Blog

  • ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ | ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು | ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್) | ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ | ಚಾಬಹಾರ್ ಬಂದರು

    ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತ ಸರ್ಕಾರವು ‘ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ’ದ (Directorate General of Foreign Trade – DGFT) ಮೂಲಕ ಕಚ್ಚಾ, ಬಿಳಿ ಮತ್ತು ಸಂಸ್ಕರಿಸಿದ ಸಕ್ಕರೆಯ ರಫ್ತನ್ನು 2026 ರ ಸೆಪ್ಟೆಂಬರ್ 30 ರವರೆಗೆ ನಿಷೇಧಿತ ವರ್ಗದಲ್ಲಿ ಇರಿಸಿದೆ.

    ಸಕ್ಕರೆ ರಫ್ತು ನಿಷೇಧದ ಹಿಂದಿನ ಪ್ರಮುಖ ಕಾರಣಗಳು:

    • ಎಲ್-ನಿನೋ ಮತ್ತು ಮುಂಗಾರು ಆತಂಕಗಳು: ಮುಂಬರುವ ಸಂಭಾವ್ಯ ‘ಎಲ್-ನಿನೋ’ ಪ್ರಭಾವವು ಮುಂಗಾರು ಮಳೆಯನ್ನು ದುರ್ಬಲಗೊಳಿಸಬಹುದು. ಇದರಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿ ಭವಿಷ್ಯದ ಸಕ್ಕರೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಸರ್ಕಾರಕ್ಕಿದೆ.
    • ರಸಗೊಬ್ಬರ ಪೂರೈಕೆಯ ಅಪಾಯಗಳು: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಬಹುದು. ಕಬ್ಬಿನ ಬೆಳೆಗೆ ಹೆಚ್ಚಿನ ರಸಗೊಬ್ಬರದ ಅಗತ್ಯತೆ ಇರುವುದರಿಂದ ಇದು ಅತ್ಯಂತ ಮಹತ್ವದ ಅಂಶವಾಗಿದೆ.
    • ಸಾಕಷ್ಟು ದೇಶೀಯ ದಾಸ್ತಾನು ಕಾಯ್ದುಕೊಳ್ಳುವಿಕೆ: ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲು, ಅಭಾವವನ್ನು ತಡೆಗಟ್ಟಲು ಮತ್ತು ದೇಶೀಯ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಸಕ್ಕರೆ ದಾಸ್ತಾನನ್ನು ಕಾಪಾಡಿಕೊಳ್ಳುವುದು ಈ ನಿಷೇಧದ ಪ್ರಮುಖ ಗುರಿಯಾಗಿದೆ.

    ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಅಗರ್‌ವುಡ್ ಮರದ ತುಣುಕುಗಳನ್ನು ಕಾನೂನುಬದ್ಧವಾಗಿ ರಫ್ತು ಮಾಡಲು ಅಸ್ಸಾಂ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿದೆ.

    ಅಗರ್‌ವುಡ್ (Agarwood) ಬಗ್ಗೆ:

    • ಇದನ್ನು ಸಾಮಾನ್ಯವಾಗಿ “ಊದ್” (Oud) ಎಂದೂ ಕರೆಯಲಾಗುತ್ತದೆ.
    • ಸೋಂಕಿಗೆ ತುತ್ತಾದ ‘ಅಕ್ವಿಲೇರಿಯಾ’ (Aquilaria) ಮತ್ತು ‘ಗೈರಿನೋಪ್ಸ್’ (Gyrinops) ಮರಗಳಲ್ಲಿ ನೈಸರ್ಗಿಕವಾಗಿ ಸ್ರವಿಸುವ ಸುಗಂಧಭರಿತ ರಾಳದಿಂದ ಇದನ್ನು ಉತ್ಪಾದಿಸಲಾಗುತ್ತದೆ.
    • ಅಗರ್‌ವುಡ್, ಜಾಗತಿಕವಾಗಿ ಐಷಾರಾಮಿ ಸುಗಂಧ ದ್ರವ್ಯಗಳು, ಧೂಪದ್ರವ್ಯ, ಸೌಂದರ್ಯವರ್ಧಕಗಳು ಮತ್ತು ಸಾಂಪ್ರದಾಯಿಕ ಉತ್ಪನ್ನಗಳಲ್ಲಿ ಬಳಸಲಾಗುವ ಅತ್ಯಂತ ಬೆಲೆಬಾಳುವ ವಸ್ತುವಾಗಿದೆ.
    • ಭಾರತ, ಕಾಂಬೋಡಿಯಾ, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಲಾವೋಸ್ ಮತ್ತು ಭೂತಾನ್‌ನಂತಹ ದೇಶಗಳಲ್ಲಿ ಅಗರ್‌ವುಡ್ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
    • ಭಾರತದಲ್ಲಿ, ಅಕ್ವಿಲೇರಿಯಾ ಮಲಾಸೆನ್ಸಿಸ್ (Aquilaria malaccensis) ಮತ್ತು ಅಕ್ವಿಲೇರಿಯಾ ಖಾಸಿಯಾನಾ (Aquilaria khasiana) ದಂತಹ ಪ್ರಮುಖ ಪ್ರಭೇದಗಳು ಪ್ರಧಾನವಾಗಿ ಅಸ್ಸಾಂ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳು ಸೇರಿದಂತೆ ಈಶಾನ್ಯ ಭಾರತದಲ್ಲಿ ಕಂಡುಬರುತ್ತವೆ.
    • ‘ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ’ದ (CITES) ಅನುಬಂಧ II ರ ಅಡಿಯಲ್ಲಿ ಅಗರ್‌ವುಡ್ ಅನ್ನು ಸಂರಕ್ಷಿಸಲಾಗಿದೆ.

    ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ನಡುವೆ, ಸಾಗರೋತ್ತರ ಬಂಡವಾಳದ ಒಳಹರಿವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ವಿತ್‌ಹೋಲ್ಡಿಂಗ್ ಟ್ಯಾಕ್ಸ್ (‘ಮೂಲದಲ್ಲಿ ತೆರಿಗೆ ತಡೆಹಿಡಿಯುವಿಕೆ) ದರವನ್ನು 20% ದಿಂದ ಹಿಂದಿನ 5% ಕ್ಕೆ ಕಡಿತಗೊಳಿಸಲು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

    ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)ಯ ಬಗ್ಗೆ:

    • ‘ವಿತ್‌ಹೋಲ್ಡಿಂಗ್ ಟ್ಯಾಕ್’ ಅಥವಾ WHT ಎಂಬುದು ಆದಾಯದ ಮೂಲದಲ್ಲಿಯೇ ಸಂಗ್ರಹಿಸಲಾಗುವ ತೆರಿಗೆಯಾಗಿದೆ.
    • ಹೂಡಿಕೆದಾರ ಅಥವಾ ವಿದೇಶಿ ಕಂಪನಿಯು ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಪಾವತಿಸಲು ಕಾಯುವ ಬದಲು, ಆದಾಯವನ್ನು ಸ್ವೀಕರಿಸುವವರ ಕೈಸೇರುವ ಮುನ್ನವೇ ಅದರ ಒಂದು ನಿರ್ದಿಷ್ಟ ಭಾಗವನ್ನು ಕಡಿತಗೊಳಿಸುವಂತೆ ಸರ್ಕಾರವು ಪಾವತಿದಾರರಿಗೆ ಕಡ್ಡಾಯಗೊಳಿಸುತ್ತದೆ.
    • ಹೀಗೆ ಕಡಿತಗೊಳಿಸಲಾದ ಮೊತ್ತವನ್ನು ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗುತ್ತದೆ.
    • ಸರಳವಾಗಿ ಹೇಳುವುದಾದರೆ, ಉದ್ಯೋಗ, ಹೂಡಿಕೆಗಳು, ಸ್ವಾಮ್ಯಧನ (Royalties) ಅಥವಾ ಇತರ ಯಾವುದೇ ಮೂಲಗಳ ಮೂಲಕ ಆದಾಯವನ್ನು ಗಳಿಸಿದಾಗ, ಸರ್ಕಾರವು ಈ ತೆರಿಗೆಯ ಮೂಲಕ ಮುಂಗಡವಾಗಿ ತೆರಿಗೆ ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.
    • ಹಾಂಗ್ ಕಾಂಗ್ ಮತ್ತು ಸಿಂಗಾಪುರ್ ದೇಶಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ.

    ಈ ತೆರಿಗೆಯನ್ನು ಕಡಿತಗೊಳಿಸುವುದರ ಮಹತ್ವ:

    • ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ: ಈ ತೆರಿಗೆ ದರ ಕಡಿಮೆಯಾದರೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶವನ್ನು ಒದಗಿಸುತ್ತದೆ. ಇದು ಹೆಚ್ಚಿನ ವಿದೇಶಿ ನೇರ ಹೂಡಿಕೆ (FDI) ಮತ್ತು ಹಣಕಾಸು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುತ್ತದೆ.
    • ಸುಗಮ ವ್ಯಾಪಾರ ವ್ಯವಸ್ಥೆಯನ್ನು (EoDB) ಸುಧಾರಿಸುತ್ತದೆ: ಗಡಿಯಾಚೆಗಿನ ವಹಿವಾಟುಗಳಲ್ಲಿ ತೊಡಗಿರುವ ಕಂಪನಿಗಳ ಮೇಲಿನ ತೆರಿಗೆ ಮತ್ತು ನಿಯಮಾನುಸರಣೆಯ ಹೊರೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ.
    • ಬಂಡವಾಳ ಮತ್ತು ವ್ಯಾಪಾರದ ಹರಿವನ್ನು ಹೆಚ್ಚಿಸುತ್ತದೆ: ಅಂತರರಾಷ್ಟ್ರೀಯ ವ್ಯಾಪಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಬಂಡವಾಳದ ಮುಕ್ತ ಚಲನೆಯನ್ನು ಇದು ಪ್ರೋತ್ಸಾಹಿಸುತ್ತದೆ.
    • ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ: ಹೆಚ್ಚಿದ ಹೂಡಿಕೆ ಮತ್ತು ವ್ಯಾಪಾರ ಚಟುವಟಿಕೆಗಳು ನವ ಉದ್ಯೋಗಗಳ ಸೃಷ್ಟಿ, ನಾವೀನ್ಯತೆ ಮತ್ತು ಉನ್ನತ ಮಟ್ಟದ ಆರ್ಥಿಕ ಉತ್ಪಾದಕತೆಗೆ ಕಾರಣವಾಗಬಹುದು.

    ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳನ್ನು ಒಳಗೊಂಡ ಐದು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಭಾರತದ ಪ್ರಧಾನ ಮಂತ್ರಿಯವರು ಯುಎಇ (UAE) ನಲ್ಲಿ ಐತಿಹಾಸಿಕ ರಾಜತಾಂತ್ರಿಕ ಭೇಟಿಯನ್ನು ಕೈಗೊಂಡರು.

    ಪ್ರಮುಖ ಫಲಿತಾಂಶಗಳು:

    • ‘ಭಾರತೀಯ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಸಂಸ್ಥೆ’ (ISPRL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.
    • ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಪೂರೈಕೆ ಕುರಿತಂತೆ ಭಾರತೀಯ ತೈಲ ನಿಗಮ ನಿಯಮಿತ (IOCL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗ ಒಪ್ಪಂದವನ್ನು ಏರ್ಪಡಿಸಲಾಯಿತು.
    • ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಚೌಕಟ್ಟು: ಗುಜರಾತ್‌ನ ವಾಡಿನಾರ್‌ನಲ್ಲಿ ‘ಹಡಗು ದುರಸ್ತಿ ಸಮುಚ್ಚಯ’ ಸ್ಥಾಪಿಸಲು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಮತ್ತು ಡ್ರೈಡಾಕ್ಸ್ ವರ್ಲ್ಡ್ (DDW) ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
    • ಭಾರತ ಸರ್ಕಾರವು ಪ್ರಾರಂಭಿಸಿರುವ ‘ಕಡಲ ಅಭಿವೃದ್ಧಿ ನಿಧಿ ಯೋಜನೆ’ಯ ಅಡಿಯಲ್ಲಿ, ಕಡಲಾಚೆಯ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಮಹತ್ವದ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲು ಉಭಯ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

    ಭಾರತ ಮತ್ತು ಯುಎಇ ಸಂಬಂಧಗಳು:

    • ರಾಜಕೀಯ ಸಂಬಂಧಗಳು: ಭಾರತ ಮತ್ತು ಯುಎಇ ದೇಶಗಳು 1972 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. 2017 ರಲ್ಲಿ ಈ ಬಾಂಧವ್ಯವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಯಾಗಿ (CSP) ಉನ್ನತೀಕರಿಸಲಾಯಿತು.
    • ವ್ಯಾಪಾರ ಮತ್ತು ಹೂಡಿಕೆ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು ಐತಿಹಾಸಿಕವಾಗಿ ಮೊದಲ ಬಾರಿಗೆ 100 ಬಿಲಿಯನ್ ಅಮೆರಿಕನ್ ಡಾಲರ್ (US$100 billion) ಗಡಿಯನ್ನು ದಾಟಿದೆ.
    • ಬಾಹ್ಯಾಕಾಶ ಸಹಕಾರ: ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಪರಿಶೋಧನೆ ಮತ್ತು ಬಳಕೆಯಲ್ಲಿ ಸಹಕರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಯುಎಇ ಬಾಹ್ಯಾಕಾಶ ಸಂಸ್ಥೆ 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.
    • ಭಾರತೀಯ ಸಮುದಾಯ: ಸುಮಾರು 35 ಲಕ್ಷ ಭಾರತೀಯ ವಲಸಿಗ ಸಮುದಾಯವು ಯುಎಇ ದೇಶದಲ್ಲಿರುವ ಅತಿ ದೊಡ್ಡ ಜನಾಂಗೀಯ ಸಮುದಾಯವಾಗಿದೆ. ಇದು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 35% ರಷ್ಟಿದೆ.
    • ಬಹುಪಕ್ಷೀಯ ಸಹಕಾರ: ಭಾರತ ಮತ್ತು ಯುಎಇ ಪ್ರಸ್ತುತ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC), I2U2 (ಭಾರತ, ಇಸ್ರೇಲ್, ಯುಎಇ, ಅಮೆರಿಕಾ) ಮತ್ತು UFI (ಯುಎಇ, ಫ್ರಾನ್ಸ್, ಭಾರತ) ತ್ರಿಪಕ್ಷೀಯ ವೇದಿಕೆಗಳಂತಹ ಹಲವು ಬಹುಪಕ್ಷೀಯ ವೇದಿಕೆಗಳ ಸಕ್ರಿಯ ಭಾಗವಾಗಿವೆ.

    ಚಾಬಹಾರ್ ಬಂದರು

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇರಾನ್ ದೇಶದ ವಿದೇಶಾಂಗ ಸಚಿವರು ಚಾಬಹಾರ್ ಬಂದರನ್ನು “ಸುವರ್ಣ ಹೆಬ್ಬಾಗಿಲು” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಈ ಆಯಕಟ್ಟಿನ ಬಂದರನ್ನು ಭಾರತವು ಇನ್ನಷ್ಟು ಅಭಿವೃದ್ಧಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಚಾಬಹಾರ್ ಬಂದರಿನ ಬಗ್ಗೆ:

    • ಸ್ಥಳ: ಇದು ಇರಾನ್‌ನ ಆಗ್ನೇಯ ಭಾಗದಲ್ಲಿ, ಓಮನ್ ಕೊಲ್ಲಿಯ (ಗಲ್ಫ್ ಆಫ್ ಓಮನ್) ಕರಾವಳಿಯಲ್ಲಿರುವ ಪ್ರಮುಖ ಸಮುದ್ರ ಬಂದರಾಗಿದೆ.
    • ಇದು ‘ಶಾಹಿದ್ ಕಲಾಂತರಿ’ ಮತ್ತು ‘ಶಾಹಿದ್ ಬೆಹೇಶ್ತಿ ‘ ಎಂಬ ಎರಡು ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ.
    • ಇದು ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಪಶ್ಚಿಮಕ್ಕೆ ಕೇವಲ 170 ಕಿಲೋಮೀಟರ್ ದೂರದಲ್ಲಿದೆ.
    • ಆಯಕಟ್ಟಿನ ಸ್ಥಳ: ಅಫ್ಘಾನಿಸ್ತಾನದ ‘ಹಾಜಿಗಕ್’ ಕಬ್ಬಿಣದ ಗಣಿಗೆ ಹಾಗೂ ಕಝಾಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಂತಹ ಮಧ್ಯ ಏಷ್ಯಾದ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ತಲುಪಲು ಭಾರತಕ್ಕೆ ಚಾಬಹಾರ್ ಬಂದರು ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವನ್ನು ಕಲ್ಪಿಸುತ್ತದೆ.
    • ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಂಚಾರ ಪಥ (International North-South Transport Corridor): ಹಿಂದೂ ಮಹಾಸಾಗರವನ್ನು ಉತ್ತರ ಯುರೋಪ್‌ಗೆ ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಯೋಜನೆಯಾದ INSTC ಯ ಪ್ರಮುಖ ಭಾಗವಾಗಿ ಈ ಬಂದರು ಕಾರ್ಯನಿರ್ವಹಿಸುತ್ತಿದೆ.
  • ಭಾರತದ ಮೊದಲ ರಾಜ್ಯ-ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ : ಬೆಂಗಳೂರು

    ಭಾರತದ ಮೊದಲ ರಾಜ್ಯ-ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ : ಬೆಂಗಳೂರು

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ಭಾರತದ ಮೊದಲ ರಾಜ್ಯ-ನೇತೃತ್ವದ ‘ಉತ್ಕೃಷ್ಟತಾ ಕೇಂದ್ರ’ವಾಗಿ (Centre of Excellence) ಕಾರ್ಯನಿರ್ವಹಿಸಲು ಕರ್ನಾಟಕವು ಬೆಂಗಳೂರಿನಲ್ಲಿ ‘CoE ಸ್ಪೇಸ್ ಟೆಕ್ ಫೌಂಡೇಶನ್’ ಅನ್ನು ಪ್ರಾರಂಭಿಸಿದೆ.

    ಈ ಉತ್ಕೃಷ್ಟತಾ ಕೇಂದ್ರದ (CoE) ಬಗ್ಗೆ:

    • ಸ್ಥಳ: ಏರೋಸ್ಪೇಸ್ ಪಾರ್ಕ್, ಬೆಂಗಳೂರು.
    • ಪ್ರಾರಂಭಿಸಿದವರು: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ(KITS) ಹಾಗೂ ಸ್ಯಾಟ್‌ಕಾಮ್ ಕೈಗಾರಿಕಾ ಸಂಘಟನೆ (SIA-India).
    • ಗುರಿ: ಡೀಪ್-ಟೆಕ್ ಬಾಹ್ಯಾಕಾಶ ಆವಿಷ್ಕಾರಗಳನ್ನು ವಾಣಿಜ್ಯಕರಣಗೊಳಿಸುವುದು ಮತ್ತು ಅವುಗಳನ್ನು ಬೃಹತ್ ಮಟ್ಟದ ವ್ಯವಹಾರಗಳಾಗಿ ಬೆಳೆಸುವುದು.
    • ಗಮನಹರಿಸುವ ಕ್ಷೇತ್ರಗಳು: ಇದು ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ಇನ್ಕ್ಯುಬೇಶನ್ ಸೌಲಭ್ಯ ಒದಗಿಸುತ್ತದೆ, ಪ್ರತಿಭೆಗಳಿಗೆ ತರಬೇತಿ ನೀಡುತ್ತದೆ ಮತ್ತು ಕೃಷಿ, ಹವಾಮಾನ ಹಾಗೂ ರಕ್ಷಣಾ ಕ್ಷೇತ್ರಗಳ ಸಮಸ್ಯೆಗಳಿಗೆ ವಿವಿಧ ವಲಯಗಳನ್ನು ಒಳಗೊಂಡ ಪರಿಹಾರಗಳನ್ನು ರೂಪಿಸುತ್ತದೆ.
  • ಪರಿಸರ ಹತ್ಯೆ/ ಎಕೋಸೈಡ್ (Ecocide) | ವಿಶ್ವ ವಲಸೆ ವರದಿ (World Migration Report), 2026 : IOM | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ | ಸಮಗ್ರ ಶಿಕ್ಷಣ ಯೋಜನೆ | ಮಿಜೋರಾಂ ಶುಂಠಿ ಮಿಷನ್ (Mizoram Ginger Mission)

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

  • ಸಂಚಾರ ಪೊಲೀಸರಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮ : ಗೃಹ ಇಲಾಖೆ

    ಸಂಚಾರ ಪೊಲೀಸರಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮ : ಗೃಹ ಇಲಾಖೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕರ್ನಾಟಕದ ಗೃಹ ಇಲಾಖೆಯು ಸಂಚಾರ ಪೊಲೀಸ್ ಮತ್ತು ಮುಂಚೂಣಿ ಸಿಬ್ಬಂದಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದು ದೇಶದಲ್ಲೇ ಮೊದಲನೆಯದಾಗಿದೆ.

