ಲೇಖಕ: Ramvilas

  • ರೆಪೊ ದರ: ತಥಾಸ್ಥಿತಿ ಉಳಿಸಿಕೊಂಡ MPC | ಸುರ್ಹಾ ತಾಲ್: ಭಾರತದ 100 ನೇ ರಾಮ್ಸರ್ ತಾಣ | ಐಸೊಬ್ಯುಟನಾಲ್ (Isobutanol) | ಜನ್ ಸಮರ್ಥ್ ಪೋರ್ಟಲ್ (Jan Samarth Portal)

    ರೆಪೊ ದರ: ತಥಾಸ್ಥಿತಿ ಉಳಿಸಿಕೊಂಡ MPC

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (MPC) ದ್ರವ್ಯತೆ ಹೊಂದಾಣಿಕೆ ಸೌಲಭ್ಯದ (LAF) ಅಡಿಯಲ್ಲಿ ನೀತಿ ರೆಪೊ ದರವನ್ನು 25% ಮಟ್ಟದಲ್ಲೇ ಬದಲಾಯಿಸದೆ ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಿದೆ.

    ಹಣಕಾಸು ನೀತಿ ಸಮಿತಿ (MPC)ಯ ಬಗ್ಗೆ

    • ಸ್ಥಾಪನೆ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಯ್ದೆ, 1934 ರ ಸೆಕ್ಷನ್ 45ZB ರ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಸಮಿತಿಯನ್ನು ರಚಿಸಿದೆ.
    • ಸಭೆ: ಹಣಕಾಸು ನೀತಿ ಸಮಿತಿಯು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಸಭೆ ನಡೆಸುವುದು ಕಡ್ಡಾಯವಾಗಿದೆ.
    • ರಚನೆ: ಈ ಸಮಿತಿಯು ಒಟ್ಟು ಆರು ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯ ಒಟ್ಟು ಆರು ಸದಸ್ಯರಲ್ಲಿ ಮೂವರು ಆಂತರಿಕ ಸದಸ್ಯರಾಗಿದ್ದು, RBI ಗವರ್ನರ್ ಇದರ ಅಧ್ಯಕ್ಷರಾಗಿರುತ್ತಾರೆ.
      • RBI ನ ಡೆಪ್ಯುಟಿ ಗವರ್ನರ್ ಇದರ ಎರಡನೇ ಆಂತರಿಕ ಸದಸ್ಯರಾಗಿರುತ್ತಾರೆ.
      • RBI ನ ಕೇಂದ್ರ ಮಂಡಳಿಯಿಂದ ನಾಮನಿರ್ದೇಶನಗೊಂಡ RBI ನ ಅಧಿಕಾರಿಯೊಬ್ಬರು ಮೂರನೇ ಸದಸ್ಯರಾಗಿರುತ್ತಾರೆ (ಸಾಮಾನ್ಯವಾಗಿ ಹಣಕಾಸು ನೀತಿಯ ಉಸ್ತುವಾರಿ ಹೊಂದಿರುವ ಕಾರ್ಯನಿರ್ವಾಹಕ ನಿರ್ದೇಶಕರು).
      • ಇನ್ನುಳಿದ ಮೂವರು ಬಾಹ್ಯ ಸದಸ್ಯರನ್ನು ನಾಲ್ಕು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.
    • ಮತದಾನ: ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೂ ತಲಾ ಒಂದು ಮತದ ಹಕ್ಕಿರುತ್ತದೆ ಮತ್ತು ಮತಗಳು ಸಮನಾದ ಸಂದರ್ಭದಲ್ಲಿ RBI ನ ಗವರ್ನರ್ ನಿರ್ಣಾಯಕ ಮತ (Casting Vote) ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
    • ಸಮಿತಿಯ ಮಹತ್ವ: ಬೆಲೆ ಸ್ಥಿರತೆ ಮತ್ತು ಹಣದುಬ್ಬರ ನಿಯಂತ್ರಣದ ಜವಾಬ್ದಾರಿಯನ್ನು RBI ಗೆ ವಹಿಸಲು ಸರ್ಕಾರ ಮತ್ತು RBI ನ ನಡುವೆ ಏರ್ಪಟ್ಟ ಹಣಕಾಸು ನೀತಿ ಚೌಕಟ್ಟಿನ ಒಪ್ಪಂದದ ಅನ್ವಯ ಈ ಸಮಿತಿಯನ್ನು ಸ್ಥಾಪಿಸಲಾಗಿದೆ.
    • ಕಾರ್ಯಗಳು: ಹಣದುಬ್ಬರ ಗುರಿಯನ್ನು ಸಾಧಿಸಲು ಅಗತ್ಯವಿರುವ ನೀತಿ ರೆಪೊ ದರವನ್ನು ಈ ಸಮಿತಿಯು ನಿರ್ಧರಿಸುತ್ತದೆ ಮತ್ತು ಇದು ದೇಶದ ಇತರ ಎಲ್ಲಾ ಬಡ್ಡಿದರಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ.

    ಭಾರತದಲ್ಲಿನ ಹಣಕಾಸು ನೀತಿಯ ಸಾಧನಗಳು:

    • ರೆಪೊ ದರ : ವಾಣಿಜ್ಯ ಬ್ಯಾಂಕುಗಳು ತಮ್ಮ ಅಲ್ಪಾವಧಿಯ ಹಣದ ಕೊರತೆಯನ್ನು ನೀಗಿಸಲು RBI ನಿಂದ ಪೂರಕ ಭದ್ರತೆಗಳ ಮೇಲೆ ಪಡೆಯುವ ಸಾಲದ ಬಡ್ಡಿದರವಾಗಿದೆ.
    • ರಿವರ್ಸ್ ರೆಪೊ ದರ: RBI ಬ್ಯಾಂಕುಗಳಿಂದ ಹೆಚ್ಚುವರಿ ಹಣವನ್ನು ಪಡೆದು ಅದಕ್ಕೆ ನೀಡುವ ಬಡ್ಡಿದರವಾಗಿದೆ.
    • ನಗದು ಮೀಸಲು ಅನುಪಾತ (CRR): ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳ ಒಂದು ನಿರ್ದಿಷ್ಟ ಪಾಲನ್ನು RBI ನಲ್ಲಿ ನಗದು ರೂಪದಲ್ಲಿ ಇಡಬೇಕಾದ ಕಡ್ಡಾಯ ಅನುಪಾತವಾಗಿದೆ.
    • ಶಾಸನಬದ್ಧ ದ್ರವ್ಯತೆ ಅನುಪಾತ (SLR): ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣಿಗಳ ಒಂದು ಭಾಗವನ್ನು ನಗದು, ಚಿನ್ನ ಅಥವಾ ಸರ್ಕಾರಿ ಭದ್ರತೆಗಳ ರೂಪದಲ್ಲಿ ತಮ್ಮಲ್ಲೇ ಕಾಯ್ದಿರಿಸಿಕೊಳ್ಳಬೇಕಾದ ಕಡ್ಡಾಯ ಅನುಪಾತವಾಗಿದೆ.
    • ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO): ಮಾರುಕಟ್ಟೆಯಲ್ಲಿ ಹಣದ ಚಲಾವಣೆಯನ್ನು ನಿಯಂತ್ರಿಸಲು RBI ಸರ್ಕಾರಿ ಭದ್ರತೆಗಳನ್ನು ಖರೀದಿ ಅಥವಾ ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ.
    • ಸೀಮಾಂತ ಸ್ಥಾಯಿ ಸೌಲಭ್ಯ (MSF): ಹೆಚ್ಚಿನ ದ್ರವ್ಯತೆಯ ಕೊರತೆ (Liquidity crisis) ಎದುರಾದಂತಹ ತುರ್ತು ಸಂದರ್ಭಗಳಲ್ಲಿ, ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನಿಂದ ದಂಡನಾತ್ಮಕ ಬಡ್ಡಿದರದಲ್ಲಿ ಪಡೆಯುವ ಒಂದು ದಿನದ ಅವಧಿಯ (Overnight) ಸಾಲದ ಸೌಲಭ್ಯ ಇದಾಗಿದೆ.
    • ದ್ರವ್ಯತೆ ಹೊಂದಾಣಿಕೆ ಸೌಲಭ್ಯ (LAF): ರೆಪೊ ಮತ್ತು ರಿವರ್ಸ್ ರೆಪೊ ಕಾರ್ಯಾಚರಣೆಗಳ ಮೂಲಕ ಮಾರುಕಟ್ಟೆಯ ದ್ರವ್ಯತೆಯನ್ನು ನಿರ್ವಹಿಸುವ ವ್ಯವಸ್ಥೆಯಾಗಿದೆ.
    • ಮಾರುಕಟ್ಟೆ ಸ್ಥಿರೀಕರಣ ಯೋಜನೆ (MSS): ಮಾರುಕಟ್ಟೆಯಲ್ಲಿನ ಹೆಚ್ಚುವರಿ ದ್ರವ್ಯತೆಯನ್ನು ಹಿಂಪಡೆಯಲು RBI ಬಾಂಡ್‌ಗಳನ್ನು ವಿತರಿಸುವ ಪ್ರಕ್ರಿಯೆಯಾಗಿದೆ.

    ಸುರ್ಹಾ ತಾಲ್: ಭಾರತದ 100 ನೇ ರಾಮ್ಸರ್ ತಾಣ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರುವ ‘ಜಯಪ್ರಕಾಶ್ ನಾರಾಯಣ್ ಪಕ್ಷಿಧಾಮ’ (ಸುರ್ಹಾ ತಾಲ್) ಪ್ರದೇಶವನ್ನು ಭಾರತದ 100 ನೇ ರಾಮ್‌ಸರ್ ತಾಣ ಎಂದು ಘೋಷಿಸಲಾಗಿದೆ.

    ಸುರ್ಹಾ ತಾಲ್ ಪಕ್ಷಿಧಾಮದ ಬಗ್ಗೆ:

    • ಈ ಪಕ್ಷಿಧಾಮವನ್ನು 1991 ರಲ್ಲಿ ಸ್ಥಾಪಿಸಲಾಯಿತು.
    • ಗಂಗಾ ನದಿಯು ತನ್ನ ಹರಿವಿನ ಪಥವನ್ನು ಬದಲಾಯಿಸಿದಾಗ ನೈಸರ್ಗಿಕವಾಗಿ ನಿರ್ಮಾಣಗೊಂಡ ಬಹುವಾರ್ಷಿಕ ಶೃಂಗ ಸರೋವರದ (Oxbow Lake) ಸುತ್ತಲೂ ಈ ಪಕ್ಷಿಧಾಮವು ಆವೃತವಾಗಿದೆ.
    • ಇದು ಗಂಗಾ ಮತ್ತು ಘಾಘ್ರಾ ನದಿಗಳ ಸಂಗಮದ ಸಮೀಪವಿರುವ ಇಂಡೋ-ಗಂಗಾ ಬಯಲು ಪ್ರದೇಶದಲ್ಲಿದೆ.
    • ಈ ತಾಣವು ಸೈಬೀರಿಯಾ ಮತ್ತು ಮಧ್ಯ ಏಷ್ಯಾದಿಂದ ವಲಸೆ ಬರುವ ಗ್ರೆಲಾಗ್ ಗೂಸ್, ಪಿಂಟೇಲ್, ಕಾಮನ್ ಟೀಲ್ ಮತ್ತು ಬಾರ್-ಹೆಡೆಡ್ ಗೂಸ್ ಸೇರಿದಂತೆ ಹಲವು ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತದೆ.
    • ಸ್ಥಳೀಯ ಪಕ್ಷಿ ಪ್ರಬೇಧಗಳಾದ ಸಾರಸ್ ಕ್ರೇನ್, ಹೆರಾನ್ ಮತ್ತು ಕಾರ್ಮೊರಂಟ್ ಹಕ್ಕಿಗಳು ಇಲ್ಲಿ ಕಂಡುಬರುತ್ತವೆ.

    ‘ರಾಮ್‌ಸರ್ ಸಮಾವೇಶ’ದ ಬಗ್ಗೆ

    • ಅಂತರರಾಷ್ಟ್ರೀಯ ಮಹತ್ವ ಹೊಂದಿರುವ ಜೌಗು ಪ್ರದೇಶಗಳನ್ನು ರಾಮ್‌ಸರ್ ಸಮಾವೇಶದ ಅಡಿಯಲ್ಲಿ ರಾಮ್‌ಸರ್ ತಾಣಗಳೆಂದು ಗುರುತಿಸಲಾಗುತ್ತದೆ.
    • ಜಾಗತಿಕವಾಗಿ ಪ್ರಮುಖವಾಗಿರುವ ಜೌಗು ಪ್ರದೇಶಗಳನ್ನು ಸಂರಕ್ಷಿಸಲು ದೇಶಗಳ ನಡುವೆ ಏರ್ಪಟ್ಟ ಅಂತರ-ಸರ್ಕಾರಿ ಒಪ್ಪಂದವೇ ಈ ರಾಮ್‌ಸರ್ ಸಮಾವೇಶವಾಗಿದೆ.
    • ಈ ಒಪ್ಪಂದಕ್ಕೆ ಫೆಬ್ರವರಿ 2, 1971 ರಂದು ಇರಾನ್‌ನ ರಾಮ್‌ಸರ್ ನಗರದಲ್ಲಿ ಸಹಿ ಹಾಕಲಾಯಿತು ಮತ್ತು ಇದು 1975 ರಲ್ಲಿ ಜಾರಿಗೆ ಬಂದಿತು.
    • ಭಾರತವು 1982 ರಲ್ಲಿ ಈ ರಾಮ್‌ಸರ್ ಸಮಾವೇಶಕ್ಕೆ ಸಹಿ ಹಾಕುವ ಮೂಲಕ ಇದರ ಭಾಗವಾಯಿತು.

    ಭಾರತದ ರಾಮ್‌ಸರ್ ತಾಣಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ

    • ಒಟ್ಟು ಸಂಖ್ಯೆ: ಜೂನ್ 2026 ರ ವೇಳೆಗೆ ಭಾರತದಲ್ಲಿ ಒಟ್ಟು 100 ರಾಮ್‌ಸರ್ ತಾಣಗಳಿವೆ.
    • ಏಷ್ಯಾ ಖಂಡದಲ್ಲೇ ಅತ್ಯಧಿಕ ರಾಮ್‌ಸರ್ ತಾಣಗಳನ್ನು ಹೊಂದಿರುವ ದೇಶ ಭಾರತವಾಗಿದೆ.
    • 100 ನೇ ತಾಣ: ಉತ್ತರ ಪ್ರದೇಶದ ಜಯಪ್ರಕಾಶ್ ನಾರಾಯಣ್ ಪಕ್ಷಿಧಾಮವನ್ನು (ಸುರ್ಹಾ ತಾಲ್) ಜೂನ್ 2026 ರಲ್ಲಿ ಸೇರಿಸಲಾಯಿತು.
    • ಅತಿ ಹೆಚ್ಚು ತಾಣಗಳಿರುವ ರಾಜ್ಯ: ತಮಿಳುನಾಡು 20 ತಾಣಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ 13 ತಾಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
    • ಮೊದಲ ತಾಣಗಳು: ಒಡಿಶಾದ ಚಿಲ್ಕಾ ಸರೋವರ ಮತ್ತು ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನವನ್ನು 1981 ರಲ್ಲಿ ಭಾರತದ ಮೊದಲ ರಾಮ್‌ಸರ್ ತಾಣಗಳಾಗಿ ಘೋಷಿಸಲಾಯಿತು.
    • ವಿಸ್ತೀರ್ಣ: ಪಶ್ಚಿಮ ಬಂಗಾಳದ ಸುಂದರಬನ್ ಭಾರತದ ಅತಿ ದೊಡ್ಡ ರಾಮ್‌ಸರ್ ತಾಣವಾಗಿದ್ದು, ಹಿಮಾಚಲ ಪ್ರದೇಶದ ರೇಣುಕಾ ಜೌಗು ಪ್ರದೇಶವು ಅತ್ಯಂತ ಚಿಕ್ಕದಾಗಿದೆ.

