಾಂಶಗಳು ಮಾತ್ರವೇ ತಪ್ಪಿತಸ್ಥರೆಂದು ಸಾಬೀತುಪಡಿಸುವುದಿಲ್ಲ ಮತ್ತು ಇತರ ಸಾಕ್ಷ್ಯಾಧಾರಗಳೊಂದಿಗೆ ಅದನ್ನು ದೃಢೀಕರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ

    ಸಾಮಾನ್ಯ ಅಧ್ಯಯನ-3/ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ವಾರಣಾಸಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾದ ತನ್ನ ಮೊದಲ ಜಲಜನಕ (ಹೈಡ್ರೋಜನ್) ಇಂಧನ ಕೋಶ ಪ್ರಯಾಣಿಕ ನೌಕೆಯನ್ನು ಲೋಕಾರ್ಪಣೆ ಮಾಡಿದೆ. ಇದು ಹಸಿರು ಕಡಲ ಸಾರಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆಯ ಬಗ್ಗೆ:

    • ನಿರ್ಮಾಣ ಮತ್ತು ಒಡೆತನ:- ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಇದರ ಒಡೆತನವನ್ನು ‘ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ’ವು ಹೊಂದಿದೆ.
    • ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (ಪ್ರೋಟಾನ್ ವಿನಿಮಯ ಪೊರೆ) ತಂತ್ರಜ್ಞಾನವನ್ನು ಆಧರಿಸಿದ ಜಲಜನಕ ಇಂಧನ ಕೋಶ ವ್ಯವಸ್ಥೆಗಳು, ಭಾರತದ ಶುದ್ಧ ಇಂಧನ ಮತ್ತು ಹಸಿರು ಚಲನಶೀಲತೆಯ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
    • ಕಾರ್ಯವಿಧಾನ: ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ ಫ್ಯೂಯಲ್ ಸೆಲ್ (PEMFC), ದಹನಕ್ರಿಯೆಯಿಲ್ಲದೆ ಜಲಜನಕ ಮತ್ತು ಆಮ್ಲಜನಕದ ನಡುವಿನ ವಿದ್ಯುದ್ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಇದು ಇದನ್ನು ಒಂದು ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಮೂಲವನ್ನಾಗಿ ಮಾಡುತ್ತದೆ.

    ಮಹತ್ವ:

    • ಈ ಚಾಲನೆಯು 2070 ರ ವೇಳೆಗೆ ಭಾರತದ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಯನ್ನು ಬೆಂಬಲಿಸುತ್ತದೆ. ಜೊತೆಗೆ, ಶುದ್ಧ ಮತ್ತು ಸುಸ್ಥಿರ ಜಲಮಾರ್ಗಗಳನ್ನು ಉತ್ತೇಜಿಸುವ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030’ ಹಾಗೂ ‘ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047’ ನೊಂದಿಗೆ ಇದು ಹೊಂದಿಕೆಯಾಗುತ್ತದೆ.
    • ಈ ನೌಕೆಯು ಶಬ್ದರಹಿತ ಮತ್ತು ಮಾಲಿನ್ಯರಹಿತ ಪ್ರಯಾಣವನ್ನು ಒದಗಿಸುತ್ತದೆ, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪೂರ್ಣ ದೇಶೀಯ ಹಸಿರು ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys)

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು “ಕೆಂಪು ಕಾಲುಳ್ಳ ಡೌಕ್ ಕೋತಿ”ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳ (ಪೈಗಾಥ್ರಿಕ್ಸ್ ನೆಮಿಯಸ್) ಬಗ್ಗೆ:

    • ಇದು ತನ್ನ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತವಾದ ದೇಹ ರಚನೆಯುಳ್ಳ ‘ಹಳೆಯ ಪ್ರಪಂಚದ ಕೋತಿಗಳ’ ಪ್ರಭೇದವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ “ಸಸ್ತನಿಗಳ ರಾಣಿ” ಎಂದು ಕರೆಯಲಾಗುತ್ತದೆ.
    • ಹಂಚಿಕೆ:- ಈ ಕೋತಿಗಳು ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಕಾಡುಗಳಿಗೆ ಸ್ಥಳೀಯವಾಗಿರುವ, ಮರಗಳಲ್ಲಿ ವಾಸಿಸುವ ಮತ್ತು ಹಗಲಿನಲ್ಲಿ ಸಕ್ರಿಯವಾಗಿರುವ ಸಸ್ತನಿಗಳಾಗಿವೆ.
    • ಆವಾಸಸ್ಥಾನ:- ಇವು ಸಮುದ್ರಮಟ್ಟದಿಂದ ಸುಮಾರು 2,000 ಮೀಟರ್ (6,600 ಅಡಿ) ಎತ್ತರದವರೆಗಿನ ನಿತ್ಯಹರಿದ್ವರ್ಣ ಮತ್ತು ಅರೆ-ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಭಾಗದಲ್ಲಿ ವಾಸಿಸುತ್ತವೆ.
    • ದೈಹಿಕ ನೋಟ:- ಬೂದು ಬಣ್ಣದ ದೇಹ, ಗಾಢವಾದ ಕಡುಗೆಂಪು- ಕೆಂಪು ಬಣ್ಣದ ಕೆಳಕಾಲುಗಳು, ಬಿಳಿ ಮುಂಗೈಗಳು ಮತ್ತು ಬಾಲ ಹಾಗೂ ತಿಳಿ ನೀಲಿ ಕಣ್ಣುರೆಪ್ಪೆಗಳೊಂದಿಗೆ ಕೂಡಿದ ಕಿತ್ತಳೆ-ಹಳದಿ ಮುಖ – ಇವು ಈ ಪ್ರಭೇಧದ ಮಂಗಗಳ ವಿಶಿಷ್ಟ ಲಕ್ಷಣಗಳಾಗಿವೆ.
    • ಗಂಡು ಕೋತಿಗಳನ್ನು ಅವುಗಳ ಹಿಂಭಾಗದಲ್ಲಿರುವ ಬಿಳಿ ಕಲೆಗಳಿಂದ ಪ್ರತ್ಯೇಕಿಸಬಹುದು.
    • IUCN ಸ್ಥಿತಿಗತಿ: ತೀವ್ರ ಅಳಿವಿನಂಚಿನಲ್ಲಿರುವ (CR).

