ವರ್ಗ: National and International Current Affairs Kannada

  • ಬೂಕರ್ ಪ್ರಶಸ್ತಿ, 2025 | ಹಣ ಅಮಾನ್ಯೀಕರಣವಾಗಿ ಒಂಬತ್ತು ವರ್ಷಗಳ ನಂತರ | ಆದಿತ್ಯ–ಎಲ್ 1 ಮಿಷನ್ – ಸೂರ್ಯನ ಹೊರಪದರದಿಂದ ಉಕ್ಕಿ ಬರುವ ದ್ರವ್ಯ ಸ್ಫೋಟಗಳನ್ನು ಗಮನಿಸುತ್ತದೆ | ಭೌಗೋಳಿಕ ಸೂಚ್ಯಂಕ ಪಟ್ಟಿಯ ಅರ್ಜಿ  ಶುಲ್ಕ ಕಡಿತ | ಹವಾಮಾನ ಅಪಾಯ ಸೂಚ್ಯಂಕ (CRI), 2026 | ಭಾರತ ಮತ್ತು ಬೋಟ್ಸ್ವಾನಾ ನಡುವೆ ಚಿರತೆ ಸ್ಥಳಾಂತರ ಒಪ್ಪಂದ | ಭೂತಾನಿಗೆ ಭೇಟಿ ನೀಡಿದ ಪ್ರಧಾನಿ

    ಬೂಕರ್ ಪ್ರಶಸ್ತಿ, 2025

    ಪ್ರಶಸ್ತಿಗಳು/ ಇತರೆ

    ಸಂದರ್ಭ:

    • ಡೇವಿಡ್ ಸ್ಜಲೇ ಅವರ ‘ಫ್ಲೆಶ್’ ಕಾದಂಬರಿಗಾಗಿ ಈ ವರ್ಷದ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಹಂಗೇರಿಯನ್-ಬ್ರಿಟಿಷ್ ಲೇಖಕರು ಇವರಾಗಿದ್ದಾರೆ.

    ಬೂಕರ್ ಪ್ರಶಸ್ತಿಯ ಬಗ್ಗೆ:

    • ಇದು ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟು, ಯುನೈಟೆಡ್ ಕಿಂಗ್‌ಡಮ್ ಮತ್ತು/ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಕಾದಂಬರಿಗೆ ಪ್ರದಾನವಾಗುವ ಪ್ರಶಸ್ತಿಯಾಗಿದೆ.
    • ಉದ್ಘಾಟನೆ : ಓದು ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಇದನ್ನು ಮೊದಲು 1969 ರಲ್ಲಿ ನೀಡಲಾಯಿತು.

    ಭಾರತೀಯ ವಿಜೇತರು:-

      1. 1971 ರಲ್ಲಿ “ಇನ್ ಎ ಫ್ರೀ ಸ್ಟೇಟ್ ಗಾಗಿ ವಿ.ಎಸ್. ನೈಪಾಲ್.”
      2. 1981 ರಲ್ಲಿ “ಮಿಡ್‌ನೈಟ್ಸ್ ಚಿಲ್ಡ್ರನ್‌ ಗಾಗಿ ಸಲ್ಮಾನ್ ರಶ್ದಿ.”
      3. 1997 ರಲ್ಲಿ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗಾಗಿ ಅರುಂಧತಿ ರಾಯ್”.
      4. 2006 ರಲ್ಲಿ “ದಿ ಇನ್ಹೆರಿಟೆನ್ಸ್ ಆಫ್ ಲಾಸ್ ಗಾಗಿ ಕಿರಣ್ ದೇಸಾಯಿ.”
      5. 2008 ರಲ್ಲಿ “ದಿ ವೈಟ್ ಟೈಗರ್ ಗಾಗಿ ಅರವಿಂದ್ ಅಡಿಗ.”
    • 2022 ರಲ್ಲಿ ಹಿಂದಿ ಕಾದಂಬರಿ “ಟಾಂಬ್ ಆಫ್ ಸ್ಯಾಂಡ್ ಗಾಗಿ ಗೀತಾಂಜಲಿ ಶ್ರೀ.”

    ಗಮನಿಸಿ:- 2025 ರಲ್ಲಿ, ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರು ಮುಷ್ತಾಕ್ ಅವರ ಸಣ್ಣ ಕಥೆಗಳ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಲಾದ “ಹಾರ್ಟ್ ಲ್ಯಾಂಪ್” ಸಂಕಲನಕ್ಕಾಗಿ ಪ್ರಶಸ್ತಿಯನ್ನು ಪಡೆದರು.

    ಹಣ ಅಮಾನ್ಯೀಕರಣವಾಗಿ ಒಂಬತ್ತು ವರ್ಷಗಳ ನಂತರ

    ಸಾಮಾನ್ಯ ಅಧ್ಯಾಯನ-3/ಆರ್ಥಿಕತೆ

    ಸಂದರ್ಭ:

    • 2016ರಲ್ಲಿ ಕೇಂದ್ರ ಸರ್ಕಾರ ಹಣ ಅಮಾನ್ಯೀಕರಣವನ್ನು ಘೋಷಿಸಿದ ನಂತರ, ಸಾರ್ವಜನಿಕರ ಕೈಯಲ್ಲಿರುವ ನಗದು ಪ್ರಮಾಣವು ದ್ವಿಗುಣಕ್ಕಿಂತ ಹೆಚ್ಚಾಗಿದೆ.

    ಹಣ ಅಮಾನ್ಯೀಕರಣದ ಬಗ್ಗೆ:

    • ಪ್ರಧಾನ ಮಂತ್ರಿಯವರು ನವೆಂಬರ್ 8, 2016 ರಂದು ಹಣ ಅಮಾನ್ಯೀಕರಣವನ್ನು ಘೋಷಿಸಿದರು.
    • ಆ ಸಮಯದಲ್ಲಿ ಒಟ್ಟಾರೆ ಚಲಾವಣೆಯಲ್ಲಿದ್ದ  ಹಣದಲ್ಲಿ ಸುಮಾರು 86% ಹೊಂದಿದ್ದ ಎಲ್ಲಾ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಇನ್ನು ಮುಂದೆ ಕಾನೂನುಬದ್ಧ ಹಣವಲ್ಲ ಎಂದು ಅದು ಘೋಷಿಸಿತು.
    • ಕಪ್ಪು ಹಣವನ್ನು ತೊಡೆದುಹಾಕಲು, ನಕಲಿ ಹಣವನ್ನು ನಿಗ್ರಹಿಸಲು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಆರ್ಥಿಕತೆಯನ್ನು ಔಪಚಾರಿಕಗೊಳಿಸಲು ಉದ್ದೇಶಿಸಲಾಗಿತ್ತು.

    ಆದಿತ್ಯ–ಎಲ್ 1 ಮಿಷನ್ – ಸೂರ್ಯನ ಹೊರಪದರದಿಂದ ಉಕ್ಕಿ ಬರುವ ದ್ರವ್ಯ ಸ್ಫೋಟಗಳನ್ನು ಗಮನಿಸುತ್ತದೆ

    ಸಾಮಾನ್ಯ ಅಧ್ಯಾಯನ-3/ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆ ಮತ್ತು ನಾಸಾದ ವಿಜ್ಞಾನಿಗಳು, ಆದಿತ್ಯ–L1 ಉಪಗ್ರಹದಲ್ಲಿರುವ VELC ಪೇಲೋಡ್‌ ಅನ್ನು ಬಳಸಿ, ಸೂರ್ಯನ ಮೇಲ್ಮೈಗೆ ಹತ್ತಿರವಿರುವ, ಗೋಚರ ತರಂಗಾಂತರ ವ್ಯಾಪ್ತಿಯಲ್ಲಿ ಕೊರೋನಲ್ ಮಾಸ್ ಎಜೆಕ್ಷನ್‌ (CME) ಅನ್ನು ಮೊದಲ ಬಾರಿಗೆ ಸ್ಪೆಕ್ಟ್ರೋಸ್ಕೋಪಿಕ್ ವೀಕ್ಷಣೆ ಮಾಡಿದ್ದಾರೆ.

    ಆದಿತ್ಯ-L1 ಮಿಷನ್ ನ ಬಗ್ಗೆ:

    • ವಿಶಿಷ್ಟತೆ:- ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಭಾರತೀಯ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಇದನ್ನು PSLV-C57 ಉಡಾವಣೆ ಮಾಡುತ್ತದೆ.
    • ಗಮನಿಸಿ:- ಈ ಸೌರ ಮಿಷನ್‌ನಲ್ಲಿ ಉಪಗ್ರಹವು ಸೂರ್ಯನತ್ತ ನೇರವಾಗಿ ಹೋಗುವುದಿಲ್ಲ; ಬದಲಿಗೆ ಸೂರ್ಯಗ್ರಹಣ ಸಮಯದಲ್ಲೂ ಸೂರ್ಯವನ್ನು ವೀಕ್ಷಿಸಲು ಅನುಕೂಲವಾಗುವ ಬಿಂದುವಿನಲ್ಲಿ ಬಾಹ್ಯಾಕಾಶ ವೀಕ್ಷಣಾಲಯವನ್ನು ನಿರ್ಮಿಸುವುದು ಇದರ ಉದ್ದೇಶ.
    • ಈ ಬಾಹ್ಯಾಕಾಶ ನೌಕೆಯನ್ನು ಸೂರ್ಯ–ಭೂಮಿ ವ್ಯವಸ್ಥೆಯ ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರಾಂಜ್ ಪಾಯಿಂಟ್ 1 (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.

    ಮಿಷನ್‌ನ ಪ್ರಮುಖ ಉದ್ದೇಶಗಳು:

    • ಸೂರ್ಯನ ಮೇಲಿನ ವಾತಾವರಣ (ಕ್ರೋಮೋಸ್ಫಿಯರ್ ಮತ್ತು ಕೊರೋನಾ) ದಲ್ಲಿ ನಡೆಯುವ ಚಲನ- ವಲನಗಳನ್ನು ಅಧ್ಯಯನ ಮಾಡುವುದು.
    • ಇದು ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯ ಜೊತೆಗೆ ಬಾಹ್ಯಾಕಾಶ ಹವಾಮಾನವನ್ನು ಯಾವುದು ಪ್ರೇರೇಪಿಸುತ್ತದೆ ಎಂಬುದನ್ನು ಸಹ ಗುರುತಿಸುತ್ತದೆ.

    ಸೂರ್ಯನನ್ನು ಅಧ್ಯಯನ ಮಾಡುವ ಇತರೆ ಮಿಷನ್‌ಗಳು:

    • ನಾಸಾದ ಪಾರ್ಕರ್ ಸೋಲಾರ್ ಪ್ರೋಬ್:- 2018 ರಲ್ಲಿ ಉಡಾವಣೆ ಮಾಡಲಾಯಿತು. ಈಗಾಗಲೇ ತುಂಬಾ ಹತ್ತಿರಕ್ಕೆ ಹೋಗಿದೆ, ಆದರೆ ಅದು ಸೂರ್ಯನಿಂದ ದೂರದಲ್ಲಿರುವಂತೆ  ಕಾಣುತ್ತದೆ.
    • ಹೆಲಿಯೊಸ್ 2 ಸೌರ ಪ್ರೋಬ್:- 1976 ರಲ್ಲಿ ಸೂರ್ಯನ ಮೇಲ್ಮೈಯ ಸೌರ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಹಿಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯು ಜಂಟಿಯಾಗಿ ಪ್ರಾರಂಭಿಸಲಾಯಿತು.

    ಭೌಗೋಳಿಕ ಸೂಚ್ಯಂಕ ಪಟ್ಟಿಯ ಅರ್ಜಿ  ಶುಲ್ಕ ಕಡಿತ

    ಸಾಮಾನ್ಯ ಅಧ್ಯಾಯನ- 3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಸರ್ಕಾರವು ಭೌಗೋಳಿಕ ಸೂಚ್ಯಂಕ ಪಟ್ಟಿಯ  ಅರ್ಜಿ ಶುಲ್ಕವನ್ನು ₹5,000 ರಿಂದ ₹1,000 ಕ್ಕೆ ಇಳಿಸುವುದಾಗಿ ಘೋಷಿಸಿತು, ಇದು ಬುಡಕಟ್ಟು ಕುಶಲಕರ್ಮಿಗಳ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಸಂರಕ್ಷಿಸಲು ಪ್ರೋತ್ಸಾಹಿಸುತ್ತದೆ.

    ಭೌಗೋಳಿಕ ಸೂಚ್ಯಂಕ ಪಟ್ಟಿಯ  ಶುಲ್ಕ ಕಡಿತ:

    • ಈ ಕೆಳಗಿನ ಕರಕುಶಲ ವಸ್ತು ಮತ್ತು ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ ಪಟ್ಟಿಯ  ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. 
    1. ಕನ್ನಡಿಪ್ಪಯ (ಕೇರಳ)

    2. ಅಪತಾನಿ ಜವಳಿ (ಅರುಣಾಚಲ)

    3. ಮಾರ್ತಾಂಡಂ ಜೇನು (ತಮಿಳುನಾಡು)

    4. ಲೆಪ್ಚಾ ತುಂಗ್‌ಬುಕ್ (ಸಿಕ್ಕಿಂ)

    5. ಬೋಡೋ ಅರೋನೈ (ಅಸ್ಸಾಂ)

    6. ಅಂಬಾಜಿ ಮಾರ್ಬಲ್ (ಗುಜರಾತ್)

    7. ಬದ್ರಿ ಹಸುವಿನ ತುಪ್ಪ (ಉತ್ತರಾಖಂಡ)

    ಭೌಗೋಳಿಕ ಸೂಚ್ಯಂಕ ಪಟ್ಟಿಯ ಬಗ್ಗೆ:

    • ಇದು ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಪ್ರದೇಶ, ಪಟ್ಟಣ ಅಥವಾ ದೇಶದಂತಹ ಮೂಲಗಳಿಗೆ ಸಂಬಂಧಿಸಿದ ಕೆಲವು ಉತ್ಪನ್ನಗಳಿಗೆ ನೀಡಲಾಗುವ ಹೆಸರು ಅಥವಾ ಸಂಕೇತವಾಗಿದೆ.
    • ವಿಶಿಷ್ಟ ಉತ್ಪನ್ನಗಳಿಗೆ ಪ್ರಮಾಣೀಕರಣ:- ಭೌಗೋಳಿಕ ಸೂಚ್ಯಂಕ ಪಟ್ಟಿಯನ್ನು ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿರುವ ಅಥವಾ ಅದರ ಭೌಗೋಳಿಕ ಮೂಲದ ಕಾರಣದಿಂದಾಗಿ ನಿರ್ದಿಷ್ಟ ಖ್ಯಾತಿಯನ್ನು ಹೊಂದಿರುವ ನಿರ್ದಿಷ್ಟ ಉತ್ಪನ್ನಕ್ಕೆ ಪ್ರಮಾಣೀಕರಣವೆಂದು ಪರಿಗಣಿಸಬಹುದು.
    • ವೈನ್ ಮತ್ತು ತಂಪು ಪಾನೀಯಗಳು, ಆಹಾರ ಪದಾರ್ಥಗಳು, ಕೃಷಿ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕಗಳನ್ನು ನೀಡಬಹುದು.
    • ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳು (TRIPS):- ಅಂತರರಾಷ್ಟ್ರೀಯ ಮಟ್ಟದಲ್ಲಿ, ಭೌಗೋಳಿಕ ಸೂಚ್ಯಂಕಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯ (WTO) ಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ ಒಪ್ಪಂದ (TRIPS) ನಿಯಂತ್ರಿಸುತ್ತದೆ.  
    • ಸರಕುಗಳ ಭೌಗೋಳಿಕ ಸೂಚ್ಯಂಕ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999:- ಭಾರತದಲ್ಲಿ, ಭೌಗೋಳಿಕ ಸೂಚ್ಯಂಕಗಳ ನೋಂದಣಿಯನ್ನು ಸೆಪ್ಟೆಂಬರ್ 2003 ರಲ್ಲಿ ಜಾರಿಗೆ ಬಂದ ಸರಕುಗಳ ಭೌಗೋಳಿಕ ಸೂಚನೆಗಳು (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999 ರಿಂದ ನಿರ್ವಹಿಸಲಾಗುತ್ತದೆ.
    • ಡಾರ್ಜಿಲಿಂಗ್ ಚಹಾ – 2004-05ರಲ್ಲಿ ಭಾರತದಲ್ಲಿ ಭೌಗೋಳಿಕ ಸೂಚ್ಯಂಕ ಪಟ್ಟಿಯನ್ನು  ಪಡೆದ ಮೊದಲ ಉತ್ಪನ್ನವಾಗಿದೆ.

    ಹವಾಮಾನ ಅಪಾಯ ಸೂಚ್ಯಂಕ (CRI), 2026

    ಸಾಮಾನ್ಯ ಅಧ್ಯಾಯನ-3/ವಿಪತ್ತು ನಿರ್ವಹಣೆ

    ಸಂದರ್ಭ:

    • ಜರ್ಮನ್‌ವಾಚ್‌ನಿಂದ ಹೊಸ ಹವಾಮಾನ ಅಪಾಯ ಸೂಚ್ಯಂಕ (CRI) 2026 ರ ವರದಿಯನ್ನು ಬಿಡುಗಡೆ ಮಾಡಲಾಗಿದೆ.
    • ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ COP30 ನಲ್ಲಿ ಈ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಲಾಯಿತು.

    ಪ್ರಮುಖ ಸಂಶೋಧನೆಗಳು:

    • 1995 ರಿಂದ 2024 ರ ನಡುವೆ ಹವಾಮಾನ ವೈಪರೀತ್ಯದಿಂದ ಹೆಚ್ಚು ಪರಿಣಾಮ ಬೀರುವ ದೇಶಗಳ ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನದಲ್ಲಿತ್ತು .
    • ಕಳೆದ ಮೂರು ದಶಕಗಳಲ್ಲಿ , ಭಾರತವು ಸುಮಾರು 430 ತೀವ್ರ ಹವಾಮಾನ ವೈಪರೀತ್ಯಗಳನ್ನು ಎದುರಿಸಿದೆ, ಇದರ ಪರಿಣಾಮವಾಗಿ ಹಣದುಬ್ಬರ-ಸರಿಹೊಂದಿಸಿದ ನಷ್ಟವು ಸುಮಾರು $170 ಬಿಲಿಯನ್ ಆಗಿದೆ.
    • ಹೆಚ್ಚಿನ ಜನರು ಪರಿಣಾಮ ಬೀರಿದ್ದಾರೆ: ಭಾರತವು ಬಾಂಗ್ಲಾದೇಶ ಮತ್ತು ಫಿಲಿಪೈನ್ಸ್‌ಗಿಂತ ಮೂರನೇ ಸ್ಥಾನದಲ್ಲಿದೆ.