    ಮಾಂಟ್ರಿಯಕ್ಸ್ ರೆಕಾರ್ಡ್ (Montreux Record)

    • ವಿವರಣೆ: ಇದು ಮಾಲಿನ್ಯ ಅಥವಾ ಮಾನವ ಹಸ್ತಕ್ಷೇಪದಿಂದಾಗಿ ಪರಿಸರ ನಾಶದ ಭೀತಿಯನ್ನು ಎದುರಿಸುತ್ತಿರುವ ರಾಮ್‌ಸರ್ ತಾಣಗಳ ಪಟ್ಟಿಯನ್ನು ಒಳಗೊಂಡಿರುತ್ತದೆ.
    • ಭಾರತದ ಪ್ರಸ್ತುತ ತಾಣಗಳು: ಪ್ರಸ್ತುತ ಭಾರತದ ಕೇವಲ ಎರಡು ತಾಣಗಳು ಮಾತ್ರ ಈ ಪಟ್ಟಿಯಲ್ಲಿದ್ದು, ಅವು ರಾಜಸ್ಥಾನದ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ ಮತ್ತು ಮಣಿಪುರದ ಲೋಕ್ಟಾಕ್ ಸರೋವರ ಆಗಿವೆ.
    • ಪರಿಸರ ವ್ಯವಸ್ಥೆಯನ್ನು ಯಶಸ್ವಿಯಾಗಿ ಮರುಸ್ಥಾಪಿಸಿದ ನಂತರ ಒಡಿಶಾದ ಚಿಲ್ಕಾ ಸರೋವರವನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ.

    ಐಸೊಬ್ಯುಟನಾಲ್ (Isobutanol)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತವು ತನ್ನ ಜೈವಿಕ ಇಂಧನ (Biofuel) ಕಾರ್ಯತಂತ್ರವನ್ನು ಎಥೆನಾಲ್‌ನ ಆಚೆಗೂ ವಿಸ್ತರಿಸುತ್ತಿದ್ದು, ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಡೀಸೆಲ್‌ನೊಂದಿಗೆ 15% ವರೆಗೆ ಐಸೊಬ್ಯುಟನಾಲ್ ಮಿಶ್ರಣ ಮಾಡುವ ಕುರಿತು ಸರ್ಕಾರವು ಪರಿಶೀಲಿಸುತ್ತಿದೆ.

    ಐಸೊಬ್ಯುಟನಾಲ್ ಕುರಿತ ಮಾಹಿತಿ:

    • ರಾಸಾಯನಿಕ ಲಕ್ಷಣ: ಇದು ಸೌಮ್ಯವಾದ ಆಲ್ಕೊಹಾಲ್ ವಾಸನೆಯನ್ನು ಹೊಂದಿರುವ, ಸ್ಪಷ್ಟ ಮತ್ತು ಬಣ್ಣರಹಿತ ದ್ರವವಾಗಿದೆ. ಇದು ಬ್ಯುಟನಾಲ್‌ನ (Butanol) ನಾಲ್ಕು ಐಸೋಮರ್‌ಗಳಲ್ಲಿ (Isomers) ಒಂದಾಗಿದೆ.
    • ಸಾಂಪ್ರದಾಯಿಕ ಬಳಕೆ: ಇದನ್ನು ಬಣ್ಣ, ಮೆರುಗು (Lacquer), ಲೇಪನ, ಔಷಧ ಮತ್ತು ಕೀಟನಾಶಕಗಳಲ್ಲಿ ದೀರ್ಘಕಾಲ ಕೈಗಾರಿಕಾ ದ್ರಾವಕವಾಗಿ ಬಳಸಲಾಗುತ್ತಿದೆ.
    • ಉತ್ಪಾದನೆ: ಇದನ್ನು ಪೆಟ್ರೋಕೆಮಿಕಲ್ಸ್‌ನಿಂದ ಉತ್ಪಾದಿಸಬಹುದು ಅಥವಾ ವಿನ್ಯಾಸಗೊಳಿಸಿದ ಸೂಕ್ಷ್ಮಜೀವಿಗಳನ್ನು ಬಳಸಿಕೊಂಡು ಕಬ್ಬಿನ ರಸ/ಪಾಕ, ಕಾಕಂಬಿ (ಮೊಲಾಸಸ್) ಮತ್ತು ಧಾನ್ಯಗಳಂತಹ ಜೀವರಾಶಿಯನ್ನು ಹುದುಗಿಸುವ ಮೂಲಕವೂ ಸೃಷ್ಟಿಸಬಹುದಾಗಿದೆ.

    ಡೀಸೆಲ್ ಮಿಶ್ರಣಕ್ಕಾಗಿ ಎಥೆನಾಲ್ ಬದಲಿಗೆ ಐಸೊಬ್ಯುಟನಾಲ್ ಅನ್ನು ಏಕೆ ಆಯ್ಕೆ ಮಾಡಲಾಗುತ್ತದೆ?

    ಭಾರತವು ಪೆಟ್ರೋಲ್‌ನೊಂದಿಗೆ 20% ಎಥೆನಾಲ್ ಮಿಶ್ರಣ ಮಾಡುವ ಕಡ್ಡಾಯ ನಿಯಮವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ, ಆದರೆ ಡೀಸೆಲ್‌ನೊಂದಿಗೆ ಎಥೆನಾಲ್ ಸರಿಯಾಗಿ ಬೆರೆಯಲು ವಿಫಲವಾಗಿದೆ.

    ಇದರ ಹಿಂದಿನ ವೈಜ್ಞಾನಿಕ ಕಾರಣಗಳು;

    ಲಕ್ಷಣ

    ಎಥೆನಾಲ್-ಡೀಸೆಲ್ ಮಿಶ್ರಣ

    ಐಸೊಬ್ಯುಟನಾಲ್-ಡೀಸೆಲ್ ಮಿಶ್ರಣ

    ಬೆರೆಯುವಿಕೆ (Miscibility)

    ಕಳಪೆಯಾಗಿದೆ. ಇದು ಪ್ರತ್ಯೇಕ ಪದರಗಳಾಗಿ ವಿಭಜನೆಗೊಳ್ಳುವ ಪ್ರವೃತ್ತಿಯನ್ನು ಹೊಂದಿದೆ.

    ಅತ್ಯುತ್ತಮವಾಗಿದೆ. ಯಾವುದೇ ವಿಶೇಷ ರಾಸಾಯನಿಕ ಸೇರ್ಪಡೆಗಳಿಲ್ಲದೆ ಡೀಸೆಲ್‌ನೊಂದಿಗೆ ಏಕರೂಪವಾಗಿ ಬೆರೆಯುತ್ತದೆ.

    ನೀರು ಹೀರುವಿಕೆ

    ಹೆಚ್ಚು ಹೈಗ್ರೊಸ್ಕೋಪಿಕ್ (Hygroscopic) ಆಗಿದೆ. ನೀರನ್ನು ಹೀರಿಕೊಳ್ಳುವುದರಿಂದ ಎಂಜಿನ್ ಸವೆತಕ್ಕೆ ಕಾರಣವಾಗುತ್ತದೆ.

    ಕಡಿಮೆ ಹೈಗ್ರೊಸ್ಕೋಪಿಕ್ ಆಗಿದೆ. ಸುಲಭವಾಗಿ ನೀರನ್ನು ಹೀರಿಕೊಳ್ಳುವುದಿಲ್ಲ, ಹೀಗಾಗಿ ಇದು ಕೊಳವೆ ಜಾಲದ ಮೂಲಕ ಸಾಗಿಸಲು ಹೆಚ್ಚು ಸುರಕ್ಷಿತವಾಗಿದೆ.

    ಶಕ್ತಿ ಸಾಂದ್ರತೆ

    ಕಡಿಮೆ ಶಕ್ತಿ ಸಾಂದ್ರತೆಯನ್ನು ಹೊಂದಿದೆ. ಇದರಿಂದ ವಾಹನದ ಮೈಲೇಜ್ ಕಡಿಮೆಯಾಗುತ್ತದೆ.

    ಹೆಚ್ಚಿನ ಶಕ್ತಿ ಸಾಂದ್ರತೆಯನ್ನು ಹೊಂದಿದೆ. ಇದು ಶುದ್ಧ ಡೀಸೆಲ್‌ಗೆ ಹತ್ತಿರವಾಗಿರುವುದರಿಂದ ಇಂಧನ ದಕ್ಷತೆಯನ್ನು ಕಾಯ್ದುಕೊಳ್ಳುತ್ತದೆ.

    ಫ್ಲ್ಯಾಶ್ ಪಾಯಿಂಟ್ (ಸುರಕ್ಷತೆ)

    ಕಡಿಮೆ ಫ್ಲ್ಯಾಶ್ ಪಾಯಿಂಟ್ (Flash Point) ಹೊಂದಿದೆ. ಹೆಚ್ಚು ಬಾಷ್ಪಶೀಲ (Volatile) ಆಗಿರುವುದರಿಂದ ಬೆಂಕಿಯ ಅಪಾಯ ಹೆಚ್ಚು.

    ಹೆಚ್ಚಿನ ಫ್ಲ್ಯಾಶ್ ಪಾಯಿಂಟ್ ಹೊಂದಿದೆ. ಕಡಿಮೆ ಬಾಷ್ಪಶೀಲವಾಗಿರುವುದರಿಂದ ಶೇಖರಣೆ ಮತ್ತು ಸಾಗಾಣಿಕೆಗೆ ಹೆಚ್ಚು ಸುರಕ್ಷಿತವಾಗಿದೆ.

    ಭಾರತಕ್ಕೆ ಇದರ ಮಹತ್ವ:

    • ಆಮದು ಬದಲಿ: ಡೀಸೆಲ್‌ಗೆ 10% ವರೆಗೆ ಐಸೊಬ್ಯುಟನಾಲ್ ಮಿಶ್ರಣ ಮಾಡುವುದರಿಂದ ಭಾರತದ ಹೆಚ್ಚಿನ ಕಚ್ಚಾ ತೈಲ ಆಮದು ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.
    • ಹವಾಮಾನ ಮತ್ತು ಹೊರಸೂಸುವಿಕೆ ಗುರಿಗಳು: ಇದು ಸ್ವಚ್ಛಂದವಾಗಿ ಉರಿಯುವುದರಿಂದ ಹಾನಿಕಾರಕ ಕಣಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು 2070 ರ ವೇಳೆಗೆ ಭಾರತದ ನಿವ್ವಳ ಶೂನ್ಯ (Net-Zero) ಹೊರಸೂಸುವಿಕೆ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಇದು ರಾಷ್ಟ್ರೀಯ ಜೈವಿಕ ಇಂಧನ ನೀತಿಗೆ ಪೂರಕವಾಗಿದೆ.

    ಜನ್ ಸಮರ್ಥ್ ಪೋರ್ಟಲ್ (Jan Samarth Portal)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ:

    • ಡಿಜಿಟಲ್ ಹಣಕಾಸು ಸೇರ್ಪಡೆ (Digital financial inclusion) ಮತ್ತು ತಡೆರಹಿತ ಸಾಲ ವಿತರಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜನ್ ಸಮರ್ಥ್ ಪೋರ್ಟಲ್ ಪ್ರಾರಂಭವಾಗಿ ನಾಲ್ಕು ವರ್ಷಗಳು ಪೂರ್ಣಗೊಂಡಿವೆ.

    ಜನ್ ಸಮರ್ಥ್ ಪೋರ್ಟಲ್ ಕುರಿತ ಮಾಹಿತಿ:

    • ಪ್ರಾರಂಭ: 2022 ರಲ್ಲಿ
    • ಉದ್ದೇಶ: ಇದು 16 ಸಾಲ-ಸಂಯೋಜಿತ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ನೆರವಾಗುವ ಏಕ-ಗವಾಕ್ಷಿ ಡಿಜಿಟಲ್ ವೇದಿಕೆಯಾಗಿದೆ.
    • ಮಹತ್ವ: ಇದು ಕೃಷಿ, ವ್ಯಾಪಾರ, ವಸತಿ, ನವೀಕರಿಸಬಹುದಾದ ಇಂಧನ ಮತ್ತು ಜೀವನೋಪಾಯದಂತಹ ವಿವಿಧ ವಲಯಗಳಲ್ಲಿ ಸಾಂಸ್ಥಿಕ ಸಾಲವನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
    • 8 ಭಾಷೆಗಳಲ್ಲಿ ಲಭ್ಯವಿರುವ ಈ ಪೋರ್ಟಲ್, ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ 269 ಸಾಲ ನೀಡುವ ಸಂಸ್ಥೆಗಳನ್ನು ಒಳಗೊಂಡಿದೆ.

    ಡಿಜಿಟಲ್ ಹಣಕಾಸು ಸೇರ್ಪಡೆ ಯೋಜನೆಗಳು:

    JAM ತ್ರಿವಳಿ (JAM Trinity):

    • ಜನ್ ಧನ್: ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾದವರಿಗೆ ಯಾವುದೇ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲದ, ಶೂನ್ಯ- ಮೊತ್ತದ (Zero-balance) ಖಾತೆಗಳನ್ನು ಒದಗಿಸುತ್ತದೆ.
    • ಆಧಾರ್ : ತ್ವರಿತ e-KYC ಪರಿಶೀಲನೆಗಾಗಿ ಬಳಸಲಾಗುವ ಬಯೋಮೆಟ್ರಿಕ್ ಡಿಜಿಟಲ್ ಗುರುತಿನ ಚೀಟಿಯಾಗಿದೆ.
    • ಮೊಬೈಲ್ : ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ಪ್ರಮುಖ ಸಾಧನವಾಗಿದೆ.