    ಕಾರ್ಯಕ್ರಮದ ಹಿನ್ನೆಲೆ ಮತ್ತು ವಿವರಗಳು:

    • ಬೆಂಗಳೂರಿನಲ್ಲಿ 3,287 ಟ್ರಾಫಿಕ್ ಪೊಲೀಸರನ್ನು ಒಳಗೊಂಡ ಎರಡು ವರ್ಷಗಳ ಕಠಿಣ ತಪಾಸಣಾ ಯೋಜನೆಯ ನಂತರ ಈ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ. ಈ ತಪಾಸಣಾ ಯೋಜನೆಯು ನಿರಂತರ ನಗರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಗಣನೀಯ ಅಪಾಯಕಾರಿ ಅಂಶಗಳನ್ನು ಗುರುತಿಸಿದೆ.
    • ಅನುಷ್ಠಾನ ಸಂಸ್ಥೆ: ಈ ಕಾರ್ಯಕ್ರಮವನ್ನು ಮುನ್ನಡೆಸಲು ಸರ್ಕಾರವು ‘ವಾಯು ರೆಸ್ಪಿರೇಟರಿ ಫೌಂಡೇಶನ್’ ಜೊತೆಗೆ ಪ್ರಾಥಮಿಕ ತಾಂತ್ರಿಕ ಸಂಸ್ಥೆಯಾಗಿ ಅಧಿಕೃತವಾಗಿ ಪಾಲುದಾರಿಕೆ ಮಾಡಿಕೊಂಡಿದೆ.
  • ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ | ಕೇಂದ್ರೀಯ ತನಿಖಾ ದಳ (Central Bureau of Investigation – CBI) | ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ | ಅಲ್ಝೈಮರ್ ಕಾಯಿಲೆ (Alzheimer’s Disease) | ತಾತ್ಯಾ ಟೋಪೆ | ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ | ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು | ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India) | ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026 | ರು-ಸೋಮ್ ಸೇತುವೆಗಳು (Ru-Soam Bridges) | ತಾಂಜಾನಿಯಾ (Tanzania) | ಹಂಟಾವೈರಸ್ ಸೋಂಕು ಹರಡುವಿಕೆ

    ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ

    ಆಡಳಿತ

    ಇತ್ತೀಚಿಗೆ ಸುದ್ದಿಯಲ್ಲಿದೆ: 

    • ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (National Testing Agency – NTA)ಯು 2026 ರ ನೀಟ್ (NEET) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗೆ ತಿಳಿಸಿದೆ. ಹೀಗಾಗಿ, ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (NEET)ಯ ಮರುಪರೀಕ್ಷೆಯನ್ನು ನಡೆಸಲಾಗುವುದು ಎಂದು ಘೋಷಿಸಿದೆ. 
    • ನೀಟ್ (NEET) ಪರೀಕ್ಷೆಯು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಮುಖ ಮಾರ್ಗವಾಗಿದೆ.

    ರಾಧಾಕೃಷ್ಣನ್ ಸಮಿತಿ: 

    • ನೀಟ್-ಯುಜಿ (NEET-UG) 2024 ರ ವಿವಾದದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ಇಸ್ರೋದ (ISRO) ಮಾಜಿ ಅಧ್ಯಕ್ಷರಾದ ಕೆ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA):

    • ಸ್ಥಾಪನೆ: 2017 ರಲ್ಲಿ ಸ್ಥಾಪಿಸಲಾಯಿತು.
    • ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಉನ್ನತ ಶಿಕ್ಷಣ ಇಲಾಖೆ’ಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
    • NTA ಯು ಪ್ರಮುಖವಾಗಿ ಈ ಕೆಳಗಿನ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ:
      • ಎಂಜಿನಿಯರಿಂಗ್‌ಗಾಗಿ – ಜಂಟಿ ಪ್ರವೇಶ ಪರೀಕ್ಷೆ (Joint Entrance Examination – JEE Main).
      • ವೈದ್ಯಕೀಯ ಶಿಕ್ಷಣಕ್ಕಾಗಿ – ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET-UG).
      • ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗಾಗಿ – ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test – CUET).
      • ಇದು ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ (NHAI), ದೆಹಲಿ ಉಚ್ಚ ನ್ಯಾಯಾಲಯ, ‘ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ’ (EPFO) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನೂ ನಡೆಸುತ್ತದೆ.

    ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024:

    • 2024 ರಲ್ಲಿ ಅಂಗೀಕರಿಸಲಾದ ಈ ಕಾಯ್ದೆಯು, UPSC, SSC ಯಂತಹ ನೇಮಕಾತಿ ಪರೀಕ್ಷೆಗಳು ಹಾಗೂ NEET, JEE, ಮತ್ತು CUET ನಂತಹ ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯುವ ಕಟ್ಟುನಿಟ್ಟಾದ ಗುರಿಯನ್ನು ಹೊಂದಿದೆ.
    • ಈ ಕಾಯ್ದೆಯು “ಅಕ್ರಮ ವಿಧಾನಗಳನ್ನು” ವಿಶಾಲವಾಗಿ ವ್ಯಾಖ್ಯಾನಿಸಿದ್ದು, ಇದು ಈ ಕೆಳಗಿನ ದುಷ್ಕೃತ್ಯಗಳನ್ನು ಒಳಗೊಂಡಿದೆ:
    1. ಪ್ರಶ್ನೆಪತ್ರಿಕೆಗಳು ಅಥವಾ ಸರಿ-ಉತ್ತರಗಳನ್ನು ಸೋರಿಕೆ ಮಾಡುವುದು.
    2. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ನೆರವಾಗುವುದು (ಅನಧಿಕೃತ ಸಂವಹನ, ಉತ್ತರಗಳನ್ನು ಒದಗಿಸುವುದು).
    3. ಕಂಪ್ಯೂಟರ್ ನೆಟ್‌ವರ್ಕ್‌ಗಳು ಅಥವಾ ಸಂಪನ್ಮೂಲಗಳನ್ನು ತಿರುಚುವುದು.
    4. ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವುದು.
    5. ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು.
    6. ಅರ್ಹತಾ ಪಟ್ಟಿ ಅಥವಾ ರ್‍ಯಾಂಕ್ ಪಡೆಯಲು ದಾಖಲೆಗಳನ್ನು ತಿರುಚುವುದು.
    • ದಂಡ ಮತ್ತು ಶಿಕ್ಷೆಗಳು:
    • ವ್ಯಕ್ತಿಗಳಿಗೆ: ಅಪರಾಧದ ತೀವ್ರತೆಗೆ ಅನುಗುಣವಾಗಿ 3 ರಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ.
    • ಸಂಘಟಿತ ಅಪರಾಧಗಳಿಗೆ ರೂ. 1 ಕೋಟಿ ವರೆಗೆ ದಂಡ.
    • ಸೇವಾ ಪೂರೈಕೆದಾರರಿಗೆ: ಅಕ್ರಮಗಳಲ್ಲಿ ಭಾಗಿಯಾಗಿದ್ದಲ್ಲಿ ರೂ. 1 ಕೋಟಿ ವರೆಗೆ ದಂಡ.
    • 4 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸದಂತೆ ನಿರ್ಬಂಧ.
    • ಇದರಲ್ಲಿ ಭಾಗಿಯಾದ ನಿರ್ದೇಶಕರು ಅಥವಾ ಆಡಳಿತ ಮಂಡಳಿಯ ಮೇಲೆ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸುವುದು.
    • ಸಂಘಟಿತ ಅಪರಾಧಗಳು: 5 ರಿಂದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಕನಿಷ್ಠ ರೂ. 1 ಕೋಟಿ ದಂಡ.
    • ಅಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಆಸ್ತಿಯನ್ನು ಜಪ್ತಿ ಮಾಡುವ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ.
    • ತನಿಖೆ:
    1. ಈ ಕಾಯ್ದೆಯ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳು ಸಂಜ್ಞೇಯ (Cognisable – ವಾರಂಟ್ ಇಲ್ಲದೆ ಬಂಧಿಸುವಂಥದ್ದು), ಜಾಮೀನು-ರಹಿತ ಹಾಗೂ ರಾಜಿ-ರಹಿತ (Non-compoundable) ಸ್ವರೂಪವನ್ನು ಹೊಂದಿವೆ.
    2. ಈ ಕಾಯ್ದೆಯ ಅಡಿಯಲ್ಲಿನ ಅಪರಾಧಗಳ ತನಿಖೆಯನ್ನು ‘ಪೊಲೀಸ್ ಅಧೀಕ್ಷಕರು’ ಅಥವಾ ‘ಸಹಾಯಕ ಪೊಲೀಸ್ ಆಯುಕ್ತರು’ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿಯು ಮಾತ್ರ ನಡೆಸುತ್ತಾರೆ.
    3. ಕೇಂದ್ರ ಸರ್ಕಾರವು ಈ ಪ್ರಕರಣಗಳ ತನಿಖೆಯನ್ನು ಯಾವುದೇ ‘ಕೇಂದ್ರೀಯ ತನಿಖಾ ಸಂಸ್ಥೆಗೆ’ ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.

    ರಾಜಕೀಯ ಮತ್ತು ಆಡಳಿತ

    Syllabus: GS2/Polity and Governance

    ಇತ್ತೀಚಿಗೆ ಸುದ್ದಿಯಲ್ಲಿದೆ: 

    • ಕೇಂದ್ರ ಕ್ಯಾಬಿನೆಟ್ (ಸಚಿವ ಸಂಪುಟದ) ನೇಮಕಾತಿ ಸಮಿತಿಯು (ACC) ‘ಕೇಂದ್ರೀಯ ತನಿಖಾ ದಳ’ದ (CBI) ಹಾಲಿ ನಿರ್ದೇಶಕರಾದ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

    ಕೇಂದ್ರೀಯ ತನಿಖಾ ದಳ (Central Bureau of Investigation)ದ ಬಗ್ಗೆ:

    • ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯದ ನಿರ್ಣಯದ ಮೂಲಕ 1963 ರಲ್ಲಿ ಇದನ್ನು ಸ್ಥಾಪಿಸಲಾಯಿತು.
    • ಆಡಳಿತಾತ್ಮಕ ನಿಯಂತ್ರಣ: ಇದು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ಯ (DoPT) ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುತ್ತದೆ.
    • ಶಿಫಾರಸು ಮಾಡಿದ ಸಮಿತಿ: ‘ಸಂತಾನಂ ಸಮಿತಿ’ಯ ಶಿಫಾರಸಿನ ಮೇರೆಗೆ ಇದನ್ನು ಸ್ಥಾಪಿಸಲಾಯಿತು.
    • ಕಾನೂನಾತ್ಮಕ ಸ್ಥಾನಮಾನ: ಸಿಬಿಐ (CBI) ಒಂದು ಶಾಸನಬದ್ಧ ಸಂಸ್ಥೆಯಲ್ಲ. ಬದಲಾಗಿ, ಇದು ‘ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ’ (DSPE Act), 1946ರ ಮೂಲಕ ತನ್ನ ಅಧಿಕಾರಗಳನ್ನು ಪಡೆಯುತ್ತದೆ.
    • ಪ್ರಮುಖ ಕಾರ್ಯಗಳು:
    1. ಸಿಬಿಐ ಕೇಂದ್ರ ಸರ್ಕಾರದ ಅತ್ಯುನ್ನತ ಹಾಗೂ ಪ್ರಮುಖ ತನಿಖಾ ಸಂಸ್ಥೆಯಾಗಿದೆ.
    2. ಇದು ‘ಕೇಂದ್ರೀಯ ಜಾಗೃತ ಆಯೋಗ’ (CVC) ಮತ್ತು ‘ಲೋಕಪಾಲ್’ಗೆ ಅಗತ್ಯ ತನಿಖಾ ನೆರವು ನೀಡುತ್ತದೆ.
    3. ಇದು ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ಪರವಾಗಿ ಭಾರತದಲ್ಲಿ ತನಿಖೆಗಳನ್ನು ಸಂಯೋಜಿಸುವ ‘ನೋಡಲ್ ಪೊಲೀಸ್ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.

    ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚಿಗೆ ಸುದ್ದಿಯಲ್ಲಿದೆ:

    • ವಿಜ್ಞಾನಿಗಳು ರೋಗಿಯ ಸ್ವಂತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ (CAR-T ಥೆರಪಿ) ಮೂಲಕ ಹೆಚ್‌ಐವಿ (HIV) ವೈರಸ್ ಅನ್ನು ನಿಯಂತ್ರಿಸಲು ಹೊಸದೊಂದು ಪ್ರಬಲವಾದ ಕ್ಯಾನ್ಸರ್ ಚಿಕಿತ್ಸಾ ವಿಧಾನವೊಂದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

    ಅಕ್ವೈರ್ಡ್ ಇಮ್ಯುನೊ ಡಿಫಿಷಿಯೆನ್ಸಿ ಸಿಂಡ್ರೋಮ್ (ಏಡ್ಸ್ – AIDS):

    • ರೋಗಕಾರಕ: ಇದು HIV – ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್’  (ಮಾನವ ರೋಗನಿರೋಧಕತೆ ಕೊರತೆ ವೈರಾಣು) ನಿಂದ ಉಂಟಾಗುವ ದೀರ್ಘಕಾಲೀನ ಹಾಗೂ ಮಾರಾಣಾಂತಿಕ ಕಾಯಿಲೆಯಾಗಿದೆ. ಈ ವೈರಸ್ ಮನುಷ್ಯನ ರೋಗನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ.
    • ಪ್ರಸರಣ: ಎಚ್‌ಐವಿ ಸೋಂಕಿತ ವ್ಯಕ್ತಿಯ ದೇಹದ ನಿರ್ದಿಷ್ಟ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆಹಾಲಿನೊಂದಿಗೆ ನೇರ ಸಂಪರ್ಕ ಹೊಂದುವುದರ ಮೂಲಕ ಇದು ಹರಡುತ್ತದೆ.
    • ಈ ರೋಗದ ಲಕ್ಷಣಗಳು:
    1. ಹಂತ 1: ಜ್ವರದಂತಹ ಲಕ್ಷಣಗಳು (ಚಳಿಜ್ವರ, ಚರ್ಮದ ಮೇಲೆ ಗುಳ್ಳೆಗಳು, ರಾತ್ರಿ ವೇಳೆ ವಿಪರೀತ ಬೆವರುವುದು).
    2. ಹಂತ 2: ವೈದ್ಯಕೀಯ ಸುಪ್ತಾವಸ್ಥೆ / ಲಕ್ಷಣರಹಿತ ಹಂತ (ಈ ಹಂತದಲ್ಲಿ ರೋಗದ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಂಡುಬರುವುದಿಲ್ಲ).
    3. ಹಂತ 3: ಏಡ್ಸ್ ಹಂತ (ರೋಗನಿರೋಧಕ ವ್ಯವಸ್ಥೆಯು ತೀವ್ರವಾಗಿ ದುರ್ಬಲಗೊಳ್ಳುವುದು).
    • ತಡೆಗಟ್ಟುವಿಕೆ: ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಮೇಲು ಎಂಬ ಮಾತಿನಂತೆ, ಸುರಕ್ಷಿತ ವಿಧಾನಗಳ ಬಳಕೆ, ಸೋಂಕಿಲ್ಲದ ಶುದ್ಧ ಸೂಜಿಗಳ ಬಳಕೆ ಮತ್ತು ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು.
    • ಚಿಕಿತ್ಸೆ : ಎಚ್‌ಐವಿ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಆದರೆ ‘ಆಂಟಿ-ರೆಟ್ರೋವೈರಲ್ ಔಷಧಗಳ’ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಔಷಧಗಳು ದೇಹದಲ್ಲಿ ವೈರಸ್ ದ್ವಿಗುಣಗೊಳ್ಳುವುದನ್ನು ತಡೆಯುತ್ತವೆ. ಚಿಕಿತ್ಸೆ ಪಡೆಯದಿದ್ದರೆ, ಎಚ್‌ಐವಿ ಸೋಂಕು ಹಲವು ವರ್ಷಗಳ ನಂತರ ‘ಏಡ್ಸ್’ (AIDS) ಹಂತಕ್ಕೆ ತಲುಪುತ್ತದೆ.

    ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು:

    • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP): ಇದು ಕೇಂದ್ರ ಸರ್ಕಾರದ ‘ಕೇಂದ್ರ ವಲಯದ ಯೋಜನೆ’ ಯಾಗಿದೆ.
    • ಎಚ್‌ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಮತ್ತು ಹಿಮ್ಮೆಟ್ಟಿಸುವ ಮೂಲಕ ಭಾರತವು ‘6ನೇ ಸಹಸ್ರಮಾನದ ಅಭಿವೃದ್ಧಿ ಗುರಿ’ಯನ್ನು (MDG) ಯಶಸ್ವಿಯಾಗಿ ಸಾಧಿಸಿದೆ.
    • PPTCT ಕಾರ್ಯಕ್ರಮ: ಇದು ಪೋಷಕರಿಂದ ಮಗುವಿಗೆ HIV ಸೋಂಕು ಹರಡುವುದನ್ನು ತಡೆಯುವ ಕಾರ್ಯಕ್ರಮವಾಗಿದೆ.
    • ಎಚ್‌ಐವಿ/ಏಡ್ಸ್ ಕಾಯ್ದೆ 2017: ಎಚ್‌ಐವಿ ಸೋಂಕಿತ ವ್ಯಕ್ತಿಗಳ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
    • UNAIDS – 90:90:90 ಕಾರ್ಯತಂತ್ರ: 2020ರ ವೇಳೆಗೆ 90% ಸೋಂಕಿತರನ್ನು ಪತ್ತೆ ಹಚ್ಚುವುದು, 90% ಜನರಿಗೆ ART (ಆಂಟಿ-ರೆಟ್ರೋವೈರಲ್) ಚಿಕಿತ್ಸೆ ಒದಗಿಸುವುದು ಮತ್ತು 90% ರಷ್ಟು ವೈರಸ್ ಅನ್ನು ನಿಗ್ರಹಿಸುವ UNAIDS ನ ಕಾರ್ಯತಂತ್ರ ಇದಾಗಿದೆ. ಪ್ರಸ್ತುತ ಈ ಗುರಿಯನ್ನು ’95-95-95′ ಕ್ಕೆ ಪರಿಷ್ಕರಿಸಿ, ಕಾಲಮಿತಿಯನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • ಪ್ರಾಜೆಕ್ಟ್ ಆಕ್ಸಿಲರೇಟ್ (Project ACCELERATE): ಇದು ಜಾನ್ ಹಾಪ್ಕಿನ್ಸ್ ಮತ್ತು NACO ನ ಜಂಟಿ ಉಪಕ್ರಮವಾಗಿದೆ. ‘ಸೇಫ್ ಜಿಂದಗಿ’ (Safe Zindagi) ಆನ್‌ಲೈನ್ ಪೋರ್ಟಲ್ ಮೂಲಕ ಎಚ್‌ಐವಿ ಸೇವೆಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
    • ಮಿಷನ್ ಸಂಪರ್ಕ (Mission Sampark): ಆಂಟಿ-ರೆಟ್ರೋವೈರಲ್ ಚಿಕಿತ್ಸೆಯನ್ನು (ART) ಅರ್ಧದಲ್ಲೇ ಕೈಬಿಟ್ಟಿರುವ ಎಚ್‌ಐವಿ ಸೋಂಕಿತರನ್ನು (PLHIV) ಮರಳಿ ಚಿಕಿತ್ಸಾ ವ್ಯಾಪ್ತಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಅಲ್ಝೈಮರ್ ಕಾಯಿಲೆ (Alzheimer’s Disease)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚಿಗೆ ಸುದ್ದಿಯಲ್ಲಿದೆ:

    • ಭಾರತದಲ್ಲಿ ಅಲ್ಝೈಮರ್ ಕಾಯಿಲೆಗೆ ಚಿಕಿತ್ಸೆ ನೀಡುವ ‘ಲೊರ್ಮಲ್ಜಿ’ ಎಂಬ ಹೊಸ ಔಷಧವನ್ನು ‘ಎಲಿ ಲಿಲ್ಲಿ ಅಂಡ್ ಕಂಪನಿ’ಯು ಬಿಡುಗಡೆ ಮಾಡಿದೆ. ಇದು ದೇಶದಲ್ಲಿ ಈ ಕಾಯಿಲೆಯ ಮೂಲ ಸ್ವರೂಪವನ್ನು ಮಾರ್ಪಡಿಸಬಲ್ಲ ಮೊಟ್ಟಮೊದಲ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ.
    • ಲೊರ್ಮಲ್ಜಿ ಔಷಧ: ಇದೊಂದು ‘ಏಕತದ್ರೂಪಿ ಪ್ರತಿಕಾಯ’ವಾಗಿದೆ (Monoclonal antibody). ಇದನ್ನು ತಿಂಗಳಿಗೊಮ್ಮೆ ರಕ್ತನಾಳದ ಮೂಲಕ ನೀಡಲಾಗುತ್ತದೆ. ಅಲ್ಝೈಮರ್ ಕಾಯಿಲೆಯ ಉಲ್ಬಣಕ್ಕೆ ಕಾರಣವಾಗುವ ಹಾಗೂ ಮೆದುಳಿನಲ್ಲಿ ಶೇಖರವಾಗುವ ‘ಅಮೈಲಾಯ್ಡ್-ಬೀಟಾ’ ಎಂಬ ಹಾನಿಕಾರಕ ಪ್ರೋಟೀನ್ ಶೇಖರಣೆಗಳನ್ನು ತೆಗೆದುಹಾಕುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.

