ವರ್ಗ: National and International Current Affairs Kannada

  • ಎಚ್‌ಪಿವಿ ಲಸಿಕೆ

    ಎಚ್‌ಪಿವಿ ಲಸಿಕೆ

    ಸಾಮಾನ್ಯ ಅಧ್ಯಯನ-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಬೃಹತ್ ಜನಸಂಖ್ಯೆ ಆಧಾರಿತ ಅಧ್ಯಯನವೊಂದರ ಪ್ರಕಾರ, ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯ ಹೆಚ್ಚಿನ ವ್ಯಾಪ್ತಿಯು, ಲಸಿಕೆ ಪಡೆಯದ ಮಹಿಳೆಯರಲ್ಲೂ ಸಹ ‘ಕ್ಯಾನ್ಸರ್-ಪೂರ್ವ ಗರ್ಭಕಂಠದ ಗಾಯಗಳನ್ನು’ ಕಡಿಮೆ ಮಾಡಬಲ್ಲದು ಎಂದು ತೋರಿಸಿದೆ. ಇದು ಬಲವಾದ ‘ಸಾಮೂಹಿಕ ರೋಗನಿರೋಧಕ ಶಕ್ತಿಯ’ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

    ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:

    • ಗರ್ಭಕಂಠದ ಕ್ಯಾನ್ಸರ್ ಮಹಿಳೆಯ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಇರುವ ಪ್ರವೇಶ ದ್ವಾರ) ಬೆಳೆಯುತ್ತದೆ.
    • ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆ:- ಬಹುತೇಕ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (99%) ‘ಅಪಾಯಕಾರಿ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನೊಂದಿಗೆ ಸಂಪರ್ಕ ಹೊಂದಿವೆ. ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯವಾದ ವೈರಸ್ ಆಗಿದೆ.
    • 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್:- ಇದು ವಿಶ್ವದಾದ್ಯಂತ ಮಹಿಳೆಯರಲ್ಲಿ ಕಂಡುಬರುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
    • ಭಾರತದಲ್ಲಿ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್:- ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಇದಾಗಿದೆ.
    • ಚಿಕಿತ್ಸೆ ನೀಡಬಹುದು:- ರೋಗವನ್ನು ಮೊದಲೇ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಿದರೆ, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ.
    • ‘ಗಾರ್ಡಾಸಿಲ್’ ಮತ್ತು ‘ಸರ್ವವ್ಯಾಕ್’ ಲಸಿಕೆಗಳು:- ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಪ್ರಸ್ತುತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
    1. ಮೆರ್ಕ್‌  ಅಭಿವೃದ್ಧಿ ಪಡಿಸಿದ ‘ಗಾರ್ಡಾಸಿಲ್’ 
    2. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ‘ಸರ್ವವ್ಯಾಕ್’.
  • ರಾಷ್ಟ್ರೀಯ ಯುವ ದಿನಾಚರಣೆ 2026

    ರಾಷ್ಟ್ರೀಯ ಯುವ ದಿನಾಚರಣೆ 2026

    ಇತರೆ ವಿಷಯಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಸ್ವಾಮಿ ವಿವೇಕಾನಂದ ಅವರ  ಜನ್ಮದಿನದ ಅಂಗವಾಗಿ, ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.

    ರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ:

    • ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನ:- ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ಇದನ್ನು ಆಚರಿಸಲಾಗುತ್ತದೆ.
    • ಯುವಜನರ ಸಾಮರ್ಥ್ಯದ ಮೇಲಿನ ಅವರ ಅಚಲವಾದ ನಂಬಿಕೆಯು, ದೇಶದ ಯುವ ನಾಗರಿಕರ ಮನದಲ್ಲಿ ಇಂದಿಗೂ ಆಳವಾಗಿ ಪ್ರತಿಧ್ವನಿಸುತ್ತಿದೆ.
    • ಶಿಕ್ಷಣ, ನವೋದ್ಯಮಗಳು, ಸೇವೆ ಮತ್ತು ನಾಯಕತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರ ಪ್ರಮುಖ ಪಾತ್ರವನ್ನು ‘ರಾಷ್ಟ್ರೀಯ ಯುವ ದಿನ 2026’ ಎತ್ತಿ ತೋರಿಸುತ್ತದೆ.
    • ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಈ ದಿನವು, ಯುವಕರು ಕೇವಲ ಉತ್ತರಾಧಿಕಾರಿಗಳಲ್ಲ, ಬದಲಿಗೆ “2047 ರ ವಿಕಸಿತ ಭಾರತ ಕನಸಿನತ್ತ ಸಾಗುವ ಭಾರತದ ಪಯಣದ ಶಿಲ್ಪಿಗಳು” ಎಂಬುದನ್ನು ಒತ್ತಿಹೇಳುತ್ತದೆ.

    ಯುವಕರಿಗಾಗಿ ಸರ್ಕಾರದ ಉಪಕ್ರಮಗಳು:

    • ಮೇರಾ ಯುವ ಭಾರತ್ (MY Bharat): ಇದು ಸ್ವಾಯತ್ತ, ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.  
    • ಉದ್ದೇಶ:- ಇದು ಸ್ವಯಂಸೇವಕತನ, ಕೌಶಲ್ಯ ಅಭಿವೃದ್ಧಿ, ನಾಯಕತ್ವ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುತ್ತದೆ.
    • ರಾಷ್ಟ್ರೀಯ ಸೇವಾ ಯೋಜನೆ (NSS):- ಇದು 
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
    • ಉದ್ದೇಶ:- ಸಮುದಾಯ ಸೇವೆಯ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ ಮಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ.
    • ಅಗ್ನಿಪಥ ಯೋಜನೆ:- 
    • ಪ್ರಾರಂಭ:- ಕೇಂದ್ರ ಸರ್ಕಾರವು 2022 ರಲ್ಲಿ
    • ಉದ್ದೇಶ:- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರನ್ನೂ ಭಾರತದ ಮೂರೂ ಸೇನೆಗಳ ‘ಅಧಿಕಾರಿ ಹುದ್ದೆಗಿಂತ ಕೆಳಗಿನ ಶ್ರೇಣಿಗೆ’ 4 ವರ್ಷಗಳ ಅವಧಿಗೆ ‘ಅಗ್ನಿವೀರರನ್ನಾಗಿ’ ನೇಮಿಸಿಕೊಳ್ಳಲಾಗುತ್ತದೆ.
    • PM-SETU ಯೋಜನೆ:- 
    • PM-SETU ವಿಸ್ತರಿತ ರೂಪ:- ಉನ್ನತೀಕರಿಸಿದ ಐಟಿಐಗಳ ಮೂಲಕ – ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ ಯೋಜನೆ.
    • ಪ್ರಾರಂಭ:- 2025 ರ ಅಕ್ಟೋಬರ್‌ 
    • ಉದ್ದೇಶ:- ಇದು ಭಾರತದ ‘ಕೈಗಾರಿಕಾ ತರಬೇತಿ ಸಂಸ್ಥೆಗಳ’ (ITIs) ಜಾಲವನ್ನು ಆಧುನೀಕರಿಸಲು ಮತ್ತು ಜಾಗತಿಕ ಕೈಗರಿಕೋದ್ಯಮದ ಮಾನದಂಡಗಳೊಂದಿಗೆ ವೃತ್ತಿಪರ ತರಬೇತಿಯನ್ನು ಸಂಯೋಜಿಸಲು ರೂಪಿಸಲಾಗಿದೆ 
    • ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಕೌಶಲ್ಯ ಭಾರತ ಮಿಷನ್ (SIM):- 
    • ಪ್ರಾರಂಭ:- 2015 ರಲ್ಲಿ, ವಿಶ್ವ ಯುವ ಕೌಶಲ್ಯ ದಿನದಂದು.
    • ಉದ್ದೇಶ:- ಇದು ವ್ಯಾಪಕವಾದ ಕೇಂದ್ರ ಮತ್ತು ಸಂಸ್ಥೆಗಳ ಜಾಲದ ಮೂಲಕ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ.
    • ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY):- 
    • ಪ್ರಾರಂಭ:- 2015 
    • ಉದ್ದೇಶ:- ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ಅಥವಾ ಮರು-ಕೌಶಲ್ಯ ತರಬೇತಿಯನ್ನು ಒದಗಿಸಲು. 
    • ಇದು ‘ಪೂರ್ವ ಕಲಿಕೆಯ ಗುರುತಿಸುವಿಕೆ’ಯ  ಮೂಲಕ ಭಾರತದಾದ್ಯಂತ ಯುವಜನರಿಗೆ ತರಬೇತಿ ನೀಡುವುದನ್ನು ಒಳಗೊಂಡಿದೆ.
    • ಜನ ಶಿಕ್ಷಣ ಸಂಸ್ಥಾನ (JSS) ಯೋಜನೆ:- 
    • ಪ್ರಾರಂಭ:- ಆರಂಭದಲ್ಲಿ 1967 ರಲ್ಲಿ ‘ಶ್ರಮಿಕ್ ವಿದ್ಯಾಪೀಠ’ ಎಂದು ಪ್ರಾರಂಭಿಸಲಾಯಿತು. 
    • ಉದ್ದೇಶ:- ಇದು ಅನೌಪಚಾರಿಕ ವಿಧಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
    • ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (NAPS):-
    • ಪ್ರಾರಂಭ:- ಆಗಸ್ಟ್ 2016
    • ಉದ್ದೇಶ:- ಶಿಷ್ಯವೃತ್ತಿ ವಿದ್ಯಾರ್ಥಿಗಳ ವೇತನಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಶಿಷ್ಯವೃತ್ತಿಯನ್ನು ಉತ್ತೇಜಿಸುತ್ತದೆ. 
    • ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY):- 
    • ಪ್ರಾರಂಭ:- 2014
    • ಇದು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಯೋಜನೆ ‘(NRLM)ಯ ಭಾಗವಾಗಿದೆ. 
    • 2 ಪ್ರಮುಖ ಉದ್ದೇಶಗಳು:- 
    • ಗ್ರಾಮೀಣ ಬಡ ಕುಟುಂಬಗಳ ಆದಾಯ ಮೂಲಗಳಲ್ಲಿ ವೈವಿಧ್ಯತೆಯನ್ನು ತರುವುದು.
    • ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು.
    • ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ:- 
    • ಘೋಷಣೆ:- 2025 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಣೆ.
    • ವೆಚ್ಚ:- ₹1 ಲಕ್ಷ ಕೋಟಿ 
    • ಆರ್ಥಿಕ ಪ್ರೋತ್ಸಾಹ:- ಇದು ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರಿಗೆ 2 ಕಂತುಗಳಲ್ಲಿ ₹15,000 ವರೆಗಿನ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
    • ಉದ್ಯೋಗದಾತರಿಗೆ ಸಹಾಯಧನ:- ಹೆಚ್ಚುವರಿಯಾಗಿ, ಉದ್ಯೋಗದಾತರು ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಸಹಾಯಧನವನ್ನು ನೀಡುತ್ತಾರೆ. ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
    • ಸ್ಟಾರ್ಟ್ಅಪ್ ಇಂಡಿಯಾ:- 
    • ಪ್ರಾರಂಭ:- 2016
    • ಉದ್ದೇಶ:- ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
    • ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY):- 
    • ಉದ್ದೇಶ:- ಹಣಕಾಸು ಸೌಲಭ್ಯ ಪಡೆಯದ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ವ್ಯಾಪಾರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು
    • ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ (RKSK):- 
    • ಪ್ರಾರಂಭ:- 2014
    • ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಉದ್ದೇಶ:- ಭಾರತದಾದ್ಯಂತ 10–19 ವರ್ಷದ ಕಿಶೋರರ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.

    ಸ್ವಾಮಿ ವಿವೇಕಾನಂದರ ಬಗ್ಗೆ:

    • ಜನನ:- ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಲ್ಲಿ ಜನಿಸಿದರು.
    • ಪಾಶ್ಚಿಮಾತ್ಯರಿಗೆ ಯೋಗ ಮತ್ತು ವೇದಾಂತದ ಹಿಂದೂ ತತ್ವಚಿಂತನೆಗಳನ್ನು ಪರಿಚಯಿಸುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು.
    • ಇವರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಭಾರತದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು ಹಾಗೂ ಆರ್ಥಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಸಂಚರಿಸಿದರು.
    • 1893 ರಲ್ಲಿ ಚಿಕಾಗೋದಲ್ಲಿ ನಡೆದ ‘ವಿಶ್ವ ಧರ್ಮಗಳ ಸಂಸತ್ತಿನಲ್ಲಿ’ ಮಾಡಿದ ಭಾಷಣದ ಮೂಲಕ ಇವರು ಜಾಗತಿಕ ಮನ್ನಣೆಯನ್ನು ಗಳಿಸಿದರು. ಅದರಲ್ಲಿ ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ಪ್ರತಿಪಾದಿಸಿದರು.
    • 1897 ರಲ್ಲಿ ರಾಮಕೃಷ್ಣ ಮಿಷನ್ ಮತ್ತು 1899 ರಲ್ಲಿ ಬೇಲೂರು ಮಠ ಸ್ಥಾಪನೆ:- ಇದು ಲೌಕಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕತೆಯ ಏಕೀಕರಣವನ್ನು ಉತ್ತೇಜಿಸಿತು.
    • ತಮ್ಮ ಬೋಧನೆ, ಉಪನ್ಯಾಸ ಮತ್ತು ಬರಹಗಳ ಮೂಲಕ ರಾಜ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗ ಸೇರಿದಂತೆ ಅವರು ಯೋಗದ ಅಭ್ಯಾಸ ಮತ್ತು ‘ನವ-ವೇದಾಂತ’ದ ತತ್ವಗಳನ್ನು ಹರಡಿದರು. ಭಾರತೀಯ ಜ್ಞಾನಸಮಾಜದ ಹರಿಕಾರರಾಗಿ ಮತ್ತು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯ ದಾರ್ಶನಿಕರಾಗಿ ಶಾಶ್ವತವಾದ ಪರಂಪರೆಯನ್ನು ಉಳಿಸಿದರು.
    • ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿವೇಕಾನಂದರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದಿದ್ದಾರೆ.
  • ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)

    ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)

    ಸಾಮಾನ್ಯ ಅಧ್ಯಯನ- 3/ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಕೃಷಿ ಸಚಿವಾಲಯವು ಪ್ರಸ್ತುತ ಜಾರಿಯಲ್ಲಿರುವ ಮೂರು ಪ್ರತ್ಯೇಕ ಯೋಜನೆಗಳನ್ನು, ತನ್ನ ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ (PM-RKVY)ಯೊಂದಿಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ.

    PM-RKVY ಯೋಜನೆಯೊಂದಿಗೆ ವಿಲೀನಗೊಳ್ಳಲಿರುವ ಯೋಜನೆಗಳು:

    • ಕೃಷೋನ್ನತಿ ಯೋಜನೆ (KY) – ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NMNF). ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ರಾಷ್ಟ್ರೀಯ ಜೇನು ಮತ್ತು ಜೇನುತುಪ್ಪ ಕಾರ್ಯಯೋಜನೆ (NBHM). ಕೇಂದ್ರ ವಲಯದ ಯೋಜನೆಯಾಗಿದೆ.