    ಪ್ರಮುಖ ಯೋಜನೆಗಳು:

    • ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY): ಇದು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಅಭಿಯಾನವಾಗಿದೆ. ಇದರ ಅಡಿಯಲ್ಲಿ 56 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಇದು ಉಚಿತ ರುಪೇ (RuPay) ಕಾರ್ಡ್‌ಗಳು, ₹2 ಲಕ್ಷ ಅಪಘಾತ ವಿಮೆ ಮತ್ತು ₹10,000 ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ.
    • UPI: ಇದು ನೈಜ-ಸಮಯದ ಮೊಬೈಲ್ ಪಾವತಿ ಜಾಲವಾಗಿದೆ (Real-time mobile payment network). ಇದು ಭಾರತದ ಚಿಲ್ಲರೆ ಡಿಜಿಟಲ್ ಪಾವತಿಗಳ 80% ಕ್ಕಿಂತ ಹೆಚ್ಚಿನ ಪಾಲನ್ನು ನಿರ್ವಹಿಸುತ್ತದೆ.
    • ನೇರ ನಗದು ವರ್ಗಾವಣೆ (DBT): ಸರ್ಕಾರಿ ಸಬ್ಸಿಡಿಗಳನ್ನು ನೇರವಾಗಿ ಆಧಾರ್-ಸಂಯೋಜಿತ ಖಾತೆಗಳಿಗೆ ಜಮಾ ಮಾಡುತ್ತದೆ. ಇದು ಭ್ರಷ್ಟಾಚಾರವನ್ನು ತಡೆಯುತ್ತದೆ ಮತ್ತು ಸರ್ಕಾರದ ಹಣ ಪೋಲಾಗುವುದನ್ನು ತಪ್ಪಿಸುತ್ತದೆ.
    • ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AePS): ಸ್ಥಳೀಯ ಏಜೆಂಟರ (ಬ್ಯಾಂಕ್ ಮಿತ್ರರು) ಮೂಲಕ ಗ್ರಾಮೀಣ ಭಾಗಗಳಲ್ಲಿ ಬಯೋಮೆಟ್ರಿಕ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಗೆ ಸ್ಮಾರ್ಟ್‌ಫೋನ್‌ನ ಅಗತ್ಯವಿರುವುದಿಲ್ಲ.
    • ಜನ್ ಸುರಕ್ಷಾ ಯೋಜನೆಗಳು: ಇದು ಅಗ್ಗದ ಮತ್ತು ಆಟೋ-ಡೆಬಿಟ್ ಭದ್ರತಾ ಸೌಲಭ್ಯವಾಗಿದೆ. ಇದು PMSBY (ವರ್ಷಕ್ಕೆ ₹20 ರ ಅಪಘಾತ ವಿಮೆ), PMJJBY (ವರ್ಷಕ್ಕೆ ₹436 ರ ಜೀವ ವಿಮೆ) ಮತ್ತು ಅಟಲ್ ಪಿಂಚಣಿ ಯೋಜನೆಯನ್ನು (ಅಸಂಘಟಿತ ವಲಯದ ಪಿಂಚಣಿ) ಒಳಗೊಂಡಿದೆ.
    • ಏಕೀಕೃತ ಸಾಲ ನೀಡುವ ವ್ಯವಸ್ಥೆ (ULI): ಇದು ಭೂಮಿ ಮತ್ತು ಹಣಕಾಸಿನ ದತ್ತಾಂಶವನ್ನು ತಕ್ಷಣ ಸಂಯೋಜಿಸುವ (ಲಿಂಕ್ ಮಾಡುವ) ಮೂಲಕ ಡಿಜಿಟಲ್ ಸಾಲಗಳ ವಿತರಣೆಯನ್ನು ವೇಗಗೊಳಿಸುವ ರಾಷ್ಟ್ರವ್ಯಾಪಿ ವೇದಿಕೆಯಾಗಿದೆ.

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಹಣಕಾಸು ನೀತಿ ಸಮಿತಿಗೆ (MPC) ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

    1. RBI ಗವರ್ನರ್ ಅವರು MPC ಯ ಅಧ್ಯಕ್ಷತೆ ವಹಿಸುತ್ತಾರೆ.
    2. RBI ಉಪ ಗವರ್ನರ್ ಅವರು MPC ಯ ಆಂತರಿಕ ಸದಸ್ಯರಲ್ಲಿ ಒಬ್ಬರಾಗಿರುತ್ತಾರೆ.

               ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

               A. 1 ಮಾತ್ರ

               B. 2 ಮಾತ್ರ

               C. 1 ಮತ್ತು 2 ಎರಡೂ

               D. 1 ಅಥವಾ 2 ಯಾವುದೂ ಅಲ್ಲ

    ಉತ್ತರ: C

     

    2. ಭಾರತದಲ್ಲಿನ ರಾಮ್ಸರ್ ತಾಣಗಳಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

    1. ಏಷ್ಯಾದಲ್ಲಿಯೇ ಭಾರತವು ಅತಿ ಹೆಚ್ಚು ರಾಮ್ಸರ್ ತಾಣಗಳನ್ನು ಹೊಂದಿದೆ.
    2. ಭಾರತೀಯ ರಾಜ್ಯಗಳ ಪೈಕಿ ತಮಿಳುನಾಡು ಅತಿ ಹೆಚ್ಚು ರಾಮ್ಸರ್ ತಾಣಗಳನ್ನು ಹೊಂದಿದೆ.

               ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

               A. 1 ಮಾತ್ರ

               B. 2 ಮಾತ್ರ

               C. 1 ಮತ್ತು 2 ಎರಡೂ

               D. 1 ಅಥವಾ 2 ಯಾವುದೂ ಅಲ್ಲ

    ಉತ್ತರ: C

     

    3. ಈ ಕೆಳಗಿನವುಗಳಲ್ಲಿ ಯಾವುದು ಐಸೊಬ್ಯುಟನಾಲ್ (isobutanol) ಅನ್ನು ಅತ್ಯುತ್ತಮವಾಗಿ ವಿವರಿಸುತ್ತದೆ?

         A. ಇಂಧನ ಸಂಯೋಜಕವಾಗಿ (fuel additive) ಪ್ರಾಥಮಿಕವಾಗಿ ಬಳಸಲಾಗುವ ಘನ ಹೈಡ್ರೋಕಾರ್ಬನ್.

         B. ಸೌಮ್ಯವಾದ ಆಲ್ಕೊಹಾಲ್ ವಾಸನೆಯನ್ನು ಹೊಂದಿರುವ ಸ್ಪಷ್ಟ, ಬಣ್ಣರಹಿತ ದ್ರವ ಮತ್ತು ಬ್ಯುಟನಾಲ್ ನ ನಾಲ್ಕು ಐಸೋಮರ್‌ಗಳಲ್ಲಿ ಒಂದಾಗಿದೆ.

         C. ಪೆಟ್ರೋಲಿಯಂ ಸಂಸ್ಕರಣೆಯಿಂದ ಪ್ರತ್ಯೇಕವಾಗಿ ಉತ್ಪತ್ತಿಯಾಗುವ ಅನಿಲ ಜೈವಿಕ ಇಂಧನ.

         D. ಔಷಧೀಯ ಉತ್ಪಾದನೆಯಲ್ಲಿ ಮಾತ್ರ ಬಳಸಲಾಗುವ ಸಂಶ್ಲೇಷಿತ ರಾಸಾಯನಿಕ.

    ಉತ್ತರ: B

     

    4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

    1. ಭಾರತದ ಚಿಲ್ಲರೆ ಡಿಜಿಟಲ್ ಪಾವತಿಗಳ 80% ಕ್ಕಿಂತ ಹೆಚ್ಚಿನ ಪಾಲನ್ನು UPI ನಿಭಾಯಿಸುತ್ತದೆ.
    2. ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯ ಪ್ರತಿ ವಹಿವಾಟಿಗೆ ಸ್ಮಾರ್ಟ್‌ಫೋನ್ ಅಗತ್ಯವಿದೆ.

               ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

               A. 1 ಮಾತ್ರ

               B. 2 ಮಾತ್ರ

               C. 1 ಮತ್ತು 2 ಎರಡೂ

               D. 1 ಅಥವಾ 2 ಯಾವುದೂ ಅಲ್ಲ

    ಉತ್ತರ: A

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 8, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 8, 2026

  • ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (EAC-PM) | ಪಿಎಂ ಇ-ಡ್ರೈವ್ (PM E-DRIVE) | ಮೇಜರ್ ಅಭಿಲಾಷಾ ಬರಾಕ್ ಅವರಿಗೆ ವಿಶ್ವಸಂಸ್ಥೆಯ ಪ್ರಶಸ್ತಿ | ಫುಡ್ ಪ್ಲಾನೆಟ್ ಪ್ರಶಸ್ತಿ, 2026

    ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (EAC-PM)

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಪ್ರಧಾನಮಂತ್ರಿಯವರು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನಿಶ್ಚಿತ ಜಾಗತಿಕ ಪರಿಸರದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಮತ್ತು ವೇಗವರ್ಧಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದಸ್ಯರು ಈ ಸಭೆಯಲ್ಲಿ ಚರ್ಚಿಸಿದರು.

    ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (EAC-PM)ಯ ಬಗ್ಗೆ

    • EAC-PM ಎಂಬುದು ಆರ್ಥಿಕ ಮತ್ತು ಸಂಬಂಧಿತ ವಿಷಯಗಳ ಕುರಿತು ಪ್ರಧಾನಮಂತ್ರಿಯವರಿಗೆ ಸಲಹೆ ನೀಡಲು ರಚಿಸಲಾದ ಒಂದು ಸ್ವತಂತ್ರ ಸಂಸ್ಥೆಯಾಗಿದೆ.
    • ಪ್ರಸ್ತುತ ಎಸ್. ಮಹೇಂದ್ರ ದೇವ್ ಅವರು ಇದರ ಅಧ್ಯಕ್ಷರಾಗಿದ್ದಾರೆ.
    • ಸದಸ್ಯರು: ಪ್ರಸ್ತುತ, EAC-PM ನಲ್ಲಿ ಒಬ್ಬರು ಅಧ್ಯಕ್ಷರು, 3 ಪೂರ್ಣಾವಧಿ ಸದಸ್ಯರು ಮತ್ತು 11 ಅರೆಕಾಲಿಕ ಸದಸ್ಯರು ಇದ್ದಾರೆ.
    • ಕಾರ್ಯಗಳು: ಪ್ರಧಾನಮಂತ್ರಿಯವರು ಉಲ್ಲೇಖಿಸುವ ಆರ್ಥಿಕ ಅಥವಾ ಇತರ ಯಾವುದೇ ವಿಷಯಗಳನ್ನು ವಿಶ್ಲೇಷಿಸುವುದು ಮತ್ತು ಆ ಬಗ್ಗೆ ಅವರಿಗೆ ಸಲಹೆ ನೀಡುವುದು ಹಾಗೂ ಸಮಗ್ರ ಆರ್ಥಿಕ ಪ್ರಾಮುಖ್ಯತೆಯ ವಿಷಯಗಳನ್ನು ನಿರ್ವಹಿಸುವುದು ಇದರ ಪ್ರಮುಖ ಕಾರ್ಯಗಳಾಗಿವೆ.

    ಪಿಎಂ ಇ-ಡ್ರೈವ್ (PM E-DRIVE)

    ಪರಿಸರ

    ಇದೀಗ ಸುದ್ದಿಯಲ್ಲಿ:

    • ದೆಹಲಿ ಸರ್ಕಾರವು ಪಿಎಂ ಇ-ಡ್ರೈವ್ (PM Electric Drive Revolution in Innovative Vehicle Enhancement) ಯೋಜನೆಯಡಿ 2,800 ಹೊಸ ಲೋ-ಫ್ಲೋರ್ (ಸಹಜ ನೆಲಮಟ್ಟದ) ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ.
    • ಉದ್ದೇಶ – ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಮತ್ತು ಸುಸ್ಥಿರ ನಗರ ಸಾರಿಗೆಯೆಡೆಗಿನ (ಚಲನಶೀಲತೆ) ಪರಿವರ್ತನೆಯನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

    ಪಿಎಂ ಇ-ಡ್ರೈವ್ (PM E-DRIVE) ಉಪಕ್ರಮದ ಬಗ್ಗೆ

    • ಎಲೆಕ್ಟ್ರಿಕ್ ವಾಹನ ಆಧಾರಿತ ಸಾರಿಗೆ ವ್ಯವಸ್ಥೆ ಕಡೆಗೆ ಪರಿವರ್ತನೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು 2024 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು.
    • ಈ ಯೋಜನೆಯು ಒಟ್ಟು ₹10,900 ಕೋಟಿ ಹಣಕಾಸು ವೆಚ್ಚವನ್ನು ಹೊಂದಿದೆ.
    • ಅವಧಿ: ಆರಂಭದಲ್ಲಿ ಎರಡು ವರ್ಷಗಳ (2024-26) ಅವಧಿಗೆ ಅನುಮೋದನೆ ಪಡೆದಿದ್ದ ಈ ಯೋಜನೆಯ ಅವಧಿಯನ್ನು, ಅದೇ ಅನುದಾನದೊಂದಿಗೆ ಈಗ 31 ಮಾರ್ಚ್ 2028 ರವರೆಗೆ ವಿಸ್ತರಿಸಲಾಗಿದೆ.
    • ಉದ್ದೇಶಗಳು:
      • ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ (EVs) ಅಳವಡಿಕೆಯನ್ನು ವೇಗಗೊಳಿಸುವುದು.
      • EV ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
      • ದೇಶೀಯ EV ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವುದು.
      • ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು.
      • ಹಂತ-ಹಂತದ ಉತ್ಪಾದನಾ ಕಾರ್ಯಕ್ರಮದ (PMP) ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಉತ್ತೇಜಿಸುವುದು.
    • 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಒಂಬತ್ತು ಪ್ರಮುಖ ನಗರಗಳಲ್ಲಿ 14,028 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಈ ಯೋಜನೆಯು ಬೆಂಬಲ ನೀಡುತ್ತದೆ.

    ಮೇಜರ್ ಅಭಿಲಾಷಾ ಬರಾಕ್ ಅವರಿಗೆ ವಿಶ್ವಸಂಸ್ಥೆಯ ಪ್ರಶಸ್ತಿ

    ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿ:

    • UN ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಅವಾರ್ಡ್ ಪಡೆದ ಮೇಜರ್ ಅಭಿಲಾಷಾ ಬರಾಕ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.

    ಮೇಜರ್ ಅಭಿಲಾಷಾ ಬರಾಕ್ ಅವರ ಬಗ್ಗೆ

    • ಪ್ರಸ್ತುತ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಬರಾಕ್ ಅವರಿಗೆ, ಪಶ್ಚಿಮ ಏಷ್ಯಾದ ರಾಷ್ಟ್ರದಲ್ಲಿ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಮಹಿಳೆಯರು ಮತ್ತು ಬಾಲಕಿಯರೊಂದಿಗೆ ಅವರು ಮಾಡಿದ ಸಂಪರ್ಕದ ಪ್ರಯತ್ನಗಳಿಗಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    • ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಕಾಂಬ್ಯಾಟ್ ಹೆಲಿಕಾಪ್ಟರ್ ಪೈಲಟ್ (Woman combat helicopter pilot) ಕೂಡ ಆಗಿದ್ದಾರೆ.
    • ನಾಮನಿರ್ದೇಶನ – ಪ್ರತಿ ವರ್ಷ, ಎಲ್ಲಾ ಶಾಂತಿ ಕಾರ್ಯಾಚರಣೆ ಪಡೆಗಳ ಕಮಾಂಡರ್‌ಗಳು ಮತ್ತು ಮಿಷನ್ ಮುಖ್ಯಸ್ಥರು ನಾಮನಿರ್ದೇಶನ ಮಾಡಿದ ಅಭ್ಯರ್ಥಿಗಳಿಂದ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುತ್ತದೆ.
    • ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅತಿ ಹೆಚ್ಚು ಸೈನ್ಯ ಮತ್ತು ಪೊಲೀಸ್ ಪಡೆಯನ್ನು ನೀಡುವ ದೇಶಗಳಲ್ಲಿ ಭಾರತವೂ ಸೇರಿದೆ.