    ಅಲ್ಝೈಮರ್ ಕಾಯಿಲೆ’ಯ ಬಗ್ಗೆ:

    • ಇದು ‘ಬುದ್ಧಿಕ್ಷೀಣತೆ’ ಅಥವಾ ಮರೆಗುಳಿತನದ ಅತ್ಯಂತ ಸಾಮಾನ್ಯ ರೂಪವಾಗಿದೆ. ಇದೊಂದು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಸ್ಮರಣಶಕ್ತಿ ಮತ್ತು ಆಲೋಚನಾ ಸಾಮರ್ಥ್ಯವನ್ನು ನಿಧಾನವಾಗಿ ನಾಶಪಡಿಸುತ್ತದೆ.
    • ಆಲೋಚನೆ, ನೆನಪು ಮತ್ತು ತಾರ್ಕಿಕತೆಯಂತಹ ‘ಅರಿವಿನ ಸಾಮರ್ಥ್ಯಗಳು’ ಹಾಗೂ ನಡವಳಿಕೆಯ ಕೌಶಲ್ಯಗಳು ತೀವ್ರವಾಗಿ ಕುಗ್ಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಇದು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ವ್ಯಕ್ತಿಯ ದೈನಂದಿನ ಜೀವನ ಮತ್ತು ಚಟುವಟಿಕೆಗಳಿಗೆ ತೀವ್ರ ಅಡ್ಡಿಯುಂಟಾಗುತ್ತದೆ.
    • ಕಾಲಕ್ರಮೇಣ, ಅಲ್ಝೈಮರ್ ಪೀಡಿತರು ಊಟ ಮಾಡುವುದು ಅಥವಾ ನಡೆಯುವುದರಂತಹ ಅತ್ಯಂತ ಸರಳವಾದ ದೈನಂದಿನ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನೂ ಸಹ ಕಳೆದುಕೊಳ್ಳುತ್ತಾರೆ.
    • ಜಾಗತಿಕವಾಗಿ ‘ಲೆಕಾನೆಮಾಬ್’ (Lecanemab) ಮತ್ತು ‘ಅಡುಕನುಮಾಬ್’ (Aducanumab) ನಂತಹ ಔಷಧಗಳು ಲಭ್ಯವಿದ್ದರೂ, ಅವುಗಳ ಪ್ರಯೋಜನಗಳು ಸೀಮಿತವಾಗಿವೆ. ಅಲ್ಲದೆ, ಅವು ಸಂಕೀರ್ಣತೆ, ಅತಿ ಹೆಚ್ಚಿನ ವೆಚ್ಚ ಮತ್ತು ಸುರಕ್ಷತೆಯ ಆತಂಕಗಳನ್ನು ಹೊಂದಿವೆ.

    ತಾತ್ಯಾ ಟೋಪೆ

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಮಧ್ಯಪ್ರದೇಶದ ಸರ್ಕಾರಿ ಪತ್ರಾಗಾರದಲ್ಲಿ (Archives – ಐತಿಹಾಸಿಕ ದಾಖಲೆಗಳ ಸಂಗ್ರಹಾಲಯ) 1857ರ ಕಾಲದ ತಾತ್ಯಾ ಟೋಪೆ ಅವರ ಅಪರೂಪದ ಕೈಬರಹದ ಮತ್ತು ಸಹಿ ಇರುವ ಪತ್ರವೊಂದು ಇತ್ತೀಚೆಗೆ ಪತ್ತೆಯಾಗಿದೆ.

    ತಾತ್ಯಾ ಟೋಪೆ ಅವರ ಬಗ್ಗೆ

    • ಆರಂಭಿಕ ಜೀವನ: ತಾತ್ಯಾ ಟೋಪೆ ಅವರ ಮೂಲ ಹೆಸರು ‘ರಾಮಚಂದ್ರ ಪಾಂಡುರಂಗ ಟೋಪೆ’. ಇವರು 1814 ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದರು.
    • ಇವರ ತಂದೆಯು ಮರಾಠ ಸಾಮ್ರಾಜ್ಯದ ಕೊನೆಯ ಪೇಶ್ವೆಯಾದ ‘ಎರಡನೇ ಬಾಜಿರಾವ್’ ಅವರ ಆಸ್ಥಾನದಲ್ಲಿ ಗಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    • ಎರಡನೇ ಬಾಜಿರಾವ್ ಅವರ ದತ್ತುಪುತ್ರನಾದ ‘ನಾನಾ ಸಾಹೇಬ್’ ಅವರೊಂದಿಗೆ ತಾತ್ಯಾ ಟೋಪೆ ಅವರು ನಿಕಟ ಒಡನಾಟ ಹೊಂದಿದ್ದರು. ಇದೇ ನಂಟು ಮುಂದಿನ ದಿನಗಳಲ್ಲಿ 1857ರ ಮಹಾದಂಗೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲು ಕಾರಣವಾಯಿತು.
    • 1857ರ ದಂಗೆಯಲ್ಲಿನ ಪಾತ್ರ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ (1857) ಇವರು ಅತ್ಯಂತ ಸಮರ್ಥ ಸೇನಾ ದಂಡನಾಯಕರಾಗಿ ಹೊರಹೊಮ್ಮಿದರು.
    1. ಬ್ರಿಟಿಷರ ವಿರುದ್ಧದ ಹೋರಾಟದ ಪ್ರಮುಖ ಕೇಂದ್ರಗಳಾಗಿದ್ದ ಕಾನ್ಪುರ ಮತ್ತು ಗ್ವಾಲಿಯರ್‌ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.
    2. ಇವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ನಾಯಕಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ, ಬ್ರಿಟಿಷ್ ಪಡೆಗಳ ವಿರುದ್ಧದ ದಂಗೆಯನ್ನು ಪ್ರಬಲವಾಗಿ ಮುನ್ನಡೆಸಲು ನೆರವಾದರು.
    • ಸೇನಾ ತಂತ್ರಗಳು: ತಾತ್ಯಾ ಟೋಪೆ ಅವರು ಗೆರಿಲ್ಲಾ ಯುದ್ಧತಂತ್ರ, ಕ್ಷಿಪ್ರ ಚಲನವಲನ ಮತ್ತು ಹಠಾತ್ ದಾಳಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಅಪ್ರತಿಮರಾಗಿದ್ದರು.
    • ಅಂತಿಮವಾಗಿ ಇವರನ್ನು ಬ್ರಿಟಿಷರು ಸೆರೆಹಿಡಿದರು. ಔಪಚಾರಿಕ ವಿಚಾರಣೆಯ ನಂತರ 1859 ರಲ್ಲಿ ಶಿವಪುರಿಯಲ್ಲಿ ಇವರನ್ನು ಗಲ್ಲಿಗೇರಿಸಲಾಯಿತು.

    ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಸಿಕ್ಕಿಂ ರಾಜ್ಯವನ್ನು ಭಾರತದ ಮೊಟ್ಟಮೊದಲ ‘ಕಾಗದರಹಿತ ನ್ಯಾಯಾಂಗ ವ್ಯವಸ್ಥೆ’ ಹೊಂದಿದ ರಾಜ್ಯವೆಂದು ಘೋಷಿಸಿದ್ದಾರೆ.

    ಪ್ರಮುಖ ಅಂಶಗಳು:

    • ಮಹತ್ವ: ಈ ಉಪಕ್ರಮವು ಕಾಗದದ ಕಡತಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಜೊತೆಗೆ, ಇದು ಕಾರ್ಯಾಚರಣೆಯ ವಿಳಂಬವನ್ನು ಕಡಿಮೆ ಮಾಡುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗುತ್ತದೆ.
    • ತಂತ್ರಜ್ಞಾನದ ಅಳವಡಿಕೆ: ಈ ವ್ಯವಸ್ಥೆಯು ಇ-ಫೈಲಿಂಗ್, ಡಿಜಿಟಲ್ ಪ್ರಕರಣ ನಿರ್ವಹಣೆ ಮತ್ತು ವರ್ಚುವಲ್ (ಆನ್‌ಲೈನ್) ವಿಚಾರಣೆಗಳನ್ನು ಒಳಗೊಂಡಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಇ-ಕೋರ್ಟ್ಸ್ ಕಾರ್ಯಾಚರಣಾ ಮಾದರಿಯ ಯೋಜನೆ’ (e-Courts Mission Mode Project) ಮತ್ತು ‘ಡಿಜಿಟಲ್ ಇಂಡಿಯಾ’ ದೃಷ್ಟಿಕೋನಕ್ಕೆ ಪೂರಕವಾಗಿದೆ.
    • ಗುಡ್ಡಗಾಡು ಪ್ರದೇಶಗಳಿಗೆ ಇದರ ಪ್ರಸ್ತುತತೆ: ಸಿಕ್ಕಿಂನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಭೌಗೋಳಿಕ ಅಡೆತಡೆಗಳನ್ನು ನಿವಾರಿಸುವಲ್ಲಿ ಈ ಡಿಜಿಟಲೀಕರಣವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಕ್ಷಿದಾರರು ಮತ್ತು ವಕೀಲರಿಗೆ ನ್ಯಾಯವನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

    ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಪಿಎಂ ಇ-ಡ್ರೈವ್’ (PM E-DRIVE) ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ 14,000 ಇ-ಬಸ್‌ಗಳ ಗುತ್ತಿಗೆ ಪ್ರಕ್ರಿಯೆ ಮತ್ತು ಹಂಚಿಕೆಯನ್ನು ಪೂರ್ಣಗೊಳಿಸಿದ ನಂತರ, ಕೇಂದ್ರ ಸರ್ಕಾರವು ರಾಜ್ಯಗಳಿಗಾಗಿ ಹೊಸ ‘ಎಲೆಕ್ಟ್ರಿಕ್  ಬಸ್’ ಯೋಜನೆಯೊಂದನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

    ಪಿಎಂ ಇ-ಡ್ರೈವ್ (PM E-DRIVE) ಯೋಜನೆಯ ಬಗ್ಗೆ:

    • ಉದ್ದೇಶ: ಭಾರತದಲ್ಲಿ ವಿದ್ಯುತ್ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ವಿದ್ಯುತ್ ಚಾಲಿತ ವಾಹನಗಳ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
    • ಅವಧಿ : ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
    • ಇ-ವೋಚರ್‌ಗಳು: ಈ ಯೋಜನೆಯ ಅಡಿಯಲ್ಲಿ ಅಗತ್ಯ ಉತ್ತೇಜನಾ ಸೌಲಭ್ಯಗಳನ್ನು ಪಡೆಯಲು, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗಾಗಿ ‘ಭಾರೀ ಕೈಗಾರಿಕಾ ಸಚಿವಾಲಯ’ವು ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ.
    • ಚಾರ್ಜಿಂಗ್ ಕೇಂದ್ರಗಳು: ಎಲೆಕ್ಟ್ರಿಕ್ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು (EVPCS) ಬೃಹತ್ ಪ್ರಮಾಣದಲ್ಲಿ ಸ್ಥಾಪಿಸುವ ಮೂಲಕ, EV ಖರೀದಿದಾರರ ಪ್ರಯಾಣದ ವ್ಯಾಪ್ತಿಯ ಕುರಿತಾದ ಆತಂಕವನ್ನು ಈ ಯೋಜನೆಯು ನಿವಾರಿಸುತ್ತದೆ.

    ಸರ್ಕಾರದ ಉಪಕ್ರಮಗಳು: 

    • ಭಾರತದ ಎಲೆಕ್ಟ್ರಿಕ್ ವಾಹನಗಳ ನೀತಿ: 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ ಶೇ. 30%, ವಾಣಿಜ್ಯ ಕಾರುಗಳಲ್ಲಿ ಶೇ. 70%, ಬಸ್‌ಗಳಲ್ಲಿ ಶೇ. 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಶೇ. 80% ರಷ್ಟು ಇ- ವಾಹನಗಳ ಮಾರಾಟದ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಇದು ಹೊಂದಿದೆ.
    • ರಾಷ್ಟ್ರೀಯ ಎಲೆಕ್ಟ್ರಿಕ್ ಸಾರಿಗೆ ವಾಹನ ಗುರಿ ಯೋಜನೆ (NEMMP): ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ‘ರಾಷ್ಟ್ರೀಯ ಇಂಧನ ಭದ್ರತೆ’ಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
    • ಫೇಮ್-ಇಂಡಿಯಾ ಯೋಜನೆ (FAME India Scheme): ವಿದ್ಯುತ್ ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಯನ್ನು (Faster Adoption and Manufacture of EVs – FAME) ಉತ್ತೇಜಿಸಲು 2015 ರಲ್ಲಿ ‘ಫೇಮ್ ಇಂಡಿಯಾ’ ಯೋಜನೆಯನ್ನು ಪ್ರಾರಂಭಿಸಲಾಯಿತು.

    ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯು ಪವಿತ್ರ ವನಗಳನ್ನು ಮರುಸ್ಥಾಪಿಸಲು ಪ್ರಾಯೋಗಿಕ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ.

    ಪವಿತ್ರ ವನಗಳು/ ದೇವರ ಕಾಡುಗಳು (Sacred Groves):

    • ಪವಿತ್ರ ವನಗಳೆಂದರೆ, ಧಾರ್ಮಿಕ ನಂಬಿಕೆಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ಕಾರಣದಿಂದಾಗಿ ಸ್ಥಳೀಯ ಸಮುದಾಯಗಳಿಂದ ಸಂರಕ್ಷಿಸಲ್ಪಟ್ಟ ಅರಣ್ಯ ಅಥವಾ ನೈಸರ್ಗಿಕ ಸಸ್ಯವರ್ಗದ ಪ್ರದೇಶಗಳಾಗಿವೆ.
    • ಇವು ದೇವಾಲಯಗಳು, ಆಚರಣೆಗಳು ಮತ್ತು ಸ್ಥಳೀಯ ಸಂಪ್ರದಾಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸಮುದಾಯ ಸಂರಕ್ಷಿತ ಪರಿಸರ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.
    • ಭಾರತದಲ್ಲಿ ಅಂದಾಜು 1 ಲಕ್ಷದಿಂದ 1.5 ಲಕ್ಷದವರೆಗೆ ಪವಿತ್ರ ವನಗಳಿವೆ. ಇದು ಅವುಗಳ ಅಪಾರ ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧಿ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
    • ‘ಜೈವಿಕ ವೈವಿಧ್ಯತಾ ಕಾಯ್ದೆ’, 2002 ರ ಅಡಿಯಲ್ಲಿ, ಸೂಕ್ತವಾದ ಪವಿತ್ರ ವನಗಳನ್ನು ‘ಜೀವವೈವಿಧ್ಯ ಪರಂಪರೆಯ ತಾಣಗಳು’ ಎಂದು ಘೋಷಿಸಬಹುದಾಗಿದೆ.

    ಪ್ರಾಮುಖ್ಯತೆ:

    • ಪವಿತ್ರ ವನಗಳು ಅಪರೂಪದ, ಸ್ಥಳೀಯ ಮತ್ತು ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವುದರ ಜೊತೆಗೆ ಜೀವವೈವಿಧ್ಯದ ಬಿಸಿ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.
    • ಇವು ಮಣ್ಣಿನ ಸಂರಕ್ಷಣೆಗೆ ಕೊಡುಗೆ ನೀಡುತ್ತವೆ ಮತ್ತು ಮಣ್ಣಿನ ಸವೆತವನ್ನು ತಡೆಯುತ್ತವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
    • ಸಾಂಸ್ಕೃತಿಕವಾಗಿ, ಇವು ಧಾರ್ಮಿಕ ಆಚರಣೆಗಳು, ಹಬ್ಬಗಳು ಮತ್ತು ಸಮುದಾಯದ ಅಸ್ಮಿತೆಯ ಕೇಂದ್ರಗಳಾಗಿದ್ದು, ನಂಬಿಕೆಯ ವ್ಯವಸ್ಥೆಗಳ ಮೂಲಕವೇ ಪರಿಸರ ಸಂರಕ್ಷಣೆಯನ್ನು ಬಲಪಡಿಸುತ್ತವೆ.

    ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ‘ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026’ರಲ್ಲಿರುವ ಕೆಲವು ಗಂಭೀರ ಕಾನೂನಾತ್ಮಕ ಸಮಸ್ಯೆಗಳ ಕುರಿತು ಗಮನ ಸೆಳೆದಿದೆ. 
    • ಪ್ರಮುಖವಾಗಿ, ‘ಸ್ವಯಂ-ಗುರುತಿಸುವಿಕೆ’ (Self-identification) v/s ರಾಜ್ಯದ ‘ಪರಿಶೀಲನಾ ಪ್ರಕ್ರಿಯೆ’ ಮತ್ತು ಕಲ್ಯಾಣ ಯೋಜನೆಗಳ ಗುರಿ v/s ‘ವ್ಯಕ್ತಿಗತ ಘನತೆ’ಯ ವಿವಾದಾತ್ಮಕ ಅಂಶಗಳನ್ನು ನ್ಯಾಯಾಲಯವು ಪ್ರಸ್ತಾಪಿಸಿದೆ.

    ಹಿನ್ನೆಲೆ: ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕಾನೂನಾತ್ಮಕ ವಿಕಸನ

    • ನಾಲ್ಸಾ (NALSA) ತೀರ್ಪು, 2014: ಇದು ಲಿಂಗತ್ವ ಅಲ್ಪಸಂಖ್ಯಾತರನ್ನು ಅಧಿಕೃತವಾಗಿ ‘ತೃತೀಯ ಲಿಂಗ’ ಎಂದು ಗುರುತಿಸಿತು. ಜೊತೆಗೆ, ಯಾವುದೇ ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ತಮ್ಮ ಲಿಂಗವನ್ನು ‘ಸ್ವಯಂ-ಗುರುತಿಸಿಕೊಳ್ಳುವ ಹಕ್ಕನ್ನು’ ಎತ್ತಿಹಿಡಿಯಿತು.
    • ಇದು ‘ಸ್ವಯಂ-ನಿರ್ಧಾರ’ವನ್ನು ಒಂದು ಪ್ರಮುಖ ಸಾಂವಿಧಾನಿಕ ಮೌಲ್ಯವಾಗಿ ಸ್ಥಾಪಿಸಿತು.
    • ಇದು ವ್ಯಕ್ತಿಯ ಲಿಂಗದ ಅಸ್ಮಿತೆಯನ್ನು ಸಂವಿಧಾನದ 21ನೇ ವಿಧಿಗೆ (ಜೀವಿಸುವ ಮತ್ತು ಘನತೆಯ ಹಕ್ಕು) ಸೇರಿಸಿತು.
    • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಾಯ್ದೆ, 2019: ಇದು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ವ್ಯಾಖ್ಯಾನಿಸುತ್ತದೆ ಹಾಗೂ ‘ಸ್ವಯಂ-ಗ್ರಹಿಕೆಯ ಅಸ್ಮಿತೆಯ ಹಕ್ಕನ್ನು’ ಖಾತರಿಪಡಿಸುತ್ತದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿನ ತಾರತಮ್ಯವನ್ನು ನಿಷೇಧಿಸುವುದರ ಜೊತೆಗೆ, ಸ್ವಂತ ಮನೆಯಲ್ಲಿ ವಾಸಿಸುವ ಹಕ್ಕನ್ನು ಇದು ಒದಗಿಸುತ್ತದೆ.
    • ಈ ಕಾಯ್ದೆಯು ‘ಜಿಲ್ಲಾ ದಂಡಾಧಿಕಾರಿ’ಯಿಂದ ಪ್ರಮಾಣೀಕರಣ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿತು.
    • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ತಿದ್ದುಪಡಿ) ಕಾಯ್ದೆ, 2026: ಇದು ಕಾನೂನಾತ್ಮಕ ಮಾನ್ಯತೆ ಪಡೆಯುವ ಮೊದಲು ‘ವೈದ್ಯಕೀಯ ಮಂಡಳಿಯ ಪ್ರಮಾಣೀಕರಣ’ವನ್ನು ಕಡ್ಡಾಯಗೊಳಿಸುತ್ತದೆ; ಸ್ವಯಂ-ಗ್ರಹಿಕೆಯ ಅಸ್ಮಿತೆಯ ಮೇಲಿದ್ದ ಸ್ಪಷ್ಟ ಮಾನ್ಯತೆಯನ್ನು ತೆಗೆದುಹಾಕುತ್ತದೆ; ಮತ್ತು ಕಠಿಣ ವ್ಯಾಖ್ಯಾನಗಳು ಹಾಗೂ ದಂಡನಾತ್ಮಕ ನಿಬಂಧನೆಗಳನ್ನು ಪರಿಚಯಿಸುತ್ತದೆ.