    ಗಮನಿಸಿ: 

    ಕೇಂದ್ರ ಪ್ರಾಯೋಜಿತ ಯೋಜನೆ:- ಇವುಗಳಿಗೆ ಕೇಂದ್ರ ಮತ್ತು ರಾಜ್ಯಗಳೆರಡೂ ಜಂಟಿಯಾಗಿ ನಿಧಿಯನ್ನು ಒದಗಿಸುತ್ತವೆ ಹಾಗೂ ರಾಜ್ಯ ಸರ್ಕಾರಗಳು ಇವುಗಳನ್ನು ಅನುಷ್ಠಾನಗೊಳಿಸುತ್ತವೆ

    ಕೇಂದ್ರ ವಲಯದ ಯೋಜನೆ:- ಇದಕ್ಕೆ ಸಂಪೂರ್ಣ ನಿಧಿ ಮತ್ತು ಅನುಷ್ಠಾನವನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.

    ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)ಯ ಬಗ್ಗೆ:

    • 2007 ರಲ್ಲಿ ಪ್ರಾರಂಭವಾದ ಸಮಗ್ರ ಯೋಜನೆ:- ಕೃಷಿ ಮತ್ತು ಅದರ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ.
    • ನೋಡಲ್ ಸಚಿವಾಲಯ:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
    • ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.

    ಉದ್ದೇಶ:- ಇದು ಜಿಲ್ಲಾ ಅಥವಾ ರಾಜ್ಯ ಕೃಷಿ ಯೋಜನೆಯ ಪ್ರಕಾರ, ತಮ್ಮದೇ ಆದ ಕೃಷಿ ಮತ್ತು ಪೂರಕ ವಲಯದ ಅಭಿವೃದ್ಧಿ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ.

  • ಅಮೆರಿಕ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ ನಾಟೋ (NATO)ದ ಅಂತ್ಯವನ್ನು ಸೂಚಿಸುತ್ತದೆ: ಡೆನ್ಮಾರ್ಕ್ | ಒಪೆಕ್+ (OPEC+) | ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)

    ಅಮೆರಿಕ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ ನಾಟೋ (NATO)ದ ಅಂತ್ಯವನ್ನು ಸೂಚಿಸುತ್ತದೆ: ಡೆನ್ಮಾರ್ಕ್

    ಸಾಮಾನ್ಯ ಅಧ್ಯಯನ-2/ ಪ್ರಾದೇಶಿಕ ಗುಂಪುಗಳು

    ಇದೀಗ ಸುದ್ದಿಯಲ್ಲಿದೆ:

    • ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡರೆ, ಅದು ನ್ಯಾಟೋ (NATO) ಸೇನಾ ಮೈತ್ರಿಕೂಟದ ಅಂತ್ಯವನ್ನು ಸೂಚಿಸುತ್ತದೆ ಎಂದು ಡೆನ್ಮಾರ್ಕ್ ಪ್ರಧಾನ ಮಂತ್ರಿ ಹೇಳಿದ್ದಾರೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO)ಯ ಬಗ್ಗೆ:

    • ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’:- ನ್ಯಾಟೋವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ ಎಂತಲೂ ಕರೆಯಲಾಗುತ್ತದೆ. ಇದೊಂದು ಅಂತರ ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
    • ಕೇಂದ್ರ ಕಚೇರಿ:- ಬ್ರಸೆಲ್ಸ್ (ಬೆಲ್ಜಿಯಂ).
    • “ವಾಷಿಂಗ್ಟನ್ ಒಪ್ಪಂದ”:- 2ನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ಆಕ್ರಮಣದ ವಿರುದ್ಧ “ಸಾಮೂಹಿಕ ರಕ್ಷಣೆ”ಯನ್ನು ಒದಗಿಸುವ ಉದ್ದೇಶದಿಂದ, ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು 1949ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದ ಅಥವಾ ವಾಷಿಂಗ್ಟನ್ ಒಪ್ಪಂದಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
    • ವಿಧಿ 5 – ಸಾಮೂಹಿಕ ರಕ್ಷಣೆ: ಈ ಒಪ್ಪಂದದ ವಿಧಿ 5ರ ಪ್ರಕಾರ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಅನ್ವಯ, ಯಾವುದೇ ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
    • ಇಲ್ಲಿಯವರೆಗೆ, ವಿಧಿ 5 ಅನ್ನು ಒಮ್ಮೆ ಮಾತ್ರ ಜಾರಿಗೊಳಿಸಲಾಗಿದೆ. 2001ರಲ್ಲಿ ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಬಳಸಲಾಗಿತ್ತು.
    • ಸದಸ್ಯರು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಅವುಗಳೆಂದರೆ,
    1. 2 ಉತ್ತರ ಅಮೆರಿಕದ ರಾಷ್ಟ್ರಗಳು (ಅಮೆರಿಕ ಮತ್ತು ಕೆನಡಾ), 
    2. 28 ಯುರೋಪಿಯನ್ ರಾಷ್ಟ್ರಗಳು,
    3. 1 ಯುರೇಷಿಯನ್ ರಾಷ್ಟ್ರ (ಟರ್ಕಿ),
    4. 2024ರಲ್ಲಿ ಸ್ವೀಡನ್ ಇದರ 32ನೇ ಸದಸ್ಯ ರಾಷ್ಟ್ರವಾಯಿತು.

    ಒಪೆಕ್+ (OPEC+)

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪ್ರಮುಖ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಗಳು ಮತ್ತು ವಿಸ್ತಾರವಾಗುತ್ತಿರುವ ಭೂ-ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಒಪೆಕ್+ (OPEC+) ಮೈತ್ರಿಕೂಟವು ತೈಲ ಉತ್ಪಾದನೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.

    ಒಪೆಕ್ (OPEC) ಒಕ್ಕೂಟದ ಬಗ್ಗೆ:

      • ಸ್ಥಾಪನೆ:- 1960ರಲ್ಲಿ ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ರಾಷ್ಟ್ರಗಳಿಂದ ಸ್ಥಾಪಿಸಲಾಯಿತು.
      • ಕೇಂದ್ರ ಕಚೇರಿ:- ವಿಯೆನ್ನಾ, ಆಸ್ಟ್ರಿಯಾ.
    • 12 ಸದಸ್ಯ ರಾಷ್ಟ್ರಗಳು:- 
    • 5 ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:- ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ.
    • 7 ಹೆಚ್ಚುವರಿ ಸದಸ್ಯ ರಾಷ್ಟ್ರಗಳು:- ಅಲ್ಜೀರಿಯಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗಾಬನ್, ಲಿಬಿಯಾ, ನೈಜೀರಿಯಾ ಮತ್ತು ಯುಎಇ (UAE).

    ಒಪೆಕ್+ (OPEC+) ಒಕ್ಕೂಟದ ಬಗ್ಗೆ:

    • ಸಂಕ್ಷಿಪ್ತ ವಿವರಣೆ:- ಇದು ‘ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ’ (OPEC) ಮತ್ತು 10 ‘ಒಪೆಕ್’ ಯೇತರ ರಾಷ್ಟ್ರಗಳನ್ನು ಒಳಗೊಂಡಿರುವ ತೈಲ ಉತ್ಪಾದಿಸುವ ದೇಶಗಳ ನಡುವಿನ ಪಾಲುದಾರಿಕೆಯ ಒಂದು ಒಕ್ಕೂಟವಾಗಿದೆ.
    • ಒಪೆಕ್+ ಒಕ್ಕೂಟದಲ್ಲಿರುವ 10 ಒಪೆಕ್-ಯೇತರ  ಸದಸ್ಯ ರಾಷ್ಟ್ರಗಳು (Non-OPEC members):- ರಷ್ಯಾ, ಅಜರ್‌ಬೈಜಾನ್, ಬಹ್ರೇನ್, ಬ್ರೂನಿ, ಕಜಕಿಸ್ತಾನ್, ಮೆಕ್ಸಿಕೊ, ಮಲೇಷ್ಯಾ, ಓಮನ್, ದಕ್ಷಿಣ ಸುಡಾನ್ ಮತ್ತು ಸುಡಾನ್.
    • ಒಪೆಕ್+ ನ ಮಹತ್ವ:- ಇದು ಜಾಗತಿಕ ತೈಲ ಪೂರೈಕೆಯ ಸುಮಾರು 40% ರಷ್ಟನ್ನು ನಿಯಂತ್ರಿಸುತ್ತದೆ.

    ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿ ‘ಬಯೋಹ್ಯಾಪಿನೆಸ್’ (ಜೈವಿಕ ಸಂತೋಷ) ಕುರಿತಾದ ಯೋಜನೆಯ ಕಾರ್ಯವನ್ನು ಆರಂಭಿಸಿದೆ.

    ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)ನ ಬಗ್ಗೆ:

    • ಈ ಪದವನ್ನು ದಿವಂಗತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಪರಿಚಯಿಸಿದ್ದಾರೆ.
    • ಇದು ಮಾನವನ ಆರೋಗ್ಯ, ಪೋಷಕಾಂಶ ಮತ್ತು ಜೀವನೋಪಾಯಗಳನ್ನು ಸುಧಾರಿಸಲು ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಬಳಸಿಕೊಳ್ಳುವ ಮೂಲಕ ಸಾಧಿಸಲಾದ ಯೋಗಕ್ಷೇಮ ಹಾಗೂ ಪರಿಪೂರ್ಣತೆಯ ಸ್ಥಿತಿಯಾಗಿದೆ. ಇದು ಜನರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಉತ್ತೇಜಿಸುತ್ತದೆ.
    • ಮಹತ್ವ:- ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿನ ಈ ಹೊಸ ಬಯೋಹ್ಯಾಪಿನೆಸ್ ಯೋಜನೆಯು ಅಲ್ಲಿನ ನಿವಾಸಿಗಳ ಜೀವನೋಪಾಯಗಳು, ಜಿಲ್ಲೆಯ ಕೃಷಿ-ಜೀವವೈವಿಧ್ಯ ಮತ್ತು ಅದರ ವ್ಯಾಪ್ತಿಯಲ್ಲಿರುವ ಇತರ ಪರಿಸರದ ಅಂಶಗಳ ಮೇಲೆ ಗಮನಹರಿಸಲಿದೆ.

    ನಿಮಗಿದು ತಿಳಿದಿದೆಯೇ?

    • ನಿಶಿ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಮೂಲಕ, ‘ಕೆಯಿ ಪನ್ಯೋರ್’ ಅರುಣಾಚಲ ಪ್ರದೇಶದ 26ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಕೇಂದ್ರ ಸ್ಥಾನವು ‘ಟೆರ್ ಗ್ಯಾಪಿನ್-ಸಮ್ ಸಾರ್ಥ್’ ನಲ್ಲಿದೆ.
  • 66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ | ಡೂಮ್ಸ್‌ಡೇ ಹಿಮನದಿ | ಮಾಧವ್ ಗಾಡ್ಗೀಳ್

    66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಅಮೆರಿಕವು ವಿಶ್ವಸಂಸ್ಥೆಯ 31 ಘಟಕಗಳು ಮತ್ತು ವಿಶ್ವಸಂಸ್ಥೆಯೇತರ 35 ಸಂಸ್ಥೆಗಳು ಸೇರಿದಂತೆ ಒಟ್ಟು 66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸಿದೆ.
    • ಈ ಸಂಸ್ಥೆಗಳಲ್ಲಿ ಹವಾಮಾನ, ಇಂಧನ ಮತ್ತು ವಿಜ್ಞಾನ ವೇದಿಕೆಗಳಾದ 
    1. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (UNFCCC)
    2. ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರಿ ಸಮಿತಿ (IPCC)
    3. ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಮತ್ತು 
    4. ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಸೇರಿವೆ.

    ಅಮೆರಿಕದ ನಿರ್ಗಮನಕ್ಕೆ ಕಾರಣಗಳು:

    • ಸಾರ್ವಭೌಮತ್ವದ ಕಳವಳ:- ದೇಶೀಯ ನೀತಿಯ ಸ್ವಾಯತ್ತತೆಯನ್ನು ನಿಯಂತ್ರಿಸುತ್ತವೆ ಅಥವಾ ಮಿತಿಗೊಳಿಸುತ್ತವೆ ಎಂದು ಭಾವಿಸಲಾದ, ಕಡ್ಡಾಯವಾಗಿ ಪಾಲಿಸಬೇಕಾದ ಅಂತರರಾಷ್ಟ್ರೀಯ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುವುದು.
    • ಸಾಂಸ್ಥಿಕ ಪಕ್ಷಪಾತದ ಗ್ರಹಿಕೆ:- ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ರಾಜಕೀಕರಣ, ಅದಕ್ಷತೆ ಮತ್ತು ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಪಕ್ಷಪಾತದ ಧೋರಣೆಗಳು.
    • ದೇಶೀಯ ರಾಜಕೀಯ ಒತ್ತಡಗಳು:- ಬಹುಪಕ್ಷೀಯ ಬದ್ಧತೆಗಳನ್ನು, ಸೀಮಿತ ನೇರ ಚುನಾವಣಾ ಲಾಭಗಳನ್ನು ನೀಡುವ ‘ದುಬಾರಿ ಬಾಧ್ಯತೆ’ಗಳಾಗಿ ಪರಿಗಣಿಸುತ್ತಿರುವುದು.
    • ಹೊರೆ ಹಂಚಿಕೆ ವಾದ:- ಜಾಗತಿಕ ಸಂಸ್ಥೆಗಳಿಗೆ ಅಮೆರಿಕವು ಅಸಮಾನವಾಗಿ (ಅಗತ್ಯಕ್ಕಿಂತ ಹೆಚ್ಚು) ಕೊಡುಗೆ ನೀಡುತ್ತಿದೆ ಎಂಬ ಪ್ರತಿಪಾದನೆಯೂ ಕೂಡ ಕಾರಣಗಳಲ್ಲಿ ಒಂದಾಗಿದೆ. 
    • ಕಾರ್ಯತಂತ್ರದ ಮರುಹೊಂದಾಣಿಕೆ:- ಸಾರ್ವತ್ರಿಕ ಸಂಸ್ಥೆಗಳಿಗಿಂತ ದ್ವಿಪಕ್ಷೀಯ ಅಥವಾ ಕಿರು-ಪಕ್ಷೀಯ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು.
    • ಕಾರ್ಯತಂತ್ರದ ಪೈಪೋಟಿ:- ಪ್ರತಿಸ್ಪರ್ಧಿಗಳು ಪ್ರಭಾವ ಬೀರುವ ವೇದಿಕೆಗಳನ್ನು ಮಿತಿಗೊಳಿಸುವ ಅಥವಾ ನಿಯಂತ್ರಿಸುವ ಬಯಕೆಯೂ ಕೂಡ ಈ ಕಾರಣಗಳಲ್ಲಿ ಸೇರಿದೆ. 