    ವಿಶ್ವಸಂಸ್ಥೆಯ ಶಾಂತಿಪಾಲಕರು

    • ವಿಶ್ವಸಂಸ್ಥೆಯ (UN) ಶಾಂತಿಪಾಲಕರನ್ನು ಸಾಮಾನ್ಯವಾಗಿ ‘ಬ್ಲೂ ಹೆಲ್ಮೆಟ್ಸ್’ (Blue Helmets) ಎಂದು ಕರೆಯಲಾಗುತ್ತದೆ.
    • ಅವರು ವಿಶ್ವಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಮಿಲಿಟರಿ, ಪೊಲೀಸ್ ಮತ್ತು ನಾಗರಿಕ ಸಿಬ್ಬಂದಿಯಾಗಿದ್ದಾರೆ.
    • ಉದ್ದೇಶ – ಸಂಘರ್ಷದಲ್ಲಿರುವ ದೇಶಗಳು ಶಾಂತಿಯೆಡೆಗೆ ಸಾಗಲು ಸಹಾಯ ಮಾಡುವುದು.
    • ಕರ್ತವ್ಯಗಳು – ಇದು ನಾಗರಿಕರನ್ನು ರಕ್ಷಿಸುವುದು, ಸಂಘರ್ಷವನ್ನು ತಡೆಗಟ್ಟುವುದು, ಭದ್ರತೆಯನ್ನು ಬಲಪಡಿಸುವುದು ಮತ್ತು ಶಾಂತಿ ಪ್ರಕ್ರಿಯೆಗಳನ್ನು ಬೆಂಬಲಿಸುವುದನ್ನು ಒಳಗೊಂಡಿದೆ.
    • ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ಅಧಿಕಾರ ನೀಡುತ್ತದೆ ಮತ್ತು ಪ್ರಪಂಚದಾದ್ಯಂತ ಅನೇಕ ದೇಶಗಳ ಸಿಬ್ಬಂದಿಗಳೊಂದಿಗೆ ಸದಸ್ಯ ರಾಷ್ಟ್ರಗಳು ಬೆಂಬಲ ನೀಡುತ್ತವೆ.

    ಫುಡ್ ಪ್ಲಾನೆಟ್ ಪ್ರಶಸ್ತಿ, 2026

    ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿ:

    • ಆಂಧ್ರಪ್ರದೇಶ ಸಮುದಾಯ ಆಧಾರಿತ ನೈಸರ್ಗಿಕ ಕೃಷಿ (APCNF) ಯೋಜನೆಯು ಪ್ರತಿಷ್ಠಿತ ‘2026 ರ ಫುಡ್ ಪ್ಲಾನೆಟ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    ಪ್ರಶಸ್ತಿಯ ಬಗ್ಗೆ

    • ಈ ಪ್ರಶಸ್ತಿಯನ್ನು 2019 ರಲ್ಲಿ ಸ್ವೀಡನ್‌ನ ‘ಕರ್ಟ್ ಬರ್ಗ್‌ಫೋರ್ಸ್ ಫೌಂಡೇಶನ್’ ಸ್ಥಾಪಿಸಿತು.
    • ಜಾಗತಿಕ ಆಹಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುವ ಸಂಸ್ಥೆಗಳಿಗೆ ನೀಡಲಾಗುವ ವಿಶ್ವದ ಅತಿ ದೊಡ್ಡ ಪರಿಸರ ಪ್ರಶಸ್ತಿ ಎಂದು ಇದನ್ನು ಪರಿಗಣಿಸಲಾಗಿದೆ.
    • ಈ ಪ್ರಶಸ್ತಿಯು 5 ಮಿಲಿಯನ್ US ಡಾಲರ್ (ಅಂದಾಜು 14 ಕೋಟಿ ರೂಪಾಯಿ) ನಗದು ಬಹುಮಾನವನ್ನು ಒಳಗೊಂಡಿದೆ.
    • ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಉಪಕ್ರಮ ಎಂಬ ಹೆಗ್ಗಳಿಕೆಗೆ APCNF ಪಾತ್ರವಾಗಿದೆ.

    ಆಂಧ್ರಪ್ರದೇಶ ಸಮುದಾಯ ಆಧಾರಿತ ನೈಸರ್ಗಿಕ ಕೃಷಿ (APCNF)ಯ ಬಗ್ಗೆ

    • ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು.
    • ಈ ಯೋಜನೆಯನ್ನು ‘ರೈತು ಸಧಿಕಾರ ಸಂಸ್ಥೆ’ (RySS) ಜಾರಿಗೊಳಿಸಿದೆ.
    • ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
    • ಈ ಯೋಜನೆಯು 8,000 ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಸುಮಾರು 18 ಲಕ್ಷ ರೈತ ಕುಟುಂಬಗಳನ್ನು ಒಳಗೊಂಡಿದ್ದು, ವಿಶ್ವದ ಅತಿ ದೊಡ್ಡ ಸಮುದಾಯ ಆಧಾರಿತ ಕೃಷಿ ಪರಿಸರ ಉಪಕ್ರಮಗಳಲ್ಲಿ ಒಂದಾಗಿದೆ.
    • ಆಂಧ್ರಪ್ರದೇಶದ ಈ ಕೃಷಿ ಮಾದರಿಯನ್ನು ಪ್ರಸ್ತುತ ಭಾರತದ ಹಲವು ರಾಜ್ಯಗಳು ಸೇರಿದಂತೆ ಶ್ರೀಲಂಕಾ ಮತ್ತು ಜಾಂಬಿಯಾ ದೇಶಗಳು ಅಧ್ಯಯನ ಮಾಡಿ ಅನುಷ್ಠಾನಗೊಳಿಸುತ್ತಿವೆ.

    ನೈಸರ್ಗಿಕ ಕೃಷಿಯ ಬಗ್ಗೆ

    • ಇದು ಭಾರತೀಯ ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ, ಜಾನುವಾರುಗಳನ್ನು (ಮುಖ್ಯವಾಗಿ ದೇಶಿ ತಳಿಯ ಹಸುಗಳು) ಒಳಗೊಂಡಿರುವ ಮತ್ತು ವೈವಿಧ್ಯಮಯ ಬೆಳೆ ಪದ್ಧತಿಯನ್ನು ಅನುಸರಿಸುವ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯಾಗಿದೆ.
    • ಈ ಪದ್ಧತಿಯು ಜೈವಿಕ ರಾಶಿಯ ಹೊದಿಕೆ (Biomass Mulching), ಕೊಟ್ಟಿಗೆ ಗೊಬ್ಬರ ಹಾಗೂ ಗೋಮೂತ್ರದ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತದೆ ಮತ್ತು ಮಣ್ಣಿನ ವಾತಾಯನವನ್ನು (Aeration) ಕಾಯ್ದುಕೊಳ್ಳುವ ಮೂಲಕ ಕೃತಕ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.

    ನೈಸರ್ಗಿಕ ಕೃಷಿ ರಾಷ್ಟ್ರೀಯ ಮಿಷನ್ (NMNF)ಬಗ್ಗೆ

    • ಈ ಯೋಜನೆಯನ್ನು ನವೆಂಬರ್ 2024 ರಲ್ಲಿ ಪ್ರಾರಂಭಿಸಲಾಯಿತು.
    • ಇದು ಒಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ ರಾಸಾಯನಿಕ ಮುಕ್ತ ಮತ್ತು ಪರಿಸರಸ್ನೇಹಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
  • ಕ್ರೀಡಾ ಸುದ್ದಿಗಳು

    ಕ್ರೀಡಾ ಸುದ್ದಿಗಳು

    1. ರಾಷ್ಟ್ರೀಯ 100 ಮೀಟರ್ ಓಟದ ದಾಖಲೆ ಮುರಿದ ಗುರಿಂದರ್‌ವೀರ್ ಸಿಂಗ್

    ಇದೀಗ ಸುದ್ದಿಯಲ್ಲಿ: 

    • ರಾಂಚಿಯಲ್ಲಿ ನಡೆದ ಫೆಡರೇಶನ್ ಕಪ್ 2026 ರ ಫೈನಲ್‌ನಲ್ಲಿ ಭಾರತೀಯ ಓಟಗಾರ ಗುರಿಂದರ್‌ವೀರ್ ಸಿಂಗ್ ಅವರು ಪುರುಷರ 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ಅಥ್ಲೆಟಿಕ್ ದಾಖಲೆಯನ್ನು ನಿರ್ಮಿಸಿದರು.

    ಪ್ರಮುಖ ಅಂಶಗಳು:

    • ದಾಖಲೆಯ ಸಮಯ: ಅಧಿಕೃತವಾಗಿ 10.09 ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುವ ಮೂಲಕ 10.0-ಸೆಕೆಂಡುಗಳ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡರು.
    • ಸ್ಥಳ: ಬಿರ್ಸಾ ಮುಂಡಾ ಅಥ್ಲೆಟಿಕ್ಸ್ ಕ್ರೀಡಾಂಗಣ, ರಾಂಚಿ, ಜಾರ್ಖಂಡ್.
    • ಚಾಂಪಿಯನ್‌ಶಿಪ್ ಓಟವನ್ನು ಅಧಿಕೃತವಾಗಿ 10.20 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಅವರು, ಬೆಳ್ಳಿ ಪದಕ ವಿಜೇತ ಅನಿಮೇಶ್ ಕುಜೂರ್ ಅವರನ್ನು ಹಿಂದಿಕ್ಕಿದರು.

    2. ರಾಷ್ಟ್ರೀಯ ಕ್ರೀಡಾ ಆಡಳಿತ ಚೌಕಟ್ಟಿನ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

    ಇದೀಗ ಸುದ್ದಿಯಲ್ಲಿ: 

    • ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಕೇಂದ್ರ ಕಾನೂನಿನ ಅಡಿಯಲ್ಲಿ ರಾಷ್ಟ್ರೀಯ ಕ್ರೀಡಾ ಮಂಡಳಿ ಮತ್ತು ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯನ್ನು ಸ್ಥಾಪಿಸುವ ನಿಯಂತ್ರಕ ನಿಬಂಧನೆಗಳನ್ನು ಜಾರಿಗೆ ತಂದಿದೆ.

    ಪ್ರಮುಖ ಅಂಶಗಳು:

    • ಉನ್ನತ ಮಂಡಳಿ (ಅಪೆಕ್ಸ್ ಬೋರ್ಡ್): ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಅಧಿಕೃತ ಮಾನ್ಯತೆಯನ್ನು ನೀಡಲು ಮತ್ತು ಕಡ್ಡಾಯ ಆಡಳಿತಾತ್ಮಕ, ನೈತಿಕ ಮತ್ತು ಆರ್ಥಿಕ ಅನುಸರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇದನ್ನು ರಚಿಸಲಾಗಿದೆ.
    • ಮಂಡಳಿಯ ಸಂಯೋಜನೆ: ಮಂಡಳಿಯು ಓರ್ವ ಅಧ್ಯಕ್ಷರು ಮತ್ತು ಇಬ್ಬರು ಆಯ್ದ ಸದಸ್ಯರನ್ನು ಒಳಗೊಂಡಿರುತ್ತದೆ, ಇವರು ಗರಿಷ್ಠ ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಸೇವೆ ಸಲ್ಲಿಸುತ್ತಾರೆ.
    • ವಿವಾದ ನ್ಯಾಯಮಂಡಳಿ: ದೇಶೀಯ ಕ್ರೀಡೆಗೆ ಸಂಬಂಧಿಸಿದ ಚುನಾವಣಾ ಮತ್ತು ಆಡಳಿತಾತ್ಮಕ ಕಾನೂನು ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಕಾರ್ಯವನ್ನು ಹೊಂದಿರುವ ಸ್ವತಂತ್ರ ನ್ಯಾಯಾಂಗ ಸಂಸ್ಥೆಯಾಗಿ ಇದನ್ನು ರಚಿಸಲಾಗಿದೆ.
    • ಕಟ್ಟುನಿಟ್ಟಾದ ನಿರ್ಬಂಧಗಳು: ನೇಮಕಗೊಂಡ ನಿಯಂತ್ರಕ ಅಧಿಕಾರಿಗಳು ಯಾವುದೇ ಸಕ್ರಿಯ ಕ್ರೀಡಾ ಒಕ್ಕೂಟಗಳಲ್ಲಿ ಏಕಕಾಲದಲ್ಲಿ ಕಾರ್ಯಕಾರಿ ಸ್ಥಾನಗಳನ್ನು ಹೊಂದುವುದನ್ನು ಕಾನೂನುಬದ್ಧವಾಗಿ ನಿರ್ಬಂಧಿಸಲಾಗಿದೆ.

    3. ISSF: ಮ್ಯೂನಿಚ್‌ನಲ್ಲಿ ಪಿಸ್ತೂಲ್ ವಿಶ್ವದಾಖಲೆ ಮುರಿದ ಇಶಾ ಸಿಂಗ್

    ಇದೀಗ ಸುದ್ದಿಯಲ್ಲಿ: 

    • ಭಾರತೀಯ ಶೂಟರ್ ಇಶಾ ಸಿಂಗ್ ಅವರು ISSF ವಿಶ್ವಕಪ್ 2026 ರಲ್ಲಿ ಹೊಸ ಜಾಗತಿಕ ಸ್ಕೋರಿಂಗ್ ಮಾನದಂಡವನ್ನು ಸ್ಥಾಪಿಸುವ ಜೊತೆಗೆ ಚಿನ್ನದ ಪದಕವನ್ನು ಗೆದ್ದುಕೊಂಡರು.

    ಪ್ರಮುಖ ಅಂಶಗಳು:

    • ದಾಖಲೆಯ ಸ್ಕೋರ್: ಫೈನಲ್‌ನಲ್ಲಿ ಒಟ್ಟು 43 ಅಂಕಗಳನ್ನು ದಾಖಲಿಸುವ ಮೂಲಕ, ತಮ್ಮ ಆರಂಭಿಕ ಮೂರು ಸರಣಿಗಳಲ್ಲಿ ಪರಿಪೂರ್ಣ ಗುರಿ ಅಂಕಗಳನ್ನು ಸಾಧಿಸಿದರು.
    • ಸ್ಪರ್ಧೆ ಮತ್ತು ಸ್ಥಳ: ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆ, ಜರ್ಮನಿಯ ಮ್ಯೂನಿಚ್‌ನಲ್ಲಿ ಆಯೋಜಿಸಲಾಗಿತ್ತು.
    • ರನ್ನರ್-ಅಪ್: ಮಾಜಿ ವಿಶ್ವ ಚಾಂಪಿಯನ್ ಡೋರೀನ್ ವೆನ್ನೆಕ್ಯಾಂಪ್ ಅವರನ್ನು ಐದು-ಪಾಯಿಂಟ್ ಅಂತರದಿಂದ ಹಿಂದಿಕ್ಕಿದರು, 
    • ಒಲಿಂಪಿಕ್ ಚಾಂಪಿಯನ್ ಯಾಂಗ್ ಜಿನ್ ಐದನೇ ಸ್ಥಾನ ಪಡೆದರು.