    ಭಾರತ ಮತ್ತು ಬೋಟ್ಸ್ವಾನಾ ನಡುವೆ ಚಿರತೆ ಸ್ಥಳಾಂತರ ಒಪ್ಪಂದ

    ಸಾಮಾನ್ಯ ಅಧ್ಯಾಯನ – 3 / ಪರಿಸರ ಅಧ್ಯಾಯನ

    ಇದೀಗ ಸುದ್ದಿಯಲ್ಲಿದೆ:

    • ‘ಪ್ರಾಜೆಕ್ಟ್ ಚಿರತೆ’ ಯ ಭಾಗವಾಗಿ ಎಂಟು ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸುವುದಾಗಿ ಭಾರತ ಮತ್ತು ಬೋಟ್ಸ್ವಾನಾ ಔಪಚಾರಿಕವಾಗಿ ಘೋಷಿಸಿವೆ.

    ‘ಪ್ರಾಜೆಕ್ಟ್ ಚಿರತೆ’ ಯನ್ನು ಪ್ರಾರಂಭಿಸಿದರ ಬಗ್ಗೆ:

    • ದಶಕಗಳ ಕಾಲದ ಅತಿಯಾದ ಬೇಟೆ, ಆವಾಸಸ್ಥಾನ ವಿಘಟನೆ ಮತ್ತು ಬೇಟೆಯ ಪ್ರಭೇದಗಳ ವಿನಾಶದ ನಂತರ, 1952 ರಲ್ಲಿ ಭಾರತವು ಚಿರತೆಗಳು ಅಳಿದುಹೋಗಿವೆ ಎಂದು ಘೋಷಿಸಿತು.
    • 2022 ರಲ್ಲಿ ಪ್ರಾಜೆಕ್ಟ್ ಚಿರತೆ ಪ್ರಾರಂಭವಾದ ನಂತರ ಮತ್ತು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಆಗಮನವು ದೊಡ್ಡ ಮಾಂಸಾಹಾರಿ ಪ್ರಾಣಿ ಜಾತಿಗೆ ಸಂಬಂಧಿಸಿದ ವಿಶ್ವದ ಮೊದಲ ಅಂತರಖಂಡ ಸ್ಥಳಾಂತರ ಕಾರ್ಯಕ್ರಮವನ್ನು ಸೃಷ್ಟಿಸಲಾಯಿತು.
    • ಬೋಟ್ಸ್ವಾನಾ:- ಇದು ಭೂಆವೃತ  ದೇಶವಾಗಿದ್ದು, ಅದರ ಭೂಪ್ರದೇಶದ ಸುಮಾರು 70% ಕಲಹರಿ ಮರುಭೂಮಿಯಿಂದ ಆವೃತವಾಗಿದೆ ಮತ್ತು ಜಗತ್ತಿನ ಅತಿ ಹೆಚ್ಚಿನ ಸಂಖ್ಯೆಯ  ಕಾಡು ಚೀತಾಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

    ಪ್ರಾಜೆಕ್ಟ್ ಚೀತಾ (ಚಿರತೆ ಯೋಜನೆ), 2022 ರ ಬಗ್ಗೆ:

    • ಅವಲೋಕನ: ಪ್ರಾಜೆಕ್ಟ್ ಚೀತಾ ಎಂಬುದು ಭಾರತದ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದ್ದು, ಸೂಕ್ತವಾದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಯಲ್ಲಿ ಚಿರತೆಯನ್ನು ಮರು ಪರಿಚಯಿಸುತ್ತದೆ. 
    • ಪ್ರಾರಂಭಿಸಿದವರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಸ್ಥಾಪಿತವಾದ ಶಾಸನಬದ್ಧ ಸಂಸ್ಥೆಯಾಗಿದೆ.
    • ವಿಶಿಷ್ಟತೆ – ಇದು ವಿಶ್ವದ ಮೊದಲ ಖಂಡಾಂತರ ಮಟ್ಟದ ಅತಿ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಯ ಸ್ಥಳಾಂತರವಾಗಿದೆ.

    ಇದುವರೆಗಿನ ಸ್ಥಳಾಂತರಗಳು:

    • 2022 ರಲ್ಲಿ ನಮೀಬಿಯಾದಿಂದ 8 ಚಿರತೆಗಳ ಸ್ಥಳಾಂತರ.
    • 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳ ಸ್ಥಳಾಂತರ.
    • ಬೋಟ್ಸ್ವಾನಾದಿಂದ 8 ಚಿರತೆಗಳು (2025 ರ ಘೋಷಣೆ) ಸ್ಥಳಾಂತರ.

    ಚಿರತೆ (ಅಸಿನೋನಿಕ್ಸ್ ಜುಬಾಟಸ್) ಯ ಬಗ್ಗೆ:

    • ಇದು ವಿಶ್ವದ ಅತಿ ವೇಗದ ಸಸ್ತನಿ ಮತ್ತು ಭಾರತದಲ್ಲಿ ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಭೇಧವಾಗಿದೆ (1952).
    • ಇತರ ದೊಡ್ಡ ಬೆಕ್ಕುಗಳಂತೆ, ಚಿರತೆಗಳು ಘರ್ಜಿಸುವುದಿಲ್ಲ.
    • ಎರಡು ಪ್ರಮುಖ ಪ್ರಭೇಧಗಳಿವೆ:- ಆಫ್ರಿಕಾದ  ಚಿರತೆ (ದುರ್ಬಲವಾಗಿವೆ) ಮತ್ತು ಏಷ್ಯಾದ  ಚಿರತೆ (ತೀವ್ರವಾಗಿ ಅಳಿವಿನಂಚಿನಲ್ಲಿವೆ), ಇವು ಪೂರ್ವ ಇರಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ.

    ಭೂತಾನಿಗೆ ಭೇಟಿ ನೀಡಿದ ಪ್ರಧಾನಿ

    ಸಾಮಾನ್ಯ ಅಧ್ಯಾಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಸಂದರ್ಭ:

    • ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭೂತಾನ ಭೇಟಿಯು ಎರಡೂ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ವಿಶೇಷ ಸಂಬಂಧಗಳನ್ನು ಬಲಪಡಿಸಿತು.

    ಪ್ರಮುಖ ಫಲಿತಾಂಶಗಳು:

    • ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾದ 1020 ಮೆಗಾವ್ಯಾಟ್ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯ ಉದ್ಘಾಟನೆ.

    ಭಾರತ-ಭೂತಾನ ಸಂಬಂಧಗಳು:

    • ಭೌಗೋಳಿಕ ಸಂಪರ್ಕ:- ಭೂತಾನ ತನ್ನ ಗಡಿಯನ್ನು ನಾಲ್ಕು ಭಾರತದ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಜೊತೆ 699 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ ಮತ್ತು ಭಾರತ ಮತ್ತು ಚೀನಾ ನಡುವೆ ಗಡಿ ತಡೆ ವಲಯವಾಗಿ (ಬಫರ್ ಜೋನ್) ಕಾರ್ಯನಿರ್ವಹಿಸುತ್ತದೆ.
    • ರಾಜತಾಂತ್ರಿಕ ಸಂಬಂಧಗಳು – 1968 ರಲ್ಲಿ ಸ್ಥಾಪಿಸಲಾಯಿತು.
    • ಸ್ನೇಹ ಒಪ್ಪಂದ – ಭಾರತ ಭೂತಾನ್ ಸಂಬಂಧಗಳ ಮೂಲ ಚೌಕಟ್ಟು 1949 ರಲ್ಲಿ ಸಹಿ ಹಾಕಲಾದ ಸ್ನೇಹ ಮತ್ತು ಸಹಕಾರ ಒಪ್ಪಂದವಾಗಿದ್ದು, ಫೆಬ್ರವರಿ 2007 ರಲ್ಲಿ ನವೀಕರಿಸಲಾಯಿತು.
    • ಭಾರತದಿಂದ ಭೂತಾನ್‌ನಲ್ಲಿ ನಾಲ್ಕು ಪ್ರಮುಖ ದ್ವಿಪಕ್ಷೀಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅವುಗಳೆಂದರೆ:
      1. ಜಲವಿದ್ಯುತ್ ಯೋಜನೆಗಳು – ಪುನತ್ಸಂಗ್ಚು ಮತ್ತು ಮಂಗ್ಡೆಚ್ಚು ಯೋಜನೆಗಳು.
    • ಇಸ್ರೋದ ಭೂ ಕೇಂದ್ರ.
    • ರುಪೇ ಕಾರ್ಡ್
    • ಭಾರತದ ರಾಷ್ಟ್ರೀಯ ಜ್ಞಾನ ಜಾಲ
    • ಆರ್ಥಿಕತೆ – ಭಾರತವು ಆಮದು ಮೂಲ ಮತ್ತು ರಫ್ತು ತಾಣವಾಗಿ ಭೂತಾನ್‌ನ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿದೆ.
    • ಭೂತಾನ, BHIM ಆ್ಯಪ್ ಅನ್ನು ಪ್ರಾರಂಭಿಸಿದ ಎರಡನೇ ದೇಶವಾಗಿದೆ.
    • ಸಾಂಸ್ಕೃತಿಕ ಮತ್ತು ಬೌದ್ಧ ಸಂಪರ್ಕಗಳು: ಹಲವಾರು ಭೂತಾನ್ ಯಾತ್ರಿಕರು ಬೋಧಗಯಾ, ರಾಜಗೀರ್, ನಳಂದಾ, ಸಿಕ್ಕಿಂ, ಉದಯಗಿರಿ ಮತ್ತು ಭಾರತದ ಇತರ ಬೌದ್ಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ.
  • ರಿಫ್ಟ್ ವ್ಯಾಲಿ ಜ್ವರ | ಮೋಲ್ಯಾಸಿಸ್ (ಕಾಕಂಬಿ) | ರೈಸಿನ್

    ರಿಫ್ಟ್ ವ್ಯಾಲಿ ಜ್ವರ

    ಸಾಮಾನ್ಯ ಅಧ್ಯಾಯನ-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಆಫ್ರಿಕಾದ ಮೌರಿಟಾನಿಯಾ ಮತ್ತು ಸೆನೆಗಲ್‌ನಲ್ಲಿ ರಿಫ್ಟ್ ವ್ಯಾಲಿ ಜ್ವರ (RVF) ಏಕಾಏಕಿ ಹರಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ದೃಢಪಡಿಸಿದೆ.

    ರಿಫ್ಟ್ ವ್ಯಾಲಿ ಜ್ವರ (RVF) ದ ಬಗ್ಗೆ:

      • ರಿಫ್ಟ್ ವ್ಯಾಲಿ ಜ್ವರ (Rift Valley Fever) ಎಂಬ ಹೆಸರಿನ ಮೂಲ ಕೀನ್ಯಾದ ರಿಫ್ಟ್ ವ್ಯಾಲಿಯಿಂದ ಬಂದಿದೆ. 1930ರ ದಶಕದ ಆರಂಭದಲ್ಲಿ ಈ ರೋಗವನ್ನು ಮೊದಲ ಬಾರಿ ಅಲ್ಲಿ ಗುರುತಿಸಲಾಯಿತು.
      • ರೋಗಕಾರಕ:- ಇದು ಫೆನುಯಿವಿರಿಡೆ ಕುಟುಂಬಕ್ಕೆ ಸೇರಿದ ಫ್ಲೆಬೋವೈರಸ್‌ನಿಂದ ಬರುತ್ತದೆ.
      • ಇದು ಪ್ರಾಥಮಿಕವಾಗಿ ಕುರಿ, ಮೇಕೆ, ಜಾನುವಾರು ಮತ್ತು ಒಂಟೆಗಳಂತಹ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ.
      • ಹರಡುವಿಕೆ:- ಸೋಂಕಿತ ಪ್ರಾಣಿಗಳ ನಿಕಟ ಸಂಪರ್ಕದಿಂದ ಅಥವಾ ಸೋಂಕಿತ ಸೊಳ್ಳೆಗಳ ಕಡಿತದಿಂದ ಮನುಷ್ಯರಿಗೆ ಸೋಂಕು ಹರಡುತ್ತದೆ.
    • ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬ  ಯಾವುದೇ ಪುರಾವೆಗಳಿಲ್ಲ.
    • ಪ್ರಸ್ತುತ, ಯಾವುದೇ ನಿರ್ದಿಷ್ಟ ವೈರಸ್ ವಿರೋಧಿ ಚಿಕಿತ್ಸೆ ಇರುವುದಿಲ್ಲ.

    ಮೋಲ್ಯಾಸಿಸ್ (ಕಾಕಂಬಿ)

    ಸಾಮಾನ್ಯ ಅಧ್ಯಾಯನ-3/ಆರ್ಥಿಕತೆ

    ಸಂದರ್ಭ:

    • ಕೇಂದ್ರ ಸರ್ಕಾರವು 2025–26ರಲ್ಲಿ ಸುಮಾರು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡುವುದನ್ನು ಹಾಗೂ ಮೋಲ್ಯಾಸಿಸ್ ಮೇಲೆ ಇರುವ 50% ರಫ್ತು ತೆರಿಗೆಯನ್ನು ರದ್ದುಪಡಿಸುವುದನ್ನು ಪರಿಗಣಿಸುತ್ತಿದೆ. ಇದರಿಂದ ರೈತರಿಗೆ ಆದಾಯ ಹೆಚ್ಚಳವಾಗಲು ಮತ್ತು ವೇಗವಾಗಿ ಪಾವತಿಗಳು ದೊರಕಲು ಸಹಕಾರಿಯಾಗುತ್ತದೆ.

    ಮೊಲಾಸಸ್ (ಕಾಕಂಬಿ) ನ ಬಗ್ಗೆ:

    • ಮೊಲಾಸಸ್ ಎಂಬುದು ಕಬ್ಬು ಅಥವಾ ಸಕ್ಕರೆಯುಕ್ತ  ಬೀಟ್ಗೆಡ್ಡೆಗಳನ್ನು ಸಕ್ಕರೆಯಾಗಿ ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಉಪಉತ್ಪನ್ನವಾಗಿ ಪಡೆದ ದಪ್ಪದಾದ, ಗಾಢ ಕಂದು ಬಣ್ಣದ ದ್ರವವಾಗಿದೆ. 

    ಉಪಯೋಗಗಳು:

    • ಆಹಾರ ಉದ್ಯಮ:- ಬೇಕರಿ ಉತ್ಪನ್ನಗಳು, ಮಧ್ಯದ ಉತ್ಪಾದನೆ ಮತ್ತು ಪಶು ಆಹಾರವಾಗಿ ಬಳಸಲಾಗುತ್ತದೆ.
    • ಕೈಗಾರಿಕಾ ಬಳಕೆ: ಎಥೆನಾಲ್, ಸಿಟ್ರಿಕ್ ಆಮ್ಲ ಮತ್ತು ಯೀಸ್ಟ್ ಉತ್ಪಾದನೆಯಲ್ಲಿ ಬಳಕೆ.
    • ಕೃಷಿ : ಜಾನುವಾರುಗಳ ಆಹಾರವಾಗಿ ಮತ್ತು ಮಣ್ಣಿನ ಸುಧಾರಣೆಗೆ ಬಳಕೆ.
    • ಕಚ್ಚಾ ತೈಲ ಆಮದುಗಳನ್ನು ಕಡಿಮೆ ಮಾಡಲು ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಅಡಿಯಲ್ಲಿ ಎಥೆನಾಲ್ ಉತ್ಪಾದನೆಗೆ ಇದು ಪ್ರಮುಖ ಕಚ್ಚಾ ವಸ್ತುವಾಗಿದೆ.

    ರೈಸಿನ್

    ಸಾಮಾನ್ಯ ಅಧ್ಯಾಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ (ATS) ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ ಮತ್ತು ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳನ್ನು ಬಂಧಿಸಿದೆ, ಅವರು ರಿಸಿನ್ ರಾಸಾಯನಿಕವನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ.

    ರಿಸಿನ್ ಬಗ್ಗೆ:

      • ರಿಸಿನ್ ಎಂಬುದು ಏರಂಡೆ ಬೀಜದ ಗಿಡ (Ricinus communis) ದಿಂದ ಪಡೆಯುವ ಅತ್ಯಂತ ವಿಷಕಾರಿ ಸಸಾರಜನಕ ಪದಾರ್ಥ (ಪ್ರೋಟೀನ್) ವಾಗಿದೆ.
      • ಇದು ಜೀವಕೋಶಗಳಲ್ಲಿ ಸಸಾರಜನಕ ಪದಾರ್ಥಗಳ ಸಂಶ್ಲೇಷಣೆಯನ್ನು ನಿರ್ಬಂಧಿಸುತ್ತದೆ, ಇದು ಬಹು ಅಂಗಾಂಗ ವೈಫಲ್ಯ ಮತ್ತು ಒಡ್ಡಿಕೊಂಡ ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತದೆ.
    • ಇದನ್ನು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ (CWC) ಅನುಸೂಚಿ-1 ರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.
    • ರಿಸಿನ್ ವಿಷಕ್ಕೆ ಯಾವುದೇ  ರಾಮಬಾಣವಿರುವುದಿಲ್ಲ.

    ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ ಬಗ್ಗೆ:

    • ಕಾರ್ಯಾದೇಶ:- ಇದು ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಅವುಗಳ ಮೂಲ ಪದಾರ್ಥಗಳನ್ನು ತಯಾರಿಸುವುದು, ದಾಸ್ತಾನು ಮತ್ತು ಬಳಕೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
    • ಅಂಗೀಕಾರ ಮತ್ತು ಜಾರಿ:- ಈ ಒಪ್ಪಂದವನ್ನು ಸೆಪ್ಟೆಂಬರ್ 3, 1992 ರಂದು ಅಂಗೀಕರಿಸಲಾಯಿತು ಮತ್ತು ಏಪ್ರಿಲ್ 29, 1997 ರಂದು ಜಾರಿಗೆ ಬಂದಿತು.
    • ಸದಸ್ಯ ರಾಷ್ಟ್ರಗಳು:- ಪ್ರಸ್ತುತ 193 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಕಾನೂನಾತ್ಮಕವಾಗಿ ಬದ್ಧತೆ:- ಹಳೆಯ ಮತ್ತು ತ್ಯಜಿಸಿದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸುವುದು ಕಡ್ಡಾಯವಾಗುತ್ತದೆ.
    • ಭಾರತದ ಅನುಮೋದನೆ:- ಭಾರತವು ಜನವರಿ 1993 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.