    ಸಂಭಾವ್ಯ ಪರಿಣಾಮಗಳು:

    • ಹವಾಮಾನ ಬದಲಾವಣೆ ಹೋರಾಟಕ್ಕೆ ಹಿನ್ನಡೆ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳನ್ನು ಇದು ದುರ್ಬಲಗೊಳಿಸುತ್ತದೆ. ಅಲ್ಲದೆ, ಹವಾಮಾನ ಬದ್ಧತೆಗಳು ಹಾಗೂ ಹಣಕಾಸಿನ ನೆರವಿನ ಭರವಸೆಗಳನ್ನು ವಿಳಂಬ ಮಾಡಲು ಇತರ ದೇಶಗಳಿಗೆ ನೆಪವನ್ನು ಒದಗಿಸುತ್ತದೆ.
    • ಬಹುಪಕ್ಷೀಯತೆಯ ವಿಘಟನೆ:- ಇದು ಅಂತರರಾಷ್ಟ್ರೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ಪ್ರಬಲ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ತೀವ್ರಗೊಳಿಸಿ, ರಕ್ಷಣಾತ್ಮಕ ನೀತಿಗಳು ಹಾಗೂ ಸಣ್ಣ ತಾತ್ಕಾಲಿಕ ಪ್ರಾದೇಶಿಕ ಬಣಗಳತ್ತ ಸಾಗುವ ಪ್ರವೃತ್ತಿಯನ್ನು ವೇಗಗೊಳಿಸುತ್ತದೆ.
    • ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಕುಸಿತ: ಅಮೆರಿಕದ ಅನುದಾನ ಕಡಿತವು ಈಗಾಗಲೇ ಕ್ಷೀಣಿಸುತ್ತಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
    • ಜಾಗತಿಕ ಶಾಂತಿ ಮತ್ತು ಭದ್ರತಾ ಅಪಾಯಗಳು:- ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಂತಹ ಸಂಸ್ಥೆಗಳಿಗೆ ಅಮೆರಿಕದ ಬೆಂಬಲ ಕಡಿಮೆಯಾಗುವುದರಿಂದ, ವಿಶೇಷವಾಗಿ ಆಫ್ರಿಕಾ ಮತ್ತು ಕೆರಿಬಿಯನ್‌ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮತ್ತು ಸಂಘರ್ಷದ ನಂತರದ ಚೇತರಿಕೆಗೆ ಅಡ್ಡಿಯಾಗುತ್ತದೆ.
    • ಜಾಗತಿಕ ನಿಯಮಗಳ ದುರ್ಬಲಗೊಳ್ಳುವಿಕೆ: ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಕಟ್ಟುಪಾಡುಗಳನ್ನು ಆಯ್ದು ಪಾಲಿಸುವಂತೆ ಇದು ಇತರ ರಾಷ್ಟ್ರಗಳನ್ನು ಉತ್ತೇಜಿಸುತ್ತದೆ.
    • ನಾಯಕತ್ವದ ನಿರ್ವಾತ:- ಜಾಗತಿಕ ನಿಯಮಗಳು ಮತ್ತು ಸಂಸ್ಥೆಗಳನ್ನು ರೂಪಿಸಲು ಇತರ ಪ್ರಮುಖ ಶಕ್ತಿಗಳಿಗೆ ಇದು ಅವಕಾಶವನ್ನು ಸೃಷ್ಟಿಸುತ್ತದೆ.

    ಡೂಮ್ಸ್‌ಡೇ ಹಿಮನದಿ

    ಸಾಮಾನ್ಯ ಅಧ್ಯಯನ-1/ ಭೂಗೋಳಶಾಸ್ತ್ರ; ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ‘ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಅರ್ಥ್ ಸರ್ಫೇಸ್’ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು, ಥ್ವೈಟ್ಸ್ ಹಿಮನದಿ ಪ್ರದೇಶದಲ್ಲಿನ ಇತ್ತೀಚಿನ ರಚನಾತ್ಮಕ ಬದಲಾವಣೆಗಳನ್ನು ವಿವರಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಅಂಟಾರ್ಕ್ಟಿಕ್‌ನ ಇತರ ಹಿಮ ತೊರೆ (ಐಸ್ ಶೆಲ್ಫ್‌)ಗಳುಹೇಗೆ ಕುಸಿಯಬಹುದು ಎಂಬುದನ್ನು ಇದು ವಿಶ್ಲೇಷಿಸಿದೆ.

    ಡೂಮ್ಸ್‌ಡೇ ಹಿಮನದಿ (ಥ್ವೈಟ್ಸ್ ಹಿಮನದಿ)ಯ ಬಗ್ಗೆ:

    • ಇದು ಪಶ್ಚಿಮ ಅಂಟಾರ್ಕ್ಟಿಕ್ ಹಿಮ ಪಟಲ/ಪದರ (WAIS)ದ ಒಂದು ಹೊರಹರಿಯುವ ಹಿಮನದಿಯಾಗಿದ್ದು, ಅಮುಂಡ್ಸನ್ ಸಮುದ್ರವನ್ನು ಸೇರುತ್ತದೆ.
    • ಸಮುದ್ರದ ಮಟ್ಟದಲ್ಲಿ ಭಾರಿ ಏರಿಕೆಯನ್ನು ಉಂಟುಮಾಡುವ ಇದರ ಸಾಮರ್ಥ್ಯದಿಂದಾಗಿ, ಇದಕ್ಕೆ ‘ಡೂಮ್ಸ್‌ಡೇ ಹಿಮನದಿ’ ಎಂತಲೂ ಕರೆಯಲಾಗುತ್ತದೆ.
    • ಕುಸಿತದ ಪರಿಣಾಮ:- ಡೂಮ್ಸ್‌ಡೇ ಹಿಮನದಿಯ ಸಂಪೂರ್ಣ ನಾಶವು (ಕುಸಿತವು) ಜಾಗತಿಕ ಸಮುದ್ರ ಮಟ್ಟದಲ್ಲಿ 3 ಮೀಟರ್‌ಗಳಷ್ಟು ಏರಿಕೆಗೆ ಕಾರಣವಾಗಬಹುದು.

    ಅಂಟಾರ್ಕ್ಟಿಕ್ ಒಪ್ಪಂದದ ಸಂರಕ್ಷಣಾ ಪ್ರಯತ್ನಗಳು:

    • ಒಳಗೊಂಡಿರುವ ಪ್ರದೇಶ:- ಈ ಒಪ್ಪಂದವು 60° ದಕ್ಷಿಣ ಅಕ್ಷಾಂಶದ ದಕ್ಷಿಣಕ್ಕಿರುವ ಪ್ರದೇಶವನ್ನು ಒಳಗೊಂಡಿದೆ.
    • ಉದ್ದೇಶ:- ಅಂಟಾರ್ಕ್ಟಿಕಾವನ್ನು ಸೇನಾಮುಕ್ತಗೊಳಿಸುವ ಉದ್ದೇಶದೊಂದಿಗೆ 1959ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇದಕ್ಕೆ ಸಹಿ ಹಾಕಲಾಯಿತು.
    • ಒಪ್ಪಂದದ ನಿಯಮಗಳಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು, ಇದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗುತ್ತದೆ.
    • ಭಾರತವು 1983ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು.

    ಅಂಟಾರ್ಕ್ಟಿಕ್ ಸಮುದ್ರ (ಕಡಲ) ಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಸಮಾವೇಶ (CCAMLR):

    • ಈ ಸಮಾವೇಶಕ್ಕೆ 1980ರಲ್ಲಿ ಕ್ಯಾನ್‌ಬೆರಾದಲ್ಲಿ (ಆಸ್ಟ್ರೇಲಿಯಾ) ಸಹಿ ಹಾಕಲಾಯಿತು. 
    • ಉದ್ದೇಶ:- ಅಂಟಾರ್ಕ್ಟಿಕಾ ಪರಿಸರವನ್ನು ರಕ್ಷಿಸಿ ಸಂರಕ್ಷಿಸುವುದು ಹಾಗೂ ವಿಶೇಷವಾಗಿ ಅಂಟಾರ್ಕ್ಟಿಕಾದ ಸಮುದ್ರೀಯ ಜೀವ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಿಸುವುದು.
    • ಭಾರತವು 1985ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು.

    ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಸಂಬಂಧಿಸಿದ ಪರಿಸರ ಸಂರಕ್ಷಣೆಯ ಶಿಷ್ಟಾಚಾರ (ಮ್ಯಾಡ್ರಿಡ್ ಪ್ರೋಟೋಕಾಲ್):

    • ಈ ಒಪ್ಪಂದಕ್ಕೆ 1991ರಲ್ಲಿ ಮ್ಯಾಡ್ರಿಡ್‌ನಲ್ಲಿ (ಸ್ಪೇನ್) ಸಹಿ ಹಾಕಲಾಯಿತು. 
    • ಉದ್ದೇಶ:- ಇದು ಅಂಟಾರ್ಕ್ಟಿಕ್ ಒಪ್ಪಂದ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಅಂಟಾರ್ಕ್ಟಿಕ್ ಪರಿಸರ ಹಾಗೂ ಅದರ ಅವಲಂಬಿತ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
    • ಭಾರತವು 1998ರಲ್ಲಿ ಈ  ಶಿಷ್ಟಾಚಾರವನ್ನು ದೃಢೀಕರಿಸಿತು.

    ರಾಷ್ಟ್ರೀಯ ಅಂಟಾರ್ಕ್ಟಿಕ್ ಕಾರ್ಯಕ್ರಮದ ವ್ಯವಸ್ಥಾಪಕರ ಮಂಡಳಿ (COMNAP):

    • ಭಾರತವು ಇದರ ಸದಸ್ಯ ರಾಷ್ಟ್ರವೂ ಆಗಿದ್ದು, ಇದು ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರಗಳ ಪೈಕಿ ಭಾರತ ಹೊಂದಿರುವ ಮಹತ್ವದ ಸ್ಥಾನವನ್ನು ತೋರಿಸುತ್ತದೆ.

    ಮಾಧವ್ ಗಾಡ್ಗೀಳ್

    ಸಾಮಾನ್ಯ ಅಧ್ಯಯನ-3/ ಪರಿಸರ; ಸುದ್ದಿಯಲ್ಲಿರುವ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಮಾಡಿದ ತಮ್ಮ ಮಹತ್ವದ ಕಾರ್ಯಕ್ಕಾಗಿ ಪ್ರಸಿದ್ಧರಾಗಿದ್ದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ಅವರು ನಿಧನರಾಗಿದ್ದಾರೆ.

    ಪ್ರಮುಖ ಕೊಡುಗೆಗಳು:

    • ಗಾಡ್ಗೀಳ್ ಆಯೋಗ, 2010:- ಪರಿಸರ ಮತ್ತು ಅರಣ್ಯ ಸಚಿವಾಲಯವು ‘ಗಾಡ್ಗೀಳ್ ಆಯೋಗ’ ಎಂದೇ ಪರಿಚಿತವಾಗಿರುವ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP) ಅಧ್ಯಕ್ಷರನ್ನಾಗಿ ಮಾಧವ್ ಗಾಡ್ಗೀಳ್ ಅವರನ್ನು ನೇಮಿಸಿತು.
    • ಅವರು 2011ರ ತಮ್ಮ ವರದಿಯಲ್ಲಿ, 6 ರಾಜ್ಯಗಳಲ್ಲಿ ವ್ಯಾಪಿಸಿರುವ 1,40,000 ಚ.ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿನ 64% ಪ್ರದೇಶವನ್ನು “ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳು” (ESAs) ಎಂದು ವರ್ಗೀಕರಿಸುವಂತೆ ಶಿಫಾರಸು ಮಾಡಿದ್ದರು.
    • ಇದರಿಂದ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಬಿಸಿತಾಣಗಳು (ಹಾಟ್‌ಸ್ಪಾಟ್’) ಆಗಿರುವ ಮಹತ್ವ ಹಾಗೂ ಅವುಗಳನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಪ್ರಯತ್ನಗಳ ಕುರಿತು ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯಲು ಕಾರಣವಾಯಿತು.
    • ನೀಲಗಿರಿ- ಜೀವಗೋಳ ಮೀಸಲು ತಾಣ:- 1986ರಲ್ಲಿ ನೀಲಗಿರಿಯನ್ನು ಭಾರತದ ಮೊದಲ ಜೀವಗೋಳ ಮೀಸಲು ತಾಣವನ್ನಾಗಿ ಘೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
    • ನಂತರ ಅವರು ಜೈವಿಕ ವೈವಿಧ್ಯತೆ ಕಾಯ್ದೆ-2002 ಮತ್ತು ಅರಣ್ಯ ಹಕ್ಕುಗಳ ಕಾಯ್ದೆ-2006 ಅನ್ನು ರೂಪಿಸುವಲ್ಲಿ ನೆರವಾದರು.
    • ಅವರು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ರಾಷ್ಟ್ರೀಯ ಹುಲಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಶೈಕ್ಷಣಿಕ ಸಂಶೋಧನೆಯನ್ನು ತಳಮಟ್ಟದ ಪರಿಸರ ಚಳವಳಿಯೊಂದಿಗೆ ಯಶಸ್ವಿಯಾಗಿ ಬೆಸೆಯುವ ಕಾರ್ಯ ಮಾಡಿದರು.
    • ಅವರ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ (1992), ಪದ್ಮಭೂಷಣ (2006), ಪರಿಸರ ಸಾಧನೆಗಾಗಿ ನೀಡುವ ಟೈಲರ್ ಪ್ರಶಸ್ತಿ (2015) ಮತ್ತು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (UNEP) ನೀಡುವ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ (2024) ಸೇರಿದಂತೆ ಪ್ರಮುಖ ಗೌರವಗಳನ್ನು ನೀಡಿ ಪುರಸ್ಕರಿಸಲಾಗಿದೆ.
    • ಪಶ್ಚಿಮ ಘಟ್ಟಗಳಲ್ಲಿನ ಅವರ ಕಾರ್ಯಕ್ಕಾಗಿ-‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ:- ವಾರ್ಷಿಕವಾಗಿ ನೀಡಲಾಗುವ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. ಪಶ್ಚಿಮ ಘಟ್ಟಗಳಲ್ಲಿನ ಅವರ ಮಹತ್ವದ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
  • ಪ್ರವಾಸಿ ಭಾರತೀಯ ದಿವಸ್ – 18ನೇ ಆವೃತ್ತಿ | ಪನ್ಖುಡಿ ಪೋರ್ಟಲ್ (PANKHUDI Portal) | ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ | ಸ್ಪೈನಾ ಬಿಫಿಡಾ (Spina Bifida) | ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ ಅಮೆರಿಕದ ನಿರ್ಗಮನ | ಕಡಲ ಆಮೆಗಳ ಸಂರಕ್ಷಣೆಗೆ ನೆರವಾಗುವ ಸ್ಯಾಟಲೈಟ್ ಟ್ಯಾಗಿಂಗ್

    ಪ್ರವಾಸಿ ಭಾರತೀಯ ದಿವಸ್ – 18ನೇ ಆವೃತ್ತಿ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಎರಡು ವರ್ಷಗಳಿಗೊಮ್ಮೆ ಜನವರಿ 9 ರಂದು ಆಚರಿಸಲಾಗುತ್ತದೆ.

