ಲೇಖಕ: Ramvilas

  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಈ ಕೆಳಗಿನವುಗಳಲ್ಲಿ ಭಾರತದ ಅತಿ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರ ಯಾವುದು?

    A) ದಾಲ್ ಸರೋವರ

    B) ವುಲರ್ ಸರೋವರ

    C) ಮಾನಸ್‌ಬಾಲ್ ಸರೋವರ

    D) ಲೋಕ್ಟಾಕ್ ಸರೋವರ

    ಉತ್ತರ: C) ಮಾನಸ್‌ಬಾಲ್ ಸರೋವರ

     

    2. ಇತ್ತೀಚೆಗೆ ಚೀನಾ ಪ್ರಾರಂಭಿಸಿದ ‘ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯ’ (WAICO) ಪ್ರಧಾನ ಕಛೇರಿಯು ಎಲ್ಲಿದೆ?

    A) ಬೀಜಿಂಗ್

    B) ಶೆನ್‌ಜೆನ್

    C) ಶಾಂಘೈ

    D) ಹ್ಯಾಂಗ್‌ಝೌ

    ಉತ್ತರ: C) ಶಾಂಘೈ

     

    3. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (2026) ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?

    A) ಕಲ್ಕಿ 2898 AD 

    B) ಅಮರನ್

    C) ಆರ್ಟಿಕಲ್ 370

    D) ಕ್ಯಾಪ್ಟನ್ ಮಿಲ್ಲರ್

    ಉತ್ತರ: C) ಆರ್ಟಿಕಲ್ 370

     

    4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕಾರ್ತಿಕ್ ಆರ್ಯನ್ ಮತ್ತು ಮಮ್ಮುಟ್ಟಿ ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
    2. ಆರ್ಟಿಕಲ್ 370 ಚಿತ್ರಕ್ಕಾಗಿ ಯಾಮಿ ಗೌತಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಸರಿಯಾದ ಉತ್ತರವನ್ನು ಆರಿಸಿ:

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಎರಡೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 18, ಜುಲೈ 2026

    ಪ್ರಶಸ್ತಿಗಳು

    72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2026 

    ಇದೀಗ ಸುದ್ದಿಯಲ್ಲಿ:

    • 2024 ರಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಿಂದ ಪ್ರಮಾಣೀಕರಿಸಲ್ಪಟ್ಟ ಅತ್ಯುತ್ತಮ ಚಲನಚಿತ್ರಗಳನ್ನು ಗೌರವಿಸುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ನವದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.

    ಪ್ರಮುಖ ಅಂಶಗಳು:

    • ವ್ಯಾಪ್ತಿ ಮತ್ತು ತೀರ್ಪುಗಾರರ ಸಮಿತಿ: ಜನವರಿ 1 ರಿಂದ ಡಿಸೆಂಬರ್ 31, 2024 ರ ನಡುವೆ ಪ್ರಮಾಣೀಕರಿಸಲ್ಪಟ್ಟ ಭಾರತೀಯ ಚಲನಚಿತ್ರಗಳ ಶ್ರೇಷ್ಠತೆಯನ್ನು ಈ ಪ್ರಶಸ್ತಿ ಗುರುತಿಸುತ್ತದೆ ಮತ್ತು ಇದನ್ನು ಜಯರಾಜ್ ನೇತೃತ್ವದ ಕೇಂದ್ರ ಸಮಿತಿಯು ಮೌಲ್ಯಮಾಪನ ಮಾಡಿದೆ.
    • ಪ್ರಮುಖ ಪ್ರಶಸ್ತಿಗಳು: ರಾಜಕೀಯ ಆಧಾರಿತ ಚಲನಚಿತ್ರವಾದ ಆರ್ಟಿಕಲ್ 370 ಚಿತ್ರವು ಅತ್ಯುತ್ತಮ ಚಲನಚಿತ್ರ (Best Feature Film) ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಪೂರ್ಣ ಮನರಂಜನೆ : ಅತ್ಯುತ್ತಮ ಜನಪ್ರಿಯ ಮನರಂಜನೆ ಒದಗಿಸಿದ ಚಿತ್ರವಾಗಿ ಸೈನ್ಸ್ ಫಿಕ್ಷನ್ (Sci-fi) ಚಿತ್ರವಾದ ಕಲ್ಕಿ 2898 AD (Kalki 2898 AD) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    ವರ್ಗ

    ವಿಜೇತರು 

    ಚಲನಚಿತ್ರ

    ಭಾಷೆ / ಚಿತ್ರರಂಗ

    ಅತ್ಯುತ್ತಮ ಚಲನಚಿತ್ರ

    ಆರ್ಟಿಕಲ್ 370 

    ಆರ್ಟಿಕಲ್ 370

    ಹಿಂದಿ

    ಅತ್ಯುತ್ತಮ ನಟ (ಜಂಟಿ ಪ್ರಶಸ್ತಿ)

    ಕಾರ್ತಿಕ್ ಆರ್ಯನ್+ಮಮ್ಮುಟ್ಟಿ

    ಚಂದು ಚಾಂಪಿಯನ್ +ಭ್ರಮಯುಗಂ

    ಹಿಂದಿ+ಮಲಯಾಳಂ

    ಅತ್ಯುತ್ತಮ ನಟಿ

    ಯಾಮಿ ಗೌತಮ್

    ಆರ್ಟಿಕಲ್ 370

    ಹಿಂದಿ

    ಅತ್ಯುತ್ತಮ ನಿರ್ದೇಶಕ

    ರಾಜ್‌ಕುಮಾರ್ ಪೆರಿಯಸಾಮಿ

    ಅಮರನ್

    ತಮಿಳು

    ಅತ್ಯುತ್ತಮ ಪೋಷಕ ನಟ

    ಸಂಜಯ್ ಮಿಶ್ರಾ

    ಭಕ್ಷಕ್

    ಹಿಂದಿ

    ಅತ್ಯುತ್ತಮ ಪೋಷಕ ನಟಿ (ಜಂಟಿ ಪ್ರಶಸ್ತಿ)

    ರೂಪಶ್ರೀ ವರ್ಕಾಡಿ+ಸಚನಾ ನಮಿದಾಸ್

    ಮಿಥ್ಯಾ+ಮಹಾರಾಜ

    ಕನ್ನಡ+ತಮಿಳು

    ಅತ್ಯುತ್ತಮ ಜನಪ್ರಿಯ ಚಿತ್ರ

    ಕಲ್ಕಿ 2898 AD 

    ಕಲ್ಕಿ 2898 AD 

    ತೆಲುಗು / ಪ್ಯಾನ್-ಇಂಡಿಯಾ

    ಅತ್ಯುತ್ತಮ ಚಿತ್ರ (ಸಾಮಾಜಿಕ/ಪರಿಸರ)

    ಕ್ಯಾಪ್ಟನ್ ಮಿಲ್ಲರ್

    ತಮಿಳು

    ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು

    ಶ್ರೀಕಾಂತ್ (ಹಿಂದಿ)

    ರಾಯನ್ (ತಮಿಳು)

    ಕಮಿಟಿ ಕುರೊಲ್ಲು (ತೆಲುಗು)

    ಫೆಮಿನಿಚಿ ಫಾತಿಮಾ (ಮಲಯಾಳಂ)

    ಮಿಥ್ಯಾ (ಕನ್ನಡ)

    ವಿವಿಧ

    ವಿಜ್ಞಾನ ಮತ್ತು ತಂತ್ರಜ್ಞಾನ

    M72 TB ಲಸಿಕೆಯ (M72 TB Vaccine) ಉತ್ಪಾದನೆ

    • ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಂಸ್ಥೆಯು ನೂತನವಾದ M72/AS01E ಕ್ಷಯರೋಗ (TB) ಲಸಿಕೆಯನ್ನು ಉತ್ಪಾದಿಸಲು ಗೇಟ್ಸ್ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (Gates MRI) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
    • ಕಳೆದ 100 ಕ್ಕೂ ಹೆಚ್ಚು ವರ್ಷಗಳಲ್ಲಿ ವಯಸ್ಕರಿಗಾಗಿ ಉತ್ಪಾದನೆಯಾಗುತ್ತಿರುವ ಮೊದಲ ನೂತನ TB ಲಸಿಕೆ ಇದಾಗಿದ್ದು, ಶಿಶು-ಕೇಂದ್ರಿತ BCG ಲಸಿಕೆಗೆ ಒಂದು ನಿರ್ಣಾಯಕ ಪೂರಕ ಲಸಿಕೆಯಾಗಿ ಇದು ಕಾರ್ಯನಿರ್ವಹಿಸಲಿದೆ.

