ಲೇಖಕ: Ramvilas

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. 52 ನೇ ಜಿ7 ಶೃಂಗಸಭೆಯು ಫ್ರಾನ್ಸ್‌ನಲ್ಲಿ ನಡೆಯಿತು.
    2. ಈ ಶೃಂಗಸಭೆಯು ಜಿ7 ಸಭೆಗೆ ಭಾರತಕ್ಕೆ ನೀಡಿದ  ಮೊದಲ ಆಹ್ವಾನವಾಗಿತ್ತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
    (A) 1 ಮಾತ್ರ
    (B) 2 ಮಾತ್ರ
    (C) 1 ಮತ್ತು 2 ಎರಡೂ
    (D) 1 ಅಥವಾ  2 ಯಾವುದೂ ಅಲ್ಲ

    ಉತ್ತರ: A

    2. ಕೆಳಗಿನವುಗಳಲ್ಲಿ ಯಾವ ಸಂಸ್ಥೆಯು ಆಧಾರ್ ಸಂಖ್ಯೆಗಳನ್ನು ವಿತರಿಸುತ್ತದೆ?

    (A) ಗೃಹ ಸಚಿವಾಲಯ

    (B) ರಾಷ್ಟ್ರೀಯ ಮಾಹಿತಿ ಕೇಂದ್ರ (NIC)

    (C) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)

    (D) ಭಾರತೀಯ ಚುನಾವಣಾ ಆಯೋಗ (ECI)

    ಉತ್ತರ: C

    3. ಕಾಶ್ಮೀರ ಕೇಸರಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕಾಶ್ಮೀರ ಕೇಸರಿಯನ್ನು ಪ್ರಾಥಮಿಕವಾಗಿ ಜಮ್ಮು ಮತ್ತು ಕಾಶ್ಮೀರದ ಕರೇವಾ ಮಣ್ಣಿನಲ್ಲಿ ಬೆಳೆಯಲಾಗುತ್ತದೆ.
    2. ಇದು 2020 ರಲ್ಲಿ ಭೌಗೋಳಿಕ ಸೂಚಕ ಮಾನ್ಯತೆಯನ್ನು (GI tag) ಅನ್ನು ಸ್ವೀಕರಿಸಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
    (A) 1 ಮಾತ್ರ
    (B) 2 ಮಾತ್ರ
    (C) 1 ಮತ್ತು 2 ಎರಡೂ
    (D)1 ಅಥವಾ  2 ಯಾವುದೂ ಅಲ್ಲ

    ಉತ್ತರ: C

    4. ಕೆಳಗಿನ ಯಾವ ಪ್ರದೇಶವನ್ನು ಜನಪ್ರಿಯವಾಗಿ “ಕಾಶ್ಮೀರದ ಕೇಸರಿ ಬಟ್ಟಲು” (Saffron Bowl of Kashmir) ಎಂದು ಕರೆಯಲಾಗುತ್ತದೆ?

    (A) ಅನಂತನಾಗ್

    (B) ಬಾರಾಮುಲ್ಲಾ

    (C) ಪಾಂಪೋರ್

    (D) ಕುಪ್ವಾರಾ

    ಉತ್ತರ: C

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 16, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 16, 2026

  • ಭಾರತ – ಫ್ರಾನ್ಸ್ ದ್ವಿಪಕ್ಷೀಯ ಮಾತುಕತೆ | ಕ್ಸುವಾನ್‌ಜಾಂಗ್ (ಹ್ಯುಯೆನ್ ತ್ಸಾಂಗ್) ಅವರ ದಾಖಲೆಗಳಿಗಾಗಿ ಜಂಟಿ ಯುನೆಸ್ಕೋ ನಾಮನಿರ್ದೇಶನ | ಕ್ವೀನ್ ಪೈನಾಪಲ್ (Queen Pineapple) | ಡೆಂಗ್ಯೂ ಲಸಿಕೆ ಸುರಕ್ಷತಾ ಕಳವಳಗಳು

    ಭಾರತ – ಫ್ರಾನ್ಸ್ ದ್ವಿಪಕ್ಷೀಯ ಮಾತುಕತೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಪ್ರಧಾನಿ ಮೋದಿಯವರು ಫ್ರಾನ್ಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
    • ಈ ವರ್ಷದ ಆರಂಭದಲ್ಲಿ ಭಾರತ-ಫ್ರಾನ್ಸ್ ಬಾಂಧವ್ಯವು “ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ” (Special Global Strategic Partnership) ಮಟ್ಟಕ್ಕೆ ಏರಿದ ನಂತರ ಉಭಯ ನಾಯಕರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.

    ಪ್ರಮುಖ ಅಂಶಗಳು: 

    • ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ದೀರ್ಘಕಾಲೀನ ನಿರ್ದೇಶನವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ “ನಾವೀನ್ಯತೆ ಮಾರ್ಗಸೂಚಿ 2030” (Innovation Roadmap 2030) ಅನ್ನು ಅಳವಡಿಸಿಕೊಳ್ಳಲಾಯಿತು.
    • ಕೃತಕ ಬುದ್ಧಿಮತ್ತೆಯಲ್ಲಿ (AI) ಸಹಯೋಗವನ್ನು ಹೆಚ್ಚಿಸಲು ‘ಜಂಟಿ ಭಾರತ-ಫ್ರಾನ್ಸ್ ಎಐ ಕಾರ್ಯಪಡೆ’ಯನ್ನು ಸ್ಥಾಪಿಸಲು ಉಭಯ ನಾಯಕರು ಸಹ ಒಪ್ಪಿಕೊಂಡರು.

    ಭಾರತ-ಫ್ರಾನ್ಸ್ ಸಂಬಂಧಗಳು

    • ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆ: ಇದನ್ನು 26 ಜನವರಿ 1998 ರಂದು ಪ್ರಾರಂಭಿಸಲಾಯಿತು ಮತ್ತು ಇದು ಭಾರತದ ಮೊಟ್ಟಮೊದಲ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.
    • ರಫೇಲ್ ಫೈಟರ್ ಜೆಟ್‌ಗಳು: ಭಾರತವು ಡಸಾಲ್ಟ್ ಏವಿಯೇಷನ್‌ನಿಂದ ಕಂಪನಿಯಿಂದ  36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಿದೆ.
    • ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು (ಪ್ರಾಜೆಕ್ಟ್ P-75): ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ, ಭಾರತದಲ್ಲಿ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ; ಇದರಲ್ಲಿ ಇತ್ತೀಚಿನದು INS ವಾಘ್ಶೀರ್ ಆಗಿದೆ.
    • ಇತ್ತೀಚೆಗಷ್ಟೇ ಉಭಯ ರಾಷ್ಟ್ರಗಳು ಭಾರತೀಯ ನೌಕಾಪಡೆಗಾಗಿ 26 ರಫೇಲ್-ಎಂ (Rafale-M) ಯುದ್ಧವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದವನ್ನು (IGA) ಅಧಿಕೃತವಾಗಿ ಪೂರ್ಣಗೊಳಿಸಿವೆ.
    • ಜಂಟಿ ಸಮರಾಭ್ಯಾಸಗಳು: ಶಕ್ತಿ, ವರುಣ, FRINJEX-23.
    • ಆರ್ಥಿಕ ಸಹಕಾರ: ಐರೋಪ್ಯ ಒಕ್ಕೂಟದಲ್ಲಿ (EU), ನೆದರ್ಲ್ಯಾಂಡ್, ಬೆಲ್ಜಿಯಂ, ಇಟಲಿ ಮತ್ತು ಜರ್ಮನಿಯ ನಂತರ ಫ್ರಾನ್ಸ್ ಭಾರತದ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮುಂದುವರಿದಿದೆ.
    • ಫ್ರಾನ್ಸ್‌ನಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (UPI) ಯನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯು ಯಶಸ್ವಿಯಾಗಿದೆ.
    • ಜಂಟಿ ಕಾರ್ಯಾಚರಣೆಗಳು: ತ್ರಿಷ್ಣಾ (TRISHNA – ಉಪಗ್ರಹ ಕಾರ್ಯಾಚರಣೆ), MDA ವ್ಯವಸ್ಥೆಗಳು, ಗ್ರೌಂಡ್ ಸ್ಟೇಷನ್ ಬೆಂಬಲ.
    • ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA): ವಿಶ್ವಾದ್ಯಂತ ಸೌರಶಕ್ತಿಯನ್ನು ಉತ್ತೇಜಿಸಲು 2015 ರಲ್ಲಿ ಭಾರತ ಮತ್ತು ಫ್ರಾನ್ಸ್‌ನಿಂದ ಜಂಟಿಯಾಗಿ ಸ್ಥಾಪಿಸಲಾಯಿತು.

    ಕ್ಸುವಾನ್‌ಜಾಂಗ್ (ಹ್ಯುಯೆನ್ ತ್ಸಾಂಗ್) ಅವರ ದಾಖಲೆಗಳಿಗಾಗಿ ಜಂಟಿ ಯುನೆಸ್ಕೋ ನಾಮನಿರ್ದೇಶನ

    ಇತಿಹಾಸ/ ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಕ್ಸುವಾನ್‌ಜಾಂಗ್ (ಹ್ಯುಯೆನ್ ತ್ಸಾಂಗ್) ಅವರ ಕೃತಿಯಾದ ‘ದಿ ಗ್ರೇಟ್ ಟ್ಯಾಂಗ್ ರೆಕಾರ್ಡ್ಸ್ ಆನ್ ದಿ ವೆಸ್ಟರ್ನ್ ರೀಜನ್ಸ್(ಪಶ್ಚಿಮ ಪ್ರದೇಶಗಳಲ್ಲಿನ ಮಹಾನ್ ತ್ಯಾಂಗ್ ದಾಖಲೆಗಳು) ಗಾಗಿ ಜಂಟಿ ಯುನೆಸ್ಕೋ ನಾಮನಿರ್ದೇಶನದ ಕುರಿತು ಭಾರತ ಮತ್ತು ಚೀನಾ ಚರ್ಚೆಯಲ್ಲಿ ತೊಡಗಿವೆ.