    ಪ್ರವಾಸಿ ಭಾರತೀಯ ದಿವಸ್ (PBD) ನ ಬಗ್ಗೆ:

    • ಉದ್ದೇಶ:- ಇದು ಭಾರತೀಯ ಅನಿವಾಸಿಯರು ತಮ್ಮ ತಾಯ್ನಾಡಿಗೆ ನೀಡಿದ ಅಮೋಘ ಕೊಡುಗೆಗಳನ್ನು ಗೌರವಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ.
    • ಐತಿಹಾಸಿಕ ಹಿನ್ನೆಲೇ:- ಇದು 1915ರಲ್ಲಿ ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವನ್ನು ಸಂಕೇತಿಸುತ್ತದೆ.
    • ಆಯೋಜಿಸುವವರು:- ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತದೆ. 
    • ಇದು 2015ರಿಂದ ದ್ವೈವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.

    ಭಾರತೀಯ ಅನಿವಾಸಿ ಸಮುದಾಯದ ಬಗ್ಗೆ:

    • ವ್ಯಾಖ್ಯಾನ:- ಈ ಸಮುದಾಯವು, ತಮ್ಮ ಮೂಲವನ್ನು ಭಾರತಕ್ಕೆ ಸಂಪರ್ಕಿಸಬಹುದಾದವರು ಅಥವಾ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ಒಳಗೊಂಡ ಜನರ ಗುಂಪು.
    • 2024ರ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಜಾಗತಿಕವಾಗಿ ಅನಿವಾಸಿ ಭಾರತೀಯ ಸಮುದಾಯದ ಸಂಖ್ಯೆ ಅಂದಾಜು 35.42 ದಶ ಲಕ್ಷ ಆಗಿದ್ದು, ಇದರಲ್ಲಿ 
    1. 15.85 ದಶ ಲಕ್ಷ ಅನಿವಾಸಿ ಭಾರತೀಯರು (NRIs) ಮತ್ತು 
    2. 19.57 ದಶ ಲಕ್ಷ ಭಾರತೀಯ ಮೂಲದ ವ್ಯಕ್ತಿಗಳು (PIOs) ಸೇರಿದ್ದಾರೆ.
    • ಭಾರತೀಯ ಅನಿವಾಸಿಗಳು ವಾಸಿಸುತ್ತಿರುವ ಪ್ರಮುಖ 5 ರಾಷ್ಟ್ರಗಳು:- 
    • ಅಮೆರಿಕ ಸಂಯುಕ್ತ ರಾಷ್ಟ್ರ (USA): 5.4 ದಶ ಲಕ್ಷ
    1. ಅರಬ್ ಸಂಯುಕ್ತ ಸಂಸ್ಥಾನ (UAE): 3.6 ದಶ ಲಕ್ಷ
    2. ಮಲೇಷ್ಯಾ: 2.9 ದಶ ಲಕ್ಷ
    3. ಕೆನಡಾ: 2.8 ದಶ ಲಕ್ಷ 
    4. ಸೌದಿ ಅರೇಬಿಯಾ: 2.4 ದಶ ಲಕ್ಷ
    • ವಿಶ್ವಸಂಸ್ಥೆಯ ಜಾಗತಿಕ ವಲಸೆ ವರದಿ, 2024ರ ಪ್ರಕಾರ, ಸುಮಾರು 18 ದಶ ಲಕ್ಷ ಜನರನ್ನು ಹೊಂದುವ ಮೂಲಕ, ಜಗತ್ತಿನಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ವಲಸಿಗರನ್ನು ಹೊಂದಿರುವ ಮೂಲ ದೇಶ ಭಾರತವಾಗಿದೆ.

    ಅನಿವಾಸಿ ಸಮುದಾಯದ ಮಹತ್ವ:

    • ವಿದೇಶದಿಂದ $129.1 ಬಿಲಿಯನ್ ಹಣಕಾಸು ರವಾನೆ (Remittances): 2024ರಲ್ಲಿ, ಭಾರತವು ಅಂದಾಜು $129.1 ಬಿಲಿಯನ್ ಮೌಲ್ಯದ ಹಣವನ್ನು ಸ್ವೀಕರಿಸಿದ್ದು, ಇದು ಯಾವುದೇ ಒಂದು ವರ್ಷದಲ್ಲಿ ದೇಶವೊಂದು ಪಡೆದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ.
    • ಹಣಕಾಸು ರವಾನೆ 14.3% ರಷ್ಟಿದೆ:- 2025ರಲ್ಲಿ ಜಾಗತಿಕವಾಗಿ ರವಾನೆಯಾದ ಒಟ್ಟು ಹಣದಲ್ಲಿ ಭಾರತದ ಪಾಲು 14.3% ರಷ್ಟಿದ್ದು, ಇದು ಈ ಸಹಸ್ರಮಾನದ ಆರಂಭದಿಂದ ಯಾವುದೇ ದೇಶವು ಹೊಂದಿದ ಅತ್ಯಧಿಕ ಪಾಲಾಗಿದೆ.
    • ವಿದೇಶಿ ವಿನಿಮಯ ಮೀಸಲು:- ಅನಿವಾಸಿ ಭಾರತೀಯರು ದೇಶದ ವಿದೇಶಿ ವಿನಿಮಯ ಮೀಸಲು ಮತ್ತು ಗ್ರಾಮೀಣ ಕುಟುಂಬಗಳ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಾರೆ.
    • ಹೂಡಿಕೆ ಮತ್ತು ವ್ಯಾಪಾರ: ಅನಿವಾಸಿ ಭಾರತೀಯರು (NRIs) ಮತ್ತು ಭಾರತೀಯ ಮೂಲದ ವ್ಯಕ್ತಿಗಳು (PIOs) ಭಾರತೀಯ ರಿಯಲ್ ಎಸ್ಟೇಟ್, ನವೋದ್ಯಮಗಳು ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ ಹಾಗೂ ಭಾರತ ಮತ್ತು ತಾವು ವಾಸಿಸುವ ದೇಶಗಳ ನಡುವೆ ವ್ಯಾಪಾರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.
    • ತಂತ್ರಜ್ಞಾನ ಮತ್ತು ಆವಿಷ್ಕಾರ: ಸಿಲಿಕಾನ್ ವ್ಯಾಲಿ, ಶೈಕ್ಷಣಿಕ ವಲಯ ಮತ್ತು ಜಾಗತಿಕ ಕಂಪನಿಗಳಲ್ಲಿರುವ ಭಾರತೀಯ ಮೂಲದ ಪರಿಣಿತರು ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ಹೊಸ ಆವಿಷ್ಕಾರಗಳಿಗೆ ಬೆಂಬಲ ನೀಡುವ ಮೂಲಕ ಕೊಡುಗೆ ನೀಡುತ್ತಿದ್ದಾರೆ.
    • ಸಾಂಸ್ಕೃತಿಕ ರಾಯಭಾರಿಗಳು:- ಅನಿವಾಸಿ ಸಮುದಾಯವು ಜಾಗತಿಕವಾಗಿ ಭಾರತೀಯ ಭಾಷೆಗಳು, ಯೋಗ, ಆಹಾರ ಪದ್ಧತಿ, ಸಿನಿಮಾ ಮತ್ತು ಹಬ್ಬಗಳನ್ನು ಉತ್ತೇಜಿಸುತ್ತದೆ.
    • ವಿದೇಶಾಂಗ ನೀತಿ ಪ್ರತಿಪಾದನೆ:- ಭಾರತೀಯ ಅನಿವಾಸಿ ಸಮುದಾಯಗಳು ತಾವು ನೆಲೆಸಿರುವ ರಾಷ್ಟ್ರಗಳಲ್ಲಿ ಭಾರತದ ಪರವಾಗಿ ವಿದೇಶಾಂಗ ನೀತಿಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ.
    • ನಾಗರಿಕ ರಾಜತಾಂತ್ರಿಕತೆ: ದ್ವಿಪಕ್ಷೀಯ ಉದ್ವಿಗ್ನತೆಗಳು ಅಥವಾ ಮಾಧ್ಯಮಗಳಲ್ಲಿ ನಕಾರಾತ್ಮಕ ವರದಿಗಳು ಕಂಡುಬಂದಾಗ, ಅನಿವಾಸಿ ಭಾರತೀಯ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಸರಾಗಗೊಳಿಸಲು ಮತ್ತು ವಿಶ್ವಾಸವನ್ನು ಮರುಸ್ಥಾಪಿಸಲು ಭಾರತಕ್ಕೆ ನೆರವಾಗುತ್ತದೆ.
    • ಜಾಗತಿಕ ಮನ್ನಣೆ: ವಿವಿಧ ಕ್ಷೇತ್ರಗಳಲ್ಲಿ ಅನಿವಾಸಿ ಭಾರತೀಯರ ಸಾಧನೆಗಳು, ಭಾರತವನ್ನು ‘ಪ್ರತಿಭೆ ಮತ್ತು ಅವಕಾಶಗಳ ಕೇಂದ್ರ’ವನ್ನಾಗಿ ಬಿಂಬಿಸುತ್ತವೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹೆಚ್ಚಿಸಲು ಕಾರಣವಾಗಿದೆ.

    ಪನ್ಖುಡಿ ಪೋರ್ಟಲ್ (PANKHUDI Portal)

    ಸಾಮಾನ್ಯ ಅಧ್ಯಯನ-1/ ಮಹಿಳಾ ಸಬಲೀಕರಣ

    ಇದೀಗ ಸುದ್ದಿಯಲ್ಲಿದೆ:

    • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು “ಪನ್ಖುಡಿ ಪೋರ್ಟಲ್” (PANKHUDI Portal) ಅನ್ನು ಲೋಕಾರ್ಪಣೆ ಮಾಡಿದೆ.

    ‘ಪನ್ಖುಡಿ ಪೋರ್ಟಲ್’ ನ ಬಗ್ಗೆ:

    • ಇದೊಂದು ಸಮಗ್ರ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಮತ್ತು ಪಾಲುದಾರಿಕೆ ಸೌಲಭ್ಯವನ್ನು ಸುಗಮಗೊಳಿಸುವ ಡಿಜಿಟಲ್ ಪೋರ್ಟಲ್ ಆಗಿದೆ.
    • ಉದ್ದೇಶ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮಗಳಲ್ಲಿ ಪಾಲುದಾರರ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಸಮನ್ವಯತೆಯನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿದೆ.
    • ಸಚಿವಾಲಯ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

    ಪ್ರಮುಖ ಲಕ್ಷಣಗಳು:

    • ಒಂದೇ ಕಿಟಕಿಯ ಡಿಜಿಟಲ್ ವೇದಿಕೆ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಅನಿವಾಸಿ ಭಾರತೀಯರು (NRIs), ಸರ್ಕಾರೇತರ ಸಂಸ್ಥೆಗಳು (NGOs), ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ದಾನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ “ಒಂದೇ ಕಿಟಕಿಯ ಡಿಜಿಟಲ್ ವೇದಿಕೆ”ಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
    • ಸಚಿವಾಲಯದ ಪ್ರಮುಖ ಯೋಜನೆಗಳಿಗೆ ಬೆಂಬಲ:- ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0, ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿಯ ಅನುಷ್ಠಾನವನ್ನು ಒಂದು ವ್ಯವಸ್ಥಿತ ಮತ್ತು ಪಾರದರ್ಶಕ ಡಿಜಿಟಲ್ ವ್ಯವಸ್ಥೆಯ ಮೂಲಕ ಬೆಂಬಲಿಸುತ್ತದೆ ಮತ್ತು ಬಲಪಡಿಸುತ್ತದೆ.

    ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಉಪಕ್ರಮಗಳ ಬಗ್ಗೆ:

    • ಸಮಗ್ರ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮ:- ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮತ್ತು ಬಾಲ್ಯದ ಆರಂಭಿಕ ಬೆಳವಣಿಗೆಯನ್ನು ಸುಧಾರಿಸಲು ಕೇಂದ್ರೀಕರಿಸಿದ ಕಾರ್ಯಕ್ರಮವಾಗಿದೆ.
    • ಫಲಾನುಭವಿಗಳು:- 
    1. ಮಕ್ಕಳು (0–6 ವರ್ಷ), 
    2. ಕಿಶೋರಿಯರು (14–18 ವರ್ಷ)
    3. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು.

    ಮಿಷನ್ ವಾತ್ಸಲ್ಯ ಉಪಕ್ರಮದ ಬಗ್ಗೆ:

    • ಇದು ಮಕ್ಕಳ ಸಂರಕ್ಷಣೆ ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿರುವ ಮಕ್ಕಳ ಕಲ್ಯಾಣದ ಮೇಲೆ ಕೇಂದ್ರೀಕರಿಸುತ್ತದೆ. 
    • ಧ್ಯೇಯವಾಕ್ಯ:- “ಯಾವುದೇ ಮಗು ಹಿಂದೆ ಉಳಿಯಬಾರದು”.
    • ಉದ್ದೇಶಗಳು:- ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಮತ್ತು ಪೋಕ್ಸೊ ಕಾಯ್ದೆ, 2012 ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದಾಯಕ ಬಾಲ್ಯವನ್ನು ಖಚಿತಪಡಿಸುವುದು.

    ಮಿಷನ್ ಶಕ್ತಿ ಉಪಕ್ರಮದ ಬಗ್ಗೆ:

    • ಇದು ಮಹಿಳೆಯರ ಸುರಕ್ಷತೆ, ರಕ್ಷಣೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಮೀಸಲಾದ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು 2 ಉಪ- ಯೋಜನೆಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ,
    1. ಸಂಬಲ್ (ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ)
    2. ಸಾಮರ್ಥ್ಯ (ಮಹಿಳೆಯರ ಸಬಲೀಕರಣ)
    1. ಸಂಬಲ್ (ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ):
    • “ಸಖಿ” – ಒಂದೇ ಸ್ಥಳದಲ್ಲೇ ಎಲ್ಲಾ ಸೇವೆಗಳನ್ನು ಒದಗಿಸುವ ಕೇಂದ್ರಗಳು (OSC):- ಹಿಂಸೆಗೆ ಒಳಗಾದ ಸಂತ್ರಸ್ತೆಯರಿಗೆ ಸಮಗ್ರ ಬೆಂಬಲ ನೀಡುವುದು.
    • ಮಹಿಳಾ ಸಹಾಯವಾಣಿ (181):- 24/7 ತುರ್ತು ನೆರವು ಒದಗಿಸುವುದು.
    • “ಬೇಟಿ ಬಚಾವೋ ಬೇಟಿ ಪಢಾವೋ” (BBBP):- ಲಿಂಗ ಆಧಾರಿತ ಭ್ರೂಣ ಹತ್ಯೆ ತಡೆಗಟ್ಟುವಿಕೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು. 
    • ನಾರಿ ಅದಾಲತ್:- ಸಮುದಾಯ ಮಟ್ಟದ ಪರ್ಯಾಯ ವಿವಾದ ಪರಿಹಾರ ವೇದಿಕೆಗಳು.
    1. ಸಾಮರ್ಥ್ಯ (ಮಹಿಳೆಯರ ಸಬಲೀಕರಣ):
    • “ಶಕ್ತಿ ಸದನ”:- ಪುನರ್ವಸತಿ ಕೇಂದ್ರಗಳು (ಹಿಂದಿನ ಸ್ವಧಾರ್ ಗೃಹ ಮತ್ತು ಉಜ್ವಲ ಯೋಜನೆಗಳನ್ನು ವಿಲೀನಗೊಳಿಸಿ ರಚಿಸಲಾಗಿದೆ).
    • “ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ” (PMMVY): ಇದು ಹೆರಿಗೆ ಸೌಲಭ್ಯ ಯೋಜನೆಯಾಗಿದೆ.
    • ಮಹಿಳಾ ಸಬಲೀಕರಣ ಕೇಂದ್ರ (HEW):- ಇವು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ನೆರವಾಗುವ ಕೇಂದ್ರಗಳಾಗಿವೆ.

    ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾಗಿ ಖರೀದಿಸುವ ರಾಷ್ಟ್ರಗಳ ಮೇಲೆ 500% ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುವ ‘ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ’ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನುಮೋದನೆ ನೀಡಿದ್ದಾರೆ.

    ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆಯ ಬಗ್ಗೆ:

    • ಉದ್ದೇಶ:- ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಅಗ್ಗದ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಮಾಡಲು, ಈ ಮಸೂದೆಯು ಅಮೆರಿಕಕ್ಕೆ ಆ ದೇಶಗಳ ವಿರುದ್ಧ ಅಪಾರವಾದ ಹಿಡಿತವನ್ನು ಒದಗಿಸುತ್ತದೆ.
    • ಹಿನ್ನೆಲೇ:- 2018ರಲ್ಲಿ, ಹಿಂದಿನ ಟ್ರಂಪ್ ಆಡಳಿತದ ಇದೇ ರೀತಿಯ ಒತ್ತಡದ ಪರಿಣಾಮವಾಗಿ, ಭಾರತವು ಇರಾನ್ ಮತ್ತು ವೆನೆಜುವೆಲಾದಿಂದ ತನ್ನ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. 

    ಭಾರತದ ಮೇಲಿನ ಸುಂಕಗಳು: 

    • 50% ರಷ್ಟು ಅಧಿಕ ಸುಂಕ:- ಅಮೆರಿಕ ಸಂಯುಕ್ತ ರಾಷ್ಟ್ರವು ಭಾರತದ ಸರಕುಗಳ ಮೇಲೆ 50% ರಷ್ಟು ಅಧಿಕ ಸುಂಕಗಳನ್ನು ವಿಧಿಸಿದೆ.
    • ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದರ ಪರಿಣಾಮವಾಗಿ, ಈ ಸುಂಕವು ಇದರ ಒಂದು ಭಾಗವಾಗಿದೆ.

    ಭಾರತದ ನಿಲುವು:

    • ರಾಷ್ಟ್ರೀಯ ಹಿತಾಸಕ್ತಿ:- ರಷ್ಯಾದಿಂದ ತೈಲವನ್ನು ಖರೀದಿಸುವ ನಿರ್ಧಾರವು ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಆಧರಿಸಿದೆ ಎಂದು ಭಾರತ ಪ್ರತಿಪಾದಿಸಿದೆ.
    • ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ತನ್ನ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

    ಸ್ಪೈನಾ ಬಿಫಿಡಾ (Spina Bifida)

    ಸಾಮಾನ್ಯ ಅಧ್ಯಯನ-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಫೋಲಿಕ್ ಆಮ್ಲದ ಪೂರಕ ಸೇವನೆಯ ಮೂಲಕ ‘ಸ್ಪೈನಾ ಬಿಫಿಡಾ’ ದೋಷವನ್ನು ತಡೆಗಟ್ಟಲು, ಹಲವು ರಾಷ್ಟ್ರಗಳು ರಾಷ್ಟ್ರೀಯ ಜಾಗೃತಿ ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

    ‘ಸ್ಪೈನಾ ಬಿಫಿಡಾ’ ದೋಷದ ಬಗ್ಗೆ:

    • ಬೆನ್ನುಹುರಿಯ ಒಂದು ಜನ್ಮಜಾತ ದೋಷ:- ಕಾರಣ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ನರ ಕೊಳವೆ ಸರಿಯಾಗಿ ಮುಚ್ಚಲ್ಪಡದಿರುವುದರಿಂದ ಉಂಟಾಗುವ ದೋಷವಾಗಿದೆ.
    • ದೈಹಿಕ ವೈಫಲ್ಯ:- ಈ ದೋಷವು ಪಾದಗಳ ಸೌಮ್ಯ ದೌರ್ಬಲ್ಯದಿಂದ ಹಿಡಿದು, ದೇಹದ ಕೆಳಭಾಗದ ಅಂಗಗಳ ಸಂಪೂರ್ಣ ಪಾರ್ಶ್ವವಾಯುವಿನವರೆಗೆ ವಿವಿಧ ಹಂತದ ದೈಹಿಕ ವೈಫಲ್ಯಗಳಿಗೆ ಕಾರಣವಾಗಬಹುದು.
    • ಪರಿಣಾಮ:- ಇದರಿಂದ ಬಳಲುವ ಅನೇಕ ಮಕ್ಕಳು ಹೈಡ್ರೋಸೆಫಾಲಸ್ (ಮೆದುಳಿನಲ್ಲಿ ದ್ರವ ತುಂಬಿಕೊಳ್ಳುವುದು), ಮಲ ಮತ್ತು ಮೂತ್ರ ವಿಸರ್ಜನೆಯ ಮೇಲಿನ ನಿಯಂತ್ರಣ ಕಳೆದುಕೊಳ್ಳುವಿಕೆ ಮತ್ತು ವಕ್ರಪಾದ (ಕ್ಲಬ್‌ಫೂಟ್‌) ದಂತಹ  ಮೂಳೆ ಸಂಬಂಧಿತ ವಿರೂಪಗಳ ಸಮಸ್ಯೆಗಳನ್ನು ಎದುರಿಸುತ್ತಾರೆ.

    ತಡೆಗಟ್ಟುವಿಕೆಯಲ್ಲಿ ಫೋಲಿಕ್ ಆಮ್ಲದ ಪಾತ್ರ:

    • 70% ಕ್ಕೂ ಹೆಚ್ಚು ಸ್ಪೈನಾ ಬಿಫಿಡಾ ಪ್ರಕರಣಗಳನ್ನು ತಡೆಗಟ್ಟಬಹುದು:- ಗರ್ಭಧಾರಣೆಗೂ ಮುನ್ನ ಮತ್ತು ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಫೋಲಿಕ್ ಆಮ್ಲವನ್ನು ಸೇವಿಸುವುದರಿಂದ 70% ಕ್ಕೂ ಹೆಚ್ಚು ಸ್ಪೈನಾ ಬಿಫಿಡಾ ಪ್ರಕರಣಗಳನ್ನು ತಡೆಗಟ್ಟಬಹುದು.
    • ‘ಬಿ-ಕಾಂಪ್ಲೆಕ್ಸ್’ ಜೀವಸತ್ವ:- ಫೋಲಿಕ್ ಆಮ್ಲವು ‘ಬಿ-ಕಾಂಪ್ಲೆಕ್ಸ್’ ಗುಂಪಿಗೆ ಸೇರಿದ ಜೀವಸತ್ವವಾಗಿದ್ದು, ಭ್ರೂಣದಲ್ಲಿ ನರ ಕೊಳವೆಯ ಬೆಳವಣಿಗೆಗೆ ಇದು ಅತ್ಯಗತ್ಯವಾಗಿದೆ.

    ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ ಅಮೆರಿಕದ ನಿರ್ಗಮನ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಅಮೆರಿಕ ಸಂಯುಕ್ತ ರಾಷ್ಟ್ರವು ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ (ISA) ನಿರ್ಗಮಿಸುವುದಾಗಿ ಘೋಷಿಸಿದೆ.

    ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)ದ ಬಗ್ಗೆ:

    • ಭಾರತದ ನೇತೃತ್ವದ ಉಪಕ್ರಮ:- ಇದನ್ನು ನವೆಂಬರ್ 30, 2015 ರಂದು ಪ್ಯಾರಿಸ್‌ನಲ್ಲಿ ಭಾರತದ ಪ್ರಧಾನ ಮಂತ್ರಿಗಳು ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಉದ್ಘಾಟಿಸಿದರು/ಸ್ಥಾಪಿಸಿದರು.
    • ಸೌರಶಕ್ತಿ ಹೇರಳ ರಾಷ್ಟ್ರಗಳು:- ಇದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ನೆಲೆಗೊಂಡಿರುವ, ಸೌರ ಸಂಪನ್ಮೂಲವು ಹೇರಳವಾಗಿರುವ 124 ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಉಪಕ್ರಮವಾಗಿದೆ.
    • ಉದ್ದೇಶ:- ಸದಸ್ಯ ರಾಷ್ಟ್ರಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವಲ್ಲಿ ಎದುರಾಗುವ ಪ್ರಮುಖ ಸಾಮಾನ್ಯ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸುವುದು.
    • ಕೇಂದ್ರ ಕಚೇರಿ:- ಗುರುಗ್ರಾಮದಲ್ಲಿರುವ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE)
    • ಸದಸ್ಯತ್ವ:- ISAಯ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿ ಮತ್ತು ಅದನ್ನು ದೃಢೀಕರಿಸಿದ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ.
    • ಪ್ರಸ್ತುತ, 120 ದೇಶಗಳು ISA ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿವೆ.

    ಕಡಲ ಆಮೆಗಳ ಸಂರಕ್ಷಣೆಗೆ ನೆರವಾಗುವ ಸ್ಯಾಟಲೈಟ್ ಟ್ಯಾಗಿಂಗ್

    ಸಾಮಾನ್ಯ ಅಧ್ಯಯನ-3/ ಸುದ್ದಿಯಲ್ಲಿರುವ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ಎರಡು ವರ್ಷಗಳ (2025–27) ದೂರಮಾಪನ (ಟೆಲಿಮೆಟ್ರಿ) ಅಧ್ಯಯನದ ಭಾಗವಾಗಿ, ಚೆನ್ನೈ ಕರಾವಳಿಯಲ್ಲಿ ಮೊಟ್ಟೆಯಿಡುವ “ಆಲಿವ್ ರಿಡ್ಲಿ ಕಡಲ ಆಮೆ”ಗಳಿಗೆ ಇದೇ ಮೊದಲ ಬಾರಿಗೆ ಸ್ಯಾಟಲೈಟ್ ಟ್ಯಾಗ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ.
    • ಇದು ಪ್ರಮುಖ ತಾಣಗಳಲ್ಲಿ ಆಮೆಗಳ ಚಲನವಲನಗಳು, ಮೊಟ್ಟೆಯಿಡುವ ವರ್ತನೆ, ವಲಸೆ ಮಾರ್ಗಗಳು ಮತ್ತು ಮೀನುಗಾರಿಕೆ ಚಟುವಟಿಕೆಗಳೊಂದಿಗಿನ ಅವುಗಳ ಅಂತರಕ್ರಿಯೆಗಳನ್ನು ಪತ್ತೆಹಚ್ಚುತ್ತದೆ.

    ಆಲಿವ್ ರಿಡ್ಲಿ ಆಮೆಗಳ (ಲೆಪಿಡೊಚೆಲಿಸ್ ಒಲಿವಾಸಿಯಾ) ಬಗ್ಗೆ:

    • ಅತ್ಯಂತ ಚಿಕ್ಕದಾದ ಮತ್ತು ಅತ್ಯಂತ ಹೆಚ್ಚು ಸಂಖ್ಯೆ:- ಇವು ವಿಶ್ವದ ಎಲ್ಲಾ ಕಡಲ ಆಮೆಗಳ ಪೈಕಿ ಅತ್ಯಂತ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಆಮೆಗಳಾಗಿವೆ.
    • ಈ ಹೆಸರು ಬರಲು ಕಾರಣ:- ತಮ್ಮ ಹೃದಯದ ಆಕಾರದ ಚಿಪ್ಪಿನ ಆಲಿವ್ ಹಸಿರು ಬಣ್ಣದಿಂದಾಗಿ ಇವುಗಳಿಗೆ ಈ ಹೆಸರು ಬಂದಿದೆ.
    • ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರಿನಲ್ಲಿ ವಾಸಿಸುತ್ತವೆ.
    • ಮಾಂಸಾಹಾರಿಗಳು:- ಮುಖ್ಯವಾಗಿ ಜೆಲ್ಲಿ ಮೀನು, ಸೀಗಡಿ ಇತ್ಯಾದಿಗಳನ್ನು ಸೇವಿಸುತ್ತವೆ.
    • ‘ಅರಿಬಾಡ’:- ಸಾವಿರಾರು ಹೆಣ್ಣು ಆಮೆಗಳು ಮೊಟ್ಟೆಯಿಡಲು ಒಂದೇ ಕಡಲತೀರದಲ್ಲಿ ಒಟ್ಟಿಗೆ ಸೇರುವ ‘ಅರಿಬಾಡ’ ಎಂದು ಕರೆಯಲ್ಪಡುವ ವಿಶಿಷ್ಟ ಸಾಮೂಹಿಕ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಈ ಆಮೆಗಳು ಹೆಸರುವಾಸಿಯಾಗಿವೆ.
    • ಭಾರತದಲ್ಲಿರುವ ಪ್ರಮುಖ ಮೊಟ್ಟೆಯಿಡುವ ತಾಣಗಳು:- 
    • ಋಷಿಕುಲ್ಯ ರೂಕರಿ ಕರಾವಳಿ (ಒಡಿಶಾ),
    • ಗಹಿರ್ಮಾತಾ ಕಡಲತೀರ (ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನ) 
    • ದೇಬಿ ನದಿಯ ಮುಖಜ ಭೂಮಿ.
    • ಒಡಿಶಾ ರಾಜ್ಯವು ಆಲಿವ್ ರಿಡ್ಲಿ ಆಮೆಗಳ ವಿಶ್ವದ ಅತಿದೊಡ್ಡ ಸಾಮೂಹಿಕ ಮೊಟ್ಟೆಯಿಡುವ ತಾಣವಾಗಿದೆ.
    • ಸಂರಕ್ಷಣಾ ಸ್ಥಾನಮಾನ:
      • IUCN ಕೆಂಪು ಪಟ್ಟಿ: ದುರ್ಬಲ (VU)
      • CITES: ಅನುಸೂಚಿ I
  • ಹಂಟಿಂಗ್‌ಟನ್ ಕಾಯಿಲೆ (Huntington’s Disease) | ಪಾವತಿ ನಿಯಂತ್ರಣ ಮಂಡಳಿ (PRB) | ತಾಜ್ ತ್ರಾಪಿಜ್ಯ/ಟ್ರಾಪೆಜಿಯಂ ವಲಯ (TTZ)

    ಹಂಟಿಂಗ್‌ಟನ್ ಕಾಯಿಲೆ (Huntington’s Disease)

    ಸಾಮಾನ್ಯ ಅಧ್ಯಯನ-2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಭಾರತದಲ್ಲಿ ಹಂಟಿಂಗ್‌ಟನ್ ಕಾಯಿಲೆಯು ಸೀಮಿತ ಅರಿವು ಮತ್ತು ವಿಳಂಬವಾದ ರೋಗನಿರ್ಣಯದಿಂದಾಗಿ, ಸಮರ್ಪಕವಾಗಿ ಪತ್ತೆಯಾಗದೇ ಉಳಿದಿದೆ ಎಂಬ ವಿಷಯವನ್ನು ಗುರುತಿಸಲಾಗುತ್ತಿದೆ.