    ಕ್ರೀಡೆ

    1. ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ ದಾಖಲೆ

    ಇದೀಗ ಸುದ್ದಿಯಲ್ಲಿ:

    • ಜುಲೈ 19, 2026 ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು 110 ಎಸೆತಗಳಲ್ಲಿ ಭರ್ಜರಿ 138 ರನ್ ಸಿಡಿಸಿದ್ದಾರೆ. 
    • ಈ ಮೂಲಕ ಈ ಮೈದಾನದಲ್ಲಿ ಏಕದಿನ ಕ್ರಿಕೆಟನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಾಗೂ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಹಲವು ದಾಖಲೆಗಳನ್ನು ಮುರಿದಿದ್ದಾರೆ.

    ಪ್ರಮುಖ ಅಂಶಗಳು:

    • ಕ್ರಿಕೆಟ್ ಕಾಶಿಯಲ್ಲಿ ಮೊದಲಿಗ: 2004 ರಲ್ಲಿ ಸೌರವ್ ಗಂಗೂಲಿ ಗಳಿಸಿದ್ದ 90 ರನ್‌ಗಳ ಹಿಂದಿನ ಅತ್ಯುತ್ತಮ ದಾಖಲೆಯನ್ನು ಹಿಂದಿಕ್ಕುವ ಮೂಲಕ, ಲಾರ್ಡ್ಸ್ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಇತಿಹಾಸವನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ.
    • ಅತಿ ಹಿರಿಯ ಭಾರತೀಯ ಶತಕವೀರ: 39 ವರ್ಷ ಮತ್ತು 80 ದಿನಗಳ ವಯಸ್ಸಿನಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಏಕದಿನ ಮಾದರಿಗಳಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ ಹಾಗೂ ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ (38 ವರ್ಷ, 327 ದಿನ) ದಾಖಲೆಯನ್ನು ಹಿಂದಿಕ್ಕಿದ್ದಾರೆ.
    • ಭಾರತದ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಶತಕ: ಆರಂಭಿಕ ಆಟಗಾರನಾಗಿ ತಮ್ಮ 46ನೇ ಅಂತರರಾಷ್ಟ್ರೀಯ ಶತಕವನ್ನು ದಾಖಲಿಸುವ ಮೂಲಕ, ಸಚಿನ್ ತೆಂಡೂಲ್ಕರ್ ಅವರ 45 ಶತಕಗಳ ದಾಖಲೆಯನ್ನು ಮೀರಿ ನಿಂತಿದ್ದಾರೆ (ಜಾಗತಿಕವಾಗಿ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ).
    • ಪ್ರವಾಸಿ ಬ್ಯಾಟರ್ ಆಗಿ ಅತಿ ಹೆಚ್ಚು ಏಕದಿನ ಶತಕ: ಇಂಗ್ಲೆಂಡ್ ನೆಲದಲ್ಲಿ ತಮ್ಮ 8ನೇ ಏಕದಿನ ಶತಕ ಸಿಡಿಸಿದ ರೋಹಿತ್ ಶರ್ಮಾ, ವಿದೇಶಿ ನೆಲದ ಒಂದೇ ದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ (UAE-7), ಎಬಿ ಡಿ ವಿಲಿಯರ್ಸ್ (ಭಾರತ-7) ಮತ್ತು ಸಯೀದ್ ಅನ್ವರ್ (UAE -7) ಅವರ ದಾಖಲೆಯನ್ನು ಮುರಿದಿದ್ದಾರೆ.
    • ಅತಿ ಹೆಚ್ಚು 50+ ರನ್‌ಗಳ ದಾಖಲೆ: ಇಂಗ್ಲೆಂಡ್ ನೆಲದಲ್ಲಿ ಆಡಿದ ಕೇವಲ 30 ಇನ್ನಿಂಗ್ಸ್‌ಗಳಲ್ಲಿ 15ನೇ ಬಾರಿ 50 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ ಹಾಗೂ ಈ ಮೂಲಕ ಇಂಗ್ಲೆಂಡ್‌ನಲ್ಲಿ ಪ್ರವಾಸಿ ಬ್ಯಾಟರ್‌ ಆಗಿ ಅತಿ ಹೆಚ್ಚು ಬಾರಿ 50+ ರನ್ ಗಳಿಸಿದ ವಿರಾಟ್ ಕೊಹ್ಲಿ (14) ಅವರ ದಾಖಲೆಯನ್ನು ಮುರಿದಿದ್ದಾರೆ.
    • ವೃತ್ತಿಜೀವನ ಮತ್ತು ನಾಯಕತ್ವದ ಪರಂಪರೆ: ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 34 ಶತಕಗಳನ್ನು ಗಳಿಸಿರುವ ಇವರು, T20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ, ಭಾರತ ತಂಡವನ್ನು 2024 ರ T20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು ಹಾಗೂ 2023 ರ ಏಕದಿನ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದಿದ್ದರು.

     

    2. ಚೊಚ್ಚಲ ಜಪಾನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು

    ಇದೀಗ ಸುದ್ದಿಯಲ್ಲಿ:

    • ಟೋಕಿಯೊದಲ್ಲಿ ನಡೆದ ಜಪಾನ್ ಓಪನ್ 2026 ರ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಹಾಲಿ ವಿಶ್ವ ಚಾಂಪಿಯನ್ ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21-17, 21-17 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

    ಪ್ರಮುಖ ಅಂಶಗಳು:

    • ಮೊದಲ ಭಾರತೀಯ ಚಾಂಪಿಯನ್: ಪ್ರತಿಷ್ಠಿತ ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊಟ್ಟಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಿ.ವಿ. ಸಿಂಧು ಪಾತ್ರರಾಗಿದ್ದಾರೆ.
    • ಚೊಚ್ಚಲ ಸೂಪರ್ 750 ಕಿರೀಟ: ತಮ್ಮ ವೃತ್ತಿಜೀವನದ ಮೊದಲ BWF ಸೂಪರ್ 750 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ ಮತ್ತು 2019 ರಲ್ಲಿ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕದ ನಂತರ ಇದು ಅವರ ಅತಿದೊಡ್ಡ ಸಾಧನೆಯಾಗಿದೆ.
    • 2024 ರ ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ BWF ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದಿದ್ದ ಸಿಂಧು, ಇದೀಗ ಎರಡು ವರ್ಷಗಳ ಸುದೀರ್ಘ ಪ್ರಶಸ್ತಿಯ ಬರವನ್ನು ಅಂತ್ಯಗೊಳಿಸಿದ್ದಾರೆ.

     

    3. ಫಿಫಾ ವಿಶ್ವಕಪ್ 2026 : ಸ್ಪೇನ್‌ ಚಾಂಪಿಯನ್

    ಇದೀಗ ಸುದ್ದಿಯಲ್ಲಿ:

    • ನ್ಯೂಯಾರ್ಕ್/ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ 2026 ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಬದಲಿ ಆಟಗಾರನಾಗಿ ಕಣಕ್ಕಿಳಿದ ಫೆರಾನ್ ಟೊರೆಸ್ 106ನೇ ನಿಮಿಷದಲ್ಲಿ ಬಾರಿಸಿದ ಏಕೈಕ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 (ಹೆಚ್ಚುವರಿ ಸಮಯದ ನಂತರ) ಗೋಲುಗಳ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.

    ಪ್ರಮುಖ ಅಂಶಗಳು:

    • ಆತಿಥ್ಯ ಮತ್ತು ಸ್ವರೂಪ: ಇದು ಇತಿಹಾಸದಲ್ಲಿಯೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸಿದ ಪಂದ್ಯಾವಳಿಯಾಗಿದ್ದು, ಅಮೆರಿಕ (USA), ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆತಿಥ್ಯ ವಹಿಸಿದ್ದವು.
    • ಐತಿಹಾಸಿಕ ಪ್ರಾಬಲ್ಯ: 2010 ರ ನಂತರ ಇದು ಸ್ಪೇನ್‌ನ 2ನೇ ವಿಶ್ವಕಪ್ ಕಿರೀಟವಾಗಿದೆ. ಅವರು ಆಡಿದ 8 ಪಂದ್ಯಗಳಲ್ಲಿ ಕೇವಲ 1 ಗೋಲನ್ನು ಮಾತ್ರ ಬಿಟ್ಟುಕೊಡುವ ಮೂಲಕ ಪಂದ್ಯಾವಳಿಯ ದಾಖಲೆಯನ್ನು ನಿರ್ಮಿಸಿದ್ದಾರೆ ಮತ್ತು 38 ಪಂದ್ಯಗಳ ಸೋಲಿಲ್ಲದ ಐರೋಪ್ಯ ದಾಖಲೆಯನ್ನು ಮುಂದುವರೆಸಿದ್ದಾರೆ. ಪುರುಷರ ವಿಶ್ವಕಪ್, ಯುರೋ 2024 ಮತ್ತು ಮಹಿಳಾ ವಿಶ್ವಕಪ್ (2023) ಮೂರೂ ಪ್ರಶಸ್ತಿಗಳನ್ನು ಏಕಕಾಲದಲ್ಲಿ ಹೊಂದಿರುವ ಏಕೈಕ ಐರೋಪ್ಯ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಸ್ಪೇನ್ ಪಾತ್ರವಾಗಿದೆ.
    • ಸಾರ್ವಕಾಲಿಕ ಸ್ಕೋರರ್ ಮೈಲಿಗಲ್ಲು: ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಅವರು ಸತತ ಎರಡು ಬಾರಿ ‘ಗೋಲ್ಡನ್ ಬೂಟ್’ ಗೆದ್ದ ಇತಿಹಾಸದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಟ್ಟು 22 ಗೋಲುಗಳನ್ನು ಬಾರಿಸುವ ಮೂಲಕ ಪುರುಷರ ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.