    ಸರ್ವೋಚ್ಚ ನ್ಯಾಯಾಲಯವು ಗುರುತಿಸಿದ ಪ್ರಮುಖ ಸಮಸ್ಯೆಗಳು:

    • ಸ್ವಯಂ-ಗುರುತಿಸುವಿಕೆ v/s ವೈದ್ಯಕೀಯ ನಿರ್ಬಂಧ: ಇದು ವ್ಯಕ್ತಿಯ ದೈಹಿಕ ಸ್ವಾಯತ್ತತೆ ಮತ್ತು ಘನತೆಯನ್ನು (ವಿಧಿ 21) ಉಲ್ಲಂಘಿಸುತ್ತದೆ, ಹಾಗೂ ರಾಜ್ಯದಿಂದ ‘ವೈದ್ಯಕೀಯ ನಿರ್ಬಂಧ’ವನ್ನು ಸೃಷ್ಟಿಸುತ್ತದೆ. ‘ವೈದ್ಯಕೀಯ ಮೌಲ್ಯಮಾಪನ’ವು ವ್ಯಕ್ತಿಯ ಅಸ್ಮಿತೆಯ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ.
    • ದುರ್ಬಳಕೆಯ ಭೀತಿ v/s ಹಕ್ಕುಗಳ ರಕ್ಷಣೆ: ಮೀಸಲಾತಿ ಅಥವಾ ಕಲ್ಯಾಣ ಯೋಜನೆಗಳನ್ನು ಪಡೆಯಲು ‘ಸೋಗು ಹಾಕುವ’ ಅಪಾಯಗಳ ಕುರಿತು ನ್ಯಾಯಾಲಯವು ಎಚ್ಚರಿಸಿದೆ.
    1. ಆದಾಗ್ಯೂ, ಈ ಸೌಲಭ್ಯಗಳ ದುರ್ಬಳಕೆಯ ಸಾಧ್ಯತೆಯು ಅತ್ಯಲ್ಪವಾಗಿರುತ್ತದೆ. ಇವರನ್ನು ವ್ಯವಸ್ಥಿತವಾಗಿ ಸಮಾಜದಿಂದ ಹೊರಗಿಡುವುದಕ್ಕೆ ಹೋಲಿಸಿದರೆ, ದುರ್ಬಳಕೆಯ ಕುರಿತಾದ ಆತಂಕಗಳನ್ನು ಅತಿಯಾಗಿ ಉತ್ಪ್ರೇಕ್ಷೆ ಮಾಡಲಾಗುತ್ತಿದೆ.
    • ನಾಲ್ಸಾ (NALSA) ತತ್ವಗಳ ಮೇಲಿನ ಪರಿಣಾಮ: 2026 ರ ತಿದ್ದುಪಡಿಯು ‘ಸ್ವಯಂ-ಗುರುತಿಸುವಿಕೆಯ ಸಿದ್ಧಾಂತ’ವನ್ನು ದುರ್ಬಲಗೊಳಿಸುತ್ತದೆ ಮತ್ತು ಜೈವಿಕ ಅಗತ್ಯತಾವಾದವನ್ನು (Biological essentialism – ಕೇವಲ ಜೈವಿಕ ಆಧಾರದ ಮೇಲೆ ಲಿಂಗ ನಿರ್ಧರಿಸುವುದು) ಮರಳಿ ಪರಿಚಯಿಸುತ್ತದೆ.
    • ಇದು ಹಕ್ಕು-ಆಧಾರಿತ ಚೌಕಟ್ಟಿನಿಂದ ನಿಯಂತ್ರಕ ಚೌಕಟ್ಟಿನೆಡೆಗಿನ ‘ಹಿಮ್ಮುಖ ಚಲನೆ ಅಥವಾ ಹಿನ್ನಡೆ’ಯಾಗಿ ಕಾರ್ಯನಿರ್ವಹಿಸುತ್ತದೆ.
    • ಆರೋಗ್ಯ ರಕ್ಷಣೆ ಮತ್ತು ಪರಿವರ್ತನೆಯ ಹಕ್ಕುಗಳು: ಪ್ರಸ್ತುತ ನಡೆಯುತ್ತಿರುವ ‘ಲಿಂಗ-ದೃಢೀಕರಣ ಚಿಕಿತ್ಸೆ’ಗಳಿಗೆ ಇದರಿಂದ ತೀವ್ರ ಅಡ್ಡಿಯುಂಟಾಗುತ್ತದೆ ಎಂದು ಆರೋಪಿಸಲಾಗಿದೆ.
    • ಭಾರತದಲ್ಲಿ ಈ ವರ್ಗಕ್ಕೆ ಆರೋಗ್ಯ ಸೇವೆಯ ಲಭ್ಯತೆಯು ಈಗಾಗಲೇ ಸೀಮಿತವಾಗಿದೆ ಮತ್ತು ಕಳಂಕದಿಂದ ಕೂಡಿದೆ.
    • ವರ್ಗೀಕರಣ ಮತ್ತು ಕಳಂಕ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜೊತೆಗೆ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತರನ್ನು ಒಟ್ಟಿಗೆ ಸೇರಿಸುವುದು ತರ್ಕಬದ್ಧವಲ್ಲದ ಮತ್ತು ಕಳಂಕಿತ ವರ್ಗೀಕರಣಕ್ಕೆ ಕಾರಣವಾಗುತ್ತದೆ (ಇದು ಸಂವಿಧಾನದ 14 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ).

    ರು-ಸೋಮ್ ಸೇತುವೆಗಳು (Ru-Soam Bridges)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸ್ಥಳೀಯ ‘ರು-ಸೋಮ್’ (ಬೆತ್ತದ ಸೇತುವೆ) ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲ್ಯಗಳನ್ನು ದಾಖಲಿಸಲು ‘ಯುನೆಸ್ಕೋ’ (UNESCO) ಸಂಸ್ಥೆಯು ಸಿಕ್ಕಿಂ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದೆ.
    • ಪ್ರವಾಸೋದ್ಯಮ ಸಂಸ್ಥೆಯಾದ ‘ಏರ್‌ಬಿಎನ್‌ಬಿ’ (Airbnb) ನೆರವಿನೊಂದಿಗೆ, ಈ ಯೋಜನೆಯನ್ನು ‘ಕಾಂಚನಜುಂಗಾ ಜೀವಿಗೋಳ ಸಂರಕ್ಷಿತ ವಲಯ’ದಲ್ಲಿ ಜಾರಿಗೊಳಿಸಲಾಗುತ್ತಿದೆ.

    ರು-ಸೋಮ್ ಸೇತುವೆಗಳ ಬಗ್ಗೆ:

    • ‘ರು-ಸೋಮ್’ ಎನ್ನುವುದು ಲೆಪ್ಚಾ ಸಮುದಾಯವು ನಿರ್ಮಿಸುವ ಸಾಂಪ್ರದಾಯಿಕ ಬೆತ್ತದ ಸೇತುವೆಗಳಾಗಿವೆ.
    • ಬಿದಿರು, ಬೆತ್ತ ಮತ್ತು ಮರದಂತಹ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಈ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.
    • ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಿಗೆ ಹೊಂದುವಂತಹ ಉನ್ನತ ಮಟ್ಟದ ಪರಿಸರ ಜ್ಞಾನ ಮತ್ತು ಅತ್ಯುತ್ತಮ ‘ರಚನಾತ್ಮಕ ಸ್ಥಿತಿಸ್ಥಾಪಕತ್ವ’ವನ್ನು ಈ ಸೇತುವೆಗಳು ಪ್ರತಿಬಿಂಬಿಸುತ್ತವೆ.
    • 2023 ರಲ್ಲಿ ಸಂಭವಿಸಿದ ಭೀಕರ ‘ಸಿಕ್ಕಿಂ ಹಿಮನದಿ ಸರೋವರ ಸ್ಫೋಟ ಪ್ರವಾಹ’ದ (GLOF) ಸಂದರ್ಭದಲ್ಲಿಯೂ ಈ ಸೇತುವೆಗಳು ತಮ್ಮ ಸ್ಥಿತಿಸ್ಥಾಪಕತ್ವ ಮತ್ತು ಸದೃಢತೆಯನ್ನು ಸಾಬೀತುಪಡಿಸಿವೆ.

    ತಾಂಜಾನಿಯಾ (Tanzania)

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ತಾಂಜಾನಿಯಾದ ದಾರ್ ಎಸ್ ಸಲಾಮ್‌ನಲ್ಲಿ (Dar es Salaam), ‘ಭಾರತ-ತಾಂಜಾನಿಯಾ ಜಂಟಿ ವ್ಯಾಪಾರ ಸಮಿತಿ’ಯ (JTC) 5ನೇ ಅಧಿವೇಶನವು ಜರುಗಿತು.

    ತಾಂಜಾನಿಯಾ ದೇಶದ ಭೌಗೋಳಿಕ ಲಕ್ಷಣಗಳು:

    • ಇದು ಸಮಭಾಜಕ ವೃತ್ತದ ಸ್ವಲ್ಪ ದಕ್ಷಿಣಕ್ಕೆ ನೆಲೆಗೊಂಡಿರುವ ಪೂರ್ವ ಆಫ್ರಿಕಾದ ರಾಷ್ಟ್ರವಾಗಿದೆ.
    • ‘ಡೊಡೊಮಾ’ (Dodoma) ಇದರ ರಾಜಧಾನಿಯಾಗಿದ್ದು, ‘ದಾರ್ ಎಸ್ ಸಲಾಮ್’ ಇಲ್ಲಿನ ಅತಿ ದೊಡ್ಡ ನಗರ ಹಾಗೂ ಪ್ರಮುಖ ಬಂದರು ಪಟ್ಟಣವಾಗಿದೆ.
    • ನೆರೆಹೊರೆಯ ರಾಷ್ಟ್ರಗಳು ಮತ್ತು ಗಡಿಗಳು:
    1. ಉತ್ತರಕ್ಕೆ  ಉಗಾಂಡಾ, ಕೀನ್ಯಾ ಮತ್ತು ವಿಕ್ಟೋರಿಯಾ ಸರೋವರ.
    2. ಪೂರ್ವಕ್ಕೆ: ಹಿಂದೂ ಮಹಾಸಾಗರ.
    3. ದಕ್ಷಿಣಕ್ಕೆ: ಮೋಜಾಂಬಿಕ್, ಮಳಾವಿ, ಜಾಂಬಿಯಾ ಮತ್ತು ನ್ಯಾಸಾ ಸರೋವರ.
    4. ಪಶ್ಚಿಮಕ್ಕೆ: ರುವಾಂಡಾ, ಬುರುಂಡಿ ಮತ್ತು ಟಾಂಗನ್ಯಿಕಾ ಸರೋವರ.
    • ಕಿಲಿಮಂಜಾರೊ ಪರ್ವತ: ತಾಂಜಾನಿಯಾದಲ್ಲಿರುವ ಈ ಪರ್ವತವು ಆಫ್ರಿಕಾ ಖಂಡದ ಅತ್ಯುನ್ನತ ಶಿಖರವಾಗಿದೆ.
    • ಆಫ್ರಿಕಾದ ಅತಿ ದೊಡ್ಡ ಸರೋವರ ಹಾಗೂ ನೈಲ್ ನದಿಯ ಉಗಮಸ್ಥಾನವಾದ ‘ವಿಕ್ಟೋರಿಯಾ ಸರೋವರ’ದ ಒಂದು ಭಾಗವು ತಾಂಜಾನಿಯಾದಲ್ಲಿದೆ.
    • ಪ್ರಮುಖ ನದಿಗಳು: ಗ್ರೇಟ್ ರುವಾಹಾ, ರುಫಿಜಿ ಮತ್ತು ಕಾಗೇರಾ ನದಿಗಳು.
    • ಟಾಂಗನ್ಯಿಕಾ ಸರೋವರ: ಇದು ತಾಂಜಾನಿಯಾ ಮತ್ತು ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ’ (DRC) ರಾಷ್ಟ್ರಗಳ ನಡುವೆ ನೈಸರ್ಗಿಕ ಗಡಿಯನ್ನು ನಿರ್ಮಿಸುತ್ತದೆ.

    ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0 ಮಾರ್ಗಸೂಚಿಗಳು

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಮುಕ್ತಾಯಗೊಂಡ ‘ಸಾರ್ವಜನಿಕ ಆರೋಗ್ಯ ಸೇವಾ ವಿತರಣೆಯಲ್ಲಿನ ಉತ್ತಮ ಕಾರ್ಯವಿಧಾನಗಳು ಮತ್ತು ನಾವೀನ್ಯತೆಗಳ ರಾಷ್ಟ್ರೀಯ ಶೃಂಗಸಭೆ’ಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0’ದ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(RBSK)ದ ಬಗ್ಗೆ: 

    • ಇದು ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ (National Health Mission – NHM) ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ.
    • ಅನುಷ್ಠಾನ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಉದ್ದೇಶ: ಜನನದಿಂದ 18 ವರ್ಷದವರೆಗಿನ ಮಕ್ಕಳಲ್ಲಿ ಕಂಡುಬರುವ ಜನ್ಮಜಾತ ನ್ಯೂನತೆಗಳು, ಪೋಷಕಾಂಶಗಳ ಕೊರತೆ, ಬಾಲ್ಯದ ರೋಗಗಳು ಮತ್ತು ಬೆಳವಣಿಗೆಯ ವಿಳಂಬದಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಧಾನ ಉದ್ದೇಶವಾಗಿದೆ.
    • ಉದ್ದೇಶಿತ ಫಲಾನುಭವಿಗಳು: ವ್ಯವಸ್ಥಿತ ಕಣ್ಗಾವಲಿಗಾಗಿ ಈ ಕಾರ್ಯಕ್ರಮವು ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ವಿವಿಧ ಗುಂಪುಗಳಾಗಿ ವಿಂಗಡಿಸುತ್ತದೆ:
      • 0 ರಿಂದ 6 ವಾರಗಳು: ಹೆರಿಗೆ ಕೇಂದ್ರಗಳಲ್ಲಿ ಹಾಗೂ ಆಶಾ (ASHA) ಕಾರ್ಯಕರ್ತೆಯರ ಮನೆ ಭೇಟಿಯ ಮೂಲಕ ನವಜಾತ ಶಿಶುಗಳ ತಪಾಸಣೆ.
      • 6 ವಾರಗಳಿಂದ 6 ವರ್ಷ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಮಕ್ಕಳ ಆರೋಗ್ಯ ಮೇಲ್ವಿಚಾರಣೆ.
      • 6 ವರ್ಷದಿಂದ 18 ವರ್ಷ: ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಪಾಸಣೆ.
    • “4Ds” ಕಾರ್ಯತಂತ್ರ (The “4Ds” Strategy): RBSK ಯೋಜನೆಯು ಆಯ್ದ 30 ರಿಂದ 32 ಆರೋಗ್ಯ ಸಮಸ್ಯೆಗಳನ್ನು ನಾಲ್ಕು ಪ್ರಮುಖ ವರ್ಗಗಳಾಗಿ ವಿಂಗಡಿಸಿ, ವ್ಯವಸ್ಥಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಅವುಗಳೆಂದರೆ,
    1. ಜನ್ಮಜಾತ ನ್ಯೂನತೆಗಳು: ಡೌನ್ ಸಿಂಡ್ರೋಮ್ (ವರ್ಣತಂತು ಅಸಹಜತೆ), ಜನ್ಮಜಾತ ಕಣ್ಣಿನ ಪೊರೆ, ಸೀಳು ತುಟಿ/ಅಂಗುಳು, ವಕ್ರಪಾದ ಮತ್ತು ಜನ್ಮಜಾತ ಹೃದಯ ಕಾಯಿಲೆಗಳು.
    2. ಪೋಷಕಾಂಶಗಳ ಕೊರತೆ: ರಕ್ತಹೀನತೆ, ವಿಟಮಿನ್ ‘ಎ’ ಅಥವಾ ‘ಡಿ’ ಕೊರತೆ, ತೀವ್ರ ಸ್ವರೂಪದ ಅಪೌಷ್ಟಿಕತೆ ಮತ್ತು ಗಾಯಿಟ್ರೆ (ಗಳಗಂಡ ರೋಗ).
    3. ಬಾಲ್ಯದ ರೋಗಗಳು: ಚರ್ಮದ ಕಾಯಿಲೆಗಳು, ಓಟಿಟಿಸ್ ಮೀಡಿಯಾ (ಮಧ್ಯ ಕಿವಿಯ ಸೋಂಕು), ರುಮಾಟಿಕ್ ಹೃದಯ ಕಾಯಿಲೆ ಮತ್ತು ಉಸಿರಾಟ ನಾಳದ ಪ್ರತಿಕ್ರಿಯಾತ್ಮಕ ಕಾಯಿಲೆ.
    4. ಬೆಳವಣಿಗೆಯ ವಿಳಂಬ ಮತ್ತು ವಿಕಲಾಂಗತೆಗಳು: ದೃಷ್ಟಿ ದೋಷ, ಶ್ರವಣ ದೋಷ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಸೆರೆಬ್ರಲ್ ಪಾಲ್ಸಿ (ಮಿದುಳಿನ ಲಕ್ವ).

    ಹಂಟಾವೈರಸ್ ಸೋಂಕು ಹರಡುವಿಕೆ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿ ‘ಹಂಟಾವೈರಸ್’ ಸೋಂಕಿನಿಂದಾಗಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ‘ವಿಶ್ವ ಆರೋಗ್ಯ ಸಂಸ್ಥೆ’ (WHO) ವರದಿ ಮಾಡಿದೆ.

    ಹಂಟಾವೈರಸ್ (Hantavirus) ಬಗ್ಗೆ:

    • ಕಾರಣವಾಗುವ ರೋಗಕಾರಕ: ಇದೊಂದು ಅಪರೂಪದ ಆದರೆ ತೀವ್ರ ಸ್ವರೂಪದ ಪ್ರಾಣಿಜನ್ಯ ರೋಗವಾಗಿದೆ. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ‘ಹಂಟಾವಿರಿಡೆ’ (Hantaviridae) ಕುಟುಂಬಕ್ಕೆ ಸೇರಿದ್ದು, ಆರ್‌ಎನ್‌ಎ (RNA) ಮಾದರಿಯ ವೈರಸ್ ಆಗಿದೆ.
    • ರೋಗವಾಹಕ : ಈ ವೈರಸ್ ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಂತಹ ದಂಶಕಗಳ ಮೂಲಕ ಹರಡುತ್ತದೆ.
    • ಸೋಂಕಿತ ದಂಶಕಗಳ ಮೂತ್ರ ಅಥವಾ ಮಲದಿಂದ ಗಾಳಿಯಲ್ಲಿ ಬೆರೆಯುವ ವಾಯುಗಾಮಿ ಕಣಗಳನ್ನು ಉಸಿರಾಡುವುದರಿಂದ ಅಥವಾ ಸೋಂಕಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಇದು ಮನುಷ್ಯರಿಗೆ ಹರಡುತ್ತದೆ.
    • ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ.
    • ರೋಗಲಕ್ಷಣಗಳು: ಸೋಂಕಿಗೆ ತುತ್ತಾದ ಒಂದು ಅಥವಾ ಎಂಟು ವಾರಗಳ ಒಳಗೆ ಜ್ವರ ಮತ್ತು ತೀವ್ರ ಆಯಾಸದಂತಹ ಜ್ವರ (ಫ್ಲೂ)ದಂತಹ ಲಕ್ಷಣಗಳೊಂದಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.
    • ತೀವ್ರತರವಾದ ಪ್ರಕರಣಗಳಲ್ಲಿ, ಇದು ‘ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್’ಗೆ ಪರಿವರ್ತನೆ ಆಗಬಹುದು. ಇದು ಉಸಿರಾಟದ ತೀವ್ರ ತೊಂದರೆಯನ್ನು ಉಂಟುಮಾಡಿ, ಮಾರಣಾಂತಿಕವೂ ಆಗಬಹುದು.
    • ಚಿಕಿತ್ಸೆ: ಈ ರೋಗವನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಔಷಧಗಳಿಲ್ಲ. ಹೀಗಾಗಿ, ರೋಗದ ಲಕ್ಷಣಗಳ ಆಧಾರದ ಮೇಲೆ ಪೂರಕ ಆರೈಕೆ ನೀಡುವುದರ ಕಡೆಗೆ ಹೆಚ್ಚು ಗಮನಹರಿಸಲಾಗುತ್ತದೆ. ತೀವ್ರ ಸ್ವರೂಪದ ಪ್ರಕರಣಗಳಲ್ಲಿ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸುವುದು ಇದರಲ್ಲಿ ಸೇರಿದೆ.
  • ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ | ಸರ್ದಾರ್ ವಲ್ಲಭಭಾಯಿ ಪಟೇಲ್ | ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’) | PCOS ಅನ್ನು PMOS ಎಂದು ಮರುನಾಮಕರಣ | ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) | ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ | ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

    ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತ ಸರ್ಕಾರವು ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ನೂತನ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರನ್ನಾಗಿ (Chief of Defence Staff – CDS) ನೇಮಕ ಮಾಡಿದೆ.
    • ಅವರು ‘ಸೇನಾ ವ್ಯವಹಾರಗಳ ಇಲಾಖೆ’ಯ (Department of Military Affairs – DMA) ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

    ರಕ್ಷಣಾ ಪಡೆಗಳ ಮುಖ್ಯಸ್ಥರು (Chief of Defence Staff – CDS):

    • ‘ಕಾರ್ಗಿಲ್ ಪರಾಮರ್ಶನಾ ಸಮಿತಿ’ಯ ಶಿಫಾರಸುಗಳು ಹಾಗೂ ನಂತರದ ರಕ್ಷಣಾ ಸುಧಾರಣೆಗಳ ಭಾಗವಾಗಿ 2019 ರಲ್ಲಿ CDS ಹುದ್ದೆಯನ್ನು ಸೃಷ್ಟಿಸಲಾಯಿತು.
    • ಭಾರತದ ಪ್ರಥಮ CDS ಆಗಿ ಜನರಲ್ ಬಿಪಿನ್ ರಾವತ್ ಅವರು ಸೇವೆ ಸಲ್ಲಿಸಿದ್ದರು.