    ಹಂಟಿಂಗ್‌ಟನ್ ಕಾಯಿಲೆ (HD)ಯ ಬಗ್ಗೆ:

    • ಇದು ಮೆದುಳಿನ ಮೇಲೆ ಪರಿಣಾಮ ಬೀರುವ ಅಪರೂಪದ, ಹಂತ ಹಂತವಾಗಿ ಉಲ್ಬಣಗೊಳ್ಳುವ, ಅನುವಂಶಿಕ ನರಕ್ಷಯ ಕಾಯಿಲೆಯಾಗಿದೆ. 
    • ಪರಿಣಾಮ:- ಚಲನಾ ವೈಫಲ್ಯ, ಬೌದ್ಧಿಕ ಕ್ಷಮತೆ ಕುಸಿತ ಮತ್ತು ಮಾನಸಿಕ ಅಡಚಣೆಗಳಿಗೆ (ಖಿನ್ನತೆ, ಮನೋವಿಕಾರ, ಸಿಡುಕುತನ, ಒ.ಸಿ.ಡಿ) ಹಾಗೂ ಜೀವಮಾನದ ಅಸಾಮರ್ಥ್ಯಕ್ಕೆ ಎಡೆಮಾಡಿಕೊಡುತ್ತದೆ.
    • ಕಾರಣ:- ಈ ಕಾಯಿಲೆಯು ಹಂಟಿಂಗ್‌ಟಿನ್ (HTT) ವಂಶವಾಹಿಯಲ್ಲಿನ ರೂಪಾಂತರದಿಂದ ಉಂಟಾಗುತ್ತದೆ. 
    • ಇದು ‘ಆಟೋಸೋಮಲ್ ಡಾಮಿನೆಂಟ್’ (ದೈಹಿಕ ಪ್ರಬಲ) ಆನುವಂಶಿಕ ಮಾದರಿಯನ್ನು ಅನುಸರಿಸುತ್ತದೆ. ಅಂದರೆ, ತಂದೆ ಅಥವಾ ತಾಯಿಯಿಂದ ರೂಪಾಂತರಗೊಂಡ ವಂಶವಾಹಿಯನ್ನು ಅನುವಂಶಿಕವಾಗಿ ಪಡೆಯುವ ಮಗುವಿಗೆ ಈ ಕಾಯಿಲೆ ಬರುತ್ತದೆ.
    • ರಕ್ತಸಂಬಂಧಿಗಳ ನಡುವಿನ ವಿವಾಹಗಳು:- ಈ ಕಾಯಿಲೆ ಹರಡುವ ಸಾಧ್ಯತೆಯನ್ನು 75% ರಷ್ಟು ಗಣನೀಯವಾಗಿ ಹೆಚ್ಚಿಸುತ್ತವೆ.
    • ರೋಗಲಕ್ಷಣಗಳು ಸಾಮಾನ್ಯವಾಗಿ 40 ಮತ್ತು 50 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತವೆ ಮತ್ತು 15–20 ವರ್ಷಗಳ ಅವಧಿಯವರೆಗೆ ಉಲ್ಬಣಗೊಳ್ಳುತ್ತವೆ.
    • ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿ ಲಭ್ಯವಿಲ್ಲ:- ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರೈಕೆದಾರರ ಹೊರೆಯನ್ನು ತಗ್ಗಿಸಲು ಚಿಕಿತ್ಸೆಗಳು ಲಭ್ಯವಿವೆ.

    ನೀತಿ ದೃಷ್ಟಿಕೋನ:

    • ಅಪರೂಪದ ಕಾಯಿಲೆಗಳ ವ್ಯಾಖ್ಯಾನ:- ವಿಶ್ವ ಆರೋಗ್ಯ ಸಂಸ್ಥೆಯು (WHO), ಪ್ರತಿ 1,000 ಜನರಲ್ಲಿ 1 ಅಥವಾ ಅದಕ್ಕಿಂತ ಕಡಿಮೆ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಗಳನ್ನು ಅಪರೂಪದ ಕಾಯಿಲೆಗಳೆಂದು ವ್ಯಾಖ್ಯಾನಿಸುತ್ತದೆ. 
    • ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ:- ಜಾಗತಿಕವಾಗಿ 7,000ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳು ಅಸ್ತಿತ್ವದಲ್ಲಿದ್ದರೂ, 5% ಕ್ಕಿಂತ ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆಯ ಆಯ್ಕೆಗಳಿವೆ.

    ಅಪರೂಪದ ಕಾಯಿಲೆಗಳಿಗೆ ರಾಷ್ಟ್ರೀಯ ನೀತಿಯನ್ನು (NPRD), 2021

    • ಉದ್ದೇಶ:- ಅಪರೂಪದ ಕಾಯಿಲೆಗಳ ಗುರುತಿಸುವಿಕೆ, ತಡೆಗಟ್ಟುವಿಕೆ ಮತ್ತು ಅಂತಹ ಕಾಯಿಲೆಗಳಿರುವ ಕುಟುಂಬಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
    • 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ:- ಈ ನೀತಿಯು ಭಾರತದಲ್ಲಿ 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ, ಆದರೆ ಹಂಟಿಂಗ್‌ಟನ್ ಕಾಯಿಲೆಯನ್ನು ಇದರಲ್ಲಿ ಸೇರಿಸಲಾಗಿಲ್ಲ.
    • ಗುರುತಿಸಲಾದ 63 ಕಾಯಿಲೆಗಳಲ್ಲಿ ಯಾವುದಾದರೂ ಕಾಯಿಲೆ ಹೊಂದಿರುವ ರೋಗಿಗಳು ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PM-JAY)ಯ ಅಡಿಯಲ್ಲಿ ₹50 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುತ್ತಾರೆ.

    ಪಾವತಿ ನಿಯಂತ್ರಣ ಮಂಡಳಿ (PRB)

    ಸಾಮಾನ್ಯ ಅಧ್ಯಯನ-3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ‘ಭಾರತೀಯ ರಿಸರ್ವ್ ಬ್ಯಾಂಕ್’(RBI)ನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಪಾವತಿ ನಿಯಂತ್ರಣ ಮಂಡಳಿ (PRB)ಯ ಮೊದಲ ಸಭೆ ನಡೆಯಿತು. ಇದು ಭಾರತದ ಹೊಸ ಪಾವತಿ ಆಡಳಿತ ಚೌಕಟ್ಟಿನ ಕಾರ್ಯಾರಂಭವನ್ನು ಸೂಚಿಸುತ್ತದೆ.

    ‘ಪಾವತಿ ನಿಯಂತ್ರಣ ಮಂಡಳಿ’ (Payment Regulatory Board)ಯ ಬಗ್ಗೆ:

    • ಶಾಸನಬದ್ಧ ಸಂಸ್ಥೆ:- ಇದೊಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದರ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿನ ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ ಮೇಲೆ ನಿಯಂತ್ರಣ ಮತ್ತು ಮೇಲ್ವಿಚಾರಣಾ ಅಧಿಕಾರವನ್ನು ಚಲಾಯಿಸುತ್ತದೆ.
    • ಸ್ಥಾಪನೆ:- ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ (PSS) ಕಾಯ್ದೆ, 2007ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
    • ಧ್ಯೇಯೋದ್ದೇಶ:- ಡಿಜಿಟಲ್ ಮತ್ತು ನಗದು ರಹಿತ ಪಾವತಿಗಳಲ್ಲಿ ಸುರಕ್ಷತೆ, ದಕ್ಷತೆ, ಸ್ಥಿರತೆ ಮತ್ತು ಗ್ರಾಹಕರ ರಕ್ಷಣೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

    ತಾಜ್ ತ್ರಾಪಿಜ್ಯ/ಟ್ರಾಪೆಜಿಯಂ ವಲಯ (TTZ)

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ತಾಜ್ ಟ್ರಾಪೆಜಿಯಂ ವಲಯದಲ್ಲಿ (TTZ) ಪರಿಸರ ನಿಯಮಗಳ ಪಾಲನೆಯಾಗದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು  ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ಜಾರಿ ಮಾಡಿದೆ.

    ತಾಜ್ ತ್ರಾಪಿಜ್ಯ/ ಟ್ರಾಪೆಜಿಯಂ ವಲಯ (TTZ)ದ ಬಗ್ಗೆ:

    • ಉದ್ದೇಶ:- ಇದು ತಾಜ್ ಮಹಲ್, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ (ಇವೆಲ್ಲವೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು) ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ರೂಪಿಸಲಾದ, 10,400 ಚದರ ಕಿ.ಮೀ. ವಿಸ್ತೀರ್ಣದ ತ್ರಾಪಿಜ್ಯ ಆಕಾರದ ಪರಿಸರ ಸಂರಕ್ಷಣಾ ವಲಯದ ಪ್ರದೇಶವಾಗಿದೆ.
    • ಇದು ಕೈಗಾರಿಕಾ ಮಾಲಿನ್ಯವನ್ನು ನಿಯಂತ್ರಿಸಲು ವಿಶೇಷ ನಿಯಮಗಳನ್ನು ಹೊಂದಿದೆ.
    • ಸ್ಥಾಪನೆ:- ತಾಜ್ ಮಹಲ್ ಮೇಲೆ ಪರಿಣಾಮ ಬೀರುವ ಮಾಲಿನ್ಯವನ್ನು ನಿಯಂತ್ರಿಸಲು 1996ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಸ್ಥಾಪಿಸಿತು.
    • ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ:- TTZ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಕಲ್ಲಿದ್ದಲು ಮತ್ತು ಕೋಕ್ ಬಳಕೆಯನ್ನು ನಿಲ್ಲಿಸಿ, ನೈಸರ್ಗಿಕ ಅನಿಲದಂತಹ ಶುದ್ಧ ಇಂಧನಗಳ ಬಳಕೆಗೆ ಬದಲಾಗುವಂತೆ ಸರ್ವೋಚ್ಚ ನ್ಯಾಯಾಲಯವು ಕಡ್ಡಾಯಗೊಳಿಸಿತು.

    ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ಬಗ್ಗೆ:

    • ಶಾಸನಬದ್ಧ ಸಂಸ್ಥೆ:- ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ, 2010ರ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ಧ್ಯೇಯೋದ್ದೇಶ:- ಪರಿಸರ ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ತೀರ್ಪುನ್ನು ಖಚಿತಪಡಿಸುವುದು.
    • ಇದು ‘ಅನುಸೂಚಿ I’ ರಲ್ಲಿ ಉಲ್ಲೇಖಿಸಲಾದ ಪ್ರಮುಖ ಪರಿಸರ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಅವುಗಳೆಂದರೆ:
    • ಪರಿಸರ (ಸಂರಕ್ಷಣೆ) ಕಾಯ್ದೆ-1986, 
    • ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1974,
    • ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1981 ಮತ್ತು ಇತರೆ ಕಾಯ್ದೆಗಳನ್ನು ಒಳಗೊಂಡಿದೆ.
  • ಭಾರತ: ವಿಶ್ವದ ಅತಿದೊಡ್ಡ ಅಕ್ಕಿ (ಭತ್ತ) ಉತ್ಪಾದಕ ರಾಷ್ಟ್ರ | SAMPANN (ಸಂಪನ್ನ- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ) | ವುಲ್ಫ್ ಸೂಪರ್‌ಮೂನ್/ ತೋಳ ಸಂಪೂರ್ಣಚಂದ್ರ (Wolf Supermoon) | ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆ

    ಭಾರತ: ವಿಶ್ವದ ಅತಿದೊಡ್ಡ ಅಕ್ಕಿ (ಭತ್ತ) ಉತ್ಪಾದಕ ರಾಷ್ಟ್ರ

    ಸಾಮಾನ್ಯ ಅಧ್ಯಯನ-3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
    • ಚೀನಾದ 145.28 ದಶ ಲಕ್ಷ ಟನ್‌ಗಳ ಉತ್ಪಾದನೆಗೆ ಹೋಲಿಸಿದರೆ, ಭಾರತದ ಅಕ್ಕಿ ಉತ್ಪಾದನೆಯು 150.18 ದಶ ಲಕ್ಷ ಟನ್‌ಗಳನ್ನು ತಲುಪಿದೆ.

    ಅಕ್ಕಿ (ಭತ್ತ)ಯ ಬಗ್ಗೆ:

    • ಇದು ಭಾರತದ ಅತ್ಯಂತ ಪ್ರಮುಖ ಆಹಾರ ಬೆಳೆಯಾಗಿದೆ.
    • ಇದು ಪ್ರಮುಖವಾಗಿ ಖಾರಿಫ್ (ಮುಂಗಾರು) ಅಥವಾ ಬೇಸಿಗೆಯ ಬೆಳೆಯಾಗಿದೆ.

    ಭತ್ತದ ಬೆಳೆಗೆ ಭೌಗೋಳಿಕ ಪರಿಸ್ಥಿತಿಗಳು:

    • ಅಗತ್ಯವಿರುವ ವಾರ್ಷಿಕ ಸರಾಸರಿ ತಾಪಮಾನ:- 22°C ನಿಂದ 32°C.
    • ವಾರ್ಷಿಕ ಸರಾಸರಿ ಮಳೆ:- 150-300 ಸೆಂ.ಮೀ.
    • ಮಣ್ಣು:- ಜೇಡಿ ಮಣ್ಣು ಮತ್ತು ಕಡುಮಣ್ಣು (ಲೋಮಿ ಮಣ್ಣು)
    • ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳು:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ 2024–25ರ ಬೆಳೆ ವರ್ಷದ (2025ರ ಅಂತ್ಯದಲ್ಲಿ ಅಂತಿಮಗೊಂಡ) ದತ್ತಾಂಶವನ್ನು ಆಧರಿಸಿ, ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯಗಳು ಈ ಕೆಳಗಿನಂತಿವೆ:
      • ಉತ್ತರ ಪ್ರದೇಶ: 20.93 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
      • ತೆಲಂಗಾಣ: 17.09 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
      • ಪಶ್ಚಿಮ ಬಂಗಾಳ: 16.49 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.

    ಮಹತ್ವ:

    • ಇದು ಭಾರತದ ಬಹುಸಂಖ್ಯಾತ ಜನರ ಪ್ರಧಾನ ಆಹಾರ ಬೆಳೆಯಾಗಿದೆ.
    • ರಾಷ್ಟ್ರೀಯ ಆಹಾರ ಮತ್ತು ಜೀವನೋಪಾಯ ಭದ್ರತಾ ವ್ಯವಸ್ಥೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ.

    ನಿಮಗಿದು ತಿಳಿದಿದೆಯೇ?

    • DRR ರೈಸ್ 100 (ಕಮಲಾ) ಮತ್ತು ಪೂಸಾ DST ರೈಸ್:- ICAR ಸಂಸ್ಥೆಯು ಭಾರತದ ಮೊದಲ ‘ಜೀನೋಮ್-ಸಂಪಾದಿತ’ ಭತ್ತದ ತಳಿಗಳಾದ ‘ಡಿಆರ್‌ಆರ್ ರೈಸ್ 100 (ಕಮಲಾ)’ ಮತ್ತು ‘ಪೂಸಾ ಡಿಎಸ್‌ಟಿ ರೈಸ್’ ಅನ್ನು ಅಭಿವೃದ್ಧಿಪಡಿಸಿದೆ.
    • ಈ ತಳಿಗಳು ಹೆಚ್ಚಿನ ಉತ್ಪಾದನೆ, ಹವಾಮಾನ ಹೊಂದಾಣಿಕೆ ಮತ್ತು ಜಲ ಸಂರಕ್ಷಣೆಯ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿವೆ.