    ಫಿಫಾ ವಿಶ್ವಕಪ್: 2026 ಮತ್ತು 2022 ಆವೃತ್ತಿಯ ಚಾಂಪಿಯನ್‌ಗಳು ಹಾಗೂ ಪ್ರಶಸ್ತಿ ವಿಜೇತರ ವಿವರ

    ವರ್ಗ / ಪ್ರಶಸ್ತಿ 

    2026 ಆವೃತ್ತಿ (USA/ಕೆನಡಾ/ಮೆಕ್ಸಿಕೊ)

    2022 ಆವೃತ್ತಿ (ಕತಾರ್)

    ಚಾಂಪಿಯನ್ಸ್

    ಸ್ಪೇನ್ (2ನೇ ಪ್ರಶಸ್ತಿ)

    ಅರ್ಜೆಂಟೀನಾ (3ನೇ ಪ್ರಶಸ್ತಿ)

    ರನ್ನರ್-ಅಪ್ 

    ಅರ್ಜೆಂಟೀನಾ

    ಫ್ರಾನ್ಸ್

    ಗೋಲ್ಡನ್ ಬಾಲ್ (ಅತ್ಯುತ್ತಮ ಆಟಗಾರ)

    ರೊಡ್ರಿ (ಸ್ಪೇನ್)

    ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)

    ಗೋಲ್ಡನ್ ಬೂಟ್ (ಅತಿ ಹೆಚ್ಚು ಗೋಲು)

    ಕೈಲಿಯನ್ ಎಂಬಾಪೆ ಫ್ರಾನ್ಸ್ (10 ಗೋಲುಗಳು)

    ಕೈಲಿಯನ್ ಎಂಬಾಪೆ ಫ್ರಾನ್ಸ್ (8 ಗೋಲುಗಳು)

    ಗೋಲ್ಡನ್ ಗ್ಲೋವ್ (ಅತ್ಯುತ್ತಮ ಗೋಲ್‌ಕೀಪರ್)

    ಉನೈ ಸಿಮೋನ್ (ಸ್ಪೇನ್) (7 ಕ್ಲೀನ್ ಶೀಟ್‌ಗಳು; 650 ನಿಮಿಷಗಳ ದಾಖಲೆ)

    ಎಮಿಲಿಯಾನೋ ಮಾರ್ಟಿನೆಜ್ (ಅರ್ಜೆಂಟೀನಾ)

    ಅತ್ಯುತ್ತಮ ಯುವ ಆಟಗಾರ

    ಪಾವು ಕ್ಯುಬಾರ್ಸಿ (Pau Cubarsí) (ಸ್ಪೇನ್)

    ಎಂಜೋ ಫರ್ನಾಂಡಿಸ್ (ಅರ್ಜೆಂಟೀನಾ)

    ಫಿಫಾ ಫೇರ್ ಪ್ಲೇ ಟ್ರೋಫಿ

    ನೆದರ್ಲ್ಯಾಂಡ್ಸ್

    ಇಂಗ್ಲೆಂಡ್

    Miscellaneous

    Uttarakhand Celebrates Traditional Harela Festival

    Why in News: The traditional folk festival Harela was celebrated across Uttarakhand (predominantly in the Kumaon region) on the first day of Shravan (Kark Sankranti) to mark the onset of the monsoon.

    Key Highlights: 

    • Meaning & Rituals:- Translates to “Greenery”. Seeds of multiple grains are sown indoors days prior, and the young green shoots (Harela) are harvested and offered to deities to bless the new agricultural sowing cycle. 
    • Mythological Significance:- Culturally commemorates the divine wedding of Lord Shiva and Goddess Parvati, blending Shaivite devotion with nature worship. 
    • Environmental Push:- The Government of Uttarakhand actively utilizes the occasion to drive state-wide tree plantation and afforestation campaigns (Harela Parva).
  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಇತ್ತೀಚೆಗೆ 2029 ರವರೆಗೆ ವಿಸ್ತರಿಸಲಾದ ಮಿಸ್ಟಿ (MISHTI) ಯೋಜನೆಯು ಪ್ರಾಥಮಿಕವಾಗಿ ಯಾವುದಕ್ಕೆ ಸಂಬಂಧಿಸಿದೆ?

    A) ಹಿಮಾಲಯದ ಪರಿಸರ ವ್ಯವಸ್ಥೆಯ ಮರುಸ್ಥಾಪನೆ

    B) ಮ್ಯಾಂಗ್ರೋವ್ (ಕಾಂಡ್ಲಾ ವನ) ಸಂರಕ್ಷಣೆ ಮತ್ತು ಜೀವನೋಪಾಯ ಸೃಷ್ಟಿ

    C) ಮಧ್ಯ ಭಾರತದಲ್ಲಿ ಹುಲ್ಲುಗಾವಲು ಮರುಸ್ಥಾಪನೆ

    D) ಹವಳ ದಿಣ್ಣೆಗಳ ಸಂರಕ್ಷಣೆ

    ಉತ್ತರ: B) ಮ್ಯಾಂಗ್ರೋವ್ (ಕಾಂಡ್ಲಾ ವನ) ಸಂರಕ್ಷಣೆ ಮತ್ತು ಜೀವನೋಪಾಯ ಸೃಷ್ಟಿ

     

    2. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ICAR ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    2. ಕೇಂದ್ರ ಕೃಷಿ ಸಚಿವರು ICAR ಸೊಸೈಟಿಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

    ಸರಿಯಾದ ಉತ್ತರವನ್ನು ಆರಿಸಿ:

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಯಾವುದೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

     

    3. ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಯಾವ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತದೆ?

    A) ದೆಹಲಿ – ಆಗ್ರಾ

    B) ಜಿಂದ್ – ಸೋನಿಪತ್

    C) ಚೆನ್ನೈ – ಬೆಂಗಳೂರು

    D) ಜೈಪುರ – ಜೋಧ್‌ಪುರ

    ಉತ್ತರ: B) ಜಿಂದ್ – ಸೋನಿಪತ್

     

    4. ‘ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ’ಯಿಂದಾಗಿ ಭಾಗಶಃ ಮುಳುಗಡೆಯಾಗುವ ಸಾಧ್ಯತೆ ಇರುವ ಸಂರಕ್ಷಿತ ಪ್ರದೇಶ ಯಾವುದು?

    A) ಬಾಂಧವ್‌ಗಢ ರಾಷ್ಟ್ರೀಯ ಉದ್ಯಾನವನ

    B) ಕುನ್ಹೊ ರಾಷ್ಟ್ರೀಯ ಉದ್ಯಾನವನ

    C) ಪನ್ನಾ ರಾಷ್ಟ್ರೀಯ ಉದ್ಯಾನವನ 

    D) ಸಾತ್ಪುರ ರಾಷ್ಟ್ರೀಯ ಉದ್ಯಾನವನ

    ಉತ್ತರ: C) ಪನ್ನಾ ರಾಷ್ಟ್ರೀಯ ಉದ್ಯಾನವನ 

  • ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ | ಸೈಕ್ಲೋಸ್ಪೊರಿಯಾಸಿಸ್ (Cyclosporiasis) | ICAR ನ 98ನೇ ಸಂಸ್ಥಾಪನಾ ದಿನ

    ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)ದ 7ನೇ ಆಡಳಿತ ಮಂಡಳಿ ಸಭೆಯು ಸಾಂಪ್ರದಾಯಿಕ ಪರಿಹಾರ ಅರಣ್ಯೀಕರಣದಿಂದ ಭೂದೃಶ್ಯ-ಆಧಾರಿತ ಪರಿಸರ ಮರುಸ್ಥಾಪನೆಯತ್ತ ಬದಲಾವಣೆಯನ್ನು ಗುರುತಿಸಿದೆ.