    ಸಿಡಿಎಸ್ (CDS) ಅವರ ಪಾತ್ರ ಮತ್ತು ಜವಾಬ್ದಾರಿಗಳು:

    • ಪ್ರಧಾನ ಸೇನಾ ಸಲಹೆಗಾರರು: ರಕ್ಷಣಾ ಸಚಿವರಿಗೆ ಮೂರು ಸಶಸ್ತ್ರ ಪಡೆಗಳಿಗೆ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪ್ರಧಾನ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.
    • ಸೇನಾ ವ್ಯವಹಾರಗಳ ಇಲಾಖೆ: ಭಾರತ ಸರ್ಕಾರದ ‘ಸೇನಾ ವ್ಯವಹಾರಗಳ ಇಲಾಖೆ’ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
    • ಸೇನಾ ಸುಧಾರಣೆ: ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳಲ್ಲಿ ಸಮನ್ವಯ, ಜಂಟಿ ಕಾರ್ಯಾಚರಣೆ ಹಾಗೂ ಸೇನಾ ಪಡೆಗಳ ಆಧುನೀಕರಣವನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ.
    • ಸಂಯುಕ್ತ ಸೇನಾ ಕಮಾಂಡ್‌ಗಳು (Theater Commands): ಪ್ರಸ್ತುತವಿರುವ ಸೇನಾ ಕಮಾಂಡ್‌ಗಳನ್ನು ‘ಏಕೀಕೃತ ಸಂಯುಕ್ತ ಸೇನಾ ಕಮಾಂಡ್‌’ಗಳಾಗಿ ಮರುರೂಪಿಸುವ ಪ್ರಕ್ರಿಯೆಯನ್ನು ಇವರು ಮುನ್ನಡೆಸುತ್ತಾರೆ.
    • ಕಾರ್ಯತಂತ್ರ ಮತ್ತು ಪರಮಾಣು ಪಾತ್ರ: ‘ಪರಮಾಣು ಕಮಾಂಡ್ ಪ್ರಾಧಿಕಾರ’ಕ್ಕೆ ಪ್ರಮುಖ ಸೇನಾ ಸಲಹೆಗಾರರಾಗಿ ಇವರು ಸೇವೆ ಸಲ್ಲಿಸುತ್ತಾರೆ.

    ಸರ್ದಾರ್ ವಲ್ಲಭಭಾಯಿ ಪಟೇಲ್

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಸೋಮನಾಥ ದೇವಾಲಯದ ಪುನರ್ ನಿರ್ಮಾಣದ 75 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

    • ಜನನ: ಅಕ್ಟೋಬರ್ 31, 1875.
    • ಇವರು ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು.
    • ಇವರನ್ನು ಭಾರತದ ‘ರಾಷ್ಟ್ರೀಯ ಏಕೀಕರಣದ ಶಿಲ್ಪಿ’ ಹಾಗೂ ‘ಆಧುನಿಕ ನಾಗರಿಕ ಸೇವೆಗಳ’ ಸ್ಥಾಪನೆಯ ಹಿಂದಿನ ಪ್ರಮುಖ ಶಕ್ತಿ ಎಂದು ವ್ಯಾಪಕವಾಗಿ ಗೌರವಿಸಲಾಗುತ್ತದೆ.
    • 1991 ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

    ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇವರ ಕೊಡುಗೆಗಳು:

    • ಖೇಡಾ ಸತ್ಯಾಗ್ರಹ, 1917: ಗುಜರಾತಿನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿದ್ದ ಪಟೇಲರು, ಬ್ರಿಟಿಷರು ವಿಧಿಸಿದ್ದ ಅನ್ಯಾಯದ ಭೂಕಂದಾಯದ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸಲು ಮಹಾತ್ಮಾ ಗಾಂಧಿಯವರಿಗೆ ಬೆಂಬಲ ನೀಡಿದರು.
    • ಅಸಹಕಾರ ಚಳುವಳಿ, 1920-22: ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಸುಮಾರು 3 ಲಕ್ಷ ಜನರನ್ನು ಚಳುವಳಿಗೆ ಸೇರ್ಪಡೆಗೊಳಿಸಿದರು ಮತ್ತು ₹ 15 ಲಕ್ಷ (1.5 ಮಿಲಿಯನ್) ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿದರು.
    • ಬಾರ್ಡೋಲಿ ಸತ್ಯಾಗ್ರಹ, 1928: ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ತೀವ್ರ ಬರಗಾಲ ಮತ್ತು ಹೆಚ್ಚಾದ ಭೂಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನತೆಗೆ ಪಟೇಲರು ಬಲವಾದ ಬೆಂಬಲ ನೀಡಿದರು.
    • ಕಾನೂನು ಭಂಗ ಚಳುವಳಿ, 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ ‘ಉಪ್ಪಿನ ಸತ್ಯಾಗ್ರಹ’ದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದರು.
    • ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿ, 1942: ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ತೀವ್ರ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಹಾಗೂ ಸ್ಪೂರ್ತಿದಾಯಕ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಬೃಹತ್ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು, ಕಾನೂನಿನ ಉಲ್ಲಂಘನೆಯಲ್ಲಿ ತೊಡಗಲು, ತೆರಿಗೆ ಪಾವತಿಯನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಪ್ರೇರೇಪಿಸಿದರು.

    ನಿಮಗಿದು ತಿಳಿದಿರಲಿ:

    • ಸರ್ದಾರ್ ಪಟೇಲರ ಜನ್ಮದಿನದ ಸ್ಮರಣಾರ್ಥವಾಗಿ 2014 ರಿಂದ, ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತಿದೆ.
    • ಗುಜರಾತಿನ ಕೇವಾಡಿಯಾದಲ್ಲಿ , ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನದಂದು (ಅಕ್ಟೋಬರ್ 31, 2018) ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಯಾದ ‘ಏಕತಾ ಪ್ರತಿಮೆ’ಯನ್ನು ಅನಾವರಣಗೊಳಿಸಲಾಯಿತು.
    • 1947 ರಲ್ಲಿ ಸ್ವತಂತ್ರ ಭಾರತದ ಪ್ರಥಮ ಬ್ಯಾಚ್ ನ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಸರ್ದಾರ್ ಪಟೇಲರು ಮಾಡಿದ ಐತಿಹಾಸಿಕ ಭಾಷಣದ ಸವಿನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

    ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’)

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಉತ್ತರ ಪ್ರದೇಶದಲ್ಲಿ ಸುಮಾರು 35 ವರ್ಷಗಳಿಂದ ಬಾಕಿ ಉಳಿದಿದ್ದ ಅಪರಾಧ ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು, ‘ತ್ವರಿತ ವಿಚಾರಣೆಯ ಹಕ್ಕು’ ಕೇವಲ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿದ್ದ ಸಾಂವಿಧಾನಿಕ ಖಾತರಿಯಷ್ಟೇ ಅಲ್ಲ, ಅದೊಂದು ‘ಮಾನವ ಹಕ್ಕು’ ಕೂಡ ಆಗಿದೆ ಎಂದು ಮಹತ್ವದ ತೀರ್ಪು ನೀಡಿದೆ.

    ಸಂವಿಧಾನದ 21ನೇ ವಿಧಿ:

    • ಸಂವಿಧಾನದ 21ನೇ ವಿಧಿಯು ಕಾನೂನಿನಿಂದ ಸ್ಥಾಪಿತವಾದ ಪ್ರಕ್ರಿಯೆಯ (Procedure established by law) ಹೊರತಾಗಿ, ಪ್ರತಿಯೊಬ್ಬ ವ್ಯಕ್ತಿಗೂ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ’ಯನ್ನು ಖಾತರಿಪಡಿಸುತ್ತದೆ.
    • ನ್ಯಾಯಾಂಗದ ವ್ಯಾಖ್ಯಾನಗಳು 21ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇದು ನ್ಯಾಯಸಮ್ಮತ ವಿಚಾರಣೆ, ಉಚಿತ ಕಾನೂನು ನೆರವು, ಸೆರೆಮನೆಯಲ್ಲಿ ಮಾನವೀಯ ವಾತಾವರಣ ಮತ್ತು ತ್ವರಿತ ನ್ಯಾಯವನ್ನು ಒಳಗೊಂಡಿದೆ.

    ನ್ಯಾಯಾಂಗದ ವಿಕಸನ:

    • ಹುಸೇನಾರಾ ಖಾತುನ್ v/s ಬಿಹಾರ ರಾಜ್ಯ ಪ್ರಕರಣ: ಸರ್ವೋಚ್ಚ ನ್ಯಾಯಾಲಯವು 21ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯನ್ನು ‘ಮೂಲಭೂತ ಹಕ್ಕು’ ಎಂದು ಮೊದಲ ಬಾರಿಗೆ ಗುರುತಿಸಿತು. ವರ್ಷಗಳ ಕಾಲ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಕುರಿತು ಈ ಪ್ರಕರಣವು ಗಮನ ಹರಿಸಿತು.
    • ಎ.ಆರ್. ಅಂತುಲೆ v/s ಆರ್.ಎಸ್. ನಾಯಕ್ ಪ್ರಕರಣ: ತ್ವರಿತ ವಿಚಾರಣೆಯ ಹಕ್ಕಿನ ಉಲ್ಲಂಘನೆಯನ್ನು ನಿರ್ಧರಿಸಲು ನ್ಯಾಯಾಲಯವು ಕೆಲವು ತತ್ವಗಳನ್ನು ರೂಪಿಸಿತು. ಆಡಳಿತ ವ್ಯವಸ್ಥೆಯ ನ್ಯೂನತೆಗಳಿಂದ ಉಂಟಾಗುವ ವಿಳಂಬಗಳು ಸಹ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಇದು ಸ್ಪಷ್ಟಪಡಿಸಿದೆ.

    PCOS ಅನ್ನು PMOS ಎಂದು ಮರುನಾಮಕರಣ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ವಿಶ್ವದಾದ್ಯಂತ ವೈದ್ಯರು, ಸಂಶೋಧಕರು ಮತ್ತು ರೋಗಿಗಳ ಹಕ್ಕುಗಳ ಪ್ರತಿಪಾದನಾ ಗುಂಪುಗಳನ್ನು ಒಳಗೊಂಡ ಜಾಗತಿಕ ವೈದ್ಯಕೀಯ ಒಮ್ಮತವು ಸುಮಾರು 14 ವರ್ಷಗಳ ವೈಜ್ಞಾನಿಕ ಸಮಾಲೋಚನೆಗಳ ನಂತರ, ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಅನ್ನು ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS) ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.

    ಪಿಎಂಓಎಸ್ (PMOS) ಬಗ್ಗೆ:

    • ಹಿಂದೆ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂದು ಕರೆಯಲ್ಪಡುತ್ತಿದ್ದ ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS), ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರನ್ನು ಬಾಧಿಸುವ ಒಂದು ಸಂಕೀರ್ಣ ಹಾರ್ಮೋನ್ ಮತ್ತು ಚಯಾಪಚಯ ಅಸ್ವಸ್ಥತೆಯಾಗಿದೆ.
    • ಇದು ಅಂತಃಸ್ರಾವಕ ವ್ಯವಸ್ಥೆ, ಚಯಾಪಚಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
    • ಈ ಅಸ್ವಸ್ಥತೆಯು ಜಾಗತಿಕವಾಗಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ ಬಾಧಿಸುತ್ತಿದ್ದು, ಬಂಜೆತನ ಹಾಗೂ ಋತುಸ್ರಾವದ ವ್ಯತ್ಯಯಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
    • ಪ್ರಮುಖ ಲಕ್ಷಣಗಳು:
    1. ಮಧುಮೇಹದ ಅಪಾಯ: ಇನ್ಸುಲಿನ್ ಪ್ರತಿರೋಧವು ಟೈಪ್-2 ಮಧುಮೇಹಕ್ಕೆ (Type-2 diabetes mellitus) ಕಾರಣವಾಗಬಹುದು.
    2. ಹೃದ್ರೋಗದ ಅಪಾಯಗಳು: PMOS ಹೊಂದಿರುವ ಮಹಿಳೆಯರು ಅಧಿಕ ರಕ್ತದೊತ್ತಡ  ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.
    3. ಸಂತಾನೋತ್ಪತ್ತಿಯ ಸವಾಲುಗಳು: ಈ ಅಸ್ವಸ್ಥತೆಯು ಅಂಡೋತ್ಪತ್ತಿ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
    4. ಮಾನಸಿಕ ಆರೋಗ್ಯದ ಸಮಸ್ಯೆಗಳು: ದೀರ್ಘಕಾಲೀನ ಒತ್ತಡ, ದೇಹದ ಬಗ್ಗೆ ಕೀಳರಿಮೆ ಮತ್ತು ಹಾರ್ಮೋನ್‌ಗಳ ಅಸಮತೋಲನವು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

    PCOS ಹೆಸರನ್ನು ಬದಲಾಯಿಸಿದ್ದೇಕೆ?

    • ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂಬ ಹಿಂದಿನ ಹೆಸರು ವೈಜ್ಞಾನಿಕವಾಗಿ ನಿಖರವಾಗಿರಲಿಲ್ಲ ಮತ್ತು ತಪ್ಪು ಕಲ್ಪನೆ ಮೂಡಿಸುವಂತಿತ್ತು. ಏಕೆಂದರೆ, ಈ ಅಸ್ವಸ್ಥತೆಯಿಂದ ಬಳಲುವ ಅನೇಕ ಮಹಿಳೆಯರಲ್ಲಿ ವಾಸ್ತವವಾಗಿ ಅಂಡಾಶಯದ ಚೀಲಗಳು (Ovarian cysts) ರೂಪುಗೊಳ್ಳುವುದೇ ಇಲ್ಲ.
    • ಹಿಂದಿನ ಹೆಸರು ಪ್ರಾಥಮಿಕವಾಗಿ ಈ ಅಸ್ವಸ್ಥತೆಯನ್ನು ಕೇವಲ ಸಂತಾನೋತ್ಪತ್ತಿ ಅಂಗಗಳಿಗೆ ಮಾತ್ರ ಸೀಮಿತಗೊಳಿಸುವಂತಿತ್ತು. ಆದರೆ ವಾಸ್ತವದಲ್ಲಿ, ಈ ಸ್ಥಿತಿಯು ದೇಹದ ಚಯಾಪಚಯ ಕ್ರಿಯೆ, ಹಾರ್ಮೋನ್ ವ್ಯವಸ್ಥೆ, ಹೃದಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

    ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI)

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇಂದ್ರ ಶಿಕ್ಷಣ ಸಚಿವಾಲಯವು, ‘ಪಿಎಂ-ಶ್ರೀ’ (PM SHRI) ಯೋಜನೆಯ ಅನುಷ್ಠಾನವು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ, ಈ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಆಗ್ರಹಿಸಿ ಮತ್ತೊಮ್ಮೆ ಜ್ಞಾಪನಾ ಪತ್ರವನ್ನು ರವಾನಿಸಿದೆ.

    ಪಿಎಂ-ಶ್ರೀ ಶಾಲೆಗಳು (PM SHRI Schools):

    • PM SHRI ವಿಸ್ತೃತ ರೂಪ: ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM Schools for Rising India).
    • ಅನುಷ್ಠಾನ ಸಚಿವಾಲಯ: ಕೇಂದ್ರ ಶಿಕ್ಷಣ ಸಚಿವಾಲಯ.
    • ಯೋಜನೆಯ ಸ್ವರೂಪ: ಕೇಂದ್ರ ಪ್ರಾಯೋಜಿತ ಯೋಜನೆ.
    • ಉದ್ದೇಶ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿರುವ ಶಾಲೆಗಳ ಪೈಕಿ ಕೆಲವು ಶಾಲೆಗಳನ್ನು ಆಯ್ಕೆಮಾಡಿ ಬಲಪಡಿಸುವ ಮೂಲಕ, ದೇಶದಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಉನ್ನತೀಕರಿಸುವುದು ಮತ್ತು ಅಭಿವೃದ್ಧಿಪಡಿಸುವುದು.
    • ವೈಶಿಷ್ಟ್ಯಗಳು:
    1. ಪಿಎಂ-ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವಲ್ಲಿ ಅತ್ಯಾಧುನಿಕ, ಪರಿವರ್ತನಾಶೀಲ ಹಾಗೂ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಿವೆ.
    2. ಈ ಶಾಲೆಗಳು ಅತ್ಯಾಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು ಹಾಗೂ ಕ್ರೀಡೆಗಳನ್ನು ಒಳಗೊಂಡಂತೆ ‘ಆಧುನಿಕ ಮೂಲಸೌಕರ್ಯಗಳ’ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಿವೆ.
    3. ಜಲ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ದಕ್ಷ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ನೈಸರ್ಗಿಕ ಜೀವನಶೈಲಿಯನ್ನು ಅಳವಡಿಸುವ ಮೂಲಕ ಈ ಶಾಲೆಗಳನ್ನು “ಹಸಿರು ಶಾಲೆಗಳಾಗಿ” ರೂಪುಗೊಳಿಸಲಾಗುವುದು.
    4. ಒಟ್ಟಾರೆಯಾಗಿ, ಈ ಶಾಲೆಗಳು ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ (NEP 2020) ಎಲ್ಲಾ ಆಶಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸಲಿವೆ. ಅಲ್ಲದೆ, ಇವು ಅತ್ಯುತ್ತಮ ‘ಮಾದರಿ ಶಾಲೆಗಳಾಗಿ’ ಕಾರ್ಯನಿರ್ವಹಿಸುವುದರ ಜೊತೆಗೆ, ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೂ ಉತ್ತಮ ಮಾರ್ಗದರ್ಶನ ನೀಡಲಿವೆ.

    ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ ಪ್ರಕಟಿಸಿದ ಪ್ರಮುಖ ಅಧ್ಯಯನದ ಪ್ರಕಾರ, ಪ್ರಪಂಚದ ಮೊಟ್ಟಮೊದಲ ಅಂಗೀಕೃತ ಮಲೇರಿಯಾ ಲಸಿಕೆಯಾದ ‘RTS,S/AS01E’, ಆಫ್ರಿಕಾದ ಕೆಲವು ಭಾಗಗಳಲ್ಲಿ ಮಕ್ಕಳ ಒಟ್ಟಾರೆ ಮರಣ ಪ್ರಮಾಣವನ್ನು ಶೇ. 13% ರಷ್ಟು ತಗ್ಗಿಸಿದೆ.