    ಕ್ಸುವಾನ್‌ಜಾಂಗ್ (ಹ್ಯುಯೆನ್ ತ್ಸಾಂಗ್) ಅವರ ಬಗ್ಗೆ

    • ಅವರು ಚೀನಾದ ಬೌದ್ಧ ಸನ್ಯಾಸಿ, ವಿದ್ವಾಂಸ ಮತ್ತು ಪ್ರವಾಸಿಗರಾಗಿದ್ದರು, ಅವರು ಸಾ.ಶ 7 ನೇ ಶತಮಾನದಲ್ಲಿ ಭಾರತದಾದ್ಯಂತ ಪ್ರವಾಸ ಮಾಡಿದರು.
    • ಅವರು ಭಾರತದಾದ್ಯಂತ ಪ್ರಯಾಣಿಸುತ್ತಾ ಮತ್ತು ಬೌದ್ಧ ತತ್ವಶಾಸ್ತ್ರವನ್ನು ಅಧ್ಯಯನ ಮಾಡುತ್ತಾ ಸುಮಾರು 19 ವರ್ಷಗಳನ್ನು ಕಳೆದರು.
    • ಅವರು ಪ್ರಾಚೀನ ನಳಂದಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು.
    • ಅವರ ಕೃತಿ, ‘ದಿ ಗ್ರೇಟ್ ಟ್ಯಾಂಗ್ ರೆಕಾರ್ಡ್ಸ್ ಆನ್ ದಿ ವೆಸ್ಟರ್ನ್ ರೀಜನ್ಸ್’, ಈ ಕೆಳಗಿನವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ:
    • ಹರ್ಷವರ್ಧನ ಮತ್ತು ಇತರ ಆಡಳಿತಗಾರರ ಅಡಿಯಲ್ಲಿದ್ದ ರಾಜಕೀಯ ಪರಿಸ್ಥಿತಿಗಳು.
    • ಆರಂಭಿಕ ಮಧ್ಯಕಾಲೀನ ಭಾರತದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಜೀವನ.
    • ಧಾರ್ಮಿಕ ಸಂಪ್ರದಾಯಗಳು ಮತ್ತು ಬೌದ್ಧ ಸಂಸ್ಥೆಗಳು.
    • ಆರಂಭಿಕ ಮಧ್ಯಕಾಲೀನ ಭಾರತದ ಆರ್ಥಿಕ ಮತ್ತು ಭೌಗೋಳಿಕ ಸ್ಥಿತಿಗಳು.

    ಪರಿಗಣನೆಯಲ್ಲಿರುವ ಇತರ ಜಂಟಿ ನಾಮನಿರ್ದೇಶನಗಳು

    • ಇರಾನ್‌ನೊಂದಿಗೆ ಪಂಚತಂತ್ರ: ಇರಾನ್‌ನೊಂದಿಗೆ ಜಂಟಿಯಾಗಿ ‘ಪಂಚತಂತ್ರ’ವನ್ನು ಯುನೆಸ್ಕೋಗೆ ನಾಮನಿರ್ದೇಶನ ಮಾಡಲು ಭಾರತ ಅನ್ವೇಷಿಸುತ್ತಿದೆ. ಪಂಚತಂತ್ರವು ಶತಮಾನಗಳಿಂದ ಪರ್ಷಿಯನ್ ಸಾಹಿತ್ಯ ಮತ್ತು ಜಾನಪದದ ಮೇಲೆ ಪ್ರಭಾವ ಬೀರಿದೆ ಮತ್ತು ಹಂಚಿಕೆಯಾದ ಸಾಹಿತ್ಯಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.
    • ದಕ್ಷಿಣ ಆಫ್ರಿಕಾದೊಂದಿಗೆ ಸತ್ಯಾಗ್ರಹ: ಈ ಕಲ್ಪನೆಯು ದಕ್ಷಿಣ ಆಫ್ರಿಕಾದೊಂದಿಗೆ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಚಳುವಳಿಯ ಐತಿಹಾಸಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
    • ಹಂಚಿಕೆಯಾದ ನಾಗರಿಕ ಸಂಪ್ರದಾಯಗಳು:
    • ಭಾರತ ಮತ್ತು ಇಂಡೋನೇಷ್ಯಾ ನಡುವೆ ಹಂಚಿಕೊಳ್ಳಲಾದ ರಾಮಾಯಣ ಸಂಪ್ರದಾಯಗಳು.
    • ಭಾರತ ಮತ್ತು ಚೀನಾಕ್ಕೆ ಸಾಮಾನ್ಯವಾದ ಬೌದ್ಧ ಗ್ರಂಥಗಳು ಮತ್ತು ಪರಂಪರೆ.

    ಕ್ವೀನ್ ಪೈನಾಪಲ್ (Queen Pineapple)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ: 

    • ದೆಹಲಿಯಲ್ಲಿ ನಡೆಯಲಿರುವ ಅನಾನಸ್ ಉತ್ಸವದ ಮುನ್ನ, ತ್ರಿಪುರಾ ರಾಜ್ಯವು ತನ್ನ ‘ಕ್ವೀನ್ ಪೈನಾಪಲ್’ಗೆ ಜಾಗತಿಕ ಸ್ಥಾನಮಾನವನ್ನು ಪಡೆಯಲು ಸಜ್ಜಾಗಿದೆ.

    ‘ಕ್ವೀನ್ ಪೈನಾಪಲ್ ಬಗ್ಗೆ

    • 2014 ರಲ್ಲಿ ಅದರ ಸುವರ್ಣ-ಹಳದಿ ಬಣ್ಣ ಮತ್ತು ವಿಶಿಷ್ಟ ಸುವಾಸನೆಗಾಗಿ GI ಮಾನ್ಯತೆ ಅನ್ನು ಪಡೆದ ನಾಲ್ಕು ವರ್ಷಗಳ ನಂತರ, 2018 ರಲ್ಲಿ ಕ್ವೀನ್ ಪೈನಾಪಲ್ ಅನ್ನು ತ್ರಿಪುರಾದ ರಾಜ್ಯ ಹಣ್ಣು ಎಂದು ಘೋಷಿಸಲಾಯಿತು.
    • ಬೇಸಾಯ: ಕೃಷಿಗಾಗಿ ಸಾಮಾನ್ಯವಾಗಿ 30-40% ಇಳಿಜಾರು ಇರುವ ಪ್ರದೇಶವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಸಸ್ಯಗಳಿಗೆ ಮರಳು ಮಿಶ್ರಿತ ಮಣ್ಣು ಹಾಗೂ ನೀರು ನಿಲ್ಲದಂತೆ ತಡೆಯಲು ಉತ್ತಮ ಒಳಚರಂಡಿ ವ್ಯವಸ್ಥೆ ಬೇಕಾಗುತ್ತದೆ ಮತ್ತು 18°C ಯಿಂದ 32°C ತಾಪಮಾನದ ವ್ಯಾಪ್ತಿಯು ಇದರ ಕೃಷಿಗೆ ಅತ್ಯಂತ ಅನುಕೂಲಕರವಾಗಿದೆ.
    • ತ್ರಿಪುರಾದ ವಿಶಿಷ್ಟವಾದ ಕೃಷಿ-ಹವಾಮಾನ ಪರಿಸ್ಥಿತಿಯು ಅದನ್ನು ಭಾರತದ ಪ್ರಮುಖ ಪೈನಾಪಲ್-ಉತ್ಪಾದಿಸುವ ಪ್ರದೇಶಗಳಲ್ಲಿ ಒಂದನ್ನಾಗಿ ಮಾಡುತ್ತದೆ, ಇಲ್ಲಿ ಕ್ವೀನ್ (Queen) ಮತ್ತು ಕ್ಯೂ (Kew) ತಳಿಗಳನ್ನು ಹೆಚ್ಚಾಗಿ ಬುಡಕಟ್ಟು ಬೆಳೆಗಾರರು ಬೆಳೆಯುತ್ತಾರೆ.
    • ಮಿಷನ್ ಕ್ವೀನ್ ಪೈನಾಪಲ್: ಇದು ಕೇಂದ್ರ-ಅನುದಾನಿತ ಮೂರು ವರ್ಷಗಳ ಸುದೀರ್ಘ ‘ತೋಟದಿಂದ ತಟ್ಟೆಗೆ’ (farm-to-plate) ಕಾರ್ಯಕ್ರಮವಾಗಿದ್ದು, 2026 ರಲ್ಲಿ ಪ್ರಾರಂಭಿಸಲಾದ 236 ಕೋಟಿ ರೂ. ಮೌಲ್ಯದ ಯೋಜನೆಯಾಗಿದೆ.
    • ಒಟ್ಟು ಜಾಗತಿಕ ಪೈನಾಪಲ್ ಉತ್ಪಾದನೆಗೆ ಭಾರತವು ಸುಮಾರು 6-8% ರಷ್ಟು ಕೊಡುಗೆ ನೀಡುತ್ತದೆ.
    • ಪ್ರಾದೇಶಿಕ ಮಟ್ಟದಲ್ಲಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳಾಗಿವೆ.

    ನಿಮಗೆ ತಿಳಿದಿದೆಯೇ?

    • ಪೈನಾಪಲ್ ಕೃಷಿಯು ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿಕೊಂಡಿತು ಮತ್ತು ಕ್ರಮೇಣ ಪ್ರಪಂಚದ ಇತರ ಉಷ್ಣವಲಯದ ಭಾಗಗಳಿಗೆ ಹರಡಿತು.
    • ಪೈನಾಪಲ್ ಕೃಷಿಯನ್ನು ಕ್ರಿ.ಶ. 1548 ಯಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರು.
    • ಕೋಸ್ಟರಿಕಾ (Costa Rica) ಪೈನಾಪಲನ ಪ್ರಮುಖ ಜಾಗತಿಕ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ.

    ಡೆಂಗ್ಯೂ ಲಸಿಕೆ ಸುರಕ್ಷತಾ ಕಳವಳಗಳು

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ಬೃಹತ್ ಲಸಿಕಾ ಅಭಿಯಾನದ ವೇಳೆ ಇಬ್ಬರ ಸಾವು ಸೇರಿದಂತೆ ತೀವ್ರ ಪ್ರತಿಕೂಲ ಘಟನೆಗಳ ವರದಿಗಳ ಹಿನ್ನೆಲೆಯಲ್ಲಿ ಬ್ರೆಜಿಲ್ ಇತ್ತೀಚೆಗೆ ತನ್ನ ಡೆಂಗ್ಯೂ ಲಸಿಕೆಯಾದ Butantan-DV ಯ ವಿತರಣೆಯನ್ನು ಸ್ಥಗಿತಗೊಳಿಸಿದೆ.

    ‘ಡೆಂಗ್ಯೂ’ ಬಗ್ಗೆ: 

    • ರೋಗಾಣು: ಡೆಂಗ್ಯೂ ಎಂಬುದು ಡೆಂಗ್ಯೂ ವೈರಸ್‌ನಿಂದ (DENV) ಉಂಟಾಗುವ ವೈರಾಣು ಸೋಂಕು. DENV ಫ್ಲಾವಿವಿರಿಡೆ (Flaviviridae) ಕುಟುಂಬದ RNA ವೈರಸ್ ಆಗಿದ್ದು, ನಾಲ್ಕು ಸಿರೊಟೈಪ್‌ಗಳನ್ನು ಹೊಂದಿದೆ (DENV-1 ನಿಂದ 4).
    • ಲಕ್ಷಣಗಳು: ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ, ಊದಿಕೊಂಡ ಗ್ರಂಥಿಗಳು, ದದ್ದು.
    • ಹರಡುವಿಕೆ: ಸೋಂಕಿತ ಹೆಣ್ಣು ಸೊಳ್ಳೆಗಳ ಕಡಿತದಿಂದ, ಪ್ರಾಥಮಿಕವಾಗಿ ಈಡಿಸ್ ಈಜಿಪ್ಟಿ (Aedes aegypti) ಸೊಳ್ಳೆಯ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ. ತಾಯಿಯಿಂದ ಮಗುವಿಗೆ ಡೆಂಗ್ಯೂ ಹರಡುವ ಸಾಧ್ಯತೆ (ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ), ರಕ್ತ ಉತ್ಪನ್ನಗಳು, ಅಂಗದಾನ ಮತ್ತು ರಕ್ತ ವರ್ಗಾವಣೆಯ ಮೂಲಕವೂ ಹರಡುವ ಸಾಧ್ಯತೆಯಿದೆ.
    • ತಡೆಗಟ್ಟುವಿಕೆ: ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ವೈರಾಣು ನಿರೋಧಕ (ಆಂಟಿವೈರಲ್) ಚಿಕಿತ್ಸೆ ಇಲ್ಲ, ಆದ್ದರಿಂದ ತಡೆಗಟ್ಟುವಿಕೆಯು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಮೇಲೆ ಅವಲಂಬಿತವಾಗಿದೆ. ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಸೊಳ್ಳೆ ಕಡಿತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ರಕ್ಷಣೆಯ ಅತ್ಯುತ್ತಮ ಮಾರ್ಗವಾಗಿದೆ.