    ಭಾರತದ ಪ್ರಯತ್ನಗಳು:

    • ರಾಷ್ಟ್ರೀಯ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶ ಪ್ರಾಧಿಕಾರ (NACWC) ಭಾರತದಲ್ಲಿ ಸಮಾವೇಶವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಪ್ರಾಧಿಕಾರವಾಗಿದೆ.
  • ಸರಂಡಾ ಅರಣ್ಯ | ವಿದ್ಯುತ್ ವಾಹನಗಳ ಉತ್ತೇಜನಕ್ಕಾಗಿ NEMMP, 2020 ಅನ್ನು ಪುನರ್ ಪರಿಶೀಲಿಸುವುದು | ಮುಧ್-ನ್ಯೋಮಾ ವಾಯುನೆಲೆ

    ಸರಂಡಾ ಅರಣ್ಯ

    ಸಾಮಾನ್ಯ ಅಧ್ಯಾಯನ-3/ಪರಿಸರ ಅಧ್ಯಾಯನ

    ಇದೀಗ ಸುದ್ದಿಯಲ್ಲಿದೆ:

    • ಸರ್ವೋಚ್ಚ ನ್ಯಾಯಾಲಯವು ಪರಿಸರಸಂಪನ್ಮೂಲಗಳಲ್ಲಿ ಸಮೃದ್ಧವಾದ ಸರಂಡಾ ಅರಣ್ಯವನ್ನು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಲು ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

    ಸರಂಡಾ ಅರಣ್ಯದ ಬಗ್ಗೆ:

    • ಸ್ಥಳ – ಜಾರ್ಖಂಡ್
    • ಇದು ಏಷ್ಯಾದ ಅತಿದೊಡ್ಡ ಸಾಲ್ (ಶೋರಿಯಾ ರೋಬಸ್ಟಾ) ಅರಣ್ಯವಾಗಿದ್ದು, ಸುಮಾರು 820-900 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ.
    • ಇದನ್ನು “ಏಳುನೂರು ಬೆಟ್ಟಗಳ ನಾಡು” ಎಂದು ಕರೆಯಲಾಗುತ್ತದೆ, ಇದು ಅದರ ಗುಡ್ಡಗಾಡು ಪ್ರದೇಶವನ್ನು ಪ್ರತಿಬಿಂಬಿಸುತ್ತದೆ.
      • ಈ ಅರಣ್ಯವು ಛೋಟಾನಾಗಪುರ ಜೈವಿಕ-ಭೌಗೋಳಿಕ ವಲಯದ ಭಾಗವಾಗಿದ್ದು, ಒಡಿಶಾ ಮತ್ತು ಛತ್ತೀಸ್‌ಗಢದ ಅರಣ್ಯಗಳೊಂದಿಗೆ ನೈಸರ್ಗಿಕ ಸ್ವರೂಪದ ನಿರಂತರತೆಯನ್ನು ಹೊಂದಿದೆ.
    • ಪ್ರಭೇದಗಳು:- ಇದು ಸ್ಥಳೀಯ ಸಾಲ್ ಅರಣ್ಯದ ಆಮೆ, ನಾಲ್ಕು ಕೊಂಬಿನ ಹುಲ್ಲೆ, ಏಷ್ಯಾದ “ಪುನುಗು ಬೆಕ್ಕು” ಮತ್ತು ಕಾಡು ಆನೆಗಳು ಸೇರಿದಂತೆ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿದೆ. 
    • ಬುಡಕಟ್ಟುಗಳು:- ಇದು ಹೋ, ಮುಂಡಾ, ಉರಾನ್ ಮತ್ತು ಇತರೆ ಆದಿವಾಸಿ ಸಮುದಾಯಗಳಿಂದ ನೆಲೆಸಿದೆ.
    • ಭಾರತದ ಕಬ್ಬಿಣದ ಅದಿರಿನ ನಿಕ್ಷೇಪಗಳಲ್ಲಿ 26% ರಷ್ಟು ಈ ಪ್ರದೇಶದಲ್ಲಿದೆ.

    ವಿದ್ಯುತ್ ವಾಹನಗಳ ಉತ್ತೇಜನಕ್ಕಾಗಿ NEMMP, 2020 ಅನ್ನು ಪುನರ್ ಪರಿಶೀಲಿಸುವುದು

    ಸಾಮಾನ್ಯ ಅಧ್ಯಾಯನ-3/ಪರಿಸರ ಅಧ್ಯಾಯನ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು “ರಾಷ್ಟ್ರೀಯ ವಿದ್ಯುತ್ ಸಂಚಾರಿಶೀಲತಾ ಗುರಿ ಯೋಜನೆ (NEMMP), 2020” ಅನ್ನು ಮರುಪರಿಶೀಲಿಸುವಂತೆ ಸೂಚಿಸಿತು.

    ರಾಷ್ಟ್ರೀಯ ವಿದ್ಯುತ್  ಸಂಚಾರಿಶೀಲತಾ ಗುರಿ ಯೋಜನೆ (NEMMP), 2020 ರ ಬಗ್ಗೆ:

    • ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ಅವುಗಳ ಉತ್ಪಾದನೆಗೆ ದೃಷ್ಟಿ ಮತ್ತು ಮಾರ್ಗಸೂಚಿಯನ್ನು ಒದಗಿಸುವ ರಾಷ್ಟ್ರೀಯ ಗುರಿಯಾಗಿದೆ.
    • ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (FAME ಇಂಡಿಯಾ) ಯೋಜನೆಯು 2015 ರಲ್ಲಿ NEMMP ಅಡಿಯಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯದಿಂದ ರೂಪಿಸಲ್ಪಟ್ಟಿತು.
    • ಭಾರತದಲ್ಲಿ ವಿದ್ಯುತ್ ಅಥವಾ ಹೈಬ್ರಿಡ್ ವಾಹನಗಳ (xEV) ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ಮುಧ್-ನ್ಯೋಮಾ ವಾಯುನೆಲೆ

    ಸಾಮಾನ್ಯ ಅಧ್ಯಾಯನ-3 / ರಕ್ಷಣಾ ವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ:

    • ವಾಯುಪಡೆಯ ಮುಖ್ಯಸ್ಥರು ಲಡಾಖ್‌ನಲ್ಲಿ ಮುಧ್-ನ್ಯೋಮಾ ವಾಯುನೆಲೆಯನ್ನು ಉದ್ಘಾಟಿಸಿದರು.

    ಮುಧ್-ನ್ಯೋಮಾ ವಾಯುನೆಲೆಯ ಬಗ್ಗೆ:

    • ಈ ವಾಯುನೆಲೆಯು ಲಡಾಖ್‌ನ ಲೇಹ್ ಜಿಲ್ಲೆಯ ನ್ಯೋಮಾದಲ್ಲಿ 13,700 ಅಡಿ (4,200 ಮೀ) ಎತ್ತರದಲ್ಲಿದೆ, ಇದು ವಿಶ್ವದ ಅತಿ ಎತ್ತರದ ಯುದ್ಧವಿಮಾನ-ಸಮರ್ಥ ವಾಯುನೆಲೆಗಳಲ್ಲಿ ಒಂದಾಗಿದೆ.
    • ನಿರ್ಮಾಣ ಕಾರ್ಯವನ್ನು ಗಡಿ ರಸ್ತೇ ನಿರ್ಮಾಣ ಸಂಸ್ಥೆ (BRO) ವಹಿಸಿಕೊಂಡಿತ್ತು.

    ಈ ವಾಯುನೆಲೆಯು ವಾಸ್ತವಿಕ ಗಡೀ ನಿಯಂತ್ರಣ ರೇಖೆ (LAC) ಗೆ ಸಮೀಪ ಇರುವುದರಿಂದ ಭಾರತಕ್ಕೆ ಮಹತ್ವದ ಯುದ್ಧತಂತ್ರದ ಮತ್ತು ಲಾಜಿಸ್ಟಿಕ್‌ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ತ್ವರಿತವಾಗಿ ಪ್ರತಿಕ್ರಿಯಿಸುವುದು, ಪಡೆಗಳನ್ನು ನಿಯೋಜಿಸುವುದು ಮತ್ತು ಡೆಪ್ಸಾಂಗ್ ಸಮತಟ್ಟುಗಳು, ಪ್ಯಾಂಗಾಂಗ್ ತ್ಸೋ ಹಾಗೂ ಚುಷುಲ್ ಕಣಿವೆಯಂತಹ ಸಂವೇದನಾಶೀಲ ಪ್ರದೇಶಗಳಲ್ಲಿ ಕಣ್ಗಾವಲನ್ನು ಬಲಪಡಿಸುವುದು ಸಾಧ್ಯವಾಗುತ್ತದೆ.

  • ಭಾರತ-ನೇಪಾಳ ವ್ಯಾಪಾರ ಸಂಬಂಧಗಳ ಬಲವರ್ಧನೆಗೆ  ಒಪ್ಪಂದ | ಕೆಲಸದ ಸ್ಥಳದ ಒತ್ತಡ ಮತ್ತು ಮಧುಮೇಹ | ಹೆಪಟೈಟಿಸ್ A | ರೂಮೇಟಾಯ್ಡ್ ಸಂಧಿವಾತ

    ಭಾರತ-ನೇಪಾಳ ವ್ಯಾಪಾರ ಸಂಬಂಧಗಳ ಬಲವರ್ಧನೆಗೆ  ಒಪ್ಪಂದ

    ಸಾಮಾನ್ಯ ಅಧ್ಯಾಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಸಂದರ್ಭ:

    • ಭಾರತದ ಜೋಗ್ಬಾನಿ ಮತ್ತು ನೇಪಾಳದ ಬಿರಾಟ್‌ನಗರಗಳ ನಡುವೆ ರೈಲು ಆಧಾರಿತ ಸರಕು ಸಾಗಣೆಗೆ ಅನುಕೂಲವಾಗುವಂತೆ ಭಾರತ ಮತ್ತು ನೇಪಾಳ ಸಾರಿಗೆ ಒಪ್ಪಂದವನ್ನು ತಿದ್ದುಪಡಿ ಮಾಡಿವೆ.

    ಭಾರತ – ನೇಪಾಳ ಸಂಬಂಧಗಳು:

    • ಗಡಿ ಹಂಚಿಕೆ:- ನೇಪಾಳ ದೇಶವು, ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಜೊತೆ ಗಡಿಯನ್ನು ಹಂಚಿಕೊಂಡಿದೆ.
    • ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ:- 1950 ರಲ್ಲಿ ಸಹಿ ಹಾಕಲಾಯಿತು, ಇದು ಭಾರತ ಮತ್ತು ನೇಪಾಳ ನಡುವೆ ಇರುವ ವಿಶೇಷ ಸಂಬಂಧಗಳನ್ನು ರೂಪಿಸುತ್ತದೆ.
    • ರಕ್ಷಣಾ ಸಹಕಾರ:- ಎರಡೂ ದೇಶಗಳು ಭಾರತ ಮತ್ತು ನೇಪಾಳದಲ್ಲಿ ಪರ್ಯಾಯವಾಗಿ ಸೂರ್ಯ ಕಿರಣ್ ಎಂಬ ಜಂಟಿ ಸೇನಾ ಸಮಾರಾಭ್ಯಾಸವನ್ನು ನಡೆಸುತ್ತವೆ.
    • ಭಾರತೀಯ ಸೇನೆಯ ಗೊರ್ಕಾ ಪಡೆಯನ್ನು ಭಾಗಶಃ ನೇಪಾಳದ ಗುಡ್ಡ ಪ್ರದೇಶಗಳ ಜಿಲ್ಲೆಗಳ ಜನರನ್ನು ನೇಮಕಾತಿ ಮಾಡುವ ಮೂಲಕ ರಚಿಸಲಾಗುತ್ತದೆ.
    • ವ್ಯಾಪಾರ ಮತ್ತು ಆರ್ಥಿಕತೆ:- ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಹೂಡಿಕೆಯ  ದೇಶವಾಗಿದೆ, ಅಲ್ಲಿ ಭಾರತೀಯ ಸಂಸ್ಥೆಗಳು ನೇಪಾಳದ ಒಟ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ 33.5% ರಷ್ಟು ಪಾಲನ್ನು ಹೊಂದಿವೆ.
    • ಆಪರೇಷನ್ ಮೈತ್ರಿ ಮತ್ತು ಭೂಕಂಪದ ನಂತರದ ಪುನರ್ನಿರ್ಮಾಣ ನೆರವು:- 2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ನಂತರ, ಭಾರತ ಸರ್ಕಾರವು ಮೊದಲು ಸ್ಪಂದಿಸಿತು ಮತ್ತು ವಿದೇಶದಲ್ಲಿ ತನ್ನ ಅತಿದೊಡ್ಡ ವಿಪತ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸಿತು.
    • ಸಾಂಸ್ಕೃತಿಕ ಸಂಬಂಧಗಳು:- ಎರಡು ದೇಶಗಳ ನಾಯಕರು ಸಹಜವಾಗಿಯೇ ಪುರಾತನ ‘ರೊಟಿ–ಬೇಟಿ’ ಸಂಬಂಧವನ್ನು ಉಲ್ಲೇಖಿಸುತ್ತಾರೆ, ಇದು ಎರಡು ದೇಶಗಳ ಜನರ ನಡುವೆ ನಡೆಯುವ ಗಡಿಯಾಚೆಗಿನ ವಿವಾಹಗಳನ್ನು ಸೂಚಿಸುತ್ತದೆ. 

    ಭಾರತ ಮತ್ತು ನೇಪಾಳ ನಡುವಿನ ವಿವಾದಿತ  ಪ್ರದೇಶಗಳ ಬಗ್ಗೆ:

    • ಕಾಲಾಪಾನಿ ವಿವಾದ:- ಈ ಪ್ರದೇಶವು ಭಾರತದ ನಿಯಂತ್ರಣದಲ್ಲಿದೆ ಆದರೆ ಐತಿಹಾಸಿಕ ಕಾರಣಗಳಿಂದಾಗಿ ನೇಪಾಳವು ಈ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತದೆ. ಈ ಪ್ರದೇಶವು ನೇಪಾಳ ಮತ್ತು ಭಾರತದ ನಡುವಿನ ಅತಿದೊಡ್ಡ ಪ್ರಾದೇಶಿಕ ವಿವಾದವಾಗಿದೆ.

    ಕೆಲಸದ ಸ್ಥಳದ ಒತ್ತಡ ಮತ್ತು ಮಧುಮೇಹ

    ಸಾಮಾನ್ಯ ಅಧ್ಯಾಯನ-2/ಆರೋಗ್ಯ

    ಸಂದರ್ಭ:

    • ICMR–INDIAB, 2023 ರ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು 10.1 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿನ ಒತ್ತಡವು ಈ ಹೊರೆಯನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿರಬಹುದು.
    • ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.

    ಭಾರತದಲ್ಲಿ ಮಧುಮೇಹದ ದುಸ್ಥಿತಿ:

    • ಭಾರತವನ್ನು ಕೆಲವುಬಾರಿ ವಿಶ್ವದ ಮಧುಮೇಹದ  ರಾಜಧಾನಿ ಎಂದು ಕರೆಯಲಾಗುತ್ತದೆ.
    • ICMR–INDIAB ಅಧ್ಯಯನದ ಪ್ರಕಾರ, 2000ನೇ ಇಸವಿಯಲ್ಲಿ ಸುಮಾರು 3.2 ಕೋಟಿಗೆ ಇದ್ದ ಮಧುಮೇಹಿಗಳ ಸಂಖ್ಯೆ 2024 ರಲ್ಲಿ ಸುಮಾರು 9 ಕೋಟಿ ವಯಸ್ಕರ ವರೆಗೆ ಏರಿದೆ .
    • ಇತ್ತೀಚಿನ ವರದಿಗಳ ಪ್ರಕಾರ, 9 ಜನ ಭಾರತೀಯ ವಯಸ್ಕರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿದ್ದಾರೆ.

    ಮಧುಮೇಹದ ಬಗ್ಗೆ:

    • ಮಧುಮೇಹವು ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದ್ದು , ಇದರಲ್ಲಿ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.
    • ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್ (ಸಕ್ಕರೆ) ನ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ.
      • ಇನ್ಸುಲಿನ್: ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ.
    • ಇದು ಆಹಾರದ ಮೂಲಕ ಗ್ಲೂಕೋಸ್ ಜೀವಕೋಶಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ, ಅಲ್ಲಿ ಇದನ್ನು ಶಕ್ತಿಗಾಗಿ ಬಳಸಲಾಗುತ್ತದೆ.

    ಮಧುಮೇಹದ ವಿಧಗಳು:

    • ಇದು ಸ್ವಯಂಪ್ರತಿರಕ್ಷಣಾ (autoimmune) ರೋಗವಾಗಿದ್ದು, ದೇಹದ ರೋಗನಿರೋಧಕ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ದೇಹವು ಬಹಳ ಕಡಿಮೆ ಅಥವಾ ಯಾವುದೇ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ.
    • ಇದು ಸಾಮಾನ್ಯವಾಗಿ ಬಾಲ್ಯವಸ್ತೆ ಅಥವಾ ಹದಿಹರೆಯದಲ್ಲಿ ಪ್ರಾರಂಭವಾಗುತ್ತದೆ.
    • ಇದಕ್ಕಾಗಿ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದು ಬೇಕಾಗುತ್ತದೆ.

    ಟೈಪ್ 2 ಮಧುಮೇಹದ ಬಗ್ಗೆ:

    • ಇದು ಅತ್ಯಂತ ಸಾಮಾನ್ಯವಾದ ಮಧುಮೇಹ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ.
    • ಇದು ಸಾಮಾನ್ಯವಾಗಿ ಬೊಜ್ಜು, ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕುಟುಂಬದ ಹಿರಿಯರಿಂದ ಬಂದ ರೋಗಗಳೊಂದಿಗೆ ಸಂಬಂಧ ಹೊಂದಿದೆ.
    • ಇದನ್ನು ಆಹಾರ, ವ್ಯಾಯಾಮ, ಮೌಖಿಕ ಔಷಧಿಗಳು ಮತ್ತು ಕೆಲವೊಮ್ಮೆ ಇನ್ಸುಲಿನ್ ಮೂಲಕ ನಿರ್ವಹಣೆ ಮಾಡಬಹುದು.