    ಮಲೇರಿಯಾ ಕಾಯಿಲೆಯ ಬಗ್ಗೆ:

    • ರೋಗಕಾರಕ: ಮಲೇರಿಯಾವು ‘ಪ್ಲಾಸ್ಮೋಡಿಯಂ’ ಎಂಬ ಪರಾವಲಂಬಿ ಜೀವಿಗಳಿಂದ ಬರುವ ತೀವ್ರ ಜ್ವರದ ಕಾಯಿಲೆಯಾಗಿದೆ.
    • ರೋಗವಾಹಕ: ಸೋಂಕಿತ ‘ಹೆಣ್ಣು ಅನಾಫಿಲಿಸ್’ ಸೊಳ್ಳೆಗಳು ಕಚ್ಚುವುದರಿಂದ ಇದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ. 
    • ಈ ರೋಗವನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು.
    • ಪ್ರಸರಣ: ಮಲೇರಿಯಾವು ಸಾಂಕ್ರಾಮಿಕ ರೋಗವಲ್ಲ. ಅಂದರೆ ಇದು ಸ್ಪರ್ಶದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಬದಲಾಗಿ ಕೇವಲ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಮಾತ್ರ ಹರಡುತ್ತದೆ.
    • ಮನುಷ್ಯರಲ್ಲಿ ಒಟ್ಟು ಐದು ಪ್ರಭೇದದ ಪರಾವಲಂಬಿಗಳು ಮಲೇರಿಯಾವನ್ನು ಉಂಟುಮಾಡುತ್ತವೆ. ಇವುಗಳಲ್ಲಿ ‘ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್’ (Plasmodium falciparum) ಮತ್ತು ‘ಪ್ಲಾಸ್ಮೋಡಿಯಂ ವಿವಾಕ್ಸ್’ (Plasmodium vivax) ಎಂಬ ಎರಡು ಪ್ರಭೇದಗಳು ಅತಿ ಹೆಚ್ಚು ಅಪಾಯಕಾರಿಯಾಗಿವೆ.
    • ರೋಗಲಕ್ಷಣಗಳು: ನವಜಾತ ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು ಎಚ್‌ಐವಿ (HIV) ಅಥವಾ ಏಡ್ಸ್ (AIDS) ಸೋಂಕಿತ ವ್ಯಕ್ತಿಗಳು ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಇದರ ತೀವ್ರ ಸ್ವರೂಪದ ಲಕ್ಷಣಗಳು ಈ ಕೆಳಗಿನಂತಿವೆ:
    1. ತೀವ್ರ ಆಯಾಸ ಮತ್ತು ಬಳಲಿಕೆ.
    2. ಪ್ರಜ್ಞಾಹೀನತೆ ಅಥವಾ ಮಂಕು ಕವಿಯುವುದು.
    3. ಪದೇ ಪದೇ ಸ್ನಾಯು ಸೆಳೆತ ಬರುವುದು
    4. ಉಸಿರಾಟದ ತೊಂದರೆ.
    5. ಕಡು ಬಣ್ಣದ ಅಥವಾ ರಕ್ತ ಮಿಶ್ರಿತ ಮೂತ್ರ
    6. ಕಾಮಾಲೆ (ಜಾಂಡಿಸ್) (ಕಣ್ಣು ಮತ್ತು ಚರ್ಮ ಹಳದಿಯಾಗುವುದು)
    7. ಅಸಹಜ ರಕ್ತಸ್ರಾವ

    ಮಲೇರಿಯಾ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಉಪಕ್ರಮಗಳು:

    • ಮಲೇರಿಯಾ ನಿಯಂತ್ರಣದ ಜಾಗತಿಕ ತಾಂತ್ರಿಕ ಕಾರ್ಯತಂತ್ರ 2016–2030: 2015 ರ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಮಲೇರಿಯಾ ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣವನ್ನು 2020 ರ ವೇಳೆಗೆ ಕನಿಷ್ಠ ಶೇ. 40%, 2025 ರ ವೇಳೆಗೆ ಶೇ. 75% ಮತ್ತು 2030 ರ ವೇಳೆಗೆ ಕನಿಷ್ಠ ಶೇ. 90% ರಷ್ಟು ತಗ್ಗಿಸುವ ಗುರಿಯನ್ನು ಇದು ಹೊಂದಿದೆ.
    • ‘E-2025 ಉಪಕ್ರಮ’: ಈ ಯೋಜನೆಯ ಅಡಿಯಲ್ಲಿ 2025 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯ ಹೊಂದಿರುವ 25 ದೇಶಗಳನ್ನು WHO ಗುರುತಿಸಿದೆ.
    • ಅಧಿಕ ರೋಗಭಾರದಿಂದ ಅಧಿಕ ಪರಿಣಾಮದತ್ತ (High Burden to High Impact – HBHI): ಭಾರತವೂ ಸೇರಿದಂತೆ ಮಲೇರಿಯಾ ಪ್ರಕರಣಗಳ ಹೊರೆ ಅತಿ ಹೆಚ್ಚಾಗಿರುವ 11 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಯೋಜನೆಯನ್ನು ಜಾರಿಗೊಳಿಸಿದೆ.

    ಮಲೇರಿಯಾ ನಿಯಂತ್ರಣಕ್ಕೆ ಭಾರತ ಸರ್ಕಾರದ ಉಪಕ್ರಮಗಳು:

    • ರಾಷ್ಟ್ರೀಯ ಗುರಿ, 2027: ಭಾರತದಲ್ಲಿ 2027 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
    • ಮಲೇರಿಯಾ ನಿರ್ಮೂಲನೆಗೆ ರಾಷ್ಟ್ರೀಯ ಚೌಕಟ್ಟು (NFME): WHO ನ ಜಾಗತಿಕ ತಾಂತ್ರಿಕ ಕಾರ್ಯತಂತ್ರಕ್ಕೆ (2016-2030) ಅನುಗುಣವಾಗಿ 2016 ರಲ್ಲಿ ಈ ಚೌಕಟ್ಟನ್ನು ರೂಪಿಸಿ ಜಾರಿಗೊಳಿಸಲಾಗಿದೆ.
    • ಮಲೇರಿಯಾ ನಿರ್ಮೂಲನಾ ಸಂಶೋಧನಾ ಒಕ್ಕೂಟ – ಭಾರತ (MERA-India): ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪಾಲುದಾರರನ್ನು ಒಗ್ಗೂಡಿಸುವ ವೇದಿಕೆಯಾಗಿ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ಯು (ICMR) ಇದನ್ನು ಸ್ಥಾಪಿಸಿದೆ.

    ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

    ಪ್ರಶಸ್ತಿಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಶುಶ್ರೂಷಕಿಯರಿಗೆ (Nurses) ‘ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2026’ ಪ್ರದಾನ ಮಾಡಿದರು.

    ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳ ಬಗ್ಗೆ:

    • ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿಯಾದ ‘ಫ್ಲಾರೆನ್ಸ್ ನೈಟಿಂಗೇಲ್’ ಅವರ ಸವಿನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    • ಇದನ್ನು 1973 ರಲ್ಲಿ ಭಾರತ ಸರ್ಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ’ವು ಆರಂಭಿಸಿತು.
    • ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಶುಶ್ರೂಷಕಿಯರು ಮತ್ತು ನರ್ಸಿಂಗ್ ವೃತ್ತಿಪರರ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    • ಪ್ರತಿಯೊಂದು ಪ್ರಶಸ್ತಿಯು ಒಂದು ಅರ್ಹತಾ ಪ್ರಮಾಣಪತ್ರ, ರೂ. 1,00,000/- ನಗದು ಬಹುಮಾನ ಹಾಗೂ ಒಂದು ಪದಕವನ್ನು ಒಳಗೊಂಡಿರುತ್ತದೆ.
  • ಗಿಗ್ ಕಾರ್ಮಿಕರಿಗಾಗಿ ‘ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’

    ಗಿಗ್ ಕಾರ್ಮಿಕರಿಗಾಗಿ ‘ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಡಿಜಿಟಲ್ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರಿಗಾಗಿ ಮೀಸಲಾದ ಡಿಜಿಟಲ್ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಿ ಮತ್ತು ಕಾರ್ಯಗತಗೊಳಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

    ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ವಿವರಗಳು:

    • ಪ್ರಾರಂಭಿಸಿದವರು: ಕರ್ನಾಟಕ ಸರ್ಕಾರ.
    • ಫಲಾನುಭವಿಗಳು: ಪ್ಲಾಟ್‌ಫಾರ್ಮ್ ಆಧಾರಿತ 12 ಲಕ್ಷ ಗಿಗ್ ಕಾರ್ಮಿಕರು.
    • ಪರಿಹರಿಸಲಾಗುವ ಪ್ರಮುಖ ಸಮಸ್ಯೆಗಳು: ಅಕೌಂಟ್ ರದ್ದತಿ, ಪಾವತಿಯನ್ನು ತಡೆಹಿಡಿಯುವುದು ಮತ್ತು ದಂಡ ವಿಧಿಸುವಿಕೆಗೆ ಸಂಬಂಧಿಸಿದ ಸಮಸ್ಯೆಗಳು.
    • ಕಂಪನಿಗಳ ಕಾಲಮಿತಿ: ಪ್ಲಾಟ್‌ಫಾರ್ಮ್‌ಗಳು ಯಾವುದೇ ವಿವಾದವನ್ನು 45 ದಿನಗಳೊಳಗೆ ಇತ್ಯರ್ಥಪಡಿಸುವುದು ಕಡ್ಡಾಯವಾಗಿದೆ.
    • ಮೇಲ್ಮನವಿ: ಪ್ಲಾಟ್‌ಫಾರ್ಮ್‌ಗಳ ನಿರ್ಧಾರದಿಂದ ಅಸಮಾಧಾನಗೊಂಡ ಕಾರ್ಮಿಕರು 30 ದಿನಗಳೊಳಗೆ ರಾಜ್ಯ ಕಲ್ಯಾಣ ಮಂಡಳಿಗೆ ಮೇಲ್ಮನವಿ ಸಲ್ಲಿಸಬಹುದು.

    ಕರ್ನಾಟಕ ಪ್ಲಾಟ್‌ಫಾರ್ಮ್-ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025:

    • ಉದ್ದೇಶ: ಸುಮಾರು 4 ಲಕ್ಷ ಗಿಗ್ ಕಾರ್ಮಿಕರಿಗೆ ಕಾನೂನು ಮಾನ್ಯತೆ ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸುವುದು.
    • ಮೇ 2025 ರಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಬದಲಿಗೆ ಈ ಕಾಯ್ದೆಯನ್ನು ತರಲಾಗಿದ್ದು, 12 ಸೆಪ್ಟೆಂಬರ್ 2025 ರಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ.

    ಈ ಕಾಯ್ದೆಯ ಪ್ರಮುಖ ಲಕ್ಷಣಗಳು:

    • ಕಲ್ಯಾಣ ಮಂಡಳಿ ಮತ್ತು ನಿಧಿ: ನೋಂದಣಿ ಪ್ರಕ್ರಿಯೆ ಮತ್ತು ಯೋಜನೆಗಳ ಮೇಲ್ವಿಚಾರಣೆಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತ್ರಿಪಕ್ಷೀಯ ‘ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲಾಗುತ್ತದೆ.
    • ಜೊತೆಗೆ, ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಪ್ರತಿ ವಹಿವಾಟಿನ ಪಾವತಿಯ ಮೇಲೆ 1% ರಿಂದ 5% ರಷ್ಟು “ಕಲ್ಯಾಣ ಶುಲ್ಕ”ವನ್ನು ವಿಧಿಸುವ ಮೂಲಕ ಮೀಸಲಾದ ‘ಕಲ್ಯಾಣ ನಿಧಿ’ಯನ್ನು ರಚಿಸಲಾಗುತ್ತದೆ.
    • ನೋಂದಣಿ ಕಡ್ಡಾಯ: ಎಲ್ಲಾ ಗಿಗ್ ಕಾರ್ಮಿಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಮತ್ತು ಸೌಲಭ್ಯಗಳನ್ನು ಪಡೆಯಲು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅನ್ವಯವಾಗುವಂತೆ ಅವರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು (Unique ID) ನೀಡಲಾಗುತ್ತದೆ.
    • ಅಲ್ಗಾರಿದಮಿಕ್ ಪಾರದರ್ಶಕತೆ: ಕಾರ್ಮಿಕರಿಗೆ ಕೆಲಸದ ಹಂಚಿಕೆ ಮತ್ತು ಗಳಿಕೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು, ಪ್ಲಾಟ್‌ಫಾರ್ಮ್‌ಗಳು ತಮ್ಮ ಸ್ವಯಂಚಾಲಿತ ಮೇಲ್ವಿಚಾರಣೆ ಮತ್ತು ನಿರ್ಧಾರ-ತೆಗೆದುಕೊಳ್ಳುವ ವ್ಯವಸ್ಥೆಗಳ (ಅಲ್ಗಾರಿದಮ್‌ಗಳು) ವಿವರಗಳನ್ನು ಸರಳ ಭಾಷೆಯಲ್ಲಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ.
    • ಕುಂದುಕೊರತೆ ನಿವಾರಣೆ: ದೂರುಗಳ ನಿವಾರಣೆಗೆ ಎರಡು ಹಂತದ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ: ಮೊದಲನೆಯದಾಗಿ ಪ್ಲಾಟ್‌ಫಾರ್ಮ್ ಮಟ್ಟದಲ್ಲಿ ‘ಆಂತರಿಕ ವಿವಾದ ಪರಿಹಾರ ಸಮಿತಿ’ (IDRC), ಮತ್ತು ಎರಡನೆಯದಾಗಿ ಕಲ್ಯಾಣ ಮಂಡಳಿಗೆ ಮೇಲ್ಮನವಿ.
    • ಕೆಲಸದಿಂದ ವಜಾಗೊಳಿಸುವಿಕೆ: ಮಾನ್ಯವಾದ ಲಿಖಿತ ಕಾರಣ ಮತ್ತು 14 ದಿನಗಳ ಮುಂಚಿತ ನೋಟಿಸ್ (ದೈಹಿಕ ಹಾನಿಯ ಪ್ರಕರಣಗಳನ್ನು ಹೊರತುಪಡಿಸಿ) ನೀಡದೆ, ಪ್ಲಾಟ್‌ಫಾರ್ಮ್‌ಗಳು ಯಾವುದೇ ಕಾರ್ಮಿಕನನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ ಅಥವಾ ಅಕೌಂಟ್ ಅನ್ನು ರದ್ದುಗೊಳಿಸುವಂತಿಲ್ಲ.
  • ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves) | ರಾಷ್ಟ್ರೀಯ ಸೆಣಬು ಮಂಡಳಿ (National Jute Board) | ಬೈಗಾ ಬುಡಕಟ್ಟು (Baiga Tribe) | ರಾಷ್ಟ್ರೀಯ ತಂತ್ರಜ್ಞಾನ ದಿನ | ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಉಪಕ್ರಮ : ಸುಪ್ರೀಂ ಕೋರ್ಟ್ | ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು, 2025 | ಸೇಹತ್ ಯೋಜನೆ (SEHAT Mission)

    ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಮದು ಸರಕುಗಳ ಬಳಕೆಯನ್ನು ತಗ್ಗಿಸಬೇಕೆಂದು ನೀಡಿದ ಕರೆಯು, ಭಾರತವು ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex) ಉಳಿಸಲು ಬಳಕೆಯನ್ನು ಕಡಿಮೆ ಮಾಡಬೇಕೇ ಅಥವಾ ದೀರ್ಘಕಾಲೀನ ಆರ್ಥಿಕ ಪ್ರಗತಿಗಾಗಿ ದೇಶೀಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಬಲಪಡಿಸಬೇಕೇ ಎಂಬ ಚರ್ಚೆ ಮತ್ತೆ ಪ್ರಾರಂಭವಾಗಿದೆ.

    ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves):

    • ವಿದೇಶಿ ವಿನಿಮಯ ಮೀಸಲು ನಿಧಿ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಬಳಿ ಕಾಯ್ದಿರಿಸಿಕೊಂಡಿರುವ ವಿದೇಶಿ ಹಣದ (ಕರೆನ್ಸಿ) ಆಸ್ತಿಗಳಾಗಿವೆ.
    • ಈ ಮೀಸಲು ನಿಧಿಯು ಪ್ರಮುಖವಾಗಿ ಅಮೆರಿಕಾದ ಡಾಲರ್‌ನಂತಹ ವಿದೇಶಿ ಹಣ, ಚಿನ್ನದ ಸಂಗ್ರಹ, ವಿಶೇಷ ಸ್ವೀಕಾರದ  ಹಕ್ಕುಗಳು (Special Drawing Rights – SDRs) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (IMF) ಮೀಸಲು ಪಾಲನ್ನು ಒಳಗೊಂಡಿರುತ್ತದೆ.
    • ಪ್ರಾಮುಖ್ಯತೆ: ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಆಮದುಗಳಿಗೆ ಹಣ ಪಾವತಿಸಲು, ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡಲು, ಹೂಡಿಕೆದಾರರಲ್ಲಿ ನಂಬಿಕೆ ಉಳಿಸಿಕೊಳ್ಳಲು ಮತ್ತು ವಿದೇಶಿ ಸಾಲಗಳನ್ನು ಮರುಪಾವತಿಸಲು ಈ ನಿಧಿಯು ಅತ್ಯಗತ್ಯವಾಗಿದೆ.

    ಭಾರತಕ್ಕೆ ಸದೃಢ ವಿದೇಶಿ ವಿನಿಮಯ ಮೀಸಲು ನಿಧಿಯ ಅಗತ್ಯತೆ:

    • ಆಮದಿನ ಮೇಲಿನ ಅವಲಂಬನೆ: ಭಾರತವು ಕಚ್ಚಾ ತೈಲ, ರಸಗೊಬ್ಬರ, ಖಾದ್ಯ ತೈಲ, ಚಿನ್ನ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಯಂತ್ರಗಳಿಗಾಗಿ ಬೇರೆ ದೇಶಗಳನ್ನು ತೀವ್ರವಾಗಿ ಅವಲಂಬಿಸಿದೆ. ಹೀಗಾಗಿ, ವ್ಯಾಪಾರವು ತಡೆರಹಿತವಾಗಿ ನಡೆಯಲು ಮತ್ತು ಆರ್ಥಿಕತೆ ಸ್ಥಿರವಾಗಿರಲು ಸಾಕಷ್ಟು ವಿದೇಶಿ ವಿನಿಮಯ ನಿಧಿಯ ಅಗತ್ಯವಿದೆ.
    • ಬಾಹ್ಯ ಆಘಾತಗಳಿಂದ ರಕ್ಷಣೆ: ಜಾಗತಿಕ ಹಣಕಾಸು ಅಸ್ಥಿರತೆ, ಏರುತ್ತಿರುವ ತೈಲ ಬೆಲೆಗಳು, ಹಣಕಾಸಿನ ಏರಿಳಿತಗಳು ಮತ್ತು ದೇಶದಿಂದ ಬಂಡವಾಳವು ದಿಢೀರನೆ ಹೊರಹೋಗುವ ಸಂದರ್ಭಗಳಲ್ಲಿ ಆರ್ಥಿಕತೆಯನ್ನು ರಕ್ಷಿಸಲು ಬಲವಾದ ಮೀಸಲು ನಿಧಿ ನೆರವಾಗುತ್ತದೆ.
    • ಕಡಿಮೆ ಮೀಸಲು ನಿಧಿ ಹೊಂದಿರುವ ದೇಶಗಳು ಹೆಚ್ಚಾಗಿ “ಪಾವತಿ ಶಿಲ್ಕು” (BOP) ಬಿಕ್ಕಟ್ಟು ಮತ್ತು ಹಣದ ತೀವ್ರ ಅಪಮೌಲ್ಯವನ್ನು (ರೂಪಾಯಿ ಬೆಲೆ ಕುಸಿಯುವುದು) ಎದುರಿಸಬೇಕಾಗುತ್ತದೆ.

    ಪಾವತಿಗಳ ಶಿಲ್ಕು (Balance of Payments – BoP):

    • ‘ಪಾವತಿಗಳ ಶಿಲ್ಕು’ (BoP) ಎಂಬುದು ಒಂದು ನಿರ್ದಿಷ್ಟ ಅವಧಿಯಲ್ಲಿ ಭಾರತ ಮತ್ತು ಪ್ರಪಂಚದ ಉಳಿದ ದೇಶಗಳ ನಡುವೆ ನಡೆಯುವ ಎಲ್ಲಾ ಆರ್ಥಿಕ ವಹಿವಾಟುಗಳ ಸಮಗ್ರ ದಾಖಲೆಯಾಗಿದೆ.
    • ಪಾವತಿ ಶಿಲ್ಕಿನ ಪ್ರಮುಖ ವಿಭಾಗಗಳು (Components of BoP):
    1. ಚಾಲ್ತಿ ಖಾತೆ (Current Account): ಇದು ಸರಕು ಮತ್ತು ಸೇವೆಗಳ ವ್ಯಾಪಾರ, ವಿದೇಶಿ ಹಣ ರವಾನೆ (Remittances) ಮತ್ತು ಆದಾಯ ವರ್ಗಾವಣೆಯನ್ನು ಒಳಗೊಂಡಿದೆ. ಭಾರತವು ಸಾಮಾನ್ಯವಾಗಿ ರಫ್ತು ಮಾಡುವುದಕ್ಕಿಂತ ಹೆಚ್ಚು ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದು ‘ಚಾಲ್ತಿ ಖಾತೆ ಕೊರತೆ’ಗೆ (Current Account Deficit – CAD) ಕಾರಣವಾಗುತ್ತದೆ.
    2. ಬಂಡವಾಳ ಖಾತೆ (Capital Account): ಇದು ವಿದೇಶಿ ನೇರ ಹೂಡಿಕೆ (FDI), ವಿದೇಶಿ ಬಂಡವಾಳ ಹೂಡಿಕೆ (FPI) ಮತ್ತು ಬಾಹ್ಯ ಸಾಲಗಳಂತಹ (External borrowings) ವಿದೇಶಿ ಹೂಡಿಕೆಗಳನ್ನು ಒಳಗೊಂಡಿದೆ.
    • ಭಾರತವು ಸಾಂಪ್ರದಾಯಿಕವಾಗಿ ವಿದೇಶಿ ಹೂಡಿಕೆದಾರರಿಂದ ಹರಿದುಬರುವ ಬಂಡವಾಳದ ಒಳಹರಿವಿನ (Capital inflows) ಮೂಲಕ ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಸರಿದೂಗಿಸಿಕೊಳ್ಳುತ್ತಿದೆ.