    ಸಭೆಯ ಫಲಿತಾಂಶಗಳು:

    • ಸುಮಾರು 15,000 ಪವಿತ್ರ ತೋಪುಗಳನ್ನು (ಆಸ್ತಾ ವನಗಳು – Aastha Vans) ಸಂರಕ್ಷಿಸಲು ₹3,000 ಕೋಟಿ ಆರಂಭಿಕ ನಿಧಿಯೊಂದಿಗೆ (2026-31) ಆಸ್ತಾ ವನ್ ಸಂರಕ್ಷಣ್ ಯೋಜನೆಯನ್ನು (AVSY) ವನ್ನು ಅನುಮೋದಿಸಲಾಗಿದೆ.
    • ಮಿಸ್ಟಿ (MISHTI – Mangrove Initiative for Shoreline Habitats and Tangible Incomes) ಯೋಜನೆಯನ್ನು 2029 ರವರೆಗೆ ಮೂರು ವರ್ಷಗಳ ಕಾಲ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ ₹500 ಕೋಟಿ ಸೇರಿಸುವುದರೊಂದಿಗೆ ಒಟ್ಟು ಅನುದಾನವನ್ನು ₹600 ಕೋಟಿಗೆ ಹೆಚ್ಚಿಸಲಾಗಿದೆ.
    • ನಾಲ್ಕು ವನ್ಯಜೀವಿ ಚೇತರಿಕೆ ಕಾರ್ಯಕ್ರಮಗಳನ್ನು ಅನುಮೋದಿಸಲಾಗಿದೆ.
    • ಉದ್ದೇಶ – ವೈಜ್ಞಾನಿಕ ಮೇಲ್ವಿಚಾರಣೆ, ಬೇಟೆ ತಡೆಗಟ್ಟುವ ಕ್ರಮಗಳು ಮತ್ತು ಆವಾಸಸ್ಥಾನ ಮರುಸ್ಥಾಪನೆಯನ್ನು ಬಲಪಡಿಸುವುದು:
    • ಗಂಗಾ ನದಿ ಡಾಲ್ಫಿನ್‌ಗಳು: ಪ್ರಮುಖ ಸಿಹಿನೀರಿನ ನದಿ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಚೇತರಿಕೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
    • ಪ್ರಾಜೆಕ್ಟ್ ಸ್ನೋ ಲೆಪರ್ಡ್ (ಹಿಮಚಿರತೆ) ಹಂತ-II:  ಹಿಮಾಲಯದಲ್ಲಿ 2ನೇ ರಾಷ್ಟ್ರವ್ಯಾಪಿ ಜನಸಂಖ್ಯಾ ಅಂದಾಜು ಕಾರ್ಯಾಚರಣೆಯನ್ನು ಇದು ಒಳಗೊಂಡಿದೆ.
    • ಭಾರತೀಯ ಘೇಂಡಾಮೃಗ: ಆವಾಸಸ್ಥಾನ ರಕ್ಷಣೆ ಮತ್ತು ಬೇಟೆ ತಡೆಗಟ್ಟುವಿಕೆ ಜಾರಿಗಾಗಿ ಸಂರಕ್ಷಣಾ ಯೋಜನೆಯನ್ನು ರೂಪಿಸಲಾಗಿದೆ.
    • ಕಾಡು ಕೋಣ: ಉಳಿದಿರುವ ಸಂಖ್ಯೆಯನ್ನು (ಸಂತತಿಯನ್ನು) ಭದ್ರಪಡಿಸಲು ವೈಜ್ಞಾನಿಕ ಆವಾಸಸ್ಥಾನ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.
    • ಸಂಗೈ (Sangai – ಹುಬ್ಬು-ಕೊಂಬಿನ ಜಿಂಕೆ): ಸಂರಕ್ಷಣೆಗಾಗಿ ನಿರಂತರ ಆರ್ಥಿಕ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲಾಗುವುದು.

    ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)

    • ಇದನ್ನು 2016 ರ ಪರಿಹಾರ ಅರಣ್ಯೀಕರಣ ನಿಧಿ ಕಾಯ್ದೆಯಡಿ (2018 ರಲ್ಲಿ ಜಾರಿಗೆ ಬಂದಿತು) ಸ್ಥಾಪಿಸಲಾಗಿದೆ.
    • ಉದ್ದೇಶ – ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾದ ಅರಣ್ಯ ಭೂಮಿಯ ಪರಿಸರ ಪರಿಹಾರಕ್ಕಾಗಿ ನಿಧಿಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು.
    • ಮೂಲ: ಖರ್ಚಾಗದ ಅರಣ್ಯೀಕರಣ ನಿಧಿಗಳನ್ನು ನಿರ್ವಹಿಸಲು 2006 ರ ಆದೇಶದ ಮೂಲಕ ಟಿ.ಎನ್. ಗೋದಾವರ್ಮನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾತ್ಕಾಲಿಕ ‘ಕ್ಯಾಂಪಾ(CAMPA)’ವನ್ನು ರಚಿಸಿತು.
    • ಎರಡು ಹಂತಗಳು: 

    (1) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ‘ರಾಷ್ಟ್ರೀಯ ಕ್ಯಾಂಪಾ ಪ್ರಾಧಿಕಾರ’ವು ನೀತಿಯನ್ನು ರೂಪಿಸುತ್ತದೆ, ಹಾಗೂ 

    (2) ‘ರಾಜ್ಯ ಕ್ಯಾಂಪಾ ಪ್ರಾಧಿಕಾರಗಳು’ ಕ್ಷೇತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತವೆ.

    • ಹೊಣೆಗಾರಿಕೆ: ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವ ಸಂಸ್ಥೆಗಳು ಪರ್ಯಾಯ ಭೂಮಿಯನ್ನು ಒದಗಿಸಬೇಕು, ಪರಿಹಾರ ಅರಣ್ಯೀಕರಣಕ್ಕೆ ಧನಸಹಾಯ ಮಾಡಬೇಕು ಮತ್ತು ಕಳೆದುಕೊಂಡ ಅರಣ್ಯ ಪರಿಸರ ವ್ಯವಸ್ಥೆಯ ನಿವ್ವಳ ಪ್ರಸ್ತುತ ಮೌಲ್ಯವನ್ನು (NPV) ಪಾವತಿಸಬೇಕು.
    • ನಿಧಿಯ ಬಳಕೆ: ಕೃತಕ ಮತ್ತು ನೈಸರ್ಗಿಕ ಪುನರುತ್ಪಾದನೆ, ವನ್ಯಜೀವಿ ನಿರ್ವಹಣೆ, ಜಲಾನಯನ ಪ್ರದೇಶದ ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಈ ನಿಧಿಯನ್ನು ಬಳಸಲಾಗುತ್ತದೆ.

    ಸೈಕ್ಲೋಸ್ಪೊರಿಯಾಸಿಸ್ (Cyclosporiasis)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ಅಮೆರಿಕ (USA)ದಲ್ಲಿ ಸೈಕ್ಲೋಸ್ಪೊರಿಯಾಸಿಸ್ ಕಾಯಿಲೆಯ ವ್ಯಾಪಕ ಹರಡುವಿಕೆಯ ಬಗ್ಗೆ ವರದಿಯಾಗುತ್ತಿದೆ.

    ಸೈಕ್ಲೋಸ್ಪೊರಿಯಾಸಿಸ್ ಬಗ್ಗೆ: 

    • ಕಾರಣವಾಗುವ ರೋಗಕಾರಕ: ಸೈಕ್ಲೋಸ್ಪೊರಿಯಾಸಿಸ್ ಎಂಬುದು ಸೂಕ್ಷ್ಮದರ್ಶಕೀಯ, ಏಕಕೋಶೀಯ ಪ್ರೋಟೋಜೋವಾ ಪರಾವಲಂಬಿಯಾದ ಸೈಕ್ಲೋಸ್ಪೊರಾ ಕಯೆಟಾನೆನ್ಸಿಸ್ (Cyclospora cayetanensis) ನಿಂದ ಉಂಟಾಗುವ ಆಹಾರಜನ್ಯ ಕರುಳಿನ ಕಾಯಿಲೆಯಾಗಿದೆ.
    • ಹರಡುವಿಕೆ: ಇದು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಕಟ್ಟುನಿಟ್ಟಾಗಿ ಮಲ-ಬಾಯಿ ಸಂಪರ್ಕ ಮಾರ್ಗದಲ್ಲಿ ಹರಡುತ್ತದೆ.
    • ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ: ವಿಸರ್ಜಿಸಲ್ಪಟ್ಟ ಪರಾವಲಂಬಿ ಮೊಟ್ಟೆಗಳು ಪ್ರಬುದ್ಧವಾಗಲು ಮತ್ತು ಸಾಂಕ್ರಾಮಿಕವಾಗಲು ಪರಿಸರದಲ್ಲಿ ದಿನಗಳಿಂದ ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ.
    • ಆತಿಥೇಯ ವ್ಯಾಪ್ತಿ : ಮಾನವರು ಮಾತ್ರ ಈ ರೋಗಾಣುವಿನ ತಿಳಿದಿರುವ ಆತಿಥೇಯರಾಗಿದ್ದಾರೆ.
    • ರೋಗಲಕ್ಷಣಗಳು: ತೀವ್ರವಾದ ಮತ್ತು ವಿಪರೀತವಾದ ನೀರಿನಂಶದ ಅತಿಸಾರ, ಆಯಾಸ, ಸ್ನಾಯು ಸೆಳೆತ ಮತ್ತು ತೂಕ ನಷ್ಟಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಹೆಚ್ಚಿನ ಅಪಾಯವಿರುವ ಗುಂಪುಗಳು: ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು, ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
    • ರೋಗನಿರ್ಣಯ: ದಿನನಿತ್ಯದ ಮಲ ಪರೀಕ್ಷೆಗಳಲ್ಲಿ ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ; ಇದಕ್ಕೆ ವಿಶೇಷ ಸ್ಟೈನಿಂಗ್ (special staining), UV ಫ್ಲೋರೊಸೆನ್ಸ್ ಮೈಕ್ರೋಸ್ಕೋಪಿ ಅಥವಾ PCR ಪರೀಕ್ಷೆಯ ಅಗತ್ಯವಿರುತ್ತದೆ.
    • ಚಿಕಿತ್ಸೆ: ಇದನ್ನು ಆಂಟಿಬಯೋಟಿಕ್ (ಸೂಕ್ಷ್ಮಜೀವಿ ನಿರೋಧಕ) ಟ್ರೈಮೆಥೋಪ್ರಿಮ್-ಸಲ್ಫಮೆಥೋಕ್ಸಜೋಲ್ (trimethoprim-sulfamethoxazole – TMP-SMX) ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ.