    ಗರ್ಭಾವಸ್ಥೆಯ ಮಧುಮೇಹದ ಬಗ್ಗೆ:

    • ಇದು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಹೆರಿಗೆಯ ನಂತರ ಕಣ್ಮರೆಯಾಗುತ್ತದೆ, ಆದರೆ ನಂತರದ ವರ್ಷಗಳಲ್ಲಿ ಟೈಪ್ 2 ಮಧುಮೇಹ ಬರುವ ಅಪಾಯವನ್ನು ಹೆಚ್ಚಿಸುತ್ತದೆ.

    ಹೆಪಟೈಟಿಸ್ A

    ಸಾಮಾನ್ಯ ಅಧ್ಯಾಯನ-2/ಆರೋಗ್ಯ

    ಸಂದರ್ಭ:

    • ಭಾರತವು ತನ್ನ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದಲ್ಲಿ ಟೈಫಾಯಿಡ್ ಕಾಂಜುಗೇಟ್ ಲಸಿಕೆಯನ್ನು ಸೇರಿಸುವ ಬಗ್ಗೆ ಚರ್ಚಿಸುತ್ತಿರುವಾಗ, ಹೆಪಟೈಟಿಸ್ A ಲಸಿಕೆಯು ಸೇರ್ಪಡೆಯ ಆದ್ಯತೆಗೆ ಅರ್ಹವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

    ಹೆಪಟೈಟಿಸ್:

    • ಹೆಪಟೈಟಿಸ್ ಕಾಯಿಲೆ ಎಂಬುದು, ಯಕೃತ್ತಿನ ಉರಿಯೂತವಾಗಿದೆ. ಹೆಪಟೈಟಿಸ್ ವೈರಸ್‌ನಲ್ಲಿ 5 ಪ್ರಮುಖ ತಳಿಗಳಿವೆ, ಇವುಗಳನ್ನು ಹೆಪಟೈಟಿಸ್ -A, ಹೆಪಟೈಟಿಸ್- B, ಹೆಪಟೈಟಿಸ್ -C, ಹೆಪಟೈಟಿಸ್- D ಮತ್ತು ಹೆಪಟೈಟಿಸ್- E ಎಂದು ಕರೆಯಲಾಗುತ್ತದೆ.
    • ಹೆಪಟೈಟಿಸ್ -B ಮತ್ತು ಹೆಪಟೈಟಿಸ್ -C ಪ್ರಕಾರಗಳು ದೀರ್ಘಕಾಲಿಕ ರೋಗಗಳಿಗೆ ಕಾರಣವಾಗುತ್ತವೆ ಮತ್ತು ಒಟ್ಟಿಗೆ ಅವು ಯಕೃತ್ತಿನ ಸಿರೋಸಿಸ್, ಯಕೃತ್ತಿನ ಕ್ಯಾನ್ಸರ್ ಮತ್ತು ವೈರಲ್ ಹೆಪಟೈಟಿಸ್-ಸಂಬಂಧಿತ ಸಾವುಗಳಿಗೆ ಸಾಮಾನ್ಯ ಕಾರಣಗಳಾಗಿವೆ.

    ಹೆಪಟೈಟಿಸ್ A ಕಾಯಿಲೆಯ ಬಗ್ಗೆ:

      • ಇದು ಹೆಪಟೈಟಿಸ್ A ವೈರಸ್‌ (HAV) ನಿಂದ ಉಂಟಾಗುತ್ತದೆ. ಇದು ದೀರ್ಘಕಾಲಿಕ ಸೋಂಕನ್ನು ಉಂಟುಮಾಡುವುದಿಲ್ಲ ಮತ್ತು ಸಾಮಾನ್ಯವಾಗಿ ಸ್ವಯಂ-ನಿಯಂತ್ರಿತವಾಗುತ್ತದೆ.
    • ಇದು ಅಶುದ್ಧ ಆಹಾರ ಮತ್ತು ಅಶುದ್ಧ ನೀರಿನ ಮೂಲಕ (ಮಲ–ಮೌಖಿಕ ಮಾರ್ಗಗಳ) ಹರಡುತ್ತದೆ.
    • ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ರೋಗವಾಗಿದ್ದು, ಲಸಿಕೆಗಳು 90% ರಿಂದ 95% ವರೆಗೆ ರಕ್ಷಣೆಯನ್ನು ಒದಗಿಸುತ್ತವೆ.

    ಹೆಪಟೈಟಿಸ್ B ಕಾಯಿಲೆಯ ಬಗ್ಗೆ:

    • ಇದು ತೀವ್ರವಾದ ಸೋಂಕನ್ನು ಉಂಟುಮಾಡುತ್ತದೆ, ತೀವ್ರವಾದ ಪ್ರಕರಣಗಳಲ್ಲಿ ಯಕೃತ್ತು ವೈಫಲ್ಯ ಸಂಭವಿಸುತ್ತದೆ.
    • ಹರಡುವಿಕೆ: ರಕ್ತ ಮತ್ತು ದೇಹದ ದ್ರವಗಳ ಮೂಲಕ, ಲೈಂಗಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಹರಡುತ್ತದೆ. 
    • ಚಿಕಿತ್ಸೆ: ಲಸಿಕೆ  ಹಾಕಿಸುವುದರಿಂದ ತಡೆಗಟ್ಟಬಹುದು, ಇದು ವೈರಸ್ ವಿರುದ್ಧ ಸುಮಾರು 100% ರಕ್ಷಣೆ ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ಜನನದ ನಂತರ ತಕ್ಷಣವೇ ನೀಡಲಾಗುತ್ತದೆ ಮತ್ತು ಕೆಲವು ವಾರಗಳ ನಂತರ ಬೂಸ್ಟರ್‌ಗಳನ್ನು ನೀಡಲಾಗುತ್ತದೆ.

    ಹೆಪಟೈಟಿಸ್ C ಕಾಯಿಲೆಯ ಬಗ್ಗೆ:

    • ಸಣ್ಣ ಪ್ರಮಾಣದ ಅನಾರೋಗ್ಯದಿಂದ ಹಿಡಿದು ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಸೇರಿದಂತೆ ಜೀವನಪರ್ಯಂತ ಅನುಭವಿಸುವ ಗಂಭೀರವಾದ ಅನಾರೋಗ್ಯದವರೆಗೆ ತೀವ್ರತೆ ಕಂಡುಬರುತ್ತದೆ.
    • ಹರಡುವಿಕೆ:- ಇದು ರಕ್ತದಿಂದ ಹರಡುವ ವೈರಸ್ ಆಗಿದ್ದು, ಹೆಚ್ಚಿನ ಸೋಂಕುಗಳು ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳಿಂದ ರಕ್ತಕ್ಕೆ ಒಡ್ಡಿಕೊಳ್ಳುವುದರಿಂದ ಸಂಭವಿಸುತ್ತವೆ.
    • ಚಿಕಿತ್ಸೆ:- ನೇರ-ಕಾರ್ಯನಿರ್ವಹಿಸುವ ಆಂಟಿವೈರಲ್ ಔಷಧಿಗಳು (DAAs ) ಬಾಧಿತ 95% ಕ್ಕಿಂತ ಹೆಚ್ಚು ಜನರನ್ನು ಗುಣಪಡಿಸಬಹುದು, ಪ್ರಸ್ತುತ ಯಾವುದೇ ಪರಿಣಾಮಕಾರಿ ಲಸಿಕೆ ಇರುವುದಿಲ್ಲ.

    ಹೆಪಟೈಟಿಸ್ D ಕಾಯಿಲೆಯ ಬಗ್ಗೆ:

    • ಇದು ಹೆಪಟೈಟಿಸ್ B ವೈರಸ್‌ನಿಂದ ಬಳಲುತ್ತಿರುವವರಿಗೆ ಮಾತ್ರ ಪರಿಣಾಮ ಬೀರುತ್ತದೆ, ಏಕೆಂದರೆ ದೇಹದಲ್ಲಿ ಉಳಿಯಲು ಇದಕ್ಕೆ ಹೆಪಟೈಟಿಸ್ B ವೈರಸ್‌ನ ಅಗತ್ಯವಿರುತ್ತದೆ.
    • ಇದು ಸಾಮಾನ್ಯವಾಗಿ ರಕ್ತ ಸಂಪರ್ಕದಿಂದ ಅಥವಾ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ.
    • ಹೆಪಟೈಟಿಸ್ Dಗೆ ವಿಶೇಷ ಲಸಿಕೆ ಇಲ್ಲ, ಆದರೆ ಹೆಪಟೈಟಿಸ್ B ಲಸಿಕೆಯೇ  ಇದನ್ನು ತಡೆಗಟ್ಟಲು  ಸಹಾಯ ಮಾಡುತ್ತದೆ..

    ಹೆಪಟೈಟಿಸ್ E ಕಾಯಿಲೆಯ ಬಗ್ಗೆ:

    • ಇದು ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮತ್ತು ಅಲ್ಪಾವಧಿಯ ಸೋಂಕಾಗಿದ್ದು, ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ, ಆದರೆ ರೋಗನಿರೋಧಕ ಶಕ್ತಿ ದುರ್ಬಲಗೊಂಡವರಲ್ಲಿ ಇದು ಗಂಭೀರವಾಗಬಹುದು.
    • ಹೆಪಟೈಟಿಸ್ E ಗೆ ಯಾವುದೇ ಲಸಿಕೆ ಇಲ್ಲ.

    ರೂಮೇಟಾಯ್ಡ್ ಸಂಧಿವಾತ

    ಸಾಮಾನ್ಯ ಅಧ್ಯಾಯನ-2/ಆರೋಗ್ಯ; ಸಾಮಾನ್ಯ ಅಧ್ಯಾಯನ -3/ವಿಜ್ಞಾನ ಮತ್ತು ತಂತ್ರಜ್ಞಾನ

    ಸಂದರ್ಭ:

    • ಸಂಶೋಧಕರು ರೂಮೇಟಾಯ್ಡ್ ಸಂಧಿವಾತದ ಗುಪ್ತ ಪೂರ್ವ ವೈದ್ಯಕೀಯ ವಿಕಾಸವನ್ನು ನಕ್ಷೆ ಮಾಡಿದ ಹೊಸ ಅಧ್ಯಯನ. 

    ರೂಮೇಟಾಯ್ಡ್ ಸಂಧಿವಾತ (RA) ದ ಬಗ್ಗೆ:

    • ಇದು ದೀರ್ಘಕಾಲದ ಸ್ವಯಂ ನಿರೋಧಕ ರೋಗವಾಗಿದ್ದು, ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಕೀಲುಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ.
    • ವಯಸ್ಸು ಮತ್ತು ಲಿಂಗ ಮಾದರಿ:- ಇದು ಸಾಮಾನ್ಯವಾಗಿ 30–60 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಪುರುಷರಿಗಿಂತ ಮಹಿಳೆಯರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚು.
    • ಕಾರಣಗಳು ಮತ್ತು ಅಪಾಯಕಾರಿ ಅಂಶಗಳು:- ನಿಖರವಾದ ಕಾರಣವಿರುವುದಿಲ್ಲ. ಸಂಭಾವ್ಯ ಕಾರಣಗಳಲ್ಲಿ ಅನುವಂಶಿಕ ಅಂಶಗಳು, ಹಾರ್ಮೋನುಗಳು ಮತ್ತು ಧೂಮಪಾನ ಅಥವಾ ಕೆಲವು ಸೋಂಕುಗಳಂತಹ ಪರಿಸರ ಪ್ರಚೋದಕಗಳು ಕಾರಣವಾಗುತ್ತವೆ.
    • ವ್ಯವಸ್ಥಿತ ಸ್ವಭಾವ:- ಇದು ವ್ಯವಸ್ಥಿತ ಕಾಯಿಲೆಯಾಗಿದ್ದು, ಕೀಲುಗಳು ಮಾತ್ರವಲ್ಲದೆ ಶ್ವಾಸಕೋಶಗಳು, ಹೃದಯ, ಕಣ್ಣುಗಳು, ಚರ್ಮ, ನರಗಳು ಮತ್ತು ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ.
    • ನಿರಂತರ ಉರಿಯೂತವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಆಯಾಸ, ಜ್ವರ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.
    • ಚಿಕಿತ್ಸೆ ಮತ್ತು ನಿರ್ವಹಣೆ : ಇದನ್ನು ಗುಣಪಡಿಸಲು ಸಾಧ್ಯವಿಲ್ಲ , ಆದರೆ ಆರಂಭಿಕ ರೋಗನಿರ್ಣಯ ಮತ್ತು ಸಮಯೋಚಿತ ನಿರ್ವಹಣೆಯು, ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು, ರೋಗದ ಪ್ರಗತಿಯನ್ನು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಅಂಗವೈಕಲ್ಯವನ್ನು ತಡೆಯಬಹುದು.
  • ‘ಆಭಾರ್’ ಆನ್‌ಲೈನ್ ಮಳಿಗೆ | ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 | ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

    ‘ಆಭಾರ್’ ಆನ್‌ಲೈನ್ ಮಳಿಗೆ

    ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

    ಇದೀಗ ಸುದ್ಧಿಯಲ್ಲಿದೆ:

      • ಭಾರತೀಯ ರೈಲ್ವೆಯು ಹೊಸ ‘ಆಭಾರ್’ ಆನ್‌ಲೈನ್ ಮಳಿಗೆಗೆ ಪ್ರೋತ್ಸಾಹ ಮತ್ತು ಸಹಾಯ ಒದಗಿಸುತ್ತಿದೆ.
    • ಆಯೋಜಕರು:- ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM).
    • ಉದ್ದೇಶ:- ಈ ಆನ್‌ಲೈನ್ ಮಳಿಗೆಯು ಪ್ರಧಾನವಾಗಿ ಈ ಕೆಳಗಿನ ವರ್ಗದ ತಯಾರಕರಿಂದ ಸಿದ್ಧಪಡಿಸಿದ ಉಡುಗೊರೆ ವಸ್ತುಗಳನ್ನು ಪ್ರದರ್ಶಿಸುತ್ತದೆ:
    1. ಸ್ಥಳೀಯ ಬುಡಕಟ್ಟು ಜನಾಂಗದವರು ಮತ್ತು ಕೈಮಗ್ಗ ನೇಕಾರರು.
    2. “ಒಂದು ಜಿಲ್ಲೆ ಒಂದು ಉತ್ಪನ್ನ” (ODOP) ಯೋಜನೆಯ ತಯಾರಕರು.
    3. ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಹೊಂದಿರುವ ಉತ್ಪನ್ನಗಳ ತಯಾರಕರು.
    4. ಕೇಂದ್ರ ಗುಡಿ ಕೈಗಾರಿಕೆಗಳ ಮಳಿಗೆ (CCIE).
    5. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC).

    ಮಹತ್ವ:

    • ಇದನ್ನು ‘ವೋಕಲ್ ಫಾರ್ ಲೋಕಲ್’ (‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’) ಅಭಿಯಾನದೊಂದಿಗೆ ಉತ್ತೇಜಿಸಲಾಗಿದೆ.
    • ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಕುಶಲಕರ್ಮಿಗಳು, ಮಹಿಳಾ ನೇತೃತ್ವದ ಉದ್ದಿಮೆಗಳು ಹಾಗೂ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಇದರ ಪ್ರಮುಖ ಗುರಿಯಾಗಿದೆ.

    ನಿಮಗಿದು ಗೊತ್ತೇ ?

    • ಭಾರತೀಯ ರೈಲ್ವೇ ಇಲಾಖೆಯು ಸ್ಥಳೀಯ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸಲು “ಒಂದು ನಿಲ್ದಾಣ ಒಂದು ಉತ್ಪನ್ನ” (OSOP) ಯೋಜನೆಯನ್ನು ಪ್ರಾರಂಭಿಸಿದೆ. 

    ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ಧಿಯಲ್ಲಿದೆ:

    • ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು “ವ್ಯಾಸ್-ನಾವ್ (VYAS –NAV), ವ್ಯಾಸ್-ಭಾರತ್ (VYAS – BHARAT) ಮತ್ತು ವ್ಯಾಸ್-ಸೂತ್ರ (VYAS- SUTRA)” ಆ್ಯಪ್‌ಗಳನ್ನು ಬಳಸುವ ಮೂಲಕ ‘ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025’ ಕ್ಕೆ ಚಾಲನೆ ನೀಡಿತು.

    ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 ರ ಬಗ್ಗೆ:

    • ಡಿಜಿಟಲ್ ರಚನೆ:- ಈ ಡಿಜಿಟಲ್ ಪ್ರಕ್ರಿಯೆಯು ಐಸಿಎಆರ್-ಕೇಂದ್ರ ಸಾಗರಿಕ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR-CMFRI) ಅಭಿವೃದ್ಧಿಪಡಿಸಿದ 3 ಬಹುಭಾಷಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ:
    1. ವ್ಯಾಸ್-ನಾವ್ : ಇದನ್ನು ಮೀನುಗಾರಿಕಾ ಗ್ರಾಮಗಳು ಮತ್ತು ಬಂದರುಗಳ ದೃಢೀಕರಣಕ್ಕಾಗಿ ಬಳಸಲಾಗುತ್ತದೆ. 
    2. ವ್ಯಾಸ್-ಭಾರತ್: ಇದನ್ನು ಕುಟುಂಬಗಳು ಮತ್ತು ಮೂಲಸೌಕರ್ಯಗಳ ಗಣತಿಗಾಗಿ ಬಳಸಲಾಗುತ್ತದೆ.

    ವ್ಯಾಸ್-ಸೂತ್ರ : ಇದನ್ನು ದತ್ತಾಂಶ ಸಂಗ್ರಹಣೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಬಳಸಲಾಗುತ್ತದೆ.

    ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

    ಇತರೆ

    ಇದೀಗ ಸುದ್ಧಿಯಲ್ಲಿದೆ: 

    • 2025ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು 1,466 ಸಿಬ್ಬಂದಿಗೆ ಪ್ರದಾನ ಮಾಡಲಾಗಿದೆ.

    ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕದ ಬಗ್ಗೆ:

    • ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯ (MHA).
    • ಗುರುತಿಸುವ ಪ್ರಮುಖ ಕ್ಷೇತ್ರಗಳು: ಇದು ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನ ಕ್ಷೇತ್ರಗಳಲ್ಲಿನ ಅತ್ಯುನ್ನತ ಸೇವೆಯನ್ನು ಗುರುತಿಸುತ್ತದೆ.
    • ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ, ಪ್ರತಿ ವರ್ಷ ಅಕ್ಟೋಬರ್ 31 ರಂದು ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
    • ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಂತದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆಗಳು, ಗುಪ್ತಚರ ವಿಭಾಗಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಕೇಂದ್ರೀಯ ಪೊಲೀಸ್ ಸಂಸ್ಥೆಗಳು (CPOs) ಮತ್ತು ವಿಧಿ ವಿಜ್ಞಾನ ಘಟಕಗಳ ಸದಸ್ಯರಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
  • ಆರ್ಯ ಸಮಾಜ ಸ್ಥಾಪನೆಯಾಗಿ 150 ವರ್ಷಗಳು | ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025 | ನಿವ್ವಳ-ಶೂನ್ಯ ಭಾರತಕ್ಕಾಗಿ ಇಂಗಾಲದ ಸೆರೆಹಿಡಿಯುವಿಕೆ | ಕೇಂದ್ರ ಆರೋಗ್ಯ ಸಚಿವಾಲಯದಿಂದ 3 ಗಿನ್ನೆಸ್ ವಿಶ್ವ ದಾಖಲೆಗಳ ನಿರ್ಮಾಣ

    ಆರ್ಯ ಸಮಾಜ ಸ್ಥಾಪನೆಯಾಗಿ 150 ವರ್ಷಗಳು

    ಸಾಮಾನ್ಯ ಅಧ್ಯಯನ – 1 / ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಅನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾತನಾಡಿ ಸಮಾಜ ಸುಧಾರಣೆ, ಶಿಕ್ಷಣ ಮತ್ತು ವೈದಿಕ ಚಿಂತನೆಗಳಲ್ಲಿ ಆರ್ಯ ಸಮಾಜದ 150 ವರ್ಷಗಳ ಪರಂಪರೆಯನ್ನು ಅವರು ಶ್ಲಾಘಿಸಿದರು.
    • “ಜ್ಞಾನ ಭಾರತಂ ಮಿಷನ್” ಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಆರ್ಯ ಸಮಾಜವನ್ನು ಕೋರಿದರು. ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಮತ್ತು ಭಾರತದ ಜ್ಞಾನ ಪರಂಪರೆಯ ಸಂರಕ್ಷಣೆಯಲ್ಲಿ ಯುವಜನರು ಸಕ್ರಿಯರಾಗುವಂತೆ ಅವರು ಒತ್ತಾಯಿಸಿದರು.

    ಆರ್ಯ ಸಮಾಜದ ಬಗ್ಗೆ 

    • ಸ್ಥಾಪಕರು:- ಸ್ವಾಮಿ ದಯಾನಂದ ಸರಸ್ವತಿ.
    • ಸ್ಥಾಪನೆ:- ಇದನ್ನು 1875 ರಲ್ಲಿ ಬಾಂಬೆಯಲ್ಲಿ ಸ್ಥಾಪಿಸಿ , 1877 ರಲ್ಲಿ ಲಾಹೋರ್‌ನಲ್ಲಿ ಸ್ಥಾಪನೆಗೆ ಅಂತಿಮ ಸ್ವರೂಪ ನೀಡಲಾಯಿತು.

    ಪ್ರಮುಖ ಸುಧಾರಣೆಗಳು

    • ಧಾರ್ಮಿಕ ನಂಬಿಕೆ:- ಮೂರ್ತಿ ಪೂಜೆ, ಆಚರಣೆಗಳು ಮತ್ತು ಪುರೋಹಿತಶಾಹಿ ಪ್ರಾಬಲ್ಯವನ್ನು ತಿರಸ್ಕರಿಸಿತು.
    • ಸಾಮಾಜಿಕ ಸೇವೆ:- ಜನ್ಮ ಆಧಾರಿತ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಾಲ್ಯ ವಿವಾಹ ಮತ್ತು ಬಲವಂತದ ವಿಧವೆಯತ್ವವನ್ನು ವಿರೋಧಿಸಿತು. ಅಂತರ್ಜಾತಿ ವಿವಾಹ, ವಿಧವಾ ಮರುವಿವಾಹ, ಮಹಿಳಾ ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪ್ರತಿಪಾದಿಸಿತು.
    • ಶೈಕ್ಷಣಿಕ ಉತ್ತೇಜನ:- ವೈದಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಲು, ಸಾಮಾಜಿಕ ಚಲನಶೀಲತೆ ಮತ್ತು ರಾಷ್ಟ್ರೀಯತೆಯನ್ನು ಬೆಳೆಸಲು ಡಿ.ಎ.ವಿ ಶಾಲೆಗಳು ಮತ್ತು ಗುರುಕುಲ ಕಾಂಗ್ರಿಯನ್ನು ಸ್ಥಾಪಿಸಿತು.

    ಭಾರತದ ರಾಷ್ಟ್ರೀಯತೆ ಮತ್ತು ಸಾಮಾಜಿಕ ಬದಲಾವಣೆಯಲ್ಲಿನ ಇದರ ಪಾತ್ರ:

    • ಲಾಲಾ ಲಜಪತ್ ರಾಯ್, ಭಗತ್ ಸಿಂಗ್ ಮತ್ತು ಇತರರು ಸೇರಿದಂತೆ ಆರ್ಯ ಸಮಾಜದ ಸದಸ್ಯರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇವರು ಸ್ವದೇಶಿ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು.

    ಸಮಕಾಲೀನ ಭಾರತದಲ್ಲಿ ಆರ್ಯ ಸಮಾಜದ ಪ್ರಸ್ತುತತೆ:

    • ಮಹಿಳಾ ನೇತೃತ್ವದ ಪ್ರಗತಿ: ಮಹಿಳಾ ಸಬಲೀಕರಣಕ್ಕಾಗಿ ಆರ್ಯ ಸಮಾಜದ ಆರಂಭಿಕ ಪ್ರತಿಪಾದನೆಯು ರಾಷ್ಟ್ರೀಯ ಉಪಕ್ರಮಗಳಾದ “ಬೇಟಿ ಬಚಾವೋ ಬೇಟಿ ಪಢಾವೋ”, “ನಾರಿ ಶಕ್ತಿ ವಂದನ್ ಅಧಿನಿಯಮ್” ಮತ್ತು “ಡ್ರೋನ್ ದೀದಿ” ಗಳೊಂದಿಗೆ ಹೊಂದಾಣಿಕೆಯಾಗುತ್ತದೆ.
    • ಗುರುಕುಲ ಸಂಪ್ರದಾಯ ಮತ್ತು ಶೈಕ್ಷಣಿಕ ಸುಧಾರಣೆಯ ಸಂರಕ್ಷಣೆ: ಆರ್ಯ ಸಮಾಜವು ಭಾರತದ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸಿತು, ವೈದಿಕ ಕಲಿಕೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿತು.
    • ವೈದಿಕ ಆದರ್ಶಗಳು ಮತ್ತು ಜಾಗತಿಕ ಪ್ರಸ್ತುತತೆ: “ಕೃಣ್ವಂತೋ ವಿಶ್ವಂ ಆರ್ಯಂ” ಎಂಬ ಧ್ಯೇಯವಾಕ್ಯವು ಜಾಗತಿಕ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಗತಿ ಎಂಬ ಭಾರತದ ಅಭಿವೃದ್ಧಿ ತತ್ವವನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರ ಮತ್ತು ಆಧ್ಯಾತ್ಮಿಕ ಜೀವನವನ್ನು ಪ್ರಪಂಚದಾದ್ಯಂತ ಹರಡುವ ‘ಮಿಷನ್ ಲೈಫ್’, ‘ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್’ ಮತ್ತು ಅಂತರರಾಷ್ಟ್ರೀಯ ಯೋಗ ದಿನದಂತಹ ಉಪಕ್ರಮಗಳಲ್ಲಿ ಇದರ ಆದರ್ಶಗಳು ಪ್ರತಿಧ್ವನಿಸುತ್ತವೆ.

    ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025

    ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು; ಜಾಗತಿಕ ಸಂಘಟನೆಗಳು

    ಇದೀಗ ಸುದ್ದಿಯಲ್ಲಿ

    • ಇತ್ತೀಚೆಗೆ, ದಕ್ಷಿಣ ಕೊರಿಯಾದ ಗ್ಯುಂಗ್‌ಜುನಲ್ಲಿ ನಡೆದ ‘ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ’ಯು (2025), APEC ನಾಯಕರ ಗ್ಯುಂಗ್‌ಜು ಘೋಷಣೆ’ಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಂಡಿತು.

    ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025 ಯ ಬಗ್ಗೆ:

      • ನಾಯಕರ ಘೋಷಣೆಯ (ಗ್ಯುಂಗ್‌ಜು ಘೋಷಣೆ) ಅಂಗೀಕಾರ: APEC ನಾಯಕರು ಈ ಕೆಳಗಿನ ವಿಷಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಜಂಟಿ ಘೋಷಣೆಯನ್ನು ಅನುಮೋದಿಸಿದರು:
    • ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಮುಕ್ತ ಮತ್ತು ತೆರೆದ ವ್ಯಾಪಾರ;
      • ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು;
      • ಅಂತರ್ಗತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು;
      • ಡಿಜಿಟಲ್ ಪರಿವರ್ತನೆ ಮತ್ತು ಹವಾಮಾನ ಕ್ರಿಯೆಯನ್ನು ಮುನ್ನಡೆಸುವುದು.

    ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ದ ಬಗ್ಗೆ 

    • ಇದು 1989 ರಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಆರ್ಥಿಕ ವೇದಿಕೆಯಾಗಿದೆ.
    • ಉದ್ದೇಶ – ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತದ ಆರ್ಥಿಕತೆಗಳ ಪರಸ್ಪರ ಅವಲಂಬನೆಯನ್ನು ಬಲಪಡಿಸುವುದು.
    • ಸದಸ್ಯ ಆರ್ಥಿಕತೆ ರಾಷ್ಟ್ರಗಳು  (21 ಸದಸ್ಯರು): ಆಸ್ಟ್ರೇಲಿಯಾ; ಬ್ರೂನಿ ದಾರುಸ್ಸಲಾಮ್; ಕೆನಡಾ; ಚಿಲಿ; ಚೀನಾ; ಹಾಂಗ್ ಕಾಂಗ್, ಚೀನಾ; ಇಂಡೋನೇಷ್ಯಾ; ಜಪಾನ್; ರಿಪಬ್ಲಿಕ್ ಆಫ್ ಕೊರಿಯಾ; ಮಲೇಷ್ಯಾ; ಮೆಕ್ಸಿಕೊ; ನ್ಯೂಜಿಲೆಂಡ್; ಪಪುವಾ ನ್ಯೂ ಗಿನಿಯಾ; ಪೆರು; ಫಿಲಿಪೈನ್ಸ್; ರಷ್ಯನ್ ಫೆಡರೇಶನ್; ಸಿಂಗಾಪುರ್ (APEC ಸಚಿವಾಲಯ ಮತ್ತು ಕೇಂದ್ರ ಕಛೇರಿ); ಚೈನೀಸ್ ತೈಪೆ; ಥೈಲ್ಯಾಂಡ್; ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ; ಮತ್ತು ವಿಯೆಟ್ನಾಂ.

    ನಿವ್ವಳ-ಶೂನ್ಯ ಭಾರತಕ್ಕಾಗಿ ಇಂಗಾಲದ ಸೆರೆಹಿಡಿಯುವಿಕೆ

    ಸಾಮಾನ್ಯ ಅಧ್ಯಯನ – 3 / ಪರಿಸರ ಅಧ್ಯಯನ

    ಇದೀಗ ಸುದ್ಧಿಯಲ್ಲಿದೆ:

    • ಸಾಗರ ಆಧಾರಿತ ಇಂಗಾಲದ ಸೆರೆಹಿಡಿಯುವಿಕೆ (ಕಾರ್ಬನ್ ಕ್ಯಾಪ್ಚರ್) ತಂತ್ರಜ್ಞಾನವು 2070ರೊಳಗೆ ಭಾರತವನ್ನು ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿ ತಲುಪಲು ಸಹಾಯ ಮಾಡಬಹುದು. ಈ ತಂತ್ರಜ್ಞಾನವು ಸಮುದ್ರಗಳನ್ನು ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ನೀಲಿ ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸುತ್ತವೆ. 

    ಇಂಗಾಲದ ಸೆರೆಹಿಡಿಯುವಿಕೆ, ಬಳಸುವಿಕೆ ಮತ್ತು ಸಂಗ್ರಹಿಸುವಿಕೆ (CCUS) ಎಂದರೇನು?

    • ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಯ ಪ್ರಕಾರ, CCUS ಎಂದರೆ, ಪಳಿಯುಳಿಕೆ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳು ಮತ್ತು ಇತರೆ ಕೈಗಾರಿಕೆಗಳಂತಹ ದೊಡ್ಡ ಮತ್ತು ಸ್ಥಿರ ಇಂಗಾಲದ ಡೈ ಆಕ್ಸೈಡ್ (CO2) ಹೊರಸೂಸುವ ಮೂಲಗಳಿಂದ CO2 ಅನ್ನು ಸೆರೆಹಿಡಿಯುವ, ಬಳಸಿಕೊಳ್ಳುವ ಮತ್ತು ಸುರಕ್ಷಿತವಾಗಿ ಸಂಗ್ರಹಿಸುವ ತಂತ್ರಜ್ಞಾನಗಳ ಗುಂಪಾಗಿದೆ. ಈ ಪ್ರಕ್ರಿಯೆಯು ವಾತಾವರಣಕ್ಕೆ CO2 ಸೇರುವುದನ್ನು ತಡೆಯುತ್ತದೆ.

    ಇಂಗಾಲದ ಹೊರಸೂಸುವಿಕೆ ಕಡಿತದ ಕುರಿತು ಭಾರತದ ಬದ್ಧತೆಗಳು:

    • ಭಾರತವು ‘ಮಿಷನ್ ಲೈಫ್ ‘(ಪರಿಸರಕ್ಕಾಗಿ ಜೀವನಶೈಲಿ) ಅನ್ನು ಪ್ರಾರಂಭಿಸಿದೆ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (NDCs) ನವೀಕರಿಸಿದೆ. 

    ನವೀಕರಿಸಿದ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ, 2022 ರ ಅಡಿಯಲ್ಲಿ ಭಾರತದ ಪ್ರಮುಖ ಬದ್ಧತೆಗಳು:

    • ಹೊರಸೂಸುವಿಕೆ ತೀವ್ರತೆಯ ಕಡಿತ: 2005ರ ಮಟ್ಟಕ್ಕೆ ಹೋಲಿಸಿದರೆ, 2030ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಪ್ರತಿ ಘಟಕಕ್ಕೆ CO₂ ಹೊರಸೂಸುವಿಕೆಯನ್ನು 45%ರಷ್ಟು ಕಡಿಮೆ ಮಾಡುವುದು.
    • ಪಳೆಯುಳಿಕೆಯೇತರ ಇಂಧನ ಮೂಲಗಳು: 2030ರ ವೇಳೆಗೆ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 50% ಅನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವುದು.
    • ಇಂಗಾಲದ ತೊಟ್ಟಿ (ಕಾರ್ಬನ್ ಸಿಂಕ್) ಯ ಸೃಷ್ಟಿ: ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ 2.5 ರಿಂದ 3 ಶತಕೋಟಿ ಟನ್‌ಗಳಷ್ಟು CO₂ ಸಮಾನ (GtCO₂e) ಹೆಚ್ಚುವರಿ ಇಂಗಾಲದ ತೊಟ್ಟಿಯನ್ನು ಸೃಷ್ಟಿಸುವುದು.

    ಹೆಚ್ಚುವರಿ ಮಾಹಿತಿ:

    • ಭಾರತವು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪುವ ಯೋಜನೆಯನ್ನು 2021ರ COP26ನಲ್ಲಿ ಘೋಷಿಸಿತು.
    • ಸಾಗರ ಆಧಾರಿತ CCUS ತಂತ್ರಜ್ಞಾನಗಳೊಂದಿಗೆ, ಸಮುದ್ರದೊಳಗಿನ ಭೂವೈಜ್ಞಾನಿಕ ರಚನೆಗಳಲ್ಲಿ CO2 ಅನ್ನು ಸಂಗ್ರಹಿಸಬಹುದು, ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತೊಂದು ಮಾರ್ಗ ಒದಗಿಸುತ್ತದೆ.

    ಕೇಂದ್ರ ಆರೋಗ್ಯ ಸಚಿವಾಲಯದಿಂದ 3 ಗಿನ್ನೆಸ್ ವಿಶ್ವ ದಾಖಲೆಗಳ ನಿರ್ಮಾಣ

    ಸಾಮಾನ್ಯ ಅಧ್ಯಯನ – 2 / ಆರೋಗ್ಯ

    ಇದೀಗ ಸುದ್ಧಿಯಲ್ಲಿದೆ: 

    • ರಾಷ್ಟ್ರವ್ಯಾಪಿ “ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ”ದ (SNSPA) ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೂರು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

    3 ಗಿನ್ನೆಸ್ ವಿಶ್ವ ದಾಖಲೆಗಳು:

    • ಒಂದು ತಿಂಗಳಲ್ಲಿ ಅತೀ ಹೆಚ್ಚಿನ ಜನರು “ಆರೋಗ್ಯ ರಕ್ಷಣಾ ವೇದಿಕೆ”ಯಲ್ಲಿ ನೋಂದಾಯಿಸಿಕೊಂಡಿರುವುದು.
    • ಒಂದು ವಾರದಲ್ಲಿ ಆನ್‌ಲೈನ್ ಮೂಲಕ ಸ್ತನ ಕ್ಯಾನ್ಸರ್ ತಪಾಸಣೆಗಾಗಿ ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.
    • ಒಂದು ವಾರದಲ್ಲಿ ಆನ್‌ಲೈನ್ ಮೂಲಕ ಪ್ರಮುಖ ಆರೋಗ್ಯ ಲಕ್ಷಣಗಳ ತಪಾಸಣೆಗಾಗಿ (ರಾಜ್ಯ ಮಟ್ಟದಲ್ಲಿ) ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.

    ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನದ ಬಗ್ಗೆ:

    • ಚಾಲನೆ: ‘ರಾಷ್ಟ್ರೀಯ ಪೋಷಣಾ ಮಾಸಾಚರಣೆ’ಯ (ಪೋಷಣ್ ಮಾಹ್) ಅಂಗವಾಗಿ, 2025 ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ಅವಧಿಯಲ್ಲಿ ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು.
    • ಉದ್ದೇಶ: ದೇಶದ ಮಹಿಳೆಯರು, ಕಿಶೋರಿಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಸಮಗ್ರ ಪೋಷಣೆಯ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನವು ಪ್ರಮುಖವಾಗಿ ಗಮನ ಹರಿಸುತ್ತದೆ.
  • ಇಸ್ರೋದ ಎಲ್ ವಿಎಂ 3 ರಾಕೆಟ್ ಮೂಲಕ ‘ಜಿ ಸ್ಯಾಟ್ -7 R’ ಉಪಗ್ರಹ ಉಡಾವಣೆ | ಲಕ್ನೋವನ್ನು ಯುನೆಸ್ಕೋದ ಪಾಕಶಾಸ್ತ್ರ (ಅನುಗುಣವಾದ ಆಹಾರ ಸಂಸ್ಕೃತಿ) ವಿಭಾಗದ ಸೃಜನಾತ್ಮಕ ನಗರವಾಗಿ ಘೋಷಿಸಲಾಗಿದೆ | ನಿಫಾ ವೈರಸ್ | ರಷ್ಯಾದ ‘ಡೂಮ್ಸ್‌ಡೇ ಕ್ಷಿಪಣಿ’ | ನೌಕರರ ನೋಂದಣಿ ಯೋಜನೆ, 2025 | ರೌಮಾರಿ-ದೊಂಡುವಾ ಜೌಗು ಸಂಕೀರ್ಣ

    ಇಸ್ರೋದ ಎಲ್ ವಿಎಂ 3 ರಾಕೆಟ್ ಮೂಲಕ ‘ಜಿ ಸ್ಯಾಟ್ -7 R’ ಉಪಗ್ರಹ ಉಡಾವಣೆ

    ಸಾಮಾನ್ಯ ಅಧ್ಯಯನ – 3 / ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಭಾರತೀಯ ನೌಕಾಪಡೆಯ ಸುಧಾರಿತ ಸಂವಹನ ಉಪಗ್ರಹವಾದ ಜಿ ಸ್ಯಾಟ್ -7 R (CMS-03) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

    ಜಿ ಸ್ಯಾಟ್ -7 R ಉಪಗ್ರಹದ ಬಗ್ಗೆ:

    • ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಉಪಗ್ರಹವಾಗಿದ್ದು, ಅಂದಾಜು 4,400 ಕೆ.ಜಿ ತೂಕವನ್ನು ಹೊಂದಿದೆ. ಇದು ಇಲ್ಲಿಯವರೆಗೆ ಭಾರತದಲ್ಲಿ ಉಡಾವಣೆಯಾದ ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
    • ಇದು 2013 ರಲ್ಲಿ ಉಡಾವಣೆಗೊಂಡಿದ್ದ ಮತ್ತು ಪ್ರಮುಖವಾಗಿ ಭಾರತೀಯ ನೌಕಾಪಡೆಗೆ ಮೀಸಲಾಗಿದ್ದ ಜಿ ಸ್ಯಾಟ್ -7 (ರುಕ್ಮಿಣಿ) ಉಪಗ್ರಹವನ್ನು ಬದಲಾಯಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಉಡಾವಣಾ ವಾಹನ: LVM3 (ತನ್ನ M5 ಕಾರ್ಯಾಚರಣೆಯಲ್ಲಿ).
    • ಈ ಉಪಗ್ರಹವನ್ನು ಯಶಸ್ವಿಯಾಗಿ “ಭೂ ಹೊಂದಾಣಿಕೆ ವರ್ಗಾವಣೆ ಕಕ್ಷೆಗೆ” (GTO) ಸೇರಿಸಲಾಗಿದೆ.

    ಲಕ್ನೋವನ್ನು ಯುನೆಸ್ಕೋದ ಪಾಕಶಾಸ್ತ್ರ (ಅನುಗುಣವಾದ ಆಹಾರ ಸಂಸ್ಕೃತಿ) ವಿಭಾಗದ ಸೃಜನಾತ್ಮಕ ನಗರವಾಗಿ ಘೋಷಿಸಲಾಗಿದೆ.

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ಲಕ್ನೋದ ಶ್ರೀಮಂತ ಮತ್ತು ವೈವಿಧ್ಯಮಯ ಅಡುಗೆ ಪರಂಪರೆಯನ್ನು, ವಿಶೇಷವಾಗಿ ಅದರ ಪ್ರಖ್ಯಾತ ‘ಅವಧಿ’ ಖಾದ್ಯಗಳನ್ನು ಗುರುತಿಸಿ, ಯುನೆಸ್ಕೋ ಲಕ್ನೋವನ್ನು ‘ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂದು ಘೋಷಿಸಿದೆ. 
    • ಹೈದರಾಬಾದ್ (2019) ನ ನಂತರ, ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಪಾಕಶಾಸ್ತ್ರ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರವಾದ ಭಾರತದ ಎರಡನೇ ನಗರ ಲಕ್ನೋ ಆಗಿದೆ.

    ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ:

    • ಶ್ರೀಮಂತ ಅಡುಗೆ ಸಂಪ್ರದಾಯಗಳು ಮತ್ತು ನವೀನ ಆಹಾರ ಸಂಸ್ಕೃತಿಗಳನ್ನು ಹೊಂದಿರುವ ನಗರಗಳನ್ನು ‘ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂಬ ಹೆಸರಿನಡಿ ಗೌರವಿಸಲಾಗುತ್ತದೆ.
    • ಈ ಮನ್ನಣೆಯು ‘ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ’ದ ಭಾಗವಾಗಿದೆ.

    ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಬಗ್ಗೆ:

    • ಪ್ರಾರಂಭ: 2004 ರಲ್ಲಿ.
    • ಉದ್ದೇಶ: ಸುಸ್ಥಿರ ನಗರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಚೈತನ್ಯಕ್ಕಾಗಿ ಸೃಜನಶೀಲತೆಯಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
    • ಪ್ರಸ್ತುತ, ಈ ಜಾಲವು 8 ಸೃಜನಾತ್ಮಕ ಕ್ಷೇತ್ರಗಳನ್ನು ಒಳಗೊಂಡಿದೆ – ಕರಕುಶಲ ಮತ್ತು ಜಾನಪದ ಕಲೆಗಳು, ಮಾಧ್ಯಮ ಕಲೆಗಳು, ಚಲನಚಿತ್ರ, ವಿನ್ಯಾಸ , ಪಾಕಶಾಸ್ತ್ರ ಸಾಹಿತ್ಯ ಮತ್ತು ಸಂಗೀತ. 
    • ಇವುಗಳ ಜೊತೆಗೆ 2025ರಲ್ಲಿ UCCN ಗೆ ‘ವಾಸ್ತುಶಿಲ್ಪ’ ವನ್ನು ಎಂಟನೇ ಸೃಜನಾತ್ಮಕ ಕ್ಷೇತ್ರವಾಗಿ ಸೇರಿಸಲಾಯಿತು.
    • ಈ ಮೂಲಕ ಲಕ್ನೋ 100 ಕ್ಕೂಅಧಿಕ ದೇಶಗಳಾದ್ಯಂತ ಇರುವ 408 ನಗರಗಳ ಜಾಗತಿಕ ಜಾಲವನ್ನು ಸೇರಿಕೊಂಡಿದೆ.

    ನಿಫಾ ವೈರಸ್

    ಸಾಮಾನ್ಯ ಅಧ್ಯಯನ –  2 / ಆರೋಗ್ಯಸಾಮಾನ್ಯ ಅಧ್ಯಯನ – 3  / ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    ನಿಫಾ ವೈರಾಣು ಕಾಯಿಲೆಯ ವಿರುದ್ಧ “ಏಕಕೋಶೀಯ (ಮೊನೋಕ್ಲೋನಲ್) ಪ್ರತಿಕಾಯಗಳ” (mAbs) ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಉತ್ತೇಜಿಸುತ್ತಿದೆ.

    ನಿಫಾ ವೈರಾಣುವಿನ ಬಗ್ಗೆ:

    • ನಿಫಾ ಒಂದು ಪ್ರಾಣಿಜನ್ಯ ರೋಗವಾಗಿದೆ. ಇದರರ್ಥ ಇದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ.
    • ಮೊದಲು ಪತ್ತೆಯಾಗಿದ್ದು: ಮನುಷ್ಯರಲ್ಲಿ ನಿಫಾ ವೈರಸ್‌ನ ಮೊದಲ ಹರಡುವಿಕೆಯು ಮಲೇಷ್ಯಾ (1998) ಮತ್ತು ಸಿಂಗಾಪುರಗಳಲ್ಲಿ (1999) ವರದಿಯಾಯಿತು.
    • ಮೂಲ ಆಶ್ರಯದಾತ: ಸಾಮಾನ್ಯವಾಗಿ ತೊಗಲು ಬಾವಲಿ (‘ಫ್ಲೈಯಿಂಗ್ ಫಾಕ್ಸ್’) ಎಂದು ಕರೆಯಲ್ಪಡುವ ಹಣ್ಣು ತಿನ್ನುವ ಬಾವಲಿಗಳು ಈ ವೈರಸ್‌ನ ನೈಸರ್ಗಿಕ ಆಶ್ರಯದಾತಗಳಾಗಿವೆ.
    • ಹಣ್ಣು ತಿನ್ನುವ ಬಾವಲಿಗಳಿಂದ ಹಂದಿಗಳಿಗೆ, ನಾಯಿಗಳಿಗೆ, ಬೆಕ್ಕುಗಳಿಗೆ, ಮೇಕೆಗಳಿಗೆ, ಕುದುರೆಗಳಿಗೆ ಮತ್ತು ಕುರಿಗಳಂತಹ ಇತರ ಪ್ರಾಣಿಗಳಿಗೆ ಈ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ.
    • ರೋಗಲಕ್ಷಣಗಳು: ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಮತ್ತು ವಾಂತಿ. ಗಂಭೀರ ಪ್ರಕರಣಗಳಲ್ಲಿ, ದಿಗ್ಭ್ರಮೆ , ಅರೆ ನಿದ್ರಾವಸ್ಥೆ, ಸೆಳವು (seizures), ಮೆದುಳಿನ ಉರಿಯೂತ (ಎನ್ಸೆಫಾಲಿಟಿಸ್)  ಸಂಭವಿಸಬಹುದು ಮತ್ತು ಇದು ಕೋಮಾ ಹಂತಕ್ಕೂ ತಲುಪಿ ಸಾವಿಗೆ ಕಾರಣವಾಗಬಹುದು.
    • ಹರಡುವಿಕೆ : ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದ ಮೂಲಕ ಇದು ನೇರವಾಗಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಬಹುದು. ಬಾವಲಿಗಳು ಸಾಮಾನ್ಯವಾಗಿ ವಾಸಿಸುವ ಮರಗಳನ್ನು ಏರುವ ಜನರಲ್ಲಿಯೂ ಸೋಂಕು ಕಂಡುಬಂದಿರುವ ಕೆಲವು ಪ್ರಕರಣಗಳು ವರದಿಯಾಗಿವೆ.

    ರಷ್ಯಾದ ‘ಡೂಮ್ಸ್‌ಡೇ ಕ್ಷಿಪಣಿ’

    ಸಾಮಾನ್ಯ ಅಧ್ಯಯನ – 3  / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ರಷ್ಯಾ ತನ್ನ ಅತ್ಯಾಧುನಿಕ ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆ “ಖಬರೋವ್ಸ್ಕ್” ಗೆ  ಚಾಲನೆ ನೀಡಿದೆ. ಇದು ನೀರಿನೊಳಗೆ ಸಂಚರಿಸುವ ಪರಮಾಣು ಶಕ್ತಿ ಡ್ರೋನ್ ‘ಡೂಮ್ಸ್‌ಡೇ ಕ್ಷಿಪಣಿ’ಯನ್ನು ಹೊತ್ತೊಯ್ಯಲು ವಿನ್ಯಾಸಗೊಳಿಸಲಾಗಿದೆ.

    ‘ಡೂಮ್ಸ್‌ಡೇ ಕ್ಷಿಪಣಿ’ ಯ ಬಗ್ಗೆ:

    • ಇದನ್ನು “ಪೊಸಿಡಾನ್”  ಎಂದೂ ಕರೆಯಲಾಗುತ್ತದೆ.
    • ಇದು ಪ್ರಸ್ತುತ ಬಳಕೆಯಲ್ಲಿರುವ ಜಲಾಂತರ್ಗಾಮಿ ನೌಕೆ ಮತ್ತು ‘ಟಾರ್ಪಿಡೊ’ಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಇದು ಸಮುದ್ರದ ಅತ್ಯಂತ ಆಳದಲ್ಲಿ ಮತ್ತು ಖಂಡಾಂತರದ ದೂರದವರೆಗೆ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇದನ್ನು ಪತ್ತೆಹಚ್ಚಿ ತಡೆಹಿಡಿಯುವುದು ಕಷ್ಟಸಾಧ್ಯವಾಗಿದೆ.
    • ಇದು ಖಂಡಾಂತರ ಪ್ರಯಾಣದ ಸಾಮರ್ಥ್ಯ ಮತ್ತು ಅಪಾರ ವಿನಾಶವನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ.
    • ಪರಮಾಣು ಶಕ್ತಿಯ ಮೂಲವನ್ನು ಹೊಂದಿರುವುದರಿಂದ, ಇದು ದೀರ್ಘ ದೂರದವರೆಗೆ ನೀರಿನ ಆಳದಲ್ಲಿ ಚಲಿಸಬಲ್ಲದು.
    • ಇದು ಕರಾವಳಿಯ ಗುರಿಗಳನ್ನು ತಲುಪಬಲ್ಲದು ಮತ್ತು ಕಾರ್ಯತಂತ್ರದ ಪ್ರತಿರೋಧಕವಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ.

    ನೌಕರರ ನೋಂದಣಿ ಯೋಜನೆ, 2025

    ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸರ್ಕಾರವು ‘ನೌಕರರ ನೋಂದಣಿ ಯೋಜನೆ 2025’ಕ್ಕೆ ಚಾಲನೆ ನೀಡಿದೆ. ನೌಕರರನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ (EPFO) ಅಡಿಯಲ್ಲಿ ಸ್ವಯಂಪ್ರೇರಿತವಾಗಿ ನೋಂದಾಯಿಸುವುದು ಇದರ ಉದ್ದೇಶವಾಗಿದೆ.

    ನೌಕರರ ನೋಂದಣಿ ಯೋಜನೆ, 2025 ರ ಬಗ್ಗೆ:

    • ಇದನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ 73 ನೇ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಚಿವರು ಉದ್ಘಾಟಿಸಿದರು.
    • ಅರ್ಹ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಲು ಮತ್ತು ನೋಂದಾಯಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ.
    • ಜುಲೈ 1, 2017 ಮತ್ತು ಅಕ್ಟೋಬರ್ 31, 2025 ರ ನಡುವೆ ಸಂಸ್ಥೆಗೆ ಸೇರಿದ, ಆದರೆ ಯಾವುದೇ ಕಾರಣಕ್ಕಾಗಿ ‘ನೌಕರರ ಭವಿಷ್ಯ ನಿಧಿ’ (EPF) ಅಡಿಯಲ್ಲಿ ನೋಂದಾಯಿಸಲ್ಪಡದ ಕೆಲಸಗಾರರನ್ನು ಉದ್ಯೋಗದಾತರು ಈ ಯೋಜನೆಯಡಿ ನೋಂದಾಯಿಸಬಹುದು.
    • ಮಹತ್ವ: ಈ ಯೋಜನೆಯು ಉದ್ಯೋಗದಾತರಿಗೆ ಭಾರಿ ದಂಡಗಳು ಅಥವಾ ಕಾನೂನು ಕ್ರಮಗಳ ಭಯವಿಲ್ಲದೆ ತಮ್ಮ ಉದ್ಯೋಗಿಗಳನ್ನು ಸಕ್ರಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.

    ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಯ ಬಗ್ಗೆ:

    • ಇದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ಸ್ಥಾಪನೆ: ನೌಕರರ ಭವಿಷ್ಯ ನಿಧಿ ಮತ್ತು ಇತರೆ ನಿಬಂಧನೆಗಳ ಕಾಯಿದೆ , 1952 ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
    • ಉದ್ದೇಶಗಳು:
      • ನಿವೃತ್ತಿಯ ನಂತರ ನೌಕರರ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣವನ್ನು ಖಚಿತಪಡಿಸುವುದು.
      • ನೌಕರರಲ್ಲಿ ಸ್ವಯಂಪ್ರೇರಿತ ಉಳಿತಾಯವನ್ನು ಉತ್ತೇಜಿಸುವುದು.
      • ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.

    ರೌಮಾರಿ-ದೊಂಡುವಾ ಜೌಗು ಸಂಕೀರ್ಣ

    ಸಾಮಾನ್ಯ ಅಧ್ಯಯನ –  3  / ಪರಿಸರ ಅಧ್ಯಯನ

    ಇದೀಗ ಸುದ್ದಿಯಲ್ಲಿದೆ:

    • ಅಸ್ಸಾಂನ ರೌಮಾರಿ ಮತ್ತು ದೊಂಡುವಾ ಜೌಗು ಪ್ರದೇಶಗಳನ್ನು ‘ರಾಮ್ಸರ್ ತಾಣ’ವನ್ನಾಗಿ ಘೋಷಿಸಲು ಪ್ರಸ್ತಾಪ ಸಲ್ಲಿಸುವ ನಿಟ್ಟಿನಲ್ಲಿ, ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂರಕ್ಷಣಾ ಗುಂಪುಗಳ ತಜ್ಞರು ಪರಸ್ಪರ ಸಹಕರಿಸುತ್ತಿದ್ದಾರೆ.