    ರಾಷ್ಟ್ರೀಯ ಸೆಣಬು ಮಂಡಳಿ (National Jute Board)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಸೆಣಬು ಮಂಡಳಿಯು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಭಾರತೀಯ ಸೆಣಬು ನಿಗಮದ (Jute Corporation of India) ಸಹಯೋಗದೊಂದಿಗೆ 2023 ರಿಂದ ‘ಸೆಣಬು ಬೆಳೆ ಮಾಹಿತಿ ವ್ಯವಸ್ಥೆ’ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ.

    ಸೆಣಬು ಬೆಳೆ ಮಾಹಿತಿ ವ್ಯವಸ್ಥೆ ಯೋಜನೆ (Jute Crop Information System project):

    • ಉದ್ದೇಶ: ಉಪಗ್ರಹ ಆಧಾರಿತ ದೂರಸಂವೇದಿ (Remote sensing) ತಂತ್ರಜ್ಞಾನ ಮತ್ತು ಕೃಷಿ ಭೂಮಿಯ ದತ್ತಾಂಶಗಳನ್ನು ಬಳಸಿ ಸೆಣಬು ಕೃಷಿಯನ್ನು ಮೇಲ್ವಿಚಾರಣೆ ಮಾಡುವುದು.
    • ಈ ಉಪಕ್ರಮದ ಅಡಿಯಲ್ಲಿ ಎರಡು ಪ್ರಮುಖ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ:
      • ಭುವನ್ ಜಂಪ್ (BHUVAN JUMP) ಮೊಬೈಲ್ ಅಪ್ಲಿಕೇಶನ್- ಇದು ಕೃಷಿ ಭೂಮಿಗೆ ಖುದ್ದಾಗಿ ಭೇಟಿ ನೀಡಿ ಸೆಣಬು ಬೆಳೆಯನ್ನು ಪರಿಶೀಲಿಸಲು ಬಳಸುವ ಮೊಬೈಲ್ ಅಪ್ಲಿಕೇಶನ್ ಆಗಿದೆ.
      • ಪಾಟ್ಸನ್ (PATSAN – Prospective Assessment of Jute Using Mobile App-Based Field Observations) – ಇದು ಅಧಿಕಾರಿಗಳು ಮತ್ತು ರೈತರಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ, ಸೆಣಬು ಕೃಷಿಯ ಬಹುತೇಕ ನೈಜ-ಸಮಯದ ಕಣ್ಗಾವಲು ಮತ್ತು ವಿಶ್ಲೇಷಣೆ ಒದಗಿಸುವ ವೆಬ್-ಆಧಾರಿತ ವೇದಿಕೆಯಾಗಿದೆ.

    ಭಾರತದಲ್ಲಿ ಸೆಣಬು ಉತ್ಪಾದನೆ:

    • ಇದು ನೈಸರ್ಗಿಕ, ಮರುಬಳಕೆ ಮಾಡಬಹುದಾದ, ಮಣ್ಣಿನಲ್ಲಿ ಕರಗುವ ಮತ್ತು ಪರಿಸರ ಸ್ನೇಹಿ ನಾರು ಬೆಳೆ ಆಗಿರುವ ಕಾರಣ, ಇದನ್ನು ‘ಸುವರ್ಣ ನಾರು’ (Golden fibre) ಎಂದು ಕರೆಯಲಾಗುತ್ತದೆ.
    • ಪ್ರಪಂಚದಲ್ಲೇ ಅತಿ ಹೆಚ್ಚು ಸೆಣಬು ಬೆಳೆಯುವ ದೇಶ ಭಾರತವಾಗಿದೆ. ಇದರ ನಂತರದ ಸ್ಥಾನಗಳಲ್ಲಿ ಬಾಂಗ್ಲಾದೇಶ ಮತ್ತು ಚೀನಾ ಇವೆ.
    • ಭಾರತದ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇ. 99% ರಷ್ಟು ಪಾಲನ್ನು ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳೇ ಹೊಂದಿವೆ.

    ಸೆಣಬು ಕೃಷಿಗೆ ಅಗತ್ಯವಿರುವ ಭೌಗೋಳಿಕ ಪರಿಸ್ಥಿತಿಗಳು:

    • ತಾಪಮಾನ: ಸರಾಸರಿ ಗರಿಷ್ಠ 34°C ಮತ್ತು ಕನಿಷ್ಠ 15°C ತಾಪಮಾನ ಹಾಗೂ ಶೇ. 65% ರಷ್ಟು ವಾತಾವರಣದ ಆರ್ದ್ರತೆ (ತೇವಾಂಶ) ಇರಬೇಕು.
    • ಮಳೆ: ವಾರ್ಷಿಕ ಸುಮಾರು 150-250 ಸೆಂ.ಮೀ. ಮಳೆಯಾಗಬೇಕು.
    • ಮಣ್ಣು: ನದಿಪಾತ್ರದ ಮೆಕ್ಕಲು ಗೋಡು ಮಣ್ಣು (Loamy alluvial soils) ಇದಕ್ಕೆ ಅತಿ ಹೆಚ್ಚು ಸೂಕ್ತವಾಗಿದೆ. ಆದರೆ, ಜೇಡಿಮಣ್ಣಿನಿಂದ ಹಿಡಿದು ಮರಳು ಮಿಶ್ರಿತ ಗೋಡುಮಣ್ಣಿನವರೆಗೆ ಎಲ್ಲ ರೀತಿಯ ಮಣ್ಣಿನಲ್ಲೂ ಸೆಣಬನ್ನು ಬೆಳೆಯಬಹುದು.

    ಬೈಗಾ ಬುಡಕಟ್ಟು (Baiga Tribe)

    ಬುಡಕಟ್ಟು ಗುಂಪುಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಛತ್ತೀಸ್‌ಗಢದಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಬೈಗಾ ಬುಡಕಟ್ಟಿಗೆ ಸೇರಿದ ಮಕ್ಕಳನ್ನು ಇತ್ತೀಚೆಗೆ ರಕ್ಷಿಸಲಾಗಿದೆ.

    ಬೈಗಾ ಬುಡಕಟ್ಟು ಜನಾಂಗದ ಬಗ್ಗೆ:

    • ಭೌಗೋಳಿಕ ಹಂಚಿಕೆ: ಬೈಗಾ ಸಮುದಾಯವು ಮಧ್ಯ ಭಾರತದಲ್ಲಿ, ಪ್ರಮುಖವಾಗಿ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡುಬರುವ ಒಂದು ಜನಾಂಗೀಯ ಗುಂಪಾಗಿದೆ (Ethnic group). ಅಲ್ಲದೆ, ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿಯೂ ಇವರು ಅಲ್ಪಸಂಖ್ಯೆಯಲ್ಲಿ ಕಂಡುಬರುತ್ತಾರೆ.
    • ‘ಬೈಗಾ’ ಎಂದರೆ “ಮಾಂತ್ರಿಕ-ವೈದ್ಯ” ಎಂದರ್ಥ. 
    • ಛತ್ತೀಸ್‌ಗಢದಲ್ಲಿರುವ ಬೈಗಾ ಜನಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಮತ್ತು ಅವರಲ್ಲಿ ಸಾಕ್ಷರತಾ ಪ್ರಮಾಣವು ಅತಿ ಕಡಿಮೆಯಿರುವುದರಿಂದ, ಛತ್ತೀಸ್‌ಗಢದ ಸರ್ಕಾರವು ಇವರನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಿದೆ.
    • ಇವರು ಸಾಂಪ್ರದಾಯಿಕವಾಗಿ ‘ಸ್ಥಳಾಂತರ ಬೇಸಾಯ’ವನ್ನು ರೂಢಿಸಿಕೊಂಡಿದ್ದು, ಇದನ್ನು ಸ್ಥಳೀಯವಾಗಿ “ಬೇವಾರ್” (Bewar) ಕೃಷಿ ಎಂದು ಕರೆಯಲಾಗುತ್ತದೆ.

    ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು (Particularly Vulnerable Tribal Groups – PVTGs):

    • ಪರಿಶಿಷ್ಟ ಪಂಗಡಗಳಲ್ಲಿಯೇ (STs) ಅತ್ಯಂತ ದುರ್ಬಲವಾಗಿರುವ ಮುಖ್ಯವಾಹಿನಿಯಿಂದ ಹೊರಗುಳಿದಿರುವ ತೀವ್ರ ಹಿಂದುಳಿದ ವರ್ಗಗಳನ್ನು ಪಿವಿಟಿಜಿ (PVTGs) ಎಂದು ಕರೆಯಲಾಗುತ್ತದೆ.
    • ಯಾವುದೇ ಬುಡಕಟ್ಟು ಗುಂಪನ್ನು ‘ಪಿವಿಟಿಜಿ’ (PVTG) ಎಂದು ಗುರುತಿಸಲು ಪರಿಗಣಿಸುವ ಪ್ರಮುಖ ಮಾನದಂಡಗಳು:
      • ಪುರಾತನ ಜೀವನಾಧಾರಿತ ಕೃಷಿ ತಂತ್ರಜ್ಞಾನದ ಬಳಕೆ.
      • ಅತ್ಯಂತ ಕಡಿಮೆ ಸಾಕ್ಷರತಾ ಪ್ರಮಾಣ.
      • ತೀವ್ರ ಆರ್ಥಿಕ ಹಿಂದುಳಿದಿರುವಿಕೆ.
      • ಕ್ಷೀಣಿಸುತ್ತಿರುವ ಅಥವಾ ಸ್ಥಗಿತಗೊಂಡಿರುವ ಜನಸಂಖ್ಯೆ.

    ಪಿವಿಟಿಜಿ (PVTG)ಗಳ ಇತಿಹಾಸ: ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಬುಡಕಟ್ಟು ಸಮುದಾಯಗಳ ನಡುವೆಯೇ ಅಸಮಾನತೆ ಇದೆ ಎಂಬುದನ್ನು ‘ಧೇಬರ್ ಆಯೋಗ’ವು (1960-61) ಗುರುತಿಸಿತು.

    • 1975 ರಲ್ಲಿ, ಧೇಬರ್ ಆಯೋಗದ ವರದಿಯ ಅನ್ವಯ, ಸರ್ಕಾರವು ‘ಪುರಾತನ ಬುಡಕಟ್ಟು ಗುಂಪುಗಳನ್ನು’ (Primitive Tribal Groups – PTGs) ಪ್ರತ್ಯೇಕ ವರ್ಗವಾಗಿ ಗುರುತಿಸಿತು ಮತ್ತು 52 ಬುಡಕಟ್ಟು ಗುಂಪುಗಳನ್ನು ಈ ಪಟ್ಟಿಗೆ ಸೇರಿಸಿತು.
    • 2001 ರ ಜನಗಣತಿಯ ಪ್ರಕಾರ, ದೇಶದಲ್ಲಿ 75 ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳಿದ್ದು (PVTGs), ಇವರ ಒಟ್ಟು ಜನಸಂಖ್ಯೆ 27,68,322 ಆಗಿದೆ, ಹಾಗೂ ಇವರು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೆಲೆಸಿದ್ದಾರೆ.
    • 2006 ರಲ್ಲಿ, PTG ಗಳನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು’ (PVTGs) ಎಂದು ಮರುನಾಮಕರಣ ಮಾಡಲಾಯಿತು.

    PVTGs ಗೆ ಸಂಭಂದಿಸಿದ ಇತ್ತೀಚಿನ ಸರ್ಕಾರಿ ಉಪಕ್ರಮಗಳು:

    • ಪಿಎಂ-ಪಿವಿಟಿಜಿ ಅಭಿವೃದ್ಧಿ ಗುರಿ ಯೋಜನೆ (PM-PVTG Development Mission): ಸಂಪರ್ಕ, ವಿದ್ಯುತ್, ಸಾರ್ವಜನಿಕ ಶಿಕ್ಷಣ, ಆರೋಗ್ಯ ರಕ್ಷಣೆ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಸರ್ಕಾರಿ ಸೇವೆಗಳನ್ನು ಎಲ್ಲಾ 22,544 ಪಿವಿಟಿಜಿ (PVTG) ಹಳ್ಳಿಗಳಿಗೆ ತಲುಪಿಸುವ ದೃಷ್ಟಿಕೋನವನ್ನು ಈ ಯೋಜನೆ ಹೊಂದಿದೆ.
    • ಪ್ರಧಾನ ಮಂತ್ರಿ-ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN): ಇದು ಶಾಶ್ವತ ಮನೆಗಳ ನಿರ್ಮಾಣ, ರಸ್ತೆ ಸಂಪರ್ಕ, ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ, ಸಮುದಾಯ ನೀರು ಸರಬರಾಜು, ಉಚಿತ ಔಷಧಿಗಳೊಂದಿಗೆ ಸಂಚಾರಿ ವೈದ್ಯಕೀಯ ಘಟಕಗಳು ಸೇರಿದಂತೆ 11 ಪ್ರಮುಖ ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸಲಿದೆ.

    ರಾಷ್ಟ್ರೀಯ ತಂತ್ರಜ್ಞಾನ ದಿನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರತಿ ವರ್ಷ ಮೇ 11 ರಂದು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ.

    ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ:

    • 1998 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ‘ಆಪರೇಷನ್ ಶಕ್ತಿ’ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ನಡೆಸಿದ ಯಶಸ್ವಿ ಪರಮಾಣು ಪರೀಕ್ಷೆಗಳ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
    • ರಾಷ್ಟ್ರದ ಸಮಗ್ರ ಅಭಿವೃದ್ಧಿ ಹಾಗೂ ಕಾರ್ಯತಂತ್ರದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಅಭಿಯಂತರರು ಮತ್ತು ತಾಂತ್ರಿಕ ಸಂಸ್ಥೆಗಳು ನೀಡಿದ ಅತ್ಯಮೂಲ್ಯ ಕೊಡುಗೆಯನ್ನು ಈ ದಿನವು ಗೌರವಿಸುತ್ತದೆ.

    ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಉಪಕ್ರಮ : ಸುಪ್ರೀಂ ಕೋರ್ಟ್

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ದೇಶದ ಸರ್ವೋಚ್ಚ ನ್ಯಾಯಾಲಯವು  ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಎಂಬ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದೆ.

    ಒನ್ ಕೇಸ್ ಒನ್ ಡೇಟಾ ಉಪಕ್ರಮ (One Case One Data initiative):

    • ಇದು ಏಕೀಕೃತ ದತ್ತಾಂಶ ವ್ಯವಸ್ಥೆಯ (Unified database system) ಮೂಲಕ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಂದ ಹಿಡಿದು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದವರೆಗಿನ ಎಲ್ಲಾ ಹಂತದ ನ್ಯಾಯಾಲಯಗಳನ್ನು ಪರಸ್ಪರ ಜೋಡಿಸುವ ಒಂದು ಪ್ರಮುಖ ಡಿಜಿಟಲ್ ಉಪಕ್ರಮವಾಗಿದೆ. 
    • ಪ್ರಮುಖ ಉದ್ದೇಶ: ಒಂದು ಸಮಗ್ರ ಮತ್ತು ಅಂತರ-ಸಂಪರ್ಕಿತ ಡಿಜಿಟಲ್ ನ್ಯಾಯಾಂಗ ಮಾಹಿತಿ ವ್ಯವಸ್ಥೆಯನ್ನು ರೂಪಿಸುವ ಮೂಲಕ, ಪ್ರಕರಣಗಳ ನಿರ್ವಹಣೆಯನ್ನು ಸುಧಾರಿಸುವುದು.

    ‘ಸು-ಸಹಾಯ್’ ಚಾಟ್‌ಬಾಟ್ (‘Su Sahay’ Chatbot):

    • ಇದೊಂದು ಕೃತಕ ಬುದ್ಧಿಮತ್ತೆ (AI) ಚಾಲಿತ ಸಹಾಯಕ ಸಂವಾದ ಯಂತ್ರ (ಚಾಟ್‌ಬಾಟ್)ವಾಗಿದೆ.
    • ಕಕ್ಷಿದಾರರಿಗೆ ನ್ಯಾಯ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಅತ್ಯಂತ ಸುಲಭವಾಗಿ ಒದಗಿಸುವ ದೃಷ್ಟಿಯಿಂದ ಇದನ್ನು ಸರ್ವೋಚ್ಚ ನ್ಯಾಯಾಲಯದ  ವೆಬ್‌ಸೈಟ್‌ನೊಂದಿಗೆ ಸಂಯೋಜಿಸಲಾಗಿದೆ.
    • ಇದನ್ನು ಸರ್ವೋಚ್ಚ ನ್ಯಾಯಾಲಯದ ನೋಂದಣಿ ವಿಭಾಗ (ರಿಜಿಸ್ಟ್ರಿ)ದ ಸಹಯೋಗದೊಂದಿಗೆ ‘ರಾಷ್ಟ್ರೀಯ ಮಾಹಿತಿ ಕೇಂದ್ರ’ (NIC) ಅಭಿವೃದ್ಧಿಪಡಿಸಿದೆ.

    ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು, 2025

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ::

    • ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಅತ್ಯುತ್ತಮ ಕಾರ್ಯಗಳಿಗಾಗಿ, ಮಿಜೋರಾಂ ರಾಜ್ಯದ ‘ಕಾವರ್ಥಾ ನಾರ್ಥ್ ಗ್ರಾಮ ಪಂಚಾಯಿತಿ’ಯು ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ 2025’ರ “ಸ್ವಚ್ಛ ಮತ್ತು ಹಸಿರು ಪಂಚಾಯತ್” ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು:

    • ಪ್ರದಾನಿಸುವವರು: ಕೇಂದ್ರ ಪಂಚಾಯತಿ ರಾಜ್ ಸಚಿವಾಲಯ.
    • ಗ್ರಾಮೀಣ ಭಾರತದಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿರುವ ಪಂಚಾಯಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಎಲ್ಲರನ್ನೂ ಒಳಗೊಂಡ, ಜನರ ಸಹಭಾಗಿತ್ವದ ಮತ್ತು ದೀರ್ಘಕಾಲೀನ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.
    • ಪ್ರಶಸ್ತಿ ವಿಜೇತ ಪಂಚಾಯಿತಿಗಳು ಅವುಗಳ ಹಂತ (ಗ್ರಾಮ, ತಾಲೂಕು, ಜಿಲ್ಲಾ ಮಟ್ಟ) ಮತ್ತು ವರ್ಗವನ್ನು ಆಧರಿಸಿ ರೂ. 50 ಲಕ್ಷದಿಂದ ರೂ. 5 ಕೋಟಿಗಳವರೆಗೆ ಆರ್ಥಿಕ ಪ್ರೋತ್ಸಾಹಧನವನ್ನು ಪಡೆಯುತ್ತವೆ.
    • ಪ್ರಶಸ್ತಿಯ ವಿಭಾಗಗಳು:
    1. ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಬಡತನ-ಮುಕ್ತ ಜೀವನೋಪಾಯ, ಉತ್ತಮ ಆರೋಗ್ಯ, ನೀರಿನ ಲಭ್ಯತೆ, ನೈರ್ಮಲ್ಯ, ಮಹಿಳಾ-ಸ್ನೇಹಿ ಆಡಳಿತ ಮತ್ತು ಸಾಮಾಜಿಕ ನ್ಯಾಯದಂತಹ ‘ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ’ (SDGs) ಸಂಬಂಧಿಸಿದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ‘ಗ್ರಾಮ ಪಂಚಾಯಿತಿಗಳನ್ನು’ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    2. ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಜಿಲ್ಲಾ, ಬ್ಲಾಕ್ (ತಾಲೂಕು) ಮತ್ತು ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪಂಚಾಯಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

    ಇತ್ತೀಚಿನ ವಿಜೇತರು:

    • ಈ ಬಾರಿಯ ಪ್ರಶಸ್ತಿಗಳಲ್ಲಿ ಒಟ್ಟು 6 ಪಂಚಾಯಿತಿಗಳು ಆಯ್ಕೆಯಾಗುವ ಮೂಲಕ ಕರ್ನಾಟಕವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ. ತಲಾ 5 ಪ್ರಶಸ್ತಿಗಳನ್ನು ಪಡೆದಿರುವ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

    ಸೇಹತ್ ಯೋಜನೆ (SEHAT Mission)

    ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ‘ಸೇಹತ್ ಯೋಜನೆ’ಗೆ (SEHAT Mission) ಚಾಲನೆ ನೀಡಿದ್ದಾರೆ.