    4. ಸಿಂಗಾಪುರ್ ಓಪನ್ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್

    ಇದೀಗ ಸುದ್ದಿಯಲ್ಲಿ: 

    • ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನೊಳಗೊಂಡ ಭಾರತೀಯ ಜೋಡಿಯು ಸಿಂಗಾಪುರ್ ಓಪನ್ 2026 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

    ಪ್ರಮುಖ ಅಂಶಗಳು:

    • ರಾಷ್ಟ್ರೀಯ ಪ್ರಥಮ ಸಾಧನೆ: ಈ ಸ್ಪರ್ಧೆಯ ಇತಿಹಾಸದಲ್ಲಿ ಭಾರತೀಯ ಡಬಲ್ಸ್ ಜೋಡಿಯೊಂದು ಈ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
    • ಫೈನಲ್ ಸ್ಪರ್ಧಿಗಳು: 73 ನಿಮಿಷಗಳ ಫೈನಲ್ ಪಂದ್ಯದಲ್ಲಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಹಿಬುಲ್ ಫಿಕ್ರಿ ಅವರ ಇಂಡೋನೇಷಿಯನ್ ಜೋಡಿಯನ್ನು ಸೋಲಿಸಿದರು.
    • BWF ಪ್ರಶಸ್ತಿಗಳ ಗಳಿಕೆ: ಸತತ ಎರಡು ವರ್ಷಗಳ ಪ್ರಶಸ್ತಿಯ ಕೊರತೆಯನ್ನು ಯಶಸ್ವಿಯಾಗಿ ನೀಗಿಸುವ ಮೂಲಕ ತಮ್ಮ ಒಂಬತ್ತನೇ ವೃತ್ತಿಜೀವನದ BWF ವರ್ಲ್ಡ್ ಟೂರ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

    5. ಅಹಮದಾಬಾದ್‌ನಲ್ಲಿ ಚೊಚ್ಚಲ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 

    ಇದೀಗ ಸುದ್ದಿಯಲ್ಲಿ: 

    • ಅಂತರರಾಷ್ಟ್ರೀಯ ಕ್ರೀಡಾ ನಿಯೋಗಗಳನ್ನು ಉದ್ದೇಶಿಸಿ ವರ್ಚುವಲ್ ಉದ್ಘಾಟನೆಯೊಂದಿಗೆ ಮೊದಲ ಬಾರಿಗೆ ಸ್ಪರ್ಧಾತ್ಮಕ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 ಪ್ರಾರಂಭವಾಯಿತು.

    ಪ್ರಮುಖ ಅಂಶಗಳು:

    • ಆತಿಥೇಯ ಸ್ಥಳ: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ EKA ಅರೆನಾದಲ್ಲಿ ಜೂನ್ 4, 2026 ರಿಂದ ಇದನ್ನು ನಡೆಸಲಾಯಿತು.
    • ಕಾರ್ಯತಂತ್ರದ ಉದ್ದೇಶ: ಇದು ಒಲಿಂಪಿಕ್ ಕ್ರೀಡಾಕೂಟಕ್ಕೆ ಭವಿಷ್ಯದಲ್ಲಿ ಯೋಗಾಸನವನ್ನು ಸೇರ್ಪಡೆಗೊಳಿಸುವುದನ್ನು ಬೆಂಬಲಿಸಲು ಪ್ರಮಾಣಿತ ತಾಂತ್ರಿಕ ನಿಯಮಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
    • ಕ್ಯಾಲೆಂಡರ್ ಹೊಂದಾಣಿಕೆ: ಜೂನ್ 21 ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಂಚಿತವಾಗಿ ಇದನ್ನು ನಿಗದಿಪಡಿಸಲಾಗಿದೆ.
    • ಧ್ಯೇಯವಾಕ್ಯ:ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” (Yoga for Healthy Ageing)

    ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಭಾರತ

    • ಒಟ್ಟು ಪದಕಗಳು: ಭಾರತವು 102 ಚಿನ್ನ, 9 ಬೆಳ್ಳಿ, ಮತ್ತು 3 ಕಂಚು ಸೇರಿದಂತೆ ದಾಖಲೆಯ ಒಟ್ಟು 114 ಪದಕಗಳನ್ನು ಪಡೆದುಕೊಂಡಿದೆ.
    • ಸ್ಪರ್ಧಿಗಳು: 79 ರಾಷ್ಟ್ರಗಳನ್ನು ಪ್ರತಿನಿಧಿಸುವ 522 ಜಾಗತಿಕ ಸ್ಪರ್ಧಿಗಳು ಭಾಗವಹಿಸಿದ್ದರು.
    • ಎರಡನೇ ಸ್ಥಾನ: ಜಪಾನ್ ಚಿನ್ನದ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನವನದಲ್ಲಿದೆ.

    ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಟಾಪ್ 5 ಸ್ಥಾನಗಳು

    ಶ್ರೇಯಾಂಕ

    ರಾಷ್ಟ್ರ

    ಚಿನ್ನ

    ಬೆಳ್ಳಿ

    ಕಂಚು

    ಒಟ್ಟು

    1

    ಭಾರತ

    102

    9

    3

    114

    2

    ಜಪಾನ್

    3

    3

    5

    11

    3

    ಅರ್ಜೆಂಟೀನಾ

    2

    3

    0

    5

    4

    ಸಿಂಗಾಪುರ

    2

    2

    3

    7

    5

    ನೇಪಾಳ

    1

    36

    15

    52

    6. ನಾರ್ವೆ ಚೆಸ್ ಟೂರ್ನಿ ಪ್ರಶಸ್ತಿ ಗೆದ್ದ ಪ್ರಜ್ಞಾನಂದ

    ಇದೀಗ ಸುದ್ದಿಯಲ್ಲಿ: 

    • ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಚೆಸ್ 2026 ಪಂದ್ಯಾವಳಿಯ ಚಾಂಪಿಯನ್‌ಶಿಪ್ ಅನ್ನು ಪಡೆದುಕೊಂಡಿದ್ದು, ಈ ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ ಚೆಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಪ್ರಮುಖ ಅಂಶಗಳು:

    • ಅಂತಿಮ ಸ್ಕೋರ್: ಕ್ಲಾಸಿಕಲ್ ಮಾದರಿಗಳಾದ್ಯಂತ ಸಂಪೂರ್ಣ 18 ಅಂಕಗಳ ಅಂತಿಮ ಗಳಿಕೆಯೊಂದಿಗೆ ಇವರು ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು.
    • ನಿರ್ಣಾಯಕ ಪಂದ್ಯ: ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸುವ ಮೂಲಕ ಸತತ ನಾಲ್ಕು ಗೆಲುವುಗಳ ಸರಣಿಯನ್ನು ಮುಕ್ತಾಯಗೊಳಿಸಿದರು.
    • ಪ್ರಮುಖ ಗೆಲುವು: ಮಾಜಿ ವಿಶ್ವ ಚಾಂಪಿಯನ್ ಮತ್ತು ಹಲವು-ಬಾರಿ ಪಂದ್ಯಾವಳಿ ವಿಜೇತ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಎರಡು ಕ್ಲಾಸಿಕಲ್ ಮಾದರಿಯ ಗೆಲುವುಗಳನ್ನು ಸಾಧಿಸಿದರು.

    7. ಫ್ರೆಂಚ್ ಓಪನ್ ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿ: 

    • ಅಲೆಕ್ಸಾಂಡರ್ ಜ್ವೆರೆವ್ ಮತ್ತು ಯುವ ಆಟಗಾರ್ತಿ ಮಿರಾ ಆಂಡ್ರೀವಾ ಅವರು 2026 ರ ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಪಡೆದುಕೊಂಡರು.

    ಪ್ರಮುಖ ಅಂಶಗಳು:

    • ಪುರುಷರ ಸಿಂಗಲ್ಸ್: ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಐದು ಸೆಟ್‌ಗಳ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ಅವರನ್ನು ಸೋಲಿಸಿ ತಮ್ಮ ಮೊದಲ ಪ್ರಮುಖ ಟ್ರೋಫಿಯನ್ನು ಪಡೆದುಕೊಂಡರು.
    • ಮಹಿಳೆಯರ ಸಿಂಗಲ್ಸ್: 19 ವರ್ಷದ ರಷ್ಯಾದ ಆಟಗಾರ್ತಿ ಮಿರಾ ಆಂಡ್ರೀವಾ ಅವರು ಪೋಲೆಂಡ್‌ನ ಮಜಾ ಚ್ವಾಲಿನ್ಸ್ಕಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸುಝೇನ್-ಲೆಂಗ್ಲೆನ್ ಕಪ್ ಗೆದ್ದುಕೊಂಡರು.
    • ಡಬಲ್ಸ್: ಮಾರ್ಸೆಲ್ ಗ್ರಾನೊಲರ್ಸ್ ಮತ್ತು ಹೊರಾಸಿಯೊ ಝೆಬಾಲೋಸ್ ಪುರುಷರ ಪ್ರಶಸ್ತಿಯನ್ನು ಉಳಿಸಿಕೊಂಡರು; ಸಾರಾ ಎರ್ನಾನಿ ಮತ್ತು ಆಂಡ್ರಿಯಾ ವವಾಸ್ಸೊರಿ ಅವರು ಮಿಶ್ರ ಡಬಲ್ಸ್ ಕಿರೀಟವನ್ನು ಉಳಿಸಿಕೊಂಡರು.

    ಫ್ರೆಂಚ್ ಓಪನ್ 2026: ಅಧಿಕೃತ ಚಾಂಪಿಯನ್‌ಶಿಪ್ ಫಲಿತಾಂಶಗಳು

    ವರ್ಗ

    ವಿಜೇತರು

    ರನ್ನರ್-ಅಪ್

    ಪುರುಷರ ಸಿಂಗಲ್ಸ್

    ಅಲೆಕ್ಸಾಂಡರ್ ಜ್ವೆರೆವ್ (ಜರ್ಮನಿ)

    ಫ್ಲಾವಿಯೊ ಕೊಬೊಲ್ಲಿ (ಇಟಲಿ)

    ಮಹಿಳೆಯರ ಸಿಂಗಲ್ಸ್

    ಮಿರಾ ಆಂಡ್ರೀವಾ (ರಷ್ಯಾ)

    ಮಜಾ ಚ್ವಾಲಿನ್ಸ್ಕಾ (ಪೋಲೆಂಡ್)

    ಪುರುಷರ ಡಬಲ್ಸ್

    ಎಂ. ಗ್ರಾನೊಲರ್ಸ್ / ಎಚ್. ಝೆಬಾಲೋಸ್

    ಹೆನ್ರಿ ಪ್ಯಾಟನ್ / ಹ್ಯಾರಿ ಹೆಲಿಯೋವಾರಾ

    ಮಹಿಳೆಯರ ಡಬಲ್ಸ್

    ಕೆ. ಸಿನಿಯಾಕೋವಾ / ಟಿ. ಟೌನ್ಸೆಂಡ್

    ಅನ್ನಾ ಡ್ಯಾನಿಲಿನಾ / ಅಲೆಕ್ಸಾಂಡ್ರಾ ಕ್ರುನಿಕ್

    ಮಿಶ್ರ ಡಬಲ್ಸ್

    ಸಾರಾ ಎರ್ನಾನಿ / ಆಂಡ್ರಿಯಾ ವವಾಸ್ಸೊರಿ

    ಗೇಬ್ರಿಯೋವ್ಸ್ಕಿ / ಇವಾನ್ ಕಿಂಗ್

    8. ಆರನೇ ಸ್ಯಾಫ್ (SAFF) ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್ ಗೆದ್ದ ಭಾರತ

    ಇದೀಗ ಸುದ್ದಿಯಲ್ಲಿ: 

    • ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತೀಯ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡವು ಸ್ಯಾಫ್ (SAFF) ಮಹಿಳಾ ಚಾಂಪಿಯನ್‌ಶಿಪ್ 2026 ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

    ಪ್ರಮುಖ ಅಂಶಗಳು:

    • ಸ್ಕೋರ್ ಮತ್ತು ಸ್ಥಳ: ಗೋವಾದ ಮಡಗಾಂವ್‌ನಲ್ಲಿರುವ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 3-1 ಅಂತರದ ಗೆಲುವು ದಾಖಲಿಸಿತು.
    • ಪಂದ್ಯಾವಳಿಯ ದಾಖಲೆ: ನಾಲ್ಕು ಪಂದ್ಯಗಳಲ್ಲಿ ಸಂಪೂರ್ಣವಾಗಿ ಅಜೇಯವಾಗಿ ಉಳಿದು, 18 ಗೋಲುಗಳನ್ನು ಗಳಿಸಿ ಕೇವಲ ಒಂದು ಗೋಲನ್ನು ಮಾತ್ರ ಬಿಟ್ಟುಕೊಟ್ಟಿತು.

    9. ಜೂನಿಯರ್ ಪುರುಷರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ

    ಇದೀಗ ಸುದ್ದಿಯಲ್ಲಿ: 

    • ಪುರುಷರ ಅಂಡರ್-18 (U18) ಏಷ್ಯಾ ಕಪ್ 2026ರ ಟೂರ್ನಿಯಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಏಷ್ಯಾ ಖಂಡದ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    ಪ್ರಮುಖ ಅಂಶಗಳು:

    • ಅಂತಿಮ ಸ್ಕೋರ್: ಫೈನಲ್ ಚಿನ್ನದ ಪದಕದ ಪಂದ್ಯದಲ್ಲಿ ಆತಿಥೇಯ ಜಪಾನ್ ದೇಶವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿತು.
    • ಪಂದ್ಯದ ಸ್ಥಳ: ಕಾಕಾಮಿಗಹರಾ, ಜಪಾನ್.

    10. ಸ್ಮೃತಿ ಮಂಧಾನಾ: ಕ್ರೀಡೆಯಲ್ಲಿನ TIME 100  ಪಟ್ಟಿ

    • ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ತಮ್ಮ ದಾಖಲೆ-ಮುರಿಯುವ ಅಂತರರಾಷ್ಟ್ರೀಯ ಬ್ಯಾಟಿಂಗ್ ಸ್ಥಿರತೆ ಮತ್ತು ಫ್ರ್ಯಾಂಚೈಸ್ ನಾಯಕತ್ವಕ್ಕಾಗಿ ಕ್ರೀಡೆಯಲ್ಲಿನ TIME100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ 2026 ರ ಪಟ್ಟಿಯಲ್ಲಿ ಏಕೈಕ ಭಾರತೀಯರಾಗಿ ಸ್ಥಾನ ಪಡೆದಿದ್ದಾರೆ.