    SAMPANN (ಸಂಪನ್ನ- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ)

    ಸಾಮಾನ್ಯ ಅಧ್ಯಯನ-2 / ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • SAMPANN (‘ಸಂಪನ್ನ’- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ) ಎಂಬುದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ರೂಪಿಸಲಾದ ಒಂದು ಏಕೀಕೃತ, ಆನ್‌ಲೈನ್ ಪಿಂಚಣಿ ನಿರ್ವಹಣಾ ವ್ಯವಸ್ಥೆಯಾಗಿದೆ.

    SAMPANN (ಸಂಪನ್ನ) ವ್ಯವಸ್ಥೆಯ ಬಗ್ಗೆ:

    • ವಿಸ್ತರಿತ ರೂಪ:- SAMPANN- ಸಿಸ್ಟಮ್ ಫಾರ್ ಅಕೌಂಟಿಂಗ್ ಅಂಡ್ ಮ್ಯಾನೇಜಮೆಂಟ್ ಆಫ್ ಪೆನ್ಷನ್ಸ್.
    • ಇದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ಪಿಂಚಣಿಯ ಸಂಸ್ಕರಣೆ, ಮಂಜೂರಾತಿ ಮತ್ತು ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವಿತರಣೆ ಮಾಡಲು ಒಂದೇ ವೇದಿಕೆಯನ್ನು ಸೃಷ್ಟಿಸುತ್ತದೆ.
    • ಅನುಷ್ಠಾನ ಸಂಸ್ಥೆ:- ಸಂವಹನ ಲೆಕ್ಕಪತ್ರಗಳ ಮಹಾನಿಯಂತ್ರಕರು, ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯ.
    • ಇತರೆ ಕಾರ್ಯ:- ಇದು ಆನ್‌ಲೈನ್ ಕುಂದುಕೊರತೆ ನಿವಾರಣೆ, ಡಿಜಿಟಲ್ ವಿವರ/ಪ್ರೊಫೈಲ್ ನಿರ್ವಹಣೆ ಮತ್ತು ವಹಿವಾಟು ದಾಖಲೆಗಳನ್ನು ಒದಗಿಸುವ ಮೂಲಕ, ನಿವೃತ್ತ ದೂರಸಂಪರ್ಕ ನೌಕರರ ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.

    ವುಲ್ಫ್ ಸೂಪರ್‌ಮೂನ್/ ತೋಳ ಸಂಪೂರ್ಣಚಂದ್ರ (Wolf Supermoon)

    ಸಾಮಾನ್ಯ ಅಧ್ಯಯನ-3 / ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಜನವರಿ 2026 ರಲ್ಲಿ ‘ವುಲ್ಫ್ ಸೂಪರ್‌ಮೂನ್’ ಸಂಭವಿಸಿತು.
    • ವುಲ್ಫ್ ಸೂಪರ್‌ಮೂನ್ ಎಂಬುದು “ವುಲ್ಫ್ ಮೂನ್ (ತೋಳ ಚಂದ್ರ)” ಮತ್ತು “ಸೂಪರ್‌ಮೂನ್ (ಸಂಪೂರ್ಣಚಂದ್ರ)” ಎಂಬ ಎರಡು ವಿಭಿನ್ನ ಪರಿಕಲ್ಪನೆಗಳ ಸಂಯೋಜನೆಯಾಗಿದೆ.

    ವುಲ್ಫ್ ಮೂನ್ (ತೋಳ ಚಂದ್ರ)ನ ಬಗ್ಗೆ:

    • ಈ ಪದವು ಜನವರಿ ತಿಂಗಳಲ್ಲಿ ಸಂಭವಿಸುವ ಹುಣ್ಣಿಮೆ (ಪೂರ್ಣಚಂದ್ರ)ಯನ್ನು ಸೂಚಿಸುತ್ತದೆ.
    • ಕಾಲಗಣನೆ ಮಾಡಲು:- ಇದು ಹುಣ್ಣಿಮೆಗಳಿಗೆ ಇರುವ ಇಂತಹ ಸಾಂಪ್ರದಾಯಿಕ ಹೆಸರುಗಳು ಋತುಮಾನದ ಮಾದರಿಗಳಿಂದ ಹುಟ್ಟಿಕೊಂಡಿವೆ. ಆಧುನಿಕ ಕ್ಯಾಲೆಂಡರ್‌ಗಳಿಗಿಂತ ಮೊದಲು ಕಾಲಗಣನೆ ಮಾಡಲು ಜಾನಪದ ಮತ್ತು ಪಂಚಾಂಗಗಳ ಮೂಲಕ ಇವು ಜನಪ್ರಿಯಗೊಂಡವು.
    • ಈ ಹೆಸರು ಬರಲು ಕಾರಣ:- ಚಳಿಗಾಲದಲ್ಲಿ ಆಹಾರದ ಕೊರತೆಯಿಂದ ತೋಳಗಳು ಹೆಚ್ಚಾಗಿ ಕೂಗುತ್ತಿದ್ದುದರಿಂದ ಈ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ಆದಾಗ್ಯೂ, ಇದಕ್ಕೆ ಯಾವುದೇ ಖಗೋಳವೈಜ್ಞಾನಿಕ ಮಹತ್ವವಿಲ್ಲ.

    ಸೂಪರ್‌ಮೂನ್ (ಸಂಪೂರ್ಣಚಂದ್ರ)ನ ಬಗ್ಗೆ:

    • ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿರುವ ಹಂತವಾದ ‘ಪೆರಿಜಿ’ಯೊಂದಿಗೆ (perigee – ಭೂಮಿಗೆ ಸಮೀಪ ಬಿಂದು) ಹುಣ್ಣಿಮೆ ಏಕಕಾಲದಲ್ಲಿ ಸಂಭವಿಸಿದಾಗ ಉಂಟಾಗುವ ಖಗೋಳ ವಿದ್ಯಮಾನವೇ ಸೂಪರ್‌ಮೂನ್ (ಅಮಾವಾಸ್ಯೆ) ಆಗಿದೆ.
    • ಈ ವೇಳೆ ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ.
    • ಚಂದ್ರನು ದೀರ್ಘವೃತ್ತಾಕಾರದ ಕಕ್ಷೆಯನ್ನು ಅನುಸರಿಸಲಿದ್ದು, ಭೂಮಿಯಿಂದ ಅದರ ಅತ್ಯಂತ ದೂರದ ಬಿಂದುವನ್ನು ‘ಅಪೋಜಿ’ (apogee – ಭೂಮಿಗೆ ದೂರದ ಬಿಂದು) ಎಂದು ಕರೆಯಲಾಗುತ್ತದೆ.

    ಪ್ರಮುಖ ಲಕ್ಷಣಗಳು:

    • ವುಲ್ಫ್ ಸೂಪರ್‌ಮೂನ್ ಸಮಯದಲ್ಲಿ, ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನೆ.
    • ಇದಕ್ಕೆ ಸಂಬಂಧಿಸಿದ ದೃಶ್ಯ ಪರಿಣಾಮವೇ ‘ಮೂನ್ ಇಲ್ಯೂಷನ್’ (ಚಂದ್ರನ ದೃಷ್ಟಿಭ್ರಮೆ).
    • ಇಲ್ಲಿ ಚಂದ್ರನು ದಿಗಂತದ ಬಳಿ ಇದ್ದಾಗ ದೊಡ್ಡದಾಗಿ ಕಾಣುತ್ತಾನೆ. ಇದು ಮಾನವನ ಕಣ್ಣಿನ ಗ್ರಹಿಕೆಯೇ ಹೊರತು, ಚಂದ್ರನ ಗಾತ್ರದಲ್ಲಿ ಉಂಟಾಗುವ ನಿಜವಾದ ಬದಲಾವಣೆಯಲ್ಲ.

    ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆ

    ಸಾಮಾನ್ಯ ಅಧ್ಯಯನ-3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ದೀರ್ಘ ಶ್ರೇಣಿಯ ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆಯನ್ನು ಪೂರೈಸಲು, ಭಾರತೀಯ ಸೇನೆಯು ಇಸ್ರೇಲ್ ದೇಶದ ಸಹಯೋಗದೊಂದಿಗೆ ‘NIBE ಲಿಮಿಟೆಡ್’ ಜೊತೆಗೆ ₹293 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.

    ಸೂರ್ಯಾಸ್ತ್ರ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯ ಬಗ್ಗೆ:

    • ಇದು ಭಾರತದ ಮೊದಲ ದೇಶೀಯವಾಗಿ ತಯಾರಿಸಲಾದ ಸಾರ್ವತ್ರಿಕ ಬಹು- ಸಾಮರ್ಥ್ಯದ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯಾಗಿದೆ.
    • ಇದು 300 ಕಿ.ಮೀ.ವರೆಗೆ ನಿಖರವಾದ ‘ಭೂಮೇಲ್ಮೈಯಿಂದ  ಭೂಮೇಲ್ಮೈಗೆ’ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
  • ವೆನೆಜುವೆಲಾ ಮೇಲೆ ಅಮೆರಿಕದ ದಾಳಿಗಳು | ಸೋಮನಾಥ ಸ್ವಾಭಿಮಾನ ಪರ್ವ | ದೆಹಲಿಯಲ್ಲಿ ಮಾನವ ರೇಬಿಸ್: ಅಧಿಸೂಚಿತ ರೋಗ ಎಂದು ಘೋಷಿಸಲು ನಿರ್ಧಾರ

    ವೆನೆಜುವೆಲಾ ಮೇಲೆ ಅಮೆರಿಕದ ದಾಳಿಗಳು

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ, ರಾಷ್ಟ್ರೀಯ ಸಾರ್ವಭೌಮತ್ವದ ಭಂಗ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯ ಬಗೆಗಿನ ಕಳವಳಗಳನ್ನು ಮುನ್ನೆಲೆಗೆ ತಂದಿವೆ.
    • ಆದಾಗ್ಯೂ, ದತ್ತಾಂಶಗಳ ಪ್ರಕಾರ, ವೆನೆಜುವೆಲಾ ಮೇಲಿನ ಅಮೆರಿಕದ ಈ ಕ್ರಮವು ಭಾರತದ ಇಂಧನ ಭದ್ರತೆಯ ಮೇಲೆ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

    ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗೆ ಸಂಭವನೀಯ ಕಾರಣಗಳು:

    • ತೈಲ ನಿಕ್ಷೇಪಗಳು:- ವೆನೆಜುವೆಲಾ ವಿಶ್ವದ 18% ರಷ್ಟು ತೈಲ ನಿಕ್ಷೇಪಗಳನ್ನು ಹೊಂದಿದೆ. ಇದು ಸೌದಿ ಅರೇಬಿಯಾ (ಸುಮಾರು 16%), ರಷ್ಯಾ (ಸುಮಾರು 5-6%) ಅಥವಾ ಅಮೆರಿಕಕ್ಕಿಂತ (ಸುಮಾರು 4%) ಹೆಚ್ಚಾಗಿದೆ.
    • ಎರಡು ಪಟ್ಟಿಗಿಂತ ಹೆಚ್ಚು ಕಚ್ಚಾ ತೈಲ ನಿಕ್ಷೇಪ:- ಕೇವಲ ವೆನೆಜುವೆಲಾ ಒಂದೇ, ಅಮೆರಿಕ ಮತ್ತು ರಷ್ಯಾ ಎರಡೂ ಸೇರಿ ಹೊಂದಿರುವುದಕ್ಕಿಂತ ಹೆಚ್ಚಿನ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ.
    • ಲ್ಯಾಟಿನ್ ಅಮೆರಿಕದಲ್ಲಿ ಚೀನಾದ ವಿಸ್ತರಣೆಯನ್ನು ಎದುರಿಸುವುದು:ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾದ ಚೀನಾ, ವೆನೆಜುವೆಲಾ ತೈಲದ ಅತಿದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದೆ.
    • ಚೀನಾ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ:- ಚೀನಾದ ಇಂಧನ ಭದ್ರತೆ ಮತ್ತು ಜಾಗತಿಕ ಪ್ರಭಾವದಲ್ಲಿ ವೆನೆಜುವೆಲಾ ಒಂದು ಕಾರ್ಯತಂತ್ರದ ಕೇಂದ್ರವಾಗಿದೆ. ಇದರಿಂದಾಗಿ ಇದು ಅಮೆರಿಕಕ್ಕೆ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ.
    • ಅಮೆರಿಕದ ಒಪ್ಪಂದಗಳು: ಅಮೆರಿಕವು ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ಪಾಲುದಾರರೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ತಾನು ಸಾಕಷ್ಟು ಕಚ್ಚಾ ತೈಲ ಅಥವಾ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೂ, ಅಮೆರಿಕದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಎನ್‌ಜಿಯನ್ನು (LNG) ಖರೀದಿಸುವಂತೆ ಈ ದೇಶಗಳಿಂದ ಬದ್ಧತೆಯನ್ನು ಪಡೆದುಕೊಂಡಿದೆ.
    • ಮನ್ರೋ ಸಿದ್ಧಾಂತದ ಪುನರುಜ್ಜೀವನ: ಈ ಕಾರ್ಯಾಚರಣೆಯು ‘ಮನ್ರೋ ಸಿದ್ಧಾಂತ’ ಎಂದು ಕರೆಯಲ್ಪಡುವ ಅಮೆರಿಕದ ವಿದೇಶಾಂಗ ನೀತಿಗೆ ಅನುಗುಣವಾಗಿದೆ ಎಂದು ಅಮೆರಿಕ ವಿವರಿಸಿದೆ.
    • ಇತರ ಘೋಷಿತ ಮತ್ತು ಅಘೋಷಿತ ಉದ್ದೇಶಗಳು:
      • ರಾಷ್ಟ್ರ-ಪ್ರಾಯೋಜಿತ ಮಾದಕವಸ್ತು ಕಳ್ಳಸಾಗಣೆ ಆರೋಪಗಳು.
      • ಸಮಾಜವಾದಿ ರಾಜಕೀಯ ಸಿದ್ಧಾಂತವನ್ನು ನಿಯಂತ್ರಿಸುವುದು.
      • ಅಮೆರಿಕದ ಕಡೆಗೆ ಸಾಗುವ ಸಾಮೂಹಿಕ ವಲಸೆ ಹರಿವನ್ನು ತಡೆಯುವುದು.

    ತೈಲ ಪೂರೈಕೆಯಲ್ಲಿ ವೆನೆಜುವೆಲಾದ ಪಾಲು:

    • OPEC ಸದಸ್ಯ ರಾಷ್ಟ್ರ:- ಇದು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವಾಗಿದ್ದು, ಈ ರಾಷ್ಟ್ರಗಳ ಗುಂಪು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.

    ಭಾರತದ ಮೇಲೆ ಪರಿಣಾಮ:

    • 2025ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತವು ವೆನೆಜುವೆಲಾದಿಂದ $ 255.3 ದಶಲಕ್ಷ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಈ ಅವಧಿಯ ಒಟ್ಟು ತೈಲ ಆಮದಿನ 0.3% ರಷ್ಟು ಮಾತ್ರವಾಗಿದೆ.