    ICAR ನ 98ನೇ ಸಂಸ್ಥಾಪನಾ ದಿನ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) 98ನೇ ಸಂಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಕೃಷಿ ಸಚಿವಾಲಯವು ವಿಕಸಿತ್ ಭಾರತ್ 2047ರ ಪ್ರಮುಖ ಆಧಾರಸ್ತಂಭವಾಗಿರುವ “ಅಭಿವೃದ್ಧಿ ಹೊಂದಿದ ಕೃಷಿ ಮತ್ತು ಸಮೃದ್ಧ ರೈತರು” ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ.

    ನಿರೀಕ್ಷಿತ ಫಲಶ್ರುತಿಗಳು: 

    • 100 ಹವಾಮಾನ-ಸ್ಮಾರ್ಟ್ ಗ್ರಾಮಗಳು: ಹವಾಮಾನ- ಚೇತರಿಕೆ ಕೃಷಿ, ಜಲ ಸಂರಕ್ಷಣೆ ಮತ್ತು ವಿಪತ್ತು-ಕಡಿತದ ಮಾದರಿಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಲು, ICAR ನ ಶತಮಾನೋತ್ಸವದ ಮೊದಲು ಕನಿಷ್ಠ 100 ಗ್ರಾಮಗಳನ್ನು ಮಾದರಿ ಹಳ್ಳಿಗಳಾಗಿ ಅಭಿವೃದ್ಧಿಪಡಿಸಲಾಗುವುದು.
    • ಒಂದು ಸಂಸ್ಥೆ-ಒಂದು ಮಹಾನ್ ಆವಿಷ್ಕಾರ (One Institute-One Grand Innovation): ಪ್ರತಿಯೊಂದು ICAR ಸಂಸ್ಥೆಯು ಮುಂದಿನ ಎರಡು ವರ್ಷಗಳೊಳಗೆ ಕನಿಷ್ಠ ಒಂದು ಪ್ರಮುಖ ತಾಂತ್ರಿಕ ಆವಿಷ್ಕಾರ, ಹೊಸ ಲಸಿಕೆ ಅಥವಾ ಹೊಸ ಬೆಳೆ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
    • ಮಿಷನ್ ICAR-100: ಬೃಹತ್ ಪ್ರಮಾಣದ ಕೃಷಿ ಪ್ರಾತ್ಯಕ್ಷಿಕೆಗಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು (KVKs) ನಾವೀನ್ಯತಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಹಾಗೂ ಪ್ರತಿಯೊಂದು KVK ಯು ಕನಿಷ್ಠ 100 ಗ್ರಾಮಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.
    • ICAR ಮುಕ್ತ ಡಿಜಿಟಲ್ ಜ್ಞಾನ ವೇದಿಕೆ: ಸ್ಮಾರ್ಟ್‌ಫೋನ್‌ಗಳ ಮೂಲಕ ರೈತರಿಗೆ ಉಚಿತ ಬೆಳೆ ಸಲಹೆಗಳು, ಮಣ್ಣು-ಪರೀಕ್ಷಾ ವರದಿಗಳು ಮತ್ತು ಕೃಷಿ ಮಾರ್ಗದರ್ಶಿ ವೀಡಿಯೊಗಳನ್ನು ಒದಗಿಸುವ ಮೊಬೈಲ್-ಆಧಾರಿತ ಮುಕ್ತ ಜ್ಞಾನ ವೇದಿಕೆಯನ್ನು ರೂಪಿಸಲಾಗುವುದು.

    ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)

    • 1929 ರಲ್ಲಿ ಸ್ಥಾಪನೆಯಾದ (ಮೂಲತಃ ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್) ಇದು ಭಾರತದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಇದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    • ಕೇಂದ್ರ ಕೃಷಿ ಸಚಿವರು ICAR ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಕೃಷಿ ಖಾತೆ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 17, ಜುಲೈ 2026

    ಮಿಲಿಟರಿ ಸಮರಾಭ್ಯಾಸಗಳು

    ಭಾರತೀಯ ನೌಕಾಸೇನೆಯಿಂದ ‘ಆಪರೇಷನ್ ಸದರ್ನ್ ರೆಡಿನೆಸ್ 26-2’ ಆತಿಥ್ಯ

    ಇದೀಗ ಸುದ್ದಿಯಲ್ಲಿ: 

    • ಬಹುರಾಷ್ಟ್ರೀಯ ಕರಾವಳಿ ಭದ್ರತಾ ತರಬೇತಿಯಾದ ಆಪರೇಷನ್ ಸದರ್ನ್ ರೆಡಿನೆಸ್ 26-2 ಅನ್ನು ಭಾರತೀಯ ನೌಕಾಸೇನೆಯು ಕೇರಳದ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್‌ನಲ್ಲಿ 2026 ಜುಲೈ 20-23 ರವರೆಗೆ ಆಯೋಜಿಸಲಿದೆ.

    ಪ್ರಮುಖ ಅಂಶಗಳು:

    • ಸಂಘಟನಾ ಚೌಕಟ್ಟು: ಈ ತರಬೇತಿಯನ್ನು ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ (CMF) ಸಹಭಾಗಿತ್ವದಲ್ಲಿ, ಭಾರತೀಯ ನೌಕಾಸೇನೆಯ ನೇತೃತ್ವದ CMF ನ ವಿಶೇಷ ತರಬೇತಿ ಪಡೆಯಾದ ಕಂಬೈನ್ಡ್ ಟಾಸ್ಕ್ ಫೋರ್ಸ್ 154 (CTF 154) ಅಡಿಯಲ್ಲಿ ನಡೆಸಲಾಗುತ್ತದೆ.
    • ಜಾಗತಿಕ ಭಾಗವಹಿಸುವಿಕೆ: ಅಮೆರಿಕ (USA), ಬ್ರಿಟನ್ (UK), ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ 25 ಕ್ಕೂ ಹೆಚ್ಚು CMF ರಾಷ್ಟ್ರಗಳು ಭಾಗವಹಿಸಲಿದ್ದು, ಕರಾವಳಿ ಜಾಗೃತಿ (MDA), ಮಾದಕವಸ್ತು ನಿರೋಧ ಮತ್ತು ಕರಾವಳಿ ಕಾನೂನು ವಿಷಯಗಳಲ್ಲಿ ಸುಧಾರಿತ ತರಬೇತಿ ನೀಡಲಾಗುತ್ತದೆ.
    • ಭಾರತದ ನೇತೃತ್ವ: ಭಾರತವು 2026 ಫೆಬ್ರವರಿಯಲ್ಲಿ ಮೊದಲ ಬಾರಿಗೆ CTF 154 ರ ಕಮಾಂಡ್ ವಹಿಸಿಕೊಂಡಿದ್ದು, ಪ್ರಸ್ತುತ ಕಮೋಡೋರ್ ಮಿಲಿಂದ್ ಎಮ್. ಮೊಕಾಶಿ ಇದರ ನೇತೃತ್ವ ವಹಿಸಿದ್ದಾರೆ.
    • CMF ಹಿನ್ನೆಲೆ: ಬಹ್ರೇನ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಇದು 47 ರಾಷ್ಟ್ರಗಳ ನೌಕಾ ಒಕ್ಕೂಟವಾಗಿದ್ದು, 3.2 ಮಿಲಿಯನ್ ಚದರ ಮೈಲಿ ಅಂತರರಾಷ್ಟ್ರೀಯ ಜಲಪ್ರದೇಶದ ಭದ್ರತೆಯನ್ನು ನಿರ್ವಹಿಸುತ್ತದೆ (ಭಾರತವು 2023 ರಲ್ಲಿ ಇದರ ಪೂರ್ಣ ಸದಸ್ಯತ್ವ ಪಡೆದಿದೆ).