    ಸ್ಮೃತಿ ಮಂಧಾನಾ ಅವರ ದಾಖಲೆಗಳು: 

    • ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ; 
    • ಮಹಿಳೆಯರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು (17) ಬಾರಿಸಿದ ಜಂಟಿ ಜಾಗತಿಕ ದಾಖಲೆಯನ್ನು ಇವರು ಹೊಂದಿದ್ದಾರೆ.
    • ಇವರು ಭಾರತದ ಸಾರ್ವಕಾಲಿಕ ಅತಿ ಹೆಚ್ಚು T20 ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ; 
    • ಒಂದು ಕ್ಯಾಲೆಂಡರ್ ವರ್ಷದಲ್ಲಿ 1,000 ಏಕದಿನ (ODI) ರನ್‌ಗಳನ್ನು ದಾಟಿದ ಮೊದಲ ಮಹಿಳೆಯಾಗಿದ್ದಾರೆ.
    • ಇವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎರಡು ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಗಳನ್ನು (2024, 2026) ಗೆದ್ದಿದೆ ಮತ್ತು ಭಾರತವು 2025 ರ ವಿಶ್ವಕಪ್ ವಿಜಯವನ್ನು ಸಾಧಿಸಿದಾಗ ಇವರು ಉಪನಾಯಕಿಯಾಗಿದ್ದರು.

    11. ದೀಪ್ತಿ ಶರ್ಮಾ: ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ

    ಭಾರತದ ಕ್ರಿಕೆಟ್ ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ ಅವರು 2026 ರ ಮಹಿಳಾ T20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ 355 ನೇ ಅಂತರರಾಷ್ಟ್ರೀಯ ವಿಕೆಟ್ ಪಡೆಯುವ ಮೂಲಕ ಝೂಲನ್ ಗೋಸ್ವಾಮಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ ಹಾಗೂ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

    ಪ್ರಮುಖ ಅಂಶಗಳು:

    • ಲೀಡ್ಸ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಫೆಬೆ ಮೊಲ್ಕೆನ್‌ಬೋರ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.
    • ಅಗ್ರಸ್ಥಾನದಲ್ಲಿ ಮೂವರ ಸಮಬಲ: ಸ್ವದೇಶಿ ಆಟಗಾರ್ತಿ ಝೂಲನ್ ಗೋಸ್ವಾಮಿ ಮತ್ತು ಇಂಗ್ಲೆಂಡ್‌ನ ಕ್ಯಾಥರೀನ್ ಸ್ಕೈವರ್-ಬ್ರಂಟ್ ಅವರೊಂದಿಗೆ ದೀಪ್ತಿ ಶರ್ಮಾ ಅವರು ಸಾರ್ವಕಾಲಿಕ ಜಾಗತಿಕ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ (ಮೂವರೂ ತಲಾ 355 ವಿಕೆಟ್‌ಗಳನ್ನು ಪಡೆದಿದ್ದಾರೆ).

    12. ಭಾರತೀಯ ಅಥ್ಲೆಟಿಕ್ಸ್ ಪ್ರಶಸ್ತಿಗಳು 2025

    • ನವದೆಹಲಿಯಲ್ಲಿ ನಡೆದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ (AFI) ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀರಜ್ ಚೋಪ್ರಾ ಮತ್ತು ಪಾರುಲ್ ಚೌಧರಿ ಅವರು ಉನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
    • ಪ್ರಮುಖ ಅಂಶಗಳು:
      • 90 ಮೀಟರ್ ಸಾಧನೆ: ದೋಹಾ ಡೈಮಂಡ್ ಲೀಗ್‌ನಲ್ಲಿ ತಮ್ಮ ರಾಷ್ಟ್ರೀಯ ದಾಖಲೆಯಾದ 90.23m ಎಸೆತಕ್ಕಾಗೆ ನೀರಜ್ ಚೋಪ್ರಾ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
      • ಏಷ್ಯನ್ ಪ್ರಾಬಲ್ಯ: ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು (3000 ಮೀಟರ್ ಸ್ಟೀಪಲ್‌ಚೇಸ್ ಮತ್ತು 5000 ಮೀಟರ್) ಗಳಿಸಿದ್ದಕ್ಕಾಗಿ ಪಾರುಲ್ ಚೌಧರಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

    ಪ್ರಮುಖ ವಿಜೇತರು

    ವರ್ಗ 

    ವಿಜೇತರು

    ಕ್ಷೇತ್ರ / ವಿಭಾಗ 

    ಅತ್ಯುತ್ತಮ ಪುರುಷ ಕ್ರೀಡಾಪಟು

    ನೀರಜ್ ಚೋಪ್ರಾ

    ಜಾವೆಲಿನ್ ಎಸೆತ

    ಅತ್ಯುತ್ತಮ ಮಹಿಳಾ ಕ್ರೀಡಾಪಟು 

    ಪಾರುಲ್ ಚೌಧರಿ

    ಸ್ಟೀಪಲ್‌ಚೇಸ್ ಮತ್ತು 5000 ಮೀ.

    ಜೀವಮಾನ ಸಾಧನೆ ಪ್ರಶಸ್ತಿ 

    ಪಿ.ಟಿ. ಉಷಾ 

    ಓಟ / ಆಡಳಿತ 

    ಅತ್ಯುತ್ತಮ ರಾಜ್ಯ ಪ್ರವರ್ತಕ 

    ಒಡಿಶಾ ಸರ್ಕಾರ 

    ಮೂಲಸೌಕರ್ಯ ಉತ್ತೇಜನ 

    ಅತ್ಯುತ್ತಮ ರಾಜ್ಯ ಸಂಸ್ಥೆ 

    ತಮಿಳುನಾಡು 

    ಅಥ್ಲೆಟಿಕ್ಸ್ ಆಡಳಿತ 

    13. ಹರ್ಮನ್‌ಪ್ರೀತ್ ಕೌರ್: 200 T20 ಪಂದ್ಯಗಳು : 

    • ದಕ್ಷಿಣ ಆಫ್ರಿಕಾ ವಿರುದ್ಧದ 2026 ರ ವಿಶ್ವಕಪ್ ಪಂದ್ಯದ ವೇಳೆ, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಇತಿಹಾಸದಲ್ಲಿಯೇ 200 T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ.

    ಪ್ರಮುಖ ಅಂಶಗಳು:

    • ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಈ ಸಾಧನೆ ಮಾಡಲಾಗಿದ್ದು, ಇದರ ಸವಿನೆನಪಿಗಾಗಿ ‘200’ ಸಂಖ್ಯೆ ಮುದ್ರಿಸಿರುವ ಕ್ಯಾಪ್ ಮತ್ತು ಜರ್ಸಿ ನೀಡಿ ಅವರನ್ನು ಗೌರವಿಸಲಾಯಿತು.
    • ಮಹಿಳಾ ವಿಭಾಗದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಎರಡನೇ ಆಟಗಾರ್ತಿ ಸೂಜಿ ಬೇಟ್ಸ್ (184 ಪಂದ್ಯಗಳು) ಮತ್ತು ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಪಾಲ್ ಸ್ಟಿರ್ಲಿಂಗ್ (163 ಪಂದ್ಯಗಳು) ಅವರಿಗಿಂತ ಹರ್ಮನ್‌ಪ್ರೀತ್ ಕೌರ್ ಅವರು ಅತ್ಯಂತ ಮುನ್ನಡೆಯನ್ನು ಸಾಧಿಸಿದ್ದಾರೆ.
    • 2009 ರಲ್ಲಿ ಮಹಿಳಾ T20 ವಿಶ್ವಕಪ್ ಪ್ರಾರಂಭವಾದಾಗಿನಿಂದ ಪ್ರತಿಯೊಂದು ಆವೃತ್ತಿಯಲ್ಲೂ ಭಾಗವಹಿಸಿದ ಜಾಗತಿಕ ಮಟ್ಟದ ಏಳು ಆಟಗಾರರಲ್ಲಿ ಇವರೂ ಸಹ ಒಬ್ಬರಾಗಿದ್ದಾರೆ.

    14. ವೈಭವ್ ಸೂರ್ಯವಂಶಿ  : ‘ಲಿಸ್ಟ್ A’ ಇತಿಹಾಸದಲ್ಲಿಯೇ ಅತಿ ವೇಗದ ಅರ್ಧಶತಕದ ದಾಖಲೆ: 

    • ಶ್ರೀಲಂಕಾದ ದಂಬುಲಾ ಕ್ರಿಡಾಂಗಣದಲ್ಲಿ ಇಂಡಿಯಾ A ಮತ್ತು ಶ್ರೀಲಂಕಾ A ತಂಡಗಳ ನಡುವೆ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ, ಕೇವಲ 11 ಎಸೆತಗಳಲ್ಲಿ ಅರ್ಧಶತಕವನ್ನು ತಲುಪುವ ಮೂಲಕ, ಹದಿನೈದು ವರ್ಷದ ಭಾರತೀಯ ಬ್ಯಾಟಿಂಗ್ ಸೆನ್ಸೇಷನ್ ಆಟಗಾರ ವೈಭವ್ ಸೂರ್ಯವಂಶಿ ಅವರು ಲಿಸ್ಟ್ A ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

    1. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯನ್ನು (EAC-PM) ಈ ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮವಾಗಿ ವಿವರಿಸುತ್ತದೆ?

         A. ಆರ್ಥಿಕ ಕಾನೂನುಗಳ ಕುರಿತು ಸಂಸತ್ತಿಗೆ ಸಲಹೆ ನೀಡುವ ಸಾಂವಿಧಾನಿಕ ಸಂಸ್ಥೆ.

         B. ಆರ್ಥಿಕ ಮತ್ತು ಸಂಬಂಧಿತ ವಿಷಯಗಳ ಕುರಿತು ಪ್ರಧಾನಮಂತ್ರಿಗೆ ಸಲಹೆ ನೀಡಲು ರಚಿಸಲಾದ ಸ್ವತಂತ್ರ ಸಂಸ್ಥೆ.

         C. ಹಣಕಾಸು ವಿಷಯಗಳ ಕುರಿತು ಹಣಕಾಸು ಆಯೋಗಕ್ಕೆ ಸಲಹೆ ನೀಡುವ ಶಾಸನಬದ್ಧ ಸಂಸ್ಥೆ.

         D. ಸಮಗ್ರ -ಆರ್ಥಿಕ ಸೂಚಕಗಳನ್ನು ಮೇಲ್ವಿಚಾರಣೆ ಮಾಡುವ ನಿಯಂತ್ರಕ ಪ್ರಾಧಿಕಾರ.

    ಉತ್ತರ: B

     

    2. ಪಿಎಂ ಇ-ಡ್ರೈವ್ (PM E-DRIVE) ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಯಾವುದು ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ?

         A. ಗ್ರಾಮೀಣ ಭಾರತದಾದ್ಯಂತ ಹೈಡ್ರೋಜನ್ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವುದು.

     B. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ಮೂಲಕ ಸುಸ್ಥಿರ ನಗರ ಸಾರಿಗೆಯನ್ನು ವೇಗಗೊಳಿಸುವುದು.

         C. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ಸಬ್ಸಿಡಿಗಳನ್ನು ಒದಗಿಸುವುದು.

         D. ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ಜಾಲಗಳನ್ನು ಸ್ಥಾಪಿಸುವುದು.

    ಉತ್ತರ: B

     

    3. ಇತ್ತೀಚೆಗೆ ಮೇಜರ್ ಅಭಿಲಾಷಾ ಬರಾಕ್ ಅವರಿಗೆ ಈ ಕೆಳಗಿನ ಯಾವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು?

         A. UN ವುಮನ್ ಪೀಸ್‌ಕೀಪರ್ ಪ್ರಶಸ್ತಿ.

         B. UN ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ.

         C. UN ಪೀಸ್ ಅಂಬಾಸಿಡರ್ ಪ್ರಶಸ್ತಿ.

         D. UN ಸಿವಿಲಿಯನ್ ಪ್ರೊಟೆಕ್ಷನ್ ಪ್ರಶಸ್ತಿ.

    ಉತ್ತರ: B

     

    4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

    1. ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನ್ನು ನವೆಂಬರ್ 2024 ರಲ್ಲಿ ಪ್ರಾರಂಭಿಸಲಾಯಿತು.
    2. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    3. ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ, ಪರಿಸರ ಸ್ನೇಹಿ-ಆಧಾರಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

                ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

                 A. ಕೇವಲ ಒಂದು

                 B. ಕೇವಲ ಎರಡು

                 C. ಎಲ್ಲಾ ಮೂರೂ

                 D. ಯಾವುದೂ ಅಲ್ಲ

    ಉತ್ತರ: C

  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 6, 2026

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಸಪ್ರಶ್ನೆ – ಜೂನ್ 6, 2026

  • ಭಾರತ-ವೆನೆಜುವೆಲಾ | ಪ್ರಧಾನ ಮಂತ್ರಿ ಸಂಶೋಧನಾ ಪೀಠ ಯೋಜನೆ 2026 (PMRC) | ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೀಲಕಂಠ್ ಮಿಶ್ರಾ ನೇಮಕ | ಭಾರತ-ಯುಕೆ ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿ ವೀಕ್ಷಣಾಲಯ (GSCO)

    ಭಾರತ-ವೆನೆಜುವೆಲಾ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

    ಭೇಟಿಯ ಪ್ರಮುಖ ಫಲಿತಾಂಶಗಳು: 

    • ದೀರ್ಘಾವಧಿಯ ಇಂಧನ ಪಾಲುದಾರಿಕೆಯತ್ತ ಮಾತುಕತೆ: ತಕ್ಷಣದ ಖರೀದಿಗಳಿಂದ (Spot purchases) ದೀರ್ಘಾವಧಿಯ ಕಚ್ಚಾ ತೈಲ ಪೂರೈಕೆ ಒಪ್ಪಂದಗಳಿಗೆ ಚಲಿಸುವ ಬಗ್ಗೆ ಉಭಯ ಮುಖಂಡರು ಚರ್ಚಿಸಿದರು.
    • ನಿರ್ಣಾಯಕ ಖನಿಜಗಳಲ್ಲಿ ಸಹಕಾರ: ಚರ್ಚೆಗಳು ನಿರ್ಣಾಯಕ ಖನಿಜಗಳು, ಚಿನ್ನ ಮತ್ತು ವಜ್ರ ಗಣಿಗಾರಿಕೆಯನ್ನು ಒಳಗೊಂಡಿದ್ದವು.
    • ಇತರ ವಲಯಗಳಲ್ಲಿ ಸಹಕಾರ: ಕೃಷಿ ಮತ್ತು ಕೃಷಿ ಯಾಂತ್ರೀಕರಣ, ಪಶುಸಂಗೋಪನೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಆಟೋಮೋಟಿವ್ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ.