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ

    ಸಾಮಾನ್ಯ ಅಧ್ಯಯನ-3/ಮೂಲಸೌಕರ್ಯ

    ಇದೀಗ ಸುದ್ದಿಯಲ್ಲಿದೆ: 

    • ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಗೆ ನಿಧಿ ಸಂಗ್ರಹಿಸಲು, ಅರಣ್ಯ ಭೂಮಿಯಲ್ಲಿರುವ ಆಸ್ತಿಗಳನ್ನು ಭದ್ರತೆಯಾಗಿ ಬಳಸಿಕೊಳ್ಳುವ ಎನ್‌ಎಚ್‌ಪಿಸಿ (NHPC) ಪ್ರಸ್ತಾಪವನ್ನು ಪರಿಸರ ಸಚಿವಾಲಯವು ತಿರಸ್ಕರಿಸಿದೆ.

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಯ ಬಗ್ಗೆ:

    • ಇದು ಬ್ರಹ್ಮಪುತ್ರ ನದಿಯ ಉಪನದಿಯಾದ ಸುಬನ್ಸಿರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಯೋಜನೆಯಾಗಿದೆ.
    • ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಗಡಿಯಲ್ಲಿರುವ ಗೆರುಕಾಮುಖ್‌ನಲ್ಲಿ ಇದು ನೆಲೆಗೊಂಡಿದೆ.
    • ಸಾಮರ್ಥ್ಯ ಮತ್ತು ವಿಧ : ಇದು 2,000 ಮೆಗಾವ್ಯಾಟ್ (8 × 250 ಮೆಗಾವ್ಯಾಟ್) ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    • ಕಾರ್ಯತಂತ್ರದ ಮಹತ್ವ:
      • ಇದು ಈಶಾನ್ಯ ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
      • ಇದು ವಿದ್ಯುತ್ ಜಾಲದ ಸ್ಥಿರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳನ್ನು ಬೆಂಬಲಿಸುತ್ತದೆ.

    ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    ಸಾಮಾನ್ಯ ಅಧ್ಯಯನ-3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ನೌಕಾಪಡೆ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಮುಳುಗುಗಾರರ ಬೆಂಬಲ ನೌಕಾ (Diving Support Craft – DSC) ಸರಣಿಯ ಮೊದಲ ನೌಕೆ DSC A20 ಅನ್ನು ದಕ್ಷಿಣ ನೌಕಾ ಕಮಾಂಡ್‌ನ ಆಶ್ರಯದಲ್ಲಿ, ಕೊಚ್ಚಿಯಲ್ಲಿ ಸೇವೆಗೆ ಸೇರ್ಪಡೆಗೊಳಿಸಲು ಸಿದ್ಧವಾಗಿದೆ.

    ಡಿಎಸ್‌ಸಿ ಎ20 (DSC A20) ಯ ಬಗ್ಗೆ:

    • ನಿರ್ಮಾಣ:- ಇದನ್ನು ಕೋಲ್ಕತ್ತಾದ ಮೆಸರ್ಸ್ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು ನಿರ್ಮಿಸಿರುವ ಐದು ‘ಮುಳುಗುಗಾರರ ಬೆಂಬಲ ನೌಕೆ”ಗಳಲ್ಲಿ ಮೊದಲನೆಯದಾಗಿದೆ.
    • ತಾಂತ್ರಿಕ ವೈಶಿಷ್ಟ್ಯಗಳು:- ಈ ನೌಕೆಯು ಸುಮಾರು 390 ಟನ್‌ಗಳಷ್ಟು ಸ್ಥಳಾಂತರ ಸಾಮರ್ಥ್ಯ ಹೊಂದಿದೆ.
      • ಇದು ಅತ್ಯುತ್ತಮ ಸ್ಥಿರತೆ, ವಿಸ್ತಾರವಾದ ಹಡಗುಕಟ್ಟೆ (ಡೆಕ್) ಪ್ರದೇಶ ಮತ್ತು ಸುಧಾರಿತ ನೌಕಾ ಸ್ಥಿರತೆಯ (ಕಡಲ ಅಲೆಗಳ ನಡುವೆ ಸುಗಮವಾಗಿ ಚಲಿಸುವ) ಗುಣಲಕ್ಷಣಗಳನ್ನು ಒಳಗೊಂಡಿದೆ.
    • ಕಾರ್ಯಾಚರಣೆಯ ಮಹತ್ವ:- ಇದರ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಈ ಕೆಳಗಿನ ಸಾಮರ್ಥ್ಯಗಳು ಹೆಚ್ಚಲಿವೆ:
      • ಮುಳುಗುಗಾರರಿಗೆ (ಡೈವಿಂಗ್) ಬೆಂಬಲ
      • ಜಲಾಂತರ್ಗಾಮಿ ತಪಾಸಣೆ
      • ಮುಳುಗಿದ ವಸ್ತುಗಳ ಚೇತರಿಕೆ ಅಥವಾ ರಕ್ಷಣೆ
      • ಕರಾವಳಿ ಕಾರ್ಯಾಚರಣೆಯ ನಿಯೋಜನೆ.
  • ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಇದೀಗ ಸುದ್ದಿಯಲ್ಲಿದೆ:

    • ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಅನುಭವವನ್ನು ಸುಧಾರಿಸುವ ಉದ್ದೇಶದ ನೂತನ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು) ಕೇಂದ್ರಗಳು ಮಾರ್ಚ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)ಗಳ ಬಗ್ಗೆ:

    • ಹಿನ್ನೆಲೆ:- ಈ ಪಾರಂಪರಿಕ ಸ್ಥಳಕ್ಕೇ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಅಗತ್ಯ ಮೂಲಸೌಕರ್ಯ ಮತ್ತು ಮಾಹಿತಿ ನೆರವು ಒದಗಿಸುವುದು.
    • ಗುರಿ:– ಹಂಪಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಇ ಮೂಲಕ ಹಂಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಬೆಂಬಲಿಸುವುದು.
    • ಚಾಲನೆ ನೀಡಿದವರು:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2024ರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.
    • ಸಚಿವಾಲಯ:- ಕೇಂದ್ರ ಪ್ರವಾಸೋದ್ಯಮ ಸಚಿವಾಲಯ
    • ಕೇಂದ್ರ ಯೋಜನೆ:- ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ₹25.64 ಕೋಟಿ ವೆಚ್ಚದ ‘ಹಂಪಿಯಲ್ಲಿ ಟ್ರಾವೆಲರ್ ನೂಕ್ಸ್ ಸ್ಥಾಪನೆ’ಗೆ ಮಂಜೂರಾತಿ ನೀಡಿದೆ.
    • ರಾಜ್ಯದಲ್ಲಿ ಅನುಷ್ಠಾನ ಸಂಸ್ಥೆ:- ‘ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ ’ (KTIL).
    • ಪ್ರಯೋಜನೆಗಳು:- ಈ ‘ಟ್ರಾವೆಲರ್ ನೂಕ್ಸ್’ ಕೇಂದ್ರಗಳು ಪ್ರವಾಸಿಗರ ಸೌಲಭ್ಯಗಳಲ್ಲಿನ ಪ್ರಮುಖ ಕೊರತೆಗಳನ್ನು ನಿವಾರಿಸುವ ಸಲುವಾಗಿ ಕುಡಿಯುವ ನೀರಿನ ಘಟಕಗಳು, ನೈರ್ಮಲ್ಯಯುತ ಶೌಚಾಲಯಗಳು, ಎಟಿಎಂಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ವಿಶ್ರಾಂತಿಗಾಗಿ ನೆರಳಿನ ಆಸರೆಗಳನ್ನು ಒದಗಿಸಲಿವೆ.
  • ರಾಷ್ಟ್ರೀಯ ಮಖಾನಾ ಮಂಡಳಿ | ಕೋಲ್-ಸೇತು ನೀತಿ (CoalSETU Policy) | ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD) | “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher) | ಪೋಶ್ (POSH) ಕಾಯ್ದೆ, 2013

    ರಾಷ್ಟ್ರೀಯ ಮಖಾನಾ ಮಂಡಳಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ರಾಷ್ಟ್ರೀಯ ಮಖಾನಾ ಮಂಡಳಿಯ ಮೊದಲ ಸಭೆಯಲ್ಲಿ ಮಖಾನಾದ ಸಮಗ್ರ ಅಭಿವೃದ್ಧಿಗಾಗಿ ₹476.03 ಕೋಟಿ ಮೊತ್ತದ ‘ಕೇಂದ್ರ ವಲಯದ ಯೋಜನೆ’ಯನ್ನು ಜಾರಿಗೆ ತರಲಾಯಿತು.

    ರಾಷ್ಟ್ರೀಯ ಮಖಾನಾ ಮಂಡಳಿಯ ಬಗ್ಗೆ:

    • ಉದ್ದೇಶ:- ಭಾರತದ ಮಖಾನಾ ವಲಯವನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದು.
    • ಪ್ರಧಾನ ಕಚೇರಿ:- ಬಿಹಾರದ ಪೂರ್ಣಿಯಾದಲ್ಲಿದೆ.

    ಮಖಾನಾ (Euryale ferox) ಹೂಬಿಡುವ ಸಸ್ಯದ ಬಗ್ಗೆ: 

    • ಇದು ಜಲ ಕಮಲ (ನೀಲೋತ್ಪಲ) ಕುಟುಂಬಕ್ಕೆ (Nymphaeaceae) ಸೇರಿದ ಒಂದು ಹೂಬಿಡುವ ಸಸ್ಯವಾಗಿದೆ.
    • ಹವಾಮಾನ ಪರಿಸ್ಥಿತಿ:- ಇದಕ್ಕೆ 20-35°C ತಾಪಮಾನ ಶ್ರೇಣಿ ಮತ್ತು 100-250 ಸೆಂ.ಮೀ. ವಾರ್ಷಿಕ ಮಳೆಯ ಅಗತ್ಯವಿದೆ.
    • ಇದು ಸಂಪೂರ್ಣವಾಗಿ ಸಾವಯವ, ಧಾನ್ಯವಲ್ಲದ ಆಹಾರವಾಗಿದ್ದು, ಪ್ರಮುಖವಾಗಿ ಭಾರತದಲ್ಲಿ ಕಂಡುಬರುತ್ತದೆ; ಜೊತೆಗೆ ಕೊರಿಯಾ, ಜಪಾನ್ ಹಾಗೂ ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
    • ಭಾರತದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ಸುಮಾರು 90% ರಷ್ಟು ಪಾಲನ್ನು ಹೊಂದಿದೆ.
    • ಜಿಐ ಟ್ಯಾಗ್ : 2022 ರಲ್ಲಿ, ‘ಮಿಥಿಲಾ ಮಖಾನಾ’ಕ್ಕೇ ಜಿಐ ಟ್ಯಾಗ್ ನೀಡಲಾಯಿತು.