    ರೌಮಾರಿ-ದೊಂಡುವಾ ಜೌಗು ಸಂಕೀರ್ಣದ ಬಗ್ಗೆ:

    • ಸ್ಥಳ : ಇದು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ‘ಲಾವೊಖೋವಾ ವನ್ಯಜೀವಿ ಅಭಯಾರಣ್ಯ’ದ ವ್ಯಾಪ್ತಿಯಲ್ಲಿದೆ.
    • ಲಾವೊಖೋವಾ ಮತ್ತು ಅದಕ್ಕೇ ಹತ್ತಿಕೊಂಡಿರುವ ಬುರಾಚಾಪೋರಿ ವನ್ಯಜೀವಿ ಅಭಯಾರಣ್ಯಗಳು, ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ಒರಾಂಗ್ ರಾಷ್ಟ್ರೀಯ ಉದ್ಯಾನವನಗಳ (ಕಾಜಿರಂಗ-ಒರಾಂಗ್ ಭೂದೃಶ್ಯ) ನಡುವೆ ಸಂಚರಿಸುವ ವನ್ಯಜೀವಿಗಳಿಗೆ ಪ್ರಮುಖ ‘ಸಂಪರ್ಕ ಮಾರ್ಗ’ಗಳಾಗಿ ಕಾರ್ಯನಿರ್ವಹಿಸುತ್ತವೆ.
    • ಇದು ಜಾಗತಿಕವಾಗಿ ಅಪಾಯಕ್ಕೊಳಗಾದ ಗಂಟು ಕೊಕ್ಕಿನ ಬಾತುಕೋಳಿ’, ಕಪ್ಪು ಕುತ್ತಿಗೆಯ ಕೊಕ್ಕರೆ ಮತ್ತು ಕೆಂಗಂದು  ಬಾತುಕೋಳಿಗಳಂತಹ ಪ್ರಭೇದಗಳು ಸೇರಿದಂತೆ, ವಾರ್ಷಿಕವಾಗಿ ಸುಮಾರು 120 ಪ್ರಭೇದಗಳ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತದೆ.
    • ಈ ಸಂಕೀರ್ಣವು ಈಶಾನ್ಯ ಭಾರತದ ಏಕೈಕ ಎರಡು ರಾಮ್ಸರ್ ತಾಣಗಳಾದ ಅಸ್ಸಾಂನ ‘ದೀಪೋರ್ ಬೀಲ್’ ಮತ್ತು ಮಣಿಪುರದ ‘ಲೋಕ್ಟಕ್ ಸರೋವರ’ಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ದಾಖಲಿಸಿದೆ.

    ರಾಮ್ಸರ್ ಸಮಾವೇಶದ ಬಗ್ಗೆ

    • ರಾಮ್ಸರ್ ಸಮಾವೇಶದ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶವನ್ನು ‘ರಾಮ್ಸರ್ ತಾಣ’ ಎಂದು ಗುರುತಿಸಲಾಗುತ್ತದೆ.
    • ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಮ್ಸರ್ ಸಮಾವೇಶವು ಒಂದು ಪ್ರಮುಖ ಅಂತರ-ಸರ್ಕಾರಿ ಒಪ್ಪಂದವಾಗಿದೆ.
    • ಈ ಒಪ್ಪಂದಕ್ಕೆ ಇರಾನ್‌ನ ರಾಮ್ಸರ್‌ನಲ್ಲಿ ಫೆಬ್ರವರಿ 2, 1971 ರಂದು ಸಹಿ ಹಾಕಲಾಯಿತು ಮತ್ತು ಇದು 1975 ರಲ್ಲಿ ಜಾರಿಗೆ ಬಂದಿತು.
    • ಭಾರತವು 1982 ರಲ್ಲಿ ರಾಮ್ಸರ್ ಸಮಾವೇಶಕ್ಕೆ ಸಹಿ ಹಾಕುವ ಮೂಲಕ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು.
  • ಚಿತ್ತರಂಜನ್ ದಾಸ್ | ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ | ಅಂಗೋಲಾ | ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025 | ಭಾರತ ಅಭಿವೃದ್ಧಿ ಮತ್ತು ಕಾರ್ಯತಂತ್ರ ನಿಧಿ (IDSF) | ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನಾ ನಿಧಿ

    ಚಿತ್ತರಂಜನ್ ದಾಸ್

    ಸಾಮಾನ್ಯ ಅಧ್ಯಯನ- 1 / ಸುದ್ದಿಯಲ್ಲಿರುವ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿ:

    • ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್ ಅವರ ಜನ್ಮ ದಿನಾಚರಣೆಯ ಅಂಗವಾಗಿ, ಲೋಕಸಭೆಯಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

    ಚಿತ್ತರಂಜನ್ ದಾಸ್ (1870 – 1925) ಅವರ ಬಗ್ಗೆ:

    • ಇವರು “ದೇಶಬಂಧು” (ರಾಷ್ಟ್ರದ ಸ್ನೇಹಿತ) ಎಂದೇ ಜನಪ್ರಿಯರಾಗಿದ್ದರು.
    • ಇವರು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ರಾಷ್ಟ್ರೀಯ ನಾಯಕ, ವಕೀಲ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರಾಗಿದ್ದರು.
    • ಅಲಿಪುರ ಬಾಂಬ್ ಪ್ರಕರಣದಲ್ಲಿ (1908) ಅರವಿಂದೋ ಘೋಷ್ ಅವರ ಪರವಾಗಿ ವಾದ ಮಂಡಿಸಿದ ಇವರು, ತದನಂತರ ಪೂರ್ಣಾವಧಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

    ಪ್ರಮುಖ ಕೊಡುಗೆಗಳು:

    • ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ (1919–22) ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
    • ಆಡಳಿತ ವ್ಯವಸ್ಥೆಯ ಶಾಸಕಾಂಗ ಸಭೆಯನ್ನು ಪ್ರವೇಶಿಸಿ, ಒಳಗಿನಿಂದಲೇ ವಸಾಹತುಶಾಹಿ ಆಳ್ವಿಕೆಯನ್ನು ವಿರೋಧಿಸುವ ಉದ್ದೇಶದಿಂದ, 1923 ರಲ್ಲಿ ಮೋತಿಲಾಲ್ ನೆಹರು ಅವರೊಂದಿಗೆ ಸೇರಿ ‘ಸ್ವರಾಜ್ ಪಕ್ಷ’ವನ್ನು ಸ್ಥಾಪಿಸಿದರು.
    • ಕಲ್ಕತ್ತಾ ಮಹಾನಗರ ಪಾಲಿಕೆಯ ಮೊದಲ ಸಭಾಪತಿ (ಮೇಯರ್) ಆಗಿ ಆಯ್ಕೆಯಾದ (1924) ಚಿತ್ತರಂಜನ್ ದಾಸ್ ಅವರು, ನಗರ ಸುಧಾರಣೆಗಳಿಗಾಗಿ ಮತ್ತು ಪೌರಾಡಳಿತದಲ್ಲಿ ಭಾರತೀಯರ ಸಬಲೀಕರಣಕ್ಕಾಗಿ ಶ್ರಮಿಸಿದರು.
    • ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಇವರು ಕವನಗಳು, ಪ್ರಬಂಧಗಳು ಹಾಗೂ ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ‘ಇಂಡಿಯಾ ಫಾರ್ ಇಂಡಿಯನ್ಸ್’ ಮತ್ತು ‘ಫ್ರೀಡಂ ಥ್ರೂ ಡಿಸ್ ಒಬಿಡಿಯನ್ಸ್’  ಕೃತಿಗಳು ಸೇರಿವೆ.

    ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ

    ಸಾಮಾನ್ಯ ಅಧ್ಯಯನ- 1  / ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಭೂತಾನ್‌ನ ರಾಯಲ್ ಸರ್ಕಾರವು ‘ಥಿಂಪು’ ನಗರದಲ್ಲಿ ‘ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ’ (GPPF) ವನ್ನು ಉದ್ಘಾಟಿಸಿತು.

    ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ಬಗ್ಗೆ 

    • ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ, ವಿಶ್ವ ಶಾಂತಿ ಮತ್ತು ಮಾನವಕುಲದ ಒಳಿತಿಗಾಗಿ ಪ್ರಾರ್ಥಿಸಲು ಮೀಸಲಾಗಿರುವ 16 ದಿನಗಳ ಈ ಉತ್ಸವವು ಒಂದು ಜಾಗತಿಕ ಉಪಕ್ರಮವಾಗಿದೆ.
    • ಬೌದ್ಧ ಧರ್ಮದ ಮೂರು ಪ್ರಮುಖ ಶಾಖೆಗಳಾದ ಮಹಾಯಾನ, ಥೇರಾವಾದ ಮತ್ತು ವಜ್ರಯಾನ ಪಂಥಗಳ ಧಾರ್ಮಿಕ ಮುಖಂಡರು ಹಾಗೂ ವಿದ್ವಾಂಸರು ಪಾಲ್ಗೊಂಡಿದ್ದ ವಿಶ್ವದ ಮೊಟ್ಟಮೊದಲ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ (GPPF) ಇದಾಗಿದೆ.

    ಅಂಗೋಲಾ

    ಸಾಮಾನ್ಯ ಅಧ್ಯಯನ – 1 / ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೋಲಾ ದೇಶಕ್ಕೆ ಅಧಿಕೃತವಾಗಿ ಭೇಟಿ ನೀಡಿದರು, ಇದು ಭಾರತೀಯ ರಾಷ್ಟ್ರಪತಿಯೊಬ್ಬರು ದಕ್ಷಿಣದ ಆಫ್ರಿಕಾ ದೇಶಕ್ಕೆ ನೀಡಿದ ಮೊದಲ ಭೇಟಿಯಾಗಿದೆ.

    ಅಂಗೋಲಾ ದೇಶದ ಬಗ್ಗೆ:

    • ರಾಜಧಾನಿ: ಲುವಾಂಡಾ
    • ಭೌಗೋಳಿಕ ಸ್ಥಾನ: ಅಂಗೋಲಾವು ದಕ್ಷಿಣದ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿದೆ. ಇದು ದಕ್ಷಿಣದಲ್ಲಿ ನಮೀಬಿಯಾ, ಪೂರ್ವದಲ್ಲಿ ಜಾಂಬಿಯಾ, ಉತ್ತರದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಸುತ್ತುವರಿದಿದೆ.
    • ರಾಜಕೀಯ ಅವಲೋಕನ: ಅಂಗೋಲಾ 1975 ರಲ್ಲಿ ಪೋರ್ಚುಗಲ್‌ನಿಂದ ಸ್ವಾತಂತ್ರ್ಯವನ್ನು ಪಡೆಯಿತು.
    • ಆರ್ಥಿಕ ಚಿತ್ರಣ: ನೈಜೀರಿಯಾದ ಬಳಿಕ ಅಂಗೋಲಾ, ಆಫ್ರಿಕಾದ ಎರಡನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ವಜ್ರಗಳು ಇಲ್ಲಿನ ಮತ್ತೊಂದು ಪ್ರಮುಖ ರಫ್ತು ವಲಯವಾಗಿವೆ.
    • ಭೂಗೋಳ: ಹುವಾಂಬೊ ಬಳಿಯಿರುವ ‘ಮೌಂಟ್ ಮೊಕೊ’ ಇಲ್ಲಿನ ಅತ್ಯಂತ ಎತ್ತರದ ಪ್ರದೇಶವಾಗಿದೆ. ‘ಕ್ವಾಂಜಾ’, ‘ಕುನೆನೆ’ ಮತ್ತು ಕ್ವಾಂಗೋ ಇಲ್ಲಿನ ಪ್ರಮುಖ ನದಿಗಳಾಗಿವೆ.
    • ಭಾರತ-ಅಂಗೋಲಾ ಸಂಬಂಧಗಳು: 1985 ರಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದವು.

    ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025

    ಸಾಮಾನ್ಯ ಅಧ್ಯಯನ- 2 / ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಘೋಷಿಸಿದ್ದಾರೆ.

    ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025 

    • ಉದ್ದೇಶ: ತಮ್ಮ ಸಂಗಾತಿಯು ಜೀವಂತವಿರುವಾಗಲೇ, ಮತ್ತೊಂದು ಮದುವೆಯಾಗುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಇದು ಪ್ರಸ್ತಾಪಿಸುತ್ತದೆ. ಈ ಅಪರಾಧಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
    • ಈ ಅಪರಾಧವನ್ನು ‘ಗಂಭೀರ ಸ್ವರೂಪದ  ಅಪರಾಧ’ವನ್ನಾಗಿ ಮಾಡಲಾಗಿದೆ. ಇದರರ್ಥ ಆರೋಪಿಗಳಿಗೆ ತಕ್ಷಣವೇ ಜಾಮೀನು ನೀಡಲಾಗುವುದಿಲ್ಲ.
    • ಸಂವಿಧಾನದ ಆರನೇ ಅನುಸೂಚಿಯ ಅಡಿಯಲ್ಲಿ ಬರುವ ಬುಡಕಟ್ಟು ಜಿಲ್ಲೆಗಳಲ್ಲಿ ಮತ್ತು ರಾಜ್ಯದ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಈ ಕಾನೂನು ಅನ್ವಯಿಸುವುದಿಲ್ಲ.
    • ವಿಶೇಷ ನಿಧಿ: ಬಹುಪತ್ನಿತ್ವದ ಸಂತ್ರಸ್ತೆಯರಾಗಿರುವ ಮಹಿಳೆಯರಿಗೆ ಪರಿಹಾರವನ್ನು ನೀಡಲು, ರಾಜ್ಯ ಸರ್ಕಾರವು ವಿಶೇಷ ನಿಧಿಯೊಂದನ್ನು ಸ್ಥಾಪಿಸುವ ಅವಕಾಶವನ್ನೂ ಈ ಮಸೂದೆಯು ಒಳಗೊಂಡಿದೆ.

    ಭಾರತ ಅಭಿವೃದ್ಧಿ ಮತ್ತು ಕಾರ್ಯತಂತ್ರ ನಿಧಿ (IDSF)

    ಸಾಮಾನ್ಯ ಅಧ್ಯಯನ- 2  / ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ದೀರ್ಘಕಾಲೀನ ಬೆಳವಣಿಗೆ ಮತ್ತು ಜಾಗತಿಕ ಆರ್ಥಿಕ ಭದ್ರತೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ, ‘ಭಾರತ ಅಭಿವೃದ್ಧಿ ಮತ್ತು ಕಾರ್ಯತಂತ್ರ ನಿಧಿ’ಯನ್ನು ಸ್ಥಾಪಿಸಲು “ಭಾರತೀಯ ಕೈಗಾರಿಕಾ ಒಕ್ಕೂಟ” (CII) ಸಲಹೆ ನೀಡಿದೆ.

    ಭಾರತ ಅಭಿವೃದ್ಧಿ ಮತ್ತು ಕಾರ್ಯತಂತ್ರ ನಿಧಿಯ ಬಗ್ಗೆ:

    • ಉದ್ದೇಶ: ದೀರ್ಘಕಾಲೀನ ಬೆಳವಣಿಗೆ ಮತ್ತು ಜಾಗತಿಕ ಆರ್ಥಿಕ ಭದ್ರತೆಯನ್ನು ಬೆಂಬಲಿಸುವುದು ಇದರ ಪ್ರಮುಖ ಗುರಿಯಾಗಿದೆ.
    • ಇದು ವಾರ್ಷಿಕ ಆಯವ್ಯಯಗಳ ಮಿತಿಯನ್ನು ಮೀರಿ, ದೀರ್ಘಕಾಲೀನ ರಾಷ್ಟ್ರೀಯ ಅಭಿವೃದ್ಧಿಗಾಗಿ ಶಾಶ್ವತವಾದ ಅಥವಾ ಸುಸ್ಥಿರವಾದ ಆರ್ಥಿಕ ಚಾಲಕ ಶಕ್ತಿಯನ್ನು ನಿರ್ಮಿಸಲಿದೆ.
    • ವಲಯಗಳು: ಮೂಲಸೌಕರ್ಯ, ಶುದ್ಧ ಇಂಧನ, ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಕಾರಿಡಾರ್‌ಗಳು, ಎಂ.ಎಸ್.ಎಂ.ಇ ವಲಯದ ವಿಸ್ತರಣೆ ಅಥವಾ ಉನ್ನತೀಕರಣ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಆರೋಗ್ಯ ಸೇವೆ ಮತ್ತು ನಗರ ಮೂಲಸೌಕರ್ಯ ವಲಯಗಳು ಇದರಲ್ಲಿ ಸೇರಿವೆ.

    ಭಾರತೀಯ ಕೈಗಾರಿಕಾ ಒಕ್ಕೂಟ (CII) ದ ಬಗ್ಗೆ:

    • ಇದೊಂದು ಸರ್ಕಾರೇತರ, ಲಾಭರಹಿತ, ಉದ್ಯಮದ ನೇತೃತ್ವದಲ್ಲಿ ನಡೆಯುವ ಮತ್ತು ಉದ್ಯಮದಿಂದಲೇ ನಿರ್ವಹಿಸಲ್ಪಡುವ ಸಂಸ್ಥೆಯಾಗಿದೆ.
    • ಸ್ಥಾಪನೆ: 1895.
    • ಕೇಂದ್ರ ಕಚೇರಿ: ನವದೆಹಲಿ.

    ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನಾ ನಿಧಿ

    ಸಾಮಾನ್ಯ ಅಧ್ಯಯನ – 3  / ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ₹1 ಲಕ್ಷ ಕೋಟಿ ಮೊತ್ತದ ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನಾ ನಿಧಿ’ಗೆ ಚಾಲನೆ ನೀಡಿದರು.

    ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನಾ ನಿಧಿಯ ಬಗ್ಗೆ:

    • ಹಣಕಾಸಿನ ಕಾಲಮಿತಿ: 6 ವರ್ಷಗಳು.
    • ಕಾರ್ಯ ನಿರ್ವಾಹಕ ಸಂಸ್ಥೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST).
    • ಉದ್ದೇಶ: ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು (RDI) ಹೆಚ್ಚಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ.

    ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಯ ಒಂದು ಚಿತ್ರಣ:

    • ಕಳೆದ ದಶಕದಲ್ಲಿ ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (R&D) ವೆಚ್ಚವು ದ್ವಿಗುಣಗೊಂಡಿದೆ. ಆದಾಗ್ಯೂ, ಇದು ಒಟ್ಟು ಆಂತರಿಕ ಉತ್ಪನ್ನದ (GDP) ಶೇ. 0.7 ರಷ್ಟೇ ಉಳಿದಿದೆ. ಅಮೆರಿಕ (ಶೇ. 2.8) ಮತ್ತು ಚೀನಾ (ಶೇ. 2.4) ದಂತಹ ಜಾಗತಿಕ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ.