    ಭಾರತಕ್ಕೆ ವೆನೆಜುವೆಲಾದ ಪ್ರಾಮುಖ್ಯತೆ: 

    • ಇಂಧನ ಭದ್ರತೆ: ವೆನೆಜುವೆಲಾ ವಿಶ್ವದ ಅತಿದೊಡ್ಡ ದೃಢೀಕೃತ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ.
    • ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದೆ ಮತ್ತು ತನ್ನ ತೈಲ ಅಗತ್ಯಗಳ 85% ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ.
    • ಭಾರತೀಯ ಸಂಸ್ಕರಣಾಗಾರಗಳು ವೆನೆಜುವೆಲಾದ ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸಲು ಸುಸಜ್ಜಿತವಾಗಿವೆ.
    • ಲ್ಯಾಟಿನ್ ಅಮೆರಿಕನ್ ಪ್ರದೇಶದೊಂದಿಗೆ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವುದರಿಂದ, ಆ ಭೌಗೋಳಿಕ ಭಾಗದಲ್ಲಿ ಭಾರತದ ರಾಜತಾಂತ್ರಿಕ ಸಂಬಂಧವನ್ನು ಹೆಚ್ಚಿಸುವಲ್ಲಿ ಸಾಧ್ಯವಾಗುತ್ತದೆ.
    • ಜೊತೆಗೆ, ಈ ಕಾರ್ಯತಂತ್ರದ ಒಡಂಬಡಿಕೆಯು ಮಧ್ಯಪ್ರಾಚ್ಯದಂತಹ ಸಾಂಪ್ರದಾಯಿಕ ಇಂಧನ ಪೂರೈಕೆದಾರರ ಮೇಲಿನ ಭಾರತದ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಗಣನೀಯವಾಗಿ ಸಹಾಯ ಮಾಡುತ್ತದೆ.
    • ಭವಿಷ್ಯದ ಕೈಗಾರಿಕೆಗಳಿಗಾಗಿ ನಿರ್ಣಾಯಕ ಖನಿಜಗಳನ್ನು ಭದ್ರಪಡಿಸುವುದು:  ವಿರಳ ಭೂ ಧಾತುಗಳು, ನಿಕ್ಕಲ್ ಮತ್ತು ಇತರ ಆಯಕಟ್ಟಿನ ಸಂಪನ್ಮೂಲಗಳನ್ನು ಒಳಗೊಂಡಂತೆ ನಿರ್ಣಾಯಕ ಖನಿಜಗಳ ಗಮನಾರ್ಹ ನಿಕ್ಷೇಪಗಳನ್ನು ವೆನೆಜುವೆಲಾ ಹೊಂದಿದೆ.
    • ಲ್ಯಾಟಿನ್ ಅಮೇರಿಕಾ ಪ್ರದೇಶದಲ್ಲಿ ಭಾರತವು ತನ್ನ ಆರ್ಥಿಕ ಮತ್ತು ರಾಜತಾಂತ್ರಿಕ ಒಡನಾಟವನ್ನು ವಿಸ್ತರಿಸಲು, ವೆನೆಜುವೆಲಾ ದೇಶವು ಒಂದು ಪ್ರಮುಖ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ.

    ‘ವೆನೆಜುವೆಲಾ’ ದೇಶದ ಬಗ್ಗೆ: 

    • ಸ್ಥಳ: ವೆನೆಜುವೆಲಾ ದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯಲ್ಲಿದೆ.
    • ಇದು ಪಶ್ಚಿಮಕ್ಕೆ ಕೊಲಂಬಿಯಾ, ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನಾ ಗಡಿಗಳನ್ನು ಹೊಂದಿದೆ ಮತ್ತು ಕೆರಿಬಿಯನ್ ಸಮುದ್ರವು ಉತ್ತರದ ಕಡೆಗೆ ಇದೆ.
    • ರಾಜಧಾನಿ: ಕ್ಯಾರಕಾಸ್.

    ಪ್ರಮುಖ ಭೌಗೋಳಿಕ ಪ್ರದೇಶಗಳು:

    • ಆಂಡಿಸ್ ಪರ್ವತ ಶ್ರೇಣಿಯ ಈಶಾನ್ಯ ವಿಸ್ತರಣೆಯು ವಾಯುವ್ಯ ವೆನೆಜುವೆಲಾದ ಭೂಭಾಗದಲ್ಲಿ ಹರಡಿಕೊಂಡಿದೆ.
    • ಮರಕೈಬೊ ಸರೋವರದ ಜಲಾನಯನ ಪ್ರದೇಶವು ವಾಯುವ್ಯ ವೆನೆಜುವೆಲಾದ ಅತ್ಯಂತ ಪ್ರಮುಖ ಭೂವೈಜ್ಞಾನಿಕ ಮತ್ತು ಭೌಗೋಳಿಕ ಪ್ರದೇಶವಾಗಿದೆ.
    • ಲ್ಯಾನೋಸ್ ಎಂಬುದು ಮಧ್ಯ ವೆನೆಜುವೆಲಾದಲ್ಲಿ 250,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಆಕ್ರಮಿಸಿಕೊಂಡಿರುವ ಒಂದು ವಿಶಾಲವಾದ ಉಷ್ಣವಲಯದ ಸವನ್ನಾ ಹುಲ್ಲುಗಾವಲು ಪ್ರದೇಶವಾಗಿದೆ.

    ಪ್ರಧಾನ ಮಂತ್ರಿ ಸಂಶೋಧನಾ ಪೀಠ ಯೋಜನೆ 2026 (PMRC)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಉನ್ನತ ಶಿಕ್ಷಣ ಇಲಾಖೆಯು 2026 ರ ಪ್ರಧಾನ ಮಂತ್ರಿ ಸಂಶೋಧನಾ ಪೀಠ (Prime Minister Research Chair – PMRC) ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

    ಯೋಜನೆಯ ಬಗ್ಗೆ:

    • ಪ್ರಾರಂಭ : 2026
    • ಅನುಷ್ಠಾನ: ಇದು ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ.
    • ಉದ್ದೇಶ: ಆದ್ಯತೆಯ ವಲಯಗಳಲ್ಲಿ ಹೆಚ್ಚಿನ-ಪ್ರಭಾವದ ಸಂಶೋಧನೆಗಾಗಿ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ-ಮೂಲದ ಸಂಶೋಧಕರನ್ನು ಪ್ರಮುಖ ಭಾರತೀಯ ಸಂಸ್ಥೆಗಳಿಗೆ ಕರೆತರುವುದು ಇದರ ಗುರಿಯಾಗಿದೆ.

    ಪ್ರಮುಖ ವಿವರಗಳು: 

    • ಉದ್ದೇಶ : ಅಗ್ರ ಜಾಗತಿಕ ಭಾರತೀಯ ಪ್ರತಿಭೆಗಳನ್ನು ಭಾರತಕ್ಕೆ ಮರಳಿ ಕರೆತರುವುದಾಗಿದೆ.
    • ಗುರಿ : 5 ವರ್ಷಗಳ ಅವಧಿಯಲ್ಲಿ 120 ಸಂಶೋಧಕರನ್ನು ಆಯ್ಕೆ ಮಾಡಲಾಗುತ್ತದೆ.
    • ಹಣಕಾಸು ನಿಧಿ: ಅನುದಾನವಾಗಿ ₹5 ಕೋಟಿವರೆಗೆ (ಮತ್ತು ಒಟ್ಟು ಪ್ಯಾಕೇಜ್ ಆಗಿ ₹14 ಕೋಟಿವರೆಗೆ) ಒದಗಿಸಲಾಗುತ್ತದೆ.

    ಯಾರು ಅರ್ಜಿ ಸಲ್ಲಿಸಬಹುದು?

    ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಜೆಗಳು (Indian Citizens), ಸಾಗರೋತ್ತರ ಭಾರತೀಯ ನಾಗರಿಕರು (Overseas Citizens of India – OCIs) ಮತ್ತು ಭಾರತೀಯ ಮೂಲದ ವ್ಯಕ್ತಿಗಳು (Persons of Indian Origin – PIOs) ಈ ಕೆಳಗಿನ ಮೂರು ವಿಭಾಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:

    • ಯುವ ಸಂಶೋಧನಾ ಫೆಲೋಗಳು (Young Research Fellows): ತಮ್ಮ PhD ಪದವಿಯನ್ನು ಪೂರ್ಣಗೊಳಿಸಿದ ನಂತರ 5 ವರ್ಷಗಳವರೆಗಿನ ಅವಧಿಯಲ್ಲಿರುವ ಅಭ್ಯರ್ಥಿಗಳು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.
    • ಹಿರಿಯ ಫೆಲೋಗಳು (Senior Fellows): ತಮ್ಮ PhD ಪದವಿಯನ್ನು ಪೂರ್ಣಗೊಳಿಸಿದ ನಂತರ 5 ರಿಂದ 10 ವರ್ಷಗಳ ಸಂಶೋಧನಾ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಈ ವಿಭಾಗಕ್ಕೆ ಅರ್ಹರಾಗುತ್ತಾರೆ.
    • ಸಂಶೋಧನಾ ಪೀಠ (Research Chairs): ತಮ್ಮ PhD ಪದವಿಯನ್ನು ಪೂರ್ಣಗೊಳಿಸಿದ ನಂತರ 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ವ್ಯಾಪಕ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಈ ವಿಭಾಗದಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ಗಮನಹರಿಸುವ ಕ್ಷೇತ್ರಗಳು ಮತ್ತು ಸ್ಥಳಗಳು: 

    • ವಲಯಗಳು: ಕೃತಕ ಬುದ್ಧಿಮತ್ತೆ (AI), ಅರೆವಾಹಕಗಳು (Semiconductors), ಬಾಹ್ಯಾಕಾಶ, ಆರೋಗ್ಯ ಮತ್ತು ಹಸಿರು ಶಕ್ತಿಯಂತಹ (Green Energy) 13 ಕ್ಷೇತ್ರಗಳು.
    • ಆತಿಥೇಯ ಸ್ಥಳಗಳು: IISc, ಪ್ರಮುಖ IIT ಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳಂತಹ ಉನ್ನತ ಸಂಸ್ಥೆಗಳು.

    ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೀಲಕಂಠ್ ಮಿಶ್ರಾ ನೇಮಕ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಮೂರು ವರ್ಷಗಳ ಅವಧಿಗೆ ವಾಷಿಂಗ್ಟನ್ ಡಿ.ಸಿ.ಯ ವಿಶ್ವಬ್ಯಾಂಕ್ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೀಲಕಂಠ್ ಮಿಶ್ರಾ ಅವರ ನೇಮಕಕ್ಕೆ ಅನುಮೋದನೆ ನೀಡಿದೆ.
    • ಫೆಬ್ರವರಿ 2023 ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದ ಪರಮೇಶ್ವರನ್ ಅಯ್ಯರ್ ಅವರ ನಂತರ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
    • ಕಾರ್ಯನಿರ್ವಾಹಕ ನಿರ್ದೇಶಕರು ವಿಶ್ವಬ್ಯಾಂಕ್‌ನ ಮಂಡಳಿಯ ಭಾಗವಾಗಿದ್ದು, ಇದು ನೀತಿಗಳು, ಸಾಲ ನೀಡುವ ನಿರ್ಧಾರಗಳು ಮತ್ತು ಅಭಿವೃದ್ಧಿ ಆದ್ಯತೆಗಳನ್ನು ನೋಡಿಕೊಳ್ಳುತ್ತದೆ.

    ‘ವಿಶ್ವಬ್ಯಾಂಕ್’ ಬಗ್ಗೆ: 

    • ಇದನ್ನು 1944 ರಲ್ಲಿ ಸ್ಥಾಪಿಸಲಾಯಿತು.
    • ವಿಶ್ವಬ್ಯಾಂಕ್ ಒಂದು ಸಹಕಾರ ಸಂಘದಂತಿದ್ದು, ಇದು 189 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
    • ಇದು ಬಡತನವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸುತ್ತದೆ.

    ವಿಶ್ವ ಬ್ಯಾಂಕ್ ಗುಂಪಿನ ಪ್ರಮುಖ ಸಂಸ್ಥೆಗಳು:

    • ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ಬ್ಯಾಂಕ್ (IBRD): ಈ ಸಂಸ್ಥೆಯು ಮುಖ್ಯವಾಗಿ ಮಧ್ಯಮ-ಆದಾಯದ ಮತ್ತು ಸಾಲ-ಯೋಗ್ಯ ಕಡಿಮೆ-ಆದಾಯದ ದೇಶಗಳ ಅಭಿವೃದ್ಧಿ ಕಾರ್ಯಗಳಿಗಾಗಿ ಆರ್ಥಿಕ ಸಾಲಗಳನ್ನು ಒದಗಿಸುತ್ತದೆ.
    • ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (IDA): ಈ ಸಂಸ್ಥೆಯು ವಿಶ್ವದ ಅತ್ಯಂತ ಬಡ ದೇಶಗಳಿಗೆ ಶೂನ್ಯ-ಬಡ್ಡಿಯ ಸಾಲಗಳನ್ನು ಮತ್ತು ಆರ್ಥಿಕ ಅನುದಾನಗಳನ್ನು ಒದಗಿಸುವ ಮೂಲಕ ನೆರವಾಗುತ್ತದೆ.
    • ಅಂತರರಾಷ್ಟ್ರೀಯ ಹಣಕಾಸು ನಿಗಮ (IFC): ಈ ಸಂಸ್ಥೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗಾಗಿ ಖಾಸಗಿ ವಲಯದ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
    • ಬಹುಪಕ್ಷೀಯ ಹೂಡಿಕೆ ಖಾತರಿ ಸಂಸ್ಥೆ (MIGA): ಈ ಸಂಸ್ಥೆಯು ರಾಜಕೀಯ ಅಪಾಯಗಳ ವಿರುದ್ಧ ವಿಮಾ ಖಾತರಿಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದೇಶಿ ಹೂಡಿಕೆಯನ್ನು ಉತ್ತೇಜಿಸುತ್ತದೆ.
    • ಹೂಡಿಕೆ ವಿವಾದಗಳ ಇತ್ಯರ್ಥಕ್ಕಾಗಿ ಅಂತರರಾಷ್ಟ್ರೀಯ ಕೇಂದ್ರ (ICSID): ಈ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಗಳು ಮತ್ತು ವಿದೇಶಿ ಹೂಡಿಕೆದಾರರ ನಡುವೆ ಉದ್ಭವಿಸುವ ಹೂಡಿಕೆ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸುತ್ತದೆ.