    ಸೇಹತ್ – ಕೃಷಿ ರೂಪಾಂತರದ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನದ ಶ್ರೇಷ್ಠತೆ (SEHAT):

    • SEHAT ವಿಸ್ತೃತ ರೂಪ: ಸೈನ್ಸ್ ಎಕ್ಸಲೆನ್ಸ್ ಫಾರ್ ಹೆಲ್ತ್ ಥ್ರೂ ಅಗ್ರಿಕಲ್ಚರಲ್ ಟ್ರಾನ್ಸ್ ಫಾರ್ಮೆಷನ್ (Science Excellence for Health through Agricultural Transformation).
    • ಇದು ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ದೇಶದ ಜನರ ಆರೋಗ್ಯವನ್ನು ಸುಧಾರಿಸುವುದು, ಹಾಗೂ ಕೃಷಿ, ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯವನ್ನು ಪರಸ್ಪರ ಬೆಸೆಯುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಯೋಜನೆಯಾಗಿದೆ.
    • ಇದು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಮತ್ತು ‘ಭಾರತೀಯ ಕೃಷಿ ಸಂಶೋಧನಾ ಮಂಡಳಿ’ಯ (ICAR) ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ.
    • ಪ್ರಮುಖ ಉದ್ದೇಶ: ಪೋಷಕಾಂಶ ಭರಿತ ಜೈವಿಕ ಆಹಾರಗಳು, ಸಮಗ್ರ ಕೃಷಿ, ಕೃಷಿ ಕಾರ್ಮಿಕರ ವೃತ್ತಿಪರ ಆರೋಗ್ಯ ಮತ್ತು ಒಂದು ಆರೋಗ್ಯ (‘ಒನ್ ಹೆಲ್ತ್) ಮಿಷನ್’ಗೆ ಬೆಂಬಲ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವುದು.
    • ಮಹತ್ವ: ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು, ರೋಗ ಬರದಂತೆ ತಡೆಯುವ ಮುಂಜಾಗ್ರತಾ ಆರೋಗ್ಯ ರಕ್ಷಣೆಗೆ, ಅಸಾಂಕ್ರಾಮಿಕ ರೋಗಗಳನ್ನು ತಡೆಯಲು ಹಾಗೂ ರೈತರ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದ ಸವಾಲುಗಳನ್ನು ಎದುರಿಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ.
  • ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್ (GBIST) : ರಾಮನಗರ

    ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್ (GBIST) : ರಾಮನಗರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ರಾಮನಗರ ಜಿಲ್ಲೆಯ ಬಿಡದಿಯಲ್ಲಿ ‘ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್’ (Greater Bengaluru Integrated Satellite Township – GBIST) ನಿರ್ಮಾಣಕ್ಕೆ ಕರ್ನಾಟಕ ಸಚಿವ ಸಂಪುಟವು ಅಧಿಕೃತವಾಗಿ ಅನುಮೋದನೆ ನೀಡಿದೆ.

    GBIST ಕುರಿತಾದ ಪ್ರಮುಖ ಮಾಹಿತಿಗಳು:

    • ಇದನ್ನು ‘ಬೃಹತ್ ಬೆಂಗಳೂರು ನಾವೀನ್ಯತೆ ಮತ್ತು ತಂತ್ರಜ್ಞಾನ ನಗರ’ (Greater Bengaluru Innovation and Tech City – GBIT) ಎಂತಲೂ ಕರೆಯಲಾಗುತ್ತದೆ.
    • ಸ್ವರೂಪ: ಇದು 18,133 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವಿಷ್ಯದ “ಕೆಲಸ-ವಾಸ-ಮನರಂಜನೆ” (“ವರ್ಕ್-ಲೈವ್-ಪ್ಲೇ”) ಮಾದರಿಯ ಬೃಹತ್ ಮಹಾನಗರವಾಗಿದೆ.
    • ಸ್ಥಳ ಮತ್ತು ವಿಸ್ತೀರ್ಣ: ಮಧ್ಯ ಬೆಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಿಡದಿ ಪ್ರದೇಶದ ಒಂಬತ್ತು ಹಳ್ಳಿಗಳಾದ್ಯಂತ ಅಂದಾಜು 7,481 ಎಕರೆ ಪ್ರದೇಶದಲ್ಲಿ ಈ ಯೋಜನೆಯು ವ್ಯಾಪಿಸಿದೆ.
    • ಮಹತ್ವ: ಬೆಂಗಳೂರಿನ ಹೆಚ್ಚುತ್ತಿರುವ ನಗರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಇದನ್ನು ಬೆಂಗಳೂರಿನ ‘ಎರಡನೇ ಕೇಂದ್ರೀಯ ವಾಣಿಜ್ಯ ಜಿಲ್ಲೆ’ (Second Central Business District – CBD)ಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

    ಈ ಯೋಜನೆಯ ಪ್ರಮುಖ ಲಕ್ಷಣಗಳು:

    • ಭಾರತದ ಮೊದಲ ಕೃತಕ ಬುದ್ಧಿಮತ್ತೆ ನಗರ (India’s First AI City): ಕೃತಕ ಬುದ್ಧಿಮತ್ತೆ (AI) ಆಧಾರಿತ ಕೈಗಾರಿಕೆಗಳು, ತಂತ್ರಜ್ಞಾನ ಕೇಂದ್ರಗಳು ಮತ್ತು ಮುಂದಿನ ಪೀಳಿಗೆಯ ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲು ಸುಮಾರು 2,000 ಎಕರೆಗಳಷ್ಟು ಮೀಸಲಾದ ಜಾಗವನ್ನು ಒದಗಿಸಲಾಗಿದೆ.
    • ವಿನ್ಯಾಸ ಮತ್ತು ಪರಿಕಲ್ಪನೆ: “ವರ್ಕ್-ಲೈವ್-ಪ್ಲೇ” ಮಾದರಿಯಲ್ಲಿ ನಿರ್ಮಿಸಲಾಗುವ ಈ ಸ್ಮಾರ್ಟ್-ಗ್ರೀನ್ (ಹಸಿರು) ನಗರವು, ವಸತಿ ವಲಯಗಳು, ವಿಶ್ವದರ್ಜೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಕೇಂದ್ರಗಳು, ವಾಣಿಜ್ಯ ಮಳಿಗೆಗಳು ಹಾಗೂ ಪರಸ್ಪರ ಸಂಪರ್ಕ ಹೊಂದಿರುವ ‘ನೀಲಿ-ಹಸಿರು ಮೂಲಸೌಕರ್ಯ’ಗಳನ್ನು (ಉದಾಹರಣೆಗೆ: ಪುನರುಜ್ಜೀವನಗೊಂಡ ಕೆರೆಗಳು ಮತ್ತು ಉದ್ಯಾನವನಗಳು) ಒಳಗೊಂಡಿರಲಿದೆ.
    • ಸಾರಿಗೆ ಸಂಪರ್ಕ: ಈ ಟೌನ್‌ಶಿಪ್ ಅತಿವೇಗದ ಸಾರಿಗೆ ವ್ಯವಸ್ಥೆಯೊಂದಿಗೆ ಸಂಯೋಜಿತವಾದ “ಶೂನ್ಯ-ಟ್ರಾಫಿಕ್” (Zero-traffic) ವಿನ್ಯಾಸವನ್ನು ಹೊಂದಿದೆ. ಇದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ನೈಸ್ ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ (STRR) ನಂತಹ ಪ್ರಮುಖ ಹೆದ್ದಾರಿಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಮೆಟ್ರೋ ಮತ್ತು ಉಪನಗರ ರೈಲು ವ್ಯವಸ್ಥೆಯ ವಿಸ್ತರಣಾ ಯೋಜನೆಗಳನ್ನು ಇದು ಒಳಗೊಂಡಿದೆ.
    • ಭೂಸ್ವಾಧೀನ ಮತ್ತು ಪರಿಹಾರ: ಭೈರಮಂಗಲ, ಬನ್ನಿಗಿರಿ, ಹೊಸೂರು ಮತ್ತು ವಾಡೇರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಭೂಮಾಲೀಕರಿಗೆ ನೇರ ನಗದು ಪರಿಹಾರ ಅಥವಾ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆಗೆ 9,693 ಚದರ ಅಡಿಯಷ್ಟು ಅಭಿವೃದ್ಧಿಪಡಿಸಿದ ವಸತಿ ನಿವೇಶನವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಒದಗಿಸಿದೆ.
  • ಜನನಿ ಪ್ಲಾಟ್‌ಫಾರ್ಮ್ (JANANI Platform) | ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (AERB) | ವಡಿನಾರ್ ಹಡಗು ದುರಸ್ತಿ ಕೇಂದ್ರ

    ಜನನಿ ಪ್ಲಾಟ್‌ಫಾರ್ಮ್ (JANANI Platform)

    ಸರ್ಕಾರಿ ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಮುಕ್ತಾಯಗೊಂಡ ‘ನಾವೀನ್ಯತೆ ಮತ್ತು ಒಳಗೊಳ್ಳುವಿಕೆ ಕುರಿತಾದ ರಾಷ್ಟ್ರೀಯ ಶೃಂಗಸಭೆ’ಯಲ್ಲಿ (National Summit on Innovation and Inclusivity) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಜನನಿ’ (JANANI) ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು.
    • ಜನನಿ (JANANI) ವಿಸ್ತೃತ ರೂಪ: ಜರ್ನಿ ಆಫ್ ಆಂಟೆನೇಟಲ್, ನೇಟಲ್ ಅಂಡ್ ನಿಯೋನೇಟಲ್ ಇಂಟಿಗ್ರೇಟೆಡ್ ಕೇರ್ (Journey of Antenatal, Natal and Neonatal Integrated Care – ಪ್ರಸವಪೂರ್ವ, ಹೆರಿಗೆ ಮತ್ತು ನವಜಾತ ಶಿಶುವಿನ ಸಮಗ್ರ ಆರೈಕೆಯ ಪ್ರಯಾಣ).

    ಜನನಿ ಪ್ಲಾಟ್‌ಫಾರ್ಮ್‌ನ ಪ್ರಮುಖ ಉದ್ದೇಶ ಮತ್ತು ವೈಶಿಷ್ಟ್ಯಗಳು

    • ಸಮಗ್ರ ಆರೋಗ್ಯ ನಿರ್ವಹಣೆ: ಇದು ಮಹಿಳೆಯರ ಸಂತಾನೋತ್ಪತ್ತಿಯ ವಯಸ್ಸಿನಲ್ಲಿ ಅವರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಸಮಗ್ರವಾಗಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾದ ಒಂದು ಸೇವಾ-ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.
    • ಸುಧಾರಿತ ಆವೃತ್ತಿ: ಪ್ರಸ್ತುತ ಬಳಕೆಯಲ್ಲಿರುವ ‘ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ’ (Reproductive and Child Health – RCH) ಪೋರ್ಟಲ್‌ನ ಸುಧಾರಿತ ಮತ್ತು ನವೀಕರಿಸಿದ ಆವೃತ್ತಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
    • ಕ್ಯೂಆರ್ (QR) ಆಧಾರಿತ ಕಾರ್ಡ್‌ಗಳು: ತಾಯಂದಿರು ಮತ್ತು ಮಕ್ಕಳ ಆರೋಗ್ಯ ದಾಖಲೆಗಳನ್ನು ಎಲ್ಲಿಂದಲಾದರೂ ಸುಲಭವಾಗಿ ಪಡೆಯಲು (portable access), ಈ ಪ್ಲಾಟ್‌ಫಾರ್ಮ್ ಕ್ಯೂಆರ್ (QR) ತಂತ್ರಜ್ಞಾನ ಆಧಾರಿತ ‘ಡಿಜಿಟಲ್ ತಾಯಿ ಮತ್ತು ಶಿಶು ಆರೋಗ್ಯ’ (MCH) ಕಾರ್ಡ್‌ಗಳನ್ನು ಪರಿಚಯಿಸುತ್ತದೆ.
    • ನೈಜ-ಸಮಯದ ನಿಗಾ ವ್ಯವಸ್ಥೆ: ಸಕಾಲಿಕ ವೈದ್ಯಕೀಯ ನೆರವು ಒದಗಿಸುವ ಸಲುವಾಗಿ, ಇದು ಅಧಿಕ-ಅಪಾಯದ ಗರ್ಭಧಾರಣೆಯ ಎಚ್ಚರಿಕೆಗಳು, ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್‌ಗಳು ಮತ್ತು ಬಾಕಿ ಉಳಿದಿರುವ ಸೇವೆಗಳ ಪಟ್ಟಿಯ ಮೂಲಕ ನಿರಂತರ ನಿಗಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.
    • ರಾಷ್ಟ್ರೀಯ ವ್ಯವಸ್ಥೆಗಳೊಂದಿಗೆ ಸಂಯೋಜನೆ: ನಿರಂತರ ಡೇಟಾ ಹಂಚಿಕೆ ಮತ್ತು ಫಲಾನುಭವಿಗಳನ್ನು ನಿಖರವಾಗಿ ಪತ್ತೆಹಚ್ಚಲು, ಈ ಪ್ಲಾಟ್‌ಫಾರ್ಮ್ ಅನ್ನು ಯು-ವಿನ್ (U-WIN) ಮತ್ತು ಪೋಷಣ್ (POSHAN) ನಂತಹ ಇತರ ಪ್ರಮುಖ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ.

    ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (AERB)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯು (AERB) ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯ (KKNPP) ಘಟಕ 5 ಮತ್ತು 6 ರಲ್ಲಿ “ಪ್ರಮುಖ ಉಪಕರಣಗಳ ಸ್ಥಾಪನೆಗೆ” ಅನುಮತಿ ನೀಡಿದೆ.

    ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (Atomic Energy Regulatory Board – AERB)

    • ಇದು ಪರಮಾಣು ಶಕ್ತಿ ಮತ್ತು ಅಯಾನೀಕರಿಸುವ ವಿಕಿರಣಗಳ ಸುರಕ್ಷಿತ ಬಳಕೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಭಾರತದ ಪ್ರಮುಖ ನಿಯಂತ್ರಣ ಸಂಸ್ಥೆಯಾಗಿದೆ.
    • ಸ್ಥಾಪನೆ: ನವೆಂಬರ್ 15, 1983.
    • ಅಧಿಕಾರ: ಇದು 1962ರ ಪರಮಾಣು ಶಕ್ತಿ ಕಾಯ್ದೆ ಮತ್ತು 1986ರ ಪರಿಸರ (ಸಂರಕ್ಷಣೆ) ಕಾಯ್ದೆಯಿಂದ ತನ್ನ ಅಧಿಕಾರವನ್ನು ಪಡೆದುಕೊಂಡಿದೆ.
    • ನಾಯಕತ್ವ ಮತ್ತು ರಚನೆ:
      • ಪ್ರಸ್ತುತ ಅಧ್ಯಕ್ಷರು: ಶ್ರೀ ಎ.ಕೆ. ಬಾಲಸುಬ್ರಹ್ಮಣಿಯನ್.
      • ಪ್ರಧಾನ ಕಚೇರಿ: ಮುಂಬೈ, ಮಹಾರಾಷ್ಟ್ರ.
      • ಸಂಯೋಜನೆ: ಈ ಮಂಡಳಿಯು ಪೂರ್ಣಾವಧಿ ಅಧ್ಯಕ್ಷರು, ಪದನಿಮಿತ್ತ ಸದಸ್ಯರು (ಕಾರ್ಯನಿರ್ವಾಹಕ ನಿರ್ದೇಶಕರು) ಮತ್ತು ನಾಲ್ವರು ಅರೆಕಾಲಿಕ ಪ್ರಸಿದ್ಧ ತಜ್ಞರನ್ನು ಒಳಗೊಂಡಿದೆ.

    ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು

    • ಸುರಕ್ಷತಾ ನಿಯಂತ್ರಣ : ಪರಮಾಣು ಮತ್ತು ವಿಕಿರಣ ಸೌಲಭ್ಯಗಳ ಜೀವಿತಾವಧಿಯುದ್ದಕ್ಕೂ (ಸ್ಥಳ ಆಯ್ಕೆಯಿಂದ ಹಿಡಿದು ನಿಷ್ಕ್ರಿಯಗೊಳಿಸುವವರೆಗೆ) ಸುರಕ್ಷತಾ ಸಂಕೇತಗಳು, ಮಾರ್ಗದರ್ಶಿಗಳು ಮತ್ತು ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು.
    • ಪರವಾನಗಿ: ಪರಮಾಣು ವಿದ್ಯುತ್ ಸ್ಥಾವರಗಳು, ಇಂಧನ ಚಕ್ರದ ಸೌಲಭ್ಯಗಳು, ಮತ್ತು ಕೈಗಾರಿಕಾ/ವೈದ್ಯಕೀಯ ವಿಕಿರಣ ಅನ್ವಯಿಕೆಗಳಿಗೆ ಕಡ್ಡಾಯ ಸಮ್ಮತಿ ಮತ್ತು ಪರವಾನಗಿಗಳನ್ನು ಮಂಜೂರು ಮಾಡುವುದು.
    • ತಪಾಸಣೆಗಳು: ಸುರಕ್ಷತಾ ಅಗತ್ಯತೆಗಳು ಮತ್ತು ಪರವಾನಗಿ ಷರತ್ತುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕ ತಪಾಸಣೆಗಳನ್ನು ನಡೆಸುವುದು.
    • ಕೈಗಾರಿಕಾ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ: ಪರಮಾಣು ಶಕ್ತಿ ಇಲಾಖೆಯ (DAE) ಅಡಿಯಲ್ಲಿನ ಘಟಕಗಳಲ್ಲಿ ಕೈಗಾರಿಕಾ ಸುರಕ್ಷತೆಗಾಗಿ 1948ರ ಕಾರ್ಖಾನೆಗಳ ಕಾಯ್ದೆಯನ್ನು ನಿರ್ವಹಿಸುವುದು ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವುದು.

    ವಡಿನಾರ್ ಹಡಗು ದುರಸ್ತಿ ಕೇಂದ್ರ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA) ಗುಜರಾತ್‌ನ ವಡಿನಾರ್‌ನಲ್ಲಿ ಒಟ್ಟು ₹1,570 ಕೋಟಿ ಹೂಡಿಕೆಯಲ್ಲಿ ನೂತನ ‘ಹಡಗು ದುರಸ್ತಿ ಕೇಂದ್ರ’ವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದೆ.

    ವಡಿನಾರ್ ಹಡಗು ದುರಸ್ತಿ ಕೇಂದ್ರದ ಬಗ್ಗೆ

    • ಸ್ಥಳ: ವಡಿನಾರ್ ಪ್ರದೇಶವು ಗುಜರಾತ್‌ನ ಪಶ್ಚಿಮ ಕರಾವಳಿಯಲ್ಲಿರುವ ಕಚ್ ಕೊಲ್ಲಿಯಲ್ಲಿದೆ (Gulf of Kutch).
    • ಆಯಕಟ್ಟಿನ ಸ್ಥಾನ : ಈ ಕೇಂದ್ರವು ಭಾರತದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಸುವ ಎರಡು ಪ್ರಮುಖ ಸರಕು ಬಂದರುಗಳಾದ ಕಾಂಡ್ಲಾ (ದೀನದಯಾಳ್ ಬಂದರು) ಮತ್ತು ಮುಂದ್ರಾ ಬಂದರುಗಳಿಗೆ ಅತಿ ಸಮೀಪದಲ್ಲಿದೆ.
    • ಹಡಗು ಮಾರ್ಗಗಳ ಅನುಕೂಲ: ಅರಬ್ಬಿ ಸಮುದ್ರದ ಪ್ರಮುಖ ಹಡಗು ಮಾರ್ಗಗಳಿಗೆ ತೀರಾ ಹತ್ತಿರವಾಗಿರುವುದರಿಂದ, ಭೌಗೋಳಿಕವಾಗಿ ಇದು ಅತ್ಯಂತ ಅನುಕೂಲಕರವಾದ ಸ್ಥಾನವನ್ನು ಹೊಂದಿದೆ.