    ವಿಜ್ಞಾನ ಮತ್ತು ತಂತ್ರಜ್ಞಾನ

    1. ಸ್ಕೈರೂಟ್ ಸಂಸ್ಥೆಯಿಂದ ‘ವಿಕ್ರಮ್-1’ ರಾಕೆಟ್ ಉಡಾವಣೆಗೆ ಸಿದ್ಧತೆ

    • ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace), ಭಾರತದ ಮೊಟ್ಟಮೊದಲ ಖಾಸಗಿ ನಿರ್ಮಿತ ಕಕ್ಷೀಯ ಶ್ರೇಣಿಯ (Orbital-class) ರಾಕೆಟ್ ಆದ ವಿಕ್ರಮ್-1  ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2026 ಜುಲೈ 18 ರಂದು ಉಡಾವಣೆ ಮಾಡಲಿದೆ.
    • ಈ ಐತಿಹಾಸಿಕ ಯೋಜನೆಗೆ ಮಿಷನ್ ಆಗಮನ್ ಎಂದು ಹೆಸರಿಸಲಾಗಿದ್ದು, ಇಸ್ರೋ (ISRO) ಸಂಸ್ಥೆಯ ರಾಕೆಟ್ ಕಾರ್ಯಕ್ರಮದ ಸಹಾಯವಿಲ್ಲದೆ, ಭಾರತದ ಖಾಸಗಿ ಕಂಪನಿಯೊಂದು ತನ್ನದೇ ಆದ ಸ್ವದೇಶಿ ಉಡಾವಣಾ ವಾಹನದ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಪ್ರಯತ್ನಿಸುತ್ತಿರುವ ಮೊದಲ ಸಾಹಸ ಇದಾಗಿದೆ.
    • ಈ ಉಡಾವಣಾ ದಿನಾಂಕವು 1980 ಜುಲೈ 18 ರಂದು ಭಾರತವು ಕೈಗೊಂಡ ಅತ್ಯಂತ ಮೊದಲ ಯಶಸ್ವಿ ಪ್ರಾಯೋಗಿಕ SLV-3 ರಾಕೆಟ್ ಉಡಾವಣೆಯ 46ನೇ ವಾರ್ಷಿಕೋತ್ಸವದ ದಿನದಂದೇ ನಿಗದಿಯಾಗಿದೆ.

     

    2. ‘ಪ್ರಾಜೆಕ್ಟ್ ಜೈಂಟ್’ : ಅಟ್ಲಾಂಟಿಕ್ ಸಾಗರ ಪ್ರವಾಹಗಳ ಅಧ್ಯಯನ

    • ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯು ಜಾಗತಿಕ ಹವಾಮಾನ ಸಂಶೋಧನೆಯ ಮಹತ್ವದ ಜಂಟಿ ಉಪಕ್ರಮವಾದ ಪ್ರಾಜೆಕ್ಟ್ ಜೈಂಟ್ (Project GIANT – Greenland Ice Sheet to Atlantic Tipping Points) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
    • ಇದು ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯ ನೇತೃತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ (2025-2030) ನಡೆಯಲಿರುವ ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಹಭಾಗಿತ್ವದ ಯೋಜನೆಯಾಗಿದೆ.
    • ಮುಖ್ಯ ಉದ್ದೇಶ: ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ವೇಗವಾಗಿ ಕರಗುತ್ತಿರುವುದು ಮತ್ತು ಅದರ ಪರಿಣಾಮವಾಗಿ ಸಾಗರಕ್ಕೆ ಸೇರುತ್ತಿರುವ ಸಿಹಿನೀರಿನ ಒಳಹರಿವು ಅತ್ಯಂತ ಪ್ರಮುಖವಾದ ಅಟ್ಲಾಂಟಿಕ್ ಸಾಗರದ ಪ್ರವಾಹಗಳ (ಉದಾಹರಣೆಗೆ AMOC ಪ್ರವಾಹ) ಸಂಪೂರ್ಣ ಪತನಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಈ ಯೋಜನೆ ತನಿಖೆ ಮಾಡಲಿದೆ.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಅಬತ್ಸಹಾಯೇಶ್ವರರ್ ದೇವಾಲಯವು ಪ್ರಾಥಮಿಕವಾಗಿ ಯಾವ ರಾಜವಂಶದೊಂದಿಗೆ ಸಂಬಂಧ ಹೊಂದಿದೆ?

    A) ಪಲ್ಲವ

    B) ಪಾಂಡ್ಯ

    C) ವಿಜಯನಗರ

    D) ಚೋಳ

    ಉತ್ತರ: D) ಚೋಳ

     

    2. ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?

    A) ಒಂದನೇ ನರಸಿಂಹದೇವ

    B) ಕಪಿಲೇಂದ್ರ ದೇವ

    C) ಅನಂತವರ್ಮನ್ ಚೋಡಗಂಗ ದೇವ

    D) ಅಶೋಕ

    ಉತ್ತರ: C) ಅನಂತವರ್ಮನ್ ಚೋಡಗಂಗ ದೇವ

     

    3. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಯಾವ ಸಚಿವಾಲಯವು ಪ್ರಾರಂಭಿಸಿದೆ?

    A) ಬೃಹತ್ ಕೈಗಾರಿಕೆಗಳ ಸಚಿವಾಲಯ

    B) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

    C) ನೀತಿ ಆಯೋಗ (NITI Aayog)

    D) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)

    ಉತ್ತರ: D) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)

     

    4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ದಕ್ಷಿಣ ಆಫ್ರಿಕಾವು 2010 ರಲ್ಲಿ ಬ್ರಿಕ್ಸ್ (BRICS) ಒಕ್ಕೂಟಕ್ಕೆ ಸೇರ್ಪಡೆಗೊಂಡಿತು.
    2. ಬ್ರಿಕ್ಸ್ (BRICS) ನ ಪ್ರಧಾನ ಕಛೇರಿಯು ಶಾಂಘೈನಲ್ಲಿ ಕೇಂದ್ರೀಕೃತವಾಗಿದೆ.

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಯಾವುದೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

  • ಅಬತ್ಸಹಾಯೇಶ್ವರರ್ ದೇವಾಲಯ | ಜಗನ್ನಾಥ ರಥಯಾತ್ರೆ | ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS) | ಸೆಮಿಕಾನ್ 2.0 | 12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಬತ್ಸಹಾಯೇಶ್ವರರ್ ದೇವಾಲಯ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ತಮಿಳುನಾಡಿನ ತುಕ್ಕಾಚಿಯಲ್ಲಿರುವ 12ನೇ ಶತಮಾನದ ಅಬತ್ಸಹಾಯೇಶ್ವರರ್ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯವು ದಶಕಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿತ್ತು. 

    ಅಬತ್ಸಹಾಯೇಶ್ವರರ್ ದೇವಾಲಯದ ಬಗ್ಗೆ:

    • ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಸಮೀಪದ ತುಕ್ಕಾಚಿ ಎಂಬಲ್ಲಿದೆ.
    • ಇದು ನಂತರದ ಚೋಳರ ಕಾಲದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದ್ದು, ಇದು ಒಂದನೇ ಕುಲೋತ್ತುಂಗ ಚೋಳ ಮತ್ತು ವಿಕ್ರಮ ಚೋಳನ ಆಳ್ವಿಕೆಗೆ ನಿಕಟವಾಗಿ ಸಂಬಂಧಿಸಿದೆ.
    • ಈ ದೇವಾಲಯವನ್ನು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಶೈಲಿಯನ್ನು ಕಾರ ಕೋವಿಲ್ ಎಂದು ಕರೆಯಲಾಗುತ್ತದೆ.
    • ಇಲ್ಲಿ ಭಗವಾನ್ ಶರಭೇಶ್ವರರ ವಿಗ್ರಹವಿದ್ದು, ಇದು ಆ ದೇವರ ಅತ್ಯಂತ ಹಳೆಯ ಚಿತ್ರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

    ದೇವಾಲಯದ ಜೀರ್ಣೋದ್ಧಾರ:

    • ದೇವಾಲಯದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು, ಅದರ ರಚನಾತ್ಮಕ ಭದ್ರತೆಯನ್ನು ಬಲಪಡಿಸಿದ ಪ್ರಯತ್ನಕ್ಕಾಗಿ, ಈ ಜೀರ್ಣೋದ್ಧಾರ ಯೋಜನೆಯು 2024ರ ‘ಯುನೆಸ್ಕೋ ಏಷ್ಯಾ ಪೆಸಿಫಿಕ್ ಅವಾರ್ಡ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಈ ಯೋಜನೆಯು ಸಾಂಪ್ರದಾಯಿಕ ದೇವಾಲಯ ನಿರ್ಮಾಣ ಪದ್ಧತಿಗಳಾದ ಸ್ಥಾಪತ್ಯ ವೇದ, ಆಗಮ ಶಾಸ್ತ್ರ ಮತ್ತು ಸುಣ್ಣದ ಗಾರೆಯ ಬಳಕೆಯನ್ನು, ಡ್ರೋನ್ ಸಮೀಕ್ಷೆ, ಡಿಜಿಟಲ್ ಮ್ಯಾಪಿಂಗ್, ಫೋಟೋಗ್ರಾಮೆಟ್ರಿ ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗಿದೆ.
    • ದೇವಾಲಯದ ಐತಿಹಾಸಿಕ ನೈಜತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಪ್ರತಿ ಗ್ರಾನೈಟ್ ಕಲ್ಲಿನ ಬ್ಲಾಕ್‌ಗೆ ಸಂಖ್ಯೆಯನ್ನು ನೀಡಿ, ಬಿಚ್ಚಿ, ನಂತರ ಅದರ ಮೂಲ ಸ್ಥಾನದಲ್ಲೇ ಮರುಜೋಡಿಸಲಾಗಿದೆ.