    ಭಾರತದ ಮೊದಲ ಸ್ವದೇಶಿ ಡೆಂಗ್ಯೂ ಲಸಿಕೆ

    • ಡೆಂಗಿ ಆಲ್ (DengiAll) ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ಪ್ಯಾನೇಸಿಯಾ ಬಯೋಟೆಕ್ (Panacea Biotec) ಅಭಿವೃದ್ಧಿಪಡಿಸುತ್ತಿರುವ ಸ್ವದೇಶಿ, ಟೆಟ್ರಾವಲೆಂಟ್, ಏಕ-ಡೋಸ್ ಡೆಂಗ್ಯೂ ಲಸಿಕೆಯಾಗಿದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಹರಪ್ಪನ್ ನಾಗರಿಕತೆಯನ್ನು ಕಂಚಿನ ಯುಗದ ನಾಗರಿಕತೆ ಎಂದು ಗುರುತಿಸಲಾಗಿದೆ.
    2. ಈ ನಾಗರಿಕತೆಯು ಪ್ರತ್ಯೇಕವಾಗಿ ಗಂಗಾ ನದಿಯ ದಡದಲ್ಲಿ ಮಾತ್ರ ಅಭಿವೃದ್ಧಿಗೊಂಡಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು  ಸರಿಯಾಗಿದೆ/ವೆ?
    (A) 1 ಮಾತ್ರ
    (B) 2 ಮಾತ್ರ
    (C) 1 ಮತ್ತು 2 ಎರಡೂ
    (D) 1 ಅಥವಾ  2 ಯಾವುದೂ ಅಲ್ಲ

    ಉತ್ತರ: A

    2. ‘ಬ್ರಿಕ್ಸ್ (BRICS) ಇಂದೋರ್ ಘೋಷಣೆ’ಯು ಪ್ರಾಥಮಿಕವಾಗಿ ಕೆಳಗಿನವುಗಳಲ್ಲಿ ಯಾವುದರ ಮೇಲೆ ಗಮನಹರಿಸುತ್ತದೆ?

    (A) ಬ್ರಿಕ್ಸ್ ದೇಶಗಳ ನಡುವೆ ಸಾಮಾನ್ಯ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸುವುದು.

    (B) ಸಣ್ಣ ರೈತರು, ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿಗೆ ಒತ್ತು ನೀಡುವ ಮೂಲಕ ಕೃಷಿ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವುದು.

    (C) ರಾಷ್ಟ್ರೀಯ ಕೃಷಿ ನೀತಿಗಳನ್ನು ಸಾಮಾನ್ಯ ಬ್ರಿಕ್ಸ್ ಚೌಕಟ್ಟಿನೊಂದಿಗೆ (BRICS framework) ಬದಲಾಯಿಸುವುದು.

    (D) ಬ್ರಿಕ್ಸ್-ವ್ಯಾಪ್ತಿಯ ಕೃಷಿ ಸಬ್ಸಿಡಿ ಕಾರ್ಯವಿಧಾನವನ್ನು ರಚಿಸುವುದು.

    ಉತ್ತರ: B

    3. ಹಾರ್ಮುಜ್ ಜಲಸಂಧಿಯು ಈ ಕೆಳಗಿನವುಗಳ ನಡುವೆ ನೆಲೆಗೊಂಡಿದೆ:

    (A) ಇರಾನ್ ಮತ್ತು ಸೌದಿ ಅರೇಬಿಯಾ

    (B) ಇರಾನ್ ಮತ್ತು ಇರಾಕ್

    (C) ಉತ್ತರದ ಕಡೆಗೆ ಇರಾನ್ ಹಾಗೂ ದಕ್ಷಿಣದ ಕಡೆಗೆ ಓಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE)

    (D) ಉತ್ತರದ ಕಡೆಗೆ ಓಮಾನ್ ಮತ್ತು ದಕ್ಷಿಣದ ಕಡೆಗೆ ಇರಾನ್

    ಉತ್ತರ: C

    4. ಕೆಳಗಿನವುಗಳಲ್ಲಿ ಯಾವುದು ಸರ್ವಾವ್ಯಾಕ್ (Cervavac) ಅನ್ನು ಉತ್ತಮವಾಗಿ ವಿವರಿಸುತ್ತದೆ?

    (A) ಹೆಪಟೈಟಿಸ್ ಬಿ ಸೋಂಕನ್ನು ತಡೆಗಟ್ಟಲು ಅಭಿವೃದ್ಧಿಪಡಿಸಲಾದ ಮರುಸಂಯೋಜಿತ ಲಸಿಕೆ.

    (B) ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆ.

    (C) ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ DNA-ಆಧಾರಿತ ಲಸಿಕೆ.

    (D) ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧ ಕೇವಲ ಹದಿಹರೆಯದ ಪುರುಷರಿಗಾಗಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿದ ಲಸಿಕೆ.

    ಉತ್ತರ: B

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 15, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 15, 2026

  • ಭಾರತ-ನೇಪಾಳ ಸಂಬಂಧಗಳಲ್ಲಿ ಹೊಸ ಪರ್ವ | ಪ್ರಾಜೆಕ್ಟ್ ಕುಶ (Project Kusha) | ಸ್ವದೇಶಿ ಕೃತಕ ಬುದ್ಧಿಮತ್ತೆ ಮಾದರಿ ‘ವರ್ಯ’ (Varya) | ಹವಳ ದಿಬ್ಬಗಳ ಸ್ಥಳಾಂತರ: ನಿಕೋಬಾರ್‌ನಲ್ಲಿ 4 ತಾಣಗಳ ಗುರುತು

    ಭಾರತ-ನೇಪಾಳ ಸಂಬಂಧಗಳಲ್ಲಿ ಹೊಸ ಪರ್ವ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತ ಮತ್ತು ನೇಪಾಳದ ನಡುವಿನ ಇತ್ತೀಚಿನ ಉನ್ನತ ಮಟ್ಟದ ಮಾತುಕತೆಗಳು ಗಡಿ ಸಮಸ್ಯೆಗಳ ಕುರಿತಾದ ಭಿನ್ನಾಭಿಪ್ರಾಯಗಳ ನಡುವೆಯೂ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಉಭಯ ದೇಶಗಳ ಪ್ರಯತ್ನಗಳನ್ನು ಸೂಚಿಸುತ್ತವೆ.

    ಭಾರತ – ನೇಪಾಳ ಗಡಿ ವಿವಾದಗಳು

    • ಭಾರತ ಮತ್ತು ನೇಪಾಳದ ನಡುವೆ ಕೆಲವು ನಿರ್ದಿಷ್ಟ ಭೂಪ್ರದೇಶಗಳ ವಿಚಾರದಲ್ಲಿ ವಿವಾದಗಳಿವೆ.
    • ಕಾಲಪಾನಿ, ಲಿಂಪಿಯಾಧುರಾ, ಲಿಪುಲೇಖ್ ಮತ್ತು ಸುಸ್ತಾ (Susta) ಪ್ರದೇಶಗಳು ಈ ಗಡಿ ವಿವಾದದ ಪ್ರಮುಖ ಪ್ರದೇಶಗಳಾಗಿವೆ.

    ಭಾರತ – ನೇಪಾಳ ಸಂಬಂಧಗಳು

    • ಭಾರತ ಮತ್ತು ನೇಪಾಳವು ಸುಮಾರು 1,751 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ.
    • ಹಂಚಿಕೆಯಾದ ಗಡಿ: ನೇಪಾಳವು ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
    • ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ: ಈ ಒಪ್ಪಂದಕ್ಕೆ 1950 ರಲ್ಲಿ ಸಹಿ ಹಾಕಲಾಗಿದ್ದು, ಇದು ಭಾರತ ಮತ್ತು ನೇಪಾಳದ ನಡುವೆ ಅಸ್ತಿತ್ವದಲ್ಲಿರುವ ವಿಶೇಷ ಬಾಂಧವ್ಯಕ್ಕೆ ಅಡಿಪಾಯವನ್ನು ಹಾಕಿದೆ.
    • ರಕ್ಷಣಾ ಸಹಕಾರ: ಎರಡೂ ದೇಶಗಳು ‘ಸೂರ್ಯ ಕಿರಣ್’ (SURYA KIRAN) ಎಂಬ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಪರ್ಯಾಯವಾಗಿ ಭಾರತ ಮತ್ತು ನೇಪಾಳದಲ್ಲಿ ನಡೆಸುತ್ತವೆ.
      • ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ಗಳನ್ನು ಭಾಗಶಃ ನೇಪಾಳದ ಗುಡ್ಡಗಾಡು ಜಿಲ್ಲೆಗಳಿಂದ ನೇಮಕಾತಿ ಮಾಡುವ ಮೂಲಕ ರಚಿಸಲಾಗುತ್ತದೆ.
    • ವ್ಯಾಪಾರ ಮತ್ತು ಆರ್ಥಿಕತೆ: ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಹೂಡಿಕೆದಾರ ರಾಷ್ಟ್ರವಾಗಿ ಮುಂದುವರಿದಿದ್ದು, ನೇಪಾಳದಲ್ಲಿನ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ (FDI) ಭಾರತೀಯ ಸಂಸ್ಥೆಗಳು 33.5% ಪಾಲನ್ನು ಹೊಂದಿವೆ.
    • ಆಪರೇಷನ್ ಮೈತ್ರಿ: 2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತಕ್ಷಣವೇ ಸ್ಪಂದಿಸಿ, ವಿದೇಶದಲ್ಲಿ ತನ್ನ ಅತಿದೊಡ್ಡ ವಿಪತ್ತು ಪರಿಹಾರ ಕಾರ್ಯಾಚರಣೆಯಾದ ‘ಆಪರೇಷನ್ ಮೈತ್ರಿ’ಯನ್ನು ಕೈಗೊಂಡಿತು.
    • ಸಾಂಸ್ಕೃತಿಕ ಬಾಂಧವ್ಯ: ಉಭಯ ದೇಶಗಳ ನಾಯಕರು ಆಗಾಗ್ಗೆ ‘ರೋಟಿ-ಬೇಟಿ’ (Roti-beti) ಸಂಬಂಧವನ್ನು ಉಲ್ಲೇಖಿಸುತ್ತಾರೆ, ಇದು ಎರಡು ದೇಶಗಳ ಜನರ ನಡುವಿನ ಗಡಿಯಾಚೆಗಿನ ವೈವಾಹಿಕ ಸಂಬಂಧಗಳನ್ನು ಸೂಚಿಸುತ್ತದೆ.