    ಸೋಮನಾಥ ಸ್ವಾಭಿಮಾನ ಪರ್ವ

    ಸಾಮಾನ್ಯ ಅಧ್ಯಯನ-1 / ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಕ್ರಿ. ಶ. 1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಪ್ರಥಮ ಆಕ್ರಮಣಕ್ಕೆ 1,000 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು. 
    • ಅವರು ಈ ಪವಿತ್ರ ದೇಗುಲವನ್ನು ಭಾರತೀಯ ನಾಗರಿಕತೆಯ ಸ್ಥಿತಿಸ್ಥಾಪಕತ್ವ ಹಾಗೂ ಅಚಲ ಚೈತನ್ಯದ ‘ಕಾಲಾತೀತ ಪ್ರತೀಕ’ ಎಂದು ಬಣ್ಣಿಸಿದ್ದಾರೆ.

    ಸೋಮನಾಥ ದೇವಾಲಯದ ಬಗ್ಗೆ:

    • ಮೊದಲನೆಯ ಜ್ಯೋತಿರ್ಲಿಂಗ:- ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಉಲ್ಲೇಖಿಸಿರುವಂತೆ, ಸೋಮನಾಥ ದೇವಾಲಯದ ಜ್ಯೋತಿರ್ಲಿಂಗವನ್ನು ಭಗವಾನ್ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪೂಜಿಸಲಾಗುತ್ತದೆ.
    • ಸ್ಥಳ:- ಈ ದೇವಾಲಯವು ಗುಜರಾತ್‌ನ ಪಶ್ಚಿಮ ಕರಾವಳಿಯ ಪ್ರಭಾಸ ಪಾಟನ್‌ನಲ್ಲಿದೆ. ಈ ಪ್ರದೇಶವು ಐತಿಹಾಸಿಕವಾಗಿ ಕಡಲ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಸಮೃದ್ಧಿಯೊಂದಿಗೆ ನಂಟು ಹೊಂದಿದೆ.
    • ಘಜ್ನಿ ಮೊಹಮ್ಮದನು 1026ರ ಜನವರಿಯಲ್ಲಿ, ಈ ದೇಗುಲದ ಮೇಲೆ ಮೊದಲ ಬಾರಿಗೆ ದಾಳಿ ನಡೆಸಿದನು. ಇದು ಭಾರತೀಯ ನಾಗರಿಕತೆಯ ಸಂಕೇತಗಳನ್ನು ನಾಶಮಾಡುವ ಗುರಿಯನ್ನು ಹೊಂದಿದ್ದ ಸರಣಿ ಆಕ್ರಮಣಗಳ ಆರಂಭವಾಗಿತ್ತು.
    • ಪದೇ ಪದೇ ಧ್ವಂಸಗೊಳಿಸಿದರೂ, ಈ ದೇವಾಲಯವನ್ನು ಹಲವು ಬಾರಿ ಪುನರ್ನಿರ್ಮಿಸಲಾಯಿತು.

    ದೇವಾಲಯದ ಪುನರ್ನಿರ್ಮಾಣ/ ಜೀರ್ಣೋದ್ಧಾರ:

    • ಅಹಲ್ಯಾಬಾಯಿ ಹೋಳ್ಕರ್:- ಸಾಂಸ್ಕೃತಿಕ ಪುನರುಜ್ಜೀವನದಲ್ಲಿ ದೇಶೀಯ ಆಡಳಿತಗಾರರ ಪಾತ್ರವನ್ನು ಎತ್ತಿಹಿಡಿಯುವ ಮೂಲಕ, 18ನೇ ಶತಮಾನದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯದ ಜೀರ್ಣೋದ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
    • ಸರ್ದಾರ್ ವಲ್ಲಭಭಾಯಿ ಪಟೇಲ್:- ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಸಂಕಲ್ಪ ಮಾಡಿದರು.
    • ಡಾ. ರಾಜೇಂದ್ರ ಪ್ರಸಾದ್ ಉದ್ಘಾಟನೆ:- ಪ್ರಸ್ತುತ ಕಟ್ಟಡವನ್ನು ಪೂರ್ಣಗೊಳಿಸಿ, ಮೇ 11, 1951ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ಇದು ಸಾಂಸ್ಕೃತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.
    • ಕೆ.ಎಂ. ಮುನ್ಷಿ ಮಹತ್ವದ ಪಾತ್ರ:- ದೇವಾಲಯದ ಪುನರ್ನಿರ್ಮಾಣದಲ್ಲಿ ಕೆ.ಎಂ. ಮುನ್ಷಿ ಅವರು ಮಹತ್ವದ ಪಾತ್ರ ವಹಿಸಿದ್ದರು.
    • ಸ್ವಾಮಿ ವಿವೇಕಾನಂದರು ಸೋಮನಾಥವನ್ನು, ಎಷ್ಟೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಮತ್ತೆ ಪುನರ್ ಸ್ಥಾಪನೆಗೊಳ್ಳುವ ಭಾರತದ ರಾಷ್ಟ್ರೀಯ ಚೈತನ್ಯದ ಸಂಕೇತವಾಗಿ ಕಂಡಿದ್ದರು.

    ದೆಹಲಿಯಲ್ಲಿ ಮಾನವ ರೇಬಿಸ್: ಅಧಿಸೂಚಿತ ರೋಗ ಎಂದು ಘೋಷಿಸಲು ನಿರ್ಧಾರ

    ಸಾಮಾನ್ಯ ಅಧ್ಯಯನ-2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಸಾಂಕ್ರಾಮಿಕ ರೋಗಗಳ ಕಾಯ್ದೆ”ಯ ಅಡಿಯಲ್ಲಿ, ದೆಹಲಿ ಸರ್ಕಾರವು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ‘ಮಾನವ ರೇಬಿಸ್’ ಅನ್ನು ‘ಅಧಿಸೂಚಿತ ರೋಗ’ ಎಂದು ಘೋಷಿಸಲು ನಿರ್ಧರಿಸಿದೆ.

    ‘ಅಧಿಸೂಚಿತ (ಕಡ್ಡಾಯ ವರದಿ) ರೋಗ’ ದ ಬಗ್ಗೆ:

    • ಕಾನೂನುಬದ್ಧವಾಗಿ ವರದಿ:- ರೋಗ ನಿರ್ಣಯವಾದಾಗ ಅಥವಾ ಸೋಂಕಿನ ಶಂಕೆ ಕಂಡುಬಂದಾಗ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ವರದಿ ಮಾಡಲೇಬೇಕಾದ ರೋಗವನ್ನು ‘ಅಧಿಸೂಚಿತ ರೋಗ’ ಎನ್ನಲಾಗುತ್ತದೆ.
    • ರೋಗದ ಕುರಿತಾದ ಕಡ್ಡಾಯ ವರದಿಯು ನೈಜ-ಸಮಯದ ಕಣ್ಗಾವಲು, ಆರಂಭಿಕ ಪತ್ತೆ, ತ್ವರಿತ ಪ್ರತಿಕ್ರಿಯೆ ಮತ್ತು ಸಾಕ್ಷ್ಯಾಧಾರಿತ ಯೋಜನೆಗೆ ಅನುವು ಮಾಡಿಕೊಡುತ್ತದೆ.

    ‘ರೇಬಿಸ್’ ರೋಗದ ಬಗ್ಗೆ:

    • ಝೂನೋಟಿಕ್ ವೈರಲ್ ಕಾಯಿಲೆ:- ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಾಣುವಿನಿಂದ ಉಂಟಾಗುವ ರೋಗ.
    • ರೋಗಕಾರಕ:- ಇದು ‘ರಾಬ್ಡೋವಿರಿಡೆ’ ಕುಟುಂಬದ ‘ಲಿಸ್ಸಾವೈರಸ್’ ಕುಲಕ್ಕೆ ಸೇರಿದ ರೇಬಿಸ್ ವೈರಸ್‌ನಿಂದ ಉಂಟಾಗುತ್ತದೆ.
    • RNA ವೈರಾಣು:- ಇದು ರೈಬೋನ್ಯೂಕ್ಲಿಯಿಕ್ ಆಮ್ಲ (RNA) ವೈರಸ್ ಆಗಿದ್ದು, ರೇಬಿಸ್ ಪೀಡಿತ ಪ್ರಾಣಿಯ (ನಾಯಿ, ಬೆಕ್ಕು, ಕೋತಿ ಇತ್ಯಾದಿ) ಲಾಲಾರಸದಲ್ಲಿ ಇರುತ್ತದೆ.
    • ಲಸಿಕೆಯ ಮೂಲಕ ತಡೆಗಟ್ಟಬಹುದು:- ರೇಬಿಸ್ 100% ರಷ್ಟು ಮಾರಣಾಂತಿಕವಾಗಿದೆ, ಆದರೆ ಲಸಿಕೆಯ ಮೂಲಕ 100% ರಷ್ಟು ತಡೆಗಟ್ಟಬಹುದಾಗಿದೆ.
    • ಸಾವುಗಳ ಸಂಖ್ಯೆಯಲ್ಲಿ ಭಾರತ ಅಗ್ರ ಸ್ಥಾನ:- ಜಾಗತಿಕವಾಗಿ ರೇಬಿಸ್‌ನಿಂದ ಸಂಭವಿಸುವ ಸಾವುಗಳಲ್ಲಿ 33% ರಷ್ಟು ಸಾವುಗಳು ಭಾರತದಲ್ಲಿಯೇ ದಾಖಲಾಗುತ್ತವೆ.

    ವೈರಸ್‌ನ ಸಾಮಾನ್ಯ ವಾಹಕಗಳು ಮತ್ತು ಆಶ್ರಯದಾತರುಗಳು:-

    • ಬಹುತೇಕ ಸಸ್ತನಿಗಳು ಈ ವೈರಸ್‌ನ ವಾಹಕಗಳಾಗಿ ಕಾರ್ಯನಿರ್ವಹಿಸಬಲ್ಲವು ಮತ್ತು ಈ ಮೂಲಕ ರೋಗವನ್ನು ಉಂಟುಮಾಡಬಲ್ಲವು.
    • ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಲ್ಲಿ, ಸಾಕು ಹಾಗೂ ಬೀದಿ ನಾಯಿಗಳು ಈ ವೈರಸ್‌ನ ಅತ್ಯಂತ ಸಾಮಾನ್ಯ ವಾಹಕಗಳಾಗಿವೆ.
    • ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾವಲಿಗಳು, ನರಿಗಳು, ರಕೂನ್‌ಗಳು ಮತ್ತು ಸ್ಕಂಕ್‌ಗಳು ರೇಬಿಸ್ ರೋಗವನ್ನು ಹರಡುವ ಪ್ರಮುಖ ಪ್ರಾಣಿಗಳಾಗಿವೆ.

    ‘ರೇಬಿಸ್’ ರೋಗದ ಲಕ್ಷಣಗಳು:

    • ಆತಂಕ, ಗೊಂದಲ, ಲಾಲಾರಸ ಸ್ರವಿಸುವಿಕೆ, ಸೆಳವು, ಭ್ರಮೆ ಮತ್ತು ಪಾರ್ಶ್ವವಾಯು.

    ನಾಯಿಗಳಿಂದ ಹರಡುವ ರೇಬಿಸ್ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NAPRE), 2030ರ ಬಗ್ಗೆ:

    • ಇದರ ಅಡಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೇಬಿಸ್ ಅನ್ನು ಅಧಿಸೂಚಿತ ರೋಗವನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತದೆ.
    • ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲಾದ ಯಾವುದೇ ರೋಗವನ್ನು ಅಧಿಸೂಚಿತ ರೋಗ ಎನ್ನಲಾಗುತ್ತದೆ.
    • 2030ರ ವೇಳೆಗೆ ಭಾರತದಿಂದ ನಾಯಿಗಳ ಮೂಲಕ ಹರಡುವ ರೇಬಿಸ್ ಅನ್ನು ನಿರ್ಮೂಲನೆ ಮಾಡಲು “ಜಂಟಿ ಅಂತರ-ಸಚಿವಾಲಯ ಘೋಷಣೆ ಬೆಂಬಲ ಹೇಳಿಕೆ”ಯನ್ನು ಸಹ ಬಿಡುಗಡೆ ಮಾಡಲಾಯಿತು.

    ‘ವಿಶ್ವ ರೇಬಿಸ್ ದಿನ’ದ ಬಗ್ಗೆ:

    • ಆಚರಣೆ: ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ಸ್ಮರಣಾರ್ಥವಾಗಿ ಸೆಪ್ಟೆಂಬರ್ 28 ರಂದು ಇದನ್ನು ಆಚರಿಸಲಾಗುತ್ತದೆ.
    • ಲೂಯಿಸ್ ಪಾಶ್ಚರ್ ಅವರು ಫ್ರೆಂಚ್ ರಸಾಯನಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನಿಯಾಗಿದ್ದು, ಇವರು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.
    • ಇವರು ಪಾಶ್ಚರೀಕರಣ, ಆಂಥ್ರಾಕ್ಸ್ ಮತ್ತು ಕಾಲರಾ ಲಸಿಕೆಗಳು ಹಾಗೂ ಚೇಂಬರ್‌ಲ್ಯಾಂಡ್ ಶೋಧಕಗಳನ್ನು ಸಹ ಕಂಡುಹಿಡಿಡಿದ್ದಾನೆ.
  • ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ

    ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ

    ಸಾಮಾನ್ಯ ಅಧ್ಯಯನ-1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಮತ್ತು ಭಾರತದ ಅತ್ಯಂತ ಪೂರ್ವದ ಹಳ್ಳಿಯಾದಡಾಂಗ್‌’ ನಲ್ಲಿ, 2026ರ ಸಾಲಿನ ಭಾರತದ ಮೊದಲ ಸೂರ್ಯೋದಯವನ್ನು “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” (ಡ್ಯಾನ್ಸ್ ಆಫ್ ದಿ ಡಾನ್) ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.

    “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ”(ಡ್ಯಾನ್ಸ್ ಆಫ್ ದಿ ಡಾನ್)ದ ಬಗ್ಗೆ:

    • “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” ಎಂಬ ಶೀರ್ಷಿಕೆಯ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಹೊಸ ವರ್ಷದ ಪ್ರಥಮ ಸೂರ್ಯೋದಯವನ್ನು ಸ್ವಾಗತಿಸಲಾಯಿತು.
    • ಆಚರಿಸುವವರು:- ಈ ಆಚರಣೆಯನ್ನು ಪ್ರಮುಖವಾಗಿ ಸ್ಥಳೀಯ ‘ಮೇಯೋರ್’ ಮತ್ತು ‘ಮಿಶ್ಮಿ’ ಸಮುದಾಯಗಳು ನೆರವೇರಿಸಿದವು. ಈ ಸಮುದಾಯಗಳ ಸದಸ್ಯರು ತಮ್ಮ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಬಳಸಿಕೊಂಡು, ಪಾರಂಪರಿಕ ಮಂತ್ರ ಪಠಣಗಳು, ಹಾಡುಗಳು ಹಾಗೂ ಸ್ಥಳೀಯ ಲಯಗಳೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು.