Blog

  • ಅಬತ್ಸಹಾಯೇಶ್ವರರ್ ದೇವಾಲಯ | ಜಗನ್ನಾಥ ರಥಯಾತ್ರೆ | ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS) | ಸೆಮಿಕಾನ್ 2.0 | 12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಬತ್ಸಹಾಯೇಶ್ವರರ್ ದೇವಾಲಯ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ತಮಿಳುನಾಡಿನ ತುಕ್ಕಾಚಿಯಲ್ಲಿರುವ 12ನೇ ಶತಮಾನದ ಅಬತ್ಸಹಾಯೇಶ್ವರರ್ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯವು ದಶಕಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿತ್ತು. 

    ಅಬತ್ಸಹಾಯೇಶ್ವರರ್ ದೇವಾಲಯದ ಬಗ್ಗೆ:

    • ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಸಮೀಪದ ತುಕ್ಕಾಚಿ ಎಂಬಲ್ಲಿದೆ.
    • ಇದು ನಂತರದ ಚೋಳರ ಕಾಲದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದ್ದು, ಇದು ಒಂದನೇ ಕುಲೋತ್ತುಂಗ ಚೋಳ ಮತ್ತು ವಿಕ್ರಮ ಚೋಳನ ಆಳ್ವಿಕೆಗೆ ನಿಕಟವಾಗಿ ಸಂಬಂಧಿಸಿದೆ.
    • ಈ ದೇವಾಲಯವನ್ನು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಶೈಲಿಯನ್ನು ಕಾರ ಕೋವಿಲ್ ಎಂದು ಕರೆಯಲಾಗುತ್ತದೆ.
    • ಇಲ್ಲಿ ಭಗವಾನ್ ಶರಭೇಶ್ವರರ ವಿಗ್ರಹವಿದ್ದು, ಇದು ಆ ದೇವರ ಅತ್ಯಂತ ಹಳೆಯ ಚಿತ್ರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

    ದೇವಾಲಯದ ಜೀರ್ಣೋದ್ಧಾರ:

    • ದೇವಾಲಯದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು, ಅದರ ರಚನಾತ್ಮಕ ಭದ್ರತೆಯನ್ನು ಬಲಪಡಿಸಿದ ಪ್ರಯತ್ನಕ್ಕಾಗಿ, ಈ ಜೀರ್ಣೋದ್ಧಾರ ಯೋಜನೆಯು 2024ರ ‘ಯುನೆಸ್ಕೋ ಏಷ್ಯಾ ಪೆಸಿಫಿಕ್ ಅವಾರ್ಡ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಈ ಯೋಜನೆಯು ಸಾಂಪ್ರದಾಯಿಕ ದೇವಾಲಯ ನಿರ್ಮಾಣ ಪದ್ಧತಿಗಳಾದ ಸ್ಥಾಪತ್ಯ ವೇದ, ಆಗಮ ಶಾಸ್ತ್ರ ಮತ್ತು ಸುಣ್ಣದ ಗಾರೆಯ ಬಳಕೆಯನ್ನು, ಡ್ರೋನ್ ಸಮೀಕ್ಷೆ, ಡಿಜಿಟಲ್ ಮ್ಯಾಪಿಂಗ್, ಫೋಟೋಗ್ರಾಮೆಟ್ರಿ ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗಿದೆ.
    • ದೇವಾಲಯದ ಐತಿಹಾಸಿಕ ನೈಜತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಪ್ರತಿ ಗ್ರಾನೈಟ್ ಕಲ್ಲಿನ ಬ್ಲಾಕ್‌ಗೆ ಸಂಖ್ಯೆಯನ್ನು ನೀಡಿ, ಬಿಚ್ಚಿ, ನಂತರ ಅದರ ಮೂಲ ಸ್ಥಾನದಲ್ಲೇ ಮರುಜೋಡಿಸಲಾಗಿದೆ.

    ಜಗನ್ನಾಥ ರಥಯಾತ್ರೆ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧವಾದ ಭಗವಾನ್ ಜಗನ್ನಾಥನ ರಥಯಾತ್ರೆಯು ಪ್ರಾರಂಭವಾಗಿದೆ.

    ರಥಯಾತ್ರೆಯ ಬಗ್ಗೆ:

    • ಈ ರಥಯಾತ್ರೆಯನ್ನು ಗುಂಡಿಚಾ ಜಾತ್ರೆ, ಘೋಸ ಜಾತ್ರೆ ಮತ್ತು ನವದಿನ ಜಾತ್ರೆ ಎಂದೂ ಕರೆಯಲಾಗುತ್ತದೆ.
    • ಇದು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಜಗನ್ನಾಥನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಹಿಂದೂ ಹಬ್ಬವಾಗಿದೆ.

    ಜಗನ್ನಾಥ ಪುರಿ ದೇವಾಲಯಯದ ಬಗ್ಗೆ: 

    • ಶ್ರೀ ಜಗನ್ನಾಥ ಪುರಿ ದೇವಾಲಯವು ಒಡಿಶಾ ರಾಜ್ಯದ ಅತ್ಯಂತ ಆಕರ್ಷಕ ಸ್ಮಾರಕಗಳಲ್ಲಿ ಒಂದಾಗಿದೆ.
    • ಈ ದೇವಾಲಯವನ್ನು ಸಾ.ಶ 12ನೇ ಶತಮಾನದಲ್ಲಿ ಪೂರ್ವ ಗಂಗಾ ರಾಜವಂಶದ ರಾಜನಾದ ಅನಂತವರ್ಮನ್ ಚೋಡಗಂಗ ದೇವ ನಿರ್ಮಿಸಿದನು.
    • ಜಗನ್ನಾಥ ಪುರಿ ದೇವಾಲಯವನ್ನು ‘ಯಮನಿಕಾ ತೀರ್ಥ’ ಎಂದು ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಭಗವಾನ್ ಕೃಷ್ಣನೆಂದು ಕರೆಯಲ್ಪಡುವ ಭಗವಾನ್ ಜಗನ್ನಾಥನ ಉಪಸ್ಥಿತಿಯಿಂದಾಗಿ ಪುರಿಯಲ್ಲಿ ಮರಣದೇವನಾದ ‘ಯಮ’ನ ಶಕ್ತಿಯು ಶೂನ್ಯಗೊಂಡಿದೆ ಎಂಬ ಪ್ರತೀತಿಯಿದೆ.
    • ಇದು ಭಾರತದ ನಾಲ್ಕು ಪ್ರಮುಖ ಧಾಮ (ಚಾರ್ ಧಾಮ್)ಗಳಲ್ಲಿ ಒಂದಾಗಿದ್ದು, ಭಾರತದ ನಾಲ್ಕು ದಿಕ್ಕುಗಳಲ್ಲಿರುವ ಪುರಿ, ದ್ವಾರಕಾ, ಬದರಿನಾಥ್ ಮತ್ತು ರಾಮೇಶ್ವರಂ ಈ ಪಟ್ಟಿಯಲ್ಲಿ ಸೇರಿವೆ.
    • ಈ ದೇವಾಲಯವನ್ನು ಈ ಹಿಂದೆ “ಶ್ವೇತ ಪಗೋಡ” ಎಂದು ಕರೆಯಲಾಗುತ್ತಿತ್ತು ಮತ್ತು ಇದು ಚಾರ್ ಧಾಮ್ ಯಾತ್ರೆಗಳ (ಬದರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ) ಒಂದು ಪ್ರಮುಖ ಭಾಗವಾಗಿದೆ.

    ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸಚಿವ ಸಂಪುಟವು 62,500 ಕೋಟಿ ರೂ. ಗಳ ಬಜೆಟ್ ವೆಚ್ಚದೊಂದಿಗೆ ಹೊಸ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೆ (MPMS) ಅನುಮೋದನೆ ನೀಡಿದೆ.

    ಉದ್ದೇಶ:

    • ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಬಿಡಿಭಾಗಗಳ ಸ್ಥಳೀಕರಣವನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಸಂಶೋಧನೆ-ಅಭಿವೃದ್ಧಿಯನ್ನು (R&D) ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಯೋಜನೆಯ ಪ್ರಮುಖ ವಿವರಗಳು:

    • ಜಾರಿಗೊಳಿಸಿದ ಸಚಿವಾಲಯ: ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜಾರಿಗೊಳಿಸಿದೆ.
    • ಯೋಜನೆಯ ಅವಧಿ: ಇದೊಂದು ಐದು ವರ್ಷಗಳ ಯೋಜನೆಯಾಗಿದ್ದು, 2026-27ನೇ ಆರ್ಥಿಕ ವರ್ಷದಿಂದ 2030-31ನೇ ಆರ್ಥಿಕ ವರ್ಷದವರೆಗೆ ಜಾರಿಯಲ್ಲಿರುತ್ತದೆ.
    • ಬಜೆಟ್ ವೆಚ್ಚ: ಈ ಯೋಜನೆಗೆ ಒಟ್ಟು 62,500 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.

    ಯೋಜನೆಯ ಪ್ರಮುಖ ಲಕ್ಷಣಗಳು:

    • ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕಗಳು : ಈ ಯೋಜನೆಯು ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳ ಅರ್ಹ ಮಾರಾಟದ ಮೇಲೆ ಪ್ರೋತ್ಸಾಹಕ ಬೆಂಬಲವನ್ನು ನೀಡುತ್ತದೆ; ಅನ್ವಯವಾಗುವ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪ್ರೋತ್ಸಾಹಕ ದರಗಳು 2.25% ರಿಂದ 5% ರವರೆಗೆ ಇರುತ್ತವೆ.
    • ದೇಶೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ: ಪ್ರಮುಖ ಬಿಡಿಭಾಗಗಳು ಮತ್ತು ಉಪ-ಜೋಡಣೆಗಳನ್ನು ದೇಶೀಯವಾಗಿಯೇ ಸೋರ್ಸಿಂಗ್ (ಖರೀದಿಸುವ) ಮಾಡುವುದನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ತಯಾರಕರು ಗರಿಷ್ಠ 1.5% ರಷ್ಟು ಹೆಚ್ಚುವರಿ ಪ್ರೋತ್ಸಾಹಕವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ವಿನ್ಯಾಸ ಮತ್ತು ನಾವೀನ್ಯತೆಗೆ ಬೆಂಬಲ : ದೇಶೀಯ ನಾವೀನ್ಯತೆ ಮತ್ತು ಬ್ರ್ಯಾಂಡ್ ರಚನೆಯನ್ನು ಉತ್ತೇಜಿಸುವ ಸಲುವಾಗಿ, ಭಾರತದಲ್ಲಿ ಉತ್ಪನ್ನ ವಿನ್ಯಾಸ ಮತ್ತು R&D ಚಟುವಟಿಕೆಗಳನ್ನು ಕೈಗೊಳ್ಳುವ ಕಂಪನಿಗಳಿಗೆ ಅರ್ಹ ಮಾರಾಟದ ಮೇಲೆ ಹೆಚ್ಚುವರಿ 3% ಪ್ರೋತ್ಸಾಹಕವನ್ನು ಈ ಯೋಜನೆಯು ಒದಗಿಸುತ್ತದೆ.

    ಸೆಮಿಕಾನ್ 2.0

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು 1,27,500 ಕೋಟಿ ರೂ. ವೆಚ್ಚದ ಸೆಮಿಕಾನ್ 2.0 (ಇಂಡಿಯಾ  ಸೆಮಿಕಂಡಕ್ಟರ್ ಮಿಷನ್ 2.0) ಯೋಜನೆಗೆ ಅನುಮೋದನೆ ನೀಡಿದೆ.

    ಆರು ಕಾರ್ಯತಂತ್ರದ ಆಧಾರಸ್ತಂಭಗಳು:

    1. ವಿನ್ಯಾಸ.
    2. ಯಂತ್ರಗಳು ಮತ್ತು ವಸ್ತುಗಳು.
    3. ತಯಾರಿಕೆ.
    4. ಜೋಡಣೆ, ಪರೀಕ್ಷೆ, ಮಾರುಕಟ್ಟೆ ಮತ್ತು ಪ್ಯಾಕೇಜಿಂಗ್ (ATMP) ಹಾಗೂ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (OSAT) ಘಟಕಗಳನ್ನು ವಿಸ್ತರಿಸುವ ಮೂಲಕ ಭಾರತವನ್ನು ಜಾಗತಿಕ ಪರ್ಯಾಯ ಕೇಂದ್ರವನ್ನಾಗಿ ಸ್ಥಾಪಿಸುವುದು.
    5. ಸಂಶೋಧನೆ ಮತ್ತು ಅಭಿವೃದ್ಧಿ (R&D).
    6. ಪ್ರತಿಭೆಗಳ ಅಭಿವೃದ್ಧಿ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಬಗ್ಗೆ:

    • ಜಾರಿಗೊಳಿಸಿದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
    • ಗುರಿ: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸಕ್ಕಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಹೊರಹೊಮ್ಮಲು ಅನುವು ಮಾಡಿಕೊಡುವಂತಹ ಕ್ರಿಯಾಶೀಲ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.

    ಸೆಮಿಕಂಡಕ್ಟರ್ ಚಿಪ್‌ಗಳ ಬಗ್ಗೆ:

    • ಇವು ವಾಹಕಗಳು (Conductors) ಮತ್ತು ಅವಾಹಕಗಳ (Insulators) ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
    • ಉದಾಹರಣೆ: ಇವು ಶುದ್ಧ ಮೂಲವಸ್ತುಗಳಾದ ಸಿಲಿಕಾನ್ ಅಥವಾ ಜರ್ಮೇನಿಯಂ ಆಗಿರಬಹುದು; ಅಥವಾ ಗ್ಯಾಲಿಯಂ ಆರ್ಸೆನೈಡ್ ಅಥವಾ ಕ್ಯಾಡ್ಮಿಯಂ ಸೆಲೆನೈಡ್ ನಂತಹ ಸಂಯುಕ್ತ ವಸ್ತುಗಳಾಗಿರಬಹುದು.
    • ಸೆಮಿಕಂಡಕ್ಟರ್ ಚಿಪ್‌ಗಳ ಮಹತ್ವ: ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ಹೃದಯ ಮತ್ತು ಮೆದುಳಿನಂತೆ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
    • ಅನ್ವಯಗಳು: ಈ ಚಿಪ್‌ಗಳು ಆಧುನಿಕ ವಾಹನಗಳು, ಗೃಹಬಳಕೆಯ ಉಪಕರಣಗಳು ಮತ್ತು ECG ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.

    12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತವು ಹೈದರಾಬಾದ್‌ನಲ್ಲಿ 12ನೇ ಬ್ರಿಕ್ಸ್ (BRICS) ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯನ್ನು ಆಯೋಜಿಸಿತು.
    • 2026ರ ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).

    ಸಭೆಯ ಪ್ರಮುಖ ಫಲಿತಾಂಶಗಳು:

    • ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಘೋಷಣೆ: ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು, ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ಅಂತರ್ಗತ ಹಾಗೂ ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.
    • ಸದಸ್ಯ ರಾಷ್ಟ್ರಗಳಾದ್ಯಂತ ಕಾರ್ಮಿಕ ಚೌಕಟ್ಟುಗಳನ್ನು (ದಕ್ಷಿಣ-ದಕ್ಷಿಣ ಸಹಕಾರ) ಆಧುನೀಕರಿಸಲು, ಸಮನ್ವಯಗೊಳಿಸಲು ಮತ್ತು ಬಲಪಡಿಸಲು ಭಾರತವು ಬ್ರಿಕ್ಸ್ ಜೊಡಣೆ (BRICS CONNECT) ಎಂಬ ತಂತ್ರಜ್ಞಾನ-ಚಾಲಿತ ಸಹಯೋಗದ ವೇದಿಕೆಯನ್ನು ಪ್ರಾರಂಭಿಸಿತು.

    ಬ್ರಿಕ್ಸ್ (BRICS) ಬಗ್ಗೆ:

    • ಸ್ಥಾಪನೆ: 2009.
    • ಪ್ರಧಾನ ಕಚೇರಿ: ಶಾಂಘೈ.
    • BRICS, ಇದು ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಗೊಂಡಿತು) ರಾಷ್ಟ್ರಗಳ ಗುಂಪಿನ ಸಂಕ್ಷಿಪ್ತ ರೂಪವಾಗಿದೆ.
    • ಮೂಲ: ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಲ್ಕು ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳನ್ನು ವಿವರಿಸಲು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ ನೀಲ್ ಅವರು “ಬ್ರಿಕ್” (BRIC) ಎಂಬ ಪದವನ್ನು ಹುಟ್ಟುಹಾಕಿದರು.
    • ಇತ್ತೀಚಿನ ವಿಸ್ತರಣೆ (BRICS+): 2024-2025ರಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಳ್ಳುವಂತೆ ವಿಸ್ತರಣೆಯಾಯಿತು. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಔಪಚಾರಿಕಗೊಳಿಸಿಲ್ಲ.
    • ಬ್ರಿಕ್ಸ್ ಪಾಲು: ಬ್ರಿಕ್ಸ್ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಜನಸಂಖ್ಯೆಯ 41%, ಜಾಗತಿಕ GDPಯ 24% ಮತ್ತು ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ರಷ್ಟನ್ನು ಹೊಂದುವ ನಿರೀಕ್ಷೆಯಿದೆ).
    • ಅಧ್ಯಕ್ಷತೆ: ವೇದಿಕೆಯ ಅಧ್ಯಕ್ಷತೆಯನ್ನು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಮೇಲೆ ಹಂಚಲಾಗುತ್ತದೆ.

    ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:

    • ಹೊಸ ಅಭಿವೃದ್ಧಿ ಬ್ಯಾಂಕ್ (New Development Bank – NDB)
    • ಅನಿಶ್ಚಿತ ಮೀಸಲು ವ್ಯವಸ್ಥೆ (Contingent Reserve Arrangement – CRA)
    • ಬ್ರಿಕ್ಸ್ ಪಾವತಿ ವ್ಯವಸ್ಥೆ (BRICS Payment System)
    • ಕಸ್ಟಮ್ಸ್ ಒಪ್ಪಂದಗಳು (Customs Agreements)
    • ದೂರಸಂವೇದಿ ಉಪಗ್ರಹಗಳ ಸಮೂಹ (Constellation of Remote Sensing Satellites)

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 16, ಜುಲೈ 2026

    ಸುದ್ದಿಯಲ್ಲಿರುವ ವ್ಯಕ್ತಿ

    ಭೂ ವಿಜ್ಞಾನ ಸಚಿವಾಲಯದ (MoES) ನೂತನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು ನೇಮಕವಾಗಿದ್ದಾರೆ.

    ಪ್ರಮುಖ ದಿನಗಳು

    ಜಾಗತಿಕ ಅಂತರರಾಷ್ಟ್ರೀಯ ನ್ಯಾಯ ದಿನ 2026

    • ಆಚರಿಸುವ ದಿನಾಂಕ: ಜುಲೈ 17
    • ಆಚರಿಸುವ ಸಂಸ್ಥೆ: ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)

    ಮುಖ್ಯ ಉದ್ದೇಶ:

    • ನೆದರ್ಲೆಂಡ್ಸ್‌ನ ಹೇಗ್ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಗೆ ಅಡಿಪಾಯ ಹಾಕಿದ ಜುಲೈ 17, 1998 ರ ಐತಿಹಾಸಿಕ ರೋಮ್ ಶಾಸನವನ್ನು (Rome Statute) ಸ್ಮರಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
    • ಜಾಗತಿಕ ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಜನಾಂಗೀಯ ಹತ್ಯೆ, ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಆಕ್ರಮಣಶೀಲತೆಯ ಅಪರಾಧಗಳು ಸೇರಿದಂತೆ ಜಗತ್ತಿನ ಘೋರ ಅಂತರರಾಷ್ಟ್ರೀಯ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ, ಅವರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯುವುದು ಈ ದಿನದ ಮುಖ್ಯ ಆಶಯವಾಗಿದೆ.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 16 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 16 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಮೀರಾಬಾಯಿ ಅವರು ಗುರು ರವಿದಾಸ್ ಅವರ ಶಿಷ್ಯೆ ಎಂದು ನಂಬಲಾಗಿದೆ.
    2. ಗುರು ರವಿದಾಸ್ ಅವರು ಸಂತ ಕಬೀರ್ ಅವರ ಶಿಷ್ಯರಾಗಿದ್ದರು.

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಅಥವಾ 2 ಎರಡೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

     

    2. ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮವನ್ನು ಯಾವ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ?

    A) ಗ್ರಾಮೀಣಾಭಿವೃದ್ಧಿ ಸಚಿವಾಲಯ

    B) ಹಣಕಾಸು ಸಚಿವಾಲಯ

    C) ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

    D) ಪಂಚಾಯತ್ ರಾಜ್ ಸಚಿವಾಲಯ

    ಉತ್ತರ: D) ಪಂಚಾಯತ್ ರಾಜ್ ಸಚಿವಾಲಯ

     

    3. IUCN ಕೆಂಪು ಪಟ್ಟಿಯ ಪ್ರಕಾರ, ಮಗ್ಗರ್ ಮೊಸಳೆಯ ಸಂರಕ್ಷಣಾ ಸ್ಥಿತಿ ಏನಾಗಿದೆ?

    A) ತೀವ್ರ ಅಳಿವಿನಂಚಿನಲ್ಲಿರುವ (CR)

    B) ಅಳಿವಿನಂಚಿನಲ್ಲಿರುವ (EN)

    C) ದುರ್ಬಲ (VU)

    D) ಕನಿಷ್ಠ ಕಾಳಜಿ (LC)

    ಉತ್ತರ: C) ದುರ್ಬಲ (VU)

  • ರವಿದಾಸಿಯಾ ಸಮುದಾಯದಿಂದ ಪ್ರತ್ಯೇಕ ಧರ್ಮದ ಬೇಡಿಕೆ | ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳ ಆಮದು ನಿಷೇಧಿಸಿದ ಭಾರತ | ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ | ನಮಸ್ತೆ (NAMASTE) ದಿನ | ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮ | ಮಗ್ಗರ್ ಮೊಸಳೆ (Mugger Crocodile) | ನಿದಾರ್ (NIDAR) 2.0 | ಎರೆಂಡಿಲ್-1 ಉಪಗ್ರಹ

    ರವಿದಾಸಿಯಾ ಸಮುದಾಯದಿಂದ ಪ್ರತ್ಯೇಕ ಧರ್ಮದ ಬೇಡಿಕೆ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ: 

    • ರವಿದಾಸಿಯಾ ಸಮುದಾಯವು ಮುಂದಿನ ಜನಗಣತಿಯಲ್ಲಿ ಪ್ರತ್ಯೇಕ ‘ರವಿದಾಸಿಯಾ ಧರ್ಮ’ ವರ್ಗವನ್ನು ಸೃಷ್ಟಿಸಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

    ‘ರವಿದಾಸಿಯಾ ಸಮುದಾಯ’ದ ಬಗ್ಗೆ: 

    • ಈ ಸಮುದಾಯವು 15 ರಿಂದ 16 ನೇ ಶತಮಾನದ ಪ್ರಸಿದ್ಧ ಭಕ್ತಿ ಚಳುವಳಿಯ ಸಂತ, ಸಮಾಜ ಸುಧಾರಕ ಮತ್ತು ಅತೀಂದ್ರಿಯ ಕವಿ ಗುರು ರವಿದಾಸ್ ಅವರ ಬೋಧನೆಗಳನ್ನು ಅನುಸರಿಸುತ್ತದೆ.
    • ಮೂಲ ತತ್ವಶಾಸ್ತ್ರ: ಗುರು ರವಿದಾಸ್ ಅವರು ಸಾಮಾಜಿಕ ಸಮಾನತೆ, ಘನತೆ ಮತ್ತು ಜಾತಿ ತಾರತಮ್ಯದ ನಿರ್ಮೂಲನೆಯನ್ನು ಪ್ರತಿಪಾದಿಸಿದರು. ದುಃಖ, ಭಯ ಮತ್ತು ಅಸಮಾನತೆಯಿಂದ ಮುಕ್ತವಾದ ಆದರ್ಶ ಸಮಾಜವಾದ ಬೇಗಂಪುರ ಪರಿಕಲ್ಪನೆಯನ್ನು ಅವರು ಕಲ್ಪಿಸಿದ್ದರು.
    • ಜನಸಂಖ್ಯೆ: ಭಾರತದಲ್ಲಿ ಪಂಜಾಬ್ ರಾಜ್ಯವು ಅತಿ ಹೆಚ್ಚು ರವಿದಾಸಿಯಾ ಜನಸಂಖ್ಯೆಯನ್ನು ಹೊಂದಿದೆ ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 32% ದಲಿತರನ್ನು ಒಳಗೊಂಡಿದೆ.
    • ಪ್ರಮುಖ ಸಂಸ್ಥೆ: ಬಾಬಾ ಸಂತ ಪೀಪಲ್ ದಾಸ್ ಅವರಿಂದ 20ನೇ ಶತಮಾನದ ಆರಂಭದಲ್ಲಿ ಸ್ಥಾಪನೆಯಾದ ಪಂಜಾಬ್‌ನ ಡೇರಾ ಸಚ್‌ಖಂಡ್ ಬಲ್ಲಾನ್ ರವಿದಾಸಿಯಾ ಸಮುದಾಯದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಸಂಸ್ಥೆಯಾಗಿದೆ.

    ಸಂತ ರವಿದಾಸ್ ಅವರ ಬಗ್ಗೆ: 

    • 14 ನೇ ಶತಮಾನದಲ್ಲಿ ಜನಿಸಿದ ಇವರು 14 ರಿಂದ 17 ನೇ ಶತಮಾನದ ನಡುವೆ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿಯಾದ ಭಕ್ತಿ ಚಳುವಳಿಯ ಪ್ರಮುಖ ಸಂತರಾಗಿದ್ದರು.
    • ಇವರು ಸಂತ ಕಬೀರರ ಶಿಷ್ಯರಾಗಿದ್ದರು ಮತ್ತು ರವಿದಾಸಿಯಾ ಧರ್ಮದ ಸ್ಥಾಪಕರಾಗಿದ್ದರು ಹಾಗೂ ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು.

    ಜೀವನ ಮತ್ತು ಬೋಧನೆಗಳು

    • ಅವರು ಶ್ರೇಷ್ಠ ಸಮಾಜ ಸುಧಾರಕ ಹಾಗೂ ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶವಾಹಕರಾಗಿದ್ದರು.
    • ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಮತ್ತು ತುಳಿತಕ್ಕೊಳಗಾದವರ ಉನ್ನತಿಗಾಗಿ ಅವರು ಅವಿರತವಾಗಿ ಶ್ರಮಿಸಿದರು.
    • ಅವರ ಜೀವನವು ತ್ಯಾಗ ಮತ್ತು ತಪಸ್ಸಿನ ವಿಶಿಷ್ಟ ಉದಾಹರಣೆಯಾಗಿದ್ದು, ವಿವಿಧ ಸಾಮಾಜಿಕ ವಿಷಯಗಳ ಕುರಿತು ಅನೇಕ ರಚನೆಗಳನ್ನು ಬರೆದಿದ್ದಾರೆ. 
    • ಅವರು ‘ಮನ್ ಚಂಗಾ ತೊ ಕಟೌತಿ ಮೇ ಗಂಗಾ’ ಎಂಬ ಜನಪ್ರಿಯ ಹಿಂದಿ ನಾಣ್ಣುಡಿಯನ್ನು ಸೃಷ್ಟಿಸುವ ಮೂಲಕ ಸಮಾಜಕ್ಕೆ ‘ಕರ್ಮ’ದ ಬಗ್ಗೆ ಅತ್ಯಂತ ವಿಶಾಲವಾದ ಸಂದೇಶವನ್ನು ನೀಡಿದರು.

    ಪರಂಪರೆ

    • ಸಿಖ್ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಇವರ 41 ಭಕ್ತಿಗೀತೆಗಳು ಮತ್ತು ಕವಿತೆಗಳನ್ನು ಒಳಗೊಂಡಿದೆ.
    • ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಗುರು ರವಿದಾಸ್‌ಜಿಯವರ ಮೌಲ್ಯಗಳ ಆಧಾರದ ಮೇಲೆ ಸಂವಿಧಾನದ ತತ್ವಗಳನ್ನು ಅಳವಡಿಸಿದರು.

    ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳ ಆಮದು ನಿಷೇಧಿಸಿದ ಭಾರತ

    ರಾಜಕೀಯ

    ಇದೀಗ ಸುದ್ದಿಯಲ್ಲಿ: 

    • ವಿದೇಶಿ ವ್ಯಾಪಾರ ನಿರ್ದೇಶನಾಲಯವು (DGFT) ಭಾರತದ ವಿದೇಶಿ ವ್ಯಾಪಾರ ನೀತಿ (FTP) 2023 ಅನ್ನು ಅಧಿಕೃತವಾಗಿ ತಿದ್ದುಪಡಿ ಮಾಡಿದ್ದು, ಬಲವಂತದ ದುಡಿಮೆಯ ಮೂಲಕ ತಯಾರಿಸಿದ ಸರಕುಗಳ ಆಮದನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ.

    ಸಾಂವಿಧಾನಿಕ ಚೌಕಟ್ಟು

    ಭಾರತದ ಸಂವಿಧಾನವು ಶೋಷಣೆಯ ವಿರುದ್ಧದ ಹಕ್ಕಿನ ಅಡಿಯಲ್ಲಿ ಬಲವಂತದ ದುಡಿಮೆಯನ್ನು ಕಟ್ಟುನಿಟ್ಟಾಗಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುತ್ತದೆ:

    • ವಿಧಿ 23(1): ಇದು ಕೇವಲ ಬಲವಂತದ ದೈಹಿಕ ದುಡಿಮೆಯನ್ನು ಮಾತ್ರವಲ್ಲದೆ, ಕಾರ್ಮಿಕರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವಂತಹ ಆರ್ಥಿಕ ಶೋಷಣೆಯನ್ನು ಸಹ ರದ್ದುಗೊಳಿಸುತ್ತದೆ.
    • ವಿಧಿ 23(2): ತುರ್ತು ಸಾರ್ವಜನಿಕ ಸೇವೆಯ (ಉದಾಹರಣೆಗೆ ಸೈನ್ಯಕ್ಕೆ ಸೇರ್ಪಡೆ ಅಥವಾ ವಿಪತ್ತು ನಿರ್ವಹಣೆ) ಕಡ್ಡಾಯ ಸೇವೆಗೆ ಒಳಪಡಿಸಲು ರಾಜ್ಯಕ್ಕೆ ಅವಕಾಶ ನೀಡುತ್ತದೆ, ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಧರ್ಮ, ಜನಾಂಗ, ಜಾತಿ ಅಥವಾ ವರ್ಗದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
    • ವಿಧಿ 24: 14 ವರ್ಷದೊಳಗಿನ ಮಕ್ಕಳನ್ನು ಕಾರ್ಖಾನೆಗಳು, ಗಣಿಗಳು ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ.
    • ರಾಜ್ಯ ನೀತಿ ನಿರ್ದೇಶಕ ತತ್ವಗಳು (DPSP): ವಿಧಿ 42 ನ್ಯಾಯಸಮ್ಮತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಕಡ್ಡಾಯಗೊಳಿಸಿದರೆ, ವಿಧಿ 43 ಜೀವನಾವಶ್ಯಕ ವೇತನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ.

    ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • 2025 ರ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಸ್ ಸಯೀದ್ ನ ಪಾತ್ರಕ್ಕಾಗಿ ಜಮ್ಮುವಿನ ವಿಶೇಷ NIA ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ನಂತರ, ಆತನ ಗೈರುಹಾಜರಿಯಲ್ಲಿಯೇ ವಿಚಾರಣೆ ಎದುರಿಸಲು ಸಿದ್ಧನಾಗಿದ್ದಾನೆ.

    ಹೆಚ್ಚಿನ ಮಾಹಿತಿ: 

    • ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ಸೆಕ್ಷನ್ 356 ರ ಅಡಿಯಲ್ಲಿ, ಆರೋಪಿಯ ಭೌತಿಕ ಉಪಸ್ಥಿತಿಯಿಲ್ಲದೆ ಕ್ರಿಮಿನಲ್ ವಿಚಾರಣೆಯನ್ನು ನಡೆಸಲು ಮತ್ತು ತೀರ್ಪು ನೀಡಲು ಯಾವುದೇ ಸಮರ್ಥ ವಿಚಾರಣಾ ನ್ಯಾಯಾಲಯಕ್ಕೆ ಅವಕಾಶವಿದೆ.
    • ಹಳೆಯ CrPC, 1973 ಕಾಯ್ದೆಯು ಆರೋಪಿಯು ತಲೆಮರೆಸಿಕೊಂಡಾಗ ಕೇವಲ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಮಾತ್ರ ನ್ಯಾಯಾಲಯಗಳಿಗೆ ಸೀಮಿತಗೊಳಿಸಿತ್ತು, ಆದರೆ ಪ್ರಸ್ತುತ BNSS ಅಂತಿಮ ತೀರ್ಪು ನೀಡಲು ಅನುಮತಿಸುತ್ತದೆ.
    • ಅರ್ಹತೆ: 10 ವರ್ಷಗಳ ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾದ ಅಪರಾಧಗಳಿಗಾಗಿ ಸೆಕ್ಷನ್ 84 ರ ಅಡಿಯಲ್ಲಿ ಘೋಷಿತ ಅಪರಾಧಿಗಳಿಗೆ ಮಾತ್ರ ಈ ನಿಬಂಧನೆಯು ಪ್ರತ್ಯೇಕವಾಗಿ ಅನ್ವಯಿಸುತ್ತದೆ.
    • ಜುಲೈ 1, 2024 ರಿಂದ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ಅಧಿಕೃತವಾಗಿ ವಸಾಹತುಶಾಹಿ ಕಾಲದ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC), 1973 ಅನ್ನು ಬದಲಾಯಿಸಿದೆ.

    ನಮಸ್ತೆ (NAMASTE) ದಿನ

    ರಾಜಕೀಯ

    ಇದೀಗ ಸುದ್ದಿಯಲ್ಲಿ: 

    • 2023 ರಲ್ಲಿ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯು (NAMASTE) ಪ್ರಾರಂಭವಾದ ಮೂರು ವರ್ಷಗಳ ಸ್ಮರಣಾರ್ಥವಾಗಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜುಲೈ 14 ರಂದು 3 ನೇ ನಮಸ್ತೆ ದಿನವನ್ನು ಆಚರಿಸಿತು.

    ನಮಸ್ತೆ ದಿನ’ದ ಬಗ್ಗೆ: 

    • ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಳಚರಂಡಿ, ಸಪಾಯಿ ಕರ್ಮಚಾರಿ ಕಾರ್ಮಿಕರು, ತ್ಯಾಜ್ಯ ಆಯುವವರು ಮತ್ತು ಹಿಂದಿನ ಮಲ ಹೊರುವವರು ಸೇರಿದಂತೆ ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಲು ಈ ದಿನವನ್ನು ಸಮರ್ಪಿಸಲಾಗಿದೆ.

    ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAMASTE)ಯ ಬಗ್ಗೆ: 

    • ಪ್ರಾರಂಭ: ಜುಲೈ 2023
    • ಹಣಕಾಸು ನೆರವು: ಕೇಂದ್ರ ವಲಯದ ಯೋಜನೆ.
    • ಅನುಷ್ಠಾನ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ.
    • ಉದ್ದೇಶಗಳು:
      • ನೈರ್ಮಲ್ಯ ಕಾರ್ಯಗಳಲ್ಲಿ ಶೂನ್ಯ ಸಾವುನೋವುಗಳು.
      • ಎಲ್ಲಾ ನೈರ್ಮಲ್ಯ ಕಾರ್ಯಾಚರಣೆಗಳನ್ನು ಕೇವಲ ನುರಿತ ಕಾರ್ಮಿಕರು ಮಾತ್ರ ನಿರ್ವಹಿಸುವುದು.
      • ಮಾನವ ಮಲಮೂತ್ರಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು.
      • ಮಲ ಹೊರುವವರ ಪುನರ್ವಸತಿ ಕಲ್ಪಿಸುವುದು.
    • ಪ್ರಮುಖ ಮಧ್ಯಸ್ಥಿಕೆಗಳು:
      • ಪಾರ್ಶ್ವನೋಟ: ಒಳಚರಂಡಿ/ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ (SSWs) ವಿವರಗಳ ಡಿಜಿಟಲೀಕರಣ.
      • ಸುರಕ್ಷತೆ: ಕಾರ್ಮಿಕರಿಗೆ PPE ಕಿಟ್‌ಗಳು, ಸುರಕ್ಷತಾ ಸಾಧನಗಳು ಮತ್ತು ತರಬೇತಿಯನ್ನು ಒದಗಿಸುವುದು.
      • ಸಬಲೀಕರಣ: ನೈರ್ಮಲ್ಯ ಯಂತ್ರೋಪಕರಣಗಳನ್ನು ಖರೀದಿಸಲು ಬಂಡವಾಳ ಸಬ್ಸಿಡಿ ನೀಡಿ ಅವರನ್ನು “ಸ್ಯಾನಿಪ್ರೆನಿಯರ್ಸ್” (“sanipreneurs”) ಆಗಿ ಸಬಲೀಕರಣಗೊಳಿಸುವುದು.
      • ಆರೋಗ್ಯ: ಔದ್ಯೋಗಿಕ ಸುರಕ್ಷತಾ ತರಬೇತಿ ಮತ್ತು ಆರೋಗ್ಯ ವಿಮೆ ಒದಗಿಸುವುದು.
    • ಪ್ರಾಮುಖ್ಯತೆ: ಇದು ಸುಸ್ಥಿರ ಅಭಿವೃದ್ಧಿ ಗುರಿ (SDG 6: ಶುದ್ಧ ನೀರು ಮತ್ತು ನೈರ್ಮಲ್ಯ) ಗೆ ಹೊಂದಿಕೆಯಾಗುತ್ತದೆ ಮತ್ತು ನೈರ್ಮಲ್ಯ ಕಾರ್ಮಿಕರ ಘನತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುತ್ತದೆ.

    ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ: 

    • ಪಂಚಾಯತ್ ರಾಜ್ ಸಚಿವಾಲಯವು ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮದ ಅಡಿಯಲ್ಲಿ ಪಂಚಾಯತ್‌ಗಳ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.

    ಆತ್ಮನಿರ್ಭರ್ ಪಂಚಾಯತ್ ಕಾರ್ಯಕ್ರಮದ ಬಗ್ಗೆ: 

    • ಇದು ಪಂಚಾಯತ್ ರಾಜ್ ಸಚಿವಾಲಯದ (MoPR) ರಾಷ್ಟ್ರೀಯ ಉಪಕ್ರಮವಾಗಿದೆ.
    • ಉದ್ದೇಶ: ಅರ್ಹ ಗ್ರಾಮ ಪಂಚಾಯಿತಿಗಳು (GPs) ಮತ್ತು ತಾಲೂಕ ಪಂಚಾಯಿತಿಗಳಿಗೆ (BPs) ಆರ್ಥಿಕವಾಗಿ ಲಾಭದಾಯಕ ಮತ್ತು ಆದಾಯ-ಉತ್ಪಾದಿಸುವ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಈ ಕಾರ್ಯಕ್ರಮವು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (RGSA) ವಿಶಾಲ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    ಪ್ರಮುಖ ಲಕ್ಷಣಗಳು

    • ಅರ್ಹತೆ: ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಗ್ರಾಮ ಪಂಚಾಯಿತಿಗಳು ಕನಿಷ್ಠ ₹50 ಲಕ್ಷ ಸ್ವಂತ ಮೂಲದ ಆದಾಯ (OSR) ಹೊಂದಿರಬೇಕು, ಮತ್ತು ತಾಲೂಕ ಪಂಚಾಯಿತಿಗಳು ಕನಿಷ್ಠ ₹1 ಕೋಟಿ ಸ್ವಂತ ಮೂಲದ ಆದಾಯ (OSR) ಹೊಂದಿರಬೇಕು. ಅಲ್ಲದೆ, ಅವುಗಳ ಅಧಿಕಾರಾವಧಿಯಲ್ಲಿ ಕನಿಷ್ಠ 3 ವರ್ಷಗಳು ಉಳಿದಿರಬೇಕು.
    • ಯೋಜನೆ ಸಲ್ಲಿಕೆಗೆ ಗ್ರಾಮಸಭೆಯ ಲಿಖಿತ ಒಪ್ಪಿಗೆಯ ದಾಖಲಾತಿಯು ಕಡ್ಡಾಯ ಅವಶ್ಯಕತೆಯಾಗಿದೆ.
    • ಬಹುಮಾನ: ವಿಜೇತ ಪಂಚಾಯಿತಿಗಳು ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಅನುಷ್ಠಾನಗೊಳಿಸಲು ಸಂಪೂರ್ಣ ತಾಂತ್ರಿಕ ನೆರವನ್ನು ಪಡೆಯುತ್ತವೆ.

    ಮಗ್ಗರ್ ಮೊಸಳೆ (Mugger Crocodile)

    ಪರಿಸರ

    ಇದೀಗ ಸುದ್ದಿಯಲ್ಲಿ: 

    • ರಾಜಸ್ಥಾನದ ಕೋಟಾ ಜಿಲ್ಲೆಯ ಚಂದ್ರಲೋಯಿ ನದಿಯಲ್ಲಿ ನಿಷೇಧಿತ ಕೀಟನಾಶಕವಾದ ಆಲ್ಡ್ರಿನ್ (Aldrin) ಬಳಕೆಯಿಂದಲೇ ಅನೇಕ ಮಗ್ಗರ್ ಮೊಸಳೆಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ನೇಮಿಸಿದ ಜಂಟಿ ಸಮಿತಿಯು ಖಚಿತಪಡಿಸಿದೆ.

    ಮಗ್ಗರ್ ಮೊಸಳೆಯ ಬಗ್ಗೆ (Crocodylus palustris)

    • ಮಗ್ಗರ್ (ಅಥವಾ ಜೌಗು ಪ್ರದೇಶದ) ಮೊಸಳೆಯು ಮಧ್ಯಮ ಗಾತ್ರದ, ಅಗಲವಾದ-ಮೂತಿಯ ಸಿಹಿನೀರಿನ ಮೊಸಳೆ ಪ್ರಭೇದವಾಗಿದೆ.
    • ಇದು ತನ್ನ ಜಲವಾಸಿ ಪರಿಸರ ವ್ಯವಸ್ಥೆಯಲ್ಲಿ ಅಗ್ರ ಪರಭಕ್ಷಕವಾಗಿದೆ.
    • ವಿಪರೀತ ಹವಾಮಾನದ ಸಮಯದಲ್ಲಿ ಆಶ್ರಯ ಮತ್ತು ತಾಪಮಾನ ನಿಯಂತ್ರಣಕ್ಕಾಗಿ ಇದು ಮಣ್ಣಿನ ದಡಗಳಲ್ಲಿ ವಿಸ್ತಾರವಾದ ಬಿಲಗಳನ್ನು ತೋಡುತ್ತದೆ.
    • ಹಂಚಿಕೆ: ಭಾರತೀಯ ಉಪಖಂಡದಾದ್ಯಂತ ಜೌಗು ಪ್ರದೇಶಗಳು, ಸರೋವರಗಳು, ನದಿಗಳು ಮತ್ತು ಕೃತಕ ಕೊಳಗಳಲ್ಲಿ ವಾಸಿಸುತ್ತದೆ. ಮುಖ್ಯವಾಗಿ ಭಾರತದಲ್ಲಿ ಕಂಡುಬರುವ ಇವುಗಳು, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತು ಇರಾನ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿವೆ.
    • ಆಹಾರ ಪದ್ಧತಿ: ಕಿರಿಯ ಮೊಸಳೆಗಳು ಕೀಟಗಳು ಮತ್ತು ಸಣ್ಣ ಮೀನುಗಳನ್ನು ತಿನ್ನುತ್ತವೆ, ಆದರೆ ವಯಸ್ಕ ಮೊಸಳೆಗಳು ದೊಡ್ಡ ಮೀನುಗಳು, ಪಕ್ಷಿಗಳು, ಹಾವುಗಳು ಮತ್ತು ಸಸ್ತನಿಗಳನ್ನು ಬೇಟೆಯಾಡುತ್ತವೆ.
    • ಬೇಟೆಯ ಸಂಖ್ಯೆಯನ್ನು ನಿಯಂತ್ರಿಸುವ, ಪೋಷಕಾಂಶಗಳನ್ನು ಮರುಬಳಕೆ ಮಾಡುವ ಮತ್ತು ಮೃತದೇಹಗಳನ್ನು ಸ್ವಚ್ಛಗೊಳಿಸುವ ಕೀಸ್ಟೋನ್ ಪ್ರಭೇದವಾಗಿದೆ.
    • ಸಂರಕ್ಷಣಾ ಸ್ಥಾನಮಾನ: IUCN: ದುರ್ಬಲ (VU); CITES: ಅನುಬಂಧ I; ವನ್ಯಜೀವಿ ಸಂರಕ್ಷಣಾ ಕಾಯ್ದೆ (WPA): ಅನುಸೂಚಿ I.

    ಭಾರತದ ಮೊಸಳೆ ಪ್ರಭೇದಗಳ ಹೋಲಿಕೆ

    ಭಾರತವು ಮೂರು ವಿಶಿಷ್ಟ ಮೊಸಳೆ ಪ್ರಭೇದಗಳಿಗೆ ನೆಲೆಯಾಗಿದೆ. ಎಲ್ಲಾ ಮೂರು ಪ್ರಭೇದಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅನುಸೂಚಿ I ರ ಅಡಿಯಲ್ಲಿ ರಕ್ಷಿಸಲಾಗಿದೆ.

    ವೈಶಿಷ್ಟ್ಯಗಳು

    ಘರಿಯಾಲ್ (Gavialis ga

    ಮಗ್ಗರ್ (Crocodylus palustris)

    ಉಪ್ಪುನೀರಿನ ಮೊಸಳೆ (Crocodylus porosus)

    IUCN ಸ್ಥಾನಮಾನ

    ತೀವ್ರ ಅಳಿವಿನಂಚಿನಲ್ಲಿದೆ (CR)

    ದುರ್ಬಲ (VU)

    ಕನಿಷ್ಠ ಕಾಳಜಿ (LC)

    ಪ್ರಾಥಮಿಕ ಆವಾಸಸ್ಥಾನ

    ಮರಳುದಂಡೆಗಳಿರುವ ಆಳವಾದ, ಸ್ಪಷ್ಟ ಮತ್ತು ವೇಗವಾಗಿ ಹರಿಯುವ ಸಿಹಿನೀರಿನ ನದಿಗಳು

    ನಿಧಾನವಾಗಿ ಹರಿಯುವ ಸಿಹಿನೀರು: ಸರೋವರಗಳು, ನದಿಗಳು, ಜೌಗು ಪ್ರದೇಶಗಳು ಮತ್ತು ಕೊಳಗಳು

    ಮ್ಯಾಂಗ್ರೋವ್ ಜೌಗು ಪ್ರದೇಶಗಳು, ಕರಾವಳಿ ಅಳಿವೆಗಳು ಮತ್ತು ನದಿ ಮುಖಜಭೂಮಿಗಳು

    ಪ್ರಮುಖ ಸ್ಥಳಗಳು

    ರಾಷ್ಟ್ರೀಯ ಚಂಬಲ್ ಅಭಯಾರಣ್ಯ (ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ), ಗಿರ್ವಾ, ಗಂಡಕ್

    ಭಾರತದಾದ್ಯಂತ ವ್ಯಾಪಕವಾಗಿ ಹರಡಿದೆ (ಉದಾ: ಗುಜರಾತ್, ಕರ್ನಾಟಕ, ಮಧ್ಯಪ್ರದೇಶ)

    ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ (ಒಡಿಶಾ), ಸುಂದರ್‌ಬನ್ಸ್ (ಪಶ್ಚಿಮ ಬಂಗಾಳ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

    ಭೌತಿಕ ಲಕ್ಷಣ

    ಇವು ಉದ್ದವಾದ, ತೆಳುವಾದ ಮೂತಿ; ಗಂಡು ಮೊಸಳೆಗಳು ಉಬ್ಬಿದ ಗುಬುಟನ್ನು (“ಘರಾ”) ಹೊಂದಿರುತ್ತವೆ

    ಇವು ಕ್ರೊಕೊಡೈಲಸ್ ಪ್ರಭೇದಗಳಲ್ಲಿಯೇ ಅತ್ಯಂತ ಅಗಲವಾದ ಮೂತಿಯನ್ನು ಹೊಂದಿರುತ್ತವೆ. 

    ಇದು ಪ್ರಪಂಚದ ಅತಿದೊಡ್ಡ ಜೀವಂತ ಸರೀಸೃಪವಾಗಿದೆ.

    ಆಹಾರ ಪದ್ಧತಿ

    ಇವು ಪ್ರಾಥಮಿಕವಾಗಿ ಮೀನು-ತಿನ್ನುವ (Piscivorous) ಜೀವಿಗಳಾಗಿದ್ದು, ಮನುಷ್ಯರಿಗೆ ಹಾನಿಕರವಲ್ಲ.

    ಇವು ಸಂದರ್ಭಾನುಸಾರ ಬೇಟೆಯಾಡುವ ಮಾಂಸಾಹಾರಿಗಳಾಗಿದ್ದು; ಮೀನು, ಪಕ್ಷಿಗಳು ಮತ್ತು ಸಸ್ತನಿಗಳನ್ನು ತಿನ್ನುತ್ತವೆ.

    ಇವು ಅಗ್ರ ಪರಭಕ್ಷಕಗಳಾಗಿವೆ; ದೊಡ್ಡ ಬೇಟೆಯನ್ನು ಹಿಡಿಯುವ ಇವುಗಳು ತಮ್ಮ ಸರಹದ್ದನ್ನು ಕಟ್ಟುನಿಟ್ಟಾಗಿ ರಕ್ಷಿಸಿಕೊಳ್ಳುವ ಸ್ವಭಾವವನ್ನು ಹೊಂದಿವೆ.

    ನಿದಾರ್ (NIDAR) 2.0

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಡ್ರೋನ್ ಫೆಡರೇಶನ್ ಆಫ್ ಇಂಡಿಯಾ (DFI) ಸಹಯೋಗದೊಂದಿಗೆ, ಸ್ವಯಾನ್ (SwaYaan) ಉಪಕ್ರಮದ ಅಡಿಯಲ್ಲಿ ಡ್ರೋನ್ ಅಪ್ಲಿಕೇಶನ್ ಮತ್ತು ಸಂಶೋಧನೆಗಾಗಿ ರಾಷ್ಟ್ರೀಯ ನಾವೀನ್ಯತೆ ಸವಾಲಿನ (NIDAR 2.0) 2 ನೇ ಆವೃತ್ತಿಯನ್ನು ಪ್ರಾರಂಭಿಸಿದೆ. NIDAR 2025-26 ರ 1 ನೇ ಆವೃತ್ತಿಯನ್ನು ಮಾರ್ಚ್ 2025 ರಲ್ಲಿ ಪ್ರಾರಂಭಿಸಲಾಯಿತು.

    ನಿದಾರ್ (NIDAR) ಬಗ್ಗೆ

    • ಇದು ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಸಹಯೋಗದ ಸ್ವಾಯತ್ತ ಡ್ರೋನ್‌ಗಳನ್ನು ನಿರ್ಮಿಸಲು ಭಾರತದ ಕಾಲೇಜು ಪದವೀಧರರಿಗೆ ಅಧಿಕಾರ ನೀಡುತ್ತದೆ.

    ಸ್ವಯಾನ್ (SwaYaan) ಬಗ್ಗೆ: 

    • ಸ್ವಯಾನ್ 2022 ರಲ್ಲಿ ಪ್ರಾರಂಭವಾದ MeitY ಯ ರಾಷ್ಟ್ರೀಯ ಉಪಕ್ರಮವಾಗಿದೆ.
    • ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಭಾರತದ UAS ಡ್ರೋನ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಗುರಿಯಾಗಿದೆ.
    • ಪ್ರಾಮುಖ್ಯತೆ: 2030 ರ ವೇಳೆಗೆ ಭಾರತವನ್ನು ಜಾಗತಿಕ ಡ್ರೋನ್ ಕೇಂದ್ರವನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನವನ್ನು ಇದು ಬೆಂಬಲಿಸುತ್ತದೆ.
    • ಇದು ಡ್ರೋನ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಒಳಗೊಂಡಂತೆ ಮಾನವರಹಿತ ವಿಮಾನ ವ್ಯವಸ್ಥೆಗಳಲ್ಲಿ (UAS) ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸಾಮರ್ಥ್ಯ ವೃದ್ಧಿಯತ್ತ ಗಮನಹರಿಸುತ್ತದೆ.

    ಎರೆಂಡಿಲ್-1 ಉಪಗ್ರಹ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ: 

    • ರಾತ್ರಿಯ ಸಮಯದಲ್ಲಿ ಭೂಮಿಯ ಆಯ್ದ ಸ್ಥಳಗಳ ಮೇಲೆ ಸೂರ್ಯನ ಬೆಳಕನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಪ್ರಾಯೋಗಿಕ ಉಪಗ್ರಹವಾದ ಎರೆಂಡಿಲ್-1 (Earendil-1) ಅನ್ನು ಉಡಾವಣೆ ಮಾಡಲು ಮತ್ತು ನಿರ್ವಹಿಸಲು ಅಮೆರಿಕಾ ದೇಶವು ಸ್ಟಾರ್ಟ್ಅಪ್‌ ಒಂದಕ್ಕೆ ಅಧಿಕಾರ ನೀಡಿದೆ.

    ಎರೆಂಡಿಲ್-1 ಉಪಗ್ರಹದ ಬಗ್ಗೆ: 

    • ಎರೆಂಡಿಲ್-1 ಎಂಬುದು ಭೂಸ್ಥಿರವಲ್ಲದ ಉಪಗ್ರಹವಾಗಿದ್ದು, ಇದು ವಿಸ್ತರಿಸಬಹುದಾದ ದೊಡ್ಡದಾದ ತೆಳು-ಪದರದ (thin-film) ಕನ್ನಡಿಯನ್ನು ಹೊಂದಿದೆ. ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶಗಳ ಕಡೆಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ಇದನ್ನು ನಿರ್ದೇಶಿಸಲು (ತಿರುಗಿಸಲು) ಸಾಧ್ಯವಿದೆ.
    • ಪ್ರಾಮುಖ್ಯತೆ: ಸೌರಶಕ್ತಿ ಉತ್ಪಾದನೆಗಾಗಿ ಹಗಲಿನ ಸಮಯವನ್ನು ವಿಸ್ತರಿಸುವುದು ಮತ್ತು ತುರ್ತು ಪರಿಸ್ಥಿತಿಗಳು, ವಿಪತ್ತು ನಿರ್ವಹಣೆ ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ತಾತ್ಕಾಲಿಕ ಬೆಳಕನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 15, ಜುಲೈ 2026

    ಪ್ರಶಸ್ತಿಗಳು

    ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿ: 

    • ಸಾಹಿತ್ಯ ಅಕಾಡೆಮಿಯು ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅಧಿಕೃತ ಸಮಾರಂಭದಲ್ಲಿ 24 ಭಾರತೀಯ ಭಾಷೆಗಳ ಅತ್ಯುತ್ತಮ ಲೇಖಕರನ್ನು ಗೌರವಿಸುವ ಮೂಲಕ ತನ್ನ ಪ್ರತಿಷ್ಠಿತ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಔಪಚಾರಿಕವಾಗಿ ಪ್ರದಾನ ಮಾಡಿದೆ.

    ಪ್ರಮುಖ ಅಂಶಗಳು:

    • ರಾಷ್ಟ್ರೀಯ ಮಾನ್ಯತೆ: 1954 ರಲ್ಲಿ ಸ್ಥಾಪನೆಗೊಂಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತದ ಅತ್ಯುನ್ನತ ರಾಷ್ಟ್ರೀಯ ಸಾಹಿತ್ಯ ಗೌರವಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಯು ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ 22 ಭಾಷೆಗಳು ಸೇರಿದಂತೆ ಇಂಗ್ಲಿಷ್ ಮತ್ತು ರಾಜಸ್ಥಾನಿ ಭಾಷೆಗಳಲ್ಲಿನ ಸೃಜನಶೀಲ ಶ್ರೇಷ್ಠತೆಯನ್ನು ಗುರುತಿಸುತ್ತದೆ.
    • ಪ್ರಶಸ್ತಿಯ ಸ್ವರೂಪ: ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರಿಗೆ ತಾಮ್ರದ ಫಲಕ, ಸಾಂಪ್ರದಾಯಿಕ ಶಾಲು ಮತ್ತು ₹1,00,000 ನಗದು ಬಹುಮಾನವನ್ನು ನೀಡಲಾಗುತ್ತದೆ.
    • ಕನ್ನಡ ಭಾಷೆ: ಪ್ರಸಿದ್ಧ ಹಿರಿಯ ಬರಹಗಾರರಾದ ಅಮರೇಶ ನುಗಡೋನಿ ಅವರು ರಚಿಸಿದ ಜನಪ್ರಿಯ ಸಣ್ಣ ಕಥೆಗಳ ಸಂಕಲನವಾದ ‘ದಡ ಸೇರಿಸು ತಂದೆ’ ಕೃತಿಗೆ ಈ ಗೌರವ ಒಲಿದಿದೆ.
    • ಇಂಗ್ಲಿಷ್ ಭಾಷೆ: ಹಿರಿಯ ರಾಜತಾಂತ್ರಿಕ ಹಾಗೂ ಲೇಖಕರಾದ ನವತೇಜ್ ಸರ್ನಾ ಅವರು 1919 ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಗಳ ಸುತ್ತ ಹೆಣೆದಿರುವ ತಮ್ಮ ಐತಿಹಾಸಿಕ ಕಾದಂಬರಿ ‘ಕ್ರಿಮ್ಸನ್ ಸ್ಪ್ರಿಂಗ್’ (Crimson Spring) ಕೃತಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
    • ಹಿಂದಿ ಭಾಷೆ: ಖ್ಯಾತ ಲೇಖಕಿ ಮಮತಾ ಕಾಲಿಯಾ ಅವರ ಜೀವನಚರಿತ್ರೆಯಾದ ‘ಜೀತೆ ಜೀ ಅಲಹಾಬಾದ್’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಪ್ರಮುಖ ದಿನಾಚರಣೆಗಳು

    ವಿಶ್ವ ಯುವ ಕೌಶಲ್ಯ ದಿನ 2026

    • ಆಚರಿಸುವ ದಿನಾಂಕ: ಜುಲೈ 15
    • ಆಚರಿಸುವ ಸಂಸ್ಥೆ: ವಿಶ್ವಸಂಸ್ಥೆ (ಇದು ಯುನೆಸ್ಕೋ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ನೇತೃತ್ವದಲ್ಲಿ ಆಚರಿಸುತ್ತದೆ).
    • ಉದ್ದೇಶ: ಜಾಗತಿಕ ಉದ್ಯೋಗಿಗಳಲ್ಲಿ ಉಂಟಾಗುತ್ತಿರುವ ಕೌಶಲ್ಯದ ಕೊರತೆಯನ್ನು ನೀಗಿಸಲು ಯುವಜನರಿಗೆ ಭವಿಷ್ಯಕ್ಕೆ ಪೂರಕವಾದ ಕೌಶಲ್ಯಗಳನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ. ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗಾಗಿ ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಸಾಕ್ಷರತೆ ಮತ್ತು ಹಸಿರು ಕೌಶಲ್ಯಗಳನ್ನು (Green Skills) ಸಂಯೋಜಿಸುವ ಕಾರ್ಯತಂತ್ರದ ಮಹತ್ವವನ್ನು ಈ ದಿನವು ಎತ್ತಿ ತೋರಿಸುತ್ತದೆ.
    • ಧ್ಯೇಯವಾಕ್ಯ: “ಹಂಚಿಕೆಯ ಭವಿಷ್ಯಕ್ಕಾಗಿ ಕೌಶಲ್ಯಗಳು” (Skills for a Shared Future)

    ಕ್ರೀಡಾ ಸುದ್ದಿಗಳು

    1. 2026 ರ ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನ ಅಧಿಕೃತ ಲಾಂಛನ ‘ಮಯೂರ್’ ಅನಾವರಣ

    ಇದೀಗ ಸುದ್ದಿಯಲ್ಲಿ:

    • ಮುಂಬರುವ 22 ನೇ ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್ 2026 ರ ಅಧಿಕೃತ ಲಾಂಛನವಾಗಿ ‘ಮಯೂರ್’ವನ್ನು ದೆಹಲಿಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

    ಪ್ರಮುಖ ಅಂಶಗಳು:

    • ಲಾಂಛನದ ಸಾಂಕೇತಿಕತೆ: ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನಿಂದ ಪ್ರೇರಿತವಾಗಿರುವ ‘ಮಯೂರ್’ ಲಾಂಛನದ ಗರಿಗಳಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಧ್ವಜಗಳನ್ನು ಸಂಯೋಜಿಸಲಾಗಿದೆ. ಇದು ‘ವಸುಧೈವ ಕುಟುಂಬಕಂ’ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಭಾರತೀಯ ಆರ್ಥಿಕ ಮತ್ತು ಸಾಮಾಜಿಕ ತತ್ವವನ್ನು ಬಿಂಬಿಸುತ್ತದೆ.
    • ಆತಿಥ್ಯ ಮತ್ತು ವೇಳಾಪಟ್ಟಿ: ಈ ಕ್ರೀಡಾಕೂಟವು 2026 ಜುಲೈ 27 ರಿಂದ ಆಗಸ್ಟ್ 2 ರವರೆಗೆ ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ 25 ಕ್ಕೂ ಹೆಚ್ಚು ಕಾಮನ್‌ವೆಲ್ತ್ ರಾಷ್ಟ್ರಗಳ ಪ್ಯಾಡ್ಲರ್‌ಗಳು ಭಾಗವಹಿಸಲಿದ್ದಾರೆ.
    • ಆಯೋಜನಾ ಸಂಸ್ಥೆಗಳು: ಈ ಕ್ರೀಡಾಕೂಟವನ್ನು ಕಾಮನ್‌ವೆಲ್ತ್ ಟೇಬಲ್ ಟೆನ್ನಿಸ್ ಫೆಡರೇಶನ್ (CTTF) ಅಡಿಯಲ್ಲಿ ದೆಹಲಿ ಸರ್ಕಾರ ಮತ್ತು ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್ (TTFI) ಜಂಟಿಯಾಗಿ ಆಯೋಜಿಸುತ್ತಿವೆ.

     

    2. ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ‘ನಾಗಪುರ ಸಚಿವ ಮಟ್ಟದ ಘೋಷಣೆ’ ಅಂಗೀಕಾರ

    ಇದೀಗ ಸುದ್ದಿಯಲ್ಲಿ: 

    • ಭಾರತದ 2026 ಬ್ರಿಕ್ಸ್ (BRICS) ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ 3 ನೇ ಬ್ರಿಕ್ಸ್ ಸಾರಿಗೆ ಸಚಿವರ ಸಭೆಯಲ್ಲಿ ‘ನಾಗಪುರ ಸಚಿವ ಮಟ್ಟದ ಘೋಷಣೆ’ಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ.

    ಪ್ರಮುಖ ಅಂಶಗಳು:

    • ಸಹಕಾರ ಚೌಕಟ್ಟು: ಈ ಘೋಷಣೆಯು ಸಾರಿಗೆ ಮತ್ತು ಸಾಗಾಣಿಕೆ (ಲಾಜಿಸ್ಟಿಕ್ಸ್) ವಲಯದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಅಂತರರಾಷ್ಟ್ರೀಯ ಸಹಕಾರ, ಸಂಪರ್ಕ ಮತ್ತು ತಾಂತ್ರಿಕ ಸಂಯೋಜನೆಯನ್ನು ಆಳವಾಗಿಸಲು ನಾವೀನ್ಯತೆ ಆಧಾರಿತ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.
    • ಸಾರಿಗೆ ವಲಯದಲ್ಲಿ ಇಂಗಾಲದ ಕಡಿತ: ಮಾಲಿನ್ಯ ಮತ್ತು ಅನಿಲ ಹೊರಸೂಸುವಿಕೆಯನ್ನು ವೇಗವಾಗಿ ಕಡಿಮೆ ಮಾಡಲು, ಸುಸ್ಥಿರ ವಿಮಾನಯಾನ ಇಂಧನವನ್ನು (SAF) ಉತ್ತೇಜಿಸಲು ಹಾಗೂ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ನೇರವಾಗಿ ಸಂಯೋಜಿಸಲು ಈ ಘೋಷಣೆಯು ಒಂದು ಕಾರ್ಯತಂತ್ರದ ಮಾರ್ಗದರ್ಶಿಯನ್ನು ರೂಪಿಸಿದೆ.
    • ಪೂರೈಕೆ ಸರಪಳಿಯ ದೃಢತೆ: ಸದಸ್ಯ ರಾಷ್ಟ್ರಗಳ ನಡುವೆ ಸುಗಮ ವ್ಯಾಪಾರ ವಹಿವಾಟನ್ನು ಸುಲಭಗೊಳಿಸಲು ಬಲಿಷ್ಠ, ಆಘಾತ-ನಿರೋಧಕ ಜಾಗತಿಕ ಪೂರೈಕೆ ಸರಪಳಿಗಳನ್ನು ಮತ್ತು ಗಡಿಯಾಚೆಗಿನ ಲಾಜಿಸ್ಟಿಕ್ಸ್ ಕಾರಿಡಾರ್‌ಗಳನ್ನು ನಿರ್ಮಿಸುವತ್ತ ಇದು ಗಮನ ಹರಿಸುತ್ತದೆ.
    • ಸಾಂಸ್ಥಿಕ ಉಪಕ್ರಮಗಳು: ಬ್ರಿಕ್ಸ್ ರೈಲ್ವೆ ಸಂಶೋಧನಾ ಜಾಲದ (BRICS Railway Research Network) ಸಾಂಸ್ಥಿಕ ಚೌಕಟ್ಟನ್ನು ಮುನ್ನಡೆಸಲು ಹಾಗೂ ಸುಸ್ಥಿರ ಸಾರಿಗೆಗಾಗಿ ಪರಿಸರಸ್ನೇಹಿ, ಬಹು-ಮಾದರಿಯ ನಗರ ಚಲನಶೀಲ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಈ ಘೋಷಣೆಯಲ್ಲಿ ಬದ್ಧತೆ ವ್ಯಕ್ತಪಡಿಸಲಾಗಿದೆ.

    Miscellaneous

    1. Jagannath Rath Yatra 2026 Commences in Puri, Odisha

    Why in News: The world-renowned Jagannath Rath Yatra 2026 commenced on July 16, 2026 along the Grand Road (Bada Danda) in the historic temple town of Puri, Odisha.

    Key Highlights:

    • Core Significance:- Dedicated to Lord Jagannath (a form of Lord Vishnu/Krishna), his elder brother Lord Balabhadra, and his sister Goddess Subhadra, commemorating their annual journey from the 12th-century Shree Jagannath Temple to their maternal aunt’s home at the Shree Gundicha Temple.
    • Prominent Rituals:- A major highlight is the Chhera Pahara—a sacred rite where the Gajapati King of Puri sweeps the chariot floors with a golden broom, symbolizing radical universal equality before the divine. The nine-day festival concludes with the return procession known as the Bahuda Yatra.
    • Historical Standing:- Celebrated continuously for centuries, it is one of India’s oldest and largest religious processions. It is unique because the deities leave the sanctum sanctorum to allow universal darshan to people of all backgrounds, overriding traditional temple entry restrictions.
    • Chariot Construction:- The three massive wooden chariots are rebuilt from scratch every year by hereditary carpenters (Maharanas) using sacred timber sourced from specified Odisha forests without using any metal nails. The construction process traditionally commences on Akshaya Tritiya.

    Jagannath Rath Yatra 2026: The Three Sacred Chariots

    Deity

    Chariot Name

    Dimensions & Wheels

    Canopy Colours

    Lord Jagannath

    Nandighosha

    45 feet tall (16 wheels)

    Red and Yellow

    Lord Balabhadra

    Taladhwaja

    44 feet tall (14 wheels)

    Red and Green

    Goddess Subhadra

    Darpadalana (Devadalana)

    43 feet tall (12 wheels)

    Red and Black

     

    2. Bihar Heli-Tourism and Air Tourism Service Scheme 2026 Launched

    Why in News: Bihar’s Tourism Department, in collaboration with the Directorate of Civil Aviation, officially launched the Bihar Heli-Tourism and Air Tourism Service Scheme 2026.

    Key Highlights: 

    • Connectivity Nodes:- Connects the state capital Patna to key ecological, historical, and religious tourist destinations, including Valmikinagar, Rajgir, and the Maa Mundeshwari Temple
    • Affordable Transit:- Deploys heavily subsidized small aircraft and helicopters to make aerial travel accessible and economical for regular commuters and tourists. 
    • Strategic Objective:- Aims to enhance remote connectivity, boost local economies, and position Bihar as a prominent global tourism hub.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 15 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 15 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಉಮಂಗ್ ಪೋರ್ಟಲ್ [UMANG Portal] ಯಾವ ಕಾರ್ಯಕ್ರಮದ ಅಡಿಯಲ್ಲಿನ ಒಂದು ಪ್ರಮುಖ ಉಪಕ್ರಮವಾಗಿದೆ?

    A) ಮೇಕ್ ಇನ್ ಇಂಡಿಯಾ

    B) ಸ್ಟಾರ್ಟ್-ಅಪ್ ಇಂಡಿಯಾ

    C) ಭಾರತ್ ನೆಟ್

    D) ಡಿಜಿಟಲ್ ಇಂಡಿಯಾ ಕಾರ್ಯಕ್ರಮ

    ಉತ್ತರ: D) ಡಿಜಿಟಲ್ ಇಂಡಿಯಾ ಕಾರ್ಯಕ್ರಮ

     

    2. ಸ್ಥಿರ ಠೇವಣಿ ಸೌಲಭ್ಯವನ್ನು [Standing Deposit Facility – SDF] ಪರಿಚಯಿಸಲು ಮೊದಲ ಬಾರಿಗೆ ಶಿಫಾರಸು ಮಾಡಿದ ಸಮಿತಿ ಯಾವುದು?

    A) ನರಸಿಂಹಂ ಸಮಿತಿ

    B) ರಂಗರಾಜನ್ ಸಮಿತಿ 

    C) ಕೇಳ್ಕರ್ ಸಮಿತಿ 

    D) ಉರ್ಜಿತ್ ಪಟೇಲ್ ಸಮಿತಿ

    ಉತ್ತರ: D) ಉರ್ಜಿತ್ ಪಟೇಲ್ ಸಮಿತಿ 

     

    3. ಗಂಧಕದ ಡೈಆಕ್ಸೈಡ್ [SO₂] ಪ್ರಮುಖವಾಗಿ ಎಲ್ಲಿಂದ ಬಿಡುಗಡೆಯಾಗುತ್ತದೆ?

    A) ಸೌರ ವಿದ್ಯುತ್ ಸ್ಥಾವರಗಳು

    B) ಜಲವಿದ್ಯುತ್ ಯೋಜನೆಗಳು

    C) ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು

    D) ಪವನ ವಿದ್ಯುತ್ ಸ್ಥಾವರಗಳು

    ಉತ್ತರ: C) ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು

     

    4. ಜಾಗತಿಕ ವಾಸಯೋಗ್ಯ ಸೂಚ್ಯಂಕವನ್ನು [Global Liveability Index] ವಾರ್ಷಿಕವಾಗಿ ಯಾವ ಸಂಸ್ಥೆ ಪ್ರಕಟಿಸುತ್ತದೆ?

    A) ವಿಶ್ವ ಆರ್ಥಿಕ ವೇದಿಕೆ [WEF]

    B) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ [UNDP]

    C) ಮರ್ಸರ್ [Mercer]

    D) ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ [EIU]

    ಉತ್ತರ: D) ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ [EIU]

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 14, ಜುಲೈ 2026

    ರಕ್ಷಣೆ (Defence)

    ಭಾರತೀಯ ನೌಕಾಪಡೆಯ ದೃಷ್ಟಿ-10 UAV ಗುಜರಾತ್‌ನಲ್ಲಿ ಪತನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ನೌಕಾಪಡೆಯ ದೃಷ್ಟಿ-10 ಮಾನವರಹಿತ ವೈಮಾನಿಕ ವಾಹನವು (Uncrewed Aerial Vehicle – UAV) ಗುಜರಾತ್‌ನಲ್ಲಿ ಕೈಗೊಂಡಿದ್ದ ತನ್ನ ದೈನಂದಿನ ಕಾರ್ಯಾಚರಣೆಯ ಹಾರಾಟದ (Routine Operational Sortie) ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ.

    ಪ್ರಮುಖ ಅಂಶಗಳು:

    • UAV ತಂತ್ರಜ್ಞಾನ ವೇದಿಕೆ: ಈ ವ್ಯವಸ್ಥೆಯನ್ನು ಮಧ್ಯಮ ಎತ್ತರ ಮತ್ತು ದೀರ್ಘಾವಧಿ ಸಾಮರ್ಥ್ಯದ (MALE) UAV ಎಂದು ವರ್ಗೀಕರಿಸಲಾಗಿದ್ದು, ಇದನ್ನು ವಿಶೇಷವಾಗಿ ಸುದೀರ್ಘ ಅವಧಿಯ ಗುಪ್ತಚರ, ಕಣ್ಗಾವಲು ಮತ್ತು ಮರುಪರಿಶೀಲನೆ (ISR) ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಲು ವಿನ್ಯಾಸಗೊಳಿಸಲಾಗಿದೆ.

    • ಮೂಲ ಮತ್ತು ರೂಪಾಂತರ: ಈ ವೈಮಾನಿಕ ವಾಹನವು ಇಸ್ರೇಲ್ ದೇಶದ ಯುದ್ಧಭೂಮಿಯಲ್ಲಿ ಯಶಸ್ವಿಯಾಗಿ ಸಾಬೀತಾಗಿರುವ ಹೆರ್ಮ್ಸ್ 900 ಡ್ರೋನ್ ತಂತ್ರಜ್ಞಾನದ ಭಾರತೀಯ ಅಗತ್ಯಗಳಿಗೆ ತಕ್ಕಂತೆ ಸಿದ್ಧಪಡಿಸಲಾದ ಒಂದು ವಿಶೇಷ ಆವೃತ್ತಿಯಾಗಿದೆ.

    • ಸ್ವದೇಶಿ ಉತ್ಪಾದನೆ: ಈ ಅತ್ಯಾಧುನಿಕ ವ್ಯವಸ್ಥೆಯನ್ನು ಭಾರತದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆಯು ಸಂಪೂರ್ಣವಾಗಿ ಉತ್ಪಾದಿಸಿದ್ದು, ಇದು ಸರ್ಕಾರದ ಸ್ವದೇಶೀಕರಣ ಉಪಕ್ರಮಗಳ ಅಡಿಯಲ್ಲಿ ಆಯಕಟ್ಟಿನ ರಕ್ಷಣಾ ಉತ್ಪಾದನಾ ವಲಯದಲ್ಲಿ ಖಾಸಗಿ ರಂಗದ ಪ್ರಮುಖ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 14 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 14 ಜುಲೈ, 2026