    ಪ್ರಾಜೆಕ್ಟ್ ಕುಶ (Project Kusha)

    ರಕ್ಷಣೆ

    ಇದೀಗ ಸುದ್ದಿಯಲ್ಲಿ:

    • ಸ್ವದೇಶಿ ನಿರ್ಮಿತ ‘ಪ್ರಾಜೆಕ್ಟ್ ಕುಶ’ (Project Kusha) ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

    ಪ್ರಾಜೆಕ್ಟ್ ಕುಶ (Project Kusha) ಬಗ್ಗೆ: 

    • ಇದು ಭಾರತದ ಮಹತ್ವಾಕಾಂಕ್ಷೆಯ ಮತ್ತು ಸಂಪೂರ್ಣ ಸ್ವದೇಶಿ ನಿರ್ಮಿತ, ದೂರಗಾಮಿ ಭೂ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ (Surface-to-air missile – SAM) ರಕ್ಷಣಾ ವ್ಯವಸ್ಥೆಯಾಗಿದೆ.
    • ಶತ್ರುಗಳ ಸುಧಾರಿತ ಗುರಿಗಳನ್ನು ಬಹುದೂರದಲ್ಲೇ ಪತ್ತೆಹಚ್ಚಿ ನಾಶಪಡಿಸುವ ಪ್ರಬಲವಾದ, ಬಹು-ಪದರದ ವಾಯು ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಅಭಿವೃದ್ಧಿಪಡಿಸಿದವರು: ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದೆ.
    • ಬಹು-ಹಂತದ ಪ್ರತಿಬಂಧಕ: ವಿವಿಧ ದೂರದಲ್ಲಿರುವ ಬೆದರಿಕೆಗಳನ್ನು ತಡೆಯಲು ಈ ವ್ಯವಸ್ಥೆಯು ಮೂರು ರೀತಿಯ ಇಂಟರ್ಸೆಪ್ಟರ್ (Interceptor) ಕ್ಷಿಪಣಿಗಳನ್ನು ಒಳಗೊಂಡಿದೆ:
      • ಸುಮಾರು 150 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M1 ಇಂಟರ್ಸೆಪ್ಟರ್.
      • ಸುಮಾರು 250 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M2 ಇಂಟರ್ಸೆಪ್ಟರ್.
      • 350-400 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M3 ಇಂಟರ್ಸೆಪ್ಟರ್.

    ಪ್ರಾಮುಖ್ಯತೆ: 

    • S-400 ಗೆ ಸರಿಸಮಾನ: ರಷ್ಯಾದ ಪ್ರಸಿದ್ಧ ‘S-400 ಟ್ರಯಂಫ್’ ವಾಯು ರಕ್ಷಣಾ ವ್ಯವಸ್ಥೆಗೆ ಪ್ರಾಜೆಕ್ಟ್ ಕುಶಾವನ್ನು ಭಾರತದ ಸ್ವದೇಶಿ ಉತ್ತರವೆಂದು ಕರೆಯಲಾಗುತ್ತದೆ.
    • ಈ ಯೋಜನೆಯು 2035 ರ ವೇಳೆಗೆ ಭಾರತಕ್ಕಾಗಿ ಬಹು-ಪದರದ ವಾಯು ಮತ್ತು ಕ್ಷಿಪಣಿ ರಕ್ಷಣಾ ಕವಚವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ವಿಶಾಲವಾದ “ಮಿಷನ್ ಸುದರ್ಶನ್ ಚಕ್ರ” ಉಪಕ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದೆ.

    ಸ್ವದೇಶಿ ಕೃತಕ ಬುದ್ಧಿಮತ್ತೆ ಮಾದರಿ ‘ವರ್ಯ’ (Varya)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಅವತಾರ್ (Avataar) ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ವರ್ಯ’ (Varya) ಎಂಬ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವೀಡಿಯೊ ಸೃಷ್ಟಿ ಮಾದರಿಯ (Video generation model) ಬಿಡುಗಡೆಗೆ ‘ಇಂಡಿಯಾ ಎಐ ಮಿಷನ್’ (IndiaAI Mission) ಬೆಂಬಲ ನೀಡಿದೆ.

    ವರ್ಯ (Varya) ಮಾದರಿಯ ಬಗ್ಗೆ:

    • ‘ವರ್ಯ’ ಒಂದು ಸುಧಾರಿತ ವೀಡಿಯೊ ಸೃಷ್ಟಿ ಮಾದರಿಯಾಗಿದ್ದು, ಇದು ಪಠ್ಯ ಸೂಚನೆಗಳನ್ನು (Text prompts) ಮತ್ತು ಚಿತ್ರಗಳನ್ನು ನೇರವಾಗಿ ವೀಡಿಯೊಗಳಾಗಿ ಪರಿವರ್ತಿಸುತ್ತದೆ.
    • ಭಾರತದ ವಿವಿಧ ಪ್ರದೇಶಗಳು, ಹಬ್ಬಗಳು, ಸಂಪ್ರದಾಯಗಳು, ಉಡುಪುಗಳು, ಆಹಾರ ಮತ್ತು ದಿನನಿತ್ಯದ ಜೀವನವನ್ನು ಬಿಂಬಿಸುವಂತಹ, ಸಾಂಸ್ಕೃತಿಕವಾಗಿ ಸೂಕ್ತವಾದ ದೃಶ್ಯಾವಳಿಗಳನ್ನು (Visual content) ರಚಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
    • ಈ ವೇದಿಕೆಯು ‘ಪರಿಕಲ್ಪನೆಯಿಂದ ವೀಡಿಯೊಗೆ ಮತ್ತು ಕಥೆಗೆ’ (Idea to Video to Story) ಎಂಬ ಕಾರ್ಯವಿಧಾನವನ್ನು ಅನುಸರಿಸುತ್ತದೆ ಹಾಗೂ ಬಳಕೆದಾರರು ಸರಳವಾದ ಸೂಚನೆಗಳ(Prompts) ಮೂಲಕ ದೃಶ್ಯ ಕಥೆಗಳನ್ನು ಸುಲಭವಾಗಿ ರಚಿಸಲು ಮತ್ತು ವಿಸ್ತರಿಸಲು ಇದು ಅನುವು ಮಾಡಿಕೊಡುತ್ತದೆ.

    ಹವಳ ದಿಬ್ಬಗಳ ಸ್ಥಳಾಂತರ: ನಿಕೋಬಾರ್‌ನಲ್ಲಿ 4 ತಾಣಗಳ ಗುರುತು

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಗ್ರೇಟ್ ನಿಕೋಬಾರ್ ದ್ವೀಪದ (GNI) ಬೃಹತ್ ಯೋಜನೆಯ (ಮೆಗಾ ಪ್ರಾಜೆಕ್ಟ್) ಭಾಗವಾಗಿ ಗ್ಯಾಲಥಿಯಾ ಕೊಲ್ಲಿಯಲ್ಲಿ ಉದ್ದೇಶಿಸಲಾದ ಸರಕು ವರ್ಗಾವಣೆ (Transshipment) ಬಂದರಿನ ಕಾಮಗಾರಿಯಿಂದಾಗಿ ಪ್ರಭಾವಕ್ಕೊಳಗಾಗುವ ಹವಳದ ದಿಬ್ಬಗಳ ಸಮೂಹಗಳು (Colonies) ಮತ್ತು ದೈತ್ಯ ಮೃದ್ವಂಗಿಗಳನ್ನು ಪಶ್ಚಿಮ ಕರಾವಳಿಯ ನಾಲ್ಕು ತಾಣಗಳಿಗೆ ಸ್ಥಳಾಂತರಿಸಲಾಗುವುದು.

    ‘ಗ್ರೇಟ್ ನಿಕೋಬಾರ್ ದ್ವೀಪ (GNI) ಯೋಜನೆ’ಯ ಬಗ್ಗೆ

    • ಈ ಯೋಜನೆಯನ್ನು ನೀತಿ ಆಯೋಗವು ರೂಪಿಸಿದ್ದು, 2021 ರಲ್ಲಿ ಪ್ರಾರಂಭಿಸಲಾಯಿತು.
    • ಇದು ಸುಮಾರು ₹72,000 ದಿಂದ ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಉಪಕ್ರಮವಾಗಿದೆ.
    • ಭಾರತದ ದಕ್ಷಿಣ ತುದಿಯ ದ್ವೀಪವನ್ನು ಪ್ರಮುಖ ಕಾರ್ಯತಂತ್ರದ ಹಾಗೂ ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಇದು ಹೊಂದಿದೆ.
    • ಪ್ರಾಮುಖ್ಯತೆ: ಈ ಯೋಜನೆಯು ಭಾರತದ ‘ಸಾಗರ ದೃಷ್ಟಿಕೋನ 2030’ (Maritime Vision 2030) ಮತ್ತು ‘ಅಮೃತ್ ಕಾಲ್ ವಿಷನ್ 2047’ ರ ಪ್ರಮುಖ ಕೇಂದ್ರಬಿಂದುವಾಗಿದೆ.

    ಯೋಜನೆಯ ಪ್ರಮುಖ ಘಟಕಗಳು

    • ಅಂತರರಾಷ್ಟ್ರೀಯ ಕಂಟೇನರ್ ಸರಕು ವರ್ಗಾವಣೆ ಕೇಂದ್ರ (ICTT): ಪ್ರಾದೇಶಿಕ ಸರಕುಗಳನ್ನು ನಿರ್ವಹಿಸಲು ಗ್ಯಾಲಥಿಯಾ ಕೊಲ್ಲಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಇದು 14.2 ದಶಲಕ್ಷ TEU ಗಳ ನಿರ್ವಹಣಾ ಸಾಮರ್ಥ್ಯವನ್ನು ಗುರಿಯಾಗಿರಿಸಿಕೊಂಡಿದೆ.
    • ಗ್ರೀನ್ ಫೀಲ್ಡ್ (Greenfield) ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಇದು ಪ್ರವಾಸೋದ್ಯಮ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಬಳಸಲಾಗುವ ದ್ವಿ-ಬಳಕೆಯ ಸೌಲಭ್ಯವಾಗಿದೆ.
    • ಸಮಗ್ರ ಟೌನ್‌ಶಿಪ್: 2050 ರ ವೇಳೆಗೆ ಅಂದಾಜು 6.5 ಲಕ್ಷ ಜನಸಂಖ್ಯೆಗೆ ವಸತಿ ಕಲ್ಪಿಸಲು ಯೋಜಿತ ಅಭಿವೃದ್ಧಿ ಮಾಡಲಾಗುತ್ತಿದೆ.
    • ವಿದ್ಯುತ್ ಸ್ಥಾವರ: ಇದು ಅನಿಲ ಮತ್ತು ಸೌರ-ಆಧಾರಿತ 450 MVA ಸಾಮರ್ಥ್ಯದ ವಿದ್ಯುತ್ ಸೌಲಭ್ಯವಾಗಿದೆ.

    ಹವಳದ ದಿಬ್ಬಗಳು (Coral Reefs)

    • ಹವಳದ ದಿಬ್ಬಗಳು ಭೂಮಿಯ ಮೇಲಿನ ಪ್ರಮುಖ ಜೀವ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ.
    • ರಚನೆ ಮತ್ತು ಸಹಜೀವನ ಸಂಬಂಧ: ಹವಳ ದಿಬ್ಬಗಳನ್ನು ನಿರ್ಮಿಸಲು ಪ್ರಧಾನವಾಗಿ ಕಾರಣವಾಗಿರುವ ‘ಕೋರಲ್ ಪಾಲಿಪ್ಸ್’ ಎಂಬ ಜೀವಿಗಳು, ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಜೂಕ್ಸಾಂಥೆಲ್ಲೆ’ ಎಂಬ ದ್ಯುತಿಸಂಶ್ಲೇಷಕ ಶೈವಲಗಳೊಂದಿಗೆ ಸಹಜೀವನ ಸಂಬಂಧವನ್ನು ಬೆಳೆಸಿದಾಗ ಇವು ರೂಪುಗೊಳ್ಳುತ್ತವೆ.
    • ರಚನೆ: ಮುಕ್ತವಾಗಿ ಈಜುವ ಹವಳದ ಲಾರ್ವಾಗಳು ದ್ವೀಪಗಳು ಅಥವಾ ಭೂಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳು ಅಥವಾ ಇತರ ಕಠಿಣ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.
    • ಹವಳಗಳು ಶೈವಲಗಳಿಗೆ ರಕ್ಷಿತ ಪರಿಸರವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಬೇಕಾದ ಸಂಯುಕ್ತಗಳನ್ನು ಒದಗಿಸುತ್ತವೆ.
    • ಇದಕ್ಕೆ ಪ್ರತಿಯಾಗಿ, ಶೈವಲಗಳು ಕಾರ್ಬೋಹೈಡ್ರೇಟ್‌ಗಳನ್ನು ಉತ್ಪಾದಿಸುತ್ತವೆ, ಇದನ್ನು ಹವಳಗಳು ಆಹಾರವಾಗಿ ಬಳಸುತ್ತವೆ; ಅಲ್ಲದೆ ಪಾಚಿಗಳು ಆಮ್ಲಜನಕವನ್ನು ಒದಗಿಸುವುದರ ಜೊತೆಗೆ ಹವಳಗಳು ತಮ್ಮ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

    ರಚನೆಗೆ ಪೂರಕವಾದ ವಾತಾವರಣ: 

    • ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು ಇವುಗಳ ಬೆಳವಣಿಗೆಗೆ ಅತ್ಯಗತ್ಯವಾಗಿವೆ (ಉತ್ತರಕ್ಕೆ 30 ಡಿಗ್ರಿ ಮತ್ತು ದಕ್ಷಿಣಕ್ಕೆ 25 ಡಿಗ್ರಿ ಅಕ್ಷಾಂಶಗಳು).
    • ಸಾಗರದ ನೀರು ಸಂಪೂರ್ಣವಾಗಿ ಹೂಳು ಅಥವಾ ಕೆಸರು ಮುಕ್ತವಾಗಿರಬೇಕು.
    • ಸಾಗರದ ನೀರು ಸ್ಪಷ್ಟ ಮತ್ತು ಪಾರದರ್ಶಕವಾಗಿರುವುದು ಅವಶ್ಯಕವಾಗಿದೆ.
    • ಈ ದಿಬ್ಬಗಳ ಬೆಳವಣಿಗೆಗೆ ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ಪ್ರದೇಶಗಳು ಸೂಕ್ತವಾಗಿವೆ.

    ಹವಳದ ದಿಬ್ಬಗಳ ವಿಧಗಳು

    • ಅಂಚಿನ ಹವಳದ ದಿಬ್ಬಗಳು (Fringing reefs): ಇವು ಅತ್ಯಂತ ಸಾಮಾನ್ಯವಾದ ಹವಳದ ದಿಬ್ಬಗಳಾಗಿದ್ದು, ಕರಾವಳಿಯಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಳ್ಳುವ ಮೂಲಕ ದ್ವೀಪಗಳ ಸುತ್ತಲೂ ಗಡಿಗಳನ್ನು ನಿರ್ಮಿಸುತ್ತವೆ.
    • ಪ್ರತಿಬಂಧಕ (ತಡೆಗೋಡೆ) ಹವಳದ ದಿಬ್ಬಗಳು (Barrier reefs): ಇವು ಕರಾವಳಿಯ ಅಂಚಿನಲ್ಲಿಯೇ ಬೆಳೆಯುತ್ತವೆ, ಆದರೆ ಆಳವಾದ ಮತ್ತು ತೆರೆದ ನೀರಿನ ಲಗೂನ್ ಸರೋವರಗಳು (Lagoons) ಇವುಗಳನ್ನು ಪಕ್ಕದ ಭೂಪ್ರದೇಶದಿಂದ ಪ್ರತ್ಯೇಕಿಸುತ್ತವೆ.
    • ಅಟಾಲ್ / ಉಂಗುರಾಕಾರದ ಹವಳದ ದಿಬ್ಬಗಳು (Atoll): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಮುಳುಗಿದಾಗ ಮತ್ತು ಹವಳಗಳು ಮೇಲ್ಮುಖವಾಗಿ ಬೆಳೆಯುತ್ತಲೇ ಇದ್ದಾಗ ‘ಉಂಗುರಾಕಾರದ ಹವಳದ ದಿಬ್ಬ’ ರೂಪುಗೊಳ್ಳುತ್ತದೆ. ಇವು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿರುತ್ತವೆ ಮತ್ತು ಮಧ್ಯದಲ್ಲಿ ಲಗೂನ್‌ಗಳನ್ನು ಹೊಂದಿರುತ್ತವೆ.

    ಭಾರತದಲ್ಲಿ ಹವಳದ ದಿಬ್ಬಗಳ ಹಂಚಿಕೆ

    • ಗುಜರಾತ್‌ನ ಕಚ್ ಕೊಲ್ಲಿ.
    • ಭಾರತದ ಪಶ್ಚಿಮ ಕರಾವಳಿ ಪ್ರದೇಶ.
    • ಲಕ್ಷದ್ವೀಪದ ದ್ವೀಪ ಸಮೂಹ.
    • ತಮಿಳುನಾಡಿನ ಮನ್ನಾರ್ ಕೊಲ್ಲಿ.
    • ಪಾಕ್ ಜಲಸಂಧಿಯ (Palk Bay) ಪ್ರದೇಶ.
    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ.

    ಪ್ರಮುಖ ಅಪಾಯಗಳು: 

    • ಅವೈಜ್ಞಾನಿಕ ಮೀನುಗಾರಿಕೆ ಅಭ್ಯಾಸಗಳು ಮತ್ತು ಮಿತಿಮೀರಿದ ಮೀನುಗಾರಿಕೆ ಚಟುವಟಿಕೆಯು ಹವಳಗಳಿಗೆ ಮಾರಕವಾಗಿದೆ.
    • ಅಜಾಗರೂಕ ಪ್ರವಾಸೋದ್ಯಮ ಮತ್ತು ಮಾಲಿನ್ಯವು ದಿಬ್ಬಗಳನ್ನು ನಾಶಪಡಿಸುತ್ತವೆ.
    • ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಯು ಇವುಗಳಿಗೆ ಇರುವ ಪ್ರಮುಖ ಅಪಾಯಗಳಾಗಿವೆ.

    ಹವಳದ ವಿವರ್ಣವಾಗುವಿಕೆ / ಬಿಳಿಚುವಿಕೆ (Coral Bleaching)

    • ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ಹವಳಗಳು ಒತ್ತಡಕ್ಕೆ ಒಳಗಾದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಶೈವಲ ‘ಜೂಕ್ಸಾಂಥೆಲ್ಲೆ’ಯನ್ನು ಹೊರಹಾಕುತ್ತವೆ, ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಈ ವಿದ್ಯಮಾನವನ್ನು ಹವಳದ ವಿವರ್ಣವಾಗುವಿಕೆ ಅಥವಾ ಬಿಳಿಚುವಿಕೆ (Bleaching) ಎಂದು ಕರೆಯಲಾಗುತ್ತದೆ.

    ಹವಳದ ವಿವರ್ಣವಾಗುವಿಕೆ / ಬಿಳಿಚುವಿಕೆಗೆ ಕಾರಣಗಳು

    • ಸಮುದ್ರದ ತಾಪಮಾನದಲ್ಲಿನ ಏರಿಕೆಯು ಬಿಳಿಚುವಿಕೆಗೆ ಪ್ರಮುಖ ಕಾರಣವಾಗಿದೆ.
    • ಸಾಗರದ ಆಮ್ಲೀಕರಣವು ಹವಳಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
    • ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣಗಳು ಹವಳಗಳಿಗೆ ಹಾನಿಯನ್ನುಂಟುಮಾಡುತ್ತವೆ.
    • ಸಾಂಕ್ರಾಮಿಕ ರೋಗಗಳು ಹವಳಗಳ ಬಣ್ಣ ಕಳೆದುಕೊಳ್ಳುವಿಕೆಗೆ ಕಾರಣವಾಗುತ್ತವೆ.
    • ರಾಸಾಯನಿಕ ಮಾಲಿನ್ಯದಿಂದ ಹವಳಗಳು ತ್ವರಿತವಾಗಿ ನಾಶವಾಗುತ್ತವೆ.
    • ಹೆಚ್ಚಿದ ಹೂಳು ತುಂಬುವಿಕೆಯು ಹವಳಗಳಿಗೆ ದೊಡ್ಡ ಅಪಾಯಕಾರಿಯಾಗಿದೆ.
    • ನೀರು ಕದಡುವುದರಿಂದ (Turbidity) ಬೆಳಕಿನ ಲಭ್ಯತೆ ಕಡಿಮೆಯಾಗುವುದು ಬಿಳಿಚುವಿಕೆಗೆ ಕಾರಣವಾಗುತ್ತದೆ.
    • ವಿವಿಧ ರೀತಿಯ ಮಾನವ ಪ್ರೇರಿತ ಚಟುವಟಿಕೆಗಳು ಹವಳಗಳ ನಾಶಕ್ಕೆ ಕಾರಣವಾಗುತ್ತವೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 13, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 13, 2026

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಕೆಳಗಿನವುಗಳಲ್ಲಿ ಯಾವ ದೇಶವು ಜಿ7 (G7) ಸದಸ್ಯ ರಾಷ್ಟ್ರವಲ್ಲ?