    ಕೋಲ್-ಸೇತು ನೀತಿ (CoalSETU Policy)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ‘ಕೋಲ್-ಸೇತು ನೀತಿ’ಗೆ ಅನುಮೋದನೆ ನೀಡಿದೆ.

    ಕೋಲ್-ಸೇತು ನೀತಿಯ ಬಗ್ಗೆ:

    • ಉದ್ದೇಶ:- ಕೈಗಾರಿಕಾ ಬಳಕೆಗಾಗಿ ಕಲ್ಲಿದ್ದಲು ಹಂಚಿಕೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನಮ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ, ಕಲ್ಲಿದ್ದಲು ಸಂಯೋಜನೆ ಹರಾಜಿಗಾಗಿ ಹೊಸ ವ್ಯವಸ್ಥೆಯನ್ನು ಇದು ಪರಿಚಯಿಸುತ್ತದೆ.

    ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD)

    ಸಾಮಾನ್ಯ ಅಧ್ಯಯನ-3/ ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ರೋಮ್‌ನಲ್ಲಿ ನಡೆದ ಐಎಫ್‌ಎಡಿ (IFAD)-ಇಂಡಿಯಾ ಡೇ ದಿನಾಚರಣೆ ಕಾರ್ಯಕ್ರಮದಲ್ಲಿ, ಭಾರತವು ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯಲ್ಲಿನ ತನ್ನ ಸಾಧನೆಗಳನ್ನು ಪ್ರದರ್ಶಿಸಿತು.

    ‘ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ’(IFAD) ಉಪಕ್ರಮದ ಬಗ್ಗೆ:

    • ಪ್ರಧಾನ ಕಚೇರಿ:- ಇಟಲಿಯ ರೋಮ್‌ನಲ್ಲಿದೆ.
    • ಇದು 1977 ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:- ಗುರಿಪಡಿಸಿದ ಹಣಕಾಸಿನ ನೆರವಿನ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಬಡತನವನ್ನು ನಿವಾರಿಸಲು ಪ್ರಯತ್ನಿಸುವುದು.
    • ಮಹತ್ವ:- ಇದು ಮುಖ್ಯವಾಗಿ ಸಣ್ಣ ಹಿಡುವಳಿದಾರ ರೈತರು, ಪಶುಪಾಲಕರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ರಿಯಾಯಿತಿ ದರದ ಸಾಲಗಳು, ಅನುದಾನಗಳು ಮತ್ತು ತಾಂತ್ರಿಕ ನೆರವನ್ನು ಒದಗಿಸುತ್ತದೆ. ಕೃಷಿ, ಹವಾಮಾನ ಸ್ಥಿತಿಸ್ಥಾಪಕತ್ವ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಜೀವನೋಪಾಯದ ವೈವಿಧ್ಯೀಕರಣಕ್ಕೆ ಇದು ಒತ್ತು ನೀಡುತ್ತದೆ.

    “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher)

    ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಗೂಗಲ್ ಸಿಇಒ ಸುಂದರ್ ಪಿಚೈ ಅವರು 2027 ರ ವೇಳೆಗೆ ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ ದತ್ತಾಂಶ ಕೇಂದ್ರ (ಡೇಟಾ ಸೆಂಟರ್‌) ಗಳನ್ನು ನಿಯೋಜಿಸಲು ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ಎಂಬ ದೀರ್ಘಕಾಲೀನ ಸಂಶೋಧನಾ ಉಪಕ್ರಮವನ್ನು ಘೋಷಿಸಿದ್ದಾರೆ.

    ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ನ ಬಗ್ಗೆ:

    • ಉಪಗ್ರಹ ನಕ್ಷತ್ರಪುಂಜಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ, ಎಐ ಆಧಾರಿತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುವುದು ಗೂಗಲ್‌ನ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ.

    ಪ್ರಯೋಜನಗಳು:

    • ಪರಿಸರ ಅನುಕೂಲ: ಸಾಂಪ್ರದಾಯಿಕ ದತ್ತಾಂಶ ಕೇಂದ್ರಗಳಿಗೆ ಅಗತ್ಯವಿರುವ ಭೂಮಿ, ನೀರು ಮತ್ತು ತಂಪಾಗಿಸುವ ವ್ಯವಸ್ಥೆಗಳ ಅಗತ್ಯವನ್ನು ಇದು ನಿವಾರಿಸುತ್ತದೆ.
    • ನಿರಂತರ ಶಕ್ತಿ: ಸ್ಥಿರ ಕಾರ್ಯಾಚರಣೆಗಾಗಿ ತಡೆರಹಿತ ಸೌರಶಕ್ತಿಯ ಲಭ್ಯತೆ ದೊರೆಯುತ್ತದೆ.
    • ಸ್ಥಿತಿಸ್ಥಾಪಕತ್ವ: ವಿದ್ಯುತ್ ಕಡಿತ, ನೈಸರ್ಗಿಕ ವಿಕೋಪಗಳು ಮತ್ತು ಸಮುದ್ರದಾಳದ ತಂತಿ ವೈಫಲ್ಯಗಳಿಂದ ಉಂಟಾಗುವ ಅಪಾಯಗಳನ್ನು ಇದು ತಪ್ಪಿಸುತ್ತದೆ.

    ಸವಾಲುಗಳು:

    • ತಾಂತ್ರಿಕ ತೊಂದರೆಗಳು: ಅತೀ ವೇಗದ ಲೇಸರ್ ಸಂವಹನಕ್ಕಾಗಿ ಉಪಗ್ರಹಗಳ ನಡುವೆ ಬಿಗಿಯಾದ ಅಂತರವನ್ನು (1 ಕಿ.ಮೀ ಒಳಗೆ) ಕಾಯ್ದುಕೊಳ್ಳುವುದು ಸಂಕೀರ್ಣ ಸವಾಲಾಗಿದೆ.
    • ಕಾರ್ಯಾಚರಣೆಯ ಅಡೆತಡೆಗಳು: ಬಾಹ್ಯಾಕಾಶ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ತಗಲುವ ಅಧಿಕ ವೆಚ್ಚ ಹಾಗೂ ಕಕ್ಷೆಯಲ್ಲಿನ ದುರಸ್ತಿ ಕಾರ್ಯದ ಕಷ್ಟಕರ ಪರಿಸ್ಥಿತಿಯು ಪ್ರಮುಖ ಕಾಳಜಿಯ ವಿಷಯಗಳಾಗಿವೆ.
    • ಪರಿಸರ ಪರಿಸ್ಥಿತಿಗಳು: ಯಂತ್ರೋಪಕರಣಗಳು ವಿಕಿರಣ-ನಿರೋಧಕವಾಗಿರಬೇಕು ಮತ್ತು ನಿರ್ವಾತದಲ್ಲಿ ಶಾಖವನ್ನು ಪರಿಣಾಮಕಾರಿಯಾಗಿ ಹೊರಹಾಕುವ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರಬೇಕು

    ಪೋಶ್ (POSH) ಕಾಯ್ದೆ, 2013

    ಸಾಮಾನ್ಯ ಅಧ್ಯಯನ -2/ ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013’ (ಪೋಸ್ ಕಾಯ್ದೆ) ರ ಅಡಿಯಲ್ಲಿ ‘ಆಂತರಿಕ ದೂರು ಸಮಿತಿಗಳ’ ಅಧಿಕಾರ ವ್ಯಾಪ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ವಿಸ್ತರಿಸಿದೆ.
    • ಲೈಂಗಿಕ ದೌರ್ಜನ್ಯದ ದೂರುಗಳನ್ನು ಆರೋಪಿಯ ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ, ದೂರುದಾರರ ಕೆಲಸದ ಸ್ಥಳದಲ್ಲಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿಯೂ ಸಲ್ಲಿಸಬಹುದು ಎಂದು ನ್ಯಾಯಾಲಯವು ಆದೇಶಿಸಿದೆ.

    ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ರ ಬಗ್ಗೆ:

    • ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ:- ನೇರವಾಗಿ ಅಥವಾ ಸೂಚಕವಾಗಿ ಎಸಗಲಾದ ಈ ಕೆಳಗಿನ “ಯಾವುದೇ ಒಂದು ಅಥವಾ ಹೆಚ್ಚಿನ ಅನಪೇಕ್ಷಿತ ಕೃತ್ಯಗಳು ಅಥವಾ ನಡವಳಿಕೆಗಳು” ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಬರುತ್ತವೆ:
      • ದೈಹಿಕ ಸಂಪರ್ಕ ಮತ್ತು ಮುನ್ನುಗ್ಗುವಿಕೆ.
      • ಲೈಂಗಿಕ ಅನುಕೂಲಗಳಿಗಾಗಿ ಬೇಡಿಕೆ ಅಥವಾ ವಿನಂತಿ.
      • ಲೈಂಗಿಕ ಪ್ರೇರಿತ ಅಶ್ಲೀಲ ಟೀಕೆಗಳು.
      • ಅಶ್ಲೀಲ ಚಿತ್ರಗಳನ್ನು ತೋರಿಸುವುದು.
      • ಲೈಂಗಿಕ ಸ್ವರೂಪದ ಯಾವುದೇ ಇತರ ಅನಪೇಕ್ಷಿತ ದೈಹಿಕ, ಮೌಖಿಕ ಅಥವಾ ಮೌಖಿಕವಲ್ಲದ ನಡವಳಿಕೆ.
    • ಬಾಧ್ಯತೆ:- 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಪ್ರತಿಯೊಂದು ಕಚೇರಿ ಅಥವಾ ಶಾಖೆಯಲ್ಲಿ ಉದ್ಯೋಗದಾತರು ಕಡ್ಡಾಯವಾಗಿ ‘ಆಂತರಿಕ ದೂರು ಸಮಿತಿ’  (‘ಐಸಿಸಿ’) ಯನ್ನು ರಚಿಸಬೇಕು.
    • ದೂರು ಸಮಿತಿಗಳು:- ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಕರೆಸುವ (ಸಮನ್ಸ್ ನೀಡುವ), ಪ್ರಮಾಣವಚನದ ಮೇಲೆ ವಿಚಾರಣೆ ನಡೆಸುವ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲು ಆದೇಶಿಸುವ ವಿಷಯದಲ್ಲಿ ‘ಐಸಿಸಿ’ಯು ಸಿವಿಲ್ ನ್ಯಾಯಾಲಯಕ್ಕೆ ಇರುವಂತಹ ಅಧಿಕಾರಗಳನ್ನು ಹೊಂದಿದೆ.
    • ಸಮಯದ ಮಿತಿ:- ದೌರ್ಜನ್ಯದ ಘಟನೆ ನಡೆದ ದಿನಾಂಕದಿಂದ “3 ತಿಂಗಳೊಳಗೆ” ದೂರನ್ನು ಸಲ್ಲಿಸಬೇಕು.
    • ಸಂಧಾನ:ನೊಂದ ಮಹಿಳೆಯ ಕೋರಿಕೆಯ ಮೇರೆಗೆ, ಐಸಿಸಿಯು ವಿಷಯವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಅನುಮತಿಸಬಹುದು. ಆದರೆ, ಇಲ್ಲಿ ಯಾವುದೇ ಹಣಕಾಸಿನ ಇತ್ಯರ್ಥಕ್ಕೆ ಅವಕಾಶವಿಲ್ಲ.
    • ಶಿಕ್ಷೆ:- ಕಾಯ್ದೆಯ ನಿಬಂಧನೆಗಳನ್ನು ಪಾಲಿಸದ ಉದ್ಯೋಗದಾತರಿಗೆ 50,000 ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ.
  • ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಇದೀಗ ಸುದ್ದಿಯಲ್ಲಿದೆ: 

    • ರಾಜ್ಯ ಸಾರಿಗೆ ವಾಹನಗಳು (ಬಸ್ ಗಳು) ರಸ್ತೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ಸ್ಥಗಿತಕ್ಕೆ ಒಳಗಾದ ಸಂದರ್ಭದಲ್ಲಿ ತ್ವರಿತ ನೆರವು ನೀಡುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ‘ಅಪಘಾತ ತುರ್ತು ಸ್ಪಂದನಾ ವಾಹನಗಳನ್ನು’ ನಿಯೋಜಿಸಿದೆ.

    ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳ ಕುರಿತು:

    • ಆರಂಭಿಕ ಹಂತದಲ್ಲಿ, ಇಂತಹ 2 ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನ ಕಾರ್ಯತಂತ್ರದ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು.
    • ಈ ವಿಶೇಷ ಸುಸಜ್ಜಿತ ವಾಹನಗಳು ‘ಸಂಚಾರಿ ಕಾರ್ಯಾಗಾರ’ಗಳಾಗಿ ಕಾರ್ಯನಿರ್ವಹಿಸಲಿವೆ.
    • ಇದು ತಾಂತ್ರಿಕ ತಂಡಗಳು ಅಗತ್ಯ ಉಪಕರಣ ಹಾಗೂ ಬಿಡಿಭಾಗಗಳೊಂದಿಗೆ ಮಾರ್ಗಮಧ್ಯೆ ಸ್ಥಗಿತಗೊಂಡ ಬಸ್‌ಗಳನ್ನು ಶೀಘ್ರವಾಗಿ ತಲುಪಲು ಮತ್ತು ಸಾರಿಗೆ ಕಾರ್ಯಾಚರಣೆಯನ್ನು ಸುಗಮವಾಗಿ ಪುನರಾರಂಭಿಸಲು ನೆರವಾಗಲಿವೆ.
  • ‘ಶಾಂತಿ’ (SHANTI) ಮಸೂದೆ | ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ | ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ | ಪ್ರೀಹ್ ವಿಹಾರ್ ದೇವಾಲಯ | ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ‘ಶಾಂತಿ’ (SHANTI) ಮಸೂದೆ

    ಸಾಮಾನ್ಯ ಅಧ್ಯಯನ -3/ ಶಕ್ತಿ/ಇಂಧನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಚಿವ ಸಂಪುಟವು ‘ಶಾಂತಿ’ (SHANTI) ಎಂಬ ಶೀರ್ಷಿಕೆಯ ‘ಪರಮಾಣು ಶಕ್ತಿ ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಶಾಂತಿ (SHANTI) ಮಸೂದೆಯ ಬಗ್ಗೆ:

    • ಸಂಕ್ಷಿಪ್ತ ರೂಪ: “SHANTI”- ಸಸ್ಟೈನ್ಏಬಲ್ ಹಾರ್ನೆಸ್ಸಿಂಗ್ ಆಫ್ ಅಡ್ವಾನ್ಸಮೆಂಟ್ ಆಫ್ ನುಕ್ಲಿಯರ್ ಟೆಕ್ನಾಲಜಿ ಫಾರ್ ಇಂಡಿಯಾ (ಭಾರತಕ್ಕಾಗಿ ಪರಮಾಣು ತಂತ್ರಜ್ಞಾನದ ಪ್ರಗತಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು).
    • ಉದ್ದೇಶ: ಈ ಮಸೂದೆಯು ಭಾರತದ ಪರಮಾಣು ವಲಯಕ್ಕಾಗಿ ಏಕೀಕೃತ ಮತ್ತು ಆಧುನಿಕ ಕಾನೂನು ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ.

    ಭಾರತದ ಪರಮಾಣು ವಲಯದ ನಿರ್ವಹಣೆಯ ಬಗ್ಗೆ:

    • ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು ಸರ್ಕಾರಿ ಸ್ವಾಮ್ಯದ ‘ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ’ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ’ (BHAVINI) ದ ಒಡೆತನದಲ್ಲಿವೆ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುತ್ತಿವೆ.
    • ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ಶಾಸನಗಳಿಗೆ ತಿದ್ದುಪಡಿ ತರಬೇಕಿದೆ:
    • ಅಣುಶಕ್ತಿ ಕಾಯ್ದೆ, 1962:- ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣದ ಚೌಕಟ್ಟಾಗಿದೆ.
    • ಪರಮಾಣುವಿನ ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010:- ಇದು ಪರಮಾಣು ಅವಘಡಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.

    ಶಾಂತಿ (SHANTI) ಮಸೂದೆಯ ಪ್ರಮುಖ ನಿಬಂಧನೆಗಳು:

    • ಪರಮಾಣು ಮೌಲ್ಯ ಸರಪಳಿಯ ಭಾಗಶಃ ಮುಕ್ತಗೊಳಿಸುವಿಕೆ:- ಈ ಮಸೂದೆಯು ಖಾಸಗಿ ಮತ್ತು ಜಾಗತಿಕ ಕಂಪನಿಗಳಿಗೆ ಪರಮಾಣು ಖನಿಜಗಳ ಅನ್ವೇಷಣೆ, ಪರಮಾಣು ಉಪಕರಣ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಭಾಗವಹಿಸಲು ಅನುಮತಿಸುತ್ತದೆ.
    • ರಿಯಾಕ್ಟರ್‌ಗಳ (ಕುಲುಮೆಗಳ) ಕಾರ್ಯಾಚರಣೆ ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಚಟುವಟಿಕೆಗಳಂತಹ ಪ್ರಮುಖ ಮತ್ತು ಕಾರ್ಯತಂತ್ರದ ಕ್ಷೇತ್ರಗಳು ಸರ್ಕಾರದ ನಿಯಂತ್ರಣದಲ್ಲಿಯೇ ಮುಂದುವರಿಯಲಿವೆ.
    • ಪರಮಾಣು ಸುರಕ್ಷತೆ ಪ್ರಾಧಿಕಾರ:- ಈ ಶಾಸನವು ಸ್ವತಂತ್ರ ಪರಮಾಣು ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ.
    • ವಿಶೇಷ ಪರಮಾಣು ನ್ಯಾಯಮಂಡಳಿ:- ಪರಮಾಣು ಸಂಬಂಧಿತ ವಿವಾದಗಳನ್ನು ನಿರ್ವಹಿಸಲು ಇದು ವಿಶೇಷ ನ್ಯಾಯಮಂಡಳಿಯ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ. ವಿವಾದಗಳ ಇತ್ಯರ್ಥವನ್ನು ಸುಗಮಗೊಳಿಸುವುದು ಮತ್ತು ಈ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

    ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಪ್ರಮುಖ ಅಂಶಗಳು:

    • ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ದೊಂದಿಗೆ, ಭಾರತವು ಓಮನ್‌ನಲ್ಲಿ ತನ್ನ 98% ರಷ್ಟು ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಮತ್ತು ಸೇವೆಗಳಲ್ಲಿಯೂ ಗಮನಾರ್ಹ ಪ್ರವೇಶವನ್ನು ಪಡೆಯಲಿದೆ.

    ಭಾರತ ಮತ್ತು ಓಮನ್ ನಡುವಿನ ಸಂಬಂಧಗಳು:

    • ರಾಜತಾಂತ್ರಿಕ ಸಂಬಂಧ:- ಭಾರತ-ಓಮನ್ ನಡುವೆ 1955 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಔಪಚಾರಿಕಗೊಳಿಸಲಾಯಿತು ಮತ್ತು 2008 ರಲ್ಲಿ ಇದನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಗೆ ಮೇಲ್ದರ್ಜೆಗೇರಿಸಲಾಯಿತು.
    • ವ್ಯಾಪಾರ ಸಂಬಂಧ:- 2023-2024 ರ ಆರ್ಥಿಕ ವರ್ಷದಲ್ಲಿ 8.947 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಟ್ಟು ವ್ಯಾಪಾರದೊಂದಿಗೆ ಓಮನ್, ಭಾರತದ 30ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 
    • ಓಮನ್‌ನ ಅಗ್ರ ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿದೆ ಮತ್ತು ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳ ಪೈಕಿ ಓಮನ್, ಭಾರತದ ಮೂರನೇ ಅತಿದೊಡ್ಡ ರಫ್ತು ತಾಣವಾಗಿದೆ.
    • ದಕ್ಷಿಣ ಕೊರಿಯಾದ ನಂತರ, 2023 ರ ಸಾಲಿನಲ್ಲಿ ಓಮನ್‌ನ ಕಚ್ಚಾ ತೈಲ ರಫ್ತಿಗೆ ಭಾರತವು 4ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
    • ರಕ್ಷಣಾ ಸಹಕಾರ: ಭಾರತ ಮತ್ತು ಓಮನ್ ಮೂರೂ ಪಡೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ನಡುವೆ ನಿಯಮಿತವಾಗಿ ದ್ವೈವಾರ್ಷಿಕ ದ್ವಿಪಕ್ಷೀಯ ಸಮರಾಭ್ಯಾಸಗಳು ನಡೆಯುತ್ತವೆ. ಅವುಗಳೆಂದರೆ:
      • ಭೂಸೇನೆ ಸಮರಾಭ್ಯಾಸ: ಅಲ್ ನಜಾಹ್ 
      • ವಾಯುಪಡೆ ಸಮರಾಭ್ಯಾಸ: ಈಸ್ಟರ್ನ್ ಬ್ರಿಡ್ಜ್ 
      • ನೌಕಾಸೇನೆ ಸಮರಾಭ್ಯಾಸ: ನಸೀಮ್ ಅಲ್ ಬಹ್ರ್
    • ಕಡಲ ಸಹಕಾರ: ಓಮನ್ ದೇಶವು ಹೋರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ನೆಲೆಸಿದೆ; ಈ ಮಾರ್ಗದ ಮೂಲಕವೇ ಭಾರತವು ತನ್ನ ಒಟ್ಟು ತೈಲ ಆಮದಿನ ಐದನೇ ಒಂದು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
    • ಓಮನ್‌ ದೇಶದ ಡುಕ್ಮ್  ಬಂದರನ್ನು ಪ್ರವೇಶಿಸಲು (ಬಳಸಿಕೊಳ್ಳಲು) ಭಾರತವು 2018 ರಲ್ಲಿ ಈ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
    • ಡುಕ್ಮ್ ಬಂದರು ಓಮನ್‌ ದೇಶದ ಆಗ್ನೇಯ ಕರಾವಳಿಯಲ್ಲಿದ್ದು, ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಇದು ಕಾರ್ಯತಂತ್ರದ ಸ್ಥಳದಲ್ಲಿದ್ದು, ಇರಾನ್‌ನ ಚಬಹಾರ್ ಬಂದರಿಗೆ ಸಮೀಪದಲ್ಲಿದೆ.

    ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

    • ಗಲ್ಫ್ ಸಹಕಾರ ಮಂಡಳಿಯು ಅರೇಬಿಯಾದ ಪರ್ಯಾಯ ದ್ವೀಪದ ಆರು ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
    • ಸದಸ್ಯ ರಾಷ್ಟ್ರಗಳು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE).
    • ಸ್ಥಾಪನೆ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಮೂಲಕ ಮೇ 25, 1981 ರಂದು ಸ್ಥಾಪಿಸಲಾಯಿತು.
    • ಉದ್ದೇಶಗಳು: ಆರ್ಥಿಕ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
    • ಪ್ರಧಾನ ಕಚೇರಿ: ರಿಯಾದ್ (ಸೌದಿ ಅರೇಬಿಯಾ)

    ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾ ನೇತೃತ್ವದ ಹೊಸ ನಿರ್ಣಾಯಕ ಖನಿಜ ವೈವಿಧ್ಯೀಕರಣ ಯೋಜನೆಯಾದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದಿಂದ ಭಾರತವನ್ನು ಹೊರಗಿಡಲಾಗಿದೆ.

    ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:

    • ಉದ್ದೇಶ:- ಈ ಅಮೇರಿಕಾ ನೇತೃತ್ವದ ಕಾರ್ಯತಂತ್ರದ ಉಪಕ್ರಮವು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವುದು ಉದ್ದೇಶವಾಗಿದೆ.
    • ಸದಸ್ಯರು:- ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ (ದಕ್ಷಿಣ ಕೊರಿಯಾ), ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.

    ನಿರ್ಣಾಯಕ ಖನಿಜಗಳ ಬಗ್ಗೆ:

    • ವ್ಯಾಖ್ಯಾನ:- ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಖನಿಜಗಳನ್ನು ‘ನಿರ್ಣಾಯಕ ಖನಿಜಗಳು’ ಎಂದು ಕರೆಯಲಾಗುತ್ತದೆ.
    • ಸರ್ಕಾರವು ಭಾರತಕ್ಕಾಗಿ 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
    • 30 ನಿರ್ಣಾಯಕ ಖನಿಜಗಳು: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಮ್, ಜರ್ಮೇನಿಯಮ್, ಗ್ರಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಮ್, ಮಾಲಿಬ್ಡಿನಮ್, ನಿಯೋಬಿಯಮ್, ನಿಕಲ್, ಪಿಜಿಇ, ರಂಜಕ, ಪೊಟ್ಯಾಶ್, ಆರ್‌ಇಇ (REE – ವಿರಳ ಭೂ ಧಾತುಗಳು), ರೇನಿಯಮ್, ಸಿಲಿಕಾನ್, ಸ್ಟ್ರಾಂಷಿಯಮ್, ಟ್ಯಾಂಟಲಮ್, ಟೆಲೂರಿಯಮ್, ತವರ, ಟೈಟಾನಿಯಮ್, ಟಂಗ್‌ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
    • “ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957” (MMDR Act, 1957) ದೇಶದ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಗುರುತಿಸಿದೆ.

    ಪ್ರೀಹ್ ವಿಹಾರ್ ದೇವಾಲಯ

    ಸಾಮಾನ್ಯ ಅಧ್ಯಯನ-1/ ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಪ್ರೀಹ್ ವಿಹಾರ್ ದೇವಾಲಯ ಸಂಕೀರ್ಣದಲ್ಲಿನ ಸಂರಕ್ಷಣಾ ಸೌಲಭ್ಯಗಳಿಗೆ ಹಾನಿಯಾಗಿರುವ ವರದಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

    ಪ್ರೀಹ್ ವಿಹಾರ್ ದೇವಾಲಯದ ಬಗ್ಗೆ:

    • ಸ್ಥಳ: ಇದು ಥೈಲ್ಯಾಂಡ್ ಗಡಿಯ ಸಮೀಪವಿರುವ ಕಾಂಬೋಡಿಯಾದಲ್ಲಿ ನೆಲೆಗೊಂಡಿರುವ, ಶಿವನಿಗೆ ಸಮರ್ಪಿತವಾದ ಪುರಾತನ ಹಿಂದೂ ದೇವಾಲಯವಾಗಿದೆ.
    • ಇದನ್ನು ಮುಖ್ಯವಾಗಿ ಖಮೇರ್ ರಾಜರಾದ ಒಂದನೇ ಸೂರ್ಯವರ್ಮನ್ ಮತ್ತು ಎರಡನೇ ಸೂರ್ಯವರ್ಮನ್ ಅವರ ಆಳ್ವಿಕೆಯಲ್ಲಿ (ಕ್ರಿ.ಶ. 9 ರಿಂದ 12 ನೇ ಶತಮಾನ) ನಿರ್ಮಿಸಲಾಯಿತು.
    • ಇದನ್ನು 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ಸಾಮಾನ್ಯ ಅಧ್ಯಯನ-2/ ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಕೋವಿಡ್‌ ಮಹಾಮಾರಿಯಿಂದ ಮೃತಪಟ್ಟ ಎಲ್ಲಾ ವೈದ್ಯರಿಗೆ ₹50 ಲಕ್ಷದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ ವಿಮೆಯನ್ನು ವಿಸ್ತರಿಸಲು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನ ಬಗ್ಗೆ:

    • PMGKP ವಿಮಾ ಯೋಜನೆಯು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾದ ಬೃಹತ್ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‌’ನ ಅಡಿಯಲ್ಲಿನ ಒಂದು ನಿರ್ದಿಷ್ಟ ಘಟಕವಾಗಿದೆ.
    • ವ್ಯಾಪ್ತಿ:– ಅರ್ಹ ಆರೋಗ್ಯ ಕಾರ್ಯಕರ್ತರಿಗೆ ತಲಾ ₹50 ಲಕ್ಷದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಇದು ಒದಗಿಸುತ್ತದೆ.
    • ಒಳಗೊಂಡಿರುವ ಅಪಾಯ:- ಕೋವಿಡ್-19 ಸೋಂಕಿನಿಂದ ಸಂಭವಿಸಿದ ಸಾವುಗಳು.