    ಜಗನ್ನಾಥ ರಥಯಾತ್ರೆ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧವಾದ ಭಗವಾನ್ ಜಗನ್ನಾಥನ ರಥಯಾತ್ರೆಯು ಪ್ರಾರಂಭವಾಗಿದೆ.

    ರಥಯಾತ್ರೆಯ ಬಗ್ಗೆ:

    • ಈ ರಥಯಾತ್ರೆಯನ್ನು ಗುಂಡಿಚಾ ಜಾತ್ರೆ, ಘೋಸ ಜಾತ್ರೆ ಮತ್ತು ನವದಿನ ಜಾತ್ರೆ ಎಂದೂ ಕರೆಯಲಾಗುತ್ತದೆ.
    • ಇದು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಜಗನ್ನಾಥನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಹಿಂದೂ ಹಬ್ಬವಾಗಿದೆ.

    ಜಗನ್ನಾಥ ಪುರಿ ದೇವಾಲಯಯದ ಬಗ್ಗೆ: 

    • ಶ್ರೀ ಜಗನ್ನಾಥ ಪುರಿ ದೇವಾಲಯವು ಒಡಿಶಾ ರಾಜ್ಯದ ಅತ್ಯಂತ ಆಕರ್ಷಕ ಸ್ಮಾರಕಗಳಲ್ಲಿ ಒಂದಾಗಿದೆ.
    • ಈ ದೇವಾಲಯವನ್ನು ಸಾ.ಶ 12ನೇ ಶತಮಾನದಲ್ಲಿ ಪೂರ್ವ ಗಂಗಾ ರಾಜವಂಶದ ರಾಜನಾದ ಅನಂತವರ್ಮನ್ ಚೋಡಗಂಗ ದೇವ ನಿರ್ಮಿಸಿದನು.
    • ಜಗನ್ನಾಥ ಪುರಿ ದೇವಾಲಯವನ್ನು ‘ಯಮನಿಕಾ ತೀರ್ಥ’ ಎಂದು ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಭಗವಾನ್ ಕೃಷ್ಣನೆಂದು ಕರೆಯಲ್ಪಡುವ ಭಗವಾನ್ ಜಗನ್ನಾಥನ ಉಪಸ್ಥಿತಿಯಿಂದಾಗಿ ಪುರಿಯಲ್ಲಿ ಮರಣದೇವನಾದ ‘ಯಮ’ನ ಶಕ್ತಿಯು ಶೂನ್ಯಗೊಂಡಿದೆ ಎಂಬ ಪ್ರತೀತಿಯಿದೆ.
    • ಇದು ಭಾರತದ ನಾಲ್ಕು ಪ್ರಮುಖ ಧಾಮ (ಚಾರ್ ಧಾಮ್)ಗಳಲ್ಲಿ ಒಂದಾಗಿದ್ದು, ಭಾರತದ ನಾಲ್ಕು ದಿಕ್ಕುಗಳಲ್ಲಿರುವ ಪುರಿ, ದ್ವಾರಕಾ, ಬದರಿನಾಥ್ ಮತ್ತು ರಾಮೇಶ್ವರಂ ಈ ಪಟ್ಟಿಯಲ್ಲಿ ಸೇರಿವೆ.
    • ಈ ದೇವಾಲಯವನ್ನು ಈ ಹಿಂದೆ “ಶ್ವೇತ ಪಗೋಡ” ಎಂದು ಕರೆಯಲಾಗುತ್ತಿತ್ತು ಮತ್ತು ಇದು ಚಾರ್ ಧಾಮ್ ಯಾತ್ರೆಗಳ (ಬದರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ) ಒಂದು ಪ್ರಮುಖ ಭಾಗವಾಗಿದೆ.

    ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸಚಿವ ಸಂಪುಟವು 62,500 ಕೋಟಿ ರೂ. ಗಳ ಬಜೆಟ್ ವೆಚ್ಚದೊಂದಿಗೆ ಹೊಸ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೆ (MPMS) ಅನುಮೋದನೆ ನೀಡಿದೆ.

    ಉದ್ದೇಶ:

    • ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಬಿಡಿಭಾಗಗಳ ಸ್ಥಳೀಕರಣವನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಸಂಶೋಧನೆ-ಅಭಿವೃದ್ಧಿಯನ್ನು (R&D) ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಯೋಜನೆಯ ಪ್ರಮುಖ ವಿವರಗಳು:

    • ಜಾರಿಗೊಳಿಸಿದ ಸಚಿವಾಲಯ: ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜಾರಿಗೊಳಿಸಿದೆ.
    • ಯೋಜನೆಯ ಅವಧಿ: ಇದೊಂದು ಐದು ವರ್ಷಗಳ ಯೋಜನೆಯಾಗಿದ್ದು, 2026-27ನೇ ಆರ್ಥಿಕ ವರ್ಷದಿಂದ 2030-31ನೇ ಆರ್ಥಿಕ ವರ್ಷದವರೆಗೆ ಜಾರಿಯಲ್ಲಿರುತ್ತದೆ.
    • ಬಜೆಟ್ ವೆಚ್ಚ: ಈ ಯೋಜನೆಗೆ ಒಟ್ಟು 62,500 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.

    ಯೋಜನೆಯ ಪ್ರಮುಖ ಲಕ್ಷಣಗಳು:

    • ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕಗಳು : ಈ ಯೋಜನೆಯು ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳ ಅರ್ಹ ಮಾರಾಟದ ಮೇಲೆ ಪ್ರೋತ್ಸಾಹಕ ಬೆಂಬಲವನ್ನು ನೀಡುತ್ತದೆ; ಅನ್ವಯವಾಗುವ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪ್ರೋತ್ಸಾಹಕ ದರಗಳು 2.25% ರಿಂದ 5% ರವರೆಗೆ ಇರುತ್ತವೆ.
    • ದೇಶೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ: ಪ್ರಮುಖ ಬಿಡಿಭಾಗಗಳು ಮತ್ತು ಉಪ-ಜೋಡಣೆಗಳನ್ನು ದೇಶೀಯವಾಗಿಯೇ ಸೋರ್ಸಿಂಗ್ (ಖರೀದಿಸುವ) ಮಾಡುವುದನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ತಯಾರಕರು ಗರಿಷ್ಠ 1.5% ರಷ್ಟು ಹೆಚ್ಚುವರಿ ಪ್ರೋತ್ಸಾಹಕವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ವಿನ್ಯಾಸ ಮತ್ತು ನಾವೀನ್ಯತೆಗೆ ಬೆಂಬಲ : ದೇಶೀಯ ನಾವೀನ್ಯತೆ ಮತ್ತು ಬ್ರ್ಯಾಂಡ್ ರಚನೆಯನ್ನು ಉತ್ತೇಜಿಸುವ ಸಲುವಾಗಿ, ಭಾರತದಲ್ಲಿ ಉತ್ಪನ್ನ ವಿನ್ಯಾಸ ಮತ್ತು R&D ಚಟುವಟಿಕೆಗಳನ್ನು ಕೈಗೊಳ್ಳುವ ಕಂಪನಿಗಳಿಗೆ ಅರ್ಹ ಮಾರಾಟದ ಮೇಲೆ ಹೆಚ್ಚುವರಿ 3% ಪ್ರೋತ್ಸಾಹಕವನ್ನು ಈ ಯೋಜನೆಯು ಒದಗಿಸುತ್ತದೆ.

    ಸೆಮಿಕಾನ್ 2.0

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು 1,27,500 ಕೋಟಿ ರೂ. ವೆಚ್ಚದ ಸೆಮಿಕಾನ್ 2.0 (ಇಂಡಿಯಾ  ಸೆಮಿಕಂಡಕ್ಟರ್ ಮಿಷನ್ 2.0) ಯೋಜನೆಗೆ ಅನುಮೋದನೆ ನೀಡಿದೆ.

    ಆರು ಕಾರ್ಯತಂತ್ರದ ಆಧಾರಸ್ತಂಭಗಳು:

    1. ವಿನ್ಯಾಸ.
    2. ಯಂತ್ರಗಳು ಮತ್ತು ವಸ್ತುಗಳು.
    3. ತಯಾರಿಕೆ.
    4. ಜೋಡಣೆ, ಪರೀಕ್ಷೆ, ಮಾರುಕಟ್ಟೆ ಮತ್ತು ಪ್ಯಾಕೇಜಿಂಗ್ (ATMP) ಹಾಗೂ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (OSAT) ಘಟಕಗಳನ್ನು ವಿಸ್ತರಿಸುವ ಮೂಲಕ ಭಾರತವನ್ನು ಜಾಗತಿಕ ಪರ್ಯಾಯ ಕೇಂದ್ರವನ್ನಾಗಿ ಸ್ಥಾಪಿಸುವುದು.
    5. ಸಂಶೋಧನೆ ಮತ್ತು ಅಭಿವೃದ್ಧಿ (R&D).
    6. ಪ್ರತಿಭೆಗಳ ಅಭಿವೃದ್ಧಿ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಬಗ್ಗೆ:

    • ಜಾರಿಗೊಳಿಸಿದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
    • ಗುರಿ: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸಕ್ಕಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಹೊರಹೊಮ್ಮಲು ಅನುವು ಮಾಡಿಕೊಡುವಂತಹ ಕ್ರಿಯಾಶೀಲ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.

    ಸೆಮಿಕಂಡಕ್ಟರ್ ಚಿಪ್‌ಗಳ ಬಗ್ಗೆ:

    • ಇವು ವಾಹಕಗಳು (Conductors) ಮತ್ತು ಅವಾಹಕಗಳ (Insulators) ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
    • ಉದಾಹರಣೆ: ಇವು ಶುದ್ಧ ಮೂಲವಸ್ತುಗಳಾದ ಸಿಲಿಕಾನ್ ಅಥವಾ ಜರ್ಮೇನಿಯಂ ಆಗಿರಬಹುದು; ಅಥವಾ ಗ್ಯಾಲಿಯಂ ಆರ್ಸೆನೈಡ್ ಅಥವಾ ಕ್ಯಾಡ್ಮಿಯಂ ಸೆಲೆನೈಡ್ ನಂತಹ ಸಂಯುಕ್ತ ವಸ್ತುಗಳಾಗಿರಬಹುದು.
    • ಸೆಮಿಕಂಡಕ್ಟರ್ ಚಿಪ್‌ಗಳ ಮಹತ್ವ: ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ಹೃದಯ ಮತ್ತು ಮೆದುಳಿನಂತೆ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
    • ಅನ್ವಯಗಳು: ಈ ಚಿಪ್‌ಗಳು ಆಧುನಿಕ ವಾಹನಗಳು, ಗೃಹಬಳಕೆಯ ಉಪಕರಣಗಳು ಮತ್ತು ECG ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.

    12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತವು ಹೈದರಾಬಾದ್‌ನಲ್ಲಿ 12ನೇ ಬ್ರಿಕ್ಸ್ (BRICS) ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯನ್ನು ಆಯೋಜಿಸಿತು.
    • 2026ರ ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).

    ಸಭೆಯ ಪ್ರಮುಖ ಫಲಿತಾಂಶಗಳು:

    • ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಘೋಷಣೆ: ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು, ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ಅಂತರ್ಗತ ಹಾಗೂ ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.
    • ಸದಸ್ಯ ರಾಷ್ಟ್ರಗಳಾದ್ಯಂತ ಕಾರ್ಮಿಕ ಚೌಕಟ್ಟುಗಳನ್ನು (ದಕ್ಷಿಣ-ದಕ್ಷಿಣ ಸಹಕಾರ) ಆಧುನೀಕರಿಸಲು, ಸಮನ್ವಯಗೊಳಿಸಲು ಮತ್ತು ಬಲಪಡಿಸಲು ಭಾರತವು ಬ್ರಿಕ್ಸ್ ಜೊಡಣೆ (BRICS CONNECT) ಎಂಬ ತಂತ್ರಜ್ಞಾನ-ಚಾಲಿತ ಸಹಯೋಗದ ವೇದಿಕೆಯನ್ನು ಪ್ರಾರಂಭಿಸಿತು.

    ಬ್ರಿಕ್ಸ್ (BRICS) ಬಗ್ಗೆ:

    • ಸ್ಥಾಪನೆ: 2009.
    • ಪ್ರಧಾನ ಕಚೇರಿ: ಶಾಂಘೈ.
    • BRICS, ಇದು ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಗೊಂಡಿತು) ರಾಷ್ಟ್ರಗಳ ಗುಂಪಿನ ಸಂಕ್ಷಿಪ್ತ ರೂಪವಾಗಿದೆ.
    • ಮೂಲ: ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಲ್ಕು ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳನ್ನು ವಿವರಿಸಲು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ ನೀಲ್ ಅವರು “ಬ್ರಿಕ್” (BRIC) ಎಂಬ ಪದವನ್ನು ಹುಟ್ಟುಹಾಕಿದರು.
    • ಇತ್ತೀಚಿನ ವಿಸ್ತರಣೆ (BRICS+): 2024-2025ರಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಳ್ಳುವಂತೆ ವಿಸ್ತರಣೆಯಾಯಿತು. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಔಪಚಾರಿಕಗೊಳಿಸಿಲ್ಲ.
    • ಬ್ರಿಕ್ಸ್ ಪಾಲು: ಬ್ರಿಕ್ಸ್ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಜನಸಂಖ್ಯೆಯ 41%, ಜಾಗತಿಕ GDPಯ 24% ಮತ್ತು ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ರಷ್ಟನ್ನು ಹೊಂದುವ ನಿರೀಕ್ಷೆಯಿದೆ).
    • ಅಧ್ಯಕ್ಷತೆ: ವೇದಿಕೆಯ ಅಧ್ಯಕ್ಷತೆಯನ್ನು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಮೇಲೆ ಹಂಚಲಾಗುತ್ತದೆ.

    ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:

    • ಹೊಸ ಅಭಿವೃದ್ಧಿ ಬ್ಯಾಂಕ್ (New Development Bank – NDB)
    • ಅನಿಶ್ಚಿತ ಮೀಸಲು ವ್ಯವಸ್ಥೆ (Contingent Reserve Arrangement – CRA)
    • ಬ್ರಿಕ್ಸ್ ಪಾವತಿ ವ್ಯವಸ್ಥೆ (BRICS Payment System)
    • ಕಸ್ಟಮ್ಸ್ ಒಪ್ಪಂದಗಳು (Customs Agreements)
    • ದೂರಸಂವೇದಿ ಉಪಗ್ರಹಗಳ ಸಮೂಹ (Constellation of Remote Sensing Satellites)

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 16, ಜುಲೈ 2026

    ಸುದ್ದಿಯಲ್ಲಿರುವ ವ್ಯಕ್ತಿ

    ಭೂ ವಿಜ್ಞಾನ ಸಚಿವಾಲಯದ (MoES) ನೂತನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು ನೇಮಕವಾಗಿದ್ದಾರೆ.

    ಪ್ರಮುಖ ದಿನಗಳು

    ಜಾಗತಿಕ ಅಂತರರಾಷ್ಟ್ರೀಯ ನ್ಯಾಯ ದಿನ 2026

    • ಆಚರಿಸುವ ದಿನಾಂಕ: ಜುಲೈ 17
    • ಆಚರಿಸುವ ಸಂಸ್ಥೆ: ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)

    ಮುಖ್ಯ ಉದ್ದೇಶ:

    • ನೆದರ್ಲೆಂಡ್ಸ್‌ನ ಹೇಗ್ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಗೆ ಅಡಿಪಾಯ ಹಾಕಿದ ಜುಲೈ 17, 1998 ರ ಐತಿಹಾಸಿಕ ರೋಮ್ ಶಾಸನವನ್ನು (Rome Statute) ಸ್ಮರಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
    • ಜಾಗತಿಕ ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಜನಾಂಗೀಯ ಹತ್ಯೆ, ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಆಕ್ರಮಣಶೀಲತೆಯ ಅಪರಾಧಗಳು ಸೇರಿದಂತೆ ಜಗತ್ತಿನ ಘೋರ ಅಂತರರಾಷ್ಟ್ರೀಯ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ, ಅವರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯುವುದು ಈ ದಿನದ ಮುಖ್ಯ ಆಶಯವಾಗಿದೆ.