    (A) ಕೆನಡಾ

    (B) ಇಟಲಿ

    (C) ರಷ್ಯಾ

    (D) ಜಪಾನ್

    ಉತ್ತರ: C

    2. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕಾಲಾಪಾನಿ, ಲಿಂಪಿಯಾಧುರ ಮತ್ತು ಲಿಪುಲೇಖ್ ಪ್ರದೇಶಗಳು ಭಾರತ ಮತ್ತು ನೇಪಾಳದ ನಡುವಿನ ಪ್ರಮುಖ ಗಡಿ ವಿವಾದದ ಪ್ರದೇಶಗಳಾಗಿವೆ.
    2. ಸುಸ್ತಾ ಪ್ರದೇಶವು ಭಾರತ ಮತ್ತು ಭೂತಾನ್ ನಡುವಿನ ವಿವಾದಿತ ಪ್ರದೇಶವಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    (A) 1 ಮಾತ್ರ
    (B) 2 ಮಾತ್ರ
    (C) 1 ಮತ್ತು 2 ಎರಡೂ
    (D) 1 ಅಥವಾ  2 ಯಾವುದೂ ಅಲ್ಲ
    ಉತ್ತರ: A

    3. ಕೆಳಗಿನವುಗಳಲ್ಲಿ ಯಾವುದು ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಯ (GNI Project) ಪ್ರಾಥಮಿಕ ಉದ್ದೇಶವನ್ನು ಉತ್ತಮವಾಗಿ ವಿವರಿಸುತ್ತದೆ?

    (A) ನಿರ್ಬಂಧಿತ ಮಾನವ ವಸತಿಯೊಂದಿಗೆ (Restricted human habitation) ವಿಶೇಷ ಜೀವವೈವಿಧ್ಯ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸುವುದು.

    (B) ಗ್ರೇಟ್ ನಿಕೋಬಾರ್ ದ್ವೀಪವನ್ನು ಪ್ರಮುಖ ಕಾರ್ಯತಂತ್ರ ಮತ್ತು ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವುದು.

    (C) ಭಾರತದ ಮೊದಲ ಕಡಲಾಚೆಯ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ಅಭಿವೃದ್ಧಿಪಡಿಸುವುದು.

    (D) ವಾಣಿಜ್ಯ ಚಟುವಟಿಕೆಗಳಿಂದ ಮುಕ್ತವಾದ ಮೀಸಲಾದ ಸಮುದ್ರ ಸಂರಕ್ಷಣಾ ವಲಯವನ್ನು ರಚಿಸುವುದು.

    ಉತ್ತರ: B

    4. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ (Consider the following statements):

    1. ಜಂಟಿ ಸಮರಾಭ್ಯಾಸ ವರುಣ (Joint Exercise Varuna) ಭಾರತ ಮತ್ತು ಫ್ರಾನ್ಸ್‌ನ ಸಶಸ್ತ್ರ ಪಡೆಗಳ ನಡುವೆ ನಡೆಯುತ್ತದೆ.
    2. ಫ್ರಿಂಜೆಕ್ಸ್-23 (FRINJEX-23) ಭಾರತ ಮತ್ತು ಫ್ರಾನ್ಸ್ ನಡೆಸುವ ದ್ವಿಪಕ್ಷೀಯ ಸಮರಾಭ್ಯಾಸಗಳಲ್ಲಿ ಒಂದಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
    (A) 1 ಮಾತ್ರ
    (B) 2 ಮಾತ್ರ
    (C) 1 ಮತ್ತು 2 ಎರಡೂ
    (D) 1 ಅಥವಾ  2 ಯಾವುದೂ ಅಲ್ಲ

    ಉತ್ತರ: C

  • ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ (PCPNDT) ಕಾಯ್ದೆ | ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958 | ಪೋಕ್ಸೊ (POCSO) ಪ್ರಕರಣ : 142ನೇ ವಿಧಿ ಬಳಸಿದ ಸರ್ವೋಚ್ಚ ನ್ಯಾಯಾಲಯ | ಕೇರಳದಲ್ಲಿ ಶಿಗೆಲ್ಲಾಸಿಸ್ ಸೋಂಕು ಹರಡುವಿಕೆ | ಹಿಮಾರ್ಸ್ (HIMARS) | ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA)

    ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ (PCPNDT) ಕಾಯ್ದೆ

    ಸಂವಿಧಾನ ಮತ್ತು ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಸರ್ವೋಚ್ಚ ನ್ಯಾಯಾಲಯವು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ (PCPNDT) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದೆ.

    ಕಾಯ್ದೆಯ ಬಗ್ಗೆ: 

    • ಉದ್ದೇಶ: ಇದು ಹೆಣ್ಣು ಭ್ರೂಣ ಹತ್ಯೆಯನ್ನು (Female foeticide) ತಡೆಗಟ್ಟಲು ಮತ್ತು ಮಕ್ಕಳ ಲಿಂಗಾನುಪಾತವನ್ನು (Child sex ratio) ಸುಧಾರಿಸಲು ಜಾರಿಗೆ ತರಲಾದ ಒಂದು ಪ್ರಮುಖ ಭಾರತೀಯ ಕಾನೂನು ಆಗಿದೆ.

    ಪ್ರಮುಖ ಅಂಶಗಳು:

    • ಲಿಂಗ ಆಯ್ಕೆ ನಿಷೇಧ: ಗರ್ಭಧಾರಣೆಯ ಮೊದಲು ಅಥವಾ ನಂತರ ಮಗುವಿನ ಲಿಂಗವನ್ನು ಆಯ್ಕೆ ಮಾಡುವುದು ಅಥವಾ ಲಿಂಗ ಪತ್ತೆ ಪರೀಕ್ಷೆ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ.
    • ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಿಯಂತ್ರಣ: ಸ್ಕ್ಯಾನಿಂಗ್ ಯಂತ್ರಗಳನ್ನು ಕೇವಲ ಭ್ರೂಣದ ಅನುವಂಶಿಕ ಕಾಯಿಲೆಗಳನ್ನು ಪತ್ತೆಹಚ್ಚಲು ಮಾತ್ರ ಬಳಸಬಹುದಾಗಿದೆ ಮತ್ತು ವೈದ್ಯರು ಭ್ರೂಣದ ಲಿಂಗವನ್ನು ಯಾರಿಗೂ ತಿಳಿಸುವಂತಿಲ್ಲ.
    • ಕಡ್ಡಾಯ ನಿಯಮಗಳು: ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕು, ನಿಖರವಾದ ದಾಖಲೆಗಳನ್ನು (Form F) ನಿರ್ವಹಿಸಬೇಕು ಮತ್ತು ಲಿಂಗ ಆಯ್ಕೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡುವಂತಿಲ್ಲ.
    • ಕಠಿಣ ಶಿಕ್ಷೆ: ಈ ಕಾಯ್ದೆಯ ಉಲ್ಲಂಘನೆಯು ಜಾಮೀನು ರಹಿತ (Non-bailable) ಅಪರಾಧವಾಗಿದೆ. ಮೊದಲ ಬಾರಿಗೆ ಅಪರಾಧ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10,000 ದಂಡವನ್ನು ವಿಧಿಸಲಾಗುತ್ತದೆ ಹಾಗೂ ವೈದ್ಯರು ತಮ್ಮ ಪರವಾನಗಿಯನ್ನು (ಲೈಸೆನ್ಸ್) ಕಳೆದುಕೊಳ್ಳಬಹುದಾಗಿದೆ.

    ಲಿಂಗಾನುಪಾತ ಸುಧಾರಿಸಲು ಸರ್ಕಾರದ ಪ್ರಮುಖ ಉಪಕ್ರಮಗಳು

    • ಬೇಟಿ ಬಚಾವೋ ಬೇಟಿ ಪಡಾವೋ (BBBP): ಲಿಂಗಾಧಾರಿತ ತಾರತಮ್ಯವನ್ನು ಹೋಗಲಾಡಿಸಲು, ಹೆಣ್ಣು ಮಗುವಿನ ಮೌಲ್ಯವನ್ನು ಉತ್ತೇಜಿಸಲು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಲಭ್ಯತೆಯನ್ನು ಸುಧಾರಿಸುವ ಉದ್ದೇಶದಿಂದ 2015 ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು.
      • ಹೆಣ್ಣುಮಕ್ಕಳ ಸಬಲೀಕರಣದ ಮಹತ್ವ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವುದು ಸಹ ಇದರ ಪ್ರಮುಖ ಗುರಿಯಾಗಿದೆ.
    • ಸುಕನ್ಯಾ ಸಮೃದ್ಧಿ ಯೋಜನೆ: ಇದು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರಲಾದ ಒಂದು ಸಣ್ಣ ಉಳಿತಾಯ ಯೋಜನೆಯಾಗಿದ್ದು, ಹೆಣ್ಣುಮಕ್ಕಳ ಭವಿಷ್ಯದ ಶಿಕ್ಷಣ ಮತ್ತು ವಿವಾಹಕ್ಕಾಗಿ ಹಣ ಉಳಿತಾಯ ಮಾಡಲು ಕುಟುಂಬಗಳನ್ನು ಪ್ರೋತ್ಸಾಹಿಸುತ್ತದೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ.
    • ಮಾತೃತ್ವ ಸೌಲಭ್ಯಗಳು: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಯಂತಹ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಇದು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ತಾಯಿ-ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.
    • ರಾಷ್ಟ್ರೀಯ ಆರೋಗ್ಯ ಅಭಿಯಾನ (NHM): ಮಹಿಳೆಯರು ಮತ್ತು ಹೆಣ್ಣುಮಕ್ಕಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು, ತಾಯಂದಿರ ಆರೋಗ್ಯ ರಕ್ಷಣೆ ಸೇರಿದಂತೆ ಮಹಿಳೆಯರ ಸಮಗ್ರ ಆರೋಗ್ಯ ಸೇವೆಗಳನ್ನು ಸುಧಾರಿಸುವತ್ತ ಈ ಕಾರ್ಯಕ್ರಮವು ಗಮನಹರಿಸುತ್ತದೆ.

    ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958

    ಸಂವಿಧಾನ ಮತ್ತು ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು, ಕೇವಲ ಒಂದು ಅಥವಾ ಎರಡು ರಾಜ್ಯಗಳನ್ನು ಹೊರತುಪಡಿಸಿ, 2027 ರ ವೇಳೆಗೆ ಬಹುತೇಕ ಇಡೀ ಈಶಾನ್ಯ ಭಾರತದಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು (AFSPA) ಸಂಪೂರ್ಣವಾಗಿ ಹಿಂಪಡೆಯುವ ಸಾಧ್ಯತೆಯಿದೆ ಎಂದು ಘೋಷಿಸಿದ್ದಾರೆ.

    ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (AFSPA) ಬಗ್ಗೆ

    • ಈ ಕಾಯ್ದೆಯನ್ನು ಮೂಲತಃ ಬ್ರಿಟಿಷ್ ಸರ್ಕಾರವು 1942ಕ್ವಿಟ್ ಇಂಡಿಯಾ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಜಾರಿಗೆ ತಂದಿತ್ತು.
    • ಸ್ವಾತಂತ್ರ್ಯದ ನಂತರ ಭಾರತವು ಈ ಕಾಯ್ದೆಯನ್ನು ಮುಂದುವರಿಸಲು ನಿರ್ಧರಿಸಿತು, ಆರಂಭದಲ್ಲಿ ಇದನ್ನು ಸುಗ್ರೀವಾಜ್ಞೆಯ (Ordinance) ರೂಪದಲ್ಲಿ ಜಾರಿಗೊಳಿಸಲಾಯಿತು, ನಂತರ 1958 ರಲ್ಲಿ ಅಧಿಕೃತ ಕಾಯ್ದೆಯಾಗಿ ಅಧಿಸೂಚನೆ ಹೊರಡಿಸಲಾಯಿತು.

    ಪ್ರಸ್ತುತ AFSPA ಎಲ್ಲೆಲ್ಲಿ ಜಾರಿಯಲ್ಲಿದೆ?

    • ಜಾರಿಗೊಳಿಸುವ ಅಧಿಕಾರ: AFSPA ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಯಾವುದೇ ಪ್ರದೇಶವನ್ನು “ಉದ್ವಿಗ್ನ ಪ್ರದೇಶ” (Disturbed Area) ಎಂದು ಘೋಷಿಸಿದ ನಂತರ, ಕೇಂದ್ರ ಸರ್ಕಾರ ಅಥವಾ ಆಯಾ ರಾಜ್ಯದ ರಾಜ್ಯಪಾಲರು ಇಡೀ ರಾಜ್ಯ ಅಥವಾ ಅದರ ಕೆಲವು ಭಾಗಗಳಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಬಹುದು.
    • ಉದ್ವಿಗ್ನ ಪ್ರದೇಶದ ವ್ಯಾಖ್ಯಾನ: ನಾಗರಿಕ ಆಡಳಿತಕ್ಕೆ ನೆರವಾಗಲು ಸಶಸ್ತ್ರ ಪಡೆಗಳ ಬಳಕೆ ಅತ್ಯಗತ್ಯ ಎಂದು ಭಾವಿಸುವಂತಹ, ತೀವ್ರವಾದ ಅಶಾಂತಿ ಅಥವಾ ಅಪಾಯಕಾರಿ ಪರಿಸ್ಥಿತಿಯನ್ನು ಹೊಂದಿರುವ ಪ್ರದೇಶಗಳನ್ನು ಈ ಕಾಯ್ದೆಯು ಉದ್ವಿಗ್ನ ಪ್ರದೇಶ ಎಂದು ವ್ಯಾಖ್ಯಾನಿಸುತ್ತದೆ.

    AFSPA ಕಾಯ್ದೆಯು ಸಶಸ್ತ್ರ ಪಡೆಗಳಿಗೆ ನೀಡುವ ಅಧಿಕಾರಗಳು

    • ಈ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ಅತ್ಯಂತ ವ್ಯಾಪಕವಾದ ಮತ್ತು ವಿಶೇಷ ಕಾರ್ಯಾಚರಣೆಯ ಅಧಿಕಾರಗಳನ್ನು ಒದಗಿಸುತ್ತದೆ.
    • ಇದು ಕಾನೂನನ್ನು ಉಲ್ಲಂಘಿಸುವ ಅಥವಾ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅಕ್ರಮವಾಗಿ ಹೊಂದಿರುವ ಯಾವುದೇ ವ್ಯಕ್ತಿಯ ವಿರುದ್ಧ, ಎಚ್ಚರಿಕೆಯ ಬಳಿಕ ಸಾವು ಸಂಭವಿಸುವಂತಿದ್ದರೂ ‘ಗುಂಡು ಹಾರಿಸಲು’ ಸಶಸ್ತ್ರ ಪಡೆಗಳಿಗೆ ಅನುಮತಿ ನೀಡುತ್ತದೆ.
    • ಇದು ಕೇವಲ ಸಮಂಜಸವಾದ ಅನುಮಾನದ (Reasonable suspicion) ಆಧಾರದ ಮೇಲೆ, ಯಾವುದೇ ವಾರಂಟ್ ಇಲ್ಲದೆಯೇ ವ್ಯಕ್ತಿಗಳನ್ನು ಬಂಧಿಸುವ ಮತ್ತು ಕಟ್ಟಡ ಅಥವಾ ಆವರಣಗಳನ್ನು ಶೋಧಿಸುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ನೀಡುತ್ತದೆ.
    • ಈ ಕಾರ್ಯಾಚರಣೆಗಳಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಗೆ ಇದು ಸಂಪೂರ್ಣ ಕಾನೂನು ವಿನಾಯಿತಿಯನ್ನು (Blanket immunity) ಒದಗಿಸುತ್ತದೆ ಹಾಗೂ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಅಥವಾ ಮೊಕದ್ದಮೆಗಳನ್ನು ಹೂಡುವಂತಿಲ್ಲ.

    ಗಮನಿಸಿ: ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯು (AFSPA) ಪ್ರಸ್ತುತ ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಜಾರಿಯಲ್ಲಿದೆ.

    ಪೋಕ್ಸೊ (POCSO) ಪ್ರಕರಣ : 142ನೇ ವಿಧಿ ಬಳಸಿದ ಸರ್ವೋಚ್ಚ ನ್ಯಾಯಾಲಯ

    ಸಂವಿಧಾನ ಮತ್ತು ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, 2012 (POCSO Act) ಅಡಿಯಲ್ಲಿ ವ್ಯಕ್ತಿಯೊಬ್ಬನ ಮೇಲಿದ್ದ ಶಿಕ್ಷೆಯನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಿದೆ.

    ಭಾರತೀಯ ಸಂವಿಧಾನದ 142ನೇ ವಿಧಿಯ ಬಗ್ಗೆ

    • ಭಾರತೀಯ ಸಂವಿಧಾನದ 142ನೇ ವಿಧಿಯು ಯಾವುದೇ ಬಾಕಿ ಇರುವ ಪ್ರಕರಣದಲ್ಲಿ “ಸಂಪೂರ್ಣ ನ್ಯಾಯ” (Complete justice) ಒದಗಿಸಲು ಅಗತ್ಯವಾದ ಯಾವುದೇ ಆದೇಶ ಅಥವಾ ತೀರ್ಪನ್ನು ನೀಡಲು ಸರ್ವೋಚ್ಚ ನ್ಯಾಯಾಲಯಕ್ಕೆ ವಿಶೇಷ ಅಧಿಕಾರವನ್ನು ನೀಡುತ್ತದೆ.
    • ಮಹತ್ವ: ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕೆಲವೊಮ್ಮೆ ಅನ್ಯಾಯದ ಪರಿಣಾಮಗಳು ಎದುರಾಗುವ ಸಂದರ್ಭಗಳಲ್ಲಿ, ಶಾಸನಾತ್ಮಕ ಕೊರತೆಗಳನ್ನು (Statutory gaps) ನೀಗಿಸಲು ಮತ್ತು ನ್ಯಾಯಸಮ್ಮತ ಪರಿಹಾರವನ್ನು (Equitable relief) ಒದಗಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಈ ವಿಧಿಯನ್ನು ರೂಪಿಸಲಾಗಿದೆ.

    ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (POCSO) ಕಾಯ್ದೆ, 2012

    • ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಕಾಯ್ದೆಯನ್ನು ಜಾರಿಗೆ ತಂದಿದೆ.
    • ಈ ಕಾಯ್ದೆಯು ಪ್ರವೇಶಾತ್ಮಕ (Penetrative) ಮತ್ತು ಅಪ್ರವೇಶಾತ್ಮಕ (Non-penetrative) ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಮಕ್ಕಳ ಅಶ್ಲೀಲ ಚಿತ್ರಣದಂತಹ (Child pornography) ಕೃತ್ಯಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಇದು 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಅನ್ವಯಿಸುತ್ತದೆ.
    • ಪೋಕ್ಸೊ (POCSO) ಕಾಯ್ದೆಯು ಲಿಂಗ-ತಟಸ್ಥ (Gender-neutral) ಕಾನೂನಾಗಿದ್ದು, ಅಪ್ರಾಪ್ತ ವಯಸ್ಕರು ಲೈಂಗಿಕ ಚಟುವಟಿಕೆಗೆ ನೀಡುವ ಸಮ್ಮತಿಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ.
    • ಈ ಕಾಯ್ದೆಯು ವಿಶೇಷ ನ್ಯಾಯಾಲಯಗಳು, ಗೌಪ್ಯ ವಿಚಾರಣೆಗಳು (In-camera trials) ಮತ್ತು ವಿಡಿಯೋ ದಾಖಲಿತ ಸಾಕ್ಷ್ಯಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಮಕ್ಕಳ-ಸ್ನೇಹಿ ಕಾನೂನು ಪ್ರಕ್ರಿಯೆಗಳನ್ನು ಖಚಿತಪಡಿಸುತ್ತದೆ.
    • ಲೈಂಗಿಕ ಉದ್ದೇಶಗಳಿಗಾಗಿ ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿರುವವರಿಗೂ ಈ ಕಾಯ್ದೆಯು ಶಿಕ್ಷೆ ವಿಧಿಸುತ್ತದೆ ಮತ್ತು ಅಪರಾಧದ ಗಂಭೀರತೆಯ ಆಧಾರದ ಮೇಲೆ ಕಠಿಣ ದಂಡನೆಗಳನ್ನು ವಿಧಿಸಲು ಅವಕಾಶ ಕಲ್ಪಿಸುತ್ತದೆ.

    ಕೇರಳದಲ್ಲಿ ಶಿಗೆಲ್ಲಾಸಿಸ್ ಸೋಂಕು ಹರಡುವಿಕೆ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಕೇರಳದಲ್ಲಿ 2026 ರ ಜೂನ್ ತಿಂಗಳ ವರೆಗೆ ಶಿಗೆಲ್ಲಾಸಿಸ್ (ಬ್ಯಾಸಿಲರಿ ಭೇದಿ) ಕಾಯಿಲೆಯ 85 ದೃಢಪಟ್ಟ ಪ್ರಕರಣಗಳು ಮತ್ತು 70 ಕ್ಕೂ ಹೆಚ್ಚು ಸಂಭವನೀಯ ಪ್ರಕರಣಗಳು ವರದಿಯಾಗಿವೆ.

    ಶಿಗೆಲ್ಲಾಸಿಸ್ (Shigellosis) ಎಂದರೇನು?

    • ಶಿಗೆಲ್ಲಾಸಿಸ್ ಎಂಬುದು ‘ಶಿಗೆಲ್ಲಾ’ (Shigella) ಪ್ರಭೇದದ ಬ್ಯಾಕ್ಟೀರಿಯಾದಿಂದ ಹರಡುವ ಅತ್ಯಂತ ತೀವ್ರ ಸ್ವರೂಪದ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಸೋಂಕಾಗಿದೆ.
    • ಈ ಸೋಂಕು ಪ್ರಮುಖವಾಗಿ ಮಾನವನ ಕರುಳಿನ ಭಾಗದ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೀವ್ರ ಭೇದಿಯ ಲಕ್ಷಣಗಳನ್ನು ಒಳಗೊಂಡಿರುವ ಬ್ಯಾಸಿಲರಿ ಭೇದಿಗೆ (Bacillary Dysentery) ಕಾರಣವಾಗುತ್ತದೆ.