    ಸಂಶೋಧನೆ ಮತ್ತು ಅಭಿವೃದ್ಧಿಗೆ (R&D) ಉತ್ತೇಜನ ನೀಡಲು ಸರ್ಕಾರದ ಉಪಕ್ರಮಗಳು:

    • ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (NRF): ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ನಡುವೆ ಸಂಶೋಧನಾ ಅನುದಾನ ಮತ್ತು ಸಹಯೋಗವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
    • ಅಟಲ್ ನಾವೀನ್ಯತೆ ಗುರಿ (AIM): ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಲ್ಲಿ ನವೋದ್ಯಮಗಳು, ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ.
    • ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕ (PLI) ಯೋಜನೆ: ಸಂಶೋಧನೆ ಮತ್ತು ಅಭಿವೃದ್ಧಿ ಚಾಲಿತ ಕೈಗಾರಿಕೆಗಳಿಗೆ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನಪೂರಿತ ಉತ್ಪಾದನೆಯನ್ನು ಇದು ಬೆಂಬಲಿಸುತ್ತದೆ.
  • ಸ್ಟೇಬಲ್‌ಕಾಯಿನ್‌ಗಳು (ಸ್ಥಿರ ನಾಣ್ಯಗಳು) | ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಗುರಿ

    ಸ್ಟೇಬಲ್‌ಕಾಯಿನ್‌ಗಳು (ಸ್ಥಿರ ನಾಣ್ಯಗಳು)

    ಸಾಮಾನ್ಯ ಅಧ್ಯಾಯನ – 3/ಆರ್ಥಿಕತೆ

    ಸಂದರ್ಭ:

    • ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿಸುವ ರೂಪಾಯಿ ಬೆಂಬಲಿತ ಸ್ಟೇಬಲ್‌ಕಾಯಿನ್‌ಗಳು ಪಾವತಿ, ಹಣ ರವಾನೆ ಮತ್ತು ಗಡಿಯಾಚೆಗಿನ ವಹಿವಾಟುಗಳಲ್ಲಿ ಕ್ರಾಂತಿಯನ್ನುಂಟು ಮಾಡಬಹುದು.

    ರೂಪಾಯಿ ಸ್ಟೇಬಲ್‌ಕಾಯಿನ್‌ (ಸ್ಥಿರ ನಾಣ್ಯ) ಗಳ ಬಗ್ಗೆ:

    • ಸ್ಟೇಬಲ್‌ಕಾಯಿನ್‌ಗಳು ಎಂದರೆ, ಸಾಮಾನ್ಯವಾಗಿ ಅಮೇರಿಕ ಡಾಲರ್ ಅಥವಾ ಭಾರತೀಯ ರೂಪಾಯಿ ಮುಂತಾದ ಫಿಯಾಟ್ ಕರೆನ್ಸಿಗಳಂತಹ ಮೀಸಲು ಆಸ್ತಿಗಳಿಗೆ ಜೋಡಿಸುವ ಮೂಲಕ ಸ್ಥಿರ ಮೌಲ್ಯವನ್ನು ಕಾಯ್ದುಕೊಳ್ಳಲು ವಿನ್ಯಾಸಗೊಳಿಸಿರುವ ಕ್ರಿಪ್ಟೋಕರೆನ್ಸಿಗಳು.
    • ರೂಪಾಯಿ ಸ್ಟೇಬಲ್‌ಕಾಯಿನ್ ಅನ್ನು ಭಾರತೀಯ ರೂಪಾಯಿಗೆ 1:1 ರಲ್ಲಿ ಕಡ್ಡಾಯವಾಗಿ ಜೋಡಿಸುವ ಗುರಿಯನ್ನು ಹೊಂದಿದೆ. ಇದರಿಂದ ಕ್ರಿಪ್ಟೊ ನೀಡುವ ವೇಗ, ಪ್ರೋಗ್ರಾಮೆಬಿಲಿಟಿ, ಜಾಗತಿಕ ವ್ಯಾಪ್ತಿ ಮುಂತಾದ ಪ್ರಯೋಜನಗಳನ್ನು, ಅದರ ಅಸ್ಥಿರತೆ ಇಲ್ಲದೆ ಪಡೆಯಬಹುದು.
    • ಸ್ಟೇಬಲ್‌ಕಾಯಿನ್‌ಗಳನ್ನು ಉಪಯುಕ್ತತೆಗಾಗಿ ನಿರ್ಮಿಸಲಾಗಿದೆ, ಊಹಾತ್ಮಕ ಕ್ರಿಪ್ಟೋ ಸ್ವತ್ತುಗಳಂತೆ ಹೂಡಿಕೆಗಾಗಿ ಅಲ್ಲ.

    ಅವುಗಳನ್ನು ಇದಕ್ಕಾಗಿ ಬಳಸಬಹುದು:

    • ತ್ವರಿತ ದೇಶೀಯ ಮತ್ತು ಅಂತರರಾಷ್ಟ್ರೀಯ ಪಾವತಿಗಳು.
    • ಸ್ಮಾರ್ಟ್ ಒಪ್ಪಂದ ಆಧಾರಿತ ಹಣಕಾಸು ಸೇವೆಗಳು.
    • ಹಣ ರವಾನೆಯಲ್ಲಿ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವುದು.

    ಮೂಲ ವಿಷಯಗಳೊಂದಿಗೆ ಅವಲೋಕಿಸಿ:

    • ಕ್ರಿಪ್ಟೋಕರೆನ್ಸಿ:- ಇದು ಹಣಕಾಸಿನ ವಹಿವಾಟುಗಳಿಗಾಗಿ ಬಳಸುವ ವರ್ಚುವಲ್ ಕರೆನ್ಸಿಯಾಗಿದೆ. ಇದು ವಿವಿಧ ವಹಿವಾಟುಗಳಿಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುತ್ತದೆ.
    • ಬ್ಲಾಕ್‌ಚೈನ್:- ಬ್ಲಾಕ್‌ಚೈನ್‌ ಎಂಬುದು ಭ್ರಷ್ಟಗೊಳಿಸಲಾಗದ ಡಿಜಿಟಲ್ ವಹಿವಾಟು ದಾಖಲೆ ಆಗಿದ್ದು, ಮೌಲ್ಯ ಹೊಂದಿರುವ ಬಹುಪಾಲು ಮಾಹಿತಿಯನ್ನು ದಾಖಲಿಸುವಂತೆ ಇದನ್ನು ಪ್ರೋಗ್ರಾಮ್ ಮಾಡಬಹುದು. ಬ್ಲಾಕ್‌ಚೈನ್‌ನಲ್ಲಿ ದಾಖಲೆಗಳ ಪ್ರತಿಯೊಂದು ಪಟ್ಟಿಯನ್ನು ‘ಬ್ಲಾಕ್’ ಎಂದು ಕರೆಯಲಾಗುತ್ತದೆ.
    • ಬಿಟ್‌ಕಾಯಿನ್:- ಇದು ಒಂದು ರೀತಿಯ ಕ್ರಿಪ್ಟೋಕರೆನ್ಸಿಯಾಗಿದ್ದು ಅದು ಯಾರಿಗಾದರೂ ತ್ವರಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ.

    ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಗುರಿ

    ಸಾಮಾನ್ಯ ಅಧ್ಯಾಯನ – 3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಗುರಿ (NBHM) ದೇಶದಾದ್ಯಂತ ವೈಜ್ಞಾನಿಕ ಜೇನುಸಾಕಣೆಯನ್ನು ಹೆಚ್ಚಿಸುತ್ತಿರುವುದರಿಂದ ಭಾರತದ ಜೇನು ವಲಯವು ರಚನಾತ್ಮಕ ಪರಿವರ್ತನೆಗೆ ಒಳಗಾಗುತ್ತಿದೆ.

    ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಗುರಿ (NBHM) ಯ ಬಗ್ಗೆ:

    • ಇದು ಕೇಂದ್ರ ವಲಯದ  ಯೋಜನೆಯಾಗಿದೆ.
    • ಉದ್ದೇಶ – ವೈಜ್ಞಾನಿಕ ಜೇನು ಸಾಕಣೆ ಮತ್ತು ಗುಣಮಟ್ಟದ ಜೇನುತುಪ್ಪ ಮತ್ತು ಇತರ ಜೇನು ಗೂಡು ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.
    • ಅನುಷ್ಠಾನ- ರಾಷ್ಟ್ರೀಯ ಜೇನುನೊಣ ಮಂಡಳಿ (NBB).
    • ಮಹತ್ವ – ಜೇನುಸಾಕಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಉಪಕ್ರಮವಾದ ” ಸಿಹಿ ಕ್ರಾಂತಿ” ಯ ಭಾಗವಾಗಿ ಇದನ್ನು ಪ್ರಾರಂಭಿಸಲಾಯಿತು.
    • ಜೇನುತುಪ್ಪ ಉತ್ಪಾದಿಸುವ ಪ್ರಮುಖ ರಾಜ್ಯಗಳು: ಉತ್ತರ ಪ್ರದೇಶ (17%), ಪಶ್ಚಿಮ ಬಂಗಾಳ (16%), ಪಂಜಾಬ್ (14%), ಬಿಹಾರ (12%) ಮತ್ತು ರಾಜಸ್ಥಾನ (9%) ರಾಜ್ಯಗಳನ್ನು ಒಳಗೊಂಡಿದೆ.
  • ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ (UHC) | ನೀಲಿ ನಗರಗಳು

    ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ (UHC)

    ಸಾಮಾನ್ಯ ಅಧ್ಯಾಯನ – 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವುದರಿಂದ ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆ ಹೆಚ್ಚಾಗುತ್ತದೆ, 2047 ರ ವೇಳೆಗೆ ಭಾರತವು ಕೈಗೆಟುಕುವ ಸಾರ್ವತ್ರಿಕ ಆರೈಕೆ ಮತ್ತು ವಿಕಸಿತ ಭಾರತವನ್ನು ಸಾಧಿಸಲು ಸಹಾಯ ಮಾಡುತ್ತದೆ.

    ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ (UHC) ಯ ಬಗ್ಗೆ:

    • ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ (UHC) ಎಂದರೆ, ಎಲ್ಲಾ ಜನರು ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಅವರಿಗೆ ಅಗತ್ಯವಿರುವ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಬಹುದು.

    ವಿವಿಧ ಹಂತಗಳು:

    • ರಾಷ್ಟ್ರೀಯ ಆರೋಗ್ಯ ಗುರಿ:- ಇದನ್ನು 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಗುರಿಯಾಗಿ ಪ್ರಾರಂಭಿಸಲಾಯಿತು. ಇದು ಸಮುದಾಯದ ಸ್ವಾಮ್ಯದಲ್ಲಿರುವ ಮತ್ತು ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆಗಳನ್ನು ಸ್ಥಾಪಿಸಿ, ದುರ್ಬಲ ವರ್ಗದ  ಜನರಿಗೆ ಸುಲಭವಾಗಿ ಲಭಿಸುವ, ಕಡಿಮೆ ವೆಚ್ಚದ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.
    • ಆಯುಷ್ಮಾನ್ ಭಾರತ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY):- ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಇದು ವಿಶ್ವದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ರಕ್ಷಣೆ ಯೋಜನೆಯಾಗಿದ್ದು, ಇದರಲ್ಲಿ ಕೋಟ್ಯಂತರ ದುರ್ಬಲ ವರ್ಗದ ಭಾರತೀಯ ಕುಟುಂಬಗಳು ದಾಖಲಾಗಿವೆ.
    • ರಾಷ್ಟ್ರೀಯ ಆರೋಗ್ಯ ನೀತಿ, 2017:- ಇದು ಭಾರತದಲ್ಲಿ ಉಂಟಾಗುತ್ತಿರುವ ಹೊಸ ಆರೋಗ್ಯ ಸವಾಲುಗಳನ್ನು, ಜೀವನ ಶೈಲಿಗೆ ಸಂಬಂಧಿಸಿದ ರೋಗಗಳು ವಿಶೇಷವಾಗಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿರುವ ಸಮಸ್ಯೆಯನ್ನು ಪರಿಹರಿಸುತ್ತದೆ.

    ನೀಲಿ ನಗರಗಳು

    ಸಾಮಾನ್ಯ ಅಧ್ಯಾಯನ – 3/ಆರ್ಥಿಕತೆ

    ಸಂದರ್ಭ:

    • ಪ್ರಪಂಚದಾದ್ಯಂತ, ಪ್ರಮುಖ ಸಮುದ್ರ ಸಾರಿಗೆ ಕೇಂದ್ರಗಳು “ನೀಲಿ ನಗರ” ಗಳಾಗಿ ರೂಪಾಂತರಗೊಳ್ಳುತ್ತಿವೆ.

    ನೀಲಿ ನಗರಗಳ ಬಗ್ಗೆ:

    • ಇದು ಸಾಗರ ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಸುಸ್ಥಿರ ನಗರ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಕರಾವಳಿ ಅಥವಾ ಬಂದರು ನಗರಗಳನ್ನು ಸೂಚಿಸುತ್ತದೆ.
    • ಈ ಪರಿಕಲ್ಪನೆಯು “ನೀಲಿ ಆರ್ಥಿಕತೆ”ಯ ಕಲ್ಪನೆಯಲ್ಲಿ ಬೇರೂರಿದೆ – ಅಂದರೆ ಸಮುದ್ರ ಪರಿಸರ ವ್ಯವಸ್ಥೆಗಳ ಆರೋಗ್ಯವನ್ನು ಕಾಪಾಡುವಾಗ ಆರ್ಥಿಕ ಬೆಳವಣಿಗೆಗೆ ಸಾಗರ ಸಂಪನ್ಮೂಲಗಳನ್ನು ಬಳಸುವುದು.

    ಭಾರತಕ್ಕೆ ಅವಕಾಶ

    • ಭಾರತವು 11,098.81 ಕಿ.ಮೀ ಕರಾವಳಿಯನ್ನು, 13 ಪ್ರಮುಖ ಬಂದರುಗಳನ್ನು, 200+ ಅಪ್ರಮುಖ ಬಂದರುಗಳನ್ನು ಹೊಂದಿದೆ.

    ಭಾರತದಲ್ಲಿ ಪ್ರಯೋಗಾತ್ಮಕವಾಗಿ ಆಯ್ದ ನೀಲಿ ನಗರಗಳು:

    1. ಮುಂಬೈ:- ಬಂದರು ಲಾಜಿಸ್ಟಿಕ್ಸ್ ಅನ್ನು ಸುಸ್ಥಿರ ಹಣಕಾಸು ಮತ್ತು ನಾವೀನ್ಯತೆಯೊಂದಿಗೆ ಸಂಯೋಜಿಸುವುದು.
    2. ವೈಜಾಗ್:- ನೌಕಾ ಮತ್ತು ಹಡಗು ನಿರ್ಮಾಣ ಪರಿಣತಿ.
    3. ಚೆನ್ನೈ:- ತಂತ್ರಜ್ಞಾನ ಮತ್ತು ಮುಂದುವರಿದ ಉತ್ಪಾದನಾ ಏಕೀಕರಣ.
    4. ಮುಂದ್ರಾ:- ಖಾಸಗಿ ಹೂಡಿಕೆ ಮತ್ತು ಶುದ್ಧ ಇಂಧನ ಜಾರಿ ವ್ಯವಸ್ಥೆ.
    5. ಕೊಚ್ಚಿ:- ಸಮುದ್ರ ಸಾರಿಗೆ ಸೇವೆಗಳು ಮತ್ತು ಕಡಲಾಚೆಯ ನವೀಕರಿಸಬಹುದಾದ ಇಂಧನ.

    ಭಾರತದ ಬಂದರು ವಲಯದ ಬಗ್ಗೆ:

    • ಭಾರತವು ಕೇಂದ್ರ ಸರ್ಕಾರದ ನಿಯಂತ್ರಣದ ಅಡಿಯಲ್ಲಿ 13 ಪ್ರಮುಖ ಬಂದರುಗಳು ಮತ್ತು ರಾಜ್ಯ ಸರ್ಕಾರದ ನಿಯಂತ್ರಣದ ಅಡಿಯಲ್ಲಿ 217 ಸಣ್ಣ ಬಂದರುಗಳನ್ನು ಹೊಂದಿದೆ .
    • ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಬಂದರುಗಳನ್ನು ನಿರ್ವಹಿಸುತ್ತದೆ.
    • ಭಾರತದ ಸಮುದ್ರ ಸಾರಿಗೆಯ ಅವಲೋಕನ:- ಭಾರತದ ವ್ಯಾಪಾರದ 95% ರಷ್ಟು ಪರಿಮಾಣದ ಪ್ರಕಾರ ಮತ್ತು 70% ಮೌಲ್ಯದ ಪ್ರಕಾರ ವ್ಯಾಪಾರವನ್ನು ನಿರ್ವಹಿಸುತ್ತದೆ, ಆರ್ಥಿಕತೆಗೆ ನಿರ್ಣಾಯಕವಾದ ಬಂದರು ಮೂಲಸೌಕರ್ಯವನ್ನು ಹೊಂದಿದೆ.
    • ಬಂದರು ಶ್ರೇಯಾಂಕ ಸುಧಾರಣೆ:- ಭಾರತದ ಬಂದರು ಶ್ರೇಯಾಂಕವು 2014 ರಲ್ಲಿ 54 ನೇ ಸ್ಥಾನದಿಂದ 2023 ರಲ್ಲಿ 38 ನೇ ಸ್ಥಾನಕ್ಕೆ ಸುಧಾರಿಸಿದೆ, ಈಗ ಭಾರತದ ಒಂಬತ್ತು ಬಂದರುಗಳು ಜಾಗತಿಕವಾಗಿ ಅಗ್ರ 100 ರಲ್ಲಿ ಸ್ಥಾನ ಪಡೆದಿವೆ.
    • ಸಮುದ್ರ ಸಾರಿಗೆ ಕ್ಷೇತ್ರದ ಪ್ರಾಮುಖ್ಯತೆ:- ಭಾರತವು 16 ನೇ ಅತಿದೊಡ್ಡ ಸಮುದ್ರ ಸಾರಿಗೆ ರಾಷ್ಟ್ರವಾಗಿದ್ದು, ಜಾಗತಿಕ ಸಾಗಣೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ, ಪ್ರಮುಖ ವ್ಯಾಪಾರ ಮಾರ್ಗಗಳು ಅದರ ನೀರಿನ ಮೂಲಕ ಹಾದುಹೋಗುತ್ತವೆ.