    ವಿಶ್ವಬ್ಯಾಂಕ್‌ನ ಪ್ರಮುಖ ವರದಿಗಳು: 

    • ವಿಶ್ವ ಅಭಿವೃದ್ಧಿ ವರದಿ (WDR): ಅಭಿವೃದ್ಧಿ ಅರ್ಥಶಾಸ್ತ್ರದ ನಿರ್ದಿಷ್ಟ, ನಿರ್ಣಾಯಕ ಅಂಶದ ಮೇಲೆ (ಉದಾಹರಣೆಗೆ, ಉದ್ಯೋಗಗಳು, ಡಿಜಿಟಲ್ ಲಾಭಾಂಶಗಳು ಅಥವಾ ಹವಾಮಾನ ಬದಲಾವಣೆ) ಕೇಂದ್ರೀಕರಿಸುವ ಪ್ರಮುಖ ವಾರ್ಷಿಕ ವರದಿ ಇದಾಗಿದೆ.
    • ಜಾಗತಿಕ ಆರ್ಥಿಕ ಮುನ್ನೋಟಗಳು (GEP): ಇದು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಮೇಲೆ ನಿರ್ದಿಷ್ಟ ಗಮನಹರಿಸಿ, ಜಾಗತಿಕ ಆರ್ಥಿಕ ಪ್ರವೃತ್ತಿಗಳು ಮತ್ತು ಭವಿಷ್ಯವನ್ನು ಪರಿಶೀಲಿಸುತ್ತದೆ.
    • ಬಡತನ ಮತ್ತು ಹಂಚಿಕೆಯ ಸಮೃದ್ಧಿಯ ವರದಿ: ಇದು ವಿಪರೀತ ಬಡತನವನ್ನು ಕೊನೆಗೊಳಿಸುವ ಮತ್ತು ಹಂಚಿಕೆಯ ಸಮೃದ್ಧಿಯನ್ನು ಹೆಚ್ಚಿಸುವ ವಿಶ್ವಬ್ಯಾಂಕ್‌ನ ಗುರಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
    • ಮಾನವ ಬಂಡವಾಳ ಸೂಚ್ಯಂಕ (HCI): ಇದು ಮುಂದಿನ ಪೀಳಿಗೆಯ ಕಾರ್ಮಿಕರ ಉತ್ಪಾದಕತೆಗೆ ಆರೋಗ್ಯ ಮತ್ತು ಶಿಕ್ಷಣದ ಕೊಡುಗೆಗಳನ್ನು ಅಳೆಯುತ್ತದೆ.

    ಭಾರತ-ಯುಕೆ ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿ ವೀಕ್ಷಣಾಲಯ (GSCO)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತ-ಯುಕೆ ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿ ವೀಕ್ಷಣಾಲಯವನ್ನು (India–UK Critical Minerals Global Supply Chain Observatory – GSCO) ಔಪಚಾರಿಕವಾಗಿ ಪ್ರಾರಂಭಿಸಲಾಗಿದೆ.

    ಈ ಉಪಕ್ರಮದ ಕುರಿತು: 

    • ಇದು ಜೂನ್ 4, 2026 ರಂದು ನವದೆಹಲಿಯಲ್ಲಿ ಪ್ರಾರಂಭವಾದ ಜಂಟಿ ಡಿಜಿಟಲ್ ವೇದಿಕೆಯಾಗಿದೆ.
    • ಪ್ರಾರಂಭ: IIT-ISM ಧನ್ಬಾದ್ (ಟೆಕ್ಸ್‌ಮಿನ್ ಫೌಂಡೇಶನ್ ಮೂಲಕ) ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ.
    • ಉದ್ದೇಶ: ಇದು ಜಗತ್ತಿನಾದ್ಯಂತ ಲಿಥಿಯಂ, ಕೋಬಾಲ್ಟ್ ಮತ್ತು ನಿಕ್ಕಲ್ ಮುಂತಾದ ಖನಿಜಗಳ ಮೇಲೆ ನಿಗಾ ವಹಿಸುತ್ತದೆ; ಜೊತೆಗೆ ಇದು ಯುದ್ಧ, ರಫ್ತು ನಿರ್ಬಂಧಗಳು ಅಥವಾ ಬೆಲೆ ಬದಲಾವಣೆಗಳಂತಹ ಅಪಾಯಗಳ ಬಗ್ಗೆ ಎಚ್ಚರಿಸುತ್ತದೆ. 

    ಪ್ರಾಮುಖ್ಯತೆ:

    • ಇದು ಸರ್ಕಾರಗಳಿಗೆ ವ್ಯಾಪಾರವನ್ನು ಯೋಜಿಸಲು ಮತ್ತು ಖನಿಜಗಳ ಸಂಗ್ರಹವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
    • ಈ ಖನಿಜಗಳು ಎಲೆಕ್ಟ್ರಿಕ್ ವಾಹನಗಳು, ಸೌರ ಫಲಕಗಳು ಮತ್ತು ರಕ್ಷಣಾ ಸಾಧನಗಳಿಗೆ ಶಕ್ತಿ ನೀಡುತ್ತವೆ.
    • ಕಚ್ಚಾ ವಸ್ತುಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ಚೀನಾದಂತಹ ಕೆಲವೇ ಕೆಲವು ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆಯು ಎರಡೂ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.

    ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (NCMM)

    • ಪ್ರಾರಂಭ: ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಅನ್ನು ಜನವರಿ 2025 ರಲ್ಲಿ ಭಾರತದ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು, ಇದು 7 ವರ್ಷಗಳ ಅವಧಿಗೆ (2030-31 ರವರೆಗೆ) ಅಂದಾಜು ₹16,300 ಕೋಟಿಗಳ ಒಟ್ಟು ವೆಚ್ಚವನ್ನು ಹೊಂದಿದೆ.
    • ಇದನ್ನು ಗಣಿ ಸಚಿವಾಲಯದ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ.
    • ಉದ್ದೇಶಗಳು: ಲಿಥಿಯಂ, ಕೋಬಾಲ್ಟ್, ನಿಕ್ಕಲ್, ಗ್ರ್ಯಾಫೈಟ್, ವಿರಳ ಭೂ ಧಾತುಗಳು (REEs), ಟೈಟಾನಿಯಂ ಮತ್ತು ಇತರ ನಿರ್ಣಾಯಕ ಖನಿಜಗಳ ವಿಶ್ವಾಸಾರ್ಹ ಮತ್ತು ಸುಸ್ಥಿರ ದೇಶೀಯ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.
    • ಈ ಉಪಕ್ರಮವು ಇಂಧನ ಪರಿವರ್ತನೆ, ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳು, ಸೌರ ಫಲಕಗಳು, ಪವನ ಯಂತ್ರಗಳು (Wind Turbines) ಮತ್ತು ಬ್ಯಾಟರಿಗಳ ಉತ್ಪಾದನೆ ಹಾಗೂ ರಕ್ಷಣಾ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಿಗೆ ಅತ್ಯಗತ್ಯವಾಗಿರುವ ನಿರ್ಣಾಯಕ ಖನಿಜಗಳ ಮೇಲಿನ ಭಾರತದ ಆಮದು ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
  • ಸೂಚ್ಯಂಕಗಳು ಮತ್ತು ವರದಿಗಳು

    ಸೂಚ್ಯಂಕಗಳು ಮತ್ತು ವರದಿಗಳು

    1. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6) ವರದಿ

    • ಬಿಡುಗಡೆ ಮಾಡಿದವರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 
    • ನೋಡಲ್ ಸಂಸ್ಥೆ: ಜನಸಂಖ್ಯಾ ವಿಜ್ಞಾನಗಳ ಅಂತರರಾಷ್ಟ್ರೀಯ ಸಂಸ್ಥೆ, ಮುಂಬೈ (International Institute for Population Sciences, Mumbai)
    • ಪ್ರಮುಖ ಅವಲೋಕನಗಳು: 2023-24 ರಲ್ಲಿ 715 ಜಿಲ್ಲೆಗಳಾದ್ಯಂತ ಸರಿಸುಮಾರು 6.79 ಲಕ್ಷ ಕುಟುಂಬಗಳನ್ನು ಒಳಗೊಂಡಿರುವ ಈ ವರದಿಯು ತಾಯಿಯ ಆರೋಗ್ಯ ರಕ್ಷಣೆ, ಸಾಂಸ್ಥಿಕ ಹೆರಿಗೆಗಳು (ಶೇ 90.6 ಕ್ಕೆ ತಲುಪಿದೆ) ಮತ್ತು ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯಲ್ಲಿನ (ಶೇ 87.1) ದೃಢವಾದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಳಾ ಸಬಲೀಕರಣದಲ್ಲಿ ಗಮನಾರ್ಹ ಪ್ರಗತಿಯು ಅಂತರ್ಜಾಲ ಬಳಕೆಯಲ್ಲಿನ (ಶೇ 64.3) ಮತ್ತು ಬ್ಯಾಂಕ್ ಖಾತೆ ಹೊಂದಿರುವವರಲ್ಲಿನ (ಶೇ 89.0) ಗಮನಾರ್ಹ ಏರಿಕೆಯನ್ನು ಒಳಗೊಂಡಿದೆ, ಇದರ ಜೊತೆಗೆ ವಿಸ್ತರಿತ ಆರೋಗ್ಯ ವಿಮಾ ವ್ಯಾಪ್ತಿಯು ಇದೀಗ ಶೇಕಡಾ 60.2 ರಷ್ಟು ಕುಟುಂಬಗಳನ್ನು ತಲುಪಿದೆ.

    2. ಕಾರ್ಯಕ್ಷಮತೆಯ ಸೂಚಕ:

    • ಮಕ್ಕಳಲ್ಲಿ ಕಂಡುಬರುವ ಕುಂಠಿತ ಬೆಳವಣಿಗೆಯ ಪ್ರಮಾಣವು ಶೇಕಡಾ 29.3 ಕ್ಕೆ ಇಳಿಕೆಯಾಗಿದೆ.
    • ಇದರ ಜೊತೆಗೆ, ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದಿರುವ ಕಡಿಮೆ ತೂಕದ ಸಮಸ್ಯೆಯು ಶೇಕಡಾ 5.2 ಕ್ಕೆ ಕುಸಿದಿದೆ.
    • ಇದರ ಪರಿಣಾಮವಾಗಿ, ದೇಶದಲ್ಲಿ ದೀರ್ಘಕಾಲದ ಅಪೌಷ್ಟಿಕತೆಯ ಪ್ರಮಾಣದಲ್ಲಿ ಗಮನಾರ್ಹ ಕಡಿತವನ್ನು ಸಾಧಿಸಲಾಗಿದೆ.
    • ಈ ಸಕಾರಾತ್ಮಕ ಬೆಳವಣಿಗೆಯು, ಕೇಂದ್ರ ಸರ್ಕಾರದ ಪೋಷಣ್ 2.0 ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಂತಹ ವಿವಿಧ ಆರೋಗ್ಯ ಹಾಗೂ ಪೌಷ್ಟಿಕಾಂಶ ಉಪಕ್ರಮಗಳ ಸಂಯೋಜಿತ ಯಶಸ್ಸನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
  • ಸುದ್ಧಿಯಲ್ಲಿರುವ ವ್ಯಕ್ತಿಗಳು

    ಸುದ್ಧಿಯಲ್ಲಿರುವ ವ್ಯಕ್ತಿಗಳು

    1. ಹಿರಿಯ ಉರ್ದು ಕವಿ ಬಶೀರ್ ಬದ್ರ್ ನಿಧನ

    • ಭಾವನಾತ್ಮಕ ಸರಳತೆಯ ಮೂಲಕ ಶಾಸ್ತ್ರೀಯ ಗಜಲ್‌ಗಳನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ವಿಜೇತ ಉರ್ದು ಸಾಹಿತ್ಯದ ದಿಗ್ಗಜ ಡಾ. ಬಶೀರ್ ಬದ್ರ್ ಅವರು ತಮ್ಮ 91 ನೇ ವಯಸ್ಸಿನಲ್ಲಿ ಮೇ 28, 2026 ರಂದು ಭೋಪಾಲ್‌ನಲ್ಲಿ ನಿಧನರಾಗಿದ್ದಾರೆ. 
    • ಇವರು ಆಸ್, ಆಹತ್ ಮತ್ತು ಕುಲ್ಲಿಯತೆ ಬಶೀರ್ ಬದ್ರ್ ನಂತಹ ಮೆಚ್ಚುಗೆ ಪಡೆದ ಕವನ ಸಂಕಲನಗಳನ್ನು ರಚಿಸಿದ್ದಾರೆ.

    2. ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ್ ನಿಧನ

    • 1960-70ರ ದಶಕದ ಪ್ರಸಿದ್ಧ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ್ ಅವರು ವಯೋಸಹಜ ಕಾಯಿಲೆಗಳಿಂದಾಗಿ ತಮ್ಮ 89 ನೇ ವಯಸ್ಸಿನಲ್ಲಿ ಮೇ 31, 2026 ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಇವರು ಬಹುಭಾಷಾ ಪ್ರಾದೇಶಿಕ ಗಾಯನದ ಜೊತೆಗೆ, ‘ಆಜ್‌ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ’ ಯಂತಹ ಸಾರ್ವಕಾಲಿಕ ಶ್ರೇಷ್ಠ ಹಿಂದಿ ಗೀತೆಗಳಿಗೆ ಜನಪ್ರಿಯವಾಗಿದ್ದರು.

    3. ಹಿರಿಯ ಚಲನಚಿತ್ರ ನಿರ್ಮಾಪಕ ಭಾರತಿ ರಾಜಾ ನಿಧನ

    • ಪೌರಾಣಿಕ ಗೀತೆಗಳ ಸಂಯೋಜಕ ಇಳಯರಾಜ ಅವರೊಂದಿಗೆ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ವಾಸ್ತವಿಕ ಗ್ರಾಮೀಣ ಕಥೆಗಳನ್ನು ಪರಿಚಯಿಸಿದ್ದಕ್ಕಾಗಿ ಪ್ರಸಿದ್ಧರಾಗಿದ್ದ, ಆರು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ಚಲನಚಿತ್ರ ನಿರ್ಮಾಪಕ ಭಾರತಿ ರಾಜಾ ಅವರು ತಮ್ಮ 84 ನೇ ವಯಸ್ಸಿನಲ್ಲಿ ಜೂನ್ 10, 2026 ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ.

    4. ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ನಿಧನ

    • ಒಲಂಪಿಕ್ ಪದಕ ವಿಜೇತೆ ಮನು ಭಾಕರ್‌ಗೆ ಮಾರ್ಗದರ್ಶನ ನೀಡಿದ್ದ ಭಾರತೀಯ ಪಿಸ್ತೂಲ್ ಶೂಟಿಂಗ್‌ನ ಪ್ರವರ್ತಕ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಜಸ್ಪಾಲ್ ರಾಣಾ ಅವರು ತಮ್ಮ 49 ನೇ ವಯಸ್ಸಿನಲ್ಲಿ ಜೂನ್ 11, 2026 ರಂದು ನಿಧನರಾಗಿದ್ದಾರೆ. 
    • ಅರ್ಜುನ ಪ್ರಶಸ್ತಿ (1994) ಮತ್ತು ಪದ್ಮಶ್ರೀ (1997) ಪುರಸ್ಕೃತರಾಗಿದ್ದ ಇವರು, ತಮ್ಮ ಶಿಸ್ತಿನ ತರಬೇತಿ ಮತ್ತು ಉನ್ನತ-ಕಾರ್ಯಕ್ಷಮತೆಯ ತಾಂತ್ರಿಕ ಮಾರ್ಗದರ್ಶನದ ಮೂಲಕ ಭಾರತದ ಆಧುನಿಕ ಶೂಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿ, ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.