    ರೋಗದ ಪ್ರಮುಖ ಲಕ್ಷಣಗಳು: 

    • ಈ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ ತೀವ್ರವಾದ ಜ್ವರ ಕಾಣಿಸಿಕೊಳ್ಳುತ್ತದೆ.
    • ರೋಗಿಗಳಲ್ಲಿ ಹೆಚ್ಚಾಗಿ ರಕ್ತ ಅಥವಾ ಲೋಳೆ ಮಿಶ್ರಿತ ತೀವ್ರ ಭೇದಿ ಉಂಟಾಗುತ್ತದೆ.
    • ಬಾಧಿತರಲ್ಲಿ ವಾಂತಿ ಮತ್ತು ವಾಕರಿಕೆಯ ಲಕ್ಷಣಗಳು ಗೋಚರಿಸುತ್ತವೆ.
    • ವ್ಯಕ್ತಿಗಳಲ್ಲಿ ತೀವ್ರವಾದ ಹೊಟ್ಟೆ ಸೆಳೆತ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.

    ಹರಡುವ ವಿಧಾನಗಳು

    • ಕಲುಷಿತಗೊಂಡ ಆಹಾರ ಮತ್ತು ನೀರನ್ನು ಸೇವಿಸುವುದರಿಂದ ಈ ಕಾಯಿಲೆ ಪ್ರಮುಖವಾಗಿ ಹರಡುತ್ತದೆ.
    • ಈ ಸೋಂಕು ಮಲ-ಮೌಖಿಕ ಮಾರ್ಗದ (Fecal-oral route) ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಇರುವ ನೇರ ಸಂಪರ್ಕದಿಂದಲೂ ಹರಡುತ್ತದೆ.

    ಹಿಮಾರ್ಸ್ (HIMARS)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ತೈವಾನ್ ಇತ್ತೀಚೆಗೆ ತೈವಾನ್ ಜಲಸಂಧಿಯಲ್ಲಿ (Taiwan Strait) ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ (HIMARS) ಬಳಸಿಕೊಂಡು ತನ್ನ ಚೊಚ್ಚಲ ನೈಜ ಶಸ್ತ್ರಾಸ್ತ್ರ ಬಳಕೆಯ ಸಮರಾಭ್ಯಾಸವನ್ನು (Live-fire exercise) ನಡೆಸಿದೆ.
    • ಇದು ಚೀನಾದ ಸಂಭಾವ್ಯ ಮಿಲಿಟರಿ ಬೆದರಿಕೆಯ ವಿರುದ್ಧ ರಕ್ಷಣಾ ಸನ್ನಿವೇಶವನ್ನು ಅನುಕರಿಸುವ ಕಾರ್ಯಾಚರಣೆಯಾಗಿದೆ.

    ಹಿಮಾರ್ಸ್ (HIMARS) ವ್ಯವಸ್ಥೆಯ ಬಗ್ಗೆ

    • ಇದು ಅಮೆರಿಕ ಪೂರೈಸಿದ ಮೊಬೈಲ್ ರಾಕೆಟ್ ಆರ್ಟಿಲರಿ ವ್ಯವಸ್ಥೆಯಾಗಿದ್ದು, ಇದನ್ನು ಲಾಕ್ಹೀಡ್ ಮಾರ್ಟಿನ್ (Lockheed Martin) ಕಂಪನಿಯು ತಯಾರಿಸಿದೆ.
    • ಇದನ್ನು ಆರು ಚಕ್ರಗಳ ಟ್ರಕ್‌ನ ಮೇಲೆ ಅಳವಡಿಸಲಾಗಿದ್ದು, ಇದು ರಸ್ತೆಗಳು ಮತ್ತು ಒರಟಾದ ಭೂಪ್ರದೇಶಗಳಲ್ಲಿ ಅತಿ ವೇಗವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.
    • ಈ ವ್ಯವಸ್ಥೆಯು ತನ್ನ “ಶೂಟ್-ಅಂಡ್-ಸ್ಕೂಟ್” (Shoot-and-scoot) ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ, ಅಂದರೆ ಇದು ರಾಕೆಟ್‌ಗಳನ್ನು ಉಡಾವಣೆ ಮಾಡಿದ ಕೂಡಲೇ ಶತ್ರುಗಳ ಪ್ರತಿದಾಳಿಯನ್ನು ತಪ್ಪಿಸಲು ತ್ವರಿತವಾಗಿ ಸ್ಥಳಾಂತರಗೊಳ್ಳುತ್ತದೆ.
    • ಸುಮಾರು 300 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಹಿಮಾರ್ಸ್ (HIMARS) ವ್ಯವಸ್ಥೆಯು ತೈವಾನ್ ಜಲಸಂಧಿಯಾದ್ಯಂತ ಗುರಿಗಳನ್ನು, ವಿಶೇಷವಾಗಿ ಚೀನಾದ ಫುಜಿಯಾನ್ ಪ್ರಾಂತ್ಯದ (Fujian Province) ಕರಾವಳಿ ಪ್ರದೇಶಗಳ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

    ಗಮನಿಸಿ: ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಉಕ್ರೇನ್ ದೇಶವು ಈ ಹಿಮಾರ್ಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಿದೆ ಮತ್ತು ಇದು ಉಕ್ರೇನ್‌ನ ಪ್ರಮುಖ ದೀರ್ಘ-ಶ್ರೇಣಿಯ ದಾಳಿ (Long-range strike) ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

    ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA)

    ರಾಜಕೀಯ ಮತ್ತು ಸಂವಿಧಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ಮಸೂದೆ-2026, ಇದು ನಾಗರಿಕ ಸಮಾಜದ ಮುಕ್ತ ಕಾರ್ಯಾಚರಣೆಗೆ ಗಣನೀಯ ಪ್ರಮಾಣದ ಅಡಚಣೆಗಳನ್ನು ಉಂಟುಮಾಡುವ ಅಪಾಯವನ್ನು ಹೊಂದಿದೆ.

    ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಯ ಬಗ್ಗೆ

    • ಜಾರಿ: ಈ ಸಂಸದೀಯ ಕಾಯ್ದೆಯನ್ನು 1976 ರಲ್ಲಿ ಜಾರಿಗೆ ತರಲಾಯಿತು ಮತ್ತು 2010 ರಲ್ಲಿ ಇದಕ್ಕೆ ಪ್ರಮುಖ ತಿದ್ದುಪಡಿ ಮಾಡಲಾಯಿತು.
    • ಉದ್ದೇಶ: ವಿದೇಶಿ ದೇಣಿಗೆಗಳನ್ನು ನಿಯಂತ್ರಿಸುವುದು ಮತ್ತು ಇಂತಹ ದೇಣಿಗೆಗಳು ದೇಶದ ಆಂತರಿಕ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
    • ಅನ್ವಯಿಸುವಿಕೆ: ವಿದೇಶಿ ದೇಣಿಗೆಗಳನ್ನು ಪಡೆಯಲು ಉದ್ದೇಶಿಸಿರುವ ಎಲ್ಲಾ ಸಂಘಗಳು, ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ (NGOs) ಈ ಕಾಯ್ದೆಯು ಅನ್ವಯಿಸುತ್ತದೆ.
    • ನಿರ್ಬಂಧಗಳು: ಶಾಸಕಾಂಗದ ಸದಸ್ಯರು, ರಾಜಕೀಯ ಪಕ್ಷಗಳು, ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಮಾಧ್ಯಮ ಪ್ರತಿನಿಧಿಗಳು ಯಾವುದೇ ರೀತಿಯ ವಿದೇಶಿ ದೇಣಿಗೆಗಳನ್ನು ಪಡೆಯುವುದನ್ನು ಈ ಕಾಯ್ದೆ ಕಟ್ಟುನಿಟ್ಟಾಗಿ ನಿಷೇಧಿಸಿದೆ.

    2026 ರ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು

    • ಆಸ್ತಿ ಮುಟ್ಟುಗೋಲು: ಸರ್ಕಾರೇತರ ಸಂಸ್ಥೆಯ (NGO) ಪರವಾನಗಿಯನ್ನು ರದ್ದುಗೊಳಿಸಿದರೆ ಅಥವಾ ಅದರ ಅವಧಿ ಮುಗಿದರೆ, ವಿದೇಶಿ ನಿಧಿಯಿಂದ ನಿರ್ಮಿಸಲಾದ ಆಸ್ಪತ್ರೆಗಳು ಅಥವಾ ಶಾಲೆಗಳಂತಹ ಭೌತಿಕ ಆಸ್ತಿಗಳನ್ನು ಸರ್ಕಾರವು ವಶಪಡಿಸಿಕೊಂಡು ಮಾರಾಟ ಮಾಡಬಹುದಾಗಿದೆ.
    • ಸ್ವಯಂಚಾಲಿತ ರದ್ದತಿ: ಒಂದು ವೇಳೆ NGO ತನ್ನ ನೋಂದಣಿಯನ್ನು ಸಕಾಲದಲ್ಲಿ ನವೀಕರಿಸದಿದ್ದರೆ, ಅದು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ತಕ್ಷಣವೇ ರಾಜ್ಯವು ಮಧ್ಯಪ್ರವೇಶಿಸಿ ಆ ಸಂಸ್ಥೆಯ ಆಸ್ತಿಯ ನಿಯಂತ್ರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ.
    • ವೈಯಕ್ತಿಕ ಹೊಣೆಗಾರಿಕೆ: NGO ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೂ, ಆ ಸಂಸ್ಥೆಯ ಪ್ರಮುಖ ಮುಖ್ಯಸ್ಥರು, ನಿರ್ದೇಶಕರು ಮತ್ತು ಧರ್ಮದರ್ಶಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
    • ಕೇಂದ್ರದ ಅನುಮೋದನೆ: ಈ ಕಾನೂನಿನ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಸ್ಥಳೀಯ ಪೊಲೀಸ್ ಅಥವಾ ಏಜೆನ್ಸಿಗಳು ಯಾವುದೇ NGO ವಿರುದ್ಧ ತನಿಖೆ ನಡೆಸುವಂತಿಲ್ಲ.
    • ಕಡಿಮೆ ಜೈಲು ಶಿಕ್ಷೆ: ಕಾನೂನು ಉಲ್ಲಂಘನೆಗಾಗಿ ನೀಡಲಾಗುತ್ತಿದ್ದ ಗರಿಷ್ಠ ಜೈಲು ಶಿಕ್ಷೆಯ ಅವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಲಾಗಿದೆ, ಇದರ ಬದಲಾಗಿ ಆರ್ಥಿಕ ದಂಡದ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 12, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 12, 2026